Theft Case : ಟೀಯಲ್ಲಿ ನಿದ್ರೆ ಮಾತ್ರೆ ಹಾಕಿ ಚಿನ್ನಾಭರಣ ಲೂಟಿ! - Vistara News

ಕರ್ನಾಟಕ

Theft Case : ಟೀಯಲ್ಲಿ ನಿದ್ರೆ ಮಾತ್ರೆ ಹಾಕಿ ಚಿನ್ನಾಭರಣ ಲೂಟಿ!

Theft Case : ನಯವಾದ ಮಾತಿನಿಂದಲೇ ಮೋಡಿ ಮಾಡುವ ಈ ಲಿವಿಂಗ್‌ ಟುಗೆದರ್‌ ಜೋಡಿಗೆ ವೃದ್ಧರೇ ಟಾರ್ಗೆಟ್‌. ಟೀ‌ ಕುಡಿಯುವ ನೆಪದಲ್ಲಿ ನಿದ್ರೆ ಮಾತ್ರೆ ಹಾಕಿ ಪ್ರಜ್ಞೆ ತಪ್ಪಿಸಿ ಬಳಿಕ ಚಿನ್ನಾಭರಣ ಲೂಟಿ ಮಾಡುತ್ತಿದ್ದವರು ಈಗ ಕಂಬಿ ಹಿಂದೆ ಲಾಕ್‌ ಆಗಿದ್ದಾರೆ.

VISTARANEWS.COM


on

theft case
ಸಾಂದರ್ಭಿಕ ಚಿತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನೀವೇನಾದರೂ ಟೀ-ಕಾಫಿ ಪ್ರಿಯರಾಗಿದ್ದರೆ ಎಚ್ಚರವಾಗಿರಿ. ಯಾಕೆಂದರೆ ಖತರ್ನಾಕ್‌ ಜೋಡಿಯೊಂದು ಟೀ ಕುಡಿಸಿ ಬಳಿಕ ನಿಮ್ಮಲ್ಲಿರುವ ಚಿನ್ನಾಭರಣವನ್ನು ಎಗರಿಸಿ (theft Case) ಪರಾರಿ ಆಗುತ್ತಾರೆ. ಹೀಗೆ ವೃದ್ಧರನ್ನೇ ಟಾರ್ಗೆಟ್‌ ಮಾಡಿ ಕಳವು ಮಾಡುತ್ತಿದ್ದ ಲಿವಿಂಗ್‌ ಟುಗೆದರ್‌ ಜೋಡಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಾರ್ತಿಕ್ ಹಾಗೂ ಮಂಜುಶ್ರೀ ಬಂಧಿತ ಆರೋಪಿಗಳಾಗಿದ್ದಾರೆ. ಇವರಿಬ್ಬರು ವೃದ್ದರನ್ನೇ ಟಾರ್ಗೆಟ್ ಮಾಡುತ್ತಿದ್ದರು. ನಯವಾಗಿ ಮಾತಾಡಿ ವೃದ್ಧೆಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದರು. ಟೀ ಕುಡಿಯುವ ನೆಪದಲ್ಲಿ ಕರೆದು ಬಳಿಕ ಮಾತಿಗಿಳಿಯುತ್ತಿದ್ದರು. ಮಾತನಾಡುತ್ತಲೆ ಟೀ ಅಥವಾ ಕಾಫಿಗೆ ನಿದ್ರೆ ಮಾತ್ರೆಯನ್ನು ಹಾಕಿ ಪ್ರಜ್ಞೆ ತಪ್ಪಿಸುತ್ತಿದ್ದರು. ಟೀ ಕುಡಿದು ಪ್ರಜ್ಞೆ ತಪ್ಪುತ್ತಿದ್ದಂತೆ ಅವರ ಬಳಿ ಇದ್ದ ಚಿನ್ನಾಭರಣ ಕದ್ದು ಪರಾರಿಯಾಗುತ್ತಿದ್ದರು.

theft kartik and manjushree
ಬಂಧಿತ ಆರೋಪಿಗಳು

ಇದೇ ಮಾದರಿಯಲ್ಲಿ ಮಲ್ಲೇಶ್ವರಂನ ಅಂಗಡಿ ಮಾಲೀಕರ ಚಿನ್ನ ಎಗರಿಸಿದ್ದರು. ಈ ಸಂಬಂಧ ಪ್ರಕರಣ‌ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆಯನ್ನು ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಕಾರ್ತಿಕ್‌ ಈ ಹಿಂದೆ ಕೊಲೆ ಹಾಗೂ ಕಿಡ್ನ್ಯಾಪ್ ಪ್ರಕರಣದಲ್ಲಿ ಭಾಗಿಯಾಗಿದ್ದ. ಇತ್ತೀಚೆಗೆ ಜಾಮೀನಿನ ಮೇಲೆ ಹೊರ ಬಂದು ಹೊಸ ಮಾದರಿ ಕೃತ್ಯಕ್ಕೆ ಕೈ ಹಾಕಿದ್ದ.

ಇದನ್ನೂ ಓದಿ: Love Case : ಪ್ರೀತ್ಸೆ ಎಂದು ಹಿಂದೆ ಬಿದ್ದ; ಒಲ್ಲೆ ಎಂದಿದ್ದಕ್ಕೆ ಮಾನಭಂಗ ಮಾಡಿ ಕೊಂದ!

Theft case in Bengaluru
Theft case in Bengaluru

ಲಿವಿಂಗ್‌ ಟುಗೆದರ್‌ ಜೋಡಿಯ ಕಳ್ಳತನ

ಲಿವಿಂಗ್ ಟುಗೆದರ್‌ನಲ್ಲಿದ್ದಾಗ ಜತೆಯಾಗಿ ತಂತ್ರವನ್ನು ರೂಪಿಸುತ್ತಿದ್ದರು. ಕಾರ್ತಿಕ್‌ ವೃದ್ಧರೊಂದಿಗೆ ಮಾತಾಡಿ ಪುಸಲಾಯಿಸಿ ಚಿನ್ನ ಕಳವು ಮಾಡಿ ಮಂಜುಶ್ರೀಗೆ ನೀಡುತ್ತಿದ್ದ. ಮಂಜುಶ್ರೀ ಕದ್ದ ಚಿನ್ನವನ್ನು ಮಾರಾಟ ಮಾಡುತ್ತಿದ್ದಳು.

ಸದ್ಯ ಮಲ್ಲೇಶ್ವರಂ ಪೊಲೀಸರು ಈ ಖತರ್ನಾಕ್‌ ಜೋಡಿಯನ್ನು ಬಂಧಿಸಿದ್ದು, ಸುಮಾರು 6.5 ಲಕ್ಷ ಮೌಲ್ಯದ 115 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ. ಟೀ-ಕಾಫಿಗೆ ಬೆರೆಸುತ್ತಿದ್ದ ನಿದ್ದೆ ಮಾತ್ರೆಯನ್ನು ಕಸಿದುಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮಲ್ಲೇಶ್ವರಂ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪರಿಸರ

Arecanut Research Centre: ಹೊಸ ಅಡಿಕೆ ಸಂಶೋಧನಾ ಕೇಂದ್ರ ಮತ್ತೊಂದು ಮದುವೆ ಛತ್ರ ಆಗದಿರಲಿ!

Arecanut Research Centre: ಇರುವ ಅಡಿಕೆ ಸಂಶೋಧನಾ ಕೇಂದ್ರಗಳಲ್ಲಿ ಅಡಿಕೆ ರೋಗಗಳ ವಿಚಾರದಲ್ಲಿ ಯಾವುದೇ ಮಹತ್ತರ ಸಂಶೋಧನೆ, ಅಧ್ಯಯನಗಳು ನೆಡೆಯದೆ ಇರುವಾಗ, ಮತ್ತೊಂದು ಅಡಿಕೆ ಸಂಶೋಧನಾ ಕೇಂದ್ರ ಕರ್ನಾಟಕಕ್ಕೆ ಬೇಕಾ ಎನ್ನುವುದು ಅಡಿಕೆ ಬೆಳೆಗಾರರ ಮುಂದಿರುವ ಪ್ರಶ್ನೆ.

VISTARANEWS.COM


on

Koo

-ಅರವಿಂದ ಸಿಗದಾಳ್, ಮೇಲುಕೊಪ್ಪ
ನಿಯಮ 377ರ ಅಡಿಯಲ್ಲಿ ಹಳದಿ ರೋಗದ (Arecanut Research Centre) ಹರಡುವಿಕೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರು ಅನುಭವಿಸುತ್ತಿರುವ ನಷ್ಟದ ಕುರಿತು ಲೋಕಸಭೆಯಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರವರು ವಿಷಯ ಪ್ರಸ್ತಾಪಿಸಿ ಗಮನ ಸೆಳೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಹಳದಿ ಎಲೆ ರೋಗ ಸಮಸ್ಯೆ ಬಗ್ಗೆ ಒಂದೇ ಹಂತದಲ್ಲಿ ಪರಿಹಾರ ನೀಡುವ ಮೂಲಕ ಬಿಕ್ಕಟ್ಟನ್ನು ಬಗೆಹರಿಸಲು ಮುಂದಾಗಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಯಿತು. ಈ ರೋಗ ತಡೆಗೆ ಸಂಬಂಧಿಸಿ, ದಕ್ಷಿಣ ಕನ್ನಡದಲ್ಲಿ ಅಡಿಕೆ ಸಂಶೋಧನಾ ಸಂಸ್ಥೆ ಸ್ಥಾಪಿಸಲು ಹಣಕಾಸು ನೆರವನ್ನು ನೀಡಬೇಕು ಎಂದು ಲೋಕಸಭೆಗೆ ಕ್ಯಾಪ್ಟನ್ ಬ್ರಿಜೇಶ್ ಚೌಟ ಮನವಿ ಮಾಡಿದ್ದಾರೆ.

arecanut price
Arecanut Price

ಇನ್ನೊಂದು ಅಡಿಕೆ ಸಂಶೋಧನಾ ಕೇಂದ್ರ ಬೇಕಾ?

ಇರುವ ಅಡಿಕೆ ಸಂಶೋಧನಾ ಕೇಂದ್ರಗಳಲ್ಲಿ ಅಡಿಕೆ ರೋಗಗಳ ವಿಚಾರದಲ್ಲಿ ಯಾವುದೇ ಮಹತ್ತರ ಸಂಶೋಧನೆ, ಅಧ್ಯಯನಗಳು ನೆಡೆಯದೆ ಇರುವಾಗ, ಮತ್ತೊಂದು ಅಡಿಕೆ ಸಂಶೋಧನಾ ಕೇಂದ್ರ ಕರ್ನಾಟಕಕ್ಕೆ ಬೇಕಾ ಎನ್ನುವುದು ಅಡಿಕೆ ಬೆಳೆಗಾರರ ಮುಂದಿರುವ ಪ್ರಶ್ನೆ.
ತೀರ್ಥಹಳ್ಳಿ ಮತ್ತು ಶೃಂಗೇರಿಗಳಲ್ಲಿ ಈಗಾಗಲೇ ಸಂಶೋಧನಾ ಕೇಂದ್ರಗಳಿದ್ದು, ಅಲ್ಲಿ ಅಡಿಕೆಗೆ ಸಂಬಂಧಿಸಿದ ಯಾವ ಮಹತ್ತರವಾದ ಸಂಶೋಧನೆಗಳೂ ನೆಡೆಯುತ್ತಿರುವ ವರದಿಗಳಿಲ್ಲ. ಅದರಲ್ಲೂ ಶೃಂಗೇರಿ ಸಂಶೋಧನಾ ಕೇಂದ್ರದ ಸುತ್ತಮುತ್ತಲಿನ ಅಡಿಕೆ ತೋಟಗಳಿಗೆ ಹಳದಿ ರೋಗ ಬಂದು, ದಶಕಗಳೇ ಕಳೆದು, ಈಗ ಎಲೆ ಚುಕ್ಕಿ ರೋಗವೂ ಜೊತೆಗೂಡಿ ತೋಟಗಳೇ ನಾಶವಾಗಿವೆ. ಶೃಂಗೇರಿ ಕ್ಷೇತ್ರದ ಸುತ್ತಮುತ್ತಲಿನ ಅಡಿಕೆ ಬೆಳೆಗಾರರು ಪರ್ಯಾಯ ಬೆಳೆಯ ದಾರಿ ಹುಡುಕುತ್ತಿದ್ದಾರೆ. ಹಳದಿರೋಗ, ಎಲೆಚುಕ್ಕಿ ರೋಗದ ಬಾಧೆ ತಾಳಲಾರದೆ ಪರ್ಯಾಯ ಕ್ಷೇತ್ರಗಳಲ್ಲಿ ಬದುಕು ಕಟ್ಟಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

ವಿಜ್ಞಾನಿಗಳೆಲ್ಲಿ?

ಅಡಿಕೆ ಎಲೆಚುಕ್ಕಿ, ಹಳದಿ ರೋಗಗಳ ಬಗ್ಗೆ ಎರಡು ವರ್ಷಗಳ ಹಿಂದೆ ಸ್ಥಳೀಯ ಅಡಿಕೆ ಬೆಳೆಗಾರರ ತೀವ್ರ ಒತ್ತಡ ತಂದಾಗ, ಆಗಿನ ರಾಜ್ಯ ಸರಕಾರದ ತೋಟಗಾರಿಕೆ ಸಚಿವರು “ಅಗತ್ಯ ಬಿದ್ದರೆ ಇಸ್ರೇಲ್‌ನಿಂದ ವಿಜ್ಞಾನಿಗಳನ್ನು ಕರೆಸೋಣ. ಅತಿ ಶೀಘ್ರದಲ್ಲಿ ವಿಜ್ಞಾನಿಗಳನ್ನು ಕರೆಸಿ ಎರಡೂ ರೋಗಗಳ ಬಗ್ಗೆ ತ್ವರಿತಗತಿಯಲ್ಲಿ ಅಧ್ಯಯನ, ಸಂಶೋದನೆಗೆ ಒತ್ತು ಕೊಟ್ಟು ಅಡಿಕೆ ರೋಗಗಳಿಗೆ ಪರಿಹಾರ ಕೊಡಿಸುತ್ತೇನೆ” ಎಂದಿದ್ದರು. ಅಡಿಕೆ ಹಳದಿ ರೋಗ, ಎಲೆ ಚುಕ್ಕಿರೋಗಗಳಿಂದ ಶೃಂಗೇರಿ ಪ್ರಾಂತ್ಯದ ಅಡಿಕೆ ತೋಟಗಳು ‘ಕುರುಕ್ಷೇತ್ರದ’ ಬಣ್ಣಕ್ಕೆ ತಿರುಗಿದ್ದ ಕಾಲ ಅದು!
ನುಡಿದಂತೆ ನಡೆದ ಸಚಿವರು ಮೂರು ವಿಜ್ಞಾನಿಗಳನ್ನು ಶೃಂಗೇರಿಯಲ್ಲಿರುವ ಅಡಿಕೆ ಸಂಶೋಧನಾ ಕೇಂದ್ರಕ್ಕೆ ಡೆಪ್ಯೂಟ್ ಮಾಡಿದರು! ಆದರೆ, ಡೆಪ್ಯೂಟ್ ಡ್ರಾಮಾ ಎಷ್ಟು ತಮಾಷೆಯಾಗಿತ್ತು ಅಂದರೆ, ಡೆಪ್ಯೂಟ್ ಆದ ಮೇಲೆ, ಆ ಮೂರು ಜನ ವಿಜ್ಞಾನಿಗಳೊಂದಿಗೆ ರೈತ ಸಂವಾದ ಕಾರ್ಯಕ್ರಮ ನೆಡೆಸಿದಾಗ ತಿಳಿದಿದ್ದು ಮೂವರೂ ವಿಜ್ಞಾನಿಗಳು ಅಡಿಕೆ ತೋಟದ ವಿಚಾರದಲ್ಲಿ ಪ್ರೀ ನರ್ಸರಿ ಮಾಹಿತಿಯೂ ಇಲ್ಲದವರು ಎಂದು! ಮೂವರು ವಿಜ್ಞಾನಿಗಳೂ ಹೊಸಬರು. ಅಡಿಕೆ ವಿಚಾರದ ವೃತ್ತಿ ಅನುಭವ ಇಲ್ಲದವರು. ಕನಿಷ್ಠ ಪಕ್ಷ ಅಡಿಕೆ ತೋಟದ ಕಪ್ಪು ದಾಟಿದ ಅನುಭವವೂ ಇಲ್ಲದವರು! ಇಸ್ರೇಲ್ ಬೇಡ ಭಾರತದಲ್ಲೇ, ಅದರಲ್ಲೂ ಕರ್ನಾಟಕದಲ್ಲೇ ನುರಿತ ಅನುಭವಿ ತಜ್ಞ ವಿಜ್ಞಾನಿಗಳು ಇರಲಿಲ್ವಾ?
ಕೆಲವು ತಿಂಗಳು ಕಳೆಯುವುದರೊಳಗೆ ಬಂದ ಅಧಿಕೃತ ಸುದ್ದಿ ‘ಆ ಮೂವರು ‘ಹೊಸ’ ವಿಜ್ಞಾನಿಗಳನ್ನು ಬೇರೆಡೆಗೆ ವರ್ಗಾಯಿಸಲಾಗಿದೆ’ ಎಂದು. ಅಲ್ಲಿಗೆ ಹಳದಿ, ಎಳೆ ಚುಕ್ಕಿ ಸಂಶೋಧನೆಗಳು, ರೋಗ ಅಧ್ಯಯನಗಳು ಶೃಂಗೇರಿ ಆಶ್ಲೇಷಾ ಮಳೆಯ ನೆರೆಯಲ್ಲಿ ಹುಣಸೇಹಣ್ಣು ಕರಗಿದಂತೆ ಕರಗಿ ತೇಲಿ ಹೋಯಿತು!

Arecanut Price
Arecanut Price

ನರಳುತ್ತಿದೆ ಸಂಶೋಧನೆ

ಲ್ಯಾಬ್ ಇಲ್ಲದ, ವಿಜ್ಞಾನಿಗಳಿಲ್ಲದ, ಸಿಬ್ಬಂದಿ ಇಲ್ಲದ, ಸಂಶೋಧನೆಗೆ ಅನುದಾನವೂ ಇಲ್ಲದೆ ನರಳುತ್ತಿರುವ ತೀರ್ಥಹಳ್ಳಿ ಮತ್ತು ಶೃಂಗೇರಿಯ ಎರಡೂ ಸಂಶೋಧನಾ ಕೇಂದ್ರಗಳನ್ನು ಕರಿ ಕಸ ಗುಡಿಸಿ ಮದುವೆ, ಮುಂಜಿಗಳಗೆ ಬಾಡಿಗೆಗೆ ಕೊಟ್ಟರೆ ಸರ್ಕಾರಕ್ಕೆ ಒಂದಿಷ್ಟು ಆದಾಯ ಬರಬಹುದು ಅಂತ ಅಡಿಕೆ ಬೆಳೆಗಾರರು ಮಾತಾಡಿಕೊಳ್ತಾ ಇದ್ದಾರೆ.
ಈಗಲೂ ಆ ಸಂಶೋಧನಾ ಛತ್ರಗಳಲ್ಲಿ ವರ್ಷಕ್ಕೊಂದೆರಡು ಕೃಷಿ ಸಮಾಲೋಚನೆ, ಮಾಹಿತಿ ಶಿಬಿರಗಳನ್ನು ನೆಡೆಸಿ ರೈತರಿಗೆ ಒಂದು ಪಲಾವ್ ಊಟ ಹಾಕಿಸಲಾಗುತ್ತದೆ! ಮಣ್ಣು ಪರೀಕ್ಷೆಗೆ ಕೊಟ್ಟರೆ, ಹದಿನೆಂಟು ಪ್ಯಾರಾಮೀಟರ್‌ಗಳಲ್ಲಿ ಮೂರು ಪ್ಯಾರಾಮೀಟರ್ ಚಕ್ ಮಾಡುವ ಉಪಕರಣಗಳೂ ಅಲ್ಲಿಲ್ಲ, ಸಿಬ್ಬಂದಿಯೂ ಇಲ್ಲ. ಅನುದಾನ ಬಂದಿದ್ದರಲ್ಲಿ ಖುರ್ಚಿ, ಪೋಡಿಯಂ, ಡೆಸ್ಕ್, ಟೇಬಲ್‌ಗಳನ್ನು ವಾಸ್ತು ಪ್ರಕಾರ ಹಾಕಿ ಮೆಯಿನ್ಟೆಯಿನ್ ಮಾಡಲಾಗುತ್ತಿದೆ!

ಇದನ್ನೂ ಓದಿ: ವಿಸ್ತಾರ ಗ್ರಾಮ ದನಿ: ಅಡಿಕೆ ಬೆಳೆಗಾರರೂ ‘ಇನ್‌ಕಮ್ ಟ್ಯಾಕ್ಸ್ ರಿಟರ್ನ್ಸ್ʼ ಸಲ್ಲಿಸಬೇಕಾ? ಸಲ್ಲಿಸದಿದ್ದರೆ ಏನಾಗುತ್ತದೆ?

ರೋಗ ಯಾವುದು? ಪರಿಹಾರ ಏನು?

ಸಂಶೋಧನೆ, ಅಧ್ಯಯನಗಳು ಮೊದಲು ಆಗಬೇಕಾಗಿದ್ದು ಹಳದಿ ರೋಗ, ಎಲೆ ಚುಕ್ಕಿ ರೋಗಗಳಿಗಲ್ಲ. ಮೊದಲು ಸಂಶೋಧನೆ ಆಗಬೇಕಾಗಿರುವುದು ಅಡಿಕೆ ಸಂಶೋಧನಾ ಕೇಂದ್ರಗಳಿಗೆ ಬಂದಿರುವ ರೋಗ ಯಾವುದು? ಪರಿಹಾರ ಏನು ಎಂದು ನೋಡುವುದಕ್ಕೆ! ಇರುವ ಎರಡು ಅಡಿಕೆ ಸಂಶೋಧನಾ ಕೇಂದ್ರಗಳಿಗೆ ಕೊರೋನಾ, ಡೆಂಗ್ಯು ಬಂದು ನರಳುತ್ತಿರುವಾಗ, ಈಗ ಇನ್ನೊಂದು ಸಂಶೋಧನಾ ಕೇಂದ್ರವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೆರೆಯಲು ಮುಂದಾಗುವುದು, ಅದಕ್ಕೆ ಸ್ಥಳಿಯ ಸಂಸದರು ಒತ್ತಾಯಿಸುವುದು ಸುಮ್ಮನೆ ಹಣ ವ್ಯರ್ಥ ಅನಿಸುತ್ತದೆ. ದಕ್ಷಿಣ ಕನ್ನಡದಲ್ಲಿ ಸಾಕಷ್ಟು ಛತ್ರಗಳಿರುವುದರಿಂದ, ಮತ್ತೊಂದು ಛತ್ರದ ಕಟ್ಟಡ ನಿರ್ಮಾಣ ಬೇಡ ಅನಿಸುತ್ತದೆ! ಬೇಕೇ ಬೇಕು ಅನ್ನುವುದಾದಲ್ಲಿ ಘಟ್ಟದ ಮೇಲಿನ ಸಂಶೋಧನಾ ಛತ್ರಗಳ ಕಾರ್ಯಕ್ಷಮತೆಯನ್ನು ಒಮ್ಮೆ ಸಂಶೋಧನೆ ಮಾಡಿ ತೀರ್ಮಾನ ಮಾಡುವುದು ಒಳ್ಳೆಯದು. ಹೊಸ ಸಂಶೋಧನಾ ಕೇಂದ್ರದ ಹಣದಲ್ಲಿ, ಇರುವ ಸಂಶೋಧನಾ ಕೇಂದ್ರಗಳನ್ನು ಬಲ ಪಡಿಸಿ, ಅಡಿಕೆ ರೋಗಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬಹುದು.

Continue Reading

ಕರ್ನಾಟಕ

DK Shivakumar: ಬೆಂಗಳೂರಿನ ನೈಸ್‌ ರಸ್ತೆ ಬಳಿ ದೇಶದ ಅತಿ ಎತ್ತರದ ಸ್ಕೈಡೆಕ್!

DK Shivakumar: ಬೆಂಗಳೂರಿನಲ್ಲಿ 250 ಮೀ. ಎತ್ತರದ ಸ್ಕೈಡೆಕ್ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ. ವಿರೋಧ ಪಕ್ಷಗಳ ನಾಯಕರು, ಶಾಸಕರು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಈ ವಿಚಾರವನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

VISTARANEWS.COM


on

Opposition MLAs agree to Skydeck near Nice Road will discuss in Cabinet meeting says DCM DK Shivakumar
Koo

ಬೆಂಗಳೂರು: ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಬೆಂಗಳೂರಿನಲ್ಲಿ 250 ಮೀ. ಎತ್ತರದ ಸ್ಕೈಡೆಕ್ ನಿರ್ಮಿಸಲು ಮುಂದಾಗಿದ್ದು, ವಿರೋಧ ಪಕ್ಷಗಳ ನಾಯಕರು, ಶಾಸಕರು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಈ ವಿಚಾರವನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬೆಂಗಳೂರು ಶಾಸಕರ ಸಭೆ ಬಳಿಕ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್, ಸಭೆಯಲ್ಲಿ ಚರ್ಚೆಯಾದ ವಿಚಾರಗಳ ಬಗ್ಗೆ ಶನಿವಾರ ಮಾಹಿತಿ ನೀಡಿದರು.

250 ಮೀಟರ್ ಎತ್ತರದ ಈ ಸ್ಕೈಡೆಕ್‌ಗಾಗಿ 25 ಎಕರೆ ಜಾಗ ಅಗತ್ಯವಿದೆ. ಕೊಮ್ಮಘಟ್ಟ ಹಾಗೂ ಬೆಂಗಳೂರು ವಿವಿ ಬಳಿಯ ಜಾಗವನ್ನು ನೋಡಿದ್ದೆವು. ಬೆಂಗಳೂರು ಬೆಳೆಯುತ್ತಿರುವಾಗ ಬೆಂಗಳೂರು ವಿವಿಯ ಬಳಿ 25 ಎಕರೆ ಭೂಮಿ ವ್ಯರ್ಥ ಮಾಡುವುದು ಬೇಡ, ವಿದ್ಯಾರ್ಥಿಗಳಿಗೆ ತೊಂದರೆಯಾಗಬಹುದು ಎಂದು ಶಾಸಕರು ಅಭಿಪ್ರಾಯಪಟ್ಟರು. ಹೀಗಾಗಿ ಈಗ ನೈಸ್ ರಸ್ತೆಯ ಬಳಿ ಮಾಡಲು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಎಲ್ಲಾ ಶಾಸಕರು ಒಪ್ಪಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: Bengaluru News: ಒಕ್ಕಲಿಗ ಯುವ ಬ್ರಿಗೇಡ್‌ನಿಂದ ಜು.28ರಂದು ʼನಿರ್ಮಲ ಸಹಾಯ ಹಸ್ತʼ ಕಾರ್ಯಕ್ರಮ

ಈ ಜಾಗ ನೈಸ್ ಸಂಸ್ಥೆ ಬಳಿ ಇದೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಸರ್ಕಾರಕ್ಕೆ ನೈಸ್ ಸಂಸ್ಥೆ 200 ಎಕರೆ ಭೂಮಿ ವಾಪಸ್ ನೀಡಬೇಕಿದೆ ಎಂದು ಅಶೋಕ್ ಅವರು ಮಾಹಿತಿ ನೀಡಿದ್ದಾರೆ. ಈ ವಿಚಾರವಾಗಿ ನೈಸ್ ಸಂಸ್ಥೆ ಬಳಿ ಚರ್ಚೆ ಮಾಡುತ್ತೇವೆ. ಈ ಯೋಜನೆಗಾಗಿ 10 ಜಾಗ ಹುಡುಕಲಾಗಿತ್ತು. ಆದರೆ ವಾಯುಸೇನೆ, ವಿಮಾನಯಾನ ಸಚಿವಾಲಯದವರು 20 ಕಿ.ಮೀ ವ್ಯಾಪ್ತಿಯಲ್ಲಿ ಈ ಯೋಜನೆ ಮಾಡಲು ಅವಕಾಶವಿಲ್ಲ ಎಂದು ಹೇಳಿದ್ದರು. ಹೀಗಾಗಿ ನೈಸ್ ರಸ್ತೆ ಬಳಿ ಮಾಡುವ ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.

ಸ್ಕೈಡೆಕ್ ಅನ್ನು ನಗರದ ಹೊರ ಭಾಗಕ್ಕೆ ತೆಗೆದುಕೊಂದು ಹೋದರೆ ಅದರ ಉದ್ದೇಶ ಈಡೇರುವುದೇ ಎಂದು ಮಾಧ್ಯಮಗಳು ಕೇಳಿದಾಗ, ಎಲ್ಲಾ ರೀತಿಯ ಲೆಕ್ಕಾಚಾರವನ್ನು ನಾವು ಹಾಕಿಯೇ ಈ ತೀರ್ಮಾನ ಮಾಡಿದ್ದೇವೆ. ನೈಸ್ ರಸ್ತೆ ಬಳಿ ಮಾಡುವುದರಿಂದ ಪ್ರವಾಸಿಗರು ಮೈಸೂರು, ಕೊಡಗು ಭಾಗಕ್ಕೆ ತೆರಳಲು ಮುಕ್ತವಾದ ಸಂಚಾರ ಮಾರ್ಗವಿರುತ್ತದೆ. ಇನ್ನು ನೈಸ್ ರಸ್ತೆ ಅಗಲೀಕರಣಕ್ಕೂ ಅವಕಾಶ ಇರುವುದರಿಂದ ಇದು ಸೂಕ್ತ ಜಾಗ ಎಂದು ಅಶೋಕ್ ಅವರು ಸಲಹೆ ನೀಡಿದ್ದಾರೆ. ಅವರ ಸಲಹೆಯಲ್ಲೂ ಅರ್ಥವಿದೆ. ಪೆರಿಫೆರಲ್ ರಿಂಗ್ ರಸ್ತೆ ಮಾಡಿದಾಗ ಎಲ್ಲಾ ಭಾಗಗಳಿಂದಲೂ ಇಲ್ಲಿಗೆ ಸಂಪರ್ಕ ಸಾಧಿಸಬಹುದು. ಇವರ ಸಲಹೆಗಳನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದರು.

ಕೆಂಗೇರಿಯಿಂದ ಎಲೆಕ್ಟ್ರಾನಿಕ್ ಸಿಟಿವರೆಗೂ ಮೆಟ್ರೋ ಸಂಪರ್ಕ ಮಾಡಬೇಕಿದೆ. ಇದಕ್ಕೆ ಆರ್ಥಿಕ ಹೊರೆ ಇದ್ದು, ಈ ಭಾಗದಲ್ಲಿ ಅಭಿವೃದ್ಧಿ ಕಡಿಮೆ ಇರುವ ಕಾರಣ ಭೂಮಿ ವಶಕ್ಕೆ ಪಡೆಯಲು ಕಡಿಮೆ ವೆಚ್ಚವಾಗಲಿದೆ ಎಂದು ಈ ಸಲಹೆ ನೀಡಲಾಗಿದೆ. ಆರ್ಥಿಕವಾಗಿ ಎಲ್ಲಿ ನಮಗೆ ಅನುಕೂಲವಾಗುತ್ತದೆ ಎಂದು ಪರಿಶೀಲಿಸಲಾಗುವುದು. ಇದನ್ನು ಸರ್ಕಾರದಿಂದಲೇ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪ ಮಾಡಲಾಗುವುದು ಎಂದು ತಿಳಿಸಿದರು.

ಸುರಂಗ ರಸ್ತೆ

ಸುರಂಗ ರಸ್ತೆ ನಿರ್ಮಾಣದ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದ್ದು, ಮೊದಲು ಎಸ್ಟೀಮ್ ಮಾಲ್‌ನಿಂದ ಸಿಲ್ಕ್ ಬೋರ್ಡ್‌ವರೆಗೆ 18.5 ಕಿ.ಮೀ ಉದ್ದದ ಟನಲ್ ರಸ್ತೆ ಮಾಡಲು ತೀರ್ಮಾನಿಸಲಾಗಿದೆ. ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ, ಟೆಂಡರ್ ಕರೆಯಲಾಗುವುದು. ಈ ರಸ್ತೆ ನಿರ್ಮಾಣದ ವೇಳೆ ಕೆಲವು ಜಾಗಗಳನ್ನು ವಶಕ್ಕೆ ಪಡೆಯಬೇಕಾಗುತ್ತದೆ. ಈ ಎಲ್ಲಾ ವಿಚಾರವಾಗಿ ಶಾಸಕರ ಮುಂದೆ ಪ್ರಸ್ತಾಪ ಮಾಡಿದ್ದು, ಶಾಸಕರು ಈ ಯೋಜನೆಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದರು.

ಇದನ್ನೂ ಓದಿ: Kannada Sahitya Sammelana: ಬೆಂಗಳೂರಿನಲ್ಲಿ 5ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಚಿವ ದಿನೇಶ್ ಗುಂಡೂರಾವ್ ಚಾಲನೆ

ಬೆಂಗಳೂರಿನ ಪೂರ್ವದಿಂದ ಪಶ್ಚಿಮಕ್ಕೆ ಒಂದು ಮಾರ್ಗ ಸಿದ್ಧ ಮಾಡಲಾಗಿದ್ದು, ಮುಂದಿನ ಹಂತಗಳಲ್ಲಿ ತೆಗೆದುಕೊಳ್ಳಲಾಗುವುದು. ಇನ್ನು ಮುಂದಿನ ದಿನಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರ್ಮಾಣವಾಗುವ ಮೆಟ್ರೋ ಮಾರ್ಗಗಳನ್ನು ಡಬಲ್ ಡೆಕ್ಕರ್ ಮೇಲ್ಸೇತುವೆ ಮಾಡಲಾಗುವುದು. ಪಾಲಿಕೆ ಹಾಗೂ ಮೆಟ್ರೋ ಎರಡೂ ಇಲಾಖೆಗಳು ಇದರ ವೆಚ್ಚವನ್ನು ಭರಿಸಲಿವೆ ಎಂದರು.

ಟನಲ್ ರಸ್ತೆ ಜತೆಗೆ 17-18 ಕಡೆಗಳಲ್ಲಿ ಜಾಗ ಹುಡುಕಿದ್ದು, ಸದ್ಯಕ್ಕೆ 100 ಕಿ.ಮೀ ನಷ್ಟು ಸಿಗ್ನಲ್ ಮುಕ್ತ ಕಾರಿಡಾರ್ ಮೇಲ್ಸೇತುವೆ ಮಾಡಲು ಮುಂದಾಗಿದ್ದು, ಇದಕ್ಕಾಗಿ 12 ಸಾವಿರ ಕೋಟಿಯಷ್ಟು ವೆಚ್ಚ ತಗುಲಲಿದೆ. ಇದಕ್ಕಾಗಿ ಟೆಂಡರ್ ಕರೆಯಲು ಸಿದ್ಧತೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ನಗರದ ಹೊರಗೆ ಕಸ ವಿಲೇವಾರಿ

ಇನ್ನು ಕಸ ವಿಲೇವಾರಿಗೆ ಬೆಂಗಳೂರಿನ ಹೊರಭಾಗದ 15-20 ಕಿ.ಮೀ ದೂರ ವ್ಯಾಪ್ತಿಯಲ್ಲಿ ನಾಲ್ಕು ಕಡೆಗಳಲ್ಲಿ ಜಾಗ ಗುರುತಿಸಿ ಅಲ್ಲಿ ಕಸ ವಿಲೇವಾರಿ ಮಾಡಲು ತೀರ್ಮಾನಿಸಲಾಗಿದೆ. ಸರ್ಕಾರಿ ಜಾಗ ಇದ್ದಲ್ಲಿ ಅದನ್ನು ಬಳಸಲಾಗುವುದು. ಇಲ್ಲವಾದರೆ ಖಾಸಗಿ ಜಮೀನುಗಳನ್ನು ಆಯುಕ್ತರು ಖರೀದಿ ಮಾಡಲಿದ್ದಾರೆ. ಕೇಂದ್ರ ಪರಿಸರ ಇಲಾಖೆ ನಿಯಮಾನುಸಾರ ಇದನ್ನು ಮಾಡಲಾಗುವುದು.

ಸಂಚಾರಿ ದಟ್ಟಣೆ ವಿಚಾರವಾಗಿ ಹಳೇ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸಿರುವುದರ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಸಂಪೂರ್ಣ ಆಯ್ಕೆ ನೀಡಲಾಗಿದ್ದು, ಇಂತಹ ಗಾಡಿಗಳನ್ನು ಅವರು ತೆಗೆದುಕೊಂಡು ಯಾರ್ಡ್‌ಗಳಿಗೆ ಹಾಕಿ ಹರಾಜು ಮಾಡಲು ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಆಗಸ್ಟ್ 20ರ ವೇಳೆಗೆ ಕಾವೇರಿ 5ನೇ ಹಂತಕ್ಕೆ ಚಾಲನೆ

ಕಾವೇರಿ 5ನೇ ಹಂತದ ನೀರು ಪೂರೈಕೆ ಯೋಜನೆ ಪ್ರಯೋಗ ಹಂತದಲ್ಲಿದೆ. ಆಗಸ್ಟ್ 15ರಂದು ಇದಕ್ಕೆ ಚಾಲನೆ ನೀಡಲು ತೀರ್ಮಾನಿಸಿದ್ದೆ. ಆದರೆ ಅಧಿಕಾರಿಗಳು ಇನ್ನು ಐದಾರು ದಿನ ಸಮಯಾವಕಾಶ ಕೇಳುತ್ತಿದ್ದು, ಆಗಸ್ಟ್ 20ರ ವೇಳೆಗೆ ನೀರು ನೀಡಲಾಗುವುದು ಎಂದರು.

ವಿಶೇಷ ಅನುದಾನಕ್ಕೆ ಬೇಡಿಕೆ

ಇದೆಲ್ಲದರ ಜತೆಗೆ ಬೆಂಗಳೂರಿನ ಶಾಸಕರು ವಿಶೇಷ ಅನುದಾನಗಳನ್ನು ಕೇಳಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಸಚಿವರ ಜತೆ ಚರ್ಚೆ ಮಾಡಿ ಎಷ್ಟು ಅನುದಾನ ನೀಡಲು ಸಾಧ್ಯವೋ ಅದನ್ನು ನೀಡುತ್ತೇವೆ. ಇಂದಿನ ಸಭೆಯಲ್ಲಿ ಎಲ್ಲರೂ ಉತ್ತಮವಾದ ಸಲಹೆಗಳನ್ನು ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಬಹಳ ಅನುಭವದ ಶಾಸಕರಿದ್ದು, ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ನೀಡಲು ಬಿಚ್ಚುಮನಸ್ಸಿನಿಂದ ಸಲಹೆ ನೀಡಿದ್ದಾರೆ ಎಂದರು.

ಇದನ್ನೂ ಓದಿ: MB Patil: ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣ; ಪರಿಣತರ ಜತೆ ಎಂ.ಬಿ.ಪಾಟೀಲ್‌ ಸಮಾಲೋಚನೆ

ಬ್ರ್ಯಾಂಡ್ ಬೆಂಗಳೂರು ವಿಚಾರವಾಗಿ ಚರ್ಚೆಯಾಗಿದೆ. ಇನ್ನು ಗ್ರೇಟರ್ ಬೆಂಗಳೂರು ವಿಧೇಯಕ ವಿಚಾರವಾಗಿ ಎಲ್ಲಾ ಪಕ್ಷದ ಶಾಸಕರು ಸದನ ಸಮಿತಿ ರಚನೆಗೆ ಮನವಿ ಮಾಡಿದ ಕಾರಣ ಸಮಿತಿ ರಚನೆಗೆ ನಿರ್ಧರಿಸಿದ್ದೇವೆ. ವಿರೋಧ ಪಕ್ಷದ ನಾಯಕರು ಅವರ ಪಕ್ಷದ ಶಾಸಕರ ಹೆಸರನ್ನು ಎಷ್ಟು ಬೇಗ ನೀಡುತ್ತಾರೋ ಅಷ್ಟು ಬೇಗ ಸಮಿತಿ ರಚನೆ ಮಾಡಲಾಗುವುದು ಎಂದರು.

ರಾಗಿಗುಡ್ಡದ ಬಳಿ ಡಬಲ್ ಡೆಕ್ಕರ್ ಮೇಲ್ಸೇತುವೆ ಮಾಡಲಾಗಿದ್ದು, ಈ ಯೋಜನೆ ಅನುಕೂಲವಾಗಿದೆ ಎಂಬ ವರದಿ ಬಂದಿದೆಯೇ ಎಂದು ಕೇಳಿದಾಗ, “ನಾಗ್ಪುರದಲ್ಲಿ ಮಾಡಲಾಗಿರುವ ಡಬಲ್ ಡೆಕ್ಕರ್ ಮೇಲ್ಸೇತುವೆ ಪರಿಶೀಲನೆ ಮಾಡಿದ್ದೆ. ದಕ್ಷಿಣ ಭಾರತದಲ್ಲಿ ನಮ್ಮಲ್ಲೇ ಮೊದಲ ಬಾರಿಗೆ ಇದನ್ನು ಮಾಡಲಾಗಿದೆ. ಅವುಗಳ ಸಾಧಕ ಭಾದಕ ಗಮನಿಸಿದ್ದೇವೆ. ಈಗ ಸಿದ್ಧವಾಗಿರುವ ಮೇಲ್ಸೇತುವೆಯ ಒಂದು ಭಾಗ ಮಾತ್ರ ಚಾಲನೆಯಾಗಿದ್ದು, ಮತ್ತೊಂದು ಭಾಗ ಚಾಲನೆ ಆಗಬೇಕು. ಕೆಲವು ಭಾಗಗಳಲ್ಲಿ ಅಂಡರ್ ಪಾಸ್ ಮಾಡಲು ರಾಮಲಿಂಗಾ ರೆಡ್ಡಿ ಹಾಗೂ ಇತರರು ಸಲಹೆ ನೀಡಿದ್ದು, ಆ ಬಗ್ಗೆ ಪ್ರಸ್ತಾವನೆ ನೀಡುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ಸ್ಕೈಡೆಕ್ ಯೋಜನೆಗೆ ಅಗತ್ಯವಿರುವ ಜಾಗ ಹಾಗೂ ವೆಚ್ಚದ ಬಗ್ಗೆ ಕೇಳಿದಾಗ, ಮೊದಲು ಈ ಯೋಜನೆಯನ್ನು ಕಂಠೀರವ ಕ್ರೀಡಾಂಗಣದ ಎದುರು ಮಾಡಲು ಪ್ರಸ್ತಾವನೆ ನೀಡಿದ್ದರು. ಸಂಚಾರಿ ದಟ್ಟಣೆ ಸಮಸ್ಯೆ ಹೆಚ್ಚಾಗುತ್ತದೆ ಹಾಗೂ ಎಚ್ಎಎಲ್‌ನಿಂದ ಇದಕ್ಕೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಅಲ್ಲಿ ಮಾಡುತ್ತಿಲ್ಲ. ಈ ಯೋಜನೆಗೆ 400-500 ಕೋಟಿ ವೆಚ್ಚವಾಗಲಿದ್ದು, ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿರುವ ಉದ್ದೇಶದಿಂದ ಕನಿಷ್ಠ ಪಕ್ಷ 25 ಎಕರೆ ಜಾಗ ಅಗತ್ಯವಿದೆ ಎಂದು ಅಂದಾಜಿಸಿದ್ದೇವೆ ಎಂದು ತಿಳಿಸಿದರು.

ಬೆಂಗಳೂರು ಕೆರೆಗಳ ವಿಚಾರವಾಗಿ ಕೇಳಿದಾಗ, ಬೆಂಗಳೂರು ಕೆರೆಗಳ ವಿಚಾರವಾಗಿ ಮತ್ತೊಂದು ಸಭೆ ಕರೆಯಲಿದ್ದೇನೆ. ಬಿಡಬ್ಲ್ಯೂಎಸ್ಎಸ್‌ಬಿ ವ್ಯಾಪ್ತಿಯಲ್ಲಿ ಕೆರೆ ಅಭಿವೃದ್ಧಿ ಪ್ರಾಧಿಕಾರ ಮಾಡಿ ಎಲ್ಲಾ ಕೆರೆಗಳಿಗೆ ಶುದ್ಧೀಕರಿಸಿದ ನೀರನ್ನು ಹರಿಸಲಾಗುವುದು. ಆ ಮೂಲಕ ಅಂತರ್ಜಲ ಹೆಚ್ಚಿಸಲಾಗುವುದು ಎಂದು ತಿಳಿಸಿದರು.

ಬಿಬಿಎಂಪಿ ಚುನಾವಣೆ ಸಂಬಂಧ ಚರ್ಚೆ ಆಯಿತಾ, ಚುನಾವಣೆ ಯಾವಾಗ ಮಾಡಬಹುದು ಎಂದು ಕೇಳಿದಾಗ, ನ್ಯಾಯಾಲಯ ಆದೇಶ ನೀಡಿದ ನಂತರ ಖಂಡಿತವಾಗಿ ಚುನಾವಣೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ವಿಜಯೇಂದ್ರ ಅಪ್ರಬುದ್ಧ ರಾಜಕಾರಣಿ

ರಾಹುಲ್ ಗಾಂಧಿ ಪದೇ ಪದೆ ಪರಿಶಿಷ್ಟರ ಬಗ್ಗೆ ಮಾತನಾಡುತ್ತಾರೆ, ಹಾಗಾಗಿ ವಾಲ್ಮೀಕಿ ನಿಗಮದ ಹಗರಣ ಹಾಗೂ ಮುಡಾ ಹಗರಣದ ಬಗ್ಗೆ ಮಾತನಾಡಬೇಕು ಎಂಬ ವಿಜಯೇಂದ್ರ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ರಾಹುಲ್ ಗಾಂಧಿ ಅವರಿಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ. ಹಾಗೆ ನೋಡಿದರೆ ವಾಲ್ಮೀಕಿ ಹಗರಣದಲ್ಲಿ ಬ್ಯಾಂಕ್ ಅಧಿಕಾರಿಗಳು ಭಾಗಿಯಾಗಿರುವುದರಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರು ಮಾತನಾಡಬೇಕು. ಬ್ಯಾಂಕ್‌ಗಳು ಕೇವಲ 2 ಗಂಟೆಗಳಲ್ಲಿ ಸಾಲವನ್ನು ಮಂಜೂರು ಮಾಡಿದ್ದು, ಬ್ಯಾಂಕುಗಳ ಅಧಿಕಾರವನ್ನು ಹೊಂದಿರುವ ನಿರ್ಮಲಾ ಸೀತರಾಮನ್ ಮಾತನಾಡಬೇಕು ಎಂದು ಅವರು ಕೇಳುತ್ತಿಲ್ಲ ಯಾಕೆ?

ವಿಜಯೇಂದ್ರ ಓರ್ವ ಅಪ್ರಬುದ್ಧ ರಾಜಕಾರಣಿ. ಅವರ ಹಗರಣಗಳನ್ನು ನಾವು ಸಧ್ಯದಲ್ಲೇ ಬಹಿರಂಗಪಡಿಸುತ್ತೇವೆ. ಅವರ ಹಗರಣಗಳ ಬಗ್ಗೆ ಬಿಜೆಪಿ ಪಕ್ಷಕ್ಕೂ ಗೊತ್ತಿದೆ. ಅವರ ಅಂತಾರಾಷ್ಟ್ರೀಯ ಮಟ್ಟದಿಂದ ಹಣ ವರ್ಗಾವಣೆಯಾಗಿರುವುದು ಸೇರಿದಂತೆ ಅನೇಕ ವಿಚಾರಗಳಿವೆ. ಅವರ ತಂದೆ ಮುಖ್ಯಮಂತ್ರಿಯಾಗಿದ್ದಾಗ ಏನೆಲ್ಲಾ ಮಾಡಿದ್ದಾರೆ ಎಂದು ಗೊತ್ತಿದೆ. ಅವರ ತಂದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಯಾಕೆ? ವಿಜಯೇಂದ್ರ ಅವರು ಪ್ರಮಾಣಿಕರಾಗಿಲ್ಲ. ಹೀಗಾಗಿ ಅವರು ಈ ವಿಚಾರದಲ್ಲಿ ಮಾತನಾಡುವ ನೈತಿಕತೆ ಹೊಂದಿಲ್ಲ ಎಂದು ತಿಳಿಸಿದರು.

ಮುಡಾ ಹಗರಣದಲ್ಲಿ ಕಾಂಗ್ರೆಸ್ ನಾಯಕರ ಕೈವಾಡವಿದೆ ಎಂಬ ವಿಜಯೇಂದ್ರ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಮುಡಾ ಹಗರಣಗಳನ್ನು ಮಾಡಿರುವುದು ಬಿಜೆಪಿ. ನಮ್ಮ ಮುಖ್ಯಮಂತ್ರಿಗಳು ಹಾಗೂ ಅವರ ಕುಟುಂಬದವರಿಗೂ ಈ ಅಕ್ರಮಕ್ಕೂ ಸಂಬಂಧವಿಲ್ಲ. ಮುಡಾ ಅವರು ಇವರ ಜಮೀನನ್ನು ಒತ್ತುವರಿ ಮಾಡಿಕೊಂಡ ಪರಿಣಾಮ ಮುಖ್ಯಮಂತ್ರಿಗಳ ಕುಟುಂಬದವರು ಮುಡಾ ಸಂಸ್ಥೆಯಿಂದ ಪರಿಹಾರ ಪಡೆಯಲು ಅರ್ಹರಾಗಿದ್ದು, ಅವರು ಪರಿಹಾರ ಪಡೆದಿದ್ದಾರೆ. ಕಾನೂನು ಪ್ರಕಾರವಾಗಿ ಅವರು ಪರಿಹಾರ ಪಡೆದಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬದಲಿ ನಿವೇಶನ ಕೇಳಿದ್ದಾರೆ. ಅದೇ ರೀತಿ ಅನೇಕರು ನಿವೇಶನ ಪಡೆದಿದ್ದಾರೆ.

ಇದನ್ನೂ ಓದಿ: Ghuspaithiya Hindi Movie: ರಮೇಶ್ ರೆಡ್ಡಿ ನಿರ್ಮಾಣದ ʼಘುಸ್ಪೈಥಿಯಾʼ ಹಿಂದಿ ಸಿನಿಮಾ ಆ. 9ರಂದು ತೆರೆಗೆ

ಮುಡಾದಲ್ಲಿ ಅಕ್ರಮ ನಡೆದಿದ್ದರೆ ಅದು ಬಿಜೆಪಿ ಆಡಳಿತ ಅವಧಿಯಲ್ಲಿ ನಡೆದಿದೆ. ಬೊಮ್ಮಾಯಿ ಹಾಗೂ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಅಕ್ರಮ ನಡೆದಿದೆ. ಈ ಕಾರಣಕ್ಕೆ ನಮ್ಮ ಮುಖ್ಯಮಂತ್ರಿಗಳು 2006ರಿಂದ ಮುಡಾ ಅಕ್ರಮ ತನಿಖೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

Continue Reading

ಕರ್ನಾಟಕ

CT Ravi: ಮುಡಾ ಹಗರಣ: ಸಿಎಂ ಸಿದ್ದರಾಮಯ್ಯಗೆ ಬಹಿರಂಗ ಪತ್ರ ಬರೆದ ಸಿ.ಟಿ.ರವಿ; ಇಲ್ಲಿದೆ ಪತ್ರದ ಸಾರಾಂಶ

CT Ravi: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್‌ ಬಿಜೆಪಿ ಸದಸ್ಯ ಸಿ.ಟಿ. ರವಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಇದರಲ್ಲಿ ಸಿದ್ದರಾಮಯ್ಯ ಅವರು ಹೇಗೆ ಹಗರಣ ಎಸಗಿದ್ದಾರೆ ಎಂಬುದರ ಕುರಿತು ಸಿ.ಟಿ.ರವಿ ಅವರು ವಿಸ್ತೃತವಾಗಿ ಹೇಳಿದ್ದಾರೆ. ಪತ್ರದ ಪೂರ್ತಿ ಸಾರಾಂಶ ಇಲ್ಲಿದೆ.

VISTARANEWS.COM


on

CT Ravi
Koo

ಬೆಂಗಳೂರು: ಮುಡಾ ನಿವೇಶನ ಪ್ರಕರಣಕ್ಕೆ (MUDA Site Scam) ಸಂಬಂಧಿಸಿದಂತೆ ಪ್ರತಿಪಕ್ಷಗಳ ಆರೋಪಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಸದನದಲ್ಲಿ ಉತ್ತರ ಕೊಡದಿರುವುದು, ಚರ್ಚೆಗೆ ಅವಕಾಶ ನೀಡದಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೇ, ವಿಧಾನ ಪರಿಷತ್‌ ಬಿಜೆಪಿ ಸದಸ್ಯ ಸಿ.ಟಿ. ರವಿ (CT Ravi) ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಕ್ತ ಹಾಗೂ ಸುದೀರ್ಘ ಪತ್ರ ಬರೆಯುವ ಮೂಲಕ ಮುಡಾ ಪ್ರಕರಣವನ್ನು ವಿಸ್ತೃತವಾಗಿ ಬಹಿರಂಗಗೊಳಿಸಿದ್ದಾರೆ. ಹಾಗಾದರೆ, ಸಿ.ಟಿ.ರವಿ ಪತ್ರದಲ್ಲಿ ಏನಿದೆ? ಇಲ್ಲಿದೆ ಸಂಪೂರ್ಣ ಸಾರಾಂಶ.

ಮಾನ್ಯರೆ…
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತರಾಯಿತ್ವ ಇರುವ ಆಡಳಿತ ಪಕ್ಷ, ಪ್ರತಿಪಕ್ಷಗಳ ಆರೋಪ, ಪ್ರಶ್ನೆಗಳಿಗೆ ಉತ್ತರಿಸುವ ಅತ್ಯುನ್ನತ ವೇದಿಕೆ ವಿಧಾನ ಮಂಡಲವೇ ಅಲ್ಲವೇ. ಅಲ್ಲಿ ಪ್ರತಿಪಕ್ಷಗಳಿಗೆ ಆರೋಪಿಸಲು, ಪ್ರಶ್ನಿಸಲು ಅವಕಾಶ ಕೊಡದೇ ಸದನದ ಹೊರಗೆ ಬಂದು ಮುಡಾ ನಿವೇಶನಕ್ಕೆ ಸಂಬಂಧಿಸಿದಂತೆ ಮತ್ತು ತಮ್ಮ ಸಾರ್ವಜನಿಕ ಬದುಕಿಗೆ ಸಂಬಂಧಿಸಿದಂತೆ ಅರ್ಧ ಸತ್ಯವನ್ನು ಮಾತ್ರ ಹೇಳಿದ್ದೀರಿ. ಪೂರ್ಣ ಸತ್ಯವನ್ನು ಪ್ರಜಾಪ್ರಭುತ್ವದ ಪ್ರಭುಗಳಿಗೆ ಮುಟ್ಟಿಸಲು ಮಾಧ್ಯಮದ ಮೂಲಕ ನಿಮಗೆ ಬಹಿರಂಗ ಪತ್ರ ಬರೆಯುತ್ತಿದ್ದೇನೆ.

ಮುಡಾ ಹಗರಣ

1935ರಲ್ಲಿ ಅಂದಿನ ಮೈಸೂರು ಸರ್ಕಾರ ಕೆಸರೆಗದ್ದೆ ಗ್ರಾಮದ ಸರ್ವೆ ನಂ. 462, 464 ರ ಜಮೀನನ್ನು ಹರಾಜು ಮಾಡುವಾಗ ಪರಿಶಿಷ್ಟ-1 ಎಂದು ಹರಾಜು ಮಾಡಿ ಕೇವಲ ಒಂದು ರೂ. ಕಿಮ್ಮತ್ತು ಕಟ್ಟಿಸಿಕೊಂಡು ಕ್ರಮವಾಗಿ 4 ಎಕರೆ 37 ಗುಂಟೆ ಮತ್ತು 3 ಎಕರೆ 16 ಗುಂಟೆ ಒಟ್ಟು 8 ಎಕರೆಗೂ ಹೆಚ್ಚು ಜಮೀನನ್ನು ಜವರ ಉರುಫ್ ನಿಂಗ ಎಂಬುವವರಿಗೆ ನೀಡಿದೆ. ಪರಿಶಿಷ್ಟ -1 ಅಂದರೆ ವಿಶೇಷವಾಗಿ ಪರಿಶಿಷ್ಟ ಜನಾಂಗಕ್ಕೆ ಕಡಿಮೆ ಕಿಮ್ಮತ್ತಿನಲ್ಲಿ ನೀಡಿರುವುದು ಇದು ಪಿಟಿಸಿಎಲ್ ಆಕ್ಟ್ ವ್ಯಾಪ್ತಿಗೆ ಬರುವುದಿಲ್ಲವೇ?

CT Ravi

1968 ರಲ್ಲಿ ಜವರ ಉರುಫ್ ನಿಂಗ ಅವರ ಮೂರು ಮಕ್ಕಳಲ್ಲಿ ಇಬ್ಬರು ಮಕ್ಕಳಾದ ಮಲ್ಲಯ್ಯ ಮತ್ತು ದೇವರಾಜು ಇವರು 300 ರೂ.ಗಳಿಗೆ ಮತ್ತೊಬ್ಬ ಸಹೋದರ ಮೈಲಾರಯ್ಯನವರಿಗೆ ಸರ್ವೆ ನಂ. 464, 462ರ ಜಮೀನಿನ ಹಕ್ಕು ಖುಲಾಸೆ ಪತ್ರ ನೋಂದಣಿ ಇಲಾಖೆ ಮುಖಾಂತರವೇ ನೋಂದಣಿ ಮಾಡಿಕೊಟ್ಟಿರುವುದು ಸತ್ಯವಲ್ಲವೇ? ಇದಕ್ಕೆ ಸಂಬಂಧಿಸಿದಂತೆ ಎಂ.ಆರ್. ದಾಖಲೆಗಳನ್ನು ಪರಿಶೀಲಿಸಬಹುದಾಗಿದ್ದು ಜಮೀನಿನ ವಾರಸುದಾರರು ಮೈಲಾರಯ್ಯ ಮತ್ತು ಅವರ ಕುಟುಂಬಕ್ಕೆ ಸೇರಿರುವುದಾಗಿತ್ತದೆ.

1992 ರಲ್ಲಿ ಮುಡಾ 4/1 ನೋಟಿಫಿಕೇಶನ್ ಆಗಿದ್ದು ನಂತರ 1997 ರ ಸಾಲಿನಲ್ಲಿ 6/1 ನೋಟಿಫಿಕೇಶನ್ ಆಗಿರುವುದು ಸತ್ಯವಲ್ಲವೇ? ನೀವು ವಿಲೇಜ್ ಮ್ಯಾಪ್ ತೋರಿಸಿ ಈ ಜಮೀನು ಗ್ರಾಮದ ಅಂಚಿನಲ್ಲಿ ಬರುತ್ತದೆ ಎಂದು ಅರ್ಧಸತ್ಯವನ್ನು ಹೇಳಿದ್ದೀರಿ, ಆದರೆ ಲೇಔಟ್ ಪ್ಲಾನ್‌ನಲ್ಲಿ ಲೇಔಟ್‌ನ ಮಧ್ಯದಲ್ಲೇ ಈ ಜಮೀನು ಬಂದರೂ ತಪ್ಪು ಮಾಹಿತಿ ನೀಡಿ ಡಿ ನೋಟಿಫಿಕೇಶನ್ ಮಾಡಲಾಗಿದೆ. ಆ ಸಂದರ್ಭದಲ್ಲಿ ತಾವು ಉಪಮುಖ್ಯಮಂತ್ರಿ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು ನಿಜವಲ್ಲವೇ? ಆರ್.ಟಿ.ಸಿ. ಸ್ವಾಧೀನದ ಕಾಲಂನಲ್ಲಿ ಸರ್ವೇ ನಂ. 464 ಮುಡಾ ಎಂದಿರುವುದು ಸತ್ಯವಲ್ಲವೇ?

1999ರಿಂದ 2003ರವರೆಗೂ ಮುಡಾದವರು ಇಂಡೀಕರಣ ಮಾಡಿಸಿದ್ದು, ಅದರಲ್ಲಿ ಭೂ ಸ್ವಾಧೀನದಾರರು ಮೂಡಾ ಎಂದೇ ಇರುತ್ತದೆ. 2003 ರಲ್ಲಿ 35 ವರ್ಷಗಳ ಹಿಂದೆ ಮರಣ ಹೊಂದಿದ ಜವರ ಉರುಫ್ ನಿಂಗ ಇವರ ಹೆಸರಿಗೆ ಮರುಸ್ಥಾಪನೆ ಮಾಡಿಸಿ ನಂತರ ದೇವರಾಜುರವರ ಹೆಸರಿಗೆ ವರ್ಗಾವಣೆ ಮಾಡಿಸಿರುತ್ತಾರೆ. 2004 ಮತ್ತು 2005ರ ಸಾಲಿನ ಆರ್.ಟಿ.ಸಿ.ಯಲ್ಲಿ ಮಾತ್ರ ಕ್ರಮವಾಗಿ ದೇವರಾಜ ಮತ್ತು ಮಲ್ಲಿಕಾರ್ಜುನಸ್ವಾಮಿಯವರ ಹೆಸರು
ಇದೆ. ಈ ಸಂದರ್ಭದಲ್ಲಿಯೂ ತಾವು ಎರಡನೇ ಬಾರಿ ಉಪಮುಖ್ಯಮಂತ್ರಿ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು ನಿಜವಲ್ಲವೇ?

CT Ravi
CT Ravi

2006 ರಿಂದ ನಿರಂತರವಾಗಿ ಇಂದಿನವರೆಗೂ ಆರ್.ಟಿ.ಸಿ.ಯಲ್ಲಿ ಭೂಸ್ವಾಧೀನದಾರರ ಹೆಸರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಎಂದು ಇರುವುದು ಸತ್ಯವಲ್ಲವೇ? 2003 ರಿಂದಲೇ ಈ ಜಾಗದ ನಿವೇಶನ ಹಂಚಿಕೆಯಾಗಿ 12 ಕ್ಕೂ ಹೆಚ್ಚು ಜನರಿಗೆ ನಿವೇಶನ ಹಂಚಿರುವುದು ಸತ್ಯವಲ್ಲವೇ?

ಟೆಂಡರ್‌, ನಕ್ಷೆ ಪರಿಶೀಲಿಸಿ

ದಿನಾಂಕ-27-4-2001ರ ಕಂಟ್ರಾಕ್ಟ್ ಅಗ್ರಿಮೆಂಟ್‌ನಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ದೇವನೂರು ಬಡಾವಣೆ ಅಭಿವೃದ್ಧಿ ಪಡಿಸಲು ಎಲ್ & ಟಿ ಕಂಪೆನಿಗೆ ಗುತ್ತಿಗೆ ನೀಡಿದ್ದು, ಟೆಂಡರ್ ಮೊತ್ತ 11,68,86,652/-ರೂಗಳಾಗಿದ್ದು ಕಾಮಗಾರಿ ಪ್ರಾರಂಭದ ದಿನಾಂಕ-18-5-2001 ಆಗಿದ್ದು ಕಾಮಗಾರಿ ಮುಕ್ತಾಯದ ದಿನಾಂಕ -17-5-2003 ಆಗಿರುತ್ತದೆ. ಅಂದರೆ ನಿಮ್ಮ ಭಾವಮೈದುವ ಜಮೀನು ಖರೀದಿಸುವ ಮೊದಲೇ ಸರ್ವೇ ನಂ. 464 ರ 3 ಎಕರೆ 16 ಗುಂಟೆ ಜಮೀನಿನಲ್ಲಿ ರಸ್ತೆ, ಪಾರ್ಕು, ನಿವೇಶನಗಳನ್ನಾಗಿ ಅಭಿವೃದ್ಧಿಪಡಿಸಿರುವುದು ಸತ್ಯವಲ್ಲವೇ? ಇದಕ್ಕೆ ಸಂಬಂಧಿಸಿದಂತೆ ಬಡಾವಣೆ ನಕ್ಷೆ, ಕಾಮಗಾರಿ ಟೆಂಡರ್, ಕಾಮಗಾರಿ ಗುತ್ತಿಗೆ ಪರಿಶೀಲಿಸಬಹುದು.

ನಿಮ್ಮ ಭಾವಮೈದುನ ಖರೀದಿಸುವುದಕ್ಕೆ ಮುಂಚಿತವಾಗಿಯೇ ಅಭಿವೃದ್ಧಿಗೊಂಡು ನಿವೇಶನ ಹಂಚಿಕೆಯಾದಂತಹ ಸರ್ವೆ ನಂ. 464 ರ 3 ಎಕರೆ 16 ಗುಂಟೆ 2004 ಕೃಷಿ ಜಮೀನಾಗಿ ಕಾಣಿಸಿದ್ದು ಹೇಗೆ? ಮತ್ತು ಸ್ಥಳಪರಿಶೀಲಿಸದೆಯೇ ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳು ಅನ್ಯಕಾಂತ ಮಾಡಲು ಪ್ರಭಾವ ಬೀರಿದ ವ್ಯಕ್ತಿ ತಾವೇ ಅಲ್ಲವೇ? ಆಗಲೂ ಸಹ ತಾವು ಉಪಮುಖ್ಯಮಂತ್ರಿ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ.

ನಿಮ್ಮ ಭಾವಮೈದುನ ಮಲ್ಲಿಕಾರ್ಜುನ ಸ್ವಾಮಿ ಈ ಜಮೀನು ಖರೀದಿಸುವ ಸಂದರ್ಭದಲ್ಲಿ ನೀಡಿರುವ ವಿಳಾಸ ಮನೆ ನಂ. 1245, ಟಿ.ಕೆ. ಲೇಔಟ್, 4 ನೇ ಹಂತ, 3 ನೇ ಕ್ರಾಸ್, ಕುವೆಂಪುನಗರ, ಮೈಸೂರು ನಗರ ಈ ವಿಳಾಸವು ತಾವು ಈ ಹಿಂದೆ ವಾಸ ಮಾಡುತ್ತಿದ್ದ ಮನೆಯ ವಿಳಾಸವಲ್ಲವೇ?

ಮೈಲಾರಯ್ಯ ಮತ್ತು ಮಕ್ಕಳು ವಾರಸುದಾರರು ಆಗಿದ್ದರೂ ಸಹ ಎಂ.ಆರ್. ಪರಿಶೀಲಿಸದೇ ನಿಧನ ಹೊಂದಿ 35 ವರ್ಷಕ್ಕೂ ಹೆಚ್ಚುಕಾಲವಾಗಿದ್ದರೂ ಸಹ ಜವರ ಉರುಫ್ ನಿಂಗ ಅವರ ಹೆಸರಿಗೆ ಮರುಸ್ಥಾಪಿಸಿರುವುದು ಮತ್ತು ಜೆ. ದೇವರಾಜು ಹೆಸರಿಗೆ ಖಾತೆ ವರ್ಗಾವಣೆ ಮಾಡಿರುವುದು ನಿಯಮ ಬಾಹಿರವಲ್ಲವೇ? ಜೆ. ದೇವರಾಜುರವರು ಸರ್ಕಾರಿ ಉದ್ಯೋಗಿಯಾಗಿದ್ದರೂ ಸಹ ತಪ್ಪು ಮಾಹಿತಿ ನೀಡಿ ನಾನು ರೈತ, ಈ ಜಮೀನಿನಲ್ಲಿ ತೆಂಗಿನ ಸಸಿಗಳು ಸೇರಿದಂತೆ ಮಾವು ಇತ್ಯಾದಿ ಬೆಳೆಗಳು ಇದ್ದು, ನನಗೆ ಇದನ್ನು ಬಿಟ್ಟರೆ ಇನ್ಯಾವುದೇ ಆದಾಯವಿಲ್ಲವೆಂದು ಸುಳ್ಳು ಮಾಹಿತಿ ನೀಡಿ ತಮ್ಮ ಪ್ರಭಾವದಿಂದ ಡಿ ನೋಟಿಫಿಕೇಶನ್ ಮಾಡಿಸಲಾಗಿದೆ ಎಂಬ ಆರೋಪವಿದೆ.

ಸತ್ಯದ ಅರಿವು ಇರಲಿಲ್ಲವೇ?

2010 ರಲ್ಲಿ ತಮ್ಮ ಧರ್ಮಪತ್ನಿ ಪಾರ್ವತಮ್ಮನ ಹೆಸರಿಗೆ ತಮ್ಮ ಭಾವಮೈದುನ ದಾನಪತ್ರ ಮಾಡುವಾಗಲೇ ಮುಡಾ ಸರ್ವೇ ನಂ 464 ರ 3 ಎಕರೆ 16 ಗುಂಟೆ ಜಾಗವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿದ ಸತ್ಯದ ಅರಿವು ತಮಗಿರಲಿಲ್ಲವೇ?

2013ರ ಚುನಾವಣಾ ಪ್ರಮಾಣ ಪತ್ರದಲ್ಲಿ ನೀವು ಈ ಸತ್ಯವನ್ನು ಮುಚ್ಚಿಟ್ಟಿದ್ದೀರಿ. ಅದಕ್ಕೆ ನೀವು ಕೊಟ್ಟಿರುವ ಉತ್ತರ ಕಣ್ಣಪ್ಪಿನಿಂದ ಹೀಗೆ ಆಗಿದೆ ಎಂದಿದ್ದೀರಿ. ಆರ್.ಪಿ. ಆಕ್ಟ್ ಸೆಕ್ಷನ್ 125 ಎ ಪ್ರಕಾರ ಇದು ಶಿಕ್ಷಾರ್ಹ ಅಪರಾಧವಲ್ಲವೇ? (6 ತಿಂಗಳು ಸಜೆ ಮತ್ತು ದಂಡ) 2014 ರಲ್ಲಿ ನಿಮ್ಮ ಧರ್ಮಪತ್ನಿಯವರು ನನ್ನ ಜಮೀನು ಅತಿಕ್ರಮಣವಾಗಿದೆ ಎಂದು ದೂರು ನೀಡಿದಾಗ ಮುಡಾದವರು ಪರ್ಯಾಯವಾಗಿ ಅಂದಿನ 15 ಲಕ್ಷ ಮಾರುಕಟ್ಟೆ ದರದಂತೆ ಕೊಡುತ್ತೇವೆಂದು ಪತ್ರ ಬರೆದಿದ್ದು ನಿಜವಲ್ಲವೇ?

2010 ರಲ್ಲಿ ನಿಮ್ಮ ಧರ್ಮಪತ್ನಿಯವರಿಗೆ ದಾನಪತ್ರ ಆಗುವಾಗ ಅನ್ಯಕ್ರಾಂತವಾಗಿರುವ ಭೂಮಿಯನ್ನು ತಾವು ತಮ್ಮ 2018 ರ ಚುನಾವಣಾ ಪ್ರಮಾಣಪತ್ರದಲ್ಲಿ ಅನ್ಯಕಾಂತವಾದ ಜಾಗವನ್ನು ಕೃಷಿ ಭೂಮಿ ಹಾಗೂ ಇದರ ಮೌಲ್ಯ 25 ಲಕ್ಷ ರೂ. ಎಂದು ನಮೂದಿಸಲಾಗಿದೆ. 2023 ರ ಚುನಾವಣಾ ಪ್ರಮಾಣಪತ್ರದಲ್ಲಿ ಇದೇ ಜಾಗದ ಮೌಲ್ಯವನ್ನು 8 ಕೋಟಿಯೆಂದು ನಮೂದಿಸಿದ್ದೀರಿ.

ಈಗ ಮುಖ್ಯಮಂತ್ರಿಗಳಾಗಿರುವ ತಾವು ನಿವೇಶನವನ್ನು ವಾಪಸ್ ನೀಡಲು ಕೇಳುತ್ತಿರುವ ಮೌಲ್ಯ 65 ಕೋಟಿ ರೂ.ಗಳು. ಈಗ ನೀವು ಅವರ ಕುಟುಂಬ ಒಡೆದರೂ ಎಂದು ಹೇಳಿದ್ದೀರಿ ಮೈಲಾರಯ್ಯ ಮತ್ತು ಅವರ ಮಕ್ಕಳಿಗೆ ಸೇರಬೇಕಾದ ಆಸ್ತಿಯನ್ನು ಜೆ. ದೇವರಾಜು ಹೆಸರಿಗೆ ಖಾತೆ ಮಾಡಿಸಿ ಅಲ್ಲಿಂದ ನಿಮ್ಮ ಭಾವಮೈದುನ ನಂತರ ನಿಮ್ಮ ಧರ್ಮಪತ್ನಿ ಹೆಸರಿಗೆ ವರ್ಗಾಯಿಸಿಕೊಂಡಿರುವುದು ಮೈಲಾರಯ್ಯರವರ ಕುಟುಂಬದವರಿಗೆ ಮಾಡಿದ ಮೋಸವಲ್ಲವೇ?

UDD 08 TTP 2014, Dated 11-2-2015 ರಂತೆ ಅಧಿಸೂಚನೆ ಹೊರಡಿಸಿ, 50:50ರ ನಿಯಮ ರೂಪಿಸಿದ್ದು ನಿಯಮದಂತೆ ನಿವೇಶನ ಹಂಚಿಕೆ ಮಾಡುವಾಗ ಸರ್ಕಾರದ ಅನುಮತಿ ಪಡೆಯಲಾಗಿದೆಯೇ? ನಿಮ್ಮ ಧರ್ಮಪತ್ನಿ ಪಾರ್ವತಮ್ಮನವರಿಗೆ 50:50 ನಿಯಮದಂತೆ ನಿವೇಶನ ಪಡೆಯಲು ಸರ್ಕಾರದ ಅನುಮತಿ ಕಡ್ಡಾಯವಾಗಿದ್ದು, ಸರ್ಕಾರ ಅನುಮತಿ ನೀಡಿದೆಯೇ? ಇದೇ ರೀತಿ ರಾಜ್ಯದಲ್ಲಿ ಜಮೀನು ಕಳೆದುಕೊಂಡು ಪರಿಹಾರ ಪಡೆಯದೇ ಇರುವ ಪ್ರಕರಣಗಳಿಗೆ 50:50 ನಿಯಮದ ಅನುಪಾತದಂತೆ ನಿವೇಶನ ನೀಡಲಾಗಿದೆಯೇ?

ಸಿಬಿಐ ತನಿಖೆಗೆ ವಹಿಸಿ

ನೀವು ನನ್ನ 40 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಕಪ್ಪು ಚುಕ್ಕೆ ಇಲ್ಲ ಎಂದು ಹೇಳಿದ್ದೀರಿ. ನಮಗೆ ತಿಳಿದಿರುವಂತೆ ಸುಮಾರು 70 ಕ್ಕೂ ಹೆಚ್ಚು ದೂರುಗಳು ಲೋಕಾಯುಕ್ತರ ಮುಂದೆ ನಿಮ್ಮ ಮೇಲೆ ದಾಖಲಾಗಿದೆ. ಈ ತನಿಖೆ ನಿಷ್ಪಕ್ಷಪಾತವಾಗಿ ನಡೆದರೆ ಸತ್ಯಾಸತ್ಯತೆ ಹೊರಗೆ ಬರುತ್ತದೆ.

ಹಿಂದಿನ ತಮ್ಮ ಸರ್ಕಾರದ ಆರಂಭದ ಅವಧಿಯಲ್ಲಿ ಇಬ್ಬರು ಇಂಜಿನಿಯರ್‌ಗಳ ಮನೆಯಲ್ಲಿ ನೂರುಕೋಟಿಗಟ್ಟಲೇ ಹಣ ಸಿಕ್ಕಿದ್ದು, (ಡಿನೋಟಿಫಿಕೇಶನ್ ಸಂದರ್ಭದಲ್ಲಿ) ಹಾಗೂ ಇಂದಿನ ಪ್ರಸ್ತುತ ಸರ್ಕಾರದ ಆರಂಭದಲ್ಲಿಯೇ ಇಬ್ಬರು ಪ್ರಭಾವಿಗಳ ಮನೆಯಲ್ಲಿ ಕೋಟಿಗಟ್ಟಲೆ ಹಣ ಸಿಕ್ಕಿದ್ದು, ಎಸ್‌ಹೆಚ್‌ಡಿಪಿ ಟೆಂಡರ್ ಪ್ಯಾಕೇಜ್ ಮಾಡಿ ನಾಲ್ಕು ಸಾವಿರ ಕೋಟಿ ಟೆಂಡರ್ ನಿಗದಿಪಡಿಸಿ ಬೇಕಾದವರಿಗೆ ನೀಡಿರುವುದು, ಬಿಬಿಎಂಪಿನಲ್ಲಿ ಎರಡು ಸಾವಿರ ಕೋಟಿ ಟೆಂಡರ್ ಪ್ಯಾಕೇಜ್ ಮಾಡಿ ಪರ್ಸೆಂಟೇಜ್ ನಿಗದಿಮಾಡಿರುವುದು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಕರ್ನಾಟಕ ರಾಜ್ಯ ಹ್ಯಾಬಿಟೇಟ್ ಕೇಂದ್ರ ಬೆಂಗಳೂರು ಎನ್ನುವ ಸಂಘಕ್ಕೆ ಟೆಂಡರ್ ನೀಡಿ ಪರ್ಸೆಂಟೇಜ್ ನಿಗದಿ ಮಾಡಿರುವುದು ತಮ್ಮ ಪ್ರಾಮಾಣಿಕ ಆಡಳಿತ ಮಾದರಿಗಳೇ?

ಪ್ರತಿಯೊಂದು ಆಯಕಟ್ಟಿನ ಹುದ್ದೆಗೂ ದರ ನಿಗದಿ ಮಾಡಿರುವ ಬಗ್ಗೆ ವಿಧಾನಸೌಧದ ಗೋಡೆಗಳೇ ಮಾತನಾಡುತ್ತಿವೆ.
ಅರ್ಕಾವತಿ ಬಡಾವಣೆಯಲ್ಲಿ ನೀಡು ಹೆಸರಿನಲ್ಲಿ ನಿಯಮ ಉಲ್ಲಂಘಿಸಿ 880 ಎಕರೆ ಜಮೀನನ್ನು ಡಿ ನೋಟಿಫಿಕೇಶನ್ ಮಾಡಿರುವುದು ಕಳಂಕವಲ್ಲವೇ? ರೀಡು ಪಿತಾಮಹ ಯಾರೆಂದು ಹೇಳಬಲ್ಲಿರಾ? ಅರ್ಕಾವತಿ ಪ್ರಕರಣದಲ್ಲಿ ನೀವೇ ನೇಮಕ ಮಾಡಿದ ಕೆಂಪಣ್ಣ ಆಯೋಗ ನೀಡು ಡಿ ನೋಟಿಫಿಕೇಶನ್ ಸಂಬಂಧಿಸಿದಂತೆ ವರದಿ ನೀಡಿದ್ದು, ತಾವು ಪ್ರಕರಣದ ಬಗ್ಗೆ ಸದನದ ಮುಂದೆ ಮಂಡಿಸಿ ಅಕ್ರಮ ನಡೆಸಿದವರ ಬಗ್ಗೆ ಕ್ರಮ ಯಾಕೆ ತೆಗೆದುಕೊಂಡಿಲ್ಲ? ತಾವು ಪ್ರಾಮಾಣಿಕರಲ್ಲವೇ ಯಾವಾಗ ಕ್ರಮ ತೆಗೆದುಕೊಳ್ಳುತ್ತೀರಿ?

ತಾವೇ ಭ್ರಷ್ಟರನ್ನು ಬೆಳೆಸಿ ನಿವೃತ್ತಿಯ ನಂತರವು ಕಡುಭ್ರಷ್ಟರಿಗೆ ಉನ್ನತ ಹುದ್ದೆಯನ್ನು ದಯಪಾಲಿಸಿರುವುದು ಸಾರ್ವಜನಿಕ ಜೀವನಕ್ಕೆ ಕಳಂಕವಲ್ಲವೇ? ಅಂದಿನ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರಾಜೇಂದ್ರಕುಮಾರ್ರವರು ನಿರಂತರವಾಗಿ ಸರ್ಕಾರಕ್ಕೆ ಮುಡಾ ಹಗರಣ ಕುರಿತಂತೆ 14 ಪತ್ರಗಳನ್ನು ಬರೆದರೂ ನಿರ್ಲಕ್ಷ ವಹಿಸಿದ್ದು, ಅಕ್ರಮಕ್ಕೆ ಬೆಂಬಲಿಸಿದಂತೆ ಅಲ್ಲವೇ?

ಎಲ್ಲಾ ಅಕ್ರಮಕ್ಕೆ ಫೋನ್ ಮಾಡಿ ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತಿದ್ದ ಪ್ರಭಾವಿ ಚಿಕ್ಕಬಾಸ್ ಯಾರೆಂದು ಹೆಸರು ಹೇಳಬೇಕೇ? ಮುಡಾದಲ್ಲಿ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ತಮ್ಮ ಹೆಸರು ಹಾಗೂ ಪ್ರಭಾವವನ್ನು ಬಳಸಿಕೊಂಡು ಸಾವಿರಾರು ಕೋಟಿ ರೂಪಾಯಿಗಳ ಅಕ್ರಮ ನಡೆಸಿ ರಾಜ್ಯದ ಬೊಕ್ಕಸಕ್ಕೆ ನಷ್ಟವುಂಟು ಮಾಡಲಾಗಿದೆ. ಈ ಹಿಂದೆ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅವ್ಯವಹಾರ ಕುರಿತಂತೆ ಸಿಬಿಐ ತನಿಖೆ ನಡೆಸಲಾಗಿದೆ. ಮುಡಾದ ತನಿಖೆಯು ಸಿಬಿಐ ಮೂಲಕ ನಡೆದರೆ ಇದರ ಸತ್ಯಾಸತ್ಯತೆ ಬಹಿರಂಗವಾಗುತ್ತದೆ. ಇದರಲ್ಲಿ ನಿಮ್ಮದೇನು ತಪ್ಪಿಲ್ಲದಿದ್ದರೆ ಎಲ್ಲವೂ ಕ್ರಮಬದ್ದವಾಗಿದ್ದರೆ ಸಿಬಿಐಗೆ ತನಿಖೆಗೆ ವಹಿಸಲು ಭಯ ಏಕೆ?

ಪ್ರತಿಯೊಬ್ಬ ಭ್ರಷ್ಟಚಾರಿಯು ತಾನು ಸಿಕ್ಕಿಹಾಕಿಕೊಳ್ಳುತ್ತೇನೆಂದು ಅನ್ನಿಸಿದಾಗ ಭಯಗೊಳ್ಳುತ್ತಾನೆ. ಭಾವನಾತ್ಮಕ ರಕ್ಷಣೆಯನ್ನು ಜಾತಿಯ ಹೆಸರಿನಲ್ಲಿ ಪಡೆಯುವ ಪ್ರಯತ್ನ ಮಾಡುತ್ತಾನೆ. ತಾವು ಕೂಡ ಈಗ ಅಂತಹದೇ ಪ್ರಯತ್ನದಲ್ಲಿ ಇದ್ದೀರಿ. ನಾನು ಕೂಡ ದಾಖಲೆಯನ್ನು ಪರಿಶೀಲಿಸಿದ್ದೇನೆ. ಮುಡಾದಲ್ಲಿ ಸ್ವಜನಪಕ್ಷಪಾತ, ಭ್ರಷ್ಟಚಾರ, ಅಧಿಕಾರದ ದುರುಪಯೋಗ ನಡೆದಿರುವುದು ಅಂಗೈ ಹುಣ್ಣಿನಷ್ಟು ಸ್ಪಷ್ಟವಾಗಿ ಕಾಣಿಸುತ್ತಿದೆ. ಇನ್ನೊಮ್ಮೆ ವಿಶೇಷ ಅಧಿವೇಶನ ಇದಕ್ಕಾಗಿಯೇ ಕರೆಯಿರಿ. ರಾಜ್ಯದಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆಯೇ ಚರ್ಚಿಸೋಣ. ಆಗಾಗ ತಾವು ಹೇಳುತ್ತಿದ್ದ ಮಾತನ್ನು ನೆನಪಿಸಿ ಈ ಪತ್ರವನ್ನು ಪೂರ್ಣಗೊಳಿಸುತ್ತೇನೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು, ಉಪ್ಪು ತಿಂದವನು ನೀರು ಕುಡಿಯಬೇಕು. ಇದು ನಿಮ್ಮದೇ ಮಾತು. ಮುಡಾ, ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣದಲ್ಲಿಯೂ ಇದು ಅನ್ವಯವಾಗಲಿ.

ಸಿ.ಟಿ. ರವಿ….

ಇದನ್ನೂ ಓದಿ: HD Kumaraswamy: ಹಣ ಕಟ್ಟಿ 40 ವರ್ಷ ಆಗಿದೆ, ನನಗಿನ್ನೂ ಮುಡಾ ನಿವೇಶನವನ್ನೇ ಕೊಟ್ಟಿಲ್ಲ: ಎಚ್‌ಡಿಕೆ

Continue Reading

ಬೆಂಗಳೂರು

Kannada Sahitya Sammelana: ಬೆಂಗಳೂರಿನಲ್ಲಿ 5ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಚಿವ ದಿನೇಶ್ ಗುಂಡೂರಾವ್ ಚಾಲನೆ

Kannada Sahitya Sammelana: ಬೆಂಗಳೂರಿನ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ 5 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಸಚಿವರು, ಕನ್ನಡ ಭಾಷೆಯ ಜ್ಞಾನ ಇಂದು ದೇಶ-ವಿದೇಶಗಳಲ್ಲಿ ಪಸರಿಸಿದೆ. ಯಾವುದೇ ದೇಶಕ್ಕೆ ಹೋದರು ನಮ್ಮ ಕನ್ನಡಿಗರು ನೆಲೆಸಿರುವುದನ್ನು ನಾವು ಕಾಣುತ್ತೇವೆ. ಕನ್ನಡ ಭಾಷೆಗಿರುವ ಶ್ರೀಮಂತಿಕೆಯ ಸಾಹಿತ್ಯ, ಸಂಸ್ಕೃತಿ, ಅಪಾರ ಜ್ಞಾನ ಸಂಪತ್ತಿನಿಂದಾಗಿ ಇದು ಸಾಧ್ಯವಾಗಿದೆ ಎಂದು ತಿಳಿಸಿದರು.

VISTARANEWS.COM


on

Minister Dinesh Gundurao drives for the 5th Kannada Sahitya Sammelana in Bengaluru
Koo

ಬೆಂಗಳೂರು: ನಗರದ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ 5ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ (Kannada Sahitya Sammelana) ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು.

ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಬೆಳಗ್ಗೆ ಧ್ವಜಾರೋಹಣ ನೆರವೇರಿಸಲಾಯಿತು.‌ ಬಳಿಕ ಶ್ರೀರಾಮ್‌ಪುರ ಸನ್ ರೈಸ್ ವೃತ್ತದಿಂದ ಶೇಷಾದ್ರಿಪುರಂವರೆಗೆ ಕನ್ನಡ ಜಾಗೃತಿ ಮೆರವಣಿಗೆ ನಡೆಸಲಾಯಿತು.‌ ಸಾವಿರಾರು ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು ಮೆರವಣಿಗೆಯಲ್ಲಿ ಸಾಗಿ ಕನ್ನಡ ಹಬ್ಬಕ್ಕೆ ಮೆರಗು ನೀಡಿದರು.‌ ವಿವಿಧ ಸಾಂಸ್ಕೃತಿಕ ಮೇಳಗಳು ಕನ್ನಡ ಜಾಗೃತಿ ಮೆರವಣಿಗೆಯಲ್ಲಿ ಗಮನ ಸೆಳೆದವು.

ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ದೇಶದ ಪ್ರಾಚೀನ ಭಾಷೆಗಳಲ್ಲಿ ಒಂದಾದ ಕನ್ನಡದಲ್ಲಿ ಸಾಂಸ್ಕೃತಿಕ ಭಂಡಾರವೇ ಇದೆ. ಕನ್ನಡ ಭಾಷೆಯ ಜ್ಞಾನ ಇಂದು ದೇಶ ವಿದೇಶಗಳಲ್ಲಿ ಪಸರಿಸಿದೆ. ಯಾವುದೇ ದೇಶಕ್ಕೆ ಹೋದರು ನಮ್ಮ ಕನ್ನಡಿಗರು ನೆಲೆಸಿರುವುದನ್ನು ನಾವು ಕಾಣುತ್ತೇವೆ. ಕನ್ನಡ ಭಾಷೆಗಿರುವ ಶ್ರೀಮಂತಿಕೆಯ ಸಾಹಿತ್ಯ, ಸಂಸ್ಕೃತಿ, ಅಪಾರ ಜ್ಞಾನ ಸಂಪತ್ತಿನಿಂದಾಗಿ ಇದು ಸಾಧ್ಯವಾಗಿದೆ ಎಂದು ತಿಳಿಸಿದರು.

ಗಾಂಧಿನಗರದಲ್ಲಿ 5ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುತ್ತಿರುವುದು, ಕನ್ನಡಕ್ಕೆ ನಮ್ಮ ಕಡೆಯಿಂದ ಒಂದು ಸಣ್ಣ ಸೇವೆ. ಯುವಕರು ನಮ್ಮ ಕನ್ನಡ ಭಾಷೆಯಲ್ಲಿರುವ ಜ್ಞಾನವನ್ನು ಸಂಪಾದಿಸಿಕೊಂಡು, ಕನ್ನಡ ಸೇವೆಗೆ ಸದಾ ಸಜ್ಜಾಗಿರಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ: MB Patil: ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣ; ಪರಿಣತರ ಜತೆ ಎಂ.ಬಿ.ಪಾಟೀಲ್‌ ಸಮಾಲೋಚನೆ

ವಿ.ರಾಣಿ ಗೋವಿಂದರಾಜು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದಲ್ಲಿ ಕವಿ ಗೋಷ್ಠಿ ಸೇರಿದಂತೆ, ಕನ್ನಡ ನಾಳೆಗಳು ಹೇಗಿರಬೇಕು ಹಾಗೂ ಸರ್ವಜನಾಂಗದ ಶಾಂತಿಯ ತೋಟ- ಗಾಂಧಿನಗರ ಕ್ಷೇತ್ರ ಎಂಬ ಗೋಷ್ಠಿಗಳನ್ನು ಆಯೋಜಿಸಲಾಗಿತ್ತು. ಅಲ್ಲದೇ ಕನ್ನಡ ಸೇವೆ ಸಲ್ಲಿಸಿದ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 50 ಕ್ಕೂ ಹೆಚ್ಚು ಗಣ್ಯರನ್ನು ಇದೇ ವೇಳೆ ಗೌರವಿಸಿ, ಸನ್ಮಾನಿಸಲಾಯಿತು.

Continue Reading
Advertisement
Mumbai Girl
ದೇಶ10 mins ago

ಬಾರೆ ಸಖಿ ಎಂದು 20 ವರ್ಷದ ಯುವತಿಯನ್ನು ಕರೆದುಕೊಂಡು ಹೋದ, ಕೊಂದು ಪೊದೆಯಲ್ಲಿ ಬಿಸಾಡಿದ; ಕೃತ್ಯಕ್ಕೆ ಕಾರಣವೇನು?

ಪರಿಸರ17 mins ago

Arecanut Research Centre: ಹೊಸ ಅಡಿಕೆ ಸಂಶೋಧನಾ ಕೇಂದ್ರ ಮತ್ತೊಂದು ಮದುವೆ ಛತ್ರ ಆಗದಿರಲಿ!

ind vs sl
ಪ್ರಮುಖ ಸುದ್ದಿ38 mins ago

IND vs SL : ಅಪರೂಪದ ದೃಶ್ಯ; ಎರಡೂ ಕೈಯಲ್ಲಿ ಬೌಲಿಂಗ್ ಮಾಡಿದ ಲಂಕಾದ ಬೌಲರ್​ ಕಮಿಂಡು ಮೆಂಡಿಸ್​!

Opposition MLAs agree to Skydeck near Nice Road will discuss in Cabinet meeting says DCM DK Shivakumar
ಕರ್ನಾಟಕ47 mins ago

DK Shivakumar: ಬೆಂಗಳೂರಿನ ನೈಸ್‌ ರಸ್ತೆ ಬಳಿ ದೇಶದ ಅತಿ ಎತ್ತರದ ಸ್ಕೈಡೆಕ್!

Team India Coach
ಪ್ರಮುಖ ಸುದ್ದಿ58 mins ago

Team India Coach : ಕೋಚ್​​ ಗೌತಮ್ ಗಂಭೀರ್ ವೈಭವೀಕರಣ; ಮಾಜಿ ಆಟಗಾರನ ಆಕ್ಷೇಪ

Infiltration
ದೇಶ1 hour ago

Infiltration: ಭಾರತಕ್ಕೆ ನುಗ್ಗುವುದು ಹೇಗೆ ಎಂದು ವಿಡಿಯೊ ಮಾಡಿದ ಬಾಂಗ್ಲಾ ವ್ಯಕ್ತಿ; ದೀದಿ ಆಹ್ವಾನದ ಬೆನ್ನಲ್ಲೇ ವಿಡಿಯೊ ವೈರಲ್‌

ICW 2024
ಫ್ಯಾಷನ್2 hours ago

ICW 2024: ಮುಂಬರುವ ವೆಡ್ಡಿಂಗ್‌ ಸೀಸನ್‌ ಮೆನ್ಸ್ ವೇರ್‌ ಅನಾವರಣಗೊಳಿಸಿದ ಇಂಡಿಯಾ ಕೌಚರ್‌ ವೀಕ್‌ 2024

Indian Army
ದೇಶ2 hours ago

ಪಾಕ್‌ಗೆ ಮೋದಿ ಎಚ್ಚರಿಕೆ ಬೆನ್ನಲ್ಲೇ ಗಡಿಯಲ್ಲಿ 2 ಸಾವಿರ ಹೆಚ್ಚುವರಿ ಸೈನಿಕರ ನಿಯೋಜಿಸಿದ ಕೇಂದ್ರ; ಏನಿದರ ಮರ್ಮ?

Joe Root
ಕ್ರೀಡೆ3 hours ago

Joe Root : ಟೆಸ್ಟ್ ಇತಿಹಾಸದ ರನ್​ ಗಳಿಕೆಯ ದಾಖಲೆಯ ಪಟ್ಟಿಯಲ್ಲಿ ಲಾರಾ ಹಿಂದಿಕ್ಕಿದ ಜೋ ರೂಟ್

CT Ravi
ಕರ್ನಾಟಕ3 hours ago

CT Ravi: ಮುಡಾ ಹಗರಣ: ಸಿಎಂ ಸಿದ್ದರಾಮಯ್ಯಗೆ ಬಹಿರಂಗ ಪತ್ರ ಬರೆದ ಸಿ.ಟಿ.ರವಿ; ಇಲ್ಲಿದೆ ಪತ್ರದ ಸಾರಾಂಶ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ3 hours ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ8 hours ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ9 hours ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ1 day ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ1 day ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ1 day ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ1 day ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್2 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ2 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

ಟ್ರೆಂಡಿಂಗ್‌