Sakleshpur Places To Visit : ಸ್ವರ್ಗದಂತಹ ಸಕಲೇಶಪುರದಲ್ಲಿ ಈ ಸ್ಥಳಗಳನ್ನು ಮಿಸ್‌ ಮಾಡಲೇಬಾರದು - Vistara News

ಪ್ರವಾಸ

Sakleshpur Places To Visit : ಸ್ವರ್ಗದಂತಹ ಸಕಲೇಶಪುರದಲ್ಲಿ ಈ ಸ್ಥಳಗಳನ್ನು ಮಿಸ್‌ ಮಾಡಲೇಬಾರದು

ಸಕಲೇಶಪುರ ಪ್ರವಾಸಿ ( Sakleshpur Places To Visit ) ತಾಣಗಳ ಹಾಟ್‌ಸ್ಪಾಟ್‌. ಇಲ್ಲಿ ನೀವು ಭೇಟಿ ನೀಡಬಹುದಾದ ಸ್ಥಳಗಳ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

VISTARANEWS.COM


on

sakleshpura
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಈ ಬಾರಿಯ ಮಳೆಗಾಲ ಅಂತೂ ಎಲ್ಲೆಡೆ ಆರಂಭವಾಗಿದೆ. ಸಣ್ಣಗೆ ಸುರಿಯುತ್ತಿರುವ ಮಳೆಗೆ ಪೂರ್ತಿ ಧರ ಮೈಕೊಟ್ಟು ಹಸಿರಾಗಿ ಹೊಳೆಯಲಾರಂಭಿಸಿದೆ. ಸ್ವಚ್ಛ ಹಸಿರಿನಿಂದ ಎಲ್ಲೆಡೆ ನಿಸರ್ಗ ದೇವತೆ ಸೌಂದರ್ಯವತಿಯಾಗಿ ಕಾಣಲಾರಂಭಿಸಿದ್ದಾಳೆ. ಇಂತಹ ಸಮಯದಲ್ಲಿ ಸಕಲೇಶಪುರದಂತಹ ಸ್ಥಳಕ್ಕೆ ಪ್ರವಾಸ ಹೇಳಿ ಮಾಡಿಸಿದ್ದು ಎನ್ನಬಹುದು. ಹಾಗಾದರೆ ಸಕಲೇಶಪುರ ಹೋದಾಗ ಅಲ್ಲಿ ಏನೇನನ್ನು ನೋಡಬಹುದು? ಯಾವ ಯಾವ ಸ್ಥಳಗಳಿಗೆ ಭೇಟಿ ಕೊಡಬಹುದು? ಎನ್ನುವ ಪ್ರಶ್ನೆ ನಿಮ್ಮಲ್ಲಿರಬಹುದು. ಅದಕ್ಕಾಗಿಯೇ ಸಕಲೇಶಪುರ ( Sakleshpur Places To Visit ) ಸನಿಹದ ಎಲ್ಲ ಪ್ರವಾಸಿ ತಾಣಗಳ ಕುರಿತಾಗಿ ನಾವಿಲ್ಲಿ ಮಾಹಿತಿ ನೀಡಿದ್ದೇವೆ.

1. ಮಂಜರಾಬಾದ್‌ ಕೋಟೆ:

star shaped Manjarabad Fort, Top view
donigalu falls sakaleshpur


ಇದು ಕರ್ನಾಟಕದಲ್ಲಿರುವ ವಿಶೇಷವಾದ ಕೋಟೆ. ಅಷ್ಟಭುಜಾಕೃತಿಯ ನಕ್ಷತ್ರಾಕಾರದಲ್ಲಿರುವ ಈ ಕೋಟೆ ಸಕಲೇಶಪುರದ ಹೊರವಲಯದಿಂದ ಸುಮಾರು 3240 ಅಡಿ ಎತ್ತರದಲ್ಲಿದೆ. ಟಿಪ್ಪು ಸುಲ್ತಾನನು ತನ್ನ ಆಡಳಿತದ ಕಾಲದಲ್ಲಿ ತನ್ನ ರಕ್ಷಣೆಗಾಗಿ ರಚಿಸಿಕೊಂಡ ಕೋಟೆ ಇದಾಗಿದೆ. ಕೋಟೆ ಪೂರ್ತಿಯಾಗಿ ಇಸ್ಲಾಮಿಕ್‌ ಶೈಲಿಯ ವಾಸ್ತುಶಿಲ್ಪದಿಂದ ತುಂಬಿದೆ. ಇಲ್ಲಿಗೆ ಚಾರಣ ಹೋಗುವುದು ಸ್ವಲ್ಪ ಕಷ್ಟವಾದರೂ ಮೇಲೆ ನಿಂತು ಪಶ್ಚಿಮ ಘಟ್ಟಗಳತ್ತ ಕಣ್ಣಾಯಿಸಿದಾಗ ಚಾರಣದ ನೋವು ಮರೆತುಹೋಗಿಬಿಡುತ್ತದೆ. ಈ ಸ್ಥಳವು ಭಾರತದ ಪುರಾತತ್ತ್ವ ಶಾಸ್ತ್ರದ ಸರ್ವೇಕ್ಷಣಾ ಇಲಾಖೆಯಿಂದ ನಿರ್ವಹಿಸಲ್ಪಡುತ್ತಿದೆ. ಈ ಸ್ಥಳವು ಸಕಲೇಶಪುರ ಪಟ್ಟಣದ ಬಸ್‌ ನಿಲ್ದಾಣದಿಂದ ಆರು ಕಿ.ಮೀ. ದೂರದಲ್ಲಿದೆ.

2. ಸಕಲೇಶ್ವರ ದೇವಸ್ಥಾನ:

Sri Sakleshwara Swamy Temple
donigalu falls sakaleshpur


ಸಕಲೇಶಪುರ ಬಸ್‌ ನಿಲ್ದಾಣದಿಂದ ಕೇವಲ 1.5ಕಿ.ಮೀ. ದೂರದಲ್ಲಿ ನಿಮಗೆ ಕಾಣಸಿಗುವುದು ಸಕಲೇಶ್ವರ ದೇವಸ್ಥಾನ. ರಾಜ್ಯದ ಅತ್ಯಂತ ಹಳೆಯ ದೇವಸ್ಥಾನಗಳಲ್ಲಿ ಇದೂ ಒಂದು. ಹೇಮಾವತಿ ನದಿ ದಡದಲ್ಲಿಯೇ ಈ ದೇವಸ್ಥಾನವಿದೆ. ಈ ದೇವಸ್ಥಾನವನ್ನು 11ರಿಂದ 14ನೇ ಶತಮಾನದಲ್ಲಿ ಹೊಯ್ಸಳ ಸಾಮಾಜ್ರ್ಯದಸ ಅವಧಿಯಲ್ಲಿ ನಿರ್ಮಿಸಲಾಯಿತು. ಚಿಕ್ಕದಾಗಿರುವ ಈ ದೇಗುಲ ಸಕಲೇಶಪುರ ದೇಗುಲದ ಪ್ರವೇಶದ್ವಾರದಲ್ಲಿಯೇ ಇದ್ದು, 600 ವರ್ಷಗಳಿಂದ ನಗರದ ಕಾವಲುಗಾರನಾಗಿ ಕಾಯುತ್ತಿದೆ. ಇಲ್ಲಿ ಭವ್ಯವಾದ ಬೃಹತ್‌ ಶಿವನ ಪ್ರತಿಮೆಯೂ ಇದ್ದು, ಅದು ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯಾಗಿದೆ. ಪ್ರತಿವರ್ಷ ಫೆಬ್ರವರಿಯಲ್ಲಿ ಇಲ್ಲಿ ವಾರ್ಷಿಕ ರಥಯಾತ್ರೆ ನಡೆಯುತ್ತದೆ.

3. ಬಿಸಲೆ ಮೀಸಲು ಅರಣ್ಯ:

Bisle Reserve Forest, mountain
donigalu falls sakaleshpur


ಸಕಲೇಶಪುರ ನಗರದಿಂದ ಸುಮಾರು 65ಕಿ.ಮೀ. ಕ್ರಮಿಸಿದರೆ ನಿಮಗೆ ಬಿಸಲೆ ಮೀಸಲು ಅರಣ್ಯ ಸಿಗುತ್ತದೆ. ಇದು ಅನೇಕ ಜೀವವೈವಿಧ್ಯಗಳ ನೆಲೆಯಾಗಿದೆ. ಇಲ್ಲಿ ವ್ಯೂವ್‌ ಪಾಯಿಂಟ್‌ ಕೂಡ ಇದ್ದು, ಅಲ್ಲಿಂದ ನಿಸರ್ಗ ದೇವತೆಯ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಬಹುದು. ಯೇನಿಕಲ್ಲು ಬೆಟ್ಟ, ಪುಷ್ಪಗಿರಿ ಮತ್ತು ಕುಮಾರ ಪರ್ವತದ ವಿಹಂಗಮ ನೋಟವನ್ನು ಇಲ್ಲಿಂದ ಕಾಣಬಹುದು. ಬಿಸಲೆ ಘಾಟ್‌ ವ್ಯೂವ್‌ ಪಾಯಿಂಟ್‌ ಸಕಲೇಶಪುರದಿಂದ 55 ಕಿ.ಮೀ., ಬಿಸಲೆ ಗ್ರಾಮದಿಂದ 5ಕಿ.ಮೀ. ಮತ್ತು ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ 20ಕಿ.ಮೀ. ದೂರದಲ್ಲಿದೆ. ಅರಣ್ಯ ಇಲಾಖೆಯು ಈ ಪ್ರದೇಶದ ನಿರ್ವಹಣೆ ನೋಡಿಕೊಳ್ಳುತ್ತಿದೆ.

4. ಅಗ್ನಿ ಗುಡ್ಡ:

green view of Agni Gudda
donigalu falls sakaleshpur


ಅಗ್ನಿ ಗುಡ್ಡದ ತುದಿಯಿಂದ ನೀವು ನಿಸರ್ಗದ ಅದ್ಭುತ ಸೌಂದರ್ಯವನ್ನು ಕಾಣಬಹುದು. ಅಗ್ನಿ ಗ್ರಾಮದಿಂದ ಸುಮಾರು ಮೂರು ಕಿ.ಮೀ. ದೂರವನ್ನು ಟ್ರೆಕ್ಕಿಂಗ್‌ ಮಾಡಿಕೊಂಡು ಸಾಗಬಹುದು. ಇಲ್ಲಿ ನೀವು ಕ್ಯಾಂಪ್‌ಗಳನ್ನು ಹಾಕಿಕೊಂಡು ರಾತ್ರಿ ಕಳೆಯುವುದಕ್ಕೂ ಅವಕಾಶವಿದೆ. ಈ ಸ್ಥಳ ಸಕಲೇಶಪುರ ಬಸ್‌ ನಿಲ್ದಾಣದಿಂದ 25ಕಿ.ಮೀ. ದೂರದಲ್ಲಿದೆ. ಇಲ್ಲಿಗೆ ಭೇಟಿ ನೀಡಲು ಅಕ್ಟೋಬರ್‌ನಿಂದ ಮಾರ್ಚ್‌ ಸೂಕ್ತ ಸಮಯ. ಇಲ್ಲಿ ಹತ್ತಿಳಿಯುವುದಕ್ಕೆ ನಿಮಗೆ ಒಟ್ಟಾರೆಯಾಗಿ ನಾಲ್ಕು ತಾಸು ಬೇಕಾಗಬಹುದು. ಇಲ್ಲಿಂದಲೇ ಮುಂಜರಾಬಾದ್‌ ಕೋಟೆಗೂ ಟ್ರೆಕ್ಕಿಂಗ್‌ ಮಾಡಬಹುದಾಗಿದೆ. ಈ ಅಗ್ನಿ ಬೆಟ್ಟದಲ್ಲಿ ಹಲವಾರು ಸಿನಿಮಾಗಳನ್ನು ಚಿತ್ರೀಕರಣ ಮಾಡಲಾಗಿದೆ.

5. ಮಂಜೇಹಳ್ಳಿ ಜಲಪಾತ:

Manjehalli Waterfalls
donigalu falls sakaleshpur


ಮಂಜೇಹಳ್ಳಿ ಜಲಪಾತದಲ್ಲಿ 20 ಅಡಿ ಆಳಕ್ಕೆ ಧುಮುಕುವ ನೀರನ್ನು ನೀವು ಕಾಣಬಹುದು. ಸಕಲೇಶಪುರದಿಂದ ಕೇವಲ 8ಕಿ.ಮೀ. ದೂರದಲ್ಲಿ ಹಚ್ಚ ಹಸಿರಿನ ಬೆಟ್ಟಗಳ ನಡುವೆ ಈ ಜಲಪಾತವಿದೆ. ಈ ಜಲಪಾತದಲ್ಲಿ ಮೈ ಚಳಿ ಬಿಟ್ಟು ಆಟವಾಡಬಹುದು. ಜಲಪಾತದಿಂದ ಕೆಳಗೆ ಹೊಳೆಯಾಗುವ ನೀರಿನಲ್ಲಿ ಸ್ನಾನ ಮಾಡಬಹುದು. ಮಂಜೇಹಳ್ಳಿ ಗ್ರಾಮದಿಂದ ಒಂದು ಕಿ.ಮೀ. ಚಾರಣ ಮಾಡಿದರೆ ನಿಮಗೆ ಈ ಜಲಪಾತ ಸಿಗುತ್ತದೆ. ಮಾರ್ಗ ಮಧ್ಯೆ ಕಾಫಿ ತೋಟ ಮತ್ತು ಸ್ಥಳೀಯ ಸಸ್ಯವರ್ಗದ ಸೌಂದರ್ಯವನ್ನು ಸವಿಯಬಹುದು. ಮಳೆಗಾಲದಲ್ಲಿ ನೀರು ಹೆಚ್ಚಾಗಿರುವುದರಿಂದ ಜಲಪಾತದ ಸೌಂದರ್ಯ ಇನ್ನಷ್ಟು ಹೆಚ್ಚಿರುತ್ತದೆ. ಇಲ್ಲಿ ಭದ್ರತಾ ಸಿಬ್ಬಂದಿಗಳನ್ನೂ ನೇಮಿಸಲಾಗಿದೆ. ಕ್ಯಾಂಪಿಂಗ್‌ಗೂ ಅವಕಾಶವಿದೆ.

6. ಕುಕ್ಕೆ ಸುಬ್ರಹ್ಮಣ್ಯ ದೇವಾಲಯ:

Kukke Subramanya swamy Temple
donigalu falls sakaleshpur


ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು ಕರ್ನಾಟಕದಲ್ಲಿರುವ ಪ್ರಸಿದ್ಧ ಹಿಂದೂ ದೇವಾಲಯವಾಗಿದೆ. ಎಲ್ಲಾ ಸರ್ಪಗಳ ಅಧಿಪತಿಯಾದ ಕಾರ್ತಿಕೇಯನನ್ನು ಇಲ್ಲಿ ಸುಬ್ರಹ್ಮಣ್ಯ ಎಂದು ಪೂಜಿಸಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಗ್ರಾಮದ ಹೃದಯ ಭಾಗದಲ್ಲಿರುವ ಈ ದೇಗುಲ ಸೊಂಪಾದ ಪ್ರಕೃತಿಯಿಂದ ಆವೃತವಾಗಿದೆ. ಭೌಗೋಳಿಕವಾಗಿ ನೋಡಿದರೆ, ಕುಮಾರ ಪರ್ವತದ ಪಕ್ಕದಲ್ಲಿರುವ ಆರು ತಲೆಯ ನಾಗರಹಾವಿನ ಆಕಾರದಲ್ಲಿರುವ ಶೇಷ ಪರ್ವತವು ದೇವಾಲಯವನ್ನು ರಕ್ಷಿಸುತ್ತಿರುವಂತೆ ಕಾಣುತ್ತದೆ. ಕುಕ್ಕೆ ಸುಬ್ರಹ್ಮಣ್ಯ ದೇವಾಲಯವನ್ನು ‘ನಾಗಗಳ’ ವಾಸಸ್ಥಾನವೆಂದು ಪರಿಗಣಿಸಲಾಗಿದೆ. ಇಲ್ಲಿರುವ ಕುಮಾರಧಾರ ತೀರ್ಥ ಮತ್ತು ಮಡೆಸ್ನಾನವು ಕುಷ್ಠರೋಗದಂತಹ ಭಯಾನಕ ರೋಗಗಳನ್ನೂ ನಿವಾರಿಸುತ್ತದೆ ಎಂದು ಭಕ್ತರು ನಂಬುತ್ತಾರೆ. ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳು ಸಹ ಇಲ್ಲಿನ ಸ್ನಾನದಿಂದ ಗುಣವಾಗುತ್ತವೆ ಎನ್ನಲಾಗುತ್ತದೆ. ‘ನಾಗದೋಷ’ಗಳಿಂದ ಬಳಲುತ್ತಿರುವವರಿಗೆ ಮೋಕ್ಷವನ್ನು ಪಡೆಯಲು ಈ ದೇವಾಲಯವನ್ನು ಅಂತಿಮ ಸ್ಥಳ ಎಂದು ನಂಬಿಕೆ. ಸರ್ಪ ಸಂಸ್ಕಾರ ಪೂಜೆ, ಆಶ್ಲೇಷ ಪೂಜೆ ಮತ್ತು ಇತರ ಆಚರಣೆಗಳನ್ನು ಮಾಡುವ ಮೂಲಕ ಭಕ್ತರು ನಾಗದೋಷ ಪರಿಹಾರ ಮಾಡಿಕೊಳ್ಳುತ್ತಾರೆ.

7. ಜೇನುಕಲ್ಲು ಗುಡ್ಡ:

green view of Jenukallu Gudda
donigalu falls sakaleshpur


ಕರ್ನಾಟಕದ ಎರಡನೇ ಅತಿ ಎತ್ತರ ಗುಡ್ಡವೆಂದರೆ ಅದು ಜೇನುಕಲ್ಲು ಗುಡ್ಡ. ಪಾಂಡವರ ಗುಡ್ಡ ಅಥವಾ ಬೆಟ್ಟದ ಭೈರವೇಶ್ವರ ದೇವಸ್ಥಾನದಿಂದ ಜೇನುಕಲ್ಲು ಗುಡ್ಡಕ್ಕೆ ಚಾರಣ ಮಾಡಬಹುದು. ಇಲ್ಲಿ ನೀವು ಬರೋಬ್ಬರಿ 8ಕಿ.ಮೀ. ಟ್ರೆಕ್ಕಿಂಗ್‌ ಮಾಡಬೇಕಾಗುತ್ತದೆ. ಟ್ರೆಕ್ಕಿಂಗ್‌ ಮಾಡುವಾಗ ಕಾಫಿ ತೋಟದ ಸೌಂದರ್ಯ, ಅರಬ್ಬಿ ಸಮುದ್ರ, ಶೇಷಪರ್ವತ, ಕುಮಾರ ಪರ್ವತ ಮತ್ತು ಎತ್ತಿನ ಭುಜ ಬೆಟ್ಟಗಳನ್ನು ಕಾಣುತ್ತಾ ಸಾಗಬಹುದು. ಇದು ಸಕಲೇಶಪುರದಿಂದ 40ಕಿ.ಮೀ. ದೂರದಲ್ಲಿದೆ. ಬೆಟ್ಟದ ಭೈರವೇಶ್ವರ ದೇಗುಲದಿಂದ 4-5 ಗಂಟೆಗಳ ಕಾಲ ಟ್ರೆಕ್ಕಿಂಗ್‌ ಮಾಡಿದರೆ ಈ ಬೆಟ್ಟ ಸಿಗುತ್ತದೆ.

8. ಪಾಂಡವರ ಗುಡ್ಡ:

Betta Byraveshwara Temple pandavara gudda
donigalu falls sakaleshpur


ಹಿಂದೂ ಪುರಾಣಗಳಲ್ಲಿ ನಮೂದಿಸಲಾಗಿರುವ ಒಂದು ತಾಣವೆಂದರೆ ಅದು ಪಾಂಡವರ ಗುಡ್ಡ. ಪಾಂಡವರು ತಮ್ಮ ವನವಾಸದ ಸಮಯದಲ್ಲಿ ಈ ಗುಡ್ಡದಲ್ಲಿ ತಂಗಿದ್ದರು ಎಂದು ನಂಬಲಾಗುತ್ತದೆ. ಸಕಲೇಶಪುರದ ಸಮೀಪದಲ್ಲಿರುವ ಪ್ರಸಿದ್ಧ ಟ್ರೆಕ್ಕಿಂಗ್‌ ತಾಣ ಇದಾಗಿದೆ. ಬೆಟ್ಟದಲ್ಲಿ ಬೆಟ್ಟದ ಭೈರವೇಶ್ವರ ದೇವಸ್ಥಾನವಿದೆ. ಈ ದೇಗುಲ ಸುಮಾರು 1000 ವರ್ಷಗಳಷ್ಟು ಹಳೆಯದು ಎಂದು ನಂಬಲಾಗುತ್ತದೆ. ಇದು ಜೇನುಕಲ್‌ ಗುಡ್ಡದ ಪಕ್ಕದಲ್ಲೇ ಇರುವ ಗುಡ್ಡವಾಗಿದೆ. ಇಲ್ಲಿಂದ ನೀವು ಸೂರ್ಯೋದಯ ಮತ್ತು ಸೂರ್ಯಾಸ್ತಮಾನದ ವಿಹಂಗಮ ನೋಟವನ್ನು ಕಾಣಬಹುದು.

9. ಒಂಬತ್ತು ಗುಡ್ಡ:

treck to ombattu gudda
donigalu falls sakaleshpur


ಒಂಬತ್ತು ಗುಮ್ಮಟಗಳು ಇರುವ ಗುಡ್ಡವನ್ನು ಒಂಬತ್ತು ಗುಡ್ಡ ಎಂದು ಕರೆಯಲಾಗುತ್ತದೆ. ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಗಡಿಯಲ್ಲಿ ಈ ಗುಡ್ಡವಿದೆ. ಈ ಗುಡ್ಡವು ಸಮುದ್ರ ಮಟ್ಟದಿಂದ 970 ಮೀಟರ್‌ ಎತ್ತರದಲ್ಲಿದೆ. ಕಬಿನಿಹೊಳೆ ಮೀಸಲು ಅರಣ್ಯ ಪ್ರದೇಶದಿಂದ ನೀವು ಈ ಗುಡ್ಡಕ್ಕೆ ಟ್ರೆಕ್ಕಿಂಗ್‌ ಹೋಗಬಹುದು. ಕಬಿನಿ ಹೊಳೆಯ ಸ್ವಚ್ಛ ನೀರಿನಲ್ಲಿ ಆಟವನ್ನೂ ಆಡಬಹುದು. ಹೊಸಕೆರೆ ಮತ್ತು ಗುಂಡಿಯಾದಿಂದ ನೀವು ಈ ಗುಡ್ಡಕ್ಕೆ ಚಾರಣ ಆರಂಭಿಸಬಹುದು. ಇಲ್ಲಿಗೆ ಗೈಡ್‌ಗಳೂ ಇದ್ದಾರೆ.

10. ಸಕಲೇಶಪುರ ಲೇಕ್ ಪಾರ್ಕ್:

Sakleshpur Lake Park
donigalu falls sakaleshpur


ಸಕಲೇಶಪುರದ ಬೇಲೂರು ಪ್ರದೇಶದಲ್ಲಿ ಸಕಲೇಶಪುರ ಲೇಕ್‌ ಪಾರ್ಕ್‌ ಇದೆ. ಸಕಲೇಶಪುರದ ಅತ್ಯಂತ ಮಹತ್ವದ ದೇವಾಲಯಗಳಲ್ಲಿ ಒಂದಾದ ಅಯ್ಯಪ್ಪ ಸ್ವಾಮಿ ದೇವಾಲಯವು ಉದ್ಯಾನವನದ ಆವರಣದಲ್ಲಿದೆ. ಸಂಜೆಯ ವಿಹಾರಕ್ಕೆ ಹೇಳಿ ಮಾಡಿಸಿದ ಸ್ಥಳ ಇದೆನ್ನಬಹುದು. ಇಲ್ಲಿ ದೇಗುಲವಿರುವುದರಿಂದ ಆಧ್ಯಾತ್ಮಿಕ ನೆಮ್ಮದಿಯನ್ನೂ ನೀವು ಕಂಡುಕೊಳ್ಳಬಹುದು.

11. ಬೇಲೂರು:

Chennakeshava Temple Belur Hassan
donigalu falls sakaleshpur


ಸಕಲೇಶಪುರದಿಂದ 37ಕಿ.ಮೀ. ದೂರದಲ್ಲಿ ನೀವು ಬೇಲೂರು ದೇಗುಲವನ್ನು ಕಾಣಬಹುದು. ಇದನ್ನು ದಕ್ಷಿಣ ವಾರಾಣಸಿ ಎಂದೂ ಕರೆಯಲಾಗುತ್ತದೆ. ಭಗವಾನ್‌ ವಿಷ್ಣುವಿನ ಅವತಾರವಾದ ಚೆನ್ನಕೇಶವನ ದೇಗುಲ ಇದಾಗಿದೆ. ಯಗಚಿ ನಇ ದಡದಲ್ಲಿರುವ ಈ ದೇಗುಲ ಹೊಯ್ಸಳ ವಾಸ್ತು ಶೈಲಿಯಲ್ಲಿದೆ. ಚೆನ್ನಕೇಶವ ದೇವಾಲಯವನ್ನು 1117ರ ಸಮಯದಲ್ಲಿ ನಿರ್ಮಿಸಲಾಯಿತು. ನಕ್ಷತ್ರಾಕಾರದ ವೇದಿಕೆಯ ಮೇಲೆ ದ್ರಾವಿಡ, ರಾಜಗೋಪುರ ಸೇರಿಸಂತೆ ಒಟ್ಟು ಮೂರು ಪ್ರವೇಶದ್ವಾರಗಳಿವೆ. ಇಲ್ಲಿ ಪುಷ್ಕರಣಿ, ಚೆನ್ನಕೇಶವನ ಪತ್ನಿ ರಾಗನಾಯಕಿ ಮತ್ತು ಸೌಮ್ಯನಾಯಕಿಯ ಎರಡು ದೇವಾಲಯಗಳನ್ನು ಕಾಣಬಹುದು.

12. ಹಳೇಬೀಡು:

Halebidu Hassan District
donigalu falls sakaleshpur

ಸಕಲೇಶಪುರದಿಂದ 52ಕಿ.ಮೀ. ದೂರದಲ್ಲಿ ಹಳೇಬೀಡಿದ್ದು ಅಲ್ಲಿ ಹೊಯ್ಸಳೇಶ್ವರ ದೇವಸ್ಥಾನ ಮತ್ತು ಕೇದಾರೇಶ್ವರ ದೇವಸ್ಥಾನವಿದೆ. ಈ ದೇವಸ್ಥಾನವನ್ನು 1121ರ ಸಮಯದಲ್ಲಿ ನಿರ್ಮಾಣ ಮಾಡಲಾಯಿತು. ಸರೋವರದಿಂದ ಸುತ್ತುವರೆದಿರುವ ದೇವಾಲಯದ ಸಂಕೀರ್ಣವು ಪುರಾತತ್ತ್ವ ಶಾಸ್ತ್ರದ ವಸ್ತುಸಂಗ್ರಹಾಲಯವನ್ನು ಒಳಗೊಂಡಿದೆ. ಹೊಯ್ಸಳೇಶ್ವರ ದೇವಾಲಯವು ಶಿವನಿಗೆ ಸಮರ್ಪಿತವಾಗಿದೆ. ಇಲ್ಲಿಯೇ ಸಂತಾಲೇಶ್ವರ, ಹೊಯ್ಸಳೇಶ್ವರ ಮತ್ತು ವಿಷ್ಣುವರ್ಧನನ ಮಂತ್ರಿ ಕೇತುಮಲ್ಲನಿಗೆ ಸಮರ್ಪಿತವಾದ ದೇವಾಲಯಗಳನ್ನು ಕಾಣಬಹುದು. ಇಲ್ಲಿನ ಕೆತ್ತನೆಯನ್ನು ನೋಡುವುದರಲ್ಲಿ ನೀವು ಮೈ ಮರೆತುಬಿಡುತ್ತೀರಿ.

13. ರಕ್ಸಿಡಿ ಎಸ್ಟೇಟ್‌:

raxidi estate
donigalu falls sakaleshpur


ಸಕಲೇಶಪುರದಿಂದ 10ಕಿ.ಮೀ. ದೂರದಲ್ಲಿರುವುದು ರಕ್ಸಿಡಿ ಎಸ್ಟೇಟ್‌. ಇಲ್ಲಿ ಕಾಫಿ ಹಾಗೂ ವಿವಿಧ ಮಸಾಲೆಗಳನ್ನು ಬೆಳೆಯಲಾಗುತ್ತದೆ. ಇಲ್ಲಿಗೆ ನೀವು ಭೇಟಿ ನೀಡಿದರೆ ಅಲ್ಲಿ ಕೃಷಿ ಕೆಲಸ ಮಾಡುವ ರೈತರೊಂದಿಗೆ ಸಂವಹನ ನಡೆಸಬಹುದು. ನೀವು ಪ್ರತಿದಿನಿ ಸೇವಿಸುವ ಕಾಫಿ ಮತ್ತು ವಿವಿಧ ಮಸಾಲೆಗಳನ್ನು ತಯಾರಿಸುವ ಪ್ರಕ್ರಿಯೆಯನ್ನು ಇಲ್ಲಿನ ಕಾರ್ಖಾನೆಯಲ್ಲಿ ನೋಡಿ ತಿಳಿದುಕೊಳ್ಳಬಹುದು.

14. ಹೇಮಾವತಿ ಆಣೆಕಟ್ಟು:

Hemavathi Dam Karnataka
donigalu falls sakaleshpur


ಕಾವೇರಿ ನದಿಯ ಉಪನದಿಯಾದ ಹೇಮಾವತಿ ನದಿ ಪೂರ್ವ ಸಕಲೇಶಪುರ ಭಾಗದಲ್ಲಿ ಹರಿಯುತ್ತದೆ. ಈ ನದಿಯಲ್ಲಿ ನೀವು ಕಯಾಕಿಂಗ್‌, ಬೋಟಿಂಗ್‌ ಸೇರಿ ಹಲವು ಸಾಹಸಮಯ ಕ್ರೀಡೆಗಳನ್ನು ಆಡಬಹುದು. ಸಕಲೇಶಪುರದ ಬಸ್‌ ನಿಲ್ದಾಣದಿಂದ 66ಕಿ.ಮೀ. ದೂರದಲ್ಲಿರುವ ಗೊರೂರು ಆಣೆಕಟ್ಟಿಗೆ ಕೂಡ ನೀವು ಭೇಟಿ ನೀಡಬಹುದು. ಈ ಆಣೆಕಟ್ಟನ್ನು 1979ರಲ್ಲಿ ನಿರ್ಮಿಸಲಾಗಿದೆ. ಈ ಆಣೆಕಟ್ಟು 4692 ಮೀಟರ್‌ ಉದ್ದ ಮತ್ತು 58 ಮೀಟರ್‌ ಎತ್ತರವಿದೆ. ಇಲ್ಲಿಂದ ನೀರನ್ನು ಹೊರಗೆ ಬಿಡಲು ಆರು ಗೇಟುಗಳಿವೆ.

15. ಶೆಟ್ಟಿಹಳ್ಳಿ ಚರ್ಚ್‌:

shettihalli rosary church Hassan
donigalu falls sakaleshpur


ಗೊರೂರು ಆಣೆಕಟ್ಟಿನ ಹಿನ್ನೀರಲ್ಲೇ ನೀವು ಶೆಟ್ಟಿಹಳ್ಳಿ ಚರ್ಚನ್ನು ಕಾಣಬಹುದು. 1860ರಲ್ಲಿ ಫ್ರೆಂಚ್‌ ಮಿಷನರಿ ಶ್ರೀಮಂತ ಮಾಲೀಕರು ನಿರ್ಮಿಸಿದ ಈ ಚರ್ಚ್‌ 1960ರಲ್ಲಿ ಆಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗಿತು. ಈಗ ಚರ್ಚಿನ ಬಹುತೇಕ ಭಾಗ ಉರುಳಿದ್ದು, ಅಳಿದುಳಿದ ಭಾಗವನ್ನು ನೀವು ನೋಡಬಹುದು. ಇದನ್ನು ತೇಲುವ ಚರ್ಚ್‌ ಎಂದೂ ಕರೆಯಲಾಗುತ್ತದೆ. ನವೆಂಬರ್‌ನಿಂದ ಮೇ ತಿಂಗಳವರೆಗೆ ಈ ಚರ್ಚ್‌ ಕಾಣಿಸಿಕೊಳ್ಳುತ್ತಿದೆ. ಜುಲೈನಿಂದ ಅಕ್ಟೋಬರ್‌ವರೆಗೆ ಇದು ಭಾಗಶಃ ಮುಳುಗಿರುತ್ತದೆ.

16. ದೋಣಿಗಾಲು ಜಲಪಾತ:

donigalu falls sakaleshpur
donigalu falls sakaleshpur


ಸಕಲೇಶಪುರದಿಂದ ಆರು ಕಿ.ಮೀ. ದೂರದಲ್ಲಿ ನೀವು ದೋಣಿಗಾಲು ಜಲಪಾತವನ್ನು ಕಾಣಬಹುದು. ಇಲ್ಲಿ ನೀರು ಬಂಡೆಗಳನ್ನು ಕೊರೆದುಕೊಂಡು ಕೆಳಗೆ ಬೀಳುತ್ತದೆ. ನೀರು ಬೀಳುವ ಸ್ಥಳದಲ್ಲಿ ಕೊಳವೊಂದನ್ನು ಸೃಷ್ಟಿಯಾಗಿದೆ. ಇಲ್ಲಿ ನೀವು ನೀರಿನಲ್ಲಿ ಆಟವಾಡಬಹುದಾಗಿದೆ.

FAQ

ಸಕಲೇಶಪುರಕ್ಕೆ ಭೇಟಿ ನೀಡಲು ಉತ್ತಮ ಸಮಯ ಯಾವುದು?

ಕರ್ನಾಟಕದ ಸಕಲೇಶಪುರಕ್ಕೆ ನವೆಂಬರ್ ನಿಂದ ಫೆಬ್ರವರಿ ತಿಂಗಳ ನಡುವೆ ಭೇಟಿ ನೀಡುವುದು ಉತ್ತಮ ಎಂದು ಹೇಳಬಹುದು.

ಸಕಲೇಶಪುರದ ವಿಶೇಷತೆ ಏನು?

ಇದು ಮನೋಲ್ಲಾಸಕರ ದೃಶ್ಯಗಳನ್ನು ಹೊಂದಿದೆ ಮತ್ತು ಇದು ಪಶ್ಚಿಮ ಘಟ್ಟಗಳ ತಳದಲ್ಲಿರುವ ಮಲೆನಾಡು ಪ್ರದೇಶದಲ್ಲಿದೆ. ಸದಾ ಹಸಿರಾಗಿರುವ ಬೆಟ್ಟ ಗುಡ್ಡದ ನಡುವೆ ಅಹ್ಲಾದಕರ ಗಾಳಿಯನ್ನು ಸೇವಿಸುತ್ತ ನಮ್ಮನ್ನು ನಾವೇ ಮರೆಯುವಂತೆ ಮಾಡುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಪ್ರವಾಸ

Uttarkashi Tour: ಪ್ರವಾಸ ಪ್ರಿಯರಿಗೆ ಸ್ವರ್ಗ ಉತ್ತರಕಾಶಿಗೆ ಹೋಗಲು ಉತ್ತಮ ಸಮಯ ಯಾವುದು?

ಹಿಮಾಲಯದ ನಿಧಿಯ ನಿಜವಾದ ಚೈತನ್ಯವನ್ನು ಅನುಭವಿಸಲು ಉತ್ತರಕಾಶಿಗೊಮ್ಮೆ ಭೇಟಿ ನೀಡಲೇಬೇಕು. ಉತ್ತರಕಾಶಿಗೆ (Uttarkashi Tour) ಭೇಟಿ ನೀಡುವ ಮುನ್ನ ಅಲ್ಲಿನ ವಿವಿಧ ಋತುಗಳ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ಇದರಿಂದ ಈ ಮಾಂತ್ರಿಕ ಸ್ಥಳಕ್ಕೆ ಅದ್ಭುತ ಪ್ರವಾಸಕ್ಕೆ ಹೋಗಲು ಉತ್ತಮ ಸಮಯ ಯಾವುದು ಎಂಬುದನ್ನು ನಿರ್ಧರಿಸಬಹುದು.

VISTARANEWS.COM


on

By

Uttarkashi Tour
Koo

ಪ್ರಕೃತಿ ಪ್ರಿಯರು (nature lovers), ಸಾಹಸ ಕ್ರೀಡೆಯನ್ನು ( adventure sports) ಇಷ್ಟಪಡುವವರು ನೀವಾಗಿದ್ದರೆ ಹಿಮಾಲಯದಲ್ಲಿ ನೆಲೆಯಾಗಿರುವ ಉತ್ತರಕಾಶಿಗೊಮ್ಮೆ (Uttarkashi Tour) ಭೇಟಿ ನೀಡಲೇಬೇಕು. ಆಧ್ಯಾತ್ಮಿಕ ಸನ್ನಿಧಿಯಲ್ಲಿ ಶಾಂತವಾದ ಪರಿಸರದಲ್ಲಿ ಕಾಲ ಕಳೆಯಲೆಂದೇ ಇಲ್ಲಿಗೆ ದೇಶ ವಿದೇಶಗಳಿಂದ ಅನೇಕ ಪ್ರವಾಸಿಗರು ಬರುತ್ತಾರೆ. ಎತ್ತರದ ಪರ್ವತ ಶಿಖರಗಳು, ಪವಿತ್ರ ದೇವಾಲಯಗಳು ಮತ್ತು ಪ್ರಾಚೀನ ನದಿಗಳೊಂದಿಗೆ ವಿಸ್ಮಯಕಾರಿ ಅನುಭವವನ್ನು ಉತ್ತರಕಾಶಿಯು ಪ್ರಯಾಣಿಕರಿಗೆ ಒದಗಿಸುತ್ತದೆ. ಹಿಮಾಲಯದ ನಿಧಿಯ ನಿಜವಾದ ಚೈತನ್ಯವನ್ನು ಅನುಭವಿಸಲು ಇಲ್ಲಿಗೊಮ್ಮೆ ಭೇಟಿ ನೀಡಲೇಬೇಕು. ಉತ್ತರಕಾಶಿಗೆ ಭೇಟಿ ನೀಡುವ ಮುನ್ನ ಅಲ್ಲಿನ ವಿವಿಧ ಋತುಗಳ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ಇದರಿಂದ ಈ ಮಾಂತ್ರಿಕ ಸ್ಥಳಕ್ಕೆ ಅದ್ಭುತ ಪ್ರವಾಸಕ್ಕೆ ಹೋಗಲು ಉತ್ತಮ ಸಮಯ ಯಾವುದು ಎಂಬುದನ್ನು ನಿರ್ಧರಿಸಬಹುದು.

ಉತ್ತರಕಾಶಿಯ ಹವಾಮಾನವು ವರ್ಷವಿಡೀ ತೀವ್ರವಾಗಿ ಬದಲಾಗುತ್ತದೆ. ಇದು ಪ್ರವಾಸಿಗರಿಗೆ ಆಸಕ್ತಿದಾಯಕವಾಗಿರುತ್ತದೆ. ಯಾಕೆಂದರೆ ಪ್ರತಿ ಋತುವಿನಲ್ಲಿ ವಿಭಿನ್ನ ಅನುಭವಗಳನ್ನು ಇದು ನೀಡುತ್ತದೆ. ಹಿಮದಿಂದ ಆವೃತವಾದ ಚಳಿಗಾಲದಿಂದ ಹಿಡಿದು ವರ್ಣರಂಜಿತ ಬೇಸಿಗೆ, ಹಚ್ಚ ಹಸಿರಿನ ಮಳೆಗಾಲದಲ್ಲಿ ಈ ಸ್ಥಳದ ಸೌಂದರ್ಯವು ಒಂದಕ್ಕಿಂತ ಒಂದು ಮಿಗಿಲು ಎನ್ನುವಂತೆ ಭಾಸವಾಗುತ್ತದೆ.

Uttarkashi Tour
Uttarkashi Tour


ಚಳಿಗಾಲ

ಉತ್ತರಾಖಂಡವು ಅಕ್ಟೋಬರ್‌ನಿಂದ ಫೆಬ್ರುವರಿ ವರೆಗೆ ಚಳಿಗಾಲದ ಹೊದಿಕೆ ಹೊದ್ದುಕೊಳ್ಳುತ್ತದೆ. ಇದು ಪ್ರದೇಶದ ಪ್ರತಿಯೊಂದು ಭಾಗವನ್ನು ಹಿಮದ ಬಿಳಿ ಹೊದಿಕೆಯಲ್ಲಿ ಮುಳುಗಿಸುತ್ತದೆ. ಶಾಂತಿ ಮತ್ತು ನೆಮ್ಮದಿಯ ವಾತಾವರಣವನ್ನು ಸೃಷ್ಟಿಸುತ್ತದೆ. ಈ ತಿಂಗಳುಗಳಲ್ಲಿ ತಾಪಮಾನವು ತುಂಬಾ ಕಡಿಮೆಯಾಗುತ್ತದೆ. ಹೀಗಾಗಿ ಕೆಲವರಿಗೆ ಇದು ಪ್ರವಾಸಕ್ಕೆ ಯೋಗ್ಯವಾದ ಸಮಯವಾಗುವುದಿಲ್ಲ. ಹಿಮದ ನಡುವೆ ಏಕಾಂತತೆಯನ್ನು ಬಯಸುವ ಅಥವಾ ಸ್ಕೀಯಿಂಗ್ ಅಥವಾ ಸ್ನೋಬೋರ್ಡಿಂಗ್‌ನಂತಹ ಚಟುವಟಿಕೆಗಳಲ್ಲಿ ತೊಡಗಲು ಬಯಸುವವರು ಈ ಸಂದರ್ಭದಲ್ಲಿ ಭೇಟಿ ನೀಡಬಹುದು.


ವಸಂತ

ಮಾರ್ಚ್ ನಿಂದ ಮೇ ತಿಂಗಳಲ್ಲಿ ವಸಂತಕಾಲ. ಉತ್ತರಕಾಶಿಯ ಸಂಪೂರ್ಣ ಸುತ್ತಮುತ್ತಲಿನ ಪ್ರದೇಶವು ಸ್ವರ್ಗವಾಗಿ ರೂಪಾಂತರಗೊಳ್ಳುತ್ತದೆ. ಎಲ್ಲದಕ್ಕೂ ಹೊಸ ಜೀವ ಬಂದಂತೆ ಕಾಣುತ್ತದೆ. ಹೇರಳವಾಗಿ ಅರಳುವ ರೋಡೋಡೆಂಡ್ರಾನ್ ಹೂವುಗಳೊಂದಿಗೆ ತಾಪಮಾನ ಹಿತವಾಗಿರುತ್ತದೆ. ಪ್ರಕೃತಿಯ ನಡುವೆ ನಡಿಗೆ, ಚಾರಣ, ಛಾಯಾಗ್ರಹಣ ಇತ್ಯಾದಿಗಳಿಗೆ ಇದು ಸೂಕ್ತ ಸಮಯವಾಗಿದೆ. ಸ್ಪಷ್ಟವಾದ ಆಕಾಶದ ಸಮಯದಲ್ಲಿ ಹಿಮದಿಂದ ಆವೃತವಾದ ಶಿಖರಗಳ ಅತ್ಯುತ್ತಮ ನೋಟವನ್ನು ಒದಗಿಸುತ್ತದೆ. ಆಹ್ಲಾದಕರ ವಾತಾವರಣವು ಪವಿತ್ರ ಚಾರ್ ಧಾಮ್ ಯಾತ್ರೆಯನ್ನು ಕೈಗೊಳ್ಳಲು ಯಾತ್ರಿಕರನ್ನು ಉತ್ತೇಜಿಸುತ್ತದೆ.

Uttarkashi Tour
Uttarkashi Tour


ಬೇಸಿಗೆ

ಬೇಸಿಗೆಯಲ್ಲಿ ಅಂದರೆ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಉತ್ತರಕಾಶಿಯು ಬೆಚ್ಚಗಿನ ಹಗಲು ಮತ್ತು ರಾತ್ರಿಗಳನ್ನು ಉಂಟು ಮಾಡುತ್ತದೆ. ಆದರೂ ಮರುಕಳಿಸುವ ಮಳೆಯು ಸುಡುವ ಶಾಖದಿಂದ ಪರಿಹಾರವನ್ನು ನೀಡುತ್ತದೆ. ಹೀಗಾಗಿ ಈ ಅವಧಿಯು ವಿವಿಧ ರೀತಿಯ ಹೊರಾಂಗಣ ಚಟುವಟಿಕೆಗಳನ್ನು ಕೈಗೊಳ್ಳಲು ಸೂಕ್ತವಾಗಿದೆ.

ವಿಶೇಷವಾಗಿ ಹೆಚ್ಚಿನ ಎತ್ತರದಲ್ಲಿ ತಂಪಾದ ಗಾಳಿಯು ಹಗಲು ಮತ್ತು ರಾತ್ರಿಯಿಡೀ ಬೀಸುತ್ತದೆ, ಟ್ರೆಕ್ಕಿಂಗ್, ತೀರ್ಥಯಾತ್ರೆ ಪ್ರವಾಸಗಳಿಗೆ ಸಾಕಷ್ಟು ತಂಪಾಗಿರುವುದಿಲ್ಲ. ಆದರೆ ಭಾರೀ ಮಳೆಯಿಂದಾಗಿ ಭೂಕುಸಿತಗಳು ಸಂಭವಿಸಬಹುದು, ಇದರಿಂದಾಗಿ ರಸ್ತೆ ತಡೆ ಇತ್ಯಾದಿ ಸಮಸ್ಯೆಗಳನ್ನು ಉಂಟುಮಾಡಬಹುದು.

ಯಾವಾಗ ಉತ್ತಮ ಸಮಯ ?

ಹವಾಮಾನ ಪರಿಸ್ಥಿತಿಗಳು ಮತ್ತು ಪ್ರವಾಸಿಗರ ಹರಿವನ್ನು ಗಮನದಲ್ಲಿಟ್ಟುಕೊಂಡು ಮಾರ್ಚ್ ನಿಂದ ಮೇ ವರೆಗೆ ಅಂದರೆ ವಸಂತ ಋತುವನ್ನು ಉತ್ತರಕಾಶಿಗೆ ಭೇಟಿ ನೀಡಲು ಉತ್ತಮ ಸಮಯವೆಂದು ಪರಿಗಣಿಸಲಾಗಿದೆ. ಇದಕ್ಕೆ ಹಲವು ಕಾರಣಗಳೂ ಇವೆ.

ಆಹ್ಲಾದಕರ ಹವಾಮಾನ

ಈ ತಿಂಗಳುಗಳಲ್ಲಿ ತಾಪಮಾನ ಸೌಮ್ಯವಾಗಿರುತ್ತದೆ. ಟ್ರೆಕ್ಕಿಂಗ್, ಕ್ಯಾಂಪಿಂಗ್, ದೃಶ್ಯವೀಕ್ಷಣೆಯ ಮೂಲಕ ಹೊರಗಿನ ಪ್ರಪಂಚವನ್ನು ಆನಂದಿಸಲು ಅದ್ಭುತ ಅವಕಾಶಗಳನ್ನು ಸೃಷ್ಟಿಸುತ್ತದೆ. ಚಳಿಗಾಲದ ಶೀತ ಅಥವಾ ಬೇಸಿಗೆಯ ಬಿಸಿಲಿನ ಕಾರಣದಿಂದ ಪ್ರವಾಸ ಮಾಡಲಾಗದವರು ಈ ಸಮಯವನ್ನು ಉತ್ತರ ಕಾಶಿಗೆ ಭೇಟಿ ನೀಡಲು ಆಯ್ದುಕೊಳ್ಳಬಹುದು.

ಹೂಬಿಡುವ ಸಸ್ಯವರ್ಗ

ಈ ಅವಧಿಯಲ್ಲಿ ಉತ್ತರಾಖಂಡದ ಬೆಟ್ಟಗಳು ರೋಡೋಡೆಂಡ್ರಾನ್ ಹೂವುಗಳಿಂದ ತುಂಬಿರುತ್ತದೆ. ಮುಖ್ಯವಾಗಿ ಕೆಂಪು, ಗುಲಾಬಿ ಮತ್ತು ಬಿಳಿ ಬಣ್ಣಗಳಿಂದ ಚಿತ್ರ ಬಿಡಿಸಿದಂತೆ ಭಾಸವಾಗುತ್ತದೆ. ಅನೇಕ ಪ್ರಕೃತಿ ಪ್ರೇಮಿಗಳು, ಛಾಯಾಗ್ರಾಹಕರನ್ನು ಸೆಳೆಯುತ್ತದೆ.


ಚಾರ್ ಧಾಮ್ ಯಾತ್ರೆ

ವಸಂತಕಾಲವು ಚಾರ್ ಧಾಮ್ ಯಾತ್ರೆಯ ಆರಂಭವನ್ನು ಸೂಚಿಸುತ್ತದೆ. ನಾಲ್ಕು ಪವಿತ್ರ ಕ್ಷೇತ್ರಗಳಾದ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥವನ್ನು ಇದು ಒಳಗೊಂಡಿದೆ.

ವಾಕ್‌ಬೌಟ್‌ಗಳಿಗೆ ಅವಕಾಶಗಳು

ಹಿಮವು ಕರಗಿ ನಡೆಯಲು ಅನೇಕ ಹಾದಿಗಳನ್ನು ತೆರೆಯುತ್ತದೆ. ಚಾರಣಿಗರು ಇದರ ಪ್ರಯೋಜನ ಪಡೆಯಬಹುದು. ಅಲ್ಲದೇ ಈ ಸಮಯದಲ್ಲಿ ದಯಾರಾ ಬುಗ್ಯಾಲ್, ದೋಡಿತಾಲ್ ಸರೋವರ, ಅಥವಾ ಗಂಗೋತ್ರಿ ರಾಷ್ಟ್ರೀಯ ಉದ್ಯಾನಕ್ಕೂ ಭೀತಿ ನೀಡಬಹುದು.

ಪ್ರಯಾಣಕ್ಕೆ ಹೊರಡುವ ಮುನ್ನ

ಉತ್ತರಕಾಶಿಗೆ ಭೇಟಿ ನೀಡುವ ಮುನ್ನ ಕೆಲವೊಂದು ವಿಷಯಗಳು ನೆನಪಿನಲ್ಲಿರಲಿ.

ಸ್ಮಾರ್ಟ್ ಪ್ಯಾಕ್ ಮಾಡಿ

ಯಾವ ಋತುವಿನಲ್ಲಿ ಭೇಟಿ ನೀಡುತ್ತಿರೋ ಅದಕ್ಕೆ ತಕ್ಕುದಾಗಿ ಬ್ಯಾಗ್ ಪ್ಯಾಕ್ ಮಾಡಿ. ಅಗತ್ಯವಿದ್ದರೆ ಬೆಚ್ಚಗಿನ ಬಟ್ಟೆಗಳನ್ನು ಇರಿಸಿಕೊಳ್ಳಿ. ಸನ್ ಗ್ಲಾಸ್, ಗಟ್ಟಿಮುಟ್ಟಾದ ಹೈಕಿಂಗ್ ಬೂಟುಗಳು ಇರಲಿ.

ಇದನ್ನೂ ಓದಿ: Hyderabad Tour: ಹೈದರಾಬಾದ್‌ನ ಈ 10 ಅದ್ಭುತ ತಾಣಗಳು ಫೋಟೋಶೂಟ್‌ಗೆ ಹೇಳಿಮಾಡಿಸಿದಂತಿವೆ!

ಹವಾಮಾನ ಅಪ್‌ಡೇಟ್‌

ಹವಾಮಾನ ಮುನ್ಸೂಚನೆ ಮತ್ತು ರಸ್ತೆಯ ಸ್ಥಿತಿಗತಿಗಳ ಮೇಲೆ ಗಮನವಿರಲಿ. ವಿಶೇಷವಾಗಿ ಮಾನ್ಸೂನ್ ಸಮಯದಲ್ಲಿ. ಯಾಕೆಂದರೆ ಇದು ಪ್ರಯಾಣಿಸುವ ಸಮಯ, ದಾರಿಯ ಬಗ್ಗೆ ಸ್ಪಷ್ಟ ಸೂಚನೆಯನ್ನು ನೀಡುತ್ತದೆ.

ಸ್ಥಳೀಯ ಪದ್ಧತಿಗಳನ್ನು ಗೌರವಿಸಿ

ಉತ್ತರಕಾಶಿ ಒಂದು ಭಕ್ತಿ, ಸಂಪ್ರದಾಯದ ಕೇಂದ್ರವಾಗಿದೆ. ಹೀಗಾಗಿ ಇಲ್ಲಿಗೆ ಭೇಟಿ ನೀಡುವಾಗ ಸ್ಥಳೀಯ ಸಂಸ್ಕೃತಿಯನ್ನು ಗೌರವಿಸಿ ಮತ್ತು ಅಲ್ಲಿನ ಸಂಪ್ರದಾಯ, ನಿಯಮಗಳನ್ನು ಪಾಲಿಸಿ.

Continue Reading

ದೇಶ

Krishna Janmastami 2024: ಭೇಟಿ ನೀಡಲೇಬೇಕಾದ ವಿಶ್ವ ಪ್ರಸಿದ್ಧ 5 ಕೃಷ್ಣ ದೇವಾಲಯಗಳಿವು

ದೇಶಾದ್ಯಂತ ಕೃಷ್ಣ ಜನ್ಮಾಷ್ಟಮಿಯನ್ನು (Krishna janmastami 2024) ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಕೆಲವು ಕೃಷ್ಣನ ದೇಗುಲಗಳು ಇದರ ಆಚರಣೆಗೆ ವಿಶ್ವ ಪ್ರಸಿದ್ಧಿಯನ್ನು ಗಳಿಸಿವೆ. ಜನ್ಮಾಷ್ಟಮಿ ಸಮಯದಲ್ಲಿ ಅತ್ಯಂತ ಸುಂದರವಾಗಿ ಅಲಂಕರಿಸಲ್ಪಡುವ ಆ ದೇವಾಲಯಗಳು ಯಾವುದು, ಎಲ್ಲಿದೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

Krishna Janmastami 2024
Koo

ಕೃಷ್ಣನ ಜನ್ಮದಿನವನ್ನು ಸೋಮವಾರದಿಂದ ಮೂರು ದಿನಗಳ ಕಾಲ ದೇಶಾದ್ಯಂತ ಆಚರಿಸಲಾಗುತ್ತದೆ. ಜನ್ಮಾಷ್ಟಮಿಯ (Krishna janmastami 2024) ಈ ವಿಶೇಷ ಸಂದರ್ಭದಲ್ಲಿ ಭೇಟಿ ನೀಡಬಹುದಾದ ದೇಶದ ಐದು ಸುಪ್ರಸಿದ್ಧ ಶ್ರೀಕೃಷ್ಣ ದೇವಾಲಯಗಳಿವೆ (sri krishna temple). ಇಲ್ಲಿ ಶ್ರೀಕೃಷ್ಣನ ಜನ್ಮಾಷ್ಟಮಿಯು (janmastami) ಅತ್ಯಂತ ವೈಭವಾಗಿ ನಡೆಯುತ್ತದೆ.

Krishna janmastami
Krishna janmastami


1. ದ್ವಾರಕಾಧೀಶ ದೇವಾಲಯ, ದ್ವಾರಕಾ

ಗುಜರಾತಿನ ದ್ವಾರಕಾದಲ್ಲಿರುವ ದ್ವಾರಕಾಧೀಶ ದೇವಾಲಯವನ್ನು ಜಗತ್ ಮಂದಿರ ಎಂದೂ ಕರೆಯಲಾಗುತ್ತದೆ. ದ್ವಾರಕಾಧೀಶ ದೇವಾಲಯವನ್ನು 2,500 ವರ್ಷಗಳ ಹಿಂದೆ ಶ್ರೀಕೃಷ್ಣನ ಮೊಮ್ಮಗ ವಜ್ರನಾಭ್ ಸ್ಥಾಪಿಸಿದನೆಂದು ನಂಬಲಾಗಿದೆ. ಸಣ್ಣ ಬೆಟ್ಟದ ಮೇಲಿರುವ ಈ ದೇವಾಲಯವನ್ನು ಭಕ್ತರು 50 ಮೆಟ್ಟಿಲುಗಳನ್ನು ಹತ್ತಿ ತಲುಪಬಹುದು. ಈ ದೇವಾಲಯಕ್ಕೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಜನ್ಮಾಷ್ಟಮಿ. ಈ ಸಂದರ್ಭದಲ್ಲಿ ದೇವಾಲಯಕ್ಕೆ ಅತ್ಯಂತ ಸುಂದರವಾಗಿ ಅಲಂಕಾರ ಮಾಡಲಾಗುತ್ತದೆ.


2. ಶ್ರೀ ಕೃಷ್ಣ ಜನ್ಮಸ್ಥಾನ ದೇವಾಲಯ, ಮಥುರಾ

ಉತ್ತರ ಪ್ರದೇಶದ ಮಥುರಾದಲ್ಲಿ ಶ್ರೀ ಕೃಷ್ಣ ಜನ್ಮಸ್ಥಾನ ದೇವಾಲಯವಿದೆ. ಇದು ಶ್ರೀಕೃಷ್ಣನ ತಂದೆತಾಯಿಗಳಾದ ವಸುದೇವ ಮತ್ತು ದೇವಕಿಯನ್ನು ಅವನ ಮಾವ ಕಂಸನಿಂದ ಬಂಧಿಸಲಾಗಿದೆ ಎನ್ನಲಾಗುವ ಸ್ಥಳದಲ್ಲಿ ನಿರ್ಮಿಸಲಾಗಿದೆ. ದೇವಾಲಯದ ಸಂಕೀರ್ಣವು ಶ್ರೀಕೃಷ್ಣನಿಗೆ ಸಮರ್ಪಿತವಾದ ಹಲವಾರು ದೇವಾಲಯಗಳನ್ನು ಒಳಗೊಂಡಿದೆ. ಇಲ್ಲಿ ಜನ್ಮಾಷ್ಟಮಿ ಸಮಯದಲ್ಲಿ ಸುಂದವಾಗಿ ಅಲಂಕರಿಸಲಾಗುತ್ತದೆ.


3. ಬಂಕೆ ಬಿಹಾರಿ ದೇವಾಲಯ, ಉತ್ತರ ಪ್ರದೇಶ

ಉತ್ತರ ಪ್ರದೇಶದ ವೃಂದಾವನದಲ್ಲಿರುವ ಬಂಕೆ ಬಿಹಾರಿ ದೇವಾಲಯವು ಭಾರತದಲ್ಲಿನ ಶ್ರೀಕೃಷ್ಣನ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಇದು ವೃಂದಾವನದ ಏಳು ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಜನ್ಮಾಷ್ಟಮಿ ಆಚರಣೆಯ ಸಮಯದಲ್ಲಿ ಭಕ್ತರು ಸಾಂಪ್ರದಾಯಿಕವಾದ ಬಂಕೆ ಬಿಹಾರಿಯಲ್ಲಿ ಮಂಗಳ ಆರತಿಯಲ್ಲಿ ಪಾಲ್ಗೊಳ್ಳಬಹುದು. ಇಲ್ಲಿ ದೇವರ ದರ್ಶನವು ಮಧ್ಯಾಹ್ನ ಎರಡು ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ಮರುದಿನ ಬೆಳಗ್ಗೆ ಆರು ಗಂಟೆಯವರೆಗೆ ಮುಂದುವರಿಯುತ್ತದೆ.


4. ಗುರುವಾಯೂರು ಕೃಷ್ಣ ದೇವಾಲಯ, ಕೇರಳ

ದಕ್ಷಿಣದ ದ್ವಾರಕಾ ಎಂದೂ ಕರೆಯಲ್ಪಡುವ ಐತಿಹಾಸಿಕ ಕೃಷ್ಣ ದೇವಾಲಯವು ಕೇರಳದ ಗುರುವಾಯೂರಿನಲ್ಲಿದೆ. ಇದು ಇಂದಿಗೂ ಭಾರತದ ಅತ್ಯಂತ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಮುಖ್ಯ ದೇವಾಲಯವನ್ನು 1638ರಲ್ಲಿ ಪುನರ್ನಿರ್ಮಿಸಲಾಯಿತು ಎನ್ನಲಾಗುತ್ತದೆ. ದೇವಾಲಯದ ಒಳಾಂಗಣ ವಿನ್ಯಾಸ ಮತ್ತು ವಾಸ್ತುಶಿಲ್ಪದ ಶೈಲಿಯು ಪ್ರವಾಸಿಗರಿಗೆ ವಿಶೇಷವಾಗಿ ಕೃಷ್ಣ ಜನ್ಮಾಷ್ಟಮಿ ಸಮಯದಲ್ಲಿ ಅತ್ಯಂತ ಸುಂದರ ಅನುಭವವನ್ನು ನೀಡುತ್ತದೆ.

ಇದನ್ನೂ ಓದಿ: Lakshadweep Tour: ಲಕ್ಷದ್ವೀಪದಲ್ಲಿ ಪ್ರವಾಸಿಗರನ್ನು ಸೆಳೆಯುವ ಪಂಚರತ್ನಗಳಿವು


5. ಉಡುಪಿ ಶ್ರೀ ಕೃಷ್ಣ ಮಠ

ನಮ್ಮ ರಾಜ್ಯದ ಉಡುಪಿಯ ಶ್ರೀಕೃಷ್ಣ ದೇವಾಲಯವು ಒಂದು ಅಪ್ರತಿಮ ಯಾತ್ರಾಸ್ಥಳವಾಗಿದೆ. ಶ್ರೀಕೃಷ್ಣನ ಸುಂದರವಾದ ವಿಗ್ರಹವೊಂದು ಅಲ್ಲಿ ಸ್ಥಾಪಿಸಲಾಗಿದೆ. ಜನ್ಮಾಷ್ಟಮಿ ಸಮಯದಲ್ಲಿ ಭವ್ಯವಾಗಿ ದೇವಾಲಯವನ್ನು ಅಲಂಕರಿಸಲಾಗುತ್ತದೆ. ವಿಗ್ರಹವನ್ನು ಒಂಬತ್ತು ರಂಧ್ರಗಳ ಕಿಟಕಿ ಅಥವಾ ನವಗ್ರಹ ಕಿಟಿಕಿ ಮೂಲಕವೂ ಭಕ್ತರು ನೋಡುತ್ತಾರೆ. ವಿಟ್ಲ ಪಿಂಡಿ ಉತ್ಸವ ಮತ್ತು ಮೊಸರು ಕುಡಿಕೆ ಇಲ್ಲಿಯ ವಿಶೇಷ ಆಕರ್ಷಣೆ. ಹುಲಿ ವೇಷ ಕುಣಿತ ಜನರನ್ನು ರಂಜಿಸುತ್ತದೆ.

Continue Reading

ಪ್ರವಾಸ

Hyderabad Tour: ಹೈದರಾಬಾದ್‌ನ ಈ 10 ಅದ್ಭುತ ತಾಣಗಳು ಫೋಟೋಶೂಟ್‌ಗೆ ಹೇಳಿಮಾಡಿಸಿದಂತಿವೆ!

ಶ್ರೀಮಂತ ಇತಿಹಾಸ, ಸಂಸ್ಕೃತಿ ಮತ್ತು ಆಧುನಿಕತೆಯಿಂದಾಗಿ ಛಾಯಾಗ್ರಹಣಕ್ಕೆ ಅಸಂಖ್ಯಾತ ಅವಕಾಶಗಳನ್ನು ಒದಗಿಸುವ ನಗರ ಹೈದರಾಬಾದ್ (Hyderabad Tour). ಪುರಾತನ ಸ್ಮಾರಕ, ಬಿಡುವಿಲ್ಲದ ಮಾರುಕಟ್ಟೆ, ಶಾಂತಿಯುತ ಪರಿಸರ ಹೀಗೆ ಇಲ್ಲಿನ ಪ್ರತಿಯೊಂದು ಪ್ರದೇಶವೂ ಛಾಯಾಗ್ರಾಹಕರನ್ನು ಸೆಳೆಯುವುದು. ಕೆಮರಾ ಲೆನ್ಸ್ ಮೂಲಕ ಸುಂದರ ನಗರದ ಕಥೆಯನ್ನು ಇಲ್ಲಿ ಹೆಣೆಯಬಹುದು. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

By

Hyderabad Tour
Koo

ಸುಂದರವಾಗಿ ಫೋಟೋಶೂಟ್ (photoshoot) ಮಾಡಿಕೊಳ್ಳಬೇಕು, ಜೊತೆಗೆ ಒಂದಷ್ಟು ಪ್ರವಾಸದ (tour guide) ಸವಿಯನ್ನು ಅನುಭವಿಸಬೇಕು ಎಂದು ಬಯಸುವವರು ತೆಲಂಗಾಣದ ರಾಜಧಾನಿ ಹೈದರಾಬಾದ್‌ಗೆ (Hyderabad Tour) ಭೇಟಿ ನೀಡಬಹುದು. ಇಲ್ಲಿ ಅತಂತ್ಯ ಸುಂದರವಾದ ಕ್ಷಣಗಳನ್ನು ಸೆರೆಹಿಡಿಯಬಹುದು. ಶ್ರೀಮಂತ ಐತಿಹಾಸಿಕ ಭೂತಕಾಲ ಮತ್ತು ಆಧುನಿಕ ನಗರ ಭೂದೃಶ್ಯದ ಮಿಶ್ರಣವಾಗಿರುವ ಈ ಪ್ರದೇಶ ಉತ್ತಮ ಛಾಯಾಗ್ರಹಣದ ಆಯ್ಕೆಗಳನ್ನು ನೀಡುತ್ತದೆ.

ಪ್ರಾಚೀನ ವಾಸ್ತುಶಿಲ್ಪ, ಬಿಡುವಿಲ್ಲದ ಮಾರುಕಟ್ಟೆಗಳು, ಶಾಂತಿಯುತ ಸರೋವರ, ಉತ್ಸಾಹಭರಿತ ಬೀದಿಗಳು ಹೈದರಾಬಾದ್ ನಲ್ಲಿ ಛಾಯಾಗ್ರಾಹಣಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಹೊಂದಿದೆ. ನಗರದೊಳಗಿನ ಈ ಕೆಲವು ಪ್ರಮುಖ ತಾಣಗಳಲ್ಲಿ ಉತ್ತಮ ಛಾಯಾಚಿತ್ರಗಳನ್ನು ಪಡೆಯಬಹುದು.


ಚಾರ್‌ ಮಿನಾರ್‌

ಹಳೆಯ ನಗರದ ಹೃದಯಭಾಗದಲ್ಲಿರುವ ಚಾರ್ ಮಿನಾರ್‌ ಹೈದರಾಬಾದ್‌ನ ಪರಂಪರೆ ಮತ್ತು ಇತಿಹಾಸವನ್ನು ಸಂಕೇತಿಸುವ ವಾಸ್ತು ಶಿಲ್ಪದ ಐಕಾನ್ ಆಗಿದೆ. 1591ರಲ್ಲಿ ನಿರ್ಮಿಸಲಾದ ನಾಲ್ಕು ಸೊಗಸಾದ ಮಿನಾರ್‌ಗಳು ಮತ್ತು ಕಮಾನುಗಳು ರಾತ್ರಿಯಲ್ಲಿ ವಿದ್ಯುತ್ ದೀಪಗಳ ಬೆಳಕಿನಲ್ಲಿ ಕಂಗೊಳಿಸುತ್ತದೆ. ಚಾರ್ಮಿನಾರ್ ಸುತ್ತಮುತ್ತಲಿನ ಪ್ರದೇಶವು ವರ್ಣರಂಜಿತ ಬಜಾರ್‌ಗಳು ಮತ್ತು ಸಂಕೀರ್ಣವಾದ ಕಟ್ಟಡಗಳಿಂದ ಸುತ್ತುವರಿದಿದೆ.

Hyderabad Tour
Hyderabad Tour


ಗೋಲ್ಕೊಂಡ ಕೋಟೆ

ಹಳೆಯ ವಾಸ್ತುಶಿಲ್ಪ ಮತ್ತು ವಿಹಂಗಮ ನೋಟಗಳನ್ನು ಇಷ್ಟಪಡುವುದಾದರೆ ಗೋಲ್ಕೊಂಡ ಕೋಟೆಯು ಈ ಎರಡನ್ನೂ ಸಂಪೂರ್ಣವಾಗಿ ಸಂಯೋಜಿಸುತ್ತದೆ. 13ನೇ ಶತಮಾನಕ್ಕಿಂತ ಹಿಂದಿನ ಈ ಕೋಟೆಯು ಬೆರಗುಗೊಳಿಸುವ ಪಾಳುಬಿದ್ದ ಅರಮನೆಗಳು, ಗೇಟ್‌ವೇಗಳು ಮತ್ತು ಅವುಗಳ ಕೆಳಗೆ ನಗರಗಳ ಸುಂದರ ದೃಶ್ಯಗಳನ್ನು ಪ್ರಸ್ತುತಪಡಿಸುತ್ತದೆ. ಸೂರ್ಯಾಸ್ತದ ಸಮಯದಲ್ಲಿ ಅಥವಾ ಮುಂಜಾನೆ ಈ ಕೋಟೆಯ ಮೇಲಿನ ಈ ನೋಟಗಳನ್ನು ಛಾಯಾಗ್ರಾಹಕರು ಅದ್ಭುತವಾಗಿ ಸೆರೆಹಿಡಿಯಬಹುದು.


ಹುಸೇನ್ ಸಾಗರ್ ಕೆರೆ

ಹುಸೇನ್ ಸಾಗರ್ ಕೆರೆ ಭಾರತದ ಅತಿದೊಡ್ಡ ಮಾನವ ನಿರ್ಮಿತ ಜಲಮೂಲಗಳಲ್ಲಿ ಒಂದಾಗಿದೆ. ಜಿಬ್ರಾಲ್ಟರ್ ರಾಕ್‌ನಲ್ಲಿ ಬುದ್ಧನ ಪ್ರತಿಮೆಯನ್ನು ಹೊಂದಿರುವ ಈ ಕೃತಕ ಸರೋವರದ ಮೇಲೆ ಸೂರ್ಯೋದಯ ಅಥವಾ ಸೂರ್ಯಾಸ್ತದ ವೇಳೆ ಪ್ರಶಾಂತವಾದ ನೀರಿನಲ್ಲಿ ದೋಣಿಗಳು ನೌಕಾಯಾನ ಮಾಡುತ್ತಿರುವ ಸುಂದರ ದೃಶ್ಯಗಳನ್ನು ಕಾಣಬಹುದು.


ಕುತುಬ್ ಶಾಹಿ ಗೋರಿಗಳು

ಗೋಲ್ಕೊಂಡಾ ಕೋಟೆಯ ಸಮೀಪದಲ್ಲಿರುವ ಕುತುಬ್ ಶಾಹಿ ಗೋರಿಗಳ ಸೊಗಸಾದ ಗುಮ್ಮಟಗಳು, ಉತ್ತಮ ಕೆತ್ತನೆಗಳು ಮತ್ತು ಶಾಂತಿಯುತ ಪರಿಸರ ಛಾಯಾಗ್ರಾಹಕರಿಗೆ ಸಂತೋಷವನ್ನು ಕೊಡುತ್ತದೆ. 16 ಮತ್ತು 17ನೇ ಶತಮಾನಗಳಲ್ಲಿ ನಿರ್ಮಿಸಲಾದ ಈ ಗೋರಿಗಳು ಪರ್ಷಿಯನ್ ಮತ್ತು ಭಾರತೀಯ ವಿನ್ಯಾಸಗಳ ಮಿಶ್ರಣವನ್ನು ಪ್ರದರ್ಶಿಸುತ್ತವೆ. ಇದು ಮ್ಯಾಕ್ರೋ ಶಾಟ್‌ಗಳು ಮತ್ತು ವೈಡ್ ಆಂಗಲ್ ಎರಡನ್ನೂ ಶೂಟ್ ಮಾಡಲು ಸಾಧ್ಯವಾಗಿಸುತ್ತದೆ.


ಲಾಡ್ ಬಜಾರ್ ಅಥವಾ ಚೂಡಿ ಬಜಾರ್

ಹೈದರಾಬಾದ್‌ನ ಜನಪ್ರಿಯ ಮಾರುಕಟ್ಟೆ ಲಾಡ್ ಬಜಾರ್ ಸಾಂಪ್ರದಾಯಿಕ ಬಳೆಗಳು, ಬಟ್ಟೆಗಳು, ಬೀದಿ ಆಹಾರಗಳು ಇತ್ಯಾದಿಗಳಿಗೆ ಹೆಸರುವಾಸಿಯಾಗಿದೆ. ಬಿಡುವಿಲ್ಲದ ವಾತಾವರಣ, ಬಳೆ ಪ್ರಭೇದಗಳು ಮತ್ತು ಸಂಕೀರ್ಣವಾದ ಸ್ಥಳೀಯ ಕರಕುಶಲತೆಯು ಇಲ್ಲಿ ಛಾಯಾಗ್ರಾಹಕರನ್ನು ಸೆಳೆಯುತ್ತದೆ. ರಸ್ತೆಯಲ್ಲಿ ಫೋಟೋಗಳನ್ನು ತೆಗೆದುಕೊಳ್ಳಲು ಇಷ್ಟಪಡುವವರಿಗೆ ಜನರಿಂದ ತುಂಬಿರುವ ಈ ಕಿರಿದಾದ ಹಾದಿಗಳು ಸಾಂಸ್ಕೃತಿಕ ಬಫೆಗಳಂತಿವೆ.


ನೆಹರು ಝೂಲಾಜಿಕಲ್ ಪಾರ್ಕ್

ವನ್ಯಜೀವಿ ಮತ್ತು ಪ್ರಕೃತಿ ಛಾಯಾಗ್ರಾಹಕರಿಗೆ ನೆಹರು ಝೂಲಾಜಿಕಲ್ ಪಾರ್ಕ್ ವಿವಿಧ ವಿಷಯಗಳನ್ನು ಒದಗಿಸುತ್ತದೆ. ಪಕ್ಷಿಗಳು ಅಥವಾ ಸರೀಸೃಪಗಳಂತಹ ಪ್ರಾಣಿಗಳು ಈ ಮೃಗಾಲಯದಲ್ಲಿದೆ. ಮುಂಜಾನೆಯ ಸಮಯವು ವನ್ಯಜೀವಿ ಛಾಯಾಗ್ರಾಹಕರಿಗೆ ಅಗತ್ಯವಿರುವ ಮೃದುವಾದ ಬೆಳಕನ್ನು ಒದಗಿಸುತ್ತದೆ.


ರಾಮೋಜಿ ಫಿಲ್ಮ್ ಸಿಟಿ

ಪ್ರಪಂಚದಲ್ಲೇ ಅತಿ ದೊಡ್ಡ ಫಿಲ್ಮ್ ಸ್ಟುಡಿಯೋ ಸಂಕೀರ್ಣ ರಾಮೋಜಿ ಫಿಲ್ಮ್ ಸಿಟಿ ಛಾಯಾಗ್ರಾಹಕರಿಗೆ ವಿವಿಧ ಹಿನ್ನೆಲೆಗಳನ್ನು ಒದಗಿಸುತ್ತದೆ. ವಿಷಯಾಧಾರಿತ ಸೆಟ್‌ಗಳು, ಉದ್ಯಾನ ಅಥವಾ ವಿಸ್ತಾರವಾದ ಚಲನಚಿತ್ರ ರಂಗಪರಿಕರ, ರಾಮೋಜಿಯ ಪ್ರತಿ ಇಂಚು ಸಿನಿಮೀಯ ಪರಿಣಾಮ ಅಥವಾ ನಾಟಕೀಯ ಸಂಯೋಜನೆಗಳನ್ನು ರಚಿಸಲು ಅವಕಾಶವನ್ನು ನೀಡುತ್ತದೆ. ಆಧುನಿಕ ಭೂದೃಶ್ಯ ಅಥವಾ ಪ್ರಾಚೀನ ಅರಮನೆಗಳ ಹಿನ್ನೆಲೆಯನ್ನೂ ಇಲ್ಲಿ ಪಡೆಯಬಹುದು.


ಬುದ್ಧನ ಪ್ರತಿಮೆ

ಬೃಹತ್ ಬುದ್ಧನ ಪ್ರತಿಮೆಯು ಹುಸೇನ್ ಸಾಗರ್ ಸರೋವರದ ದ್ವೀಪದಲ್ಲಿದೆ. ಇದು ಹೈದರಾಬಾದ್ ನಗರದ ಹೆಗ್ಗುರುತುಗಳಲ್ಲಿ ಒಂದಾಗಿದೆ. ಪ್ರಶಾಂತವಾದ ನೀರಿನ ಮೇಲೆ ಬುದ್ಧನ ಪ್ರತಿಬಿಂಬವನ್ನು ಸೆರೆಹಿಡಿಯಬಹುದು. ಹತ್ತಿರದಲ್ಲಿರುವ ಸಣ್ಣಸಣ್ಣ ವಿವರಗಳ ಮೇಲೆಯೂ ಛಾಯಾಚಿತ್ರ ತೆಗೆಯಲು ಆದ್ಯತೆ ನೀಡಬಹುದು. ಪ್ರತಿಮೆಯನ್ನು ಹಿನ್ನೆಲೆಯಾಗಿಯೂ ಬಳಸಿಕೊಳ್ಳಬಹುದು.


ಎನ್‌ಟಿಆರ್ ಗಾರ್ಡನ್ಸ್

ಎನ್‌ಟಿಆರ್ ಉದ್ಯಾನ ಸುಂದರ ಭೂದೃಶ್ಯ, ಸಂಗೀತ ಕಾರಂಜಿ ಮತ್ತು ಮನರಂಜನಾ ಪ್ರದೇಶಗಳ ಸಂಯೋಜನೆಯಾಗಿದ್ದು ರೋಮಾಂಚಕ ಬಣ್ಣಗಳು ಮತ್ತು ಸಂತೋಷದಾಯಕ ಕ್ಷಣಗಳನ್ನು ಸೆರೆ ಹಿಡಿಯಲು ಸರಿಯಾದ ಸ್ಥಳವಾಗಿದೆ. ಉದ್ಯಾನದ ಮೈದಾನದಲ್ಲಿ ಛಾಯಾಗ್ರಾಹಕರನ್ನು ಸೆಳೆಯುವ ನೀರಿನ ಕ್ಯಾಸ್ಕೇಡ್‌ಗಳು, ಹೂವಿನ ಪ್ರದರ್ಶನಗಳು, ಆಟದ ಕಾರಿಡಾರ್‌ಗಳಂತಹ ವಿವಿಧ ಆಕರ್ಷಣೆಗಳನ್ನು ಹೊಂದಿದೆ.

ಇದನ್ನೂ ಓದಿ: Shimla For Honeymoon: ಹನಿಮೂನ್‍ ಜೋಡಿಗಳ ರೊಮ್ಯಾನ್ಸ್‌ ಹೆಚ್ಚಿಸುತ್ತವೆ ಶಿಮ್ಲಾದ ಈ ತಾಣಗಳು!


ಬಂಜಾರಾ ಹಿಲ್ಸ್ ಮತ್ತು ಜುಬಿಲಿ ಹಿಲ್ಸ್‌ನಲ್ಲಿ ಸ್ಟ್ರೀಟ್ ಆರ್ಟ್

ಬಂಜಾರಾ ಹಿಲ್ಸ್ ಮತ್ತು ಜುಬಿಲಿ ಹಿಲ್ಸ್ ಉತ್ಸಾಹಭರಿತ ಬೀದಿ ಕಲಾಕೃತಿಗಳು ಮತ್ತು ಗೀಚುಬರಹವನ್ನು ಒಳಗೊಂಡಿದೆ. ಈ ಪ್ರದೇಶಗಳು ಛಾಯಾಗ್ರಾಹಕರಿಗೆ ಅನ್ವೇಷಿಸಲು ಯೋಗ್ಯವಾಗಿವೆ. ಸ್ಥಳೀಯ ಕಲಾವಿದರು ಮಾಡಿದ ಗೋಡೆಯ ಭಿತ್ತಿಚಿತ್ರಗಳನ್ನು ಹಲವಾರು ಬಣ್ಣಗಳು ಅಥವಾ ಆಲೋಚನೆಗಳನ್ನು ಪ್ರಚೋದಿಸುವ ವಿನ್ಯಾಸಗಳೊಂದಿಗೆ ಸೆರೆಹಿಡಿಯಬಹುದು.

Continue Reading

Latest

Madurai Tour: ಮಧುರೈಗೆ ಹೋದಾಗ ನೋಡಲೇಬೇಕಾದ 6 ರಮಣೀಯ ಸ್ಥಳಗಳು

ಮಧುರೈ (Madurai Tour) ಎಂದಾಕ್ಷಣ ನೆನಪಾಗುವುದು ಮೀನಾಕ್ಷಿ ಅಮ್ಮನವರ ದೇವಾಲಯ. ಇದನ್ನು ಮೀರಿದ ಹಲವು ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಐತಿಹಾಸಿಕ ಅದ್ಭುತಗಳನ್ನು ಒಳಗೊಂಡಿರುವ ತಾಣಗಳಿವೆ. ಮಧುರೈಗೆ ಪ್ರವಾಸ ಹೊರಡುವ ಯೋಜನೆ ಇದ್ದರೆ ಇಲ್ಲಿರುವ ಅಮೂಲ್ಯ ರತ್ನಗಳ ಬಗ್ಗೆ ತಿಳಿದುಕೊಳ್ಳಿ. ಯಾಕೆಂದರೆ ಇದು ನಿಮ್ಮ ಪ್ರವಾಸ ಯೋಜನೆಯನ್ನು ಪರಿಪೂರ್ಣಗೊಳಿಸುವುದು. ಮಧುರೈನ ಆರು ಸ್ಥಳಗಳ ಕುರಿತ ಪರಿಚಯ ಇಲ್ಲಿದೆ.

VISTARANEWS.COM


on

By

Madurai Tour
Koo

ಸಾಂಸ್ಕೃತಿಕವಾಗಿ ಶ್ರೀಮಂತ ನಗರಿ ಎಂದು ಖ್ಯಾತಿಗಳಿಸಿರುವ ಮಧುರೈನಲ್ಲಿ (Madurai Tour) ಹಲವು ಗೌಪ್ಯ ರತ್ನಗಳಿವೆ. ಸುಪ್ರಸಿದ್ಧ ಮೀನಾಕ್ಷಿ ಅಮ್ಮನವರ ದೇವಾಲಯವನ್ನು (Meenakshi Amman Temple) ಹೊರತುಪಡಿಸಿ ಇಲ್ಲಿ ಇನ್ನೂ ಹಲವು ತಾಣಗಳಿವೆ. ಹೆಚ್ಚು ಪ್ರಚಲಿತವಾಗಿ ಇಲ್ಲದೇ ಇದ್ದರೂ ಈ ತಾಣಗಳು ನಿಮ್ಮ ಪ್ರವಾಸ ಯೋಜನೆಯನ್ನು (tour plan) ಪೂರ್ಣಗೊಳಿಸುವುದು.

ಮಧುರೈಗೆ ಪ್ರವಾಸ ಹೊರಡುವ ಯೋಜನೆಯಲ್ಲಿದ್ದರೆ ಇಲ್ಲಿ ತಪ್ಪಿಸಿಕೊಳ್ಳಲೇ ಬಾರದ ಕೆಲವು ತಾಣಗಳಿವೆ. ಯಾಕೆಂದರೆ ಇದು ನಿಮ್ಮ ಪ್ರವಾಸ ಯೋಜನೆಯನ್ನು ಪರಿಪೂರ್ಣಗೊಳಿಸುವುದರಲ್ಲಿ ಸಂದೇಹವಿಲ್ಲ.

Madurai Tour
Madurai Tour


ತಿರುಮಲೈ ನಾಯಕರ್ ಮಹಲ್

ತಿರುಮಲೈ ನಾಯಕರ್ ಮಹಲ್ ನ ವಾಸ್ತುಶಿಲ್ಪದ ಮೇರುಕೃತಿಯು ಮಧುರೈ ನಗರದ ಭವ್ಯತೆಗೆ ಸಾಕ್ಷಿಯಾಗಿದೆ. ಈ ಅರಮನೆಯನ್ನು 17 ನೇ ಶತಮಾನದಲ್ಲಿ ರಾಜ ತಿರುಮಲೈ ನಾಯಕ್ ಅವರು ನಿರ್ಮಿಸಿದರು. ಸುಂದರವಾದ ಇಂಡೋ-ಸಾರ್ಸೆನಿಕ್ ವಿನ್ಯಾಸವನ್ನು ಹೊಂದಿರುವ ಇದ ಕೆತ್ತನೆಗಳು ಮತ್ತು ಮೇಲ್ಭಾಗದಲ್ಲಿ ಗುಮ್ಮಟಗಳು ಆಕರ್ಷಕವಾಗಿವೆ. ಇದು ದೊಡ್ಡ ಅಂಗಳಗಳು, ಸಭಾಂಗಣಗಳು, ಕಾಗುಣಿತ ಬೈಂಡಿಂಗ್ ಬೆಳಕು ಮತ್ತು ಧ್ವನಿ ಪ್ರದರ್ಶನಗಳನ್ನು ಒಳಗೊಂಡಿದ್ದು, ಗತಕಾಲದ ರಾಜಮನೆತನದ ಸೊಬಗನ್ನು ವರ್ಣಿಸುತ್ತದೆ.


ಗಾಂಧಿ ಸ್ಮಾರಕ ವಸ್ತು ಸಂಗ್ರಹಾಲಯ

ಮಧುರೈನಲ್ಲಿರುವ ಗಾಂಧಿ ಸ್ಮಾರಕ ವಸ್ತುಸಂಗ್ರಹಾಲಯವು ಗಾಂಧೀಜಿ ಅವರ ಪರಂಪರೆಯನ್ನು ಜೀವಂತವಾಗಿರಿಸಿರುವಂತೆ ಭಾಸವಾಗುತ್ತದೆ. ಶಾಂತಿಯುತವಾದ ತಮುಕ್ಕಂ ಅರಮನೆಯ ಆವರಣದಲ್ಲಿರುವ ಈ ವಸ್ತುಸಂಗ್ರಹಾಲಯವು ಮಹಾತ್ಮನಿಗೆ ಸೇರಿದ ಕಲಾಕೃತಿಗಳು, ಛಾಯಾಚಿತ್ರಗಳು ಅಥವಾ ವೈಯಕ್ತಿಕ ವಸ್ತುಗಳ ಅದ್ಭುತ ಸಂಗ್ರಹವನ್ನು ಹೊಂದಿದೆ. ಇದು ಅವರ ಜೀವನ ಮತ್ತು ಕಾರ್ಯಗಳ ಬಗ್ಗೆ ನಮಗೆ ಬೆಳಕು ಚೆಲ್ಲುತ್ತದೆ.


ಕೂಡಲ್ ಅಜಗರ್ ದೇವಸ್ಥಾನ

ಮಧುರೈ ಒಳಗೆ ಆಳವಾದ ಕಿರಿದಾದ ಲೇನ್‌ಗಳ ನಡುವೆ ಕೂಡಲ್ ಅಜಗರ್ ದೇವಸ್ಥಾನವಿದೆ. ಇದು ಭಗವಾನ್ ವಿಷ್ಣುವಿನ ಆರಾಧಕರಿಗಾಗಿ ನಿರ್ಮಿಸಲಾದ ಪ್ರಾಚೀನ ಹಿಂದೂ ಪವಿತ್ರ ಸ್ಥಳವಾಗಿದೆ. ಅತ್ಯಂತ ವರ್ಣರಂಜಿತ ವಾಸ್ತುಶಿಲ್ಪಗಳು ಮತ್ತು ಪ್ರತಿಮೆಗಳನ್ನು ಹೊಂದಿರುವ ಈ ದೇವಳದ ಹತ್ತಿರದಲ್ಲೇ ಇದೆ ಭವ್ಯವಾದ ಮೀನಾಕ್ಷಿ ದೇವಸ್ಥಾನ. ಶಾಂತ ವಾತಾವರಣದಲ್ಲಿ ಮುಳುಗಿ ಏಳ ಬಯಸುವವರಿಗೆ ಇದು ಭೇಟಿ ನೀಡಬಹುದಾದ ಸೂಕ್ತ ತಾಣವಾಗಿದೆ. ಧಾರ್ಮಿಕ ಸಂಕೇತಗಳ ನಡುವೆ ಹಲವಾರು ಪೌರಾಣಿಕ ಕಥೆಗಳನ್ನು ವಿವರಿಸುವ ಶಿಲ್ಪಗಳನ್ನು ಇದು ಒಳಗೊಂಡಿದೆ.


ವೈಗೈ ಅಣೆಕಟ್ಟು

ಪಟ್ಟಣದಿಂದ ದೂರವಾಗಿ ಶಾಂತ ಸ್ಥಳವನ್ನು ಹುಡುಕುತ್ತಿರುವ ಪ್ರಕೃತಿ ಪ್ರೇಮಿಗಳಿಗೆ ಮಧುರೈನ ಹೊರವಲಯದಲ್ಲಿರುವ ವೈಗೈ ಅಣೆಕಟ್ಟು ಭೇಟಿ ನೀಡಬಹುದಾದ ಅತ್ಯಂತ ಸುಂದರ ತಾಣ. ವೈಗೈ ನದಿಯ ಮೇಲಿರುವ ಸುಂದರವಾದ ಪ್ರದೇಶವು ಅದರ ಹಚ್ಚ ಹಸಿರಿನ ಸಸ್ಯವರ್ಗ ಮತ್ತು ಪ್ರಶಾಂತವಾದ ನೀರಿನಿಂದ ಪಿಕ್ನಿಕ್ ಗಳಿಗೆ, ವಿರಾಮದ ನಡಿಗೆಗಳಿಗೆ ಅಥವಾ ಸುಂದರವಾದ ಸೂರ್ಯಾಸ್ತಗಳನ್ನು ವೀಕ್ಷಿಸಲು ಉತ್ತಮವಾಗಿದೆ. ಇಲ್ಲಿ ಪ್ರವಾಸಿಗರು ಬೋಟಿಂಗ್ ಅನ್ನು ಆನಂದಿಸಬಹುದು.


ತಿರುಪರಂಕುಂದ್ರಂ ಮುರುಗನ್ ದೇವಸ್ಥಾನ

ಸುಂದರವಾದ ಬೆಟ್ಟದ ಮೇಲಿರುವ ತಿರುಪರಂಕುಂದ್ರಂ ಮುರುಗನ್ ದೇವಸ್ಥಾನವು ಮಧುರೈ ಪ್ರದೇಶದ ಅತ್ಯಂತ ಪುರಾತನ ಮತ್ತು ಪವಿತ್ರವಾದ ದೇವಾಲಯಗಳಲ್ಲಿ ಒಂದಾಗಿದೆ. ಮುರುಗನ್ ದೇವರಿಗೆ ಸಮರ್ಪಿತವಾಗಿರುವ ಈ ದೇವಾಲಯವು ವಿವಿಧ ಶಿಲ್ಪಗಳಿಂದ ತುಂಬಿದ ಪ್ರಾಚೀನ ರಾಕ್ ವಾಸ್ತುಶಿಲ್ಪವನ್ನು ತೋರಿಸುತ್ತದೆ.

ಇದನ್ನೂ ಓದಿ: Visa Free Countries: ಪ್ರವಾಸಿ ತಾಣಗಳಿಗೆ ಹೆಸರಾದ ಈ 10 ದೇಶಗಳಿಗೆ ಹೋಗಲು ವೀಸಾ ಬೇಕಿಲ್ಲ!


ವಂಡಿಯೂರ್ ಮಾರಿಯಮ್ಮನ್ ತೆಪ್ಪಾಕುಲಂ

ವಂಡಿಯೂರ್ ಮಾರಿಯಮ್ಮನ್ ತೆಪ್ಪಕುಲಂ ಇತಿಹಾಸ ಮತ್ತು ಪುರಾಣಗಳಲ್ಲಿ ನೆಲೆಗೊಂಡಿರುವ ಮಧುರೈನ ಹೊರವಲಯದಲ್ಲಿರುವ ವಿಸ್ತಾರವಾದ ದೇವಾಲಯದ ಕೊಳವಾಗಿದೆ. 16 ಎಕರೆಗಳಲ್ಲಿ ಹರಡಿರುವ ದೈತ್ಯಾಕಾರದ ತೊಟ್ಟಿಯು ಸುಂದರವಾದ ಮಂಟಪಗಳನ್ನು ಸ್ತಂಭಗಳ ಕಾರಿಡಾರ್‌ಗಳೊಂದಿಗೆ ಮತ್ತು ಸೊಂಪಾದ ಗಿಡ, ಮರಗಳಿಂದ ಸುತ್ತುವರಿದಿದೆ. ಇಲ್ಲಿ ವಾರ್ಷಿಕ ತೆಪ್ಪಂ ಉತ್ಸವ ನಡೆಯುತ್ತದೆ.

Continue Reading
Advertisement
navaratri
ಬೆಂಗಳೂರು2 ಗಂಟೆಗಳು ago

Navaratri : ನವರಾತ್ರಿ ಸಂಭ್ರಮದಲ್ಲಿ ಗೊಂಬೆಗಳಂತೆ ಮಿಂಚಿದ ಹೆಂಗಳೆಯರು

Mysuru News
ಮೈಸೂರು2 ಗಂಟೆಗಳು ago

Mysuru News : ಪರ್ಯಾವರಣ ಸಂರಕ್ಷಣ ಗತಿವಿಧಿಯಿಂದ ತ್ಯಾಜ್ಯ ಸಂಗ್ರಹಣ ಅಭಿಯಾನಕ್ಕೆ ಚಾಲನೆ

Kodagu News
ಕೊಡಗು2 ಗಂಟೆಗಳು ago

Kodagu News : ದಸರಾದಲ್ಲಿ ಡಿಜೆ ಬಳಕೆಗೆ ನಿರ್ಬಂಧ; ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್

Actor Darshan Renukaswamy murder case
ಬೆಂಗಳೂರು3 ಗಂಟೆಗಳು ago

Actor Darshan : ತನಿಖಾಧಿಕಾರಿಗಳ ವಿರುದ್ಧ ಬ್ಯಾಟಿಂಗ್‌ ಮಾಡಿದ ದರ್ಶನ್‌ ಪರ ವಕೀಲ; ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

Bomb threat to BMS, MS Ramayya and four other colleges in Basavanagudi Bengaluru
ಬೆಂಗಳೂರು3 ಗಂಟೆಗಳು ago

Bomb Threat : ಬೆಂಗಳೂರಿನ ಬಸವನಗುಡಿಯ ಬಿಎಂಎಸ್‌ ಸೇರಿ ನಾಲ್ಕು ಕಾಲೇಜುಗಳಿಗೆ ಬಾಂಬ್‌ ಬೆದರಿಕೆ

Medical Seat
ಬೆಂಗಳೂರು4 ಗಂಟೆಗಳು ago

Medical Seat : ಬೆಂಗಳೂರಿನಲ್ಲಿ ಮೆಡಿಕಲ್ ಸೀಟ್ ಕೊಡಿಸುವುದಾಗಿ ಉದ್ಯಮಿಗೆ 1.5 ಕೋಟಿ ರೂ. ವಂಚನೆ

Murder case
ಚಿತ್ರದುರ್ಗ5 ಗಂಟೆಗಳು ago

Murder Case : ಪ್ರಿಯಕರನಿಗಾಗಿ ಪತಿಗೆ ಚಟ್ಟ ಕಟ್ಟಿದ್ದಳು ಪಾಪಿ ಪತ್ನಿ; ಹೊಟ್ಟೆ ಉರಿಯಿಂದ ಸತ್ತ ಎಂದವಳು ಈಗ ಜೈಲುಪಾಲು

Namma metro ticket prices will be hiked soon
ಬೆಂಗಳೂರು6 ಗಂಟೆಗಳು ago

Namma Metro : ಸಿಟಿ ಮಂದಿಗೆ ಮತ್ತೊಂದು ಶಾಕ್‌; ಶೀಘ್ರದಲ್ಲೆ ನಮ್ಮ ಮೆಟ್ರೋ ಟಿಕೆಟ್‌ ದರ ಏರಿಕೆಯ ಬರೆ!

Murder case
ಬೆಂಗಳೂರು7 ಗಂಟೆಗಳು ago

Murder Case : ನಿದ್ದೆಗೆ ಜಾರಿದ 13 ವರ್ಷದ ಬಾಲಕಿಯನ್ನು ಕೊಂದಿದ್ಯಾರು? ನಿಗೂಢ ಸಾವಿನ ಬೆನ್ನಟ್ಟಿದ ಪೊಲೀಸರು

murder case
ಬೆಂಗಳೂರು7 ಗಂಟೆಗಳು ago

Murder case : ಬೆಂಗಳೂರಲ್ಲಿ ಬಿಹಾರಿ ಮೂಲದ ವ್ಯಕ್ತಿಯನ್ನು ದೊಣ್ಣೆಯಿಂದ ಹೊಡೆದು ಭೀಕರ ಹತ್ಯೆ

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ12 ತಿಂಗಳುಗಳು ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

galipata neetu
ಕಿರುತೆರೆ10 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ12 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ11 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ11 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ1 ದಿನ ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್1 ತಿಂಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್1 ತಿಂಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ1 ತಿಂಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌