Bengaluru News : ಮಲಗಿದ್ದ ನಾಯಿ ಮೇಲೆ ಕಾರು ಹತ್ತಿಸಿದ; ಚಕ್ರಕ್ಕೆ ಸಿಕ್ಕಿ ನರಳಾಡಿ ಸತ್ತ ಶ್ವಾನ - Vistara News

ಬೆಂಗಳೂರು

Bengaluru News : ಮಲಗಿದ್ದ ನಾಯಿ ಮೇಲೆ ಕಾರು ಹತ್ತಿಸಿದ; ಚಕ್ರಕ್ಕೆ ಸಿಕ್ಕಿ ನರಳಾಡಿ ಸತ್ತ ಶ್ವಾನ

Bengaluru News : ನಿರ್ದಯಿ ಚಾಲಕನೊಬ್ಬ ಮಲಗಿದ್ದ ನಾಯಿ ಮೇಲೆ ಕಾರು ಹತ್ತಿಸಿರುವ ಅಮಾನವೀಯ ಘಟನೆ ನಡೆದಿದೆ. ಶ್ವಾನವು ಒದ್ದಾಡುತ್ತಲೇ ಪ್ರಾಣ ಬಿಟ್ಟಿದೆ.

VISTARANEWS.COM


on

Driver drives car over dog
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮಲಗಿದ್ದ ಬೀದಿ ನಾಯಿಯ ಮೇಲೆ ಕಾರು ಹತ್ತಿಸಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ (Bengaluru News) ಯುನಿಟಿ ಬಿಲ್ಡಿಂಗ್‌ನ ಸಿಲ್ವರ್ ಜೂಬ್ಲಿ ಬ್ಲಾಕ್ ಮಿಷನ್ ರೋಡ್ ಬಳಿ ನಡೆದಿದೆ.

ಕಳೆದ ಜ. 25ರಂದು ಅಮಾನವೀಯ ಘಟನೆ ನಡೆದಿದ್ದು, ನಾಯಿ ಮೇಲೆ ಕಾರು ಹತ್ತಿಸುವ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪಾರ್ಕಿಂಗ್‌ ಜಾಗದಲ್ಲಿ ನಾಲ್ಕೈದು ಶ್ವಾನಗಳು ಒಂದೆಡೆ ಇದ್ದರೆ, ಇನ್ನೊಂದು ಶ್ವಾನವು ಮಲಗಿತ್ತು. ಪಾರ್ಕಿಂಗ್‌ನಿಂದ ಕಾರು ತೆಗೆದ ಚಾಲಕ ಏಕಾಏಕಿ ಮಲಗಿದ್ದ ಶ್ವಾನದ ಸಮೀಪ ಬಂದಿದ್ದಾನೆ. ಕಾರಿನ ಶಬ್ಧಕ್ಕೆ ಎದ್ದೇಳಲು ಮುಂದಾಗುವಷ್ಟರಲ್ಲಿ ನಾಯಿ ಮೇಲೆ ಕಾರನ್ನು ಹಾಯಿಸಿದ್ದಾನೆ.

ನಾಯಿ ಮೇಲೆ ಕಾರಿನ ಮುಂದಿನ ಟಯರ್ ಹರಿದ ಪರಿಣಾಮ ನರಳಾಡಿ ನರಳಾಡಿ ಸಾವನ್ನಪ್ಪಿದೆ. ಸದ್ಯ ಘಟನೆ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಇದು ಚಾಲಕನ ಅರಿವಿಗೆ ಬಾರದೆ ಸಂಭವಿಸಿದ ಘಟನೆಯಾ ಅಥವಾ ಬೇಕಂತಲೇ ಮಲಗಿದ್ದ ನಾಯಿ ಮೇಲೆ ಕಾರನ್ನು ಹತ್ತಿಸಿದ್ದನ್ನಾ? ಎಂಬುದು ತನಿಖೆಯಿಂದ ತಿಳಿಯಬೇಕಿದೆ. ಸಿಸಿ ಟಿವಿಯಲ್ಲಿ ಸೆರೆಯಾಗಿರುವ ದೃಶ್ಯವು ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: Attempt To Murder : ಸಾಲ ವಾಪಸ್‌ ಕೊಡುವುದಾಗಿ ಹೇಳಿ ಕಾರು ಚಾಲಕನ ತಲೆ ಸೀಳಿದ ಸ್ನೇಹಿತರು

ಓಡೋಡಿ ಬಂದು ಮೇಕೆ ಮರಿಗೆ ಹಾಲುಣಿಸುವ ಶ್ವಾನ! ಮಾತೃತ್ವಕ್ಕೆ ಮಾರುಹೋದ ಜನ

ದೊಡ್ಡಬಳ್ಳಾಪುರ: ಆ ತಾಯಿ ಶ್ವಾನವು 15ದಿನಗಳ ಹಿಂದಷ್ಟೇ ಮೂರು ಮರಿಗಳಿಗೆ ಜನ್ಮ ನೀಡಿತ್ತು. ಆದರೆ ದುರಾದೃಷ್ಟವಶಾತ್ ಅದರಲ್ಲಿ ಒಂದು ನಾಯಿ ಮರಿ ಅಸುನೀಗಿತ್ತು. ಉಳಿದೆರಡು ನಾಯಿಮರಿಗಳು ತಾಯಿಯಿಂದ ಬೇರ್ಪಟಿತ್ತು. ಕರುಳಿನ ಬಳ್ಳಿಗಳನ್ನು ಕಳೆದುಕೊಂಡ ದುಃಖದಲ್ಲಿ ತಾಯಿ ಶ್ವಾನವಿತ್ತು. ಇದರ ನೋವು ಅರಿತೋ ಏನೋ ವಾರದ ಹಿಂದಷ್ಟೇ ಜನಿಸಿದ ಮೇಕೆ ಮರಿಯೊಂದು ಶ್ವಾನದದೊಂದಿಗೆ ಆತ್ಮೀಯತೆಯನ್ನು ಬೆಳೆಸಿಕೊಂಡಿದೆ. ಎಷ್ಟರ ಮಟ್ಟಿಗೆ ಎಂದರೆ ತನ್ನ ಕಂಡು ಓಡೋಡಿ ಬರುವ ಮೇಕೆ ಮರಿಗೆ ಶ್ವಾನವು ಹಾಲುಣಿಸುತ್ತಿದೆ. ಈ ಅಪರೂಪರದ ಮಾತೃತ್ವಕ್ಕೆ ಜನರು (Dog Love) ಮಾರುಹೋಗಿದ್ದಾರೆ.

ದೊಡ್ಡಬಳ್ಳಾಪುರದ‌ ರಘುನಾಥಪುರದಲ್ಲಿ ಈ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ಗ್ರಾಮದ ಕೃಷ್ಣಪ್ರಸಾದ್ ಎಂಬುವವರ‌ ಮನೆಯ ಶ್ವಾನವು ಮೇಕೆ ಮರಿಗೆ ಹಾಲುಣಿಸುತ್ತಿದೆ. ಮೇಕೆ ಮರಿಯು ಜನ್ಮ ನೀಡಿದ ತಾಯಿಗಿಂತ ನಾಯಿ ಜತೆಗೆ ಹೆಚ್ಚು ಒಡನಾಟವನ್ನು ಹೊಂದಿದೆ. ಶ್ವಾನದ ಮೊಲೆಹಾಲು ಕುಡಿಯುವ ಮೇಕೆ ಮರಿಯನ್ನು ನೋಡುವುದೇ ಜನರಿಗೆ ಆಶ್ಚರ್ಯದ ಸಂಗತಿಯಾಗಿದೆ. ಕಳೆದ ಒಂದು ವಾರದಿಂದ ಮೇಕೆಮರಿ ಮತ್ತು ಶ್ವಾನದ ವಾತ್ಸಲ್ಯವು ಮುಂದುವರಿದಿದೆ.

A dog feeding a goat People who are attracted to motherhood

ಅಂದಹಾಗೇ ಕೃಷ್ಣಪ್ರಸಾದ್ ಅವರು ಕಾಶ್ಮೀರದಿಂದ 30ಕ್ಕೂ ಹೆಚ್ಚು ಗಿಡ್ಡ ಮೇಕೆಗಳನ್ನು ತಂದು ಸಾಕುತ್ತಿದ್ದಾರೆ. ಈ ಮೇಕೆಗಳ ಕಾವಲಿಗೆಂದು ಈ ಶ್ವಾನವನ್ನು ಕೃಷ್ಣಪ್ರಸಾದ್‌ ಸಾಕಿದ್ದು, ಕಳೆದ ಎರಡು ವರ್ಷಗಳಿಂದಲ್ಲೂ ಮೇಕೆಗಳನ್ನು ಶ್ವಾನ ಕಾಯುತ್ತಿದೆ. ಹೀಗಿದ್ದಾಗ ವಾರದ ಹಿಂದಷ್ಟೇ ಮೇಕೆಯೊಂದು ಮರಿಗೆ ಜನ್ಮ ನೀಡಿತ್ತು. ಇತ್ತ ಶ್ವಾನವು ಹದಿನೈದು ದಿನಗಳ ಹಿಂದೆ ಮೂರು ಮರಿಗೆ ಜನ್ಮ ನೀಡಿತ್ತು. ಕಾರಣಾಂತರಗಳಿಂದ ಒಂದು ಶ್ವಾನ ಸತ್ತು, ಎರಡು ಮರಿ ಮಾತ್ರ ಉಳಿದುಕೊಂಡಿದ್ದವು. ಎರಡೂ ನಾಯಿ ಮರಿಗಳು ಮುದ್ದಾಗಿದ್ದ ಕಾರಣಕ್ಕೆ ಯಾರೊ ಸಾಕಲು ತೆಗೆದುಕೊಂಡು ಹೋಗಿದ್ದರು.

ಇದನ್ನೂ ಓದಿ: Video Viral : ಕರುವಿನೊಂದಿಗೆ ಶ್ವಾನಕ್ಕೂ ಹಾಲುಣಿಸುವ ಪುಣ್ಯಕೋಟಿ! ಕೋಟಿ ನಮನವೆಂದ ನೆಟ್ಟಿಗರು

ಶ್ವಾನಕ್ಕೆ ತನ್ನ ಮರಿಗಳಿಲ್ಲ ಎಂಬ ಕೊರಗು ಒಂದು ಕಡೆಯಾದರೆ ಹಾಲುಣಿಸದೆ ಪರದಾಡುತ್ತಿತ್ತು. ಹೀಗಿದ್ದಾಗ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಂದ ಮೇಕೆಮರಿಯು ಶ್ವಾನದೊಂದಿಗೆ ಆತ್ಮೀಯತೆಯನ್ನು ಬೆಳೆಸಿಕೊಂಡಿದೆ. ಮಾತ್ರವಲ್ಲ ಕರುಳಿನ ಸಂಬಂಧವಿಲ್ಲದ ಮೇಕೆ‌‌ ಮರಿಗೆ ಶ್ವಾನವು ಹಾಲುಣಿಸುತ್ತಿದೆ. ಶ್ವಾನದ ಈ ಅಪರೂಪದ ತಾಯಿ ವಾತ್ಸಲ್ಯಕ್ಕೆ ಜನರು ಅಚ್ಚರಿಗೊಂಡು ಸಂತಸವನ್ನು ಪಡುತ್ತಿದ್ದಾರೆ. ಸದ್ಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ರಘುನಾಥಪುರ ಸೇರಿ ಸುತ್ತಮುತ್ತಲ್ಲ ಜನರಿಗೆ ಈ ತಾಯಿ-ಮಗುವಿನ ಪ್ರೀತಿಯನ್ನು ಕಣ್ತುಂಬಿಕೊಳ್ಳುವುದೇ ಕಾಯಕವಾಗಿದೆ.

ನಿಯತ್ತಿನ ನಾಯಿ

ಇನ್ನು ಈ ತಾಯಿ ಶ್ವಾನವೂ ಬಹಳ ನಿಯತ್ತನ್ನು ಹೊಂದಿದೆ. ದೊಡ್ಡಿಯಲ್ಲಿರುವ ಮೇಕೆಗಳ ಕಾವಲು ಕಾಯುತ್ತದೆ. ಯಾರೇ ಅಪರಿಚಿತರು ಬಂದರೂ ಮೇಕೆಗಳನ್ನು ಮುಟ್ಟಲು ಬಿಡುವುದಿಲ್ಲ. ಅವುಗಳಿಗೆ ಬಾಡಿಗಾರ್ಡ್‌ನಂತೆ ಈ ನಾಯಿ ನಿಂತುಕೊಂಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Bangalore Rain News: ಬೆಂಗಳೂರಿಗೆ ಮುಂಗಾರು ಶಾಕ್‌, ನೂರಾರು ಮರಗಳು ಧರೆಗೆ, ಅಪಾರ್ಟ್‌ಮೆಂಟ್‌ ನಿವಾಸಿಗಳು ಅಲ್ಲೇ ಲಾಕ್!‌

Bangalore Rain News: ನಗರದಲ್ಲಿ ನೂರಾರು ಕಡೆ ಬೃಹತ್ ಗಾತ್ರದ ಮರಗಳು, ಸಣ್ಣ ಮರಗಳು ಹಾಗೂ ಕೊಂಬೆಗಳು ಧರಾಶಾಯಿಯಾದವು. ಹಲವು ತಗ್ಗು ಪ್ರದೇಶಗಳಲ್ಲಿ ಮನೆಗಳು ಜಲಾವೃತಗೊಂಡವು. ಬೆಳ್ಳಂದೂರಿನಲ್ಲಿ ಅಪಾರ್ಟ್‌ಮೆಂಟ್‌ ಬೇಸ್‌ಮೆಂಟ್‌ಗೆ ರಾಜಕಾಲುವೆ ನೀರು ನುಗ್ಗಿದೆ.

VISTARANEWS.COM


on

bangalore rain news
Koo

ಬೆಂಗಳೂರು: ಮುಂಗಾರು (monsoon) ಸಾಕಷ್ಟು ಅಬ್ಬರದಿಂದಲೇ ರಾಜಧಾನಿಯನ್ನು (Bangalore rain news) ಪ್ರವೇಶಿಸಿದೆ. ನಿನ್ನೆ ಸಂಜೆಯಿಂದ ಸುರಿದ ಭಾರಿ ಮಳೆಗೆ ನಗರದ (Bengaluru rain news) ಹಲವು ಕಡೆ ಮರಗಳು (trees fall) ಮುರಿದುಬಿದ್ದಿವೆ. ತಗ್ಗು ಪ್ರದೇಶಗಳಿಗೆ ನೀರು (water clogging) ನುಗ್ಗಿದೆ. ಬೆಳ್ಳಂದೂರಿನ ಒಂದು ಅಪಾರ್ಟ್‌ಮೆಂಟ್‌ ಬೇಸ್‌ಮೆಂಟ್‌ಗೆ ನೀರು ನುಗ್ಗಿದ್ದು, ನಿವಾಸಿಗಳು ಮನೆಗಳಲ್ಲೇ ಲಾಕ್‌ ಆಗಿದ್ದಾರೆ.

“ನಿನ್ನೆ ಸುರಿದ ಭಾರಿ ಮಳೆಗೆ ನಗರದಲ್ಲಿ ಸುಮಾರು 260ಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿವೆ. ಬಹುತೇಕ ಜಯನಗರ. ಬಸವನಗುಡಿ ಸುತ್ತಮುತ್ತಲಿನಲ್ಲಿ 100ಕ್ಕೂ ಹೆಚ್ಚು ಮರಗಳು ಬಿದ್ದಿವೆ. ಸದ್ಯ ಮರಗಳನ್ನು ತೆರವು ಮಾಡೋದಕ್ಕೆ ಬಿಬಿಎಂಪಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಚರಣೆ ಮಾಡುತ್ತಿದ್ದಾರೆ. ಮೊದಲು ಸಂಚಾರಕ್ಕೆ ಅನುಕೂಲ ಕಲ್ಪಿಸಲು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರಗಳ ತೆರವು ಮಾಡುತ್ತಿದ್ದೇವೆ. ಸಂಜೆ ವೇಳೆಗೆ ನಗರದ ಬಹುತೇಕ ಕಡೆ ಮರಗಳನ್ನು ತೆರವು ಮಾಡುತ್ತೇವೆ” ಎಂದು ಬಿಬಿಎಂಪಿ ಅರಣ್ಯ ವಿಭಾಗದ ಮುಖ್ಯಸ್ಥರು ವಿಸ್ತಾರ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ.

Bangalore rain news

ಬೃಹತ್ ಗಾತ್ರದ ಮರಗಳು, ಸಣ್ಣ ಮರಗಳು ಹಾಗೂ ಕೊಂಬೆಗಳು ಧರಾಶಾಯಿಯಾದವು. ಬಸವೇಶ್ವರನಗರದಲ್ಲೂ ಮರಗಳು ಧರೆಗುರುಳಿವೆ. 3ನೇ ಮುಖ್ಯರಸ್ತೆಯಲ್ಲಿ ಕಾರ್ ಮೇಲೆ ಮರ ಬಿದ್ದು ಕಾರ್ ಜಖಂ ಆಗಿದೆ. ಜಯನಗರದ ಕೃಷ್ಣರಾವ್ ಪಾರ್ಕ್ ಬಳಿ ಬೃಹತ್ ಗಾತ್ರದ ಮರ ಟ್ರಾನ್ಸ್‌ಫಾರ್ಮರ್‌ ಮೇಲೆ ಬಿದ್ದು ರಾತ್ರಿ ಇಡೀ ವಿದ್ಯುತ್ ಕಟ್‌ ಆಗಿದೆ. ಜಯನಗರ ಸುತ್ತಮುತ್ತ ಸುಮಾರು ‌50ಕ್ಕೂ ಹೆಚ್ಚು ಮರಗಳು ಬಿದ್ದಿವೆ. ಗಿರಿನಗರದಲ್ಲಿ ಮರ ಬಿದ್ದು ಕಾರು ಹಾಗೂ ದ್ವಿಚಕ್ರ ವಾಹನ ಸಂಪೂರ್ಣ ನಜ್ಜು ಗುಜ್ಜು ಆಗಿದೆ.

ಹಲವು ತಗ್ಗು ಪ್ರದೇಶಗಳಲ್ಲಿ ಮನೆಗಳು ಜಲಾವೃತಗೊಂಡವು. ಕೊತ್ತನೂರು ಭಾಗದಲ್ಲಿ ರಸ್ತೆ ಹಾಗೂ ಮನೆಗಳು ಪೂರ್ತಿ ಸಂಪೂರ್ಣ ಜಲಾವೃತವಾಗಿದೆ. ಮನೆಯೊಳಗೆ ನೀರು ತುಂಬಿ ಮನೆ ಮಾಲೀಕರು ಇಡೀ ರಾತ್ರಿ ಜಾಗರಣೆ ಮಾಡಿದರು. ಸುಮಾರು 60ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ತುಂಬಿದೆ. ನಗರದ 8 ವಲಯಗಳಲ್ಲಿ ಮನೆಗಳಿಗೆ ನೀರು ತುಂಬಿ ಅಕ್ಕಿ, ಬೇಳೆ ಸೇರಿದಂತೆ ಇತರೆ ವಸ್ತುಗಳು ಹಾಳಾಗಿವೆ. ಮಳೆಯಿಂದ ಹಾನಿಯಾದ ಮನೆಗಳಿಗೆ ಪರಿಹಾರ ನೀಡುವಂತೆ ಪಾಲಿಕೆ ಆಯುಕ್ತರು ಆದೇಶಿಸಿದ್ದಾರೆ.

Bangalore rain news

ರಸ್ತೆಯಲ್ಲಿ ನೀರು ನಿಂತಿದ್ದು ಒಂದು ತರಹದ ಸಮಸ್ಯೆಯಾದರೆ, ವಿದ್ಯುತ್ ಕಂಬಗಳದ್ದು ಮತ್ತೊಂದು ಸಮಸ್ಯೆ. ಕಂಬಗಳು ಮುರಿದು ಬಿದ್ದಿವೆ. ಉಮಾ ಥಿಯೇಟರ್ ಬಳಿ 4 ವಿದ್ಯುತ್ ಕಂಬಗಳು ಗಾಳಿಯಿಂದ ಅರ್ಧಂಬರ್ಧ ಬಿದ್ದಿವೆ. 4 ವಿದ್ಯುತ್ ಕಂಬಗಳ ವಯರ್ ರಸ್ತೆಯಲ್ಲಿ ಬಿದ್ದರೆ ವಾಹನ ಸವಾರರ ಜೀವಕ್ಕೆ ಹಾನಿ ಸಾಧ್ಯತೆ ಇದೆ. ಲಾಲ್‌ಬಾಗ್‌ನಲ್ಲಿ ಮರ ಬಿದ್ದು ಕಾಂಪೌಂಡ್ ಕುಸಿತವಾಗಿದೆ.

ನಿನ್ನೆ ಸುರಿದ ಮಳೆಗೆ ಬೆಳ್ಳಂದೂರಿನ ಗ್ರೀನ್ ಎಲಿಗೆನ್ಸ್ ಅಪಾರ್ಟ್ಮೆಂಟ್‌ನ ಬೇಸ್‌ಮೆಂಟ್‌ಗೆ ನೀರು ನುಗ್ಗಿದ್ದು, ನಾಲ್ಕು ಕಾರು, ಬೈಕ್‌ಗಳು ಮುಳುಗಿವೆ. ರಾಜಕಾಲುವೆ ನೀರು ಅಪಾರ್ಟ್ಮೆಂಟ್‌ನೊಳಗೆ ನುಗ್ಗಿದೆ. ಕಳೆದ ಮೂರು ದಿನದಿಂದ ಅಪಾರ್ಟ್ಮೆಂಟ್‌ಗೆ ವಿದ್ಯುತ್‌ ಸಂಪರ್ಕ ಕಟ್‌ ಆಗಿದೆ. ನಿವಾಸಿಗಳು ಅಪಾರ್ಟ್ಮೆಂಟ್‌ನಲ್ಲೇ ಲಾಕ್ ಆಗಿದ್ದಾರೆ. ಅಪಾರ್ಟ್ಮೆಂಟ್ ಬೇಸ್‌ಮೆಂಟ್‌ನಿಂದಲೇ ಓಡಾಡಲು ದಾರಿ ಆಗಿರುವ ಕಾರಣ, ಕತ್ತಿನವರೆಗೆ ನಿಂತಿರುವ ನೀರಿನಲ್ಲಿ ಓಡಾಡಲಾಗದೆ 40 ಫ್ಲಾಟ್ ಮಾಲೀಕರು ಅಲ್ಲೇ ಬಾಕಿ ಆಗಿದ್ದಾರೆ. ಪಕ್ಕದ ಕಾಂಪೌಂಡ್‌ಗೆ ಏಣಿ ಹಾಕಿ ಓಡಾಟ ಮಾಡುತ್ತಿದ್ದಾರೆ.

ಇದನ್ನೂ ಓದಿ: Karnataka Weather : ಬೆಂಗಳೂರಿಗೆ ಆವರಿಸಿದ ಮುಂಗಾರು; ಹಲವೆಡೆ ಇಂದು ಗಾಳಿಯೊಂದಿಗೆ ಭಯಂಕರ ಮಳೆ

Continue Reading

ಮಳೆ

Karnataka Weather : ಬೆಂಗಳೂರಿಗೆ ಆವರಿಸಿದ ಮುಂಗಾರು; ಹಲವೆಡೆ ಇಂದು ಗಾಳಿಯೊಂದಿಗೆ ಭಯಂಕರ ಮಳೆ

Karnataka Weather Forecast : ರಾಜಧಾನಿ ಬೆಂಗಳೂರು (Bengaluru rains) ಸೇರಿದಂತೆ ದಕ್ಷಿಣ ಕರ್ನಾಟಕಕ್ಕೆ ಅಧಿಕೃತವಾಗಿ ಮುಂಗಾರು (monsoon rain) ಆವರಿಸಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ರಾಜ್ಯಾದ್ಯಂತ ಸೋಮವಾರದಂದು ಗುಡುಗು ಸಹಿತ ಭಾರಿ ಮಳೆಯಾಗುವ (Rain News) ಸೂಚನೆ ನೀಡಲಾಗಿದೆ.

VISTARANEWS.COM


on

By

karnataka Weather Forecast
Koo

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ (Bengaluru rains) ಶನಿವಾರ- ಭಾನುವಾರ ಅಬ್ಬರಿಸಿದ ಮಳೆಗೆ (Rain News) ಜನರು ತತ್ತರಿಸಿ ಹೋಗಿದ್ದಾರೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ. ಇಂದು ಕೂಡ ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ಗುಡುಗು, ಮಿಂಚು ಸಹಿತ ಭಾರಿ ಗಾಳಿಯೊಂದಿಗೆ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ (Karnataka Weather Forecast) ನೀಡಿದೆ.

karnataka Weather Forecast

ಬೆಂಗಳೂರು ನಗರ ಸೇರಿದಂತೆ ದಕ್ಷಿಣ ಕರ್ನಾಟಕದ ಬಹುತೇಕ ಭಾಗವನ್ನು ಮುಂಗಾರು ಆವರಿಸಿದೆ. ಇದರ ಪ್ರಭಾವದಿಂದಾಗಿ ಜೂನ್‌ 7ರ ವರೆಗೆ ಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಪ್ರಮುಖವಾಗಿ ಬಳ್ಳಾರಿ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಕೋಲಾರ ಹಾಗೂ ರಾಮನಗರ, ಶಿವಮೊಗ್ಗ, ವಿಜಯನಗರದಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆ ಇದೆ.

ಉಳಿದಂತೆ ಬೆಳಗಾವಿ, ಬೀದರ್‌, ಧಾರವಾಡ, ಗದಗ, ಹಾವೇರಿ, ಕಲಬುರಗಿಯಲ್ಲೂ ಸಾಧಾರಣ ಮಳೆಯಾಗಲಿದೆ. ಕೆಲವೊಮ್ಮೆ ಗುಡುಗು, ಮಿಂಚು ಸಂಭವವಿದೆ. ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ವ್ಯಾಪಕ ಮಳೆಯಾಗಲಿದೆ.

ಇದನ್ನೂ ಓದಿ: CET Ranking : ಸಿಇಟಿ ರ‍್ಯಾಂಕಿಂಗ್‌ನಲ್ಲಿ ಎಂಜಿನಿಯರಿಂಗ್‌ನ 10 ಟಾಪರ್ಸ್‌ಗಳು ಬೆಂಗಳೂರಿನ ವಿದ್ಯಾರ್ಥಿಗಳು!

ಈ ಜಿಲ್ಲೆಗಳಿಗೆ ಎಚ್ಚರಿಕೆ

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಮಂಡ್ಯ, ಮೈಸೂರು, ತುಮಕೂರಿನಲ್ಲಿ ಭಾರಿ ಮಳೆಯಾಗಲಿದ್ದು, ಗಾಳಿ ವೇಗವು ಗಂಟೆಗೆ 40-50 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ. ಬಾಗಲಕೋಟೆ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲೂ ಗಾಳಿ ವೇಗವು ಗಂಟೆಗೆ 30-40ಕಿ.ಮೀ ವ್ಯಾಪ್ತಿಯಲ್ಲಿ ಇರಲಿದೆ. ಹೀಗಾಗಿ ಈ ಮೇಲಿನ ಜಿಲ್ಲೆಗಳಿಗೆ ಎಚ್ಚರಿಕೆಯನ್ನು ನೀಡಲಾಗಿದೆ.

ತಾಪಮಾನದ ಮುನ್ಸೂಚನೆ

ಮುಂದಿನ 48 ಗಂಟೆಗಳಲ್ಲಿ ಕರ್ನಾಟಕದ ಒಳನಾಡಿನಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು 2-3 ಡಿಗ್ರಿ ಸೆಲ್ಸಿಯಸ್‌ನಿಂದ ಕ್ರಮೇಣ ಕಡಿಮೆಯಾಗುವ ಸಾಧ್ಯತೆಯಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರಮುಖ ಸುದ್ದಿ

Bangalore Rain News : ಬೆಂಗಳೂರಿನಲ್ಲಿ ಭಾರಿ ಮಳೆ; ಹಲವು ಕಡೆ ಉರುಳಿ ಬಿದ್ದ ಮರಗಳು, ಮೆಟ್ರೋ ಸಂಚಾರಕ್ಕೂ ಅಡಚಣೆ

Bangalore Rain News : ಸಂಜೆ ಶುರುವಾರ ಮಳೆ ರಾತ್ರಿ 12 ಗಂಟೆಯ ವರೆಗೆ ಬಿಡದೇ ಸುರಿಯಿತು. ಹೀಗಾಗಿ ಭಾನುವಾರದ ವಾರಾಂತ್ಯದ ಸಂಚಾರಕ್ಕೆ ಹೊರಗಡೆ ಬಂದಿದ್ದ ನಗರದ ಮಂದಿ ಅಲ್ಲಲ್ಲೇ ಉಳಿಯುವಂತಾಯಿತು. ಅವರ ಖುಷಿಗೆ ಮಳೆರಾಯನ ಅಡಚಣೆಯೂ ಉಂಟಾಯಿತು. ವಾಹನ ಸಂಚಾರಕ್ಕೆ ಅಡಚಣೆಯಾದ ಕಾರಣ ಕುಟುಂಬ ಸಮೇತ ಹೊರಟಿದ್ದವರು ರಸ್ತೆಯ ಬದಿಯಲ್ಲಿ ಕಾಯುವ ಪರಿಸ್ಥಿತಿ ಸೃಷ್ಟಿಯಾಯಿತು.

VISTARANEWS.COM


on

Banglore rain
Koo

ಬೆಂಗಳೂರು: ಬೆಂಗಳೂರು ಮಹಾನಗರದಲ್ಲಿ ಭಾನುವಾರ ಸಂಜೆ ಏಕಾಏಕಿ ಭರ್ಜರಿ (Bangalore Rain News) ಮಳೆಯಾಯಿತು. ಸಂಜೆ 6 ಗಂಟೆಯ ಬಳಿಕ ಬೆಂಗಳೂರಿನ ನಗರ ವ್ಯಾಪ್ತಿಯ ಬಹುತೇಕ ಕಡೆ ಜೋರು ಮಳೆಯಾಯಿತು. ಈ ಮಳೆಯ ಅಬ್ಬರಕ್ಕೆ ನಗರದಲ್ಲಿ ಹಲವು ಮರಗಳು ಉರುಳಿ ಬಿದ್ದವು. ರಸ್ತೆಯ ಇಕ್ಕೆಲಗಳಲ್ಲಿ ಇದ್ದ ಮರಗಳು ಉರುಳಿ ಬಿದ್ದ ಮರಗಳಿಂದಾಗಿ ವಾಹನಗಳಿಗೆ ಹಾನಿ ಉಂಟಾದವು. ಅದೇ ರೀತಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದ ಕಾರಣ ರಸ್ತೆ ಸಂಚಾರಕ್ಕೂ ಅಡಚಣೆ ಉಂಟಾಯಿತು.

ಸಂಜೆ ಶುರುವಾರ ಮಳೆ ರಾತ್ರಿ 12 ಗಂಟೆಯ ವರೆಗೆ ಬಿಡದೇ ಸುರಿಯಿತು. ಹೀಗಾಗಿ ಭಾನುವಾರದ ವಾರಾಂತ್ಯದ ಸಂಚಾರಕ್ಕೆ ಹೊರಗಡೆ ಬಂದಿದ್ದ ನಗರದ ಮಂದಿ ಅಲ್ಲಲ್ಲೇ ಉಳಿಯುವಂತಾಯಿತು. ಅವರ ಖುಷಿಗೆ ಮಳೆರಾಯನ ಅಡಚಣೆಯೂ ಉಂಟಾಯಿತು. ವಾಹನ ಸಂಚಾರಕ್ಕೆ ಅಡಚಣೆಯಾದ ಕಾರಣ ಕುಟುಂಬ ಸಮೇತ ಹೊರಟಿದ್ದವರು ರಸ್ತೆಯ ಬದಿಯಲ್ಲಿ ಕಾಯುವ ಪರಿಸ್ಥಿತಿ ಸೃಷ್ಟಿಯಾಯಿತು. ಬಸ್ ಸಂಚಾರವೂ ನಿಧಾಗೊಂಡಿದ್ದ ಹಿನ್ನೆಲೆಯಲ್ಲಿ ಪ್ರಯಾಣಿಕರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚರಿಸಲು ಹರಸಾಹಸಪಟ್ಟರು.

ಮೆಟ್ರೊ ಸಂಚಾರ ಬಂದ್​

ಮಳೆರಾಯನ ಅಬ್ಬರಕ್ಕೆ ಬೆಂಗಳೂರಿನ ಜೀವನಾಡಿಯಾಗಿರುವ ಮೆಟ್ರೊ ಸಂಚಾರಕ್ಕೂ ಅಡಚಣೆ ಉಂಟಾಯಿತು. ನೇರಳೆ ಲೈನ್​​ನ ಇಂದಿರಾನಗರ ಮತ್ತು ಎಂಜಿ ರಸ್ತೆಯ ನಡುವಿನ ಮೆಟ್ರೊ ಬ್ರಿಜ್​ ಮೇಲೆ ಮರವೊಂದು ಉರುಳಿ ಬಿತ್ತು. ಹೀಗಾಗಿ ಮೆಟ್ರೊ ಸಂಚಾರವನ್ನು ಅನಿವಾರ್ಯವಾಗಿ ನಿಲ್ಲಿಸಬೇಕಾಯಿತು. ಇದರಿಂದಾಗಿ ಬೆಂಗಳೂರಿನ ಹೃದಯ ಭಾಗವಾಗಿರುವ ಎಂಜಿ ರಸ್ತೆಯ ನಿಲ್ದಾಣದಲ್ಲಿ ಪ್ರಯಾಣಿಕ ಕಿಕ್ಕಿರಿದು ತುಂಬಿಕೊಂಡರು. ಒಂದು ಕಡೆ ಹೊರಗಡೆ ಸುರಿಯುತ್ತಿರುವ ಮಳೆ ಮತ್ತೊಂಡೆದೆ ರೈಲು ಸಂಚಾರ ಬಂದ್​. ಹೀಗಾಗಿ ಜನರ ಎಲ್ಲಿಗೂ ಹೋಗಲು ಸಾಧ್ಯವಾಗದೇ ಪರಿತಪಿಸಿದರು.

ಮನೆಗಳಿಗೆ ನುಗ್ಗಿದ ನೀರು

ಕೆ.ಪಿ ಅಗ್ರಹಾರ, ಇಂದಿರಾನಗರ, ಬಸವೇಶ್ವರ ನಗರ, ಮಂತ್ರಿ ಮಾಲ್​ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿತು. ಏಕಾಏಕಿ ಕುಂಭದ್ರೋಣ ಮಳೆ ಸುರಿದ ಕಾರಣ ಚರಂಡಿಯಲ್ಲಿ ನೀರು ಹೋಗದೇ ಸಮೀಪದ ಮನೆಗಳಿಗೆ ನುಗ್ಗಿದವು. ಬಿಬಿಎಂಪಿ ಅಧಿಕಾರಿಗಳು ಮಳೆಗಾಲದ ಮುನ್ಸೂಚನೆಯ ಹೊರತಾಗಿಯೂ ಒಳಚರಂಡಿಗಳು ಹಾಗೂ ಮಳೆ ನೀರು ಕಾಲುವೆಗಳನ್ನು ಸರಿಯಾದ ಸಮಯಕ್ಕೆ ಸರಿಪಡಿಸಿಲ್ಲ. ಇದರಿಂದಾಗಿ ಮನೆಗಳಿಗೆ ಹಾಗೂ ವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ ಎಂದು ಜನರು ಆರೋಪಿಸಿದರು.

ಉರುಳಿ ಬಿದ್ದ ಮರಗಳು

ಮಳೆಯ ಜತೆಗೆ ಮಾರುತವೂ ಜೋರಾಗಿತ್ತು. ಹೀಗಾಗಿ ಬೆಂಗಳೂರಿನ ನಾನಾ ಪ್ರದೇಶಗಳಲ್ಲಿ ಮರಗಳು ಉರುಳಿ ಬಿದ್ದವು. ಅಧಿಕಾರಿಗಳ ಪ್ರಕಾರ ಒಂದೇ ರಾತ್ರಿಯಲ್ಲಿ 100ಕ್ಕೂ ಅಧಿಕ ಮರಗಳು ಧರಾಶಾಹಿಯಾಗಿವೆ. ಬಸವೇಶ್ವರ ನಗರ ವ್ಯಾಪ್ತಿಯೊಂದರಲ್ಲೇ 40 ಮರಗಳು ಉರುಳಿ ಬಿದ್ದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮರಗಳು ಬೀಳುವ ಸಮಯದಲ್ಲಿ ವಿದ್ಯುತ್​ ತಂತಿಗಳು ಕೂಡ ತುಂಡಾದ ಕಾರಣ ಬೆಂಗಳೂರಿನ ಬಹುಪಾಲು ಪ್ರದೇಶದಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಯಿತು. ನಾಗರಿಕರು ರಾತ್ರಿಯೆಲ್ಲ ಕತ್ತಲೆಯಲ್ಲಿ ಕಳೆಯುವಂತಾಯಿತು.

ಇದನ್ನೂ ಓದಿ: Bangalore Rain: ಬೆಂಗಳೂರಲ್ಲಿ ವರುಣನ ಅಬ್ಬರ; ಅಂಡರ್ ಪಾಸ್‌ನಲ್ಲಿ ಸಿಲುಕಿದ ಬಸ್‌, 20 ಪ್ರಯಾಣಿಕರ ರಕ್ಷಣೆ

ಟ್ರಾಫಿಕ್ ಜಾಮ್​

ವಿಪರೀತ ಮಳೆಗೆ ನಗರದ ಎಲ್ಲೆಡೆ ಟ್ರಾಫಿಕ್ ಜಾಮ್ ಉಂಟಾಯಿತು. ಟ್ರಾಫಿಕ್ ಜಾಮ್ ನಿಂದ ಜನರು ಪರದಾಡುವಂತಾಯಿತು. ಹೆಬ್ಬಾಳದಿಂದ ಕೋಡಿಗೆಹಳ್ಳಿವರೆಗೂ ಟ್ರಾಫಿಕ್ ಜಾಮ್ ಉಂಟಾಯಿತು. ಎಂಜಿ ರೋಡ್, ಮಾಗಡಿ ರೋಡ್, ಮೈಸೂರು ರೋಡ್, ಕೆಂಗೇರಿಯವರೆಗೆ ಮಳೆಯಿಂದಾಗಿ ಟ್ರಾಫಿಕ್​ ಜಾಮ್ ಉಂಟಾಯಿತು. ತುಮಕೂರು ರೋಡ್ ನಲ್ಲಿ ಟ್ರಾಫಿಕ್ ಜಾಮ್ ಜೋರಾಯಿತು. ಮಳೆ ಕಡಿಮೆಯಾಗಿದ್ದರೂ ರಾತ್ರಿಯವರೆಗೂ ಟ್ರಾಫಿಕ್ ಜಾಮ್ ಕಂಡು ಬಂತು. ಅಲ್ಲಲ್ಲಿ ರಸ್ತೆಗಳಲ್ಲಿ ನೀರು ನಿಂತಿರುವುದರಿಂದ ಅದರ ಮೇಲೆ ಓಡಾಡಿದ ವಾಹಗಳು ಅಲ್ಲಲ್ಲಿ ಕೆಟ್ಟು ನಿಂತವು.

ಅಂಡರ್ ಪಾಸ್​ಗಳಲ್ಲಿ ಕೆಟ್ಟು ನಿಂತ ವಾಹನಗಳು

ಬೆಂಗಳೂರಿನ ಹವಲಾರು ಕಡೆಗಳಲ್ಲಿ ಅಂಡರ್​ ಪಾಸ್​ ಕೆಳಗೆ ತುಂಬಿದ್ದ ನೀರಿನಲ್ಲಿ ವಾಹನಗಳು ಕೆಟ್ಟು ನಿಂತವು. ಇಂಥ ಪ್ರಕರಣಗಳಲ್ಲಿ ಹಲವಾರು ಮಂದಿ ಪ್ರಾಣಾಪಾಯಿಂದ ಪಾರಾದರು. ಶೇಷಾದ್ರಿಪುರದಲ್ಲಿ ಬಿಎಂಟಿಸಿ ಬಸ್​ ಕೆಟ್ಟು ನಿಂತ ಕಾರಣ ಆತಂಕ ಸೃಷ್ಟಿಯಾಗಿತ್ತು. ಸ್ಥಳೀಯರು ಬಸ್​ನಲ್ಲಿದ್ದ 22 ಮಂದಿಯನ್ನು ಕಾಪಾಡಿದರು.

ದಾಖಲಾದ ಮಳೆ (ಮಿಲಿಮೀಟರ್‌ಗಳಲ್ಲಿ)

ಹೊರಮಾವು(2) (ಮಹದೇವಪುರ): 80 ಮಿ.ಮೀ, ಕೊಡಿಗೇಹಳ್ಳಿ (ಯಲಹಂಕ): 78ಮಿ.ಮೀ, ವಿದ್ಯಾಪೀಠ (ದಕ್ಷಿಣ ವಲಯ) : 65.5 ಮಿ.ಮೀ, ಜಕ್ಕೂರು(1) (ಯಲಹಂಕ): 56 ಮಿ.ಮೀ, ಕಾಟನ್‌ಪೇಟೆ (ಪಶ್ಚಿಮ ವಲಯ): 55.5 ಮಿ.ಮೀ.
ಕೊಟ್ಟಿಗೆಪಾಳ್ಯ (ಆರ್‌ಆರ್‌ನಗರ): 54 ಮಿ.ಮೀ, ನಂದಿನಿಲೇಔಟ್ (ಪಶ್ಚಿಮ ವಲಯ): 52.5 ಮಿ.ಮೀ, ದಯಾನಂದನಗರ (ಪಶ್ಚಿಮ ವಲಯ): 49 ಮಿ.ಮೀ, ರಾಜಮಹಲ್ ಗುಟ್ಟಹಳ್ಳಿ (ಪಶ್ಚಿಮ ವಲಯ): 47.5 ಮಿ.ಮೀ, ಪೀಣ್ಯ ಸ್ಥಳೀಯ ಪ್ರದೇಶ (ದಾಸರಹಳ್ಳಿ): 45.5 ಮಿ.ಮೀ, ಯಲಹಂಕ (ಯಲಹಂಕ): 45.5 ಮಿ.ಮೀ, ವಿಶ್ವನಾಥ ನಾಗೇನಹಳ್ಳಿ (ಪೂರ್ವವಲಯ): 44.5 ಮಿ.ಮೀ, ಬೊಮ್ಮನಹಳ್ಳಿ (ಬೊಮ್ಮನಹಳ್ಳಿ ವಲಯ): 43.5 ಮಿ.ಮೀ, ಮಾರುತಿ ಮಂದಿರ ವಾರ್ಡ್ (ಪಶ್ಚಿಮ ವಲಯ): 43 ಮಿ.ಮೀ, ನಾಗಾಪುರ (ಪಶ್ಚಿಮ ವಲಯ): 41.5 ಮಿ.ಮೀ, ಹಂಪಿ ನಗರ (ದಕ್ಷಿಣ ವಲಯ): 40.5 ಮಿ.ಮೀ, ಸಂಪಂಗಿ ರಾಮನಗರ (1) (ಪೂರ್ವವಲಯ): 40 ಮಿ.ಮೀ, ಚೌಡೇಶ್ವರಿ ವಾರ್ಡ್ (ಯಲಹಂಕ): 39 ಮಿ.ಮೀ, ಬಿಟಿಎಂ ಲೇಔಟ್ (ದಕ್ಷಿಣ ವಲಯ): 38 ಮಿ.ಮೀ, ನಾಯಂಡಹಳ್ಳಿ (ಪಶ್ಚಿಮ ವಲಯ): 37 ಮಿ.ಮೀ, ಚಾಮರಾಜಪೇಟೆ (ಪಶ್ಚಿಮ ವಲಯ): 36.5 ಮಿ.ಮೀ, ಪುಲಕೇಶಿನಗರ (ಪೂರ್ವವಲಯ): 34.5 ಮಿ.ಮೀ, ಹೇರೋಹಳ್ಳಿ 33.5 ಮಿ.ಮೀ, ರಾಜಾಜಿನಗರ (ಪಶ್ಚಿಮ ವಲಯ): 33 ಮಿ.ಮೀ, ರಾಜರಾಜೇಶ್ವರಿ ನಗರ 31.5 ಮಿ.ಮೀ, ಉತ್ತರಹಳ್ಳಿ: 28 ಮಿ.ಮೀ, ಎಚ್ಎಸ್ಆರ್ ಲೇಔಟ್ ದಾಖಲಾದ 27.5 ಮಿ.ಮೀ, ಬಿಳೇಕಹಳ್ಳಿ (ಬೊಮ್ಮನಹಳ್ಳಿ ವಲಯ): 25.5 ಮಿ.ಮೀ, ದೊರೆಸಾನಿಪಾಳ್ಯ: 24.5 ಮಿ.ಮೀ, ಹೆಮ್ಮಿಗೆಪುರ 23.5 ಮಿ.ಮೀ, ಪಟ್ಟಾಭಿರಾಮನಗರ: 22 ಮಿ.ಮೀ, ಕುಶಾಲನಗರ 21 ಮಿ.ಮೀ, ಕೋಣನಕುಂಟೆ: 19.5 ಮಿ.ಮೀ.
ಸಿಂಗಸಂದ್ರ-2: 18.5 ಮಿ.ಮೀ, ಅರಕೆರೆ: 18.5 ಮಿ.ಮೀ, ರಾಜರಾಜೇಶ್ವರಿನಗರ: 18 ಮಿ.ಮೀ, ವಿದ್ಯಾರಣ್ಯಪುರ: 17.5 ಮಿ.ಮೀ, ದೊಡ್ಡನೆಕ್ಕುಂದಿ: 16.5 ಮಿ.ಮೀ, ಬಾಣಸವಾಡಿ: 15 ಮಿ.ಮೀ, ಮನೋರಾಯನಪಾಳ್ಯ: 15 ಮಿ.ಮೀ
ವನ್ನರಪೇಟ್: 14.5 ಮಿ.ಮೀ, ಹೆಮ್ಮಿಗೆಪುರ: 14 ಮಿ.ಮೀ, ಬೆಳ್ಳಂದೂರು: 13 ಮಿ.ಮೀ, ಹೊಯ್ಸಳನಗರ: 12 ಮಿ.ಮೀ, ಎಚ್.ಗೊಲ್ಲಹಳ್ಳಿ: 11.5 ಮಿ.ಮೀ, ಚೊಕ್ಕಸಂದ್ರ: 11 ಮಿ.ಮೀ, ಕಮ್ಮನಹಳ್ಳಿ: 10 ಮಿ.ಮೀ, ಹಾಲ್ ವಿಮಾನ ನಿಲ್ದಾಣ: 10 ಮಿ.ಮೀ, ಕೆಂಗೇರಿ: 10 ಮಿ.ಮೀ, ಎಚ್​ಎ ವಿಮಾನ ನಿಲ್ದಾಣ-2: 10 ಮಿ.ಮೀ, ಮಾರತ್ತಹಳ್ಳಿ: 10 ಮಿ.ಮೀ.

Continue Reading

ಕರ್ನಾಟಕ

Bangalore Rain: ಬೆಂಗಳೂರಲ್ಲಿ ವರುಣನ ಅಬ್ಬರ; ಅಂಡರ್ ಪಾಸ್‌ನಲ್ಲಿ ಸಿಲುಕಿದ ಬಸ್‌, 20 ಪ್ರಯಾಣಿಕರ ರಕ್ಷಣೆ

Bangalore Rain: ಬೆಂಗಳೂರಿನಲ್ಲಿ ಕೆ.ಆರ್. ಸರ್ಕಲ್ ಅಂಡರ್ ಪಾಸ್ ದುರಂತದ ಬಳಿಕ ಮತ್ತೊಂದು ದುರಂತ ತಪ್ಪಿದೆ. ಶೇಷಾದ್ರಿಪುರಂ ಅಂಡರ್ ಪಾಸ್‌ನ ನೀರಿನಲ್ಲಿ ಬಿಎಂಟಿಸಿ ಬಸ್ ಸಿಲುಕಿದ್ದು, 20 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಇನ್ನು ಹಲವೆಡೆ ಭಾರಿ ಮಳೆಯಿಂದ ಹತ್ತಾರು ಮರಗಳು ಧರೆಗುರುಳಿದ್ದು, ಹಲವು ವಾಹನಗಳು ಜಖಂಗೊಂಡಿವೆ.

VISTARANEWS.COM


on

Bangalore Rain
Koo

ಬೆಂಗಳೂರು: ನಗರದಲ್ಲಿ ಭಾನುವಾರ ರಾತ್ರಿಯೂ ಮಳೆಯ ಅಬ್ಬರ ಮುಂದುವರಿದಿದ್ದು, ಹಲವೆಡೆ ಬಿರುಗಾಳಿ, ಗುಡುಗು ಸಹಿತ ಧಾರಾಕಾರವಾಗಿ ಮಳೆ ಸುರಿದಿದ್ದರಿಂದ ಪ್ರಮುಖ ರಸ್ತೆಗಳು ಜಲಾವೃತವಾಗಿ ವಾಹನ ಸವಾರರು ಪರದಾಡಿದರು. ಇನ್ನು ಕೆಲವು ಕಡೆ ಬೃಹತ್‌ ಮರಗಳು ನೆಲಕ್ಕುರುಳಿದ್ದು, ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಪರದಾಡಿದರು.

ತಪ್ಪಿದ ಮತ್ತೊಂದು ದುರಂತ

ಕೆ.ಆರ್. ಸರ್ಕಲ್ ಅಂಡರ್ ಪಾಸ್ ದುರಂತದ ಬಳಿಕ ಮತ್ತೊಂದು ದುರಂತ ತಪ್ಪಿದೆ. ಶೇಷಾದ್ರಿಪುರಂ ಅಂಡರ್ ಪಾಸ್‌ನ ನೀರಿನಲ್ಲಿ ಬಿಎಂಟಿಸಿ ಬಸ್ ಸಿಲುಕಿದ್ದು, 20 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಬಸ್ ಮುಂದೆ ಮೂವ್ ಆಗ್ತಿದ್ದಂತೆ, ಅಪಾಯದ ಮುನ್ಸೂಚನೆ ಅರಿತು ಬಸ್ ಚಾಲಕ ಅಲ್ಲೇ ನಿಲ್ಲಿಸಿದ್ದಾರೆ. ನಂತರ ಬಸ್‌ನಲ್ಲಿದ್ದವರನ್ನು ಸ್ಥಳೀಯ ವ್ಯಕ್ತಿ ಮಣಿಕಂಠ ಹೊರ ಕರೆತಂದಿದ್ದಾರೆ. ಓರ್ವ ವೃದ್ಧೆ, ಇಬ್ಬರು ಮಹಿಳೆಯರು, ಮಗುವನ್ನು ಬಸ್‌ನಿಂದ ರಕ್ಷಣೆ ಮಾಡಲಾಗಿದೆ.

ಅಂಡರ್‌ಪಾಸ್‌ನಲ್ಲಿ ನೀರಿಗೆ ಬಿದ್ದ ಇಬ್ಬರು ಯುವಕರು

ಬಿರುಸಿನ ಮಳೆಯಿಂದ ಕೋರಮಂಗಲ, ಮಡಿವಾಳ, ವಿಲ್ಸನ್ ಗಾರ್ಡನ್, ಡೈರಿ ಸರ್ಕಲ್ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇನ್ನು K.R. ಸರ್ಕಲ್ ಅಂಡರ್ ಪಾಸ್‌ನಲ್ಲಿ ಭಾರಿ ಪ್ರಮಾಣದ ನೀರು ನಿಂತಿದ್ದರಿಂದ ಬ್ಯಾರಿಕೇಡ್ ಹಾಕಿ ಮುಚ್ಚಲಾಗಿತ್ತು. ಹೆಚ್ಚು ನೀರು ಇರುವುದು ತಿಳಿಯದೇ ಬೈಕ್‌ನಲ್ಲಿ ವೇಗವಾಗಿ ಬಂದ ಇಬ್ಬರು ಯುವಕರು ನೀರಿಗೆ ಬಿದ್ದಿದ್ದು, ಅದೃಷ್ಟವಶಾತ್‌ ಅಪಾಯದಿಂದ ಪಾರಾಗಿದ್ದಾರೆ.‌

ಮೆಟ್ರೋ ವಯಡಕ್ಟ್ ಮೇಲೆ ಬಿದ್ದ ಮರ

ಸಂಜೆ ಭಾರಿ ಮಳೆಯಿಂದಾಗಿ ಎಂಜಿ ರಸ್ತೆ ಮತ್ತು ಟ್ರಿನಿಟಿ ರೋಡ್‌ ನಿಲ್ದಾಣದ ನಡುವಿನ ವಯಡಕ್ಟ್ ಟ್ರ್ಯಾಕ್‌ನಲ್ಲಿ ಮರ ಬಿದ್ದ ಹಿನ್ನೆಲೆಯಲ್ಲಿ ಎಂಜಿ ರಸ್ತೆ ಮತ್ತು ಇಂದಿರಾನಗರ ನಡುವೆ ರೈಲು ಸೇವೆ ಸ್ಥಗಿತಗೊಂಡಿದೆ. ಆದರೆ, ಇಂದಿರಾನಗರ ಮತ್ತು ವೈಟ್‌ಫೀಲ್ಡ್ ನಡುವೆ ಶಾರ್ಟ್ ಲೂಪ್‌ಗಳು ಚಾಲನೆಯಲ್ಲಿವೆ. ಚಲ್ಲಘಟ್ಟ ಮತ್ತು ಎಂಜಿ ರೋಡ್ ನಡುವೆ
ಉಂಟಾದ ಅನನುಕೂಲತೆ ಬಗ್ಗೆ ಬಿಎಂಆರ್‌ಸಿಎಲ್‌ ವಿಷಾದ ವ್ಯಕ್ತಪಡಿಸಿದೆ.

ನಗರದ ಬನಶಂಕರಿ, ಕುಮಾರಸ್ವಾಮಿ ಲೇಔಟ್, ಎಳಚೇನಹಳ್ಳಿ, ಉತ್ತರಹಳ್ಳಿ, ಪದ್ಮನಾಭ ನಗರ, ಜಯನಗರ, ಪೀಣ್ಯ, ಬನ್ನೇರುಘಟ್ಟ ರಸ್ತೆ, ಮಲ್ಲೇಶ್ವರ, ರೇಸ್ ಕೋರ್ಸ್, ವಿಜಯನಗರ, ಶಾಂತಿನಗರ, ಎಂಜಿ ರೋಡ್, ಕೆ.ಆರ್ ಸರ್ಕಲ್, ಚಾಲುಕ್ಯ ಸರ್ಕಲ್ ಸೇರಿದಂತೆ ಹಲವು ಕಡೆ ಬಿರುಸಿನ ಮಳೆಯಾಗಿದೆ.

ಮರಗಳು ಬಿದ್ದು ಹಲವು ವಾಹನ ಜಖಂ

ಭಾರಿ ಮಳೆಯಿಂದ ಹಲವೆಡೆ ಬೃಹತ್ ಮರಗಳು ಧರೆಗುರುಳಿವೆ. ಜಯನಗರ-ಬನ್ನೇರುಘಟ್ಟ ರಸ್ತೆ, ಪೀಣ್ಯ ಬಳಿ ಮರಗಳು ನೆಲಕ್ಕುರುಳಿವೆ. ಪೀಣ್ಯದ ಅರವಿಂದ ಮೋಟಾರ್ಸ್ ಬಳಿ ಕಾರಿನ ಮೇಲೆ ಮರ ಬಿದ್ದಿದ್ದು, ಕಾರಿನಲ್ಲಿ ಸಿಲುಕಿರುವ ಚಾಲಕನನ್ನು ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಇನ್ನು ಬನ್ನೇರುಘಟ್ಟ ರಸ್ತೆ ವೆಗಾ ಸಿಟಿ ಮಾಲ್ ಬಳಿ ಮರ ಧರೆಗುರುಳಿದ್ದು, ತೆರವು ಕಾರ್ಯಾಚರಣೆ ನಡೆಯುತ್ತಿದೆ. ಅದೇ ರೀತಿ ಜಯನಗರದ 4ನೇ ಟಿ ಬ್ಲಾಕ್ ಬಳಿ ಮರ ಧರೆಗುರುಳಿದಿದೆ, ರಾಜಾಜಿನಗರದ ಮಂಜುನಾಥನಗರದಲ್ಲಿ ಮರ ಬಿದ್ದಿದೆ. ಬಸವನಗುಡಿ ರಾಮಕೃಷ್ಣ ಆಶ್ರಮ ಬಳಿ ಮತ್ತು ಕೆಜಿ ರಸ್ತೆ ಪೋತೀಸ್ ಮುಂಭಾಗ ಬೃಹತ್ ಮರ ಧರೆಗಿರುಳಿದೆ. ಹುಳಿಮಾವು ರಸ್ತೆಯಲ್ಲಿ ಮರ ಧರೆಗುರುಳಿದಿದ್ದು, ಪಾನಿಪುರಿ ಅಂಗಡಿ, ಸುಮಾರು 10 ಬೈಕ್‌ಗಳು ಜಖಂಗೊಂಡಿವೆ.

ಇದನ್ನೂ ಓದಿ | Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

ಇನ್ನು ಹಲವು ಕಡೆ ತಗ್ಗು ಪ್ರದೇಶಗಳ ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಗೋವಿಂದರಾಜ ನಗರದ ಪಟ್ಟೇಗಾರ ಪಾಳ್ಯದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಜೋರಾದ ಮಳೆ ಹಿನ್ನೆಲೆ ಪ್ರಮುಖ ರಸ್ತೆಗಳು ಹೊಳೆಯಂತೆ ಬದಲಾಗಿದ್ದರಿಂದ ಬೈಕ್ ಸವಾರರು ಪರದಾಡಿದರು. ಹಲವೆಡೆ ವಾಹನಗಳು ಕೆಟ್ಟುನಿಂತು ಸವಾರರು ತೊಂದರೆಪಟ್ಟರು.

Continue Reading
Advertisement
ICMR Guidelines
ಆರೋಗ್ಯ11 mins ago

ICMR Guidelines: ಕಬ್ಬಿನ ಹಾಲು ಕುಡಿದರೆ ಆರೋಗ್ಯಕ್ಕೆ ಹಾನಿಯೆ? ICMR ಅಭಿಪ್ರಾಯ ಹೀಗಿದೆ

bangalore rain news
ಪ್ರಮುಖ ಸುದ್ದಿ29 mins ago

Bangalore Rain News: ಬೆಂಗಳೂರಿಗೆ ಮುಂಗಾರು ಶಾಕ್‌, ನೂರಾರು ಮರಗಳು ಧರೆಗೆ, ಅಪಾರ್ಟ್‌ಮೆಂಟ್‌ ನಿವಾಸಿಗಳು ಅಲ್ಲೇ ಲಾಕ್!‌

Chikkodi Lok Sabha Constituency
ಚಿಕ್ಕೋಡಿ38 mins ago

Chikkodi Lok Sabha Constituency: ಜೊಲ್ಲೆ vs ಜಾರಕಿಹೊಳಿ; ಯಾರಿಗೆ ಗೆಲುವಿನ ಹೋಳಿ?

Toll Fee Hike
ದೇಶ44 mins ago

Toll Fee Hike: ವಾಹನ ಸವಾರರಿಗೆ ಮತ್ತೆ ಸುಂಕದ ಬರೆ; ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್‌ ದರ ಹೆಚ್ಚಳ

road accident tractor
ಪ್ರಮುಖ ಸುದ್ದಿ1 hour ago

Road Accident: ಮದುವೆ ದಿಬ್ಬಣದ ಟ್ರ್ಯಾಕ್ಟರ್‌ ಪಲ್ಟಿಯಾಗಿ 13 ಸಾವು, ರಾಷ್ಟ್ರಪತಿ ಸಂತಾಪ

Belagavi Lok Sabha Constituency
ಬೆಳಗಾವಿ2 hours ago

Belagavi Lok Sabha Constituency: ಶೆಟ್ಟರ್‌ ವರ್ಸಸ್‌ ಹೆಬ್ಬಾಳ್ಕರ್‌; ಯಾರಿಗೆ ಬೆಳಗಾವಿ ಕುಂದಾ?

Sweating And Body Odor
ಆರೋಗ್ಯ2 hours ago

Sweating And Body Odor: ಅತಿಯಾಗಿ ಬೆವರುತ್ತಿದ್ದೀರಾ? ಈ ಆಹಾರಗಳು ನಿಮ್ಮ ಬೆವರ ದುರ್ಗಂಧಕ್ಕೆ ಮುಖ್ಯ ಕಾರಣ!

karnataka Weather Forecast
ಮಳೆ2 hours ago

Karnataka Weather : ಬೆಂಗಳೂರಿಗೆ ಆವರಿಸಿದ ಮುಂಗಾರು; ಹಲವೆಡೆ ಇಂದು ಗಾಳಿಯೊಂದಿಗೆ ಭಯಂಕರ ಮಳೆ

Hassan Lok Sabha Constituency
ಪ್ರಮುಖ ಸುದ್ದಿ3 hours ago

Hassan Lok Sabha Constituency : ಅತ್ಯಾಚಾರ ಆರೋಪಿ ಪ್ರಜ್ವಲ್​ ರೇವಣ್ಣ ಹಾಸನದಲ್ಲಿ ಮತ್ತೆ ಗೆಲ್ಲುವರೇ?

Ways To Stay Young
ಲೈಫ್‌ಸ್ಟೈಲ್3 hours ago

Ways To Stay Young: ಸಮುದ್ರದಾಳದಲ್ಲಿ ದಿನ ಕಳೆದರೆ ಇಳಿ ವಯಸ್ಸಲ್ಲೂ ಯೌವನ ಮರಳಿ ಬರುತ್ತದೆ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ22 hours ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು2 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ4 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ6 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು6 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ7 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ2 weeks ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

ಟ್ರೆಂಡಿಂಗ್‌