Minister D Sudhakar : ಸುಧಾಕರ್‌ ರಾಜೀನಾಮೆ ಕೊಡಲ್ಲ, ಇದೊಂದು ಸುಳ್ಳು ಕೇಸ್‌: ಡಿ.ಕೆ. ಶಿವಕುಮಾರ್ - Vistara News

ಕರ್ನಾಟಕ

Minister D Sudhakar : ಸುಧಾಕರ್‌ ರಾಜೀನಾಮೆ ಕೊಡಲ್ಲ, ಇದೊಂದು ಸುಳ್ಳು ಕೇಸ್‌: ಡಿ.ಕೆ. ಶಿವಕುಮಾರ್

Minister D Sudhakar : ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸಚಿವ ಡಿ. ಸುಧಾಕರ್‌ ವಿರುದ್ಧ ಕೇಳಿಬಂದಿರುವ ದಲಿತ ನಿಂದನೆ ಪ್ರಕರಣ ಸುಳ್ಳು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಅಲ್ಲದೆ, ಅವರಿಂದ ರಾಜೀನಾಮೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಕಿಡಿಕಾರಿದ್ದಾರೆ.

VISTARANEWS.COM


on

Minister D Sudhakar and DCM DK Shivakumar infront of vidhanasoudha
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ದಲಿತರ ಆಸ್ತಿ ಕಬಳಿಕೆ, ಹಲ್ಲೆ ಹಾಗೂ ಜಾತಿ ನಿಂದನೆ (Property grabbing, assault and casteist slurs) ಆರೋಪದ ಅಡಿಯಲ್ಲಿ ಸಚಿವ ಡಿ. ಸುಧಾಕರ್‌ (Minister D Sudhakar)​ ಮೇಲೆ ದಾಖಲಾಗಿರುವ ಎಫ್‌ಐಆರ್‌ (FIR registered) ಸುಳ್ಳು ಕೇಸ್‌. ಅವರು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (Deputy CM and KPCC president DK Shivakumar) ಷರಾ ಬರೆದಿದ್ದಾರೆ.

ಇಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಡಿಸಿಎಂ ಶಿವಕುಮಾರ್, ಸಚಿವ ಸುಧಾಕರ್ ವಿರುದ್ಧದ ಕೇಸ್ ವಿಚಾರವಾಗಿ ಬಿಜೆಪಿಯವರು ಏನು ಬೇಕಾದರೂ ಕುತಂತ್ರ ಮಾಡಲಿ. ಇದೊಂದು ಸಿವಿಲ್ ಡಿಸ್ಪ್ಯೂಟ್ ಆಗಿದೆ. ನಾನು ಪಕ್ಷದ ಅಧ್ಯಕ್ಷನಾಗಿ ವರದಿ ಪಡೆದಿದ್ದೇನೆ. ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದೇನೆ. ಅವರು ಅನುಮತಿ ಪಡೆದು ಖಾಸಗಿ ಜಮೀನನ್ನು ಖರೀದಿಸಿದ್ದಾರೆ. ಇದೊಂದು ಸುಳ್ಳು ಕೇಸ್‌ ಎಂದು ಹೇಳಿದ್ದಾರೆ.

ಚುನಾವಣೆ ಸಮಯದಲ್ಲಿ ಯಾರೋ ಹೋಗಿ ಕಾಂಪೌಂಡ್ ಹಾಕಿದ್ದಾರೆ. ಯಾರೋ ಹೋಗಿ ಅವರು ಇಲ್ಲದಿದ್ದಾಗ ದೂರು ನೀಡಿದ್ದಾರೆ. ಪರಿಶಿಷ್ಟ ಜಾತಿಯವರು ಕೊಟ್ಟಾಗ ಪಿಸಿಆರ್ ಹಾಕಿದ್ದಾರೆ. ಇದೊಂದು ಸುಳ್ಳು ಕೇಸ್ ಆಗಿದೆ. ನಾವು ಸಿಡಿಆರ್ ತನಿಖೆ ಮಾಡಿದ್ದೇವೆ. ಯಾರಾದರೂ ತಪ್ಪು‌ ಮಾಡಿದ್ದರೆ ಕಾನೂನಿಗಿಂತ ದೊಡ್ಡವರಿಲ್ಲ. ಸುಧಾಕರ್ ರಾಜೀನಾಮೆ ನೀಡುತ್ತಾರೆ ಎಂದು ಬಿಜೆಪಿಯವರು ಕನಸು ಕಾಣುವುದು ಬೇಡ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ಈ ಪ್ರಕರಣವನ್ನು ನಾನು ಪರಿಶೀಲನೆ ಮಾಡಿದ್ದೇನೆ. ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ದಾಖಲೆಗಳನ್ನು ತರಿಸಿ ನೋಡಿದ್ದೇನೆ. ಧಮ್ಕಿಗೂ, ಪಿಸಿಆರ್‌ ಆ್ಯಕ್ಟ್‌ಗೂ ವ್ಯತ್ಯಾಸ ಇಲ್ಲವೇ? ಈ ಪ್ರಕರಣದ ಬಗ್ಗೆ ಮೊದಲು ಕೇಳಿದಾಗ ನನಗೂ ಗಾಬರಿ ಆಯಿತು. ಕೊನೆಗೆ ಪರಿಶೀಲನೆ ನಡೆಸಿದ ಮೇಲೆ ಇದೊಂದು ಸುಳ್ಳು ಕೇಸ್‌ ಎಂಬುದು ಗೊತ್ತಾಯಿತು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಬಲವಾಗಿ ಸಮರ್ಥನೆ ಮಾಡಿಕೊಂಡಿದ್ದಾರೆ.

ನಾನು ಯಾರ ವಿರುದ್ಧವೂ ಜಾತಿನಿಂದನೆ ಮಾಡಿಲ್ಲ: ಸಚಿವ ಡಿ. ಸುಧಾಕರ್

ನಾನು ಯಾರ ವಿರುದ್ಧವೂ ಜಾತಿನಿಂದನೆ ಮಾಡಿಲ್ಲ. ಹಲವು ವರ್ಷಗಳಿಂದ ನಮ್ಮ ಕಂಪನಿಗೆ ಸಂಬಂಧಪಟ್ಟ ಜಮೀನು ಇದೆ. ಅಲ್ಲಿಯ ಜನರ ಪರಿಚಯವೇ ಇಲ್ಲ. ನನ್ನ ವಿರುದ್ಧ ಪಿತೂರಿ ನಡೆಯುತ್ತಿದೆ. ಯಾರಿಂದ ಅಂತ ಗೊತ್ತಿಲ್ಲ. ಆದರೆ ಕಾನೂನು ಇದೆ, ಕ್ರಮ ಕೈಗೊಳ್ಳಲಿ. ಕಾನೂನು ಎಲ್ಲರಿಗೂ ಒಂದೇ. ಬೇಕಿದ್ದರೆ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಲಿ. 2006ರಲ್ಲೂ ಹೀಗೆ ಮಾಡಿದ್ದರು. ಇವರಿಗೆ ಕೋರ್ಟ್ ಛೀಮಾರಿ ಹಾಕಿತ್ತು. ಒಂದೂವರೆ ಎಕರೆ ಜಮೀನು ನಮ್ಮ ಕಂಪನಿಗೆ ಸೇರಿದ್ದಾಗಿದೆ. ನಾನು ರಸ್ತೆ ಒತ್ತುವರಿ ಮಾಡಿದ್ದರೆ ಕೋರ್ಟ್‌ಗೆ ಹೋಗಲಿ. ನನ್ನ ತಪ್ಪು ಇದ್ದರೆ ಕ್ರಮ ಜರುಗಿಸಲಿ ಎಂದು ಸಚಿವ ಡಿ. ಸುಧಾಕರ್‌ ಸ್ಪಷ್ಟನೆ ನೀಡಿದ್ದಾರೆ.‌

ಎರಡು ಎಫ್ಐಆರ್ ಬಗ್ಗೆ ನನಗೆ ಮಾಹಿತಿ ಇಲ್ಲ. ಜಾತಿ ನಿಂದನೆ ಪ್ರಕರಣದಲ್ಲಿ ಎಫ್ಐಆರ್ ಆಗಿದೆ. ನಾನು ಮುಖತಃ ಅವರನ್ನು ಭೇಟಿ ಮಾಡಿಲ್ಲ. ಇಬ್ಬರು ಮುಖಾಮುಖಿಯಾಗದೆ ಅದು ಹೇಗೆ ಜಾತಿ ನಿಂದನೆ ಆಗುತ್ತದೆ ಅನ್ನೋದು ಗೊತ್ತಿಲ್ಲ. ನಾನು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮತ್ತು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೇನೆ. ಕೇಸ್ ಬಗ್ಗೆ ವಿವರಣೆ ನೀಡಿದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದೇನೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಜತೆ ನಾನು ಇದ್ದವನು. 2008ರಲ್ಲಿ ಇಂತಹ ಆರೋಪ ಬಂದಾಗ ಅವರು ನನ್ನ ಜತೆ ಇದ್ದರು. ಆ ಕೇಸ್ ಏನಾಯಿತು ಅನ್ನೋದು ಅವರಿಗೂ ಗೊತ್ತಿದೆ. ಈಗಲೂ ಬೊಮ್ಮಾಯಿ ಸಾಹೇಬರು ಕೇಸ್ ತಿಳಿದು ಮಾತನಾಡಲಿ. ನಾನು ತಪ್ಪು ಮಾಡಿಲ್ಲ. ರಾಜೀನಾಮೆ ಕೊಡುವ ಪ್ರಶ್ನೆ ಬರಲ್ಲ. ನಾನು ತಪ್ಪು ಮಾಡದಿರುವುದರಿಂದ ಹೆದರುವ ಅವಶ್ಯಕತೆ ನನಗೆ ಇಲ್ಲ. ಇದರ ಹಿಂದೆ ಕೆಲವರ ಕುಮ್ಮಕ್ಕು ಇದೆ ಎಂದು ಡಿ. ಸುಧಾಕರ್‌ ಹೇಳಿದ್ದಾರೆ.

ಇದನ್ನೂ ಓದಿ:Minister D Sudhakar : ಸಿಎಂ ದಲಿತ ಉದ್ಧಾರಕರಾ? ದಲಿತರಿಗೆ ಧಮ್ಕಿ ಹಾಕಿದ ಸುಧಾಕರ್‌ರನ್ನು ಬಂಧಿಸಿ: ಎಚ್‌ಡಿಕೆ

ಏನಿದು ಪ್ರಕರಣ?

ದಲಿತ ಸಮುದಾಯದ ಸುಬ್ಬಮ್ಮ ಎಂಬುವವರು ಯಲಹಂಕ ಠಾಣೆಯಲ್ಲಿ (Yelahanka Police Station) ನೀಡಿದ್ದ ದೂರಿನನ್ವಯ ಸಚಿವ ಡಿ. ಸುಧಾಕರ್‌ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸಚಿವರ ವಿರುದ್ಧ ದೌರ್ಜನ್ಯ, ವಂಚನೆ ಮತ್ತು ಹಲ್ಲೆ ಆರೋಪದಡಿ ಅಟ್ರಾಸಿಟಿ ಆ್ಯಕ್ಟ್ (Atrocity Act) ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿದೆ. ಯಲಹಂಕ ಗ್ರಾಮದ ಸರ್ವೇ ನಂಬರ್ 108/1ರ ಜಮೀನನ್ನು ಮೋಸದಿಂದ ಕಬಳಿಕೆ ಮಾಡಿದ್ದಾರೆ. ಈ ಕೇಸ್ ಕೋರ್ಟ್‌ನಲ್ಲಿದೆ. ಹೀಗಿದ್ದಾಗಲೂ ಬಂದು ಗಲಾಟೆ ಮಾಡಿದ್ದಾರೆ ಎಂಬ ಆರೋಪ ಈಗ ಸಚಿವರ ಮುಂದಿದೆ. ಆದರೆ, ಇದನ್ನು ಸಚಿವ ಡಿ. ಸುಧಾಕರ್‌ ನಿರಾಕರಣೆ ಮಾಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

DK Shivakumar: ದೇವರಾಜೇಗೌಡ ಮೆಂಟಲ್‌ ಕೇಸ್‌; 100 ಕೋಟಿ ರೂ. ಆಫರ್‌ ಮಾಡಿದ್ದರೆ ಲೋಕಾಯುಕ್ತಕ್ಕೆ ದೂರು ಕೊಡಲಿ ಎಂದ ಡಿಕೆಶಿ

DK Shivakumar: ತಮಗೆ 100 ಕೋಟಿ ರೂಪಾಯಿ ಆಫರ್‌ ನೀಡಿದ್ದಾರೆ ಎಂಬ ವಕೀಲ ದೇವರಾಜೇಗೌಡ ಆರೋಪಕ್ಕೆ ಡಿಕೆಶಿ ಗರಂ ಆಗಿದ್ದಾರೆ. ಮೆಂಟಲ್ ಕೇಸ್ ಅವನು. ಆತ ಏನು ಮಾತನಾಡುತ್ತಾನೋ, ಮಾತನಾಡಲಿ. ಏನು ಮಾಡುತ್ತಾನೋ ಮಾಡಲಿ ಎಂದು ಕಿಡಿಕಾರಿದ್ದಾರೆ. ಅಲ್ಲದೆ, ನಾನು ಆಫರ್ ಮಾಡಿದರೆ ದೇವರಾಜೇಗೌಡ ಲೋಕಾಯುಕ್ತಕ್ಕೆ ಹೋಗಿ ಕಂಪ್ಲೇಂಟ್ ಕೊಡಲಿ ಎಂದು ಸವಾಲು ಹಾಕಿದ್ದಾರೆ.

VISTARANEWS.COM


on

DevarajeGowda mental case Rs 100 crore If offered he should file a complaint with Lokayukta says DK Shivakumar
Koo

ಹಾಸನ: ಪ್ರಜ್ವಲ್‌ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ (Absence video) ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಪರವಾಗಿರಲು ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ತಮಗೆ 100 ಕೋಟಿ ರೂಪಾಯಿ ಆಫರ್‌ ನೀಡಿದ್ದಾರೆ ಎಂಬ ವಕೀಲ ದೇವರಾಜೇಗೌಡ (Devarajegowda) ಆರೋಪಕ್ಕೆ ಗರಂ ಆಗಿದ್ದಾರೆ. ಮೆಂಟಲ್ ಕೇಸ್ ಅವನು. ಆತ ಏನು ಮಾತನಾಡುತ್ತಾನೋ, ಮಾತನಾಡಲಿ. ಏನು ಮಾಡುತ್ತಾನೋ ಮಾಡಲಿ ಎಂದು ಕಿಡಿಕಾರಿದ್ದಾರೆ. ಅಲ್ಲದೆ, ನಾನು ಆಫರ್ ಮಾಡಿದರೆ ದೇವರಾಜೇಗೌಡ ಲೋಕಾಯುಕ್ತಕ್ಕೆ ಹೋಗಿ ಕಂಪ್ಲೇಂಟ್ ಕೊಡಲಿ ಎಂದು ಸವಾಲು ಹಾಕಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ನೀವು ಬುದ್ಧಿವಂತರು, ಜಾಣರಿದ್ದೀರಿ. ಆ ದೇವರಾಜೇಗೌಡನಂಥವರು ಯಾರೋ ಏನೋ ಹೇಳುತ್ತಾರೆಂದರೆ ಅದನ್ನು ಹಾಕಿಬಿಡುವುದಾ? ನಮಗೆ ರೆಪ್ಯುಟೇಷನ್ ಇದೆ. ಏನಾದರೂ ಆಧಾರ ಇದ್ದರೆ ಹಾಕಬೇಕು. ತಲೆ ಕೆಟ್ಟ, ಆಸ್ಪತ್ರೆಗೆ ಸೇರಬೇಕಾದವರ ಬಗ್ಗೆ ಮಾತನಾಡುತ್ತೀರಾ ಎಂದು ಮಾಧ್ಯಮದವರನ್ನು ಪ್ರಶ್ನೆ ಮಾಡಿದರು.

ನಾನು ಆಫರ್ ಮಾಡಿದರೆ ದೇವರಾಜೇಗೌಡ ಅವರು ಲೋಕಾಯುಕ್ತಕ್ಕೆ ಹೋಗಿ ಕಂಪ್ಲೇಂಟ್ ಕೊಡಲಿ. ಎಲ್ಲ ಪೆನ್ ಡ್ರೈವ್ ಬಗ್ಗೆ ಮಾತನಾಡಿದ್ದಾರೆ. ಸಂತ್ರಸ್ತೆಯರ ಬಗ್ಗೆ ಯಾರೂ ಏನೂ ಮಾತನಾಡುತ್ತಿಲ್ಲ ಏಕೆ? ಈ ವಿಚಾರದಲ್ಲಿ ನಾನು ಹೆಚ್ಚು ಏನೂ ಮಾತನಾಡಲ್ಲ ಎಂದು ಡಿ.ಕೆ. ಶಿವಕುಮಾರ್‌ ಗರಂ ಆಗಿಯೇ ಹೇಳಿದರು.

ನನ್ನ ಹೆಸರನ್ನು ಕೆಲವರು ಉಪಯೋಗಿಸಿಕೊಳ್ಳುತ್ತಾರೆ‌. ನೀವು ನನ್ನ ಹೆಸರು ಬಳಸಿಕೊಳ್ಳುತ್ತೀರಾ? ನನ್ನ ಹೆಸರು ಬಳಸಿಕೊಂಡರೆ ನಾನು ಯಾಕೆ ತಲೆ ಕೆಡಿಸಿಕೊಳ್ಳಬೇಕು? ಎಂದು ಡಿ.ಕೆ. ಶಿವಕುಮಾರ್‌ ಪ್ರಶ್ನೆ ಮಾಡಿದರು.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ತಮ್ಮ 93ನೇ ಹುಟ್ಟುಹಬ್ಬದ ಪ್ರಯುಕ್ತ ದೇವಸ್ಥಾನಕ್ಕೆ ಹೋಗಿದ್ದಾರೆ, ಇದು ಬಹಳ ಒಳ್ಳೆಯದು. ಅವರ ಹುಟ್ಟುಹಬ್ಬ, ಸಂತೋಷ ಕೊಡಲಿ, ದುಃಖವನ್ನು ದೂರ ಮಾಡಲಿ. ಆರೋಗ್ಯ ಆಯಸ್ಸನ್ನು ದೇವರು‌ ಕರುಣಿಸಲಿ ಎಂದು ನಮ್ಮ ಸರ್ಕಾರದ ಪರವಾಗಿ ಹಾರೈಸುತ್ತೇನೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಅಲ್ಲೋಲ ಕಲ್ಲೋಲ ಸೃಷ್ಟಿಸಿದ ದೇವರಾಜೇಗೌಡ ಬಾಂಬ್‌

ಹಾಸನ ಜೆಎಂಎಫ್‌ಸಿ ಕೋರ್ಟ್‌ ಹೊರಗೆ ಪೊಲೀಸ್‌ ವ್ಯಾನ್‌ನೊಳಗಿದ್ದ ವಕೀಲ ದೇವರಾಜೇಗೌಡ ಮಾಧ್ಯಮದವರೊಂದಿಗೆ ಮಾತನಾಡಿ, ಎಲ್.ಆರ್. ಶಿವರಾಮೇಗೌಡ ಮೂಲ 100 ಕೋಟಿ ರೂಪಾಯಿ ಆಫರ್ ಮಾಡಿದ್ದರು. ಡಿ.ಕೆ. ಶಿವಕುಮಾರ್ ನೇರವಾಗಿ ನನ್ನ ಮಾತನಾಡಿದ್ದಲ್ಲ ಎಂದು ಹೇಳಿದರು.

ನಾಲ್ಕು ಜನ ಮಂತ್ರಿಗಳ ಕಮಿಟಿ ಎಂದು ನಾನು ಹೇಳಿದ್ದೆನಲ್ಲವೇ? ಅವರ ಬಗ್ಗೆ ಹೇಳುತ್ತೇನೆ. ಎನ್‌. ಚಲುವರಾಯಸ್ವಾಮಿ, ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ ಹಾಗೂ ಇನ್ನೊಬ್ಬ ಸಚಿವರನ್ನು ಈ ಪ್ರಕರಣವನ್ನು ಹ್ಯಾಂಡಲ್ ಮಾಡಲು ಬಿಟ್ಟಿದ್ದಾರೆ. ಈಗ ನನ್ನ ಮೇಲೆ ನಿರಂತರವಾಗಿ ಒತ್ತಡ ಹಾಕುತ್ತಿದ್ದಾರೆ. ಆದರೆ, ಅದ್ಯಾವುದಕ್ಕೂ ನಾನು ಒಪ್ಪಲಿಲ್ಲ ಎಂದು ದೇವರಾಜೇಗೌಡ ಹೇಳಿದರು.

ಇಷ್ಟೆಲ್ಲ ದೊಡ್ಡ ಹಗರಣವಾಗಿರುವುದರಿಂದ ಇದರ ಮೂಲಕ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಕೆಟ್ಟ ಹೆಸರು ತರಲು ಹೋಗಿದ್ದರು. ನಮಗೆ ಸುಮಾರು 100 ಕೋಟಿ ರೂಪಾಯಿ ಆಫರ್ ಕೊಟ್ಟಿದ್ದರು. ಅದರಲ್ಲಿ 5 ಕೋಟಿ ರೂಪಾಯಿ ಅಡ್ವಾನ್ಸ್ ಅನ್ನು ಬೋರಿಂಗ್ ಕ್ಲಬ್‌ನ ರೂಂ ನಂಬರ್ 110ಕ್ಕೆ ಕಳಿಸಿದ್ದರು. ಆ ಮೀಟಿಂಗ್‌ಗೆ ಚನ್ನರಾಯಪಟ್ಟಣದ ಎಂ.ಎ. ಗೋಪಾಲಸ್ವಾಮಿಯನ್ನು ಕಳಿಸಿದ್ದರು. ಐದು ಕೋಟಿ ರೂಪಾಯಿ ಕ್ಯಾಶ್‌ ಅನ್ನೂ ಕೊಟ್ಟು ಕಳಿಸಿದ್ದರು. ಈ 100 ಕೋಟಿ ರೂಪಾಯಿ ಆಫರ್ ಮಾಡಿದ್ದು ಡಿ.ಕೆ. ಶಿವಕುಮಾರ್ ಎಂದು ದೇವರಾಜೇಗೌಡ ಆರೋಪಿಸಿದರು.

ಒಪ್ಪದೇ ಇದ್ದಾಗ ಅಟ್ರಾಸಿಟಿ ಕೇಸ್

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳಂಕ ತರಬೇಕು. ರಾಜ್ಯದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ನಾಯಕತ್ವವನ್ನು ಹಾಳು ಮಾಡಬೇಕು ಎಂಬ ಕಾರಣಕ್ಕೆ ನನ್ನನ್ನು ಬಳಸಿಕೊಳ್ಳಲು ನೋಡಿದರು. ಅದಕ್ಕೆ ನಾನು ಒಪ್ಪದೇ ಇದ್ದಾಗ ಮೊದಲಿಗೆ ಅಟ್ರಾಸಿಟಿ ಕೇಸ್ ದಾಖಲು ಮಾಡಿದರು. ಅದರಲ್ಲಿ ಡಾಕ್ಯುಮೆಂಟ್ ಸಿಗಲಿಲ್ಲ ಎಂದು ದೇವರಾಜೇಗೌಡ ಹೇಳಿದರು.

ಇದನ್ನೂ ಓದಿ: HD Revanna Case: ಹೊಳೆನರಸೀಪುರದ ಲೈಂಗಿಕ ದೌರ್ಜನ್ಯ ಕೇಸ್‌; ರೇವಣ್ಣ ವಿರುದ್ಧ ಸಂತ್ರಸ್ತೆ ಹೇಳಿಕೆಯಲ್ಲಿ ಭಾರಿ ಗೊಂದಲ!

ನನ್ನ ಮೇಲೆ ಸುಳ್ಳು ಕೇಸ್‌

ನನ್ನ ಮೇಲೆ ಹಾಕಲಾದ ಅಟ್ರಾಸಿಟಿ ಕೇಸ್‌ನಲ್ಲಿ ಯಾವುದೇ ಪ್ರಯೋಜನ ಆಗಿಲ್ಲವೆಂದು ಮತ್ತೊಬ್ಬಳ ಕೈಯಲ್ಲಿ 354a ಕೇಸ್ ಹಾಕಿಸಿದರು. ಅದೂ ವಿಫಲವಾದ ಮೇಲೆ ರೇಪ್ ಕೇಸ್ ಹಾಕಿಸಿದರು. ಈ ಅತ್ಯಾಚಾರ ಪ್ರಕರಣದಲ್ಲಿಯೂ ಅವರಿಗೆ ಯಾವುದೇ ದಾಖಲೆಗಳು ಸಿಗಲಿಲ್ಲ. ನಾಲ್ಕು ದಿನಗಳ ಕಾಲ ನಿರಂತರವಾಗಿ ವಿಚಾರಣೆ ನಡೆಸಿದ್ದಾರೆ. ಪೆನ್‌ಡ್ರೈವ್‌ ಸಿಕ್ಕಿದ್ದನ್ನು ಕೋರ್ಟ್‌ನಲ್ಲಿ ಸೀಜ್‌ ಮಾಡಿದ್ದಾರೆ ಎಂದು ದೇವರಾಜೇಗೌಡ ಆರೋಪ ಮಾಡಿದ್ದರು.

Continue Reading

ಬೆಂಗಳೂರು

Namma Metro: ಮೆಟ್ರೋಗೆ ಕನೆಕ್ಟ್‌ ಆಗಲಿದೆ ನಮ್ಮ ಯಾತ್ರಿ; ಇನ್ಮುಂದೆ ಆಟೋ ಹಿಡಿಯೋ ಟೆನ್ಷನ್‌ ಇಲ್ಲ

Namma Yatri: ಬೆಂಗಳೂರಿನಲ್ಲಿ ಈಗಾಗಲೇ ಆಟೋ ಸೇವೆ ಮೂಲಕ ಜನಪ್ರಿಯವಾಗಿರುವ ನಮ್ಮ ಯಾತ್ರಿ ಸಂಸ್ಥೆ, ಇದೀಗ ನಮ್ಮ ಮೆಟ್ರೋ ಪ್ರಯಾಣಿಕರಿಗಾಗಿ (Namma Metro) ಬಿಎಂಆರ್‌ಸಿಎಲ್ ( BMRCL) ಜತೆಗೆ ಕೈ ಜೋಡಿಸಲು ಮುಂದಾಗುತ್ತಿದೆ.

VISTARANEWS.COM


on

By

Namma Metro
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮೆಟ್ರೋ (Namma Metro) ಇಳಿದು ಸ್ಟೇಷನ್‌ನಿಂದ (Metro Station) ಹೊರ ಬಂದ ಕೂಡಲೇ ಆಟೋ ಹಿಡಿಯೋದು ದೊಡ್ಡ ಸಮಸ್ಯೆ. ಯಾಕೆಂದರೆ ಕೆಲ ಚಾಲಕರು ಬರಲ್ಲ ಅನ್ನೋದು, ಕೆಲವರು ಜಾಸ್ತಿ ರೇಟು ಕೇಳೋದು ಮೊದಲಾದ ಸಮಸ್ಯೆಗಳನ್ನು ಮೆಟ್ರೋ ಪ್ರಯಾಣಿಕರು ಅನುಭವಿಸುತ್ತಲೇ ಇರುತ್ತಾರೆ. ಮೆಟ್ರೋ ಫೀಡರ್‌ ಬಸ್‌ಗಳು ಇದ್ದರೂ, ಪ್ರಯಾಣಿಕರು ತಾವು ತಲುಪಬೇಕಾದ ಜಾಗಕ್ಕೆ ಹೋಗಲು ಆಗದೆ ಹೆಚ್ಚು ಹಣ ಕೊಟ್ಟು ಆಟೋದಲ್ಲೇ ಪ್ರಯಾಣಿಸಬೇಕಾದ ಪರಿಸ್ಥಿತಿ ಇದೆ. ಮೆಟ್ರೋ ಮಿತ್ರ ಇದ್ದರೂ ಅದು ಹಲವು ದೋಷದಿಂದ ಸೈಡ್‌ಲೈನ್‌ ಆಗಿದೆ. ಸದ್ಯ ಈ ಎಲ್ಲ ಸಮಸ್ಯೆಗಳಿಗೆ ಶೀಘ್ರದಲ್ಲೆ ಪರಿಹಾರ ಸಿಗಲಿದೆ. ಯಾಕೆಂದರೆ ಬೆಂಗಳೂರಿನಲ್ಲಿ ಈಗಾಗಲೇ ಹೆಸರು ಮಾಡಿರುವ ‘ನಮ್ಮ ಯಾತ್ರಿ’ (Namma yatri) ಸಂಸ್ಥೆ ಶೀಘ್ರದಲ್ಲೇ ನಮ್ಮ ಮೆಟ್ರೋ (BMRCL) ಜತೆಗೆ ಒಪ್ಪಂದಕ್ಕೆ ಸಹಿ ಹಾಕಲಿದೆ.

ಮೆಟ್ರೋ ಪ್ರಯಾಣಿಕರಿಗಾಗಿ ಪ್ರಾಯೋಗಿಕ ಅಪ್ಲಿಕೇಶನ್ ಆಧಾರಿತ ಆಟೋ ರಿಕ್ಷಾ ಸೇವೆಯನ್ನು ಪ್ರಾರಂಭಿಸಲಿದೆ. ಮೆಟ್ರೋ ರೈಲು ನಿಲ್ದಾಣಗಳಿಗೆ ಕೊನೆಯ ಮೈಲಿ ಸಂಪರ್ಕ ಸೌಲಭ್ಯ ಕಲ್ಪಿಸಲು ನಮ್ಮ ಯಾತ್ರಿಯಿಂದ ಆಟೋರಿಕ್ಷಾ ಸೇವೆಗಳನ್ನು ಒದಗಿಸಲಾಗುತ್ತದೆ. ಮೆಟ್ರೋ ಪ್ರಯಾಣಿಕರಿಗಾಗಿ ಪ್ರಾಯೋಗಿಕ ಅಪ್ಲಿಕೇಶನ್ ಆಧಾರಿತ ಆಟೋ-ರಿಕ್ಷಾ ಸೇವೆಯನ್ನು ಪ್ರಾರಂಭಿಸಲು ನಮ್ಮ ಯಾತ್ರಿ ಮತ್ತು ಬೆಂಗಳೂರು ಟ್ರಾಫಿಕ್ ಪೊಲೀಸರೊಂದಿಗೆ ಬಿಎಂಆರ್‌ಸಿಎಲ್ ಕೈಜೋಡಿಸಿದೆ. ಮೆಟ್ರೋ ಪ್ರಯಾಣಿಕರಿಗಾಗಿ ಸುರಕ್ಷಿತ, ಕೈಗೆಟುಕುವ ಬೆಲೆಯಲ್ಲಿ ಸೇವೆ ನೀಡಲು ಯೋಜನೆ ರೂಪಿಸುತ್ತಿದೆ.

ಮೂವಿಂಗ್ ಟೆಕ್ ಇನ್ನೋವೇಶನ್ಸ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುತ್ತಿರುವ ನಮ್ಮ ಯಾತ್ರಿ, ಮೇ ಅಂತ್ಯದ ವೇಳೆಗೆ ಇಂದಿರಾನಗರ ಮೆಟ್ರೋ ನಿಲ್ದಾಣದಲ್ಲಿ ಕಿಯೋಸ್ಕ್‌ಗಳನ್ನು ಸ್ಥಾಪಿಸಲು ಚಿಂತಿಸುತ್ತಿದೆ. ಈ ಸೇವೆಯು ಆಟೋ ರಿಕ್ಷಾ ಚಾಲಕರು ‘ಕ್ಯೂ’ ವ್ಯವಸ್ಥೆಯನ್ನು ಬಳಸಿಕೊಂಡು ಮೆಟ್ರೋ ನಿಲ್ದಾಣಗಳಿಂದ ಸೇವೆ ನೀಡುತ್ತಾರೆ. ಸರದಿಯಲ್ಲಿ ಯಾವುದೇ ಗ್ರಾಹಕರು ಇಲ್ಲದಿದ್ದರೆ, ಚಾಲಕರು ಸಾಮಾನ್ಯ ರೈಡ್ ಕೂಡ ತೆಗೆದುಕೊಳ್ಳಬಹುದು.

ಮೊದಲ ಪ್ರಯೋಗವನ್ನು ಇಂದಿರಾ ನಗರ ಮೆಟ್ರೋ ಸ್ಟೇಷನ್‌ನಲ್ಲಿ ನಡೆಯಲಿದೆ. ಇಂದಿರಾನಗರ ಮೆಟ್ರೊ ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ಕಿಯೋಸ್ಕ್‌ಗಳನ್ನು ಸ್ಥಾಪಿಸಲು ಮತ್ತು ಸೇವೆಯನ್ನು ಪ್ರಾರಂಭಿಸಲು ನಮ್ಮ ಯಾತ್ರಿ ಬಿಎಂಆರ್‌ಸಿಎಲ್‌ಗೆ ಪ್ರಸ್ತಾವನೆ ಸಲ್ಲಿಸಿದೆ ಎನ್ನಲಾಗಿದೆ. ಯಶಸ್ಸಿನ ಆಧಾರದ ಮೇಲೆ ಈ ಸೌಲಭ್ಯವನ್ನು ಇತರ ಮೆಟ್ರೋ ನಿಲ್ದಾಣಗಳಿಗೂ ವಿಸ್ತರಿಸಲಾಗುವುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Road Accident : ಬಸ್ ಹತ್ತುವಾಗ ಆಯತಪ್ಪಿ ಬಿದ್ದ ಮಹಿಳೆ; ಚಕ್ರಕ್ಕೆ ಸಿಲುಕಿ ಸಾವು

ಕಳೆದ ವರ್ಷ, ಆಟೋ ರಿಕ್ಷಾ ಚಾಲಕರ ಒಕ್ಕೂಟವು ಲಾಸ್ಟ್ ಮೈಲಿ ಸಂಪರ್ಕ ಸಮಸ್ಯೆಗಳನ್ನು ಪರಿಹರಿಸಲು ಮೆಟ್ರೋ ಮಿತ್ರವನ್ನು ಪ್ರಾರಂಭಿಸಿತು. ಆದರೆ ಸಾಕಷ್ಟು ಕಾರ್ಯಾಚರಣೆಯ ಸವಾಲುಗಳನ್ನು ಎದುರಿಸಿತು. ನಮ್ಮ ಯಾತ್ರಿ ಸೇವೆ ವಿಭಿನ್ನವಾಗಿದ್ದು ಯಶಸ್ವಿಯಾಗುವ ನಿರೀಕ್ಷೆ ಇದೆ ಎಂದರು.

ನಿತ್ಯಾ 40 ಲಕ್ಷ ಮಂದಿ ನಮ್ಮ ಮೆಟ್ರೋಗಳಲ್ಲಿ ಪ್ರಯಾಣಿಸುತ್ತಾರೆ. ಆದರೆ, 134 ಮೆಟ್ರೋ ಫೀಡರ್ ಬಸ್‌ಗಳಲ್ಲಿ 76,000 ಪ್ರಯಾಣಿಕರು ಮಾತ್ರ ಬಳಸುತ್ತಾರೆ. ಸಾಮಾನ್ಯವಾಗಿ ಆಟೋ ರಿಕ್ಷಾ ಚಾಲಕರು ಕಡಿಮೆ ದೂರಕ್ಕೆ ಹೆಚ್ಚಿನ ದರ ವಿಧಿಸುವುದರಿಂದ ಪ್ರಯಾಣಿಕರು ಸಮಸ್ಯೆಗಳನ್ನು ಎದುರಿಸುತ್ತಾರೆ. ಹಿಂದಿನ ಪ್ರಿಪೇಯ್ಡ್ ಆಟೋ ಸೇವೆಗಳು ಹೆಚ್ಚು ಜನಪ್ರಿಯವಾಗದಿರಲು ಇದು ಕೂಡ ಒಂದು ಕಾರಣ. ಹೀಗಾಗಿ ‘ನಮ್ಮ ಯಾತ್ರಿ’ ಜತೆಗೆ ಮೆಟ್ರೋ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಲು ಮುಂದಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಆಹಾರ/ಅಡುಗೆ

Famous Food of Bangalore: ಬೆಂಗಳೂರಿಗೆ ಬಂದಾಗ ಈ ಖಾದ್ಯಗಳ ರುಚಿ ನೋಡಲು ಮರೆಯಬೇಡಿ!

Famous Food of bangalore: ಬೆಂಗಳೂರಿಗೆ ಹೋಗುವ ಪ್ಲ್ಯಾನ್ ಇದ್ದರೆ ಇಲ್ಲಿನ ಕೆಲವು ರುಚಿಕರವಾದ ಖಾದ್ಯವನ್ನು ಸವಿಯಲು ಮರೆಯದಿರಿ. ಹಾಗೆಯೇ ಈ ಖಾದ್ಯಗಳನ್ನು ಮನೆಯಲ್ಲೂ ತಯಾರಿಸಬಹುದು. ಆಹಾರ ಪ್ರಿಯರಿಗೆ ಇಲ್ಲಿದೆ ಉಪಯುಕ್ತ ಮಾಹಿತಿ.

VISTARANEWS.COM


on

By

Famous Food of bangalore
Koo

ಇಡ್ಲಿ (Idli), ದೋಸೆ (dose), ವಿವಿಧ ಬಗೆಯ (Famous Food of Bangalore) ರೈಸ್, ಮೈಸೂರು ಪಾಕ್ (mysore pak) ಸೇರಿದಂತೆ ವಿವಿಧ ಸಿಹಿ ತಿನಿಸುಗಳು ಎಂಥವರ ಬಾಯಲ್ಲೂ ನೀರೂರುವಂತೆ ಮಾಡುತ್ತದೆ. ದಕ್ಷಿಣ ಭಾರತೀಯ (south india) ಪಾಕಪದ್ಧತಿಯು ಸುವಾಸನೆ ಮತ್ತು ವಿವಿಧ ರೆಸಿಪಿಗಳ ರುಚಿಕರ ಸವಿಯಿಂದ ತುಂಬಿರುತ್ತದೆ. ಕರಿಬೇವಿನ ಎಲೆಗಳು, ಹುಣಸೆಹಣ್ಣು, ಹಸಿರು ಮತ್ತು ಕೆಂಪು ಮೆಣಸಿನಕಾಯಿ, ತೆಂಗಿನ ಹಾಲು, ಕರಿಮೆಣಸು ಹೀಗೆ ಬಗೆಬಗೆಯ ಮಸಾಲೆಗಳು ಮತ್ತು ಗಿಡಮೂಲಿಕೆಗಳೊಂದಿಗೆ ಭಕ್ಷ್ಯಗಳನ್ನು ಸಿದ್ಧಪಡಿಸಲಾಗುತ್ತದೆ.

ಬೆಂಗಳೂರಿಗೆ (bengaluru) ಪ್ರಯಾಣ ಮಾಡುವ ಯೋಜನೆ ಇದ್ದರೆ ಇಲ್ಲಿನ ಕೆಲವೊಂದು ಖಾದ್ಯಗಳ (Best dish) ಸವಿಯನ್ನು ನೀವು ಪಡೆಯದೇ ಇದ್ದರೆ ಖಂಡಿತ ನಿಮ್ಮ ಪ್ರಯಾಣ ಪೂರ್ತಿ ಅಲ್ಲ. ಅಂತಹ ಖಾದ್ಯಗಳು ಯಾವುದು ಗೊತ್ತೇ? ಇಲ್ಲಿದೆ ಮಾಹಿತಿ.


ಮಂಗಳೂರು ಬಜ್ಜಿ

ಕರ್ನಾಟಕದ ಪ್ರಸಿದ್ಧ ಖಾದ್ಯಗಳು ಬೀದಿಯ ಮೂಲೆ ಮೂಲೆಯಲ್ಲಿ ಕಂಡುಬರುತ್ತದೆ. ಮಂಗಳೂರು ಬಜ್ಜಿಯನ್ನು ಅಧಿಕೃತ ಮಸಾಲೆಗಳು ಮತ್ತು ಗಿಡಮೂಲಿಕೆಗಳಿಂದ ತಯಾರಿಸಲಾಗುತ್ತದೆ. ಈ ಜನಪ್ರಿಯ ಆಹಾರವನ್ನು ನೀವು ಮನೆಯಲ್ಲಿ ಸುಲಭವಾಗಿ ತಯಾರಿಸಬಹುದು. ಬೆಂಗಳೂರಿನ ಮಂಗಳೂರು ಮೂಲದ ಹೋಟೆಲ್‌ಗಳಲ್ಲಿ ಈ ಬಜ್ಜಿ ಚೆನ್ನಾಗಿರುತ್ತದೆ.

ಹುಳಿ ಮೊಸರಿಗೆ ಅಕ್ಕಿ ಹಿಟ್ಟು ಮತ್ತು ಮೈದಾವನ್ನು ಬೆರೆಸುವ ಮೂಲಕ ಕರಿಬೇವು, ತೆಂಗಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಹಸಿರು ಮೆಣಸಿನಕಾಯಿಯನ್ನು ಸೇರಿಸಿ. ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ, ಸಕ್ಕರೆ, ನೀರು ಮತ್ತು ಬೇಕಿಂಗ್ ಪೌಡರ್ ಹಾಕಿ. 2 ಗಂಟೆಗಳ ಕಾಲ ಹಿಟ್ಟನ್ನು ಸಿದ್ಧಪಡಿಸಿ ಇಟ್ಟು ಬಳಿಕ ಗೋಲಿ ಬಜೆಯನ್ನು ಎಣ್ಣೆಯಲ್ಲಿ ಗರಿಗರಿಯಾಗಿ ಕೆಂಪು ಬಣ್ಣ ಬರುವವರೆಗೆ ಕರಿಯಿರಿ. ಸುವಾಸನೆಯ ರುಚಿಗಾಗಿ ತೆಂಗಿನಕಾಯಿ ಚಟ್ನಿಯೊಂದಿಗೆ ಬಡಿಸಿ.


ಬಿಸಿ ಬೇಳೆ ಬಾತ್

ಈ ಜನಪ್ರಿಯ ದಕ್ಷಿಣ-ಭಾರತೀಯ ಖಾದ್ಯವು ಇತರ ಭಕ್ಷ್ಯಗಳಂತೆ ಅಲ್ಲ. ಹಲವಾರು ದಕ್ಷಿಣ-ಭಾರತೀಯ ರೆಸ್ಟೋರೆಂಟ್ ಗಳಲ್ಲಿ ಮತ್ತು ರಾಜ್ಯದ ಹೊರಗೂ ಲಭ್ಯವಿದೆ. ಈ ಅಧಿಕೃತ ರೆಸಿಪಿ ನಿಜವಾಗಿಯೂ ಕರ್ನಾಟಕದ ವಿಶೇಷತೆಯಾಗಿದೆ. ಕರ್ನಾಟಕ ಶೈಲಿಯ ಬಿಸಿ ಬೇಳೆ ಬಾತ್ ಅನ್ನು ನೀವು ಮನೆಯಲ್ಲಿಯೂ ಪ್ರಯತ್ನಿಸಬಹುದು. ಬೆಂಗಳೂರಿನ ಬಹುತೇಕ ಹೋಟೆಲ್‌ಗಳಲ್ಲಿ ಇದು ಮುಖ್ಯ ಆಹಾರ.

ಅಕ್ಕಿ ಮತ್ತು ಕಡಲೆಕಾಯಿಯನ್ನು 25 ನಿಮಿಷಗಳ ಕಾಲ ನೆನೆಸಿ ಅನಂತರ ಉಪ್ಪು ಸೇರಿಸಿ. ಅಕ್ಕಿ ಮತ್ತು ಕಡಲೆಕಾಯಿಯನ್ನು ಬೇಯಿಸಿ ಮತ್ತು ಅವುಗಳನ್ನು ಪಕ್ಕಕ್ಕೆ ಇರಿಸಿ. ಮುಂದೆ, ಹುಣಸೆಹಣ್ಣನ್ನು ನೆನೆಸಿ ಮತ್ತು ಅದರ ತಿರುಳನ್ನು ಹೊರತೆಗೆಯಿರಿ. ಪ್ರೆಶರ್ ಕುಕ್ ನಲ್ಲಿ ತೊಗರಿ ಬೆಳೆ, ಅರಿಶಿನ ಪುಡಿ ಮತ್ತು ನೀರು, ಎಲ್ಲಾ ಕತ್ತರಿಸಿದ ತರಕಾರಿಗಳು ಮತ್ತು ಉಪ್ಪನ್ನು ಬೆರೆಸಿ. ಈಗ, ಕುಕ್ಕರ್‌ನಲ್ಲಿ ನೆನೆಸಿದ ಅಕ್ಕಿ, ಕಡಲೆಕಾಳು, ಹಿಸುಕಿದ ದಾಲ್ ಮತ್ತು ಹುಣಸೆ ತಿರುಳನ್ನು ಸೇರಿಸಿ ಮತ್ತು ಮಸಾಲೆಯನ್ನು ತಯಾರಿಸಿ. ಬಿಸಿಬೇಳೆ ಬಾತ್ ಮಸಾಲ ಮತ್ತು ನೀರನ್ನು ಬಾಣಲೆಯಲ್ಲಿ ಹಾಕಿ ಬೇಯಿಸಿ ಕುಕ್ಕರ್‌ಗೆ ಸೇರಿಸಿ. ಅದಕ್ಕೆ ತಕ್ಕಂತೆ ಒಣಗಿದ ತೆಂಗಿನಕಾಯಿ ಮತ್ತು ಉಪ್ಪನ್ನು ಸೇರಿಸಿ ಮತ್ತು ಎಲ್ಲವನ್ನೂ ಮಿಶ್ರಣ ಮಾಡಲು ಮರೆಯಬೇಡಿ. ರುಚಿಕರವಾದ ತಡ್ಕಾಕ್ಕೆ ಕರಿಬೇವು, ಮರಾಠಿ ಮೊಗ್ಗು, ಇಂಗು, ಒಣಗಿದ ಕೆಂಪು ಮೆಣಸಿನಕಾಯಿ ಮತ್ತು ಗೋಡಂಬಿ ಸೇರಿಸಿ. ಬಿಸಿಯಾಗಿ ಬಡಿಸಿ ಮತ್ತು ಹುರಿದ ಪಾಪಡ್‌ನೊಂದಿಗೆ ಸವಿಯಿರಿ.


ರಾಗಿ ಮುದ್ದೆ

ಇದು ಕರ್ನಾಟಕದ ‘ಪ್ರೋಟೀನ್ ಬೈಟ್ಸ್’ . ಇದು ಪ್ರಮುಖ ಆಹಾರವಾಗಿದೆ. ತಮಿಳುನಾಡಿನಲ್ಲಿಯೂ ಹೆಚ್ಚಾಗಿ ಕಂಡುಬರುತ್ತದೆ. ಈ ʼಪೌಷ್ಟಿಕ ಚೆಂಡುʼಗಳು ರೈತರನ್ನು ಹಗಲಿನಲ್ಲಿ ಚುರುಕಾಗಿ ಇರಿಸಲು ಸಹಾಯ ಮಾಡುತ್ತದೆ. ನೀವು ಈ ಗರಿಗರಿಯಾದ ಮುದ್ದೆಗಳನ್ನು ನಿಮ್ಮ ಊಟದಲ್ಲಿ ಸೇರಿಸಿಕೊಳ್ಳಬಹುದು. ಒಟ್ಟು 20 ನಿಮಿಷಗಳಲ್ಲಿ ತಯಾರಿಸಬಹುದು. ಬೆಂಗಳೂರಿನ ಮಿಲಿಟರಿ ಹೋಟೆಲ್‌ಗಳಲ್ಲಿ ರಾಗಿ ಮುದ್ದೆ ರುಚಿಕರವಾಗಿ ತಯಾರಿಸುತ್ತಾರೆ.

ಒಂದು ಬಟ್ಟಲಿನಲ್ಲಿ ರಾಗಿ ಹಿಟ್ಟು ಮತ್ತು ನೀರನ್ನು ಬೆರೆಸುವ ಮೂಲಕ ಪ್ರಾರಂಭಿಸಿ. ಮಿಶ್ರಣದಲ್ಲಿ ಯಾವುದೇ ಉಂಡೆಗಳಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಬಾಣಲೆಯಲ್ಲಿ ನೀರು, ತುಪ್ಪ ಮತ್ತು ಉಪ್ಪು ಸೇರಿಸಿ, ನೀರನ್ನು ಕುದಿಸಿ ಮತ್ತು ರಾಗಿ ಹಿಟ್ಟಿನ ಮಿಶ್ರಣವನ್ನು ಕುದಿಯುವ ನೀರಿಗೆ ಸುರಿಯಿರಿ. ದಪ್ಪವಾಗುವವರೆಗೆ ಬೇಯಿಸಿ. ಹಿಟ್ಟು ಸೇರಿಸಿ. ಅದರಲ್ಲಿ ಯಾವುದೇ ಹಿಟ್ಟಿನ ಉಂಡೆಗಳಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಇನ್ನೊಂದು 5 ನಿಮಿಷ ಬೇಯಿಸಿ. ಮಿಶ್ರಣವನ್ನು ಪ್ಲೇಟ್ ಗೆ ವರ್ಗಾಯಿಸಿ, ಬೆರಳುಗಳಲ್ಲಿ ರಾಗಿ ಹಿಟ್ಟಿನ ಚೆಂಡುಗಳನ್ನು ಮಾಡಿ. ಯಾವುದಾದರೂ ಸಾಂಬಾರಿನೊಂದಿಗೆ ಬಡಿಸಿ.


ನೀರ್ ದೋಸೆ

ಕರ್ನಾಟದ ಪ್ರಸಿದ್ಧ ನೀರ್ ದೋಸೆ ದೋಸೆಗಳಲ್ಲೇ ವಿಶಿಷ್ಟವಾಗಿದೆ. ತೆಳುವಾದ ಈ ದೋಸೆ ಕರ್ನಾಟಕದಾದ್ಯಂತ ಜನಪ್ರಿಯ ಉಪಾಹಾರವಾಗಿದೆ. ಮುಖ್ಯವಾಗಿ ಬೆಂಗಳೂರಿನ ಕರಾವಳಿ ರೆಸ್ಟೋರೆಂಟ್‌ಗಳಲ್ಲಿ ನೀರ್‌ ದೋಸೆ ಪ್ರಮುಖ ಆಕರ್ಷಣೆಯಾಗಿದೆ. ಹಿಟ್ಟಿಗೆ ಹುದುಗುವಿಕೆಯ ಅಗತ್ಯವಿಲ್ಲ. ಮನೆಯಲ್ಲೆ ಇದನ್ನು ಸುಲಭವಾಗಿ ಮಾಡಬಹುದು.

ಅಕ್ಕಿಯನ್ನು ರಾತ್ರಿಯಿಡೀ ನೆನೆಸಿ ಅನಂತರ ನಯವಾದ ಪೇಸ್ಟ್ ಆಗಿ ರುಬ್ಬಿ. ಹಿಟ್ಟಿಗೆ ನೀರಿನ ಉಪ್ಪು ಸೇರಿಸಿ ಮತ್ತು ಬಾಣಲೆಯಲ್ಲಿ ಕೆಲವು ಹನಿ ಎಣ್ಣೆಯನ್ನು ಹಾಕಿ,. ತೆಳುವಾಗಿ ಸುರಿಯಿರಿ. ಅದನ್ನು 2 ನಿಮಿಷಗಳ ಕಾಲ ಮುಚ್ಚಳದಿಂದ ಮುಚ್ಚಿ ಮತ್ತು ದೋಸೆಯ ಬದಿಗಳು ಸುಲಭವಾಗಿ ಹೊರಬರುವವರೆಗೆ ಕಾಯಿಸಿ. ತ್ರಿಕೋನದಲ್ಲಿ ಮಡಚಿ, ಚಟ್ನಿ ಅಥವಾ ಸಾಂಬಾರಿನೊಂದಿಗೆ ಸವಿಯಲು ರುಚಿಯಾಗಿರುತ್ತದೆ.


ತಟ್ಟೆ ಇಡ್ಲಿ

ಈ ಪ್ರಸಿದ್ಧ ಖಾದ್ಯವು ಸಾಮಾನ್ಯ ಇಡ್ಲಿಗಳಿಗಿಂತ ದೊಡ್ಡದಾಗಿದೆ ಮತ್ತು ದಪ್ಪವಾಗಿರುತ್ತದೆ. ಬೆಂಗಳೂರು ಮತ್ತು ಮೈಸೂರು ರಾಜ್ಯ ಹೆದ್ದಾರಿಗಳ ಬಳಿ ಜನಪ್ರಿಯವಾಗಿ ಕಂಡುಬರುವ ಈ ಖಾದ್ಯವನ್ನು ನೀವು ತಟ್ಟೆ ಇಡ್ಲಿ ರೆಸ್ಟೋರೆಂಟ್‌ಗಳಲ್ಲಿ ಸವಿಯಬಹುದು. ದಕ್ಷಿಣ ಕರ್ನಾಟಕದ ಪ್ರಮುಖ ತಿಂಡಿ ಇದು.

ಇಡ್ಲಿ ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ನೆನೆಸಿಟ್ಟು ಖಾದ್ಯವನ್ನು ತಯಾರಿಸಿ. ನಯವಾದ ಹಿಟ್ಟನ್ನು ಪಡೆಯುವವರೆಗೆ ರಾತ್ರಿ ರುಬ್ಬಿಕೊಂಡು ಇಡಿ. ಬ್ಯಾಟರ್ ಅನ್ನು ಸ್ಟೀಮರ್ ನಲ್ಲಿ ಸುರಿಯಿರಿ ಮತ್ತು 15-20 ನಿಮಿಷಗಳ ಕಾಲ ಉಗಿ ಮಾಡಿ. ನಿಮ್ಮ ಇಡ್ಲಿಯನ್ನು ಸಾಂಬಾರ್, ತೆಂಗಿನಕಾಯಿ ಚಟ್ನಿ ಅಥವಾ ಒಂದು ಕಪ್ ಕಾಫಿಯೊಂದಿಗೆ ಸವಿಯಲು ರುಚಿಯಾಗಿರುತ್ತದೆ.


ದೊನ್ನೆ ಬಿರಿಯಾನಿ

ಈ ಜನಪ್ರಿಯ ಖಾದ್ಯವನ್ನು ಬೆಂಗಳೂರು ನಗರದಲ್ಲಿ ವ್ಯಾಪಕವಾಗಿ ಸವಿಯಲಾಗುತ್ತದೆ. ಚಿಕನ್ ತುಂಡುಗಳನ್ನು ಸ್ವಚ್ಛಗೊಳಿಸಿ ದೊಡ್ಡ ಬಟ್ಟಲಿನಲ್ಲಿ ಅರಿಶಿನ, ಉಪ್ಪು, ನಿಂಬೆ ರಸ ಮತ್ತು ಮೊಸರು ಸೇರಿಸಿ 30 ನಿಮಿಷಗಳ ಕಾಲ ಮುಚ್ಚಿಡಿ. ಮಿಕ್ಸಿಂಗ್ ಜಾರ್‌ನಲ್ಲಿ ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ ಮತ್ತು ಪುದೀನಾ ಸೊಪ್ಪು ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ. ಬಾಣಲೆಯಲ್ಲಿ, ಎಣ್ಣೆಯನ್ನು ಬಿಸಿ ಮಾಡಿ, ಸಂಪೂರ್ಣ ಮಸಾಲೆಗಳು, ದಾಲ್ಚಿನ್ನಿ ಕಡ್ಡಿ, ಏಲಕ್ಕಿ ಹಾಕಿ ಕುದಿಯಲು ಬಿಡಿ. ಅನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ರೈಸ್ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಮುಚ್ಚಳದಿಂದ ಮುಚ್ಚಿ. ಬಾಣಲೆಯಲ್ಲಿ ನೀರನ್ನು ಕುದಿಸಿ ಮತ್ತು ಕಡಾಯಿಯ ಮುಚ್ಚಳದ ಮೇಲೆ ಇರಿಸಿ, ಮೇಲಿನಿಂದ ಶಾಖವನ್ನು ಒದಗಿಸಲು ಪ್ರಕ್ರಿಯೆಯನ್ನು ಮಾಡಲಾಗುತ್ತದೆ. ನಿಮ್ಮ ದೊನ್ನೆ ಬಿರಿಯಾನಿ ಸಿದ್ಧವಾಗಿದೆ. ಹುರಿದ ಪಾಪಡ್ ಅಥವಾ ಧನಿಯಾ ರೈತಾದೊಂದಿಗೆ ಬಡಿಸಿ ಮತ್ತು ಆನಂದಿಸಿ.


ಮೈಸೂರು ಪಾಕ್

ದಕ್ಷಿಣ ಭಾರತೀಯ ಈ ಸಿಹಿತಿಂಡಿಯು ಅತ್ಯಂತ ಜನಪ್ರಿಯವಾಗಿದೆ. ಇದು ರುಚಿಕರವಾಗಿರುತ್ತದೆ. ಬೆಂಗಳೂರಿನ ಪ್ರಮುಖ ಬೇಕರಿಗಳಲ್ಲಿ ಉತ್ತಮ ದರ್ಜೆಯ ಮೈಸೂರ್‌ ಪಾಕ್‌ ಸಿಗುತ್ತದೆ. ನೀವು ಇದನ್ನು ಒಟ್ಟು 40 ನಿಮಿಷಗಳಲ್ಲಿ ಮಾಡಬಹುದು.

ಇದನ್ನೂ ಓದಿ: Dietary Guidelines: ಕಡಿಮೆ ದೈಹಿಕ ಚಟುವಟಿಕೆ ಇರುವವರಿಗೆ ಯಾವ ರೀತಿಯ ಆಹಾರ ಸೂಕ್ತ?

ದೊಡ್ಡ ಬಟ್ಟಲಿಗೆ ಬೆಸನ್ ಸೇರಿಸುವ ಮೂಲಕ ಪ್ರಾರಂಭಿಸಿ. ಕಡಾಯಿಯಲ್ಲಿ ಎಣ್ಣೆ ಮತ್ತು ತುಪ್ಪವನ್ನು ಸುರಿಯಿರಿ, ಹಿಟ್ಟನ್ನು 3 ಭಾಗಗಳಾಗಿ ವಿಂಗಡಿಸಲು ಮರೆಯಬೇಡಿ. ನೀರಿಗೆ ಸಕ್ಕರೆಯನ್ನು ಸೇರಿಸುವ ಮೂಲಕ ಸಕ್ಕರೆ ಪಾಕವನ್ನು ತಯಾರಿಸಿ. ಸಕ್ಕರೆ ಪಾಕಕ್ಕೆ ಹಿಟ್ಟಿನ ಸ್ವಲ್ಪ ಭಾಗವನ್ನು ಸೇರಿಸಿ ಮತ್ತು ಚೆನ್ನಾಗಿ ಬೆರೆಸಿ. ಹಿಟ್ಟಿನ ಇನ್ನೊಂದು ಭಾಗವನ್ನು ಸೇರಿಸಿ ಮತ್ತು ಪ್ರಕ್ರಿಯೆಯನ್ನು ಪುನರಾವರ್ತಿಸಿ. ಯಾವುದೇ ಉಂಡೆಗಳಿಲ್ಲ ಎಂದು ಖಚಿತಪಡಿಸಿಕೊಳ್ಳಿ ಮತ್ತು ಬಿಸಿ ಮಾಡಿದ ಎಣ್ಣೆ ಮತ್ತು ತುಪ್ಪವನ್ನು ಬಾಣಲೆಗೆ ಸೇರಿಸಿ. ಮಿಶ್ರಣವು ತುಪ್ಪವನ್ನು ಹೀರಿಕೊಂಡ ಬಳಿಕ ಮಿಶ್ರಣವು ದಪ್ಪವಾಗಲು ಪ್ರಾರಂಭಿಸುತ್ತದೆ. ಈ ಮೈಸೂರು ಪಾಕ್ ನ ಮಿಶ್ರಣವನ್ನು ತುಪ್ಪ ಸವರಿದ ಬಾಣಲೆಗೆ ವರ್ಗಾಯಿಸಿ ಐದು ನಿಮಿಷಗಳ ಬಳಿಕ ತುಂಡುಗಳಾಗಿ ಕತ್ತರಿಸಿ ಸವಿಯಿರಿ.

Continue Reading

ಶಿವಮೊಗ್ಗ

Road Accident : ಬಸ್ ಹತ್ತುವಾಗ ಆಯತಪ್ಪಿ ಬಿದ್ದ ಮಹಿಳೆ; ಚಕ್ರಕ್ಕೆ ಸಿಲುಕಿ ಸಾವು

Road Accident : ಸಿಗಂದೂರು ಚೌಡೇಶ್ವರಿ ದರ್ಶನ ಪಡೆದು ಬಸ್‌ ಹತ್ತುವಾಗ ಆಯತಪ್ಪಿ ಬಿದ್ದ ಮಹಿಳೆ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.

VISTARANEWS.COM


on

By

Road Accident
Koo

ಶಿವಮೊಗ್ಗ: ಬಸ್ ಚಕ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ದಾರುಣವಾಗಿ (Road Accident) ಮೃತಪಟ್ಟಿದ್ದಾರೆ. ಶಿವಮೊಗ್ಗದ ಸಾಗರ ತಾಲೂಕಿನ ಅಂಬಾರಗೋಡ್ಲು-ಹೊಳೆಬಾಗಿಲು ಬಳಿ ಘಟನೆ ನಡೆದಿದೆ. ಧಾರವಾಡ ಜಿಲ್ಲೆಯ ಕಲಘಟಗಿ ಮೂಲದ ಮಹಿಳೆ (37) ಎನ್ನಲಾಗಿದೆ.

ಸಿಗಂದೂರು ಚೌಡೇಶ್ವರಿ ದರ್ಶನ ಪಡೆದು ಬರುವಾಗ ಆತುರದಲ್ಲಿ ಕೆಎಸ್ಆರ್‌ಟಿಸಿ ಬಸ್ ಹತ್ತುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಬಸ್‌ ಮುಂದೆ ಚಲಿಸಿದ್ದು, ಚಕ್ರದಡಿ ಸಿಲುಕಿ ಮೃತಪಟ್ಟಿದ್ದಾರೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಇದನ್ನೂ ಓದಿ: Road Accident : ಡಿವೈಡರ್‌ಗೆ ಡಿಕ್ಕಿ ಹೊಡೆದು ಪಕ್ಕದ ಹೆದ್ದಾರಿಗೆ ಹಾರಿದ ಕೆಎಸ್‌ಆರ್‌ಟಿಸಿ ಬಸ್; ಬೈಕ್‌ನಿಂದ ಎಗರಿ ಬಿದ್ದ ಬಾಲಕ ಸಾವು

ವಿಜಯನಗರದಲ್ಲಿ ಬೈಕ್‌ಗಳ ಮುಖಾಮುಖಿ ಡಿಕ್ಕಿ; ಎಗರಿ ಬಿದ್ದ ಬಾಲಕ ಸಾವು

ಬೈಕ್‌ಗಳ ಮುಖಾಮುಖಿ ಡಿಕ್ಕಿಯಾಗಿದ್ದು, ಡಿಕ್ಕಿ ರಭಸಕ್ಕೆ ಬೈಕ್ ಹಿಂದೆ ಕುಳಿತಿದ್ದ ಬಾಲಕ ಎಗರಿ ಬಿದ್ದು ಮೃತಪಟ್ಟಿದ್ದಾನೆ. ಘಟನೆಯಲ್ಲಿ ಮೂವರಿಗೆ ಸಣ್ಣ-ಪುಟ್ಟ ಗಾಯವಾಗಿದೆ. ವಿಜಯನಗರದ ಹರಪನಹಳ್ಳಿ – ಕೂಡ್ಲಿಗಿ ರಸ್ತೆಯ ಹರಾಳು ಕ್ರಾಸ್ ಬಳಿ ಘಟನೆ ನಡೆದಿದೆ. ಕೂಡ್ಲಿಗಿ ತಾಲೂಕಿನ ನಿವಾಸಿ ಮಹಮದ್ (13) ಮೃತ ದುರ್ದೈವಿ.

ಮಹಮದ್‌ ತಂದೆ ಅಸ್ಲಾಂ ಭಾಷಾ ಅವರು ಕೆಎಸ್‌ಆರ್‌ಸಿಟಿ ಬಸ್‌ ಓವರ್ ಟೆಕ್ ಮಾಡಲು ಹೋಗಿದ್ದಾರೆ. ಈ ವೇಳೆ ಬೈಕ್‌ನಲ್ಲಿ ಬರುತ್ತಿದ್ದ ರೇವಣಸಿದ್ದಪ್ಪ ಎಂಬುವವರ ಬೈಕ್‌ಗೆ ಗುದ್ದಿದ್ದಾರೆ. ಪರಿಣಾಮ ಡಿಕ್ಕಿ ರಭಸಕ್ಕೆ ಹಿಂಬದಿ ಕುಳಿತಿದ್ದ ಮಹಮದ್‌ ಹಾರಿ ಬಿದ್ದು ಮೃತಪಟ್ಟಿದ್ದಾನೆ. ಅಸ್ಲಾಂ ಭಾಷಾ, ಮತ್ತೊಬ್ಬ ಪುತ್ರ ಮಹಮದ್ ಫರಾನ್ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಆದರೆ ಮಹಮದ್‌ ತಾಯಿ ಬಸ್ ಚಾಲಕನನ್ನು ದೂರಿದ್ದಾರೆ. ಬಸ್ ಸ್ಪೀಡ್ ಆಗಿ ಬಂದಾಗ ಬೈಕ್ ಬ್ಯಾಲೆನ್ಸ್ ತಪ್ಪಿ ಮತ್ತೊಂದು ಬೈಕ್‌ಗೆ ಡಿಕ್ಕಿಯಾಗಿದೆ. ಬಸ್‌ ಮಗನಿಗೂ ಡಿಕ್ಕಿ ಹೊಡೆದಿದೆ. ನನ್ನ ಮಗನ ಸಾವಿಗೆ ಬಸ್ ಚಾಲಕ ಶಿವಕುಮಾರ್ ಕೂಡಾ ಕಾರಣ ಎಂದು ದೂರು ದಾಖಲಿಸಿದ್ದಾರೆ. ಸದ್ಯ ಈ ಸಂಬಂಧ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
DevarajeGowda mental case Rs 100 crore If offered he should file a complaint with Lokayukta says DK Shivakumar
ಬೆಂಗಳೂರು1 min ago

DK Shivakumar: ದೇವರಾಜೇಗೌಡ ಮೆಂಟಲ್‌ ಕೇಸ್‌; 100 ಕೋಟಿ ರೂ. ಆಫರ್‌ ಮಾಡಿದ್ದರೆ ಲೋಕಾಯುಕ್ತಕ್ಕೆ ದೂರು ಕೊಡಲಿ ಎಂದ ಡಿಕೆಶಿ

Aishwarya Rai stopping blue gown at Cannes 2024
ಬಾಲಿವುಡ್21 mins ago

Aishwarya Rai : ಐಶ್ವರ್ಯಾ ರೈ ಸ್ಟೈಲಿಶ್‌ರನ್ನು ವಜಾ ಮಾಡಿ ಎಂದ ನೆಟ್ಟಿಗರು! ಯಾಕಿಷ್ಟು ಆಕ್ರೋಶ?

Maruti Swift
ಪ್ರಮುಖ ಸುದ್ದಿ23 mins ago

Maruti Swift : ಹೊಸ ಮಾರುತಿ ಸ್ವಿಫ್ಟ್​ ಕಾರಿನಲ್ಲಿದೆ 50ಕ್ಕೂ ಹೆಚ್ಚು ಫೀಚರ್​ಗಳು

RCB vs CSK
ಕ್ರೀಡೆ24 mins ago

RCB vs CSK: 11 ವರ್ಷಗಳ ಹಿಂದಿನ ಇತಿಹಾಸ ಮರುಕಳಿಸಿದರೆ ಆರ್​ಸಿಬಿಗೆ ಇಂದು ಗೆಲುವು ಖಚಿತ

Nuclear test at Pokhran
ವಿಜ್ಞಾನ26 mins ago

Nuclear Test In Pokhran: ಭಾರತ ಮೊದಲ ಪರಮಾಣು ಪರೀಕ್ಷೆ ನಡೆಸಿ ಇಂದಿಗೆ 50 ವರ್ಷ; ಏನಿದು ಸ್ಮೈಲಿಂಗ್‌ ಬುದ್ಧ?

Namma Metro
ಬೆಂಗಳೂರು33 mins ago

Namma Metro: ಮೆಟ್ರೋಗೆ ಕನೆಕ್ಟ್‌ ಆಗಲಿದೆ ನಮ್ಮ ಯಾತ್ರಿ; ಇನ್ಮುಂದೆ ಆಟೋ ಹಿಡಿಯೋ ಟೆನ್ಷನ್‌ ಇಲ್ಲ

Police Station
ದೇಶ41 mins ago

Police Station: ಪೊಲೀಸ್‌ ಸ್ಟೇಷನ್‌ನಲ್ಲೇ ಪತಿ-ಪತ್ನಿ ಸಾವು; ಠಾಣೆಯನ್ನೇ ಸುಟ್ಟರು ಜನ

Milana Nagaraj Anarkali border gown worn
ಸ್ಯಾಂಡಲ್ ವುಡ್1 hour ago

Milana Nagaraj: ಗರ್ಭಿಣಿ ಮಿಲನಾ ನಾಗರಾಜ್‌ ಧರಿಸಿರುವ ಕ್ರಶ್ಡ್ ಅನಾರ್ಕಲಿ ಬಾರ್ಡರ್‌ ಗೌನ್‌ನ ವಿಶೇಷ ಏನು?

Boxer Parveen
ಕ್ರೀಡೆ1 hour ago

Boxer Parveen: ಒಲಿಂಪಿಕ್ಸ್‌ ಕೋಟಾ ಕಳೆದುಕೊಂಡ ಭಾರತದ ಬಾಕ್ಸರ್‌ ಪರ್ವೀನ್‌

Famous Food of bangalore
ಆಹಾರ/ಅಡುಗೆ2 hours ago

Famous Food of Bangalore: ಬೆಂಗಳೂರಿಗೆ ಬಂದಾಗ ಈ ಖಾದ್ಯಗಳ ರುಚಿ ನೋಡಲು ಮರೆಯಬೇಡಿ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ20 hours ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ1 day ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ2 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು2 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ3 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ3 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ4 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20244 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌