Health Care Summit: ಭಾರತದಲ್ಲೇ ಮೊದಲ ಬಾರಿಗೆ ಮಣಿಪಾಲ್, ದಿಲ್ಲಿಯಲ್ಲಿ ಹೆಲ್ತ್ ಕೇರ್ ಶೃಂಗ - Vistara News

ಆರೋಗ್ಯ

Health Care Summit: ಭಾರತದಲ್ಲೇ ಮೊದಲ ಬಾರಿಗೆ ಮಣಿಪಾಲ್, ದಿಲ್ಲಿಯಲ್ಲಿ ಹೆಲ್ತ್ ಕೇರ್ ಶೃಂಗ

Health Care Summit: ಜಾಗತಿಕ ಹೆಲ್ತ್ ಕೇರ್ ಸಮ್ಮಿಟ್ 2024ರ ಜನವರಿ 1 ರಿಂದ 3ರ ವರೆಗೆ ನವದೆಹಲಿಯ ಲೀ ಮೆರಿಡಿಯನ್ ಹಾಗೂ ಏಮ್ಸ್ ನಲ್ಲಿ ಮತ್ತು ಜನವರಿ 4 ರಿಂದ 6ರ ವರೆಗೆ ಮಣಿಪಾಲದ ಫಾರ್ಚೂನ್ ಇನ್ ವ್ಯಾಲಿ ಹೋಟೆಲ್‍ನಲ್ಲಿ ಆಯೋಜಿಸಲಾಗಿದೆ.

VISTARANEWS.COM


on

Manipal and Delhi will be host Global Health Care Summit
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಭಾರತೀಯ ಸಂಜಾತ ಅಮೆರಿಕನ್ ವೈದ್ಯರ ಒಕ್ಕೂಟ (AAPI) ಇದೇ ಮೊದಲ ಬಾರಿಗೆ ಭಾರತದಲ್ಲಿ ಜಾಗತಿಕ ಹೆಲ್ತ್ ಕೇರ್ ಸಮ್ಮಿಟ್ (Global Health Care Summit) ಅನ್ನು ಎರಡು ಸ್ಥಳಗಳಾದ ನವದೆಹಲಿ (New Delhi) ಹಾಗೂ ಕರ್ನಾಟಕದ ಐತಿಹಾಸಿಕ ನಗರ ಮಣಿಪಾಲನಲ್ಲಿ ಆಯೋಜಿಸಿದ್ದು, ವೈದ್ಯಕೀಯ ವಿಚಾರ ಸಂಕಿರಣ ಹಾಗೂ ನಿರಂತರ ವೈದ್ಯಕೀಯ ಶಿಕ್ಷಣ (CME) ಒಂದೇ ವೇದಿಕೆಯಲ್ಲಿ ಕೈಗೊಳ್ಳಲಾಗುತ್ತಿರುವುದು ಇದರ ವೈಶಿಷ್ಟ್ಯತೆಯಾಗಿದೆ. ನವದೆಹಲಿಯ ಏಮ್ಸ್ (AIIMS) ಮತ್ತು ಕರ್ನಾಟಕದ ಮಣಿಪಾಲ್ ವಿಶ್ವವಿದ್ಯಾಲಯವನ್ನು (Manipal University) ಆಯ್ಕೆ ಮಾಡಿಕೊಂಡಿದ್ದು, ಈ ಎರಡು ಕೇಂದ್ರಗಳು ದೇಶದಲ್ಲಿ ಅತ್ಯುತ್ತಮ ಶಿಕ್ಷಣ ನೀಡುವ ಸಂಸ್ಥೆಗಳಾಗಿವೆ.

ಈ ಜಾಗತಿಕ ಹೆಲ್ತ್ ಕೇರ್ ಸಮ್ಮಿಟ್ 2024ರ ಜನವರಿ 1 ರಿಂದ 3ರ ವರೆಗೆ ನವದೆಹಲಿಯ ಲೀ ಮೆರಿಡಿಯನ್ ಹಾಗೂ ಏಮ್ಸ್ ನಲ್ಲಿ ಮತ್ತು ಜನವರಿ 4 ರಿಂದ 6ರ ವರೆಗೆ ಮಣಿಪಾಲದ ಫಾರ್ಚೂನ್ ಇನ್ ವ್ಯಾಲಿ ಹೋಟೆಲ್‍ನಲ್ಲಿ ಆಯೋಜಿಸಲಾಗಿದೆ. ಇದೊಂದು ಮಹತ್ವದ ಕಾರ್ಯಕ್ರಮವಾಗಿದ್ದು, ವೈದ್ಯಕೀಯ ಕ್ಷೇತ್ರದ ನಿಪುಣರು ತಮ್ಮ ಅನುಭವಗಳನ್ನ ಈ ವೇದಿಕೆಯಲ್ಲಿ ಹಂಚಿಕೊಳ್ಳಲಿದ್ದಾರೆ.

21ನೇ ಶತಮಾನದಲ್ಲಿ ಎಐ ತಂತ್ರಜ್ಞಾನವು ವೈದ್ಯಕೀಯ ಕ್ಷೇತ್ರದ ಮೇಲೆ ಬೀರುವ ಪ್ರಭಾವ ಮತ್ತು ಅದರ ಸಮರ್ಥ ಬಳಕೆಯ ಕುರಿತು ಸಮಗ್ರ ಮಾಹಿತಿ ಹಂಚಿಕೊಳ್ಳುವುದು ಈ ಜಾಗತಿಕ ಆರೋಗ್ಯ ಶೃಂಗಸಭೆಯ ವೈದ್ಯಕೀಯ ವಿಚಾರ ಸಂಕಿರಣದ ಉದ್ದೇಶವಾಗಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯುತ್ತಮ ಕೇಂದ್ರಗಳಾಗಿ ಗುರುತಿಸಿಕೊಂಡಿರುವ ಏಮ್ಸ್ ಮತ್ತು ಮಣಿಪಾಲ ವಿಶ್ವವಿದ್ಯಾಲಯವು ಈ ಕಾರ್ಯಕ್ರಮಕ್ಕೆ ಸೂಕ್ತ ಸ್ಥಳಗಳಾಗಿವೆ.

ವಿಭಿನ್ನ ರೀತಿಯ ಈ ಕಾರ್ಯಕ್ರಮವು ಭಾರತೀಯ ಮೂಲದ ವೈದ್ಯರನ್ನು ಆಕರ್ಷಿಸುವುದರ ಜೊತೆಗೆ ನವದೆಹಲಿ ಹಾಗೂ ಕರ್ನಾಟಕದಲ್ಲಿನ ವೈದ್ಯರ ಪಾಲ್ಗೊಳ್ಳುವಿಕೆಗೆ ಬೃಹತ್ ವೇದಿಕೆಯಾಗಲಿದೆ. ಈ ಮೂಲಕ ಆರೋಗ್ಯ ಕ್ಷೇತ್ರದಲ್ಲಿನ ನವನವೀನ ಬದಲಾವಣೆಗೆ ತೆರೆದುಕೊಳ್ಳುವುದು, ಆ ಕುರಿತಾದ ಚರ್ಚೆ ಮತ್ತು ಆಲೋಚನೆಗಳ ವಿನಿಮಯ ಕೇಂದ್ರಬಿಂದುವಾಗಿ ಈ ಕಾರ್ಯಕ್ರಮವು ಹೊರಹೊಮ್ಮಲಿದೆ.

ವೈದ್ಯಕೀಯ ವೃತ್ತಿಯಲ್ಲಿ ನಿಪುಣತೆ ಹೊಂದಿದವರಿಂದ ಭವಿಷ್ಯದಲ್ಲಿ ಆರೋಗ್ಯ ರಕ್ಷಣೆಗೆ ಬೇಕಾದ ಎಐ ತಂತ್ರಜ್ಞಾನದ ಕುರಿತಾದ ಚರ್ಚೆಗಳು ಕಾರ್ಯಕ್ರಮದಲ್ಲಿ ನಡೆಯುತ್ತವೆ. ವೈದ್ಯಕೀಯ ಕ್ಷೇತ್ರದಲ್ಲಿ ಬದಲಾವಣೆ ರೂಪಿಸುವ ಎಐ ತಂತ್ರಜ್ಞಾನ ಕುರಿತಾಗಿ ತಿಳಿಯುವ ನಿಟ್ಟಿನಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕರ್ನಾಟಕ ವೈದ್ಯಕೀಯ ಸಮುದಾಯಕ್ಕೆ ಸಂಘಟಕರು ವಿಶೇಷ ಆಮಂತ್ರಣವನ್ನು ನೀಡಿದ್ದಾರೆ.

ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಮಣಿಪಾಲ ವೈದ್ಯಕೀಯ ಶಿಕ್ಷಣದ ಅಧ್ಯಕ್ಷ, ಪದ್ಮಭೂಷಣ ಡಾ. ರಾಮದಾಸ್ ಪೈ ಅವರಿಗೆ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಮನರಂಜನಾ ಕಾರ್ಯಕ್ರಮಗಳು

ಈ ಹೆಲ್ತ್ ಸಮ್ಮಿಟ್, ಶೈಕ್ಷಣಿಕ ವಿಷಯಗಳ ಚರ್ಚೆ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ. ಎಎಪಿಐ ಉಪಾಧ್ಯಕ್ಷ ಡಾ. ಅಮಿತ್ ಚಕ್ರವರ್ತಿ ಅವರ ಲೈವ್ ಸಂಗೀತ ಕಾರ್ಯಕ್ರಮ, ಮಾನಸಿ ಸುಧೀರ್ ಅವರ ‘ಕಾವ್ಯಾಭಿನಯ’ ಪ್ರದರ್ಶನ ಮತ್ತು ಅನಿರುದ್ಧ ಶಾಸ್ತ್ರಿ ಹಾಗೂ ನುಡಿಸಿರಿ ತಂಡದ ಅದ್ಭುತ ಸಂಗೀತ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ.

ಈ ಶೃಂಗಸಭೆಯು ಐತಿಹಾಸಿಕ ಕ್ಷಣವಾಗಿ ಗುರುತಿಕೊಳ್ಳುವುದರ ಜೊತೆಗೆ ವೈದ್ಯಕೀಯ ಜ್ಞಾನಾರ್ಜನೆ ಹಾಗೂ ಜಾಗತಿಕ ಮಟ್ಟದಲ್ಲಿ ಪರಸ್ಪರ ಸಹಯೋಗವನ್ನು ಬೆಳೆಸುವ ವೇದಿಕೆಯಾಗಿ ರೂಪುಗೊಳ್ಳಲಿದೆ. ಉನ್ನತ ವೈದ್ಯಕೀಯ ವೃತ್ತಿಪರರ ಪಾಲ್ಗೊಳ್ಳುವಿಕೆ, ವಿವಿಧ ವಿಷಯಗಳ ಕುರಿತ ಚರ್ಚೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನವು ನಿಜಕ್ಕೂ ಜಾಗತಿಕ ಆರೋಗ್ಯ ಕ್ಷೇತ್ರದಲ್ಲಿ ಮೈಲಿಗಲ್ಲು ಮೂಡಿಸಲಿದೆ.

ಈ ಸುದ್ದಿಯನ್ನೂ ಓದಿ: PM Cares : ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ಆರೈಕೆಗೆ, ಪಿಎಂ ಕೇರ್ಸ್‌ ಯೋಜನೆಯ ಸೌಲಭ್ಯ ವಿತರಣೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Junk Food Side Effects: ಗೇಮಿಂಗ್‌ ದಾಸರಾದ ಮಕ್ಕಳು ಜಂಕ್‌ ಫುಡ್‌ ವ್ಯಸನಿಗಳಾಗುವ ಸಂಭವ ಹೆಚ್ಚು!

ಗೇಮ್‌ ಆಡುವ, ಹೆಚ್ಚು ಹೊತ್ತು ಮೊಬೈಲ್‌ನಲ್ಲಿ ಕಳೆಯುವ ಮಕ್ಕಳಿಗೆ ಬೊಜ್ಜಿನ ಸಮಸ್ಯೆ ಕಾಡುವುದು ಹೆಚ್ಚು ಎಂದು ವರದಿ ಹೇಳಿದೆ. ಗೇಮಿಂಗ್‌ ವ್ಯಸನಕ್ಕೆ ದಾಸರಾದ ಮಕ್ಕಳು ಜಂಕ್‌ ಫುಡ್‌ ದಾಸರಾಗುವ ಸಾಧ್ಯತೆಗಳೂ ಹೆಚ್ಚಾಗಿದ್ದು, ಬೊಜ್ಜಿನ ಸಮಸ್ಯೆಯೂ ಇವರನ್ನೇ ಹೆಚ್ಚು ಕಾಡುತ್ತದೆ ಎನ್ನಲಾಗಿದೆ. ಲಿವರ್‌ಪೂಲ್‌ ವಿಶ್ವವಿದ್ಯಾಲಯ ಇತ್ತೀಚೆಗೆ ನಡೆಸಿದ ಸಂಶೋಧನೆಯೊಂದರೆ ಪ್ರಕಾರ, ಹದಿಹರೆಯದ ಮಕ್ಕಳು ಗೇಮಿಂಗ್‌ ಪ್ರಪಂಚದೊಳಕ್ಕೆ ಬೀಳುವುದರ ಜೊತೆಗೆ ಜಂಕ್‌ ಫುಡ್‌ ತಿನ್ನುವ ಅಭ್ಯಾಸವನ್ನೂ (Junk Food Side Effects) ಹೆಚ್ಚಿಸಿಕೊಳ್ಳುತ್ತಿದ್ದಾರೆ.

VISTARANEWS.COM


on

Junk Food Side Effects
Koo

ನಿಮ್ಮ ಮಕ್ಕಳು ಅತೀವವಾಗಿ ಗೇಮಿಂಗ್‌ಗೆ ದಾಸರಾಗಿದ್ದಾರೋ? ಮೊಬೈಲ್‌ಗಳಲ್ಲಿ, ಲ್ಯಾಪ್‌ಟಾಪ್‌ ಅಥವಾ ಟ್ಯಾಬ್‌ಗಳಲ್ಲಿ ಗಂಟೆಗಟ್ಟಲೆ ಗೇಮ್‌ ಆಡುತ್ತಾರೋ? ಹಾಗಾದರೆ ಹುಷಾರು. ಗೇಮ್‌ ಆಡುವ, ಹೆಚ್ಚು ಹೊತ್ತು ಮೊಬೈಲ್‌ನಲ್ಲಿ ಕಳೆಯುವ ಮಕ್ಕಳಿಗೆ ಬೊಜ್ಜಿನ ಸಮಸ್ಯೆ ಕಾಡುವುದು ಹೆಚ್ಚು ಎಂದು ವರದಿ ಹೇಳಿದೆ. ಗೇಮಿಂಗ್‌ ವ್ಯಸನಕ್ಕೆ ದಾಸರಾದ ಮಕ್ಕಳು ಜಂಕ್‌ ಫುಡ್‌ ದಾಸರಾಗುವ ಸಾಧ್ಯತೆಗಳೂ ಹೆಚ್ಚಾಗಿದ್ದು, ಬೊಜ್ಜಿನ ಸಮಸ್ಯೆಯೂ ಇವರನ್ನೇ ಹೆಚ್ಚು (Junk Food Side Effects) ಕಾಡುತ್ತದೆ ಎನ್ನಲಾಗಿದೆ. ಲಿವರ್‌ಪೂಲ್‌ ವಿಶ್ವವಿದ್ಯಾಲಯ ಇತ್ತೀಚೆಗೆ ನಡೆಸಿದ ಸಂಶೋಧನೆಯೊಂದರೆ ಪ್ರಕಾರ, ಹದಿಹರೆಯದ ಮಕ್ಕಳು ಗೇಮಿಂಗ್‌ ಪ್ರಪಂಚದೊಳಕ್ಕೆ ಬೀಳುವುದರ ಜೊತೆಗೆ ಜಂಕ್‌ ಫುಡ್‌ ತಿನ್ನುವ ಅಭ್ಯಾಸವನ್ನೂ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಗೇಮಿಂಗ್‌ ಹಾಗೂ ಜಂಕ್‌ ಫುಡ್‌ ತಿನ್ನುವ ಚಟಕ್ಕೆ ಒಂದಕ್ಕೊಂದು ಸಂಬಂಧವಿದ್ದು ಮಕ್ಕಳು ಮತ್ತಷ್ಟು ಜಂಕ್‌ ಫುಡ್‌ ತಿನ್ನುವ ಬಯಕೆಯತ್ತ ಹೆಚ್ಚು ವಾಲುತ್ತಾರೆ. ಗೇಮಿಂಗ್‌ ಸಂದರ್ಭ ಅವರಿಗೆ ಅರಿವಿಲ್ಲದೆಯೇ ಹೆಚ್ಚು ಹೆಚ್ಚು ಜಂಕ್‌ ತಿನ್ನುತ್ತಾರೆ. ಇದರಿಂದ ಸಹಜವಾಗಿಯೇ ಬೊಜ್ಜಿನ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಅದು ತನ್ನ ಸಂಶೋಧನಾ ವರದಿಯಲ್ಲಿ ತಿಳಿಸಿದೆ.
ಹದಿಹರೆಯದ, ಪುಟಾಣಿ ಮಕ್ಕಳಲ್ಲಿ ಇತ್ತೀಚೆಗಿನ ದಿನಗಳಲ್ಲಿ ಹೆಚ್ಚು ಹೆಚ್ಚು ಬೊಜ್ಜಿನ ಸಮಸ್ಯೆಗಳು ಕಾಡುತ್ತಿವೆ. ಮಕ್ಕಳು ಸಣ್ಣ ವಯಸ್ಸಿನಲ್ಲಿಯೇ ಚುರುಕಾಗಿರುವುದನ್ನು ಬಿಟ್ಟು, ಸರಿಯಾಗಿ ಮೈಬಗ್ಗಿಸಲಾರದೆ ಕಷ್ಟಪಡುವುದನ್ನು ನೀವು ನೋಡಿರಬಹುದು. ಇದಕ್ಕೆ ಇಂದಿನ ಗೇಮಿಂಗ್‌ ಪ್ರಪಂಚದಲ್ಲಿ ಮಕ್ಕಳು ಸಾಮಾಜಿಕವಾಗಿ ತೊಡಗಿಸಿಕೊಳ್ಳುವುದು, ಗೇಮಿಂಗ್‌ ಲೈವ್‌ಸ್ಟ್ರೀಮ್‌ಗಳಲ್ಲಿ ಭಾಗವಹಿಸುವುದು, ಸಾಮಾಜಿಕ ಜಾಲತಾಣದಲ್ಲಿ ಮಕ್ಕಳು ಗೇಮಿಂಗ್‌ನಲ್ಲಿ ಸಕ್ರಿಯರಾಗಿರುವುದು, ಗಂಟೆಗಟ್ಟ್ಲೆ, ಬೇರೆಯವರ ಜೊತೆ ಆನ್‌ಲೈನ್‌ ಗೇಮಿಂಗ್‌ನಲ್ಲಿ ಭಾಗವಹಿಸುವುದು ಇತ್ಯಾದಿಗಳೂ ಕೂಡಾ ಕಾರಣ ಎಂದಿದೆ.
ಮಕ್ಕಳಲ್ಲಿ ಈ ಮನಸ್ಥಿತಿಯನ್ನು ತರುವಲ್ಲಿ ಹಲವು ಖ್ಯಾತ ಬ್ರ್ಯಾಂಡ್‌ಗಳ ಪಾಲೂ ಇದೆ ಎಂದಿರುವ ಈ ಸಂಶೋಧನೆ, ಇಂತಹ ಪ್ಲಾಟ್‌ಫಾರಂಗಳಲ್ಲಿ ಮಕ್ಕಳ ಮನಸ್ಸಿಗೆ ನಾಟುವಂಥ, ಅರ ಆಸಕ್ತಿ ಕೆರಳಿಸುವಂತ ಜಾಹಿರಾತುಗಳು, ಮಾರಾಟಗಳು ಇತ್ಯಾದಿಗಳನ್ನು ಹಮ್ಮಿಕೊಳ್ಳುವುದೂ ಕೂಡಾ ಕಾರಣ ಎಂದಿದೆ.

No Junk Food Concept

ಜಂಕ್‌ ಫುಡ್‌ ಆಕರ್ಷಣೆ

ಗೇಮಿಂಗ್‌ಗಳ ಮೂಲಕ ಮಕ್ಕಳು ಇಂತಹ ಜಾಹೀರಾತುಗಳು ಹೇಳುವ ಆಸಕ್ತಿ ಕೆರಳಿಸುವ ಕೊಲಾಬ್‌ಗಳಲ್ಲಿ ಭಾಗವಹಿಸಿ ಗಂಟೆಗಟ್ಟಲೆ ಗೇಮಿಂಗ್‌ ದುನಿಯಾದಲ್ಲಿ ತಮಗೇ ಅರಿವಿಲ್ಲದಂತೆ, ಅತಿ ಹೆಚ್ಚು ಸಕ್ಕರೆ, ಉಪ್ಪು ಹಾಗೂ ರಾಸಾಯನಿಕಗಳಿರುವ ಜಂಕ್‌ ಆಹಾರಗಳನ್ನು ಸೇವಿಸುವತ್ತ ಆಕರ್ಷಿತರಾಗುತ್ತಿದ್ದಾರೆ. ಇಂತಹ ಡಿಜಿಟಲ್‌ ಮಾರ್ಕೆಟಿಂಗ್‌ ಪ್ಲಾಟ್‌ ಫಾರಂಗಳ ಹಾವಳಿಯಿಂದಾಗಿಯೇ ಇಂದು ಮಕ್ಕಳು ಇವುಗಳ ದಾಸರಾಗುತ್ತಿದ್ದಾರೆ. ಅರಿವಿಲ್ಲದೇ ಅವುಗಳ ಬಲೆಯಲ್ಲಿ ಬೀಳುತ್ತಿದ್ದಾರೆ. ಮಕ್ಕಳ ಚಟುವಟಿಕೆಗಳಲ್ಲಿ ಗಮನವಿಡದೇ, ಗೇಮಿಂಗ್‌ ನೀಡಿದರೆ, ಇಂತಹ ಅಪಾಯದಲ್ಲಿ ಮಕ್ಕಳನ್ನು ಬೀಳಿಸುವ ತಪ್ಪಿನ ಹೊಣೆಗಾರಿಕೆಯನ್ನು ಪೋಷಕರೇ ಹೊರಬೇಕಾಗುತ್ತದೆ.

ಆಹಾರ ಶೈಲಿಯ ಬಗ್ಗೆ ನಿಗಾ ಇರಲಿ

ಹೀಗಾಗಿ, ನಿಮ್ಮ ಮಕ್ಕಳ ಆಹಾರ ಶೈಲಿಯ ಬಗ್ಗೆ ನಿಗಾ ಇರಲಿ. ಅವರ ಗೇಮಿಂಗ್‌ ಪ್ರಪಂಚದ ಬಗ್ಗೆ ನಿಮಗೆ ಅರಿವಿರಲಿ. ನಮಗೆ ತಿಳಿಯದು ಎಂಬ ಉಡಾಫೆ ಬೇಡ. ಅವರು ಏನು ಆಡುತ್ತಾರೆ, ಎಷ್ಟು ಆಡುತ್ತಾರೆ ಎಂಬುದು ನಿಮಗೆ ಗೊತ್ತಿರಲಿ. ಮಕ್ಕಳಲ್ಲಿ ಈ ಬಗ್ಗೆ ಸಹಜವಾಗಿ ಮಾತುಕತೆ ನಡೆಸುವ ಸ್ನೇಹದ ವಾತಾವರಣವನ್ನು ಸೃಷ್ಟಿ ಮಾಡಿಕೊಳ್ಳಿ.

Woman Ordering Pizza at Home Online

ಹೊರಗಿನ ಆರ್ಡರ್‌ ನಿಲ್ಲಿಸಿ

ಮಕ್ಕಳು ಮೂರು ಹೊತ್ತು ಮನೆಯೂಟವನ್ನು ಚೆನ್ನಾಗಿ ತಿನ್ನಲಿ. ಹೊರಗಿನಿಂದ ಆರ್ಡರ್‌ ಮಾಡಿಕೊಳ್ಳುವುದು ಉತ್ಯಾದಿಗಳನ್ನು ಆದಷ್ಟೂ ನಿಮ್ಮ ಹತೋಟಿಯಲ್ಲಿಡಿ. ಮಕ್ಕಳ ಊಟದ ತಟ್ಟೆಯಲ್ಲಿ ಸಾಕಷ್ಟು ತರಕಾರಿಗಳು, ಮೊಳಕೆ ಕಾಳುಗಳು, ಧಾನ್ಯಗಳಿಂದ ಮಾಡಿದ ತಿಂಡಿಗಳು, ಪ್ರೊಟೀನ್‌ಯುಕ್ತ ಆಹಾರ ಇರಲಿ. ಹಣ್ಣು ಹಂಪಲುಗಳನ್ನೂ ಮಕ್ಕಳು ತಿನ್ನಲಿ. ಯಾವಾಗಲಾದರೊಮ್ಮೆ ಅಪರೂಪಕ್ಕೆ ಮಾತ್ರ ಜಂಕ್‌ ತಿಂದರೆ ಸಾಕು.

ವಾಕಿಂಗ್‌ ಅಭ್ಯಾಸ ಬೆಳೆಸಿ

ಮಕ್ಕಳು ಚೆನ್ನಾಗಿ ಆಡಲಿ. ದೇಹ ಶ್ರಮವನ್ನು ಬೇಡುವ ಆಟವನ್ನು ಆಡಲಿ. ಮಕ್ಕಳ ಜೊತೆಗೆ ಒಂದು ವಾಕಿಂಗ್‌ ಅಭ್ಯಾಸವನ್ನು ಬೆಳೆಸಿಕೊಳ್ಳಿ. ನಿತ್ಯವೂ ನಿಮಗೆ ಸಾಧ್ಯವಾಗದಿದ್ದರೆ ವಾರಾಂತ್ಯದಲ್ಲಾದರೂ ಮಕ್ಕಳ ಜೊತೆ ಇದಕ್ಕಾಗಿ ಸಮಯ ಇಡಿ. ನಿಮ್ಮ ಹಾಗೂ ಅವರ ಪ್ರಪಂಚ ಬೇರೆ ಬೇರೆಯಾಗದಿರಲಿ.

fridge

ಫ್ರಿಡ್ಜ್‌ನಲ್ಲಿ ಚಾಕೋಲೇಟ್‌ ತುಂಬಿಸಿಡಬೇಡಿ

ನಿಮ್ಮ ಫ್ರಿಡ್ಜ್‌ನಲ್ಲಿ ಚಾಕೋಲೇಟ್‌ಗಳು, ಸಕ್ಕರೆಯುಕ್ಕ ತಿನಿಸುಗಳು, ಸಿಹಿತಿಂಡಿಗಳು ಇತ್ಯಾದಿಗಳಿಂದ ತುಂಬಿಸಬೇಡಿ. ಒಳ್ಳೆಯ ಆಹಾರಗಳೇ ಮಕ್ಕಳ ಕೈಗೆ ಸಿಗುವಂತಿರಲಿ. ಸಂಸ್ಕರಿಸಿದ ಆಹಾರಗಳು, ಪ್ಯಾಕೇಜ್ಡ್‌ ಡ್ರಿಂಕ್‌ಗಳನ್ನು ತಂದು ಇಟ್ಟುಕೊಳ್ಳಬೇಡಿ. ಆರೋಗ್ಯಕರ ಆಹಾರಗಳನ್ನು ಮಾಡುವ ಕ್ರಮ ಮಕ್ಕಳಿಗೆ ಕಲಿಸಿ. ಅವರಿಗೆ ಅವನ್ನೇ ತಿನ್ನಲು ಕೊಡಿ.

ಇದನ್ನೂ ಓದಿ: Health Tips Kannada: ನಮ್ಮ ದೇಹದಲ್ಲಿ ಉಪ್ಪಿನ ಅಂಶ ಕಡಿಮೆಯಾಗಿದೆ ಎಂದು ತಿಳಿಯುವುದು ಹೇಗೆ?

ಟಿವಿ ಮುಂದೆ ಉಣ್ಣುವ ಅಭ್ಯಾಸ ಬಿಡಿಸಿ

ಟಿವಿ ಮುಂದೆ ಕೂತು ಅಥವಾ ಫೋನ್‌ ನೋಡುತ್ತಾ ಅವರು ಉಣ್ಣುವ ಅಭ್ಯಾಸವಿದ್ದರೆ ಅದನ್ನು ಬಿಡಿಸಿ. ಎಲ್ಲರೂ ಒಟ್ಟಾಗಿ ಜೊತೆಯಾಗಿ ಒಂದೆಡೆ ಸೇರಿ ಕುಳಿತು ಉಣ್ಣುವ ಅಭ್ಯಾಸವನ್ನು ಮಕ್ಕಳೂ ರೂಢಿಸಿಕೊಳ್ಳಲಿ. ಮಕ್ಕಳು ಶಾಲೆಯಿಂದ ಬಂದ ಮೇಳೆ ಟಿವಿ ಮುಂದೆ ಕೂತು ಉಣ್ಣುವ ಅಭ್ಯಾಸ ರೂಢಿಸಿಕೊಂಡಿದ್ದರೆ ಅದರಿಂದ ಅವರನ್ನು ಮುಕ್ತರನ್ನಾಗಿಸಿ. ಟೇಬಲ್‌ ಮೇಲೆ ಕುಳಿತು ಕೇವಲ ಉಣ್ಣುವ ವಿಚಾರಕ್ಕೆ ಮಾತ್ರ ಗಮನ ಹರಿಸುವಂತೆ ಅವರನ್ನು ಬದಲಾಯಿಸಿ.

Continue Reading

ಆರೋಗ್ಯ

Leg Cramps At Night: ರಾತ್ರಿ ಮಲಗಿದಾಗ ಕಾಡುವ ಕಾಲುನೋವಿಗೆ ಇದೆ ಪರಿಹಾರ!

ಹಗಲೆಲ್ಲ ದಣಿದು ರಾತ್ರಿ ಮಲಗುತ್ತಿದ್ದಂತೆ ಕಾಲಿನ ಸ್ನಾಯುಗಳಲ್ಲಿ ಹಿಂಡಿದಂತೆ ನೋವು ಪ್ರಾರಂಭವಾದರೆ? ನಿದ್ದೆಯಂತೂ ಹಾಳಾಗುತ್ತದೆ, ಆ ನೋವನ್ನು ಸಹಿಸುವುದು ಹೇಗೆ? ಯಾಕಾಗಿ ಬರುತ್ತದೆ ಇಂಥ ಸೆಳೆತ? ಇದಕ್ಕೆ ನಿಯಂತ್ರಣವಿಲ್ಲವೇ? ಇದಕ್ಕೆ ಪರಿಹಾರ ಏನು? ಈ ಎಲ್ಲ ಪ್ರಶ್ನೆಗಳಿಗೆ (Leg Cramps at Night) ಇಲ್ಲಿದೆ ಉತ್ತರ.

VISTARANEWS.COM


on

Leg Cramps At Night
Koo

ನಿದ್ದೆ ಮಾಡುವುದಕ್ಕೆ (Leg Cramps at Night?) ಎಷ್ಟೊಂದು ಸಮಸ್ಯೆಗಳು ನಮಗೆ! ಕಚೇರಿಯ ಕೆಲಸಗಳು ಮುಗಿಯುವುದಿಲ್ಲ, ಮೊಬೈಲ್‌ನಿಂದ ಬಿಡುವಾಗುವುದಿಲ್ಲ, ಲ್ಯಾಪ್‌ಟಾಪ್‌ ಕರೆಯುತ್ತಿರುತ್ತದೆ, ಮಲಗಿದರೂ ನಿದ್ದೆ ಬರುವುದಿಲ್ಲ… ಒಂದೆರಡೇ ಸಮಸ್ಯೆಗಳು? ನಿದ್ದೆಗೆ ಇರುವಷ್ಟು ತೊಂದರೆಗಳು ಸಾಲದು ಎಂಬಂತೆ ಕಾಲೂ ನೋವು ಕೊಡುತ್ತಿದ್ದರೆ, ದುರ್ಭಿಕ್ಷದಲ್ಲಿ ಅಧಿಕಮಾಸದ ಅವಸ್ಥೆ. ಹಗಲಿಡೀ ಸುಳಿವಿಲ್ಲದ ಕಾಲು ಸೆಳೆತ ರಾತ್ರಿಯಾಗುತ್ತಿದ್ದಂತೆ ಹಾಜರಾಗುತ್ತದೆ. ಯಾಕಾದರೂ ಹೀಗಾಗುತ್ತದೋ ಎಂದು ಗೊಣಗುತ್ತಾ ನರಳುವ ಬದಲು, ಈ ಅವಸ್ಥೆಯನ್ನು ಹತೋಟಿಗೆ ತರಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.

The man's calf muscle cramped, massage of male leg at home

ಏನು ನೋವಿದು?

ಕಾಲು ನೋವುಗಳಲ್ಲಿ ಹಲವಾರು ರೀತಿಯಿದೆ. ಇದೆಂಥ ನೋವು ಎಂದು ಕೇಳಿದರೆ, ರಾತ್ರಿ ಅಡ್ಡಾಗುತ್ತಿದ್ದಂತೆ ಮೀನಖಂಡಗಳಲ್ಲಿ ಸೆಳೆತ ಪ್ರಾರಂಭವಾಗುತ್ತದೆ. ಇದ್ದಕ್ಕಿದ್ದಂತೆ ಸ್ನಾಯುಗಳೆಲ್ಲ ಹಿಡಿದು ತಿರುಚಿದಂಥ ಅನುಭವ ತೀವ್ರ ವೇದನೆಯನ್ನು ನೀಡುತ್ತದೆ. ಕಾಲುಗಳಲ್ಲಿ ಒಂದೆಡೆ ಇಟ್ಟುಕೊಳ್ಳಲೂ ಕಷ್ಟ, ಹಾಗಂತ ಅಲ್ಲಾಡಿಸುವುದಕ್ಕೂ ಆಗದ ಸ್ಥಿತಿ. ಈ ಕಾಲು ಅಥವಾ ಮೀನಖಂಡದ ಸೆಳೆತ ಬಹಳಷ್ಟು ಜನರನ್ನು ಕಾಡಿಸುತ್ತದೆ.

ಏನು ಕಾರಣ?

ಇದಕ್ಕೆ ಕಾರಣಗಳು ಹಲವು. ದೀರ್ಘ ಕಾಲ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದು, ವ್ಯಾಯಾಮವಿಲ್ಲದ ಜಡತೆ, ನೀರು ಸಾಕಷ್ಟು ಕುಡಿಯದಿರುವುದು, ಕೆಲವು ಸ್ನಾಯುಗಳನ್ನು ಅತಿಯಾಗಿ ಬಳಸಿದ್ದರಿಂದ ಕಾಡುವ ದುರ್ಬಲತೆ ಅಥವಾ ಮಧುಮೇಹದಂಥ ಯಾವುದೋ ಆರೋಗ್ಯ ಸಮಸ್ಯೆ ಇದಕ್ಕೆ ಕಾರಣವಾಗಬಹುದು. ಸಾಮಾನ್ಯವಾಗಿ ಇಂಥ ಕಾಲು ಸೆಳೆತದಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗದಿದ್ದರೂ, ದಿನಾ ರಾತ್ರಿ ಇದೇ ಕತೆಯಾದರೆ ನಿದ್ದೆಗೆಟ್ಟೇ ಆರೋಗ್ಯ ಹಾಳಾದೀತು. ಹಾಗಾದರೆ ಏನು ಮಾಡಬೇಕು?

Outdoor Exercise

ವ್ಯಾಯಾಮ

ಮಲಗುವ ಸ್ವಲ್ಪ ಹೊತ್ತಿಗೆ ಮೊದಲು ಕೆಲವು ಸರಳವಾದ ವ್ಯಾಯಾಮಗಳನ್ನು ಮಾಡುವುದರಿಂದ ಕಾಲಿನ ಈ ಭಾಗಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸಬಹುದು. ಈ ಕ್ರಮದಿಂದ ಸ್ನಾಯುಗಳ ಸೆಳೆತ, ನೋವು ಕಡಿಮೆಯಾಗುತ್ತದೆ. ಎಂಥ ವ್ಯಾಯಾಮಗಳವು?

ಸ್ಟ್ರೆಚ್‌

ಮೀನಖಂಡಗಳ ಸ್ನಾಯುಗಳನ್ನು ಎಳೆದು ಹಿಗ್ಗಿಸಿದಂತೆ ಸ್ಟ್ರೆಚ್‌ ಮಾಡುವುದು ನೆರವಾಗುತ್ತದೆ. ಇದಕ್ಕಾಗಿ ಗೋಡೆ ಮತ್ತು ನೆಲದ ನಡುವೆ ಪಾದವನ್ನು ಜಾರುಬಂಡೆಯಂತೆ ತಾಗಿಸಿ ನಿಲ್ಲಿಸಿ. ಇನ್ನೊಂದು ಕಾಲನ್ನು ಒಂದಡಿ ಹಿಂದಿಟ್ಟು, ಜಾರುಬಂಡೆಯಂತೆ ನಿಲ್ಲಿದ ಕಾಲನ್ನು ಮುಂದೆ ನೂಕಿ. ಇದಕ್ಕಾಗಿ ಕೈಯಲ್ಲಿ ಗೋಡೆಯನ್ನು ಆಧರಿಸಿ ಹಿಡಿಯಿರಿ. ಈ ವ್ಯಾಯಾಮವು ನಿಖರವಾಗಿ ಮೀನಖಂಡದ ಸ್ನಾಯುವನ್ನೇ ಗುರಿಯಾಗಿಸಿ ಕೊಂಡಂಥದ್ದು.

Benefits Of Walking Every Day

ನಡಿಗೆ

ಸಾಮಾನ್ಯ ನಡಿಗೆಯೂ ಕಾಲಿಗೆ ರಕ್ತ ಸಂಚಾರ ಹೆಚ್ಚಿಸುತ್ತದೆ. ಆದರೆ ಇದು ಒಮ್ಮೆ ಕಾಲಿನ ಬೆರಳುಗಳ ಮೇಲೆ ಮತ್ತೊಮ್ಮೆ ಹಿಮ್ಮಡಿಯ ಮೇಲೆ ನಡೆಯುವಂಥ ಕ್ರಮ. ಹೀಗೆ ಹಿಮ್ಮಡಿಯ ಮೇಲೊಂದು ಸುತ್ತು ಮತ್ತು ಕಾಲ್ಬೆರಳುಗಳ ಮೇಲೊಂದು ಸುತ್ತು ಹಾಕುತ್ತಾ ಮನೆಯಲ್ಲೇ ನಾಲ್ಕಾರು ಬಾರಿ ನಡೆಯಿರಿ. ಇದರಿಂದ ಕಾಲುಗಳ ಸ್ನಾಯುಗಳು ಬಲಗೊಳ್ಳುತ್ತವೆ.

ತಿರುಗಿಸಿ

ಪಾದದ ಕೀಲನ್ನು ವೃತ್ತಾಕಾರದಲ್ಲಿ ನಿಧಾನಕ್ಕೆ ತಿರುಗಿಸಿ. ನಾಲ್ಕು ಬಾರಿ ಪ್ರದಕ್ಷಿಣೆಯಂತೆ ಮತ್ತೆ ನಾಲ್ಕು ಬಾರಿ ಅಪ್ರದಕ್ಷಿಣೆಯಂತೆ ತಿರುಗಿಸಿ. ಇದರಿಂದ ಕೀಲುಗಳ ಆರೋಗ್ಯ ವೃದ್ಧಿಸಿ, ಕಾಲುಗಳಿಗೆ ರಕ್ತ ಸಂಚಾರ ಹೆಚ್ಚುತ್ತದೆ. ಈ ವ್ಯಾಯಾಮವನ್ನು ಕೂತಲ್ಲೇ ಮಾಡಬಹುದು.

Dieting concept. Healthy Food. Beautiful Young Asian Woman

ಆಹಾರದಲ್ಲಿ ಬದಲಾವಣೆ

ದೇಹಕ್ಕೆ ನೀರು ಸಾಕಾಗದೆ ಇರುವುದು ಸ್ನಾಯುಗಳಲ್ಲಿ ಸೆಳೆತ ಬರುವುದಕ್ಕೆ ಪ್ರಮುಖ ಕಾರಣ. ಹಾಗಾಗಿ ದಿನಕ್ಕೆ ಮೂರು ಲೀ. ನೀರಿನ ಪ್ರಮಾಣ ತಪ್ಪಿಸಬೇಡಿ. ಅತಿಯಾಗಿ ಕೆಫೇನ್‌ ಮತ್ತು ಆಲ್ಕೋಹಾಲ್‌ ದೂರ ಮಾಡಿ. ಇದು ಸಮಸ್ಯೆಯನ್ನು ಬಿಗಡಾಯಿಸುತ್ತವೆ. ಬರೀ ನೀರು ಕುಡಿಯುವುದು ಕಷ್ಟ ಎನಿಸಿದರೆ, ಜೊತೆಗೆ ಎಲೆಕ್ಟ್ರೋಲೈಟ್‌ಗಳನ್ನು ಸೇರಿಸಿಕೊಳ್ಳಿ. ಇದರಿಂದ ಸ್ನಾಯುಗಳ ಕ್ಷಮತೆ ಹೆಚ್ಚುತ್ತದೆ. ಜೊತೆಗೆ ಬಾಳೆಹಣ್ಣು, ಪಾಲಕ್‌ ಸೊಪ್ಪು, ಕಾಯಿ-ಬೀಜಗಳು, ಡೇರಿ ಉತ್ಪನ್ನಗಳೆಲ್ಲ ಆಹಾರದಲ್ಲಿ ಇರಲಿ.

ಇದನ್ನೂ ಓದಿ: Glasses or Lenses?: ಕನ್ನಡಕವೋ ಕಾಂಟ್ಯಾಕ್ಟ್‌ ಲೆನ್ಸ್‌ ಬೇಕೋ? ಇದನ್ನು ಓದಿ, ನೀವೇ ನಿರ್ಧರಿಸಿ!

ಜೀವನಶೈಲಿಯ ಬದಲಾವಣೆ

ಜೀವನಶೈಲಿಯನ್ನು ಕೊಂಚ ಬದಲಾಯಿಸಿಕೊಂಡರೆ, ಇಂಥ ಕಿರಿಕಿರಿಗಳನ್ನು ದೂರ ಮಾಡಬಹುದು. ನಿತ್ಯವೂ ವ್ಯಾಯಾಮ ಮಾಡುವುದನ್ನು ತಪ್ಪಿಸಬೇಡಿ. ಇದರಿಂದ ಇಡೀ ಶರೀರದ ರಕ್ತ ಪರಿಚಲನೆ ಉತ್ತಮಗೊಳ್ಳುತ್ತದೆ. ಸ್ನಾಯುಗಳ ಆರೋಗ್ಯವೂ ವೃದ್ಧಿಸುತ್ತದೆ. ಸತ್ವಭರಿತ ಆಹಾರ ಸೇವನೆಯು ಸಹ ಸ್ನಾಯುಗಳ ಕ್ಷಮತೆಯನ್ನು ಹೆಚ್ಚಿಸುತ್ತದೆ. ಪಾದರಕ್ಷೆಗಳ ಬಗ್ಗೆ ಗಮನ ಕೊಡಿ. ಆರಾಮದಾಯಕ ಎನಿಸುವ ಚಪ್ಪಲಿಗಳಿಗೇ ಆದ್ಯತೆ ನೀಡಿ. ಅತಿ ಎತ್ತರದ ಚಪ್ಪಲಿಗಳು, ಬಿಗಿಯಾದ ಶೂಗಳು ಕಾಲಿನ ರಕ್ತ ಸಂಚಾರಕ್ಕೆ ತೊಂದರೆ ನೀಡುತ್ತವೆ. ಮಲಗುವ ಮುನ್ನ ಉಗುರು ಬಿಸಿ ನೀರಿನಲ್ಲಿ ಸ್ನಾನ ಮಾಡುವ ಅಭ್ಯಾಸ ಇರಿಸಿಕೊಂಡರೆ, ಇಂಥ ನೋವುಗಳು ಕಡಿಮೆಯಾಗಿ ಸುಖ ನಿದ್ದೆಗೆ ದಾರಿಯಾಗುತ್ತದೆ.

Continue Reading

ಕರ್ನಾಟಕ

Namma Clinic: ಬಸ್‌ ನಿಲ್ದಾಣ ಸೇರಿದಂತೆ 254 ಕಡೆ ʼನಮ್ಮ ಕ್ಲಿನಿಕ್‌ʼ ಸ್ಥಾಪನೆ

Namma Clinic: ಪ್ರಸಕ್ತ ಸಾಲಿನಲ್ಲಿ ಹೊಸದಾಗಿ 254 ನಮ್ಮ ಕ್ಲಿನಿಕ್‌ಗಳನ್ನು ಪ್ರಾರಂಭಿಸಲು ಅವಕಾಶವಿದ್ದು, ಸ್ಥಳ ಗುರುತಿಸುವ ಕಾರ್ಯ ಶೀಘ್ರದಲ್ಲಿ ಪೂರ್ಣಗೊಳಿಸಬೇಕು ಹಾಗೂ ಸ್ಥಳ ಗುರುತಿಸುವ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಆದ್ಯತೆ ನೀಡುವಂತೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ

VISTARANEWS.COM


on

Namma Clinic
Koo

ಬೆಂಗಳೂರು: ಬಸ್ ನಿಲ್ದಾಣಗಳು ಸೇರಿದಂತೆ (Namma Clinic) ಸಾರ್ವಜನಿಕ ಸ್ಥಳಗಳಲ್ಲಿ ʼನಮ್ಮ ಕ್ಲಿನಿಕ್‌ʼಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಗುರುವಾರ ವಿವಿಧ ಆರೋಗ್ಯ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ನೂತನ ನಮ್ಮ ಕ್ಲಿನಿಕ್‌ಗಳನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಸ್ಥಳ ಗುರುತಿಸಿ 15 ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 503 ನಮ್ಮ ಕ್ಲಿನಿಕ್‌ಗಳನ್ನು ಸದೃಢಗೊಳಿಸುವತ್ತ ಗಮನ ಹರಿಸಬೇಕು. ಪ್ರಸಕ್ತ ಸಾಲಿನಲ್ಲಿ ಹೊಸದಾಗಿ 254 ನಮ್ಮ ಕ್ಲಿನಿಕ್‌ಗಳನ್ನು ಪ್ರಾರಂಭಿಸಲು ಅವಕಾಶವಿದ್ದು, ಸ್ಥಳ ಗುರುತಿಸುವ ಕಾರ್ಯ ಶೀಘ್ರದಲ್ಲಿ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: Glasses or Lenses?: ಕನ್ನಡಕವೋ ಕಾಂಟ್ಯಾಕ್ಟ್‌ ಲೆನ್ಸ್‌ ಬೇಕೋ? ಇದನ್ನು ಓದಿ, ನೀವೇ ನಿರ್ಧರಿಸಿ!

ಸ್ಥಳ ಗುರುತಿಸುವ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಆದ್ಯತೆ ನೀಡುವಂತೆ ತಿಳಿಸಿದ ಸಚಿವರು, ವಿಶೇಷವಾಗಿ ಜೈಲುಗಳು ಹಾಗೂ ಬಸ್ ನಿಲ್ದಾಣಗಳಲ್ಲಿ, ನಮ್ಮ ಕ್ಲಿನಿಕ್‌ಗಳನ್ನ ಆರಂಭಿಸುವ ಕುರಿತು ಸ್ಥಳ ಗುರುತಿಸುವ ಕಾರ್ಯ 15 ದಿನಗಳ ಒಳಗಾಗಿ ಪೂರ್ಣಗೊಳಿಸಿ ಕ್ಯಾಬಿನೆಟ್ ಒಪ್ಪಿಗೆ ಪಡೆಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅನೀಲ್ ಕುಮಾರ್ ಎನ್.ಎಚ್.ಎಂ ಎಂ.ಡಿ ನವೀನ್ ಭಟ್ ಹಾಗೂ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಅವರಿಗೆ ಸೂಚಿಸಿದರು.

15 ನೇ ಹಣಕಾಸಿನಲ್ಲಿ ಆರೋಗ್ಯ ಯೋಜನೆಗಳ ಸ್ಥಿತಿಗತಿಗಳ ಕುರಿತು ಹಿರಿಯ ಆರೋಗ್ಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಸಚಿವರು, ಯೋಜನೆಗಳ ಶೀಘ್ರ ಕಾರ್ಯಗತಗೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕಾಗಿದೆ. ವಿಳಂಬ ನೀತಿಯನ್ನು ಅನುಸರಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: SSLC Examination 2 : 700ಕ್ಕೂ ಹೆಚ್ಚು ಕೇಂದ್ರಗಳಲ್ಲಿ ನಾಳೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಶುರು

ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡ ದುರಸ್ತಿ ಕಾರ್ಯಗಳು, ಆಸ್ಪತ್ರೆಗಳ ಮೂಲಸೌಕರ್ಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ 15ನೇ ಹಣಕಾಸಿನಲ್ಲಿ ಸಿಗುವ ಅನುದಾನವನ್ನು ಸಂಪೂರ್ಣವಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಇದೇ ವೇಳೆ ಆರೋಗ್ಯ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

Continue Reading

ಆರೋಗ್ಯ

Glasses or Lenses?: ಕನ್ನಡಕವೋ ಕಾಂಟ್ಯಾಕ್ಟ್‌ ಲೆನ್ಸ್‌ ಬೇಕೋ? ಇದನ್ನು ಓದಿ, ನೀವೇ ನಿರ್ಧರಿಸಿ!

ಕನ್ನಡಕ ಧರಿಸುವುದೋ ಅಥವಾ ಕಾಂಟ್ಯಾಕ್ಟ್‌ ಲೆನ್ಸ್‌ ಬಳಸುವುದೋ? ಈ ಪ್ರಶ್ನೆ ದೃಷ್ಟಿದೋಷ ಇರುವಂಥ ಹಲವರನ್ನು ಕಾಡಿರಬಹುದು. ಇವೆರಡಕ್ಕೂ ಅದರದ್ದೇ ಆದ ಇತಿ-ಮಿತಿಗಳಿವೆ. ನಿಮ್ಮ ಆದ್ಯತೆ ಯಾವುದು ಎನ್ನುವುದನ್ನು ನಿರ್ಧರಿಸುವುದಕ್ಕೆ ಬೇಕಾದ ಮಾಹಿತಿಗಳು (Glasses or Lenses) ಇಲ್ಲಿವೆ.

VISTARANEWS.COM


on

Glasses or Lenses
Koo

ಕಣ್ಣಿಗೆ ಪವರ್‌ ಇದ್ದರೆ ಆಗಾಗ ಕಾಡುವ ಪ್ರಶ್ನೆ- ಕನ್ನಡಕ ಹಾಕಬೇಕೆ ಅಥವಾ ಕಾಂಟ್ಯಾಕ್ಟ್‌ ಲೆನ್ಸ್‌ ಹಾಕಬೇಕೆ? ಇವೆರಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಂಡರೂ ದೃಷ್ಟಿದೋಪ ಸರಿಪಡಿಸುವುದು ಇದರ ಪ್ರಧಾನ ಉದ್ದೇಶವೆಂಬುದು ನಿಜ. ಆದರೆ ಜೊತೆಗೊಂದಿಷ್ಟು ಇದೆಯಲ್ಲ… ಕೊಸರು! ಇವೆರಡಕ್ಕೂ ಅವುಗಳದ್ದೇ ಆದ ಇತಿ-ಮಿತಿಗಳಿವೆ. ಅದರಲ್ಲೂ ಜೇಬಿಗೆಷ್ಟು ಭಾರ, ಯಾವುದು ಆರಾಮದಾಯಕ, ಧರಿಸುವವರ ಆದ್ಯತೆಗಳೇನು, ಜೀವನಶೈಲಿಗೆ ಹೊಂದುತ್ತದೆಯೇ ಎಂಬ ಹಲವು ವಿಷಯಗಳನ್ನು ಆಧರಿಸಿಯೇ ಆಯ್ಕೆ ಮಾಡುವುದಲ್ಲವೇ? ಇವೆಲ್ಲವುಗಳ ಜೊತೆಗೆ, ಕಣ್ಣಿನ ಆರೋಗ್ಯಕ್ಕೆ ಯಾವುದು ಹಿತ ಎನ್ನುವ ಪ್ರಶ್ನೆ ಮಹತ್ವದ್ದಾಗುತ್ತದೆ. ಯಾವುದು ಹಿತ ಈ (Glasses or Lenses) ಎರಡರೊಳಗೆ?

Glasses

ಕನ್ನಡಕ

ಶತಮಾನಗಳಿಂದ ಎಲ್ಲರ ದೃಷ್ಟಿದೋಷವನ್ನು ಸರಿಪಡಿಸುತ್ತ ಬಂದಿರುವ ಕನ್ನಡಕಗಳು ಯಾವುದೇ ತಲೆಬಿಸಿ ನೀಡದಂಥವು. ನಿಯಮಿತವಾಗಿ ನೇತ್ರವೈದ್ಯರಲ್ಲಿ ಹೋಗಿ ತಪಾಸಣೆ ಮಾಡಿಸಿಕೊಂಡು, ಕಣ್ಣಿನ ಪವರ್‌ ಎಷ್ಟಿದೆ ಎಂಬುದನ್ನು ನೋಡಿಕೊಂಡರಾಯಿತು. ಇರುವ ಕನ್ನಡಕವನ್ನು ಬದಲಾಯಿಸಬೇಕು ಎಂದಿದ್ದರೆ ವೈದ್ಯರೇ ಅದನ್ನು ಸೂಚಿಸುತ್ತಾರೆ. ಅದರಂತೆ ಕನ್ನಡದ ಬದಲಾಯಿಸಿದರೆ, ಮತ್ತಿನ್ನೇನೂ ಮಾಡಬೇಕಿಲ್ಲ. ಕನ್ನಡದ ಗಾಜನ್ನು ಒರೆಸಿ ಸ್ವಚ್ಛ ಮಾಡುವುದಕ್ಕಿಂತ ಹೆಚ್ಚಿನ ನಿರ್ವಹಣೆಯನ್ನು ಅದು ಬೇಡುವುದಿಲ್ಲ. ಇದು ದೃಷ್ಟಿ ದೋಷಕ್ಕೆ ಮದ್ದಷ್ಟೇ ಅಲ್ಲ, ಧೂಳು, ಬಿಸಿಲು, ಹಾನಿಕಾರಕ ಕಿರಣಗಳಿಂದಲೂ ರಕ್ಷಣೆಯನ್ನು ನೀಡಬಲ್ಲದು. ಅದರಲ್ಲೂ ಕೆಲವು ಸುಧಾರಿತ ಫೋಟೋಕ್ರೋಮಿಕ್‌ ಕನ್ನಡಕಗಳು ನೂರು ಪ್ರತಿಶತ ಅತಿನೇರಳೆ ಕಿರಣಗಳನ್ನು ತಡೆಗಟ್ಟಬಲ್ಲವು. ಈ ಕೆಲಸವನ್ನು ಯಾವುದೇ ಲೆನ್ಸ್‌ಗಳೂ ಮಾಡಲಾರವು. ಅವರವರ ಮುಖಮಂಡಲಕ್ಕೆ ಕಳೆಗಟ್ಟಿಸುವಂಥ ಸುಂದರ ಫ್ರೇಮ್‌ಗಳನ್ನು ಆಯ್ದುಕೊಂಡರೆ, ಕನ್ನಡಕವೂ ಫ್ಯಾಷನ್‌ ಘೋಷಣೆಯನ್ನು ಹೊರಡಿಸಬಲ್ಲದು. ಆದರೊಂದು, ಕನ್ನಡಕವನ್ನು ಹಾಕುವುದು ಅನಿವಾರ್ಯ ಎಂದಾಗ, ಕೆಲವೊಮ್ಮೆ ಅದು ಸಮಸ್ಯೆಯನ್ನೂ ಸೃಷ್ಟಿಸಬಲ್ಲದು. ಉದಾ, ಆಡುವುದು, ಓಡುವುದು ಮುಂತಾದ ದೈಹಿಕ ಚಟುವಟಿಕೆಗಳು ಮುಖ್ಯವಾಗಿದ್ದಾಗ ಕನ್ನಡಕ ತೊಡಕೆನಿಸುತ್ತದೆ. ನೃತ್ಯ, ನಟನೆಯಂಥ ಕಲೆಗಳಲ್ಲಿ ಕನ್ನಡಕ ಅಡಚಣೆ ಕೊಡುತ್ತದೆ. ಹೀಗೆ ಬಳಕೆದಾರರ ಮಿತ್ರ ಎನಿಸುವ ಕನ್ನಡಕವೂ ಕೆಲವೊಮ್ಮೆ ಕಣ್‌ ಕಣ್‌ ಬಿಡಿಸುತ್ತದೆ.

 Lenses

ಕಾಂಟ್ಯಾಕ್ಟ್‌ ಲೆನ್ಸ್‌

ಶತಮಾನಗಳ ಇತಿಹಾಸವಿಲ್ಲದ ಇದು, ಆಧುನಿಕ ಕಾಲದ್ದು. ಇಂದಿನ ಹಲವು ರೀತಿಯ ಅಗತ್ಯಗಳು ಮತ್ತು ಬದಲಾವಣೆಗಳಿಗೆ ಹೇಳಿ ಮಾಡಿಸಿದಂತದ್ದು. ಕನ್ನಡಕದ ಭಾರದಿಂದ ಮುಕ್ತಿ ನೀಡುವ ಇದು, ಮುಖದ ಸೌಂದರ್ಯವನ್ನು ಇದ್ದಂತೆಯೇ ಉಳಿಸುತ್ತದೆ. ಮದುವೆ, ನಾಮಕರಣದಂಥ ಸಾಮಾಜಿಕ ಕಾರ್ಯಕ್ರಮಗಳಿರಲಿ, ಆಟ, ಓಟದಂಥ ದೈಹಿಕ ಚಟುವಟಿಕೆಗಳಿರಲಿ, ನೃತ್ಯ-ನಟನೆಯಂಥ ಸಾಂಸ್ಕೃತಿಕ ಕಾರ್ಯಕ್ರಮಗಳಿರಲಿ- ಸಂದರ್ಭ ಯಾವುದೇ ಆದರೂ ಕಾಂಟ್ಯಾಕ್ಟ್‌ ಲೆನ್ಸ್‌ ಬಳಕೆ ಸೂಕ್ತವಾದದ್ದು. ವಾತಾವರಣದಲ್ಲಿ ತೇವ ಹೆಚ್ಚಿದ್ದಾಗ ಅಥವಾ ಮಾಸ್ಕ್‌ ಧರಿಸಿದಾಗ ಕನ್ನಡಕದ ಗಾಜಿನಂತೆ ಲೆನ್ಸ್‌ ಮಸುಕಾಗುವುದಿಲ್ಲ. ಹಾಗಾಗಿ ಕ್ರಿಯಾತ್ಮಕ ದೃಷ್ಟಿಯಿಂದಲೂ ಇದು ಕನ್ನಡಕಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸುತ್ತದೆ. ಕಾಂಟ್ಯಾಕ್ಟ್‌ ಲೆನ್ಸ್‌ ಬಳಸುವುದರಲ್ಲಿ ಇನ್ನೂ ಕೆಲವು ಲಾಭಗಳಿವೆ. ದೃಷ್ಟಿಯ ವ್ಯಾಪ್ತಿ ಕನ್ನಡಕ ಹಾಕಿದ ಸಂದರ್ಭಕ್ಕಿಂತ ಹೆಚ್ಚು ವಿಶಾಲವಾಗಿರುತ್ತದೆ ಲೆನ್ಸ್‌ನಲ್ಲಿ. ಜೊತೆಗೆ ನಿಖರತೆ ಮತ್ತು ಸ್ಪಷ್ಟತೆಯೂ ಅಧಿಕ. ಅದರಲ್ಲೂ ತೀವ್ರ ಅಸ್ಟಿಗ್ಮ್ಯಾಟಿಸಂ ಇರುವವರಲ್ಲಿ ದೃಷ್ಟಿಯ ನಿಖರತೆಯನ್ನು ಕನ್ನಡಕಕ್ಕಿಂತ ಸಾಕಷ್ಟು ಹೆಚ್ಚಿಸಬಲ್ಲದು ಕಾಂಟ್ಯಾಕ್ಟ್‌ ಲೆನ್ಸ್‌. ಎಲ್ಲಕ್ಕಿಂತ ಮುಖ್ಯವಾಗಿ ದೃಷ್ಟಿ ದೋಷ ಇರುವುದನ್ನು ಜಗಜ್ಜಾಹೀರು ಮಾಡದೆಯೇ, ಇದನ್ನು ಬಳಸಬಹುದು.

ಇದನ್ನೂ ಓದಿ: Rock Salt Or Powder Salt: ಬೆಳ್ಳನೆಯ ಪುಡಿ ಉಪ್ಪು ಆರೋಗ್ಯಕರವೇ ಅಥವಾ ಕಲ್ಲುಪ್ಪೇ?

ಜಾಗ್ರತೆ ಅಗತ್ಯ

ಕಾಂಟ್ಯಾಕ್ಟ್‌ ಲೆನ್ಸ್‌ಗಳು ತುಟ್ಟಿ. ಕನ್ನಡಕಗಳಂತೆ ಕಿಸೆಗೆ ಹಗುರವಲ್ಲ ಇವು. ಜೊತೆಗೆ ಇವುಗಳನ್ನು ಸದಾ ಬಳಸುತಿದ್ದರೆ ಕಣ್ಣುಗಳು ತೇವ ಕಳೆದುಕೊಂಡು ಶುಷ್ಕವಾಗುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇವುಗಳನ್ನು ಬಳಸುವಾಗ ಕೈಗಳ ಸ್ವಚ್ಛತೆಯ ಬಗ್ಗೆ ಜಾಗ್ರತೆ ಅಗತ್ಯ. ಹಾಗಿಲ್ಲದಿದ್ದರೆ ಕಣ್ಣಿಗೆ ಸೋಂಕು ಉಂಟಾಗಬಹುದು. ಈ ಕಾರಣದಿಂದಲೇ ಕನ್ನಡಕಗಳಿಗೆ ಹೋಲಿಸಿದರೆ, ಲೆನ್ಸ್‌ ಬಳಕೆದಾರರಲ್ಲಿ ಸೋಂಕಿನ ಪ್ರಮಾಣ ಹೆಚ್ಚು. ಲೆನ್ಸ್‌ಗಳು ಮತ್ತು ಅವುಗಳ ಡ್ರಾಪ್ಸ್‌ ವ್ಯಾಲಿಡಿಟಿಯನ್ನು ಆಗಾಗ ಪರಿಶೀಲಿಸುವುದು ಬಹುಮುಖ್ಯ. ಲೆನ್ಸ್‌ ಧರಿಸಿ ಈಜುವುದು, ರಾತ್ರಿ ನಿದ್ದೆ ಮಾಡುವುದು ಮುಂತಾದವು ಸಲ್ಲದು.

Continue Reading
Advertisement
PNG vs AFG
ಕ್ರೀಡೆ2 seconds ago

PNG vs AFG: ಆಫ್ಘಾನ್​ಗೆ ಗೆಲುವು; ಟೂರ್ನಿಯಿಂದ ಹೊರಬಿದ್ದ ನ್ಯೂಜಿಲ್ಯಾಂಡ್​

BMW Motorrad
ಆಟೋಮೊಬೈಲ್2 mins ago

BMW Motorrad: ಐಷಾರಾಮಿ BMW R 1300 GS ಬೈಕ್‌ ಬಿಡುಗಡೆ; ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ವಿವರ

Actor Darshan his brother-in-law homeless
ಸ್ಯಾಂಡಲ್ ವುಡ್15 mins ago

Actor Darshan: ಸೋದರ ಮಾವಂದಿರನ್ನೇ ಬೀದಿಪಾಲು ಮಾಡಿದ್ದ ದರ್ಶನ್​, ಒಂದೊಂದಾಗಿ ಹೊರಬರುತ್ತಿದೆ ‘ದಾಸ’ನ ದುರ್ಬುದ್ಧಿ !

B S yediyurappa
ಪ್ರಮುಖ ಸುದ್ದಿ20 mins ago

BS Yediyurappa : ಲೈಂಗಿಕ ಕಿರುಕುಳ ಕೇಸ್; ಹೈಕೋರ್ಟ್​ನಲ್ಲಿ ಇಂದು ಯಡಿಯೂರಪ್ಪಗೆ ಜಾಮೀನು ಸಿಗದಿದ್ದರೆ ಬಂಧನ

Nataša Stanković
ಕ್ರೀಡೆ36 mins ago

Nataša Stanković: ವಿಚ್ಛೇದನದ ವದಂತಿಗಳ ನಡುವೆ ಮತ್ತೊಂದು ರಹಸ್ಯ ಪೋಸ್ಟ್​ ಮಾಡಿದ ಹಾರ್ದಿಕ್ ಪಾಂಡ್ಯ ಪತ್ನಿ

Actor Darshan warn darshan previous
ಸ್ಯಾಂಡಲ್ ವುಡ್49 mins ago

Actor Darshan: ಇದು ರೌಡಿಸಂ ಸೆಂಟರ್‌ ಅಲ್ಲ; ನಿಜ ಆಗ್ತಾ ಇದೆಯಾ ಅಂದು ಜಗ್ಗೇಶ್‌ ನುಡಿದಿದ್ದ ಭವಿಷ್ಯ?

7th Pay Commission
ಪ್ರಮುಖ ಸುದ್ದಿ54 mins ago

7th pay commission : ಸಂಪುಟದಲ್ಲಿ ಚರ್ಚೆಯಾಗದ 7ನೇ ವೇತನ ಆಯೋಗ ಶಿಫಾರಸು; ಸರ್ಕಾರಿ ನೌಕರರ ಸಂಘಗಳ ಆಕ್ರೋಶ

Heavy Rainfall
ದೇಶ58 mins ago

Heavy Rainfall: ಸಿಕ್ಕಿಂನಲ್ಲಿ ಭಾರೀ ಮಳೆ, ಪ್ರವಾಹ: 6 ಮಂದಿ ಸಾವು, ಭೂಕುಸಿತದಿಂದ ಸಂಪರ್ಕ ಕಡಿತ

Paris Olympics 2024
ಕ್ರೀಡೆ1 hour ago

Paris Olympics 2024: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಬೋಪಣ್ಣಗೆ ಶ್ರೀರಾಮ್‌ ಬಾಲಾಜಿ ಜತೆಗಾರ

Tirupati Temple
ಪ್ರಮುಖ ಸುದ್ದಿ1 hour ago

Tirupati Temple : ತಿರುಪತಿ ದೇಗುಲವನ್ನು ಹಿಂದೂ ನಂಬಿಕೆಯಂತೆ ಪವಿತ್ರಗೊಳಿಸುವೆ; ಸಿಎಂ ಚಂದ್ರಬಾಬು ನಾಯ್ಡು ಶಪಥ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ3 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ3 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ3 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ3 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ7 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ7 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌