Yoga for Relaxation: ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಲು ಈ ಯೋಗ ಮಾಡಬೇಕು; ಬಾಲಿವುಡ್ ಯೋಗ ಮಾಸ್ಟರ್ ವಿಡಿಯೊ - Vistara News

ಲೈಫ್‌ಸ್ಟೈಲ್

Yoga for Relaxation: ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಲು ಈ ಯೋಗ ಮಾಡಬೇಕು; ಬಾಲಿವುಡ್ ಯೋಗ ಮಾಸ್ಟರ್ ವಿಡಿಯೊ

ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿ, ಶಾಂತವಾಗಿಸಲು ಯಾವ ಯೋಗ (Yoga for Relaxation) ಮಾಡಬೇಕು ಎಂದು ಬಾಲಿವುಡ್ ಮಂದಿಯ ಯೋಗಾ ಮಾಸ್ಟರ್ ಅಂಶುಕಾ ಅವರು ವಿಡಿಯೊ ಮೂಲಕ ತಿಳಿಸಿದ್ದಾರೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬೈ: ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ. ಅದಕ್ಕೆಂದೇ ಧ್ಯಾನ, ಯೋಗಾಭ್ಯಾಸವನ್ನು ಮಾಡಬೇಕಾಗುತ್ತದೆ. ಈ ಯಾಂತ್ರಿಕ ಯುಗದಲ್ಲಿ ಮನಸ್ಸು ಚಂಚಲವಾಗುವುದು ಅಥವಾ ಒತ್ತಡ ಉಂಟಾಗುವುದು ಸಾಮಾನ್ಯ. ಅದನ್ನು ನಿಯಂತ್ರಿಸುವುಕ್ಕೆ ಯೋಗದಿಂದ ಸಾಧ್ಯ. ಯಾವ ಯೋಗ (Yoga for Relaxation) ಮಾಡಿದರೆ ಮನಸ್ಸನ್ನು ಶಾಂತಗೊಳಿಸಬಹುದು ಎಂದು ಬಾಲಿವುಡ್ ಮಂದಿಗೆ ಯೋಗಾಭ್ಯಾಸ ಹೇಳಿಕೊಡುವ ಅಂಶುಕಾ ಅವರೇ ತಿಳಿಸಿದ್ದಾರೆ. ಅಲಿಯಾ ಭಟ್, ಕರೀನಾ ಕಪೂರ್ ಅಂತಹ ಪ್ರಸಿದ್ಧ ನಟಿಯರಿಗೆ ಯೋಗ ಹೇಳಿಕೊಡುತ್ತಿರುವ ಅಂಶುಕಾ ಅವರ ವಿಡಿಯೊ ಇಲ್ಲಿದೆ.

ಇದನ್ನೂ ಓದಿ: ವಿಸ್ತಾರ TOP 10 NEWS : 7ನೇ ವೇತನ ಆಯೋಗದ ಜಾರಿ ಭರವಸೆಯಿಂದ ಹಿಡಿದು ಸಿಂಧೂರಿಗೆ ಬಿಗ್​ ರಿಲೀಫ್​ ತನಕದ ಪ್ರಮುಖ ಸುದ್ದಿಗಳಿವು
ಹಲವು ಆಸನಗಳಿರುವ ವಿಡಿಯೊವನ್ನು ಅಂಶುಕಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ, “ಶಾಂತ ಮನಸ್ಸು ಜಗತ್ತನ್ನು ಗೆಲ್ಲಬಲ್ಲದು. ನಾವೆಲ್ಲರೂ ವೇಗದ ಜೀವನವನ್ನು ನಡೆಸುತ್ತೇವೆ ಮತ್ತು ಅದರೊಂದಿಗೆ ಒತ್ತಡ ಮತ್ತು ಆತಂಕದ ಸಮಸ್ಯೆಗಳು ಬರುತ್ತವೆ. ಹೆಚ್ಚಿನ ಒತ್ತಡವು ಮಾನಸಿಕವಾಗಿ ಮಾತ್ರವಲ್ಲದೆ ದೈಹಿಕವಾಗಿಯೂ ಸಹ ನಿಮ್ಮ ಮೇಲೆ ಪರಿಣಾಮ ಬೀರಬಹುದು. ಯಾವುದೇ ರೀತಿಯ ದೈಹಿಕ ಚಲನೆಯು ತುಂಬಾ ಚಿಕಿತ್ಸಕವಾಗಿದೆ. ಈ ಯೋಗ ಭಂಗಿಗಳು ಮನಸ್ಸನ್ನು ಕೇಂದ್ರೀಕರಿಸಲು ಮತ್ತು ನಿಮ್ಮ ದೇಹದ ಅರಿವು ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ” ಎಂದು ಬರೆದುಕೊಂಡಿದ್ದಾರೆ.


ಅಂಶುಕಾ ಪ್ರದರ್ಶಿಸಿದ ಯೋಗ ಆಸನಗಳಿಂದ ಹಲವು ರೀತಿಯ ಆರೋಗ್ಯ ಪ್ರಯೋಜನಗಳಿವೆ. ಮಗುವಿನ ಭಂಗಿಯು (ಚೈಲ್ಡ್ ಪೋಸ್) ಬೆನ್ನುಮೂಳೆಯನ್ನು ಹಗುರಗೊಳಿಸಲು ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಸೈಡ್ ಟ್ವಿಸ್ಟ್‌ಗಳು ಕೆಳ ಮತ್ತು ಮೇಲಿನ ಹೊಟ್ಟೆಯ ನೋವನ್ನು ಕಡಿಮೆಯಾಗಿಸುತ್ತದೆ. ಬಟರ್‌ಫ್ಲೈ ಪೋಸ್ ಬೆನ್ನು, ಸೊಂಟ ಮತ್ತು ತೊಡೆಯ ಒಳಭಾಗವನ್ನು ಸಡಿಲಗೊಳಿಸುತ್ತದೆ. ವಿಂಡ್ ರಿಲೀವಿಂಗ್ ಪೋಸ್ ಗ್ಯಾಸ್ ಮತ್ತು ಹೊಟ್ಟೆ ಉಬ್ಬರಿಸುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಾರ್ಪ್ಸ್ ಪೋಸ್ ಒತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

“ಯೋಗವು ಮನಸ್ಸನ್ನು ಶಾಂತಗೊಳಿಸುವ ಮೂಲಕ ಒತ್ತಡ ಮತ್ತು ಆತಂಕವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಈ ಆಸನಗಳು ನಿಮ್ಮ ದೇಹವನ್ನು ಹೆಚ್ಚು ಶಾಂತಗೊಳಿಸುತ್ತದೆ ಮತ್ತು ಮನಸ್ಥಿತಿಯನ್ನು ಹಗುರಾಗಿಸುವ ಸಂತೋಷದ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ಇದು ಮನಸ್ಸನ್ನು ಶಾಂತಗೊಳಿಸಲು ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ” ಎಂದು ಅಂಶುಕಾ ತಿಳಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Cooking In An Iron Pot: ಕಬ್ಬಿಣದ ಪಾತ್ರೆಯಲ್ಲಿ ಅಡುಗೆ ಮಾಡುವುದು ಒಳ್ಳೆಯದು! ಯಾಕೆ ಗೊತ್ತೇ?

ಮಣ್ಣಿನ ಮಡಕೆಯಿಂದ ಹಿಡಿದು ಗಾಜಿನ ಪಾತ್ರೆಗಳವರೆಗೆ ತರಹೇವಾರಿ ಪಾತ್ರೆಗಳು ಆಕರ್ಷಕ ವಿನ್ಯಾಸಗಳಲ್ಲಿ ಇಂದು ಲಭ್ಯವಿವೆ. ಅಡುಗೆ ಮನೆಯ ಸೌಂದರ್ಯವನ್ನು ಹೆಚ್ಚಿಸುವಲ್ಲಿ ನಾವು ಆಯ್ಕೆ ಮಾಡುವ ಪಾತ್ರೆಗಳ ಪಾಲೂ ಇದೆ ಎಂಬುದು ನಿಜ. ಆದರೂ, ಪ್ರತಿ ಪಾತ್ರೆಗಳ ಆಯ್ಕೆಯ ಹಿಂದೆ ನಮ್ಮ ಆರೋಗ್ಯದ ರಹಸ್ಯವೂ ಅಡಗಿದೆ. ನಮ್ಮ ಹಳೆಯ ತಲೆಮಾರಿನ ಹಿರಿಯರಿಂದ ಪಾತ್ರೆಗಳ ಬಳಕೆಯ ಬಗ್ಗೆ ನಮಗೆ ದಕ್ಕಿದ ವಿಚಾರದ ಹಿಂದೆ (Cooking in an iron pot) ವಿಜ್ಞಾನವೂ ಇದೆ.

VISTARANEWS.COM


on

Cooking In An Iron Pot
Koo

ಭಾರತೀಯ ಅಡುಗೆ ಮನೆಗಳ ಪಾತ್ರೆಗಳಲ್ಲೇ ಒಂದು ಸೊಗಸಿದೆ. ನಾವು ನಿತ್ಯವೂ ಅಡುಗೆಗೆ ಬಳಸುವ ಪಾತ್ರೆಗಳಲ್ಲಿ ಪ್ರತಿಯೊಬ್ಬರ ಆಸಕ್ತಿ, ಅಭಿರುಚಿಗಳನ್ನೂ ಗುರುತಿಸಬಹುದು. ಮಣ್ಣಿನ ಮಡಕೆಯಿಂದ ಹಿಡಿದು ಗಾಜಿನ ಪಾತ್ರೆಗಳವರೆಗೆ ತರಹೇವಾರಿ ಪಾತ್ರೆಗಳು ಆಕರ್ಷಕ ವಿನ್ಯಾಸಗಳಲ್ಲಿ ಇಂದು ಲಭ್ಯವಿವೆ. ಅಡುಗೆ ಮನೆಯ ಸೌಂದರ್ಯವನ್ನು ಹೆಚ್ಚಿಸುವಲ್ಲಿ ನಾವು ಆಯ್ಕೆ ಮಾಡುವ ಪಾತ್ರೆಗಳ ಪಾಲೂ ಇದೆ ಎಂಬುದು ನಿಜ. ಆದರೂ, ಪ್ರತಿ ಪಾತ್ರೆಗಳ ಆಯ್ಕೆಯ ಹಿಂದೆ ನಮ್ಮ ಆರೋಗ್ಯದ ರಹಸ್ಯವೂ ಅಡಗಿದೆ. ನಮ್ಮ ಹಳೆಯ ತಲೆಮಾರಿನ ಹಿರಿಯರಿಂದ ಪಾತ್ರೆಗಳ ಬಳಕೆಯ ಬಗ್ಗೆ ನಮಗೆ ದಕ್ಕಿದ ವಿಚಾರದ ಹಿಂದೆ ವಿಜ್ಞಾನವೂ ಇದೆ. ವೈದ್ಯರೂ, ಸಂಶೋಧನೆಗಳೂ ಕೂಡಾ ಇವನ್ನು ಪುಷ್ಟೀಕರಿಸಿವೆ. ಮಣ್ಣಿನ ಪಾತ್ರೆಗಳು, ಕಬ್ಬಿಣದ ಪಾತ್ರೆಗಳ ಬಳಕೆ, ಎಲ್ಲೆಲ್ಲಿ ತಾಮ್ರದ ಪಾತ್ರೆಗಳನ್ನು ಬಳಸಬಹುದು ಇತ್ಯಾದಿ ಮಾಹಿತಿಗಳನ್ನು ನಾವು ಗ್ರಹಿಸಿಕೊಂಡು ಅಳವಡಿಸುವುದರಿಂದ ಸಾಕಷ್ಟು ಆರೋಗ್ಯದ (Cooking in an iron pot) ಲಾಭಗಳನ್ನೂ ಪಡೆಯಬಹುದು. ಹೊಸ ನಮೂನೆಯ ಆಧುನಿಕ ಪಾತ್ರೆಗಳ ಹಾವಳಿಯಿಂದ ತಲೆತಲಾಂತರಗಳಿಂದ ಬಂದ ಕಬ್ಬಿಣದ ಪಾತ್ರೆಗಳ ಬಳಕೆ ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗಿತ್ತು. ಆದರೆ, ಈಗ ಮತ್ತೆ ಕಬ್ಬಿಣದ ಪಾತ್ರೆಯ ಪ್ರಯೋಜನಗಳ ಬಗ್ಗೆ ಜನರಲ್ಲಿ ನಿಧಾನವಾಗಿ ಅರಿವು ಮೂಡುತ್ತಿರುವುದರಿಂದ ಕಬ್ಬಿಣ ಮತ್ತೆ ಚಾಲ್ತಿಯಲ್ಲಿ ಬರುತ್ತಿದೆ. ಬನ್ನಿ, ಕಬ್ಬಿಣದ ಪಾತ್ರೆಯನ್ನು ಬಳಸುವುದರಿಂದ ಯಾವೆಲ್ಲ ಪ್ರಯೋಜನಗಳಿವೆ ಎಂಬುದನ್ನು ನೋಡೋಣ.

Closed Caldron Pot

ಹೆಚ್ಚು ಬೇಯಿಸಲು ಉತ್ತಮ

ಕಬ್ಬಿಣದ ಪಾತ್ರೆಯಲ್ಲಿ ಹೆಚ್ಚು ಉಷ್ಣತೆಯ ಹೀಟಿಂಗ್‌ ಪಾಯಿಂಟ್‌ ತಲುಪಬಹುದು. ಆಹಾರವನ್ನು ರೋಸ್ಟ್‌ ಮಾಡಲು, ಗ್ರಿಲ್‌ ಮಾಡಲು ಹಾಗೂ ಬೇಯಿಸಲು ಕಬ್ಬಿಣದ ಪಾತ್ರೆ ಅತ್ಯುತ್ತಮ. ಆದರೆ, ಕಬ್ಬಿಣದ ಪಾತ್ರೆಯಲ್ಲಿ ಎಲ್ಲ ಭಾಗದಲ್ಲೂ ಒಂದೇ ಸಮನಾದ ಉಷ್ಣತೆ ಹಂಚಿ ಹೋಗುವುದಿಲ್ಲ. ಹಾಗಾಗಿ ಈ ಕಬ್ಬಿಣದ ಪಾತ್ರೆಯಲ್ಲಿ ಅಡುಗೆ ಮಾಡುವ ಮೊದಲೇ ಕೊಂಚ ಹೊತ್ತು ಬಿಸಿಗೆ ಇಡಬೇಕಾಗುತ್ತದೆ. ಆದರೆ ಎಷ್ಟು ಬಿಸಿಯಾದರೂ ನಾನ್‌ಸ್ಟಿಕ್‌ನಂತೆ ಇದರಲ್ಲಿ ರಾಸಾಯನಿಕ ಬಿಡುಗಡೆಯಾಗುವ ಭಯವಿಲ್ಲ.

ತುಕ್ಕು ಹಿಡಿಯಲು ಬಿಡಬಾರದು

ಕಬ್ಬಿಣದ ಪಾತ್ರೆಯ ಬಳಕೆ ಕಷ್ಟ ಎಂಬ ಭಾವನೆ ಹಲವರಲ್ಲಿದೆ. ಆದರೆ ಅದು ಅಷ್ಟು ಕಷ್ಟದ ವಿಚಾರವೇನಲ್ಲ. ಕಬ್ಬಿಣದ ಪಾತ್ರೆ ಕೊಂಚ ಒರಟು ಮೇಲ್ಮೈಯನ್ನು ಹೊಂದಿರುವುದರಿಂದ ಅದನ್ನು ಸದಾ ತೊಳೆದು ಆರಲು ಬಿಟ್ಟು ಎಣ್ಣೆ ಹಚ್ಚಿಟ್ಟರೆ ಸಾಕಾಗುತ್ತದೆ. ತುಕ್ಕು ಹಿಡಿಯಲು ಬಿಡಬಾರದು. ಹಿಡಿದರೆ ಅದನ್ನು ತೊಳೆದು ಮತ್ತೆ ಉಪಯೋಗಿಸಲು ನೆನಪಿಡಿ. ತುಕ್ಕಿನ ಮೇಲೆಯೇ ಹಾಗೆಯೇ ಅಡುಗೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

Cast Iron Pot Of Chili

ಸ್ವಚ್ಛಗೊಳಿಸುವುದು ಸುಲಭ

ಹಾಗೆ ನೋಡಿದರೆ ಕಬ್ಬಿಣದ ತವಾ ಅಥವಾ ಪಾತ್ರೆಯನ್ನು ಸ್ವಚ್ಛಗೊಳಿಸುವುದು ಸುಲಭ. ಇದಕ್ಕೆ ಅತ್ಯಂತ ಜಾಗರೂಕತೆಯ ಕಾಳಜಿ ಅಗತ್ಯವಿಲ್ಲ. ನಾನ್‌ಸ್ಟಿಕ್‌ ಪಾತ್ರೆಯಂತೆ ಜಾಗರೂಕತೆಯ ಅಗತ್ಯವಿಲ್ಲ. ಯಾವುದೇ ಡಿಶ್‌ವಾಶ್‌ ಜೆಲ್ ಮೂಲಕ ಸ್ವಚ್ಛಗೊಳಿಸಬಹುದು. ತಿಕ್ಕಿ ತೊಳೆಯಬಹುದು. ಆದರೆ ತಿಕ್ಕಿ ತೊಳೆದ ಮೇಲೆ ಒಣಗಿಸುವಾಗ ಸ್ವಲ್ಪ ಕಾಳಜಿ ಬೇಕು. ಎಣ್ಣೆಯನ್ನು ಹಚ್ಚಿ ಇಡುವ ಕೆಲಸ ಮಾತ್ರ ಈ ಪಾತ್ರೆಯ ಕಾವಲಿಯಲ್ಲಿ ಮಾಡಬೇಕಾದ ಹೆಚ್ಚುವರಿ ಕೆಲಸವಾಗಿದೆ.

ಲೋಹದ ಯಾವುದೇ ಸೌಟು ಬಳಸಬಹುದು

ನಾನ್‌ಸ್ಟಿಕ್‌ ಪಾತ್ರೆಯಂತೆ ಕಬ್ಬಿಣದ ಪಾತ್ರೆಗೆ ಮರದ ಸೌಟನ್ನು ಬಳಸಬೇಕಾಗಿಲ್ಲ. ಲೋಹದ ಯಾವುದೇ ಬಗೆಯ ಸೌಟನ್ನೂ ಬಳಸಬಹುದು. ಅದರ ಮೂಲಕ ಪಾತ್ರೆಗೆ ಯಾವುದೇ ಹಾನಿಯಾಗದು.

Iron Pot

ಆರೋಗ್ಯ ದೃಷ್ಟಿಯಿಂದ ಒಳ್ಳೆಯದು

ಕಬ್ಬಿಣದ ಪಾತ್ರೆಯ ಬಳಕೆ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದೇ. ನಮ್ಮ ದೇಹಕ್ಕೆ ಕಬ್ಬಿಣಾಂಶವೂ ಇದರಿಂದ ದೊರೆಯುತ್ತದೆ. ರಕ್ತಹೀನತೆಯಂತಹ ಸಮಸ್ಯೆ ಇದರಿಂದ ಬರದು. ಕಬ್ಬಿಣದ ಪಾತ್ರೆಯಲ್ಲಿ ಅಡುಗೆ ಮಾಡುವಾಗ ಕಬ್ಬಿಣದ ಸ್ವಲ್ಪ ಅಂಶ ಆಹಾರಕ್ಕೆ ಸೇರುವುದರಿಂದ ದೇಹಕ್ಕೆ ಕಬ್ಬಿಣಾಂಶವೂ ದೊರೆಯುತ್ತದೆ. ನಮ್ಮ ದೇಹದ ರಕ್ತದಲ್ಲಿನ ಹಿಮೋಗ್ಲೋಬಿನ್‌ನ ಹೆಚ್ಚಳಕ್ಕೆ ಕಬ್ಬಿಣಾಂಶ ಬೇಕೇಬೇಕು. ಹಾಗಾಗಿ ಇದು ಆರೋಗ್ಯಕ್ಕೆ ಪೂರಕ.

ಇದನ್ನೂ ಓದಿ: Clay Pot Cooking: ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡಲು ಬಯಸಿದ್ದೀರಾ? ಹಾಗಿದ್ದರೆ ಇವಿಷ್ಟು ಸಂಗತಿ ನೆನಪಿರಲಿ!

ಯಾವ ನಿರ್ಬಂಧವೂ ಇಲ್ಲ

ಕಬ್ಬಿಣದ ಪಾತ್ರೆಯಲ್ಲಿ ಅಸಿಡಿಕ್‌ ಅಥವಾ ಆಮ್ಲೀಯ ಗುಣಗಳ ಆಹಾರವನ್ನು ಇಡುವಂತಿಲ್ಲ ಎಂಬ ಯಾವ ನಿರ್ಬಂಧವೂ ಇಲ್ಲ. ಆದರೆ, ಇಂಥ ಅಡುಗೆಯನ್ನು ಬಹಳ ಹೊತ್ತು ಇಟ್ಟುಕೊಂಡು ಕುದಿಸುವಂಥ ಪ್ರಕ್ರಿಯೆ ಮಾಡದೆ ಇರುವುದು ಒಳ್ಳೆಯದು.

Continue Reading

ಆಹಾರ/ಅಡುಗೆ

Which Type Of Roti Is Best: ಯಾರಿಗೆ ಯಾವ ರೊಟ್ಟಿ ಸೂಕ್ತ? ತಿನ್ನುವ ಮೊದಲು ತಿಳಿದುಕೊಂಡಿರಿ!

ಹಲವಾರು ರೀತಿಯ ರೊಟ್ಟಿಗಳು ಆಹಾರವಾಗಿ ಜನಪ್ರಿಯತೆ ಗಳಿಸಿವೆ. ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ಧಾನ್ಯ ಪರಂಪರಾಗತ ಆಹಾರವಾಗಿಯೂ ಬಳಕೆಯಲ್ಲಿದೆ. ಆದರೆ ಯಾರಿಗೆ ಯಾವ ರೊಟ್ಟಿ ಒಳ್ಳೆಯದು? ಯಾವ ರೊಟ್ಟಿಯಲ್ಲಿ ಏನೇನು ಸತ್ವಗಳು ದೊರೆಯುತ್ತವೆ? ಇಲ್ಲಿವೆ (Which Type Of Roti Is Best) ವಿವರ.

VISTARANEWS.COM


on

Which Type Of Roti Is Best
Koo

ಭಾರತದಲ್ಲಿ ಎಲ್ಲವೂ ವೈವಿಧ್ಯಮಯ, ಊಟವೂ ಸೇರಿ. ಅನ್ನ ಎಂದರೆ ಎಲ್ಲವೂ ಒಂದೇ ಅಲ್ಲ. ಬಿಳಿಯಕ್ಕಿ, ಕೆಂಪಕ್ಕಿ, ಕುಚ್ಚಲಕ್ಕಿ ಮುಂತಾದ ಹಲವು ರೀತಿಯ ಅಕ್ಕಿಗಳಲ್ಲಿ ಅನ್ನ ಮಾಡಲಾಗುತ್ತದೆ. ರೊಟ್ಟಿ ಎಂದರೆ ಅದರಲ್ಲೂ ಭಿನ್ನತೆಯಿದೆ. ಅಕ್ಕಿರೊಟ್ಟಿ ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಚಲಿತ; ಗೋಧಿ ರೊಟ್ಟಿ ಭಾರತದೆಲ್ಲೆಡೆ ಚಾಲ್ತಿಯಲ್ಲಿದೆ; ಜೋಳದ್ದು ಕರ್ನಾಟಕವೂ ಸೇರಿದಂತೆ ಹಲವೆಡೆ ಬಳಕೆಯಲ್ಲಿದೆ; ರಾಗಿ ರೊಟ್ಟಿ ಕರ್ನಾಟಕದಲ್ಲಿ ಹೆಚ್ಚು ಪ್ರಿಯ; ಸಜ್ಜೆ ರೊಟ್ಟಿ ಗುಜರಾತ್‌, ರಾಜಸ್ಥಾನಗಳಲ್ಲಿ ಮುಖ್ಯ ಆಹಾರ; ಪಂಜಾಬ್‌ ಪ್ರಾಂತ್ಯದಲ್ಲಿ ಮೈದಾ ನಾನ್‌ಗಳು ಜನಪ್ರಿಯ. ಆದರೆ ಈ ಎಲ್ಲಾ ರೊಟ್ಟಿಗಳಲ್ಲಿ ತೂಕ ಇಳಿಸುವವರಿಗೆ ಸೂಕ್ತವಾಗಿದ್ದು (Which Type Of Roti Is Best) ಯಾವುದು? ಇತ್ತೀಚಿನ ವರ್ಷಗಳಲ್ಲಿ ಸಿರಿಧಾನ್ಯದ ಬಳಕೆ ಹೆಚ್ಚಿದೆ. ಆರೋಗ್ಯದ ಬಗ್ಗೆ ಕಾಳಜಿಯೂ ಹೆಚ್ಚಿರುವುದರಿಂದ, ಯಾವುದು ಹೆಚ್ಚು ಆರೋಗ್ಯಕರ ಎಂಬ ಚರ್ಚೆಗೆ ಕಾವೇರಿದೆ. ಆಹಾರ ತಜ್ಞರು ಈ ಬಗ್ಗೆ ನಾನಾ ರೀತಿಯ ವಿವರಣೆಗಳನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವು ರೀತಿಯ ರೊಟ್ಟಿಗಳ ಸತ್ವ ಮತ್ತು ಕ್ಯಾಲೊರಿಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ. ಇವೆಲ್ಲವೂ ಆರೋಗ್ಯಕ್ಕೆ ಒಳ್ಳೆಯದೇ ಆದರೂ ಒಂದೊಂದು ಧಾನ್ಯಗಳಿಗೂ ಅದರದ್ದೇ ಆದ ಅನನ್ಯತೆಯಿದೆ. ಹಾಗಾಗಿ ಅವುಗಳ ಸತ್ವಗಳು ಭಿನ್ನವಾಗುತ್ತವೆ.

Wheat Roti

ಗೋಧಿ ರೊಟ್ಟಿ

ಒಂದು ಮಧ್ಯಮ ಗಾತ್ರದ ಗೋಧಿ ರೊಟ್ಟಿಯಲ್ಲಿ 70-80 ಕ್ಯಾಲರಿ ಶಕ್ತಿ ದೊರೆಯುತ್ತದೆ. ಇದರಲ್ಲಿ ನಾರು, ಪಿಷ್ಟ, ಅಲ್ಪ ಪ್ರಮಾಣದ ಪ್ರೊಟೀನ್‌ ಮತ್ತು ಕೊಬ್ಬು, ಮ್ಯಾಂಗನೀಸ್‌, ಫಾಸ್ಫರಸ್‌ನಂಥ ಖನಿಜಗಳು, ಹಲವು ರೀತಿಯ ಬಿ ವಿಟಮಿನ್‌ಗಳು ಇದರಲ್ಲಿ ವಿಫುಲವಾಗಿವೆ. ಈ ಧಾನ್ಯ ದೊರೆಯುವುದು, ಇದರಲ್ಲಿ ಆಹಾರ ತಯಾರಿಸುವುದು ಕಷ್ವವಲ್ಲ ಮತ್ತು ಇದರ ರುಚಿಯೂ ಇಷ್ಟವಾಗುವಂಥದ್ದು.

Millet Roti

ರಾಗಿ ರೊಟ್ಟಿ

ಒಂದು ರಾಗಿ ರೊಟ್ಟಿಯಲ್ಲಿ 80-90 ಕ್ಯಾಲರಿ ಶಕ್ತಿ ದೊರೆಯುತ್ತದೆ. ಜೊತೆಗೆ, ಕ್ಯಾಲ್ಶಿಯಂ, ಕಬ್ಬಿಣ, ನಾರು, ಪ್ರೊಟೀನ್‌, ಪಿಷ್ಟ, ಉತ್ಕರ್ಷಣ ನಿರೋಧಕಗಳಿಂದ ಭರಿತವಾಗಿದೆ. ಹಲವು ರೀತಿಯ ಖನಿಜಾಂಶಗಳು ಇದರಲ್ಲಿವೆ. ಮೂಳೆಗಳ ಆರೋಗ್ಯಕ್ಕೆ ಇದು ಸೂಕ್ತವಾದದ್ದು ಮಾತ್ರವಲ್ಲ, ಮಧುಮೇಹಿಗಳಿಗೆ ಇದು ಒಳ್ಳೆಯ ಆಹಾರವಾಗಿದ್ದು, ರಕ್ತದಲ್ಲಿ ಸಕ್ಕರೆಯಂಶ ಏರದಂತೆ ಕಾಪಾಡಲು ನೆರವಾಗುತ್ತದೆ. ರಾಗಿ ತಿಂದವ ನಿರೋಗಿ ಎಂಬ ಮಾತು ವ್ಯಾಪಕ ಮನ್ನಣೆ ಪಡೆದಿದೆ.

jolada Roti

ಜೋಳದ ರೊಟ್ಟಿ

ಒಂದು ದೊಡ್ಡ ಜೋಳದ ರೊಟ್ಟಿಯಲ್ಲಿ 50-60 ಕ್ಯಾಲರಿ ಶಕ್ತಿ ದೊರೆಯುತ್ತದೆ. ಜೋಳ ತಿಂದವ ತೋಳದಂತಿರಬಹುದು ಎಂಬುದು ಜನಪ್ರಿಯ ಗಾದೆ. ಗ್ಲೂಟೆನ್‌ ರಹಿತವಾದ ಆಹಾರ ಇದಾಗಿದ್ದು, ಮಧುಮೇಹಿಗಳಿಗೆ ಸೂಕ್ತವಾದ ಆಹಾರವಿದು. ಇದರಲ್ಲಿ ಪ್ರೊಟೀನ್‌, ಕೊಬ್ಬು, ನಾರು, ಪಿಷ್ಟ, ಕ್ಯಾಲ್ಶಿಯಂ, ರಂಜಕ, ಕಬ್ಬಿಣ ಮುಂತಾದ ಸೂಕ್ಷ್ಮ ಪೋಷಕಾಂಶಗಳು ಬಹಳಷ್ಟಿವೆ.

Multigrain Roti

ಬಹುಧಾನ್ಯಗಳ ರೊಟ್ಟಿ

ಇದರಲ್ಲಿ ಹಲವಾರು ರೀತಿಯ ಧಾನ್ಯಗಳನ್ನು ಮಿಶ್ರ ಮಾಡಲಾಗುತ್ತದೆ. ಅಂದಾಜಿಗೆ ಹೇಳುವುದಾದರೆ, ಒಂದು ರೊಟ್ಟಿಯಲ್ಲಿ 80-100 ಕ್ಯಾಲರಿ ಶಕ್ತಿ ದೊರೆಯಬಹುದು. ಆದರೆ ಯಾವ್ಯಾವ ಧಾನ್ಯಗಳನ್ನು ಎಷ್ಟು ಪ್ರಮಾಣದಲ್ಲಿ ಮಿಶ್ರ ಮಾಡಲಾಗುತ್ತದೆ ಎನ್ನುವುದರ ಮೇಲೆ, ಇದರ ಕ್ಯಾಲರಿಗಳು ನಿರ್ಧಾರವಾಗುತ್ತದೆ. ಇದರಿಂದ ಹಲವು ರೀತಿಯ ಧಾನ್ಯಗಳು ಮತ್ತು ಸಿರಿಧಾನ್ಯಗಳು ಒಟ್ಟಿಗೇ ದೇಹಕ್ಕೆ ದೊರೆಯುವುದಕ್ಕೆ ಸಾಧ್ಯ. ಇದರಲ್ಲಿ ಹಲವು ರೀತಿಯ ವಿಟಮಿನ್‌ ಮತ್ತು ಖನಿಜಗಳು, ನಾರು ಹೇರಳವಾಗಿ ದೊರೆಯುತ್ತದೆ.

ಇದನ್ನೂ ಓದಿ: Health Benefits Of Tofu: ಪನೀರ್‌ನಂತೆ ಕಾಣುವ ಈ ಆಹಾರದ ಬಗ್ಗೆ ನಿಮಗೆ ಗೊತ್ತೆ?

ಯಾವುದು ಸೂಕ್ತ?

ಗ್ಲೂಟೆನ್‌ ಮುಕ್ತ ಆಹಾರ ಬೇಕೆಂದರೆ ರಾಗಿ ಮತ್ತು ಜೋಳದ ರೊಟ್ಟಿಗಳು ಸೂಕ್ತ. ಬಹುಧಾನ್ಯಗಳಲ್ಲಿ ಗೋಧಿ ಮಿಶ್ರವಾಗಿರುವ ಸಾಧ್ಯತೆ ಹೆಚ್ಚಾಗಿರುವುದರಿಂದ ಇದನ್ನು ಬಿಡುವುದು ಒಳಿತು. ಮಧುಮೇಹ ನಿಯಂತ್ರಣಕ್ಕೆ ಪ್ರಯತ್ನಿಸುತ್ತಿದ್ದರೆ ರಾಗಿ ಮತ್ತು ಜೋಳದ ರೊಟ್ಟಿಗಳು ಒಳ್ಳೆಯದು. ಹೆಚ್ಚು ಸಮತೋಲಿತ ಆಹಾರದ ಬಗ್ಗೆ ಗಮನ ಹೊಂದಿದ್ದರೆ ಬಹುಧಾನ್ಯಗಳ ರೊಟ್ಟಿ ಒಳ್ಳೆಯ ಆಯ್ಕೆ. ತೂಕ ಇಳಿಸುವುದು ಮುಖ್ಯ ಉದ್ದೇಶವಾಗಿದ್ದರೆ ಜೋಳದ ರೊಟ್ಟಿ ಸೂಕ್ತವಾದದ್ದು.

Continue Reading

ಕರ್ನಾಟಕ

Fortis Hospital: ವಿಶ್ವದಲ್ಲೇ ಮೊದಲ ಬಾರಿಗೆ 3 ವಿಭಿನ್ನ ಕಾಯಿಲೆಗೆ ಏಕಕಾಲದಲ್ಲೇ ಯಶಸ್ವಿ ಶಸ್ತ್ರಚಿಕಿತ್ಸೆ

Fortis Hospital: ಹೃದ್ರೋಗ ಸಮಸ್ಯೆ, ಕರುಳಿನ ಕ್ಯಾನ್ಸರ್‌ ಹಾಗೂ ಪಿತ್ತಕೋಶದಲ್ಲಿ ಕಲ್ಲು ಹೊಂದಿದ್ದ 44 ವರ್ಷದ ವ್ಯಕ್ತಿಗೆ ಏಕಕಾಲದಲ್ಲೇ ಮೂರು ಶಸ್ತ್ರಚಿಕಿತ್ಸೆಯನ್ನು ಬೆಂಗಳೂರಿನ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆಸಿದೆ. ಫೋರ್ಟಿಸ್ ಆಸ್ಪತ್ರೆಯ ಹೃದಯ ತಜ್ಞ ಡಾ. ವಿವೇಕ್ ಜವಳಿ ಮತ್ತು ಮಿನಿಮಲ್ ಆಕ್ಸೆಸ್ ಮತ್ತು ಬಾರಿಯಾಟ್ರಿಕ್ ಸರ್ಜರಿ ನಿರ್ದೇಶಕ ಡಾ. ಜಿ. ಐ. ಗಣೇಶ್ ಶೆಣೈ ಅವರ ವೈದ್ಯರ ತಂಡ ಈ ಚಿಕಿತ್ಸೆಯನ್ನು ನೆರವೇರಿಸಿದೆ

VISTARANEWS.COM


on

Fortis Hospital doctors team performed complex surgery for three different diseases simultaneously
Koo

ಬೆಂಗಳೂರು: ವಿಶ್ವದಲ್ಲೇ ಮೊದಲ ಬಾರಿಗೆ ಏಕಕಾಲದಲ್ಲೇ ಒಬ್ಬ ವ್ಯಕ್ತಿಗೆ ಮೂರು ವಿಭಿನ್ನ ಕಾಯಿಲೆಗಳಿಗೆ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಫೋರ್ಟಿಸ್‌ ಆಸ್ಪತ್ರೆ (Fortis Hospital) ವೈದ್ಯಕೀಯ ತಂಡ ಯಶಸ್ವಿಯಾಗಿ ನಡೆಸಿದೆ.

ನಗರದ ಕನ್ನಿಂಗ್‌ಹ್ಯಾಮ್‌ ರಸ್ತೆಯ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಹೃದ್ರೋಗ ಸಮಸ್ಯೆ, ಕರುಳಿನ ಕ್ಯಾನ್ಸರ್‌ ಹಾಗೂ ಪಿತ್ತಕೋಶದಲ್ಲಿ ಕಲ್ಲು ಹೊಂದಿದ್ದ 44 ವರ್ಷದ ವ್ಯಕ್ತಿಗೆ ಏಕಕಾಲದಲ್ಲೇ ಮೂರು ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದು, ಇದು ವಿಶ್ವದಲ್ಲೇ ಮೊದಲ ಪ್ರಕರಣವಾಗಿದೆ.

ಫೋರ್ಟಿಸ್ ಆಸ್ಪತ್ರೆಯ ಹೃದಯ ತಜ್ಞ ಡಾ. ವಿವೇಕ್ ಜವಳಿ ಮತ್ತು ಮಿನಿಮಲ್ ಆಕ್ಸೆಸ್ ಮತ್ತು ಬಾರಿಯಾಟ್ರಿಕ್ ಸರ್ಜರಿ ನಿರ್ದೇಶಕ ಡಾ. ಜಿ. ಐ. ಗಣೇಶ್ ಶೆಣೈ ಅವರ ವೈದ್ಯರ ತಂಡ ಈ ಚಿಕಿತ್ಸೆಯನ್ನು ನೆರವೇರಿಸಿದೆ.

ಇದನ್ನೂ ಓದಿ: Karnataka Congress: ಬೂತ್ ಮಟ್ಟದಲ್ಲಿ ‘ಕಾಂಗ್ರೆಸ್ ಕುಟುಂಬ’ ಕಾರ್ಯಕ್ರಮ; ಪಕ್ಷ ಬಲವರ್ಧನೆಗೆ ಡಿ.ಕೆ.ಶಿ ಪ್ಲ್ಯಾನ್‌

ಈ ಕುರಿತು ಮಾತನಾಡಿದ ಡಾ. ವಿವೇಕ್‌ ಜವಳಿ, 44 ವರ್ಷದ ಕೊಪ್ಪರಂ ಎಂಬ ವ್ಯಕ್ತಿಯು ಹೃದ್ರೋಗ ಸಮಸ್ಯೆಯನ್ನು ಹೊಂದಿದ್ದರು. ಇದಕ್ಕೆ ಚಿಕಿತ್ಸೆ ಪಡೆಯಲು ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದರು. ಇವರಿಗೆ ಕೊರೊನರಿ ಆರ್ಟರಿ ಬೈಪಾಸ್ ಸರ್ಜರಿ ಮಾಡುವ ಅವಶ್ಯಕತೆ ಇತ್ತು.

ರೋಗಿಯು ತಾವು ಮೊದಲಿನಿಂದಲೂ ಹೊಟ್ಟೆ ನೋವು ಅನುಭವಿಸುತ್ತಿರುವ ಬಗ್ಗೆಯೂ ನಮಗೆ ತಿಳಿಸಿದರು, ಇದಕ್ಕೆ ಅಲ್ಟ್ರಾಸೌಂಡ್ ಪರೀಕ್ಷೆ ನಡೆಸಿದೆವು. ಈ ವೇಳೆ ಅವರಿಗೆ ಪಿತ್ತಕೋಶದಲ್ಲಿ ಕಲ್ಲು ಇರುವುದು ಕಂಡು ಬಂತು. ಹೀಗಾಗಿ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಿದಾಗ ಅವರಿಗೆ ಕರುಳಿನ ಕ್ಯಾನ್ಸರ್‌ ಇರುವುದು ಸಹ ಪತ್ತೆಯಾಯಿತು. ಕರುಳಿನ ಕ್ಯಾನ್ಸರ್‌ ಬಹುಪಾಲು ದೊಡ್ಡಮಟ್ಟದಲ್ಲಿಯೇ ಅವರಿಗೆ ಹಾನಿ ಮಾಡುತ್ತಿತ್ತು. ಹೀಗಾಗಿ ಅವರಿಗೆ ಹೃದಯ ಬೈಪಾಸ್‌ ಸರ್ಜರಿಯ ಜತೆಗೆ ಕರುಳಿನ ಕ್ಯಾನ್ಸರ್‌ ಶಸ್ತ್ರಚಿಕಿತ್ಸೆಯೂ ಹೆಚ್ಚು ಅನಿವಾರ್ಯವಾಗಿತ್ತು.

ಆದರೆ, ಹೃದಯದ ಬೈಪಾಸ್‌ ಸರ್ಜರಿ ಬಳಿಕ 3 ತಿಂಗಳು ಯಾವುದೇ ಚಿಕಿತ್ಸೆಗೆ ಒಳಪಡುವುದು ಹೆಚ್ಚು ಅಪಾಯಕಾರಿ. ಆದರೆ, ಮೂರು ತಿಂಗಳವರೆಗೂ ಕರುಳಿನ ಕ್ಯಾನ್ಸರ್‌ನನ್ನು ಹಾಗೇ ಬಿಡಲು ಸಹ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಈ ವ್ಯಕ್ತಿಗೆ ಏಕಕಾಲದಲ್ಲೇ ಹೃದಯದ ಬೈಪಾಸ್‌ ಸರ್ಜರಿ, ಕರುಳಿನ ಕ್ಯಾನ್ಸರ್‌ ಶಸ್ತ್ರಚಿಕಿತ್ಸೆ ಹಾಗೂ ಪಿತ್ತಕೋಶದಲ್ಲಿ ಕಲ್ಲು ತೆಗೆಯುವ ಶಸ್ತ್ರಚಿಕಿತ್ಸೆಯನ್ನು ನಡೆಸಲು ಅವರ ಕುಟುಂಬದವರ ಒಪ್ಪಿಗೆ ಪಡೆದುಕೊಂಡೆವು.

ಇದನ್ನೂ ಓದಿ: IPL 2024 : ಇದು ಕಾಕತಾಳಿಯವೇ? ಐಪಿಎಲ್ ಮತ್ತು ಡಬ್ಲ್ಯುಪಿಎಲ್​ ಫೈನಲ್ ರಿಸಲ್ಟ್​​ನಲ್ಲಿದೆ ಸಾಮ್ಯತೆ

ಮೊದಲಿಗೆ ಆಫ್-ಪಂಪ್ ಕರೋನರಿ ಆರ್ಟರಿ ಬೈಪಾಸ್ (OPCAB)ನ ವಿಶೇಷ ಶಸ್ತ್ರಚಿಕಿತ್ಸಾ ತಂತ್ರದ ಮೂಲಕ ಕೊರೊನರಿ ಆರ್ಟರಿ ಬೈಪಾಸ್ ಸರ್ಜರಿಗೆ ನಡೆಸಿದೆವು. ಈ ಅವಧಿಯಲ್ಲೇ ಬಾರಿಯಾಟ್ರಿಕ್ ಸರ್ಜನ್‌ ಡಾ. ಜಿ. ಐ. ಗಣೇಶ್ ಶೆಣೈ ಅವರು, ಲ್ಯಾಪರೊಸ್ಕೋಪಿಕ್ ತಂತ್ರಜ್ಞಾನ ಬಳಸಿಕೊಂಡು, ಲ್ಯಾಪರೊಸ್ಕೋಪಿಕ್ ಎಕ್ಸ್ಟೆಂಡೆಡ್ ರೈಟ್ ಹೆಮಿಕೊಲೆಕ್ಟಮಿ (LERHC) ಅನ್ನು ಕ್ಯಾನ್ಸರ್‌ನ ಕರುಳಿನ ಭಾಗವನ್ನು ತೆಗೆದುಹಾಕಿದರು, ಜತೆಗೆ ಪಿತ್ತಕೋಶದ ಕಲ್ಲುಗಳನ್ನು ಸಹ ಲ್ಯಾಪರೊಸ್ಕೋಪಿಕ್ ಕೊಲೆಸಿಸ್ಟೆಕ್ಟಮಿ (LC) ಮೂಲಕ ತೆಗೆದು ಹಾಕುವಲ್ಲಿ ಯಶಸ್ವಿಯಾದರು. ಈ ಎಲ್ಲಾ ಶಸ್ತ್ರಚಿಕಿತ್ಸೆಯನ್ನು 7 ಗಂಟೆಗಳಲ್ಲಿ ನಡೆಸಲಾಯಿತು. ರೋಗಿಯು ಶಸ್ತ್ರಚಿಕಿತ್ಸೆಯಾದ 15 ದಿನಗಳ ನಂತರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಸಂಪೂರ್ಣ ಆರೋಗ್ಯವಾಗಿದ್ದಾರೆ ಎಂದು ಅವರು ವಿವರಿಸಿದರು.

Continue Reading

ಫ್ಯಾಷನ್

Hairstyle Craze: ಸೋಷಿಯಲ್‌ ಮೀಡಿಯಾದಲ್ಲಿ ರಂಗೇರಿದ ಹೇರ್‌ ಸ್ಟೈಲ್ಸ್

ಚಿತ್ರ-ವಿಚಿತ್ರ ವಿನ್ಯಾಸದ ಹೇರ್‌ ಸ್ಟೈಲ್ಸ್‌, (Hairstyle Craze) ಕಲಾತ್ಮಕವಾಗಿ ಮಾಡಿದ ಹೇರ್‌ ಡಿಸೈನಿಂಗ್‌ ಫೋಟೋಗಳು ಇಂದು ಸೋಷಿಯಲ್‌ ಮೀಡಿಯಾದಲ್ಲಿ ಹಂಗಾಮ ಎಬ್ಬಿಸಿವೆ.

VISTARANEWS.COM


on

HairStyle Craze
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಚಿತ್ರ-ವಿಚಿತ್ರ ವಿನ್ಯಾಸದಲ್ಲಿ ಕಲಾತ್ಮಕವಾಗಿ ಮಾಡಿದ ಹೇರ್‌ಸ್ಟೈಲ್‌ (Hairstyle Craze) ಫೋಟೋಗಳು ಸೋಷಿಯಲ್‌ ಮೀಡಿಯಾದ ಬ್ಯೂಟಿ ಬ್ಲಾಗ್‌-ವ್ಲಾಗ್‌ಗಳಲ್ಲಿ ಆನ್‌ಲೈನ್‌ ಪ್ರೇಮಿಗಳನ್ನು ಆಕರ್ಷಿಸಿವೆ. ಪ್ರಯೋಗಾತ್ಮಕವಾಗಿ ಮಾಡಿದ ನಾನಾ ಶೈಲಿಯ ಈ ಕೂದಲಿನ ವಿನ್ಯಾಸಗಳಿಗೆ ಸೋಷಿಯಲ್‌ ಮೀಡಿಯಾ ವೇದಿಕೆ ಕಲ್ಪಿಸಿದ್ದು, ಹೇರ್‌ ಸ್ಟೈಲಿಂಗ್‌ ಪ್ರಿಯರಲ್ಲಿ ಈ ಕ್ರೇಜ್ ಹುಟ್ಟು ಹಾಕಿದೆ.

Online Craze

ಚಿತ್ರ-ವಿಚಿತ್ರ ಹೇರ್‌ ಸ್ಟೈಲಿಂಗ್‌

ಹೇರ್‌ ಸ್ಟೈಲಿಸ್ಟ್‌ ರಿಚರ್ಡ್ ಹೇಳುವಂತೆ, ತಲೆಗೂದಲನ್ನು ವಿಭಿನ್ನ ಕಾನ್ಸೆಪ್ಟ್‌ಗಳಲ್ಲಿ ಬಾಚುವುದು, ಕೂದಲನ್ನು ಪ್ರಯೋಗಾತ್ಮಕವಾಗಿ ಸಿಂಗರಿಸಿ ಇಲ್ಲವೇ ಅಲಂಕರಿಸುವುದು. ಅವರವರ ಆಯ್ಕೆಗೆ ತಕ್ಕಂತೆ ಥೀಮ್‌ಗೆ ತಕ್ಕಂತೆ ಕೂದಲನ್ನು ಆರ್ಟ್‌ನ ಒಂದು ಭಾಗವಾಗಿಸುವುದು. ಇವೆಲ್ಲಾ ಇಂದು ಸೋಷಿಯಲ್ ಮೀಡಿಯಾದ ಬ್ಯೂಟಿ ಪ್ರಿಯರ ಬ್ಲಾಗ್‌ ಹಾಗೂ ವ್ಲಾಗ್‌ಗಲ್ಲಿ ಕಂಡು ಬರುತ್ತಿವೆ. ಇನ್ನು ಬ್ಯೂಟಿ ಎಕ್ಸ್‌ಪರ್ಟ್ ತನ್ಯಾ ಪ್ರಕಾರ, ವಿಭಿನ್ನ, ವೈವಿದ್ಯಮಯ ಊಹೆಗೂ ಮೀರಿದ ಕೂದಲಿನ ವಿನ್ಯಾಸದಲ್ಲಿ ಕೆಲವು ಆಕರ್ಷಕ ಹೇರ್‌ ಸ್ಟೈಲಿಂಗ್‌ ಲಿಸ್ಟ್‌ಗೆ ಸೇರಿದರೇ ಇನ್ನು ಕೆಲವು ವಿಯರ್ಡ್‌ ಬ್ಯೂಟಿ ಹೇರ್‌ ಸ್ಟೈಲಿಂಗ್‌ ವಿಭಾಗಕ್ಕೆ ಸೇರುತ್ತವಂತೆ.

Online Craze

ಇನ್ನು ಹೇರ್‌ ಡಿಸೈನಿಂಗ್‌ ಅಥವಾ ಆರ್ಟಿಸ್ಟಿಕ್‌ ಹೇರ್‌ಸ್ಟೈಲ್‌ ಮಾಡಲು ಬಯಸುವವರು ಮೊದಲು ಒಂದಿಷ್ಟು ಬ್ಯೂಟಿ ಬ್ಲಾಗ್‌ಗಳಲ್ಲಿ ಈ ಕುರಿತಂತೆ ಸಮೀಕ್ಷೆ ಮಾಡಿ ನಂತರ ತಮ್ಮ ಕೂದಲಿನ ಟೆಕ್ಷ್ಚರ್‌ಗೆ ಹೊಂದುವಂತೆ ವಿನ್ಯಾಸವನ್ನು ಆಯ್ಕೆ ಮಾಡಿಕೊಳ್ಳಬೇಕು. ಎಲ್ಲದಕ್ಕಿಂತ ಮೊದಲು ಕೂದಲು ಆರೋಗ್ಯವಾಗಿರಬೇಕು. ವಾಲ್ಯೂಮ್‌ ಹೊಂದಿರಬೇಕು ಎನ್ನುತ್ತಾರೆ ಹೇರ್ ಸ್ಟೈಲಿಸ್ಟ್‌ ಸ್ವಪ್ನಾ ಭವ್ನಾನಿ.

Online Craze

ಹೇರ್‌ ಸ್ಟೈಲಿಂಗ್‌ ಮಾಡುವ ಮುನ್ನ

ಸೋಷಿಯಲ್‌ ಮೀಡಿಯಾದಲ್ಲಿನ ಹೇರ್‌ ಸ್ಟೈಲಿಂಗ್‌ ಕ್ರೇಜ್‌ಗೆ ನೀವು ಸಾಥ್‌ ನೀಡುವುದಾದಲ್ಲಿ ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

  • ಹೇರ್‌ ಎಕ್ಸ್‌ಪರ್ಟ್ ಬಳಿ ನಿಮ್ಮ ಥೀಮ್‌ ಬಗ್ಗೆ ಮೊದಲು ಚರ್ಚಿಸಿ.
  • ಹೇರ್‌ ಡಿಸೈನಿಂಗ್‌ಗೆ ಬೇಕಾಗುವ ಪರಿಕರ ಹಾಗೂ ವಸ್ತುಗಳನ್ನು ತೆಗೆದಿರಿಸಿ.
  • ಮೇಕಪ್‌ ಮುಗಿದ ನಂತರ ಹೇರ್ ಡಿಸೈನಿಂಗ್‌ ಮಾಡುವುದು/ಮಾಡಿಸುವುದು ಒಳಿತು.
  • ಸೋಷಿಯಲ್‌ ಮೀಡಿಯಾಗೆ ಅಪ್‌ಲೋಡ್‌ ಮಾಡುವಾಗ ಹ್ಯಾಶ್‌ಟ್ಯಾಗ್‌ ಬಳಸಿ.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Mango Nail Art: ಸಮ್ಮರ್‌ ಸೀಸನ್‌ನಲ್ಲಿ ಬಂತು ಮ್ಯಾಂಗೋ ನೇಲ್‌ ಆರ್ಟ್!

Continue Reading
Advertisement
India Head Coach
ಕ್ರೀಡೆ22 mins ago

India Head Coach: ಗಂಭೀರ್‌ ಕೋಚ್​ ಆಗುವುದು ಬಹುತೇಕ ಖಚಿತ; ಕುತೂಹಲ ಮೂಡಿಸಿದ ಜಯ್‌ ಶಾ ಭೇಟಿ

hindalaga jail assault case
ಕ್ರೈಂ41 mins ago

Assault Case: ಹಿಂಡಲಗಾ ಜೈಲಿನಲ್ಲಿ ಕೈದಿಯಿಂದಲೇ ಮಾರಣಾಂತಿಕ ಹಲ್ಲೆ; ಭಯದಲ್ಲಿ ಬದುಕುತ್ತಿರುವ ಸಿಬ್ಬಂದಿ!

Viral Video
ವೈರಲ್ ನ್ಯೂಸ್41 mins ago

Viral Video: ನಡು ರಸ್ತೆಯಲ್ಲಿ ಪಿಸ್ತೂಲ್‌ ತೋರಿಸಿ ವ್ಯಕ್ತಿ ಮೇಲೆ ಹಲ್ಲೆ; ಅಂತಾರಾಷ್ಟ್ರೀಯ ಮಟ್ಟದ ಶೂಟರ್‌ನಿಂದ ದಾಂಧಲೆ

swagat babu no more
ಸಿನಿಮಾ1 hour ago

Swagat Babu: ಕನ್ನಡ ಚಲನಚಿತ್ರ ನಿರ್ಮಾಪಕ ಸ್ವಾಗತ್ ಬಾಬು ಇನ್ನಿಲ್ಲ

Porsche car accident ವಿಸ್ತಾರ ಸಂಪಾದಕೀಯ
ಪ್ರಮುಖ ಸುದ್ದಿ1 hour ago

ವಿಸ್ತಾರ ಸಂಪಾದಕೀಯ: ಕುಡುಕ ಬಾಲಕನಿಂದ ಅಪಘಾತ ಪ್ರಕರಣ; ಪುಣೆ ಪೊಲೀಸರ ದಿಟ್ಟ ಕ್ರಮ ಶ್ಲಾಘನೀಯ

Cooking In An Iron Pot
ಆರೋಗ್ಯ2 hours ago

Cooking In An Iron Pot: ಕಬ್ಬಿಣದ ಪಾತ್ರೆಯಲ್ಲಿ ಅಡುಗೆ ಮಾಡುವುದು ಒಳ್ಳೆಯದು! ಯಾಕೆ ಗೊತ್ತೇ?

karnataka weather Forecast
ಮಳೆ2 hours ago

Karnataka Weather : ಕರಾವಳಿ, ಮಲೆನಾಡಲ್ಲಿ ಗುಡುಗು, ಮಿಂಚು; ಒಳನಾಡಿನಲ್ಲಿ ಸಾಧಾರಣ ಮಳೆ

Which Type Of Roti Is Best
ಆಹಾರ/ಅಡುಗೆ3 hours ago

Which Type Of Roti Is Best: ಯಾರಿಗೆ ಯಾವ ರೊಟ್ಟಿ ಸೂಕ್ತ? ತಿನ್ನುವ ಮೊದಲು ತಿಳಿದುಕೊಂಡಿರಿ!

Dina Bhavishya
ಭವಿಷ್ಯ4 hours ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಹೊರ ಬರುತ್ತೀರಿ

Vijayapura news
ಪ್ರಮುಖ ಸುದ್ದಿ9 hours ago

Vijayapura News : ಪ್ರೀತಿಸಿದವಳನ್ನೇ ಮದುವೆಯಾಗಲು ಯುವಕನ ಹಠ; ಪರಸ್ಪರ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿಕೊಂಡು ಆಸ್ಪತ್ರೆ ಸೇರಿದರು!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ15 hours ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ2 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು2 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ5 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ6 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು7 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು7 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ1 week ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಟ್ರೆಂಡಿಂಗ್‌