Vastu Tips: ವಾಸ್ತು ದೋಷ ಪರಿಹಾರಕ್ಕೆ ನಿಮ್ಮ ದೇವರ ಕೋಣೆ ಹೀಗಿರಲಿ... - Vistara News

ಲೈಫ್‌ಸ್ಟೈಲ್

Vastu Tips: ವಾಸ್ತು ದೋಷ ಪರಿಹಾರಕ್ಕೆ ನಿಮ್ಮ ದೇವರ ಕೋಣೆ ಹೀಗಿರಲಿ…

Vastu Tips: ಕೆಲವೊಮ್ಮೆ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ವಾಸ್ತು ದೋಷವೂ ಕಾರಣವಾಗುತ್ತದೆ. ಇದರ ಪರಿಹಾರಕ್ಕಾಗಿ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎನ್ನುವ ವಿವರ ಇಲ್ಲಿದೆ.

VISTARANEWS.COM


on

pooja room
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕೆಲವೊಮ್ಮೆ ಎಲ್ಲ ಇದ್ದರೂ ಮಾನಸಿಕ ನೆಮ್ಮದಿ ಎನ್ನುವುದು ಮರೀಚಿಕೆಯಾಗಿರುತ್ತದೆ. ಇನ್ನು ಹಲವು ಬಾರಿ ಯಾವ ಕೆಲಸ ಕೈಗೊಂಡರೂ ಯಶಸ್ಸು ಕಾಣುವುದೇ ಇಲ್ಲ. ಪರಿಶ್ರಮ, ನಿರಂತರ ಪ್ರಯತ್ನದ ಹೊರತಾಗಿಯೂ ಸೋಲು ಬೆಂಬಿಡದೆ ಕಾಡುತ್ತದೆ. ಇದಕ್ಕೆ ವಾಸ್ತು ದೋಷವೂ ಕಾರಣ ಇರಬಹುದು ಎನ್ನುತ್ತಾರೆ ತಜ್ಞರು. ಹಾಗಾದರೆ ಈ ದೋಷವನ್ನು ಪರಿಹರಿಸಲು ನಾವು ದೇವರ ಕೋಣೆಯಲ್ಲಿ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎನ್ನುವ ವಿವರ ಇಂದಿನ ವಾಸ್ತು ಟಿಪ್ಸ್‌ (Vastu Tips)ನಲ್ಲಿದೆ.

ವಿಗ್ರಹಗಳು ಈಶಾನ್ಯ ದಿಕ್ಕಿಗೆ ಮುಖ ಮಾಡಿರಲಿ

ನಿಮ್ಮ ಪೂಜಾ ಕೋಣೆಯಲ್ಲಿನ ದೇವರ ವಿಗ್ರಹ ಯಾವ ದಿಕ್ಕಿಗೆ ಮುಖ ಮಾಡಿದೆ ಎನ್ನುವುದು ಮುಖ್ಯ. ಈಶಾನ್ಯ ಕಡೆಗೆ ದೇವರ ವಿಗ್ರಹ ಮುಖ ಮಾಡಿರುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ. ಅಲ್ಲದೆ ವಿಗ್ರಹಗಳು ಎಂದಿಗೂ ಪರಸ್ಪರ ಮುಖ ಮಾಡುವಂತೆ ಎದುರು ಬದುರಾಗಿರಬಾರದು. ಅಲ್ಲದೆ ವಿಗ್ರಹ ಗೋಡೆಯತ್ತ ಮುಖ ಮಾಡಿರಬಾರದು. ವಿಗ್ರಹದ ಸುತ್ತಲೂ ಸಮರ್ಪಕವಾಗಿ ಗಾಳಿಯಾಡಲಿ. ವಿಗ್ರಹ ಗೋಡೆಯಿಂದ ಕನಿಷ್ಠ ಒಂದೂವರೆ ಇಂಚಾದರೂ ದೂರದಲ್ಲಿರಲಿ. ದೇವರ ಕೋಣೆ ಯಾವತ್ತೂ ಸುವಾಸನೆಯಿಂದ ಕೂಡಿರಲಿ.

ಗೋಡೆಗೆ ಲೈಟ್‌ ಬಣ್ಣ ಇರಲಿ

ದೇವರ ಕೋಣೆಯಲ್ಲಿನ ಬಣ್ಣವೂ ವಾಸ್ತು ಪ್ರಕಾರ ಪ್ರಧಾನ ಪಾತ್ರವಹಿಸುತ್ತದೆ. ಹೀಗಾಗಿ ಗೋಡೆಗಳಿಗೆ ಸೂಕ್ತ ಬಣ್ಣವನ್ನೇ ಆಯ್ಕೆ ಮಾಡಿ. ಬಿಳಿ, ಲೈಟ್‌ ನೀಲಿ, ಹಳದಿ ಮತ್ತು ಕಿತ್ತಳೆ ಬಣ್ಣಗಳನ್ನು ಬಳಿಯಬಹುದು. ಅಂತೆಯೇ ಸ್ಥಳದ ಪಾವಿತ್ರ್ಯವನ್ನು ಹೆಚ್ಚಿಸಲು ಸೂಕ್ಷ್ಮ ಮತ್ತು ಹಿತವಾದ ಬಣ್ಣಗಳನ್ನು ಬಳಸಲು ತಜ್ಞರು ಸೂಚಿಸುತ್ತಾರೆ.

ಇಲ್ಲಿರಲಿ…

ದೇವರ ಕೋಣೆ ಯಾವಾಗಲೂ ನೆಲ ಅಂತಸ್ತಿನಲ್ಲಿರಲಿ. ಅಲ್ಲದೆ ಬಾತ್‌ ರೂಮ್‌ ಮತ್ತು ಮಹಡಿ ಮೆಟ್ಟಿಲುಗಳಿಂದ ದೂರ ಇರಬೇಕು. ವಿಗ್ರಹಗಳನ್ನು ನೆಲದ ಮೇಲಿರಿಸಬೇಡಿ. ವೇದಿಕೆಯನ್ನು ತಂದು ಅದರ ಮೇಲೆ ವಿಗ್ರಹಗಳನ್ನಿಡಿ. ಆದಷ್ಟು ಮರದಿಂದ ಮಾಡಿದ ವೇದಿಕೆಯನ್ನೇ ಬಳಸಿ.

ಬಿರುಕುಬಿಟ್ಟ ವಿಗ್ರಹ ಇಡಲೇಬೇಡಿ

ಬಿರುಕುಬಿಟ್ಟ ವಿಗ್ರಹಗಳನ್ನು ದೇವರ ಕೋಣೆಯಲ್ಲಿ ಬಿಡಿ ಮನೆಯಲ್ಲೇ ಇಡಬಾರದು. ಇದರಿಂದ ಮನೆಯಲ್ಲಿ ಋಣಾತ್ಮಕ ಶಕ್ತಿ ಹೆಚ್ಚಾಗುವ ಸಾಧ್ಯತೆ ಇದೆ. ಇಂತಹ ವಿಗ್ರಹ ಇದ್ದರೆ ಹರಿಯುವ ಶುದ್ಧ ನೀರಿನಲ್ಲಿ ಬಿಟ್ಟು ಬಿಡಿ. ಅದೇ ರೀತಿ ಮೃತ ಹಿರಿಯರ ಫೋಟೊ ದೇವರ ಕೋಣೆಯಲ್ಲಿ ಇರಿಸಬೇಡಿ.

ಬಾಗಿಲು ಇದ್ದರೆ ಉತ್ತಮ

ನೀವು ಪ್ರತ್ಯೇಕ ದೇವರ ಕೋಣೆ ಹೊಂದಿದ್ದರೆ ಅದಕ್ಕೆ ಬಾಗಿಲು ಅಳವಡಿಸಲು ಗಮನ ಹರಿಸಿ. ಪ್ರಾರ್ಥನೆಯ ಸಮಯದಲ್ಲಿ ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳಲು ಇದು ನೆರವಾಗುತ್ತದೆ. ಬಾಗಿಲು ದೇವರ ಕೋಣೆಯ ಉತ್ತರ ಅಥವಾ ಪೂರ್ವ ಗೋಡೆಗೆ ವಿರುದ್ಧವಾಗಿ ಇರಿಸುವುದು ಸೂಕ್ತ.

ದೀಪದ ವ್ಯವಸ್ಥೆ

ವಾಸ್ತು ಪ್ರಕಾರ ಬೆಳಕಿನ ಪಾತ್ರವೂ ನಿರ್ಣಾಯಕ. ನಿಮ್ಮ ಮನೆಯನ್ನು ಚೆನ್ನಾಗಿ ಬೆಳಗಿಸಲು ಮತ್ತು ಬ್ಯಾಕ್ಟೀರಿಯಾ, ಕೀಟಾಣುಗಳಿಂದ ಮುಕ್ತವಾಗಿಡಲು ನೈಸರ್ಗಿಕ ಬೆಳಕು ಒಂದು ಪ್ರಮುಖ ಅಂಶ. ಆದ್ದರಿಂದ ಸಾಧ್ಯವಾದರೆ ನಿಮ್ಮ ಪೂಜಾ ಕೋಣೆಯಲ್ಲಿ ಕಿಟಕಿಯನ್ನು ಅಳವಡಿಸಲು ಪ್ರಯತ್ನಿಸಿ. ಜತೆಗೆ ಸೂರ್ಯ ಮುಳುಗಿದಾಗ ಕೋಣೆಯನ್ನು ಬೆಳಗಿಸಲು ಸಾಂಪ್ರದಾಯಿಕ ಮಣ್ಣಿನ ದೀಪ ಮತ್ತು ಎಲ್ಇಡಿ ಬಲ್ಬ್‌ಗಳನ್ನು ಬಳಸಬಹುದು.

ಇದನ್ನೂ ಓದಿ: Vastu Tips: ಕೆಟ್ಟ ಶಕ್ತಿ ದೂರ ಮಾಡಿ ಪಾಸಿಟಿವ್‌ ಎನರ್ಜಿ ತುಂಬಲು ಆಫೀಸ್‌ನಲ್ಲಿ ಈ ಗಿಡಗಳನ್ನು ಇಡಿ

ಲೋಹದ ಪರಿಕರಗಳು

ಆದಷ್ಟು ಲೋಹಗಳಿಂದ ಮಾಡಿದ ಪರಿಕರಗಳನ್ನೇ ಬಳಸಿ. ಇವು ಹೊರಡಿಸುವ ಶಬ್ದಗಳು ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತವೆ. ಜತೆಗೆ ಚಿಕ್ಕ ಪಾತ್ರೆಯಲ್ಲಿ ನೀರು ತುಂಬಿ ಅದಕ್ಕೆ ಹೂ ಹಾಕಿಡಿ. ಜತೆಗೆ ದೇವರ ಕೋಣೆಯಲ್ಲಿ ಗಂಟೆ, ಕಾಲು ದೀಪ, ತೂಗುವ ದೀಪ ಮತ್ತು ಹೂವಿನ ಹಾರಗಳಿರಲಿ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Paris Olympics 2024: ಭಾರತೀಯ ಅಥ್ಲೀಟ್‌ಗಳ ಡ್ರೆಸ್‌ ಕೋಡ್‌ ವಿನ್ಯಾಸಕ್ಕೆ ಜನರ ಮಿಶ್ರ ಪ್ರತಿಕ್ರಿಯೆ

Paris Olympics 2024: ಪ್ಯಾರಿಸ್‌ ಒಲಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಭಾರತೀಯ ಅಥ್ಲೀಟ್‌ಗಳ ಡ್ರೆಸ್‌ಕೋಡ್‌ ಸಿದ್ಧಪಡಿಸಿದ್ದ ಡಿಸೈನರ್‌ ತರುಣ್‌ ತಹಿಲಿಯಾನಿಯವರ ವಿನ್ಯಾಸಕ್ಕೆ ಒಂದೆಡೆ ಮೆಚ್ಚುಗೆ ದೊರೆತರೆ, ಮತ್ತೊಂದೆಡೆ ಮಹಿಳೆಯೊಬ್ಬರು ಕಮೆಂಟ್‌ ಮೂಲಕ ತೀವ್ರವಾಗಿ ಟೀಕಿಸಿದ್ದಾರೆ. ಯಾಕಾಗಿ ಈ ಟೀಕೆ? ಡ್ರೆಸ್‌ಕೋಡ್‌ ಕಾನ್ಸೆಪ್ಟ್ ಏನಿತ್ತು? ಎಂಬುದರ ಕುರಿತಂತೆ ಇಲ್ಲಿದೆ ವರದಿ.

VISTARANEWS.COM


on

Paris Olympics 2024
ಚಿತ್ರಗಳು: ವೀ ಆರ್‌ ಟೀಮ್‌ ಇಂಡಿಯಾ ಇನ್‌ಸ್ಟಾ ಖಾತೆ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ಯಾರಿಸ್‌ ಒಲಿಂಪಿಕ್ಸ್ ಕ್ರೀಡಾಪಟುಗಳ (Paris Olympics 2024) ಡ್ರೆಸ್‌ಕೋಡ್‌ ಡಿಸೈನ್‌ ಮಾಡಿದ ಬಾಲಿವುಡ್‌ ಡಿಸೈನರ್‌ ತರುಣ್‌ ತಹಿಲಿಯಾನಿಗೆ ಪ್ರಶಂಸೆಯ ಜೊತೆಜೊತೆಗೆ ತೀವ್ರ ಟೀಕೆಯ ಸುರಿಮಳೆಯೂ ಆಗಿದೆ. ಹೌದು, ಕೆಲವರು ಕ್ರೀಡಾಪಟುಗಳ ತಿರಂಗಾ ಕಾನ್ಸೆಪ್ಟ್ ಹೊಂದಿದ ಡ್ರೆಸ್‌ಕೋಡ್‌ ಆಕರ್ಷಕವಾಗಿದೆ. ರಾಷ್ಟ್ರದ ಸಂಸ್ಕೃತಿ ಬಿಂಬಿಸಿದೆ ಎಂದರೇ, ಇನ್ನು ಕೆಲವರು, ಕಳಪೆ ಡಿಸೈನ್‌ ಹೊಂದಿದೆ ಎಂದೆಲ್ಲಾ ತೀವ್ರವಾಗಿ ಟೀಕಿಸಿದ್ದಾರೆ.

ಡಿಸೈನರ್‌ ತರುಣ್‌ ತಹಿಲಿಯಾನಿ ಡಿಸೈನರ್‌ವೇರ್‌ನಲ್ಲಿ ಕಾಣಿಸಿಕೊಂಡ ಅಥ್ಲಿಟ್ಸ್

ಅಂದಹಾಗೆ, ಪ್ಯಾರಿಸ್‌ ಒಲಂಪಿಕ್ಸ್‌ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ, ಅಥ್ಲೀಟ್ಸ್ ಡ್ರೆಸ್‌ ಕೋಡ್‌ಗಳನ್ನು ಬಾಲಿವುಡ್‌ನ ಖ್ಯಾತ ಡಿಸೈನರ್‌ ತರುಣ್‌ ತಹಿಲಿಯಾನಿ ಡಿಸೈನ್‌ ಮಾಡಿದ್ದು, ಈಗಾಗಲೇ ಈ ಉಡುಪಿನಲ್ಲಿ ಕಾಣಿಸಿಕೊಂಡ ಅಥ್ಲಿಟ್‌ ಫೋಟೋಗಳು ಕೂಡ ಜಗಜ್ಹಾಹಿರಾಗಿವೆ. ಕ್ರೀಡಾಪಟುಗಳು ಕೂಡ ಈ ತಿರಂಗಾ ಕಾನ್ಸೆಪ್ಟ್‌ನ ಔಟ್‌ಫಿಟ್ಸ್ ಧರಿಸಿ ಖುಷಿಖುಷಿಯಾಗಿ ಪೋಸ್‌ ಕೂಡ ನೀಡಿ, ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ, ಇವನ್ನು ನೋಡಿದ ಕೆಲವರು ಮಾತ್ರ, ಈ ಡ್ರೆಸ್‌ಕೋಡ್‌ ಕಾನ್ಸೆಪ್ಟ್ ಚೆನ್ನಾಗಿದೆ ಎಂದಿದ್ದಾರೆ, ಮತ್ತೆ ಕೆಲವರು ಕಳಪೆ ಡಿಸೈನ್‌ ಎಂದೆಲ್ಲಾ ಖಾರವಾಗಿ ಕಾಮೆಟ್‌ ಮಾಡಿದ್ದಾರೆ.

ತೀವ್ರವಾಗಿ ಟೀಕೆ ಮಾಡಿದ ಮಹಿಳೆ

ಅದರಲ್ಲೂ ಮಹಿಳೆಯೊಬ್ಬರು, ಹಲೋ ತರುಣ್‌ ತಹಿಲಿಯಾನಿಯವರೇ., ನೀವು ಡಿಸೈನ್‌ ಮಾಡಿರುವ ಸೀರೆ ಮುಂಬಯಿಯ ಸ್ಟ್ರೀಟ್‌ಗಳಲ್ಲಿ, ಕಡಿಮೆ ಬೆಲೆಯ 200 ರೂ.ಗಳ ಸೀರೆಗಳಂತಿವೆ. ಪಾಲಿಸ್ಟರ್‌ ಹಾಗೂ ಇಕ್ಕಟ್‌ ಡಿಸೈನ್‌ಗಳು ತೀರಾ ಸಾಮಾನ್ಯವಾಗಿದೆ. ಇಂತಹ ಡಿಸೈನ್‌ಗಳನ್ನೇನಾದರೂ ನೀವು ಇಂಟರ್ನ್‌ಗಳಿಂದ ಮಾಡಿಸಿದ್ದೀರಾ ಹೇಗೆ? ನಮ್ಮ ರಾಷ್ಟ್ರದ ಸಂಸ್ಕೃತಿ ಬಿಂಬಿಸಲು ಇವು ಸೂಕ್ತವಾಗಿಲ್ಲ! ಎಂಬುದಾಗಿ ಟ್ವೀಟ್‌ ( X ) ಮಾಡುವ ಮೂಲಕ ತೀವ್ರವಾಗಿ ಟೀಕಿಸಿದ್ದಾರೆ. ಇದಕ್ಕೆ ಪೂರಕ ಎಂಬಂತೆ, ಸಾಕಷ್ಟು ಮಂದಿ ಶೇರ್‌ ಮಾಡುವ ಮೂಲಕ ಹಾಗೂ ಇನ್ನೊಂದಿಷ್ಟು ತೆಗಳುವ ಮೂಲಕ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಆದರೆ, ಡಿಸೈನರ್‌ ತರುಣ್‌ ತಹಿಲಿಯಾನಿ ಅವರು ಮಾತ್ರ, ಈ ಡಿಸೈನ್ಸ್ ನಮ್ಮ ಭಾರತವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಲು ಪೂರಕವಾಗುವಂತೆ ವಿನ್ಯಾಸ ಮಾಡಲಾಗಿದೆ ಎಂದು ಮಾಧ್ಯಮವೊಂದಕ್ಕೆ ಕೂಲಾಗಿ ಪ್ರತಿಕ್ರಿಯಿಸಿದ್ದಾರೆ.

ಕ್ರೀಡಾಪಟುಗಳ ಸೀರೆ & ಕುರ್ತಾ ಡಿಸೈನ್ಸ್

ಮಹಿಳಾ ಅಥ್ಲಿಟ್‌ಗಳಿಗೆ ಇಕ್ಕಟ್‌ ಪ್ರಿಂಟ್ಸ್‌ನಿಂದ ಸ್ಪೂರ್ತಿಗೊಂಡ ತಿರಂಗಾ ಶೇಡ್‌ನಲ್ಲಿ ಬಾರ್ಡರ್‌ ವಿನ್ಯಾಸಗೊಳಿಸಲಾಗಿತ್ತು. ನ್ಯಾಚುರಲ್‌ ಫ್ಯಾಬ್ರಿಕ್‌ನಿಂದ ಸಿದ್ಧಪಡಿಸಿದ ಶ್ವೇತ ವರ್ಣದ ಕುರ್ತಾಗೆ ಹೊಂದುವಂತಹ ಬಂಡಿ ಜಾಕೆಟ್‌ನಲ್ಲಿ ಮೆನ್ಸ್ ಟೀಮ್‌ ಕಾಣಿಸಿಕೊಂಡಿತ್ತು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಆರೋಗ್ಯ

Vaccine for HIV: ವರ್ಷಕ್ಕೆರಡು ಬಾರಿ ಈ ಇಂಜೆಕ್ಷನ್‌ ತೆಗೆದುಕೊಂಡರೆ ಎಚ್‌ಐವಿ ಭಯವೇ ಬೇಡ!

Vaccin for Hiv: ಪ್ರಯೋಗದಲ್ಲಿರುವ ಚುಚ್ಚುಮದ್ದೊಂದು ಎಚ್‌ಐವಿ ಸೋಂಕು ಅಂಟದಂತೆ ತಡೆಯುವಲ್ಲಿ ಶೇ. ನೂರರಷ್ಟು ಸಾಮರ್ಥ್ಯವನ್ನು ತೋರಿಸಿದ್ದು, ಈ ಮಾರಕ ರೋಗವನ್ನು ತಡೆಯುವಲ್ಲಿ ಹೊಸ ಆಶಾಕಿರಣವೊಂದು ಮೂಡಿದೆ. ಎಲ್ಲಿ, ಯಾರ ಮೇಲೆ ನಡೆದ ಪ್ರಯೋಗಗಳಿವು? ಏನೀ ಅಧ್ಯಯನದ ವಿವರಗಳು? ಇಲ್ಲಿದೆ ಮಾಹಿತಿ.

VISTARANEWS.COM


on

Vaccin for Hiv
Koo

ಎಚ್‌ಐವಿ ಸೋಂಕು ಬಾರದಂತೆ (Vaccine for HIV) ತಡೆಯುವಲ್ಲಿ ಹೊಸ ಆಶಾಕಿರಣವೊಂದು ಕಂಡು ಬಂದಿದ್ದು, ವರ್ಷಕ್ಕೆ ಎರಡು ಡೋಸ್‌ನಂತೆ ನೀಡಲಾಗುತ್ತಿರುವ ಚುಚ್ಚುಮದ್ದೊಂದು ಕಿಶೋರಿಯರು ಮತ್ತು ಯುವತಿಯರಲ್ಲಿ ಸೋಂಕುಗಳನ್ನು ಪೂರ್ಣ ಪ್ರಮಾಣದಲ್ಲಿ ತಡೆಗಟ್ಟುವ ಭರವಸೆಯನ್ನು ಮೂಡಿಸಿದೆ. ಈಗಾಗಲೇ ಮೂರನೇ ಹಂತದ ಪ್ರಯೋಗದಲ್ಲಿರುವ ಲೇನಕಾಪವಿರ್‌ (lenacapavir) ಎನ್ನುವ ಚುಚ್ಚುಮದ್ದಿನ ಬಗೆಗೆ ಆಫ್ರಿಕಾದಲ್ಲಿ ನಡೆಸಲಾದ ಪ್ರಯೋಗದ ದತ್ತಾಂಶಗಳು ಈ ಹೊಸ ಭರವಸೆಯನ್ನು ಮೂಡಿಸಿವೆ. ಈ ಚುಚ್ಚುಮದ್ದನ್ನು ಎಚ್‌ಐವಿ ಸೋಂಕು ಇಲ್ಲದಿರುವ ಸುಮಾರು 5000 ಯುವತಿಯರು ಮತ್ತು ಹದಿಹರೆಯದ ಹುಡುಗಿಯರಿಗೆ ನೀಡಲಾಗಿತ್ತು. ಈ ಅಧ್ಯಯನ ನಡೆಯುತ್ತಿರುವಾಗ ಇವರಾರಿಗೂ ಎಚ್‌ಐವಿ ಸೋಂಕು ಹೊಸದಾಗಿ ಅಂಟಿಲ್ಲ ಎನ್ನುವುದು, ಈ ಸೋಂಕನ್ನು ಶೇ. ನೂರರಷ್ಟು ತಡೆಯಲು ಸಾಧ್ಯವಾಗುವ ಆಸೆಯನ್ನು ಹುಟ್ಟಿಸಿದೆ. ಎಚ್‌ಐವಿ ಸೋಂಕುಗಳನ್ನು ತಡೆಗಟ್ಟಲು ಟ್ರುವಾಡದಂಥ ಮಾತ್ರೆಗಳು ಈಗಾಗಲೇ ಬಳಕೆಯಲ್ಲಿವೆ. ಈ ಭೀತಿಯನ್ನು ಕಡಿಮೆ ಮಾಡುವ ಇಂಜೆಕ್ಷನ್‌ಗಳು ಸಹ ಈಗಾಗಲೇ ಚಾಲ್ತಿಯಲ್ಲಿವೆ.

HIV vaccine

ಏನಿದರ ಪ್ರಾಮುಖ್ಯತೆ?

ಈ ಸೂಜಿಮದ್ದಿನ ಪ್ರಾಮುಖ್ಯತೆಯನ್ನು ಅರಿಯುವುದಕ್ಕೆ ಪ್ರಯೋಗದ ವಿವರಗಳನ್ನು ಚುಟುಕಾಗಿಯಾದರೂ ತಿಳಿದುಕೊಳ್ಳಬೇಕು. ದಕ್ಷಿಣ ಆಫ್ರಿಕಾ ಮತ್ತು ಉಗಾಂಡ ದೇಶಗಳ ಯುವತಿಯರು ಮತ್ತು ಕಿಶೋರಿಯರನ್ನು ಒಳಗೊಂಡು ಈ ಪ್ರಯೋಗ ನಡೆಸಲಾಗಿದೆ. ಈ ಪ್ರದೇಶಗಳಲ್ಲಿ ಎಚ್‌ಐವಿ ಸೋಂಕು ತೀರಾ ವ್ಯಾಪಕವಾಗಿದ್ದು, ಅರಿವು ಮತ್ತು ಮುನ್ನೆಚ್ಚರಿಕೆಯ ಕೊರತೆಯೇ ಇದಕ್ಕೆ ಪ್ರಮುಖ ಕಾರಣವೆಂದು ಹೇಳಬಹುದು. 26 ವಾರಗಳ ಅವಧಿಯಲ್ಲಿ ಒಂದು ಬಾರಿಯಂತೆ ಲೇನಕಾಪವಿರ್‌ ಇಂಜೆಕ್ಷನ್‌ ನೀಡಿದ ಒಂದು ಗುಂಪು, ಖಾಲಿ ಇಂಜೆಕ್ಷನ್‌ ನೀಡಿದ ಇನ್ನೊಂದು ಗುಂಪು, ನಿತ್ಯವೂ ಎಚ್‌ಐವಿ ನಿರೋಧಕ ಮಾತ್ರೆ ತೆಗೆದುಕೊಳ್ಳುವ ಮತ್ತೊಂದು ಗುಂಪುಗಳು ಅಧ್ಯಯನಕ್ಕೆ ಒಳಪಟ್ಟಿದ್ದವು.

ಪ್ರಯೋಗ ಯಶಸ್ವಿ

26 ವಾರಗಳ ನಂತರ ಈ ಗುಂಪುಗಳನ್ನು ಪರಿಶೀಲಿಸಿದಾಗ 55 ಮಂದಿಗೆ ಸೋಂಕು ಉಂಟಾಗಿತ್ತು. ಅದರಲ್ಲಿ ಲೇನಕಾಪವಿರ್‌ ತೆಗೆದುಕೊಂಡಿದ್ದ ಗುಂಪಿನಲ್ಲಿ ಮಾತ್ರ ಯಾರೊಬ್ಬರಿಗೂ ಸೋಂಕು ತಾಗಿರಲಿಲ್ಲ. ಉಳಿದ ಗುಂಪುಗಳಲ್ಲಿ- ಒಂದರಲ್ಲಿ 39 ಮಂದಿಗೆ, ಇನ್ನೊಂದರಲ್ಲಿ 16 ಮಂದಿಗೆ ಸೋಂಕು ಅಂಟಿತ್ತು. ಹಾಗಾಗಿ ಎಚ್‌ಐವಿ ಹೊಸದಾಗಿ ಅಂಟದಂತೆ ತಡೆಯುವಲ್ಲಿ ಈ ಔಷಧಿ ಶೇ. ನೂರರಷ್ಟು ಪರಿಣಾಮ ಬೀರಬಹುದು ಎಂಬ ಭರವಸೆ ಇಡೀ ಜಗತ್ತಿನ ಸಂಶೋಧಕರ ಪಾಲಿಗೆ ಮಹತ್ವದ್ದೆನಿಸಿದೆ.
ಯುವತಿಯರಲ್ಲಿ ಮಾತ್ರವೇ ಈ ಔಷಧಿ ಕೆಲಸ ಮಾಡುತ್ತದೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ. ಇದನ್ನು ಪುರುಷರಿಗೆ ನೀಡಿ ನಡೆಸಲಾಗುತ್ತಿರುವ ಅಧ್ಯಯನ ಇನ್ನೂ ಚಾಲ್ತಿಯಲ್ಲಿದೆ. ಅಲ್ಲಿಂದ ಹೊರಹೊಮ್ಮುವ ದತ್ತಾಂಶಗಳ ಬಗೆಗೂ ಸಂಶೋಧಕರು ಕುತೂಹಲ ಹೊಂದಿದ್ದಾರೆ. ಮುಂದಿನ ಹಂತದ ಪ್ರಯೋಗಗಳಲ್ಲಿ ಪುರುಷರು, ಲಿಂಗ ಬದಲಾಯಿಸಿಕೊಂಡಿರುವ ಮತ್ತು ಲಿಂಗತ್ವ ಅಲ್ಪಸಂಖ್ಯಾತರನ್ನೂ ಒಳಗೊಳ್ಳಲಾಗಿದೆ. ಅರ್ಜೆಂಟೀನಾ, ಬ್ರೆಜಿಲ್, ಮೆಕ್ಸಿಕೊ, ಪೆರು, ಥಾಯ್ಲೆಂಡ್, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ನಡೆಯುತ್ತಿದೆ.

ಚುಚ್ಚು ಮದ್ದಿನಿಂದ ರಕ್ಷಣೆ

ಈಗಾಗಲೇ ಪರಿಣಾಮಕಾರಿ ಎನಿಸಿಕೊಂಡಿರುವ Pre-exposure prophylaxis (or PrEP) ಮಾತ್ರೆಗಳ ಜೊತೆಗೆ, ಈ ಚುಚ್ಚುಮದ್ದು ಸಹ ಹೆಚ್ಚಿನ ರಕ್ಷಣೆಯನ್ನು ನೀಡಲಿದೆ. PrEP ಮಾತ್ರೆಗಳನ್ನು ಪ್ರತಿದಿನ ಅಥವಾ ವೈದ್ಯರು ಸೂಚಿಸಿದ ರೀತಿಯಲ್ಲೇ ತೆಗೆದುಕೊಳ್ಳುವುದು ಅಗತ್ಯ. ಆದರೆ ಈ ಹೊಸ ಭರವಸೆಯನ್ನು ಆರು ತಿಂಗಳಿಗೊಮ್ಮೆ ಮಾತ್ರವೇ ತೆಗೆದುಕೊಂಡರೆ ಸಾಕು ಎನ್ನುವುದು, ಬಳಕೆಯನ್ನು ಇನ್ನಷ್ಟು ಸರಳಗೊಳಿಸುವ ಮತ್ತು ಪರಿಣಾಮಕಾರಿ ಫಲಿತಾಂಶವನ್ನು ಪಡೆಯುವ ನಿಟ್ಟಿನಲ್ಲಿ ಮಹತ್ವದ್ದು ಎನಿಸಿದೆ.

ಇದನ್ನೂ ಓದಿ: Health Tips Kannada: ಚಹಾ, ಕಾಫಿಯನ್ನು ಯಾವ ಸಮಯದಲ್ಲಿ ಕುಡಿಯಬಾರದು ಗೊತ್ತೇ?

ಈಗ ಪ್ರಯೋಗದಲ್ಲಿರುವ ಲೇನಕಾಪವಿರ್‌ ಚುಚ್ಚುಮದ್ದು ವಿಶ್ವದಲ್ಲಿ ಎಲ್ಲಿಯೂ ಎಚ್‌ಐವಿ ತಡೆಯುವ ಔಷಧಿಯೆಂದು ಮಾನ್ಯತೆ ಪಡೆದಿಲ್ಲ. ಆದರೆ ಇನ್ನೂ ಕೆಲವು ಔಷಧಿಗಳ ಜೊತೆಯಲ್ಲಿ ಇದನ್ನೂ ನೀಡುವುದಕ್ಕೆ ಅಮೆರಿಕದಲ್ಲಿ ಪರವಾನಗಿ ಇದೆ. ಇದಕ್ಕೆ ವರ್ಷಕ್ಕೆ ಸುಮಾರು 40,000 ಡಾಲರ್‌ ವೆಚ್ಚ ಈಗಾಗಲೇ ತಗುಲುತ್ತಿದೆ. ಒಂದೊಮ್ಮೆ ಎಚ್‌ಐವಿ ಸೋಂಕು ಬಾರದಂತೆ ತಡೆಯುವಲ್ಲಿ ಇದು ಸಂಪೂರ್ಣ ಯಶಸ್ವಿ ಎಂದಾದರೆ, ಈ ವೆಚ್ಚವನ್ನು ತಗ್ಗಿಸದಿದ್ದರೆ ಬಳಕೆದಾರರಿಗೆ ಪ್ರಯೋಜನ ಆಗದಿರಬಹುದು ಎನ್ನುತ್ತಾರೆ ಅಧ್ಯಯನಕಾರರು.

Continue Reading

ದೇಶ

Chandipura Virus: ಗುಜರಾತ್‌ನಲ್ಲಿ ತೀವ್ರವಾದ ಎನ್ಸೆಫಾಲಿಟಿಸ್ ಸಿಂಡ್ರೋಮ್‌ಗೆ 48 ಬಲಿ; 39 ಮಂದಿಗೆ ಚಾಂದಿಪುರ ವೈರಸ್ ದೃಢ

Chandipura Virus: ಕಳೆದ ಒಂದು ತಿಂಗಳಲ್ಲಿ ಗುಜರಾತ್‌ನಲ್ಲಿ ಮಾರಣಾಂತಿಕ ತೀವ್ರವಾದ ಎನ್ಸೆಫಾಲಿಟಿಸ್ ಸಿಂಡ್ರೋಮ್‌ನಿಂದ ಕನಿಷ್ಠ 48 ಮಂದಿ ಮೃತಪಟ್ಟಿದ್ದಾರೆ. ಆ ಪೈಕಿ ಹೆಚ್ಚಿನವರ ಸಾವಿಗೆ ಚಾಂದಿಪುರ ವೈರಸ್ ಕಾರಣ ಎಂದು ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಗುಜರಾತ್‌ನಲ್ಲಿ ಜುಲೈ 26ರವರೆಗೆ ಒಟ್ಟು 127 ಎಇಎಸ್ (AES) ಪ್ರಕರಣಗಳು ವರದಿಯಾಗಿವೆ.

VISTARANEWS.COM


on

Koo

ಗಾಂಧಿನಗರ: ಕಳೆದ ಒಂದು ತಿಂಗಳಲ್ಲಿ ಗುಜರಾತ್‌ (Gujarat)ನಲ್ಲಿ ಮಾರಣಾಂತಿಕ ತೀವ್ರವಾದ ಎನ್ಸೆಫಾಲಿಟಿಸ್ ಸಿಂಡ್ರೋಮ್ (Acute Encephalitis Syndrome)ನಿಂದ ಕನಿಷ್ಠ 48 ಮಂದಿ ಮೃತಪಟ್ಟಿದ್ದಾರೆ. ಆ ಪೈಕಿ ಹೆಚ್ಚಿನವರ ಸಾವಿಗೆ ಚಾಂದಿಪುರ ವೈರಸ್ (Chandipura Virus) ಕಾರಣ ಎಂದು ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಗುಜರಾತ್‌ನಲ್ಲಿ ಜುಲೈ 26ರವರೆಗೆ ಒಟ್ಟು 127 ಎಇಎಸ್ (AES) ಪ್ರಕರಣಗಳು ವರದಿಯಾಗಿವೆ. ಈ ಪೈಕಿ 39 ಮಂದಿಗೆ ಚಾಂದಿಪುರ ವೈರಸ್ (CHPV) ಇರುವುದು ದೃಢಪಟ್ಟಿದೆ. ಪಾಸಿಟಿವ್ ಪ್ರಕರಣಗಳನ್ನು ಹೊಂದಿರುವ ಸಬರ್ಕಾಂತ ಮತ್ತು ಪಚ್ಮಹಲ್‌ನಲ್ಲಿ ತಲಾ 6, ಅರಾವಳಿ ಮತ್ತು ಖೇಡಾದಲ್ಲಿ ತಲಾ 3, ಮೆಹ್ಸಾನಾದಲ್ಲಿ 4, ಅಹಮದಾಬಾದ್ ನಗರದಲ್ಲಿ 3 ಮತ್ತು ದಾಹೋಡ್‌ನಲ್ಲಿ 2 ಪ್ರಕರಣಗಳು ವರದಿಯಾಗಿವೆ.

ಜುಲೈ 17ರಂದು ಅರಾವಳಿಯ ಮೋಟಾ ಕಾಂತರಿಯಾ ಎಂಬ ನಾಲ್ಕು ವರ್ಷದ ಮಗು ಸಬರ್ಕಾಂತದ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಇದು ಚಾಂದಿಪುರ ವೈರಸ್‌ನಿಂದ ರಾಜ್ಯದಲ್ಲಿ ಸಂಭವಿಸಿದ ಮೊದಲ ಸಾವಿನ ಪ್ರಕರಣ ಎಂದು ಗುಜರಾತ್ ಸರ್ಕಾರ ದೃಢಪಡಿಸಿತ್ತು. ಮುಖ್ಯವಾಗಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಪರಿಣಾಮ ಬೀರುವ ಚಾಂದಿಪುರ ವೈರಸ್ ಸದ್ಯ ಆತಂಕಕ್ಕೆ ಕಾರಣವಾಗಿದೆ. ಸೋಂಕು ತಗುಲಿದಾಗ ಜ್ವರ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಮಾರಣಾಂತಿಕವಾಗುತ್ತದೆ.

ಮೆದುಳಿನ ಉರಿಯೂತ

ಎಇಎಸ್ ಮೆದುಳಿನ ಉರಿಯೂತವನ್ನು ಉಂಟು ಮಾಡುತ್ತದೆ. ಜತೆಗೆ ತೀವ್ರವಾದ ಎನ್ಸೆಫಾಲಿಟಿಕ್ ಕಾಯಿಲೆಗೆ ಕಾರಣವಾಗುತ್ತದೆ. ಇದು ಹರ್ಪಿಸ್ ಸಿಂಪ್ಲೆಕ್ಸ್ ವೈರಸ್, ಎಂಟರೊವೈರಸ್‌, ಮತ್ತು ಚಾಂದಿಪುರ ವೈರಸ್‌ಗಳಿಂದ ಕಾಣಿಸಿಕೊಳ್ಳುತ್ತದೆ. ಪ್ರಸ್ತುತ ಈ ರೋಗ ಲಕ್ಷಣವಿರುವ 54 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 26 ಮಂದಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ರೋಗ ಲಕ್ಷಣ

ಚಾಂದಿಪುರ ವೈರಸ್ ಸೋಂಕು ಬಾಧಿತರಲ್ಲಿ ಸಾಮಾನ್ಯ ಜ್ವರದ ಲಕ್ಷಣವೇ ಕಂಡು ಬರುತ್ತದೆ. ಬಾಧಿತರಲ್ಲಿ ದಿಢೀರ್ ಜ್ವರ, ತೀವ್ರ ತಲೆನೋವು, ವಾಂತಿ, ಸ್ನಾಯು ಸೆಳೆತ, ಪ್ರಜ್ಞಾಹೀನತೆ, ಅರೆನಿದ್ರಾವಸ್ಥೆ ಕಂಡು ಬರುತ್ತದೆ. ತಕ್ಷಣ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಮಾರಣಾಂತಿಕವಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ರಾಬ್ಡೋವೆರಿಡೆ ವರ್ಗಕ್ಕೆ ಸೇರಿದ ವೈರಸ್ ಈ ರೋಗಕ್ಕೆ ಕಾರಣ.

ಆರೋಗ್ಯ ಅಧಿಕಾರಿಗಳಿಂದ ಕ್ರಮ

ಆರೋಗ್ಯ ಅಧಿಕಾರಿಗಳು ಸಕ್ರಿಯವಾಗಿ ಕಾರ್ಯ ಪ್ರವೃತ್ತರಾಗಿದ್ದು, ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದಾರೆ. ರಾಜ್ಯವು ಕ್ಷಿಪ್ರ ಪ್ರತಿಕ್ರಿಯೆ ತಂಡಗಳನ್ನು ಸಜ್ಜುಗೊಳಿಸಿದೆ. ಪೀಡಿತ ಪ್ರದೇಶಗಳು 41,000ಕ್ಕೂ ಹೆಚ್ಚು ಮನೆಗಳನ್ನು ಒಳಗೊಂಡಿದೆ. ರಾಜ್ಯಾದ್ಯಂತ ಸುಮಾರು 5,00,000 ಮನೆಗಳು, 19,000ಕ್ಕೂ ಹೆಚ್ಚು ಶಾಲೆಗಳು ಮತ್ತು 21,000ಕ್ಕೂ ಹೆಚ್ಚು ಅಂಗನವಾಡಿಗಳಲ್ಲಿ ಕೀಟನಾಶಕಗಳನ್ನು ಸಿಂಪಡಿಸುವ ಕಾರ್ಯ ನಡೆಯುತ್ತಿದೆ. ಮಲಾಥಿಯಾನ್ ಫಾಗಿಂಗ್, ಸ್ಯಾಂಡ್ ಫ್ಲೈಗಳು ಮತ್ತು ಸೊಳ್ಳೆಗಳ ಸಂಖ್ಯೆಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ವಿಶೇಷವಾಗಿ ಹೆಚ್ಚಿನ ಪ್ರಕರಣಗಳು ವರದಿಯಾದ ಪ್ರದೇಶಗಳಲ್ಲಿ ತಡೆಗಟ್ಟುವ ಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Chandipura Virus: ಡೆಂಗ್ಯೂ ಹಾವಳಿ ನಡುವೆ ಕಾಡುತ್ತಿದೆ ಚಾಂದಿಪುರ ವೈರಸ್; ಇದುವರೆಗೆ 6 ಮಕ್ಕಳು ಬಲಿ: ಏನಿದರ ಲಕ್ಷಣ?

Continue Reading

ಆರೋಗ್ಯ

Health Tips Kannada: ಚಹಾ, ಕಾಫಿಯನ್ನು ಯಾವ ಸಮಯದಲ್ಲಿ ಕುಡಿಯಬಾರದು ಗೊತ್ತೇ?

Health Tips Kannada: ಎದ್ದ ಕೂಡಲೇ ಚಹಾ ಕುಡಿಯದಿದ್ದರೆ ಅದೇನೋ ಕಳೆದುಕೊಂಡ ಭಾವ ಹಲವರನ್ನು ಕಾಡುತ್ತದೆ. ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದು ಒಳ್ಲೆಯದಲ್ಲ ಎಂಬುದು ಗೊತ್ತಿದ್ದರೂ, ಈ ಚಹಾ ಕುಡಿಯುವ ಅಭ್ಯಾಸವನ್ನು ಬಿಡಲು ಬಹುತೇಕರಿಗೆ ಸಾಧ್ಯವಾಗುವುದಿಲ್ಲ. ಅದೇನೇ ಆಗಲಿ, ಚಹಾ ಮಾತ್ರ ಬೇಕು. ಆದರೆ, ನೆನಪಿಡಿ. ಎಲ್ಲ ಸಮಯದಲ್ಲೂ ಚಹಾ ಕಾಫಿ ಸೇವನೆ ಒಳ್ಳೆಯದಲ್ಲ.

VISTARANEWS.COM


on

Health Tips Kannada
Koo

ಬಹುತೇಕರಿಗೆ ದಿನದ ಆರಂಭ ಎಂದರೆ ಒಂದು ಕಪ್‌ ಚಹಾ ಅಥವಾ ಕಾಫಿ. ಇದೊಂದು ಸಂಪ್ರದಾಯದಂತೆ ಎಷ್ಟೋ ವರ್ಷಗಳಿಂದ ನಮ್ಮನ್ನು ಪೊರೆಯುತ್ತಿದೆ. ಎದ್ದ ಕೂಡಲೇ ಚಹಾ ಕುಡಿಯದಿದ್ದರೆ ಅದೇನೋ ಕಳೆದುಕೊಂಡ ಭಾವ ಹಲವರನ್ನು ಕಾಡುತ್ತದೆ. ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದು ಒಳ್ಲೆಯದಲ್ಲ ಎಂಬುದು ಗೊತ್ತಿದ್ದರೂ, ಈ ಚಹಾ ಕುಡಿಯುವ ಅಭ್ಯಾಸವನ್ನು ಬಿಡಲು ಬಹುತೇಕರಿಗೆ ಸಾಧ್ಯವಾಗುವುದಿಲ್ಲ. ಅದೇನೇ ಆಗಲಿ, ಚಹಾ ಮಾತ್ರ ಬೇಕು. ಆದರೆ, ನೆನಪಿಡಿ. ಎಲ್ಲ ಸಮಯದಲ್ಲೂ ಚಹಾ ಕಾಫಿ ಸೇವನೆ ಒಳ್ಳೆಯದಲ್ಲ. ಕೆಲವು ಸಮಯಗಳಲ್ಲಿ ಇವುಗಳ ಸೇವನೆ ಮಾಡುವುದರಿಂದ ನಾವು ಸೇವಿಸುವ ಆಹಾರಗಳಲ್ಲಿರುವ ಪೋಷಕಾಂಶಗಳು ದೇಹಕ್ಕೆ ಸರಿಯಾಗಿ ಸೇರದೆ ನಷ್ವಾಗಬಹುದು. ಇನ್ನೂ ಕೆಲವೊಮ್ಮೆ ಇವು ಜೀರ್ಣಕ್ರಿಯೆಯನ್ನೇ ಬಾಧಿಸಬಹುದು. ಅಷ್ಟೇ ಅಲ್ಲ, ನಮ್ಮ ದೇಹದ ಹಲವು ಸಮಸ್ಯೆಗಳಿಗೆ ಮೂಲ ಕಾರಣ ಈ ನಮ್ಮ ಕೆಟ್ಟ ಅಭ್ಯಾಸದಿಂದಲೂ ಇರಬಹುದು. ಬನ್ನಿ, ಚಹಾ ಹಾಗೂ ಕಾಫಿಯನ್ನು ನಾವು ಯಾವ ಸಮಯದಲ್ಲಿ ಕುಡಿಯಬಾರದು (Health Tips Kannada) ಎಂಬುದನ್ನು ನೋಡೋಣ.

drink tea

ಬೆಳಗ್ಗೆ ಎದ್ದ ಕೂಡಲೇ

ಬಹುತೇಕ ಎಲ್ಲರಿಗೂ ಇರುವ ಅಭ್ಯಾಸವಿದು. ಬೆಳಗ್ಗೆ ಎದ್ದ ಕೂಡಲೇ ಒಂದು ಕಪ್‌ ಚಹಾ ಕೈಯಲ್ಲಿದ್ದರೇ ದಿನ ಆರಂಭವಾದ ಹಾಗೆ. ಈ ಅಭ್ಯಾಸ ಅನೇಕರಿಗಿದೆ. ಇದನ್ನು ಬಿಡುವುದು ಕಷ್ಟ ನಿಜವೇ. ಆದರೆ, ಬೆಳಗ್ಗೆ ಎದ್ದ ಕೂಡಲೇ ಚಹಾ ಅಥವಾ ಕಾಫಿಯನ್ನು ಹೊಟ್ಟೆಗಿಳಿಸುವುದರಿಂದ ಇದರಲ್ಲಿರುವ ಕೆಫೀನ್‌ ಅಂಶವು ಖಾಲಿ ಹೊಟ್ಟೆಯ ವ್ಯವಸ್ಥೆಯನ್ನು ಹದಗೆಡಿಸುತ್ತದೆ. ಹಾರ್ಮೋನ್‌ ಉತ್ಪಾದನೆಯ ವ್ಯವಸ್ಥೆಯನ್ನೂ ಇದೂ ಹದಗೆಡಿಸುವುದಲ್ಲದೆ, ಇದರಿಂದ ಮಾನಸಿಕವಾಗಿಯೂ ಒತ್ತಡ ಇತ್ಯಾದಿ ಸಮಸ್ಯೆಗಳು ಬರಬಹುದು.

ಇದನ್ನೂ ಓದಿ: Contact Lens: ಕಾಂಟ್ಯಾಕ್ಟ್‌ ಲೆನ್ಸ್‌ ಬಳಸುತ್ತೀರಾ? ಈ ವಿಷಯಗಳು ತಿಳಿದಿರಲಿ!

ಊಟ ತಿಂಡಿಯ ಜೊತೆಗೆ

ನಿಮಗೆ ಊಟ ತಿಂಡಿಯ ಜೊತೆಗೆ ಕಾಫಿ ಅಥವಾ ಚಹಾ ಕುಡಿಯುವ ಅಭ್ಯಾಸ ಇದ್ದರೆ ಮತ್ತೊಮ್ಮೆ ಯೋಚಿಸಿ. ಚಹಾ ಮತ್ತು ಕಾಫಿ ಆಮ್ಲೀಯ ಗುಣವನ್ನೂ ಹೊಂದಿರುವುದರಿಂದ ಇದು ನಿಮ್ಮ ಜೀರ್ಣಕ್ರಿಯೆಯನ್ನೇ ಹಾಳುಗೆಡವಬಹುದು. ನೀವು ಪ್ರೊಟೀನ್‌ಯುಕ್ತ ಆಹಾರ ತೆಗೆದುಕೊಂಡರೆ, ಅದರ ಜೊತೆಗೆ ಚಹಾ/ಕಾಫಿಯನ್ನೂ ಸೇವಿಸಿದರೆ ಪ್ರೊಟೀನ್‌ ನಿಮ್ಮ ದೇಹದಕ್ಕೆ ಒದಗದು. ಅಷ್ಟೇ ಅಲ್ಲ, ಪ್ರೊಟೀನ್‌ ಕರಗಲು ಕಷ್ಟವಾಗುತ್ತದೆ. ನಿಮ್ಮ ಆಹಾರದಲ್ಲಿರುವ ಕಬ್ಬಿಣದಂಶವೂ ಕೂಡಾ ದೇಹಕ್ಕೆ ಸೇರಲು ಕಷ್ಟವಾಗಬಹುದು. ಹಾಗಾಗಿ, ಆಹಾರದ ಜೊತೆಗೆ ಚಹಾ ಕಾಫಿ ಸೇವನೆ ಮಾಡುವುದರಿಂದ ನಿಮ್ಮ ಆಹಾರದಲ್ಲಿರುವ ಪೋಷಕಾಂಶಗಳು ಕರಗಿ ನಿಮ್ಮ ದೇಹಕ್ಕೆ ಸೇರುವ ಕ್ರಿಯೆ ನಿಧಾನವಾಗುತ್ತದೆ. ಹಾಗೆಯೇ ಪೋಷಕಾಂಶಗಳು ನಷ್ಟವಾಗಲೂಬಹುದು.

drink coffe

ಸಂಜೆ ನಾಲ್ಕು ಗಂಟೆಯ ನಂತರ

ಸಂಜೆ ಕಾಫಿ ಅಥವಾ ಚಹಾ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡ ಮಂದಿ ಇಲ್ಲೊಮ್ಮೆ ಕೇಳಿ. ಚಹಾ ಅಥವಾ ಕಾಫಿಯನ್ನು ನೀವು ಮಲಗುವುದಕ್ಕೂ ಹತ್ತು ಗಂಟೆಗಳ ಮೊದಲು ಸೇವಿಸಬೇಕಂತೆ. ಆದರೆ ಇದು ಸಾಧ್ಯವಾಗದಿದ್ದರೆ, ಕನಿಷ್ಟ ಆರು ಗಂಟೆಗಳ ಮೊದಲು ಸೇವಿಸಬಹುದಂತೆ. ಅಂದರೆ, ಸಂಜೆ ನಾಲ್ಕು ಗಂಟೆಗೂ ಮೊದಲು ಕಾಫಿ ಚಹಾ ಸೇವಿಸಿ. ಇದು ನಿಮ್ಮ ನಿದ್ದೆಯ ಗುಣಮಟ್ಟವನ್ನು ಹೆಚ್ಚಿಸುವುದಲ್ಲದೆ, ಪಿತ್ತಕೋಶವನ್ನೂ ಆರೋಗ್ಯವಾಗಿಡುತ್ತದೆ. ಕಾರ್ಟಿಸಾಲ್‌ ಮಟ್ಟವನ್ನೂ ಕಡಿಮೆ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಪ್ರಚೋದಿಸುತ್ತದೆ.
ಈ ಸಮಯವನ್ನು ಹೊರತುಪಡಿಸಿ, ಉಳಿದ ಸಮಯಗಳಲ್ಲಿ ನೀವು ನಿಮ್ಮ ಇಷ್ಟದ ಚಹಾ ಕಾಫಿಯನ್ನು ಕುಡಿಯಬಹುದು. ಆದರೆ, ಇದು ಅತಿಯಾಗದಿರಲಿ. ಅಂದು ದಿನಕ್ಕೆ 300 ಮಿಲಿಗ್ರಾಂಗಿಂತ ಹೆಚ್ಚಿನ ಕೆಫೀನ್‌ ನಿಮ್ಮ ಹೊಟ್ಟೆ ಸೇರದಿರಲಿ. ಸುಮಾರು 150 ಎಂಎಲ್‌ ಕಾಫಿಯಲ್ಲಿ 80ರಿಂದ 120 ಮಿಲಿಗ್ರಾಂ ಕೆಫೀನ್‌ ಇದೆ. ಇನ್‌ಸ್ಟ್ಯಾಂಟ್‌ ಕಾಫಿಯಲ್ಲಿ 50-65 ಎಂಜಿ ಕೆಫೀನ್‌ ಇದ್ದರೆ, ಚಹಾದಲ್ಲಿ 30-65 ಎಂಜಿ ಕೆಫೀನ್‌ ಇದೆ. ಹೀಗಾಗಿ, ಈ ಬಗ್ಗೆ ಎಚ್ಚರ ವಹಿಸಿ ಹಿತಮಿತವಾಗಿ ನಿಮ್ಮ ಪ್ರೀತಿಯ ಪೇಯವನ್ನು ನಿತ್ಯವೂ ಕುಡಿಯಬಹುದು ಎಂಬುದು ತಜ್ಞರ ಮಾತು.

Continue Reading
Advertisement
Paris Olympics 2024
ಫ್ಯಾಷನ್38 seconds ago

Paris Olympics 2024: ಭಾರತೀಯ ಅಥ್ಲೀಟ್‌ಗಳ ಡ್ರೆಸ್‌ ಕೋಡ್‌ ವಿನ್ಯಾಸಕ್ಕೆ ಜನರ ಮಿಶ್ರ ಪ್ರತಿಕ್ರಿಯೆ

Vaccin for Hiv
ಆರೋಗ್ಯ34 mins ago

Vaccine for HIV: ವರ್ಷಕ್ಕೆರಡು ಬಾರಿ ಈ ಇಂಜೆಕ್ಷನ್‌ ತೆಗೆದುಕೊಂಡರೆ ಎಚ್‌ಐವಿ ಭಯವೇ ಬೇಡ!

Physical Assault
ದೇಶ42 mins ago

Physical Assault : ಅಶ್ಲೀಲ ವಿಡಿಯೊಗಳನ್ನು ನೋಡಿ 9 ವರ್ಷದ ತಂಗಿಯನ್ನು ಅತ್ಯಾಚಾರ ಮಾಡಿ ಕೊಂದ 13 ವರ್ಷದ ಬಾಲಕ!

Paris Olympics
ಕ್ರೀಡೆ57 mins ago

Paris Olympics: ಕ್ರೀಡಾ ಗ್ರಾಮದಲ್ಲಿ ಭಾರತದ ಅಥ್ಲೀಟ್ಸ್‌ಗೆ ಆಹಾರ ಕೊರತೆ; ರೆಸ್ಟೋರೆಂಟ್​ನಿಂದ ರೋಟಿ, ದಾಲ್‌ ತರಿಸಿದ ಬಾಕ್ಸರ್​

karnataka Rain
ಮಳೆ60 mins ago

Karnataka Rain : ಮಳೆಗೆ ಮನೆ ಮುಳುಗಡೆಯಾದ ಸುದ್ದಿ ಕೇಳಿ ಮನೆ ಯಜಮಾನ ಹೃದಯಾಘಾತದಿಂದ ಸಾವು

Rahul Gandhi
ದೇಶ1 hour ago

Rahul Gandhi: ನೀಟ್‌ನಲ್ಲಿ ‘ಎಷ್ಟು ವೋಟ್‌’ ಪಡೆದಿರಿ ಎಂದು ವಿದ್ಯಾರ್ಥಿಗಳಿಗೆ ಕೇಳಿದ ರಾಹುಲ್‌ ಗಾಂಧಿ; Video ವೈರಲ್

Gautam Gambhir
ಕ್ರೀಡೆ1 hour ago

Gautam Gambhir : ಗೌತಮ್​ ಗಂಭೀರ್​ಗೆ ವಿಶೇಷ ಸಂದೇಶ ಕಳುಹಿಸಿದ ದ್ರಾವಿಡ್​; ಭಾವುಕರಾದ ನೂತನ ಕೋಚ್​!

Kannada New Movie Nava Digantha latest news
ಸಿನಿಮಾ1 hour ago

Kannada New Movie: ನೆರವೇರಿತು ’ನವ ದಿಗಂತ’ ಚಿತ್ರದ ಮುಹೂರ್ತ

DK Shivakumar
ಕರ್ನಾಟಕ2 hours ago

Brand Bengaluru: ‘ಬ್ರ್ಯಾಂಡ್‌ ಬೆಂಗಳೂರು’ ನಿರ್ಮಾಣಕ್ಕೆ ಡಿಕೆಶಿ ಮಾಸ್ಟರ್‌ಪ್ಲಾನ್;‌ ಇಲ್ಲಿದೆ ಸಭೆಯ ವಿವರ

Drone Prathap Eye surgery for an old woman with her own money
ಬಿಗ್ ಬಾಸ್2 hours ago

Drone Prathap: ನುಡಿದಂತೆ ನಡೆದ ‘ಬಿಗ್ ಬಾಸ್’ ಡ್ರೋನ್ ಪ್ರತಾಪ್; ಸ್ವಂತ ಹಣದಿಂದ ವೃದ್ಧೆಗೆ ಕಣ್ಣು ಆಪರೇಷನ್ !

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

ramanagara news
ರಾಮನಗರ4 hours ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ5 hours ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ23 hours ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ1 day ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ1 day ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ1 day ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್2 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ2 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ2 days ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

ಟ್ರೆಂಡಿಂಗ್‌