Protein Side Effects: ಪ್ರೊಟೀನ್‌ ಪೂರಕಗಳ ಸೇವನೆಯಿಂದ ಸೈಡ್ ಎಫೆಕ್ಟ್‌ಗಳಿವೆಯೆ? - Vistara News

ಆರೋಗ್ಯ

Protein Side Effects: ಪ್ರೊಟೀನ್‌ ಪೂರಕಗಳ ಸೇವನೆಯಿಂದ ಸೈಡ್ ಎಫೆಕ್ಟ್‌ಗಳಿವೆಯೆ?

ಪೂರಕ ಪ್ರೊಟೀನ್‌ (protein side effects) ಸೇವನೆಯಿಂದ ಉಂಟಾಗುವ ಅಡ್ಡ ಪರಿಣಾಮಗಳೇನು? ಈ ಲೇಖನ ಓದಿ

VISTARANEWS.COM


on

Protein Side Effects
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಫಿಟ್ನೆಸ್‌ ಪ್ರಿಯರಲ್ಲಿ ನಾನಾ ರೀತಿಯ ವರ್ಕೌಟ್‌ಗಳು ಎಷ್ಟು ಜನಪ್ರಿಯತೆ ಪಡೆಯುತ್ತಿವೆಯೋ ಅಷ್ಟೇ ಜನಪ್ರಿಯವಾಗಿರುವುದು ಪೂರಕ ಪ್ರೊಟೀನ್‌ಗಳು- ಅದು ಪ್ರೊಟೀನ್‌ (protein side effects) ಪುಡಿ, ಬಾರ್‌, ಮಾತ್ರೆ, ಪೇಯ ಇತ್ಯಾದಿ ಯಾವುದೇ ರೂಪದಲ್ಲಿ ಇರಬಹುದು. ಅದರಲ್ಲೂ ದೇಹ ಹುರಿಗಟ್ಟಿಸುವ ಉತ್ಸಾಹದಲ್ಲಿದ್ದವರಿಗೆ ಇದು ಸುಲಭವಾಗಿ ಕೈಗೆಟುಕುತ್ತದೆ. ಇವುಗಳನ್ನು ದೇಹ ತೂಕ ಇಳಿಸುವುದಕ್ಕೆ, ಮಾಂಸಖಂಡಗಳ ಬೆಳವಣಿಗೆಗೆ ಮತ್ತು ಒಟ್ಟಾರೆ ಆರೋಗ್ಯಕ್ಕೆ ಪೂರಕ ಎನ್ನುವಂಥ ಹಲವಾರು ಹಣೆಪಟ್ಟಿಗಳ ಅಡಿಯಲ್ಲೇ ಮಾರಾಟ ಮಾಡಲಾಗುತ್ತದೆ. ಹಾಗಾದರೆ ಪೂರಕ ಪ್ರೊಟೀನ್‌ ಸೇವನೆಯ ಅಡ್ಡ ಪರಿಣಾಮಗಳು ಏನೂ ಇಲ್ಲವೇ?

Protein Side Effects

ಖಂಡಿತಾ ಇದೆ!

ಪೌಷ್ಟಿಕಾಂಶಗಳು ನಮ್ಮ ದೇಹವನ್ನು ಸೇರಬೇಕಾಗಿದ್ದು ನೈಸರ್ಗಿಕವಾಗಿ, ಆಹಾರದ ಮೂಲಕ. ಅದೂ ಸಹ ಸಮತೋಲನೆಯಲ್ಲೇ ದೇಹವನ್ನು ತಲುಪಬೇಕು. ಒಂದೊಮ್ಮೆ ಲಭ್ಯತೆ, ಆಹಾರಶೈಲಿ, ಅನಾರೋಗ್ಯ ಅಥವಾ ಇನ್ನಾವುದೋ ಕಾರಣಗಳಿಗಾಗಿ ಪೋಷಕತತ್ವಗಳು ಸರಿಯಾದ ಪ್ರಮಾಣದಲ್ಲಿ ನಮ್ಮ ದೇಹವನ್ನು ಸೇರದೇ ಇದ್ದಾಗ, ತಾತ್ಕಾಲಿಕವಾಗಿ ವೈದ್ಯರು ಸಪ್ಲೆಮೆಂಟ್‌ಗಳನ್ನು ನೀಡುವುದಿದೆ. ಆದರೆ ಇದು ಕೊರತೆಯನ್ನು ನೀಗಿಸುವಷ್ಟು ಅಲ್ಪಕಾಲಕ್ಕೆ ಮಾತ್ರ. ಇವುಗಳನ್ನು ಮನಬಂದಂತೆ ಸೇವಿಸುವುದು ಖಂಡಿತಾ ಅಪೇಕ್ಷಣೀಯವಲ್ಲ.

ಆಹಾರದ ಮೂಲಕ ಪ್ರೊಟೀನ್‌ ದೇಹಕ್ಕೆ ದೊರೆಯುವುದಕ್ಕೂ, ಪೂರಕಗಳ ಮೂಲಕ ದೇಹವನ್ನು ಸೇರುವುದಕ್ಕೂ ಖಂಡಿತ ವ್ಯತ್ಯಾಸವಿದೆ. ತಜ್ಞರಿಂದ ಸರಿಯಾದ ಮಾರ್ಗದರ್ಶನವಿಲ್ಲದೇ ಪ್ರೊಟೀನ್‌ ಸಪ್ಲಿಮೆಂಟ್‌ಗಳನ್ನು ಸೇವಿಸುವುದು ಆಪಾಯಕ್ಕೆ ಎಡೆ ಮಾಡಬಹುದು. ಮಾತ್ರವಲ್ಲ, ಆರೋಗ್ಯಕ್ಕೆ ಲಾಭವಾಗುವುದಕ್ಕಿಂತ ಹಾನಿಯೇ ಹೆಚ್ಚಾಗಬಹುದು. ಇದರ ಅಡ್ಡ ಪರಿಣಾಮಗಳ ಬಗ್ಗೆ ಹೇಳುವುದಾದರೆ-

Protein Side Effects

ಜೀರ್ಣಾಂಗಕ್ಕೆ ತೊಂದರೆ

ಅತಿಯಾದ ಪ್ರೊಟೀನ್‌ ಸೇವನೆಯ ಮೊದಲ ಫಲಾನುಭವಿ ನಮ್ಮ ಜಠರ. ಹಾಗಾಗಿ ಹೊಟ್ಟೆ ಉಬ್ಬರ, ನೋವು, ಅಜೀರ್ಣ, ಮಲಬದ್ಧತೆ ಮುಂತಾದವು ಕಾಣಿಸಿಕೊಳ್ಳಬಹುದು. ಪ್ರೊಟೀನ್‌ ಪ್ರಮಾಣಕ್ಕೆ ಪೂರಕವಾಗಿ ನಾರಿನಂಶ ದೇಹಕ್ಕೆ ದೊರೆಯುವುದೂ ಮುಖ್ಯವಾಗುತ್ತದೆ. ಅದಿಲ್ಲದಿದ್ದರೆ ಮಲಬದ್ಧತೆ ಬೆಂಬಿಡುವುದಿಲ್ಲ. ಅದರಲ್ಲೂ ಕಡಿಮೆ ಸಮಯದಲ್ಲಿ ಹೆಚ್ಚಿನ ಪ್ರೊಟೀನ್‌ ಹೊಟ್ಟೆ ಸೇರಿದಾಗ, ಹೊಟ್ಟೆ ಬುಡಮೇಲಾಗುವ ಸಾಧ್ಯತೆ ಹಲವರಲ್ಲಿ ಕಂಡುಬಂದಿದೆ.

Protein Side Effects

ನಿರ್ಜಲೀಕರಣ

ದೇಹಕ್ಕೆ ಹೆಚ್ಚು ಪ್ರೊಟೀನ್‌ ದೊರೆತರೆ, ಅದನ್ನು ನುಚ್ಚುನುರಿ ಮಾಡಲು ಹೆಚ್ಚಿನ ನೀರು ಬೇಕಾಗುತ್ತದೆ. ಅದರಲ್ಲೂ, ವ್ಯಾಯಾಮದ ಬೆವರಿನಿಂದ ಹೆಚ್ಚಿನ ನೀರು ದೇಹದಿಂದ ಹೋಗುತ್ತಿರುವಾಗ, ಪ್ರೊಟೀನ್‌ ಪೂರಕಗಳ ಸೇವನೆಯೆಂದರೆ, ನೀರಿನ ಪ್ರಮಾಣವನ್ನು ಸಿಕ್ಕಾಪಟ್ಟೆ ಹೆಚ್ಚಿಸಬೇಕಾಗುತ್ತದೆ. ಹಾಗಾಗಿ ಅನಗತ್ಯವಾಗಿ ಪೂರಕಗಳ ಸೇವನೆ ಮಾಡುವ ಮುನ್ನ ಹಲವು ಬಾರಿ ಯೋಚಿಸುವುದು ಒಳಿತು.

Protein Side Effects

ಕಿಡ್ನಿ ಬೇಡವೇ?

ನಮ್ಮ ಜೀರ್ಣಾಂಗಗಳ ನಂತರ ಹೆಚ್ಚಿನ ಒತ್ತಡ ಬೀಳುವುದು ಮೂತ್ರಪಿಂಡಗಳ ಮೇಲೆ. ನಮ್ಮ ಆಹಾರದಲ್ಲಿನ ಬೇಡದ ವಸ್ತುಗಳನ್ನು, ದೇಹಕ್ಕೆ ಬೇಡದ ಕಶ್ಮಲಗಳನ್ನೆಲ್ಲಾ ಹೊರಹಾಕುವ ಸ್ವಚ್ಛತಾ ಕೆಲಸವಲ್ಲವೇ ಅವುಗಳದ್ದು? ಹಾಗಾಗಿ ದೀರ್ಘ ಕಾಲದವರೆಗೆ ಹೆಚ್ಚಿನ ಹೊರೆಯನ್ನು ಅವುಗಳ ಮೇಲೆ ಹೊರಿಸಿದರೆ, ಕ್ರಮೇಣ ಮೂತ್ರಪಿಂಡಗಳ ಕ್ಷಮತೆ ಕುಂದಿ ರೋಗಗ್ರಸ್ತವಾಗಬಹುದು.

Protein Side Effects

ಮೂಳೆ ಸಾಂದ್ರತೆ ಕುಸಿತ

ಹೌದು, ಸದಾ ಪ್ರೊಟೀನ್ ಪೂರಕಗಳ ಸೇವನೆ ಮಾಡುತ್ತಿದ್ದರೆ ಆಸ್ಟಿಯೊಪೊರೊಸಿಸ್‌ನ ಅಪಾಯ ಹೆಚ್ಚುತ್ತದೆ ಎನ್ನುತ್ತವೆ ಅಧ್ಯಯನಗಳು. ಅಂದರೆ, ಅಗತ್ಯಕ್ಕಿಂತ ಹೆಚ್ಚಿನ ಪ್ರೊಟೀನನ್ನು ದೇಹಕ್ಕೆ ಒದಗಿಸುತ್ತಲೇ ಇದ್ದರೆ, ಮೂತ್ರದ ಮೂಲಕ ಹೆಚ್ಚಿನ ಕ್ಯಾಲ್ಸಿಯಂ ವಿಸರ್ಜನೆಗೊಳ್ಳುತ್ತದೆ ಎಂಬುದು ತಜ್ಞರ ಅಭಿಮತ. ಇದರಿಂದ ಮೂಳೆಗಳ ಸಾಂದ್ರತೆ ಕುಸಿಯಬಹುದು.

Protein Side Effects

ತೂಕ ಹೆಚ್ಚಳ!

ತೂಕ ಇಳಿಕೆಗೆ ಪ್ರೊಟೀನ್‌ ತಿನ್ನುವವರು ಈ ಬಗ್ಗೆ ಜಾಗ್ರತೆ ವಹಿಸುವುದು ಅಗತ್ಯ. ಕಾರಣ, ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಪ್ರೊಟೀನ್‌ ದೊರೆಯುತ್ತಿದ್ದರೆ, ಅದು ಕೊಬ್ಬಾಗಿ ಪರಿವರ್ತನೆಯಾಗಬಹುದು. ಆ ಕೊಬ್ಬು ಕರಗಿಸುವುದಕ್ಕೆ ಇನ್ನೆಷ್ಟು ಒದ್ದಾಡಬೇಕೋ, ದೇವರೇ!

Protein Side Effects

ಸತ್ವಗಳ ಕೊರತೆ

ಆಹಾರದ ಮೂಲಕ ದೊರೆಯುವ ಸತ್ವಗಳನ್ನು ಸಮತೋಲನದಲ್ಲಿ ಇರಿಸಿಕೊಳ್ಳುವುದಕ್ಕೆ ಸಾಧ್ಯ. ಅವುಗಳನ್ನು ಪೂರಕಗಳಿಗೆ ಬದಲು ಮಾಡುವುದು ಖಂಡಿತಾ ಸೂಕ್ತವಲ್ಲ. ಕಾರಣ, ಬಹಳಷ್ಟು ಅಗತ್ಯ ಸೂಕ್ಷ್ಮ ಪೋಷಕಾಂಶಗಳು ಆಹಾರದಲ್ಲಿ ದೊರೆಯುವ ಹಾಗೆ ಯಾವ ಮಾತ್ರೆ, ಪುಡಿಗಳಿಂದಲೂ ದೊರೆಯುವುದಿಲ್ಲ. ಒಂದು ಸಂಪೂರ್ಣ, ಸಮತೋಲಿತ ಆಹಾರಕ್ಕೆ ಪುಡಿ, ಪೇಯಗಳು ಸಮವಲ್ಲ. ಇದರಿಂದ ಪೋಷಕಾಂಶಗಳ ಕೊರತೆ ಕಾಡಬಹುದು.

ಇದನ್ನೂ ಓದಿ: Health Tips: ಪ್ರತಿ ಮಹಿಳೆಯನ್ನೂ ಮೌನವಾಗಿ ಕಾಡುವ ಆರೋಗ್ಯ ಸಮಸ್ಯೆಗಳಿವು! ನಿರ್ಲಕ್ಷ್ಯ ಬೇಡ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಆರೋಗ್ಯ

World Digestive Health Day: ಜೀರ್ಣಕ್ರಿಯೆಯಲ್ಲಿ ತೊಡಕು ಅನಾರೋಗ್ಯಕ್ಕೆ ದಾರಿ; ಈ ಸಲಹೆ ಪಾಲಿಸಿ

ದೇಹದ ಸ್ವಾಸ್ಥ್ಯ ಹೆಚ್ಚಿಸಿಕೊಳ್ಳುವ ದಾರಿಯಲ್ಲಿ ಜೀರ್ಣಾಂಗಗಳ ಆರೋಗ್ಯ ರಕ್ಷಣೆ ಎಷ್ಟು ಮಹತ್ವದ್ದು ಎಂಬುದನ್ನು ಜನರಿಗೆ ಮನದಟ್ಟು ಮಾಡಿಸುವುದು ವಿಶ್ವ ಜೀರ್ಣಾಂಗಗಳ ಆರೋಗ್ಯ ದಿನದ ಉದ್ದೇಶ. ಪ್ರತಿ ವರ್ಷ ಮೇ ತಿಂಗಳ 29ನೇ (World Digestive Health Day) ದಿನವನ್ನು ಇದಕ್ಕಾಗಿ ಮೀಸಲಿಡಲಾಗಿದೆ. ಜೀರ್ಣಾಂಗ ಆರೋಗ್ಯ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

World Digestive Health Day
Koo

ಸರ್ವ ರೋಗಕ್ಕೂ ಹೊಟ್ಟೆಯೇ ಮೂಲ (Gut is the butt of every problem) ಎಂಬ ಮಾತೊಂದಿದೆ. ಈ ಮಾತು ಸುಳ್ಳೇನಲ್ಲ, ದೇಹದ ಹಲವು ಸಮಸ್ಯೆಗಳಿಗೆ ನಮ್ಮ ಆಹಾರ ಪದ್ಧತಿಗಳು, ಜೀರ್ಣಾಂಗದ ಏರುಪೇರುಗಳು ಕಾರಣವಾಗುತ್ತವೆ. ಬೊಜ್ಜು, ಮಧುಮೇಹದಂಥ ಸಮಸ್ಯೆಗಳಿಂದ ಹಿಡಿದು ಎಷ್ಟೋ ಸಮಸ್ಯೆಗಳು ಕಾಡುವುದು ದೇಹದ ಚಯಾಪಚಯ ಸರಿಯಿಲ್ಲದ ಸಂದರ್ಭಗಳಲ್ಲೇ. ದೇಹದ ಸ್ವಾಸ್ಥ್ಯ ಹೆಚ್ಚಿಸಿಕೊಳ್ಳುವ ದಾರಿಯಲ್ಲಿ ಜೀರ್ಣಾಂಗಗಳ ಆರೋಗ್ಯ ರಕ್ಷಣೆ ಎಷ್ಟು ಮಹತ್ವದ್ದು ಎಂಬುದನ್ನು ಜನರಿಗೆ ಮನದಟ್ಟು ಮಾಡಿಸುವುದು ವಿಶ್ವ ಜೀರ್ಣಾಂಗಗಳ ಆರೋಗ್ಯ ದಿನದ ಉದ್ದೇಶ. ಪ್ರತಿ ವರ್ಷ ಮೇ ತಿಂಗಳ 29ನೇ ದಿನವನ್ನು (World Digestive Health Day) ಇದಕ್ಕಾಗಿ ಮೀಸಲಿಡಲಾಗಿದೆ. ಎಲ್ಲರ ಕರುಳಿನಲ್ಲೂ ಅಸಂಖ್ಯಾತ ಬ್ಯಾಕ್ಟೀರಿಯಗಳಿರುತ್ತವೆ. ಇವುಗಳನ್ನು ಒಳ್ಳೆಯವು ಮತ್ತು ಕೆಟ್ಟವೆಂದು ವಿಂಗಡಿಸಲಾಗಿದೆ. ಜೀರ್ಣಾಂಗಗಳಲ್ಲಿ ಒಳ್ಳೆಯ ಬ್ಯಾಕ್ಟೀರಿಯಗಳ ಸಂಖ್ಯೆ ಹೆಚ್ಚಿದಷ್ಟೂ ದೇಹ ಸ್ವಾಸ್ಥ್ಯ ಚೆನ್ನಾಗಿರುತ್ತದೆ. ಕೆಟ್ಟ ಬ್ಯಾಕ್ಟೀರಿಯಗಳ ಪ್ರಮಾಣ ಹೆಚ್ಚಿದಷ್ಟೂ ದೇಹ ರೋಗಗಳ ಗೂಡಾಗುತ್ತದೆ. ಜೀರ್ಣಾಂಗಗಳ ಆರೋಗ್ಯ ಚೆನ್ನಾಗಿದ್ದರೆ ತೂಕ ನಿರ್ವಹಣೆ, ಸತ್ವಗಳನ್ನು ಹೀರಿಕೊಳ್ಳುವುದು, ಚೋದಕಗಳ ನಿರ್ವಹಣೆ, ಉರಿಯೂತ ನಿವಾರಣೆ, ಚಯಾಪಚಯ ಸರಿಪಡಿಸುವಂಥ ಕೆಲಸಗಳು ಕಷ್ಟವಿಲ್ಲದೆ ನೆರವೇರುತ್ತವೆ. ಹಾಗಾದರೆ ಜೀರ್ಣಾಂಗಗಳ ಆರೋಗ್ಯ ನಿರ್ವಹಣೆಗೆ ಏನು ಮಾಡಬೇಕು? ಯಾವ ಕ್ರಮಗಳನ್ನು ಅನುಸರಿಸಬೇಕು?

Vegetables and Fruits

ವೈವಿಧ್ಯಮವಾಗಿರಲಿ

ಋತುಮಾನಕ್ಕೆ ಸರಿಯಾದ ಹಣ್ಣು-ತರಕಾರಿಗಳು, ಕಾಯಿ-ಬೀಜಗಳು, ಕಾಳು-ಬೇಳೆಗಳು, ಇಡೀ ಧಾನ್ಯಗಳು, ಡೇರು ಉತ್ಪನ್ನಗಳಿಂದ ಆಹಾರ ಸಮೃದ್ಧವಾಗಿರಬೇಕು. ಇದರಿಂದ ಕರುಳಿನ ಒಳ್ಳೆಯ ಬ್ಯಾಕ್ಟೀರಿಯಗಳಿಗೆ ಬೇಕಾದ ಆಹಾರ ದೊರೆತು ಅವುಗಳ ಸಂಖ್ಯೆ ಹೆಚ್ಚುತ್ತದೆ. ಅಷ್ಟೇ ಅಲ್ಲ, ಕರುಳಿನಲ್ಲಿರುವ ಒಳ್ಳೆಯ ಸೂಕ್ಷ್ಮಾಣುಗಳೂ ವೈವಿಧ್ಯಮಯವಾಗುತ್ತವೆ. ಇದರಿಂದ ಬಗೆಬಗೆಯ ಪ್ರಯೋಜನಗಳಿವೆ.

ಪ್ರಿಬಯಾಟಿಕ್‌, ಪ್ರೊಬಯಾಟಿಕ್

ಜೀರ್ಣಾಂಗಗಳ ಆರೋಗ್ಯ ನಿರ್ವಹಣೆಗೆ ಇದು ಪ್ರಧಾನ ಪಾತ್ರ ವಹಿಸುತ್ತದೆ. ಹುದುಗು ಬಂದಿರುವಂಥ ಮೊಸರು, ಮಜ್ಜಿಗೆಯಂಥ ಆಹಾರಗಳು, ಹಸಿಯಾದ ಮೊಳಕೆ ಕಾಳುಗಳಂಥ ಆಹಾರಗಳು ಅಗತ್ಯವಾದ ಪ್ರಿಬಯಾಟಿಕ್‌ ಮತ್ತು ಪ್ರೊಬಯಾಟಿಕ್‌ ಅಂಶಗಳನ್ನು ಒದಗಿಸುತ್ತವೆ. ಕರುಳಿನ ಸೂಕ್ಷ್ಮಾಣುಗಳ ಸಮತೋಲನಕ್ಕೆ ಇದು ಅತಿ ಮುಖ್ಯ.

ನೀರು-ನಾರು-ನಿದ್ದೆ

ಇವೆಲ್ಲವೂ ಸಾಕಷ್ಟು ಬೇಕು. ದಿನಕ್ಕೆ ಮೂರು ಲೀ. ನೀರು ಜೀರ್ಣಾಂಗಗಳನ್ನು ಸುಸ್ಥಿತಿಯಲ್ಲಿ ಇರಿಸಬಲ್ಲದು. ಇದರೊಂದಿಗೆ ನಾರಿನಂಶವೂ ಸಾಕಷ್ಟು ಸೇರಿದರೆ ಅಜೀರ್ಣ, ಮಲಬದ್ಧತೆಯಂಥ ತೊಂದರೆಗಳು ಮಾಯವಾಗುತ್ತವೆ. ರೆಸ್ಟ್‌-ಡೈಜೆಸ್ಟ್‌ ಎಂಬುದು ದೇಹಕ್ಕೆ ಚೆನ್ನಾಗಿ ಅರ್ಥವಾಗುವ ವಿಚಾರ. ಹಾಗಾಗಿ ದಿನಕ್ಕೆ ಏಳೆಂಟು ತಾಸಿನಷ್ಟು ನಿದ್ದೆ ಮಾಡಿದರೆ ಜೀರ್ಣಾಂಗಗಳ ರಿಪೇರಿ ಕೆಲಸ ಸಾಂಗವಾಗಿ ನೆರವೇರುತ್ತದೆ.

Best Food To Eat At Night

ಮುಕ್ಕಬೇಡಿ

ಆಹಾರ ಸೇವನೆಗೊಂದು ಕ್ರಮವಿದೆ. ಈಗಿನ ದರ್ಶಿನಿ ಸಂಸ್ಕೃತಿಯಲ್ಲ ತಿನ್ನುವಾಗ ಬೇಕಿರುವುದು. ಅಂದರೆ ಗಡಿಬಿಡಿಯಲ್ಲಿ ಒಂದಿಷ್ಟು ಮುಕ್ಕಿ ಓಡುವುದಲ್ಲ. ನೆಮ್ಮದಿಯಿಂದ ಕುಳಿತು, ಚೆನ್ನಾಗಿ ಅಗಿದು ತಿನ್ನಿ. ಇದರಿಂದ ಅತಿಯಾಗಿ ತಿನ್ನುವುದು, ಅಗತ್ಯಕ್ಕಿಂತ ಹೆಚ್ಚು ತಿನ್ನುವುದನ್ನೆಲ್ಲ ಕಡಿಮೆ ಮಾಡಬಹುದು. ಜೊತೆಗೆ, ಆಹಾರ ತಿಂದ ತೃಪ್ತಿಯೂ ದೊರೆಯುತ್ತದೆ.

Cooking Oils

ಆರೋಗ್ಯಕರ ಎಣ್ಣೆ

ಗಾಣದ ಎಣ್ಣೆಗಳು ಅಥವಾ ಕೋಲ್ಡ್‌ ಪ್ರೆಸ್‌ ಮಾಡಿದ ಎಣ್ಣೆಗಳು ಬಳಕೆಗೆ ಹೆಚ್ಚು ಸುರಕ್ಷಿತ. ರಿಫೈನ್‌ ಮಾಡಿದ ಎಣ್ಣೆಗಳು, ಮರು ಬಳಕೆಯ ಎಣ್ಣೆಗಳು ಸೂಕ್ತವಲ್ಲ. ಇಂಥವುಗಳಿಂದ ದೇಹದಲ್ಲಿ ಉರಿಯೂತ ಹೆಚ್ಚುತ್ತದೆ. ಹಾಗಾಗಿ ತಾಜಾ ಮತ್ತು ಆರೋಗ್ಯಕರ ಎಣ್ಣೆಗಳನ್ನೇ ಅಡುಗೆಗೆ ಬಳಸಿ. ಪಚನಾಂಗಗಳ ಆರೋಗ್ಯ ರಕ್ಷಣೆಗೆ ಇವೂ ಮುಖ್ಯವಾದವು.

stress

ಒತ್ತಡ

ಮಾನಸಿನ ಒತ್ತಡ ಹೆಚ್ಚಿದಷ್ಟೂ ಜೀರ್ಣಾಂಗಗಳ ಏರುಪೇರು ಹೆಚ್ಚುತ್ತದೆ. ಇವೆರಡರ ನಡುವೆ ನೇರ ಸಂಬಂಧವಿದೆ. ಹಾಗಾಗಿ ಮಾನಸಿನ ಒತ್ತಡ ನಿರ್ವಹಣೆಗೆ ಧ್ಯಾನ, ಯೋಗ, ಪ್ರಾಣಾಯಾಮ, ಆರೋಗ್ಯ ಹವ್ಯಾಸಗಳನ್ನು ರೂಢಿಸಿಕೊಳ್ಳುವಂಥ ಕೆಲಸಗಳು ಒಳ್ಳೆಯ ಪರಿಣಾಮ ಬೀರುತ್ತವೆ. ಇಂಥ ಕ್ರಮಗಳಿಂದಲೂ ಕರುಳಿನ ಆರೋಗ್ಯ ಸುಧಾರಿಸಬಹುದು.

ಇದನ್ನೂ ಓದಿ: AC Side Effects: ಅತಿಯಾದ ಎಸಿ ಬಳಕೆಯಿಂದ ಏನಾಗುತ್ತದೆ ಎಂಬ ಅರಿವಿರಲಿ

ಇವುಗಳು ಬೇಡ

ಪ್ರತಿ ದಿನ ಒಂದೇ ರೀತಿಯ ಆಹಾರವನ್ನು ಸೇವಿಸಬೇಡಿ. ಆರೋಗ್ಯಕರವಾದ ವೈವಿಧ್ಯಮಯ ಆಹಾರಗಳು ಜೀರ್ಣಾಂಗಗಳ ಸ್ಥಿತಿಯನ್ನು ಸುಧಾರಿಸುತ್ತವೆ. ಸಂಸ್ಕರಿತ ಆಹಾರಗಳು ಬೇಡ. ಇದರಿಂದ ಕರುಳಿನ ಉರಿಯೂತ ಹೆಚ್ಚುತ್ತದೆ. ಗಬಗಬ ತಿನ್ನುವುದರ ಬದಲು, ಸಾವಧಾನವಾಗಿ ತಿನ್ನುವುದನ್ನು ರೂಢಿಸಿಕೊಳ್ಳಿ. ಕೃತಕ ಸಿಹಿ, ರುಚಿ, ಬಣ್ಣಗಳೆಲ್ಲ ಉರಿಯೂತ ಹೆಚ್ಚಿಸುತ್ತವೆ. ಬದಲಿಗೆ ನೈಸರ್ಗಿಕ ರುಚಿ, ಬಣ್ಣಗಳಿಗೆ ಆದ್ಯತೆ ನೀಡಿ.

Continue Reading

ಆರೋಗ್ಯ

AC Side Effects: ಅತಿಯಾದ ಎಸಿ ಬಳಕೆಯಿಂದ ಏನಾಗುತ್ತದೆ ಎಂಬ ಅರಿವಿರಲಿ

ಹಿಂದೊಮ್ಮೆ ಐಶಾರಾಮಿ ಎನಿಸಿದ್ದ ವಸ್ತುಗಳು ಈಗ ಅಗತ್ಯಗಳು ಎನಿಸಿರುವುದು ಹೌದು. ಆದರೆ ಅವುಗಳ ಬಳಕೆ ಅತಿ ಎನ್ನುವಷ್ಟಾದರೆ ಅದರಿಂದ ಅಡ್ಡ ಪರಿಣಾಮಗಳು ಉಂಟೇ ಎನ್ನುವುದನ್ನೂ ಗಮನಿಸಬೇಕಲ್ಲ. ಹವಾನಿಯಂತ್ರಕವನ್ನು ಬಳಸುವುದರಿಂದ ಬೇಸಿಗೆಯ ಹೊಡೆತವನ್ನು ತಪ್ಪಿಸಿಕೊಳ್ಳಬಹುದು ಎನ್ನುವುದು ಹೌದಾದರೂ, ದಿನ-ರಾತ್ರಿ ಅದರಡಿಯಲ್ಲೇ ಇರುವುದು ಆರೋಗ್ಯದ ಮೇಲೆ (AC Side Effects) ಮಾಡುವ ಪರಿಣಾಮವೇನು?

VISTARANEWS.COM


on

AC Side Effects
Koo

ಬೇಸಿಗೆಯಲ್ಲಿ ಮಾತ್ರವಲ್ಲ, ವರ್ಷದ ಹೆಚ್ಚಿನ ದಿನಗಳಲ್ಲಿ ಹವಾನಿಯಂತ್ರಣ ವ್ಯವಸ್ಥೆ ಅಥವಾ ಎಸಿ ಬಳಕೆ ವ್ಯಾಪಕವಾಗಿದೆ. ಒಮ್ಮೆ ಎಸಿ ಬಳಕೆಗೆ ಒಗ್ಗಿದರೆ ಮತ್ತೆ ಅದರ ಹೊರತಾಗಿ ಇರುವುದು ಕಷ್ಟ ಎನ್ನುವಂತಾಗುತ್ತದೆ. ಹಗಲಿಡೀ ಕಚೇರಿಗಳಲ್ಲಿ ಎಸಿ ಛಾಯೆಯಲ್ಲಿ ಕುಳಿತರೆ, ರಾತ್ರಿ ಮನೆಗೆ ಬಂದ ಮೇಲೂ ಎಸಿ ಹಾಕಿಕೊಳ್ಳುತ್ತೇವೆ. ಹವಾನಿಯಂತ್ರಣ ವ್ಯವಸ್ಥೆ ಇಲ್ಲದೆ ಹಗಲೂ ಇಲ್ಲ, ರಾತ್ರಿಯೂ ಇಲ್ಲ ಎನ್ನುವಷ್ಟು ಅದಕ್ಕೆ ಒಗ್ಗಿ ಹೋಗಿರುತ್ತೇವೆ. ಸಾಮಾನ್ಯ ದಿನಗಳಲ್ಲೇ ಇಷ್ಟಾದ ಮೇಲೆ ಬೇಸಿಗೆಯಲ್ಲಿ ಇನ್ನೆಷ್ಟಿರಬೇಡ ಇದರ ಬಳಕೆ? ಆದರೆ ಹೀಗೆ ಅತಿಯಾಗಿ ಎಸಿ ಬಳಸುವುದು ಒಳ್ಳೆಯದೇ? ಹಿಂದೊಮ್ಮೆ ಐಶಾರಾಮಿ ಎನಿಸಿದ್ದ ವಸ್ತುಗಳು ಈಗ ಅಗತ್ಯಗಳು ಎನಿಸಿರುವುದು ಹೌದು. ಆದರೆ ಅವುಗಳ ಬಳಕೆ ಅತಿ ಎನ್ನುವಷ್ಟಾದರೆ ಅದರಿಂದ ಅಡ್ಡ ಪರಿಣಾಮಗಳು ಉಂಟೇ ಎನ್ನುವುದನ್ನೂ ಗಮನಿಸಬೇಕಲ್ಲ. ಹವಾನಿಯಂತ್ರಕವನ್ನು ಬಳಸುವುದರಿಂದ ಬೇಸಿಗೆಯ ಹೊಡೆತವನ್ನು ತಪ್ಪಿಸಿಕೊಳ್ಳಬಹುದು ಎನ್ನುವುದು ಹೌದಾದರೂ, ದಿನ-ರಾತ್ರಿ ಅದರಡಿಯಲ್ಲೇ ಇರುವುದು ಆರೋಗ್ಯದ ಮೇಲೆ ಮಾಡುವ ಪರಿಣಾಮವೇನು? ಬೇಸಿಗೆಗಷ್ಟೇ ಇದರ ಬಳಕೆಯನ್ನು ಮಿತಗೊಳಿಸಿ, ವರ್ಷದ ಉಳಿದ ದಿನಗಳಲ್ಲಿ ಇದನ್ನು ಬಳಸದೆ ಇರಬಹುದೇ? ಹೆಚ್ಚು ಬಳಸುವುದರಿಂದ (AC Side Effects) ಏನಾಗುತ್ತದೆ?

dry skin

ಒಣ ಕಣ್ಣು ಮತ್ತು ಚರ್ಮ

ಎಸಿ ಇರುವಂಥ ಸ್ಥಳಗಳಲ್ಲಿ ತೇವಾಂಶ ಕಡಿಮೆ. ಜೊತೆಗೆ, ಅತಿಯಾಗಿ ಎಸಿ ಅಡಿಯಲ್ಲಿ ಕುಳಿತಿದ್ದರೆ ಬೇಸಿಗೆಯಲ್ಲಿ ದಾಹವೂ ಅಷ್ಟಾಗಿ ಕಾಡದೆ, ಕುಡಿಯುವ ನೀರಿನ ಪ್ರಮಾಣವೂ ಕಡಿಮೆ ಆಗಬಹುದು. ಇದರಿಂದ ಚರ್ಮವೆಲ್ಲ ಒಣಗಿದಂತಾಗುತ್ತದೆ. ಇದೇ ಮುಂದುವರೆದು ಸುಕ್ಕುಗಟ್ಟಿದಂತಾದೀತು. ಕಣ್ಣೂ ತೇವ ಕಳೆದುಕೊಂಡು ಶುಷ್ಕವಾಗಬಹುದು. ಇದರಿಂದ ಕಣ್ಣು ಕೆಂಪಾಗುವುದು, ತುರಿಕೆಯಂಥ ತೊಂದರೆಗಳು ಗಂಟು ಬೀಳಬಹುದು. ಹಾಗಾಗಿ ಎಸಿಯಿಂದ ಮಧ್ಯೆ ಬಿಡುವು ತೆಗೆದುಕೊಳ್ಳುವುದು ಸೂಕ್ತ. ಒಂದೊಮ್ಮೆ ಸತತವಾಗಿ ಎಸಿ ಬಳಸುವುದು ಅನಿವಾರ್ಯ ಎಂದಾದರೆ, ವಾತಾವರಣದ ತೇವ ಹೆಚ್ಚಿಸುವ ಹ್ಯುಮಿಡಿಫಯರ್‌ ಸಹ ಬಳಸುವುದು ಜಾಣತನ.

Doctor listens to the human lungs

ಶ್ವಾಸಕೋಶದ ತೊಂದರೆಗಳು

ಹವಾನಿಯಂತ್ರಕ ನೀಡುವಂಥ ಶುಷ್ಕವಾದ ತಣ್ಣನೆಯ ಗಾಳಿಯು ಶ್ವಾಸಕೋಶಗಳಿಗೆ ಕಿರಿಕಿರಿ ನೀಡಬಹುದು. ಇದರಿಂದ ಅಲರ್ಜಿಗಳು, ಅಸ್ತಮಾ ಮತ್ತು ಶ್ವಾಸಕೋಶದ ಸೋಂಕಿನ ತೊಂದರೆ ಉಲ್ಭಣಿಸಬಹುದು. ಜೊತೆಗೆ ದೀರ್ಘ ಕಾಲದವರೆಗೆ ಎಸಿಯ ತಣ್ಣನೆಯ ಗಾಳಿಗೆ ಒಡ್ಡಿಕೊಂಡಾಗ ಫ್ಲೂ ಮಾದರಿಯ ಶೀತ, ಜ್ವರವನ್ನು ಅಂಟಿಸಿಕೊಳ್ಳುವ ಸಾಧ್ಯತೆಗಳೂ ಅಧಿಕ. ಇಂಥ ಸಮಸ್ಯೆಗಳಿಗೆ ಕಡಿವಾಣ ಹಾಕುವ ಉದ್ದೇಶವಿದ್ದರೆ, ಎಸಿ ಫಿಲ್ಟರ್‌ಗಳನ್ನು ಸ್ವಚ್ಛವಾಗಿ ಇರಿಸಬೇಕು. ಉಷ್ಣತೆಯ ಏರಿಳಿತವನ್ನು ಕ್ರಮೇಣ ಮಾಡುವುದೊಳಿತು. ಜೊತೆಗೆ ಏರ್‌ ಪ್ಯೂರಿಫಯರ್‌ ಬಳಸುವ ಬಗ್ಗೆ ಯೋಚಿಸುವುದು ಸೂಕ್ತ.

woman have backache pain and waist painful.

ನೋವುಗಳು ಹೆಚ್ಚು

ದೀರ್ಘ ಕಾಲ ಹವಾ ನಿಯಂತ್ರಕದ ಅಡಿಯಲ್ಲಿ ಇರುವುದರಿಂದ ದೇಹದ ಉಷ್ಣತೆ ಕುಸಿಯುತ್ತದೆ. ಇದರಿಂದ ಸ್ನಾಯುಗಳಲ್ಲಿ ನೋವು, ಕೀಲುಗಳು ಬಿಗಿಯಾಗುವುದು ಮುಂತಾದ ತೊಂದರೆಗಳು. ಅದರಲ್ಲೂ ಇಂಥ ತೊಂದರೆಗಳು, ಮೂಳೆ-ಸ್ನಾಯುಗಳಲ್ಲಿ ನೋವು ಈಗಾಗಲೇ ಇದ್ದವರು ಈ ಬಗ್ಗೆ ಎಚ್ಚರ ವಹಿಸುವುದು ಒಳಿತು. ಎಸಿ ವಾತಾವರಣಕ್ಕೆ ಸೂಕ್ತವಾದಂಥ ವಸ್ತ್ರಗಳನ್ನು ಧರಿಸಬೇಕು. ಆಗೀಗ ಲಘುವಾದ ವ್ಯಾಯಾಮಗಳನ್ನು ಮಾಡುವುದರಿಂದ ರಕ್ತ ಸಂಚಾರ ಸುಗಮವಾಗುತ್ತದೆ. ಚೆನ್ನಾಗಿ ನೀರು ಕುಡಿಯುವುದು ಸಹ ಅಗತ್ಯ.

ಇದನ್ನೂ ಓದಿ: Mouthwashes: ಬಾಯಿಯ ಎಲ್ಲ ಸಮಸ್ಯೆಗಳಿಗೂ ಮೌತ್‌ವಾಷ್‌ ಪರಿಹಾರವೆ? ಇದರ ಇತಿಮಿತಿ ಬಗ್ಗೆಯೂ ತಿಳಿದಿರಲಿ

ಪ್ರತಿರೋಧಕತೆ ಕುಂಠಿತ

ಸತತವಾಗಿ ಹವಾನಿಯಂತ್ರಣದಡಿಯಲ್ಲಿ ಇರುವುದರಿಂದ ಪ್ರತಿರೋಧಕತೆ ಸಹ ಕುಂಠಿತವಾಗಬಹುದು. ಮುಖ್ಯವಾಗಿ ತಣ್ಣನೆಯ ಶುಷ್ಕ ವಾತಾವರಣವೇ ಇದಕ್ಕೆಲ್ಲ ಕಾರಣ. ಒಮ್ಮೆ ಯಾವುದಾದರೂ ರೋಗಾಣು ಎಸಿ ವಾತಾವರಣವನ್ನು ಹೊಕ್ಕಿದರೆ, ದೀರ್ಘ ಕಾಲದವರೆಗೆ ಅಲ್ಲಿಯೇ ಇರುತ್ತದೆ. ಹಾಗಾಗಿ ಎಸಿಯಿಂದ ಬಿಡುವು ತೆಗೆದುಕೊಳ್ಳುವುದು ಅಗತ್ಯ. ಸೂಕ್ತವಾದ ಪೋಷಕಾಂಶವನ್ನು ಆಹಾರದ ಮೂಲಕ ತೆಗೆದುಕೊಳ್ಳುವುದು ಸಹ ಇನ್ನೊಂದು ಮುಖ್ಯವಾದ ಅಂಶ.
ಎಸಿಯಲ್ಲಿ ಸತತವಾಗಿ ಕುಳಿತಾಗ ಜಡತೆ ಸಹ ಅಮರಿಕೊಳ್ಳಬಹುದು. ಅದರಲ್ಲೂ ಬೇಸಿಗೆಯ ಮಧ್ಯಾಹ್ನಗಳಲ್ಲಿ ನಿದ್ದೆ ಹೆಚ್ಚು. ಹಾಗಿರುವಾಗ ಎಸಿ ಆ ಭಾವವನ್ನು ದ್ವಿಗುಣಗೊಳಿಸಬಹುದು. ಕಠೋರ ಬೇಸಿಗೆಯಲ್ಲೇ ಆದರೂ ಆಗಾಗ ಎಸಿಯಿಂದ ಹೊರಬನ್ನಿ. ಇದು ದೇಹಕ್ಕೆ ಅಗತ್ಯವಾದ ತಾಜಾ ಮತ್ತು ಶುದ್ಧ ಗಾಳಿಯನ್ನು ನೀಡುತ್ತದೆ. ಅಗತ್ಯಕ್ಕೆ ಬೇಕಷ್ಟೇ ಎಸಿಯನ್ನು ಬಳಸುವುದರಿಂದ ಅತಿಯಾದ ವಿದ್ಯುತ್‌ ಖರ್ಚನ್ನೂ ಉಳಿಸಬಹುದು. ವಾತಾವರಣಕ್ಕೆ ಎಸಿಯಿಂದ ಆಗುವ ಹಾನಿಯನ್ನೂ ಕಡಿಮೆ ಮಾಡಬಹುದು. ಹಾಗಾಗಿ ವಾತಾವರಣ ತಂಪಾಗಿಸುವ ಬದಲಿ ವ್ಯವಸ್ಥೆಯ ಬಗ್ಗೆಯೂ ಚಿಂತಿಸಿ.

Continue Reading

ಆರೋಗ್ಯ

Vijayanagara News: ಹೊಸಪೇಟೆಯಲ್ಲಿ ವಿಶ್ವ ಋತುಚಕ್ರ ನೈರ್ಮಲ್ಯ ದಿನಾಚರಣೆ

Vijayanagara News: ಹೊಸಪೇಟೆ ನಗರದ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿಶ್ವ ಋತುಚಕ್ರ ನೈರ್ಮಲ್ಯ ದಿನಾಚರಣೆ ಕಾರ್ಯಕ್ರಮ ಜರುಗಿತು.

VISTARANEWS.COM


on

World Menstrual Hygiene Day in Hosapete
Koo

ಹೊಸಪೇಟೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಗರದ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯಲ್ಲಿ ಮಂಗಳವಾರ ವಿಶ್ವ ಋತುಚಕ್ರ ನೈರ್ಮಲ್ಯ ದಿನಾಚರಣೆ ಕಾರ್ಯಕ್ರಮ (Vijayanagara News) ಜರುಗಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಂಕರ್ ನಾಯಕ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, 11 ರಿಂದ 14 ವರ್ಷದ ಹೆಣ್ಣುಮಕ್ಕಳಲ್ಲಿ ಪ್ರಾರಂಭವಾಗುವ ಋತುಚಕ್ರದ ಕುರಿತು ಪ್ರತಿಯೊಬ್ಬ ಕಿಶೋರಿಯಿಂದ ಹಿಡಿದು ಎಲ್ಲ ಮಹಿಳೆಯರು ಜಾಗೃತಿ ಹೊಂದಬೇಕು.

ಋತುಸ್ರಾವವಾದಾಗ ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ ವರ್ಷ ಹೊಸದಾದ ಘೋಷಣೆಯೊಂದಿಗೆ ತಿಳಿಸುವ ವಿಶ್ವ ಋತುಚಕ್ರದ ನೈರ್ಮಲ್ಯ ದಿನದ ಮಹತ್ವವನ್ನು ಪ್ರತಿಯೊಬ್ಬರು ಅರಿಯಬೇಕು ಎಂದು ಸಲಹೆ ಮಾಡಿದರು.

ಇದನ್ನೂ ಓದಿ: Credit Card Safety Tips: ಕ್ರೆಡಿಟ್‌ ಕಾರ್ಡ್ ವಂಚನೆಯಿಂದ ಪಾರಾಗಲು ಇಲ್ಲಿದೆ 9 ಸಲಹೆ

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಜಂಬಯ್ಯ ಮಾತನಾಡಿ, ಪ್ರತಿಯೊಬ್ಬ ಪ್ರಜೆ ಋತುಚಕ್ರದ ಕುರಿತು ಅರಿವು ಪಡೆದು ಜ್ಞಾನವಂತರಾಗಬೇಕು. ಮೂಢನಂಬಿಕೆಯನ್ನು ಹೋಗಲಾಡಿಸಬೇಕು. ಕಿಶೋರಿಯರು ಮತ್ತು ಮಹಿಳೆಯರು ಋತುಸ್ರಾವ ಉಂಟಾದಾಗ ವೈಯಕ್ತಿಕ ಕಾಳಜಿ, ಸಂತಾನೋತ್ಪತ್ತಿ, ಪೌಷ್ಟಿಕ ಆಹಾರದ ಸೇವನೆಯ ಬಗ್ಗೆ ತಿಳುವಳಿಕೆ ಹೊಂದಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಡಿಎಂಒ ಕಾರ್ಯಕ್ರಮದ ಅಧಿಕಾರಿ ಡಾ. ಕಮಲಮ್ಮ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಋತುಚಕ್ರ ಅಥವಾ ಋತುಸ್ರಾವ ಎಂದರೆ ಹದಿಹರೆಯದ ಹೆಣ್ಣುಮಕ್ಕಳು ಪ್ರೌಢಾವಸ್ಥೆ ತಲುಪುವ ಹಂತವಾಗಿದೆ. ಈ ಸಂದರ್ಭದಲ್ಲಿ ಮಹಿಳೆಯರು ಪೌಷ್ಠಿಕ ಆಹಾರ ಸೇವನೆ ಮಾಡಬೇಕು. ಋತುಸ್ರಾವ ಉಂಟಾದಾಗ ಹಳೆಯದಾದ ಉಪಯೋಗಿಸಿದ ಬಟ್ಟೆಗಳನ್ನು ಬಳಸಬಾರದು. ವಿಶೇಷವಾಗಿ ಋತುಚಕ್ರದ ಶುಚಿತ್ವ ನಿರ್ವಹಣೆಯ ಬಗ್ಗೆ ಗ್ರಾಮೀಣ ಭಾಗದ ಮಹಿಳೆಯರು ಹೆಚ್ಚಿನ ತಿಳುವಳಿಕೆ ಹೊಂದಬೇಕಿದೆ ಎಂದು ಸಲಹೆ ನೀಡಿದರು.

ಆರ್‌ಬಿಎಸ್‌ಕೆ ವೈದ್ಯಾಧಿಕಾರಿ ಡಾ.ಆಶಾ, ಮುಟ್ಟಿನ ನೈರ್ಮಲ್ಯ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ಆರ್‌ಸಿಎಚ್ ಸಿಬ್ಬಂದಿ, ಆರೋಗ್ಯ ಸಿಬ್ಬಂದಿ, ಸಮುದಾಯ ಆರೋಗ್ಯ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು, ತುಂಗಭದ್ರಾ ಸ್ಕೂಲ್ ಆಫ್ ನರ್ಸಿಂಗ್ ಹೋಂನ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು.

ಇದನ್ನೂ ಓದಿ: Child Trafficking Racket: ಅಂತಾರಾಜ್ಯ ಮಕ್ಕಳ ಕಳ್ಳಸಾಗಣೆ ದಂಧೆ ಪತ್ತೆ; 11 ಮಕ್ಕಳ ರಕ್ಷಣೆ

ಕಾರ್ಯಕ್ರಮದಲ್ಲಿ ಎಲ್ಲರಿಗೂ ಮುಟ್ಟಿನ ನೈರ್ಮಲ್ಯದ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ. ದೊಡ್ಡಮನಿ ಪ್ರಾಸಾವಿಕ ಮಾತನಾಡಿದರು. ಧರ್ಮನಗೌಡ ವಂದಿಸಿದರು.

Continue Reading

ಆರೋಗ್ಯ

Mango For Diabetes: ಮಧುಮೇಹಿಗಳೂ ಮಾವಿನಹಣ್ಣಿನ ರುಚಿ ಸವಿಯಬಹುದೇ? ಇಲ್ಲಿದೆ ಉತ್ತರ!

ಸಾಕಷ್ಟು ವಿಟಮಿನ್‌ ಸಿ, ವಿಟಮಿನ್‌ ಎ, ವಿಟಮಿನ್‌ ಬಿ6, ವಿಟಮಿನ್‌ ಕೆ ಸೇರಿದಂತೆ ಖನಿಜಾಂಶಗಳಾದ ತಾಮ್ರ, ಫೋಲೇಟ್‌, ಮೆಗ್ನೀಶಿಯಂ, ಪೊಟಾಶಿಯಂ ಇತ್ಯಾದಿಗಳನ್ನೂ ಹೊಂದಿರುವ ಹಣ್ಣು ಮಾವಿನಹಣ್ಣು. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ರಕ್ತದೊತ್ತಡದ ಸಮತೋಲನಕ್ಕೂ ಸಹಾಯ ಮಾಡುವ ಈ ಹಣ್ಣಿನಿಂದ ಸಾಕಷ್ಟು ಆರೋಗ್ಯಕರ ಲಾಭಗಳಿವೆ. ಆದರೆ, ಸಾಕಷ್ಟು ಸಕ್ಕರೆಯ ಅಂಶ ಇದರಲ್ಲಿ ಇರುವುದರಿಂದ ಮಧುಮೇಹಿಗಳು ಮಾವಿನಹಣ್ಣಿನಿಂದ (Mango For Diabetes) ದೂರವಿರಬೇಕೇ ಎಂಬುದು ಪ್ರಶ್ನೆ.

VISTARANEWS.COM


on

Mango For Diabetes
Koo

ಹೇಳಿ ಕೇಳಿ ಬೇಸಿಗೆ ಕಾಲ. ಬೇಸಿಗೆ ಬಂತೆಂದರೆ ಎಲ್ಲರೂ ಖುಷಿ ಪಡುವುದು ಹಣ್ಣುಗಳ ರಾಜ ಮಾವಿನ ಹಣ್ಣಿನ (Mango For Diabetes) ಆಗಮನಕ್ಕೆ. ಬೇಸಿಗೆಯ ಬರವಿಗಾಗಿ ಜಾತಕ ಪಕ್ಷಿಯಂತೆ ಕಾದು ಕೂರುವವರ ಹಿಂದಿನ ಆಸಕ್ತಿಯ ಕಾರಣಗಳಲ್ಲಿ ಪ್ರಮುಖವಾದದ್ದು ಇದೇ. ಮಾವಿನ ಹಣ್ಣಿನ ಸುಗ್ಗಿಯ ಕಾಲ. ನಾನಾ ಬಗೆಯ, ರುಚಿರುಚಿಯಾದ, ಅಮೃತದಂತಹ ಮಾವಿನ ಹಣ್ಣಿನ ರುಚಿಗೆ, ಅದರ ಘಮಕ್ಕೆ ಮನಸೋಲದವರು ಯಾರು ಹೇಳಿ! ಸಾಕಷ್ಟು ವಿಟಮಿನ್‌ ಸಿ, ವಿಟಮಿನ್‌ ಎ, ವಿಟಮಿನ್‌ ಬಿ6, ವಿಟಮಿನ್‌ ಕೆ ಸೇರಿದಂತೆ ಖನಿಜಾಂಶಗಳಾದ ತಾಮ್ರ, ಫೋಲೇಟ್‌, ಮೆಗ್ನೀಶಿಯಂ, ಪೊಟಾಶಿಯಂ ಇತ್ಯಾದಿಗಳನ್ನೂ ಹೊಂದಿರುವ ಹಣ್ಣು ಮಾವಿನಹಣ್ಣು. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ರಕ್ತದೊತ್ತಡದ ಸಮತೋಲನಕ್ಕೂ ಸಹಾಯ ಮಾಡುವ ಈ ಹಣ್ಣಿನಿಂದ ಸಾಕಷ್ಟು ಆರೋಗ್ಯಕರ ಲಾಭಗಳಿವೆ. ಆದರೆ, ಈ ಹಣ್ಣಿನ ಬಗ್ಗೆ ಇರುವ ಒಂದೇ ದೂರೆಂದರೆ, ಸಾಕಷ್ಟು ಸಕ್ಕರೆಯ ಅಂಶ ಇದರಲ್ಲಿ ಇರುವುದರಿಂದ ಮಧುಮೇಹಿಗಳು ಮಾವಿನಹಣ್ಣಿನಿಂದ ದೂರವಿರಬೇಕು ಎಂಬ ಸತ್ಯ.
ಹೌದು. ಮಧುಮೇಹಿಗಳಿಗೆ ಮಾವಿನಹಣ್ಣು ಎಷ್ಟೇ ಪ್ರಿಯವೇ ಆಗಿದ್ದರೂ, ವೈದ್ಯರು ಹೇಳುವ ಮಾತು ಎಂದರೆ, ಮಾವಿನಹಣ್ಣು ಸೇರಿದಂತೆ ಕೆಲವು ಹೆಚ್ಚು ಸಕ್ಕರೆ, ಕ್ಯಾಲರಿ ಇರುವ ಹಣ್ಣುಗಳಿಂದ ದೂರವಿರಿ ಎಂಬುದು. ಆದರೆ ಮಾರುಕಟ್ಟೆಯಲ್ಲಿ ಬಿದ್ದಿರುವ ಮಾವಿನ ಹಣ್ಣಿನ ರಾಶಿಯನ್ನು ನೋಡಿದರೆ ದೂರವಿರಲು ಯಾರಿಗೆ ತಾನೇ ಸಾಧ್ಯವಾಗುತ್ತದೆ ಹೇಳಿ. ಬೇಸಿಗೆಯಲ್ಲಿ ಮಾವಿನ ಹಣ್ಣಿನಿಂದ ದೂರವಿರಲು ತಪಸ್ಸನ್ನೇ ಮಾಡಬೇಕಾಗುತ್ತದೆ ಎಂದು ಮಧುಮೇಹಿಗಳು ನಿರಾಶರಾಗಬೇಕಿಲ್ಲ. ಮಾವಿನಹಣ್ಣನ್ನು ಅವರೂ ತಿನ್ನಬಹುದು. ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರದಂತೆ ಮಾವಿನಹಣ್ಣನ್ನು ಹೇಗೆ ತಿನ್ನಬಹುದು (Mango For Diabetes) ಎಂಬುದನ್ನು ನೋಡೋಣ ಬನ್ನಿ.

National Mango Day

ಹೇಗೆ ಸವಿಯಬೇಕು ಅನ್ನೋದು ಮುಖ್ಯ

ನಿಮಗೆ ಮಾವಿನಹಣ್ಣು ತಿನ್ನಲಾಗುತ್ತಿಲ್ಲ ಎಂಬ ಬೇಸರ ಬೇಡ. ನೀವೂ ಎಲ್ಲರಂತೆ ಬೇಸಿಗೆಯಲ್ಲಿ ಮಾವನ್ನು ಸವಿಯಬಹುದು. ಆದರೆ, ಹೇಗೆ ಸವಿಯಬೇಕು ಎಂಬುದನ್ನು ಮಾತ್ರ ಕೊಂಚ ಎಚ್ಚರಿಕೆಯಿಂದ ತಿಳಿದುಕೊಳ್ಳಬೇಕು. ತಜ್ವರ ಪ್ರಕಾರ ಸಾಮಾನ್ಯ ಗಾತ್ರದ ಒಂದು ಮಾವಿನ ಹಣ್ಣನ್ನು ದಿನಕ್ಕೆ ಒಂದು ತಿನ್ನಬಹುದು. ಸಾಮಾನ್ಯ ಗಾತ್ರದ ಒಂದು ಮಾವಿನಹಣ್ಣಿನಲ್ಲಿ ೫೦ ಗ್ರಾಂ ಕಾರ್ಬೋಹೈಡ್ರೇಟ್‌ ಇರುತ್ತದೆ. ಹಾಗಾಗಿ ದಿನಕ್ಕೆ ಅರ್ಧ ಅಥವಾ ಒಂದು ಮಾವಿನ ಹಣ್ಣಿಗಿಂತ ಹೆಚ್ಚು ತಿನ್ನುವ ಹಠಕ್ಕೆ ಬೀಳಬೇಡಿ.

ಬೇರೆ ಆಹಾರದ ಜತೆ ತಿನ್ನಿ

ಮಾವಿನ ಹಣ್ಣನ್ನು ಬೇರೆ ಆಹಾರದ ಜೊತೆಗೆ ತಿನ್ನಿ. ಒಳ್ಳೆಯ ಕೊಬ್ಬಿರುವ, ನಾರಿನಂಶವಿರುವ ಆಹಾರವನ್ನು ಮಾವಿನ ಹಣ್ಣಿನ ಜೊತೆಜೊತೆಗೇ ತಿನ್ನುವುದು ಒಳ್ಳೆಯದು. ಬಾದಾಮಿ, ವಾಲ್ನಟ್‌, ನಿಂಬೆ ಹಣ್ಣು ಹಿಂಡಿದ ನೀರಿನಲ್ಲಿ ನೆನೆಸಿದ ಚಿಯಾ ಬೀಜಗಳು ಇತ್ಯಾದಿಗಳನ್ನು ಮಾವಿನ ಹಣ್ಣು ತಿನ್ನುವಾಗಲೇ ತಿಂದರೆ ಮಾವಿನ ಹಣ್ಣಿನಿಂದಾಗಿ ನಿಮ್ಮ ದೇಹದ ಗ್ಲುಕೋಸ್‌ ಒಡನೆಯೇ ಏರುವುದಿಲ್ಲ.

eating mango

ತಿನ್ನುವ ಸಮಯ ಮುಖ್ಯ

ಮಾವಿನ ಹಣ್ಣನ್ನು ತಿನ್ನುವ ಸಮಯ ಬಹಳ ಮುಖ್ಯ. ರಾತ್ರಿ ತಿನ್ನಬೇಡಿ. ನೀವು ಅತ್ಯಂತ ಚುರುಕಾಗಿರುವ, ಕ್ರಿಯಾಶೀಲರಾಗಿರುವ ಸಮಯದಲ್ಲಿ ಮಾವಿನಹಣ್ಣು ಸೇವಿಸಿ. ನೀವು ಹೆಚ್ಚು ಓಡಾಡಿಕೊಂಡಿರುವ, ವಾಕಿಂಗ್‌ ಮಾಡುವ ಮೊದಲು, ವರ್ಕೌಟ್‌ ಮಾಡುವ ಮೊದಲು, ಅಥವಾ ಯಾವುದಾದರೂ ದೈಹಿಕವಾದ ಕೆಲಸ ಮಾಡುವ, ಶ್ರಮ ವಹಿಸುವ ಮೊದಲು ಮಾವು ತಿನ್ನಿ.

ಇದನ್ನೂ ಓದಿ: Cooking In An Iron Pot: ಕಬ್ಬಿಣದ ಪಾತ್ರೆಯಲ್ಲಿ ಅಡುಗೆ ಮಾಡುವುದು ಒಳ್ಳೆಯದು! ಯಾಕೆ ಗೊತ್ತೇ?

ತಿನ್ನುವ ಪ್ರಮಾಣ ಮಹತ್ವದ್ದು

ನೀವು ಮಾವಿನಹಣ್ಣನ್ನು ಹೇಗೆ ತಿನ್ನುತ್ತೀರಿ ಎಂಬುದೂ ಮುಖ್ಯ. ಮಾವಿನಹಣ್ಣನ್ನು ಹಾಗೆಯೇ, ತಿಂದರೆ ಅತ್ಯಂತ ಒಳ್ಳೆಯದು. ಬದಲಾಗಿ ಮಾವಿನ ಹಣ್ಣಿನ ಶೇಕ್‌ ಅಥವಾ ಇನ್ನೂ ಏನೇನೋ ಸಿಹಿತಿನಿಸು, ಡೆಸರ್ಟ್‌ ಅಥವಾ ಖಾದ್ಯಗಳ ರೂಪದಲ್ಲಿ ತಿನ್ನುವುದರಿಂದ ಪರಿಣಾಮ ಹೆಚ್ಚೇ ಆಗಬಹುದು. ಮಾವಿನಹಣ್ಣನ್ನು ಹಾಗೆಯೇ ತಿನ್ನುವುದರಿಂದ ಪರಿಣಾಮ ಕಡಿಮೆ. ಮಧುಮೇಹಿಗಳು ಹಣ್ಣು ತಿನ್ನಲೇಬಾರದು ಎಂಬ ನಿಯಮವಿಲ್ಲ. ಹೇಗೆ, ಯಾವಾಗ ಮತ್ತು ಎಷ್ಟು ತಿನ್ನುತ್ತಾರೆ ಎಂಬುದು ಮುಖ್ಯ. ಸರಿಯಾದ ಸಮಯದಲ್ಲಿ ಸರಿಯಾದ ಪ್ರಮಾಣದಲ್ಲಿ ಹಣ್ಣು ತಿಂದರೆ ದೇಹಕ್ಕೆ ಒಳ್ಳೆಯದೇ ಆಗುತ್ತದೆ ಎಂಬುದು ನೆನಪಿರಲಿ.

Continue Reading
Advertisement
Arvind Kejriwal
ದೇಶ14 seconds ago

Arvind Kejriwal: ಕಾಂಗ್ರೆಸ್‌ ಜತೆ ನಮ್ಮ ಮದುವೆ ಶಾಶ್ವತ ಅಲ್ಲ ಎಂದ ಕೇಜ್ರಿವಾಲ್;‌ ‘ಡಿವೋರ್ಸ್‌’ ಯಾವಾಗ?

Love Jihad
ಪ್ರಮುಖ ಸುದ್ದಿ4 mins ago

Love Jihad: ಲವ್ ಜಿಹಾದ್ ತಡೆಗೆ ಹೆಲ್ಪ್‌ಲೈನ್‌ ಆರಂಭಿಸಿದ ಶ್ರೀರಾಮಸೇನೆ

Karan Bhushan Singh
ದೇಶ15 mins ago

Karan Bhushan Singh: ಬಿಜೆಪಿ ಅಭ್ಯರ್ಥಿಯ ಬೆಂಗಾವಲು ವಾಹನ ಡಿಕ್ಕಿಯಾಗಿ ಇಬ್ಬರ ಸಾವು

mlc election
ರಾಜಕೀಯ18 mins ago

MLC Election: ಒಂದಾದ ಸಿಎಂ- ಡಿಸಿಎಂ, ಪರಂ ಗರಂ; ಅಖಾಡಕ್ಕಿಳಿದ ರಮೇಶ್‌ ಕುಮಾರ್‌

Viral Run Out Video
ಕ್ರೀಡೆ24 mins ago

Viral Run Out Video: 11 ಆಟಗಾರರಿಂದ ರನೌಟ್​ ಪ್ರಯತ್ನ; ಕೊನೆಗೂ ನಾಟೌಟ್​ ಆದ ಬ್ಯಾಟರ್​

Ambareesh Birthday during Sumalatha Ambareesh Talks About Abhishek Ambareesh And Aviva
ಸ್ಯಾಂಡಲ್ ವುಡ್31 mins ago

Ambareesh Birthday: ಸಿಹಿ ಸುದ್ದಿ ಕೊಡಲಿದ್ದಾರಾ ಅಭಿಷೇಕ್‌-ಅವಿವಾ? ಸುಮಲತಾ ಹೇಳಿದ್ದೇನು?

All Eyes on Rafah
ರಾಜಕೀಯ35 mins ago

All Eyes on Rafah: 30 ಮಿಲಿಯನ್ ಜನರನ್ನು ತಲುಪಿದ ‘ಆಲ್ ಐಸ್ ಆನ್ ರಫಾ’ ಪೋಸ್ಟ್‌!

Bomb Threat
ಪ್ರಮುಖ ಸುದ್ದಿ38 mins ago

Bomb Threat: ಕೆಂಪೇಗೌಡ ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ ಸಂದೇಶ; ಆತಂಕ ಸೃಷ್ಟಿ

Hardik Pandya
ಕ್ರೀಡೆ1 hour ago

Hardik Pandya: ಕೌಟುಂಬಿಕ ಸಮಸ್ಯೆ ಬದಿಗೊತ್ತಿ ಭಾರತ ತಂಡದ ಯಶಸ್ಸಿಗಾಗಿ ಕ್ರಿಕೆಟ್​ ಅಭ್ಯಾಸ ಆರಂಭಿಸಿದ ಹಾರ್ದಿಕ್​ ಪಾಂಡ್ಯ

Viral Video
ವೈರಲ್ ನ್ಯೂಸ್2 hours ago

Viral Video: ಇವನೇ ನಿಜವಾದ ಹೀರೋ! ಇವರ ಧೈರ್ಯ, ಶೌರ್ಯಕ್ಕೆ ಸರಿಸಾಟಿಯೇ ಇಲ್ಲ; ವೈರಲಾಯ್ತು ವಿಡಿಯೋ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ20 hours ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 day ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ3 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು3 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ6 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌