MLC Election: ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆಗೆ ಖ್ಯಾತ ವಕೀಲ ಎಚ್. ಸುನೀಲ್ ಕುಮಾರ್ ಸ್ಪರ್ಧೆ - Vistara News

ಬೆಂಗಳೂರು

MLC Election: ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆಗೆ ಖ್ಯಾತ ವಕೀಲ ಎಚ್. ಸುನೀಲ್ ಕುಮಾರ್ ಸ್ಪರ್ಧೆ

MLC Election: ವಕೀಲಿ ವೃತ್ತಿಯಲ್ಲಿ ಬಡಜನರ ಪರವಾಗಿ ನ್ಯಾಯಕ್ಕಾಗಿ ಹೋರಾಡುತ್ತಿದ್ದ ಎಚ್. ಸುನೀಲ್ ಕುಮಾರ್ ಅವರು, ಜನಸೇವೆಗಾಗಿ ರಾಜಕೀಯಕ್ಕೆ ಕಾಲಿಟ್ಟಿದ್ದಾರೆ.

VISTARANEWS.COM


on

HS Sunil Kumar
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆ 2023-24ಕ್ಕೆ (MLC Election) ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಖ್ಯಾತ ವಕೀಲ ಎಚ್. ಸುನೀಲ್ ಕುಮಾರ್ ಅವರು ಸ್ಪರ್ಧಿಸುತ್ತಿದ್ದಾರೆ. ವಕೀಲಿ ವೃತ್ತಿಯಲ್ಲಿ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಾ ಹಲವು ಶಿಕ್ಷಕರು, ಬಡಜನರ ಸಮಸ್ಯೆಗಳಿಗೆ ಸ್ಪಂದಿಸಿ, ನ್ಯಾಯಕ್ಕಾಗಿ ಹೋರಾಡುತ್ತಿದ್ದ ಎಚ್. ಸುನೀಲ್ ಕುಮಾರ್ ಅವರು ಇದೀಗ ಜನಸೇವೆಗಾಗಿ ರಾಜಕೀಯಕ್ಕೆ ಕಾಲಿಟ್ಟಿದ್ದಾರೆ.

ಎಚ್. ಸುನೀಲ್ ಕುಮಾರ್ ಅವರು ಮೂಲತಃ ಚಾಮರಾಜನಗರದ ಕೊಳ್ಳೇಗಾಲ ತಾಲೂಕಿನವರು. ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ಸೇಂಟ್‌ ಫ್ರಾನ್ಸಿಸ್ ಶಾಲೆಯಲ್ಲಿ ಮುಗಿಸಿ, ಕ್ರೈಸ್ಟ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದ ಅವರು, MA, MPHIL, LLB, HRM, CPA ಪದವೀಧರರಾಗಿದ್ದಾರೆ.

ಮಲ್ಲೇಶ್ವರ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಲೀಸಾ ಎಂಬ ಹುಡುಗಿಗೆ ಸರ್ಕಾರದಿಂದ ನ್ಯಾಯ ಪರಿಹಾರ ಒದಗಿಸಿಕೊಟ್ಟಿದ್ದ ಇವರು, ಕೋರ್ಟ್‌ನಲ್ಲಿ ಹಲವರ ಪರವಾಗಿ ಉಚಿತವಾಗಿ ವಾದ ಮಂಡಿಸಿ ನ್ಯಾಯ ದೊರಕಿಸಿಕೊಟ್ಟಿದ್ದಾರೆ.

ಇದನ್ನೂ ಓದಿ | Lalbagh Flower Show: ಫಲಪುಷ್ಪ ಪ್ರದರ್ಶನದಲ್ಲಿ ಬಸವ ತತ್ವ; ಎಂ.ಬಿ. ಪಾಟೀಲ್‌ ಸಂತಸ

ವಕೀಲರ ಹುದ್ದೆಯಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿರುವ ಸುನೀಲ್ ಕುಮಾರ್ ಅವರು ಬೆಂಗಳೂರು ಶಿಕ್ಷಕರ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸುನೀಲ್ ಕುಮಾರ್ ಅವರು, ಶಿಕ್ಷಕರ ಸಮುದಾಯದಲ್ಲಿ ಹಲವು ವರ್ಷಗಳಿಂದ ಮುಕ್ತಿ ಕಾಣದಿರುವ ಸಮಸ್ಯೆಗಳಿವೆ. ಇವುಗಳನ್ನು ಅರಿತು ನನ್ನ ಕನಸು, ಕಲ್ಪನೆ, ಬುದ್ಧಿ ಭಾವನೆಗಳಿಗಾಗಿ, ನಿಮ್ಮ ಆತ್ಮಗೌರವವನ್ನು ಕಾಪಾಡುವ ನಿಟ್ಟಿನಲ್ಲಿ ಮುಂಬರುವ ಬೆಂಗಳೂರು ಶಿಕ್ಷಕರ ಕ್ಷೇತ್ರದ ಕರ್ನಾಟಕ ವಿಧಾನ ಪರಿಷತ್‌ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ನಿಮ್ಮೆಲ್ಲರ ಬೆಂಬಲವಿರಲಿ ಎಂದು ಶಿಕ್ಷಕರನ್ನು ಕೋರಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Veeraloka Books : ಹೊಸ ಲೇಖಕರಿಗೆ ವೀರಲೋಕ ಪ್ರಕಾಶನ ಹೆದ್ದಾರಿಯನ್ನೇ ಸೃಷ್ಟಿಸಿದೆ: ಜಯಂತ್‌ ಕಾಯ್ಕಿಣಿ ಶ್ಲಾಘನೆ

Veeraloka Books: ಕನ್ನಡ ಪುಸ್ತಕ ಲೋಕದ ಪ್ರತಿಕೂಲ ಪರಿಸ್ಥಿತಿಯಲ್ಲಿ ವೀರಲೋಕ ಪ್ರಕಾಶನವು ಅಜ್ಞಾತ ಓದುಗರನ್ನೂ ತಲುಪಿದೆ. ಎಲ್ಲೋ ತಮ್ಮ ಪಾಡಿಗೆ ತಾವು ಬರೆದುಕೊಂಡಿದ್ದು, ಪ್ರಕಾಶಕರು ಸಿಗದೆ ಪರದಾಡುತ್ತಿರುವವರಿಗೆ ವೀರಲೋಕ ಹೆದ್ದಾರಿಯನ್ನೇ ಸೃಷ್ಟಿ ಮಾಡಿದೆ. ಇಡೀ ತಂಡದ ವೇಗ ಹೀಗೆಯೇ ಮುಂದುವರಿಯಲಿ ಎಂದು ಹಿರಿಯ ಸಾಹಿತಿ ಜಯಂತ್‌ ಕಾಯ್ಕಿಣಿ ಅವರು ಹಾರೈಸಿದರು.

VISTARANEWS.COM


on

Veeraloka
Koo

ಬೆಂಗಳೂರು: ಇವತ್ತು ದಾಲ್ ತಡ್ಕ ರೇಟ್ ಜಾಸ್ತಿಯಾದರೆ (Veeraloka Books) ನಾವು ಯಾರನ್ನೂ ಕೇಳುವುದಿಲ್ಲ. ಸುಮ್ಮನೆ ಹೋಗಿ ಹಣ ಕೊಟ್ಟು ತಿಂದು ಬರುತ್ತೇವೆ. ಆದರೆ ಕನ್ನಡ ಪುಸ್ತಕಗಳಿಗೆ ದಾಲ್‌ ತಡ್ಕಾಗಿರುವಷ್ಟು ಬೇಡಿಕೆಯೂ ಇಲ್ಲ. ಮುಖಬೆಲೆ ಐದು ರೂಪಾಯಿ ಜಾಸ್ತಿಯಾದರೂ ಓದುಗ ಪುಸ್ತಕ ಖರೀದಿಸಲು ಹಿಂದೆ ಮುಂದೆ ನೋಡುವಂಥ ಪರಿಸ್ಥಿತಿ ಇದೆ ಎಂದು ಹಿರಿಯ ಸಾಹಿತಿ ಜಯಂತ್‌ ಕಾಯ್ಕಿಣಿ (jayant kaikini) ವಿಷಾದಿಸಿದರು. ನಗರದಲ್ಲಿ ಶನಿವಾರ ಆಯೋಜಿಸಲಾಗಿದ್ದ ವೀರಲೋಕ ಬುಕ್ಸ್ 2ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕನ್ನಡ ಪುಸ್ತಕ ಲೋಕದ ಪ್ರತಿಕೂಲ ಪರಿಸ್ಥಿತಿಯಲ್ಲಿ ವೀರಲೋಕ ಪ್ರಕಾಶನವು ಅಜ್ಞಾತ ಓದುಗರನ್ನೂ ತಲುಪಿದೆ. ಎಲ್ಲೋ ತಮ್ಮ ಪಾಡಿಗೆ ತಾವು ಬರೆದುಕೊಂಡಿದ್ದು, ಪ್ರಕಾಶಕರು ಸಿಗದೆ ಪರದಾಡುತ್ತಿರುವವರಿಗೆ ವೀರಲೋಕ ಹೆದ್ದಾರಿಯನ್ನೇ ಸೃಷ್ಟಿ ಮಾಡಿದೆ. ಇಡೀ ತಂಡದ ವೇಗ ಹೀಗೆಯೇ ಮುಂದುವರಿಯಲಿ ಎಂದು ಕಾಯ್ಕಿಣಿ ಅವರು ಹಾರೈಸಿದರು.

ವೀರಲೋಕ ಬುಕ್ಸ್ ಆಯೋಜಿಸಿದ್ದ 2ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಐದು ಕೃತಿಗಳ ಬಿಡುಗಡೆಯನ್ನೂ ಹಮ್ಮಿಕೊಳ್ಳಲಾಗಿತ್ತು. ಅವುಗಳಲ್ಲಿ ರಾಧಾಕೃಷ್ಣ ಕಲ್ಚಾರ್‌ ಅವರ ‘ಕವಚ’ ಕಾದಂಬರಿ ವೀರಲೋಕದ ನೂರನೇ ಕೃತಿಯಾಗಿತ್ತು. ಡಾ. ಎಂ ವೆಂಕಟಸ್ವಾಮಿಯವರ ‘ಜಗತ್ತಿನ ಭೀಕರ ಯುದ್ಧಗಳು’, ನೌಶಾದ್ ಜನ್ನತ್ತ್ ಅವರ ‘ಬೇವಾಚ್’, ಸಂದ್ಯಾರಾಣಿಯವರ ‘ನಾತಿಚರಾಮಿ’, ಡಾ. ಶೈಲೇಶ್ ಕುಮಾರ್ ಅವರ ‘ಸುಪ್ತ ಸಾಗರದಾಚೆ’ ಇನ್ನಿತರ ಕೃತಿಗಳಾಗಿದ್ದವು.
ವೀರಲೋಕ ಬುಕ್ಸ್ ಸಂಸ್ಥಾಪಕರಾದ ವೀರಕಪುತ್ರ ಶ್ರೀನಿವಾಸ್ ಅವರು ಆಶಯ ನುಡಿಗಳನ್ನಾಡಿದರು. ಎರಡು ವರ್ಷಗಳಲ್ಲಿನ ಏಳುಬೀಳುಗಳು, ಮೈಲುಗಲ್ಲುಗಳು, ಮುಂದಿನ ತಯಾರಿಗಳ ಬಗ್ಗೆ ವಿವರಿಸಿದರು.

ಇದೇ ವೇದಿಕೆಯಲ್ಲಿ ಅನಂತ ಕುಣಿಗಲ್ ಅವರು ಸಂಪಾದಿಸಿರುವ ವೀರಕಪುತ್ರ ಶ್ರೀನಿವಾಸ್ ಅವರ ಲಲಿತ ಪ್ರಬಂಧಗಳ ಸಂಕಲನ ‘ಬದುಕೇ ಥ್ಯಾಂಕ್ಯೂ’ ಕೃತಿಯೂ ಬಿಡುಗಡೆಯಾಯಿತು. ಕನ್ನಡ ಮಾಣಿಕ್ಯ ಮಾಸ ಪತ್ರಿಕೆಯ ದಶಮಾನೋತ್ಸವವನ್ನೂ ಆಚರಿಸಲಾಯಿತು. ವೀರಲೋಕದ ಐದು ಕೃತಿಗಳ ಮರುಮುದ್ರಣದ ಆವೃತ್ತಿಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಇದನ್ನೂ ಓದಿ: V Somanna profile : ಅಂದು ಜನತಾ ಬಜಾರ್‌ನಲ್ಲಿ ಸೇಲ್ಸ್‌ಮ್ಯಾನ್‌; ಇಂದು ಕೇಂದ್ರ ಸಚಿವ! ವಿ ಸೋಮಣ್ಣ ರಾಜಕೀಯ ಹಾದಿ ಕುತೂಹಲಕರ

ಚಿತ್ರ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಹಿರಿಯ ಸಾಹಿತಿ ಮಲ್ಲೇಪುರಂ ಜಿ. ವೆಂಕಟೇಶ್, ನಿರ್ದೇಶಕ ಮಂಸೋರೆ, ಸಂಭಾಷಣೆಕಾರ ಮಾಸ್ತಿ, ಮಹೇಶ ಅರಬಳ್ಳಿ, ಭಾರತಿ ಬಿ.ವಿ, ಪೂರ್ಣಿಮಾ ಮಾಳಗಿಮನಿ, ಶೋಭಾ ರಾವ್, ನವೀನ್ ಸಾಗರ್, ಮಂಡ್ಯ ರಮೇಶ್, ಜೋಗಿ, ಸಂತೋಷ್ ಹಾನಗಲ್, ದಿವ್ಯಾ ಆಲೂರು, ಹರಿವು ರತೀಶ್, ಕಾನ್ಕೇವ್ ನಂದೀಶ್, ಪ್ರಕಾಶ್ ಕಂಬತ್ತಳ್ಳಿ, ಷಡಕ್ಷರಿ, ವಿ ನಾಗೇಂದ್ರ ಪ್ರಸಾದ್ ಮತ್ತಿತರು ಉಪಸ್ಥಿತರಿದ್ದರು.

Continue Reading

ಪ್ರಮುಖ ಸುದ್ದಿ

V Somanna profile : ಅಂದು ಜನತಾ ಬಜಾರ್‌ನಲ್ಲಿ ಸೇಲ್ಸ್‌ಮ್ಯಾನ್‌; ಇಂದು ಕೇಂದ್ರ ಸಚಿವ! ವಿ ಸೋಮಣ್ಣ ರಾಜಕೀಯ ಹಾದಿ ಕುತೂಹಲಕರ

V Somanna profile: ಅತಿ ಸಣ್ಣ ಕುಗ್ರಾಮವೊಂದರಿಂದ ಒಂದು ಜತೆ ಬಟ್ಟೆ ಮತ್ತು ಪುಟ್ಟ ಬ್ಯಾಗ್ ಹಿಡಿದುಕೊಂಡು ಹೊಟ್ಟೆಪಾಡಿಗಾಗಿ ಬೆಂಗಳೂರೆಂಬ ಮಹಾ ನಗರಕ್ಕೆ ಕಾಲಿಟ್ಟ ಸೋಮಣ್ಣ ಅವರು, ಮುಂದಿನ ಕೆಲವೇ ವರ್ಷದಲ್ಲಿ ಬೆಂಗಳೂರಿನ ಪ್ರಮುಖ ನಾಯಕರಾಗಿ ಬೆಳೆದರು. ಮೊದಲು ಕಾರ್ಪೊರೇಟರ್‌, ಬಳಿಕ ಶಾಸಕ, ಈಗ ಸಂಸದ-ಸಚಿವ…ಹೀಗೆ ವಿ ಸೋಮಣ್ಣ ಅವರ ರಾಜಕೀಯ ಹಾದಿ ರೋಚಕವಾಗಿದೆ.

VISTARANEWS.COM


on

V Somanna profile
Koo

ವಿ ಸೋಮಣ್ಣ ಅವರು (V Somanna profile) ಬೆಂಗಳೂರಿನ ಬಿನ್ನಿಪೇಟೆಯಲ್ಲಿ ಕಾರ್ಪೋರೇಟರ್‌ ಆಗಿ ರಾಜಕೀಯ ಹಾದಿ ತುಳಿದವರು. ಈಗ ಕೇಂದ್ರ ಸಚಿವರಾಗುವ ತನಕ ಅವರು ಸಾಗಿ ಬಂದ ರಾಜಕೀಯ ಹಾದಿ ರೋಚಕವಾಗಿದೆ. ವಿ ಸೋಮಣ್ಣ ಅವರು ಜನ ಸಮೂಹದ ನಡುವಿನಿಂದ ನಾಯಕರಾಗಿ ಬೆಳೆದು ಬಂದವರು. ಹಾಗಾಗಿ 40 ವರ್ಷಗಳ ಬಳಿಕವೂ ಅವರ ಪ್ರಭಾವ ಮತ್ತು ವರ್ಚಸ್ಸು ರಾಜ್ಯ ರಾಜಕಾರಣದಲ್ಲಿ ಪ್ರಖರವಾಗಿ ಉಳಿದಿದೆ.
ನಾಡಿನ ಅತಿ ಸಣ್ಣ ಕುಗ್ರಾಮವೊಂದರಿಂದ ಒಂದು ಜತೆ ಬಟ್ಟೆ ಮತ್ತು ಪುಟ್ಟ ಬ್ಯಾಗ್ ಹಿಡಿದುಕೊಂಡು ಹೊಟ್ಟೆಪಾಡಿಗಾಗಿ ಬೆಂಗಳೂರೆಂಬ ಮಹಾ ನಗರಕ್ಕೆ ಕಾಲಿಟ್ಟ ಸೋಮಣ್ಣ ಅವರು, ಮುಂದಿನ ಕೆಲವೇ ವರ್ಷದಲ್ಲಿ ಬೆಂಗಳೂರಿನ ಪ್ರಮುಖ ನಾಯಕರಾಗಿ ಬೆಳೆದರು.

ಅವರು ರಾಮನಗರ ಜಿಲ್ಲೆಯ ಮರಳವಾಡಿ ಎಂಬ ಸಣ್ಣ ಊರಿನ ತೇರಬೀದಿಯಿಂದ ಬೆಂಗಳೂರೆಂಬ ರಾಜಬೀದಿಯಲ್ಲಿ ಅಂಬೆಗಾಲಿಟ್ಟು, ಜನತಾ ಬಜಾರ್‌ನಿಂದ ಜನತಾಪಕ್ಷಕ್ಕೆ ಪ್ರವೇಶ ಪಡೆದು, ಕಾರ್ಪೊರೇಟರ್ ಆಗಿ ಲೋಕಲ್ ಲೀಡರ್ ಎಂದು ಗುರುತಿಸಿಕೊಂಡು, ಶಾಸಕರಾಗಿ ವಿಧಾನಸಭೆಗೆ ಪ್ರವೇಶ ಪಡೆದು, ಸಚಿವರಾಗಿ ಇಡೀ ರಾಜ್ಯ ಗುರುತಿಸುವಂಥ ಕೆಲಸ ಮಾಡುವ ಮೂಲಕ ನಾಡಿನ ಮುಂಚೂಣಿ ರಾಜಕೀಯ ಧುರೀಣರಾಗಿ ಬೆಳೆದವರು.
ಶಿಸ್ತು, ಶ್ರದ್ಧೆ, ನೇರ ನಡೆ-ನುಡಿ, ಸರಳ ಸಜ್ಜನಿಕೆ, ಎನಗಿಂತ ಕಿರಿಯರಿಲ್ಲ ಎಂಬ ನಿನಮ್ರತೆ, ಹಿಡಿದ ಕೆಲಸವನ್ನು ಬಿಡದೆ ಮಾಡಿ ಮುಗಿಸುವ ಛಲ, ಜನ ಸಾಮಾನ್ಯರ ತೀರಾ ಸಾಮಾನ್ಯ ಸಮಸ್ಯೆಗಳಿಗೂ ಸ್ಪಂದಿಸುವ ಗುಣ, ಅಭಿವೃದ್ಧಿ ಕುರಿತ ದೂರದೃಷ್ಟಿ, ಅಧ್ಯಯನ ಪ್ರವೃತ್ತಿ, ಜಾತಿ ಧರ್ಮ ಜನಾಂಗದ ಸೀಮಾ ರೇಖೆಯನ್ನು ದಾಟಿ ಜನರೊಂದಿಗೆ ಬೆರೆಯುವಿಕೆ, ಬಸವಣ್ಣನವರ ಕಾಯಕವೇ ಕೈಲಾಸ ಎಂಬ ತತ್ವಕ್ಕೆ ನಿಷ್ಠೆ, ಆದರೆ ನಾಲ್ಕು ಜನರಿಗೆ ಒಳಿತಾಗುತ್ತದೆ ಎಂದೆನಿಸಿದರೆ ಸಾಮ ದಾನ ಭೇದ ದಂಡ ಅಸ್ತ್ರ ಪ್ರಯೋಗಿಸಲೂ ಹಿಂಜರಿದ ದಿಟ್ಟತನ, ಧರ್ಮೋ ರಕ್ಷತಿ ರಕ್ಷಿತಃ ಎಂಬ ಗೀತೋಪದೇಶದ ಪಾಲನೆ, ಸರ್ವ ಜಾತಿ-ಧರ್ಮಗಳ ಸ್ವಾಮೀಜಿಗಳ ಪ್ರೀತಿ ವಿಶ್ವಾಸಕ್ಕೆ ಪಾತ್ರ…ಹೀಗೆ ಹತ್ತು ಹಲವಾರು ಹೆಚ್ಚುಗಾರಿಕೆಗಳು ಸೋಮಣ್ಣ ಅವರನ್ನು ಇಂದು ರಾಜಕೀಯವಾಗಿ ಇಷ್ಟು ಎತ್ತರಕ್ಕೆ ತಂದು ನಿಲ್ಲಿಸಿವೆ.

ಊರು ಬಿಡುವಾಗ ಅಮ್ಮ ಕೊಟ್ಟ 15 ರೂ. ಇತ್ತು…

ಮರಳವಾಡಿ ಎಂಬ ಕುಗ್ರಾಮದಿಂದ ಬದುಕಿನ ದಾರಿ ಹುಡುಕುತ್ತ ತಾವು ಬೆಂಗಳೂರಿಗೆ ಬಂದ ಕತೆಯನ್ನು ಸೋಮಣ್ಣ ಹೇಳುವುದು ಹೀಗೆ:
ಊರಲ್ಲಿ ಪಿಯುಸಿ ಮುಗಿಯುತ್ತಿದ್ದಂತೆ, ಅದ್ಯಾವುದೋ ಹೊಸ ದಿಕ್ಕಿನತ್ತ ನನ್ನ ಮನಸ್ಸು ತುಡಿಯುತ್ತಿತ್ತು. ಊರು ಬಿಟ್ಟು ಬೆಂಗಳೂರಿಗೆ ಹೋಗಲು ಮನಸ್ಸು ತವಕಿಸುತ್ತಿತ್ತು. ಆದರೆ ಮನೆಯಲ್ಲಿ ವ್ಯವಸಾಯ ಮಾಡುವಂತೆ ಒತ್ತಾಯಿಸುತ್ತಿದ್ದರು. ಅದೊಂದು ದಿನ ಗಟ್ಟಿ ಮನಸ್ಸು ಮಾಡಿ ಊರು ಬಿಟ್ಟೆ. ಜೇಬಿನಲ್ಲಿ ಅಮ್ಮ ಕೊಟ್ಟ 15 ರೂ. ಇತ್ತು. ಜತೆಗೆ ಇನ್ನೊಂದು ಜತೆ ಬಟ್ಟೆಯ ಸಣ್ಣ ಬ್ಯಾಗು.

ಬೆಂಗಳೂರಿನಲ್ಲಿ ಬಸಪ್ಪ ಸರ್ಕಲ್ ನಲ್ಲಿ ಬಂದು ಇಳಿದೆ. ನನಗಾಗ 18 ವರ್ಷ. ಅಲ್ಲೇ ಪಕ್ಕದಲ್ಲಿ ಸಣ್ಣ ಧೋಬಿ ಅಂಗಡಿ ಇಟ್ಟುಕೊಂಡಿದ್ದ ನಾಗಣ್ಣ ಎಂಬುವರು ನನ್ನನ್ನು ಗುರುತಿಸಿ, ಏನ್ ಸೋಮಣ್ಣ ಇಲ್ಲಿ ಎಂದರು. ಅಣ್ಣಾ ಏನಾದರು ಒಂದು ದಾರಿ ತೋರಿಸು ಅಣ್ಣಾ ಎಂದು ಅವರಿಗೆ ದುಂಬಾಲು ಬಿದ್ದೆ. ಅವರು ಸೀದಾ ನನ್ನನ್ನು ಚಂಗಲ್ ರಾಯ ಶೆಟ್ಟಿ ಎಂಬುವರ ಬಳಿ ಕರೆದೊಯ್ದರು. ಅವರದು ಮೋಟಾರ್ ರಿಪೇರಿ ಅಂಗಡಿ. ಹುಡುಗಾ ನನ್ನ ಜತೆಗೇ ಇದ್ದುಬಿಡು ಎಂದರವರು. ತಮ್ಮ ಅಂಗಡಿಯಲ್ಲೇ ಉಳಿದುಕೊಳ್ಳಲು ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಿಕೊಟ್ಟರು. ಮೋಟಾರು ಬಿಡಿ ಭಾಗಗಳನ್ನು ಎತ್ತಿ ಕೊಡುವುದು, ಅವರು ಕರೆದಲ್ಲಿಗೆ ಹೋಗುವುದು…ಇಷ್ಟೇ ನನ್ನ ಕೆಲಸ.
ಕೆಲ ದಿನಗಳ ಬಳಿಕ ಸಿಂಗಲ್ ರೂಮಿನ ಮನೆಯೊಂದಕ್ಕೆ ಶಿಫ್ಟ್ ಆದೆ. ಕೇವಲ ಆರಡಿ ಎಂಟಡಿ ಅಳತೆಯ ಶೀಟಿನ ಮನೆ ಅದು. ಬಾಡಿಗೆ ತಿಂಗಳಿಗೆ ಕೇವಲ 7 ರೂಪಾಯಿ!

ಪಿಯುಸಿಯಲ್ಲಿ ಫೇಲ್‌ ಆಗಿದ್ದೆ

ನಾನು ಪಿಯುಸಿಯ ಒಂದು ವಿಷಯದಲ್ಲಿ ಫೇಲ್ ಆಗಿದ್ದೆ. ಅದನ್ನು ಪಾಸ್ ಮಾಡಿಕೊಂಡೆ. ಆಗೆಲ್ಲ ಪಿಯುಸಿ ಅಂದರೆ ಒಂದೇ ವರ್ಷ. ಹಗಲು ಮೋಟಾರು ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುತ್ತಲೇ ವಿವಿ ಪುರಂ ಸಂಜೆ ಕಾಲೇಜು ಸೇರಿದೆ. ರಾತ್ರಿಯಿಡೀ ಕಷ್ಟಪಟ್ಟು ಓದಿ ಪದವಿಯಲ್ಲಿ ಒಳ್ಳೆಯ ಅಂಕ ಗಳಿಸಿದೆ.

ಮುಂದೆ ಧೋಬಿ ಅಂಗಡಿಯ ನಾಗಣ್ಣ ನನ್ನನ್ನು ಜಯಸಿಂಹ ಎಂಬುವವರನ್ನು ಪರಿಚಯಿಸಿ ಅವರ ಕಂಪನಿಯಲ್ಲಿ ಕೆಲಸ ಕೊಡಿಸಿದರು. ನಾಗಣ್ಣ ಬಲು ಬುದ್ಧಿವಂತ ಮತ್ತು ಶ್ರಮಜೀವಿ. ನನ್ನ ಬದುಕಿನ ಆರಂಭದ ದಿನಗಳಲ್ಲಿ ನನಗೆ ಆಸರೆಯಾಗಿ ನಿಂತರು. ನಂತರ 1971ರಲ್ಲಿ ನಾನು ಕನ್ಷುಮರ್ ಫೆಡರೇಷನ್ ಗೆ ಅರ್ಜಿ ಸಲ್ಲಿಸಿದೆ. ಗುಮಾಸ್ತನ ಕೆಲಸ ಗಿಟ್ಟಿಸುವುದು ಆ ದಿನಗಳಲ್ಲಿ ನನ್ನ ಮಹತ್ವಾಕಾಂಕ್ಷೆಯಾಗಿತ್ತು! ಎ ಶಾಂತಮಲ್ಲಪ್ಪ ಅವರು ಫೆಡರೇಷನ್ ನ ಅಧ್ಯಕ್ಷರಾಗಿದ್ದರು. ಅವರು ಸಂದರ್ಶನ ತಗೊಂಡು, ”ಗುಮಾಸ್ತನ ಕೆಲಸ ಬೇಡ ನಿನಗೆ. ಸೇಲ್ಸ್ ಅಸಿಸ್ಟೆಂಟ್ ಕೆಲಸಕ್ಕೆ ಬಾ” ಎಂದರು.

ಸೇಲ್ಸ್‌ ಅಸಿಸ್ಟಂಟ್‌ ಕೆಲಸ

ಕೆಲಸಕ್ಕೆ ಸೇರಲು 500 ರೂ. ಡಿಪಾಸಿಟ್ ಕಟ್ಟಬೇಕಿತ್ತು. ಅಷ್ಟು ದುಡ್ಡು ಹೊಂದಿಸಲು ನಾನು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಊರಲ್ಲಿ ಹೋಗಿ ಕೇಳಿದರೆ, ಏಯ್ ಇಲ್ಲಿ ಬೇಸಾಯ ಮಾಡಿಕೊಂಡಿರು. ಬೆಂಗಳೂರಿಗೆ ಯಾಕೆ ಹೋಗಬೇಕು ನೀನು ಎಂದರು. ಕೊನೆಗೆ ಅಮ್ಮ 200 ರೂ. ಕೊಟ್ಟು ಕಳಿಸಿದರು. ಬೆಂಗಳೂರಿನ ಶಿವಾಜಿ ಟಾಕೀಸ್ ಬಳಿ ಆಗ ಉರುವಲು ಕಟ್ಟಿಗೆ ಮಾರುವ ವೇ ಬ್ರಿಡ್ಜ್ ಇತ್ತು. ಅಲ್ಲಿ ತಿಮ್ಮಯ್ಯ ಎಂಬೊಬ್ಬರ ಪರಿಚಯವಾಗಿತ್ತು. ಅವರ ಬಳಿ ಹೋಗಿ ಸಮಸ್ಯೆ ಹೇಳಿಕೊಂಡಾಗ 500 ರೂ. ಕೊಟ್ಟರು. ಅಂತೂ ಬೆಂಗಳೂರಿನ ಕೆ ಜಿ ರೋಡ್ ನ ಜನತಾ ಬಜಾರ್ ನಲ್ಲಿ ಕೆಲಸ ಶುರು ಮಾಡಿದೆ. ಅಲ್ಲಿಂದ ನನ್ನ ಬದುಕಿಗೆ ಹೊಸ ತಿರುವು ಸಿಕ್ಕಿತು.

ಜನತಾ ಬಜಾರ್ ನಲ್ಲಿ ಕೆಲಸ ಮಾಡುತ್ತಿರುವಾಗಲೇ, ಇನ್ನಷ್ಟು ದುಡಿಯಬೇಕು ಎಂದೆನಿಸುತ್ತಿತ್ತು. ಅದೇ ಹೊತ್ತಿಗೆ ವಿಜಯಾ ಬ್ಯಾಂಕ್ ಮ್ಯಾನೇಜರ್ ಪ್ರಭಾಕರ್ ಎಂಬುವರ ಪರಿಚಯವಾಯಿತು. ಇನ್ನು ಏನಾದರು ಮಾಡಬೇಕಲ್ಲ ಸರ್ ನಾನು ಅಂದೆ. ಪಿಗ್ಮಿ ಕಲೆಕ್ಟ್ ಮಾಡು ನೀನು ಎಂದು ಸಲಹೆ ನೀಡಿದರು. ಮಧ್ಯಾಹ್ನ 1.30ರಿಂದ 4 ಗಂಟೆಯವರೆಗಿನ ಬಿಡುವಿನ ಅವಧಿಯಲ್ಲಿ ಅಂಗಡಿ ಅಂಗಡಿ ತಿರುಗಿ ಪಿಗ್ಮಿ ಕಲೆಕ್ಟ್ ಮಾಡತೊಡಗಿದೆ. ಸಂಜೆ ಡ್ಯೂಟಿ ಮುಗಿದ ಮೇಲೆ ರಾತ್ರಿ 9 ಗಂಟೆವರೆಗೆ ಮತ್ತೆ ಇದೇ ಕೆಲಸ. ಇದರಿಂದ ತಿಂಗಳಿಗೆ ಸುಮಾರು 2 ಸಾವಿರ ರೂ. ಎಕ್ಟ್ರಾ ಇನ್ ಕಮ್ ಬರತೊಡಗಿತು. ಜನತಾ ಬಜಾರ್ ಸಂಬಳ ಹೆಚ್ಚು ಕಡಿಮೆ ಇಷ್ಟೇ ಬರುತ್ತಿತ್ತು.

ಜನತಾ ಬಜಾರ್‌ನಿಂದ ಜನತಾ ಪಕ್ಷಕ್ಕೆ…

ಜನತಾ ಬಜಾರ್ ಯೂನಿಯನ್‌ನಲ್ಲಿ ನಾನು ಮುಂಚೂಣಿ ನಾಯಕನಾಗಿ ಬೆಳೆದೆ. ಸಹಜವಾಗಿಯೇ ದೇವೇಗೌಡರು, ಬಿ ಎಲ್ ಶಂಕರ್, ಪಿ ಜಿ ಆರ್ ಸಿಂಧಿಯಾ ಮತ್ತಿರರ ಸಂಪರ್ಕಕ್ಕೆ ಬಂದೆ. ಅವರ ಮೂಲಕ ನಾನು ಅನಧಿಕೃತವಾಗಿ ಜನತಾ ಪಕ್ಷಕ್ಕೆ ಎಂಟ್ರಿ ಪಡೆದೆ. ಈ ನಡುವೆ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಲೋಕ ನಾಯಕ ಜಯಪ್ರಕಾಶ್ ನಾರಾಯಣ್ ಅವರು ಕೈಗೊಂಡಿದ್ದ ಆಂದೋಲನದಲ್ಲೂ ಕೈ ಜೋಡಿಸಿದೆ. ಚಂದ್ರಶೇಖರ ಅವರು ನಡೆಸಿದ ರಾಷ್ಟ್ರವ್ಯಾಪಿ ಪಾದಯಾತ್ರೆಯಲ್ಲೂ ಹೆಜ್ಜೆ ಹಾಕಿದೆ.

1986ರ ವಿಧಾನಸಭೆ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಲ್ಲಿ ಪಿ ಜಿ ಆರ್ ಸಿಂಧಿಯಾ ಪರ ಸಕ್ರಿಯವಾಗಿ ಕೆಲಸ ಮಾಡಿದೆ. ಅದೇ ವರ್ಷ ಬೆಂಗಳೂರು ಕಾರ್ಪೊರೇಷನ್ ಎಲೆಕ್ಷನ್ ಘೋಷಣೆ ಆಯಿತು. ಮುನಿಯಪ್ಪ ಅಂತ ಒಬ್ಬರು ರೆವಿನ್ಯು ಇನ್ಸ್ ಪೆಕ್ಟರ್ ನನಗೆ ಆತ್ಮೀಯರಾಗಿದ್ದರು. ಅವರು, ಸೋಮಣ್ಣ ನೀನೂ ಎಲೆಕ್ಷನ್ ಗೆ ನಿಂತು ಬಿಡು ಎಂದು ಹವಾ ಹಾಕಿದರು. ನನಗೂ ಉಮೇದು ಬಂತು. ವಿಜಯ ನಗರ ಕ್ಷೇತ್ರದಲ್ಲಿ ಜನತಾ ಪಕ್ಷದಿಂದ ಟಿಕೆಟ್‌ ಕೊಡುವ ಭರವಸೆಯೂ ಸಿಕ್ಕಿತು. ಆದರೆ ನಾಮಪತ್ರ ಸಲ್ಲಿಸಬೇಕು ಎನ್ನುವಷ್ಟರಲ್ಲಿ ಜೀವರಾಜ್ ಆಳ್ವ, ರಘುಪತಿ ಇನ್ನೂ ಕೆಲವರು ಬೇರೆಯವರಿಗೆ ಟಿಕೆಟ್ ಕೊಡಲು ಶತಪ್ರಯತ್ನ ನಡೆಸಿದರು.

ಡಿ ಮಂಜುನಾಥ್ ಆಗ ಜನತಾ ಪಕ್ಷದ ರಾಜ್ಯಾಧ್ಯಕ್ಷರು. ಮಂಜುನಾಥ್, ವಿ ಆರ್ ಕೃಷ್ಣಯ್ಯರ್, ಟಿ ಆರ್ ಶಾಮಣ್ಣ, ಎಚ್ ಡಿ ದೇವೇಗೌಡ, ಬಿ ಎಲ್ ಶಂಕರ್ ಮತ್ತಿತರರನ್ನು ಸಂಪರ್ಕಿಸಿ ನಾನು ಟಿಕೆಟ್ ಗೆ ಪಟ್ಟು ಹಿಡಿದೆ. ಇದಕ್ಕಾಗಿ ಜನತಾ ಪಕ್ಷದ ರಾಷ್ಟ್ರಾಧ್ಯಕ್ಷ ಚಂದ್ರಶೇಖರ ಅವರನ್ನೂ ಸಂಪರ್ಕಿಸಿ ವಿನಂತಿಸಿದೆ. ಆದರೆ ಕೊನೆಗೆ ಬಿ ಎಲ್ ಶಂಕರ್ ಒಬ್ಬರು ಮಾತ್ರ ನನ್ನ ಪರವಾಗಿ ನಿಂತರು. ಅಂತಿಮವಾಗಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಮೊರೆ ಹೋದೆ. ಕನಕಪುರ ಬೈ ಎಲೆಕ್ಷನ್ ನಲ್ಲಿ ಹೆಗಡೆ ಅವರಿಗಾಗಿ ಸಿಂಧಿಯಾ ರಾಜೀನಾಮೆ ನೀಡಿದ್ದರು. ಹೆಗಡೆ ಅವರನ್ನು ಸೋಲಿಸಲು ಕಾಂಗ್ರೆಸ್ ನಾಯಕರೆಲ್ಲ ಶಕ್ತಿ ಪ್ರಯೋಗದಲ್ಲಿ ತೊಡಗಿದ್ದರು. ನಾನು ಯುವಕರ ತಂಡ ಕಟ್ಟಿಕೊಂಡು ಕಾಂಗ್ರೆಸ್ ಮುಖಂಡರನ್ನು ದಿಗ್ಬಂಧನ ಹಾಕಿ ನೀರಿಳಿಸಿದ್ದು ಹೆಗಡೆ ಅವರಿಗೆ ತಿಳಿದಿತ್ತು. ಹಾಗಾಗಿ ಹೆಗಡೆ ಅವರು ಕೃಪೆಯಿಂದಾಗಿ ಕೊನೆಗೂ ಬಿ ಫಾರಂ ಸಿಕ್ಕಿತು. ನಾನು ನಾಮಪತ್ರ ಸಲ್ಲಿಸಿದೆ. ಆದಿ ಚುಂಚನಗಿರಿಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಬೆಂಬಲವೂ ನನಗೆ ಸಿಕ್ಕಿತು.

ಈ ನಡುವೆ, ನಮ್ಮ ಕಾರ್ಯಕರ್ತರನ್ನು ಸ್ಟೇಷನ್ ಗೆ ಒಯ್ದು ಹಲ್ಲೆ ನಡೆಸಿದ ದುರಹಂಕಾರಿ ಪೊಲೀಸ್ ಅಧಿಕಾರಿಯೊಬ್ಬರಿಗೆ ನಾನು ಸಖತ್ತಾಗಿ ಬೆಂಡೆತ್ತಿದ ಘಟನೆಯಿಂದಾಗಿ ಇಡೀ ವಾರ್ಡ್ ನಲ್ಲಿ ನನ್ನ ಹವಾ ಜೋರಾಯಿತು. ನಾನು ಭಾರಿ ಬಹುಮತದಿಂದ ಗೆಲುವು ಸಾಧಿಸಿದೆ. ಆಗ ಆ ವಾರ್ಡ್ ನಲ್ಲಿ ಏನೇನೂ ಮೂಲಸೌಕರ್ಯ ಇರಲಿಲ್ಲ. ಶಾಂತಿ ಸುವ್ಯವಸ್ಥೆ ಕೂಡ ಕಳವಳಕಾರಿಯಾಗಿತ್ತು. ನಾನು ಹಂತಹಂತವಾಗಿ ಎಲ್ಲ ವರ್ಗದ ಜನರ ವಿಶ್ವಾಸ ಗಳಿಸುತ್ತ, ಮೂಲ ಸೌಕರ್ಯ ಕಲ್ಪಿಸುತ್ತ ಬಂದೆ. ಹಾಗಾಗಿ ಮುಂದಿನ 1987ರ ಕಾರ್ಪೊರೇಷನ್ ಚುನಾವಣೆಯಲ್ಲೂ ಭರ್ಜರಿ ಗೆಲುವು ನನ್ನದಾಯಿತು.

ಬಿನ್ನಿಪೇಟೆಯಿಂದ ವಿಧಾನಸಭೆ ಪ್ರವೇಶ

ಎರಡು ಅವಧಿಗೆ ಕಾರ್ಪೋರೇಟರ್ ಆಗಿ ಜನಪ್ರಿಯತೆ ಗಳಿಸಿದ್ದ ನನಗೆ 1994ರಲ್ಲಿ ಬಿನ್ನಿಪೇಟೆ ಕ್ಷೇತ್ರದಲ್ಲಿ ನಿರಾಯಾಸವಾಗಿ ಜನತಾ ಪಕ್ಷದ ಟಿಕೆಟ್ ಸಿಕ್ಕಿತು. ದಾಖಲೆ ಮತಗಳ ಅಂತರದಿಂದ ಗೆದ್ದೆ.
ಆದರೆ ಮುಖ್ಯಮಂತ್ರಿಯಾಗಲು ರಾಮಕೃಷ್ಣ ಹೆಗಡೆ ಮತ್ತು ದೇವೇಗೌಡರ ನಡುವೆ ಪೈಪೋಟಿ ನಡೆದು ರಣರಂಪವಾಯಿತು. ನಾನು ದೇವೇಗೌಡರ ಪರ ನಿಂತೆ. ನ್ಯಾಯಯುತವಾಗಿ ದೇವೇಗೌಡರೇ ಮುಖ್ಯಮಂತ್ರಿ ಆಗಬೇಕು ಎನ್ನುವುದು ನಮ್ಮ ಆಶಯವಾಗಿತ್ತು. ವಿಂಡ್ಸರ್ ಮ್ಯಾನರ್ ನನ್ನನ್ನು ಕರೆಸಿದರು. ಅಲ್ಲಿ ಹೆಗಡೆ, ಜೆ ಎಚ್ ಪಟೇಲ್ ಮತ್ತು ಬೊಮ್ಮಾಯಿ ಚಿಂತಾಕ್ರಾಂತರಾಗಿ ಕೂತಿದ್ದರು. ಹೆಗಡೆ ಮನೆ ಬಳಿ ಮತ್ತು ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಭಾರಿ ಗದ್ದಲದ ಕುರಿತಾಗಿ ನನ್ನಿಂದ ಮಾಹಿತಿ ಪಡೆದರು. ನಾನು ಇದ್ದ ವಿಷಯ ವಿವರಿಸಿದೆ. ಹೆಗಡೆಯವರು ಗರಂ ಆಗಿದ್ದರು. ಬೊಮ್ಮಾಯಿಯವರು ಸೂಕ್ಷ್ಮವಾಗಿ ನನಗೊಂದು ಬುದ್ಧಿಮಾತು ಹೇಳಿ ಕಳುಹಿಸಿದರು!

ದೇವೇಗೌಡರು ಮುಖ್ಯಮಂತ್ರಿಯಾದರು. ಆದರೆ ನನ್ನನ್ನು ಮಂತ್ರಿ ಮಾಡಲೇ ಇಲ್ಲ! ನಿನ್ನನ್ನು ಮಂತ್ರಿ ಮಾಡಿದರೆ ಹೆಗಡೆಯವರು ತಕರಾರು ಮಾಡ್ತಾರೆ, ಸದ್ಯ ಸುಮ್ಮನಿರು ಎಂದರು!

ಮುಂದೆ ಅನಿರೀಕ್ಷಿತವಾಗಿ ದೇವೇಗೌಡರು ಪ್ರಧಾನಿಯಾದರು. ಮುಖ್ಯಮಂತ್ರಿ ಹುದ್ದೆಗೆ ಮತ್ತೆ ಪೈಪೋಟಿ ಶುರುವಾಯಿತು. ನಾವು 86 ಮಂದಿ ಸಿದ್ದರಾಮಯ್ಯ ಪರ ಸಹಿ ಮಾಡಿ ಪತ್ರ ರೆಡಿ ಮಾಡಿದೆವು. ಆದರೆ ಆ ಪತ್ರ ವರಿಷ್ಠರಿಗೆ ತಲುಪಿಸುವ ಧೈರ್ಯ ಯಾರೂ ಮಾಡಲಿಲ್ಲ. ನಾನೊಬ್ಬನೆ ಆ ಪತ್ರ ಹಿಡಿದು, ಬೆಂಗಳೂರಿನಲ್ಲಿ ಠಿಕಾಣಿ ಹೂಡಿದ್ದ ಜನತಾದಳ ರಾಷ್ಟ್ರ ಮಟ್ಟದ ನಾಯಕರಾದ ಬಿಜು ಪಟ್ನಾಯಕ್, ಮಧು ದಂಡವತೆ ಬಳಿ ಹೋಗಿದ್ದೆ. ಅಲ್ಲೇ ಇದ್ದ ಪಟೇಲರು, ನಾನ್ಯಾಕೆ ಮುಖ್ಯಮಂತ್ರಿ ಆಗಬಾರದು ಎಂದು ನನ್ನನ್ನು ಪ್ರಶ್ನಿಸಿದರು! ನಾನು ಏನೋ ಹೇಳಿ ಅಲ್ಲಿಂದ ಜಾಗ ಖಾಲಿ ಮಾಡಿದೆ.

ಜೆ ಎಚ್‌ ಪಟೇಲರು ಮಂತ್ರಿ ಮಾಡಿದರು

ನಾಟಕೀಯ ಬೆಳವಣಿಗೆಯಲ್ಲಿ ಸಿದ್ದರಾಮಯ್ಯ ಅವರನ್ನು ಮಾಡದೆ ಜೆ ಎಚ್ ಪಟೇಲರನ್ನು ಸಿಎಂ ಮಾಡಲಾಯಿತು. ವಿಶೇಷ ಅಂದರೆ ಪಟೇಲರು ನನ್ನನ್ನು ಮಂತ್ರಿಯನ್ನಾಗಿ ಮಾಡಿದರು! ನಿನಗೆ ಕೆಲಸ ಬಾರದ ಖಾತೆ ಕೊಡ್ತೇನೆ ನೋಡು ಎಂದು ಗದರಿಸುತ್ತ ಬಂದೀಖಾನೆ ಇತ್ಯಾದಿ ಪ್ರಮುಖವಲ್ಲದ ಖಾತೆ ಕೊಟ್ಟರು. ಯಾವ ಖಾತೆ ಆದರೇನು ಎಂದು ನಾನು ನಿಷ್ಠೆಯಿಂದ ಕೆಲಸ ಮಾಡಿದೆ.

ಸನ್ನಡತೆಯ ಕೈದಿಗಳ ಬಿಡುಗಡೆ ಸಮಾರಂಭಕ್ಕೆ ಅಂದಿನ ರಾಜ್ಯಪಾಲ ಖರ್ಷಿದ್ ಅಲಂ ಖಾನ್ ಅವರನ್ನು ಕರೆದಿದ್ದೆ. ಪಟೇಲರೂ ಜತೆಗಿದ್ದರು. ಆಗ ರಾಜ್ಯಪಾಲರು ನನ್ನ ಕಾರ್ಯಶೈಲಿ ಬಗ್ಗೆ ಪಟೇಲರಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದರ ಪರಿಣಾಮವೋ ಏನೋ‌. ಪಟೇಲರು ನನಗೆ ಬೆಂಗಳೂರು ನಗರಾಭಿವೃದ್ಧಿಯಂಥ ಮಹತ್ವದ ಖಾತೆಯ ಹೊಣೆಗಾರಿಕೆ ನೀಡಿದರು. ಬೆಂಗಳೂರಿನ ಹಲವಾರು ಫ್ಲೈ ಓವರ್, ಅಂಡರ್ ಪಾಸ್, ಕಾವೇರಿ ನಾಲ್ಕನೇ ಹಂತದ ಯೋಜನೆ ಸೇರಿದಂತೆ ದೂರದೃಷ್ಟಿಯ ಹಲವಾರು ಯೋಜನೆಗಳು ಆಗ ಜಾರಿಗೆ ಬಂದವು.

1999ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು

ಆದರೆ 1999ರಲ್ಲಿ ಪರಿಸ್ಥಿತಿ ಭಿನ್ನವಾಗಿತ್ತು. ಜನತಾದಳ ಒಡೆದು ಚೂರಾಗಿತ್ತು. ಯಾವ ಬಣದಲ್ಲಿ ಯಾರಿದ್ದಾರೆ ಎಂದು ತಿಳಿಯಲಾರದಷ್ಟು ಪರಿಸ್ಥಿತಿ ಡೋಲಾಯಮಾನವಾಗಿತ್ತು. ”ನೀನು ಕಾಂಗ್ರೆಸ್ ಸೇರು. ಎಸ್ ಎಂ ಕೃಷ್ಣ ಮುಖ್ಯಮಂತ್ರಿ ಆಗೋದು ಖಚಿತ. ನಿನ್ನನ್ನು ಅವರು ಮಂತ್ರಿ ಮಾಡ್ತಾರೆ,” ಎಂದು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ಸಲಹೆ ನೀಡಿದರು. ನಾನು ಕಾಂಗ್ರೆಸ್ ಸೇರಲು ನಿರ್ಧರಿಸಿ ಕೃಷ್ಣ ಅವರ ಮೇಲೆ ನಂಬಿಕೆ ಇಟ್ಟೆ. ದಿಲ್ಲಿವರೆಗೂ ಹೋಗಿ ಬಂದೆ. ಕಾಂಗ್ರೆಸ್ ಟಿಕೆಟ್ ಕೊಡಿಸುತ್ತೇವೆ ಎಂದು ಹೇಳಿದವರು ಕೊನೇ ಕ್ಷಣದಲ್ಲಿ ಕೈ ಎತ್ತಿದರು.

ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ನನಗೆ ಕರೆ ಮಾಡಿ, ನಾಳೆ ಬೆಳಗ್ಗೆಯೇ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಸೂಚಿಸಿದರು. ನಿನಗೆ ಟಿಕೆಟ್ ಕೊಡದೇ ಇದ್ದುದು ಗೊತ್ತಾಗಿ ಬೇಸರವಾಯಿತು. ನಿನ್ನಂಥ ಕೆಲಸಗಾರ ಈ ಕ್ಷೇತ್ರಕ್ಕೆ ಬೇಕು. ನಿನ್ನ ಬೆಂಬಲಕ್ಕೆ ನಾವಿದ್ದೇವೆ. ಈಗಷ್ಟೇ ಕಾಲಭೈರವನ ಪೂಜೆ ಮುಗಿಸಿ ಬಂದಿದ್ದೇನೆ. ನಿನಗೆ ಒಳ್ಳೆಯದಾಗುತ್ತದೆ ಎಂದು ಹರಸಿದರು.

ಮರುದಿನ ನಾಮಪತ್ರ ಸಲ್ಲಿಸುವಾಗ ಸಾವಿರಾರು ಜನ ಸೇರಿದ್ದರು. ಪಕ್ಷೇತರ ಅಭ್ಯರ್ಥಿಯಾಗಿ ನಿಂತು ನಾನು ಭಾರೀ ಮತಗಳ ಅಂತರದಿಂದ ಜಯಶಾಲಿಯಾದೆ. ನನ್ನ ಗೆಲುವಿನ ಆರ್ಭಟ ಕಂಡು ಎಲ್ಲ ಪಕ್ಷಗಳ ಹಿರಿಯ ಮುಖಂಡರೂ ಅಚ್ಚರಿಪಟ್ಟರು.

ಬದಲಾದ ಸನ್ನಿವೇಶದಲ್ಲಿ 2004ರಲ್ಲಿ ಬಿನ್ನಿಪೇಟೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಂತು ಮೂರನೇ ಬಾರಿ ಆಯ್ಕೆ ಆದೆ. 2008ರಲ್ಲಿ ಮತ್ತೆ ಕಾಂಗ್ರೆಸ್ ನಿಂದ ಗೋವಿಂದರಾಜ ನಗರ ಕ್ಷೇತ್ರದಿಂದ ಗೆಲುವು ಸಾಧಿಸಿದೆ.
2010ರಲ್ಲಿ ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಆಗಿ ಆಹಾರ-ನಾಗರಿಕ ಪೂರೈಕೆ, ಮುಜರಾಯಿ ಮತ್ತು ವಸತಿ ಸಚಿವನಾಗಿ ಕಾರ್ಯ ನಿರ್ವಹಿಸಿದೆ. 2016ರಲ್ಲಿ ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿ ಎರಡನೇ ಬಾರಿ ಆಯ್ಕೆಯಾದೆ. 2019ರಲ್ಲಿ ಗೋವಿಂದರಾಜ ನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಿಂತು ಭಾರಿ ಮತಗಳ ಅಂತರದಿಂದ ಜಯ ಸಾಧಿಸಿದೆ. ಮೊದಲು ತೋಟಗಾರಿಕೆ ಮತ್ತು ರೇಷ್ಮೆ ಖಾತೆ ನೀಡಿದ್ದರು. ಬಳಿಕ 2021ರಲ್ಲಿ ಮಹತ್ವದ ವಸತಿ ಮತ್ತು ಮೂಲ ಸೌಕರ್ಯ ಖಾತೆಗಳ ಹೊಣೆಗಾರಿಕೆ ನೀಡಿದರು.

2023ರ ವಿಧಾನಸಭೆ ಚುನಾವಣೆಯಲ್ಲಿ ಸೋಮಣ್ಣಗೆ ಡಬಲ್‌ ಸೋಲು

ಗೋವಿಂದರಾಜ ನಗರ ಕ್ಷೇತ್ರದಿಂದಲೇ ವಿಧಾನಸಭೆ ಚುನಾವಣೆಗೆ ನಿಲ್ಲಲು ವಿ ಸೋಮಣ್ಣ ತಯಾರಿ ನಡೆಸಿದ್ದರು. ಆದರೆ ಬಿಜೆಪಿ ಹೈಕಮಾಂಡ್‌ ಇವರಿಗೆ ಗೋವಿಂದರಾಜ ನಗರದಲ್ಲಿ ಟಿಕೆಟ್‌ ನೀಡದೆ ಚಾಮರಾಜ ನಗರ ಮತ್ತು ಸಿದ್ದರಾಮಯ್ಯ ಅವರು ಸ್ಪರ್ಧಿಸಿದ್ದ ವರುಣ ಕ್ಷೇತ್ರಗಳಲ್ಲಿ ಟಿಕೆಟ್‌ ನೀಡಿತು. ಸೋಮಣ್ಣ ಅವರು ಚುನಾವಣೆ ಎದುರಿಸಿದರು. ಆದರೆ ಎರಡೂ ಕ್ಷೇತ್ರಗಳಲ್ಲಿ ಸೋತು ಹೋದರು. ಆದರೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅವರಿಗೆ ಬಿಜೆಪಿ ಹೈಕಮಾಂಡ್‌ ತುಮಕೂರು ಕ್ಷೇತ್ರದ ಟಿಕೆಟ್‌ ನೀಡಿತು. ಸೋಮಣ್ಣ ಅವರು ಇಲ್ಲಿ ನಿರಾಯಾಸವಾಗಿ ಗೆದ್ದರು. ಜತೆಗೆ ಕೇಂದ್ರದಲ್ಲಿ ಮಂತ್ರಿಯೂ ಆದರು!

Continue Reading

Lok Sabha Election 2024

Modi 3.0 Cabinet: ಮತ್ತೆ ಮಂತ್ರಿಯಾಗಿ ದಾಖಲೆ ಬರೆದ ಪ್ರಲ್ಹಾದ್‌ ಜೋಶಿ; ಬೆನ್ನು ತಟ್ಟಿ ಆಶೀರ್ವದಿಸಿದ ಬಿಎಸ್‌ವೈ

Modi 3.0 Cabinet: ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಪ್ರಲ್ಹಾದ ಜೋಶಿ ಅವರು ರಾಜ್ಯ ಬಿಜೆಪಿ ವರಿಷ್ಠ ಬಿಎಸ್ ಯಡಿಯೂರಪ್ಪ ಅವರ ಆಶೀರ್ವಾದ ಪಡೆದರು. ಇದೇ ವೇಳೆ ಪ್ರಲ್ಹಾದ ಜೋಶಿಯವರಿಗೆ ಸಿಹಿ ತಿನಿಸಿ ಬೆನ್ನು ತಟ್ಟಿ ಬೆಂಬಲಿಸಿದರು.

VISTARANEWS.COM


on

By

Modi 3.0 Cabinet BS Yediyurappa congratulates Pralhad Joshi
Koo

ಹುಬ್ಬಳ್ಳಿ: ನರೇಂದ್ರ ಮೋದಿ (Narendra Modi) ಅವರ ಮೂರನೇ ಅವಧಿ ಸಚಿವ ಸಂಪುಟದಲ್ಲಿ (Modi 3.0 Cabinet) ಸ್ಥಾನ ಪಡೆದಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Pralhad Joshi) ಅವರು ಭಾನುವಾರ ಪ್ರಮಾಣ ವಚನಕ್ಕೂ ಮುನ್ನ ರಾಜ್ಯ ಬಿಜೆಪಿ ವರಿಷ್ಠ ಬಿ.ಎಸ್. ಯಡಿಯೂರಪ್ಪ ಅವರ (BS Yediyurappa) ಆಶೀರ್ವಾದ ಪಡೆದರು. ಎನ್‌ಡಿಎ ಮೈತ್ರಿ ಕೂಟದಿಂದ ಸತತ ಮೂರನೇ ಬಾರಿ ಸರ್ಕಾರ ರಚಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಪ್ರಲ್ಹಾದ ಜೋಶಿ ಅವರು ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಮೋದಿ ಅವರ ಎರಡನೇ ಅವಧಿಯಲ್ಲಿ ಸಂಸದೀಯ ಮತ್ತು ಕಲ್ಲಿದ್ದಲು ಗಣಿ ಖಾತೆ ಸಚಿವರಾಗಿ ಸಮರ್ಥವಾಗಿ ನಿಭಾಯಿಸಿ ಪ್ರಧಾನಿಯಿಂದ ಪ್ರಶಂಸೆ ಪಡೆದಿದ್ದ ಪ್ರಲ್ಹಾದ ಜೋಶಿ ಅವರಿಗೆ ಮತ್ತೆ ಕೇಂದ್ರ ಕ್ಯಾಬಿನೆಟ್‌ನಲ್ಲಿ ಸ್ಥಾನ ಕಲ್ಪಿಸಲಾಗಿದೆ. ಭಾನುವಾರ ಸಂಜೆ ಪ್ರಮಾಣ ವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ಪ್ರಲ್ಹಾದ ಜೋಶಿ ದೆಹಲಿಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

Modi 3.0 Cabinet BS Yediyurappa congratulates Pralhad Joshi

ಇದನ್ನೂ ಓದಿ: Narendra Modi: ‌ಮೋದಿ ಪ್ರಮಾಣವಚನ ಸಂಭ್ರಮಕ್ಕೆ ಗಣ್ಯರ ದಂಡೇ ಸಾಕ್ಷಿ; ದೇಶ-ವಿದೇಶಗಳ ಗಣ್ಯರ ಪಟ್ಟಿ ಹೀಗಿದೆ

ಸಿಹಿ ತಿನಿಸಿ ಬೆನ್ನು ತಟ್ಟಿದ ಬಿಎಸ್‌ವೈ

ಯಡಿಯೂರಪ್ಪ ಅವರು ಜೋಶಿ ಅವರಿಗೆ ಸಿಹಿ ತಿನಿಸಿ ಬೆನ್ನು ತಟ್ಟಿ ಬೆಂಬಲ ವ್ಯಕ್ತಪಡಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಹ ಸಿಹಿ ತಿನಿಸಿ ಸಂಭ್ರಮದಲ್ಲಿ ಭಾಗಿಯಾದರು. ಸಂಸದರಾದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಶಾಸಕರಾದ ಮಹೇಶ್ ಟೆಂಗಿನಕಾಯಿ, ಅರವಿಂದ ಬೆಲ್ಲದ, ಹರೀಶ್ ಪೂಂಜಾ, ಧಾರವಾಡ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಹಾಗೂ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮೋದಿ-ಜೋಶಿ ದಾಖಲೆ

ಕೇಂದ್ರದಲ್ಲಿ ಕಾಂಗ್ರೆಸ್ಸೇತರವಾಗಿ ನರೇಂದ್ರ ಮೋದಿ ಸತತ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದರೆ, ಇತ್ತ ಧಾರವಾಡ ಸಂಸದ ಪ್ರಲ್ಹಾದ ಜೋಶಿ ಅವರದ್ದು ಒಂದು ದಾಖಲೆ ಆಗಿದೆ. ಧಾರವಾಡ ಲೋಕಸಭಾ ಕ್ಷೇತ್ರದಿಂದ ಸತತ 5ನೇ ಬಾರಿ ಗೆಲುವು ಸಾಧಿಸಿ ಮತ್ತೆ ಕೇಂದ್ರ ಕ್ಯಾಬಿನೆಟ್‌ನಲ್ಲಿ ಸಚಿವ ಸ್ಥಾನ ಪಡೆಯುವ ಮೂಲಕ ಐತಿಹಾಸಿಕ ದಾಖಲೆಗೆ ಪಾತ್ರರಾಗಿದ್ದಾರೆ. ಪ್ರಲ್ಹಾದ ಜೋಶಿ ಅವರು ಮತ್ತೆ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಕುಟುಂಬದವರಲ್ಲಿ, ಬೆಂಬಲಿಗರಲ್ಲಿ ಮತ್ತು ಹುಬ್ಬಳ್ಳಿ – ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Rain : ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು, ಹೊರ ಬಂತು ಸವಾರನ ಕರುಳು! ಮತ್ತಿಬ್ಬರು ಗಂಭೀರ

Karnataka Rain : ಭಾರಿ ಮಳೆಗೆ ಮರ ಬಿದ್ದು ಯುವಕರ್ನೊವ ದಾರುಣವಾಗಿ ಮೃತಪಟ್ಟಿದ್ದಾನೆ. ಮತ್ತಿಬ್ಬರು ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೆಂಗಳೂರು ಸೇರಿ ಹಲವೆಡೆ ಮಳೆಯಾಗಿದ್ದು, ಅವಾಂತರವನ್ನೇ ಸೃಷ್ಟಿಸಿದೆ.

VISTARANEWS.COM


on

By

Karnataka Rain
Koo

ಬೆಳಗಾವಿ: ಭಾರಿ ಮಳೆಗೆ (Karnataka Rain) ಮರ ಬಿದ್ದು (Tree fall) ಯುವಕನೊರ್ವ ಮೃತಪಟ್ಟರೆ, ಮತ್ತಿಬ್ಬರು ಗಂಭೀರ ಗಾಯಗೊಂಡಿದ್ದಾರೆ. ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ಬಳಿ ದುರ್ಘಟನೆ ನಡೆದಿದೆ. ಕರ್ಲೆ ಗ್ರಾಮದ ಸೋಮನಾಥ್ ಮುಚ್ಚಂಡಿಕರ್ (21) ಮೃತ ದುರ್ದೈವಿ.

ವಿಠ್ಠಲ್ ತಳವಾರ್, ಸ್ವಪ್ನಿಲ್ ದೇಸಾಯಿ ಗಾಯಾಳುಗಳು. ಈ ಮೂವರು ಬೈಕ್‌ನಲ್ಲಿ ಬೆಳಗಾವಿಗೆ ಬರುತ್ತಿದ್ದರು. ಇದೇ ವೇಳೆ ಭಾರಿ ಮಳೆ ಬರುತ್ತಿತ್ತು. ಮಳೆಯಲ್ಲೇ ಬೈಕ್‌ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಏಕಾಏಕಿ ಬೃಹತ್‌ ಗಾತ್ರದ ಮರವೊಂದು ಧರೆಗುರುಳಿ ಬೈಕ್‌ ಮೇಲೆ ಬಿದ್ದಿದೆ.

ಮರ ಬಿದ್ದ ರಭಸಕ್ಕೆ ಮುಚ್ಚಂಡಿಕರ್‌ನ ಕರುಳು ಹೊರಗೆ ಬಂದಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮತ್ತಿಬ್ಬರ ತಲೆಗೂ ಗಂಭೀರ ಗಾಯವಾಗಿದ್ದು, ಸ್ಥಳೀಯರು ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು, ಸ್ಥಳೀಯರ ಸಹಾಯದೊಂದಿಗೆ ರಸ್ತೆ ಮೇಲೆ ಬಿದ್ದಿದ್ದ ಮರ ತೆರವು ಮಾಡಿದರು. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಭಾರಿ ಗಾಳಿ-ಮಳೆಗೆ ಮರ ಬಿದ್ದು ಕಾರುಗಳು ಜಖಂ

ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ನಗರ ಕೆ.ಸಿ.ವೃತ್ತದಲ್ಲಿ ಭಾರಿ ಗಾಳಿ ಮಳೆಗೆ ಬೃಹತ್‌ ಗಾತ್ರದ ಮರವೊಂದು ಬಿದ್ದ ಪರಿಣಾಮ ಎರಡು ಕಾರುಗಳಿಗೆ ಹಾನಿಯಾಗಿದೆ. ರಸ್ತೆ ಪಕ್ಕದಲ್ಲಿ‌‌ ನಿಲ್ಲಿಸಿದ್ದ ಕಾರುಗಳ ಮೇಲೆ ಮರ ಬಿದ್ದು ಜಖಂಗೊಂಡಿದೆ. ಕಳೆದೆರಡು ದಿನಗಳಿಂದ ದಾಂಡೇಲಿ ನಗರದಲ್ಲಿ ಭಾರಿ ಮಳೆ ಸುರಿಯುತ್ತಿದೆ.

ಇದನ್ನೂ ಓದಿ: Drowned in water : ಆಯತಪ್ಪಿ ಘಟಪ್ರಭಾ ನದಿಗೆ ಬಿದ್ದ ಟ್ರಾಕ್ಟರ್; ಓರ್ವ ನೀರುಪಾಲು, 12 ಮಂದಿ ಪಾರು

ರಾಜಧಾನಿ ಬೆಂಗಳೂರಲ್ಲಿ ಮಳೆ ಅಬ್ಬರ

ಭಾನುವಾರ ಬೆಂಗಳೂರಿನ ಹಲವೆಡೆ ಭಾರಿ ಮಳೆಯಾಗಿದೆ. ವೀಕೆಂಡ್‌ ಮೂಡ್‌ನಲ್ಲಿದ್ದವರಿಗೆ ಮಳೆಯು ಅಡ್ಡಿಯಾಗಿತ್ತು. ಶಿವಾಜಿನಗರ, ಮೆಜೆಸ್ಟಿಕ್‌, ರಾಜಾಜಿನಗರ, ವಿಧಾನಸೌಧ, ಕೆಆರ್‌ ಸರ್ಕಲ್‌ ಹಾಗೂ ಟೌನ್ ಹಾಲ್ ಹಾಗೂ ಜೆ.ಸಿ ರಸ್ತೆ ಸುತ್ತಮುತ್ತ ಮಳೆಯಾಗಿತ್ತು. ವೀಕೆಂಡ್ ಕಳೆಯಲು ಕಬ್ಬನ ಪಾರ್ಕ್‌ಗೆ ಬಂದವರಿಗೆ ದಿಢೀರ್‌ ಮಳೆಯಿಂದಾಗಿ ತೊಂದರೆ ಆಯಿತು. ಮಳೆಯಿಂದ ಆಶ್ರಯ ಪಡೆಯಲು ಓಡುತ್ತಿದ್ದ ದೃಶ್ಯ ಕಂಡು ಬಂತು. ಜೋರಾಗಿ ಸುರಿದ ಒಂದೂವರೆ ಗಂಟೆ ಮಳೆಗೆ ಕೆಆರ್‌ ಸರ್ಕಲ್‌ ರಸ್ತೆಯು ಕೆರೆಯಂತಾಗಿತ್ತು. ಮಳೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡ್ ಹಾಕಿ ಅಂಡರ್‌ ಪಾಸ್‌ ಕ್ಲೋಸ್‌ ಮಾಡಲಾಗಿತ್ತು.

ಉತ್ತರ ಕನ್ನಡದಲ್ಲಿ ಮುಂದುವರಿದ ವರುಣಾರ್ಭಟ

ಕರಾವಳಿ ಘಟ್ಟದ ಮೇಲಿನ ತಾಲೂಕುಗಳಲ್ಲಿ ಮೂರನೇ ದಿನವೂ ಧಾರಾಕಾರ ಮಳೆಯಾಗಿದೆ. ಮಳೆ ಅಬ್ಬರಕ್ಕೆ ತಗ್ಗು ಪ್ರದೇಶ, ಹಳ್ಳ, ಕೊಳ್ಳಗಳಲ್ಲಿ ನೀರು ತುಂಬಿ ಹರಿದಿತ್ತು. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳದಲ್ಲಿ ಹೆಚ್ಚಿನ ಮಳೆಯಾಗಿದೆ. ಘಟ್ಟದ ಮೇಲಿನ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳದಲ್ಲೂ ಮಳೆಯಾಗಿದೆ.

ಮಳೆಗೆ ತಿಪ್ಪೆಯಂತಾದ ರಸ್ತೆಯಲ್ಲಿ ಓಡಾಟ

ವಿಜಯಪುರ ಜಿಲ್ಲೆ ದೇವರ ಹಿಪ್ಪರಗಿ ತಾಲೂಕಿನ ಮಾರ್ಕಬ್ಬಿನಹಳ್ಳಿ ಗ್ರಾಮದ ಜನರ ಗೋಳು ಕೇಳುವವರು ಇಲ್ಲ. ಮಳೆ ಬಂದರೆ ರಸ್ತೆಗಳು ಎಲ್ಲವೂ ಕೆಸರು ಗದ್ದೆಯಂತಾಗುತ್ತದೆ. ಅತಿಯಾದ ಮಳೆ ಬಂದರೆ ಮನೆಯೊಳಗೆ ನೀರು ನುಗ್ಗುತ್ತದೆ. ಮಾರ್ಕಬ್ಬಿನಹಳ್ಳಿ ಗ್ರಾಮದ ದಲಿತರ ಕೆರಿಯಲ್ಲಿನ ರಸ್ತೆಗಳು ಸಂಪೂರ್ಣ ಕೆಸರುಮಯವಾಗಿದೆ.

ಬಾಗಲಕೋಟೆಯಲ್ಲಿ ಮನೆಗಳಿಗೆ ನುಗ್ಗಿದ ನೀರು

ಬಾಗಲಕೋಟೆ ಜಿಲ್ಲೆಯಲ್ಲಿ ಶನಿವಾರ ಅಬ್ಬರಿಸಿದ ಮಳೆಗಳಿಗೆ ನೀರು ನುಗ್ಗಿ, ತಗ್ಗು ಪ್ರದೇಶದ ನಿವಾಸಿಗಳು ಹೈರಾಣಾದರು. ರಬಕವಿ ನಗರದ ಬಾಬು ಗಂಗಾವತಿ ಅವರ ಮನೆ ಸಂಪೂರ್ಣ ಜಲಮಯವಾಗಿತ್ತು. ಸೂಕ್ತ ಒಳಚರಂಡಿ ವ್ಯವಸ್ಥೆ ಮಾಡದ ನಗರ ಸಭೆ ವಿರುದ್ಧ ನಿವಾಸಿಗಳು ಆಕ್ರೋಶ ಹೊರಹಾಕಿದರು. ಕುಟುಂಬದ ಸದಸ್ಯರು ಬಕೆಟ್‌ನಿಂದ ಮಳೆ ನೀರು ಹೊರ ಹಾಕಿದರು.

ಕೋಲಾರದಲ್ಲಿ ಬಿರುಗಾಳಿ ಸಹಿತ ಮಳೆಗೆ ನೆಲಕಚ್ಚಿದ ಬಿನ್ಸ್ ಬೆಳೆ

ಬಿರುಗಾಳಿ ಸಹಿತ ಸುರಿದ ಮಳೆಗೆ ಮೂರು ಎಕರೆಯಲ್ಲಿ ಪಾಲಿ ಹೌಸ್ ನಿರ್ಮಾಣ ಮಾಡಿ ಬೆಳೆದಿದ್ದ ಬಿನ್ಸ್ ಬೆಳೆ ಹಾಳಾಗಿತ್ತು. ಎರಡು ದಿನದ ಹಿಂದೆ ಸುರಿದ ಬಿರುಗಾಳಿ ಸಹಿತ ಮಳೆ ಪಾಲಿ ಹೌಸ್‌ ಧ್ವಂಸವಾಗಿತ್ತು. ಕೋಲಾರ ತಾಲ್ಲೂಕಿನ ಚೆಲ್ಲಹಳ್ಳಿ ಗ್ರಾಮದ ರೈತ ಅದಿ ಮೂರ್ತಿ ಎಂಬುವರು ಬೆಳೆದಿದ್ದ ಬಿನ್ಸ್ ಬೆಳೆಗೆ ಹಾನಿಯಾಗಿತ್ತು. ಉಷ್ಣಾಂಶದಿಂದ ಬೆಳೆ ಹಾನಿ ತಪ್ಪಿಸಲು ಪಾಲಿ ಹೌಸ್ ನಿರ್ಮಾಣಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿತ್ತು. ಸುಮಾರು ನಲವತ್ತು ಲಕ್ಷ ಖರ್ಚು ಮಾಡಿ ಮೂರು ಎಕರೆಯಲ್ಲಿ ಬೆಳೆದಿದ್ದ ಬೆಳೆಯು ನೆಲಕಚ್ಚಿದೆ.

ಮಳೆ ಅನಾಹುತ; ಉಕ್ಕಿ ಹರಿವ ನೀರಲ್ಲೆ ಜೆಸಿಬಿ ಮೂಲಕ ರಸ್ತೆ ದಾಟಿದ ಗ್ರಾಮಸ್ಥರು

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಹತ್ತರಕಿಹಾಳ ಗ್ರಾಮದಲ್ಲಿ ಶನಿವಾರ ರಾತ್ರಿ ಸುರಿದ ಮಳೆಯಿಂದಾಗಿ ಗ್ರಾಮದ ಹಳ್ಳ ತುಂಬಿ ಹರಿಯುತ್ತಿದೆ. ಹೀಗಾಗಿ ವಾಹನ ಸಂಚಾರ ಬಂದ್ ಆಗಿದ್ದರಿಂದ ಗ್ರಾಮಸ್ಥರು ಜೆಸಿಬಿ ಮೂಲಕ ಸೇತುವೆ ದಾಟಿದರು. ಹತ್ತರಕಿಹಾಳ ಗ್ರಾಮದಿಂದ ಬಸವನ ಬಾಗೇವಾಡಿ ರಸ್ತೆ ಸಂಚಾರ ಬಂದ್ ಆಗಿದೆ. ಬಸ್ಸಿನಲ್ಲಿ ಬಂದ ಗ್ರಾಮಸ್ಥರನ್ನು ಜೆಸಿಬಿ ಮೂಲಕ ಸೇತುವೆ ದಾಟಿಸಲಾಯಿತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
ind vs pak
ಪ್ರಮುಖ ಸುದ್ದಿ3 hours ago

IND vs PAK : ಭಾರತದ ಎದುರು ಪಾಕಿಸ್ತಾನಕ್ಕೆ ಮತ್ತೊಮ್ಮೆ ಮುಖಭಂಗ; ಕಡಿಮೆ ಸ್ಕೋರ್ ಇದ್ದಾಗಲೂ 6 ರನ್ ಸೋಲು

Stabbing in Mangalore:
ಪ್ರಮುಖ ಸುದ್ದಿ4 hours ago

Stabbing in Mangalore : ವಿಜಯೋತ್ಸವ ಮುಗಿಸಿ ಮನೆಗೆ ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತರಿಬ್ಬರಿಗೆ ಚಾಕು ಇರಿತ

Modi 3.0 Cabinet
ದೇಶ4 hours ago

Modi 3.0 Cabinet: ಮೋದಿ ನೂತನ ಸಂಪುಟದಿಂದ ಸ್ಮೃತಿ ಇರಾನಿ ಸೇರಿ ಯಾರಿಗೆಲ್ಲ ಕೊಕ್?‌ ಇಲ್ಲಿದೆ ಮಾಹಿತಿ

IND vs PAK:
ಪ್ರಮುಖ ಸುದ್ದಿ5 hours ago

IND vs PAK : ವಿರಾಟ್​ ಕೊಹ್ಲಿಯಿಂದ ಆಟೋಗ್ರಾಫ್ ಪಡೆದುಕೊಂಡ ಕ್ರಿಸ್​ ಗೇಲ್​! ಇಲ್ಲಿದೆ ವಿಡಿಯೊ

Veeraloka
Latest6 hours ago

Veeraloka Books : ಹೊಸ ಲೇಖಕರಿಗೆ ವೀರಲೋಕ ಪ್ರಕಾಶನ ಹೆದ್ದಾರಿಯನ್ನೇ ಸೃಷ್ಟಿಸಿದೆ: ಜಯಂತ್‌ ಕಾಯ್ಕಿಣಿ ಶ್ಲಾಘನೆ

IND vs PAK
ಪ್ರಮುಖ ಸುದ್ದಿ6 hours ago

IND vs PAK : ಮರೆಗುಳಿ ರೋಹಿತ್​; ಜೇಬಿನಲ್ಲಿ​ ಕಾಯಿನ್​ ಇಟ್ಟು ಹುಡುಕಾಡಿದ ಭಾರತ ತಂಡದ ನಾಯಕ

Modi 3.0 Cabinet
ದೇಶ6 hours ago

Modi 3.0 Cabinet: ನಡ್ಡಾ To ಎಚ್‌ಡಿಕೆ ;‌ ಮೋದಿ ಸಂಪುಟದಲ್ಲಿ ಸ್ಥಾನ ಪಡೆದ ಹೊಸ ಮುಖಗಳಿವು

Modi 3.0 Cabinet
ದೇಶ7 hours ago

Modi 3.0 Cabinet: 30 ಕ್ಯಾಬಿನೆಟ್‌ ದರ್ಜೆ, 5 ಸ್ವತಂತ್ರ, 36 ಸಂಸದರಿಗೆ ರಾಜ್ಯ ಖಾತೆ; ಇಲ್ಲಿದೆ ಕಂಪ್ಲೀಟ್‌ ಲಿಸ್ಟ್

V Somanna profile
ಪ್ರಮುಖ ಸುದ್ದಿ7 hours ago

V Somanna profile : ಅಂದು ಜನತಾ ಬಜಾರ್‌ನಲ್ಲಿ ಸೇಲ್ಸ್‌ಮ್ಯಾನ್‌; ಇಂದು ಕೇಂದ್ರ ಸಚಿವ! ವಿ ಸೋಮಣ್ಣ ರಾಜಕೀಯ ಹಾದಿ ಕುತೂಹಲಕರ

Terror Attack
ಕ್ರೈಂ7 hours ago

Terror Attack: ಕಾಶ್ಮೀರದಲ್ಲಿ ಹಿಂದೂ ಯಾತ್ರಿಗಳಿದ್ದ ಬಸ್‌ ಮೇಲೆ ಉಗ್ರರ ದಾಳಿ; 10 ಸಾವು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ2 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ2 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ6 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ7 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ7 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ2 weeks ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌