Independence Day 2023: ಮುಂಬಯಿ ಕರ್ನಾಟಕದಾದ್ಯಂತ ವ್ಯಾಪಿಸಿತ್ತು ಸ್ವಾತಂತ್ರ್ಯ ಹೋರಾಟದ ಜ್ವಾಲೆ - Vistara News

ಕರ್ನಾಟಕ

Independence Day 2023: ಮುಂಬಯಿ ಕರ್ನಾಟಕದಾದ್ಯಂತ ವ್ಯಾಪಿಸಿತ್ತು ಸ್ವಾತಂತ್ರ್ಯ ಹೋರಾಟದ ಜ್ವಾಲೆ

ಸ್ವತಂತ್ರ ಭಾರತಕ್ಕಾಗಿ ನಡೆದ ಚಳವಳಿ, ಹೋರಾಟಗಾರರ ತ್ಯಾಗ ಮತ್ತು ಬಲಿದಾನ ಎಂದೂ ಮರೆಯಲಾಗದು. ದೇಶಾದ್ಯಂತ ನಡೆದಂತೆ ಮುಂಬಯಿ ಕರ್ನಾಟಕದಲ್ಲೂ ಸ್ವಾತಂತ್ರ್ಯ ಹೋರಾಟ (Independence Day 2023) ತೀವ್ರವಾಗಿ ನಡೆದಿತ್ತು. ಈ ಕುರಿತ ಅವಲೋಕನ ಇಲ್ಲಿದೆ.

VISTARANEWS.COM


on

Halagali Bedaru
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

-ಅಲಕಾ ಕೆ
ಬ್ರಿಟನ್ನಿನ ಈಸ್ಟ್‌ ಇಂಡಿಯಾ ಕಂಪನಿಯು ತನ್ನ ವಸಾಹತುಗಳನ್ನು ಭಾರತದಲ್ಲಿ ಸ್ಥಾಪಿಸುವ ಮುನ್ನವೇ ಭಾರತಕ್ಕೆ ಕಾಲಿಟ್ಟವರು ಪೋರ್ಚುಗೀಸರು. ಹೀಗೆ ಬಂದಂಥ ವಿದೇಶಿ ಅಧಿಕಾರದಾಹಿಗಳು ಹಾಗೂ ವಸಾಹತುಶಾಹಿಗಳನ್ನು ವಿರೋಧಿಸುವ ಸ್ವಾಭಿಮಾನಿ ಪ್ರವೃತ್ತಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕಿಂತ ಹಲವು ಶತಮಾನಗಳ ಹಿಂದೆಯೇ ಅಲ್ಲಲ್ಲಿ ಕಾಣಸಿಗುತ್ತದೆ. ಪೋರ್ಚುಗೀಸರನ್ನು ವಿರೋಧಿಸಿದವರು ಹಲವರಾದರೂ, ಹದಿನಾರನೇ ಶತಮಾನದಲ್ಲಿ ಮಲೆನಾಡು ಮತ್ತು ಕರಾವಳಿಯ ಇಬ್ಬರು ರಾಣಿಯರು ಪ್ರಮುಖವಾಗಿ ಕಾಣುತ್ತಾರೆ. ಉಳ್ಳಾಳದ ರಾಣಿ ಅಬ್ಬಕ್ಕ ಮತ್ತು ನಗಿರೆ-ಹಾಡುವಳ್ಳಿಯ ಅರಸಿ ಚೆನ್ನಭೈರಾದೇವಿ. ಆನಂತರ ವಿದೇಶೀ ವಸಾಹತುಶಾಹಿಗಳನ್ನು ವಿರೋಧಿಸಿ ದಾಖಲಾದ ಸುದೀರ್ಘ ಸಂಘರ್ಷದ ಚರಿತ್ರೆಯಲ್ಲಿ ಕನ್ನಡ ನಾಡಿನ ರಾಣಿಯರಲ್ಲಿ ಪ್ರಮುಖವಾಗಿ ಕಾಣುವವಳು ಕಿತ್ತೂರಿನ ಅರಸಿ ಚೆನ್ನಮ್ಮ. ಬ್ರಿಟಿಷರ ವಿರುದ್ಧ ಹೋರಾಡಿದ ಅರಸಿಯರಲ್ಲಿ ಈಕೆ ಅಗ್ರಗಣ್ಯಳು.

ಕಿತ್ತೂರು ಚೆನ್ನಮ್ಮನ ಹೋರಾಟ…

ಕಿತ್ತೂರಿನ ರಾಜ ಶಿವಲಿಂಗ ರುದ್ರಸರ್ಜನಿಗೆ ಆಕೆಯನ್ನು ವಿವಾಹ ಮಾಡಲಾಗಿತ್ತು. ಈಗಿನ ಧಾರವಾಡ ಮತ್ತು ಬೆಳಗಾವಿಯ ಹಲವು ಭಾಗಗಳನ್ನು ಅಂದಿನ ಕಿತ್ತೂರು ಸಂಸ್ಥಾನ ಒಳಗೊಂಡಿತ್ತು. ಮರಾಠರ ಛತ್ರಛಾಯೆಯಲ್ಲಿದ್ದ ಈ ಸಂಸ್ಥಾನ, 1818ರಲ್ಲಿ ಮರಾಠರ ಅವನತಿಯ ನಂತರ ಬ್ರಿಟಿಷರ ಲಾಲಸೆಯ ನೋಟಕ್ಕೆ ತುತ್ತಾಯಿತು. ಚೆನ್ನಮ್ಮ ಮತ್ತು ರುದ್ರಸರ್ಜ ದಂಪತಿಗೆ ಮಕ್ಕಳಿರಲಿಲ್ಲ. 1824ರಲ್ಲಿ ರುದ್ರಸರ್ಜ ಅನಾರೋಗ್ಯದಿಂದ ಮರಣಹೊಂದಿದ ಮೇಲೆ, ದತ್ತು ಪುತ್ರನಿಗೆ ಪಟ್ಟ ಕಟ್ಟಿ, ತಾನೇ ಆಡಳಿತ ನಡೆಸಿದಳು ಚೆನ್ನಮ್ಮ. ಇದನ್ನು ಒಪ್ಪದ ಬ್ರಿಟಿಷರು ಅಧಿಕಾರವನ್ನು ತಮಗೊಪ್ಪಿಸುವಂತೆ ಒತ್ತಡ ಹೇರತೊಡಗಿದರು. ಕೋಟೆಯನ್ನು ಭದ್ರಪಡಿಸಿ, ಸೇನೆಯನ್ನು ಸನ್ನದ್ಧಗೊಳಿಸಿ, ತಾನೇ ಅಭಿಯೋಗ ಸಾರಿದಳು ಚೆನ್ನಮ್ಮ. ಈ ಯುದ್ಧದಲ್ಲಿ ಬ್ರಿಟಿಷರಿಗೆ ಸೋಲಾಗಿ, ಕಂಪನಿಯ ಹಲವಾರು ಸೈನಿಕರನ್ನು ಕಿತ್ತೂರಿನ ವೀರರು ಬಂಧಿಸಿದರು. ಹೆಚ್ಚಿನ ಸೇನೆಯೊಂದಿಗೆ ಬ್ರಿಟಿಷರು ದಾಳಿ ಮಾಡಿದಾಗ ಚೆನ್ನಮ್ಮ ಸಂಧಾನಕ್ಕೆ ಯತ್ನಿಸಿದಳು. ಆದರೆ ಯತ್ನ ಫಲಿಸದೆ, ಯುದ್ಧ ಆರಂಭವಾಯಿತು. ಆದರೆ ತನ್ನದೇ ಕಡೆಯ ಧೂರ್ತರಿಂದಾಗಿ ಯುದ್ಧದಲ್ಲಿ ಕೈ ಸೋತಾಗ ಅಲ್ಲಿಂದ ತಪ್ಪಿಸಿಕೊಂಡು ಸಂಗೊಳ್ಳಿಯತ್ತ ಹೋಗುವಾಗ ಆಕೆಯನ್ನು ಬಂಧಿಸಲಾಯಿತು. ಬೈಲಹೊಂಗಲದ ಸೆರೆಯಲ್ಲಿ ಸುಮಾರು ಐದು ವರ್ಷಗಳ ಕಾಲ ಇದ್ದ ಆಕೆ, ನಂತರ ಇಲ್ಲಿಯೇ ಮರಣ ಹೊಂದಿದಳು.

ಸಿಂದಗಿಯ ಬಂಡಾಯ…

ಅದೇ ವರ್ಷ, ಅಂದರೆ 1824ರಲ್ಲೇ ಸಿಂದಗಿಯಲ್ಲಿನ ಬಂಡಾಯವೂ ಬ್ರಿಟಿಷರ ವಿರುದ್ಧದ ದಂಗೆಯ ಇತಿಹಾಸಕ್ಕೆ ಇನ್ನೊಂದು ಪುಟವನ್ನು ಸೇರಿಸುತ್ತದೆ. ವಿಜಯಪುರದಿಂದ ಸಿಂದಗಿಯವರೆಗೂ ಈ ಬಂಡಾಯ ಹರಡಿತ್ತು. ಬ್ರಿಟಿಷರು ಕಂದಾಯ ಸಂಗ್ರಹಿಸುತ್ತಿದ್ದ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದ ಸ್ಥಳೀಯ ಸರದಾರ ಚಿದಂಬರ ದೀಕ್ಷಿತ, ಆತನ ಮಗ ದಿವಾಕರ ದೀಕ್ಷಿತ, ಸಹವರ್ತಿಗಳಾದ ಶೆಟ್ಟ್ಯಪ್ಪ, ರಾವ್‌ಜಿ ಬಾಲಾಜಿ ದೇಶಪಾಂಡೆ ಮುಂತಾದವರು ಸಿಂದಗಿಯಲ್ಲಿ ಸ್ವತಂತ್ರ ಆಡಳಿತ ಸ್ಥಾಪಿಸಿ, ಆಡಳಿತ ನಡೆಸಿದರು. ಇದನ್ನು ಸಹಿಸದ ಬ್ರಿಟಿಷ್‌ ಸರಕಾರ ಸೇನೆ ಕಳುಹಿಸಿತು. ಸಿಂದಗಿಯ ಜನರಲ್ಲೇ ಒಬ್ಬನ ಮೋಸದಿಂದಾಗಿ ಈ ನಾಯಕರು ಸೆರೆಯಾದರು. ಸಣ್ಣ ಪ್ರದೇಶಕ್ಕೆ ಮಾತ್ರವೇ ಈ ಬಂಡಾಯ ಸೀಮಿತವಾಗಿದ್ದರೂ, ಜನರಲ್ಲಿ ಸ್ವಾಂತ್ರ್ಯದ ಕಿಡಿಯನ್ನು ಹಚ್ಚುವುದರಲ್ಲಿ ಸಫಲವಾಗಿತ್ತು.

ಸಂಗೊಳ್ಳಿಯ ಸಿಂಹ

ಚೆನ್ನಮ್ಮನ ಸೋಲಿನ ನಂತರವೂ ಆಕೆ ಹೊತ್ತಿಸಿದ್ದ ಬಂಡಾಯದ ಕಿಡಿ, ಮುಂದಿನ ಹಲವಾರು ವರ್ಷಗಳವರೆಗೆ ಜ್ವಲಿಸುತ್ತಲೇ ಇತ್ತು. ಕಿತ್ತೂರಿನ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ, ದೇಸಾಯಿಗಳ ಅತ್ಯಂತ ನಿಷ್ಠನಾಗಿದ್ದ ಸಂಗೊಳ್ಳಿಯ ರಾಯಣ್ಣ ಮುಂದಿನ ಕೆಲವು ವರ್ಷಗಳ ಕಾಲ ಬಂಡಾಯದ ಮುಂಚೂಣಿಯಲ್ಲಿದ್ದ. ಸುರಪುರದ ನಾಯಕನ ನೆರವಿನಿಂದ, 1829ರಲ್ಲಿ ರಾಯಣ್ಣ ಸೇನೆಯೊಂದನ್ನು ಕಟ್ಟಿದ. ಬ್ರಿಟಿಷರು ಮತ್ತು ಅವರ ಅನುಯಾಯಿಗಳನ್ನು ಗುರಿಯಾಗಿಸಿಕೊಂಡು ಆತನ ಸೇನೆ ದಾಳಿ ಮಾಡತೊಡಗಿತು. ಆತನನ್ನು ಸಾಮಾನ್ಯರಂತೆ ಯುದ್ಧದಲ್ಲಿ ಮಟ್ಟ ಹಾಕುವುದು ಸಾಧ್ಯವಿಲ್ಲ ಎಂಬುದನ್ನು ಅರಿತ ಕಂಪನಿ ಆಡಳಿತ ಮೋಸದ ದಾರಿ ಹಿಡಿಯಿತು. ಆತನ ಜೊತೆಗಾರರೇ ಆತನ ಇರುವಿಕೆಯ ಸುಳಿವು ನೀಡಿದ್ದರಿಂದ, ರಾಯಣ್ಣ ಬ್ರಿಟಿಷರಿಗೆ ಬಲಿಯಾದ.

ಮುಂದಿನ ಹಲವಾರು ವರ್ಷಗಳು ಮುಂಬಯಿ ಪ್ರಾಂತ್ಯ ಮತ್ತು ಮದರಾಸು ಪ್ರಾಂತ್ಯದ ಆಡಳಿತದಡಿಯಲ್ಲಿದ್ದ ಉತ್ತರ ಕರ್ನಾಟಕ, ಮಲೆನಾಡು ಮತ್ತು ಕರಾವಳಿಯ ಬಹಳಷ್ಟು ಕಡೆಗಳಲ್ಲಿ ಸಣ್ಣ-ಪುಟ್ಟ ಪ್ರತಿರೋಧಗಳು ಏಳುತ್ತಲೇ ಹೋದವು. 1833ರಲ್ಲಿ ಶಂಕರಣ್ಣ, 1836ರಲ್ಲಿ ನಾಗಪ್ಪ ಗಜಪತಿ ಸೆಟ್ಟಿ, ರುದ್ರಪ್ಪ ಕೊಟಗಿ ಮುಂತಾದ ಅನೇಕ ವೀರರು ಬ್ರಿಟಿಷರ ವಿರುದ್ಧ ಎದೆ ಸೆಟೆಸಿದರು. ಆದರೆ ಅವರಾರಿಗೂ ಜಯ ದೊರೆಯಲಿಲ್ಲ. 1830ರ ವೇಳೆಗೆ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳಲ್ಲಿ ಬ್ರಿಟಿಷರ ತೆರಿಗೆಯ ವಿರುದ್ಧ ರೈತರು ದಂಗೆಯೆದ್ದರು. ವರ್ಷವಿಡೀ ನಡೆದ ಪ್ರತಿರೋಧವನ್ನು ಎದುರಿಸಲು ಬ್ರಿಟಿಷರು ಹಲವರು ರೀತಿಯಲ್ಲಿ ಪ್ರಯತ್ನಿಸಬೇಕಾಯಿತು. 1839ರ ವೇಳೆಗೆ ಸತಾರ ಅರಸೊತ್ತಿಗೆ ಬೆಂಬಲಿಗರು ಸೇನೆಯೊಂದನ್ನು ಕಟ್ಟಿ ಬ್ರಿಟಿಷರನ್ನು ಎದುರಿಸಿದರು. ಬೆಳಗಾವಿಯ ನಿಪ್ಪಾಣಿಯಲ್ಲಿ ಸ್ಥಳೀಯ ಜಮೀನುದಾರ ರಘುನಾಥ ರಾಯನ ಮುಂದಾಳತ್ವದಲ್ಲಿ 1840ರ ವೇಳೆಗೆ ಸೇನೆಯೊಂದು ಯುದ್ಧಕ್ಕಿಳಿಯಿತು. 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮುನ್ನ, ರಾಜ್ಯದ ಉದ್ದಗಲಕ್ಕೆ ಇಂಥ ಬಹಳಷ್ಟು ಬಂಡಾಯಗಳು ಉಲ್ಕೆಗಳಂತೆ ಉರಿದುಹೋಗುತ್ತಲೇ ಇದ್ದವು.

ಕೊಡಗುನಲ್ಲಿಯೂ ಸ್ವಾಂತ್ರ್ಯದ ಕಿಡಿ…

ಸ್ವತಂತ್ರ ರಾಜ್ಯ ಎನಿಸಿಕೊಂಡಿದ್ದ ಕೊಡಗು ಸಹ ಈ ಅಲೆಯಿಂದ ಹೊರಗುಳಿಯಲಿಲ್ಲ. ಟಿಪ್ಪುವಿನ ಮರಣಾನಂತರ, ಕೊಡಗನ್ನು ಹಿಂದಿನ ಹಾಲೇರಿ ವಂಶದವರೇ ಆಳುತ್ತಿದ್ದರು. ಅಲ್ಲಿನ ಅರಸ ಚಿಕವೀರ ರಾಜನನ್ನು ಬದಿಗಿರಿಸಿದ ಬ್ರಿಟಿಷರು ಅಧಿಕಾರ ಪಡೆಯಲೆತ್ನಿಸಿದಾಗ, ಇದನ್ನು ವಿರೋಧಿಸಿ 1835ರಲ್ಲಿ ಅಪರಂಪರಾನಂದ ಮತ್ತು ಕಲ್ಯಾಣಸ್ವಾಮಿ ಎಂಬುವರು ಸೇನೆಯನ್ನು ಬಲಿದರು. ಅವರು ಸುಳ್ಯ, ಪುತ್ತೂರು, ಬಂಟವಾಳ, ಮಂಗಳೂರು, ಕಾಸರಗೋಡು ಮುಂತಾದೆಡೆ ಪ್ರತಿ ಸರ್ಕಾರವನ್ನು ಸ್ಥಾಪಿಸಿದರು. ಇವರನ್ನು ಬ್ರಿಟಿಷರು ಸೆರೆ ಹಿಡಿದರೂ ದಂಗೆ ನಿಲ್ಲಲಿಲ್ಲ. ಪುಟ್ಟಬಸಪ್ಪ, ಗುಡ್ಡೆಮನೆ ಅಪ್ಪಯ್ಯ ಮುಂತಾದವರು ತಯಾರಾದರು. ಆದರೆ ಕಂಪನಿ ಸೇನೆ ಅವರನ್ನೂ ಬಂಧಿಸಿತು.

ಮೊದಲ ಸ್ವಾತಂತ್ರ್ಯ ಸಂಗ್ರಾಮದ ಅವಧಿ…

ಬ್ರಿಟಿಷ್‌ ಸೇನೆಯಲ್ಲಿದ್ದ ಭಾರತೀಯ ಸೈನಿಕರಿಂದ ಉತ್ತರ ಭಾರತದಲ್ಲಿ 1857ರಲ್ಲಿ ಭುಗಿಲೆದ್ದ ಸಂಗ್ರಾಮದ ಜ್ವಾಲೆ, ದೇಶದೆಲ್ಲೆಡೆ ವ್ಯಾಪಿಸತೊಡಗಿತ್ತು. ಭಾರತದ ವಿವಿಧೆಡೆಯ ಅರಸೊತ್ತಿಗೆಗಳು ಇದಕ್ಕೆ ಬೆಂಬಲ ನೀಡಿದ್ದವು. ಕರ್ನಾಟಕದಲ್ಲೂ ಕರಾವಳಿಯ ಜಿಲ್ಲೆಗಳು, ರಾಯಚೂರು, ಕೊಪ್ಪಳ, ಬಿಜಾಪುರ, ಧಾರವಾಡ, ಶೃಂಗೇರಿ, ಹಾಸನದವರೆಗೂ ಇದರ ಪ್ರತಿಧ್ವನಿಗಳು ಹಲವು ವಿಧದಲ್ಲಿ ಕೇಳತೊಡಗಿದವು. ಮುಂಬಯಿಯಿಂದ ಹಲವಾರು ಹೋರಾಟಗಾರರು ಕರಾವಳಿ ಮತ್ತು ಮಲೆಸೀಮೆಯ ದಟ್ಟಾರಣ್ಯಗಳಲ್ಲಿ ಆಶ್ರಯ ಪಡೆದರು. ಬಂಡಾಯ ಮುಂದಿನ ಆರೆಂಟು ವರ್ಷಗಳವರೆಗೆ ಪ್ರಬಲವಾಗಿಯೇ ಇತ್ತು.

ಹಲಗಲಿಯ ಬೇಡರು

ಸ್ವಾತಂತ್ರ್ಯಕ್ಕಾಗಿ ಹಂಬಲಿಸಿ ಜೀವತೆತ್ತ ಹಲವು ಘೋರ ರಕ್ತಸಿಕ್ತ ಇತಿಹಾಸಗಳಲ್ಲಿ ಹಲಗಲಿಯ ಬೇಡರದ್ದೂ ಒಂದು. ಎಲ್ಲಾ ಭಾರತೀಯರು ತಂತಮ್ಮ ಆಯುಧಗಳನ್ನು ಕಂಪನಿ ಸರಕಾರಕ್ಕೆ ಒಪ್ಪಿಸಬೇಕು ಮತ್ತು ಅದನ್ನು ಇರಿಸಿಕೊಳ್ಳುವುದಕ್ಕೆ ಪರವಾನಗಿ ತೆಗೆದುಕೊಳ್ಳಬೇಕು ಎಂಬ ಬ್ರಿಟಿಷ್‌ ಸರಕಾರದ ಆಜ್ಞೆಯ ಹಿಂದಿದ್ದಿದ್ದು ಒಂದೇ ಹುನ್ನಾರ- ಎಲ್ಲೆಡೆ ಜ್ವಲಿಸುತ್ತಿರುವ ಬಂಡಾಯವನ್ನು ಶಮನ ಮಾಡುವುದು. ಮುಧೋಳದ ಹಲಗಲಿಯ ಸ್ವಾಭಿಮಾನಿ ಬೇಡರು ಇದನ್ನು ಕೇಳಿ ಕೆರಳಿದರು. ಬೇಟೆಯನ್ನೇ ವೃತ್ತಿಯಾಗಿಸಿಕೊಂಡಿದ್ದರಿಂದ ಆಯುಧಗಳು ಅವರ ಬದುಕಿನ ಸಹಜ ಭಾಗವಾಗಿದ್ದವು. ಆಯುಧಗಳನ್ನು ಒಪ್ಪಿಸಲು ಸಾಧ್ಯವೇ ಇಲ್ಲ ಎಂದು ಬೇಡರು ತಿರುಗಿ ನಿಂತರು. ಇವರಿಗೆ ಒಂದಿಬ್ಬರು ಮರಾಠ ಸೈನಿಕರ ನೆರವೂ ಇತ್ತು. ಬೇಡರ ಪ್ರತಾಪಗಳ ಬಗ್ಗೆ ಅರಿತು ಬೆಚ್ಚಿದ ಬ್ರಿಟಿಷರು ಮೊದಲಿಗೆ ಸಂಧಾನಕಾರರನ್ನು ಕಳುಹಿಸುತ್ತಾರೆ. ಆದರೆ ಹತಾರ (ಆಯುಧ) ನೀಡುವುದಿಲ್ಲ ಎಂದು ಖಡಾಖಂಡಿತವಾಗಿ ಬೇಡರು ನಿರಾಕರಿಸುತ್ತಾರೆ.

ಮೊದಲ ಬಾರಿ ಬ್ರಿಟಿಷ್‌ ಸೇನೆಗೆ ಸೋಲು…

ಮೊದಲ ಬಾರಿಗೆ ಬ್ರಿಟಿಷರು ಕಳಿಸಿದ ಸೇನೆಗೆ ಸೋಲಾಗುತ್ತದೆ. ಬೇಡರ ಪಡೆಯಲ್ಲಿ ಗಂಡಸರ ಸಮಸಮಕ್ಕೆ ನಿಂತು ಕಾಳಗ ಮಾಡುವ ಮಹಿಳೆಯರೂ ಇದ್ದರು. ಈ ಅಪ್ರತಿಮ ವೀರರ ದೆಸೆಯಿಂದ ಎರಡನೇ ಬಾರಿಯ ಯುದ್ಧದಲ್ಲೂ ಬ್ರಿಟಿಷರಿಗೇ ಸೋಲಾಗುತ್ತದೆ. ಕಡೆಗೆ 1857ರ ನವೆಂಬರ್‌ನಲ್ಲಿ ಬ್ರಿಟಿಷರ ಬೃಹತ್‌ ಪಡೆಯೊಂದು ಹಲಗಲಿಯನ್ನು ಮುತ್ತುತ್ತದೆ. ಅಷ್ಟು ದೊಡ್ಡ ಸೇನೆಯೂ ತತ್ತರಿಸುತ್ತಿರುವ ಹೊತ್ತಿನಲ್ಲಿ ಬೇಡರು ಸಿದ್ಧಗೊಳಿಸಿದ ಮದ್ದು-ಗುಂಡುಗಳು ನಿಷ್ಕ್ರಿಯವಾಗುವಂತೆ ಕುತಂತ್ರ ಎಸಗಲಾಗುತ್ತದೆ. ಇದರಿಂದ ಕಂಪನಿ ಸೇನೆಯ ಕೈ ಮೇಲಾಗಿ, ಭಯಾನಕ ಕ್ರೌರ್ಯದ ಅಧ್ಯಾಯವೊಂದು ತೆರೆದುಕೊಳ್ಳುತ್ತದೆ. ಬೇಡರ ಊರಿಗೇ ಬೆಂಕಿ ಇಡುವ ಬ್ರಿಟಿಷರು ಹೆಂಗಸರು-ಮಕ್ಕಳೆನ್ನದೆ ಸಿಕ್ಕವರನ್ನೆಲ್ಲಾ ಕೊಚ್ಚಿ ಹಾಕುತ್ತಾರೆ. ಸುಮಾರು ೩೦೦ ಮಂದಿ ಬೇಡರನ್ನು ಬಂಧಿಸಿ, ಅವರಲ್ಲಿ ಹಲವರನ್ನು ಸಾರ್ವಜನಿಕವಾಗಿ ನೇಣಿಗೆ ಒಡ್ಡಲಾಗುತ್ತದೆ. ಉಳಿದವರನ್ನು ಹಲಗಲಿಯಲ್ಲೇ ನೇಣಿಗೆ ಹಾಕಲಾಗುತ್ತದೆ

ಚಳವಳಿಗಳ ಪ್ರಭಾವ

ಗಾಂಧೀಜಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಚಳುವಳಿಗಳ ಪ್ರಭಾವ ಹಳ್ಳಿ-ದಿಲ್ಲಿ ಎನ್ನದೆ ಎಲ್ಲೆಡೆ ವ್ಯಾಪಿಸುತ್ತಿತ್ತು. 1893ರಲ್ಲೇ ಕಾಂಗ್ರೆಸ್‌ ಸಂಸ್ಥಾಪಕ ಎ. ಓ. ಹ್ಯೂಂ ಬೆಳಗಾವಿಗೆ ಬಂದು ಸ್ವರಾಜ್ಯದ ಬಗ್ಗೆ ಪ್ರಚಾರ ಮಾಡಿದ್ದರು. ಬಂಗಾಳದ ವಿಭಜನೆಯನ್ನು ವಿರೋಧಿಸಿ ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟೆ, ಕಿತ್ತೂರು ಮುಂತಾದೆಡೆಗಳಲ್ಲಿ ಪ್ರತಿಭಟನೆಗಳು ನಡೆದವು. ಲೋಕಮಾನ್ಯ ಬಾಲಗಂಗಾಧರ ತಿಲಕರ ಪ್ರಭಾವ ಮುಂಬಯಿ ಕರ್ನಾಟಕದ ಎಷ್ಟೂ ಭಾಗಗಳಲ್ಲಿ ಪ್ರಬಲವಾಗಿಯೇ ಇತ್ತು. ತಿಲಕರ ಬೆಂಬಲಕ್ಕೆ ಆಲೂರು ವೆಂಕಟರಾವ್‌, ಹೊಸಕೇರಿ ಅಣ್ಣಾಚಾರ್ಯ, ಶ್ರೀನಿವಾಸ ಕೌಜಲಗಿ, ಗಂಗಾಧರ ದೇಶಪಾಂಡೆ ಮುಂತಾದವರಿದ್ದರು. ತಿಲಕರು 1916ರಲ್ಲಿ ಬೆಳಗಾವಿ, ಸಂಕೇಶ್ವರ, ಶಿರಸಿ, ಸಿದ್ದಾಪುರ, ಬಳ್ಳಾರಿ, ಹುಬ್ಬಳ್ಳಿ ಮುಂತಾದೆಡೆಗಳಲ್ಲಿ ಸಂಚರಿಸಿ, ಹೋಂ ರೂಲ್‌ ಚಳವಳಿಗೆ ಬಲ ತುಂಬಿದ್ದರು. 1916ರಲ್ಲಿ ಬೆಳಗಾವಿಯಲ್ಲಿ ಮತ್ತು 1918ರಲ್ಲಿ ವಿಜಯಪುರದಲ್ಲಿ ನಡೆದಿದ್ದ ರಾಜಕೀಯ ಸಮ್ಮೇಳನಗಳಿಗೆ ಗಾಂಧೀಜಿ ಹಾಜರಾಗಿದ್ದು, ಇಲ್ಲಿನವರ ಹೋರಾಟಕ್ಕೆ ಇನ್ನಷ್ಟು ಶಕ್ತಿ ಬಂದಿತ್ತು.

ಅಸಹಕಾರ ಚಳವಳಿ

1920ರಲ್ಲಿ ಅಸಹಕಾರ ಚಳವಳಿ ಆರಂಭಗೊಂಡಾಗಿನಿಂದ ಜನರ ಪಾಲ್ಗೊಳ್ಳುವಿಕೆ ಇನ್ನಷ್ಟು ಹೆಚ್ಚಾಯಿತು. ಶಾಲಾ ಕಾಲೇಜುಗಳು ಬಂದಾದವು. ಮಹಿಳೆಯರು, ವಿದ್ಯಾರ್ಥಿಗಳು ಅಪಾರ ಸಂಖ್ಯೆಯಲ್ಲಿ ಹೋರಾಟಕ್ಕೆ ಧುಮುಕಿದರು. 1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಗಾಂಧೀಜಿ, ಪಾನ ನಿಷೇಧ ಮತ್ತು ಅಸ್ಪೃಶ್ಯತಾ ನಿವಾರಣೆಗೆ ಕರೆಕೊಟ್ಟರು. 1930ರಲ್ಲಿ ಗುಜರಾತ್‌ನ ದಂಡಿಯಲ್ಲಿ ಗಾಂಧೀಜಿ ಉಪ್ಪಿನ ಸತ್ಯಾಗ್ರಹ ನಡೆಸುತ್ತಿದ್ದಂತೆಯೇ, ಅಂಕೋಲೆಯ ಸಮುದ್ರ ತೀರದಲ್ಲಿ ಎಂ.ಪಿ. ನಾಡಕರ್ಣಿ ಅವರ ನೇತೃತ್ವದಲ್ಲಿ ಸತ್ಯಾಗ್ರಹಿಗಳು ಸೇರಿದ್ದರು. ಸುಮಾರು 40,000 ಸಂಖ್ಯೆಯಲ್ಲಿದ್ದ ಅವರು ಬ್ರಿಟಿಷರ ಕಾನೂನಿಗೆ ವಿರುದ್ಧವಾಗಿ ಉಪ್ಪನ್ನು ತಯಾರಿಸಿ, ಪೋಲೀಸರ ಎದುರೇ ಸಂತೆಯಲ್ಲಿ ಮಾರಾಟ ಮಾಡಿದರು. ಮಹಿಳೆಯರೂ ಉಪ್ಪಿನ ಸತ್ಯಾಗ್ರಹದಲ್ಲಿ ಸೇರಿ, ಕರಾವಳಿಯಾದ್ಯಂತ ಚಳುವಳಿ ತೀವ್ರವಾಗಿ ನಡೆಯಿತು.

ಕರ ನಿರಾಕರಣೆ ಚಳವಳಿ

ಇದರ ಬೆನ್ನಿಗೇ ಕರ ನಿರಾಕರಣೆ ಮತ್ತು ಕಾನೂನು ಭಂಗ ಚಳುವಳಿಯೂ ಆರಂಭವಾಯಿತು. ಅಂಕೋಲಾ, ಶಿರಸಿ, ಸಿದ್ದಾಪುರ ಮುಂತಾದೆಡೆಗಳಲ್ಲಿ ಈಗಾಗಲೇ ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಚಳುವಳಿಯ ಶಿಸ್ತು, ಸಂಯಮ ಮೈಗೂಡಿಸಿಕೊಂಡಿದ್ದ ಜನ, ಬ್ರಿಟಿಷರ ಯಾವ ಪ್ರತಿಕ್ರಿಯೆಗೂ ಬಗ್ಗದೆ ನಡೆಸಿದ ಕರ ನಿರಾಕರಣೆಗೆ ಅಭೂತಪೂರ್ವ ಬೆಂಬಲ ಜನತೆಯಿಂದ ದೊರೆಯಿತು. ಇದೇ ದಿನಗಳಲ್ಲಿ ನಾ. ಸು. ಹರ್ಡೀಕರ್‌ ಸೇವಾದಳ ಸ್ಥಾಪಿಸಿದರು. ಎನ್‌. ಬಿ. ಕಬ್ಬೂರರ ನೇತೃತ್ದಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ಅರಣ್ಯ ಸತ್ಯಾಗ್ರಹ ನಡೆಯಿತು. ಏನೇ ಬಂದರೂ ಸ್ವರಾಜ್ಯ ಬೇಕು ಎಂಬ ನಿಲುವಿಗೆ ಈಗಾಗಲೇ ಬದ್ಧರಾಗಿದ್ದ ಜನ ಕ್ವಿಟ್‌ ಇಂಡಿಯಾ ಚಳುವಳಿ ಪ್ರಾರಂಭವಾದಾಗ ತೀವ್ರಗತಿಯಲ್ಲಿ ಸ್ಪಂದಿಸಿದರು.

ಈ ಸುದ್ದಿಯನ್ನೂ ಓದಿ: Independence Day 2023: ಹೀಗಿತ್ತು ಸ್ವತಂತ್ರ ಭಾರತ ಸಾಗಿ ಬಂದ ಹಾದಿ!

ನಾಡಿನ ಎಲ್ಲಾ ಸೆರೆಮನೆಗಳೂ ಹೋರಾಟಗಾರರಿಂದ ತುಂಬಿ ತುಳುಕುತ್ತಿದ್ದವು. ಪಾಠಶಾಲೆ, ಛತ್ರ, ಪ್ರವಾಸಿ ಮಂದಿರ- ಹೀಗೆ ಯಾವ್ಯಾವುದೋ ಕಟ್ಟಡಗಳನ್ನು ಹಂಗಾಮಿ ಸೆರೆಮನೆಗಳಾಗಿ ಮಾಡಲಾಗಿತ್ತು. ಕೆಲವೆಡೆಗಳಲ್ಲಿ ನಿತ್ಯವೂ ಬೆಳಗ್ಗೆ ಬಂಧಿಸಿ, ಸಂಜೆ ಬಿಡಗಡೆ ಮಾಡುವ ಸ್ಥಿತಿ ಎದುರಾಗಿತ್ತು. ಗೋಲೀಬಾರು, ಲಾಠಿ ಏಟು ನಿತ್ಯದ ವಿಷಯವಾಯಿತು. ಇದೇ ದಿನಗಳಲ್ಲಿ ಹಲವಾರು ಚಳುವಳಿಗಾರರು ಭೂಗತರಾಗಿ ಚಟುವಟಿಕೆ ನಡೆಸುತ್ತಿದ್ದರು. ದೇಶಕ್ಕೆ ಸ್ವಾತಂತ್ರ್ಯ ದೊರೆಯುವವರೆಗೂ ಮುಂಬಯಿ ಕರ್ನಾಟಕ ಭಾಗದಲ್ಲಿ ಚಳುವಳಿಗಳು ತೀವ್ರವಾಗಿಯೇ ಪ್ರತಿಧ್ವನಿಸಿದವು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Child Death: ಆಟವಾಡುತ್ತ ಸಂಪ್‌ಗೆ ಬಿದ್ದು 2 ವರ್ಷದ ಕಂದಮ್ಮ ದುರ್ಮರಣ, ಮಳೆಗೆ ಮರ ಬಿದ್ದು ಮಹಿಳೆ ಸಾವು

Child Death: ಆಟವಾಡುತ್ತಿದ್ದ ಮಗು ಇದ್ದಕ್ಕಿದ್ದಂತೆ ಕಣ್ಮರೆಯಾದುದರಿಂದ ಗಾಬರಿಯಾದ ಪೋಷಕರು ಹುಡುಕಾಟ ಆರಂಭಿಸಿದ್ದರು. ಎಷ್ಟೇ ಹುಡುಕಿದರೂ ಕಾಣದಿದ್ದಾಗ ಪೋಷಕರು ಸಂಪ್ ಒಪನ್ ಮಾಡಿ ನೋಡಿದ್ದರು.

VISTARANEWS.COM


on

child death belagavi
ಮೃತ ಸಾಯೀಶಾ, ಶ್ವೇತಾ ರಾಠೋಡ
Koo

ಬೆಳಗಾವಿ: 2 ವರ್ಷದ ಮಗುವೊಂದು ಆಟವಾಡುತ್ತ ಹೋಗಿ ನೀರಿನ ಸಂಪ್‌ಗೆ (Water Sump) ಬಿದ್ದು ಸಾವಿಗೀಡಾದ ದುರ್ಘಟನೆ (Child Death) ಬೆಳಗಾವಿಯ (Belagavi news) ಕಂಗ್ರಾಳ ಗಲ್ಲಿಯಲ್ಲಿ ನಡೆದಿದೆ.

ಸಾಯೀಶಾ ಸಂದೀಪ್ ಬಡವನಾಚೆ(2) ಮೃತಪಟ್ಟ ಮಗು. ಆಟವಾಡುತ್ತಿದ್ದ ಮಗು ಇದ್ದಕ್ಕಿದ್ದಂತೆ ಕಣ್ಮರೆಯಾದುದರಿಂದ ಗಾಬರಿಯಾದ ಪೋಷಕರು ಹುಡುಕಾಟ ಆರಂಭಿಸಿದ್ದರು. ಎಷ್ಟೇ ಹುಡುಕಿದರೂ ಕಾಣದಿದ್ದಾಗ ಪೋಷಕರು ಸಂಪ್ ಒಪನ್ ಮಾಡಿ ನೋಡಿದ್ದರು. ಸಂಪ್ ಓಪನ್ ಮಾಡುತ್ತಿದ್ದಂತೆ ಅಲ್ಲಿ ಬಿದ್ದಿದ್ದ ಮಗು ಸಾಯೀಶಾ ಕಂಡುಬಂದಿದ್ದಳು.

ಕೂಡಲೇ ಸಮೀಪದ ಆಸ್ಪತ್ರೆಗೆ ಮಗುವನ್ನು ಪೋಷಕರು ಕರೆದೊಯ್ದರಾದರೂ, ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಮಗು ತೀರಿ ಹೋಗಿದ್ದರ ಬಗ್ಗೆ ವೈದ್ಯರು ಮಾಹಿತಿ ನೀಡಿದರು. ಖಡೇ ಬಜಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮರ ಬಿದ್ದು ಮಹಿಳೆ ಸಾವು

ಯಾದಗಿರಿ: ಮಳೆ ಅವಾಂತರದಿಂದಾಗಿ, ನೀರು ತರಲು ಹೋದ ಮಹಿಳೆ ಮೇಲೆ ಮರ ಬಿದ್ದು ಮಹಿಳೆ ಸಾವಿಗೀಡಾಗಿದ್ದಾರೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ನಿನ್ನೆ ಸಂಜೆ ಘಟನೆ ನಡೆದಿದೆ. ಶ್ವೇತಾ ರಾಠೋಡ (21) ಮೃತ ಮಹಿಳೆ.

ಬಿರುಗಾಳಿ ಸಹಿತ ಮಳೆ ಬರುತ್ತಿದ್ದಾಗಲೇ ನೀರು ತರಲು ಹೋದ ಶ್ವೇತಾ ರಾಠೋಡ ಮೇಲೆ ಮರ ಬಿದ್ದಿದೆ. ಗಂಭೀರ ಗಾಯಗೊಂಡ ಶ್ವೇತಾರನ್ನು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡ ಸರಕಾರಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ.

ಮಳೆ ಅವಾಂತರ; ಮನೆಯ ಶೀಟ್‌ ಮೇಲಿದ್ದ ಕಲ್ಲು ಬಿದ್ದು ಬಾಲಕಿ ಸಾವು

ಯಾದಗಿರಿ: ಮಳೆ ಅವಾಂತರಕ್ಕೆ ನಾಲ್ಕು ವರ್ಷದ ಬಾಲಕಿ ಬಲಿಯಾಗಿರುವ ಘಟನೆ ಜಿಲ್ಲೆಯ ಗುರುಮಠಕಲ್ ಪಟ್ಟಣದ ಚಪೆಟ್ಲಾ ರಸ್ತೆ ಬದಿ ನಡೆದಿದೆ. ಬಾಲಕಿ ಮನಸ್ವಿ ತಿಪ್ಪಣ್ಣ ಯಾದವ್ ಮೃತ ಬಾಲಕಿ. ಮನೆ ಶೀಟ್‌ ಮೇಲೆ ಇಟ್ಟಿದ್ದ ಕಲ್ಲು ತಲೆ ಮೇಲೆ ಬಿದ್ದಿದ್ದರಿಂದ ಬಾಲಕಿ ಮೃತಪಟ್ಟಿದ್ದಾಳೆ.

ಜಮೀನಿನ ಶೀಟ್‌ ಮನೆಯಲ್ಲಿ ಪೋಷಕರ ಜತೆ ಬಾಲಕಿ ವಾಸವಾಗಿದ್ದಳು. ಬಿರುಗಾಳಿ ಸಹಿತ ಭಾರಿ ಮಳೆ ಹಿನ್ನೆಲೆ ಮನೆ ಶೀಟ್‌ ಮೇಲೆ ಇಟ್ಟಿದ್ದ ಕಲ್ಲು ಬಿದ್ದು ಬಾಲಕಿ ಕೊನೆಯುಸಿರೆಳೆದಿದ್ದಾಳೆ. ಸ್ಥಳದಲ್ಲಿ ಪೋಷಕರ ಅಕ್ರಂದನ ಮುಗಿಲು ಮುಟ್ಟಿದೆ.

ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

ವಿಜಯನಗರ/ರಾಯಚೂರು/ಯಾದಗಿರಿ: ವೀಕೆಂಡ್‌ ಮೂಡ್‌ನಲ್ಲಿದ್ದವರಿಗೆ ವರುಣ ಶಾಕ್‌ (Karnataka Rain) ಕೊಟ್ಟಿದ್ದಾನೆ. ರಾಜ್ಯ ಹಲವೆಡೆ ಬಿರುಗಾಳಿ ಸಹಿತ (Karnataka weather Forecast) ಮಳೆಯಾಗುತ್ತಿದ್ದು, ಪ್ರತ್ಯೇಕ ಕಡೆಗಳಲ್ಲಿ ಸಿಡಿಲು ಬಡಿದು ಕಟ್ಟಿಗೆಯಲ್ಲಿ ಕಟ್ಟಿದ್ದ ಎಮ್ಮೆ ಮೃತಪಟ್ಟಿವೆ.

ವಿಜಯನಗರದ ಹೂವಿನಹಡಗಲಿ ತಾಲೂಕಿನ ಎಂ.ಕಲ್ಲಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ಎಮ್ಮೆ ಮೃತಪಟ್ಟಿದೆ. ಕೆಂಚನಗೌಡ್ರ ಬಸವರಾಜ ಎಂಬ ರೈತ ಎಮ್ಮೆಯನ್ನು ಕೊಟ್ಟಿಗೆಯಲ್ಲಿ ಕಟ್ಟಿದ್ದರು. ಮಳೆಯೊಂದಿಗೆ ಗುಡುಗು, ಸಿಡಿಲು ಬಡಿದ ಪರಿಣಾಮ ಎಮ್ಮೆ ಮೃತಪಟ್ಟಿದೆ.

ಇನ್ನೂ ರಾಯಚೂರಿನ ಲಿಂಗಸುಗೂರಿನ ಕರೆಮರಡಿ ತಾಂಡದಲ್ಲಿ ಸಿಡಿಲು ಬಡಿದು ಎಮ್ಮೆಯೊಂದು ಮೃತಪಟ್ಟಿದೆ. ಲಕ್ಷಣ್ಣ ಗುಂಡಪ್ಪ ರಾಠೋಡ ಎಂಬುವವರ ಎಮ್ಮೆಯನ್ನು ಮನೆ ಪಕ್ಕದಲ್ಲಿರುವ ಮರಕ್ಕೆ ಕಟ್ಟಿಹಾಕಿದ್ದರು. ಗುಡುಗು ಮಿಂಚು ಸಹಿತ ಸುರಿದ ಮಳೆ ವೇಳೆ ಸಿಡಿಲು ಬಡಿದ್ದರಿಂದ ಎಮ್ಮೆ ಸ್ಥಳದಲ್ಲೇ ಮೃತಪಟ್ಟಿದೆ. ಮುದಗಲ್ ಠಾಣೆ ಪೊಲೀಸ್ ಸಿಬ್ಬಂದಿ ಹಾಗೂ ನಾಗಲಾಪೂರ ಪಶು ಆಸ್ಪತ್ರೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Constables: ಬಿಯರ್‌ ಸೇವಿಸಿ ಇಬ್ಬರು ಕಾನ್‌ಸ್ಟೆಬಲ್‌ಗಳ ಸಾವು; ಮದ್ಯ ಪ್ರಿಯರೇ ಇನ್ನಾದರೂ ಎಚ್ಚರ!

Continue Reading

ಮಳೆ

Karnataka Weather : ಕರಾವಳಿಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಎಚ್ಚರಿಕೆ; ಬೆಂಗಳೂರಲ್ಲಿ ಹೇಗೆ?

Karnataka Weather Forecast : ರಾಜ್ಯದ ಹಲವೆಡೆ ಮಳೆಯು ಅಬ್ಬರಿಸುತ್ತಿದ್ದು, ಸೋಮವಾರವು (Heavy Rain) ಮುಂದುವರಿಯಲಿದೆ.ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದ್ದು, ಗಾಳಿ ವೇಗವು ಗಂಟೆಗೆ 30-40 ಕಿ.ಮೀ ವ್ಯಾಪ್ತಿಯಲ್ಲಿ (Rain News) ಬೀಸಲಿದೆ.

VISTARANEWS.COM


on

By

karnataka weather Forecast
Koo

ಬೆಂಗಳೂರು: ರಾಜ್ಯಾದ್ಯಂತ ವ್ಯಾಪಕವಾಗಿ ಹಗುರದಿಂದ ಮಧ್ಯಮ ಮಳೆಯಾಗುವ (Rain News) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ. ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು, ಮಿಂಚು ಸಹಿತ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಎಚ್ಚರಿಕೆಯನ್ನು ನೀಡಲಾಗಿದೆ.

ದಕ್ಷಿಣ ಒಳನಾಡಿನ ಚಿತ್ರದುರ್ಗ ಜಿಲ್ಲೆಯಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದರೆ, ಉಳಿದ ಜಿಲ್ಲೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದೆ. ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ.

ಮಲೆನಾಡಿನ ಕೊಡಗು ಜಿಲ್ಲೆಯಾದ್ಯಂತ ಸಾಧಾರಣ ಮಳೆಯಾಗಲಿದ್ದು, ಶಿವಮೊಗ್ಗ, ಹಾಸನ, ಚಿಕ್ಕಮಗಳೂರಿನಲ್ಲಿ ಹಗುರದಿಂದ ಕೂಡಿದ ಮಳೆಯಾಗಬಹುದು. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಮಧ್ಯಮ ಮಳೆಯಾಗಲಿದೆ.

ಇದನ್ನೂ ಓದಿ: Liquor ban : ಐದು ದಿನ ಮದ್ಯ ಮಾರಾಟಕ್ಕೆ ಬ್ರೇಕ್! ಜೂನ್‌ 1ರಿಂದ ಸಿಗಲ್ಲ ಎಣ್ಣೆ

ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ರಾಜಧಾನಿ ಬೆಂಗಳೂರಿನ ಸುತ್ತಮುತ್ತ ಮುಂಜಾನೆ ಮೋಡ ಕವಿದ ವಾತಾವರಣ ಇರಲಿದೆ. ಕೆಲವೊಮ್ಮೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 31 ಮತ್ತು 22 ಡಿ.ಸೆ ಇರಲಿದೆ.

ಕರಾವಳಿಗೆ ಯೆಲ್ಲೋ ಅಲರ್ಟ್‌

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಭಾರಿ ಮಳೆಯೊಂದಿಗೆ ಗುಡುಗು ಸಹಿತ ಮಿಂಚಿನೊಂದಿಗೆ ಗಂಟೆಗೆ 30-40 ಕಿ.ಮೀ ವ್ಯಾಪ್ತಿಯಲ್ಲಿ ಗಾಳಿ ಬೀಸಲಿದೆ. ಹೀಗಾಗಿ ಎರಡು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ.

ಇದನ್ನೂ ಓದಿ: Raichur News : ಸಾಲದ ಸುಳಿಗೆ ಸಿಲುಕಿದ ಸ್ನೇಹಿತೆಗೆ ಕೊಟ್ಟಳು 10 ತೊಲೆ ಬಂಗಾರ! ‘ಕಳ್ಳತನ’ ನಾಟಕವಾಡಿದ ಗೆಳತಿಯರು ಲಾಕ್‌

Rainfall Expect: ನಕ್ಷತ್ರಗಳ ಪ್ರಕಾರ ಈ ವರ್ಷ ಯಾವಾಗ ಮಳೆ ಬರಬಹುದು? ಇಲ್ಲಿದೆ ಪಕ್ಕಾ ಲೆಕ್ಕಾಚಾರ!

ಬಿಸಿಲಿನ ತಾಪ ದಿನೇದಿನೇ ಹೆಚ್ಚಾಗುತ್ತಿದ್ದು, ದಿನಕ್ಕೊಮ್ಮೆಯಾದರೂ ತಲೆ ಎತ್ತಿ ಆಕಾಶದತ್ತ (sky) ನೋಡಿ ಒಂದೆರಡು ಹನಿ ಮಳೆ (Rainfall Expect) ಇವತ್ತಾದರೂ ಸುರಿಯಬಾರದೇ ಎನ್ನುವಂತಾಗಿದೆ. ಈ ನಡುವೆ ಅಗತ್ಯ ಕೆಲಸಗಳಿಗೆ ಮಾತ್ರವಲ್ಲ ಕೆಲವೆಡೆ ಕುಡಿಯಲೂ ನೀರಿಲ್ಲ. ಇನ್ನು ತೋಟ, ಗದ್ದೆಗಳಲ್ಲಿನ ಫಸಲು ಬಿಸಿಲಿನ ಬೇಗೆಯಿಂದ ಸುಟ್ಟು ಹೋದಂತಾಗಿದೆ. ಈ ಬಾರಿ ಏಪ್ರಿಲ್ (april) ಮತ್ತು ಮೇ (may) ತಿಂಗಳ ತೀವ್ರವಾದ ಶಾಖವನ್ನು ಗಮನಿಸಿದರೆ ಈಗಲೇ ಹೀಗೆ ಇನ್ನು ಭವಿಷ್ಯದಲ್ಲಿ ಹೇಗಿರಬಹುದು ಎನ್ನುವ ಚಿಂತೆ ಎಂಥವರನ್ನೂ ಕಾಡದೇ ಇರಲಾರದು.

ಮಳೆ (rain) ಯಾವಾಗ ಬರುತ್ತದೆ ಎನ್ನುವುದನ್ನು ಈಗ ವಿಜ್ಞಾನಿಗಳು (Scientist) ನಿಖರವಾಗಿ ಹೇಳುತ್ತಾರೆ. ಆದರೆ ಹಿಂದಿನ ಕಾಲದಲ್ಲಿ ನಕ್ಷತ್ರಗಳ (star) ಚಲನೆಯನ್ನು ಆಧರಿಸಿ ಮಳೆ ಯಾವಾಗ ಬರಬಹುದು ಎನ್ನುವುದನ್ನು ನಮ್ಮ ಹಿರಿಯರು ಅಂದಾಜು ಮಾಡುತ್ತಿದ್ದರು.

ಮಳೆಯ ಮುನ್ಸೂಚನೆ

ಆಕಾಶದಲ್ಲಿ ಆಗಾಗ ಕಾಣಿಸುವ ಮೋಡಗಳು ಮಳೆಯ ಮುನ್ಸೂಚನೆ ನೀಡಿದರೂ ಕೆಲವೇ ಕ್ಷಣಗಳಲ್ಲಿ ಮೋಡ ಮರೆಯಾಗಿ ಬೇಸರ ಮೂಡುವಂತೆ ಮಾಡುತ್ತದೆ. ಆದರೆ ನಕ್ಷತ್ರಗಳು ನಿಖರವಾಗಿ ಮಳೆಯ ಮುನ್ಸೂಚನೆಯನ್ನು ನೀಡುತ್ತವೆ. ಹಿಂದೆ ನಮ್ಮ ಹಿರಿಯರು ಈ ನಕ್ಷತ್ರಗಳನ್ನೇ ನೋಡಿ ಮಳೆ ಯಾವಾಗ ಬರುತ್ತದೆ ಎಂಬುದನ್ನು ನಿಖರವಾಗಿ ಹೇಳುತ್ತಿದ್ದರು.

ಯಾವ ನಕ್ಷತ್ರಗಳು?

ಅಶ್ವಿನಿಯಿಂದ ವಿಶಾಖ ನಕ್ಷತ್ರದವರೆಗೆ ಗುರುತಿಸಲಾದ ಮಳೆ ನಕ್ಷತ್ರಗಳು ಸಾಂಪ್ರದಾಯಿಕವಾಗಿ ಜಾನಪದ ಮತ್ತು ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ ಮಳೆಯನ್ನು ಸೂಚಿಸುತ್ತವೆ ಎಂದೇ ನಂಬಲಾಗಿದೆ. ಅನಾದಿ ಕಾಲದಿಂದಲೂ ಈ ನಕ್ಷತ್ರಗಳು ರೈತರಿಗೆ ಮಳೆಯ ಮಾಹಿತಿ ನೀಡುತ್ತಿದ್ದವು.

ಈಗ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದರೆ ಶತಮಾನಗಳಿಗಿಂತಲೂ ಹಿಂದೆ ನಕ್ಷತ್ರ ನೋಡಿಯೇ ಮಳೆಯ ಸೂಚನೆ ಪಡೆಯುತ್ತಿದ್ದರು, ಈ ಬಾರಿ ಮಳೆಯ ನಕ್ಷತ್ರಗಳು ಏನು ಹೇಳುತ್ತವೆ ಎಂಬುದರ ಕುರಿತಾದ ಒಂದು ಕಿರು ಮಾಹಿತಿ ಇಲ್ಲಿದೆ.

ಏಪ್ರಿಲ್‌ನಲ್ಲಿ ಮಳೆ ಸಾಧ್ಯತೆ ಕಡಿಮೆ

ಏಪ್ರಿಲ್ 13ರಂದು ಪ್ರಾರಂಭವಾಗುವ ಅಶ್ವಿನಿ ನಕ್ಷತ್ರವು ಆಗಾಗ ಸಾಮಾನ್ಯ ಮತ್ತು ಸಣ್ಣ ಮಳೆಯನ್ನು ತರುವ ನಿರೀಕ್ಷೆಯಿದೆ. ಏಪ್ರಿಲ್ 27ರಂದು ಪ್ರಾರಂಭವಾಗುವ ಭರಣಿ ನಕ್ಷತ್ರವು ಸಾಮಾನ್ಯ ಮಳೆಯನ್ನು ತರುತ್ತದೆ. ಆದರೂ ಈ ಬಾರಿ ಏಪ್ರಿಲ್ ನಲ್ಲಿ ಈ ಮಳೆ ನಕ್ಷತ್ರಗಳು ಮಳೆಯಾಗುವ ಸೂಚನೆಯನ್ನು ಖಾತ್ರಿಪಡಿಸಿಲ್ಲ. ಹೀಗಾಗಿ ಏಪ್ರಿಲ್ ನಲ್ಲಿ ಮಳೆ ಕಾಣಿಸಿಕೊಳ್ಳುವುದು ಬಹುತೇಕ ಅನುಮಾನ.

ಮೇ 11ರ ಬಳಿಕ ಮಳೆ ಸಾಧ್ಯತೆ

ಮೇ 11ರ ಬಳಿಕ ಕೃತ್ತಿಕಾ ನಕ್ಷತ್ರವು ಮಳೆ ಸೂಚನೆ ನೀಡಿದೆ. ಮೇ 24ರಿಂದ ರೋಹಿಣಿ ನಕ್ಷತ್ರವು ಸಾಮಾನ್ಯ ಮಳೆ ತರುವ ನಿರೀಕ್ಷೆಯಿದೆ. ಆದರೂ ಇದು ಧರೆಯ ಬಿಸಿಲಿನ ತಾಪವನ್ನು ಸಂಪೂರ್ಣ ಕಡಿಮೆ ಮಾಡುತ್ತದೆ ಎಂದು ಹೇಳಲಾಗದು.

ಜೂನ್ 21ರಿಂದ ಪುನರ್ವಸು, ಜುಲೈ 5ರಿಂದ ಆರ್ಧ್ರ, ಜುಲೈ 19 ರಿಂದ ಪುಷ್ಯ, ಆಗಸ್ಟ್ 2ರಿಂದ ಆಶ್ಲೇಷ, ಜುಲೈ 16 ರಿಂದ ಮಾಘ ಮತ್ತು ಜುಲೈ 30 ರಿಂದ ಹಸ್ತ ನಕ್ಷತ್ರಗಳು ಉತ್ತಮ ಮಳೆಯಾಗುವ ಸೂಚನೆ ನೀಡಿದೆ. ಇದರ ಭವಿಷ್ಯವನ್ನು ಆಧರಿಸಿ ಸೆಪ್ಟೆಂಬರ್ 13 ರಿಂದ ಉತ್ತರ ಮಳೆ ನಿರೀಕ್ಷಿಸಲಾಗಿದೆ, ಹಸ್ತ ಸೆಪ್ಟೆಂಬರ್ 26 ರಿಂದ, ಅಕ್ಟೋಬರ್ 10 ರಿಂದ ಚಿತ್ರ ಮಳೆ, ಅಕ್ಟೋಬರ್ 23 ರಿಂದ ಸ್ವಾತಿ ಮಳೆ ಮತ್ತು ನವೆಂಬರ್ 1 ರಿಂದ ವಿಶಾಖ ಮಳೆಯಾಗುವ ನಿರೀಕ್ಷೆ ಇದೆ.

ಹಿಂದೂ ಜ್ಯೋತಿಷ್ಯದಲ್ಲಿ ಬಳಸಲಾಗುವ ಒಟ್ಟು 27 ನಕ್ಷತ್ರಗಳಿವೆ. ಇದು ಒಂದು ವರ್ಷದಲ್ಲಿ ಆಕಾಶಗೋಳದಾದ್ಯಂತ ಸೂರ್ಯನ ದಾರಿಯನ್ನು ನಿರ್ಧರಿಸತ್ತದೆ. ಹಿಂದೂ ಸಂಸ್ಕೃತಿಯಲ್ಲಿ ಜ್ಯೋತಿಷ್ಯ, ಜಾತಕ ಹೊಂದಾಣಿಕೆ, ಆಚರಣೆಗಳು ಮತ್ತು ಶುಭ ಸಮಾರಂಭಗಳ ಸಮಯದಲ್ಲಿ ನಕ್ಷತ್ರಗಳ ಪಾತ್ರ ಮಹತ್ವದ್ದಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Snake: ಸ್ಟ್ಯಾಂಡ್‌ನಲ್ಲಿಟ್ಟಿದ್ದ ಚಪ್ಪಲಿಯೊಳಗೆ ಕೂತಿದ್ದ ಬುಸ್‌ ಬುಸ್‌ ನಾಗಪ್ಪ; ಸ್ವಲ್ಪ ಹುಷಾರಾಗಿರ‍್ರಪ್ಪ! Video ಇಲ್ಲಿದೆ

Snake: ಬಾಣಸವಾಡಿಯ ಒಎಂಬಿಆರ್‌ ಲೇಔಟ್‌ನ ಮನೆಯೊಂದರಲ್ಲಿ ಚಪ್ಪಲಿಯಲ್ಲಿ ಹಾವು ಕಾಣಿಸಿದ ಕೂಡಲೇ ಮನೆಯ ಸದಸ್ಯರು ದಿಗಿಲುಗೊಂಡಿದ್ದಾರೆ. ಇದಾದ ಕೂಡಲೇ ಬಿಬಿಎಂಪಿ ಉರಗ ರಕ್ಷಣೆ ತಂಡಕ್ಕೆ ಮಾಹಿತಿ ನೀಡಿದ್ದಾರೆ. ಬಿಬಿಎಂಪಿ ಉರಗ ರಕ್ಷಣೆ ಸಿಬ್ಬಂದಿಯು ಕೂಡಲೇ ಅವರ ಮನೆಗೆ ತೆರಳಿ ಹಾವನ್ನು ಹೊರಗೆ ತೆಗೆದು, ಕೊಂಡೊಯ್ದಿದ್ದಾರೆ. ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಹಾವನ್ನು ತೆಗೆದುಕೊಂಡು ಹೋಗಿದ್ದಾರೆ.

VISTARANEWS.COM


on

Snake
Koo

ಬೆಂಗಳೂರು: ಮಳೆ ಜಾಸ್ತಿಯಾಗಿದೆ ಎಂದು ಚಪ್ಪಲಿಗಳನ್ನು ಸ್ಟ್ಯಾಂಡ್‌ನಲ್ಲಿಟ್ಟು ನಿತ್ಯವೂ ಶೂಗಳನ್ನು ಧರಿಸುತ್ತೇವೆ. ಯಾವಾಗಲೋ ಒಂದು ದಿನ ಚಪ್ಪಲಿ ಹಾಕುವ ಉಮೇದಿ ಬರುತ್ತದೆ. ಆಗ ನಾವು ಚಪ್ಪಲಿ ಸ್ಟ್ಯಾಂಡ್‌ ಎದುರು ಹೋಗಿ, ಸ್ಟೈಲಾಗಿ ಚಪ್ಪಲಿ ಹಾಕಿಕೊಂಡು ಹೋಗುತ್ತೇವೆ. ಹೀಗೆ, ಸ್ಟೈಲ್‌ ಮಾಡುವ ಮೊದಲು ಇನ್ನುಮುಂದೆ ಹುಷಾರಾಗಿದೆ. ಬೆಂಗಳೂರಿನಲ್ಲಿ (Bengaluru) ಸ್ಟ್ಯಾಂಡ್‌ನಲ್ಲಿ ಇಟ್ಟಿದ್ದ ಚಪ್ಪಲಿಯೊಳಗೂ ನಾಗರ ಹಾವಿನ ಮರಿ (Snake) ಪತ್ತೆಯಾದ ಕಾರಣದಿಂದಾಗಿ ಇನ್ನುಮುಂದೆ ಎಚ್ಚರಿಕೆಯಿಂದ ಇರುವುದು ಅನಿವಾರ್ಯವಾಗಿದೆ.

ಹೌದು, ಬೆಂಗಳೂರಿನ ಬಾಣಸವಾಡಿಯ ಒಎಂಬಿಆರ್‌ ಲೇಔಟ್‌ನಲ್ಲಿರುವ ಮನೆಯೊಂದರಲ್ಲಿ ಚಪ್ಪಲಿಯ ಪುಟ್ಟ ಜಾಗದಲ್ಲಿ ನಾಗರಹಾವಿನ ಮರಿಯೊಂದು ಪತ್ತೆಯಾಗಿದೆ. ಕೆಲ ದಿನಗಳ ಹಿಂದೆ ಚಪ್ಪಲಿಗಳನ್ನು ಸ್ಟ್ಯಾಂಡ್‌ನಲ್ಲಿ ಬಿಟ್ಟಿದ್ದು, ಭಾನುವಾರ ಚಪ್ಪಲಿ ಹೊರತೆಗೆದಾಗ ಅದರೊಳಗೆ ಮರಿ ನಾಗರಹಾವು ಬೆಚ್ಚಗೆ ಕುಳಿತಿದ್ದನ್ನು ನೋಡಿ ಮನೆಯವರು ಬೆಚ್ಚಿ ಬಿದ್ದಿದ್ದಾರೆ. ಚಪ್ಪಲಿಯೊಳಗೆ ನಾಗರ ಹಾವಿನ ಮರಿ ಪತ್ತೆಯಾದ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ.

ವಿಡಿಯೊ ಇಲ್ಲಿದೆ

ಚಪ್ಪಲಿಯಲ್ಲಿ ಹಾವು ಕಾಣಿಸಿದ ಕೂಡಲೇ ಮನೆಯ ಸದಸ್ಯರು ದಿಗಿಲುಗೊಂಡಿದ್ದಾರೆ. ಇದಾದ ಕೂಡಲೇ ಬಿಬಿಎಂಪಿ ಉರಗ ರಕ್ಷಣೆ ತಂಡಕ್ಕೆ ಮಾಹಿತಿ ನೀಡಿದ್ದಾರೆ. ಬಿಬಿಎಂಪಿ ಉರಗ ರಕ್ಷಣೆ ಸಿಬ್ಬಂದಿಯು ಕೂಡಲೇ ಅವರ ಮನೆಗೆ ತೆರಳಿ ಹಾವನ್ನು ಹೊರಗೆ ತೆಗೆದು, ಕೊಂಡೊಯ್ದಿದ್ದಾರೆ. ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಹಾವನ್ನು ತೆಗೆದುಕೊಂಡು ಹೋಗಿದ್ದಾರೆ. ಮಳೆಗಾಲ ಶುರುವಾಗುತ್ತಿರುವ ಹಿನ್ನೆಲೆಯಲ್ಲಿ ಶೂ ಹಾಗೂ ಚಪ್ಪಲಿಗಳನ್ನು ಧರಿಸುವಾಗ ಒಮ್ಮೆ ಪರಿಶೀಲಿಸಬೇಕು ಎಂಬುದಾಗಿ ಸಿಬ್ಬಂದಿಯು ಎಚ್ಚರಿಕೆ ನೀಡಿದ್ದಾರೆ.

ಕೆಲ ತಿಂಗಳ ಹಿಂದೆ ಹಾವು ಕಚ್ಚಿ 7 ವರ್ಷದ ಬಾಲಕಿ (Snake Bite) ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ ತಾಲೂಕಿನ ‌ಕೋಳೂರು ಗ್ರಾಮದಲ್ಲಿ ಘಟನೆ ನಡೆದಿತ್ತು. ಟಿ ಹೊಸಹಳ್ಳಿ ಗ್ರಾಮದ ರಾಮಾಂಜಿ ಎನ್ನುವವರ ಮಗಳು ಅನುಷಾ (7) ಮೃತರು. ವಿನೋದಮ್ಮ ಮತ್ತು ರಾಮಾಂಜಿನಪ್ಪ ದಂಪತಿ ಕೋಳೂರು ಗ್ರಾಮದ ತೋಟದ ಮನೆಯೊಂದರಲ್ಲಿ ಕೂಲಿ ಕೆಲಸ ಮಾಡಿಕೊಂಡು ವಾಸವಿದ್ದರು. ಸಂಜೆ ಅನುಷಾಳ ತಂದೆ-ತಾಯಿ‌ ತೋಟದ ಕೆಲಸದಲ್ಲಿ ನಿರಂತರಾಗಿದ್ದರು. ಈ ವೇಳೆ ಮನೆ ಹೊರಗೆ ಆಟ ಆಡುತ್ತಿದ್ದಾಗ ಬಾಲಕಿ ಅನುಷಾಗೆ ಹಾವು ಕಚ್ಚಿತ್ತು.

ಇದನ್ನೂ ಓದಿ: Constables: ಬಿಯರ್‌ ಸೇವಿಸಿ ಇಬ್ಬರು ಕಾನ್‌ಸ್ಟೆಬಲ್‌ಗಳ ಸಾವು; ಮದ್ಯ ಪ್ರಿಯರೇ ಇನ್ನಾದರೂ ಎಚ್ಚರ!

Continue Reading

ದೇಶ

Varanasi: ಮೋದಿ ಕುರಿತು ವಾರಾಣಸಿಯಲ್ಲಿರುವ ಕನ್ನಡಿಗರು ಏನಂತಾರೆ? ಇಲ್ಲಿದೆ ‘ವಿಸ್ತಾರ ನ್ಯೂಸ್’ ಗ್ರೌಂಡ್‌ ರಿಪೋರ್ಟ್!

Varanasi: ವಾರಾಣಸಿಯಲ್ಲಿ ನರೇಂದ್ರ ಮೋದಿ ಅವರ ವಿರುದ್ಧ ಈ ಬಾರಿ ಕಾಂಗ್ರೆಸ್‌ ಅಜಯ್‌ ರಾಯ್‌ ಅವರನ್ನು ಕಣಕ್ಕಿಳಿಸಿದೆ. ಅಖಿಲ ಭಾರತ ಹಿಂದು ಮಹಾಸಭಾ (ABHM) ಪಕ್ಷದಿಂದ ಮಂಗಳಮುಖಿಯಾಗಿರುವ ಕಿನ್ನಾರ್‌ ಮಹಾಮಂಡಲೇಶ್ವರ್‌ ಹೇಮಾಂಗಿ ಸಖಿ ಅವರು ಕೂಡ ಸ್ಪರ್ಧಿಸುತ್ತಿದ್ದಾರೆ. ಬಿಎಸ್‌ಪಿಯು ಅಥರ್‌ ಜಮಾಲ್‌ ಲರಿ ಅವರಿಗೆ ಟಿಕೆಟ್‌ ನೀಡಿದೆ. ಸ್ಪರ್ಧೆ ತೀವ್ರವಾದರೂ ಜನ ಮಾತ್ರ ಮೋದಿ ಅವರಿಗೇ ಬೆಂಬಲ ಎನ್ನುತ್ತಿದ್ದಾರೆ. ಅದರಲ್ಲೂ, ಕನ್ನಡಿಗರು ಏನೆಂದರು ಎಂಬ ಕುರಿತು ವಿಸ್ತಾರ ನ್ಯೂಸ್‌ ಗ್ರೌಂಡ್‌ ರಿಪೋರ್ಟ್‌ ಇಲ್ಲಿದೆ.

VISTARANEWS.COM


on

Varanasi
Koo

ಪ್ರತ್ಯಕ್ಷದರ್ಶಿ ವರದಿ: ವಿಕ್ರಮ್

ವಾರಾಣಸಿ: ಲೋಕಸಭೆ ಚುನಾವಣೆಯು (Lok Sabha Election 2024) ಕೊನೆಯ ಹಂತ ತಲುಪಿದೆ. ಜೂನ್‌ 1ರಂದು ಏಳನೇ ಹಂತದ ಮತದಾನದ ಮೂಲಕ ಸಾರ್ವತ್ರಿಕ ಚುನಾವಣೆಗೆ ತೆರೆ ಬೀಳಲಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸತತ ಮೂರನೇ ಬಾರಿಗೆ ಉತ್ತರ ಪ್ರದೇಶದ ವಾರಾಣಸಿಯಿಂದ (Varanasi) ಸ್ಪರ್ಧಿಸಿದ್ದು, ಸುಮಾರು 7 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದರಲ್ಲೂ, ವಾರಾಣಸಿಯಲ್ಲಿ ನೆಲೆಸಿರುವ ಕನ್ನಡಿಗರಂತೂ ಮೋದಿ ಗೆಲುವು ನಿಶ್ಚಿತ ಎಂದು ಹೇಳುತ್ತಿದ್ದಾರೆ. ಹಾಗಾದರೆ, ಮೋದಿ ಕುರಿತು ವಾರಾಣಸಿಯಲ್ಲಿರುವ ಕನ್ನಡಿಗರು ಹೇಳಿದ್ದೇನು? ಇಲ್ಲಿದೆ ‌‘ವಿಸ್ತಾರ ನ್ಯೂಸ್‌’ ಗ್ರೌಂಡ್‌ ರಿಪೋರ್ಟ್.‌

“ನಾವು ಬೆಂಗಳೂರಿನಿಂದ ಕಾಶಿಗೆ ಬಂದು ನೆಲೆಸಿದ್ದೇವೆ. 2012ರ ಕೊನೆಯಲ್ಲಿ ನಾವು ಇಲ್ಲಿಗೆ ಬಂದೆವು. ನಾವು ಇಲ್ಲಿಗೆ ಬಂದಾಗ ಸಮಾಜವಾದಿ ಪಕ್ಷ ಅಧಿಕಾರದಲ್ಲಿತ್ತು. ನಾವು ಎರಡೂ ಸರ್ಕಾರಗಳನ್ನು ನೋಡಿದ ಕಾರಣ ನಮಗೆ ನಿಜವಾದ ವ್ಯತ್ಯಾಸ ಗೊತ್ತು. ಮೊದಲಿಗೆ ಇಲ್ಲಿ ವಿದ್ಯುತ್‌ ವೋಲ್ಟೇಜ್‌ ಇರಲಿಲ್ಲ. ಈಗ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಗಂಗೆಯು ಶುದ್ಧಗೊಂಡಿದ್ದಾಳೆ. ಇಲ್ಲಿ ಗಲಭೆಗಳು ಸಂಪೂರ್ಣವಾಗಿ ನಿಂತಹೋಗಿವೆ. ಒಂದೇ ಒಂದು ಗಲಾಟೆ ನಡೆಯುವುದಿಲ್ಲ. ಕಳೆದ 10 ವರ್ಷಗಳಲ್ಲಿ ಅಪಾರ ಅಭಿವೃದ್ಧಿಯಾಗಿದೆ” ಎಂಬುದಾಗಿ ಕನ್ನಡಿಗರೊಬ್ಬರು ಮಾಹಿತಿ ನೀಡಿದ್ದಾರೆ.

“ಸಮಾಜದಲ್ಲಿ ಧರ್ಮ ಇದ್ದಾಗಲೇ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಇದೇ ಕಾರಣಕ್ಕಾಗಿಯೇ, ನರೇಂದ್ರ ಮೋದಿ ಅವರು ಯಾವುದೇ ಗಲಾಟೆ, ಗದ್ದಲ ಇಲ್ಲದೆ, 150 ಎಕರೆ ಜಾಗವನ್ನು ಪಡೆದುಕೊಂಡು, ಕಾಶಿ ವಿಶ್ವನಾಥ ಕಾರಿಡಾರ್‌ ನಿರ್ಮಿಸಿದ್ದಾರೆ. ಹಾಗಾಗಿ, ಮೋದಿ ಅವರು ಲಕ್ಷಾಂತರ ಮತಗಳಿಂದ ಗೆಲುವು ಸಾಧಿಸುವುದು ನಿಶ್ಚಿತ” ಎಂಬುದಾಗಿ ಹೇಳಿದ್ದಾರೆ. ಇನ್ನೊಬ್ಬ ಕನ್ನಡಿಗ ಮಾತನಾಡಿ, “ನಾನು ಮೊದಲ ಬಾರಿಗೆ ಮತ ಚಲಾವಣೆ ಮಾಡುತ್ತಿದ್ದೇನೆ. ನನ್ನ ಮೊದಲ ವೋಟು ಮೋದಿ ಅವರಿಗೆ” ಎಂದು ಯುವಕ ಹೇಳಿದ್ದಾರೆ.

ಮೈಸೂರಿನವರಾದ, 1984ರಲ್ಲಿಯೇ ವಾರಾಣಸಿಗೆ ತೆರಳಿದ, ಸ್ವಾಮೀಜಿ ಆಗಿರುವ ಮತ್ತೊಬ್ಬ ಕನ್ನಡಿಗ ವಿಸ್ತಾರ ನ್ಯೂಸ್‌ ಜತೆ ಮಾತನಾಡಿದ್ದಾರೆ. “ಕಳೆದ 40 ವರ್ಷಗಳಿಂದ ಕಾಶಿಯಲ್ಲಿಯೇ ನೆಲೆಸಿದ್ದೇನೆ. ಮೊದಲು ಸ್ವಚ್ಛತೆ, ಅಭಿವೃದ್ಧಿಯಾಗಿರಲಿಲ್ಲ. ಕಾಶಿಗೆ ಶೇ.90ರಷ್ಟು ಜನ ಬರುವುದು ದಕ್ಷಿಣ ಭಾರತದಿಂದಲೇ. ಈಗ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಘಾಟ್‌ಗಳನ್ನು ಸ್ವಚ್ಛಗೊಳಿಸಿ, ಭಕ್ತರಿಗೆ ಅನುಕೂಲ ಮಾಡಲಾಗಿದೆ. ಮೋದಿ ಅವರಿರದಿದ್ದರೆ ವಾರಾಣಸಿ ನಾಶವಾಗುತ್ತಿತ್ತು” ಎಂದಿದ್ದಾರೆ. ಕನ್ನಡಿಗರು ಮಾತ್ರವಲ್ಲ, ಕಾಶಿಯ ಬಹುತೇಕ ನಾಗರಿಕರು ಕೂಡ ಮೋದಿ ಅವರ ಆಡಳಿತವನ್ನು ಮೆಚ್ಚಿದ್ದಾರೆ.

ಮೋದಿ ವಿರುದ್ಧ ಕಣಕ್ಕಿಳಿದ ನಾಯಕರಿವರು

ನರೇಂದ್ರ ಮೋದಿ ಅವರು 2014ರಿಂದಲೂ ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇವರ ವಿರುದ್ಧ ಈ ಬಾರಿ ಕಾಂಗ್ರೆಸ್‌ ಅಜಯ್‌ ರಾಯ್‌ ಅವರನ್ನು ಕಣಕ್ಕಿಳಿಸಿದೆ. ಅಖಿಲ ಭಾರತ ಹಿಂದು ಮಹಾಸಭಾ (ABHM) ಪಕ್ಷದಿಂದ ಮಂಗಳಮುಖಿಯಾಗಿರುವ ಕಿನ್ನಾರ್‌ ಮಹಾಮಂಡಲೇಶ್ವರ್‌ ಹೇಮಾಂಗಿ ಸಖಿ ಅವರು ಕೂಡ ಸ್ಪರ್ಧಿಸುತ್ತಿದ್ದಾರೆ. ಬಿಎಸ್‌ಪಿಯು ಅಥರ್‌ ಜಮಾಲ್‌ ಲರಿ ಅವರಿಗೆ ಟಿಕೆಟ್‌ ನೀಡಿದೆ. ಕ್ಷೇತ್ರದಲ್ಲಿ ಜೂನ್‌ 1ರಂದು ಮತದಾನ ನಡೆಯಲಿದೆ. ವಾರಾಣಸಿ ಲೋಕಸಭೆ ಕ್ಷೇತ್ರದಲ್ಲಿ 19.62 ಲಕ್ಷ ಮತದಾರರಿದ್ದಾರೆ. ಇವರಲ್ಲಿ 10.65 ಲಕ್ಷ ಪುರುಷರಿದ್ದರೆ, 8.97 ಲಕ್ಷ ಮಹಿಳೆಯರಿದ್ದಾರೆ. 135 ಮಂಗಳಮುಖಿಯರೂ ಮತದಾನ ಮಾಡಲಿದ್ದಾರೆ.

ಇದನ್ನೂ ಓದಿ: Phalodi Satta Bazar: ಮೋದಿಗೆ 330 ಸೀಟು ಖಚಿತ ಎಂದ ಸಟ್ಟಾ ಬಜಾರ್‌ ಸಮೀಕ್ಷೆ; ರಾಜ್ಯವಾರು ವರದಿ ಇಲ್ಲಿದೆ

Continue Reading
Advertisement
EPF Death Claim
ಮನಿ ಗೈಡ್13 mins ago

EPF Death Claim: ಆಧಾರ್ ದೃಢೀಕರಣ ಇಲ್ಲದೇ ಇದ್ದರೂ ಇಪಿಎಫ್‌ಒ ಡೆತ್ ಕ್ಲೈಮ್ ಸಾಧ್ಯವೆ? ಇಲ್ಲಿದೆ ಮಾಹಿತಿ

IPL 2024
ಕ್ರೀಡೆ21 mins ago

IPL 2024 : ಗೆಲ್ಲಬೇಕಾಗಿರುವುದು ಐಪಿಎಲ್​ ಟ್ರೋಫಿ, ಆರೆಂಜ್ ಕ್ಯಾಪ್ ಅಲ್ಲ; ಅನಗತ್ಯವಾಗಿ ಕೊಹ್ಲಿಯ ಕಾಲೆಳೆದ ಅಂಬಾಟಿ ರಾಯುಡು

Dhruva Sarja Entry to Bollywood in brother Role
ಸ್ಯಾಂಡಲ್ ವುಡ್29 mins ago

Dhruva Sarja: ಬಾಲಿವುಡ್‌ ಸಿನಿಮಾಗೆ ಎಂಟ್ರಿ ಕೊಡ್ತಾರಾ ಧ್ರುವ ಸರ್ಜಾ? ಬಿಗ್‌ ಬಜೆಟ್‌ ಚಿತ್ರದಲ್ಲಿ ಸಹೋದರನ ಪಾತ್ರ?

Toothpaste For Cleaning
ಲೈಫ್‌ಸ್ಟೈಲ್30 mins ago

Toothpaste For Cleaning: ಅಡುಗೆ ಮನೆ ಕೊಳೆಯಾಗಿದೆಯೇ? ಸ್ವಚ್ಛತೆಗೆ ಟೂತ್‌ಪೇಸ್ಟ್‌ ಬಳಸಿ!

Cyclone Remal
ದೇಶ37 mins ago

Cyclone Remal: ʼರೆಮಾಲ್‌ʼ ಅಬ್ಬರಕ್ಕೆ ಬಂಗಾಳ, ಬಾಂಗ್ಲಾ ತತ್ತರ-ಭೂಕುಸಿತ, ಪ್ರವಾಹ ಸ್ಥಿತಿ ನಿರ್ಮಾಣ

child death belagavi
ಕ್ರೈಂ47 mins ago

Child Death: ಆಟವಾಡುತ್ತ ಸಂಪ್‌ಗೆ ಬಿದ್ದು 2 ವರ್ಷದ ಕಂದಮ್ಮ ದುರ್ಮರಣ, ಮಳೆಗೆ ಮರ ಬಿದ್ದು ಮಹಿಳೆ ಸಾವು

IPL 2024
ಕ್ರೀಡೆ49 mins ago

IPL 2024 : ಕೆಕೆಆರ್​ ಗೆದ್ದ ಸಂಭ್ರಮದಲ್ಲಿ ಕೋಚ್ ಗಂಭೀರ್​ ಹಣೆಗೆ ಮುತ್ತಿಟ್ಟ ಶಾರುಖ್​ ಖಾನ್​, ಇಲ್ಲಿದೆ ವಿಡಿಯೊ

IPL 2024
ಕ್ರೀಡೆ1 hour ago

IPL 2024 : ‘ಪ್ಲೇಯರ್​​ ಆಫ್​ ದಿ ಟೂರ್ನಮೆಂಟ್​’ ಸೇರಿ ನಾನಾ ಪ್ರಶಸ್ತಿ ವಿಜೇತ ಪಟ್ಟಿ ಇಲ್ಲಿದೆ

Color In Food
ಆರೋಗ್ಯ1 hour ago

Colour In Food: ನಾವು ಸೇವಿಸುವ ಕಲ್ಲಂಗಡಿ ಸುರಕ್ಷಿತವೇ?; ಆಹಾರ ತಜ್ಞರು ಏನು ಹೇಳಿದ್ದಾರೆ?

israel palestine war12
ವಿದೇಶ1 hour ago

Israel Palestine War: ಇಸ್ರೇಲ್‌ ಪ್ರತೀಕಾರದ ದಾಳಿ, 35 ಪ್ಯಾಲೆಸ್ತೀನೀಯರ ಸಾವು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ15 hours ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು16 hours ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ4 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ5 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು6 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು6 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ7 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ1 week ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

ಟ್ರೆಂಡಿಂಗ್‌