ಮದ್ಯ ಸೇವನೆಯಿಂದ ವಂಶವಾಹಿಗಳಿಗೂ ಹಾನಿ: ಅಧ್ಯಯನ - Vistara News

ಆರೋಗ್ಯ

ಮದ್ಯ ಸೇವನೆಯಿಂದ ವಂಶವಾಹಿಗಳಿಗೂ ಹಾನಿ: ಅಧ್ಯಯನ

ಮದ್ಯ ಸೇವನೆಯಿಂದ ವಂಶವಾಹಿಗಳಿಗೆ ಹಾನಿಯಾಗುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ. ಕುಡಿಯುವುದು ನಿಲ್ಲಿಸಿದ ಬಳಿಕವೂ ಹಾಳಾದ ವಂಶವಾಹಿಗಳನ್ನು ಸರಿ ಮಾಡುವುದು ಸಾಧ್ಯವಿಲ್ಲ ಎಂಬುದು ಸಂಶೋಧಕರ ಖಚಿತ ಮಾತು.

VISTARANEWS.COM


on

Drinking Alcohal
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕರ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ, ಇದರಲ್ಲಿ ಹೊಸದೇನಿಲ್ಲ. ಹೃದಯ, ಯಕೃತ್ತು ಸೇರಿದಂತೆ ದೇಹದ ಹಲವಾರು ಅಂಗಗಳು ಜಖಂಗೊಳ್ಳುತ್ತವೆ ಎಂಬುದನ್ನೂ ಕೇಳಿಯೇ ಇದ್ದೇವೆ. ಆದರೆ ಇದೀಗ ನಮ್ಮ ದೇಹದ ಅಂಗಾಂಗಗಳಿಗೆ ಮಾತ್ರವೇ ಸೀಮಿತವಾಗಿಲ್ಲ ಎನ್ನುತ್ತಾರೆ ಸಂಶೋಧಕರು.

ಇವೆಲ್ಲ ತಿಳಿದೂ ಕುಡಿದು ʻಡಿಂಗ್‌ʼ ಆಗುವ ಜನರಿಗೆ ಎಂದು ಎಚ್ಚರಿಕೆ ಮಾತನ್ನು ಹೇಳಿದ್ದಾರೆ ನಿಮ್ಹಾನ್ಸ್‌ನ ಸಂಶೋಧಕರು. ವ್ಯಕ್ತಿಯ ವಂಶವಾಹಿಯ ಮೇಲೆ ರಿಪೇರಿ ಮಾಡಲಾಗದಂಥ ಹಾನಿಯನ್ನು ಅಲ್ಕೋಹಾಲ್‌ ಉಂಟುಮಾಡುತ್ತದಂತೆ. ಅಂದರೆ, ಬೇಕಷ್ಟು ಕುಡಿದು ತೂರಾಡಿ, ಡಿಎನ್‌ಎ ಹಾಳಾಯಿತು ಎಂದಾಕ್ಷಣ ಎಲ್ಲ ಬಿಟ್ಟು ವೈರಾಗ್ಯ ಬರಿಸಿಕೊಂಡರೆ ಡಿಎನ್‌ಎ ಸರಿಯಾಗುತ್ತದೆ ಎಂದು ಭಾವಿಸಿದರೆ- ಹಾಗಾಗುವುದಿಲ್ಲ! ಕುಡಿಯುವುದು ನಿಲ್ಲಿಸಿದ ಬಳಿಕವೂ ಹಾಳಾದ ವಂಶವಾಹಿಗಳನ್ನು ಸರಿ ಮಾಡುವುದು ಸಾಧ್ಯವಿಲ್ಲ ಎಂಬುದು ಸಂಶೋಧಕರ ಖಚಿತ ಮಾತು.

ʻಅಮೆರಿಕನ್‌ ಜರ್ನಲ್‌ ಆಫ್‌ ಮೆಡಿಕಲ್‌ ಜೆನೆಟಿಕ್ಸ್‌ʼನಲ್ಲಿ ಪ್ರಕಟಗೊಂಡ ವರದಿಯಲ್ಲಿ ಈ ಬಗ್ಗೆ ಹೆಚ್ಚಿನ ವಿವರಗಳು ದಾಖಲಾಗಿವೆ. ಮದ್ಯಮ ಮೂಲಕ ದೇಹ ಸೇರುವ ಎಥೆನಾಲನ್ನು ದೇಹ ತ್ವರಿತವಾಗಿ ಸಂಸ್ಕರಿಸುತ್ತದೆ. ಅದರಲ್ಲಿರುವ ಈಥೈಲ್‌ ಅಣುಗಳನ್ನು ಮಿಥೈಲ್‌ ಆಗಿ ಪರಿವರ್ತಿಸುತ್ತದೆ ಶರೀರ. ಹೀಗೆ ಪರಿವರ್ತನೆಗೊಂಡ ಮಿಥೈಲ್ ಅಣುಗಳು ದೇಹದ ವಂಶವಾಹಿಗಳ ಮೇಲೂ ಪರಿಣಾಮ ಬೀರುತ್ತವೆ. ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಸೇವಿಸುವವರಲ್ಲಿ ವಂಶವಾಹಿಗಳು ಅತೀವ ಹಾನಿಗೆ ಒಳಗಾಗಿರುತ್ತವೆ ಎಂಬುದನ್ನು ವರದಿ ಉಲ್ಲೇಖಿಸಿದೆ.

ಸುಮಾರು ೧೦ ವರ್ಷಗಳ ಕಾಲ ವಿಪರೀತ ಮದ್ಯ ಸೇವಿಸುತ್ತಿದ್ದ ವ್ಯಕ್ತಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅದರ ಪ್ರಕಾರ, ಪುನರ್ವಸತಿಯ ಉದ್ದೇಶದಿಂದ ಚಿಕಿತ್ಸೆಗೆ ಬಂದಿದ್ದವರ ವಂಶವಾಹಿಯನ್ನು ಮೊದಲಿಗೆ ತಪಾಸಣೆ ನಡೆಸಲಾಗಿತ್ತು. ಚಿಕಿತ್ಸೆ ಪಡೆದು, ಮದ್ಯ ತ್ಯಜಿಸಿದ ಹಲವಾರು ತಿಂಗಳುಗಳ ನಂತರ ಇನ್ನೊಮ್ಮೆ ತಪಾಸಣೆಗೆ ಒಳಪಡಿಸಿದಾಗಲೂ ಅವರ ವಂಶವಾಹಿಗಳು ಅಮಲೇರಿದಂತೆಯೇ ಇದ್ದವು. ಅಂದರೆ ಮಿಥೈಲ್‌ನಿಂದ ಆಗಿದ್ದ ಪರಿಣಾಮಗಳಿಂದ ವಂಶವಾಹಿಗಳು ಇನ್ನೂ ಮುಕ್ತವಾಗಿರಲಿಲ್ಲ. ಕುಡಿಯದೆ ಇರುವ ವ್ಯಕ್ತಿಯ ಡಿಎನ್‌ಎ ಇರುವಷ್ಟು ಆರೋಗ್ಯಕರವಾಗಿ ಕುಡಿಯುವವರ ಡಿಎನ್‌ಎಗಳು ಇರುವುದಿಲ್ಲ ಎನ್ನುವುದಕ್ಕೆ ಈ ಅಧ್ಯಯನ ಪುಷ್ಟಿ ಒದಗಿಸುತ್ತದೆ.

ಇದನ್ನೂ ಓದಿ | Drinking Age : ಒತ್ತಡಕ್ಕೆ ಮಣಿದ ಸರ್ಕಾರ; ಮದ್ಯಸೇವನೆ ವಯಸ್ಸನ್ನು 21ರಿಂದ 18ಕ್ಕೆ ಇಳಿಸುವ ಪ್ರಸ್ತಾವನೆ ವಾಪಸ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಆರೋಗ್ಯ

Dengue Fever In Children: ಮಗುವಿನ ಮೈ ಬಿಸಿ ಆಗಿದೆಯೇ? ಡೆಂಗ್ಯು ಜ್ವರದ ಲಕ್ಷಣಗಳನ್ನು ತಿಳಿದುಕೊಳ್ಳಿ

Dengue Fever In Children: ಮಕ್ಕಳಿಗೆ ಮೈ ಬೆಚ್ಚಗಾಗುವುದಕ್ಕೆ ಮಳೆಗಾಲವೇ ಬರಬೇಕೆಂದಿಲ್ಲ. ಕಾಲ ಯಾವುದೇ ಆದರೂ, ಸೋಂಕು ಸಣ್ಣದೇ ಇದ್ದರೂ, ರೋಗ ನಿರೋಧಕ ಶಕ್ತಿ ಇನ್ನೂ ಬೆಳೆಯದ ಎಳೆಯರಲ್ಲಿ ಜ್ವರ ಸಾಮಾನ್ಯ. ಹಾಗೆಂದು ಇದೆಲ್ಲಾ ಮಾಮೂಲಿ ಎಂದು ಬಿಡುವುದಕ್ಕೆ ಸಾಧ್ಯವೇ? ಅದರಲ್ಲೂ ಎಲ್ಲೆಡೆ ಡೆಂಗು ಪ್ರಕರಣಗಳೇ ಕೇಳಿ ಬರುತ್ತಿರುವಾಗ ಪುಟಾಣಿಗಳಲ್ಲಿ ಜ್ವರವನ್ನು ಉಪೇಕ್ಷಿಸಲಂತೂ ಸಾಧ್ಯವಿಲ್ಲ. ಹಾಗಾದರೆ ಮಕ್ಕಳಲ್ಲಿ ಡೆಂಗ್ಯು ಲಕ್ಷಣಗಳು ಹೇಗಿರುತ್ತವೆ? ಅದನ್ನು ಪಾಲಕರು ಅರ್ಥ ಮಾಡಿಕೊಳ್ಳುವುದು ಹೇಗೆ?

VISTARANEWS.COM


on

Dengue Fever In Children
Koo

ಮಗುವಿಗೆ ಡೆಂಗ್ಯು (Dengue Fever In Children) ಇರಬಹುದೆಂಬ ಸಣ್ಣ ಅನುಮಾನವಿದ್ದರೂ ವೈದ್ಯರಲ್ಲಿ ಕರೆಯೊಯ್ಯಿರಿ. ಇತ್ತೀಚಿನ ದಿನಗಳಲ್ಲಿ ಎಲ್ಲಿಗೆ ಪ್ರಯಾಣಿಸಿದ್ದರಿ ಎನ್ನುವುದನ್ನೂ ವೈದ್ಯರಿಗೆ ತಿಳಿಸಿ. ಮಕ್ಕಳಲ್ಲಿ ಡೆಂಗು ಜ್ವರದ ಆರಂಭಿಕ ಲಕ್ಷಣಗಳನ್ನು ಗುರುತಿಸಿ ಚಿಕಿತ್ಸೆ ನೀಡಿದರೆ, ಬರಬಹುದಾದ ಅಪಾಯವನ್ನು ಖಂಡಿತಾ ತಪ್ಪಿಸಬಹುದು. ಮಕ್ಕಳಿಗೆ ಮೈ ಬೆಚ್ಚಗಾಗುವುದಕ್ಕೆ ಮಳೆಗಾಲವೇ ಬರಬೇಕೆಂದಿಲ್ಲ. ಕಾಲ ಯಾವುದೇ ಆದರೂ, ಸೋಂಕು ಸಣ್ಣದೇ ಇದ್ದರೂ, ರೋಗ ನಿರೋಧಕ ಶಕ್ತಿ ಇನ್ನೂ ಬೆಳೆಯದ ಎಳೆಯರಲ್ಲಿ ಜ್ವರ ಸಾಮಾನ್ಯ. ಹಾಗೆಂದು ಇದೆಲ್ಲಾ ಮಾಮೂಲಿ ಎಂದು ಬಿಡುವುದಕ್ಕೆ ಸಾಧ್ಯವೇ? ಅದರಲ್ಲೂ ಎಲ್ಲೆಡೆ ಡೆಂಗು ಪ್ರಕರಣಗಳೇ ಕೇಳಿ ಬರುತ್ತಿರುವಾಗ ಪುಟಾಣಿಗಳಲ್ಲಿ ಜ್ವರವನ್ನು ಉಪೇಕ್ಷಿಸಲಂತೂ ಸಾಧ್ಯವಿಲ್ಲ. ಹಾಗಾದರೆ ಮಕ್ಕಳಲ್ಲಿ ಡೆಂಗ್ಯು ಲಕ್ಷಣಗಳು ಹೇಗಿರುತ್ತವೆ? ಅದನ್ನು ಪಾಲಕರು ಅರ್ಥ ಮಾಡಿಕೊಳ್ಳುವುದು ಹೇಗೆ? ಏಡಿಸ್‌ ವೈರಸ್‌ಗಳು ಸೊಳ್ಳೆಗಳ ಮೂಲಕ ಹರಡುವ ಈ ಜ್ವರ, ಸೋಂಕು ತಾಗಿದ 4-10 ದಿನಗಳಲ್ಲಿ ಲಕ್ಷಣಗಳನ್ನು ತೋರಿಸುತ್ತದೆ. ಪುಟ್ಟ ಮಕ್ಕಳಲ್ಲಿ ಡೆಂಗು ಜ್ವರದ ಲಕ್ಷಣಗಳು ಸಿಕ್ಕಾಪಟ್ಟೆ ತೀವ್ರವಾಗಿ ಇಲ್ಲದೆಯೂ ಇರಬಹುದು. ಅದರಲ್ಲೂ ಮೊದಲ ಬಾರಿಗೆ ಈ ಸೋಂಕು ತಾಗಿದ್ದಾದರೆ ತೀವ್ರತೆ ಕಡಿಮೆ ಎಂದೇ ಹೇಳಬಹುದು. ದೊಡ್ಡವರಾಗುತ್ತಿದ್ದಂತೆ ಅಥವಾ ಸೋಂಕು ಮರುಕಳಿಸುತ್ತಿದ್ದಂತೆ ತೀವ್ರತೆ ಹೆಚ್ಚುತ್ತಾ ಹೋಗುತ್ತದೆ.

Dengue Fever

ಲಕ್ಷಣಗಳು

ತೀವ್ರ ಜ್ವರ, ಅದರಲ್ಲೂ 104 ಡಿ.ಫ್ಯಾ. ಸಮೀಪ ಇರುವುದು, ಕಣ್ಣುಗಳ ಹಿಂದೆ ನೋವು, ಸ್ನಾಯು, ಕೀಲು ಮತ್ತು ಮೂಳೆಗಳಲ್ಲಿ ವಿಪರೀತ ನೋವು, ಅತೀವ ತಲೆನೋವು, ಮೈಮೇಲೆ ದದ್ದುಗಳು, ಮೂಗು ಅಥವಾ ದಂತದಲ್ಲಿ ಸ್ವಲ್ಪ ರಕ್ತಸ್ರಾವ, ವಾಂತಿ ಇತ್ಯಾದಿಗಳು ಕಾಣಿಸಿಕೊಳ್ಳಬಹುದು. ಮೊದಲಿಗೆ ಫ್ಲೂ ಮಾದರಿಯಲ್ಲಿ ಕಾಣಿಸಿಕೊಳ್ಳುವ ಈ ಜ್ವರಕ್ಕೆ ಮಕ್ಕಳು ಸುಸ್ತಾಗಿ ಹೈರಾಣಾಗುವುದು, ಹಠ ಮಾಡುವುದು, ಕಿರಿಕಿರಿ, ಮೈಯೆಲ್ಲಾ ತುರಿಕೆ ಮುಂತಾದವುಗಳು ಮೊದಲ ಎಚ್ಚರಿಕೆ ಗಂಟೆ. ಚರ್ಮದಡಿಯಲ್ಲಿ ರಸ್ತಸ್ರಾವ ಆಗುತ್ತಿದ್ದರೆ (ತರಚಿದಂತೆ ಕಾಣಬಹುದು), ಉಸಿರಾಟಕ್ಕೆ ಕಷ್ಟವಾದರೆ, ಅತೀವ ಹೊಟ್ಟೆ ನೋವು ಮತ್ತು ವಾಂತಿ, ಮಲಮೂತ್ರಗಳಲ್ಲಿ ರಕ್ತ ಮುಂತಾದ ಲಕ್ಷಣಗಳು ಕಂಡುಬಂದರೆ ಡೆಂಗ್ಯು ಲಕ್ಷಣಗಳು ತೀವ್ರವಾಗಿದ್ದು, ಆಸ್ಪತ್ರೆಗೆ ದಾಖಲಿಸಬೇಕಾಗಬಹುದು. ಈ ಹೊತ್ತಿನಲ್ಲಿ ಕಾಳಜಿ ತಪ್ಪಿದರೆ ಜೀವಕ್ಕೆ ಆಪತ್ತು. ಹಾಗೆಂದು ಸೌಮ್ಯ ಲಕ್ಷಣಗಳಿದ್ದರೆ ವೈದ್ಯರು ಮನೆಯಲ್ಲೇ ಚಿಕಿತ್ಸೆ ನೀಡುತ್ತಾರೆ.

ಭಿನ್ನ ಹಂತಗಳು

ಒಮ್ಮೆ ಜ್ವರ ಆರಂಭವಾದ ಮೇಲೆ 2ರಿಂದ 7 ದಿನಗಳವರೆಗೆ ಇರಬಹುದು. ಇದನ್ನು ಫಿಬ್ರಿಲ್‌ ಹಂತವೆಂದು ಕರೆಯಲಾಗುತ್ತದೆ. ತೀರಾ ಚಿಕ್ಕ ಮಕ್ಕಳಲ್ಲಿ ತೀವ್ರ ಜ್ವರಕ್ಕೆ ಎಚ್ಚರ ತಪ್ಪುವ ಸಾಧ್ಯತೆಯ ಬಗ್ಗೆ ಪಾಲಕರು ನಿಗಾ ವಹಿಸಬೇಕು. ಆದರೆ ಜ್ವರ ಬಿಟ್ಟ ನಂತರವೇ ಹೆಚ್ಚಿನವರಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ; ಈ ಹಂತವನ್ನು ಕ್ರಿಟಿಕಲ್‌ ಹಂತವೆಂದೇ ಗುರುತಿಸಲಾಗುತ್ತದೆ. ಹಾಗಾಗಿ ಜ್ವರ ಬಿಟ್ಟಕೂಡಲೇ ಮಕ್ಕಳನ್ನು ಶಾಲೆಗೆ ಕಳುಹಿಸಬೇಡಿ. ಅವರಿಗೆ ಇನ್ನಷ್ಟು ಆರೈಕೆಯ ಅಗತ್ಯವಿರುತ್ತದೆ. ಹೊಟ್ಟೆನೋವು, ವಾಂತಿ, ಉಸಿರಾಟ ಸಮಸ್ಯೆಗಳು, ತೀವ್ರ ತೆರನಾದ ಸ್ನಾಯು ಅಥವಾ ಮೂಳೆ ನೋವು (ಮೂಳೆ ಮುರಿದಂತೆ ನೋವು), ನಿರ್ಜಲೀಕರಣ, ರಕ್ತದೊತ್ತಡ ಇಳಿಯುವುದು ಮುಂತಾದ ಹಲವರು ರೀತಿಯ ತೊಂದರೆಗಳು ಕಾಣಿಸಿಕೊಳ್ಳಬಹುದು. ಹಾಗಾಗಿ ಈ ದಿನಗಳಲ್ಲಿ ಮಕ್ಕಳಿಗೆ ಔಷಧಿಯ ಜೊತೆಗೆ ಸರಿಯಾದ ನಿದ್ದೆ, ಪೌಷ್ಟಿಕ ಆಹಾರ, ಧಾರಾಳವಾಗಿ ದ್ರವಾಹಾರ ಮುಂತಾದ ಆರೈಕೆಗಳು ಕಡ್ಡಾಯವಾಗಿ ಬೇಕು.

Image Of Foods For Fight Against Dengue Fever

ಚಿಕಿತ್ಸೆ

ಜ್ವರದ ತೀವ್ರತೆಯನ್ನು ತಗ್ಗಿಸುವುದಕ್ಕೆ ಪುಟಾಣಿಗಳಿಗೆ ಔಷಧಿ ನೀಡಬೇಕಾಗುತ್ತದೆ. ತೀರಾ ಚಿಕ್ಕ ಮಕ್ಕಳಿಗೆ ಆಗಾಗ ಸ್ಪಾಂಜ್‌ ಬಾತ್‌ ನೀಡುವುದು ಸಹ ದೇಹದ ಶಾಖವನ್ನು ತಗ್ಗಿಸಲು ಸಹಕಾರಿ. ವಾಂತಿ-ಅತಿಸಾರಗಳು ಡೆಂಗು ಜ್ವರದಲ್ಲಿ ಕಾಡುವ ಇನ್ನೊಂದು ಸಮಸ್ಯೆ. ಹಾಗಾಗಿ ಮಕ್ಕಳಿಗೆ ದ್ರವಾಹಾರ ನಿರಂತರವಾಗಿ ನೀಡುತ್ತಲೇ ಇರಬೇಕು. ಜ್ವರದಿಂದ ಹೈರಾಣಾದ ಮಕ್ಕಳು ಆಹಾರ ಸೇವಿಸುವುದಕ್ಕೂ ಹಠ ಮಾಡುವುದು ಸಹಜ. ಆದರೆ ಇರುವುದರಲ್ಲೇ ನಾನಾ ರೀತಿಯ ಸೂಪ್‌ಗಳು, ತರಕಾರಿಯ ಬ್ರಾತ್‌, ಬೇಳೆ ಕಟ್ಟು, ಹಣ್ಣಿನ ರಸಗಳು, ಎಳನೀರು, ಎಲೆಕ್ಟ್ರಾಲ್‌ ಮುಂತಾದವು ಹೊಟ್ಟೆಗೆ ಹೋಗುವುದು ಅಗತ್ಯ. ಪೌಷ್ಟಿಕ ಆಹಾರದಿಂದ ರಕ್ತದಲ್ಲಿ ಪ್ಲೇಟ್‌ಲೆಟ್‌ ಸಂಖ್ಯೆ ಇಳಿಯದಂತೆ ಕಾಪಾಡಿಕೊಳ್ಳಲು ಸಾಧ್ಯ. ಉಳಿದಂತೆ ಲಕ್ಷಣಗಳು ಏನಿವೆ ಎನ್ನುವುದರ ಮೇಲೆ ವೈದ್ಯರು ಚಿಕಿತ್ಸೆ ನೀಡುತ್ತಾರೆ.

ಇದನ್ನೂ ಓದಿ: Pancreatitis: ಏನಿದು ಪ್ಯಾಂಕ್ರಿಯಾಟೈಟಿಸ್‌ನಿಂದ ಉಂಟಾಗುವ ಉರಿಯೂತ? ಇದಕ್ಕೇನು ಪರಿಹಾರ?

ತಡೆಯಬಹುದೇ?

ಖಂಡಿತ. ಈ ಸೋಂಕು ಬರದಂತೆ ತಡೆಯಬೇಕೆಂದರೆ ಮನೆಯ ಸುತ್ತಮುತ್ತಲು ಎಲ್ಲೂ ನೀರು ನಿಲ್ಲದಂತೆ ಎಚ್ಚರ ವಹಿಸಿ. ಮನೆಯೊಳಗೂ ನೀರು ತುಂಬಿದ ಪಾತ್ರೆಗಳಿಗೆ ಮುಚ್ಚಳ ಹಾಕಿ. ಬೆಳಗ್ಗೆ ಮತ್ತು ಸಂಜೆ ಸೊಳ್ಳೆಗಳು ಹೆಚ್ಚು ಸಕ್ರಿಯವಾಗಿರುವ ಸಮಯಗಳಲ್ಲಿ ಹೊರಗೆ ಹೋಗಬೇಡಿ; ಮಕ್ಕಳನ್ನೂ ಹೊರಗೆ ಬಿಡಬೇಡಿ. ಅನಗತ್ಯ ಪ್ರಯಾಣಗಳನ್ನು ತಪ್ಪಿಸಿ. ಸೊಳ್ಳೆ ರಿಪೆಲ್ಲೆಂಟ್‌ಗಳು, ಲಿಕ್ವಿಡೇಟರ್‌ಗಳು ಮುಂತಾದವು ಸೊಳ್ಳೆಗಳನ್ನು ದೂರ ಇರಿಸಲು ಸಹಾಯ ಮಾಡುತ್ತವೆ. ಮಕ್ಕಳಿಗೆ ಮೈ, ಕೈ, ಕಾಲಿನ ತುಂಬಾ ಬಟ್ಟೆ ಹಾಕಿ. ಮಲಗುವಾಗ ಕಡ್ಡಾಯವಾಗಿ ಸೊಳ್ಳೆಪರದೆ ಬಳಸಿ. ಸೋಂಕಿತರಿಗೆ ಕಚ್ಚಿದ ಸೊಳ್ಳೆ ಇನ್ನೊಬ್ಬರಿಗೆ ಕಚ್ಚಿದಾಗಲೇ ರೋಗ ಹರಡುವುದು, ನೆನಪಿರಲಿ. ಹಾಗಾಗಿ ಸೊಳ್ಳೆಯನ್ನು ಎಷ್ಟು ಪರಿಣಾಮಕಾರಿಯಾಗಿ ದೂರ ಇರಿಸುತ್ತೀರೊ ಅಷ್ಟು ನಿಶ್ಚಿತವಾಗಿ ಸೋಂಕಿನಿಂದಲೂ ತಪ್ಪಿಸಿಕೊಳ್ಳುತ್ತೀರಿ.

Continue Reading

ಆರೋಗ್ಯ

Health Tips: ಮಧ್ಯಾಹ್ನದ ನಂತರ ಏನಾದರು ಸಿಹಿತಿನಿಸು ತಿನ್ನಬೇಕು ಅನಿಸುತ್ತಿದೆಯೆ? ಇದಕ್ಕೂ ಇದೆ ಕಾರಣ

Health Tips: ನಿಮಗೆ ಯಾವ ಹೊತ್ತಿನಲ್ಲಿ ಹಸಿವಾಗುತ್ತದೆ, ಯಾವ ಹೊತ್ತಿನಲ್ಲಿ ಏನಾದರೊಂದು ಮೆಲ್ಲಬೇಕೆಂಬ ಬಯಕೆಯಾಗುತ್ತದೆ, ಯಾವ ಹೊತ್ತಿನಲ್ಲಿ ಸಿಹಿ ತಿನ್ನಬೇಕೆನಿಸುತ್ತದೆ ಇತ್ಯಾದಿಗಳನ್ನು ನೀವು ಗಮನಿಸಿದ್ದರೆ, ಇವೆಲ್ಲವಕ್ಕೂ ಇಂಥದ್ದೆ ಒಂದು ನಿರ್ದಿಷ್ಟ ಹೊತ್ತಿರುತ್ತದೆ ಎಂಬುದು ನಿಮಗೆ ಅರ್ಥವಾಗುತ್ತದೆ. ಉದಾಹರಣೆಗೆ ನಿಮ್ಮಲ್ಲಿ ಕೆಲವರಿಗೆ ಸಿಹಿತಿನಿಸು ಮಧ್ಯಾಹ್ನ ಊಟವಾದ ತಕ್ಷಣ ತಿನ್ನಬೇಕೆನಿಸಬಹುದು. ಇನ್ನೂ ಕೆಲವರಿಗೆ ಊಟವಾಗಿ ಕೆಲ ಗಂಟೆ ಕಳೆದ ಮೇಲೆ ಚಹಾದ ಹೊತ್ತಿನಲ್ಲಿ ಏನಾದರೂ ಸಿಹಿಯಾಗಿರುವುದನ್ನು ತಿನ್ನೋಣ ಅನಿಸಬಹುದು. ಇದಕ್ಕೇನು ಕಾರಣ? ಇಲ್ಲಿದೆ ಮಾಹಿತಿ.

VISTARANEWS.COM


on

sweets Gujiya peda barfi Motichoor Laddu Indian Sweet dessert mithai festival dish
Koo

ನೀವು ಯಾವತ್ತಾದರೂ ನಿಮ್ಮ ಆಹಾರ (Health Tips) ಅಭ್ಯಾಸದ ಬಗ್ಗೆ ಕೊಂಚ ಸೂಕ್ಷ್ಮವಾಗಿ ಗಮನಿಸಿದ್ದೀರಾ? ನಿಮಗೆ ಯಾವ ಹೊತ್ತಿನಲ್ಲಿ ಹಸಿವಾಗುತ್ತದೆ, ಯಾವ ಹೊತ್ತಿನಲ್ಲಿ ಏನಾದರೊಂದು ಮೆಲ್ಲಬೇಕೆಂಬ ಬಯಕೆಯಾಗುತ್ತದೆ, ಯಾವ ಹೊತ್ತಿನಲ್ಲಿ ಸಿಹಿ ತಿನ್ನಬೇಕೆನಿಸುತ್ತದೆ ಇತ್ಯಾದಿಗಳನ್ನು ನೀವು ಗಮನಿಸಿದ್ದರೆ, ಇವೆಲ್ಲವಕ್ಕೂ ಇಂಥದ್ದೆ ಒಂದು ನಿರ್ಧಿಷ್ಟ ಹೊತ್ತಿರುತ್ತದೆ ಎಂಬುದು ನಿಮಗೆ ಅರ್ಥವಾಗುತ್ತದೆ. ಉದಾಹರಣೆಗೆ ನಿಮ್ಮಲ್ಲಿ ಕೆಲವರಿಗೆ ಸಿಹಿತಿನಿಸು ಮಧ್ಯಾಹ್ನ ಊಟವಾದ ತಕ್ಷಣ ತಿನ್ನಬೇಕೆನಿಸಬಹುದು. ಇನ್ನೂ ಕೆಲವರಿಗೆ ಊಟವಾಗಿ ಕೆಲ ಗಂಟೆ ಕಳೆದ ಮೇಲೆ ಚಹಾದ ಹೊತ್ತಿನಲ್ಲಿ ಏನಾದರೂ ಸಿಹಿಯಾಗಿರುವುದನ್ನು ತಿನ್ನೋಣ ಅನಿಸಬಹುದು. ಇದು ಕೇವಲ ಒಂದೇ ದಿನದ ಕಥೆಯಲ್ಲ, ಹೀಗೆ ತಿನ್ನಬೇಕೆನ್ನುವ ಮನಸ್ಥಿತಿ ಸದಾ ಕಾಲ ಒಂದೇ ರೀತಿ ಇದೆ ಎಂಬುದು ನಿಮಗೆ ಅರ್ಥವಾಗಬಹುದು. ಹೀಗೆ ಅನಿಸುವುದು ಕೇವಲ ನಿಮಗಷ್ಟೇ ಅಲ್ಲ, ನಿಮ್ಮಂತೆ ಚಹಾದ ಹೊತ್ತಿಗೆ ಸಕ್ಕರೆಯುಕ್ತ ಏನಾದರೊಂದು ತಿನ್ನುವ ಖಯಾಲಿ ಹಲವರಿಗಿದೆ. ಸಿಹಿತಿನಿಸಾದರೂ ಆದೀತು, ಕುಕ್ಕೀಸ್‌ ಬಿಸ್ಕತ್ತುಗಳೂ ಆದಾವು, ಏನಾದರೊಂದು ಸಿಹಿಯಾದ ತಿಂಡಿ ಚಹಾದ ಜೊತೆಗಿರಬೇಕು ಎಂಬ ಆಸೆ. ನಿಮಗೆ ಹಸಿವೇನೂ ಆಗದೆ ಇದ್ದರೂ, ಏನಾದರೂ ಈ ಹೊತಿಗೆ ತಿನ್ನಬೇಕೆಂಬ ಚಪಲ ಇದ್ದೇ ಇರುತ್ತದೆ. ತಿನ್ನದಿದ್ದರೆ ಏನೋ ಒಂದು ಕಸಿವಿಸಿ, ಕಳೆದುಕೊಂಡ ಭಾವ. ಹೀಗೆ ಕೇವಲ ನಿಮಗಷ್ಟೇ ಅಲ್ಲ, ನಿಮ್ಮಂತೆ ಹಲವಾರು ಮಂದಿಗೂ ಈ ಸಮಸ್ಯೆಯಿದೆ. ಬನ್ನಿ, ಈ ಅನುಭವ ನಿಮಗಾಗಿದ್ದರೆ, ಸಂಜೆಯ ಸ್ವೀಟ್‌ ಕ್ರೇವಿಂಗ್‌ ಇದ್ದರೆ ಇದಕ್ಕೆ ಕಾರಣಗಳೇನು, ಹೇಘೆ ಈ ಅಭ್ಯಾಸ ಕಡಿಮೆ ಮಾಡಬಹುದು ಎಂಬುದನ್ನು ತಿಳಿದುಕೊಳ್ಳೋಣ.

Sweet CANDAY

ಆರೋಗ್ಯ ತಜ್ಞರ ಪ್ರಕಾರ, ನಮ್ಮ ದೇಹದ ರಕ್ತದಲ್ಲಿ ಸಕ್ಕರೆಯ ಮಟ್ಟ ಕಡಿಮೆಯಾದಾಗ ನಮಗೆ ಸಿಹಿ ತಿನ್ನಬೇಕೆಂಬ ಪ್ರಚೋದನೆಯಾಗುತ್ತದೆ. ಸಾಮಾನ್ಯವಾಗಿ ಮಧ್ಯಾಹ್ನ ಊಟವಾಗಿ ಕೆಲ ಗಂಟೆಗಳ ನಂತರ ದೇಹದಲ್ಲಿ ಸಕ್ಕರೆಯ ಮಟ್ಟ ಕಡಿಮೆಯಾದ ಹೊತ್ತಿನಲ್ಲಿ ಮತ್ತಷ್ಟು ಶಕ್ತಿವರ್ಧನೆಗಾಗಿ, ಸಿಹಿಯನ್ನು ಬೇಡುತ್ತದೆ. ಕೂಡಲೇ ಏನಾದರೊಂದು ಸಿಹಿ ತಿಂದಾಕ್ಷಣ, ಮುಖ್ಯವಾಗಿ ಸಂಸ್ಕರಿಸಿದ ಸಕ್ಕರೆಯಿಂದ ಮಾಡಿದ ಸಿಹಿತಿನಿಸುಗಳನ್ನು ತಿಂದಾಗ ತಾತ್ಕಾಲಿಕವಾಗಿ ದೇಹದಲ್ಲಿ ಶಕ್ತಿವರ್ಧನೆಯಾಗಿ ಸಕ್ಕರೆಯ ಮಟ್ಟವೂ ಏರುತ್ತದೆ.

ನಿತ್ಯವೂ ಏನಾದರೊಂದು ಇಂಥದ್ದೇ ಹೊತ್ತಿಗೆ ಎಂದು ತಿನ್ನುವ ಅಭ್ಯಾಸ ಮಾಡಿಕೊಂಡರೆ, ಅದೇ ಹೊತ್ತಿಗೆ ಸರಿಯಾಗಿ ಸಿಹಿ ತಿನ್ನಬೇಕೆಂಬ ಕ್ರೇವಿಂಗ್‌ ಶುರುವಾಗುತ್ತದೆ ಎನ್ನುತ್ತಾರೆ ತಜ್ಞರು. ನಾಲ್ಕು ದಿನ ಇದೇ ಹೊತ್ತಿಗೆ ಸಿಹಿ ತಿಂದರೂ ಸಾಕು, ಐದನೇ ದಿನ ಅದೇ ಹೊತ್ತಿಗೆ ಸರಿಯಾಗಿ ಮನಸ್ಸು ದೇಹ ಎರಡೂ ಅದನ್ನೇ ಬೇಡುತ್ತದೆ. ಸಂಜೆ ಚಹಾದ ಹೊತ್ತಿಗೆ ನೀವು ಬಿಸ್ಕತ್ತು ತಿನ್ನುವ ಅಭ್ಯಾಸ ಮಾಡಿಕೊಂಡರೆ, ಆ ಅಭ್ಯಾಸವನ್ನು ಕಷ್ಟಪಟ್ಟು ಬಿಡಬೇಕಾಗುತ್ತದೆ. ಇಲ್ಲವಾದರೆ, ಆ ಹೊತ್ತಿನಲ್ಲಿ ಏನಾದರೂ ಸಿಹಿ ತಿನ್ನಬೇಕೆನಿಸುತ್ತದೆ.

ನೀವು ಬೆಳಗಿನ ಉಪಾಹಾರವನ್ನು ಸರಿಯಾಗಿ ಸೇವಿಸದೆ ಇರುವುದೂ ಕೂಡಾ ಈ ಕ್ರೇವಿಂಗ್‌ಗೆ ಕಾರಣವಾಗಿರಬಹುದು. ಬೆಳಗಿನ ಉಪಹಾರ ಬಿಡುವುದು, ಅಥವಾ ಮಧ್ಯಾಹ್ನದೂಟ ಬಿಡುವುದು ಇತ್ಯಾದಿ ಮಾಡುವುದರಿಂದಲೂ ನಿಮಗೆ ಸಂಜೆಯ ಹೊತ್ತಿಗೆ ಸಿಹಿ ತಿನ್ನಬೇಕೆನಿಸಬಹುದು. ಹೆಚ್ಚು ಹೊತ್ತು ತಿನ್ನದೆ ಇರುವ ಸಂದರ್ಭ ದೇಹ ಬಹುಬೇಗನೆ ಶಕ್ತಿ ಪಡೆದುಕೊಳ್ಳುವ ಮಾರ್ಗವನ್ನೇ ಬಯಸುತ್ತದೆ.

Sleeping tips

ನಿದ್ದೆಯ ಕೊರತೆಯೂ ಕಾರಣವಾಗಿರಬಹುದು. ನಿದ್ದೆಯಿಲ್ಲದ ರಾತ್ರಿ ಕಳೆದಿದ್ದರೆ, ಅತಿಯಾದ ಒತ್ತಡದಿಂದ ರಾತ್ರಿಯಲ್ಲಿ ಕೆಲಸ ಮಾಡಿದ್ದರೆ, ನಿದ್ದೆ ಸರಿಯಾಗಿ ಆಗಿರದಿದ್ದರೆ, ದೇಹ ಸುಸ್ತಾಗಿ ಬಿಟ್ಟಿರುತ್ತದೆ. ಇಂತಹ ಸಮಯದಲ್ಲಿ ತಕ್ಷಣದ ಶಕ್ತಿವರ್ಧನೆಗೆ ದೇಹ ಸಿಹಿಯಾದುದನ್ನೇ ಬಯಸುತ್ತದೆ.

ಹಾಗಾದರೆ, ಈ ಅಭ್ಯಾಸದಿಂದ ಹೊರಬರುವುದು ಹೇಗೆ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಮನಸ್ಸಿದ್ದರೆ ಮಾರ್ಗ ಎಂಬುದು ಗಾದೆಯನ್ನು ನೀವು ಕೇಳಿರಬಹುದು. ಎಲವೂ ನೀವು ಮನಸ್ಸು ಮಾಡಿದರೆ ಸಾಧ್ಯ. ಸಿಹಿತಿಂಡಿ ತಿನ್ನಬಾರದು ಎಂಬ ನಿರ್ಧಾರ ನೀವು ಮಾಡಿದ್ದರೆ, ಅದಕ್ಕೆ ಪೂರಕವಾದ ಆಹಾರಕ್ರಮವನ್ನೂ ನೀವು ಬೆಳೆಸಿಕೊಳ್ಳಿ.

ಇದನ್ನೂ ಓದಿ: Sour Curd: ಹುಳಿ ಬಂದ ಮೊಸರಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದೋ ಕೆಟ್ಟದ್ದೋ?

  • ಬೆಳಗ್ಗಿನ ಉಪಾಹಾರ, ಮಧ್ಯಾಹ್ನದೂಟ, ರಾತ್ರಿಯ ಊಟ ಎಲ್ಲವನ್ನೂ ನಿಧಾನವಾಗಿ, ಚೆನ್ನಾಗಿ ಅಗಿದು, ಪೂರ್ತಿ ಗಮನವಿಟ್ಟು ನಾನೇನು ತಿನ್ನುತ್ತಿದ್ದೇನೆ ಎಂಬುದನ್ನು ಅರಿತುಕೊಂಡೆ ಮೈಂಡ್‌ಫುಲ್‌ ಆಗಿ ತಿನ್ನಿ. ಅತಿಯಾಗಿ ಅಲ್ಲದೆ, ಹಿತಮಿತವಾಗಿ ತಿನ್ನಿ. ತಿನ್ನುವ ಆಹಾರ ಆರೋಗ್ಯಪೂರ್ಣವಾಗಿರಲಿ.
  • ಹೆಚ್ಚು ನೀರು ಕುಡಿಯಿರಿ. ಕೆಲವೊಮ್ಮೆ ನಿರ್ಜಲೀಕರಣವೂ ಕೂಡಾ ಸಿಹಿಯನ್ನು, ಹೆಚ್ಚು ತಿನ್ನುವುದನ್ನು ಪ್ರೋತ್ಸಾಹಿಸುತ್ತದೆ. ಹೀಗಾಗಿ ಸಾಕಷ್ಟು ನೀರು ಕುಡಿಯಿರಿ.
  • ವಾಕ್‌ ಮಾಡಿ. ಸಿಹಿ ತಿನ್ನಬೇಕೆನಿಸುವಾಗಲೆಲ್ಲ ವಾಕ್‌ ಮಾಡಿ. ಆಗ ನಿಮ್ಮ ಮನಸ್ಸು ಬದಲಾಗುತ್ತದೆ. ಸಿಹಿಯ ಬಯಕೆ ಸೈಡ್‌ಲೈನ್‌ ಆಗಿ ಮರೆತು ಹೋಗುತ್ತದೆ.
Continue Reading

ಆರೋಗ್ಯ

Drinking Water Tips: ನೀರು ಕುಡಿಯುವುದೇ ನಿಮ್ಮ ಸಮಸ್ಯೆಯೇ? ಇಲ್ಲಿವೆ ಸರಳ ಉಪಾಯಗಳು!

Drinking water tips: ಕೆಲವರು ಸಹಜವಾಗಿಯೇ ಹೆಚ್ಚು ನೀರು ಕುಡಿದರೆ, ಇನ್ನೂ ಕೆಲವರು ಸ್ವಭಾವತಃ ನೀರು ಕುಡಿಯುವುದು ಹೆಚ್ಚು. ಆದರೆ, ಕಾಲ ಯಾವುದೇ ಆಗಿರಲಿ, ದೇಹಕ್ಕೆ ನಿತ್ಯ ನೀರು ಬೇಕೇ ಬೇಕು. ನೀರು ಹೆಚ್ಚು ಕುಡಿದರೆ, ಒಳ್ಳೆಯದು ಎಂಬ ಸತ್ಯ ತಿಳಿದಿದ್ದರೂ ಹೆಚ್ಚು ನೀರು ಕುಡಿಯುವ ಪರಿ ಹೇಗೆ, ಈ ಅಭ್ಯಾಸವನ್ನು ಬೆಳೆಸಿಕೊಳ್ಳುವುದು ಹೇಗೆ ಎಂದು ತಿಳಿಯುವುದಿಲ್ಲ. ಈ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

Positive woman drinking water
Koo

ನೀರು ಕುಡಿಯುವುದು (Drinking water tips) ಅತ್ಯಂತ ಮುಖ್ಯ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ, ಕೆಲವೊಮ್ಮೆ ನೀರು ಕುಡಿಯುವುದೂ ಕೂಡ ಕಷ್ಟದ ಕೆಲಸವೇ. ಕೆಲವರು ಸಹಜವಾಗಿಯೇ ಹೆಚ್ಚು ನೀರು ಕುಡಿದರೆ, ಇನ್ನೂ ಕೆಲವರು ಸ್ವಭಾವತಃ ನೀರು ಕುಡಿಯುವುದು ಹೆಚ್ಚು. ಆದರೆ, ಕಾಲ ಯಾವುದೇ ಆಗಿರಲಿ, ದೇಹಕ್ಕೆ ನಿತ್ಯ ನೀರು ಬೇಕೇ ಬೇಕು. ನೀರು ಹೆಚ್ಚು ಕುಡಿದರೆ, ಒಳ್ಳೆಯದು ಎಂಬ ಸತ್ಯ ತಿಳಿದಿದ್ದರೂ ಹೆಚ್ಚು ನೀರು ಕುಡಿಯುವ ಪರಿ ಹೇಗೆ, ಈ ಅಭ್ಯಾಸವನ್ನು ಬೆಳೆಸಿಕೊಳ್ಳುವುದು ಹೇಗೆ ಎಂದು ತಿಳಿಯುವುದಿಲ್ಲ. ನೀರು ಕುಡಿಯಲು ಕಷ್ಟವಾಗುವ, ತನ್ನ ದೇಹಕ್ಕೆ ಬೇಕಾದಷ್ಟು ನೀರು ಸೇವಿಸದೆ ಇರುವ, ಆದರೆ, ಹೆಚ್ಚು ನೀರು ಕುಡಿಯಲು ಮನಸ್ಸಿರುವ ಆ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುವ ಮಂದಿ ಹೆಚ್ಚು ನೀರು ಕುಡಿಯಲು ಹೀಗೆ ಮಾಡಬಹುದು.

drinking water
  • ನೀವು ಎಲ್ಲಿಗೇ ಹೊರಗೆ ಹೋಗುವುದಿದ್ದರೂ ಕೈಯಲ್ಲೊಂದು ನೀರಿನ ಬಾಟಲಿ ಇಟ್ಟುಕೊಳ್ಳಿ. ಬಿಸಿಲಿರಲಿ, ಮಳೆಯಿರಲಿ, ಚಳಿಯಿರಲಿ ನೀರಿನ ಬಾಟಲಿ ನಿಮ್ಮ ಜೊತೆಗಿರಲಿ. ಆ ಮೂಲಕ ಆಗಾಗ ನೀವು ಸ್ವಲ್ಪ ಸ್ವಲ್ಪ ನೀರು ಕುಡಿಯುತ್ತಿರಬಹುದು. ಹೊರಗೆ ಹೋದಾಗ, ನೀರಿನ ಮೂಲವನ್ನು ಹುಡುಕಿಕೊಂಡು ಹೋಗುವುದು ಸಾಧ್ಯವಾಗದು. ಅಥವಾ ನೀರು ಕುಡಿಯಬೇಕೆನ್ನುವ ಯೋಚನೆಯೂ ಬಾರದು. ಇಂತಹ ಸಂದರ್ಭ ನಿಮ್ಮ ಬಳಿ ಬಾಟಲಿಯಲ್ಲಿ ನೀರಿದ್ದರೆ, ಆಗಾಗ ಕುಡಿಯುವ ಮೂಲಕ ಒಂದಿಷ್ಟು ನೀರು ನಿಮ್ಮ ದೇಹದ ಅಗತ್ಯಕ್ಕೆ ತಕ್ಕಂತೆ ನಿಮ್ಮ ಹೊಟ್ಟೆ ಸೇರುತ್ತದೆ. ಅಥವಾ ನಿಮಗೆ ನಿಜವಾಗಿ ಬಾಯಾರಿಕೆಯಾದಾಗಲೂ ನಿಮ್ಮ ಸಹಾಯಕ್ಕೆ ಬರುತ್ತದೆ.
  • ಈಗ ನೀರು ಕುಡಿಯಲು ರಿಮೈಂಡರ್‌ಗಳನ್ನೂ ಹಾಕಬಹುದು. ಅನೇಕ ಆಪ್‌ಗಳೂ ನಿಮ್ಮ ಸಹಾಯಕ್ಕಿವೆ. ಅವು ಆಗಾಗ ಎಷ್ಟು ನೀರು ಕುಡಿಯಬೇಕೆಂದು ನಿಮ್ಮನ್ನು ನೆನಪಿಸುತ್ತಿರುತ್ತವೆ. ಹಾಗಾಗಿ, ನಿಮಗೆ ನೆನಪಾಗದಿದ್ದರೂ, ಕೆಲಸದಲ್ಲಿ ಬ್ಯುಸಿ ಆದರೂ, ಈ ಅಲರಾಂಗಳು ನಿಮ್ಮನ್ನು ನೀರು ಕುಡಿಯಲು ನಿಮ್ಮ ಅಮ್ಮನಂತೆ ನಿಮಗೆ ನೆನಪು ಮಾಡುವ ಕೆಲಸವನ್ನು ಮಾಡುತ್ತದೆ.
  • ಸೋಡಾ, ಕಾರ್ಬೋನೇಟೆಡ್‌ ಡ್ರಿಂಕ್‌ಗಳ ಬದಲಾಗಿ ನೀರನ್ನೇ ಕುಡಿಯಿರಿ. ಬಾಯಾರಿದಾಗ ನೀರಿಗಿಂತ ಒಳ್ಲೆಯ ದ್ರವಾಹಾರ ಇನ್ನೊಂದಿಲ್ಲ. ಹಾಗಾಗಿ ನೀರನ್ನೇ ಸೇವಿಸಿ.
  • ನೀರು ಕುಡಿಯಲು ಸಾಧ್ಯವಾಗದಿದ್ದರೆ, ನೀರು ಹೆಚ್ಚಿರುವ ಹಣ್ಣು ಹಂಪಲುಗಳನ್ನು ಸೇವಿಸಿ. ಕಲ್ಲಂಗಡಿ ಹಣ್ಣು, ಅನಾನಾಸು, ಖರ್‌ಬೂಜ, ಸೌತೆಕಾಯಿ ಇತ್ಯಾದಿಗಳನ್ನು ಸೇವಿಸಿ. ಇವುಗಳಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದು, ನಿಮ್ಮ ದೇಹಕ್ಕೆ ಒಳ್ಳೆಯದನ್ನೇ ಮಾಡುತ್ತದೆ. ಇವುಗಳಲ್ಲಿ ಕ್ಯಾಲರಿಯೂ ಕಡಿಮೆ ಇರುವುದರಿಂದ ಹೊಟ್ಟೆ ಫುಲ್‌ ಆದ ಅನುಭವವನ್ನೂ ನೀಡುತ್ತವೆ.
  • ಖಾಲಿ ನೀರನ್ನೇ ಕುಡಿಯುವುದು ನಿಮ್ಮ ಸಮಸ್ಯೆ ಆದಲ್ಲಿ, ನೀರಿಗೆ ಫ್ಲೇವರ್‌ ಬರಿಸಿ. ಅರ್ಥಾತ್ ಇನ್‌ಫ್ಯೂಸ್ಡ್‌ ನೀರನ್ನು ತಯಾರು ಮಾಡಿ. ನೀರಿಗೆ, ಕೊಂಚ ಪುದಿನ ಎಲೆಗಳನ್ನು ಹಾಕಿಡಿ. ಅಥವಾ ಸೌತೆಕಾಯಿ, ಲಿಂಬೆರಸ, ಕಿತ್ತಳೆ ಹೀಗೆ ಬಗೆಬಗೆಯ ನೈಸರ್ಗಿಕ ರಿಫ್ರೆಶಿಂಗ್‌ ಅನುಭವ ನೀಡುವ ಐಡಿಯಾಗಳನ್ನು ಮಬಹುದು. ಪುದಿನ ಎಲೆ ಹಾಕಿದ ನೀರು ತಾಜಾ ಅನುಭವವನ್ನು ನೀಡುವ ಜೊತೆಗೆ ದೇಹವನ್ನು ತಂಪಾಗಿಡುತ್ತದೆ. ಮನಸ್ಸಿಗೂ ಮುದ ನೀಡುತ್ತದೆ. ಹೀಗೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ದೇಹಕ್ಕೂ ಒಳ್ಳೆಯದು.
Continue Reading

ಪ್ರಮುಖ ಸುದ್ದಿ

Dengue Fever: ಇನ್ನೂ ಏರಲಿದೆ ಡೆಂಗ್ಯು ಕೇಸ್‌ ಎಂದ ಆರೋಗ್ಯ ಸಚಿವರು; ಇದುವರೆಗೆ 6 ಸಾವು

Dengue Fever: ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ಬಾರಿ ಪ್ರಕರಣಗಳು ಡಬಲ್ ಆಗಿವೆ. ಜನವರಿಯಿಂದ ಜುಲೈ 1ರ ತನಕ ಒಟ್ಟು 6187 ಕೇಸ್ ಪಾಸಿಟಿವ್ ಇದೆ. ಕಳೆದ ವರ್ಷ 2903 ಇತ್ತು. ಇಷ್ಟೇ ಅಲ್ಲ ರಾಜ್ಯದಲ್ಲಿ ಮತ್ತಷ್ಟು ಡೆಂಗ್ಯು ಕೇಸ್ ಇರಬಹುದು. 47% ಟೆಸ್ಟಿಂಗ್ ರೇಟ್ ಹೆಚ್ಚಳ ಮಾಡಲಾಗಿದೆ.

VISTARANEWS.COM


on

dengue fever Dinesh Gundu Rao
Koo

ಬೆಂಗಳೂರು: ಇದುವರೆಗೆ ರಾಜ್ಯದಲ್ಲಿ ಡೆಂಗ್ಯು ಜ್ವರದಿಂದಾಗಿ (Dengue Fever) 6 ಜನ ಸತ್ತಿದ್ದಾರೆ. ಸೆಪ್ಟೆಂಬರ್‌ನಲ್ಲಿ ಡೆಂಗ್ಯು ಜ್ವರ ಪ್ರಕರಣಗಳು (Dengue Positive) ಇನ್ನೂ ಏರಬಹುದು ಎಂದು ಆರೋಗ್ಯ ಸಚಿವ (Health Minister) ದಿನೇಶ್‌ ಗುಂಡೂರಾವ್‌ (dinesh Gundu Rao) ಎಚ್ಚರಿಸಿದ್ದಾರೆ.

ಡೆಂಗ್ಯು ಹರಡುವಿಕೆ ನಿಯಂತ್ರಣದ ಬಗ್ಗೆ ವಿವಿಧ ಇಲಾಖೆಗಳ ಜೊತೆ ಸಭೆ ಮಾಡಿದ ಬಳಿಕ ಅವರು ಸುದ್ದಿಗೋಷ್ಠಿ ನಡೆಸಿದರು. ಡೆಂಗ್ಯು ಕಳೆದ ವರ್ಷಕ್ಕಿಂತ ಈ ಬಾರಿ ದುಪ್ಪಟ್ಟಾಗಿದೆ. ಇಲ್ಲಿಯವರೆಗೂ ರಾಜ್ಯದಲ್ಲಿ 6187 ಪ್ರಕರಣ ದಾಖಲಾಗಿದೆ. 6 ಜನ ಸತ್ತಿದ್ದಾರೆ. ಇದರಲ್ಲಿ ಕೋಮಾರ್ಬಿಡಿಟೀಸ್‌ (ಬಿಪಿ, ಮಧುಮೇಹ, ಹೃದಯ ಕಾಯಿಲೆ) ಇದ್ದ ಮೂವರೂ ಸೇರಿದ್ದಾರೆ ಎಂದು ಸಚಿವರು ತಿಳಿಸಿದರು.

ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ಬಾರಿ ಪ್ರಕರಣಗಳು ಡಬಲ್ ಆಗಿವೆ. ಜನವರಿಯಿಂದ ಜುಲೈ 1ರ ತನಕ ಒಟ್ಟು 6187 ಕೇಸ್ ಪಾಸಿಟಿವ್ ಇದೆ. ಕಳೆದ ವರ್ಷ 2903 ಇತ್ತು. ಇಷ್ಟೇ ಅಲ್ಲ ರಾಜ್ಯದಲ್ಲಿ ಮತ್ತಷ್ಟು ಡೆಂಗ್ಯು ಕೇಸ್ ಇರಬಹುದು. 47% ಟೆಸ್ಟಿಂಗ್ ರೇಟ್ ಹೆಚ್ಚಳ ಮಾಡಲಾಗಿದೆ. ಸದಾ ಮಳೆ ಬರುತ್ತಿದ್ದರೆ ಡೆಂಗ್ಯು ಸೊಳ್ಳೆ ಬರುವುದಿಲ್ಲ. ಮಳೆ ಬಿಟ್ಟು ಬಿಟ್ಟು ಬರುವ ಹಿನ್ನೆಲೆಯಲ್ಲಿ ಡೆಂಗ್ಯುವಿಗೆ ಅನುಕೂಲ ವಾತಾವರಣ ಇದೆ. ನಿಂತು ಬೀಳುವ ಮಳೆಯಿಂದಾಗಿ ಸೊಳ್ಳೆ ಹರಡುವಿಕೆ ಹೆಚ್ಚಾಗುತ್ತದೆ. ಇದು ಅನುಕೂಲ ಮಾಡಿಕೊಡುತ್ತದೆ. ಹವಾಮಾನ ಬದಲಾವಣೆಯಿಂದ ರೋಗ ಉಲ್ಬಣಗೊಳ್ಳುತ್ತಿದೆ ಎಂದು ಸಚಿವರು ತಿಳಿಸಿದರು.

ರಾಜ್ಯದಲ್ಲಿ ಒಟ್ಟು 6187 ಪ್ರಕರಣಗಳು ಇವೆ. 3463 ಪ್ರಕರಣ ನಗರ ಪ್ರದೇಶಗಳಲ್ಲಿ ಕಂಡು ಬಂದಿವೆ. 56% ನಗರ ಪ್ರದೇಶದಲ್ಲಿ, 44% ಗ್ರಾಮೀಣ ಪ್ರದೇಶದಲ್ಲಿ ಪೊಸಿಟಿವ್‌ ಬಂದಿವೆ. ಒಂದು ವರ್ಷದ ಒಳಗಿನ 123 ಮಕ್ಕಳಿಗೆ, 1-18 ವರ್ಷದ 2301 ಮಂದಿಗೆ, 19- 60 ವರ್ಷದ 3313 ಮಂದಿಗೆ, 61 ವರ್ಷ ಮೇಲಿನ 450 ಮಂದಿಗೆ ಪಾಸಿಟಿವ್‌ ಬಂದಿದೆ ಎಂದು ಮಾಹಿತಿ ನೀಡಿದರು.

ಡೆಂಗ್ಯು ಜ್ವರ ಇನ್ನಷ್ಟು ಹೆಚ್ಚಾಗಬಹುದು. ಸೆಪ್ಟಂಬರ್‌ನಲ್ಲಿ ಮತ್ತೆ ಹೆಚ್ಚಾಗುವ ಸಾಧ್ಯತೆ ಇದೆ. ಮುಖ್ಯಮಂತ್ರಿಗಳು ಮುಂಜಾಗ್ರತಾ ಕ್ರಮಕ್ಕೆ ಸೂಚಿಸಿದ್ದಾರೆ. ಟೆಸ್ಟಿಂಗ್ ಕಿಟ್ ಹೆಚ್ಚುವರಿ ಇರಿಸಲಾಗಿದೆ. ಪ್ಲೇಟ್‌ಲೆಟ್ಸ್‌ ಕೊಡುವುದಕ್ಕೆ ತಿಳಿಸಿದ್ದೇವೆ. ಡೆಂಗ್ಯುವಿಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಪ್ಲೇಟ್ ಲೆಟ್ಸ್ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ. ಬ್ಲಡ್ ಯೂನಿಟ್‌ಗಳ ಜತೆ ಮಾತುಕತೆ ಮಾಡಲಾಗಿದೆ. ಐವಿ ಫ್ಲೂವಿಡ್‌ಗಳನ್ನು ಕೊಡಲಾಗುತ್ತದೆ. ಇದು ನಮ್ಮ ಬಳಿ ಸಾಕಷ್ಟು ಇದೆ. ಆರಂಭದಲ್ಲಿ ಪ್ಯಾರಸಿಟಮಲ್ ಕೊಟ್ಟರೆ ಸಾಕಾಗುತ್ತದೆ ಎಂದು ತಿಳಿಸಿದರು.

ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ

ಖಾಸಗಿ ಆಸ್ಪತ್ರೆಗಳು ಡೆಂಗ್ಯು ಕೇಸ್ ರಿಪೋರ್ಟ್ ಮಾಡುತ್ತಿಲ್ಲ. ಕೆಪಿಎಂ ಆಕ್ಟ್ ಪ್ರಕಾರ ಖಾಸಗಿ ಆಸ್ಪತ್ರೆಗಳು ಡೆಂಗ್ಯು ಕೇಸ್ ರಿಪೋರ್ಟ್ ಮಾಡುವುದು ಕಡ್ಡಾಯ. IHIPಯಲ್ಲಿ ಅನೇಕ ಖಾಸಗಿ ಆಸ್ಪತ್ರೆಗಳು ಅಪ್ಲೋಡ್ ಮಾಡುತ್ತಿಲ್ಲ. ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕು. ಖಾಸಗಿ ಆಸ್ಪತ್ರೆಯಲ್ಲಿ ಡೆಂಗ್ಯು ತಪಾಸಣೆಗೆ ದರ ನಿಗದಿ ಮಾಡುವ ಬಗ್ಗೆ ಚರ್ಚೆ ಮಾಡಿಲ್ಲ. ಆ ಬಗ್ಗೆ ಮುಂದೆ ಚರ್ಚೆ ಮಾಡುತ್ತೇವೆ ಎಂದು ಅವರು ತಿಳಿಸಿದರು.

ನಮ್ಮ ವೆಬ್‌ಸೈಟಿನಲ್ಲಿ ಡೆಂಗ್ಯು ಬುಲೆಟಿನ್ ಬಿಡುಗಡೆ ಮಾಡುತ್ತೇವೆ. ಪ್ರತಿ ದಿನ ಎಷ್ಟು ಕೇಸ್ ಬಂದಿದೆ ಎನ್ನುವ ಮಾಹಿತಿ ಹಾಕುತ್ತೇವೆ. ದಿನ ನಿತ್ಯ ಡೆಂಗ್ಯು ಬುಲೆಟಿನ್ ಕೊಡಲಾಗುತ್ತದೆ. ಬೆಂಗಳೂರು ನಗರದಲ್ಲಿ ಬಿಬಿಎಂಪಿ ಎಲ್ಲಾ ಮನೆಗಳ ಸರ್ವೆ ಮಾಡುತ್ತಿದೆ. ಸೂಕ್ಷ್ಮ ಪ್ರದೇಶಗಳು ಮಾತ್ರವಲ್ಲ ಎಲ್ಲಾ ಮನೆಗಳ ಸರ್ವೆ ನಡೆಸಲು ನಾನು ಬಿಬಿಎಂಪಿಗೆ ಸೂಚನೆ ನೀಡಿದ್ದೇನೆ. ಮನೆ ಮನೆಗೆ ಭೇಟಿ ಕೊಡಲು ಸೂಚಿಸಿದ್ದೇನೆ. ರಾಜ್ಯಾದ್ಯಂತ ಡೆಂಗ್ಯು ಬಗ್ಗೆ ಕಟ್ಟೆಚ್ಚರ ವಹಿಸಲು ಸೂಚನೆ ಕೊಡಲಾಗಿದೆ. ಪ್ರತಿ ಶುಕ್ರವಾರ ಡೆಂಗ್ಯು ವಿಚಾರದಲ್ಲಿ ಫೀಲ್ಡ್‌ನಲ್ಲಿ ಇದ್ದು, ಮಾನಿಟರ್ ಮಾಡಲು ಸೂಚಿಸಿದ್ದೇನೆ. ಪ್ರತಿ ಶುಕ್ರವಾರ ಮನೆ ಮನೆ ಸಮೀಕ್ಷೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಎಲ್ಲೆಲ್ಲಿ ಪಾಸಿಟಿವ್ ಕೇಸ್ ಬರುತ್ತದೆಯೋ ಅಲ್ಲಿ ತೀವ್ರ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಲಾರ್ವ ನಾಶ, ಫಾಗಿಂಗ್ ಸೇರಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. RWA, ಕ್ರೆಡೈ ಸೇರಿ ಕಟ್ಟಡ ಮಾಲೀಕರು ಸೇರಿ ಅವರನ್ನು ಒಳಗೊಂಡು ಸಭೆ ನಡೆಸಲು ತೀರ್ಮಾನಿಸಿದ್ದೇವೆ. ಮೆಡಿಕಲ್ ಆಫೀಸರ್, MOH, ಸೈನ್ಸ್ ಟೀಚರ್ಸ್‌ಗೆ ಡೆಂಗ್ಯು ವಿಚಾರದಲ್ಲಿ ವಿಶೇಷ ತರಬೇತಿ ನೀಡಲಾಗಿದೆ. ಮಕ್ಕಳಿಗೆ ಡೆಂಗ್ಯು ಕುರಿತು ತಿಳಿವಳಿಕೆ ನೀಡಲಾಗಿದೆ. ಡಿಪೋಗಳಲ್ಲಿ ಟಯರ್‌ಗಳಲ್ಲಿ ಸೊಳ್ಳೆ ಉತ್ಪತ್ತಿ ಆಗುತ್ತಿರುವುದು ಕಂಡು ಬಂದಿದೆ. ಡಿಪೋಗಳಿಂದ ಸ್ಯಾಂಪಲ್ ಕಲೆಕ್ಟ್ ಮಾಡಲಾಗಿದೆ. ಹೆಚ್ಚು ಸಕ್ರಿಯ ಪ್ರಕರಣಗಳು ಕಂಡು ಬರ್ತಿದೆ. ಹೀಗಾಗಿ ಎಚ್ಚರಿಕೆ ವಹಿಸಲು ಸಾರಿಗೆ ಇಲಾಖೆಗೆ ಸೂಚಿಸಿದ್ದೇವೆ. ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಜನರಿಗೆ ಅರಿವು ಮೂಡಿಸುವಂತೆ ತಿಳಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Dengue fever: ಮಾರಕ ಡೆಂಗ್ಯು ಜ್ವರಕ್ಕೆ ಬಾಲಕಿ ಬಲಿ

Continue Reading
Advertisement
Electric shock
ಬೆಂಗಳೂರು ಗ್ರಾಮಾಂತರ4 mins ago

Electric shock : ಕತ್ತಲಲ್ಲಿ ಕೆಲಸಕ್ಕೆ ಹೋದವನಿಗೆ ಕರೆಂಟ್‌ ಶಾಕ್‌

Paris Olympics
ಕ್ರೀಡೆ8 mins ago

Paris Olympics 2024: ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ಭಾರತದ 9 ಅಥ್ಲೀಟ್​ಗಳು

Bigg Boss Telugu 8 Contestants List Leaked
ಬಿಗ್ ಬಾಸ್9 mins ago

Bigg Boss Telugu 8: ಶುರುವಾಗ್ತಿದೆ ಬಿಗ್​ಬಾಸ್ ತೆಲುಗು ಸೀಸನ್ 8; ಸ್ಪರ್ಧಿಗಳು ಯಾರೆಲ್ಲ?

Lonalva Tragedy
ದೇಶ21 mins ago

Lonavla Tragedy: ಲೋನಾವಲಾದಲ್ಲಿ ಇದುವರೆಗೆ 37 ದುರಂತ ಪ್ರಕರಣಗಳು; 47 ಮಂದಿ ದಾರುಣ ಸಾವು

Gold Rate Today
ಚಿನ್ನದ ದರ25 mins ago

Gold Rate Today: ಕೈ ಸುಡುತಿದೆ ಚಿನ್ನದ ದರ; ಆಭರಣ ಖರೀದಿಸುವ ಮುನ್ನ ಬೆಲೆ ಚೆಕ್‌ ಮಾಡಿ

Juhi Chawla mother-in-law uninvited nearly 2000 guests her wedding
ಬಾಲಿವುಡ್34 mins ago

Juhi Chawla: ಮದುವೆಗೆ 2000 ಜನಕ್ಕೆ ನೀಡಲಾಗಿತ್ತು ಆಮಂತ್ರಣ; ಆದರೆ ಅತ್ತೆ ಹಿಂಪಡೆದರು ಎಂದ ಜೂಹಿ ಚಾವ್ಲಾ!

Karnataka Rain
ಮಳೆ43 mins ago

Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

dengue fever mysore death
ಪ್ರಮುಖ ಸುದ್ದಿ53 mins ago

Dengue Fever: ಡೆಂಗ್ಯು ಜ್ವರಕ್ಕೆ ಮೈಸೂರು ಜಿಲ್ಲೆಯಲ್ಲಿ ಆರೋಗ್ಯಾಧಿಕಾರಿಯೇ ಮೊದಲ ಬಲಿ!

Hathras Stampede
ದೇಶ57 mins ago

Hathras Stampede: ಹತ್ರಾಸ್‌ ಕಾಲ್ತುಳಿತಕ್ಕೆ ಸಮಾಜಘಾತುಕ ಶಕ್ತಿ ಕಾರಣ ಎಂದ ಭೋಲೇ ಬಾಬಾ

Virat Kohli
ಕ್ರೀಡೆ58 mins ago

Virat Kohli: ಕಟ್ಲೆಟ್‌ ಬಿಸಿ ಮಾಡಲು ಪರದಾಡಿದ ವಿರಾಟ್​ ಕೊಹ್ಲಿ; ವಿಡಿಯೊ ವೈರಲ್​

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ43 mins ago

Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

Tornado Effect in Udupi
ಉಡುಪಿ2 hours ago

Tornado Effect : ಉಡುಪಿಯ ರಟ್ಟಾಡಿಯಲ್ಲಿ ಭಾರಿ ಶಬ್ಧದೊಂದಿಗೆ ಅಪ್ಪಳಿಸಿದ ಸುಂಟರಗಾಳಿ

karnataka weather Forecast
ಮಳೆ2 days ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ3 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ4 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು4 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ5 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ5 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ6 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

ಟ್ರೆಂಡಿಂಗ್‌