Mother's Day : ಅಮ್ಮನ ಅಕ್ಕರೆ ತೋರುವ ಎಂಟು ಸಿನಿಮಾಗಳು - Vistara News

ಲೈಫ್‌ಸ್ಟೈಲ್

Mother’s Day : ಅಮ್ಮನ ಅಕ್ಕರೆ ತೋರುವ ಎಂಟು ಸಿನಿಮಾಗಳು

ತಾಯಂದಿರ ದಿನಾಚರಣೆ ಅಂಗವಾಗಿ ಇಲ್ಲಿ ಸಾಕಷ್ಟು ಸಿನಿಮಾಗಳು ಇವೆ. ಮನೆಯಲ್ಲಿಯೇ ಸಿನಿಮಾ ನೋಡುವುದರ ಮೂಲಕ ಮದರ್ಸ್‌ ಡೇ ಆಚರಿಸಿ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ʼಅಮ್ಮ ಅಮ್ಮ ಅನ್ನೋ ಮಾತು ಬಂತು ಎಲ್ಲಿಂದ..? ಭೂಮಿಗೆ ಬಂದ ಮೊದಲನೆ ಕಂದನ ಅಳುವ ದನಿಯಿಂದ ʼ ಈ ಸಾಲುಗಳು ಯಾವಾಗಲೂ ನಮ್ಮನ್ನ ಬಿಡದೇ ಕಾಡುತ್ತವೆ. ʼಅಮ್ಮ ʼ ಅನ್ನೋ ಶಬ್ದಕ್ಕೆ ಅರ್ಥ ನಿಡುವುದು ಕೂಸೇ ಆದ್ರೂ ಆ ಕೂಸಿಗೆ ರೆಕ್ಕೆ ಕಟ್ಟಿ ಹಾರೋ ಹಾಗೇ ಮಾಡೋಳು ತಾಯಿ. ಮೇ 8 ವಿಶ್ವ ಅಮ್ಮಂದಿರ ದಿನ. ಇವತ್ತಿನ ದಿನ ಮಕ್ಕಳು ತಾಯಿಗೆ ಸಾಕಷ್ಟು ಉಡುಗೊರೆ, ಹಾಗೇ ಟ್ರಿಪ್‌, ಏನೇ ಪ್ಲಾನ್‌ ಮಾಡಿಕೊಂಡಿದ್ದರೂ, ಮನೆಯಲ್ಲೇ ಕೂತು ಅಮ್ಮನ ಜೊತೆ ಟೈಮ್‌ ಸ್ಪೆಂಡ್‌ ಮಾಡಬಹುದು.

ತಾಯಿಯ ತ್ಯಾಗ, ಸ್ಪೂರ್ತಿ, ಧೈರ್ಯ, ಸ್ವಾಭಿಮಾನ, ಸಹನಾ ಗುಣಗಳನ್ನು ಕೇಂದ್ರವಾಗಿಸಿಕೊಂಡು ಹಾಲಿವುಡ್‌ನಿಂದ ಸ್ಯಾಂಡಲ್‌ವುಡ್‌ವರೆಗೆ ಬಂದ ಸಿನಿಮಾಗಳಿಗೆ ಲೆಕ್ಕವಿಲ್ಲ. ತಾಯಿ ಸೆಂಟಿಮೆಂಟ್‌ ಕೇಂದ್ರಿತ ಚಿತ್ರಗಳನ್ನು ಹುಡುಕುತ್ತ ಹೋದರೆ ಕೊನೆಯೇ ಇಲ್ಲ. ಇವುಗಳಲ್ಲಿ ಕೆಲವೊಂದು ಸಿನಿಮಾಗಳು ನಮ್ಮನ್ನ ಯಾವಾಗಲೂ ಕಾಡುತ್ತಲೇ ಇರುತ್ತವೆ. ಭಾಷೆ ಯಾವುದೇ ಇದ್ರೂ ಅಮ್ಮನ ಬಗ್ಗೆ ಹೊಂದಿದ ಭಾವ ಮಾತ್ರ ಅದು ಎಲ್ಲರಿಗೂ ಒಂದೆ. ಹಾಗಾದ್ರೆ ಅಮ್ಮನ ಸಂಬಂಧಿತ ಸಿನಿಮಾ ಯಾವುದ್ಯಾವುದು? ಮೇ 8ರ ಆಚರಣೆಗೆ ಎಂಟು ಸಿನಿಮಾ ಲಿಸ್ಟ್‌ ಇಲ್ಲಿದೆ. ಒಮ್ಮೆ ನೋಡಿ, ಅಮ್ಮ ಲವ್‌ ಯು ಅಂದುಬಿಡಿ.

ಲಾಲಿ ಹಾಡು [ಕನ್ನಡ]

ಚಾಲೆಂಜಿಗ್‌ ಸ್ಟಾರ್‌ ಅಭಿನಯದ ಲಾಲಿ ಹಾಡು ಚಿತ್ರ 2003ರಲ್ಲಿ ತೆರೆ ಕಂಡಿತು. ಇದರಲ್ಲಿ ಇಬ್ಬರು ಸಂಗೀತ ನಿರ್ದೇಶಕರಾದ ವಿ.ಮನೋಹರ್ ಮತ್ತು ರಾಜೇಶ್ ರಾಮನಾಥ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಾಧು ಕೋಕಿಲ ಅವರು ಸಂಯೋಜಿಸಿದ ಹಾಡುಗಳು ದೊಡ್ಡ ಹಿಟ್ ಆದವು. ತಾಯಿಯ ಪಾತ್ರದಲ್ಲಿ ನಟಿಸಿದವರು ಹಿರಿಯ ಕಲಾವಿದೆ ಉಮಾಶ್ರೀ. ಅಂದಮೇಲೆ ಕೇಳಬೇಕೆ? ಎಂದಿನಂತೆ ಅವರ ಸುಲಲಿತ ಶೈಲಿಯಲ್ಲಿ ತಾಯಿಯ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಹಲವಾರು ಪ್ರಸಸ್ತಿಗಳನ್ನು ತಂದುಕೊಟ್ಟರು.

ಈ ಚಿತ್ರದಲ್ಲಿ ನಾಯಕ ಹಾಡುಗಾರನಾಗಿದ್ದರೂ, ತಾಯಿ ಜೋಗುಳ ಪದ್ಯದಲ್ಲೇ ಸಂಗೀತವನ್ನು ಕಲಿತು, ತಾನು ಹುಟ್ಟಿ ಬಂದ ಹಳೆಯ ಜೀವನಕ್ಕೆ ತಾಯಿಯನ್ನು ಎಂದಿಗೂ ಹೊಸ ಬದುಕಿಗೆ ಹೋಲಿಕೆ ಮಾಡದೇ ತಾಯಿಯೇ ತನ್ನ ಸಾದನೆಗೆ ಕಾರಣ ಎಂಬ ಸಂದೇಶ ಇಲ್ಲಿ ಇದೆ. ಅಷ್ಟೇ ಅಲ್ಲದೇ, ತಾನು ಅಕ್ಷರ ಕಲಿಯದಿದ್ದರೂ, ಹೇಗೆ ತನ್ನ ಮಗನನ್ನು ಒಂದು ಹಂತಕ್ಕೆ ತಾಯಿ ತಲುಪಿಸಿದಳು ಎಂಬ ಚಿತ್ರಣವನ್ನು ಇಲ್ಲಿ ಕಾಣಬಹುದು.
2003ರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಮೂರನೇ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಇದನ್ನೂ ಓದಿ : Gallery | ಎ.ಆರ್. ರೆಹಮಾನ್ ಮಗಳ ಮದುವೆಯ ಸಂಭ್ರಮದ ಚಿತ್ರಗಳು

ವೆರಾ ಡ್ರೇಕ್ [Vera Drake] (ಇಂಗ್ಲಿಷ್‌)

2004ರಲ್ಲಿ ತೆರೆ ಕಂಡ ಇಂಗ್ಲಿಷ್‌ ಸಿನಿಮಾ. ಬ್ರಿಟಿಷ್ ಅವಧಿಯ ನಾಟಕ ಚಲನಚಿತ್ರವಾಗಿದ್ದು ಮೈಕ್ ಲೀ ಬರೆದು ನಿರ್ದೇಶಿಸಿದ್ದಾರೆ. ಇದು 1950ರಲ್ಲಿ ಲಂಡನ್‌ನಲ್ಲಿ ಕಾನೂನುಬಾಹಿರ ಗರ್ಭಪಾತವನ್ನು ಮಾಡುವ ಕಾರ್ಮಿಕ ವರ್ಗದ ಮಹಿಳೆಯ ಕಥೆಯನ್ನು ಸಾರುತ್ತದೆ. ಬಾಳ್ಯದ ಸಂಬಂಧಿತ ಸಿನಿಮಾ ಆಗಿದ್ದು, ಇದು ವೆನಿಸ್ ಚಲನಚಿತ್ರೋತ್ಸವದಲ್ಲಿ ಗೋಲ್ಡನ್ ಲಯನ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಜತೆಗೆ ಮೂರು ಅಕಾಡೆಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿತು, ಮೂರು BAFTAಗಳನ್ನು ಗೆದ್ದಿತು. ಈ ಸಿನಿಮಾ ಕೇವಲ ಮನರಂಜನೆ ಅಲ್ಲದೇ ಪಾತ್ರವನ್ನು ತಿಂಗಳುಗಳಕಾಲ ಅದ್ಯಯನ ಮಾಡಿ ವಿಷಯವನ್ನು ಸಂಗ್ರಹಿಸಿ ಕೌಟುಂಬಿಕ ಜೀವನವನ್ನು ಸ್ಪಷ್ಟವಾಗಿ ವಿವರಿಸಿದ ಪ್ರಯೋಗವಾಗಿತ್ತು.

ಪ್ಲೇಸಸ್‌ ಇನ್‌ ದಿ ಹಾರ್ಟ್‌ [Places in The Heart]

ಅಮೆರಿಕನ್‌ ಚಿತ್ರಕಥೆಗಾರ, ನಿರ್ದೇಶಗ ರಾಬರ್ಟ್‌ ಡಗ್ಲಸ್‌ ಬೆಂಟನ್‌ ಅವರು 1964 ರಲ್ಲಿ ಅವರೇ ಬರೆದು ನಿರ್ದೇಶಿಸಿದ ಚಿತ್ರ. ಟೆಕ್ಸಾಸ್‌ನಲ್ಲಿ ನಡೆದ ಮಹಾ ಆರ್ಥಿಕ ಕುಸಿತದ ಸಮಯದಲ್ಲಿ ಯುವತಿ ಎಡ್ನಾ ಸ್ಪಾಲ್ಡಿಂಗ್ ಹೋರಾಡಿದ ಕಥೇಯನ್ನಾಧರಿಸಿ ಮಾಡಿದ ಸಿನಿಮಾ. ಆಕೆ ತನ್ನ ಗಂಡನ ಮರಣದ ನಂತರ ತನ್ನ ಜಮೀನಿನ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾಳೆ. ಒಬ್ಬಳೆ ಅದನ್ನು ಹೇಗೆ ನಿರ್ವಹಿಸಿ ಗೆಲ್ಲುತ್ತಾಳೆ ಎಂಬುದೇ ಇದರಲ್ಲಿರುವ ಸ್ವಾರಸ್ಯ,
35ನೇ ಬರ್ಲಿನ್ ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ಲೇಸಸ್ ಇನ್ ದಿ ಹಾರ್ಟ್ ಪ್ರಥಮ ಪ್ರದರ್ಶನಗೊಂಡಿತು. ಅಲ್ಲಿ ಅದು ಗೋಲ್ಡನ್ ಬೇರ್‌ಗಾಗಿ ಸ್ಪರ್ಧಿಸಿತು. ಬೆಂಟನ್ ಅತ್ಯುತ್ತಮ ನಿರ್ದೇಶಕರಾಗಿ ಸಿಲ್ವರ್ ಬೇರ್ ಪ್ರಶಸ್ತಿ ಗೆದ್ದರು.

ಮಾತೃ ದೇವೋ ಭವ [ತೆಲುಗು]

1993ರ ತೆಲಗು ನಾಟಕದ ಆಧರಿತ ಚಲನಚಿತ್ರವಾಗಿದ್ದು, ಕೆ. ಅಜಯ್ ಕುಮಾರ್ ಬರೆದು ನಿರ್ದೇಶಿಸಿದ್ದಾರೆ. ಚಾಲಕ ಮತ್ತು ಸಂಗೀತ ಶಿಕ್ಷಕಿ ಗಂಡ ಹೆಂಡತಿಯ ಕೇಂದ್ರಿತ ಕಥೆ. ಇಬ್ಬರೂ ಸೇವಾ ಆಶ್ರಮದಲ್ಲಿ ಅನಾಥರಾಗಿದ್ದು, ನಂತರದಲ್ಲಿ ಪ್ರೀತಿ ಬೆಳೆದು ಒಂದಾಗುತ್ತಾರೆ. ನಾಲ್ಕು ಮಕ್ಕಳಿಗೆ ಪಾಲಕರಾಗುತ್ತಾರೆ. ಮದ್ಯವ್ಯಸನಿ ತಂದೆ, ಕ್ಯಾನ್ಸರ್‌ನಿಂದ ಬಳಲುತ್ತಿರುವ ತಾಯಿ, ಈ ಮಕ್ಕಳನ್ನು, ಇಂತಹ ವಾತಾವರಣದಲ್ಲಿ ಹೇಗೆ ಬೆಳೆಸುತ್ತಾಳೆ ಎಂಬುದೇ ಮುಖ್ಯ ತಿರುಳು. ಚಲನಚಿತ್ರವು “ರಾಳಿಪೋಯೆ ಪುವ್ವ” ಹಾಡಿಗಾಗಿ ವೆಟೂರಿಯವರ ಅತ್ಯುತ್ತಮ ಸಾಹಿತ್ಯಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಮತ್ತು ಫಿಲ್ಮ್‌ಫೇರ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು (ತೆಲುಗು) ಕೂಡ ಗೆದ್ದುಗೊಂಡಿತು.

ಮನಸ್ಸಿನಕ್ಕರೆ [ಮಲೆಯಾಳಂ]

2003 ರಲ್ಲಿ ತೆರೆಕಂಡ ತಾಯಿ ಆಧಾರಿತ ಮಲೆಯಾಳಂ ಚಿತ್ರ ಮನಸ್ಸಿನಕ್ಕರೆ. ಶ್ರೀಮಂತ ವಿಧವೆ ತಾಯಿ ಕೊಚು ಥ್ರೇಸಿಯಾ. ತಾನು ವಾಸಿಸುವ ಸುಂದರ ಹಳ್ಳಿಯ ಎಲ್ಲ ಒಳ್ಳೆಯತನವನ್ನೂ ಸವಿಯಬೇಕು, ಸ್ವಚ್ಛಂದದ ಜೀವನ ನಡೆಸಬೇಕೆನ್ನುವಾಕೆ. ತನ್ನ ಮೊದಲ ಮನೆಯಲ್ಲಿರುವ ಥ್ರೇಸಿಯಾ ಜೀವನವನ್ನು ಆನಂದಿಸುವುದೇ ವಿಶೇಷ, ವಿಚಿತ್ರ. ಆದರೆ ಈಕೆಯ ವಯಸ್ಸಿಗೆ ನಡೆದುಕೊಳ್ಳುವ ರೀತಿ ಇದಲ್ಲ ಎನ್ನುವುದು ಮಗ, ಕುಟುಂಬದ ಅಭಿಪ್ರಾಯ.
ದೇಹಕ್ಕೆ ವಯಸ್ಸಾಗಿದ್ದರೂ ಆಕೆಯ ಮನಸ್ಸು ಮಾತ್ರ ಯುವ. ಈ ಸಮಯದಲ್ಲಿ ಎದುರಾಗುವ ಒಬ್ಬ ಯುವ ಸ್ನೇಹಿತ ರೇಜಿ. ಇಬ್ಬರ ನಡುವೆ ತಾಯಿ ಮಗನ ವಾತ್ಸಲ್ಯ ಬೆಳೆಯುತ್ತದೆ. ಬಾಯೂರಿಸುವ ಬೀಫ್‌ ತಂದುಕೊಡುವುದರಿಂದ ಆನೆ ಸವಾರಿವರೆಗೆ ಥ್ರೇಸಿಯಾ ಬಯಸುವ ಎಲ್ಲವನ್ನೂ ರೇಜಿ ಈಡೇರಿಸುತ್ತಾನೆ. ಇದೆಲ್ಲವನ್ನೂ ನೋಡುವ ಥ್ರೇಸಿಯಾ ಮಕ್ಕಳಿಗೆ ಮುಜುಗರ ಹೆಚ್ಚಾಗುತ್ತದೆ. ಇದೆಲ್ಲಕ್ಕೂ ಕೊನೆ ಹಾಡಬೇಕು ಎಂದು ಒಂದು ದಿನ ಥ್ರೇಸಿಯಾ ನಿರ್ಧರಿಸುತ್ತಾಳೆ.
ಸತ್ಯನ್ ಅಂತಿಕ್ಕಾಡ್ ನಿರ್ದೇಶಿಸಿದ್ದಾರೆ ಮತ್ತು ರಂಜನ್ ಪ್ರಮೋದ್ ಬರೆದಿದ್ದಾರೆ. ಚಿತ್ರದ ಸಂಗೀತ ವನ್ನ ಇಳಯರಾಜ ಸಂಯೋಜಿಸಿರುವುದು ವಿಶೇಷ

ಪಾ[Paa] (ಹಿಂದಿ):

ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ತನ್ನ ಮಗುವಿನ ಬಗ್ಗೆ ತಾಯಿಯ ಹೋರಾಟದ ಬಗ್ಗೆ ಇದೆ ಪಾ (2009) ಚಿತ್ರ. ಆರ್‌. ಬಾಲ್ಕಿ ನಿರ್ದೇಶಿಸಿದ ಚಿತ್ರವಾಗಿದ್ದು, ಚಿತ್ರದ ನಾಯಕ ಅಮಿತಾಭ್ ಬಚ್ಚನ್. ಪಾತ್ರದ ಹೆಸರು ಆರೋ(Auro). ಪ್ರೊಜೆರಿಯಾ, ಅಪರೂಪದ ಆನುವಂಶಿಕ ಕಾಯಿಲೆ. 12 ವರ್ಷದ ಮತ್ತು ಸಾಕಷ್ಟು ಬುದ್ಧಿವಂತ ಮತ್ತು ಚೇಷ್ಟೆಯ ಮಗು. ಮಾನಸಿಕವಾಗಿ ಈ ವಯಸ್ಸಿನ ಇತರೆ ಮಕ್ಕಳಂತೆಯೇ ಸಾಮಾನ್ಯ. ಆದರೆ ದೈಹಿಕವಾಗಿ ಅವನು ತನ್ನ ವಯಸ್ಸಿಗಿಂತ ಐದು ಪಟ್ಟು ಹೆಚ್ಚು ಎಂದು ತೋರುತ್ತಾನೆ. ಸ್ತ್ರೀರೋಗತಜ್ಞರಾಗಿರುವ ತಾಯಿ ವಿದ್ಯಾ ಅವರೊಂದಿಗೆ ವಾಸಿಸುತ್ತಾನೆ. ಮಹತ್ವಾಕಾಂಕ್ಷಿ ರಾಜಕಾರಣಿ ಅಮೋಲ್‌ ಆರ್ತೆಯೇ ಆರೋನ ತಂದೆ ಎನ್ನುವುದನ್ನು ತಾಯಿ ವಿದ್ಯಾ ಮುಚ್ಚಿಟ್ಟಿರುತ್ತಾಳೆ. ಇಂತಹ ಸ್ಥಿತಿಯಲ್ಲಿರುವ ಮಗನನನ್ನು ತಾಯಿ ನೋಡಿಕೊಳ್ಳುವುದು, ಪುರುಷರ ದಬ್ಬಾಳಿಕೆ, ತಾಯಿಯ ಗಟ್ಟಿತನ ಇದರಲ್ಲಿ ವ್ಯಕ್ತವಾಗಿದೆ.

ಇದನ್ನೂ ಓದಿ : ಪ್ರೀತಿಯ ಶ್ವಾನದ ಜತೆಗೊಂದು ಹ್ಯಾಪಿ ಜರ್ನಿ ..!

ಮಾಮ್ [MOM] (ಹಿಂದಿ)

ರವಿ ಉದಯವಾರ್‌ ನಿರ್ದೇಶಿಸಿದ ಮಾಮ್‌(2017) ಈ ಚಿತ್ರದಲ್ಲಿ ಶ್ರೀದೇವಿ ಅಮ್ಮನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಮಲ ಮಗಳು ಆರ್ಯಾ. ಚಿತ್ರದಲ್ಲಿ ಅತ್ಯಾಚಾರಕ್ಕೆ ಒಳಗಾದ ಮಗಳಿಗೆ ಸಿಂಹಣಿಯಂತೆ ಸೇಡು ತೀರಿಸಿಕೊಳ್ಳೋ ಮದರ್‌ ಸೆಂಟಿಮೆಂಟ್‌ ಈ ಸಿನಿಮಾದಲ್ಲಿದೆ. ಮೊದ ಮೊದಲು ಮಗಳು ತಾಯಿಯನ್ನು ಹೇಟ್‌ ಮಾಡ್ತಾ ಇರುತ್ತಾಳೆ. ನಂತರದಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲು ಆದಾಗ, ಶ್ರೀದೇವಿ ತನ್ನ ಮಗಳಿಗೋಸ್ಕರ ಆರೋಪಿಗಳನ್ನು ಕಂಡು ಹಿಡಿದು ಎಲ್ಲರನ್ನೂ ಕೊನೆಯಲ್ಲಿ ಸಾಯಿಸುತ್ತಾಳೆ. ಅಮ್ಮನ ಧೈರ್ಯಕ್ಕೆ ಮೆಚ್ಚಿ ಮಗಳು ಒಂದಾಗುವ ಬಗೆ ಹಾಗೂ ತಾಯಿ ಒಬ್ಬಳು ಇದ್ದರೆ ಏನು ಬೇಕಾದರೂ ಗೆಲ್ಲಬಹುದು ಎಂದು ತೋರಿಸಿಕೊಟ್ಟಿದೆ ಈ ಚಿತ್ರ.

ಅಮ್ಮಚ್ಚಿಯೆಂಬ ನೆನಪು

2008 ರಲ್ಲಿ ಬಂದ ಕನ್ನಡ ಚಲನಚಿತ್ರ. ಚಂಪಾ ಪಿ. ಶೆಟ್ಟಿ ನಿರ್ದೇಶಿಸಿದ ಈ ಚಿತ್ರವು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಬರಹಗಾರ್ತಿ ವೈದೇಹಿಯವರ ಮೂರು ಸಣ್ಣಕಥೆಗಳ ಮೇಲೆ ಆಧಾರಿತವಾಗಿದೆ. ಇದರಲ್ಲಿ ಅಮ್ಮಚ್ಚಿಗೆ ತಾಯಿ ಇಲ್ಲದೇ ತಾಯಿಯ ಸ್ಥಾನವನ್ನು ಅಜ್ಜಿ ತುಂಬಿರುತ್ತಾಳೆ. ಮತ್ತು ತನಗೆ ಬಂದಿರುವ ಸಮಸ್ಯೆಗಳು, ಮದುವೆ, ಮತ್ತು ಸ್ವಾತಂತ್ರ್ಯಕ್ಕೂ ಕೈ ಚಾಚಿ ನಿಲ್ಲುವಂತಹ ನಿರ್ಮಾಣ. ಹಾಗೂ ವಿದ್ಯಾಭ್ಯಾಸಕ್ಕೂ ಅಮ್ಮಚ್ಚಿ ಅಜ್ಜಿಯೊಂದಿಗೆ ಸೆಣಸಾಟ ಮಾಡುವ ಪರಿ. ತಾಯಿ ಒಬ್ಬಳು ಇಲ್ಲದಿದ್ದರೆ ಹೆಣ್ಣು ಹೇಗೆ ದುರ್ಬಲಳು ಎಂಬುದು ಈ ಚಲನಚಿತ್ರದಲ್ಲಿ ಮಾರ್ಮಿಕವಾಗಿ ಚಿತ್ರಿತವಾಗಿದೆ.

ಇದನ್ನೂ ಓದಿ : ದೀಪಿಕಾ Cannes ಚಿತ್ರೋತ್ಸವ ತೀರ್ಪುಗಾರ್ತಿ: 9 ವರ್ಷದ ನಂತರ ದೊರೆತ ಅವಕಾಶ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Crowd Funding: ಕಂದಮ್ಮನ ಚಿಕಿತ್ಸೆಗೆ ಹರಿದು ಬಂದ ನೆರವು; 3 ತಿಂಗಳಲ್ಲಿ 9 ಕೋಟಿ ರೂ. ಸಂಗ್ರಹ

Crowd Funding: ರಾಜಸ್ಥಾನದ ಜೈಪುರದಲ್ಲಿ ಮಗುವಿನ ಚಿಕಿತ್ಸೆಗೆ ಸಾರ್ವಜನಿಕರು ಅಭೂತಪೂರ್ವಾಗಿ ಸ್ಪಂದಿಸಿದ್ದಾರೆ. ಸೊಂಟದ ಕೆಳಗೆ ಸಂಪೂರ್ಣ ಸ್ವಾಧೀನ ಕಳೆದುಕೊಂಡ ಮಗುವಿನ ಚಿಕಿತ್ಸೆಗಾಗಿ 17.5 ಕೋಟಿ ರೂ. ಬೇಕಾಗಿತ್ತು. ಸುಮಾರು 3 ತಿಂಗಳಲ್ಲಿ 9 ಕೋಟಿ ರೂ. ಸಂಗ್ರಹವಾಗಿದ್ದು, ಮಗುವಿಗೆ ಚಿಕಿತ್ಸೆ ನೀಡಲಾಗಿದೆ. ಉಳಿದ ಮೊತ್ತವನ್ನು ವರ್ಷದೊಳಗೆ ಮೂರು ಕಂತಿಗಳಲ್ಲಿ ಪಾವತಿಸಬಹುದಾದ ಅವಕಾಶವಿದೆ. ಸದ್ಯ ಸಾರ್ವಜನಿಕರ ಮಾನವೀಯ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.

VISTARANEWS.COM


on

Crowd Funding
Koo

ಜೈಪುರ: ಮಾನವೀಯತೆ ಇನ್ನೂ ಜೀವಂತ ಇದೆ ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ. ರಾಜಸ್ಥಾನದ 22 ತಿಂಗಳ ಮಗುವಿನ ಚಿಕಿತ್ಸೆಗೆ ಸ್ಪಂದಿಸಿದ ಅನೇಕರು ಭರಪೂರ ದೇಣಿಗೆ ನೀಡಿದ್ದಾರೆ. ಕ್ರಿಕೆಟ್‌ ಅಟಗಾರರಿಂದ ಹಿಡಿದು, ನಟರು, ತರಕಾರಿ ಮಾರುವವರು, ಬೀದಿಬದಿ ವ್ಯಾಪಾರಿಗಳು ದೇಣಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಸೊಂಟದ ಕೆಳಗೆ ಸಂಪೂರ್ಣ ಸ್ವಾಧೀನ ಕಳೆದುಕೊಂಡ ಮಗುವಿನ ಚಿಕಿತ್ಸೆಗಾಗಿ ಸುಮಾರು 17.5 ಕೋಟಿ ರೂ. ಮೊತ್ತದ ಇಂಜೆಕ್ಷನ್‌ ನೀಡಬೇಕಾಗಿದ್ದು, ಇದಕ್ಕಾಗಿ ಇವರೆಲ್ಲ ಒಂದಾಗಿದ್ದಾರೆ. ತಮ್ಮ ಕೈಲಾದ ಸಹಾಯ ಮಾಡಿ ಮಗುವಿನ ನೆರವಿಗೆ ಧಾವಿಸಿದ್ದಾರೆ (Crowd Funding).

ರಾಜಸ್ಥಾನದ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ನರೇಶ್‌ ಶರ್ಮಾ ಅವರ ಪುತ್ರ ಹೃದಯಾಂಶ್‌ ಶರ್ಮಾ (22 ತಿಂಗಳು) ಅಪರೂಪದ ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ (Spinal muscular atrophy) ಎಂಬ ಆನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದಾನೆ. ಈ ಕಾರಣದಿಂದ ಆತನ ಸೊಂಟದ ಕೆಳಭಾಗ ಸಂಪೂರ್ಣ ನಿಷ್ಕ್ರೀಯವಾಗಿತ್ತು. ಇದನ್ನು ವಾಸಿ ಮಾಡಲು, ಸಂಪೂರ್ಣ ಗುಣಮುಖನಾಗಲು ವಿಶ್ವದ ಅತ್ಯಂತ ದುಬಾರಿ ಔಷಧಿಗಳಲ್ಲಿ ಒಂದಾದ ಜೀನ್ ಥೆರಪಿ ಇಂಜೆಕ್ಷನ್‌ ಜೊಲ್ಗೆನ್ಸ್ಮಾ (Zolgensma)ದ ಸಿಂಗಲ್ ಡೋಸ್ ಪಡೆದುಕೊಳ್ಳಬೇಕು ಎಂದು ವೈದ್ಯರು ಸೂಚಿಸಿದ್ದರು. ಅತ್ಯಂತ ದುಬಾರಿಯಾದ ಇದರ ಬೆಲೆ ಅಂದಾಜು 17.5 ಕೋಟಿ ರೂ.

ದೇಣಿಗೆ ಸಂಗ್ರಹಕ್ಕೆ ಮುಂದಾದ ಪೊಲೀಸರು

ಇಷ್ಟೊಂದು ದುಬಾರಿ ಮೊತ್ತ ಭರಿಸಲು ನರೇಶ್‌ ಶರ್ಮಾ ಅವರ ಕುಟುಂಬಕ್ಕೆ ಸಾಧ್ಯವಿರಲಿಲ್ಲ. ಈ ಹಿನ್ನೆಲೆಯಲ್ಲಿ ನೆರವಿಗೆ ಧಾವಿಸಿದ ರಾಜಸ್ಥಾನ ಪೊಲೀಸರು ಸಾವರ್ಜನಿಕ ದೇಣಿಗೆ ಸಂಗ್ರಹಕ್ಕೆ ಮುಂದಾದರು. ಮಗುವಿಗೆ 2 ವರ್ಷ ತುಂಬುವ ಮೊದಲೇ ಈ ಚಿಕಿತ್ಸೆ ನಡೆಯಬೇಕಿರುವುದರಿಂದ ಪೊಲೀಸರು ಫೆಬ್ರವರಿಯಲ್ಲಿ ಕ್ರೌಡ್‌ ಫಡಿಂಗ್‌ ಅಭಿಯಾನ ಆರಂಭಿಸಿದರು. ಈ ಅಭಿಯಾನಕ್ಕೆ ಸೂಕ್ತ ಸ್ಪಂದನೆ ದೊರೆಯಿತು. ಸೆಲೆಬಿಟಿಗಳಾದ ಕ್ರಿಕೆಟಿಗ ದೀಪಕ್‌ ಚಹರ್‌ ಮತ್ತು ಬಾಲಿವುಡ್‌ ನಟ, ಬಹಭಾಷಾ ಕಲಾವಿದ ಸೋನು ಸೂದ್‌ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಈ ವಿಚಾರವನ್ನು ಹಂಚಿಕೊಂಡು ನೆರವು ನೀಡಲು ಮನವಿ ಮಾಡಿದರು.

ಹರಿದು ಬಂದ ನೆರವು

ಬಳಿಕ ಜೈಪುರದ ವಿವಿಧ ಕಡೆಗಳಿಂದ ನೆರವು ಹರಿದು ಬರತೊಡಗಿತು. ಅಂಗಡಿಯವರು, ವಿದ್ಯಾರ್ಥಿಗಳು, ಗೃಹಣಿಯರು, ತರಕಾರಿ, ಹಣ್ಣು ಮಾರಾಟಗಾರರು, ಬೀದಿ ಬದಿ ವ್ಯಾಪಾರಿಗಳು ಹೀಗೆ ಎಲ್ಲರೂ ನೆರವಿನ ಹಸ್ತ ಚಾಚಿದರು. ವಿವಿಧ ಎನ್‌ಜಿಒಗಳು ಮತ್ತು ಸಂಸ್ಥೆಗಳು ಕೂಡ ಈ ಅಭಿಯಾನಕ್ಕೆ ಕೈ ಜೋಡಿಸಿದವು. ʼʼರಾಜಸ್ಥಾನದಲ್ಲಿ ಕ್ರೌಡ್‌ ಫಡಂಗ್‌ಗೆ ಈ ರೀತಿಯ ಸ್ಪಂದನೆ ದೊರೆಯುತ್ತಿರುವುದು ಇದು ಮೊದಲ ಬಾರಿʼʼ ಎಂದು ಅಭಿಯಾನದಲ್ಲಿ ತೊಡಗಿಸಿಕೊಂಡಿರುವವರು ಅಭಿಪ್ರಾಯಪಡುತ್ತಾರೆ.

3 ತಿಂಗಳಲ್ಲಿ 9 ಕೋಟಿ ರೂ. ಸಂಗ್ರಹ

3 ತಿಂಗಳ ಅವಧಿಯಲ್ಲಿ ಸುಮಾರು 9 ಕೋಟಿ ರೂ. ಸಂಗ್ರಹವಾಗಿದೆ. ಇದೀಗ ಜೈಪುರದ ಜೆ.ಕೆ. ಲಾನ್‌ ಆಸ್ಪತ್ರೆಯಲ್ಲಿ ಹೃದಯಾಂಶ್‌ಗೆ ಇಂಜೆಕ್ಷನ್‌ ನೀಡಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ. ಉಳಿದ ಮೊತ್ತವನ್ನು ವರ್ಷದೊಳಗೆ ಮೂರು ಕಂತಿಗಳಲ್ಲಿ ಪಾವತಿಸಬಹುದಾದ ಅವಕಾಶವಿದೆ ಎಂದು ಮೂಲಗಳು ತಿಳಿಸಿವೆ.

ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ ಎನ್ನುವುದು ಆನುವಂಶಿಕ ಅಸ್ವಸ್ಥತೆಯಾಗಿದ್ದು, ಇದರಲ್ಲಿ ಬೆನ್ನುಹುರಿ ಮತ್ತು ಮೆದುಳಿನ ಕಾಂಡದಲ್ಲಿನ ನರ ಕೋಶಗಳ ಕೊರತೆಯೊಂದಾಗಿ ವ್ಯಕ್ತಿಗೆ ಸ್ನಾಯುಗಳ ಚಲನೆಯನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಇದು ಸ್ನಾಯು ದೌರ್ಬಲ್ಯಕ್ಕೆ ಕಾರಣವಾಗುತ್ತದೆ ಮತ್ತು ಕೈಕಾಲುಗಳ ಚಲನೆ ಮತ್ತು ಉಸಿರಾಟದ ಮೇಲೂ ಪರಿಣಾಮ ಬೀರುತ್ತದೆ. ಇದರ ಚಿಕಿತ್ಸೆಗಾಗಿ ಬಳಸುವ ಜೊಲ್ಗೆನ್ಸ್ಮಾ ಇಂಜೆಕ್ಷನ್‌ ಅನ್ನು ಸ್ವಿಸ್ ಫಾರ್ಮಾ ದೈತ್ಯ ನೊವಾರ್ಟಿಸ್ (Novartis) ತಯಾರಿಸುತ್ತದೆ.

ಇದನ್ನೂ ಓದಿ: kodagu News : ಒಮ್ಮಿಂದೊಮ್ಮೆಗೇ ಜೋರಾಯಿತು ನೋವು; ಆಂಬ್ಯುಲೆನ್ಸ್‌ನಲ್ಲೇ ಹೆರಿಗೆ ಮಾಡಿಸಿದ ಸ್ಟಾಫ್‌ ನರ್ಸ್‌

Continue Reading

ಆರೋಗ್ಯ

Health Tips in Kannada: ಕುತ್ತಿಗೆ ನೋವಿನಿಂದ ಬಳಲುತ್ತಿದ್ದೀರಾ? ಈ ಸಂಗತಿ ತಿಳಿದುಕೊಂಡಿರಿ

ಮಾನಸಿಕ ಒತ್ತಡ ಹೆಚ್ಚಿದಾಗ ದೇಹದ ನಾನಾ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಅಂಥವುಗಳಲ್ಲಿ ಒಂದು ಕುತ್ತಿಗೆ ನೋವು. ಒತ್ತಡ (neck pain) ಶಮನ ಮಾಡುವುದರ ಜೊತೆಗೆ, ಇನ್ನೂ ಕೆಲವು ತಂತ್ರಗಳು ನೋವಿನಿಂದ ಮುಕ್ತಿ ನೀಡಬಲ್ಲವು. ಕುತ್ತಿಗೆ ನೋವಿನಿಂದ ಪಾರಾಗುವ (Health Tips in Kannada) ಉಪಾಯ ಇಲ್ಲಿದೆ.

VISTARANEWS.COM


on

Health Tips in Kannada
Koo

ಮಾನಸಿಕ ಒತ್ತಡವು ದೇಹದ ಮೇಲೆ ಹಲವು ರೀತಿಯಲ್ಲಿ ಪರಿಣಾಮ ಬೀರಬಲ್ಲದು. ಜೀರ್ಣಾಂಗಗಳ ಆರೋಗ್ಯದಲ್ಲಿ ಏರುಪೇರು, ಬೆನ್ನು ನೋವು, ಕುತ್ತಿಗೆ ನೋವು- ಹೀಗೆ ತರಹೇವಾರಿ ಸಮಸ್ಯೆಗಳನ್ನು ಹುಟ್ಟುಹಾಕಬಲ್ಲದು. ಅದರಲ್ಲೂ ತೀವ್ರವಾದ ಆತಂಕ ಮತ್ತು ಒತ್ತಡವು ಅಷ್ಟೇ ತೀವ್ರವಾದ ಕುತ್ತಿಗೆ ನೋವನ್ನು ಸೃಷ್ಟಿಸಬಲ್ಲದು. ಮಾನಸಿಕ ಒತ್ತಡ ಹೆಚ್ಚಾದಷ್ಟೂ ಸ್ನಾಯುಗಳ ಮೇಲಿನ ಒತ್ತಡವೂ ಹೆಚ್ಚುತ್ತದೆ. ಇದರಿಂದ ನೋವು ಮತ್ತು ಕಿರಿಕಿರಿ ಇನ್ನಷ್ಟು (Health Tips in Kannada) ಏರುತ್ತದೆ.

Neck Pain

ಒತ್ತಡಕ್ಕೂ ಕುತ್ತಿಗೆಗೂ…:

ಸಂಬಂಧ ಇದೆ ಎನ್ನುವುದನ್ನು ಅಧ್ಯಯನಗಳು ದೃಢಪಡಿಸಿವೆ. ನಮ್ಮ ದೇಹದಲ್ಲಿ ಒತ್ತಡ ಹೆಚ್ಚಾದಷ್ಟಕ್ಕೂ ಶರೀರ ಫೈಟ್‌-ಫ್ಲೈಟ್‌ ಎನ್ನುವ ಅವಸ್ಥೆಗೆ ತಲುಪುತ್ತದೆ. ಹೀಗಿರುವಾಗ ಸ್ನಾಯುಗಳ ಮೇಲಿನ ಒತ್ತಡ ಏರುತ್ತದೆ. ದೀರ್ಘ ಕಾಲ ಒತ್ತಡ ಶಮನಕ್ಕೆ ಯಾವುದೇ ಮಾರ್ಗವನ್ನು ಅನುಸರಿಸದಿದ್ದರೆ, ತಡೆಯಲಾರದಂಥ ಕುತ್ತಿಗೆ ನೋವು ಕಾಡುತ್ತದೆ. ಮಾತ್ರವಲ್ಲ, ಒತ್ತಡ ಹೆಚ್ಚಿದಾಗ ನಿದ್ದೆಗೆಡುವುದು, ಉರಿಯೂತ ಹೆಚ್ಚುವಂಥ ಆಹಾರಗಳನ್ನು ತಿನ್ನುವುದು, ಯಾವ್ಯಾವುದೋ ಭಂಗಿಗಳಲ್ಲಿ ಕುಳಿತುಕೊಳ್ಳುವುದು ಸಹ ಹೆಚ್ಚಾಗುತ್ತದೆ. ಇವೆಲ್ಲವುಗಳ ಕೃಪೆಯಿಂದ ಕುತ್ತಿಗೆ ನೋವು ಅಸಹನೀಯ ಎನ್ನುವಷ್ಟಾಗುತ್ತದೆ. ಇದಕ್ಕೆ ಮದ್ದುಂಟೇ?

ಭಂಗಿ

ಮೊದಲಿಗೆ ಕುಳಿತುಕೊಳ್ಳುವ, ಮಲಗುವ ಭಂಗಿಗಳ ಬಗ್ಗೆ ಗಮನ ಕೊಡಿ. ದಿನವಿಡೀ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವವರಾಗಿದ್ದರೆ ಕಣ್ಣಿನ ಮಟ್ಟಕ್ಕೇ ಪರದೆ ಇರಿಸಿಕೊಳ್ಳಿ. ಭುಜಗಳನ್ನು ನಿರಾಳವಾಗಿ ಇರಿಸಿಕೊಳ್ಳಿ. ಕೂರುವ ಕುರ್ಚಿ ನಿಮ್ಮ ಎತ್ತರಕ್ಕೆ ಸರಿಯಾಗಿರಲಿ. ಮಲಗುವಾಗಲೂ ಸರಿಯಾಗ ಭಂಗಿಗಳು ಅಗತ್ಯ. ಬೆನ್ನು, ಕುತ್ತಿಗೆ ನೋವಿನ ಸಂದರ್ಭಗಳಲ್ಲಿ ಸೂಕ್ತ ಎತ್ತರದ ದಿಂಬುಗಳಿರಲಿ.

Pain pressure irritation in neck muscles Excessive Use Of Electronic Gadgets

ಸ್ಟ್ರೆಚ್‌ ಮಾಡಿ

ತಾಸುಗಟ್ಟಲೆ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದು ಅಥವಾ ನಿಲ್ಲುವುದು ಸರಿಯಲ್ಲ. ಇದರಿಂದ ಸ್ನಾಯುಗಳ ಮೇಲಿನ ಒತ್ತಡ ದ್ವಿಗುಣಗೊಳ್ಳುತ್ತದೆ. ಸದಾ ಒಂದೇ ಭಂಗಿಯಲ್ಲಿ ಕೂರುವ ಬದಲು ತಾಸಿಗೊಮ್ಮೆ ಕೆಲವು ನಿಮಿಷಗಳ ವಿರಾಮ ತೆಗೆದುಕೊಳ್ಳಿ. ಬೆನ್ನು, ಕುತ್ತಿಗೆ ಮತ್ತು ತೋಳುಗಳನ್ನು ಚೆನ್ನಾಗಿ ಸ್ಟ್ರೆಚ್‌ ಮಾಡಿ. ಇದರಿಂದ ನೋವು ಹೆಚ್ಚಾಗುವುದನ್ನು ತಡೆಯಬಹುದು.

ತೂಕ ಎತ್ತದಿರಿ

ದೇಹದಲ್ಲಿ ಯಾವುದೇ ಭಾಗದಲ್ಲಿ ನೋವಿದ್ದರೆ, ತೂಕ ಎತ್ತುವ ಸಾಹಸಕ್ಕೆ ಕೈ ಹಾಕಬೇಡಿ. ಹೀಗೆಂದರೆ ಜಿಮ್‌ಗೆ ಹೋಗಿ ತೂಕ ಎತ್ತುವವರಿಗೆ ಮಾತ್ರವೇ ಇದು ಅನ್ವಯಿಸುತ್ತದೆ ಎಂದು ಭಾವಿಸುವಂತಿಲ್ಲ. ಮನೆಯಲ್ಲೇ ಗ್ರೈಂಡರ್‌ ಎತ್ತುವುದು, ಮಂಚ, ಕುರ್ಚಿ-ಮೇಜುಗಳನ್ನು ಜರುಗಿಸುವುದು- ಇಂಥವೆಲ್ಲ ಬೆನ್ನು ಮತ್ತು ಕುತ್ತಿಗೆಯ ಮೇಲೆ ಒತ್ತಡ ಹೆಚ್ಚಿಸುತ್ತವೆ.

Water-Sleep-Exercise For Neck Pain

ದಿಂಬು

ಮಲಗುವಾಗ ಹಾಕುವ ದಿಂಬಿನ ಎತ್ತರದ ಬಗ್ಗೆ ಗಮನ ನೀಡಿ. ತೀರಾ ಎತ್ತರದ ದಿಂಬು ಮತ್ತು ದಿಂಬೇ ಇಲ್ಲದಿರುವುದು- ಈ ಎರಡೂ ವಿಷಯಗಳು ಕುತ್ತಿಗೆ ನೋವನ್ನು ಹೆಚ್ಚಿಸುತ್ತವೆ. ಮೆಮರಿ ಫೋಮ್‌ ದಿಂಬುಗಳು ಕುತ್ತಿಗೆ ನೋವಿನ ತೀವ್ರತೆಯನ್ನು ಗಣನೀಯವಾಗಿ ತಗ್ಗಿಸುತ್ತವೆ. ಖರೀದಿಸುವಾಗ ದುಬಾರಿ ಎನಿಸಿದರೂ, ನಿಮ್ಮ ಕುತ್ತಿಗೆಯ ಆರೋಗ್ಯಕ್ಕಾಗಿ ಇದೇನು ದೊಡ್ಡದೆನಿಸದು.

ಫಿಸಿಯೊಥೆರಪಿ

ಕುತ್ತಿಗೆ ನೋವಿಗೆ ಫಿಸಿಯೊಥೆರಪಿ ಉತ್ತಮ ಮದ್ದಾಗಬಲ್ಲದು. ಈ ಬಗ್ಗೆ ವೈದ್ಯರ ಸಲಹೆ ಕೇಳಿ ಮುಂದುವರಿಯುವುದು ಒಳ್ಳೆಯದು. ನೋವಿಗೆ ಕಾರಣವೇನೆಂದು ಪತ್ತೆ ಮಾಡಿ, ಅದಕ್ಕೆ ಸರಿ ಹೊಂದುವ ಚಿಕಿತ್ಸೆಗಳನ್ನು ನೀಡಲಾಗುತ್ತದೆ. ಜೊತೆಗೆ ವ್ಯಾಯಾಮ, ಮಸಾಜ್‌ ಮುಂತಾದವು ಬಿಗಿದ ಸ್ನಾಯುಗಳನ್ನು ಸಡಿಲ ಮಾಡುತ್ತದೆ.

Hot Pack For Neck Pain

ಬಿಸಿ-ತಣ್ಣಗಿನ ಪ್ಯಾಕ್‌

ಕುತ್ತಿಗೆಯ ಸ್ನಾಯುಗಳ ಬಿಗಿತ ಅಥವಾ ಉರಿಯೂತವನ್ನು ಶಮನ ಮಾಡುವುದಕ್ಕೆ ಬಿಸಿ ಇಲ್ಲವೇ ತಣ್ಣಗಿನ ಪ್ಯಾಕ್‌ಗಳು ಸಹಾಯ ಮಾಡುತ್ತವೆ. ಹೀಟಿಂಗ್‌ ಪ್ಯಾಡ್‌, ಬಿಸಿ ನೀರಿನ ಬಟ್ಟೆ ಮುಂತಾದವು ೧೫ ನಿಮಿಷಗಳ ಕುತ್ತಿಗೆಯ ಮೇಲಿದ್ದರೆ ಆರಾಮ ನೀಡಬಲ್ಲವು. ಪ್ರತಿಯಾಗಿ, ತಣ್ಣನೆಯ ಪ್ಯಾಡ್‌ ಅಥವಾ ತಣ್ಣೀರು ಬಟ್ಟೆಯೂ ಅನುಕೂಲವಾಗುತ್ತದೆ.

ಇದನ್ನೂ ಓದಿ: Moringa Leaves Health Benefits: ನುಗ್ಗೆ ಸೊಪ್ಪು ಏಕೆ ತಿನ್ನಬೇಕು? ಏನಿದೆ ಇದರಲ್ಲಿ ವಿಶೇಷ ಗುಣ?

ಒತ್ತಡ ನಿರ್ವಹಣೆ

ಇದು ಎಲ್ಲಕ್ಕಿಂತ ಅತ್ಯಂತ ಮಹತ್ವದ್ದು. ಯೋಗ, ಪ್ರಾಣಾಯಾಮ, ದೀರ್ಘ ಉಸಿರಾಟ, ಧ್ಯಾನ, ಸಂಗೀತ ಕೇಳುವುದು ಅಥವಾ ಇನ್ಯಾವುದೇ ರೀತಿಯ ಒತ್ತಡ ನಿರ್ವಹಣೆಯ ತಂತ್ರಗಳು ನೋವಿನಿಂದ ಮುಕ್ತಿ ನೀಡಬಲ್ಲವು.

Continue Reading

ಆರೋಗ್ಯ

Mango Juice Benefits: ತಾಜಾ ಮಾವಿನ ರಸ ಕುಡಿಯುವುದರಿಂದ ಎಷ್ಟೊಂದು ಪ್ರಯೋಜನ ಇದೆ ನೋಡಿ…

ಬೇಸಿಗೆಯಲ್ಲಿ ಸಾಕಷ್ಟು ನೀರಿನಂಶವನ್ನು ದೇಹಕ್ಕೆ ಒದಗಿಸುವತ್ತಲೂ ಗಮನ ನೀಡಬೇಕಾಗಿರುವುದರಿಂದ, ಮಾವಿನ ಜ್ಯೂಸ್‌ ಸೇವನೆಯೂ ಸೂಕ್ತವೇ. ಬೇಸಿಗೆಯಲ್ಲಿ ಮಾವಿನ ಹಣ್ಣಿನ ತಾಜಾ ರಸ ಕುಡಿಯುವುದು ಆಪ್ಯಾಯಮಾನ ಎನಿಸುತ್ತದೆ. ದಾಹ ತಣಿಸಲು ಮತ್ತು ಬಾಯಿಯ ರುಚಿ ತಣಿಯಲು ಎರಡಕ್ಕೂ ಒಳ್ಳೆಯ ಉಪಾಯವಿದು. ಮಾವಿನಲ್ಲಿ ಏನಿದೆ ಅಂಥ ಗುಣಕಾರಿ ಅಂಶಗಳು? ಈ ಬಗ್ಗೆ (Mango Juice Benefits) ಇಲ್ಲಿದೆ ಮಾಹಿತಿ.

VISTARANEWS.COM


on

Mango Juice Benefits
Koo

ಬೇಸಿಗೆಯೆಂದರೆ ಬೆವರಷ್ಟೇ ಅಲ್ಲ, ಮಾವಿನ ಹಣ್ಣಿನ ಕಾಲವೂ ಹೌದು. ಇದು ರುಚಿಗೆ ಮಾತ್ರವೇ ಅಲ್ಲ, ಆರೋಗ್ಯದ ಮೇಲಾಗುವ ಲಾಭದಾಯಕ ಪರಿಣಾಮಗಳಿಗಾಗಿಯೂ ಜನಪ್ರಿಯ. ತಾಜಾ ಹಣ್ಣನ್ನು ತಿನ್ನುವುದು ಎಲ್ಲಕ್ಕಿಂತ ಒಳ್ಳೆಯ ಆಯ್ಕೆ. ಆದರೆ ಬೇಸಿಗೆಯಲ್ಲಿ ಸಾಕಷ್ಟು ನೀರಿನಂಶವನ್ನು ದೇಹಕ್ಕೆ ಒದಗಿಸುವತ್ತಲೂ ಗಮನ ನೀಡಬೇಕಾಗಿರುವುದರಿಂದ, ಮಾವಿನ ಜ್ಯೂಸ್‌ ಸೇವನೆಯೂ ಸೂಕ್ತವೇ. ಸದಾ ಕಾಲ ಅದನ್ನೇ ಕುಡಿಯುವುದನ್ನು ಯಾರೂ ಮಾಡುವುದಿಲ್ಲ, ಮಾಡಬಾರದು. ನೀರು ಎಲ್ಲಕ್ಕಿಂತ ಶ್ರೇಷ್ಠವಾದ ಪಾನೀಯ. ಆದರೆ ಒಮ್ಮೊಮ್ಮೆ ಮಾವಿನ ಜ್ಯೂಸ್‌ (Mango Juice) ಸಹ ಬಾಯಾರಿಕೆಗೆ ರುಚಿಕರ ಆಯ್ಕೆಯಾಗಿ ಒದಗಬಲ್ಲದು. ಜ್ಯೂಸರ್‌ಗೆ ಹಾಕಿ ಇದರ ನಾರಿನಂಶವನ್ನು ತೆಗೆಯುವುದು, ಮಿಕ್ಸರ್‌ಗೆ ಹಾಕಿ ನಾರಿನಂಶವನ್ನು ಸೋಸಿ ತೆಗೆಯುವುದು- ಇಂಥವೆಲ್ಲ ಸೂಕ್ತವಲ್ಲ. ಹಣ್ಣನ್ನು ಸೇವಿಸುವಾಗ ಅದರ ನೀರು ಮಾತ್ರವಲ್ಲ, ನಾರಿನಂಶಗಳನ್ನೂ ಜೊತೆಗೆ ಸೇರಿಸಿಕೊಂಡರೆ ಆರೋಗ್ಯಕರ. ಏನು ಲಾಭಗಳು ದೊರೆಯುತ್ತವೆ (Mango Juice Benefits) ಮಾವಿನ ತಾಜಾ ಜ್ಯೂಸ್‌ ಕುಡಿಯುವುದರಿಂದ?

Mango Juice

ಸತ್ವಗಳಿಂದ ಭರಿತ

ಇದರಲ್ಲಿರುವ ಪಿಷ್ಟ ಮತ್ತು ನೈಸರ್ಗಿಕ ಸಕ್ಕರೆಯಂಶ ದೇಹ ದಣಿದಂಥ ಹೊತ್ತಿನಲ್ಲಿ ತ್ವರಿತವಾಗಿ ಚೇತರಿಸಿಕೊಳ್ಳುವಂತೆ ಮಾಡುತ್ತದೆ. ಒಂದು ಸರ್ವಿಂಗ್‌ ತಾಜಾ ಮಾವಿನ ಹಣ್ಣಿನ ರಸದಿಂದ ಅಂದಾಜು 24 ಗ್ರಾಂ ಪಿಷ್ಟ ಮತ್ತು 22 ಗ್ರಾಂನಷ್ಟು ಪ್ರಾಕೃತಿಕ ಸಕ್ಕರೆಯಂಶ ದೊರೆಯುತ್ತದೆ. ವ್ಯಾಯಾಮ ಮಾಡಿ ದಣಿದಾಗ, ಬಿಸಿಲಿನಲ್ಲಿ ಬಸವಳಿದು ಬಂದಂಥ ಸಂದರ್ಭಗಳಲ್ಲಿ ಒಂದು ಗ್ಲಾಸ್‌ ತಂಪಾದ ಮಾವಿನ ಹಣ್ಣಿನ ರಸ ಇಡೀ ದೇಹಕ್ಕೆ ಚೈತನ್ಯ ನೀಡಬಲ್ಲದು. ಜೊತೆಗೆ, ವಿಟಮಿನ್‌ ಸಿ ಮತ್ತು ಎ, ನಾರು, ಹಲವು ರೀತಿಯ ಉತ್ಕರ್ಷಣ ನಿರೋಧಕಗಳಿಂದ ಮಾವು ಸಮೃದ್ಧವಾಗಿದೆ.

Antioxidants in it keep immunity strong Benefits Of Mandakki

ಪ್ರತಿರೋಧಕತೆ ಹೆಚ್ಚಳ

ಮಾವಿನಲ್ಲಿ ವಿಟಮಿನ್‌ ಸಿ ಅಂಶ ಭರಪೂರವಿದೆ. ಸುಮಾರು 100 ಮಿ.ಲೀ. ತಾಜಾ ಮಾವಿನ ರಸದಲ್ಲಿ ಅಂದಾಜು 14 ಎಂ.ಜಿ.ಯಷ್ಟು ವಿಟಮಿನ್‌ ಸಿ ದೊರೆಯುತ್ತದೆ. ಸೋಂಕುಗಳ ವಿರುದ್ಧ ಹೋರಾಡುವಂಥ ಪ್ರತಿರೋಧಕ ಶಕ್ತಿಯನ್ನು ಹೆಚ್ಚು ಮಾಡುವುದರಿಂದ ಹಿಡಿದು, ಕೊಲಾಜಿನ್‌ ಉತ್ಪಾದನೆಯವರೆಗೆ ಬಹಳಷ್ಟು ರೀತಿಯ ಕೆಲಸಗಳನ್ನು ಸಿ ಜೀವಸತ್ವ ನಿರ್ವಹಿಸುತ್ತದೆ.

ealthy internal organs of human digestive system / highlighted blue organs

ಜೀರ್ಣಾಂಗಗಳ ಸಾಮರ್ಥ್ಯ ಹೆಚ್ಚಳ

ಜೀರ್ಣಾಂಗಗಳಲ್ಲಿ ಒಳ್ಳೆಯ ಬ್ಯಾಕ್ಟೀರಿಯಗಳ ಸಂಖ್ಯೆಯನ್ನು ಹೆಚ್ಚಿಸುವುದಕ್ಕೆ ನಾರಿನಂಶದ ಅಗತ್ಯವಿದೆ. ಮಾವಿನಲ್ಲಿ ನಾರು ಹೇರಳವಾಗಿದೆ. ಇದರಿಂದ ಜೀರ್ಣಾಂಗಗಳ ಕ್ಷಮತೆಯನ್ನು ಹೆಚ್ಚಿಸಬಹುದು. ಬೇಕಾದ ಅಂಶಗಳನ್ನು ಜೀರ್ಣ ಮಾಡಿ, ಬೇಡದ್ದನ್ನು ದೇಹದಿಂದ ಹೊರಹಾಕುವುದಕ್ಕೆ ಸುಲಭವಾಗುತ್ತದೆ. ಈ ಮೂಲಕ ಮಲಬದ್ಧತೆಯನ್ನು ದೂರ ಮಾಡುತ್ತದೆ.

Closeup of woman eye with visual effects

ದೃಷ್ಟಿ ಚುರುಕು

ಮಾವಿನಲ್ಲಿರುವ ವಿಟಮಿನ್‌ ಎ ಸತ್ವದಿಂದ ದೃಷ್ಟಿಯನ್ನು ಚೆನ್ನಾಗಿರಿಸಿಕೊಳ್ಳಲು ಅನುಕೂಲ. ಕಣ್ಣಿನ ಹೊರಕವಚವಾದ ಕಾರ್ನಿಯಾದ ಆರೋಗ್ಯ ರಕ್ಷಣೆಗೆ ಎ ಜೀವಸತ್ವ ಅಗತ್ಯವಾಗಿ ಬೇಕು. ಕಣ್ಣಿನಲ್ಲಿರುವ ರೊಡೊಪ್ಸಿನ್‌ ಎಂಬ ಪ್ರೊಟೀನ್‌ಗೂ ವಿಟಮಿನ್‌ ಎ ಅಗತ್ಯ. ಇದು ಕಡಿಮೆ ಬೆಳಕಿನ ಸಂದರ್ಭಗಳಲ್ಲೂ ದೃಷ್ಟಿ ಸ್ವಚ್ಛವಾಗಿ ಕೆಲಸ ಮಾಡುವುದನ್ನು ಸಾಧ್ಯವಾಗಿಸುತ್ತದೆ.

Makhna Seed benifit

ಚರ್ಮದ ಕಾಂತಿ ಹೆಚ್ಚಳ

ಚರ್ಮ ಬಿಗಿಯಾಗಿರುವುದಕ್ಕೆ, ಸುಕ್ಕಾಗದಂತೆ ತಡೆಯುವುದಕ್ಕೆ, ಕಾಂತಿಯುಕ್ತ ಆಗಿರುವುದಕ್ಕೆ ಬೇಕಾಗುವುದು ಕೊಲಾಜಿನ್‌ ಸತ್ವ. ಇದರ ಉತ್ಪತ್ತಿಗೆ ಅಗತ್ಯವಾದದ್ದು ವಿಟಮಿನ್‌ ಸಿ ಅಂಶ. ಇದರಿಂದ ವಯಸ್ಸಾದಂತೆ ಕಾಣುವುದನ್ನು ಮುಂದೂಡಬಹುದು. ಕಾಡುವ ಉರಿಯೂತದ ನಿವಾರಣೆಗೂ ವಿಟಮಿನ್‌ ಸಿ ಯಂಥ ಉತ್ಕರ್ಷಣ ನಿರೋಧಕಗಳ ಆವಶ್ಯಕತೆಯಿದೆ.

active brain

ಮೆದುಳು ಕ್ಷೇಮ

ಮಾವಿನಲ್ಲಿ ಉತ್ಕರ್ಷಣ ನಿರೋಧಕಗಳು ವಿಫುಲವಾಗಿವೆ. ಉತ್ಕರ್ಷಣ ನಿರೋಧಕಗಳ ಸಾಂದ್ರತೆ ಹೆಚ್ಚಿದಷ್ಟಕ್ಕೂ ದೇಹದ ಅಂಗಾಂಗಗಳು ಕ್ಷೇಮವಾಗಿ ಇರುತ್ತವೆ. ಮುಕ್ತಕಣಗಳನ್ನು ನಿರ್ಬಂಧಿಸುವುದರಿಂದ ಮೆದುಳನ್ನು ಕಾಡುವ ಅಲ್‌ಜೈಮರ್ಸ್‌ನಂಥ ರೋಗಗಳು ಹತ್ತಿರ ಬಾರದಂತೆ ನೋಡಿಕೊಳ್ಳಬಹುದು.

ಇದನ್ನೂ ಓದಿ: Vertigo Problem: ನಿಮಗೆ ಇದ್ದಕ್ಕಿದ್ದಂತೆ ತಲೆ ಸುತ್ತುತ್ತಿದೆಯೆ? ಈ ವಿಷಯ ತಿಳಿದುಕೊಂಡಿರಿ

ಜೋಕೆ!

ಒಳ್ಳೆಯದೆಂಬ ನೆವದಿಂದ ಮಿತಿಮೀರಿದ ಪ್ರಮಾಣದಲ್ಲಿ ಮಾವಿನ ಜ್ಯೂಸ್‌ ಸೇವಿಸಿದರೆ ಹೊಟ್ಟೆಯ ಆರೋಗ್ಯ ಹಾಳಾಗಬಹುದು. ಅತಿಯಾದ ನಾರಿನ ಅಂಶವಿರುವ ಆಹಾರದ ಸೇವನೆಯಿಂದ ಡಯರಿಯ ಕಾಡಬಹುದು. ಮಾವಿನಲ್ಲಿರುವ ಅಧಿಕ ಸಕ್ಕರೆಯಂಶದಿಂದ ತೂಕ ಹೆಚ್ಚಬಹುದು. ಮಧುಮೇಹಿಗಳು ಮಾವಿನ ಸೇವನೆಯ ಮೇಲೆ ನಿಯಂತ್ರಣ ಇರಿಸಿಕೊಳ್ಳದಿದ್ದರೆ, ಸಕ್ಕರೆ ಕಾಯಿಲೆ ನಿಯಂತ್ರಣ ತಪ್ಪಬಹುದು.

Continue Reading

ಫ್ಯಾಷನ್

Fashion Trend: ಯುವತಿಯರನ್ನು ಸೆಳೆದಿರುವ 3 ಶೈಲಿಯ ವೈಟ್‌ ಪ್ಯಾಂಟ್‌ಗಳಿವು!

ಈ ಸಮ್ಮರ್‌ ಸೀಸನ್‌ನಲ್ಲಿ ವೈಟ್‌ ಪ್ಯಾಂಟ್‌ ಫ್ಯಾಷನ್‌ಗೆ (Fashion Trend) ಮರಳಿದ್ದು, ಅವುಗಳಲ್ಲಿ 3 ಶೈಲಿಯವು ಹೆಚ್ಚು ಟ್ರೆಂಡಿಯಾಗಿವೆ. ಅವು ಯಾವುವು? ಹೇಗೆಲ್ಲಾ ಮಿಕ್ಸ್‌ ಮ್ಯಾಚ್‌ ಮಾಡಿ ಧರಿಸಬಹುದು ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Fashion Trend
ಚಿತ್ರಕೃಪೆ : ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ಸಮ್ಮರ್‌ ಸೀಸನ್‌ನಲ್ಲಿ ಶ್ವೇತ ವರ್ಣದ ವೈಟ್‌ ಪ್ಯಾಂಟ್‌ ಫ್ಯಾಷನ್‌ (Fashion Trend) ಮರಳಿದೆ. ನಾನಾ ವಿನ್ಯಾಸದ ಫ್ಯಾಬ್ರಿಕ್‌ನ ವೈಟ್‌ ಪ್ಯಾಂಟ್‌ಗಳು ಇದೀಗ ಉದ್ಯೋಗಸ್ಥ ಮಹಿಳೆಯರ ಹಾಗೂ ಯುವತಿಯರ ವಾರ್ಡ್ರೋಬ್‌ಗೆ ಸೇರಿವೆ. ಕಚೇರಿ, ಔಟಿಂಗ್‌, ಮೀಟಿಂಗ್‌ ಹೀಗೆ ನಾನಾ ಸಂದರ್ಭಗಳಿಗೆ ಮ್ಯಾಚ್‌ ಆಗುವಂತಹ ಕಾನ್ಸೆಪ್ಟ್‌ ನಲ್ಲಿ ಬಿಡುಗಡೆಗೊಂಡಿವೆ. ನೋಡಲು ಕ್ಲಾಸಿ ಲುಕ್‌ ನೀಡುತ್ತಿವೆ. ಅವುಗಳಲ್ಲಿ 3 ಶೈಲಿಯವು ಅತಿ ಹೆಚ್ಚು ಟ್ರೆಂಡಿಯಾಗಿವೆ.

Fashion Trend

ವೈಟ್‌ ಪ್ಯಾಂಟ್‌ ಪ್ರೇಮ

ಅಂದಹಾಗೆ, ಮೊದಲೆಲ್ಲಾ ವೈಟ್‌ ಪ್ಯಾಂಟ್‌ ಧರಿಸುವವರು ತೀರಾ ಕಡಿಮೆಯಾಗಿದ್ದರು. ಕಾರಣ, ಅದನ್ನು ಮೇಂಟೆನ್‌ ಮಾಡುವುದು ಕಷ್ಟವಾಗಿತ್ತು. ಧರಿಸಿದರೂ ತೀರಾ ಕಡಿಮೆ ಮಹಿಳೆಯರು ಧರಿಸುತ್ತಿದ್ದರು. ಎಲ್ಲದಕ್ಕಿಂತ ಹೆಚ್ಚಾಗಿ ಕಾಲೇಜು ಹುಡುಗಿಯರು ಮಾತ್ರ ಫ್ರಿಫರ್‌ ಮಾಡುತ್ತಿದ್ದರು. ಹೆಚ್ಚು ಕೆಲಸ ಮಾಡದೇ, ಧೂಳಿನಲ್ಲಿ ಓಡಾಡದೇ ಇರುವಂತಹ ಹುಡುಗಿಯರು ಧರಿಸುತ್ತಿದ್ದರು. ಹೆಚ್ಚು ಹೊರಗಡೆ ಓಡಾಡುವರು ಹಾಗೂ ಹೆಚ್ಚು ಕೆಲಸ ಮಾಡುವವರು ಧರಿಸುತ್ತಿರಲಿಲ್ಲ. ಕೊಂಚ ಗಲೀಜಾದರೂ ಕಲೆಯು ಉಳಿಯುವುದು ಹಾಗೂ ನೀಟಾಗಿ ನಿರ್ವಹಣೆ ಮಾಡಲು ಸಾಧ್ಯವಾಗದಿರುವುದು ಇದಕ್ಕೆ ಕಾರಣವಾಗಿತ್ತು. ಆದರೆ, ಇದಕ್ಕೆಲ್ಲಾ ಉತ್ತರ ಎಂಬಂತೆ, ಇದೀಗ ನಾನಾ ಬಗೆಯ ಕಂಫರ್ಟಬಲ್‌ ಫೀಲ್‌ ನೀಡುವ ವೈಟ್‌ ಪ್ಯಾಂಟ್‌ಗಳು ಫ್ಯಾಷನ್‌ ಲೋಕಕ್ಕೆ ಕಾಲಿಟ್ಟಿವೆ. ಕೆಲವಂತೂ ಕಲೆಯಾದರೂ ಸುಲಭವಾಗಿ ವಾಶ್‌ ಮಾಡಬಹುದಾದಂತವು, ರಿಂಕಲ್‌ ಫ್ರೀ ಇರುವಂತವು ಹಾಗೂ ಮಾಡರ್ನ್‌ ಫಾರ್ಮಲ್‌ ಪ್ಯಾಂಟ್‌ ವಿನ್ಯಾಸದವು ಕಾಲಿಟ್ಟಿವೆ ಎನ್ನುತ್ತಾರೆ ಫ್ಯಾಷನಿಸ್ಟ್‌ ರಾಜ್‌.

Fashion Trend

ಆ್ಯಂಕೆಲ್‌ ಲೆಂಥ್‌ ಜೀನ್ಸ್‌ ವೈಟ್‌ ಪ್ಯಾಂಟ್‌

ಪಾದದ ಮೇಲೆ ನಿಲ್ಲುವ ಆ್ಯಂಕೆಲ್‌ ಲೆಂಥ್‌ ಶೈಲಿಯ ವೈಟ್‌ ಪ್ಯಾಂಟ್‌ಗಳು ಈ ಸೀಸನ್‌ನಲ್ಲಿ ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ಯಾವುದೇ ಶೇಡ್‌ನ ಕ್ರಾಪ್‌ ಟಾಪ್‌ನೊಂದಿಗೆ ಧರಿಸಬಹುದಾದ ಇವು ನೋಡಲು ಮಾಡರ್ನ್‌ ಲುಕ್‌ ನೀಡುತ್ತವೆ. ಫ್ಲೇರ್‌ ಹಾಗೂ ಸ್ಕಿನ್‌ ಟೈಟ್‌ ಎರಡು ಶೈಲಿಯವು ಪಾಪುಲರ್‌ ಆಗಿವೆ.

Fashion Trend

ರಿಂಕಲ್‌ ಫ್ರೀ ವೈಟ್‌ ಪ್ಯಾಂಟ್‌

ಇಸ್ತ್ರೀ ಮಾಡದೇಯೂ ಧರಿಸಬಹುದಾದ ಇವು ರಿಂಕಲ್‌ ಫ್ರೀ ಪ್ಯಾಂಟ್‌ಗಳಿವು. ಅತಿ ಹೆಚ್ಚು ಯುವತಿಯರು ಇಂತಹ ಪ್ಯಾಂಟ್‌ಗಳನ್ನು ಧರಿಸತೊಡಗಿದ್ದಾರೆ. ಯಾವುದೇ ಬಗೆಯ ಟಾಪ್‌ಗಳಿಗಾದರೂ ಇವನ್ನು ಧರಿಸಬಹುದು. ಆಕ್ಸೆಸರೀಸ್‌ ಕೂಡ ಅಷ್ಟೇ ಯಾವುದನ್ನು ಬೇಕಾದರೂ ಇವಕ್ಕೆ ಮಿಕ್ಸ್‌ ಮ್ಯಾಚ್‌ ಮಾಡಬಹುದು.

ಇದನ್ನೂ ಓದಿ: Fashion Trend: ಜೆನ್‌ ಜಿ ಹುಡುಗ-ಹುಡುಗಿಯರ ಆವರಿಸಿದ ಚಿತ್ರ-ವಿಚಿತ್ರ ಡ್ರಾಗನ್‌ ಜ್ಯುವೆಲರಿಗಳು!

ಫಾರ್ಮಲ್‌ ವೈಟ್‌ ಪ್ಯಾಂಟ್‌

ಕಾರ್ಪೋರೇಟ್‌ ಕ್ಷೇತ್ರದ ಹೆಣ್ಣು ಮಕ್ಕಳು ಅತಿ ಹೆಚ್ಚು ಧರಿಸುವ ಹಾಗೂ ಪ್ರಿಫರ್‌ ಮಾಡುವ ಫಾರ್ಮಲ್‌ ಪ್ಯಾಂಟ್‌ಗಳಿವು. ನೋಡಲು ಕ್ಲಾಸಿ ಲುಕ್‌ ನೀಡುತ್ತವೆ. ಇವುಗಳಲ್ಲಿ ಹಾಫ್‌, ವೈಟ್‌, ಕ್ರೀಮ್‌ ವೈಟ್‌ ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಶಾರ್ಟ್‌ ಟಾಪ್‌ಗಳು ಹೊಂದುತ್ತವೆ. ಪಾಸ್ಟೆಲ್‌ ಶೇಡ್‌ನವು ಇದೀಗ ಟ್ರೆಂಡಿ ಮಿಕ್ಸ್‌ ಮ್ಯಾಚ್‌ ಟ್ರೆಂಡ್‌ನಲ್ಲಿವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading
Advertisement
Rashmika Mandanna Reacts To India Decade of Growth Amid Lok Sabha Polls
ಟಾಲಿವುಡ್2 mins ago

Rashmika Mandanna: ʻನಮೋʼ ಸಾಧನೆಗೆ ಕಿರಿಕ್‌ ಬ್ಯೂಟಿ ರಶ್ಮಿಕಾ ಕ್ಲೀನ್‌ ಬೋಲ್ಡ್‌!

Job Alert
ಉದ್ಯೋಗ13 mins ago

Job Alert: ಗಮನಿಸಿ; ಬಿಎಂಟಿಸಿಯ 2,500 ಕಂಡಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಲು ಮೇ 18 ಕೊನೆಯ ದಿನ

viral video garbage bengaluru roads
ವೈರಲ್ ನ್ಯೂಸ್45 mins ago

Viral video: ʼಅಸಹ್ಯಕರ!ʼ ಬೆಂಗಳೂರಿನ ರಸ್ತೆಗಳ ಕಸದ ವಿಡಿಯೋ ಪೋಸ್ಟ್‌ ಮಾಡಿದ ಕಿರಣ್ ಮಜುಂದಾರ್ ಶಾ

Stone pelting
ದೇಶ48 mins ago

Stone Pelting: ಉತ್ತರಪ್ರದೇಶದಲ್ಲಿ ಗುಂಪು ಘರ್ಷಣೆ; ಕಲ್ಲು ತೂರಾಟ, ಕೇಳಿಬಂತು ಗುಂಡಿನ ಸಪ್ಪಳ

Crowd Funding
ದೇಶ50 mins ago

Crowd Funding: ಕಂದಮ್ಮನ ಚಿಕಿತ್ಸೆಗೆ ಹರಿದು ಬಂದ ನೆರವು; 3 ತಿಂಗಳಲ್ಲಿ 9 ಕೋಟಿ ರೂ. ಸಂಗ್ರಹ

Prajwal Revanna Case
ಕರ್ನಾಟಕ1 hour ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

copper mine lift collapse
ಪ್ರಮುಖ ಸುದ್ದಿ2 hours ago

M‌ine Lift Collapse: ತಾಮ್ರದ ಗಣಿಯೊಳಗೆ ಲಿಫ್ಟ್‌ ಕುಸಿದು 14 ಮಂದಿ ಪಾತಾಳದಲ್ಲಿ ಟ್ರ್ಯಾಪ್

Health Tips in Kannada
ಆರೋಗ್ಯ2 hours ago

Health Tips in Kannada: ಕುತ್ತಿಗೆ ನೋವಿನಿಂದ ಬಳಲುತ್ತಿದ್ದೀರಾ? ಈ ಸಂಗತಿ ತಿಳಿದುಕೊಂಡಿರಿ

Mango Juice Benefits
ಆರೋಗ್ಯ3 hours ago

Mango Juice Benefits: ತಾಜಾ ಮಾವಿನ ರಸ ಕುಡಿಯುವುದರಿಂದ ಎಷ್ಟೊಂದು ಪ್ರಯೋಜನ ಇದೆ ನೋಡಿ…

Karnataka Weather Forecast
ಉಡುಪಿ3 hours ago

Karnataka Weather : ಮೇ 18ರವರೆಗೆ ಮಳೆ ಅಬ್ಬರ; 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ1 hour ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ4 hours ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ14 hours ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 202416 hours ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 202419 hours ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ20 hours ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು21 hours ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ1 day ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ2 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ2 days ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌