Chit Chat with Siddaramaiah : ಒಮ್ಮೆಯಾದ್ರೂ ಧರ್ಮಪತ್ನಿಯನ್ನು ತೋರ್ಸಿ ಸರ್‌; ಸಿಎಂಗೆ ದುಂಬಾಲು ಬಿದ್ದ ಹೆಬ್ಬಾಳ್ಕರ್‌! - Vistara News

ವೈರಲ್ ನ್ಯೂಸ್

Chit Chat with Siddaramaiah : ಒಮ್ಮೆಯಾದ್ರೂ ಧರ್ಮಪತ್ನಿಯನ್ನು ತೋರ್ಸಿ ಸರ್‌; ಸಿಎಂಗೆ ದುಂಬಾಲು ಬಿದ್ದ ಹೆಬ್ಬಾಳ್ಕರ್‌!

Chit Chat with Siddaramaiah : ಸಿಎಂ ಸಿದ್ದರಾಮಯ್ಯ ಅವರು ಯಾಕೆ ತಮ್ಮ ಪತ್ನಿಯನ್ನು ಎಲ್ಲೂ ಕರೆದುಕೊಂಡು ಹೋಗಲ್ಲ ಎಂಬ ಪ್ರಶ್ನೆಗೆ ಉತ್ತರ ಬೇಕಾ? ಈ ವರದಿ ಓದಿ. ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಕೇಳಿದ ಇಂಟ್ರೆಸ್ಟಿಂಗ್‌ ಪ್ರಶ್ನೆಗಳು, ಉಳಿದವರ ಕೋರಸ್‌, ಸಿದ್ದರಾಮಯ್ಯ ಅವರ ಉತ್ತರಗಳನ್ನು ವಿಡಿಯೊ ಸಹಿತ ನೋಡಿ.

VISTARANEWS.COM


on

CM Siddaramaiah Lakshmi Hebbalakr
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಿಮ್ಮ ಧರ್ಮಪತ್ನಿಯವರನ್ನು ಒಮ್ಮೆ ನೋಡಬೇಕು ಅಂತ ಆಸೆ ಸರ್‌, ಒಮ್ಮೆಯಾದರೂ ಅವರನ್ನು ತೋರ್ಸಿ ಸರ್‌, ಪರಿಚಯ ಮಾಡ್ಸಿ ಸರ್‌.. ಹೀಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಮುಂದೆ ದುಂಬಾಲು ಬಿದ್ದಿದ್ದಾರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ (Lakshmi Hebbalkar). ಆಗ ಅವರಿಗೆ ಸಾಥ್‌ ನೀಡಿದ್ದಾರೆ ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ (Zameer Ahmad Khan). ಅಮ್ಮನನ್ನು ನಂಗೂ ಒಮ್ಮೆ ನೋಡ್ಬೇಕು ಸರ್‌ ಅಂತ ಅವರೂ ಬೆನ್ನು ಬಿದ್ದರು.

ಈ ಘಟನಾವಳಿ ನಡೆದಿದ್ದು, ಸಿದ್ದರಾಮಯ್ಯ ಅವರು ಬಜೆಟ್‌ ಮಂಡಿಸಿದ ದಿನ (ಫೆ. 16ರಂದು) ಮಧ್ಯಾಹ್ನದ ಬಳಿಕ ಆಯೋಜಿಸಲಾಗಿದ್ದ ಸಿಎಂ ಸಿದ್ದರಾಮಯ್ಯ ಅವರ ಜತೆಗೆ ನಡೆಸಿದ ಚಿಟ್‌ ಚಾಟ್‌ ವೇಳೆ (Chit chat with Siddaramaiah). ಈ ಚಿಟ್‌ ಚಾಟ್‌ನ್ನು ನಡೆಸಿಕೊಟ್ಟಿದ್ದು ಡಿಸಿಎಂ ಡಿ.ಕೆ. ಶಿವಕುಮಾರ್‌.

CM Siddaramaiah Chit Chat With Siddaramaiah1

ಸಿಎಂ ಸಿದ್ದರಾಮಯ್ಯ ಅವರ ಅಪರ ಕಾರ್ಯದರ್ಶಿ ಎಲ್‌.ಕೆ. ಅತೀಕ್‌, ಸಚಿವರಾದ ಈಶ್ವರ ಖಂಡ್ರೆ, ಲಕ್ಷ್ಮೀ ಹೆಬ್ಬಾಳ್ಕರ್‌, ಜಮೀರ್‌ ಅಹ್ಮದ್‌ ಖಾನ್‌, ಪ್ರಿಯಾಂಕ್‌ ಖರ್ಗೆ, ಎಂ.ಸಿ. ಸುಧಾಕರ್‌, ಶಿವರಾಜ್‌ ತಂಗಡಗಿ ಮತ್ತಿತರರು ಬಜೆಟ್‌ ಮತ್ತು ಇತರ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಿದರು. ಅಭಿವೃದ್ಧಿ, ಅರ್ಥ ಶಾಸ್ತ್ರ ಅರಿತಿರುವ ಜನನಾಯಕ ಎಂಬ ಹೆಸರಿನ ಈ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರ ಬದುಕಿನ ಬಗ್ಗೆಯೂ ಲೋಕಾಭಿರಾಮ ಚರ್ಚೆಯೂ ನಡೆಯಿತು. ಆಗ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಸಿದ್ದರಾಮಯ್ಯ ಅವರ ಖಾಸಗಿ ಬದುಕನ್ನು ಕೆಣಕಿದರು ಮತ್ತು ಇತರರು ತಮಾಷೆಯಾಗಿ ಕಾಲೆಳೆದರು.

CM-Siddaramaiah-Chit-Chat-With-Siddaramaiah

ಅಲ್ಲಿ ನಡೆದ ಸಂಭಾಷಣೆಯ ಸಾರ ಇಲ್ಲಿದೆ

ಲಕ್ಷ್ಮೀ ಹೆಬ್ಬಾಳ್ಕರ್‌: ನೀವು ನಿಮ್ಮ ಜೀವನದ ಬಹುಶಃ 80% ಭಾಗವನ್ನು ಸಮಾಜಕ್ಕಾಗಿ, ಸಾಮಾಜಿಕ ಬದ್ಧತೆ ಇಟ್ಟುಕೊಂಡು ಕೆಲಸ ಮಾಡಿದವರು. ನೀವು ಯಾವತ್ತಾದರೂ ನಿಮ್ಮ ಫ್ಯಾಮಿಲಿ ಜತೆ ಕೂತ್ಕೊಂಡು ಎಂಜಾಯ್‌ ಮಾಡ್ತೀರಾ ಅಥವಾ ಬೆಳಗ್ಗೆ ಅತೀಕ್‌ ಸರ್‌ ಬರ್ತಾರೆ, ನಂತ್ರ ನಾವೆಲ್ಲ ಬಂದು ಕೂರ್ತೀವಿ.. ಬರೇ ಇದೇ ಜೀವನ ಆಗಿ ಹೋಯ್ತಾ? ಸ್ವಲ್ಪ ಫ್ಯಾಮಿಲಿಗೂ ಟೈಮ್‌ ಕೊಡ್ತೀರಾ ಸಾರ್‌ ನೀವು?

ಸಿದ್ದರಾಮಯ್ಯ: ಫ್ಯಾಮಿಲಿಗೆ ಟೈಮ್‌ ಕೊಟ್ಟಿರುವುದು ಭಾರಿ ಕಡಿಮೆ. ಯಾಕೆಂದರೆ ನಾವು ಸಾಮಾಜಿಕ ಜೀವನದಲ್ಲಿರುವಾಗ ಇಡೀ ಸಮಾಜ ನಮ್ಮ ಫ್ಯಾಮಿಲಿ. ಫ್ಯಾಮಿಲಿಗೆ ಸಮಯ ಕೊಡ್ಲೇಬಾರ್ದು ಅಂತೇನಲ್ಲ, ನಾನು ಹಾಗೆ ಹೇಳುವುದಿಲ್ಲ. ಆದರೆ, ಸಮಯ ಸಿಗುವುದಿಲ್ಲ. ಹಾಗಾಗಿ ಅಷ್ಟೆ. ಈ ಬಗ್ಗೆ ಲೋಹಿಯಾ ಅವರು ಒಂದು ಮಾತು ಹೇಳೋರು. ನೀವು ಒಳ್ಳೆಯ ಸಾರ್ವಜನಿಕ ವ್ಯಕ್ತಿ ಆಗಬೇಕು ಎಂದರೆ ಮದುವೆ ಆಗಬಾರದು ಅಂತ (ಎಲ್ಲರೂ ಗೊಳ್‌ ಎಂದು ನಗು)!

ಸಮಾಜಕ್ಕೆ ನಿಮ್ಮನ್ನು ನೀವು ಅರ್ಪಣೆ ಮಾಡಿಕೊಳ್ಳಬೇಕು ಎಂದರೆ ಮದುವೆ ಆಗಬಾರದು!

ಲಕ್ಷ್ಮೀ ಹೆಬ್ಬಾಳ್ಕರ್‌ (ಕೈಗಳನ್ನು ಚಾಚಿ ಬೇಡುವಂತೆ ನಟಿಸುತ್ತಾ): ಸರ್‌ ಒಮ್ಮೆಯಾದರೂ, ಒಮ್ಮೆಯಾದರೂ ನಿಮ್ಮ ಧರ್ಮಪತ್ನಿಯವರನ್ನು ನಮಗೆ ಪರಿಚಯ ಮಾಡಿಸಿ ಕೊಡಿ. ಒಮ್ಮೆ ಅವರನ್ನು ನೋಡಬೇಕು ಅನ್ನುವ ಅಭಿಲಾಷೆ ಇದೆ.

ಜಮೀರ್‌ ಅಹಮದ್‌ ಖಾನ್‌: ನಮಗೆ ಎಲ್ಲಾರ್ಗೂ ಸರ್‌!

ಲಕ್ಷ್ಮೀ ಹೆಬ್ಬಾಳ್ಕರ್‌: ನೀವು ಬಸವಣ್ಣನವರ ತತ್ವವನ್ನು ಪಾಲನೆ ಮಾಡ್ತೀರಾ.. ಕಾಯಕವೇ ಕೈಲಾಸ ಎನ್ನು ನಂಬಿಕೆ ಹೊಂದಿದ್ದೀರಾ.. ನಿಮ್ಮ ಧರ್ಮ ಪತ್ನಿಯವರ ಬಗ್ಗೆ ಕೇಳಿದ್ದೇನೆ, ಅವರು ತುಂಬಾ ದೈವ ಭಕ್ತರು ಅಂತ. ನಾವು ಅವರನ್ನು ನೋಡೇ ಇಲ್ಲ ಸರ್‌, ಒಮ್ಮೆಯಾದರೂ ಅವಕಾಶ ಮಾಡಿಕೊಡಿ ಸರ್‌.

ಡಾ. ಎಂ.ಸಿ ಸುಧಾಕರ್‌: ಸರ್‌ ನೀವ್ಯಾಕೆ ನಿಮ್ಮ ಹೋಮ್‌ ಮಿನಿಸ್ಟರನ್ನು ಗೃಹಬಂಧನದಲ್ಲಿ ಇಟ್ಟಿದ್ದೀರಾ? ಹೋಮ್‌ ಮಿನಿಸ್ಟರ್‌ ಶುಡ್‌ ಬಿ ಪವರ್‌ಫುಲ್‌. ನಮ್ಮ ಹೋಮ್‌ ಮಿನಿಸ್ಟರ್ಸ್‌ ಎಲ್ಲ.. (ಮಾತು ಕಟ್‌ ಆಗುತ್ತದೆ)

ಸಿದ್ದರಾಮಯ್ಯ: ಸ್ವಾತಂತ್ರ್ಯ ಕೊಟ್ಟಿದ್ದೀನಿ ಅವರಿಗೆ. ಎಲ್ಲಿಗೆ ಬೇಕಾದರೂ ಹೋಗ್ಲಿಕೆ.. ನಾನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವಾಗ ಬಾ ಅಂತ ಹೇಳಿದ್ದೆ. ಬರ್ಲೇ ಇಲ್ಲ.. ಏನ್ಮಾಡೋಕಾಗುತ್ತೆ?

ಲಕ್ಷ್ಮೀ ಹೆಬ್ಬಾಳ್ಕರ್‌: ನೀವು ಒತ್ತಾಯ ಮಾಡಿ ಕರೀಬೇಕು ಸರ್‌.

ಜಮೀರ್‌: ನೀವು ಕರೆದುಕೊಂಡು ಹೋಗಿ ಅಭ್ಯಾಸ ಮಾಡಿಸಿಲ್ಲ ಸರ್‌..

ಸಿದ್ದರಾಮಯ್ಯ : ಹೌದು.. ಮೊದಲಿನಿಂದಲೂ ಆ ಅಭ್ಯಾಸ ಮಾಡಿಸಿಲ್ಲ. ಯಾಕೆಂದರೆ ನಾನು 1977ರಲ್ಲಿ ಮದುವೆಯಾದೆ. ಮದುವೆಯಾದ ತಕ್ಷಣ ತಾಲೂಕು ಬೋರ್ಡ್‌ ಮೆಂಬರ್‌ ಆದೆ. ಹಾಗಾಗಿ ರಾಜಕೀಯಕ್ಕೆ ಹೆಚ್ಚು ಸಮಯ ಕೊಡುವುದು ಮೊದಲಿನಿಂದಲೂ ಬೆಳೆದುಕೊಂಡು ಬಂದಿದೆ. ನೋಡಿ ನಾನು ಅನೇಕ ಸಾರಿ ಲೇಟಾಗಿ ಮನೆಗೆ ಹೋಗ್ತೀನಿ.. ಹೋಗುವಷ್ಟು ಹೊತ್ತಿಗೆ ಮಲಗಿಕೊಂಡು ಬಿಟ್ಟಿರ್ತಾರೆ.
(ಈ ನಡುವೆ ಫ್ಯಾಮಿಲಿಗೆ ಸಮಯ ಕೊಡಲು ಆಗುತ್ತಿಲ್ಲ ಎಂದು ಡಿ.ಕೆ. ಶಿವಕುಮಾರ್‌ ಅವರೂ ಹೇಳಿದರು)

ಡಿ.ಕೆ. ಶಿವಕುಮಾರ್‌: ಆಯ್ತು ಈಗ ಲಕ್ಷ್ಮೀ ಕೇಳ್ತಿದಾರೆ.. ಎಲ್ಲರನ್ನೂ ಒಂದು ಊಟಕ್ಕೆ ಕರೆಸಿ.. ಪರಿಚಯ ಮಾಡಿಕೊಡಿ..

ಜಮೀರ್‌ ಖಾನ್‌: ಪರಿಚಯ ಮಾಡಿಕೊಡಿ ಸರ್‌ ಒಮ್ಮೆ,.. ನಾವು ಅಮ್ಮಾವ್ರನ್ನು ನೋಡಬೇಕು ಅಂತ ತಾನೇ..

ಸಿದ್ದರಾಮಯ್ಯ: ಕೇಳಿ ನೋಡ್ತೀನಿ.. ಅಂತ ನಗು (ಎಲ್ಲರೂ ಜೋರಾಗಿ ನಗು)

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral video: ʼಅಸಹ್ಯಕರ!ʼ ಬೆಂಗಳೂರಿನ ರಸ್ತೆಗಳ ಕಸದ ವಿಡಿಯೋ ಪೋಸ್ಟ್‌ ಮಾಡಿದ ಕಿರಣ್ ಮಜುಂದಾರ್ ಶಾ

Viral video: ಈ ಕಸದ ರಾಶಿಯನ್ನು ತ್ವರಿತವಾಗಿ ಕ್ಲೀನ್‌ ಮಾಡಿಸುವಂತೆ ಅವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಕರೆ ನೀಡಿದ್ದಾರೆ. ಅವರು ಮಾಡಿದ ಪೋಸ್ಟ್‌ನಲ್ಲಿ ಕಸದ ರಾಶಿಯಿಂದ ತುಂಬಿದ ಹೊರ ವರ್ತುಲ ರಸ್ತೆಯ ವಿಡಿಯೋ ಕಂಡುಬಂದಿದೆ. ಈ ದೃಶ್ಯವನ್ನು “ಅಸಹ್ಯಕರ” ಎಂದು ಕರೆದಿರುವ ಬಯೋಕಾನ್ ಮುಖ್ಯಸ್ಥೆ, “ಕೊಳಕು ಅವ್ಯವಸ್ಥೆಯನ್ನು ತ್ವರಿತವಾಗಿ ತೆರವುಗೊಳಿಸುವಂತೆ” ಬಿಬಿಎಂಪಿಗೆ ಕೋರಿದ್ದಾರೆ.

VISTARANEWS.COM


on

viral video garbage bengaluru roads
Koo

ಬೆಂಗಳೂರು: ರಾಜಧಾನಿ ಮೂಲದ ಖ್ಯಾತ ಬಿಟಿ ಕಂಪನಿ ಬಯೋಕಾನ್ (Biocon)‌ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ (Kiran Mazumdar Shaw) ಅವರು ಮಂಗಳವಾರ ಬೆಂಗಳೂರಿನ ರಸ್ತೆಗಳ (Bengaluru Roads) ಪಕ್ಕದ ಕಸದ ರಾಶಿಗಳ (garbage) ವಿಡಿಯೋಗಳನ್ನು ತಮ್ಮ ಸೋಶಿಯಲ್‌ ಮೀಡಿಯಾ (Social media) ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಬಿಬಿಎಂಪಿಗೆ (BBMP) ಮುಜುಗರ ಸೃಷ್ಟಿಸಿದ್ದಾರೆ. ಈ ವಿಡಿಯೋ ಈಗ ವೈರಲ್‌ (Viral video) ಆಗಿದೆ.

ಈ ಕಸದ ರಾಶಿಯನ್ನು ತ್ವರಿತವಾಗಿ ಕ್ಲೀನ್‌ ಮಾಡಿಸುವಂತೆ ಅವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಕರೆ ನೀಡಿದ್ದಾರೆ. ಅವರು ಮಾಡಿದ ಪೋಸ್ಟ್‌ನಲ್ಲಿ ಕಸದ ರಾಶಿಯಿಂದ ತುಂಬಿದ ಹೊರ ವರ್ತುಲ ರಸ್ತೆಯ ವಿಡಿಯೋ ಕಂಡುಬಂದಿದೆ. ಈ ದೃಶ್ಯವನ್ನು “ಅಸಹ್ಯಕರ” ಎಂದು ಕರೆದಿರುವ ಬಯೋಕಾನ್ ಮುಖ್ಯಸ್ಥೆ, “ಕೊಳಕು ಅವ್ಯವಸ್ಥೆಯನ್ನು ತ್ವರಿತವಾಗಿ ತೆರವುಗೊಳಿಸುವಂತೆ” ಬಿಬಿಎಂಪಿಗೆ ಕೋರಿದ್ದಾರೆ.

“ಅಸಹ್ಯಕರ ನೋಟ. @BBMPSWMSplComm ಈ ಕೊಳಕು ಅವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ತ್ವರಿತವಾಗಿ ಕಾರ್ಯನಿರ್ವಹಿಸಬೇಕಾಗಿದೆ” ಎಂದು ಅವರು ಮೂಲ ವೀಡಿಯೊವನ್ನು ಟ್ವೀಟ್ ಮಾಡಿ Xನಲ್ಲಿ ಬರೆದಿದ್ದಾರೆ. ಕಿರಣ್‌ ಶಾ ಅವರ ಪೋಸ್ಟ್‌ಗೆ ತೀಕ್ಷ್ಣವಾದ ಕಾಮೆಂಟ್‌ಗಳು ಎಕ್ಸ್‌ನಲ್ಲಿ ಬಳಕೆದಾರರಿಂದ ಬಂದಿವೆ. ವೀಡಿಯೊ ಈಗ ವೈರಲ್ ಆಗುತ್ತಿದೆ. ಅನೇಕ X ಬಳಕೆದಾರರು ತಕ್ಷಣದ ಕ್ರಮಕ್ಕಾಗಿ ಕರೆ ನೀಡಿದ್ದಾರೆ.

ಹಲವಾರು ಜನರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಂತಹ ದೃಶ್ಯವು ಇತರ ನಗರಗಳಲ್ಲಿಯೂ ದುರದೃಷ್ಟವಶಾತ್ ಸಾಮಾನ್ಯವಾಗಿದೆ ಎಂದಿದ್ದಾರೆ ಕೆಲವರು. ಆದಾಗ್ಯೂ, ನಾಗರಿಕರು ಮೂಲಭೂತ ನಾಗರಿಕ ಪ್ರಜ್ಞೆಯನ್ನು ಹೊಂದಿರಬೇಕು ಮತ್ತು ಬೀದಿಗಳನ್ನು ಸ್ವಚ್ಛವಾಗಿಡಲು ಪ್ರಯತ್ನಿಸಬೇಕು ಎಂದು ಕೆಲವರು ಹೇಳಿದ್ದಾರೆ.

“ಇನ್ನೂ ನಾಚಿಕೆಗೇಡಿನ ಸಂಗತಿಯೆಂದರೆ ಹೆಚ್ಚಿನ ಅನಿವಾಸಿಗಳು, ಕಾನ್ಸುಲೇಟ್‌ಗಳು, ಮಂತ್ರಿಗಳು, ಬಿಬಿಎಂಪಿಯ ಉನ್ನತ ಅಧಿಕಾರಿಗಳು ಸಹ ಈ ಪ್ರದೇಶದಲ್ಲಿಯೇ ಇರುತ್ತಾರೆ ಮತ್ತು ಅವರು ಪ್ರತಿದಿನ ಈ ಮಾರ್ಗದಲ್ಲಿ ಪ್ರಯಾಣಿಸುತ್ತಾರೆ! ಇಂತಹ ಕೊಳಕು ಅಭ್ಯಾಸಗಳನ್ನು ಪ್ರದರ್ಶಿಸುವ ಮೂಲಕ ನಾವು ನಮ್ಮ ನಗರವನ್ನು ಮಾತ್ರವಲ್ಲದೆ ನಮ್ಮ ರಾಷ್ಟ್ರವನ್ನೂ ಸಹ ಹತಾಶಗೊಳಿಸುತ್ತಿದ್ದೇವೆ” ಎಂದಿದ್ದಾರೆ ಬಳಕೆದಾರರೊಬ್ಬರು.

ಮತ್ತೊಬ್ಬರು, “ಪ್ರತಿಯೊಂದು ಮೊದಲ ಹಂತದ ಹಾಗೂ ಎರಡನೇ ಹಂತದ ನಗರಗಳಲ್ಲಿ ಇದು ಇಂದು ಕಾಣಬರುವ ದುರಂತ ಸನ್ನಿವೇಶ. ಸಾರ್ವಜನಿಕ ಕಸದ ತೊಟ್ಟಿಗಳಿಲ್ಲ. ಆದ್ದರಿಂದ ಜನರು ತಮಗಿಷ್ಟ ಬಂದ ಕಡೆ ಕಸ ಎಸೆಯುತ್ತಾರೆ. ನಾಗರಿಕ ಸಂಸ್ಥೆಗಳು ಸಾರ್ವಜನಿಕ ಕಸದ ಬುಟ್ಟಿಗಳನ್ನು ಸ್ಥಾಪಿಸಲು, ಬಳಸಲು ಮತ್ತು ನಿರ್ವಹಿಸಲು ಮುಂದಾಗದ ಹೊರತು ಇದು ಮುಂದುವರಿಯುತ್ತದೆ” ಎಂದಿದ್ದಾರೆ.

“ಬೆಂಗಳೂರಿನ ಪ್ರತಿಯೊಂದು ಪ್ರದೇಶವೂ ಈ ರೀತಿಯ ರಸ್ತೆಗಳನ್ನು ಹೊಂದಿದೆ. ಮೊದಲು ಜನರಿಗೆ ಶಿಕ್ಷಣ ನೀಡಬೇಕು ಮತ್ತು ಶಿಕ್ಷೆ ನೀಡಬೇಕು” ಎಂದಿದ್ದಾರೆ ಮತ್ತೊಬ್ಬರು. “ಮೆಟ್ರೋ ನಿಲ್ದಾಣಗಳು, ಡಿವೈಡರ್‌ಗಳ ಬಳಿ ಜನರು ತ್ಯಾಜ್ಯವನ್ನು ಎಸೆಯುವುದನ್ನು ನಾನು ಗಮನಿಸಿದ್ದೇನೆ. ಇದು ರಾತ್ರಿ ಸಮಯದಲ್ಲಿ ನಡೆಯುತ್ತದೆ. ಈ ಸ್ಥಳಗಳಲ್ಲಿ ಪದೇ ಪದೆ ಕಸ ಸುರಿಯುವವರನ್ನು ಗುರುತಿಸಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದರ ಜೊತೆಗೆ ಅಪರಾಧಿಗಳಿಗೆ ಭಾರಿ ದಂಡ ವಿಧಿಸಬೇಕಾಗಿದೆ” ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Crowd Funding: ಕಂದಮ್ಮನ ಚಿಕಿತ್ಸೆಗೆ ಹರಿದು ಬಂದ ನೆರವು; 3 ತಿಂಗಳಲ್ಲಿ 9 ಕೋಟಿ ರೂ. ಸಂಗ್ರಹ

Continue Reading

ವಿದೇಶ

Viral News: ಗಾಜಾದಲ್ಲಿ ಆಹಾರ ಸಿಗದೆ ನಾಣ್ಯ, ಕಲ್ಲು, ಬ್ಯಾಟರಿ ತಿನ್ನುತ್ತಿರುವ ಮಕ್ಕಳು!

ಆಹಾರದ ಕೊರತೆಯಿಂದ ಗಾಜಾ ಪಟ್ಟಿಯಲ್ಲಿ ಮಕ್ಕಳು ರಸ್ತೆಯಲ್ಲಿ ಸಿಕ್ಕಿದ್ದನ್ನೆಲ್ಲ ತಿನ್ನುತ್ತಿದ್ದಾರೆ ಎಂದು ಒಮಾನಿ ವೈದ್ಯರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದು ಇದಕ್ಕೆ ಸಾಕ್ಷಿಯನ್ನು ನೀಡಿದ್ದಾರೆ. ಇದರ ವಿಡಿಯೋ ಭಾರೀ ವೈರಲ್ (Viral News) ಆಗಿದೆ.

VISTARANEWS.COM


on

By

Viral News
Koo

ಗಾಜಾ ಪಟ್ಟಿಯಲ್ಲಿ (Gaza strip) ಆಹಾರದ ಕೊರತೆಯಿಂದ ತೀವ್ರ ಹಸಿವಿನಿಂದ ಬಳಲುತ್ತಿರುವ ಮಕ್ಕಳು ರಸ್ತೆಯಲ್ಲಿ ಸಿಕ್ಕಿದ್ದನ್ನೆಲ್ಲ ತಿನ್ನುತ್ತಿದ್ದಾರೆ ಎಂದು ಪ್ಯಾಲೆಸ್ಟೀನಿಯಾದವರಿಗೆ (Palestinians) ಚಿಕಿತ್ಸೆ ನೀಡಲು ಗಾಜಾದಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸ್ವಯಂಸೇವಕರಾಗಿ ಕೆಲಸ ಮಾಡುವ ಒಮಾನಿ (omani) ವೈದ್ಯ ಖಲೀದ್ ಅಲ್-ಶಮೌಸಿ (Khaled Al-Shamousi) ಅವರು ಸಾಮಾಜಿಕ ಜಾಲತಾಣವಾದ (Viral News) ಎಕ್ಸ್ ನಲ್ಲಿ (x) ಹೇಳಿಕೊಂಡಿದ್ದಾರೆ.

ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿನ ಅವರ ಖಾತೆಯಲ್ಲಿ ಡಾ. ಖಲೀದ್ ಅಲ್-ಶಮೌಸಿ ಅವರು, ಒಂದು ಮಗು ಲೋಹದ ತುಂಡನ್ನು ನುಂಗಿತ್ತು. ಅದು ಅನ್ನನಾಳದಲ್ಲಿ ಸಿಲುಕಿಕೊಂಡಿತ್ತು ಎಂದು ವಿವರಿಸಿದ್ದಾರೆ.

ಅವರು ಪರೀಕ್ಷಿಸಿದ ಚಿಕ್ಕ ಹುಡುಗಿಯ ಎದೆಯ ಎಕ್ಸ್-ರೇ ಅನ್ನು ತೋರಿಸಿರುವ ಅವರು ಗಾಜಾದ ಮಕ್ಕಳು ತೀವ್ರ ಹಸಿವಿನಿಂದ ನಾಣ್ಯಗಳು, ಬೆಣಚುಕಲ್ಲುಗಳು ಮತ್ತು ಸಣ್ಣ ಬ್ಯಾಟರಿಗಳನ್ನು ತಿನ್ನುತ್ತಿದ್ದಾರೆ. ಅವುಗಳಲ್ಲಿ ಒಬ್ಬಾಕೆ 8 ವರ್ಷದ ಬಾಲಕಿ. ಅವಳು ಲೋಹದ ತುಂಡನ್ನು ನುಂಗಿದಳು ಮತ್ತು ಅದು ಅವಳ ಅನ್ನನಾಳದಲ್ಲಿ ಸಿಲುಕಿಕೊಂಡಿತು ಎಂದು ತಿಳಿಸಿದ್ದಾರೆ.

ಶಸ್ತ್ರಚಿಕಿತ್ಸಾ ಕೊಠಡಿಯೊಳಗೆ ಅವರು ಮಗುವಿನ ಮೇಲೆ ಸೂಕ್ಷ್ಮವಾದ ಆಪರೇಷನ್ ಮಾಡುತ್ತಿರುವ ವಿಡಿಯೋ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದಾರೆ. ಲೋಹದ ತುಂಡನ್ನು ತೆಗೆದುಹಾಕಿದ ಬಳಿಕ ವೈದ್ಯಕೀಯ ಸಿಬ್ಬಂದಿಯ ಚಪ್ಪಾಳೆಗಳನ್ನು ಕೇಳಿದಾಗ ಶಮೌಸಿ ತನ್ನ ಬಾಯಿಯ ಮೂಲಕ ಮಗುವಿನ ಕರುಳಿನಿಂದ ಸಣ್ಣ ಬ್ಯಾಟರಿಯನ್ನು ತೆಗೆದುಹಾಕುತ್ತಿರುವಂತೆ ಕಾಣಿಸಿಕೊಂಡರು.

ಬಳಿಕ ಈ ಕುರಿತು ಎಕ್ಸ್ ನಲ್ಲಿ ಹೇಳಿರುವ ಅವರು, ತೀವ್ರವಾದ ಹಸಿವು,ಆಹಾರ ಪದಾರ್ಥಗಳ ಸರಬರಾಜುಗಳ ಕೊರತೆ ಮತ್ತು ಸುತ್ತಮುತ್ತಲಿನ ದೇಶಗಳ ನಿರ್ಲಕ್ಷ್ಯದಿಂದಾಗಿ ಮಕ್ಕಳು ಬ್ಯಾಟರಿಗಳನ್ನು ಮಿಠಾಯಿಗಳೆಂದು ಭಾವಿಸಿ ನುಂಗಿದರು. ಇಲ್ಲಿ ನಾವು ಗಾಜಾದಲ್ಲಿ ಮಗು ನುಂಗಿದ ಬ್ಯಾಟರಿಯನ್ನು ಹೊರತೆಗೆದಿದ್ದೇವೆ ಎಂದು ಹೇಳಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. ಅಲ್ಲಿ ಅನೇಕರು ಈ ಗೊಂದಲದ ದೃಶ್ಯಗಳ ಬಗ್ಗೆ ತಮ್ಮ ಕೋಪ ಮತ್ತು ದುಃಖವನ್ನು ವ್ಯಕ್ತಪಡಿಸುತ್ತಿದ್ದಾರೆ.

ಆಹಾರ ಪೂರೈಕೆ ಇಲ್ಲ

ಕಳೆದ ವಾರದಿಂದ ದಕ್ಷಿಣ ಗಾಜಾದ ಎರಡು ಪ್ರಮುಖ ಪ್ರದೇಶಗಳಿಗೆ ಯಾವುದೇ ಆಹಾರ ಪೂರೈಕೆಯಾಗಿಲ್ಲ. ಗಾಜಾದಲ್ಲಿ ಸುಮಾರು 1.1 ಮಿಲಿಯನ್ ಪ್ಯಾಲೆಸ್ಟೀನಿಯಾದವರು ಹಸಿವಿನಿಂದ ಕಂಗೆಟ್ಟಿದ್ದಾರೆ. ಹಸಿವಿನ ದುರಂತದ ಮಟ್ಟವನ್ನು ಇಲ್ಲಿನ ಜನರು ಎದುರಿಸುತ್ತಿದ್ದಾರೆ ಮತ್ತು ಯುಎನ್ ಪ್ರಕಾರ ಉತ್ತರದಲ್ಲಿ “ಪೂರ್ಣ ಕ್ಷಾಮ” ಉಂಟಾಗಿದೆ ಎನ್ನಲಾಗಿದೆ.

ದಕ್ಷಿಣ ಮತ್ತು ಉತ್ತರ ಗಾಜಾದಲ್ಲಿ ಇಸ್ರೇಲಿ ಮಿಲಿಟರಿ ಕಾರ್ಯಾಚರಣೆಗಳನ್ನು ಹೆಚ್ಚಿಸುವ ಮೂಲಕ ಇತ್ತೀಚಿನ ದಿನಗಳಲ್ಲಿ ಅರ್ಧ ಮಿಲಿಯನ್‌ಗಿಂತಲೂ ಹೆಚ್ಚು ಪ್ಯಾಲೆಸ್ಟೀನಿಯಾದವರು ಸ್ಥಳಾಂತರಗೊಂಡಿದ್ದಾರೆ. ಕಳೆದ ವಾರದಲ್ಲಿ ಸುಮಾರು 4,50,000 ಪ್ಯಾಲೆಸ್ಟೀನಿಯನ್ನರನ್ನು ಗಾಜಾದ ದಕ್ಷಿಣದಲ್ಲಿರುವ ರಫಾದಿಂದ ಹೊರಹಾಕಲಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

ಇದನ್ನೂ ಓದಿ: Viral video: ರಿಂಕು ಸಿಂಗ್​ ಜೆರ್ಸಿ ತೊಟ್ಟು ಚೆಂಡು ಕದಿಯಲು ಯತ್ನಿಸಿ ಸಿಕ್ಕಿ ಬಿದ್ದ ಭೂಪ!; ಪೊಲೀಸರಿಂದ ಬಿತ್ತು ಹಿಗ್ಗಾಮುಗ್ಗಾ ಗೂಸಾ

ಇಸ್ರೇಲ್ ನಗರಕ್ಕೆ ತಳ್ಳುವ ಮೊದಲು ರಫಾದಲ್ಲಿ ಸುಮಾರು 1.3 ಮಿಲಿಯನ್ ಜನರು ಆಶ್ರಯ ಪಡೆದಿದ್ದರು. ಇದು ಕೊನೆಯ ಹಮಾಸ್ ಭದ್ರಕೋಟೆ ಎಂದು ಇಸ್ರೇಲ್ ಹೇಳುತ್ತದೆ.

ಗಾಜಾದಲ್ಲಿ ಏಳು ತಿಂಗಳ ಇಸ್ರೇಲಿ ಬಾಂಬ್ ದಾಳಿ ಮತ್ತು ನೆಲದ ಕಾರ್ಯಾಚರಣೆಗಳು 35,000 ಕ್ಕೂ ಹೆಚ್ಚು ಜನರನ್ನು ಕೊಂದಿವೆ. ಅವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

Continue Reading

ವೈರಲ್ ನ್ಯೂಸ್

Viral Video: 25 ವರ್ಷಗಳ ಹಿಂದೆ ಬಿಬಿಸಿ ನ್ಯೂಸ್ ಥೀಮ್ ಟ್ಯೂನ್ ಹುಟ್ಟಿಕೊಂಡಿದ್ದು ಹೇಗೆ ಗೊತ್ತೇ?

25 ವರ್ಷಗಳ ಹಿಂದೆ ಬಿಬಿಸಿ ನ್ಯೂಸ್ ಥೀಮ್ ನ ಟ್ಯೂನ್ ಸಂಯೋಜನೆ ಗೊಂಡಿದ್ದು ಹೇಗೆ ಎನ್ನುವ ಕಥೆಯನ್ನು ಬ್ರಿಟಿಷ್ ಮ್ಯೂಸಿಕ್ ಸಂಯೋಜಕ ಮತ್ತು ಸಂಗೀತ ನಿರ್ಮಾಪಕ ಡೇವಿಡ್ ಲೋವ್ ಅವರು ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ಹೇಳಿರುವುದು ಈಗ ಭಾರೀ ವೈರಲ್ (Viral Video) ಆಗಿದೆ.

VISTARANEWS.COM


on

By

Viral Video
Koo

ಬ್ರಿಟಿಷ್ ಮ್ಯೂಸಿಕ್ ಸಂಯೋಜಕ (British music composer) ಮತ್ತು ಸಂಗೀತ ನಿರ್ಮಾಪಕ (music producer) ಡೇವಿಡ್ ಲೋವ್ (David Lowe ) ಅವರು 25 ವರ್ಷಗಳ ಹಿಂದೆ ಬಿಬಿಸಿ (BBC) ನ್ಯೂಸ್ ಥೀಮ್ (News theme) ಟ್ಯೂನ್ (tune) ಅನ್ನು ಹೇಗೆ ಸಂಯೋಜಿಸಿದರು ಎಂಬುದರ ಕುರಿತು ಇತ್ತೀಚೆಗೆ ಸಾಮಾಜಿಕ ಜಾಲತಾಣವಾದ (social media) ಎಕ್ಸ್ ನಲ್ಲಿ (x) ಹೇಳಿಕೊಂಡಿದ್ದು, ಇದು ಭಾರಿ ವೈರಲ್ (Viral Video) ಆಗಿದೆ.

ರಾಗವನ್ನು ನಿರ್ಮಿಸುವ ಹಂತ-ಹಂತದ ಪ್ರಕ್ರಿಯೆಯನ್ನು ಈ ವಿಡಿಯೋದಲ್ಲಿ ಅವರು ಹೇಳಿಕೊಂಡಿದ್ದು, 25 ವರ್ಷಗಳ ಹಿಂದೆ ನಾನು ಬಿಬಿಸಿ ನ್ಯೂಸ್ ಥೀಮ್ ಟ್ಯೂನ್ ಅನ್ನು ಸಂಯೋಜಿಸಿದ್ದೇನೆ. ಇದು ಪ್ರತಿದಿನ ಪ್ರಪಂಚದಾದ್ಯಂತ ಪ್ರಸಾರವಾಗುತ್ತಿದೆ. ಸಮಯದ ನಿಖರವಾದ ಬೀಪ್‌ಗಳಿಂದ ಪ್ರಬಲ ಬಾಸ್ ಮತ್ತು ಮುಖ್ಯಾಂಶಗಳಿಗಾಗಿ ನಾಟಕೀಯ ಡ್ರಮ್‌ಗಳವರೆಗೆ… ನಾನು ಇದನ್ನು ಹೀಗೆ ಮಾಡಿದ್ದೇನೆ ಎಂದು ವಿವರಿಸಿದ್ದಾರೆ.

ಬೀಪ್ ಧ್ವನಿಯೊಂದಿಗೆ ಪ್ರಾರಂಭವಾಯಿತು. ಗಡಿಯಾರವು ಸೆಕೆಂಡಿಗೆ ಒಂದು ಬೀಟ್ ಅನ್ನು ಟಿಕ್ ಮಾಡುತ್ತದೆ. ಅನಂತರ ಶಕ್ತಿ ಮತ್ತು ಘನತೆ ಮತ್ತು ಆಳದ ಅರ್ಥವನ್ನು ನೀಡಲು ಅದಕ್ಕೆ ಬಾಸ್ ಲೈನ್ ಅನ್ನು ಸೇರಿಸಿದೆ. ಧ್ವನಿಯನ್ನು ಹೆಚ್ಚಿಸಲು ಬಾಸ್ ಡ್ರಮ್ಸ್ ಮತ್ತು ಕಿಕ್ ಅನ್ನು ಜೊತೆಗೂಡಿಸಿದೆ ಎಂದವರು ವಿವರಿಸಿದ್ದಾರೆ.

ನಾವು ಮುಖ್ಯಾಂಶಗಳಿಗೆ ದೊಡ್ಡ ಧ್ವನಿಯನ್ನು ಬಯಸಿದ್ದೇವೆ. ಅದಕ್ಕಾಗಿ ಈ ದೊಡ್ಡ ಡ್ರಮ್‌ನೊಂದಿಗೆ ಬಂದಿದ್ದೇವೆ ಎಂದ ಅವರು, ಆ ಸಾಂಪ್ರದಾಯಿಕ ಬಿಬಿಸಿ ನ್ಯೂಸ್ ಥೀಮ್ ಅನ್ನು ರಚಿಸಲು ಸ್ವರಮೇಳಗಳು, ಹೆಚ್ಚಿನ ಸ್ಟ್ರಿಂಗ್ ಮತ್ತು ಫೇಡ್ ಅನ್ನು ಸೇರಿಸಲಾಗಿದೆ ಎಂದು ಲೋವ್‌ ತಿಳಿಸಿದರು.

ವೈರಲ್ ಆಗಿದ್ದು ಯಾವಾಗ?

ಕೋವಿಡ್ -19 ಸಾಂಕ್ರಾಮಿಕದ ಸಮಯದಲ್ಲಿ ಟಿಕ್‌ಟಾಕ್ ಸೃಷ್ಟಿಕರ್ತ ರಾಚೆಲ್ ಲಿಯರಿ ಅವರು ಸಾಮಾಜಿಕ ಮಾಧ್ಯಮದಾದ್ಯಂತ ಲಕ್ಷಾಂತರ ಬಾರಿ ವೀಕ್ಷಿಸಲ್ಪಟ್ಟ ವಿಡಿಯೋದಲ್ಲಿ ಸಂಗೀತದೊಂದಿಗೆ ಬಿಬಿಸಿ ನ್ಯೂಸ್ ಥೀಮ್ ಟ್ಯೂನ್ ವೈರಲ್ ಆಯಿತು.

ಡೇವಿಡ್ ಲೋವ್ ಅವರು 25 ವರ್ಷಗಳ ಹಿಂದೆ ಬಿಬಿಸಿ ಥೀಮ್ ಟ್ಯೂನ್ ಅನ್ನು ಹೇಗೆ ಸಂಯೋಜಿಸಿದ್ದಾರೆ ಎಂಬುದರ ವಿವರಣೆಯನ್ನು ಒಳಗೊಂಡಿರುವ ವಿಡಿಯೋವನ್ನು ಮೇ 10 ರಂದು ಹಂಚಿಕೊಂಡಿದ್ದಾರೆ. ಅಂದಿನಿಂದ ಇದು 7.5 ಲಕ್ಷ ವೀಕ್ಷಣೆಗಳನ್ನು ಗಳಿಸಿದೆ ಮತ್ತು ಇನ್ನೂ ಎಣಿಕೆಯಲ್ಲಿದೆ. ಪೋಸ್ಟ್ 5,600 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಹಲವಾರು ಕಾಮೆಂಟ್‌ಗಳನ್ನು ಸ್ವೀಕರಿಸಿದೆ.


ಪ್ರತಿಕ್ರಿಯೆಗಳು ಹೇಗಿವೆ?

ಇದು ತುಂಬಾ ಅದ್ಭುತವಾಗಿದೆ. ನನಗೆ, ಕನಿಷ್ಠ ಮೇಲಿನ ಪದರವು ಕೊನೆಯಲ್ಲಿ ಸ್ವರಮೇಳವನ್ನು ಬದಲಾಯಿಸುವುದರಿಂದ ಪಿಪ್‌ಗಳು ಟಿಪ್ಪಣಿಯನ್ನು ಬದಲಾಯಿಸುವಂತೆ ತೋರುತ್ತಿದೆ ಎಂದೊಬ್ಬರು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಲೋವ್, ಅದನ್ನು ಗುರುತಿಸಿದ್ದಕ್ಕಾಗಿ ತಾನು ಸಂತೋಷಪಡುತ್ತೇನೆ. ಪಿಪ್ ಒಂದೇ ಟಿಪ್ಪಣಿಯಲ್ಲಿ ಸ್ಥಿರವಾಗಿರುತ್ತದೆ ಮತ್ತು ಸ್ವರಮೇಳಗಳು ಅದರ ಸುತ್ತಲೂ ಬದಲಾಗುತ್ತವೆ. ಒಂದೇ ಸ್ಥಿರ ದಿಕ್ಕಿನ ಭಾವನೆಯನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Viral News: ಕುರ್ಕುರೆ ಪ್ಯಾಕ್‌ ತರದೇ ಹೋದ ಗಂಡನಿಗೆ ಡೈವೋರ್ಸ್!‌

ಇದಕ್ಕೆ ಸ್ವಲ್ಪವೂ ವಯಸ್ಸಾಗಿಲ್ಲ ಎಂಬ ಅಂಶದಿಂದ ಅದರ ಶಕ್ತಿಯನ್ನು ತೋರಿಸುತ್ತದೆ. ಇನ್ನೂ ತಾಜಾವಾಗಿ ಧ್ವನಿಸುತ್ತದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದು, ಅದ್ಭುತ! ಯಾವುದೇ ಸುದ್ದಿ ಕಾರ್ಯಕ್ರಮಕ್ಕೆ ಇದುವರೆಗಿನ ಅತ್ಯುತ್ತಮ ಥೀಮ್ ಟ್ಯೂನ್ ಎಂದು ಹೇಳಿದ್ದಾರೆ.

ನಾನು ಯಾವಾಗಲೂ ನಿಮ್ಮ ಕೆಲಸವನ್ನು ಆನಂದಿಸಿದೆ. ಡೇವಿಡ್, ಇದು ತುಂಬಾ ಚೆನ್ನಾಗಿದೆ. ಆಲ್ ದಿ ಬೆಸ್ಟ್ ಎಂದು ಇನ್ನೊಬ್ಬರು ಕಾಮೆಂಟ್‌ನಲ್ಲಿ ಸೇರಿಸಿದ್ದಾರೆ.

Continue Reading

ಬೆಂಗಳೂರು

Silicon City Hospital: ಲಕ್ಷಕ್ಕೆ ಇಬ್ಬರಿಗೆ ಬರುವ ಮೆದುಳಿನ ರಕ್ತನಾಳ ಒಡೆಯುವ ಕಾಯಿಲೆ; ಯಶಸ್ವಿ ಶಸ್ತ್ರಚಿಕಿತ್ಸೆಯಿಂದ ಬಾಲಕಿ ಪಾರು

Silicon City Hospital: ಲಕ್ಷದಲ್ಲಿ ಇಬ್ಬರಲ್ಲಿ ಕಾಣಿಸಿಕೊಳ್ಳುವ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕಿಗೆ ಸಿಲಿಕಾನ್‌ ಸಿಟಿ ಆಸ್ಪತ್ರೆ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ, ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ. ಬಾಲಕಿ ಉಳಿಸಲು ಆಗಲ್ಲ ಎಂದು ಕೈಚೆಲ್ಲಿದ್ದ ದೊಡ್ಡ ಆಸ್ಪತ್ರೆಗಳಿಗೂ ಅಚ್ಚರಿ ಮೂಡಿಸುವುದರೊಂದಿಗೆ ಮೆಚ್ಚುಗೆಯನ್ನು ಪಡೆದಿದ್ದಾರೆ.

VISTARANEWS.COM


on

By

Silicon City Hospital doctors successful surgery on girl suffering from Arterio Venus malpermation
Koo

ಬೆಂಗಳೂರು: ಮೆದುಳಿನ ರಕ್ತನಾಳ ಒಡೆದು ರಕ್ತ ಸೋರುವ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕಿಯ ಪ್ರಾಣವನ್ನು ಸಿಲಿಕಾನ್‌ ಸಿಟಿ ಆಸ್ಪತ್ರೆ ವೈದ್ಯರು (Silicon City Hospital) ಉಳಿಸಿದ್ದಾರೆ. ಒಂದು ಲಕ್ಷದಲ್ಲಿ ಇಬ್ಬರಿಗೆ ಮಾತ್ರ ಬರುವ ಈ ಅಪರೂಪದ ಕಾಯಿಲೆಯು ಬಾಲಕಿಗೆ ಕೊನೆ ಹಂತದಲ್ಲಿತ್ತು. ಇದನ್ನೇ ಸವಾಲಾಗಿ ಸ್ವೀಕರಿಸಿದ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಬಾಲಕಿ ಜೀವ ಉಳಿಸಿದ್ದಾರೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನೆರನಹಳ್ಳಿ ಗ್ರಾಮದ ನೆರನಹಳ್ಳಿಯ ಬಾಬು ಮತ್ತು ಲಾವಣ್ಯ ದಂಪತಿ ಮಗಳು ಸ್ನೇಹಾ ಅಪಾಯದಿಂದ ಪಾರಾದವಳು . ಕಳೆದ ಮೇ 3ರಂದು ಚೆನ್ನಾಗಿದ್ದ ಸ್ನೇಹಾ ಇದ್ದಕ್ಕಿದ್ದಂತೆ ವಾಂತಿ ಮಾಡಿಕೊಂಡು ಒದ್ದಾಡಿದ್ದಳು. ಮಗಳ ಪರಿಸ್ಥಿತಿ ಕಂಡು ಭಯಗೊಂಡ ಪೋಷಕರು ಮುಳಬಾಗಿಲಿನ ಖಾಸಗಿ‌ ಆಸ್ಪತ್ರೆಗೆ ತೋರಿಸಿದ್ದರು. ಆದರೆ ಅಲ್ಲಿನ ವೈದ್ಯರು ನಿಮ್ಮ ಮಗಳಿಗೆ ನರರೋಗಕ್ಕೆ ಸಂಬಂಧಿಸಿದ ಕಾಯಿಲೆ ಇದೆ ಎಂದಿದ್ದರು.

ತಡ ಮಾಡದೆ ಅಲ್ಲಿಂದ ಬೆಂಗಳೂರಿಗೆ ಮಗಳು ಸ್ನೇಹಾಳನ್ನು ಕರೆತಂದು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆ ವೇಳೆ ತಲೆ ಮೆದುಳಿನ ರಕ್ತನಾಳ ಒಡೆದು ರಕ್ತ ಸೋರುವ ಈ ಕಾಯಿಲೆ ಇದೆ ಎಂದು ಗೊತ್ತಾಗಿತ್ತು. ಸ್ನೇಹಾಳಿಗೆ ಬಂದ ಈ ಕಾಯಿಲೆ ಅದಾಗಲೇ ಯಾರಿಗೂ ತಿಳಿಯದಂತೆ ಕೊನೆ ಹಂತ ತಲುಪಿತ್ತು. ಹೀಗಾಗಿ ನಿಮ್ಹಾನ್ಸ್‌ ವೈದ್ಯರು ನಿಮ್ಮ ಮಗಳನ್ನು ಬದುಕಿಸುವುದು ಕಷ್ಟ ವಾಪಸ್‌ ಕರೆದುಕೊಂಡು ಹೋಗಿ ಎಂದು ಕೈ ಚೆಲ್ಲಿದ್ದರು.

ಇದರಿಂದ ಮತ್ತಷ್ಟು ಗಾಬರಿಗೊಂಡ ಬಾಬು, ಲಾವಣ್ಯ ದಂಪತಿಗೆ ಆ್ಯಂಬುಲೆನ್ಸ್ ಚಾಲಕ ಸಮಾಧಾನಪಡಿಸಿದ್ದಾರೆ. ಬಳಿಕ ಹೊಸಕೋಟೆಯಲ್ಲಿರುವ ಸಿಲಿಕಾನ್ ಸಿಟಿ ಆಸ್ಪತ್ರೆಗೆ ಹೋಗುವಂತೆ ಹೇಳಿದ್ದಾರೆ. ನುರಿತ ವೈದ್ಯರು ಇರುವ ನಿಮ್ಹಾನ್ಸ್‌ ಆಸ್ಪತ್ರೆಯಲ್ಲೆ ಮಗುವನ್ನು ಬದುಕಿಸುವುದು ಕಷ್ಟ ಎಂದಿರುವಾಗ ಬೇರೊಂದು ಆಸ್ಪತ್ರೆಗೆ ಹೋಗಿ ಏನು ಪ್ರಯೋಜನ ಎಂದು ಸ್ನೇಹಿತರು, ಸಂಬಂಧಿಕರು ಹೇಳಿದ್ದಾರೆ. ಆದರೆ ಮಗಳು ಉಳಿಯುತ್ತಾಳೆ ಎಂದಾಗ ಬಾಬು, ಲಾವಣ್ಯ ದಂಪತಿ ಕ್ಷಣವೂ ಯೋಚಿಸದೇ ಸಿಲಿಕಾನ್‌ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

Silicon City Hospital doctors

ಇದನ್ನೂ ಓದಿ: Money Guide: ಎಫ್‌ಡಿಯಲ್ಲಿ ಹೂಡಿಕೆ ಮಾಡುವ ಮುನ್ನ ವಿವಿಧ ಬ್ಯಾಂಕ್‌ಗಳ ಬಡ್ಡಿದರ ಪರಿಶೀಲಿಸಿ

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರದ ಸಿಲಿಕಾನ್ ಸಿಟಿ ಆಸ್ಪತ್ರೆ ವೈದ್ಯರಾದ ಡಾ.ಸುಪ್ರಿತ್ ಮತ್ತು ಡಾ.ಮನೋಹರ್‌ರವರ ನರರೋಗ ತಜ್ಞರ ತಂಡ, ಅಚ್ಚರಿ ಪಡುವ ರೀತಿ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಿ ಮಗುವಿನ ಜೀವ ಉಳಿಸಿದ್ದಾರೆ.

Silicon City Hospital doctors

ವೈದ್ಯ ಲೋಕದಲ್ಲಿ ಅಚ್ಚರಿ ಎನಿಸುವ ಅನೇಕ‌ ಕಾಯಿಲೆಗಳಿವೆ. ಒಂದು ಕಡೆ ವೈದ್ಯರಿಗೆ ಕೆಲವು‌‌ ಕಾಯಿಲೆ ಸವಾಲಾದರೆ, ಕೆಲವು ಕಾಯಿಲೆಯ ಸಕ್ಸಸ್ ರೇಟ್ ವೈದ್ಯರನ್ನು ಮತ್ತಷ್ಟು ಒಳ್ಳೆಯ ಕೆಲಸ ಮಾಡಲು ಪ್ರೇರೇಪಿಸುತ್ತದೆ. ಹೊಸಕೋಟೆ ಸಿಲಿಕಾನ್ ಸಿಟಿ ವೈದ್ಯರ ಸೇವೆಯೇ ಸಾಕ್ಷಿಯಾಗಿದೆ.

ಲಕ್ಷದಲ್ಲಿ ಇಬ್ಬರಿಗೆ ಕಾಣಿಸಿಕೊಳ್ಳುವ “ಅರ್ಟೆರಿಯೊ ವೀನಸ್ ಮಾಲ್ಪರ್ಮೇಷನ್- Alterio Venous Malformation (ಮೆದುಳು ನರಗಳಲ್ಲಿ ಗುಳ್ಳೆಗಳಾಗಿ‌ ಒಡೆದು ಹೋಗಿ ರಕ್ತ ಸೋರುವ ಕಾಯಿಲೆ) ಎಂಬ ಕಾಯಿಲೆಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಡು ಬಡವರಾದ ಅಂಗವಿಕಲರಾದ ಬಾಬು ಲಾವಣ್ಯ ದಂಪತಿ‌ ಇನ್ನೇನು ನಮ್ಮ ಒಬ್ಬಳೆ ಮಗಳು ನಮ್ಮಿಂದ ದೂರ ಆಗುತ್ತೆ ಎಂಬ ಆತಂಕವನ್ನು ಸಿಲಿಕಾನ್ ಸಿಟಿ ಆಸ್ಪತ್ರೆ ವೈದ್ಯರು ದೂರ ಮಾಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
pes university student self harming
ಕ್ರೈಂ29 seconds ago

Student Self Harming: ಪರೀಕ್ಷೆಗೆ ತಡ ಮಾಡಿದ್ದಕ್ಕೆ ನಿಂದನೆ, ನೊಂದ ಎಂಜಿನಿಯರಿಂಗ್‌ ವಿದ್ಯಾರ್ಥಿ ಕಾಲೇಜಿನಲ್ಲೇ ಆತ್ಮಹತ್ಯೆ

Prajwal Revanna Case Prajwal case controlled by Congress government says R Ashok
ರಾಜಕೀಯ7 mins ago

Prajwal Revanna Case: ಕಾಂಗ್ರೆಸ್‌ ಸರ್ಕಾರದಿಂದ ಪ್ರಜ್ವಲ್‌ ಕೇಸ್‌ ನಿಯಂತ್ರಣ; ಡೈವರ್ಟ್‌ ಮಾಡಲು ಬಿಜೆಪಿಗರ ಮೇಲೆ ದಾಳಿ ಎಂದ ಅಶೋಕ್‌!

Himanta Biswa Sarma
ರಾಜಕೀಯ13 mins ago

Himanta Biswa Sarma: ಬಿಜೆಪಿಗೆ ಏಕೆ 400 ಸೀಟುಗಳು ಬೇಕೇಬೇಕು? ಹಿಮಂತ ಬಿಸ್ವ ಶರ್ಮಾ ಉತ್ತರ ಹೀಗಿದೆ!

Facebook, Instagram Down
ತಂತ್ರಜ್ಞಾನ21 mins ago

Facebook, Instagram Down: ಫೇಸ್‌ಬುಕ್‌, ಇನ್​ಸ್ಟಾಗ್ರಾಮ್​ ಸರ್ವರ್​ ಡೌನ್​; ಬಳಕೆದಾರರ ಪರದಾಟ

Madhavi Raje Scindia
ದೇಶ33 mins ago

Madhavi Raje Scindia: ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾಗೆ ಮಾತೃ ವಿಯೋಗ

woman murder case kengeri
ಕ್ರೈಂ42 mins ago

Murder Case: ಪ್ರಿಯತಮನ ಜೊತೆ ಶೋಕಿಗಾಗಿ ಮನೆ ಮಾಲಕಿಯ ಕೊಲೆ ಮಾಡಿದ ಯುವತಿ ಸೆರೆ

Anchor Anushree talking with fans on instagram live
ಕಿರುತೆರೆ43 mins ago

Anchor Anushree: ಖುಷಿಯಾಗಿದ್ರೂ ಕಷ್ಟ, ಸಾಧನೆ ಹೊಗಳಿದ್ರೆ ಬಕೆಟ್‌ ಅಂತೀರಾ: ಅನುಶ್ರೀ ಬೇಸರ

NewsClick case
ದೇಶ1 hour ago

NewsClick Case: ಚೀನಾ ಪರ ಪ್ರಚಾರ; ಬಂಧನದಲ್ಲಿದ್ದ ನ್ಯೂಸ್‌ಕ್ಲಿಕ್‌ ಸಂಸ್ಥಾಪಕ ಪ್ರಬೀರ್‌ ಪುರಕಾಯಸ್ಥ ರಿಲೀಸ್‌

Drone Prathap Special Gift For sangeetha sringeri Birthday
ಕಿರುತೆರೆ1 hour ago

Drone Prathap: ದೀದಿ ಸಂಗೀತಾ ಶೃಂಗೇರಿ ಹುಟ್ಟುಹಬ್ಬಕ್ಕೆ ಡ್ರೋನ್​ ಪ್ರತಾಪ್​ ಸ್ಪೆಷಲ್​ ಗಿಫ್ಟ್​!

gold rate today
ಚಿನ್ನದ ದರ1 hour ago

Gold Rate Today: ಬಂಗಾರದ ಬೆಲೆ ಏರಿಕೆ; ಮಾರುಕಟ್ಟೆ ದರ ಇಂದು ಹೀಗಿದೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ5 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ8 hours ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ18 hours ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 202420 hours ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 202424 hours ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ1 day ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು1 day ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ1 day ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ2 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ2 days ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌