Best Places to visit in September in India : ಸೆಪ್ಟೆಂಬರ್‌ನಲ್ಲಿ ಪ್ರವಾಸಕ್ಕೆ ಸೂಕ್ತವಾದ ರಮಣೀಯ ಸ್ಥಳಗಳಿವು - Vistara News

ಪ್ರವಾಸ

Best Places to visit in September in India : ಸೆಪ್ಟೆಂಬರ್‌ನಲ್ಲಿ ಪ್ರವಾಸಕ್ಕೆ ಸೂಕ್ತವಾದ ರಮಣೀಯ ಸ್ಥಳಗಳಿವು

ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ಪ್ರವಾಸ ಮಾಡಲು ಸೂಕ್ತವಾದ ಸ್ಥಳಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. ಪ್ರವಾಸಕ್ಕೆ ಪ್ಲ್ಯಾನ್‌ ಮಾಡಿ.

VISTARANEWS.COM


on

best place to visit in september
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸೆಪ್ಟೆಂಬರ್‌ ಎಂದರೆ ಮಳೆಗಾಲ ಕೊಂಚ ಕಡಿಮೆಯಾಗಿ ಚಳಿಗಾಲದತ್ತ ಕಾಲಿಡುವ ಕಾಲ. ಆ ಸಮಯದಲ್ಲಿ (Best Places to visit in September in India) ಪ್ರವಾಸ ಮಾಡುವುದು ಹಲವರಿಗೆ ಇಷ್ಟವಾಗುತ್ತದೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಯಾವ ಊರಿಗೆ ಪ್ರವಾಸ ಹೋಗೋಣ ಎನ್ನುವ ಯೋಚನೆಯನ್ನು ನೀವು ಮಾಡುತ್ತಿರಬಹುದು. ಅದಕ್ಕೆಂದೇ ನಾವಿಲ್ಲಿ ನಿಮಗಾಗಿ ಮಾಹಿತಿಗಳನ್ನು ಸಂಗ್ರಹಿಸಿದ್ದೇವೆ. ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ಪ್ರವಾಸ ಮಾಡಲು ಸೂಕ್ತವಾದ ಸ್ಥಳಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಾಲಿಂಪಾಂಗ್‌


ಪಶ್ಚಿಮ ಬಂಗಾಳದಲ್ಲಿ ಕಾಲಿಂಪಾಂಗ್‌ ಹೆಸರಿನ ಸ್ಥಳವಿದೆ. ಇದು ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯಲ್ಲಿ ಶ್ರೀಮಂತವಾದ ಹಿಮಾಲಯನ್‌ ಪಟ್ಟಣವಾಗಿದೆ. 18ನೇ ಶತಮಾನದ ಆರಂಭದಲ್ಲಿ ಭೂತಾನ್‌ ರಾಜರು ಈ ಜಾಗವನ್ನು ಸ್ವಾಧೀನಪಡಿಸಿಕೊಳ್ಳುವವರೆಗೂ ಇದು ಸಿಕ್ಕಿಂ ರಾಜನ ಆಸ್ತಿಯ ಭಾಗವಾಗಿತ್ತು. 1865 ರಲ್ಲಿ, ಆಂಗ್ಲೋ-ಭೂತಾನ್ ಯುದ್ಧದ ನಂತರ, ಕಾಲಿಂಪಾಂಗ್ ಅನ್ನು ಡಾರ್ಜಿಲಿಂಗ್‌ಗೆ ಸೇರಿಸಲಾಯಿತು. ಡಾರ್ಜಿಲಿಂಗ್‌ನಲ್ಲಿ ಚಹಾ ತೋಟಗಳು ಹೆಚ್ಚಾಗತೊಡಗಿದಂತೆ ಕಾಲಿಂಪಾಂಗ್‌ ಕೂಡ ಕಾರ್ಮಿಕರ ನೆಲೆಯಾಗತೊಡಗಿತು. ಇಲ್ಲಿ ಡಿಯೊಲೊ ಹಿಲ್‌, ಕಾಲಿಂಪಾಂಗ್‌ ವಿಜ್ಞಾನ ಕೇಂದ್ರ, ಪೈನ್‌ ವ್ಯೂವ್‌ ನರ್ಸರಿ, ಡಾ.ಗ್ರಹಂ ಮನೆ, ದುರ್ಪಿನ್‌ ದಾರಾ ಹಿಲ್‌, ಮಂಗಲ್‌ ಧಾಮ್‌ ದೇವಸ್ಥಾನವಿದ್ದು, ಈ ಎಲ್ಲ ಸ್ಥಳಗಳಿಗೆ ನೀವು ಭೇಟಿ ನೀಡಬಹುದು.

ದೂವರ್ಸ್‌


ದೂವರ್ಸ್‌ ಪಶ್ಚಿಮ ಬಂಗಾಳದ ಅದ್ಭುತ ನಗರಗಳಲ್ಲಿ ಒಂದು. ಈ ನಗರದಲ್ಲಿ ನಿಮಗೆ ಅತ್ಯದ್ಭುತವಾದ ನಿಸರ್ಗ ಸೌಂದರ್ಯವನ್ನು ಹೊಂದಿರುವಂತಹ ಸಣ್ಣ ಸಣ್ಣ ಗ್ರಾಮಗಳು ಸಿಗುತ್ತವೆ. ಇಲ್ಲಿ ಚಹಾ ತೋಟಗಳು, ವನ್ಯಜೀವಿ ಅಭಯಾರಣ್ಯಗಳು, ರಾಷ್ಟ್ರೀಯ ಉದ್ಯಾನಗಳು ಹಾಗೆಯೇ ಮನಸೂರೆಗೊಳಿಸುವ ಹಿಮಾಲಯದ ಪರ್ವತಗಳ ಬ್ಯಾಕ್‌ಗ್ರೌಂಡ್‌ ಅನ್ನೂ ನೀವಿಲ್ಲಿ ಕಾಣಬಹುದು. ನಿಸರ್ಗ ಪ್ರೇಮಿಗಳಿಗೆ ಈ ಸ್ಥಳ ಅತಿ ಇಷ್ಟವಾಗುವ ಸ್ಥಳವಾಗಿದೆ. ಇಲ್ಲಿ ನೀವು ಏಲಕ್ಕಿ ಪ್ಲಾಂಟೇಶನ್‌ಗಳನ್ನೂ ಕಾಣಬಹುದು. ಛಪ್ರಮರಿ ವನ್ಯಜೀವಿ ಅಭಯಾರಣ್ಯ, ಗೊರುಮರ ರಾಷ್ಟ್ರೀಯ ಉದ್ಯಾನವನ, ಛಿಲಪಾತ ಅರಣ್ಯಕ್ಕೆ ಭೇಟಿ ನೀಡಲು ಮರೆಯದಿರಿ.

ದಮನ್‌ ಮತ್ತು ದಿಯು


ನೀವು ಕಡಲ ಕಿನಾರೆಯನ್ನು ಇಷ್ಟಪಡುವಂತವರಾದರೆ ದಮನ್‌ ಮತ್ತು ದಿಯು ಕಡೆ ಪ್ರವಾಸವನ್ನು ಪ್ಲ್ಯಾನ್‌ ಮಾಡಿಕೊಳ್ಳಿ. ಪೋರ್ಚುಗೀಸರ ಶ್ರೀಮಂತ ಇತಿಹಾಸವಿರುವ ದ್ವೀಪಗಳಿವು. ಗುಜರಾತ್‌ನ ಸೌರಾಷ್ಟ್ರ ಬಂದರಿಗೆ ಹತ್ತಿರದಲ್ಲೇ ಈ ದ್ವೀಪಗಳಿವೆ. ಇಲ್ಲಿ ಪೋರ್ಚುಗೀಸ್‌ ಸಂಸ್ಕೃತಿಯ ಜತೆ ಗುಜರಾತಿ ಸಂಸ್ಕೃತಿ ಮಿಶ್ರವಾಗಿರುವುದನ್ನು ನೀವು ಕಾಣಬಹುದು. ಸೆಪ್ಟೆಂಬರ್‌ ಸಮಯದಲ್ಲಂತೂ ಇಲ್ಲಿನ ಹವಾಮಾನ ಎಲ್ಲರಿಗೂ ಇಷ್ಟವಾಗುತ್ತದೆ. ಇಲ್ಲಿ ನೀವು ಗೋಮ್ತಿಮಾತಾ ಬೀಚ್‌ಗೆ ಹೋಗಬಹುದು ಹಾಗೆಯೇ ನಾಯ್ಡಾ ಗುಹೆ, ಸೀಶೆಲ್ಸ್‌ ಮ್ಯೂಸಿಯಂ ಅನ್ನು ಎಕ್ಸ್‌ಪ್ಲೋರ್‌ ಮಾಡಬಹುದು. ಇಲ್ಲಿಂದ ನೀವು ಸೇಂಟ್‌ ಪೌಲ್‌ ಚರ್ಚ್‌, ನಾಗೋವ ಬೀಚ್‌, ದಿಯು ಕೋಟೆ ಸೇರಿ ಅನೇಕ ತಾಣಗಳಿಗೆ ಭೇಟಿ ನೀಡಬಹುದು.

ತರ್ಕಾಲಿ


ಮಹಾರಾಷ್ಟ್ರದ ಇನ್ನೊಂದು ಪ್ರಸಿದ್ಧ ಪ್ರವಾಸಿ ತಾಣವೆಂದರೆ ಅದು ತರ್ಕಾಲಿ. ಇಲ್ಲಿ ಬೆಟ್ಟ ಗುಡ್ಡಗಳು, ಸ್ವಚ್ಛವಾದ ಬೀಚ್‌ಗಳು, ಧುಮ್ಮಿಕ್ಕಿ ಹರಿಯುವ ಜಲಪಾತವನ್ನು ಕಾಣಬಹುದು. ಮಳೆಗಾಲ ಮುಗಿಯುವ ಸಮಯದಲ್ಲಂತೂ ತರ್ಕಾಲಿ ಸಂಪೂರ್ಣವಾಗಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುತ್ತದೆ. ಇಲ್ಲಿ ಹಲವಾರು ವಾಟರ್‌ ಗೇಮ್ಸ್‌ಗಳನ್ನೂ ಆಡುವುದಕ್ಕೆ ಅವಕಾಶವಿದೆ. ಇಲ್ಲಿಂದ ನೀವು ಸಿಂಧುದುರ್ಗ ಕೋಟೆ, ಕರ್ಲಿ ಹಿನ್ನೀರು, ಡಿಯೋಗರ್‌, ಸುನಾಮಿ ದ್ವೀಪಕ್ಕೆ ಭೇಟಿ ನೀಡಬಹುದು.

ಜಿರೊ


ಅರುಣಾಚಲ ಪ್ರದೇಶದಲ್ಲಿ ಸಿಗುವ ಸುಂದರವಾದ ಪ್ರವಾಸಿ ತಾಣಗಳಲ್ಲಿ ಒಂದು ಜಿರೊ. ಇದು ಈಶಾನ್ಯದಲ್ಲಿನ ಅತ್ಯಂತ ಹಳೆಯ ನಗರ ಎಂದೂ ಕರೆಸಿಕೊಳ್ಳುತ್ತದೆ. ಏಕಾಂತವಾಗಿ ಮನಸ್ಸಿಗೆ ನೆಮ್ಮದಿ ತಂದುಕೊಳ್ಳಬೇಕು ಎಂದುಕೊಳ್ಳುವವರು ಇಲ್ಲಿಗೆ ಪ್ರಯಾಣ ಮಾಡಬಹುದು. ಇಲ್ಲಿನ ಹಚ್ಚ ಹಸಿರಿನ ಕಾಡು, ತಂಗಾಳಿ ಇಲ್ಲಿನ ಆದಿವಾಸಿ ಜನರ ಜೀವನ ಎಲ್ಲವೂ ನಿಮಗೆ ಹಿತವೆನಿಸುತ್ತವೆ. ಇಲ್ಲಿ ಟ್ಯಾಲಿ ವ್ಯಾಲಿ ವನ್ಯಜೀವಿ ಅಭಯಾರಣ್ಯವಿದ್ದು, ಅಲ್ಲಿ ನೀವು ಚಿರತೆಗಳನ್ನು ಕಾಣಬಹುದು. ಇಲ್ಲಿ ನೀವು ಕಿಲೆ ಪಖೋ, ಟ್ರೈನ್‌ ಫಿಶ್‌ ಫಾರ್ಮ್‌, ಮೇಘನಾ ಕೇವ್‌ ಟೆಂಪಲ್‌, ಆರ್ಚಿಡ್‌ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಲು ಮರೆಯದಿರಿ.

ಅಮೃತಸರ


ಗೋಲ್ಡನ್‌ ಟೆಂಪಲ್‌ಗೆ ಪ್ರಸಿದ್ಧವಾಗಿರುವ ಅಮೃತಸರ ಕೂಡ ಸೆಪ್ಟೆಂಬರ್‌ ತಿಂಗಳಲ್ಲಿ ಪ್ರವಾಸಕ್ಕೆ ಸೂಕ್ತವಾದ ಸ್ಥಳವಾಗಿದೆ. ಸಂಸ್ಕೃತಿ, ಧಾರ್ಮಿಕತೆ, ಆಹಾರ, ಸಂಪ್ರದಾಯ ಎಲ್ಲ ವಿಚಾರದಲ್ಲೂ ಈ ನಗರ ವಿಶೇಷವಾಗಿದೆ. ಇಲ್ಲಿಗೆ ದೇಶದ ಪ್ರವಾಸಿಗರಷ್ಟೇ ಅಲ್ಲದೆ ವಿದೇಶಿ ಪ್ರವಾಸಿಗರೂ ಬರುತ್ತಿರುತ್ತಾರೆ. ಇಲ್ಲಿಗೆ ಹೋದ ಮೇಲೆ ನೀವು ಇತಿಹಾಸ ಪ್ರಸಿದ್ಧ ಜಲಿಯನ್‌ವಾಲಾ ಬಾಗ್‌, ಶ್ರೀ ಹರ್ಮಿಂದರ್‌ ಸಾಹಿಬ್‌, ದುರ್ಗಿಯಾನಾ ದೇವಸ್ಥಾನ, ಪಾರ್ಟಿಶನ್‌ ಮ್ಯೂಸಿಯಂ, ಮಂದಿರ್‌ ಮಾತಾ ಲಾಲ್‌ ದೇವಿ, ಗೋಬಿಂದ್‌ಗರ್‌ ಕೋಟೆಯನ್ನು ನೋಡಲೇಬೇಕು.

ಶ್ರೀನಗರ


ಭೂಮಿಯ ಮೇಲಿನ ಸ್ವರ್ಗವನ್ನು ನೋಡಬೇಕೆಂದರೆ ನೀವು ಶ್ರೀನಗರಕ್ಕೆ ಹೋಗಬೇಕು. ಸೆಪ್ಟೆಂಬರ್‌ನಲ್ಲಿ ಮಳೆಗಾಲವೂ ಮುಗಿದಿರುತ್ತದಾದ್ದರಿಂದ ಶ್ರೀನಗರ ಒಂದು ರೀತಿಯಲ್ಲಿ ಮಂಜಿನ ನಗರದಂತೆ ಕಾಣಿಸಿಕೊಳ್ಳುತ್ತದೆ. ದೇಶದ ಎರಡನೇ ಅತಿ ದೊಡ್ಡ ಸರೋವರ ಎನ್ನುವ ಖ್ಯಾತಿಯ ದಾಲ್‌ ಸರೋವರವನ್ನು ನೀವಿಲ್ಲಿ ಕಾಣಬಹುದು. ಅದೊಂದೇ ಅಲ್ಲದೆ ಹಲವಾರು ಸರೋವರಗಳು, ಹಿಮಾವೃತ ಪರ್ವತಗಳನ್ನು ನೀವಿಲ್ಲಿ ಕಾಣಬಹುದು. ಶಂಕರಾಚಾರ್ಯ ಬೆಟ್ಟ, ನಿಶತ್‌ ಗಾರ್ಡನ್‌, ಸೊನಾಮರ್ಗ್‌, ಇಂದಿರಾ ಗಾಂಧಿ ತುಲಿಪ್‌ ಗಾರ್ಡನ್‌, ಛಸ್ಮೆ ಶಾಹಿ, ನಿಗೀನ್‌ ಸರೋವರ ಸೇರಿ ಇನ್ನೂ ಅನೇಕ ಪ್ರವಾಸಿ ತಾಣಗಳು ಈ ನಗರದಲ್ಲಿವೆ.

ನೀಮ್‌ರಾನ್‌


ರಾಜಸ್ಥಾನದಲ್ಲಿ ಸೆಪ್ಟೆಂಬರ್‌ನಲ್ಲಿ ಭೇಟಿ ನೀಡಬೇಕಾದ ಸ್ಥಳವೆಂದರೆ ಅವರು ನೀಮ್‌ರಾನ್‌. ರಾಜಸ್ಥಾನದ ಅದ್ಧೂರಿತನವನ್ನು ಇಲ್ಲಿಯೂ ಕಾಣಬಹುದು. ಇಲ್ಲಿನ ನೀಮ್‌ರಾನ್‌ ಕೋಟೆಯಲ್ಲಿ ನೀವು ಆ ಅದ್ಧೂರಿತನವನ್ನು ಗಮನಿಸಬಹುದು. ಅದರಲ್ಲೂ ಮಳೆಗಾಲ ಮುಗಿದ ಮೇಲೆ ಸುರಿಯುವ ಸಣ್ಣ ಜರಿಮಳೆಯೇನಾದರೂ ಸುರಿಯುತ್ತಿದ್ದರೆ ಈ ಸ್ಥಳ ನೋಡುವುದಕ್ಕೆ ಅದ್ಭುತವಾಗಿ ಕಾಣುತ್ತದೆ. ಇಲ್ಲಿ ಅಲ್ಲಲ್ಲಿ ಸ್ಥಳೀಯ ಸಂಗೀತ ಕಲಾವಿದರು, ಜಾನಪದ ಕಲಾವಿದರು ಸಂಗೀತ ಕಚೇರಿಗಳನ್ನೂ ನಡೆಸುತ್ತಿರುತ್ತಾರಾದ್ದರಿಂದ ಸಂಗೀತ ಪ್ರಿಯರಿಗೆ ಇಷ್ಟವಾಗುತ್ತದೆ. ಇಲ್ಲಿ ನೀವು ಸರಿಸ್ಕಾ ರಾಷ್ಟ್ರೀಯ ಉದ್ಯಾನವನ, ಸಿಲಿಸೇರ್‌ ಸರೋವರ, ವಿನಯ್ ವಿಲಾಸ್‌ ಮಹಲ್‌, ಬಾಲ ಕಿಲಾ ಮತ್ತು ಪುರಾತನ ವೃಂದಾವನ ಅರಮನೆಯನ್ನು ನೋಡಬಹುದು.

ಗೋವಾ


ಕರ್ನಾಟಕದಲ್ಲಿರುವ ಎಲ್ಲರಿಗೂ ತಿಳಿದಿರುವ ಪ್ರಸಿದ್ಧ ಪ್ರವಾಸಿ ತಾಣ ಗೋವಾ. ಇಲ್ಲಿ ಹಲವಾರು ಬೀಚ್‌ಗಳಿದ್ದು, ಕಡಲ ಕಿನಾರೆಯಲ್ಲಿ ಮಿಂದೆದ್ದು ಎಂಜಾಯ್‌ ಮಾಡಲು ಬಯಸುವವರಿಗೆ ಇದು ಹೇಳಿ ಮಾಡಿಸಿದ ಸ್ಥಳ ಎನ್ನಬಹುದು. ಈ ಮಳೆಗಾಲದ ಸಮಯದಲ್ಲಿ ಬೀಚ್‌ನಲ್ಲಿ ಆಟವಾಡುವುದಕ್ಕೆ ಬಿಡುವುದಿಲ್ಲವಾದ್ದರಿಂದ ನೀವು ಸೆಪ್ಟೆಂಬರ್‌ನಲ್ಲಿ ಗೋವಾ ಟ್ರಿಪ್‌ ಪ್ಲಾನ್‌ ಮಾಡಿಕೊಳ್ಳಬಹುದು. ಇಲ್ಲಿ ನೀವು ಅಗುಂದ ಕೋಟೆ, ಚಪೋರಾ ಕೋಟೆ, ಬಾಮ್‌ ಜೀಸಸ್‌ ಬಸಿಲಿಕ, ಸಲೀಂ ಅಲಿ ಪಕ್ಷಿಗಳ ಅಭಯಾರಣ್ಯ, ಬಾಗಾ ಬೀಚ್‌, ಅಂಜುನಾ ಬೀಚ್‌ ಸೇರಿ ಅನೇಕ ಸ್ಥಳಗಳಿಗೆ ಭೇಟಿ ನೀಡಬಹುದು.

ನೈನಿತಾಲ್‌


ಉತ್ತರಾಖಂಡದ ಕಡೆ ಪ್ರವಾಸ ಹೋಗುವುದಾದರೆ ನೈನಿತಾಲ್‌ಗೆ ಹೋಗುವುದಕ್ಕೆ ಪ್ಲ್ಯಾನ್‌ ಮಾಡಿಕೊಳ್ಳಿ. ಇದು ಆ ರಾಜ್ಯದ ಉತ್ತಮ ಬೆಟ್ಟಗಳ ನಗರಿ. ಇಲ್ಲಿ ಸುಂದರವಾದರ ಸರೋವರಗಳು, ಹಳೆಯ ಕಾಟೇಜ್‌ಗಳು ನಿಮ್ಮನ್ನು ಸೆಳೆಯುತ್ತವೆ. ಅದರಲ್ಲೂ ಸೆಪ್ಟೆಂಬರ್‌ ಸಮಯದಲ್ಲಿನ ಹವಾಮಾನಕ್ಕೆ ಈ ಸ್ಥಳ ಹೇಳಿ ಮಾಡಿಸಿದ್ದು ಎನ್ನಬಹುದು. ಇಲ್ಲಿಂದ ನೀವು ನೈನಿ ಸರೋವರ, ನೈನಿತಾಲ್‌ ಮೃಗಾಲಯ, ನೈನಾ ದೇವಿ ದೇವಸ್ಥಾನ, ಏರಿಯಲ್‌ ರೋಪ್‌ವೇ, ದಿ ಮಾಲ್‌ ರೋಡ್‌, ಎಕೋ ಕೇವ್‌ ಗಾರ್ಡನ್ಸ್‌ ಮತ್ತು ರಾಜ್‌ ಭವನಕ್ಕೆ ಭೇಟಿ ನೀಡಬಹುದು.

ಅಂಡಮಾನ್‌


ಕಡಲ ದಡಗಳಲ್ಲಿ ಕುಳಿತು ಮನಸ್ಸಿಗೆ ನೆಮ್ಮದಿ ತಂದುಕೊಳ್ಳಬೇಕೆನ್ನುವ ಮನಸ್ಸಿದ್ದರೆ ಅಂಡಮಾನ್‌ನತ್ತ ಪ್ರಯಾಣ ಬೆಳೆಸಿ. ಇದು ಒಂದು ರೀತಿಯಲ್ಲಿ ಮನಮೋಹಕವಾದ ದ್ವೀಪವಾಗಿದೆ. ಇಲ್ಲಿ ನೀವು ಸೂರ್ಯೋದಯ, ಸೂರ್ಯಾಸ್ತಮಾನದ ವಿಹಂಗಮ ನೋಟವನ್ನು ಕಣ್ತುಂಬಿಸಿಕೊಳ್ಳುವುದಷ್ಟೇ ಅಲ್ಲದೆ ಹಲವಾರು ರೀತಿಯ ವಾಟರ್‌ ಗೇಮ್ಸ್‌ಗಳನ್ನು ಆಡಬಹುದು. ಇಲ್ಲಿ ನೀವು ಹ್ಯಾವ್ಲಾಕ್ ದ್ವೀಪ, ನೀಲ್ ದ್ವೀಪ, ರಾಸ್ ದ್ವೀಪ, ನಾರ್ತ್ ಬೇ ಐಲ್ಯಾಂಡ್, ಬಾರಾತಂಗ್ ದ್ವೀಪ, ಮೌಂಟ್ ಹ್ಯಾರಿಯೆಟ್ ರಾಷ್ಟ್ರೀಯ ಉದ್ಯಾನವನ, ಚಿಧಿಯಾ ಟಪ್ಪು, ಧನಿನಲ್ಲ ಮ್ಯಾಂಗ್ರೋವ್ ನೇಚರ್ ವಾಕ್ ವೇ, ಪಂಚವಟಿ ಜಲಪಾತಗಳು, ಕತ್ಬರ್ಟ್ ಬೇ ವನ್ಯಜೀವಿ ಅಭಯಾರಣ್ಯ, ಎಲೆಫೆಂಟ್ ಬೀಚ್‌ಗೆ ಭೇಟಿ ನೀಡಬಹುದು. ಸ್ಕೂಬಾ ಡೈವಿಂಗ್‌ನಂತಹ ಆಟವನ್ನು ನೀವಲ್ಲಿ ಆಡಬಹುದು.

ಊಟಿ


ಪ್ರಕೃತಿ ಪ್ರೇಮಿಗಳಿಗೆ ಇಷ್ಟವಾಗುವ ತಾಣ ಊಟಿ. ಕರ್ನಾಟಕದ ನೆರೆ ರಾಜ್ಯ ತಮಿಳುನಾಡಿನಲ್ಲಿರುವ ಇಲ್ಲಿ ಅನೇಕ ಬೆಟ್ಟ ಗುಡ್ಡಗಳಿದ್ದು, ಈ ಸಮಯದಲ್ಲಿ ಎಲ್ಲವೂ ಹಚ್ಚ ಹಸಿರಿನಿಂದ ಕೂಡಿರುತ್ತವೆ. ಅದಲ್ಲದೆ ಇಲ್ಲಿನ ಸರೋವರದಲ್ಲಿ ದೋಣಿ ವಿಹಾರವನ್ನೂ ಮಾಡಬಹುದು. ಇಲ್ಲಿನ ಟೀ ಮ್ಯೂಸಿಯಂಗೆ ಭೇಟಿ ನೀಡುವುದನ್ನು ಮರೆಯಬೇಡಿ. ಇಲ್ಲಿರುವ ದೊಡ್ಡಬೆಟ್ಟದಲ್ಲಿ ಸ್ಕೇಲಿಂಗ್‌ ಮಾಡಬಹುದು. ಪೈಕಾರಾ ಜಲಪಾತದಲ್ಲಿ ನೀರಿನಲ್ಲಿ ಆಟವಾಡಬಹುದು. ಪೈನ್‌ ಕಾಡಿನಲ್ಲಿ ಕುಳಿತು ಸ್ಥಳೀಯ ಖಾದ್ಯಗಳನ್ನು ತಿನ್ನಬಹುದಾಗಿದೆ. ಇಲ್ಲಿ ನೀವು ಊಟಿ ಸರೋವರ್‌, ಬೊಟಾನಿಕಲ್‌ ಗಾರ್ಡನ್ಸ್‌, ದೊಡ್ಡಬೆಟ್ಟ ಶಿಖರ, ರೋಸ್‌ ಗಾರ್ಡನ್‌, ಪೈಕರ ಸರೋವರ ಮತ್ತು ಜಲಪಾತ, ಸರ್ಕಾರಿ ವಸ್ತುಸಂಗ್ರಹಾಲಯವನ್ನು ನೋಡಬಹುದು.

ಕೂರ್ಗ್‌(ಕೊಡಗು)


ಕರ್ನಾಟಕದಲ್ಲಿ ನೀವು ಸೆಪ್ಟೆಂಬರ್‌ ತಿಂಗಳಲ್ಲಿ ಭೇಟಿ ನೀಡಬಹುದಾದ ಅದ್ಭುತ ಸ್ಥಳಗಳಲ್ಲಿ ಒಂದೆಂದರೆ ಅದು ಕೊಡಗು. ಹಸಿರೇ ತುಂಬಿರುವ ಈ ಪುಟ್ಟ ಪಟ್ಟಣದಲ್ಲಿ ನೀವು ನಿಸರ್ಗ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಬಹುದು. ಪುಟ್ಟ ಪುಟ್ಟ ಬೆಟ್ಟಗಳು, ಅದನ್ನು ಆವರಿಸಿಕೊಂಡಿರುವ ಮಂಜು ಎಲ್ಲವೂ ನಿಮ್ಮನ್ನು ಆಕರ್ಷಿಸುತ್ತದೆ. ಇಲ್ಲಿ ಅತ್ಯದ್ಭುತ ರೆಸಾರ್ಟ್‌ಗಳೂ ಇದ್ದು, ನೀವು ಒಂದೆರೆಡು ದಿನಗಳ ಮಟ್ಟಿಗೆ ಆರಾಮವಾಗಿ ಇಲ್ಲಿದ್ದು ಬರಬಹುದು. ಇಲ್ಲಿ ಆನೆ ಸವಾರಿ, ರಿವರ್‌ ರಾಫ್ಟಿಂಗ್‌, ಟ್ರೆಕ್ಕಿಂಗ್‌, ಕ್ಯಾಂಪಿಂಗ್‌, ಬೋಟಿಂಗ್‌, ಜೀಪ್‌ ಸಫಾರಿಯನ್ನು ನೀವು ಮಾಡಬಹುದು. ಕೊಡಗಿಗೆ ಭೇಟಿ ಕೊಟ್ಟಾಗ ಅಬ್ಬೆ ಫಾಲ್ಸ್‌, ತಡಿಯಂಡಮೋಲ್ ಶಿಖರ, ಮಲ್ಲಳ್ಳಿ ಜಲಪಾತ, ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯ, ಕುಮಾರ ಪರ್ವತ ಬೆಟ್ಟ, ರಾಜಾ ಸೀಟ್, ಬ್ರಹ್ಮಗಿರಿ ಬೆಟ್ಟ, ಕಾಫಿ ತೋಟ, ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ಕೊಡಲು ಮರೆಯದಿರಿ.

ಕೇರಳ


ದೇವರ ನಾಡು ಎಂದೇ ಕರೆಸಿಕೊಳ್ಳುವ ಕೇರಳಕ್ಕೆ ಈ ಸಮಯದಲ್ಲಿ ನೀವು ಭೇಟಿ ನೀಡಬೇಕು. ಇಲ್ಲಿ ಹಲವಾರು ಪ್ರವಾಸಿ ತಾಣಗಳಿವೆ. ಮಳೆಗಾಲದ ಸಮಯದಲ್ಲಿ ಪೂರ್ತಿ ರಾಜ್ಯವೇ ಹಚ್ಚ ಹಸಿರಿನಿಂದ ಕಂಗೊಳಿಸುತ್ತದೆ. ಇಲ್ಲಿ ಬೋಟಿಂಗ್‌ ಮಾಡಬಹುದು. ಹಾಗೆಯೇ ಆಯುರ್ವೇದ ಸ್ಪಾಗಳು ಕೂಡ ಇರುವುದರಿಂದ ದೇಹಕ್ಕೆ ಸ್ವಲ್ಪ ವಿಶ್ರಾಂತಿಯನ್ನೂ ನೀಡಬಹುದು. ಇಲ್ಲಿನ ಆಹಾರ ಪದ್ಧತಿ ಕೂಡ ನಿಮಗೆ ಇಷ್ಟವಾಗುತ್ತದೆ. ಬ್ಯಾಕ್‌ವಾಟರ್‌ ಕ್ರೂಸ್‌, ಹೌಸ್‌ಬೋಟ್‌ ಸ್ಟೇಗೆ ಕೇರಳ ಪ್ರಸಿದ್ಧ.

ಮನಾಲಿ


ಪ್ರೇಮಿಗಳ ಪ್ರೀತಿಯ ಮನಾಲಿ ಕೂಡ ಸೆಪ್ಟೆಂಬರ್‌ನಲ್ಲಿ ಭೇಟಿ ನೀಡಲು ಸೂಕ್ತ ಸ್ಥಳವಾಗಿದೆ. ಹಾಗೆಯೇ ಏಕಾಂಗಿ ಆಗಿ ಟ್ರಿಪ್‌ ಹೋಗುವವರಿಗೂ ಇದು ಇಷ್ಟವಾಗುವ ಸ್ಥಳ. ಇಲ್ಲಿನ ಹಿಮಾವೃತ ಪರ್ವತಗಳು, ಅವುಗಳ ಮಧ್ಯೆ ಬಳುಕುತ್ತ ಹರಿಯುವ ನದಿಗಳು, ವಿಶೇಷ ಸಂಸ್ಕೃತಿಯನ್ನು ಹೊಂದಿರುವ ದೇಗುಲಗಳು ಎಲ್ಲವೂ ನಿಮಗೆ ಮನಸ್ಸಿಗೆ ಹಿತವೆನಿಸುತ್ತವೆ. ಇಲ್ಲಿ ನೀವು ಹಡಿಂಬ ದೇವಿ ದೇವಸ್ಥಾನ, ದಿ ಮನಾಲಿ ಗೊಂಪಾ, ಹಮ್ಪ್ತಾ ಪಾಸ್‌, ಜೋಗಿಣಿ ಜಲಪಾತ, ಸೊಲಂಗ್‌ ವ್ಯಾಲಿ, ಭ್ರಿಗು ಸರೋವರ ಹಾಗೆಯೇ ಇನ್ನೂ ಅನೇಕ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು.

ರಿಷಿಕೇಶ


ಅಧ್ಯಾತ್ಮದತ್ತ ಹೆಚ್ಚು ಒಲವಿರುವವರು ರಿಷಿಕೇಶದತ್ತ ಪ್ರಯಾಣ ಬೆಳೆಸಿ. ಭಾರತದ ಪವಿತ್ರ ಸ್ಥಳಗಳಲ್ಲಿ ಇದೂ ಒಂದು. ಇಲ್ಲಿ ದೈವ ಭಕ್ತಿ ಮೆರೆಯುವುದಷ್ಟೇ ಅಲ್ಲದೆ ರಿಫರ್‌ ರ್ಯಾಫ್ಟಿಂಗ್‌, ಹೈಕಿಂಗ್‌ ಮತ್ತು ಟ್ರೆಕ್ಕಿಂಗ್‌ ಅನ್ನೂ ಮಾಡಬಹುದು. ಬಂಗೀ ಜಂಪಿಂಗ್‌ ಮಾಡುವ ಧೈರ್ಯವಿರುವವರಿಗೆ ಇಲ್ಲಿ ಅದಕ್ಕೂ ಅವಕಾಶವಿದೆ. ಅದಲ್ಲದೆ ಗಂಗಾ ನದಿ ತಟದಲ್ಲಿ ನಡೆಯುವ ಗಂಗಾ ಆರತಿಯನ್ನು ನೋಡಲು ಮರೆಯದಿರಿ. ಹಾಗೆಯೇ ಇಲ್ಲಿನ ಆಯುರ್ವೇದಿಕ್‌ ಸ್ಪಾಗಳಲ್ಲಿ ಮಸಾಜ್‌ ಮಾಡಿಸಿಕೊಳ್ಳುವುದನ್ನೂ ಮಿಸ್‌ ಮಾಡಿಕೊಳ್ಳಬೇಡಿ. ಇಲ್ಲಿ ಸಮೀಪದಲ್ಲಿ ನೀವು ಲಕ್ಷ್ಮಣ ಝುಲಾ, ರಾಮ್‌ ಝುಲಾ, ತೇರಾ ಮಂಜಿಲ್‌ ಮಂದಿರ, ತ್ರಿವೇಣಿ ಘಾಟ್‌, ಶ್ರೀ ಭಾರತ್‌ ಮಂದಿರ, ಶಿವಪುರಿ ತಾಣಗಳಿವೆ.

ಲಡಾಖ್‌


ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಲೇ ಲಡಾಕ್‌ನ್ನು ಭೇಟಿ ನೀಡುವುದಕ್ಕೆ ಇದು ಸೂಕ್ತ ಸಮಯ. ಟಿಬೆಟಿಯನ್‌ ಬೌದ್ಧ ಮಠಗಳಿಂದ ತುಂಬಿರುವ ಲಡಾಕ್‌ನಲ್ಲಿ ಪಾಂಗಾಂಗ್‌ ಸರೋವರ, ಪರ್ವತ ಶ್ರೇಣಿ ಎಲ್ಲವೂ ನಿಮ್ಮನ್ನು ಸೆಳೆಯುತ್ತದೆ. ಅದರ ಜತೆಗೆ ನುಬ್ರಾ ಕಣಿವೆಗ ಕೂಡ ಲೇ ಲಡಾಕ್‌ ಸನಿಹದಲ್ಲೇ ಇದ್ದು, ಅದಕ್ಕೂ ಕೂಡ ನೀವು ಭೇಟಿ ನೀಡಬಹುದು. ಟ್ರೆಕ್ಕಿಂಗ್‌, ಮೌಂಟೇನ್‌ ಬೈಕಿಂಗ್‌, ಜೀಪ್‌ ಸಫಾರಿ, ಮೋಟಾರ್‌ ಸೈಕಲ್‌ ರೋಡ್‌ ಟ್ರಿಪ್‌ ಸೇರಿ ಇನ್ನಷ್ಟು ರೀತಿಯ ಸಾಹಸಮಯ ಕೆಲಸಗಳನ್ನು ನೀವಿಲ್ಲಿ ಮಾಡಬಹುದು. ಈ ಸ್ಥಳಕ್ಕೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ಅದು ಜೂನ್‌ನಿಂದ ಸೆಪ್ಟೆಂಬರ್‌.

ಕೊಡೈಕೆನಾಲ್‌


ತಮಿಳುನಾಡಿನ ಪ್ರಸಿದ್ಧ ಕೊಡೈಕೆನಾಲ್‌ ಭಾರತದಲ್ಲಿ ಅತ್ಯಂತ ಪ್ರಸಿದ್ಧ ಹನಿಮೂನ್‌ ತಾಣಗಳಲ್ಲಿ ಒಂದಾಗಿದೆ. ಲೇಕ್‌ಸೈಡ್‌ ರೆಸಾರ್ಟ್‌ಗಳಿಂದಲೇ ತುಂಬಿಕೊಂಡಿರುವ ಈ ಪಟ್ಟಣದಲ್ಲಿ ನೀವು ಮಂಜು ತುಂಬಿದ ಬೆಟ್ಟಗಳನ್ನು, ಜಲಪಾತಗಳನ್ನು ಕಾಣಬಹುದು. ಪಳನಿ ಬೆಟ್ಟಗಳ ಇಳಿಜಾರಿನಲ್ಲಿರುವ ಈ ಪಟ್ಟಣ ಸಮುದ್ರ ಮಟ್ಟದಿಂದ 7200 ಅಡಿ ಎತ್ತರದಲ್ಲಿದೆ. ಇಲ್ಲಿ ನೀವು ಬೆಟ್ಟಗಳನ್ನು ಹತ್ತುವುದರೊಂದಿಗೆ ಸೈಕ್ಲಿಂಗ್‌, ಹೈಕಿಂಗ್‌, ಟ್ರೆಕ್ಕಿಂಗ್‌ ಮಾಡಬಹುದಾಗಿದೆ. ಇಲ್ಲಿಂದ ನೀವು ಮನ್ನವನೂರ್‌ ಹೊಳೆ, ಬೆರಿಜಮ್‌ ಹೊಳೆ, ಪೈನ್‌ ಫಾರೆಸ್ಟ್‌, ಡಾಲ್ಫಿನ್ಸ್‌ ನೋಸ್‌, ಪಿಲ್ಲರ್‌ ರಾಕ್ಸ್‌, ಬ್ರ್ಯಾಂಟ್‌ ಪಾರ್ಕ್‌, ಗ್ರೀನ್‌ ವ್ಯಾಲಿ ವ್ಯೂ, ಚೆಟ್ಟಿಯಾರ್‌ ಪಾರ್ಕ್‌ಗೆ ಭೇಟಿ ನೀಡಬಹುದು.

ಉದಯ್‌ಪುರ


ರಾಜಸ್ಥಾನ ದೇಶದಲ್ಲೇ ಅತ್ಯಂತ ಕಡಿಮೆ ಮಳೆ ಕಾಣುವ ರಾಜ್ಯಗಳಲ್ಲಿ ಒಂದು. ಮಳೆಗಾಲದ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುವುದು ಸೂಕ್ತ. ಸರೋವರಗಳ ನಗರವಾರ ಉದಯಪುರದ ರೊಮ್ಯಾಂಟಿಕ್‌ ನಗರ ಎಂದು ಕರೆಸಿಕೊಂಡಿದೆ. ಸಮುದ್ರ ಮಟ್ಟದಿಂದ 3100 ಅಡಿ ಎತ್ತರದಲ್ಲಿರುವ ಸಜ್ಜನ್‌ಗಢ ಅರಮನೆಯನ್ನು ನೀವಿಲ್ಲಿ ಕಾಣಬಹುದು. ಈ ಅರಮನೆಯನ್ನು ಮಾನ್ಸೂನ್‌ ಪ್ಯಾಲೇಸ್‌ ಎಂದೂ ಕರೆಯಲಾಗುತ್ತದೆ. ಅಲ್ಲಿಂದ ನಗರ ಮತ್ತು ಸರೋವರಗಳ ವಿಹಂಗಮ ನೋಟವನ್ನೂ ಕಾಣಬಹುದು. ಇಲ್ಲೊ ಬೋಟಿಂಗ್‌, ಕೇಬಲ್‌ ಕಾರ್‌ ರೋಪ್‌ವೇ ಕೂಡ ಇವೆ. ಇಲ್ಲಿ ನೀವು ಕರಕುಶಲ ವಸ್ತುಗಳನ್ನು ಶಾಪಿಂಗ್‌ ಮಾಡಬಹುದು.

ಲೊನಾವಾಲಾ


ವಾಣಿಜ್ಯ ನಗರಿ ಮುಂಬೈನಲ್ಲಿರುವವರಿಗೆ ಸಮೀಪದ ಪ್ರಸಿದ್ಧ ಪ್ರವಾಸಿ ತಾಣವೆಂದರೆ ಅದು ಲೋನಾವಾಲಾ. ಜಲಪಾತಗಳು, ಸರೋವರಗಳು ಮತ್ತು ಬೆಟ್ಟಗಳಿರುವ ಸ್ಥಳವಿದು. ಇಲ್ಲಿ ನೀವು ಕ್ಯಾಂಪಿಂಗ್‌, ಟ್ರೆಕ್ಕಿಂಗ್‌ ಜತೆ ಹಲವು ಸಾಹಸ ಕ್ರೀಡೆಗಳನ್ನು ಆಡಬಹುದಾಗಿದೆ. ಭಾಜಾ ಗುಹೆಗಳು, ಬುಶಿ ಅಣೆಕಟ್ಟು, ಕಾರ್ಲಾ ಗುಹೆಗಳು, ರಾಜ್ಮಾಚಿ ಕೋಟೆ, ರೈವುಡ್ ಸರೋವರ ಇತ್ಯಾದಿಗಳು ಲೋನಾವಾಲಾದ ಜನಪ್ರಿಯ ಪ್ರವಾಸಿ ಆಕರ್ಷಣೆಗಳಾಗಿವೆ. ಇಲ್ಲಿನ ಅಮ್ಯೂಸ್‌ಮೆಂಟ್‌ ಪಾರ್ಕ್‌ ಮತ್ತು ವ್ಯಾಕ್ಸ್‌ ಮ್ಯೂಸಿಯಂ ಅನ್ನು ನೀವು ವೀಕ್ಷಿಸಲೇಬೇಕು. ವರ್ಷ ಪೂರ್ತಿ ಈ ಸ್ಥಳಕ್ಕೆ ನೀವು ಭೇಟಿ ನೀಡಬಹುದಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Wonderla Offer: ವಂಡರ್‌ಲಾದಿಂದ ವಿಶೇಷ ಆಫರ್‌; 1 ಟಿಕೆಟ್‌ ಖರೀದಿಸಿದರೆ ಮತ್ತೊಂದು ಟಿಕೆಟ್‌ ಫ್ರೀ!

Wonderla Offer: ಸ್ನೇಹಿತರ ದಿನಾಚರಣೆ ಪ್ರಯುಕ್ತ ಆಗಸ್ಟ್ 4ರಂದು ಭಾರತದ ಅತಿದೊಡ್ಡ ಅಮ್ಯೂಸ್‌ಮೆಂಟ್ ಪಾರ್ಕ್ ವಂಡರ್‌ಲಾ ಹಾಲಿಡೇಸ್ ವಿಶೇಷ ಕೊಡುಗೆ ಘೋಷಿಸಿದೆ. ಆಗಸ್ಟ್‌ 4 ಸ್ನೇಹಿತರ ದಿನದಂದು ಒಂದು ಟಿಕೆಟ್‌ ಖರೀದಿಸಿದರೆ ಮತ್ತೊಂದು ಟಿಕೆಟ್‌ ಉಚಿತವಾಗಿರಲಿದೆ. ಈ ಕೊಡುಗೆಯು ಆನ್‌ಲೈನ್‌ನಲ್ಲಿ ಬುಕ್‌ ಮಾಡುವವರಿಗೆ ಮಾತ್ರ ಅನ್ವಯವಾಗಲಿದೆ.

VISTARANEWS.COM


on

On the occasion of Friendship Day Wonderla announced a buy one ticket get another ticket free offer
Koo

ಬೆಂಗಳೂರು: ಭಾರತದ ಅತಿದೊಡ್ಡ ಅಮ್ಯೂಸ್‌ಮೆಂಟ್ ಪಾರ್ಕ್ ವಂಡರ್‌ಲಾ ಹಾಲಿಡೇಸ್, ಸ್ನೇಹಿತರ ದಿನಾಚರಣೆ ಪ್ರಯುಕ್ತ ಆಗಸ್ಟ್ 4 ರಂದು ವಿಶೇಷ ಕೊಡುಗೆ ಘೋಷಿಸಿದೆ. (Wonderla Offer) ಆಗಸ್ಟ್‌ 4 ಸ್ನೇಹಿತರ ದಿನದಂದು ಒಂದು ಟಿಕೆಟ್‌ ಖರೀದಿಸಿದರೆ ಮತ್ತೊಂದು ಟಿಕೆಟ್‌ ಉಚಿತವಾಗಿರಲಿದೆ. ಈ ಕೊಡುಗೆಯು ಆನ್‌ಲೈನ್‌ನಲ್ಲಿ ಬುಕ್‌ ಮಾಡುವವರಿಗೆ ಮಾತ್ರ ಅನ್ವಯವಾಗಲಿದೆ.

ಈ ಕುರಿತು ವಂಡರ್‌ಲಾ ಹಾಲಿಡೇಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ. ಚಿಟ್ಟಿಲಪ್ಪಿಳ್ಳಿ ಮಾತನಾಡಿ, ಸ್ನೇಹಿತರ ದಿನವನ್ನು ಇನ್ನಷ್ಟು ವಿಶೇಷಗೊಳಿಸಲು ವಂಡರ್‌ಲಾ ಟಿಕೆಟ್‌ ಖರೀದಿಯ ಮೇಲೆ ಕೊಡುಗೆ ನೀಡಿದೆ. ಪ್ರತಿಯೊಬ್ಬರು ಹೆಚ್ಚು ಮನರಂಜನೆ ಅನುಭವಿಸುವುದು ಸ್ನೇಹಿತರು ಜತೆಗಿದ್ದ ಸಂದರ್ಭದಲ್ಲಿ. ಈ ಮನರಂಜನೆಗೆ ವೇದಿಕೆಯಾಗಿ ವಂಡರ್‌ಲಾ ಈ ಕೊಡುಗೆ ನೀಡಿರುವುದು, ತಮ್ಮ ಸ್ನೇಹಿತರೊಂದಿಗೆ ವಂಡರ್‌ಲಾಗೆ ಆಗಮಿಸಿ ಇಲ್ಲಿನ ಇನ್ನಷ್ಟು ಮೋಜು ಮಸ್ತಿ ಮಾಡಲು ಪ್ರೇರೇಪಿಸುತ್ತದೆ.

ಇದನ್ನೂ ಓದಿ: Bengaluru Power Cut: ಜು.27, 28, 30ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಈ ವಿಶೇಷ ಕೊಡುಗೆಗಳಲ್ಲಿ ಲೈವ್ ಡಿಜೆ, ವಿಶೇಷ ಸಂಜೆ ಜುಂಬಾ ಸೆಷನ್‌ಗಳು, ಮೋಜಿನ ಆಟಗಳು ಮತ್ತು ಬಹುಮಾನಗಳು, ಎಲ್ಲಾ ರೋಮಾಂಚಕ ಪಾರ್ಕ್ ರೈಡ್‌ಗಳು ಮತ್ತು ಸೌಕರ್ಯಗಳನ್ನು ಒದಗಿಸುತ್ತಿದ್ದು, ನಿಮ್ಮ ಸ್ನೇಹಿತರೊಂದಿಗೆ ಮೋಜು-ಮಸ್ತಿ ಮಾಡಲು ವಂಡರ್‌ಲಾ ಉತ್ತಮ ತಾಣವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಎಲ್ಲಾ ಉದ್ಯಾನವನಗಳು ವಿಸ್ತೃತ ಅವಧಿಯವರೆಗೆ ತೆರೆದಿರಲಿವೆ. ಹೀಗಾಗಿ ಸಂಜೆಯ ಹೆಚ್ಚುವರಿ ಸಮಯವನ್ನು ವಂಡರ್‌ಲಾದಲ್ಲಿ ಕಳೆಯಬಹುದು.

ಇದನ್ನೂ ಓದಿ: Dengue Fever: ರಾಜ್ಯದಲ್ಲಿ ನಿಫಾ ವೈರಸ್ ಪ್ರಕರಣ ಪತ್ತೆಯಾಗಿಲ್ಲ: ದಿನೇಶ್ ಗುಂಡೂರಾವ್

ಆನ್‌ಲೈನ್ ಪೋರ್ಟಲ್ https://bookings.wonderla.com/ ನಲ್ಲಿ ಮುಂಗಡವಾಗಿ ತಮ್ಮ ಪ್ರವೇಶ ಟಿಕೆಟ್‌ಗಳನ್ನು ಕಾಯ್ದಿರಿಸಬಹುದು. ಅಥವಾ ಗ್ರಾಹಕರು ನೇರವಾಗಿ ಪಾರ್ಕ್ ಕೌಂಟರ್‌ಗಳಿಂದ ಟಿಕೆಟ್‌ಗಳನ್ನು ಖರೀದಿಸಬಹುದು. ಹೆಚ್ಚಿನ ಮಾಹಿತಿಗಾಗಿ +91 80372 30333 ಅಥವಾ +91 80350 73966 ಬೆಂಗಳೂರು ಪಾರ್ಕ್ ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Continue Reading

ಪ್ರವಾಸ

Travel Tips: ಪ್ರಯಾಣದ ಪ್ರಯಾಸದಿಂದ ಪಾರಾಗುವುದು ಹೇಗೆ?

Travel Tips: ವಾರಾಂತ್ಯದಲ್ಲಿ ಮಳೆಗಾಲಕ್ಕೊಂದು ಮಜವಾದ ಟ್ರಿಪ್‌ ಹಾಕೋಣವೆಂದು ಕುಟುಂಬದವರೆಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಪ್ರಯಾಣವೆಂದರೆ ನಿಮಗೆ ಪ್ರಯಾಸ! ಟ್ರಾವೆಲ್‌ ಸಿಕ್‌ನೆಸ್‌ ಅಥವಾ ಪ್ರಯಾಣದ ಅಸ್ವಸ್ಥತೆ ಎನ್ನುವುದು ಏನಂಥ ದೊಡ್ಡ ವಿಷಯವಲ್ಲದಿದ್ದರೂ, ಮೊಣಕೈಗೆ ಕುಟ್ಟಿದಂತೆ! ಪ್ರಯಾಣ ಸುಖಕರಗೊಳಿಸುವುದು ಹೇಗೆ? ಇಲ್ಲಿದೆ ಪ್ರವಾಸ ಪ್ರಿಯರಿಗೆ ಉಪಯುಕ್ತ ಮಾಹಿತಿ.

VISTARANEWS.COM


on

Travel Tips
Koo

ಮಳೆಗಾಲ (Travel Tips) ಜೋರಾಗಿದೆ. ಎಲ್ಲ ನದಿಗಳೂ ಭೋರ್ಗರೆಯುತ್ತಿವೆ. ಯಾವುದೋ ಬೆಟ್ಟದ ತುದಿಯಿಂದ, ಗುಡ್ಡದ ಅಂಚಿನಿಂದ ಧುಮ್ಮಿಕ್ಕುವ ಜಲಪಾತವನ್ನು ನೋಡುವ ಉತ್ಸಾಹ ನಿಮಗಿದೆ. ವಾರಾಂತ್ಯದಲ್ಲಿ ಮಳೆಗಾಲಕ್ಕೊಂದು ಮಜವಾದ ಟ್ರಿಪ್‌ ಹಾಕೋಣವೆಂದು ಕುಟುಂಬದವರೆಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಪ್ರಯಾಣವೆಂದರೆ ನಿಮಗೆ ಪ್ರಯಾಸ! ಗಾಡಿ ಹತ್ತಿದ ಸ್ವಲ್ಪವೇ ಹೊತ್ತಿನಲ್ಲಿ ತಲೆನೋವು, ತಲೆ ಸುತ್ತು, ಹೊಟ್ಟೆ ತೊಳೆಸುವುದು, ವಾಂತಿ… ದೇವರೇ! ಒಂದೆರಡೇ ಅಲ್ಲ ನಿಮ್ಮ ಅವಸ್ಥೆ. ಮೋಷನ್‌ ಸಿಕ್‌ನೆಸ್‌, ಟ್ರಾವೆಲ್‌ ಸಿಕ್‌ನೆಸ್‌ ಅಥವಾ ಪ್ರಯಾಣದ ಅಸ್ವಸ್ಥತೆ ಎನ್ನುವುದು ಏನಂಥ ದೊಡ್ಡ ವಿಷಯವಲ್ಲದಿದ್ದರೂ, ಮೊಣಕೈಗೆ ಕುಟ್ಟಿದಂತೆ! ಉಳಿದವರಿಗೆ ಅದರ ನೋವು ತಿಳಿಯುವುದಿಲ್ಲ, ನೋವಾದವರಿಗೆ ತಡೆಯಲಾಗುವುದಿಲ್ಲ!
ಪ್ರಯಾಣದ ಅಸ್ವಸ್ಥತೆ ಕೇವಲ ಬಸ್ಸು, ಕಾರಿನ ಪ್ರವಾಸದಲ್ಲೇ ಬರಬೇಕೆಂದಿಲ್ಲ. ಹಡಗು, ರೈಲು, ವಿಮಾನಗಳಿಂದ ಹಿಡಿದು ಯಾವುದೇ ವಾಹನದ ಮೂಲಕ ಪ್ರಯಾಣಿಸಿದರೂ ಹೊಟ್ಟೆಯಲ್ಲಿ ತೌಡು ಕುಟ್ಟುವುದಕ್ಕೆ ಶುರು. ಅದರಲ್ಲೂ ಹೋಗುವ ದಾರಿ ಹಾವಿನಂತೆ ಸಾಗುವುದಾದರೆ, ಅವರ ಅವಸ್ಥೆ ಶತ್ರುಗಳಿಗೂ ಬೇಡ. ಅಲ್ಲಿಯವರೆಗೆ ನಗುನಗುತ್ತ ಇದ್ದವರು ಇದ್ದಕ್ಕಿದ್ದಂತೆ ಹೈರಾಣಾಗಿ ಹೋಗುತ್ತಾರೆ. ಕೆಲವರು ಮಾತ್ರೆಯೊಂದನ್ನು ನುಂಗಿ ಗಪ್ಪಾಗಿ ಕೂತರೆ, ಹಲವರಿಗೆ ಅದನ್ನು ಸೇವಿಸಿದರೂ ಹೊಟ್ಟೆಯೊಳಗೆ ಭೂಮಿ ತಿರುಗುವುದು ತಪ್ಪುವುದಿಲ್ಲ. ಕೆಲವು ಕ್ರಮಗಳನ್ನು ಅನುಸರಿಸುವುದರಿಂದ ಹೆಚ್ಚಿನ ತಾಪತ್ರಯವಿಲ್ಲದೆ ಸುಲಲಿತವಾಗಿ ಪ್ರಯಾಣದ ಸುಖವನ್ನು ಅನುಭವಿಸುವುದಕ್ಕೆ ಸಾಧ್ಯವಿದೆ.

Woman Meditating in the Workplace Sitting in Front of a Laptop Practicing Stress Relief Exercises Ashwagandha Herb Benefits

ಆಸನ ಯಾವುದು?

ಇಲ್ಲಿಂದಲೇ ನಿಮ್ಮ ಸುಖಕರ ಪ್ರಯಾಣದ ಸಿದ್ಧತೆ ಆರಂಭವಾಗುತ್ತದೆ. ಕಾರಿನಲ್ಲಿ ಪ್ರಯಾಣವಾದರೆ ಮುಂದಿನ ಸೀಟ್‌ ಮಾತ್ರವೇ ನಿಮ್ಮದು. ಹಿಂದಿನ ಆಸನಗಳಲ್ಲಿ ಕುಲುಕಾಟ ಹೆಚ್ಚಿರುವುದರಿಂದ ಹೊಟ್ಟೆ ತೊಳೆಸುವ ಸಾಧ್ಯತೆ ಅಧಿಕ. ಬಸ್ಸಿನಲ್ಲಿ ಮಧ್ಯಮ ಆಸನಗಳಿಗಿಂತ ಹಿಂದೆ ಹೋಗಬೇಡಿ. ಅದರಲ್ಲೂ ಗಾಲಿ ಮೇಲಿನ ಆಸನಗಳು ನಿಮಗಲ್ಲವೇ ಅಲ್ಲ. ವಿಮಾನದಲ್ಲಾದರೆ ರೆಕ್ಕೆ ಮೇಲಿನ ಆಸನಗಳನ್ನು ಆಯ್ದುಕೊಳ್ಳಿ.

ದೃಷ್ಟಿ ಕೀಲಿಸಿ

ಕಿಟಕಿಯ ಪಕ್ಕದ ಆಸನಗಳು ಎಲ್ಲರಿಗೂ ಇಷ್ಟ. ಆದರೆ ದಾರಿಯಲ್ಲಿ ನಮ್ಮೊಂದಿಗೇ ಓಡುತ್ತಿರುವ ವಸ್ತುಗಳನ್ನು ದಿಟ್ಟಿಸಿದರೆ, ಹೊಟ್ಟೆಯಲ್ಲೂ ಇಲಿಗಳ ಓಡಾಟ ಆರಂಭವಾಗುತ್ತದೆ. ಹಾಗಾಗಿ ಸಾಧ್ಯವಾದರೆ ಸೂರ್ಯೋದಯ, ಸೂರ್ಯಾಸ್ತ, ಚಂದ್ರ, ದಿಗಂತ… ಹೀಗೆ ಸ್ತಿರವಾಗಿರುವ ಯಾವುದಾದರೂ ವಸ್ತುವಿನತ್ತ ಕಣ್ಣು ಕೀಲಿಸಿ. ಮೊಬೈಲ್‌ ನೋಡುವುದು, ಓದುವುದು ಬೇಡ. ಬದಲಿಗೆ ಕಣ್ಣು ಮುಚ್ಚಿಕೊಂಡು ನಿಮ್ಮಿಷ್ಟ ಹಾಡು ಹೇಳುವುದು ಒಳ್ಳೆಯ ಕ್ರಮ.

Happy Woman at the Beach with Spread Arms

ತಾಜಾ ಗಾಳಿ

ಹವಾನಿಯಂತ್ರಣ ಇದ್ದರೆ, ಕಿಟಕಿ ಮುಚ್ಚಿದ್ದರೆ ಹಲವರಿಗೆ ಹೊಟ್ಟೆಯೆಲ್ಲ ಮೊಗುಚುತ್ತದೆ. ನೀವು ಕುಳಿತಿದ್ದೆಡೆಗೆ ತಾಜಾ ಗಾಳಿ ಇರುವಂತೆ ನೋಡಿಕೊಳ್ಳಿ. ಬಸ್ಸು, ಕಾರುಗಳಲ್ಲಿ ಕಿಟಕಿ ತೆರೆಯುವುದು ಸರಿ. ವಿಮಾನದಲ್ಲೇನು ಮಾಡುವುದು ಎಂದು ಕೇಳಬಹುದು. ವೆಂಟ್‌ಗಳ ತೀವ್ರತೆ ಕಡಿಮೆ ಮಾಡಿ, ಅವುಗಳು ನೇರವಾಗಿ ನಿಮಗೇ ತಾಗುವಂತೆ ಇರಿಸಿಕೊಳ್ಳಿ. ಗಾಳಿಯ ಓಡಾಡ ಹೆಚ್ಚಿದ್ದಷ್ಟೂ ಹೊಟ್ಟೆಯಲ್ಲಿ ತಳಮಳ ಕಡಿಮೆಯಾಗುತ್ತದೆ.

ಆಹಾರ

ಹೊರಡುವ ಮುನ್ನ ಭೂರಿ ಭೋಜನವನ್ನು ಯಾರಾದರು ಬಿಟ್ಟಿ ಕೊಟ್ಟರೂ ಮಾಡಬೇಡಿ! ಆಹಾರ ಲಘುವಾಗಿರಲಿ. ಎಣ್ಣೆ, ಮಸಾಲೆ, ಖಾರದ ತಿನಿಸುಗಳು ಬೇಡ. ಹಣ್ಣುಗಳು, ದೋಸೆ-ಚಪಾತಿಯಂಥ ಲಘುವಾದ ತಿನಿಸುಗಳು ಸಾಕು. ನೀರನ್ನು ಯಥೇಚ್ಛವಾಗಿ ಕುಡಿಯಿರಿ. ಆಲ್ಕೋಹಾಲ್‌ ಮತ್ತು ಕೆಫೇನ್‌ ಸೇವನೆ ಖಂಡಿತ ಬೇಡ.

Stress Reduction Tea Benefits

ವಿರಾಮ ತೆಗೆದುಕೊಳ್ಳಿ

ರಸ್ತೆ ಪ್ರಯಾಣವಾದರೆ, ವಾಹನ ನಿಮ್ಮದೇ ಆದರೆ, ನಡುವಿಗೆ ವಿರಾಮ ತೆಗೆದುಕೊಳ್ಳಿ. ಇದರಿಂದ ತಾಜಾ ಗಾಳಿಗೆ ಬಂದಂತೆಯೂ ಆಗುತ್ತದೆ, ಕೈ-ಕಾಲುಗಳಿಗೆ ಸ್ವಲ್ಪ ಚಲನೆ ದೊರೆತಂತೆಯೂ ಆಗುತ್ತದೆ. ನಡೆಯುವಾಗ ಚೆನ್ನಾಗಿ ಸ್ಟ್ರೆಚ್‌ ಮಾಡಿ. ಗಮ್ಯ ತಲುಪುವುದು ಕೊಂಚ ತಡವಾದರೂ, ನೆಮ್ಮದಿಯ ಪ್ರಯಾಣ ನಿಮ್ಮದಾಗುತ್ತದೆ.

ಇದನ್ನೂ ಓದಿ: Contact Lens: ಕಾಂಟ್ಯಾಕ್ಟ್‌ ಲೆನ್ಸ್‌ ಬಳಸುತ್ತೀರಾ? ಈ ವಿಷಯಗಳು ತಿಳಿದಿರಲಿ!

ಮನೆಮದ್ದುಗಳು

ಭಾವನಾ ಶುಂಠಿ ಅಥವಾ ಪೆಪ್ಪರ್‌ಮಿಂಟ್‌ಗಳು ಈ ನಿಟ್ಟಿನಲ್ಲಿ ಸಹಕಾರಿ. ಶುಂಠಿ ಅಥವಾ ಕ್ಯಾಮೊಮೈಲ್‌ ಚಹಾ, ನಿಂಬೆಹಣ್ಣಿನ ಕ್ಯಾಂಡಿ ಮುಂತಾದವು ಹೊಟ್ಟೆ ತೊಳೆಸುವ ಅನುಭವವನ್ನು ನಿಯಂತ್ರಣಕ್ಕೆ ತರುತ್ತವೆ. ನಿಂಬೆ ಹಣ್ಣನ್ನು ಕೈಯಲ್ಲಿ ಹಿಡಿದು, ಅದರ ಸಿಪ್ಪೆಯನ್ನೊಮ್ಮೆ ಉದುರಿನಲ್ಲಿ ಚುಚ್ಚಿದರೆ, ಸೊನೆಯ ಘಮ ಬರುತ್ತದೆ. ಇದನ್ನೆ ಮೂಸುತ್ತಿದ್ದರೆ ಹೊಟ್ಟೆಯಲ್ಲಿ ತಳಮಳ ಹುಟ್ಟುವುದಿಲ್ಲ. ಯಾವುದೇ ಸಾರಸತ್ವ ತೈಲದ ಒಂದೆರಡು ಹನಿಗಳನ್ನು ಕರ್ಚೀಫಿನಲ್ಲಿ ಹಾಕಿಕೊಂಡು, ಘಮ ತೆಗೆದುಕೊಳ್ಳುತ್ತಾ ಇರುವುದೂ ಪರಿಣಾಮಕಾರಿ.

Continue Reading

ಪ್ರವಾಸ

Amazing Tourist Places: ಹಿಮಾಚಲ ಪ್ರದೇಶದ ಕುಫ್ರಿ; ಧರೆಯ ಮೇಲಿನ ಸ್ವರ್ಗದ ತುಣುಕು!

Amazing Tourist Places: ನೈಸರ್ಗಿಕ ಸೌಂದರ್ಯ, ಸಾಹಸ ಕ್ರೀಡೆಗಳು, ಐತಿಹಾಸಿಕ ಹೆಗ್ಗುರುತುಗಳು ಮತ್ತು ವಿಶ್ವದ ಅತಿ ಎತ್ತರದ ಗೋ-ಕಾರ್ಟ್ ಟ್ರ್ಯಾಕ್ ಹೊಂದಿರುವ ಕುಫ್ರಿ (Kufri Tour) ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರಸಿದ್ಧ ತಾಣವಾಗಿದೆ. ಸಾಹಸಮಯ ಆಟಗಳನ್ನು ಬಯಸಿದರೆ ಅಥವಾ ಪ್ರಕೃತಿಯಿಂದ ಸುತ್ತುವರಿದ ಶಾಂತಿಯುತ ಕ್ಷಣಗಳನ್ನು ಬಯಸಿದರೆ ಕುಫ್ರಿ ಸೂಕ್ತ ಸ್ಥಳವಾಗಿದೆ. ಯಾಕೆಂದರೆ ಈ ಸ್ಥಳವು ಹಿಮಾಲಯದ ನಡುವೆ ಅಸಾಮಾನ್ಯ ಅನುಭವವನ್ನು ನೀಡುತ್ತದೆ.

VISTARANEWS.COM


on

By

Amazing Tourist Places
Koo

ಪರಿಪೂರ್ಣವಾಗಿ ನೈಸರ್ಗಿಕ ಸೌಂದರ್ಯವನ್ನು (natural beauty) ಆಸ್ವಾದಿಸಬೇಕು (Amazing Tourist Places) ಎಂದು ಬಯಸುವವರು ಹಿಮಾಚಲ ಪ್ರದೇಶದಲ್ಲಿರುವ (Himachal Pradesh hill station) ಪ್ರಶಾಂತ ಗಿರಿಧಾಮ ಕುಫ್ರಿಗೆ (Kufri Tour) ಭೇಟಿ ನೀಡಬಹುದು. ಆಕರ್ಷಕ ವಾತಾವರಣದಿಂದ ಪ್ರವಾಸಿಗರನ್ನು ಸೆಳೆಯುವ ಕುಫ್ರಿ ಸ್ವರ್ಗದ ಪುಟ್ಟ ತುಣುಕು ಧರೆಯಲ್ಲಿ ಬಿದ್ದಂತಿದೆ!

ಮನಮೋಹಕಗೊಳಿಸುವ ಕುಫ್ರಿಯ ಬಗ್ಗೆ ಅನೇಕ ತಿಳಿದುಕೊಳ್ಳಬೇಕಾದ ಹಲವು ಸಂಗತಿಗಳಿವೆ. ಹಿಮಾಲಯಕ್ಕೆ ಭೇಟಿ ನೀಡುವವರು ಶಾಂತಿಯನ್ನು ಬಯಸುವ ತಾಣಕ್ಕೆ ಹೋಗಬೇಕೆಂದು ಬಯಸಿದರೆ ಕುಫ್ರಿಗೆ ಭೇಟಿ ನೀಡಲು ಮರೆಯದಿರಿ.

Kufri Tour
Kufri Tour


ಕ್ರೀಡಾ ತಾಣ

ಸಮುದ್ರ ಮಟ್ಟದಿಂದ 2,510 ಮೀಟರ್ ಎತ್ತರದಲ್ಲಿರುವ ಕುಫ್ರಿಯು ಭಾರತದಲ್ಲಿ ಚಳಿಗಾಲದ ಕ್ರೀಡಾ ತಾಣವಾಗಿ ಪ್ರಸಿದ್ಧವಾಗಿದೆ. ಚಳಿಗಾಲದಲ್ಲಿ ಈ ಪಟ್ಟಣವು ಸ್ಕೀಯಿಂಗ್ ಮತ್ತು ಟೊಬೊಗ್ಯಾನಿಂಗ್‌ಗೆ ಹಾಟ್‌ಸ್ಪಾಟ್ ಆಗುತ್ತದೆ. ದೇಶದ ವಿವಿಧ ಭಾಗಗಳಿಂದ ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವವರನ್ನು ಆಕರ್ಷಿಸುತ್ತದೆ.

ಹಿಮಾಲಯನ್ ನೇಚರ್ ಪಾರ್ಕ್ ತವರು

ಕುಫ್ರಿಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಹಿಮಾಲಯನ್ ನೇಚರ್ ಪಾರ್ಕ್ ತನ್ನ ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳಿಂದ ಜನರನ್ನು ಆಕರ್ಷಿಸುತ್ತದೆ. ಪ್ರವಾಸಿಗರು ಹಿಮಾಚಲ ಪ್ರದೇಶದ ರಾಜ್ಯ ಪಕ್ಷಿಯಾಗಿರುವ ಹಿಮಾಲಯನ್ ಮೋನಾಲ್ ಸೇರಿದಂತೆ ಅಪರೂಪದ ಜಾತಿಗಳನ್ನು ನೋಡಬಹುದು. ಜಿಂಕೆ, ಯಾಕ್ ಅಥವಾ ಕರಡಿಗಳಂತಹ ಇತರ ಪ್ರಾಣಿಗಳನ್ನೂ ಇಲ್ಲಿ ಕಾಣಬಹುದು.

Kufri Tour
Kufri Tour


ವಾರ್ಷಿಕ ಚಳಿಗಾಲದ ಕ್ರೀಡಾ ಉತ್ಸವ

ಪ್ರತಿ ಫೆಬ್ರವರಿಯಲ್ಲಿ ಕುಫ್ರಿಯು ಚಳಿಗಾಲದ ಕ್ರೀಡಾ ಉತ್ಸವವನ್ನು ಆಯೋಜಿಸುತ್ತದೆ. ಇದು ಚಳಿಗಾಲದ ಕ್ರೀಡೆಗಳ ಪ್ರಿಯರಿಗೆ ಮತ್ತು ಸ್ಥಳೀಯ ಸಂಸ್ಕೃತಿಯ ಉತ್ಸಾಹಿಗಳಿಗೆ ವರ್ಣರಂಜಿತ ಕೂಟವಾಗಿದೆ. ಸ್ಕೀಯಿಂಗ್ ಅಥವಾ ಸ್ನೋಬೋರ್ಡಿಂಗ್ ಸ್ಪರ್ಧೆಗಳು ಮತ್ತು ಇಲ್ಲಿನ ಪ್ರಾಚೀನ ಪದ್ಧತಿಗಳನ್ನು ತೋರಿಸುವ ಸಾಂಸ್ಕೃತಿಕ ಪ್ರಸ್ತುತಿಗಳಂತಹ ವಿವಿಧ ಕಾರ್ಯಕ್ರಮಗಳನ್ನು ವೀಕ್ಷಿಸಲು ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.

ವಿಶ್ವದ ಅತಿ ಎತ್ತರದ ಗೋ-ಕಾರ್ಟ್ ಟ್ರ್ಯಾಕ್

ವಿಶ್ವದ ಅತಿ ಎತ್ತರದ ಗೋ-ಕಾರ್ಟ್ ಟ್ರ್ಯಾಕ್ ಅನ್ನು ಹೊಂದಿರುವ ಕುಫ್ರಿಯು ಸಮುದ್ರ ಮಟ್ಟದಿಂದ 2600 ಮೀಟರ್‌ಗಿಂತಲೂ ಹೆಚ್ಚಿನ ಎತ್ತರದಲ್ಲಿ ಈ ಹಿಂದೆ ತಿಳಿದಿರುವ ಹೊಂದಿದೆ ಎಂದು ಅದು ತಿರುಗುತ್ತದೆ. ಜನರು ಹೆಚ್ಚಿನ ವೇಗದಲ್ಲಿ ಈ ಸರ್ಕ್ಯೂಟ್ ಮೂಲಕ ಚಾಲನೆ ಮಾಡುವಾಗ, ನೆರೆಯ ಹಿಮದಿಂದ ಆವೃತವಾದ ಪರ್ವತಗಳ ಸ್ಪಷ್ಟ ನೋಟವನ್ನು ಹೊಂದಲು ಅವರು ಸವಲತ್ತು ಹೊಂದಿದ್ದಾರೆ.

Kufri Tour
Kufri Tour


ಪ್ರಕೃತಿ ಪ್ರಿಯರ ಸ್ವರ್ಗ

ಸಾಹಸ ಕ್ರೀಡೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಹೊರತಾಗಿ ಕುಫ್ರಿ ಪ್ರಕೃತಿ ಪ್ರಿಯರಿಗೆ ಸ್ವರ್ಗವಾಗಿದೆ. ಪೈನ್ ಮತ್ತು ದೇವದಾರು ಮರಗಳಿಂದ ಮಾಡಲ್ಪಟ್ಟ ದಟ್ಟವಾದ ಕಾಡುಗಳಿಂದ ಸುತ್ತುವರಿದಿರುವ ಪಟ್ಟಣವು ಪಾದಯಾತ್ರೆ, ಪಿಕ್ನಿಕ್ ಗೆ ಸೂಕ್ತವಾದ ತಾಣವಾಗಿದೆ.

ಶಿಮ್ಲಾದ ಚಳಿಗಾಲದ ವಂಡರ್‌ಲ್ಯಾಂಡ್‌ಗೆ ಗೇಟ್‌ವೇ

ಕುಫ್ರಿಯು ಶಿಮ್ಲಾದ ಚಳಿಗಾಲದ ವಂಡರ್‌ಲ್ಯಾಂಡ್‌ಗೆ ಹೆಬ್ಬಾಗಿಲಾಗಿದೆ. ಇದು ಹಿಮಾಚಲ ಪ್ರದೇಶದ ರಾಜಧಾನಿ ನಗರದಿಂದ ಕೇವಲ 13 ಕಿಲೋಮೀಟರ್ ದೂರದಲ್ಲಿದೆ. ಕುಫ್ರಿಯಂತಹ ಕಡಿಮೆ ಜನಸಂದಣಿಯನ್ನು ಹೊಂದಿರುವ ಶಾಂತಿಯುತ ವಾತಾವರಣವನ್ನು ಆನಂದಿಸುತ್ತಿರುವಾಗ ಶಿಮ್ಲಾದ ಮೋಡಿಯನ್ನು ಅನುಭವಿಸಬಹುದು.

ಐತಿಹಾಸಿಕ ಮಹತ್ವ

ಬ್ರಿಟಿಷ್ ವಸಾಹತುಶಾಹಿ ಯುಗದಿಂದಲೂ ಕುಫ್ರಿ ಪ್ರಮುಖ ತಾಣವಾಗಿತ್ತು. ಇದನ್ನು ಮೊದಲು ಬ್ರಿಟಿಷರು ತಮ್ಮ ಅಧಿಕಾರಿಗಳು ಮತ್ತು ವಸಾಹತುಗಾರರಿಗೆ ಹಿಮ್ಮೆಟ್ಟಿಸಲು 1819 ರಲ್ಲಿ ಸಣ್ಣ ಗಿರಿಧಾಮವಾಗಿ ಸ್ಥಾಪಿಸಿದರು. ಇಲ್ಲಿ ಕಟ್ಟಡಗಳು ಮತ್ತು ವಿನ್ಯಾಸಗಳಲ್ಲಿ ವಸಾಹತುಶಾಹಿ ಗತಕಾಲದ ಅವಶೇಷಗಳನ್ನು ಕಾಣಬಹುದು.

Kufri Tour
Kufri Tour


ಮಹಾಸು ಶಿಖರದಿಂದ ವಿಹಂಗಮ ನೋಟ

ಸುತ್ತಲಿನ ಕಣಿವೆಗಳು ಮತ್ತು ಹಿಮದಿಂದ ಆವೃತವಾದ ಶಿಖರಗಳ ವಿಹಂಗಮ ನೋಟವನ್ನು ಕಾಣಬಯಸುವವರು ಮಹಾಸು ಶಿಖರದ ಕಡೆಗೆ ಪಾದಯಾತ್ರೆ ಮಾಡಬಹುದು ಅಥವಾ ಕುದುರೆ ಸವಾರಿ ಮಾಡಬಹುದು. ಇಲ್ಲಿಂದ ಹಿಮಾಲಯ ಶ್ರೇಣಿಯ ಅದ್ಭುತ ನೋಟವನ್ನು ಕಣ್ತುಂಬಿಕೊಳ್ಳಬಹುದು.

Kufri Tour
Kufri Tour


ಚಿನಿ ಬಂಗಲೆ

ವಸಾಹತುಶಾಹಿ ವಾಸ್ತುಶಿಲ್ಪದ ವಿನ್ಯಾಸಗಳೊಂದಿಗೆ ಸಾಂಪ್ರದಾಯಿಕ ಹಿಮಾಚಲಿ ಮಿಶ್ರಣವನ್ನು ಹೊಂದಿರುವ ಕುಫ್ರಿಯಲ್ಲಿರುವ ಮತ್ತೊಂದು ಆಕರ್ಷಣೆ ಚಿನಿ ಬಂಗಲೆ. ಭಾರತವು ಬ್ರಿಟಿಷ್ ಆಳ್ವಿಕೆಯಲ್ಲಿದ್ದಾಗ ನಿರ್ಮಿಸಲಾದ ವಿಶಿಷ್ಟವಾದ ವಾಸ್ತುಶಿಲ್ಪ ಶೈಲಿಯನ್ನು ಹೊಂದಿರುವ ಈ ಐತಿಹಾಸಿಕ ಕಟ್ಟಡವು ಈಗ ಸರ್ಕಾರಿ ಅತಿಥಿ ಗೃಹವಾಗಿದೆ.

ಇದನ್ನೂ ಓದಿ: Uttarkashi Tour: ಪರಿಪೂರ್ಣ ಪ್ರವಾಸದ ಅನುಭವ ಕೊಡುವ ಉತ್ತರಕಾಶಿಯ 5 ಗಿರಿಧಾಮಗಳು

ವರ್ಷದುದ್ದಕ್ಕೂ ಹಬ್ಬ

ಕುಫ್ರಿ ಕೇವಲ ಚಳಿಗಾಲದ ತಾಣವಲ್ಲ. ಇಲ್ಲಿ ಪ್ರತಿದಿನ ಹಬ್ಬದ ಉತ್ಸಾಹವನ್ನು ಕಾಣಬಹುದು. ಮೇ ತಿಂಗಳಲ್ಲಿ ಬೇಸಿಗೆ ಉತ್ಸವ ಮತ್ತು ಡಿಸೆಂಬರ್ ಕುಫ್ರಿ ಉತ್ಸವದಂತಹ ಸ್ಥಳೀಯ ಮೇಳಗಳು ಮತ್ತು ಉತ್ಸವಗಳು ಪ್ರವಾಸಿಗರಿಗೆ ಸ್ಥಳೀಯ ಜೀವನವನ್ನು ಅನುಭವಿಸಲು ಅನುವು ಮಾಡಿಕೊಡುತ್ತದೆ. ಸಂಗೀತ, ನೃತ್ಯ ಮತ್ತು ಸಾಂಪ್ರದಾಯಿಕ ಕರಕುಶಲಗಳ ಮೂಲಕ ಪ್ರದೇಶದ ಸಾಂಸ್ಕೃತಿಕ ಪರಂಪರೆಯನ್ನು ಆಚರಿಸಬಹುದು.

Continue Reading

ಪ್ರವಾಸ

Khajjiar Tour: ಖಜ್ಜಿಯಾರ್! ಇದು ಹಿಮಾಲಯದ ತಪ್ಪಲಿನಲ್ಲಿರುವ ಮಿನಿ ಸ್ವಿಟ್ಜರ್ಲೆಂಡ್!

ಏಕಾಂಗಿಯಾಗಿ ಪ್ರವಾಸ ಮಾಡಲು ಬಯಸುವವರು ಖಜ್ಜಿಯಾರ್‌ಗೆ (Khajjiar Tour) ಭೇಟಿ ನೀಡಬಹುದು. ಆದರೆ ಪ್ರವಾಸಕ್ಕಾಗಿ ಎಚ್ಚರಿಕೆಯ ಯೋಜನೆಗಳನ್ನು ಮಾಡುವ ಮೂಲಕ, ಸ್ಥಳೀಯ ಅಭ್ಯಾಸಗಳಿಂದ ಕಲಿಯುವ ಮೂಲಕ ಮತ್ತು ಆ ಸ್ಥಳದ ಸಂಸ್ಕೃತಿಯೊಂದಿಗೆ ಬೆರೆಯುವ ಮೂಲಕ ಪ್ರವಾಸವನ್ನು ಸ್ಮರಣೀಯಗೊಳಿಸಬಹುದು. ಇಲ್ಲಿನ ಬೆಟ್ಟಗಳ ಮಾಂತ್ರಿಕ ಸೌಂದರ್ಯ, ಏಕಾಂತ ಅನುಭವ ಕೊಡುವ ಸುರಕ್ಷಿತ ಮತ್ತು ಆನಂದದಾಯಕ ತಾಣಗಳಲ್ಲಿ ಸುತ್ತಾಡಲು ಮರೆಯದಿರಿ.

VISTARANEWS.COM


on

By

Khajjiar Tour
Koo

ಈ ಗಿರಿಧಾಮವು ಹಸಿರು ಹುಲ್ಲುಗಾವಲುಗಳು, ದಟ್ಟವಾದ ಪೈನ್ ಕಾಡುಗಳು ಮತ್ತು ಶಾಂತವಾದ ಸರೋವರದಂತಹ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಏಕಾಂಗಿಯಾಗಿ ಪ್ರಕೃತಿಯ ಮಡಿಲಲ್ಲಿ ಅನ್ವೇಷಿಸಲು ಬಯಸುವ ಪ್ರವಾಸ ಪ್ರಿಯರಿಗೆ ಇದು ಆಯ್ಕೆ ಮಾಡಿಕೊಳ್ಳಬಹುದಾದ ಸೂಕ್ತವಾದ ತಾಣವಾಗಿದೆ.

ಹಿಮಾಲಯದ ತಪ್ಪಲಿನಲ್ಲಿರುವ ಖಜ್ಜಿಯಾರ್ (Khajjiar Tour) ಹಿಮಾಚಲ ಪ್ರದೇಶದಲ್ಲಿರುವ (himachal pradesh  hill station) ಅತ್ಯಾಕರ್ಷಕ ಗಿರಿಧಾಮವಾಗಿದೆ. ಇದನ್ನು ಸಾಮಾನ್ಯವಾಗಿ “ಮಿನಿ ಸ್ವಿಟ್ಜರ್ಲೆಂಡ್ ಆಫ್ ಇಂಡಿಯಾ” (Mini Switzerland of India) ಎಂದು ಕರೆಯಲಾಗುತ್ತದೆ. ನೆಮ್ಮದಿ ಮತ್ತು ಸಾಹಸವನ್ನು ಬಯಸುವ ಪ್ರವಾಸಿಗಳಿಗೆ ಇದು ಸೂಕ್ತ ತಾಣವಾಗಿದೆ.

ಖಜ್ಜಿಯಾರ್‌ಗೆ ಒಂಟಿಯಾಗಿ ಪ್ರವಾಸ ಮಾಡಬೇಕು ಎಂದು ಬಯಸುವವರು ಮೊದಲು ಸರಿಯಾದ ಸಿದ್ಧತೆ, ಸ್ಥಳದ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಳ್ಳುವುದು ಉತ್ತಮ. ಇದರಿಂದ ಪ್ರವಾಸವನ್ನು ಸುರಕ್ಷಿತವಾಗಿ ಮತ್ತು ಹೆಚ್ಚು ಆನಂದದಾಯಕವಾಗಿ ಕಳೆಯಬಹುದು.

Khajjiar Tour
Khajjiar Tour


ಸರಿಯಾದ ಯೋಜನೆ ಹಾಕಿಕೊಳ್ಳಿ

ಖಜ್ಜಿಯಾರ್‌ಗೆ ಪ್ರವಾಸ ಹೊರಡುವ ಮೊದಲು ಪ್ರವಾಸವನ್ನು ಹೆಚ್ಚು ಆನಂದದಾಯಕವಾಗಿಸಲು ತಯಾರಿಯನ್ನು ಮುಂಚಿತವಾಗಿಯೇ ಮಾಡಿಕೊಳ್ಳಬೇಕು. ಅದರಲ್ಲಿ ಮುಖ್ಯವಾಗಿ ಋತುವಿನ ಆಯ್ಕೆ. ಖಜ್ಜಿಯಾರ್‌ಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಮಾರ್ಚ್‌ನಿಂದ ಜೂನ್‌ವರೆಗಿನ ಬೇಸಿಗೆಕಾಲ ಅಥವಾ ಸೆಪ್ಟೆಂಬರ್ ಮತ್ತು ನವೆಂಬರ್ ನಡುವಿನ ಶರತ್ಕಾಲದ ಆರಂಭ ಹೆಚ್ಚು ಸೂಕ್ತವಾಗಿದೆ. ಈ ಸಂದರ್ಭದಲ್ಲಿ ಇಲ್ಲಿ ಹೆಚ್ಚು ಬಿಸಿಯಾಗಿರುವುದಿಲ್ಲ ಅಥವಾ ತಂಪಾಗಿರುವುದಿಲ್ಲ ಆದರೆ ಸ್ಪಷ್ಟವಾದ ಆಕಾಶದ ಜೊತೆಗೆ ಆರಾಮದಾಯಕವಾದ ತಾಪಮಾನ ಸುಂದರ ಪ್ರವಾಸದ ಅನುಭವವನ್ನು ಕೊಡುತ್ತದೆ.

ವಸತಿ ವ್ಯವಸ್ಥೆ ಮೊದಲೇ ಮಾಡಿಕೊಳ್ಳಿ. ಖಜ್ಜಿಯಾರ್‌ನಲ್ಲಿ ಸಾಕಷ್ಟು ಹೊಟೇಲ್ , ರೆಸಾರ್ಟ್‌ ಅಥವಾ ಹೋಮ್ ಸ್ಟೇಗಳಿವೆ. ಕೆಲವು ಕಾರಣಗಳಿಗಾಗಿ ಏಕಾಂಗಿ ಪ್ರಯಾಣಿಕರು ಹೋಮ್‌ಸ್ಟೇಗಳನ್ನೇ ಇಷ್ಟಪಡುತ್ತಾರೆ. ಪೀಕ್ ಸೀಸನ್‌ಗಳಲ್ಲಿ ಈ ಸ್ಥಳದಲ್ಲಿ ವಾಸ್ತವ್ಯವನ್ನು ಆನಂದಿಸಲು ಬಯಸಿದರೆ ಸಾಕಷ್ಟು ಮುಂಚಿತವಾಗಿ ಬುಕ್ ಮಾಡಲು ಮರೆಯದಿರಿ.

ಸಾರಿಗೆ ವಿಧಾನ ಆಯ್ಕೆ ಮೊದಲೇ ಮಾಡಿಕೊಳ್ಳಿ. ಖಜ್ಜಿಯಾರ್‌ನಿಂದ ಸುಮಾರು 24 ಕಿಲೋಮೀಟರ್ ದೂರದಲ್ಲಿರುವ ಡಾಲ್‌ಹೌಸಿಯು ಅತ್ಯಂತ ಹತ್ತಿರದ ಮಹತ್ವದ ನಗರವಾಗಿದೆ. ಟ್ಯಾಕ್ಸಿ ಅಥವಾ ಸ್ಥಳೀಯ ಬಸ್ಸು ಮೂಲಕ ಡಾಲ್ ಹೌಸಿಯಿಂದ ಖಜ್ಜಿಯಾರ್‌ಗೆ ತಲುಪಬಹುದು. ಏಕಾಂಗಿಯಾಗಿ ಖಜ್ಜಿಯಾರ್ ಗೆ ಪ್ರಯಾಣಿಸುತ್ತಿದ್ದರೆ, ಟ್ಯಾಕ್ಸಿಗಳು ಸುಲಭವಾಗಿ ಲಭ್ಯವಿರುತ್ತವೆ. ಇದು ಸುತ್ತಮುತ್ತಲಿನ ಇತರ ಆಸಕ್ತಿದಾಯಕ ಸ್ಥಳಗಳಿಗೆ ಭೇಟಿ ನೀಡುವುದನ್ನು ಸುಲಭಗೊಳಿಸುತ್ತದೆ.

Khajjiar Tour
Khajjiar Tour


ವಿವಿಧ ಚಟುವಟಿಕೆಯನ್ನು ಆನಂದಿಸಿ

ಖಜ್ಜಿಯಾರ್ ಅದ್ಭುತವಾದ ಪ್ರಶಾಂತತೆಯನ್ನು ಹೊಂದಿದ್ದು, ಇಲ್ಲಿ ಏಕಾಂಗಿ ಪ್ರವಾಸ ಮಾಡುವವರು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಬಹುದು.

ಹಸಿರು ಹುಲ್ಲುಗಾವಲು ಮತ್ತು ದೇವದಾರು ಮರಗಳ ನಡುವೆ ನೆಲೆಗೊಂಡಿರುವ ಖಜ್ಜಿಯಾರ್ ಸರೋವರಕ್ಕೆ ಭೇಟಿ ನೀಡುವ ಮೂಲಕ ಇಲ್ಲಿ ಪ್ರಯಾಣವನ್ನು ಪ್ರಾರಂಭಿಸಬಹುದು. ಸರೋವರದ ಸುತ್ತಲೂ ಕಾಲ್ನಡಿಗೆಯಲ್ಲಿ ಅಥವಾ ಅದರ ದಡದಲ್ಲಿ ಪ್ಯಾಡಲ್ ಬೋಟ್ ಅನ್ನು ಬಾಡಿಗೆಗೆ ತೆಗೆದುಕೊಳ್ಳುವ ಮೂಲಕ ಇಲ್ಲಿ ಮಾಡಬಹುದಾದ ಕೆಲವು ಚಟುವಟಿಕೆಗಳು ಅಥವಾ ಸುಮ್ಮನೆ ಕುಳಿತು ಪ್ರಶಾಂತತೆಯನ್ನು ಆನಂದಿಸಬಹುದು.

ಐತಿಹಾಸಿಕ ಖಜ್ಜಿಯಾರ್ ನಾಗ್ ದೇವಾಲಯದಲ್ಲಿ ಹಾವಿಗೆ ಪೂಜೆ ಸಲ್ಲಿಸಲಾಗುತ್ತದೆ. ಇತಿಹಾಸ ಮತ್ತು ಸಂಸ್ಕೃತಿಯನ್ನು ಪ್ರೀತಿಸುತ್ತಿದ್ದರೆ ಇದು ಸೂಕ್ತ ಪ್ರವಾಸ ಸ್ಥಳವಾಗಿದೆ. ಪ್ರಕೃತಿ ಪ್ರಿಯರು ಕಲಾಟಾಪ್ ವನ್ಯಜೀವಿ ಅಭಯಾರಣ್ಯದಲ್ಲಿ ಪಾದಯಾತ್ರೆಯನ್ನು ನಡೆಸಬಹುದು. ಹಿಮಾಲಯನ್ ಕಪ್ಪು ಕರಡಿಗಳು ಮತ್ತು ಹಲವಾರು ಪಕ್ಷಿಗಳು ಸೇರಿದಂತೆ ವಿವಿಧ ರೀತಿಯ ಪ್ರಾಣಿ ಮತ್ತು ಸಸ್ಯಗಳನ್ನು ಇಲ್ಲಿ ಕಾಣಬಹುದು. ಏಕಾಂಗಿಯಾಗಿ ಪ್ರವಾಸ ಮಾಡಲು ಬಯಸುವವರು ನೆಮ್ಮದಿಯನ್ನು ಹುಡುಕುತ್ತಿದ್ದರೆ ಇಲ್ಲಿ ಅದನ್ನು ಪಡೆಯಬಹುದು.

ಖಜ್ಜಿಯಾರ್‌ನಲ್ಲಿ ಸಾಹಸವನ್ನು ಹುಡುಕುವವರಿಗೆ ಇಲ್ಲಿ ಝೋರ್ಬಿಂಗ್ ಮತ್ತು ಪ್ಯಾರಾಗ್ಲೈಡಿಂಗ್‌ಗೆ ಅವಕಾಶಗಳಿವೆ. ಸುತ್ತಲಿನ ಕಣಿವೆಗಳು ಮತ್ತು ಬೆಟ್ಟಗಳ ನಡುವೆ ರೋಮಾಂಚಕ ಅನುಭವವನ್ನು ಪಡೆಯಬಹುದು.

Khajjiar Tour
Khajjiar Tour


ಸುರಕ್ಷತೆಯ ಕಡೆ ಗಮನವಿರಲಿ

ಏಕಾಂಗಿ ಪ್ರಯಾಣಿಕರು ಖಜ್ಜಿಯಾರ್‌ಗೆ ಭೇಟಿ ನೀಡುವಾಗ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಏಕಾಂಗಿಯಾಗಿ ಹೊರಗೆ ಹೋಗುವವರು, ಹಿಂತಿರುಗುವ ಬಗ್ಗೆ ವಸತಿ ಒದಗಿಸುವವರು ಅಥವಾ ನಂಬಲರ್ಹ ವ್ಯಕ್ತಿಗೆ ತಿಳಿಸಿ ಹೋಗಬೇಕು.

ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಾಗ ಡ್ರೆಸ್ಸಿಂಗ್ ಮಾಡುವಂತಹ ಸ್ಥಳೀಯ ಪದ್ಧತಿ ಮತ್ತು ಸಂಪ್ರದಾಯಗಳನ್ನು ಗಮನಿಸಿ. ಯಾವುದೇ ಅನಿರೀಕ್ಷಿತ ಸಂದರ್ಭಗಳಲ್ಲಿ ಸ್ಥಳೀಯ ಅಧಿಕಾರಿಗಳು ಅಥವಾ ದೇಶದ ರಾಯಭಾರ ಕಚೇರಿ/ದೂತಾವಾಸ ಕಚೇರಿಗಳು ಸೇರಿದಂತೆ ತುರ್ತು ಸಂಪರ್ಕ ಸಂಖ್ಯೆಗಳನ್ನು ನೆನಪಿಡಿ. ಆರೋಗ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ.ನೀರು, ಅಗತ್ಯವಿರುವ ಔಷಧಗಳು ಜೊತೆಯಲ್ಲಿ ಇರಲಿ.

ಇದನ್ನೂ ಓದಿ: Varanasi Tour: ವಾರಣಾಸಿಗೆ ಹೋದಾಗ ನೋಡಲೇಬೇಕಾದ ಅದ್ಭುತ ಸ್ಥಳಗಳಿವು

Khajjiar Tour
Khajjiar Tour


ಸ್ಥಳೀಯ ಸಂಸ್ಕೃತಿಯನ್ನು ಆನಂದಿಸಿ

ಹಿಮಾಚಲ ಪ್ರದೇಶದ ಸ್ಥಳೀಯ ಆಹಾರ ಮತ್ತು ಅದರ ಸರಳತೆ ಮತ್ತು ರುಚಿಗೆ ಹೆಸರುವಾಸಿಯಾಗಿದೆ. ಹೀಗಾಗಿ ಇಲ್ಲಿನ ವಿವಿಧ ಭಕ್ಷ್ಯಗಳನ್ನು ಪ್ರಯತ್ನಿಸಿ. ಸ್ಥಳೀಯರೊಂದಿಗೆ ಸಂವಹನ ನಡೆಸಿ ಅವರ ಜೀವನ, ಪದ್ಧತಿಗಳು ಮತ್ತು ಜಾನಪದದ ಬಗ್ಗೆ ತಿಳಿದುಕೊಳ್ಳಿ. ಇದು ಖಜ್ಜಿಯಾರ್‌ಗೆ ಸಂಬಂಧಿಸಿದ ಒಳನೋಟಗಳನ್ನು ನೀಡುತ್ತದೆ. ಕೈಯಿಂದ ಮಾಡಿದ ಉಣ್ಣೆಬಟ್ಟೆಗಳು, ಕರಕುಶಲ ವಸ್ತುಗಳು ಅಥವಾ ಸ್ಮಾರಕಗಳ ಸ್ಥಳೀಯ ಮಾರುಕಟ್ಟೆಗಳು ಇಲ್ಲಿ ಸಾಕಷ್ಟು ನೆನಪುಗಳನ್ನು ಕಟ್ಟಿಕೊಡುತ್ತದೆ.

Continue Reading
Advertisement
Paris Olympics 2024
ಪ್ರಮುಖ ಸುದ್ದಿ2 mins ago

Paris Olympics 2024 : ಶೂಟಿಂಗ್​ನಲ್ಲಿ ಭಾರತಕ್ಕೆ ಖುಷಿ ಸುದ್ದಿ; ಮಹಿಳೆಯರ 10 ಮೀಟರ್ ಏರ್​ ಪಿಸ್ತೂಲ್ ವಿಭಾಗದಲ್ಲಿ ಮನು ಭಾಕರ್​ ಫೈನಲ್​ಗೆ

Paris Olympics 2024
ಫ್ಯಾಷನ್5 mins ago

Paris Olympics 2024: ಭಾರತೀಯ ಅಥ್ಲೀಟ್‌ಗಳ ಡ್ರೆಸ್‌ ಕೋಡ್‌ ವಿನ್ಯಾಸಕ್ಕೆ ಜನರ ಮಿಶ್ರ ಪ್ರತಿಕ್ರಿಯೆ

Vaccin for Hiv
ಆರೋಗ್ಯ38 mins ago

Vaccine for HIV: ವರ್ಷಕ್ಕೆರಡು ಬಾರಿ ಈ ಇಂಜೆಕ್ಷನ್‌ ತೆಗೆದುಕೊಂಡರೆ ಎಚ್‌ಐವಿ ಭಯವೇ ಬೇಡ!

Physical Assault
ದೇಶ46 mins ago

Physical Assault : ಅಶ್ಲೀಲ ವಿಡಿಯೊಗಳನ್ನು ನೋಡಿ 9 ವರ್ಷದ ತಂಗಿಯನ್ನು ಅತ್ಯಾಚಾರ ಮಾಡಿ ಕೊಂದ 13 ವರ್ಷದ ಬಾಲಕ!

Paris Olympics
ಕ್ರೀಡೆ1 hour ago

Paris Olympics: ಕ್ರೀಡಾ ಗ್ರಾಮದಲ್ಲಿ ಭಾರತದ ಅಥ್ಲೀಟ್ಸ್‌ಗೆ ಆಹಾರ ಕೊರತೆ; ರೆಸ್ಟೋರೆಂಟ್​ನಿಂದ ರೋಟಿ, ದಾಲ್‌ ತರಿಸಿದ ಬಾಕ್ಸರ್​

karnataka Rain
ಮಳೆ1 hour ago

Karnataka Rain : ಮಳೆಗೆ ಮನೆ ಮುಳುಗಡೆಯಾದ ಸುದ್ದಿ ಕೇಳಿ ಮನೆ ಯಜಮಾನ ಹೃದಯಾಘಾತದಿಂದ ಸಾವು

Rahul Gandhi
ದೇಶ1 hour ago

Rahul Gandhi: ನೀಟ್‌ನಲ್ಲಿ ‘ಎಷ್ಟು ವೋಟ್‌’ ಪಡೆದಿರಿ ಎಂದು ವಿದ್ಯಾರ್ಥಿಗಳಿಗೆ ಕೇಳಿದ ರಾಹುಲ್‌ ಗಾಂಧಿ; Video ವೈರಲ್

Gautam Gambhir
ಕ್ರೀಡೆ1 hour ago

Gautam Gambhir : ಗೌತಮ್​ ಗಂಭೀರ್​ಗೆ ವಿಶೇಷ ಸಂದೇಶ ಕಳುಹಿಸಿದ ದ್ರಾವಿಡ್​; ಭಾವುಕರಾದ ನೂತನ ಕೋಚ್​!

Kannada New Movie Nava Digantha latest news
ಸಿನಿಮಾ1 hour ago

Kannada New Movie: ನೆರವೇರಿತು ’ನವ ದಿಗಂತ’ ಚಿತ್ರದ ಮುಹೂರ್ತ

DK Shivakumar
ಕರ್ನಾಟಕ2 hours ago

Brand Bengaluru: ‘ಬ್ರ್ಯಾಂಡ್‌ ಬೆಂಗಳೂರು’ ನಿರ್ಮಾಣಕ್ಕೆ ಡಿಕೆಶಿ ಮಾಸ್ಟರ್‌ಪ್ಲಾನ್;‌ ಇಲ್ಲಿದೆ ಸಭೆಯ ವಿವರ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

ramanagara news
ರಾಮನಗರ4 hours ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ5 hours ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ23 hours ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ1 day ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ1 day ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ1 day ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್2 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ2 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ2 days ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

ಟ್ರೆಂಡಿಂಗ್‌