ರಾಜ ಮಾರ್ಗ ಅಂಕಣ: ಆದಿವಾಸಿಗಳ ಆರಾಧ್ಯ ದೈವ ಬಿರ್ಸಾ ಮುಂಡಾ; ಬಿಹಾರದ ರಕ್ತ ಕ್ರಾಂತಿಯ ಕಿಡಿ - Vistara News

ಕರ್ನಾಟಕ

ರಾಜ ಮಾರ್ಗ ಅಂಕಣ: ಆದಿವಾಸಿಗಳ ಆರಾಧ್ಯ ದೈವ ಬಿರ್ಸಾ ಮುಂಡಾ; ಬಿಹಾರದ ರಕ್ತ ಕ್ರಾಂತಿಯ ಕಿಡಿ

ರಾಜ ಮಾರ್ಗ ಅಂಕಣ : ಇವರು ಗಾಂಧಿಗಿಂತ ಮೊದಲೇ ಹುಟ್ಟಿದ್ದ ಗಾಂಧಿ. ಬೋಸರಿಗಿಂತ ಮೊದಲೇ ಜನ್ಮ ತಳೆದ ರಕ್ತ ಕ್ರಾಂತಿಯ ಕಿಡಿ. ಇವರೇ ಬಿರ್ಸಾ ಮುಂಡಾ. ಬಿಹಾರದ ದಂತಕಥೆ (ರಾಜ ಮಾರ್ಗ ಅಂಕಣ). ಇವರ ಮೈನವಿರೇಳಿಸುವ ರೋಚಕ ಕಥಾನಕ ಇಲ್ಲಿದೆ.

VISTARANEWS.COM


on

Birsa Munda hero of bihar
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
RAJAMARGA

ಬ್ರಿಟಿಷ್ ಸಾಮ್ರಾಜ್ಯವು ಭಾರತವನ್ನು ಆಳುತ್ತಿರುವಾಗ ನಡೆದಿದ್ದ ಹಲವು ರಕ್ತಕ್ರಾಂತಿಗಳ ಬಗ್ಗೆ ನಮ್ಮ ಯುವಜನತೆಗೆ ಅರಿವು ಇಲ್ಲದಿರುವುದು ನಿಜವಾಗಿ ದುರಂತ! ಅಂತಹ ಒಂದು ಭಾರೀ ರಕ್ತಕ್ರಾಂತಿಗೆ ಕಾರಣ ಆದವರು, ಆದಿವಾಸಿಗಳ ಸಂಘಟನೆ ಮಾಡಿ ಬ್ರಿಟಿಷ್ ಸರಕಾರವನ್ನು ವಸ್ತುಶಃ ನಡುಗಿಸಿದವರು ಬಿರ್ಸಾ ಮುಂಡಾ (Birsa Munda)! ಇಂದು ಜಾರ್ಖಂಡ್ ರಾಜ್ಯವು ಅವರನ್ನು ರಾಷ್ಟ್ರೀಯ ಐಕಾನ್ (National icon of Jharkhand) ಆಗಿ ಸ್ವೀಕರಿಸಿದೆ ಮತ್ತು ಭಾರತದ ಪಾರ್ಲಿಮೆಂಟ್ ಭವನದಲ್ಲಿ (Indian Parliament house) ಅವರ ಭಾವಚಿತ್ರ ಇದೆ. ಆ ಗೌರವ ಪಡೆದ ಭಾರತದ ಏಕೈಕ ಆದಿವಾಸಿ ಬಿರ್ಸಾ ಮುಂಡಾ (ರಾಜ ಮಾರ್ಗ ಅಂಕಣ)!

ಕಾಡು ನಂಬಿ ಬದುಕು ಕಟ್ಟಿದವರು

ಬಿರ್ಸಾ ಮುಂಡಾ ಹುಟ್ಟಿದ್ದು ರಾಂಚಿ ಸಮೀಪದ ‘ಉಳಿಹಾಟು’ ಎಂಬ ಕುಗ್ರಾಮದಲ್ಲಿ. ಅವರದ್ದು ಮುಂಡಾ ಎಂಬ ಗುಡ್ಡಗಾಡು ಜನಾಂಗವಾಗಿತ್ತು. ಗುರುವಾರ ಹುಟ್ಟಿದ ಕಾರಣ ಮುಂಡಾ ಸಂಸ್ಕೃತಿಯ ಪ್ರಕಾರ ಅವರಿಗೆ ಬಿರ್ಸಾ ಎಂಬ ಹೆಸರು ಬಂತು. ಕಾಡಿನಲ್ಲಿ ಸಣ್ಣ ಗುಡಿಸಲು ಕಟ್ಟಿ, ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸಿ ಪೇಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುವುದು ಅವರ ಉದ್ಯೋಗವಾಗಿತ್ತು. ಕಾಡುಗಳೇ ಅವರ ಸರ್ವಸ್ವ. ಯಾರೂ ಶಾಲೆಗೆ ಹೋದವರಲ್ಲ.

ಅಂತಹ ಶ್ರೀಮಂತ ಕಾಡುಗಳ ಮೇಲೆ ಬ್ರಿಟಿಷರ ಕಣ್ಣು ಬೀಳಲು ಹೆಚ್ಚು ದಿನಗಳು ಬೇಕಾಗಲಿಲ್ಲ. ಆದಿವಾಸಿಗಳು ಕಾಡಿನ ಉತ್ಪನ್ನಗಳನ್ನು ಸಂಗ್ರಹ ಮಾಡುವ ಹಾಗಿಲ್ಲ ಎಂಬ ಕಾನೂನನ್ನು ಆಂಗ್ಲ ಸರಕಾರ ಮಾಡಿಬಿಟ್ಟಿತು! ಅವಿದ್ಯಾವಂತ ಆದಿವಾಸಿಗಳನ್ನು ಬಲವಂತವಾಗಿ ಮತಾಂತರ ಮಾಡಲು ಆಂಗ್ಲರು ಮುಂದಾದರು.

ಬಿರ್ಸಾ ಅವರ ಪೂರ್ತಿ ಕುಟುಂಬ ಬಲವಂತದ ಮತಾಂತರ ಆಯ್ತು!

ಹಾಗೆ ಬಿರ್ಸಾ ಅವರ ಅಪ್ಪ ತನ್ನ ಇಡೀ ಕುಟುಂಬವನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಿ ಬಿಟ್ಟರು! ಆಗ ಬಿರ್ಸಾ ಅವರಿಗೆ ಕೇವಲ 13 ವರ್ಷ. ಅವರ ಹೆಸರನ್ನು ‘ದೌದ ಪೂರ್ತಿ’ ಎಂದು ಮರುನಾಮಕರಣ ಮಾಡಲಾಯಿತು. ದಟ್ಟವಾದ ಬೋಹೊಂದಾ ಎಂಬ ಕಾಡಿನಲ್ಲಿ ಕುರಿಗಳನ್ನು ಕಾಯುತ್ತ, ಕೊಳಲು ಬಾರಿಸುತ್ತ ಬಿರ್ಸಾ ತನ್ನ ಬಾಲ್ಯದ ದಿನಗಳನ್ನು ಕಳೆದರು. ಕಲಿಯುವುದರಲ್ಲಿ ಬುದ್ಧಿವಂತ ಆದ ಕಾರಣ ಜರ್ಮನ್ ಮಿಷನ್ ಶಾಲೆಗೆ ಹೋಗಿ ಒಂದಿಷ್ಟು ಶಿಕ್ಷಣವನ್ನು ಪಡೆದಿದ್ದರು.

ಬಿರ್ಸಾ ಬೆಳೆಯುತ್ತ ಹೋದಂತೆ ಅವರಿಗೆ ಬ್ರಿಟಿಷ್ ದೌರ್ಜನ್ಯವು ಅರ್ಥ ಆಗತೊಡಗಿತು. ರಕ್ತ ಬಿಸಿ ಆಗತೊಡಗಿತು. ತಮ್ಮ ‘ಮುಂಡಾ ಸಂಸ್ಕೃತಿ’ಯನ್ನು ಉಳಿಸಬೇಕು ಎಂಬ ಸಂಕಲ್ಪವು ಗಟ್ಟಿ ಆಯಿತು. ಪರಿಣಾಮವಾಗಿ ತಮ್ಮ ಇಡೀ ಕುಟುಂಬವನ್ನು ಅವರು ಮರಳಿ ಮುಂಡಾ ಸಂಸ್ಕೃತಿಗೆ ಪರಿವರ್ತನೆ ಮಾಡಿಕೊಂಡರು. ಆದಿವಾಸಿಗಳನ್ನು ಸಂಘಟನೆ ಮಾಡುವ ಕೆಲಸಕ್ಕೆ ಇಳಿದರು.

Birsa munda hero of independence

ತಮ್ಮನ್ನು ತಾವೇ ಪ್ರವಾದಿ ಎಂದು ಕರೆದುಕೊಂಡರು!

ಆದರೆ ವಿದ್ಯೆ ಇಲ್ಲದ, ಶಾಲೆಗೆ ಹೋಗದ ಆದಿವಾಸಿಗಳಿಗೆ ಅವರ ಮಾತುಗಳನ್ನು ಕೇಳುವ ತಾಳ್ಮೆ ಇರಲಿಲ್ಲ. ಅದಕ್ಕೆ ಬೇರೆ ದಾರಿ ಇಲ್ಲದೆ ಬಿರ್ಸಾ ತಮ್ಮನ್ನು ಪ್ರವಾದಿ (Prophet) ಎಂದು ಕರೆದುಕೊಂಡರು.

‘ ಪ್ರಕೃತಿಯೇ ನಮ್ಮ ದೇವರು. ಸಮಾನ ಸಮಾಜವೇ ನಮ್ಮ ನ್ಯಾಯ ನೀತಿ ‘ ಎಂದು ಬೋಧನೆ ಆರಂಭ ಮಾಡಿದರು. ಆದಿವಾಸಿಗಳು ಈಗ ಅವರ ಮಾತುಗಳನ್ನು ಕೇಳಲು ಆರಂಭಿಸಿದರು.

ಬ್ರಿಟಿಷರ ವಿರುದ್ಧ ಸೆಟೆದು ನಿಂತರು ಮುಂಡಾ

1893-94ರ ಹೊತ್ತಿಗೆ ಸರಕಾರವು ಇನ್ನೊಂದು ಹೊಸ ಆದೇಶ ಹೊರಡಿಸಿತು. ‘ಎಲ್ಲ ಅರಣ್ಯಗಳು ಸಂರಕ್ಷಿತ ಅರಣ್ಯಗಳು, ಆದಿವಾಸಿಗಳಿಗೆ ಕಾಡಿನಲ್ಲಿ ಯಾವುದೇ ಹಕ್ಕಿಲ್ಲ’ ಎನ್ನುವುದು ಆ ಆದೇಶ! ಇದು ಆದಿವಾಸಿಗಳನ್ನು ಕೆರಳಿಸಿತು. 1894ರ ಅಕ್ಟೋಬರ್ 1ರಂದು ಬಿರ್ಸಾ ಮುಂಡಾ ಅವರ ನೇತೃತ್ವದಲ್ಲಿ ಛೋಟಾ ನಾಗ್ಪುರ ಎಂಬಲ್ಲಿ ಒಂದು ಬೃಹತ್ ಮೆರವಣಿಗೆಯು ಬೀದಿಗೆ ಇಳಿದು ಭಾರೀ ಸದ್ದು ಮಾಡಿತು.

‘ಮಹಾರಾಣಿಯ ಅಧಿಕಾರ ನಿಲ್ಲಿಸಬೇಕು. ಮುಂಡಾ ಸಂಸ್ಕೃತಿ ಉಳಿಸಬೇಕು’ ಎನ್ನುವುದು ಅವರ ಘೋಷಣೆ. ಬ್ರಿಟಿಷ್ ಸರಕಾರ ಬಿರ್ಸಾ ಅವರನ್ನು ತಕ್ಷಣ ಬಂಧಿಸಿ ಹಾಜಿರಾಬಾದನ ಸೆರೆಮನೆಗೆ ಕಳುಹಿಸಿತು. ಎರಡು ವರ್ಷ ಜೈಲು ಮುಗಿದು ಹೊರಗೆ ಬಂದ ನಂತರ ಬಿರ್ಸಾ ಇನ್ನಷ್ಟು ದೊಡ್ಡ ಹೋರಾಟಕ್ಕೆ ಕಿಡಿ ಹಚ್ಚಿದರು.

ಈ ಬಾರಿ ಭೂಗತರಾಗಿ ಹೋರಾಟ!

ಈ ಬಾರಿ ಅವರು ಬಿರ್ಸಾ ಮುಂಡಾ ಭೂಗತರಾದರು ಮತ್ತು ತೀವ್ರ ಹಿಂಸಾತ್ಮಕವಾದ ಹೋರಾಟಕ್ಕೆ ಇಳಿದರು. ನಾಲ್ಕು ಜಿಲ್ಲೆಗಳ ಸುಮಾರು 7000 ಆದಿವಾಸಿಗಳನ್ನು ಒಟ್ಟು ಸೇರಿಸಿ ಅವರನ್ನು ಗೆರಿಲ್ಲಾ ಯುದ್ಧಕ್ಕೆ ಸಿದ್ಧಪಡಿಸಿದರು. 550 ಚದರ ಮೈಲು ವಿಸ್ತಾರದ ದಟ್ಟವಾದ ಅರಣ್ಯ ಪ್ರದೇಶದಲ್ಲಿ ಅವರ ಹೋರಾಟದ ರೂಪುರೇಷೆಯು ಸಿದ್ಧವಾಯಿತು. ಬ್ರಿಟಿಷ್ ಕಟ್ಟಡಗಳ ಮೇಲೆ, ಅಧಿಕಾರಿಗಳ ಮೇಲೆ, ಬ್ರಿಟಿಷರನ್ನು ಬೆಂಬಲಿಸುವ ನಾಗರಿಕರ ಮೇಲೆ……… ಹೀಗೆ ಸಾಲು ಸಾಲು ಗೆರಿಲ್ಲಾ ಮಾದರಿಯ ಶಸ್ತ್ರಾಸ್ತ್ರ ದಾಳಿಗಳು ನಡೆದವು. ಪೋಲಿಸ್ ಠಾಣೆಯ ಮೇಲೆ ದಾಳಿ ನಡೆದು ಎಂಟು ಪೊಲೀಸರು ಹತರಾದರು. 32 ಜನರು ಪರಾರಿ ಆದರು. 89 ಭೂಮಾಲೀಕರ ಮನೆಗಳು ಉರಿದು ಹೋದವು. ಬ್ರಿಟಿಷರ ಆಸ್ತಿಗಳಿಗೆ ಬೆಂಕಿ ಹಚ್ಚಲಾಯಿತು. ಸುಲಿಗೆ ಮಾಡುವ ವ್ಯಾಪಾರಿಗಳನ್ನು ಹೊಡೆದು ಹಾಕಲಾಯಿತು.

Birsa munda airport

ವಸ್ತುಶಃ ನಡುಗಿ ಹೋಯಿತು ಕಂಪೆನಿ ಸರಕಾರ!

ಇಂತಹ ದಾಳಿಗಳಿಂದ ಆಂಗ್ಲ ಸರಕಾರ ಎಷ್ಟು ನಡುಗಿ ಹೋಯಿತು ಎಂದರೆ ರಾಂಚಿಯ ಜಿಲ್ಲಾಧಿಕಾರಿ ಸೈನ್ಯಕ್ಕೆ ಬರ ಹೇಳಿದನು! ಬಿರ್ಸಾ ಮುಂಡಾ ತಲೆಗೆ 500 ಆಗಿನ ಕಾಲದ ರೂಪಾಯಿಗಳ ಬಹುಮಾನ ಘೋಷಣೆ ಆಯಿತು!

1900 ಸೈನಿಕರ ಬ್ರಿಟಿಷ್ ಸೇನೆಯು ಆಧುನಿಕ ಶಸ್ತ್ರಗಳ ಜೊತೆ ದುಂಬಾರಿ ಬೆಟ್ಟದ ಮೇಲೆ ಬಿರ್ಸಾ ಅವರ ಆದಿವಾಸಿ ಸೈನ್ಯದ ಮೇಲೆ ಮುಗಿಬಿದ್ದಿತು. ಬಿಲ್ಲು, ಬಾಣ ಹಿಡಿದು ಹೋರಾಡಿದ ದಿಟ್ಟ ಆದಿವಾಸಿಗಳ ಸೇನೆಯು ಧರಾಶಾಯಿ ಆಯಿತು. ನೂರಾರು ಆದಿವಾಸಿಗಳು ಪ್ರಾಣವನ್ನು ಕಳೆದುಕೊಂಡರು. ಅವರ ರಕ್ತದಿಂದ ತೊಯ್ದು ಹೋದ ದುಂಬಾರಿ ಬೆಟ್ಟವನ್ನು ಮುಂದೆ ‘ಹೆಣಗಳ ಬೆಟ್ಟ’ ಎಂದೇ ಕರೆಯಲಾಯಿತು.

ಮಲಗಿದ್ದ ಸಿಂಹದ ಬಂಧನ!

ಮುಂದೆ 1899ರ ಹೊತ್ತಿಗೆ ನಿದ್ರೆಯಲ್ಲಿದ್ದ ಬಿರ್ಸಾ ಅವರನ್ನು ಬ್ರಿಟಿಷರು ಬಂಧಿಸಿದರು. ಜೊತೆಗೆ ಅವರ 482 ಸಂಗಡಿಗರು ಅರೆಸ್ಟ್ ಆದರು. ಅವರ ಮೇಲೆ ವಿವಿಧ ಕ್ರಿಮಿನಲ್ ಮೊಕದ್ದಮೆಗಳನ್ನು ಜಡಿದು ವಿಚಾರಣೆಯ ನಾಟಕವು ಆರಂಭ ಆಯಿತು. ಆದರೆ ವಿಚಾರಣೆ ನಡೆಯುತ್ತಿರುವ ಹೊತ್ತಿನಲ್ಲಿ 1900 ಜೂನ್
9ರಂದು ಬಿರ್ಸಾ ಮುಂಡಾ ಅವರ ಮರಣವು ಸೆರೆಮನೆಯಲ್ಲಿ ಆಯಿತು. ಆಗ ಅವರಿಗೆ ಕೇವಲ 25 ವರ್ಷ!

ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಕಣ್ಣೇ ಇಲ್ಲದಿದ್ದರೂ ಕನಸಿಗೆ ಬರವಿಲ್ಲ; ಅಂಧತ್ವ ಮೀರಿ IAS ಅಧಿಕಾರಿಯಾದ ಪ್ರಾಂಜಲ್‌!

ಆದಿವಾಸಿಗಳು ಅವರನ್ನು ಮರೆಯಲಿಲ್ಲ

ಮುಂದೆ ಮುಂಡಾ ಜನರು ಅವರನ್ನು ಧರ್ಥಿ ಆಬಾ ( ಭೂಮಿಯ ಅಪ್ಪ) ಎಂದು ಗೌರವದಿಂದ ಕರೆದರು. ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಅವರ ಪಾತ್ರವನ್ನು ಭಾರತವು ಮರೆಯಲಿಲ್ಲ.

ಬಿರ್ಸಾ ಅವರ ಜನ್ಮದಿನವಾದ (ನವೆಂಬರ್ 15)ವನ್ನು ದೇಶದ ಆದಿವಾಸಿಗಳು ಇಂದಿಗೂ ಆಚರಿಸಿ ಅವರನ್ನು ನೆನೆಯುತ್ತಾರೆ. ಅವರ ಹೆಸರಲ್ಲಿ ಬಿರ್ಸಾ ಮುಂಡಾ ವಿಮಾನ ನಿಲ್ದಾಣ, ಬಿರ್ಸಾ ಮುಂಡಾ ಕೃಷಿ ವಿವಿ, ಬಿರ್ಸಾ ಮುಂಡಾ ಆದಿವಾಸಿ ವಿವಿ, ಬಿರ್ಸಾ ಮುಂಡಾ ತಾಂತ್ರಿಕ ಕಾಲೇಜು ಇವುಗಳು ಜಾರ್ಖಂಡ್ ಮತ್ತು ಬಿಹಾರ್ ರಾಜ್ಯದಲ್ಲಿ ಇವೆ! ಅವರ ಜೀವನ ಚರಿತ್ರೆಯನ್ನು ಆಧರಿಸಿದ ಹಿಂದಿ ಚಲನಚಿತ್ರ ʻಗಾಂಧಿ ಸೇ ಪೇಹಲೆ ಗಾಂಧಿ ( 2008) ತೆರೆಗೆ ಬಂದು ಜನಪ್ರಿಯ ಆಗಿದೆ. ಪ್ರಸಿದ್ದ ಬೆಂಗಾಲಿ ಲೇಖಕಿ ಮಹಾ ಶ್ವೇತಾದೇವಿ ಅವರು ಬಿರ್ಸಾ ಮುಂಡಾ ಅವರ ಬದುಕನ್ನು ಆಧಾರವಾಗಿಟ್ಟುಕೊಂಡು ‘ಅರನ್ಯೇರ್ ಅಧಿಕಾರಿ’ ಎಂಬ ಬೃಹತ್ ಕಾದಂಬರಿಯನ್ನು ಬರೆದಿದ್ದಾರೆ. ಬಿರ್ಸಾ ಮುಂಡಾ ಅವರ ಬದುಕು ಮತ್ತು ಹೋರಾಟಗಳು ಇಂದಿನ ಜನಾಂಗಕ್ಕೆ ಮಾದರಿ ಆಗಬೇಕು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ

Latest

ಬೆಂಗಳೂರು ಸೇರಿದಂತೆ 18 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್: ಇಂದು ಮತ್ತು ನಾಳೆ ಆಲಿಕಲ್ಲು ಮಳೆ ಸಾಧ್ಯತೆ

VISTARANEWS.COM


on

ಬೆಂಗಳೂರು ನಗರ ಸೇರಿದಂತೆ 18 ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಬಿರುಗಾಳಿ, ಆಲಿಕಲ್ಲು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಹವಾಮಾನ ಇಲಾಖೆ ರಾಜ್ಯದ 18 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ.

ಇಂದು (ಏಪ್ರಿಲ್ 30) ಹಾಗೂ ನಾಳೆ (ಮೇ 1) ರಾಜಧಾನಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಧಾರವಾಡ, ಗದಗ, ಕೊಪ್ಪಳ, ಹಾವೇರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಚಾಮರಾಜನಗರ, ಮೈಸೂರು, ಕೊಡಗು ಹಾಗೂ ಹಾಸನ ಜಿಲ್ಲೆಗಳಲ್ಲಿ ಸಾಧಾರಣ ಪ್ರಮಾಣದಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ನಿರೀಕ್ಷೆಯಿದೆ.

ಭಾರಿ ಮಳೆಯಾಗುವ ಸಾಧ್ಯತೆಯ ಹಿನ್ನೆಲೆ ಜನರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಹವಾಮಾನ ಇಲಾಖೆ ಸೂಚಿಸಿದೆ.

Continue Reading

Latest

ಜಾಮೀನು ಪಡೆಯಲು ಸುಪ್ರೀಂ ಕೋರ್ಟ್‌ ಮೊರೆ ಹೋದ ದರ್ಶನ್‌.

VISTARANEWS.COM


on

ಜಾಮೀನು ಪಡೆಯಲು ಸುಪ್ರೀಂ ಕೋರ್ಟ್‌ ಮೊರೆ ಹೋದ ದರ್ಶನ್‌.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ ಜಾಮೀನಿಗಾಗಿ ಸುಪ್ರೀಂ ಕೋರ್ಟ್‌ ಗೆ ಅರ್ಜಿ ಸಲ್ಲಿಸಿದ್ದಾರೆ. ಏಪ್ರಿಲ್‌ 27 ರಂದು ದರ್ಶನ್ ಪರ ವಕೀಲ ರಂಜಿತ್ ರೋಹಟಗಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯಂತರ ಜಾಮೀನು ನೀಡುವಂತೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮೇ 4ಕ್ಕೆ ನಿಗದಿಪಡಿಸಿದೆ.

Continue Reading

ಕರ್ನಾಟಕ

ಶಾಲೆಗಳಲ್ಲಿ ಅಶ್ಲೀಲ ಹಾಡು, ನೃತ್ಯಕ್ಕೆ ಬ್ರೇಕ್: ಶಿಕ್ಷಣ ಇಲಾಖೆ ಮಹತ್ವದ ಆದೇಶ

VISTARANEWS.COM


on

ಶಾಲೆಗಳಲ್ಲಿ ಅಶ್ಲೀಲ ಹಾಡು, ನೃತ್ಯಕ್ಕೆ ಬ್ರೇಕ್: ಶಿಕ್ಷಣ ಇಲಾಖೆ ಮಹತ್ವದ ಆದೇಶ

ಬೆಂಗಳೂರು: ಶಾಲೆಗಳಲ್ಲಿ ಇನ್ನು ಮುಂದೆ ಅಶ್ಲೀಲ ಹಾಡು ಮತ್ತು ಅಸಭ್ಯ ನೃತ್ಯಗಳಿಗೆ ಅವಕಾಶ ನೀಡದಂತೆ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಹೆಸರಿನಲ್ಲಿ ದ್ವಂದ್ವಾರ್ಥದ ಸಿನಿಮಾ ಹಾಡು ಹಾಗೂ ನೃತ್ಯಗಳನ್ನು ಪ್ರದರ್ಶಿಸುವುದರಿಂದ ಮಕ್ಕಳ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದೆ. ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಅಧಿಕೃತ ಆದೇಶ ಹೊರಡಿಸಲಾಗಿದೆ.
ಶಿಕ್ಷಣ ಇಲಾಖೆ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಯ ಪ್ರಕಾರ, ಶಾಲಾ ಕಾರ್ಯಕ್ರಮಗಳಲ್ಲಿ ಕೇವಲ ಜಾನಪದ, ದೇಶಭಕ್ತಿ ಗೀತೆಗಳು, ಪರಿಸರ ಕಾಳಜಿಯ ಹಾಡುಗಳು ಮತ್ತು ಸಮಾಜಮುಖಿ ಚಿಂತನೆಯುಳ್ಳ ಸಂಗೀತಕ್ಕೆ ಮಾತ್ರ ಆದ್ಯತೆ ನೀಡಬೇಕು. ನೃತ್ಯದ ಸಮಯದಲ್ಲಿ ವಿದ್ಯಾರ್ಥಿಗಳು ಧರಿಸುವ ಉಡುಪುಗಳು ಕೂಡ ಸಭ್ಯವಾಗಿರಬೇಕು ಹಾಗೂ ಅರೆಬರೆ ವಸ್ತ್ರಗಳನ್ನು ಧರಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಮನರಂಜನೆಯ ಹೆಸರಿನಲ್ಲಿ ಸಮಾಜಕ್ಕೆ ತಪ್ಪು ಸಂದೇಶ ನೀಡುವ ಅಥವಾ ಮಕ್ಕಳ ನೈತಿಕ ಹಾಗೂ ಮಾನಸಿಕ ಆರೋಗ್ಯ ಕೆಡಿಸುವ ಯಾವುದೇ ಹಾಡುಗಳನ್ನು ಬಳಸದಂತೆ ಶಾಲೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ನಿಯಮಗಳನ್ನು ಜಾರಿಗೆ ತರುವ ಸಂಪೂರ್ಣ ಜವಾಬ್ದಾರಿಯನ್ನು ಶಾಲಾ ಮುಖ್ಯಸ್ಥರು ಮತ್ತು ಆಡಳಿತ ಮಂಡಳಿಗೆ ವಹಿಸಲಾಗಿದೆ.

Continue Reading

bigbreaking

20 ಸಾವಿರ ಕೋಟಿ ಹಗರಣದ ಮೂಲ ದಾಖಲೆಗಳೇ ನಾಪತ್ತೆ. ಎನ್‌.ಆರ್‌.ರಮೇಶ್‌ ಗಂಭೀರ ಆರೋಪ.

VISTARANEWS.COM


on

ಬೆಂಗಳೂರು: ರಾಜ್ಯ ರಾಜಕೀಯ ಹಾಗೂ ಆಡಳಿತ ವಲಯವನ್ನು ಬೆಚ್ಚಿಬೀಳಿಸುವಂತಹ ಗಂಭೀರ ಆರೋಪವೊಂದು ಹೊರಬಂದಿದೆ. 2007-08ರಿಂದ ಇದುವರೆಗೆ ನಡೆದಿರುವ 20 ಸಾವಿರ ಕೋಟಿಗೂ ಹೆಚ್ಚು ಮೊತ್ತದ TDR ಹಗರಣಗಳಿಗೆ ಸಂಬಂಧಿಸಿದ ಮೂಲ ದಾಖಲೆಗಳು ಈಗಿನ ಜಿಬಿಎ ಯ ಭೂಸ್ವಾಧೀನ ಮತ್ತು ಟಿಡಿಆರ್‌ ವಿಭಾಗದ ಕಚೇರಿಯಿಂದ ನಾಪತ್ತೆಯಾಗಿವೆ ಎನ್ನುವ ಆಘಾತಕಾರಿ ವಿಷಯವನ್ನು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್‌.ಆರ್‌.ರಮೇಶ್ ಬಹಿರಂಗಪಡಿಸಿದ್ದಾರೆ.
ಇಂದು ಜಿಬಿಎ ಕೇಂದ್ರ ಕಚೇರಿ ಮುಂಭಾಗ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಹಿರಿಯ ನಾಯಕ ಹಾಗೂ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್‌.ಆರ್‌.ರಮೇಶ್‌ ಟಿಡಿಆರ್‌ ಹಗರಣದ ದಾಖಲೆಗಳ ನಾಪತ್ತೆ ಬಗ್ಗೆ ಮಹತ್ವದ ಮಾಹಿತಿಗಳನ್ನು ತಿಳಿಸಿದರು. ರಸ್ತೆ ಅಭಿವೃದ್ಧಿ ಮತ್ತು ವಿವಿಧ ಅಭಿವೃದ್ಧಿ ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಭೂ ಮಾಲೀಕರಿಂದ ನಿಯಮಾನುಸಾರ ಸ್ವಾಧೀನಪಡಿಸಿಕೊಂಡು, ಅದಕ್ಕೆ ಬದಲಾಗಿ ನಿಗದಿತ ಮೊತ್ತದ ಪರಿಹಾರ ಧನ ಅಥವಾ TDR /DRC ನೀಡುವ ಕಾರ್ಯ 2007-08 ರಲ್ಲಿ ಚಾಲನೆಗೆ ಬಂದಿತ್ತು. ಇದಾದ ನಂತರ TDR ನಿಯಮಗಳಲ್ಲಿನ ಸಣ್ಣಪುಟ್ಟ ಲೋಪದೋಷಗಳನ್ನು ದುರ್ಬಳಕೆ ಮಾಡಿಕೊಳ್ಳುವ ಕರಾಳ ದಂಧೆ ಬೃಹತ್ ಪ್ರಮಾಣದಲ್ಲಿ ಬೆಳೆದು, ಬಿಬಿಎಂಪಿ ಮತ್ತು ಬಿಡಿಎ ನ ಭ್ರಷ್ಟ ಅಧಿಕಾರಿಗಳ ಸಹಕಾರದಿಂದ ಸುಮಾರು 50 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹಗರಣ ನಡೆದಿದೆ ಎಂದು ಎನ್‌.ಆರ್‌.ರಮೇಶ್‌ ಆರೋಪಿಸಿದ್ದಾರೆ.
ಟಿಡಿಆರ್‌ ಹಗರಣ ಪ್ರಕರಣದ ವಿಚಾರ ಈಗಾಗಲೇ ಜಾರಿ ನಿರ್ದೇಶನಾಲಯ (ED) ಮತ್ತು ಲೋಕಾಯುಕ್ತದಲ್ಲಿ ತನಿಖೆ ಹಾಗೂ ವಿಚಾರಣಾ ಹಂತದಲ್ಲಿದೆ. ಆದರೆ ಇದೀಗ ಹಗರಣಕ್ಕೆ ಸಂಬಂಧಿಸಿದ ಪ್ರಮುಖ ದಾಖಲೆಗಳು ಕಾಣೆಯಾಗಿರುವುದು ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಇದರಲ್ಲಿ ಜಿಬಿಎ ಅಧಿಕಾರಿಗಳು ಮತ್ತು ವಂಚಕರ ಪಾತ್ರ ಇದೆ ಎಂದು ಎನ್‌.ಆರ್‌.ರಮೇಶ್‌ ಗಂಭೀರ ಆರೋಪ ಮಾಡಿದ್ದಾರೆ. ಈ ಎಲ್ಲಾ ಆರೋಪಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ದಾಖಲೆಗಳೊಂದಿಗೆ ಜಾರಿ ನಿರ್ದೇಶನಾಲಯ ಮತ್ತು ಲೋಕಾಯುಕ್ತದಲ್ಲಿ ದೂರುಗಳನ್ನು ದಾಖಲಿಸಲಿದ್ದೇನೆ ಎಂದು ಅವರು ತಿಳಿಸಿದ್ದಾರೆ.

Continue Reading
Advertisement
Latest4 hours ago

ಜನಪ್ರಿಯತೆಯಲ್ಲಿ ಪ್ರಧಾನಿ ಮೋದಿ ಈಗಲೂ ನಂ.1

Latest4 hours ago

ಕುರ್ಚಿ ಕದನಕ್ಕೆ ಹೊಸ ಟ್ವಿಸ್ಟ್ : ದಲಿತ ಸಿಎಂ ಕೂಗು ಜೋರು

Latest4 hours ago

ಟಿವಿಕೆ-ಎನ್‌ಡಿಎ ಮೈತ್ರಿ?, ತಮಿಳುನಾಡಿನಲ್ಲಿ ಸಂಚಲನ, ಸ್ಟಾಲಿನ್‌ ಸಭೆ

Latest7 hours ago

ಎಕ್ಸಿಟ್‌ ಪೋಲ್‌: ಅಸ್ಸಾಂ, ಪುದುಚೇರಿ ಪ.ಬಂಗಾಳದಲ್ಲಿ ಬಿಜೆಪಿ, ತ.ನಾಡಲ್ಲಿ ಡಿಎಂಕೆ, ಕೇರಳಂನಲ್ಲಿ ಯುಡಿಎಫ್‌

Latest7 hours ago

ತಮಿಳುನಾಡಿನಲ್ಲಿ ದಳಪತಿಯೇ ಅಧಿಪತಿ? ಎಂಜಿಆರ್‌ ಆಗ್ತಾರಾ ವಿಜಯ್‌?

Latest9 hours ago

ಪಂಚರಾಜ್ಯ ಚುನಾವಣಾ ಫಲಿತಾಂಶ: “ಎಕ್ಸಿಟ್ ಪೋಲ್‌ಗಿಂತ ಉತ್ತಮ ಪ್ರದರ್ಶನ ನಿರೀಕ್ಷೆ” – ಖರ್ಗೆ

Latest9 hours ago

ರಾಜ್ಯದಲ್ಲಿ ನಾಯಕತ್ವ ಗೊಂದಲ: “ಸದ್ಯಕ್ಕೆ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ” – ಖರ್ಗೆ ಸ್ಪಷ್ಟನೆ

Latest10 hours ago

ಬೆಂಗಳೂರು ಸೇರಿದಂತೆ 18 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್: ಇಂದು ಮತ್ತು ನಾಳೆ ಆಲಿಕಲ್ಲು ಮಳೆ ಸಾಧ್ಯತೆ

Latest1 day ago

ಬೌರಿಂಗ್‌ ಆಸ್ಪತ್ರೆ ಕಾಂಪೌಂಡ್‌ ಕುಸಿದು 7 ಮಂದಿ ಬಲಿ

Latest1 day ago

ಬೆಂಗಳೂರಿನಲ್ಲಿ ಆಲಿಕಲ್ಲು ಸಹಿತ ಧಾರಾಕಾರ ಮಳೆ

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌