International Tiger Day: ಭಾರತದಲ್ಲಿರುವ ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಿವು - Vistara News

ಪ್ರವಾಸ

International Tiger Day: ಭಾರತದಲ್ಲಿರುವ ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಿವು

ಅಂತಾರಾಷ್ಟ್ರೀಯ ಹುಲಿಗಳ ದಿನದ (International Tiger Day) ಪ್ರಯುಕ್ತ ಭಾರತದಲ್ಲಿರುವ ಪ್ರಮುಖ 10 ಹುಲಿ ಸಂರಕ್ಷಿತ ಪ್ರದೇಶಗಳ ಕುರಿತಾಗಿ ವಿವರ ಇಲ್ಲಿದೆ.

VISTARANEWS.COM


on

10 prominent tiger reserves in India
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಂದು ಅಂತಾರಾಷ್ಟ್ರೀಯ ಹುಲಿಗಳ ದಿನ (International Tiger Day). ಹುಲಿಗಳ ರಕ್ಷಣೆ ಮನುಷ್ಯರಾದವರ ಹೊಣೆ. ಕಾಡನ್ನು ಕಡಿದು ಕಾಂಕ್ರೀಟ್‌ ನಾಡನ್ನು ಮಾಡಿಕೊಳ್ಳುತ್ತ ಬಂದಿರುವ ಮನುಷ್ಯ ಕೆಲವು ಪ್ರದೇಶಗಳನ್ನು ಹುಲಿಗಳಿಗೆಂದೇ ಮೀಸಲಿಟ್ಟಿದ್ದಾನೆ. ಭಾರತದಲ್ಲಿ ಈ ರೀತಿಯಲ್ಲಿ ಹುಲಿಗಳಿಗೆಂದು ಮೀಸಲಿಡಲಾಗಿರುವ 10 ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳ ಬಗ್ಗೆ ಇಲ್ಲಿದೆ ಮಾಹಿತಿ.

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ


ಉತ್ತರಾಖಂಡದಲ್ಲಿರುವ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ ಭಾರತದ ಅತ್ಯಂತ ಹಳೆಯ ಹಾಗೂ ಜನಪ್ರಿಯ ರಾಷ್ಟ್ರೀಯ ಉದ್ಯಾನವನವಾಗಿದೆ. ಈ ಉದ್ಯಾನವನವು ರಾಯಲ್ ಬೆಂಗಾಲ್ ಹುಲಿ ಸೇರಿದಂತೆ 230ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು ಮತ್ತು 50 ಜಾತಿಯ ಸಸ್ತನಿಗಳಿಗೆ ನೆಲೆಯಾಗಿದೆ. ಹಿಮಾಲಯದ ತಪ್ಪಲಿನಲ್ಲಿರುವ ಈ ಉದ್ಯಾನವನವು ರಾಮಗಂಗಾ ನದಿಯ ಆಕರ್ಷಕ ನೋಟವನ್ನು ನೀಡುತ್ತದೆ.

ಸುಂದರಬನ್ಸ್ ರಾಷ್ಟ್ರೀಯ ಉದ್ಯಾನವನ

ಈ ಉದ್ಯಾನವನವು ಬಾಂಗ್ಲಾದೇಶದೊಂದಿಗಿನ ಭಾರತದ ಗಡಿ ಭಾಗವಾಗಿರುವ ಬಂಗಾಳದ ಡೆಲ್ಟಾದಲ್ಲಿದೆ. ಇಲ್ಲಿ 300 ರಾಯಲ್‌ ಬೆಂಗಾಲ್‌ ಹುಲಿಗಳು ಸೇರಿದಂತೆ ವಿವಿಧ ವನ್ಯಜೀವಿ ಪ್ರಭೇದಗಳಿವೆ. ಇದು ಸೊಂಪಾದ ಮ್ಯಾಂಗ್ರೋವ್‌ ಕಾಡಿನ ಪ್ರದೇಶವಾಗಿದ್ದು ಸಣ್ಣ ಸಣ್ಣ ದ್ವೀಪಗಳೂ ಇಲ್ಲಿವೆ.

ಕನ್ಹಾ ರಾಷ್ಟ್ರೀಯ ಉದ್ಯಾನವನ

ಮಧ್ಯಪ್ರದೇಶದಲ್ಲಿ ಕನ್ಹಾ ರಾಷ್ಟ್ರೀಯ ಉದ್ಯಾನವನವಿದೆ. ಈ ಉದ್ಯಾನವನ 940 ಚದರ ಕಿ.ಮೀ.ಗಿಂತಲೂ ಹೆಚ್ಚು ವ್ಯಾಪ್ತಿಯಲ್ಲಿ ಹರಡಿದೆ. ಇಲ್ಲಿ ಚಿರತೆಗಳು, ಕರಡಿಗಳು, ಕಾಡು ನಾಯಿಗಳು ಸೇರಿ ಅನೇಕ ಜಾತಿಯ ವನ್ಯಜೀವಿಗಗಳಿವೆ. ಇಲ್ಲಿ ಪ್ರವಾಸಿಗರಿಗೆ ಆನೆ ಸವಾರಿ ಮಾಡುವುದಕ್ಕೂ ಅವಕಾಶವಿದೆ. ಹಾಗೆಯೇ ಬಂಜಾರ್‌ ನದಿಯಲ್ಲಿ ದೋಣಿ ವಿಹಾರವನ್ನೂ ಮಾಡಬಹುದಾಗಿದೆ.

ಬಾಂಧವಗಢ ರಾಷ್ಟ್ರೀಯ ಉದ್ಯಾನವನ


ಈ ಉದ್ಯಾನವನವೂ ಕೂಡ ಮಧ್ಯಪ್ರದೇಶದಲ್ಲಿಯೇ ಇದೆ. ಇಲ್ಲಿ ಹೆಚ್ಚು ಸಂಖ್ಯೆಯ ಹುಲಿಗಳಿದ್ದು, ಅವುಗಳ ಜತೆ ವಿಶೇಷ ಜಾತಿಯ ಚಿರತೆಗಳು ಮತ್ತು ಕಾಡು ನಾಯಿಗಳೂ ಇವೆ. ಅನೇಕ ಐತಿಹಾಸಿಕ ಸ್ಥಳಗಳನ್ನೂ ಹೊಂದಿರುವ ಈ ಸ್ಥಳದಲ್ಲಿ ಆಗಾಗ ಪರಿಶೋಧನೆಗಳನ್ನು ನಡೆಸಲಾಗುತ್ತಿರುತ್ತದೆ.

ರಣಥಂಬೋರ್ ರಾಷ್ಟ್ರೀಯ ಉದ್ಯಾನವನ

ರಾಜಸ್ಥಾನದಲ್ಲಿರುವ ಈ ಉದ್ಯಾನವನವು ಸುಮಾರು 400 ಚದರ ಕಿ.ಮೀ.ಗಳಿಗೆ ಹಬ್ಬಿದೆ. ಇದು ಭಾರತದ ಅತಿದೊಡ್ಡ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾಗಿದೆ. ಇಲ್ಲಿ ಪುರಾತನ ಕೋಟೆ ಮತ್ತು ಸರೋವರವೂ ಇದೆ. ಇಲ್ಲಿ ಸಫಾರಿ, ಪಕ್ಷಿವೀಕ್ಷಣೆಯನ್ನು ಮಾಡಬಹುದು.

ತಡೋಬಾ ಅಂಧಾರಿ ಹುಲಿ ಸಂರಕ್ಷಿತ ಪ್ರದೇಶ

ಈ ಉದ್ಯಾನವನವು ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿದೆ. ಇಲ್ಲಿ 80ಕ್ಕೂ ಹೆಚ್ಚು ಹುಲಿಗಳಿವೆ. ಸೊಂಪಾದ ರೀತಿಯಲ್ಲಿ ಬೆಳೆದುಕೊಂಡಿರುವ ಈ ಕಾಡಿನಲ್ಲಿ ಸಾಕಷ್ಟು ಜಾತಿಯ ಪಕ್ಷಿಗಳು, ಕರಡಿಗಳು, ಜಿಂಕೆ, ಕಾಡುಹಂಚಿ ಸೇರಿ ವಿವಿಧ ಪ್ರಭೇದದ ವನ್ಯಜೀವಿಗಳನ್ನು ನೀವು ಕಾಣಬಹುದು.

ನವೆಗಾಂವ್-ನಾಗ್ಜಿರಾ ವನ್ಯಜೀವಿ ಅಭಯಾರಣ್ಯ:

ಈ ಅಭಯಾರಣ್ಯವು ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯಲ್ಲಿದೆ. ಇದು ದಟ್ಟವಾದ ಕಾಡು ಮತ್ತು ವನ್ಯಜೀವಿ-ಸಮೃದ್ಧ ಪರಿಸರ ವ್ಯವಸ್ಥೆಗೆ ಹೆಸರುವಾಸಿಯಾಗಿದೆ. ಇದು ಗೌರ್, ಸೋಮಾರಿ ಕರಡಿ, ನೀಲ್ಗೈ ಹುಲ್ಲೆ, ಚಿಂಕಾರ ಗಸೆಲ್, ನಾಲ್ಕು ಕೊಂಬಿನ ಹುಲ್ಲೆ, ಇತ್ಯಾದಿ ಅಪರೂಪದ ಪ್ರಭೇದಗಳಿಗೆ ನೆಲೆಯಾಗಿದೆ.

ಪೆರಿಯಾರ್ ಹುಲಿ ಸಂರಕ್ಷಿತ ಪ್ರದೇಶ


ಪೆರಿಯಾರ್‌ ಹುಲಿ ಸಂರಕ್ಷಿತ ಪ್ರದೇಶವು ಕೇರಳದ ಇಡುಕ್ಕಿ ಜಿಲ್ಲೆಯಲ್ಲಿದೆ. ಇದು ಸುಮಾರು 925 ಚ.ಕಿ.ಮೀ. ವಿಸ್ತೀರ್ಣವನ್ನು ಹೊಂದಿದೆ. ಇಲ್ಲಿ 50ಕ್ಕೂ ಹೆಚ್ಚು ಹುಲಿಗಳಿವೆ. ಇಲ್ಲಿ ಆನೆ, ಜಿಂಕೆ ಸೇರಿದಂತೆ ಅನೇಕ ಪ್ರಭೇದದ ವನ್ಯಜೀವಿಗಳನ್ನು ಕಾಣಬಹುದಾಗಿದೆ. ಈ ಪ್ರದೇಶದಲ್ಲಿ ಹಲವಾರು ಜಲಪಾತಗಳೂ ಇರುವುದರಿಂದ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ.

ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶ

ಈ ಹುಲಿ ಸಂರಕ್ಷಿತ ಪ್ರದೇಶವು ರಾಜಸ್ಥಾನದ ಅಲ್ವಾರ್‌ ನಗರದ ಸಮೀಪದಲ್ಲಿದೆ. ಸುಮಾರು 866 ಚ.ಕಿ.ಮೀ.ಗೆ ಹಬ್ಬಿರುವ ಈ ಅರಣ್ಯ ಪ್ರದೇಶದಲ್ಲಿ ಹುಲಿಗಳಷ್ಟೇ ಅಲ್ಲದೆ ಚಿರತೆಗಳು, ಕತ್ತೆಕಿರುಬಗಳೂ ಇವೆ. ಹಾಗೆಯೇ ನವಿಲು ಸೇರಿದಂತೆ ವಿವಿಧ ಜಾತಿಯ ಪಕ್ಷಿ ಪ್ರಭೇದವನ್ನು ನಾವಿಲ್ಲಿ ಕಾಣಬಹುದಾಗಿದೆ. ಇದು ಪಕ್ಷಿ ವೀಕ್ಷಣೆಗೆ ಹೆಸರುವಾಸಿಯಾದ ಸ್ಥಳವಾಗಿದೆ.

ಭದ್ರಾ ವನ್ಯಜೀವಿ ಅಭಯಾರಣ್ಯ


ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭದ್ರಾ ವನ್ಯಜೀವಿ ಅಭಯಾರಣ್ಯವಿದೆ. ಇದು 500 ಚ.ಕಿ.ಮೀ.ಗೂ ಹೆಚ್ಚು ವಿಸ್ತೀರಣಕ್ಕೆ ಹಬ್ಬಿಕೊಂಡಿದೆ. ಇಲ್ಲಿ ಹುಲಿಗಳು ಮಾತ್ರವಲ್ಲದೆ ಚಿರತೆಗಳು, ನರಿಗಳು ಸೇರಿದಂತೆ ವಿವಿಧ ಜಾತಿಯ ವನ್ಯಜೀವಿಗಳು ನೆಲೆಸಿವೆ. ಹಾಗೆಯೇ ನವಿಲುಗಳು, ಗಿಳಿಗಳು ಸೇರಿದಂತೆ ಹಲವಾರು ಪ್ರಭೇದದ ಪಕ್ಷಿಗಳೂ ಇಲ್ಲಿವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರವಾಸ

Kanyakumari Tour: ನಿಮ್ಮ ಕನ್ಯಾಕುಮಾರಿ ಪ್ರವಾಸದ ಪಟ್ಟಿಯಲ್ಲಿರಲಿ ಈ 10 ಸಂಗತಿಗಳು

ಆಧ್ಯಾತ್ಮಿಕ ಸಾರ, ನೈಸರ್ಗಿಕ ವೈಭವ, ಐತಿಹಾಸಿಕ ಹೆಗ್ಗುರುತುಗಳಿಂದ ಖ್ಯಾತಿ ಪಡೆದಿರುವ ಕನ್ಯಾಕುಮಾರಿ (Kanyakumari Tour) ಭೇಟಿಯನ್ನು ಸ್ಮರಣೀಯವಾಗಿಸಲು ಈ ಹತ್ತು ಚಟುವಟಿಕೆಗಳು ನಿಮ್ಮ ಪ್ರವಾಸದ ಪಟ್ಟಿಯಲ್ಲಿ ಸೇರ್ಪಡೆಯಾಗಲಿ.

VISTARANEWS.COM


on

By

Kanyakumari Tour
Koo

ದಕ್ಷಿಣ ಭಾರತದಲ್ಲಿ (South India) ನೀವು ಪ್ರವಾಸ (tour) ಮಾಡುವ ಯೋಜನೆ ರೂಪಿಸುತ್ತಿದ್ದರೆ ಭಾರತದ ದಕ್ಷಿಣದ ತುದಿಯಾದ ಕನ್ಯಾಕುಮಾರಿ (Kanyakumari Tour) ನಿಮ್ಮ ಆದ್ಯತೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರಲಿ. ತಮಿಳುನಾಡಿನ (tamilnadu) ಕರಾವಳಿಯಲ್ಲಿರುವ ಈ ರತ್ನವು ಭೌಗೋಳಿಕ ಅದ್ಭುತ ಮಾತ್ರವಲ್ಲದೆ ಸಂಸ್ಕೃತಿ, ಇತಿಹಾಸ ಮತ್ತು ನೈಸರ್ಗಿಕ ಸೌಂದರ್ಯದ ಸಂಗಮವಾಗಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಧ್ಯಾನದ ಕಾರಣಕ್ಕಾಗಿ ಕನ್ಯಾಕುಮಾರಿ ಈಗ ಸುದ್ದಿಯ ಕೇಂದ್ರವಾಗಿದೆ.

ಕನ್ಯಾಕುಮಾರಿಯಲ್ಲಿ ನೀವು ಮಿಸ್ ಮಾಡಿಕೊಳ್ಳಲೇಬಾರದ ಪ್ರಮುಖ 10 ಸಂಗತಿಗಳಿವೆ. ಇವೆಲ್ಲ ನಿಮ್ಮ ಪ್ರವಾಸದ ಪಟ್ಟಿಯಲ್ಲಿ ಇರಲಿ.

ತ್ರಿವೇಣಿ ಸಂಗಮ

ಕನ್ಯಾಕುಮಾರಿಯು ತನ್ನ ವಿಶಿಷ್ಟ ಭೌಗೋಳಿಕ ಸ್ಥಾನಕ್ಕೆ ಹೆಸರುವಾಸಿಯಾಗಿದೆ. ಅಲ್ಲಿ ಸಮುದ್ರದ ಮೇಲೆ ಸೂರ್ಯೋದಯ ಮತ್ತು ಸೂರ್ಯಾಸ್ತ ಎರಡನ್ನೂ ವೀಕ್ಷಿಸಬಹುದು. ಅರಬ್ಬೀ ಸಮುದ್ರ, ಬಂಗಾಳಕೊಲ್ಲಿ ಮತ್ತು ಹಿಂದೂ ಮಹಾಸಾಗರದ ಸಂಗಮವಾಗಿರುವ ತ್ರಿವೇಣಿ ಸಂಗಮವು ನಯನ ಮನೋಹರ ದೃಶ್ಯವನ್ನು ಒದಗಿಸುತ್ತದೆ.

ವಿವೇಕಾನಂದ ಕಲ್ಲಿನ ಸ್ಮಾರಕ

ಕರಾವಳಿಯ ಕಲ್ಲಿನ ದ್ವೀಪದಲ್ಲಿ ನೆಲೆಗೊಂಡಿರುವ ಈ ಸ್ಮಾರಕವನ್ನು ಸ್ವಾಮಿ ವಿವೇಕಾನಂದರಿಗೆ ಸಮರ್ಪಿಸಲಾಗಿದೆ. ಸಣ್ಣ ದೋಣಿ ಸವಾರಿಯ ಮೂಲಕ ಅದನ್ನು ತಲುಪಿ ಮತ್ತು ವಿಹಂಗಮ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ಆಧ್ಯಾತ್ಮಿಕ ಮತ್ತು ಐತಿಹಾಸಿಕ ಮಹತ್ವವನ್ನು ಇಲ್ಲಿ ನೆನಪಿಸಿಕೊಳ್ಳಿ.

ತಿರುವಳ್ಳುವರ್ ಪ್ರತಿಮೆ

ವಿವೇಕಾನಂದ ಬಂಡೆಯ ಪಕ್ಕದಲ್ಲಿರುವ ಈ 133 ಅಡಿ ಎತ್ತರದ ತಮಿಳು ಕವಿ-ಸಂತ ತಿರುವಳ್ಳುವರ್ ಪ್ರತಿಮೆ ಕಲೆ ಮತ್ತು ವಾಸ್ತುಶಿಲ್ಪದ ಅದ್ಭುತವಾಗಿದೆ. ಇಲ್ಲಿಗೆ ಭೇಟಿ ನೀಡಲು ತಪ್ಪಿಸದಿರಿ.

ಸುಂದರ ಕಡಲತೀರ

ಕನ್ಯಾಕುಮಾರಿ ಕಡಲತೀರವು ಬಹು-ಬಣ್ಣದ ಮರಳು ಮತ್ತು ಕಲ್ಲಿನ ತೀರವನ್ನು ಹೊಂದಿದೆ. ಪ್ರಶಾಂತವಾದ ವಾತಾವರಣದಲ್ಲಿ ಸುತ್ತಾಡಲು ಬಯಸುವವರು ಸಂಗುತುರೈ ಬೀಚ್, ಸೋತವಿಲೈ ಬೀಚ್ ನಲ್ಲಿ ಕೆಲಕಾಲ ಕಳೆಯಬಹುದು.


ಪದ್ಮನಾಭಪುರಂ ಅರಮನೆ

ಕನ್ಯಾಕುಮಾರಿಯಿಂದ ಸ್ವಲ್ಪ ದೂರದಲ್ಲಿ 16ನೇ ಶತಮಾನದ ಈ ಅರಮನೆಯು ಸಾಂಪ್ರದಾಯಿಕ ಕೇರಳ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ ಮತ್ತು ದಕ್ಷಿಣ ಭಾರತದ ಪ್ರವಾಸದ ವೇಳೆ ತಪ್ಪಿಸಿಕೊಳ್ಳಲೇ ಬಾರದ ಅತ್ಯಂತ ಸುಂದರ ತಾಣವಾಗಿದೆ.

ತನುಮಲಯನ್ ದೇವಾಲಯ

ಸ್ಥಾನುಮಲಯನ್ ಕೋವಿಲ್ ಎಂದೂ ಕರೆಯಲ್ಪಡುವ ಈ ದೇವಾಲಯದ ವಾಸ್ತುಶಿಲ್ಪದ ಅದ್ಭುತವು ಅದರ ಅಂದವಾದ ಕೆತ್ತನೆಗಳು ಮತ್ತು ವಿಶಿಷ್ಟವಾದ ಸಂಗೀತ ಸ್ತಂಭಗಳಿಗೆ ಗಮನಾರ್ಹವಾಗಿ. ಇದು ದಕ್ಷಿಣ ಭಾರತದಲ್ಲಿನ ಸಾಂಸ್ಕೃತಿಕ ಪ್ರವಾಸದಲ್ಲಿ ಪ್ರಮುಖ ಅಂಶವಾಗಿದೆ.

ಗಾಂಧಿ ಸ್ಮಾರಕ

ಮಹಾತ್ಮಾ ಗಾಂಧಿಯವರ ಚಿತಾಭಸ್ಮವನ್ನು ಮುಳುಗಿಸುವ ಮೊದಲು ಇರಿಸಲಾಗಿದ್ದ ಸ್ಥಳದಲ್ಲಿ ನಿರ್ಮಿಸಲಾದ ಈ ಸ್ಮಾರಕವು ಭಾರತದ ಶ್ರೀಮಂತ ಇತಿಹಾಸದಲ್ಲಿ ಆಸಕ್ತಿ ಹೊಂದಿರುವವರಿಗೆ ಅತ್ಯಂತ ಸುಂದರ, ಶಾಂತವಾದ ತಾಣವಾಗಿದೆ.


ಕನ್ಯಾಕುಮಾರಿ ವ್ಯಾಕ್ಸ್ ಮ್ಯೂಸಿಯಂ

ವಿನೋದ ಮತ್ತು ಶೈಕ್ಷಣಿಕ ಅನುಭವ ಪಡೆಯಲು ಈ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿ. ಇಲ್ಲಿ ಪ್ರಸಿದ್ಧ ವ್ಯಕ್ತಿಗಳ ಮೇಣದ ಪ್ರತಿಮೆಗಳು ಆಕರ್ಷಣೀಯವಾಗಿದೆ.

ಇದನ್ನೂ ಓದಿ: Wildlife Sanctuaries: ಮಳೆ ಬರುವ ಮುನ್ನ ಈ ವನ್ಯಜೀವಿಧಾಮಗಳನ್ನು ನೋಡಲು ಪ್ರಯತ್ನಿಸಿ

ಮರುಂತುವಜ್ ಮಲೈ

ಕನ್ಯಾಕುಮಾರಿಯ ಸಮೀಪದಲ್ಲಿರುವ ಈ ಸಣ್ಣ ಗುಡ್ಡಗಾಡು ಪ್ರದೇಶವು ಪುರಾಣದ ಮಹತ್ವವನ್ನು ಹೊಂದಿದೆ. ರಮಣೀಯ ನೋಟವನ್ನು ಒದಗಿಸಿಯುವ ಇದು ದಕ್ಷಿಣ ಭಾರತ ಪ್ರವಾಸದಲ್ಲಿರುವ ಸಾಹಸ ಪ್ರಿಯರ ಪಟ್ಟಿಗೆ ಪರಿಪೂರ್ಣ ಸೇರ್ಪಡೆಯಾಗಿದೆ.

ಸ್ಥಳೀಯ ಖಾದ್ಯ ಸವಿಯಿರಿ

ಕೋತು ಪರೋಟಾ, ಬಾಳೆಹಣ್ಣು ಚಿಪ್ಸ್ ಮತ್ತು ಸಮುದ್ರಾಹಾರ ಭಕ್ಷ್ಯಗಳಂತಹ ಸ್ಥಳೀಯ ಭಕ್ಷ್ಯಗಳನ್ನು ಇಲ್ಲಿ ಸವಿಯಬಹುದು.

Continue Reading

ಪ್ರವಾಸ

Belagavi Tour: ಬೆಳಗಾವಿಗೆ ಭೇಟಿ ನೀಡಿದಾಗ ಈ ಸ್ಥಳಗಳನ್ನು ನೋಡಲು ಮರೆಯಬೇಡಿ

ಕುಂದಾನಗರಿ ಬೆಳಗಾವಿಯಲ್ಲಿ ಅತ್ಯಾಕರ್ಷಕ ಹಲವು ತಾಣಗಳಿದ್ದು, ಪ್ರವಾಸಿಗರು ಇಲ್ಲಿಗೆ ಭೇಟಿ ನೀಡದೇ ಇದ್ದರೆ ಬೆಳಗಾವಿ ಪ್ರವಾಸ (Belagavi Tour) ಅಪೂರ್ಣವಾಗುವುದು. ನೀವು ಬೆಳಗಾವಿಗೆ ಭೇಟಿ ನೀಡಿದಾಗ ಮರೆಯದೆ ಈ ಸ್ಥಳಗಳನ್ನು ನೋಡಿ ಬನ್ನಿ. ಬೆಳಗಾವಿಯ ಪ್ರಮುಖ ಸ್ಥಳಗಳ ಕಿರು ಪರಿಚಯ ಇಲ್ಲಿದೆ.

VISTARANEWS.COM


on

By

Belagavi Tour
Koo

ಜಲಪಾತಗಳಿಂದ (waterfalls) ಹಿಡಿದು ಪ್ರಾಚೀನ ಕೋಟೆಗಳವರೆಗೆ (ancient forts) ಬೆಳಗಾವಿಯಲ್ಲಿ ಪ್ರವಾಸಿಗರು (Belagavi Tour) ಮಿಸ್ ಮಾಡಿಕೊಳ್ಳಲೇಬಾರದ ಒಂಬತ್ತು ಆಕರ್ಷಕ ಪ್ರವಾಸಿ (Tourist place) ತಾಣಗಳಿವೆ.

ರಜೆಯಲ್ಲಿ ಬೆಳಗಾವಿಯತ್ತ ಹೊರಟರೆ ರಮಣೀಯ ಮತ್ತು ಪಾರಂಪರಿಕ ತಾಣಗಳಿಗೆ ಭೇಟಿ ನೀಡಲು ಮರೆಯದಿರಿ.
ಪ್ರವಾಸಿ ತಾಣಗಳಿಗೆ ಹೋಗಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ, ವಿಡಿಯೋಗಳನ್ನು ಹಂಚಿಕೊಂಡು ಎಲ್ಲರ ಮೆಚ್ಚುಗೆ ಪಡೆಯಬೇಕು ಎನ್ನುವ ಯೋಚನೆ ಇದ್ದರೆ ಕೂಡಲೇ ಬ್ಯಾಗ್ ಪ್ಯಾಕ್ ಮಾಡಿ ಬೆಳಗಾವಿಯತ್ತ ಪ್ರವಾಸ ಹೊರಡಲು ತಯಾರಾಗಿ. ಎಲ್ಲರ ಮನ ಸೆಳೆಯುವ ಹಲವಾರು ಸುಪ್ರಸಿದ್ದ ತಾಣಗಳು ಇಲ್ಲಿವೆ.

ಬೆಳಗಾವಿ ಕೋಟೆ

12ನೇ ಶತಮಾನದ ಬೆಳಗಾವಿ ಕೋಟೆ ಮರಗಳಿಂದ ಸುತ್ತುವರಿದಿದ್ದು, ಕಮಾನಿನ ಗೇಟ್‌ವೇಗಳ ಮೂಲಕ ಹೆಜ್ಜೆ ಹಾಕುತ್ತ ಸಾಗುವಾಗ ಎತ್ತರದ ಗೋಡೆಗಳ ಮೇಲೆ ವಿವಿಧ ಆಡಳಿತಗಾರರು ಹೋರಾಡಿದ ಭೀಕರ ಯುದ್ಧಗಳ ಚಿತ್ರಣ ಮನದಲ್ಲಿ ಮೂಡುವುದು. ಸಂಕೀರ್ಣವಾದ ಕೆತ್ತನೆಗಳೊಂದಿಗೆ ಅರಮನೆ, ಮಸೀದಿ ಮತ್ತು ದೇವಾಲಯಗಳ ಕುಸಿಯುತ್ತಿರುವ ಅವಶೇಷಗಳನ್ನು ಕಿರಿದಾದ ಮಾರ್ಗಗಳನ್ನು ಸುತ್ತಾಡುವಾಗ ಫೋಟೋ, ವಿಡಿಯೋ ಮಾಡಲು ಮರೆಯದಿರಿ. ಇಲ್ಲಿಯೇ ಚಿಕ್ಕ ವಸ್ತುಸಂಗ್ರಹಾಲಯಕ್ಕೂ ಭೇಟಿ ನೀಡಿ ಸುಂದರ ನೆನಪುಗಳನ್ನು ಮನದ ಜೋಳಿಗೆಯಲ್ಲಿ ತುಂಬಿಕೊಳ್ಳಿ.

ಬೆಳಗಾವಿ ನಗರದ ಬಹುಭಾಗವನ್ನು ಈ ಕೋಟೆ ಆವರಿಸಿದೆ ಇಲ್ಲಿ ಪ್ರವೇಶಿಸಲು ಯಾವುದೇ ಪ್ರವೇಶ ಶುಲ್ಕಗಳಿಲ್ಲ.


ಕಮಲ್ ಬಸ್ತಿ

ಕೋಟೆಯ ಗೋಡೆಗಳ ಒಳಗಿರುವ ಕಮಲ್ ಬಸ್ತಿ ಜೈನ ದೇವಾಲಯ 12ನೇ ಶತಮಾನದ ಸೊಗಸಾದ ವಾಸ್ತುಶಿಲ್ಪಗಳಲ್ಲಿ ಒಂದಾಗಿದೆ. ಬೆಳಗಾವಿಯ ಕಿರೀಟದಲ್ಲಿ ವೈಭವದಿಂದ ಮಿನುಗುತ್ತಿರುವ ಈ ಪ್ರತಿಷ್ಠಿತ ದೇವಾಲಯದಲ್ಲಿ ಪ್ರಾಚೀನ ಕಥೆಗಳು ಅನುರಣಿಸುತ್ತಿರುವಂತೆ ಭಾಸವಾಗುವುದು. ಬಹು-ಪದರದ ಅಲಂಕೃತ ಛಾವಣಿಗಳು, ಕಲ್ಲಿನ ಸ್ತಂಭಗಳನ್ನು ಒಳಗೊಂಡಿರುವ ಪೌರಾಣಿಕ ವ್ಯಕ್ತಿಗಳನ್ನು ಇಲ್ಲಿ ಕಾಣಬಹುದು.

ಇಲ್ಲಿ 40 ಸಮಾನ ಅಂತರದಲ್ಲಿ ಕೆತ್ತಿದ ಕಂಬಗಳು, ಗುಮ್ಮಟಗಳು ಆಕರ್ಷಣೀಯವಾಗಿದೆ. ರಟ್ಟ ರಾಜವಂಶದ ಕುಶಲಕರ್ಮಿಗಳು ಇದನ್ನು ನಿರ್ಮಿಸಿದ್ದಾರೆ. ಇಲ್ಲಿಗೆ ಪ್ರವೇಶಿಸಲು ಯಾವುದೇ ಪ್ರವೇಶ ಶುಲ್ಕಗಳಿಲ್ಲ.


ಗೋಕಾಕ್ ಜಲಪಾತ

ಹಸಿರು ಕಾಡುಗಳ ನಡುವೆ ಸುಮಾರು 157 ಮೀಟರ್‌ ಎತ್ತರದಿಂದ ಧುಮುಕುವ ಗೋಕಾಕ್ ಜಲಪಾತ ಬೃಹತ್ ಪ್ರಮಾಣದ ಜಲರಾಶಿಯನ್ನು ಹೊಂದಿದೆ. ನದಿಯಲ್ಲಿ ದೋಣಿ ಸವಾರಿ ಮಾಡಿ ತಂಗಾಳಿಯಲ್ಲಿ ಆನಂದಿಸಬಹದು. ಮಳೆ, ಚಳಿಗಾಲದಲ್ಲಿ ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ. ಟ್ರೆಕ್ಕಿಂಗ್ ಮಾಡಲು ಅವಕಾಶವಿದೆ. ಯಾವುದೇ ಶುಲ್ಕವಿಲ್ಲ.


ಕಿತ್ತೂರು ಕೋಟೆ

16 ನೇ ಶತಮಾನದಲ್ಲಿ ನಿರ್ಮಿಸಲಾದ ಭವ್ಯವಾದ ಕಿತ್ತೂರು ಕೋಟೆಯ ಅವಶೇಷಗಳನ್ನು ಇಲ್ಲಿ ಕಾಣಬಹುದು. ಹಳ್ಳಿಗಾಡಿನ ದೋಣಿಗಳ ಮೇಲೆ ಸೊಂಪಾದ ಕಾಡುಗಳಿಂದ ರಚಿಸಲಾದ ಶಾಂತವಾದ ಸರೋವರದ ನೀರಿನಲ್ಲಿ ಪೆಡಲ್ ಮಾಡಿ ಹಳೆಯ ಅರಮನೆಯ ಹಾದಿಗಳಲ್ಲಿ ಸುತ್ತಾಡಿ, ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಚನ್ನಮ್ಮ ನನ್ನು ನೆನಪಿಸಿಕೊಳ್ಳಬಹುದು. ಚೆನ್ನಮ್ಮ ತನ್ನ ಅಂತಿಮ ದಿನಗಳನ್ನು ಕಳೆದ ಜೈಲು ಕೊಠಡಿಯ ಒಂದು ನೋಟ ಅಥವಾ 1967 ರಲ್ಲಿ ನಿರ್ಮಿಸಲಾದ ಕಿತ್ತೂರಿನ ಸರೋವರದ ಇತಿಹಾವನ್ನು ಇಲ್ಲಿ ಕಾಣಬಹುದು.

ಪ್ರಾದೇಶಿಕ ಆಡಳಿತಗಾರರಾದ ದೇಸಾಯಿ ಕುಟುಂಬ ಇದನ್ನು ನಿರ್ಮಿಸಿದ್ದು, ಇಲ್ಲಿ ಅರಮನೆ, ಮ್ಯೂಸಿಯಂ, ದೇವಸ್ಥಾನ, ಸರೋವರವನ್ನು ವೀಕ್ಷಿಸಬಹುದು. ಕನಿಷ್ಠ ಪ್ರವೇಶ ಶುಲ್ಕವಿದೆ.

ಶಿವಗಿರಿ ಬೆಟ್ಟ

ಒಂದು ಬದಿಯಲ್ಲಿ ಪಶ್ಚಿಮ ಘಟ್ಟದ ಇಳಿಜಾರು ಮತ್ತು ಇನ್ನೊಂದೆಡೆ ಹತ್ತಿ ಉಣ್ಣೆಯ ಮೋಡಗಳು ತೇಲುತ್ತಿರುವ ವಿಸ್ತಾರವಾದ ಬೆಳಗಾವಿ ನಗರವನ್ನು ನೋಡುವಾಗ ಉಸಿರು ಬಿಗಿ ಹಿಡಿದ ಅನುಭವ. ಹಸಿರು ಶಿವಗಿರಿ ಗಿರಿಧಾಮದ ಮೇಲಿನ ವೈಮಾನಿಕ ನೋಟವು ಪ್ರವಾಸಿಗರನ್ನು ವಿಸ್ಮಯಗೊಳಿಸುವುದು. ಜಾಂಬೋಟಿ ಜಲಪಾತ, ಉದ್ಯಾನಗಳು ಇಲ್ಲಿನ ಆಕರ್ಷಣೆ. ಖಾಸಗಿ ಟ್ಯಾಕ್ಸಿ ಮೂಲಕ ಬೆಳಗಾವಿಯಿಂದ 30 ಕಿ.ಮೀ. ದೂರದಲ್ಲಿರುವ ಶಿವಗಿರಿ ಬೆಟ್ಟ ತಲುಪಲು ಯಾವುದೇ ಪ್ರವೇಶ ಶುಲ್ಕಗಳಿಲ್ಲ. ಇಲ್ಲಿ ಸುಂದರವಾದ ಸೂರ್ಯಾಸ್ತದ ದೃಶ್ಯಗಳನ್ನು ಕಣ್ತುಂಬಿಕೊಳ್ಳಿ.

ಸಿದ್ಧೇಶ್ವರ ದೇವಸ್ಥಾನ

12 ನೇ ಶತಮಾನದ ಕಲ್ಲಿನ ಕೆತ್ತನೆಯ ಐತಿಹಾಸಿಕ ಸಿದ್ಧೇಶ್ವರ ದೇವಾಲಯ ಶಿವನಿಗೆ ಸಮರ್ಪಿತವಾಗಿದೆ. ಶ್ರೀಗಂಧದ ಕಮಾನುಗಳು ಪೂಜ್ಯ ಲಿಂಗವನ್ನು ಹೊಂದಿರುವ ಒಳಗಿನ ಗರ್ಭಗುಡಿಯೊಳಗೆ ಸಂಜೆಯ ಆರತಿಗೆ ಹಾಜರಾಗಿ. ದೇವಾಲಯದ ಶಬ್ದಗಳು ಮತ್ತು ಪ್ರಜ್ವಲಿಸುವ ದೀಪಗಳು ಮನಸ್ಸಿಗೆ ಶಾಂತಿ ತುಂಬುವುದು. ಕಪ್ಪು ಕಲ್ಲಿನ ನೆಲದ ಮೇಲೆ ಕುಳಿತು ಧ್ಯಾನ ಮಾಡುವಾಗ ದೇಹದೊಳಗೆ ಶಕ್ತಿ ಸಂಚಾರವಾದ ಅನುಭವ ಕೊಡುವುದು.
ರಟ್ಟ ರಾಜವಂಶದ ದೊರೆ ಸಿದ್ಧರಸ ನಿರ್ಮಿಸಿರುವ ಈ ದೇವಾಲಯ ನಗರ ಕೇಂದ್ರದಿಂದ 5 ಕಿ.ಮೀ. ದೂರದಲ್ಲಿದೆ.

ರೇಷ್ಮೆ ಸೀರೆ ಖರೀದಿಸಿ

ಕಾರ್ಪೊರೇಷನ್ ವೃತ್ತದ ಬಳಿಯಿರುವ ಅಂಗಡಿಗಳಾದ್ಯಂತ ಸಾಂಪ್ರದಾಯಿಕ ನೇಯ್ಗೆ, ಮುದ್ರಣಗಳು ಮತ್ತು ಕರಕುಶಲತೆಯನ್ನು ಕಾಣಬಹುದು. ಕೈಗೆಟುಕುವ ದರದಲ್ಲಿ ರೇಷ್ಮೆ ಸೀರೆಗಳನ್ನು ಖರೀದಿ ಮಾಡಬಹುದು. ಇಲ್ಲಿ ಚಂದೇರಿ ರೇಷ್ಮೆ ಸೀರೆಗಳು, ಕೈಮಗ್ಗದ ಕಾಟನ್ ಕುರ್ತಿಗಳು ಖರೀದಿ ಮಾಡಲು ಮರೆಯದಿರಿ.

ಇದನ್ನೂ ಓದಿ: South Indian Monsoon Destinations: ದಕ್ಷಿಣ ಭಾರತದ ಈ 6 ಸ್ಥಳಗಳಲ್ಲಿ ಮಳೆಗಾಲದಲ್ಲಿ ಚಾರಣ ಮಾಡಲೇಬೇಕು!


ಮಿಲಿಟರಿ ಮಹಾದೇವ ದೇವಸ್ಥಾನ

ಶಿವನಿಗೆ ಸಮರ್ಪಿತವಾಗಿರುವ ಇನ್ನೊಂದು ದೇಗುಲ ಮಿಲಿಟರಿ ಮಹಾದೇವ ದೇವಾಲಯ. ಕಲ್ಲಿನ ಮಾರ್ಗದಲ್ಲಿ ದೇವಾಲಯವನ್ನು ತಲುಪಬೇಕಾದರೆ ಅರ್ಧ ದಿನವನ್ನು ಟ್ರೆಕ್ಕಿಂಗ್ ನಲ್ಲಿ ಕಳೆಯಬೇಕು. ಮರಾಠ ದೊರೆ ಸಾರ್ಜೆಂಟ್ ಧೂಳಪ್ಪ ಇದನ್ನು ನಿರ್ಮಿಸಿದ್ದು, ಮುಂಜಾನೆ ಮತ್ತು ಸಂಜೆ ವೇಳೆ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ.

Continue Reading

ಪ್ರವಾಸ

Dream Of Retired Couple: ನಿರಂತರ ಮೂರೂವರೆ ವರ್ಷಗಳ ನೌಕಾಯಾನಕ್ಕಾಗಿ ತಮ್ಮದೆಲ್ಲವನ್ನೂ ಮಾರಿದ ದಂಪತಿ!

ಕಳೆದ ಎರಡು ವಾರಗಳಿಂದ ಗ್ರೇಸ್ ಮತ್ತು ಜೆರ್ರಿ ಗ್ರೇಡಿ ಯಾವುದೇ ಸೂಟ್‌ಕೇಸ್‌ ಭಾರ ಎತ್ತಿಕೊಳ್ಳದೇ ವಾಸ ಮಾಡುತ್ತಿದ್ದಾರೆ. ಯಾಕೆಂದರೆ ಅವರು ಈಗ ತಮ್ಮ ಜೀವಮಾನದ ಕನಸನ್ನು (Dream Of Retired Couple) ನನಸಾಗಿಸಿಕೊಳ್ಳುವ ದಾರಿಯಲ್ಲಿ ನಡೆಯುತ್ತಿದ್ದಾರೆ. ಪ್ರವಾಸಿ ದಂಪತಿಯ ಕುತೂಹಲಕರ ಕಥನ ಇಲ್ಲಿದೆ.

VISTARANEWS.COM


on

By

Dream Of Retired Couple
Koo

ಬದುಕಿನಲ್ಲಿ ಎಲ್ಲರಿಗೂ ಒಂದಲ್ಲ ಒಂದು ರೀತಿಯ ಕನಸುಗಳಿರುತ್ತವೆ. ಅದರಲ್ಲೂ ಕೆಲವರು ತಮ್ಮ ಕನಸು (dream) ನನಸು ಮಾಡಿಕೊಳ್ಳಲು ಎಲ್ಲವನ್ನೂ ತ್ಯಾಗ ಮಾಡಲು ಸಿದ್ಧರಾಗುತ್ತಾರೆ. ಅಂಥವರಲ್ಲಿ ಒಬ್ಬರಾಗಿದ್ದಾರೆ ಅಮೆರಿಕನ್ (American)-ಇಟಾಲಿಯನ್ ನ (Italian) ಈ ದಂಪತಿ (Dream Of Retired Couple). ಇವರು ತಮ್ಮ ಕನಸನ್ನು ಸಾಕಾರಗೊಳಿಸಲು ತಮ್ಮದು ಎಂದೆನಿಸಿಕೊಂಡಿದ್ದ, ತಾವು ಜೀವಮಾನದಲ್ಲಿ ಗಳಿಸಿದ್ದ ಎಲ್ಲವನ್ನೂ ಮಾರಾಟ ಮಾಡಿದ್ದಾರೆ.

ಕಳೆದ ಎರಡು ವಾರಗಳಿಂದ ಗ್ರೇಸ್ ಮತ್ತು ಜೆರ್ರಿ ಗ್ರೇಡಿ ಯಾವುದೇ ಸೂಟ್‌ಕೇಸ್‌ ಭಾರ ಎತ್ತಿಕೊಳ್ಳದೇ ವಾಸ ಮಾಡುತ್ತಿದ್ದಾರೆ. ಯಾಕೆಂದರೆ ಅವರು ಈಗ ತಮ್ಮ ಜೀವಮಾನದ ಕನಸನ್ನು ನನಸಾಗಿಸಿಕೊಳ್ಳುವ ದಾರಿಯಲ್ಲಿ ನಡೆಯುತ್ತಿದ್ದಾರೆ.

70ರ ಹರೆಯದಲ್ಲಿರುವ ಈ ದಂಪತಿ ಶೀಘ್ರದಲ್ಲೇ ಪ್ರಪಂಚದಾದ್ಯಂತ (world tour) ನಿರಂತರ ಮೂರೂವರೆ ವರ್ಷಗಳ ವಿಹಾರಕ್ಕೆ (cruise) ತೆರಳಲಿದ್ದಾರೆ. ಈ ವಿಹಾರ ನಡೆಸಲಿರುವ ಸುಮಾರು 800 ಪ್ರಯಾಣಿಕರಲ್ಲಿ ಇವರೂ ಸೇರಿದ್ದಾರೆ.

ಇವರ ಈ ವಿಹಾರವು ಮೇ 30ರಂದು ಪ್ರಾರಂಭವಾಗಲಿದೆ. ಎಲ್ಲಾ ಏಳು ಖಂಡಗಳಾದ್ಯಂತ 147 ದೇಶಗಳಲ್ಲಿ 425 ಬಂದರುಗಳಿಗೆ ಈ ಸಂದರ್ಭದಲ್ಲಿ ಇವರು ಭೇಟಿ ನೀಡಲಿದ್ದಾರೆ. ಈ ಪ್ರವಾಸದ ವೇಳೆ ಯಾವುದೇ ದೇಶಕ್ಕೆ ಹೋದರೂ ಅಲ್ಲಿ ವಸಂತ ಮತ್ತು ಬೇಸಿಗೆಯ ಋತುವಾಗಿರುವುದು ಖಾತ್ರಿ ಪಡಿಸಲಾಗಿದೆ. ಈ ವಿಹಾರದಲ್ಲಿ ವಿಲ್ಲಾ ವೈ ಒಡಿಸ್ಸಿ ಎಂಬ ಎರಡು ವಸತಿ ಹಡಗುಗಳು ಮಾತ್ರ ಬಳಕೆಯಾಗಲಿದೆ.


ವಿಹಾರಕ್ಕಾಗಿ ಎಲ್ಲವನ್ನೂ ಮಾರಾಟ ಮಾಡಿದ ದಂಪತಿ

ಗ್ರೇಡಿ ದಂಪತಿ ಎರಡು ವರ್ಷಗಳ ಹಿಂದೆ ಗ್ರೇಸ್‌ನ ತಾಯ್ನಾಡು ಸಿಸಿಲಿಗೆ ತೆರಳಿ, ಅಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ತಮ್ಮ ಮನೆಯನ್ನು ಮಾರಾಟ ಮಾಡಿದ ಅನಂತರ ಅವರು ಕಳೆದ ಕೆಲವು ತಿಂಗಳುಗಳಿಂದ ತಮ್ಮ ಪ್ರವಾಸಕ್ಕೆ ಧನಸಹಾಯಕ್ಕಾಗಿ ತಮ್ಮ ಇತರ ಅಮೂಲ್ಯವಾದ ಆಸ್ತಿಯನ್ನು ಮಾರಾಟ ಮಾಡಿದ್ದಾರೆ.

ಸಾಹಸಕ್ಕೆ ಹೊಸದಲ್ಲ

ನಾವು ನಮ್ಮ ಹೆಚ್ಚಿನ ವಸ್ತುಗಳನ್ನು ಸ್ನೇಹಿತರಿಗೆ ಮಾರಾಟ ಮಾಡಿದ್ದೇವೆ ಎಂದು ಹೇಳುವ ಗ್ರೇಸ್ ದಂಪತಿಗೆ ಸಾಹಸವೇನು ಹೊಸತಲ್ಲ. ಕನಿಷ್ಠ ವಸ್ತುಗಳ ಬಳಕೆಯನ್ನು ಅಭ್ಯಾಸ ಮಾಡಿಕೊಂಡಿರುವ ಇವರು ಪ್ರತಿದಿನ ಒಂದೇ ಬಟ್ಟೆಯನ್ನು ಧರಿಸುತ್ತಾರೆ. ರಾತ್ರಿ ತೊಳೆದು ಹಾಕುತ್ತಾರೆ. ಹೀಗಾಗಿ ವಾರ್ಡ್ ರೋಬ್ ನ ಅಗತ್ಯ ನಮಗಿಲ್ಲ ಎನ್ನುತ್ತಾರೆ ಗ್ರೇಸ್.

ಭೂಮಿಯಲ್ಲಿ ವಾಸಿಸುವುದಕ್ಕಿಂತ ಇದು ಹೆಚ್ಚು ದುಬಾರಿಯಲ್ಲ ಎನ್ನುವ ಇವರು ವಿಲ್ಲಾ ವೈ ಒಡಿಸ್ಸಿಯಲ್ಲಿ ಒಂದು ವಸತಿ ಕೋಣೆಯನ್ನು ಬಾಡಿಗೆಗೆ ಪಡೆದಿದ್ದಾರೆ. ಇದರ ಬಾಡಿಗೆ ವರ್ಷಕ್ಕೆ ಸರಿಸುಮಾರು 36.22 ಲಕ್ಷ ರೂಪಾಯಿಗಳು.
ಕ್ರೂಸ್ ದರ ಕೈಗೆಟುಕುವಂತಿದೆ. ವಾರ್ಷಿಕ ಬಾಡಿಗೆ, ಬಾಲ್ಕನಿಯೊಂದಿಗೆ ಹೊರಗಿನ ಕ್ಯಾಬಿನ್ ನಲ್ಲಿ ವರ್ಷಕ್ಕೆ ಸುಮಾರು 60.57 ಲಕ್ಷ ರೂ. ವೆಚ್ಚವಾಗಲಿದೆ.


ಕ್ರೂಸ್ ವಿಶೇಷ ಏನು?

ವಿಲ್ಲಾ ವೈ ಒಡಿಸ್ಸಿಯನ್ನು 1993ರಲ್ಲಿ ನಿರ್ಮಿಸಲಾಯಿತು. ಸಂಪೂರ್ಣವಾಗಿ 12 ಮಿಲಿಯನ್ ಡಾಲರ್ ನಲ್ಲಿ ದುರಸ್ತಿ ಕಾರ್ಯಗಳನ್ನು ನಡೆಸಲಾಗಿದೆ. ವಿಲ್ಲಾ ವೈ ಒಡಿಸ್ಸಿಯಲ್ಲಿ ಪ್ರಯಾಣಿಕರು ಒಳಾಂಗಣ ಕ್ಯಾಬಿನ್‌ಗೆ ಪ್ರತಿ ವ್ಯಕ್ತಿಗೆ ದಿನಕ್ಕೆ 7,421.79 ರೂ., ಹೊರಾಂಗಣ ಕ್ಯಾಬಿನ್‌ಗಳಿಗೆ 9,923.52 ರೂ. ಮತ್ತು ಬಾಲ್ಕನಿಯಲ್ಲಿರುವವರಿಗೆ 16,594.79 ರೂ. ಪಾವತಿಸಬೇಕಾಗುತ್ತದೆ.

ಅತಿಥಿಗಳಿಗೆ ರಾತ್ರಿಯ ಊಟದಲ್ಲಿ ಅನಿಯಮಿತ ಆಹಾರ, ತಂಪು ಪಾನೀಯ ಮತ್ತು ಆಲ್ಕೊಹಾಲ್ ಲಭ್ಯವಿರುತ್ತದೆ. ಉಚಿತ ವೈಫೈ ಮತ್ತು ಔಷಧ ಮತ್ತು ಇತರ ಕಾರ್ಯವಿಧಾನ ಹೊರತುಪಡಿಸಿ ನಿರಂತರ ವೈದ್ಯಕೀಯ ತಪಾಸಣೆಗಳನ್ನು ನಡೆಸಲಾಗುತ್ತದೆ.

24/7 ಕೊಠಡಿ ಸೇವೆ, ವಾರಕ್ಕೊಮ್ಮೆ ಕೊಠಡಿ ಸ್ವಚ್ಛತೆ ಮತ್ತು ಎರಡು ವಾರಕ್ಕೊಮ್ಮೆ ಲಾಂಡ್ರಿ ಸೇವೆ ಎಲ್ಲವನ್ನೂ ಕ್ರೂಸ್ ನ ದರದಲ್ಲಿ ಸೇರಿಸಲಾಗಿದೆ.

ಪ್ರತ್ಯೇಕ ಪ್ರವಾಸ, ವಿಮಾನಯಾನಕ್ಕೆ ಹೋಲಿಸಿದರೆ ಇದು ಅಗ್ಗವಾಗಿದೆ ಎನ್ನುತ್ತಾರೆ ಗ್ರೇಸ್.

ಬಹು ದಿನಗಳ ಕನಸು

ಗ್ರೇಸ್ ದಂಪತಿ ಮೂರು ವರ್ಷಗಳ ಲೈಫ್ ಅಟ್ ಸೀ ಕ್ರೂಸಸ್ ಟ್ರಿಪ್‌ಗೆ ಸೇರಲು ನಿರ್ಧರಿಸಿದ್ದರು. ಆದರೆ ನವೆಂಬರ್ 2023 ರಲ್ಲಿ ಅದನ್ನು ಅನಿರೀಕ್ಷಿತವಾಗಿ ರದ್ದುಗೊಳಿಸಲಾಯಿತು. ಮರುಪಾವತಿಯನ್ನು ಕೋರಿ ಸಾಕಷ್ಟು ಮಂದಿ ಪ್ರವಾಸವನ್ನು ಕೈಬಿಟ್ಟರು. ನಾವು ಅಲೆಮಾರಿಗಳು, ಸಾಕಷ್ಟು ಪ್ರಯಾಣಿಸಿದ್ದೇವೆ. ನಾನು ಯಾವುದರ ಬಗ್ಗೆಯೂ ಚಿಂತಿಸುವುದಿಲ್ಲ ಎನ್ನುತ್ತಾರೆ ಗ್ರೇಸ್.

ಇದನ್ನೂ ಓದಿ: Munnar Tour: ಪ್ರಕೃತಿಯ ನಡುವೆ ಅವಿತಿರುವ ಸೌಂದರ್ಯದ ಗಣಿ ಮುನ್ನಾರ್! ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕು

ಕ್ರೂಸ್ ಗೆ ಹಣ ಪಾವತಿ ಮಾಡಲು ಆಯ್ಕೆಗಳಿವೆ. 16 ವಿಭಾಗಗಳು ಪಾವತಿಯ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. ಪ್ರಯಾಣಿಕರು ಮುಂಗಡ ಠೇವಣಿ ಮತ್ತು ಪ್ರತಿ ವಿಭಾಗಕ್ಕೆ 30 ದಿನಗಳ ಮೊದಲು ಉಳಿದ ಹಣವನ್ನು ಪಾವತಿಸಬೇಕಾಗುತ್ತದೆ. ಯಾವುದೇ ಹಂತದಲ್ಲಿ ಹಡಗನ್ನು ತೊರೆಯಲು ಬಯಸಿದರೆ ಸಂಪೂರ್ಣ ಮರುಪಾವತಿಗಾಗಿ ಅವರು ಹೊಸ ವಿಭಾಗಕ್ಕಿಂತ ಕನಿಷ್ಠ ಆರು ತಿಂಗಳ ಮೊದಲು ಸೂಚನೆಯನ್ನು ನೀಡಬೇಕಾಗುತ್ತದೆ ಎಂದು ಗ್ರೇಸ್ ತಿಳಿಸಿದ್ದಾರೆ.

Continue Reading

ಪರಿಸರ

Wildlife Sanctuaries: ಮಳೆ ಬರುವ ಮುನ್ನ ಈ ವನ್ಯಜೀವಿಧಾಮಗಳನ್ನು ನೋಡಲು ಪ್ರಯತ್ನಿಸಿ

ವನ್ಯಜೀವಿಗಳ ಬೆನ್ನು ಹತ್ತಲು ಯಾರಿಗೂ ಆಸ್ಪದವಿಲ್ಲ. ಆದರೂ, ಪ್ರಕೃತಿ ಪ್ರಿಯರೆಲ್ಲ ಇಂತಹ ರಾಷ್ಟ್ರೀಯ ಉದ್ಯಾನ/ ವನ್ಯಜೀವಿಧಾಮಗಳು ಮುಚ್ಚಿಕೊಳ್ಳುವ ಕೆಲವೇ ದಿನಗಳ ಮುಂಚಿತವಾಗಿ ಅಲ್ಲಿಗೆ ಭೇಟಿ ಕೊಡಬೇಕು. ಮಳೆಗಾಲ ಈಗಷ್ಟೇ ಶುರುವಾದ ವನ್ಯಜೀವಿಧಾಮದಲ್ಲಿ ತಿರುಗಾಡಿ ಬರುವುದೇ ಹಬ್ಬ. ಒಂದೆರಡು ಮಳೆ ಸುರಿದು ಕಾಡೆಲ್ಲ ಕಳೆಕಳೆಯಾಗಿ ಹಸಿರಾಗಿ ಚಿಗಿತುಕೊಂಡು ಅದ್ಭುತ ದೃಶ್ಯಗಳನ್ನು ನಿಮಗೆ ನೀಡುವ ಜೊತೆಗೆ ರೋಮಾಂಚಕ (wildlife sanctuaries) ಅನುಭವಗಳನ್ನು ನೀಡುತ್ತವೆ

VISTARANEWS.COM


on

Wildlife Sanctuaries
Koo

ಮಳೆಗಾಲ ಮತ್ತು ಕಾಡು! ಪ್ರಕೃತಿ ಪ್ರಿಯರ ಅತ್ಯಂತ ಇಷ್ಟದ ಕಾಂಬಿನೇಷನ್‌ ಇದು. ಮಳೆಗಾಲದಲ್ಲೊಮ್ಮೆ ಕಾಡಿಗೆ ಕರೆದರೆ ಯಾವ ಪ್ರಕೃತಿಪ್ರೇಮಿ ಬೇಡ ಅನ್ನಲಾರ ಹೇಳಿ? ವನ್ಯಜೀವಿ ಪ್ರಿಯರ, ಪ್ರಕೃತಿಪ್ರಿಯರ ಈ ಆಸೆಗೆ ತಣ್ಣೀರೆರಚುವಂತೆ ಮಳೆಗಾಲ ಬಂದ ತಕ್ಷಣ ರಾಷ್ಟ್ರೀಯ ಉದ್ಯಾನ/ವನ್ಯಜೀವಿಧಾಮಗಳೆಲ್ಲ ಬಾಗಿಲು ಮುಚ್ಚುತ್ತವೆ. ಕಾಡಿನ ಮದ್ಯದಲ್ಲಿ ಸಫಾರಿ ಹೋಗಲು, ವನ್ಯಜೀವಿಗಳ ಬೆನ್ನು ಹತ್ತಲು ಯಾರಿಗೂ ಆಸ್ಪದವಿಲ್ಲ. ಆದರೂ, ಪ್ರಕೃತಿ ಪ್ರಿಯರೆಲ್ಲ ಇಂತಹ ರಾಷ್ಟ್ರೀಯ ಉದ್ಯಾನ/ ವನ್ಯಜೀವಿಧಾಮಗಳು ಮುಚ್ಚಿಕೊಳ್ಳುವ ಕೆಲವೇ ದಿನಗಳ ಮುಂಚಿತವಾಗಿ ಅಲ್ಲಿಗೆ ಭೇಟಿ ಕೊಡಬೇಕು. ಮಳೆಗಾಲ ಈಗಷ್ಟೇ ಶುರುವಾದ ವನ್ಯಜೀವಿಧಾಮದಲ್ಲಿ ತಿರುಗಾಡಿ ಬರುವುದೇ ಹಬ್ಬ. ಒಂದೆರಡು ಮಳೆ ಸುರಿದು ಕಾಡೆಲ್ಲ ಕಳೆಕಳೆಯಾಗಿ ಹಸಿರಾಗಿ ಚಿಗಿತುಕೊಂಡು ಅದ್ಭುತ ದೃಶ್ಯಗಳನ್ನು ನಿಮಗೆ ನೀಡುವ ಜೊತೆಗೆ ರೋಮಾಂಚಕ ಅನುಭವಗಳನ್ನು ನೀಡುತ್ತವೆ. ಬನ್ನಿ, ಯಾವೆಲ್ಲ ರಾಷ್ಟ್ರೀಯ ಉದ್ಯಾನಗಳನ್ನು ಮಳೆಗಾಲಕ್ಕೆ ಸ್ವಲ್ಪವೇ ಮುನ್ನ ನೀವು ನೋಡುವುದೇ ಒಂದು ಅನುಭವ (wildlife sanctuaries) ಎಂಬುದನ್ನು ತಿಳಿಯೋಣ ಬನ್ನಿ.

Jim Corbett National Park, Uttarakhand

ಜಿಮ್‌ ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನ, ಉತ್ತರಾಖಂಡ

ಉತ್ತರಾಖಂಡದ ಬಹು ಪ್ರಸಿದ್ಧ ರಾಷ್ಟ್ರೀಯ ಉದ್ಯಾನ ಭಾರತದ ಅತ್ಯಂತ ಹಳೆಯ ವನ್ಯಜೀವಿಧಾಮಗಳಲ್ಲಿ ಒಂದು. ಹುಲಿಗಳನ್ನು ಕಾಣಲು ಇದು ಪ್ರಶಸ್ತ ಜಾಗ. ಜೂನ್‌ ಮದ್ಯದಲ್ಲಿ ಇದು ಮುಚ್ಚಿದರೆ ಮತ್ತೆ ತೆರೆಯುವುದು ಅಕ್ಟೋಬರ್‌ನಲ್ಲಿಯೇ. ಆದರೆ, ಜೂನ್‌ ಆರಂಭದಲ್ಲಿ ಈ ಕಾಡು ನೋಡುವುದು ಬಲು ಸೊಗಸು.

Ranthambore National Park, Rajasthan

ರಣಥಂಬೋರ್‌ ರಾಷ್ಟ್ರೀಯ ಉದ್ಯಾನ, ರಾಜಸ್ಥಾನ

ಭಾರತದ ದೊಡ್ಡ ರಾಷ್ಟ್ರೀಯ ಉದ್ಯಾನಗಳ ಪೈಕಿ ಇದೂ ಒಂದು. ಹುಲಿಗಳನ್ನು ನೋಡಬೇಕೆಂದು ಬಯಸುವ ಪ್ರತಿ ವನ್ಯಜೀವಿ ಪ್ರೇಮಿ ಹಾಗೂ ವನ್ಯಜೀವಿ ಛಾಯಾಗ್ರಾಹಕರು ಈ ರಾಷ್ಟ್ರೀಯ ಉದ್ಯಾನಕ್ಕೆ ಬೇಟಿ ಕೊಡಲು ಬಯಸುವುದು ಸಾಮಾನ್ಯ. ಇದು ಜೂನ್‌ 30ರ ವೇಳೆಗೆ ಮುಚ್ಚುವ ಕಾರಣ ಅದಕ್ಕೂ ಮೊದಲು ಬೇಟಿ ಕೊಟ್ಟರೆ ಅಪರೂಪದ ಅನುಭವಗಳು ನಿಮ್ಮದಾಗಬಹುದು.

Bandhavgarh National Park, Madhya Pradesh

ಬಾಂಧವಗಢ ರಾಷ್ಟ್ರೀಯ ಉದ್ಯಾನ, ಮಧ್ಯಪ್ರದೇಶ

ಹುಲಿಯನ್ನು ನೋಡಲು ಬಯಸುವ ಪ್ರತಿಯೊಬ್ಬ ವನ್ಯಜೀವಿ ಪ್ರಿಯರಿಗೂ ತಿಳಿದ ವನ್ಯಜೀವಿಧಾಮ ಇದು. ಇಲ್ಲಿ ಹುಲಿ ದರ್ಶನದ ಸಾಧ್ಯತೆ ಹೆಚ್ಚು. ಈಗಷ್ಟೇ ಮಳೆಬಿದ್ದ ಕಾಡು ಹಸಿರಾಗಿ ಕಂಗೊಳಿಸುವ ಸಂದರ್ಭ ಮಧ್ಯದಲ್ಲಿ ಆಕಳಿಸುತ್ತಾ ಕುಳಿತ ಹುಲಿಯನ್ನೊಮ್ಮೆ ಕಲ್ಪಿಸಿ ನೋಡಿ. ರೋಮಾಂಚಿತಗೊಳ್ಳುವುದಿಲ್ಲವೇ ಹೇಳಿ! ಜುಲೈನಿಂದ ಅಕ್ಟೋಬರ್‌ವರೆಗೆ ಈದು ಮುಚ್ಚಿರುವ ಕಾರಣ ಜೂನ್‌ನಲ್ಲಿ ಭೇಟಿಕೊಡಲು ಸುಸಮಯ.

Kanha National Park, Madhya Pradesh

ಕನ್ಹಾ ರಾಷ್ಟ್ರೀಯ ಉದ್ಯಾನ, ಮಧ್ಯಪ್ರದೇಶ

ಇದೂ ಕೂಡಾ ಹುಲಿಗಳಿಗೆ ಬಲುಪ್ರಸಿದ್ಧವಾದ ರಾಷ್ಟ್ರೀಯ ಉದ್ಯಾನ. ಮಳೆಗಾಲ ಆರಂಭವಾದ ತಕ್ಷಣ ಕಾಣಲು ಇದು ಬಲು ಚಂದ. ಜೂನ್‌ 30ರಿಂದ ಅಕ್ಟೋಬರ್‌ 15ರವರೆಗೆ ಇದು ಮುಚ್ಚಿರುತ್ತದೆ.

Pench National Park, Madhya Pradesh and Maharashtra

ಪೆಂಚ್‌ ರಾಷ್ಟ್ರೀಯ ಉದ್ಯಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ

ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದ ಗಡಿಯಲ್ಲಿರುವ ಈ ರಾಷ್ಟ್ರೀಯ ಉದ್ಯಾನ ಅತ್ಯಂತ ಸುಂದರವಾದ ಕಾಡುಗಳಲ್ಲಿ ಒಂದು. ರುಡ್ಯಾರ್ಡ್‌ ಕಿಪ್ಲಿಂಗ್‌ ಅವರ ದಿ ಜಂಗಲ್‌ ಬುಕ್‌ ಇದೇ ಕಾಡಿನಿಂದ ಸ್ಪೂರ್ತಿಗೊಂಡು ರಚಿತವಾದ ಕತೆ. ಹೆಚ್ಚು ಹುಲಿಗಳಿರುವ ಈ ಕಾಡು ಜೂನ್‌ 16ರಿಂದ ಸೆಪ್ಟೆಂಬರ್‌ವರೆಗೆ ಪ್ರವಾಸಿಗರಿಗೆ ಮುಚ್ಚಿರುತ್ತದೆ.

Nagarhole National Park, Karnataka

ನಾಗರಹೊಳೆ ರಾಷ್ಟ್ರೀಯ ಉದ್ಯಾನ, ಕರ್ನಾಟಕ

ನಮ್ಮ ಕರ್ನಾಟಕದ ನಾಗರಹೊಳೆ ರಾಷ್ಟ್ರೀಯ ಉದ್ಯಾನ ಭಾರತದ ಅತ್ಯಂತ ಸುಂದರವಾದ ವನ್ಯಜೀವಿಧಾಮಗಳಲ್ಲಿ ಒಂದು. ಹುಲಿಗಳ ಜೊತೆಗೆ ಆನೆ, ಚಿರತೆ, ಜಿಂಕೆ, ಕಾಡಮ್ಮೆಗಳೂ ಸೇರಿದಂತೆ ಅನೇಕ ಪ್ರಾಣಿಗಳ ಸಂತಿತಿ ಇಲ್ಲಿ ವಿಪುಲವಾಗಿದೆ. ಮಳೆ ಈಗಷ್ಟೇ ಬರಲು ಆರಂಭವಾಗುವ ಸಂದರ್ಭ ಇದು ರಮ್ಯವಾಗಿ ಕಾಣುತ್ತದೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಇದು ಮುಚ್ಚಿರುತ್ತದೆ. ಅಕ್ಟೋಬರ್‌ ತಿಂಗಳಲ್ಲೂ ಇದು ಅದ್ಭುತವಾಗಿ ಕಾಣುತ್ತದೆ.

Continue Reading
Advertisement
Cow Smuggling
ಕ್ರೈಂ4 mins ago

Cow Smuggling : ಕಂಟೇನರ್‌, ಮಿಲ್ಕ್‌ ವ್ಯಾನ್‌ನಲ್ಲಿತ್ತು 70ಕ್ಕೂ ಹೆಚ್ಚು ಜಾನುವಾರು; ಹಿಂಸೆ ಕೊಟ್ಟವರು ಅರೆಸ್ಟ್‌

Gautam Gambhir
ಕ್ರೀಡೆ27 mins ago

Gautam Gambhir: ಗೌತಮ್​ ಗಂಭೀರ್​ ಭಾರತದ ಮುಂದಿನ ಕೋಚ್​; ಅಧಿಕೃತ ಘೋಷಣೆಯೊಂದೇ ಬಾಕಿ

Rameshwaram Cafe food on Anant Ambani, Radhika Merchant
ಸಿನಿಮಾ29 mins ago

Rameshwaram Cafe: ಅನಂತ್ ಅಂಬಾನಿ ಎರಡನೇ ಪ್ರಿ ವೆಡ್ಡಿಂಗ್‌ನಲ್ಲಿ ಮೇನ್‌ ಮೆನು ರಾಮೇಶ್ವರಂ ಕೆಫೆಯ ಪುಡಿ ಇಡ್ಲಿ ಮತ್ತು ಪುಡಿ ದೋಸೆ!

Family Fighting in Belgavi
ಬೆಳಗಾವಿ32 mins ago

Family Fighting : ಜಮೀನಿನ ವಿಚಾರದಲ್ಲಿ ಕುಟುಂಬಗಳ ಫೈಟ್; ಕುಡುಗೋಲು, ದೊಣ್ಣೆ ಹಿಡಿದು ಮಾರಾಮಾರಿ

Valmiki Corporation Scam
ಕರ್ನಾಟಕ34 mins ago

Valmiki Corporation Scam: ಮೃತ ಅಧೀಕ್ಷಕ ಚಂದ್ರಶೇಖರನ್‌ ಪತ್ನಿ ಅಸ್ವಸ್ಥ; ಆಸ್ಪತ್ರೆಗೆ ದಾಖಲು

prashant kishor
ಪ್ರಮುಖ ಸುದ್ದಿ35 mins ago

Lok Sabha Election 2024: ಈಗಲೂ ಹೇಳ್ತೇನೆ ಕೇಳಿ, ಬಿಜೆಪಿಯೇ ಗೆಲ್ಲೋದು! ಎಕ್ಸಿಟ್ ಪೋಲ್‌ಗೆ ಮೊದಲು ಪ್ರಶಾಂತ್ ಕಿಶೋರ್ ಫೈನಲ್ ಲೆಕ್ಕಾಚಾರ ಹೀಗಿದೆ!

IndiGo Flight
ದೇಶ38 mins ago

IndiGo Flight: ಮತ್ತೊಂದು ಹುಸಿ ಬಾಂಬ್‌ ಕರೆ; ಮುಂಬೈಯಲ್ಲಿ ಇಂಡಿಗೋ ವಿಮಾನದ ತುರ್ತು ಲ್ಯಾಂಡಿಂಗ್‌

bhavani revanna SIT team
ಪ್ರಮುಖ ಸುದ್ದಿ1 hour ago

Bhavani Revanna: ಮಗ ಬಂದ, ಅಮ್ಮ ನಾಪತ್ತೆ! ಮನೆಯಿಂದ ಮಾಯವಾದ ಭವಾನಿ ರೇವಣ್ಣ; ಕಾದು ಕುಳಿತ ಎಸ್‌ಐಟಿ

Valmiki Corporation Scam
ಪ್ರಮುಖ ಸುದ್ದಿ1 hour ago

Valmiki Corporation Scam: ವಾಲ್ಮೀಕಿ ನಿಗಮ ಹಗರಣ ತನಿಖೆಗೆ ಸಿಬಿಐ ಎಂಟ್ರಿ ಫಿಕ್ಸ್; ನಾಗೇಂದ್ರ ವಿರುದ್ಧ ಕ್ರಮಕ್ಕೆ ಖರ್ಗೆ ಸೂಚನೆ

Assault Case
ಬೆಳಗಾವಿ2 hours ago

Assault Case : ಮಾರಾಮಾರಿಯಲ್ಲಿ ತಂದೆ ಕಿವಿ ಕಟ್‌; ಚಾಲಕ ಇಲ್ಲದ್ದಕ್ಕೆ ತಾನೇ ಆಂಬ್ಯುಲೆನ್ಸ್‌ ಓಡಿಸಿ ಆಸ್ಪತ್ರೆಗೆ ಕರೆತಂದ ಮಗ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ2 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ4 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು4 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ5 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ6 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು6 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 weeks ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌