Viral News: ನೋವು ಎಂದು ಆಸ್ಪತ್ರೆಗೆ ಹೋದವನ ಮೂಗಿನಿಂದ 150 ಹುಳುಗಳನ್ನು ಹೊರ ತೆಗೆದ ವೈದ್ಯರು! - Vistara News

ವಿದೇಶ

Viral News: ನೋವು ಎಂದು ಆಸ್ಪತ್ರೆಗೆ ಹೋದವನ ಮೂಗಿನಿಂದ 150 ಹುಳುಗಳನ್ನು ಹೊರ ತೆಗೆದ ವೈದ್ಯರು!

Viral News: ತಲೆ ನೋವು, ಪದೇ ಪದೇ ರಕ್ತ ಸ್ರಾವಾಗುತ್ತಿದೆ ಎಂದು ಆಸ್ಪತ್ರೆಗೆ ದಾಖಲಾದವನ ಮೂಗಿನೊಳಗೆ 150ಕ್ಕೂ ಹುಳಗಳಿದ್ದವು!

VISTARANEWS.COM


on

Viral News, Florida Doctors pulls 150 larvae from Patient nose
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಮುಖ ಊದಿಕೊಂಡಿದ್ದಕ್ಕೆ ವ್ಯಕ್ತಿಯ (Florida man) ಮೂಗಿನಿಂದ 150ಕ್ಕೂ ಅಧಿಕ ಹುಳಗಳನ್ನು (live larvae) ವೈದ್ಯರು ಹೊರ ತೆಗೆದ ಘಟನೆ ಅಮೆರಿಕದ ಫ್ಲೋರಿಡಾದಲ್ಲಿ ನಡೆದಿದೆ (Florida Doctors). ಮಾಧ್ಯಮಗಳ ವರದಿಯ ಪ್ರಕಾರ, ತೀವ್ರವಾದ ನೋವು ಮತ್ತು ಮೂಗಿನ ರಕ್ತಸ್ರಾವವನ್ನು ಅನುಭವಿಸಿದ ನಂತರ ರೋಗಿ ಫ್ಲೋರಿಯಾದ ಎಚ್‌ಸಿಎ ಸ್ಮಾರಕ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ವೈದ್ಯರು ಅವರ ಮೂಗಿನಿಂದ ಹುಳುಗಳನ್ನು ಹೊರ ತೆಗೆದಿದ್ದಾರೆ(Viral News).

ಒಂದೆರಡು ಗಂಟೆಗಳಲ್ಲಿ ನನ್ನ ಮುಖವು ಊದಿಕೊಳ್ಳಲು ಪ್ರಾರಂಭಿಸಿತು, ನನ್ನ ತುಟಿಗಳು ಊದಿಕೊಂಡವು, ನನಗೆ ಮಾತನಾಡಲು ಸಾಧ್ಯವಾಗಲಿಲ್ಲ. ನನ್ನ ಇಡೀ ಮುಖವು ಬೆಂಕಿಯಲ್ಲಿ ಉರಿಯುತ್ತಿರುವ ಅನುಭವವಾಗುತ್ತಿತ್ತು ಎಂದು ರೋಗಿಯು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ರೋಗಿಯನ್ನು ಇಎನ್‌ಟಿ ತಜ್ಞ ವೈದ್ಯ ಡೇವಿಡ್ ಕಾರ್ಲಸನ್ ಅವರು ಪರೀಕ್ಷೆ ನಡೆಸಿದರು. ಆಗ ರೋಗಿಯ ಮೂಗಿಯೊಳಗೆ ಏನೋ ಚಲಿಸುತ್ತಿರುವುದನ್ನು ಕಂಡುಕೊಂಡರು. ಕ್ಯಾಮೆರಾ ಮೂಲಕ ಪರೀಕ್ಷಿಸಿದಾಗ ಮೂಗಿನಲ್ಲಿ ಡಜನ್‌ಗಟ್ಟಲೇ ಹುಳುಗಳು ಮೊಗಿನೊಳಗೆ ಇರುವುದು ಗೊತ್ತಾಯಿತು. ಅವರು ಆಹಾರ ನೀಡುತ್ತಿರುವುದನ್ನು ಕಂಡುಕೊಂಡಿದ್ದಾರೆ.

ಮೂಗಿನೊಳಗೆ ಸಣ್ಣ ಮತ್ತು ದೊಡ್ಡ ಗಾತ್ರದ ಹುಳುಗಳಿದ್ದವು ಎಂದು ಡಾ.ಕಾರ್ಲಸನ್ ಅವರು ಹೇಳಿದ್ದಾರೆ. ಪರೀಕ್ಷೆ ವೇಳೆ ರೋಗಿಯು ದೊಡ್ಡ ತೊಂದರೆಯಲ್ಲಿದ್ದಾನೆಂದು ನನಗೆ ತಿಳಿದಿತ್ತು, ಅವನ ಕಣ್ಣು ಮತ್ತು ಅವನ ಮೆದುಳಿಗೆ ಬಹಳ ಸಮೀಪದಲ್ಲಿ ತಲೆಬುರುಡೆಯ ತಳದ ಬಳಿ ಸವೆತವಾಗುತ್ತಿತ್ತು ಎಂದು ವೈದ್ಯರು ಹೇಳಿದ್ದಾರೆ.

ಆತನ ಸ್ಥಿತಿ ಎಷ್ಟು ಹದಗೆಟ್ಟಿತ್ತು ಎಂದರೆ, ಹುಳುಗಳು ತಲೆಯೊಳಗಿನ ಇತರ ಅಂಗಾಂಶಗಳಲ್ಲಿ ಬಿಲಗಳನ್ನು ಮಾಡಿಕೊಂಡಿದ್ದವು. ಒಟ್ಟಾರೆಯಾಗಿ 150 ಹುಳುಗಳನ್ನು ವಿವಿಧ ವಿಧಾನಗಳ ಮೂಲಕ ಹೊರ ತೆಗೆಯಲಾಯಿತು ವೈದ್ಯರು ತಿಳಿಸಿದ್ದಾರೆ.

30 ವರ್ಷಗಳ ಹಿಂದೆ ಗಡ್ಡೆಯನ್ನು ತೆಗೆದ ನಂತರ ರೋಗಿಯ ನಿರೋಧಕ ಶಕ್ತಿಯು ಕುಂದಿತ್ತು.ಇದರಿಂದಾಗಿಯೇ ಸೋಂಕು ತಗುಲಲು ಕಾರಣವಾಗಿರಬಹುದು. ನಮ್ಮ ನಿರೋಧಕ ಶಕ್ತಿಯ ಹೊರಗಿನ ಒಳ ಬರುವ ಜೀವಿಗಳನ್ನು ತಡೆಯುವ ಪ್ರಯತ್ನ ಮಾಡುತ್ತದೆ. ಒಂದೊಮ್ಮೆ ಅದು ಕಡಿಮೆಯಾದರೆ ಹೊರಗಿನ ಜೀವಿಗಳಿಗೆ ನಮ್ಮ ದೇಹವು ಆಶ್ರಯತಾಣವಾಗಿ ಬದಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Viral News: ಅಂಗವೈಕಲ್ಯತೆ ಇದ್ದರೂ ಸ್ವಾಭಿಮಾನದ ಬದುಕು; ಈ ಫುಡ್‌ ಡೆಲಿವರಿ ಏಜೆಂಟ್‌ ವಿಲ್‌ ಪವರ್‌ಗೆ ನೆಟ್ಟಿಗರ ಬಹುಪರಾಕ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರವಾಸ

Dream Of Retired Couple: ನಿರಂತರ ಮೂರೂವರೆ ವರ್ಷಗಳ ನೌಕಾಯಾನಕ್ಕಾಗಿ ತಮ್ಮದೆಲ್ಲವನ್ನೂ ಮಾರಿದ ದಂಪತಿ!

ಕಳೆದ ಎರಡು ವಾರಗಳಿಂದ ಗ್ರೇಸ್ ಮತ್ತು ಜೆರ್ರಿ ಗ್ರೇಡಿ ಯಾವುದೇ ಸೂಟ್‌ಕೇಸ್‌ ಭಾರ ಎತ್ತಿಕೊಳ್ಳದೇ ವಾಸ ಮಾಡುತ್ತಿದ್ದಾರೆ. ಯಾಕೆಂದರೆ ಅವರು ಈಗ ತಮ್ಮ ಜೀವಮಾನದ ಕನಸನ್ನು (Dream Of Retired Couple) ನನಸಾಗಿಸಿಕೊಳ್ಳುವ ದಾರಿಯಲ್ಲಿ ನಡೆಯುತ್ತಿದ್ದಾರೆ. ಪ್ರವಾಸಿ ದಂಪತಿಯ ಕುತೂಹಲಕರ ಕಥನ ಇಲ್ಲಿದೆ.

VISTARANEWS.COM


on

By

Dream Of Retired Couple
Koo

ಬದುಕಿನಲ್ಲಿ ಎಲ್ಲರಿಗೂ ಒಂದಲ್ಲ ಒಂದು ರೀತಿಯ ಕನಸುಗಳಿರುತ್ತವೆ. ಅದರಲ್ಲೂ ಕೆಲವರು ತಮ್ಮ ಕನಸು (dream) ನನಸು ಮಾಡಿಕೊಳ್ಳಲು ಎಲ್ಲವನ್ನೂ ತ್ಯಾಗ ಮಾಡಲು ಸಿದ್ಧರಾಗುತ್ತಾರೆ. ಅಂಥವರಲ್ಲಿ ಒಬ್ಬರಾಗಿದ್ದಾರೆ ಅಮೆರಿಕನ್ (American)-ಇಟಾಲಿಯನ್ ನ (Italian) ಈ ದಂಪತಿ (Dream Of Retired Couple). ಇವರು ತಮ್ಮ ಕನಸನ್ನು ಸಾಕಾರಗೊಳಿಸಲು ತಮ್ಮದು ಎಂದೆನಿಸಿಕೊಂಡಿದ್ದ, ತಾವು ಜೀವಮಾನದಲ್ಲಿ ಗಳಿಸಿದ್ದ ಎಲ್ಲವನ್ನೂ ಮಾರಾಟ ಮಾಡಿದ್ದಾರೆ.

ಕಳೆದ ಎರಡು ವಾರಗಳಿಂದ ಗ್ರೇಸ್ ಮತ್ತು ಜೆರ್ರಿ ಗ್ರೇಡಿ ಯಾವುದೇ ಸೂಟ್‌ಕೇಸ್‌ ಭಾರ ಎತ್ತಿಕೊಳ್ಳದೇ ವಾಸ ಮಾಡುತ್ತಿದ್ದಾರೆ. ಯಾಕೆಂದರೆ ಅವರು ಈಗ ತಮ್ಮ ಜೀವಮಾನದ ಕನಸನ್ನು ನನಸಾಗಿಸಿಕೊಳ್ಳುವ ದಾರಿಯಲ್ಲಿ ನಡೆಯುತ್ತಿದ್ದಾರೆ.

70ರ ಹರೆಯದಲ್ಲಿರುವ ಈ ದಂಪತಿ ಶೀಘ್ರದಲ್ಲೇ ಪ್ರಪಂಚದಾದ್ಯಂತ (world tour) ನಿರಂತರ ಮೂರೂವರೆ ವರ್ಷಗಳ ವಿಹಾರಕ್ಕೆ (cruise) ತೆರಳಲಿದ್ದಾರೆ. ಈ ವಿಹಾರ ನಡೆಸಲಿರುವ ಸುಮಾರು 800 ಪ್ರಯಾಣಿಕರಲ್ಲಿ ಇವರೂ ಸೇರಿದ್ದಾರೆ.

ಇವರ ಈ ವಿಹಾರವು ಮೇ 30ರಂದು ಪ್ರಾರಂಭವಾಗಲಿದೆ. ಎಲ್ಲಾ ಏಳು ಖಂಡಗಳಾದ್ಯಂತ 147 ದೇಶಗಳಲ್ಲಿ 425 ಬಂದರುಗಳಿಗೆ ಈ ಸಂದರ್ಭದಲ್ಲಿ ಇವರು ಭೇಟಿ ನೀಡಲಿದ್ದಾರೆ. ಈ ಪ್ರವಾಸದ ವೇಳೆ ಯಾವುದೇ ದೇಶಕ್ಕೆ ಹೋದರೂ ಅಲ್ಲಿ ವಸಂತ ಮತ್ತು ಬೇಸಿಗೆಯ ಋತುವಾಗಿರುವುದು ಖಾತ್ರಿ ಪಡಿಸಲಾಗಿದೆ. ಈ ವಿಹಾರದಲ್ಲಿ ವಿಲ್ಲಾ ವೈ ಒಡಿಸ್ಸಿ ಎಂಬ ಎರಡು ವಸತಿ ಹಡಗುಗಳು ಮಾತ್ರ ಬಳಕೆಯಾಗಲಿದೆ.


ವಿಹಾರಕ್ಕಾಗಿ ಎಲ್ಲವನ್ನೂ ಮಾರಾಟ ಮಾಡಿದ ದಂಪತಿ

ಗ್ರೇಡಿ ದಂಪತಿ ಎರಡು ವರ್ಷಗಳ ಹಿಂದೆ ಗ್ರೇಸ್‌ನ ತಾಯ್ನಾಡು ಸಿಸಿಲಿಗೆ ತೆರಳಿ, ಅಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ತಮ್ಮ ಮನೆಯನ್ನು ಮಾರಾಟ ಮಾಡಿದ ಅನಂತರ ಅವರು ಕಳೆದ ಕೆಲವು ತಿಂಗಳುಗಳಿಂದ ತಮ್ಮ ಪ್ರವಾಸಕ್ಕೆ ಧನಸಹಾಯಕ್ಕಾಗಿ ತಮ್ಮ ಇತರ ಅಮೂಲ್ಯವಾದ ಆಸ್ತಿಯನ್ನು ಮಾರಾಟ ಮಾಡಿದ್ದಾರೆ.

ಸಾಹಸಕ್ಕೆ ಹೊಸದಲ್ಲ

ನಾವು ನಮ್ಮ ಹೆಚ್ಚಿನ ವಸ್ತುಗಳನ್ನು ಸ್ನೇಹಿತರಿಗೆ ಮಾರಾಟ ಮಾಡಿದ್ದೇವೆ ಎಂದು ಹೇಳುವ ಗ್ರೇಸ್ ದಂಪತಿಗೆ ಸಾಹಸವೇನು ಹೊಸತಲ್ಲ. ಕನಿಷ್ಠ ವಸ್ತುಗಳ ಬಳಕೆಯನ್ನು ಅಭ್ಯಾಸ ಮಾಡಿಕೊಂಡಿರುವ ಇವರು ಪ್ರತಿದಿನ ಒಂದೇ ಬಟ್ಟೆಯನ್ನು ಧರಿಸುತ್ತಾರೆ. ರಾತ್ರಿ ತೊಳೆದು ಹಾಕುತ್ತಾರೆ. ಹೀಗಾಗಿ ವಾರ್ಡ್ ರೋಬ್ ನ ಅಗತ್ಯ ನಮಗಿಲ್ಲ ಎನ್ನುತ್ತಾರೆ ಗ್ರೇಸ್.

ಭೂಮಿಯಲ್ಲಿ ವಾಸಿಸುವುದಕ್ಕಿಂತ ಇದು ಹೆಚ್ಚು ದುಬಾರಿಯಲ್ಲ ಎನ್ನುವ ಇವರು ವಿಲ್ಲಾ ವೈ ಒಡಿಸ್ಸಿಯಲ್ಲಿ ಒಂದು ವಸತಿ ಕೋಣೆಯನ್ನು ಬಾಡಿಗೆಗೆ ಪಡೆದಿದ್ದಾರೆ. ಇದರ ಬಾಡಿಗೆ ವರ್ಷಕ್ಕೆ ಸರಿಸುಮಾರು 36.22 ಲಕ್ಷ ರೂಪಾಯಿಗಳು.
ಕ್ರೂಸ್ ದರ ಕೈಗೆಟುಕುವಂತಿದೆ. ವಾರ್ಷಿಕ ಬಾಡಿಗೆ, ಬಾಲ್ಕನಿಯೊಂದಿಗೆ ಹೊರಗಿನ ಕ್ಯಾಬಿನ್ ನಲ್ಲಿ ವರ್ಷಕ್ಕೆ ಸುಮಾರು 60.57 ಲಕ್ಷ ರೂ. ವೆಚ್ಚವಾಗಲಿದೆ.


ಕ್ರೂಸ್ ವಿಶೇಷ ಏನು?

ವಿಲ್ಲಾ ವೈ ಒಡಿಸ್ಸಿಯನ್ನು 1993ರಲ್ಲಿ ನಿರ್ಮಿಸಲಾಯಿತು. ಸಂಪೂರ್ಣವಾಗಿ 12 ಮಿಲಿಯನ್ ಡಾಲರ್ ನಲ್ಲಿ ದುರಸ್ತಿ ಕಾರ್ಯಗಳನ್ನು ನಡೆಸಲಾಗಿದೆ. ವಿಲ್ಲಾ ವೈ ಒಡಿಸ್ಸಿಯಲ್ಲಿ ಪ್ರಯಾಣಿಕರು ಒಳಾಂಗಣ ಕ್ಯಾಬಿನ್‌ಗೆ ಪ್ರತಿ ವ್ಯಕ್ತಿಗೆ ದಿನಕ್ಕೆ 7,421.79 ರೂ., ಹೊರಾಂಗಣ ಕ್ಯಾಬಿನ್‌ಗಳಿಗೆ 9,923.52 ರೂ. ಮತ್ತು ಬಾಲ್ಕನಿಯಲ್ಲಿರುವವರಿಗೆ 16,594.79 ರೂ. ಪಾವತಿಸಬೇಕಾಗುತ್ತದೆ.

ಅತಿಥಿಗಳಿಗೆ ರಾತ್ರಿಯ ಊಟದಲ್ಲಿ ಅನಿಯಮಿತ ಆಹಾರ, ತಂಪು ಪಾನೀಯ ಮತ್ತು ಆಲ್ಕೊಹಾಲ್ ಲಭ್ಯವಿರುತ್ತದೆ. ಉಚಿತ ವೈಫೈ ಮತ್ತು ಔಷಧ ಮತ್ತು ಇತರ ಕಾರ್ಯವಿಧಾನ ಹೊರತುಪಡಿಸಿ ನಿರಂತರ ವೈದ್ಯಕೀಯ ತಪಾಸಣೆಗಳನ್ನು ನಡೆಸಲಾಗುತ್ತದೆ.

24/7 ಕೊಠಡಿ ಸೇವೆ, ವಾರಕ್ಕೊಮ್ಮೆ ಕೊಠಡಿ ಸ್ವಚ್ಛತೆ ಮತ್ತು ಎರಡು ವಾರಕ್ಕೊಮ್ಮೆ ಲಾಂಡ್ರಿ ಸೇವೆ ಎಲ್ಲವನ್ನೂ ಕ್ರೂಸ್ ನ ದರದಲ್ಲಿ ಸೇರಿಸಲಾಗಿದೆ.

ಪ್ರತ್ಯೇಕ ಪ್ರವಾಸ, ವಿಮಾನಯಾನಕ್ಕೆ ಹೋಲಿಸಿದರೆ ಇದು ಅಗ್ಗವಾಗಿದೆ ಎನ್ನುತ್ತಾರೆ ಗ್ರೇಸ್.

ಬಹು ದಿನಗಳ ಕನಸು

ಗ್ರೇಸ್ ದಂಪತಿ ಮೂರು ವರ್ಷಗಳ ಲೈಫ್ ಅಟ್ ಸೀ ಕ್ರೂಸಸ್ ಟ್ರಿಪ್‌ಗೆ ಸೇರಲು ನಿರ್ಧರಿಸಿದ್ದರು. ಆದರೆ ನವೆಂಬರ್ 2023 ರಲ್ಲಿ ಅದನ್ನು ಅನಿರೀಕ್ಷಿತವಾಗಿ ರದ್ದುಗೊಳಿಸಲಾಯಿತು. ಮರುಪಾವತಿಯನ್ನು ಕೋರಿ ಸಾಕಷ್ಟು ಮಂದಿ ಪ್ರವಾಸವನ್ನು ಕೈಬಿಟ್ಟರು. ನಾವು ಅಲೆಮಾರಿಗಳು, ಸಾಕಷ್ಟು ಪ್ರಯಾಣಿಸಿದ್ದೇವೆ. ನಾನು ಯಾವುದರ ಬಗ್ಗೆಯೂ ಚಿಂತಿಸುವುದಿಲ್ಲ ಎನ್ನುತ್ತಾರೆ ಗ್ರೇಸ್.

ಇದನ್ನೂ ಓದಿ: Munnar Tour: ಪ್ರಕೃತಿಯ ನಡುವೆ ಅವಿತಿರುವ ಸೌಂದರ್ಯದ ಗಣಿ ಮುನ್ನಾರ್! ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕು

ಕ್ರೂಸ್ ಗೆ ಹಣ ಪಾವತಿ ಮಾಡಲು ಆಯ್ಕೆಗಳಿವೆ. 16 ವಿಭಾಗಗಳು ಪಾವತಿಯ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. ಪ್ರಯಾಣಿಕರು ಮುಂಗಡ ಠೇವಣಿ ಮತ್ತು ಪ್ರತಿ ವಿಭಾಗಕ್ಕೆ 30 ದಿನಗಳ ಮೊದಲು ಉಳಿದ ಹಣವನ್ನು ಪಾವತಿಸಬೇಕಾಗುತ್ತದೆ. ಯಾವುದೇ ಹಂತದಲ್ಲಿ ಹಡಗನ್ನು ತೊರೆಯಲು ಬಯಸಿದರೆ ಸಂಪೂರ್ಣ ಮರುಪಾವತಿಗಾಗಿ ಅವರು ಹೊಸ ವಿಭಾಗಕ್ಕಿಂತ ಕನಿಷ್ಠ ಆರು ತಿಂಗಳ ಮೊದಲು ಸೂಚನೆಯನ್ನು ನೀಡಬೇಕಾಗುತ್ತದೆ ಎಂದು ಗ್ರೇಸ್ ತಿಳಿಸಿದ್ದಾರೆ.

Continue Reading

ವಾಣಿಜ್ಯ

Forbes World Billionaires List: ವಿಶ್ವದ ಶ್ರೀಮಂತ ಮಹಿಳೆಯರು; ಭಾರತದ ಸಾವಿತ್ರಿ ಜಿಂದಾಲ್‌ಗೆ ಎಷ್ಟನೇ ಸ್ಥಾನ?

ಫೋರ್ಬ್ಸ್‌ನ ವಿಶ್ವ ಬಿಲಿಯನೇರ್‌ಗಳ ಪಟ್ಟಿಯಲ್ಲಿ (Forbes World Billionaires List) ಸತತ ನಾಲ್ಕನೇ ವರ್ಷ ವಿಶ್ವದ ಅತ್ಯಂತ ಶ್ರೀಮಂತ ಮಹಿಳೆ ಎಂದು ಲೋರಿಯಲ್ ಉತ್ತರಾಧಿಕಾರಿ ಫ್ರಾಂಕೋಯಿಸ್ ಬೆಟೆನ್‌ಕೋರ್ಟ್ ಮೇಯರ್ಸ್ ಸ್ಥಾನ ಪಡೆದಿದ್ದಾರೆ. ಉಳಿದ ಒಂಬತ್ತು ಮಂದಿ ಯಾರು ಅವರ ಒಟ್ಟು ಆಸ್ತಿ ಮೌಲ್ಯ ಎಷ್ಟಿದೆ ಗೊತ್ತೇ?

VISTARANEWS.COM


on

By

Forbes World Billionaires List
Koo

ಫೋರ್ಬ್ಸ್‌ನ ವಿಶ್ವ ಬಿಲಿಯನೇರ್‌ಗಳ ಪಟ್ಟಿಯಲ್ಲಿ (Forbes World Billionaires List) ಅತ್ಯಂತ ಸಣ್ಣ ಪಾಲನ್ನು ಮಹಿಳೆಯರು (womens) ಪಡೆದಿದ್ದಾರೆ. ಈ ವರ್ಷ 2,781 ಬಿಲಿಯನೇರ್‌ಗಳಲ್ಲಿ (Billionaires) 369 ಅಂದರೆ ಶೇ. 13.3ರಷ್ಟು ಮಹಿಳೆಯರು ಬಿಲಿಯನೇರ್ ಗಳಾಗಿ (Women Billionaires) ಗುರುತಿಸಿಕೊಂಡಿದ್ದಾರೆ. 2023 ರಲ್ಲಿ 337 ರಿಂದ ಮಹಿಳೆಯರು ಈ ಪಟ್ಟಿಯಲ್ಲಿದ್ದರು. ಇವರ ಒಟ್ಟು ಆಸ್ತಿ ಮೌಲ್ಯ ಸುಮಾರು 1.8 ಲಕ್ಷ ಕೋಟಿ ಡಾಲರ್.. ಕಳೆದ ವರ್ಷಕ್ಕಿಂತ ಈ ಬಾರಿ ಸುಮಾರು 240 ಶತಕೋಟಿ ಡಾಲರ್ ಹೆಚ್ಚಾಗಿದೆ.

ಸತತ ನಾಲ್ಕನೇ ವರ್ಷ ವಿಶ್ವದ ಅತ್ಯಂತ ಶ್ರೀಮಂತ ಮಹಿಳೆ ಎಂದು ಲೋರಿಯಲ್ ಉತ್ತರಾಧಿಕಾರಿ ಫ್ರಾಂಕೋಯಿಸ್ ಬೆಟೆನ್‌ಕೋರ್ಟ್ ಮೇಯರ್ಸ್ (Françoise Bettencourt Meyers) ಸ್ಥಾನ ಪಡೆದಿದ್ದಾರೆ. ಆಕೆಯ ಸಂಪತ್ತು ಕಳೆದ 12 ತಿಂಗಳುಗಳಲ್ಲಿ 19 ಶತಕೋಟಿ ಡಾಲರ್ ಗೆ ಏರಿಕೆಯಾಗಿದೆ. ಆಕೆಯ ನಿವ್ವಳ ಮೌಲ್ಯ 99.5 ಶತಕೋಟಿ ಡಾಲರ್ ಆಗಿದೆ. 100 ಶತಕೋಟಿ ಡಾಲರ್ ಕ್ಲಬ್‌ನ ಪ್ರವೇಶಸಿದ ಮೊದಲ ಮಹಿಳೆ ಎಂಬ ಖ್ಯಾತಿ ಇವರದಾಗಿದೆ.

ಎರಡು ದಶಕಗಳಿಗೂ ಹೆಚ್ಚು ಕಾಲ ಬೆಟೆನ್‌ಕೋರ್ಟ್ ನಂ. 1 ಸ್ಥಾನದಲ್ಲಿದ್ದಾರೆ. 2006 ರಿಂದ 2017 ರವರೆಗೆ ಆರು ವರ್ಷಗಳ ಕಾಲ ಪ್ರಶಸ್ತಿಯನ್ನು ಹೊಂದಿದ್ದ ಅವರ ತಾಯಿ ಲಿಲಿಯಾನ್ ಬೆಟೆನ್‌ಕೋರ್ಟ್ ಅವರ ಮರಣದ ಎರಡು ವರ್ಷಗಳ ಅನಂತರ 2019 ರಲ್ಲಿ ಬೆಟೆನ್‌ಕೋರ್ಟ್ ಮೇಯರ್ಸ್ ಮೊದಲ ಸ್ಥಾನವನ್ನು ಪಡೆದರು.

ವಾಲ್‌ಮಾರ್ಟ್ ಸಂಸ್ಥಾಪಕ ಸ್ಯಾಮ್ ವಾಲ್ಟನ್ ಅವರ ಏಕೈಕ ಪುತ್ರಿ ಆಲಿಸ್ ವಾಲ್ಟನ್ ಎರಡನೆಯ ವಿಶ್ವದ ಅತ್ಯಂತ ಶ್ರೀಮಂತ ಮಹಿಳೆ ಎಂದು ಗುರುತಿಸಿಕೊಂಡಿದ್ದಾರೆ. 2018 ಮತ್ತು 2020 ರಲ್ಲಿ ಇವರು ಮೊದಲ ಸ್ಥಾನದಲ್ಲಿದ್ದರು.
ವಿಶ್ವದ 10 ಶ್ರೀಮಂತ ಮಹಿಳೆಯರಲ್ಲಿ ಒಂಬತ್ತು ಮಂದಿ ತಮ್ಮ ಆಸ್ತಿಯನ್ನು ತಂದೆ, ಗಂಡ ಅಥವಾ ತಾಯಿಯಿಂದ ಪಡೆದಿದ್ದಾರೆ. ವಿಚ್ಛೇದನದ ಬಳಿಕ ತಮ್ಮ ಅದೃಷ್ಟವನ್ನು ಬದಲಾಯಿಸಿಕೊಂಡ ಟಾಪ್ 10 ರಲ್ಲಿ ಸ್ಥಾನ ಪಡೆದಿರುವುದು ಮೆಕೆಂಜಿ ಸ್ಕಾಟ್ ಮಾತ್ರ.

35.6 ಶತಕೋಟಿ ಡಾಲರ್ ಮೌಲ್ಯದ ಜೆಫ್ ಬೆಜೋಸ್ ಅವರ ಮಾಜಿ ಪತ್ನಿ ಸ್ಕಾಟ್ ಅವರ ಮೌಲ್ಯ ಕಳೆದ ವರ್ಷದಿಂದ 11.2 ಶತಕೋಟಿ ಡಾಲರ್ ಗೆ ಏರಿಕೆಯಾಗಿದೆ. ಇವರು ಇತ್ತೀಚೆಗೆ 300 ಕ್ಕೂ ಹೆಚ್ಚು ಲಾಭೋದ್ದೇಶವಿಲ್ಲದವರಿಗೆ 640 ದಶಲಕ್ಷ ಡಾಲರ್ ದೇಣಿಗೆ ನೀಡಿದ್ದಾರೆ. ಇವರು ಇಷ್ಟೊಂದು ದಾನ ಮಾಡುವುದಲ್ಲದೇ ಇದ್ದರೆ ಒಟ್ಟು 69 ಶತಕೋಟಿ ಡಾಲರ್ ಮೌಲ್ಯವನ್ನು ಹೊಂದಿರುತ್ತಿದ್ದರು. ಈ ಬಾರಿ ಇವರು ಐದನೇ ಸ್ಥಾನದಲ್ಲಿದ್ದಾರೆ.

ಟಾಪ್ 10ರಲ್ಲಿ ಇರುವವವರು


ಅಬಿಗೈಲ್ ಜಾನ್ಸನ್

ಇವರ ನಿವ್ವಳ ಮೌಲ್ಯ 29 ಶತಕೋಟಿ ಡಾಲರ್. ವಯಸ್ಸು 62. ಫಿಡೆಲಿಟಿ ಇನ್ವೆಸ್ಟ್‌ಮೆಂಟ್ಸ್ ನಲ್ಲಿ ಸಿಇಒ ಸ್ಥಾನದಲ್ಲಿರುವ ಇವರು . ಅಮೆರಿಕದವರಾದ ಇವರು ಈ ವರ್ಷ ಟಾಪ್ 10ನೇ ಶ್ರೀಮಂತ ಮಹಿಳೆಯಾಗಿದ್ದಾರೆ. ತಂದೆಯ ಬಳಿಕ ಇವರಿಗೆ ಈ ಅಧಿಕಾರ ಸಿಕ್ಕಿತ್ತು.

ಗಿನಾ ರೈನ್ಹಾರ್ಟ್

ಇವರ ನಿವ್ವಳ ಮೌಲ್ಯ 30.8 ಶತಕೋಟಿ ಡಾಲರ್. ವಯಸ್ಸು 70. ಆಸ್ಟ್ರೇಲಿಯಾದವರಾದ ಇವರು ಆಸ್ಟ್ರೇಲಿಯನ್ ಮ್ಯಾಗ್ನೆಟ್ ಗಣಿಗಾರಿಕೆ ಮತ್ತು ಕೃಷಿ ಕಂಪನಿ ಹ್ಯಾನ್ಕಾಕ್ ಪ್ರಾಸ್ಪೆಕ್ಟಿಂಗ್ ಗ್ರೂಪ್ ಅಧ್ಯಕ್ಷರಾಗಿದ್ದಾರೆ. ತಂದೆಯ ಬಳಿಕ ಇವರಿಗೆ ಈ ಸ್ಥಾನ ಪ್ರಾಪ್ತವಾಗಿದೆ. ಇವರು ವಿಶ್ವದ 9ನೇ ಶ್ರೀಮಂತ ಮಹಿಳೆಯಾಗಿ ಗುರುತಿಸಿಕೊಂಡಿದ್ದಾರೆ.

ಮಿರಿಯಮ್ ಅಡೆಲ್ಸನ್ ಮತ್ತು ಕುಟುಂಬ

ಎಂಟನೇ ಸ್ಥಾನದಲ್ಲಿರುವ ಇವರ ನಿವ್ವಳ ಮೌಲ್ಯ 32 ಶತಕೋಟಿ ಡಾಲರ್. ವಯಸ್ಸು 78. ಅಡೆಲ್ಸನ್ ಮತ್ತು ಅವರ ಕುಟುಂಬವು ವಿಶ್ವದ ಅತಿದೊಡ್ಡ ಕ್ಯಾಸಿನೊ ನಿರ್ವಾಹಕರಲ್ಲಿ ಒಂದಾದ ಲಾಸ್ ವೇಗಾಸ್ ಸ್ಯಾಂಡ್ಸ್‌ನ ಅರ್ಧಕ್ಕಿಂತ ಹೆಚ್ಚು ಮಾಲೀಕತ್ವವನ್ನು ಹೊಂದಿದೆ. ಪತಿಯ ಮರಣದ ಬಳಿಕ ಮಿರಿಯಮ್ ಪಾಲನ್ನು ಪಡೆದರು.

ರಾಫೆಲಾ ಅಪೊಂಟೆ-ಡಯಮಂಟ್

ಏಳನೇ ಸ್ಥಾನದಲ್ಲಿರುವ ಇವರ ನಿವ್ವಳ ಮೌಲ್ಯ 33.1 ಶತಕೋಟಿ ಡಾಲರ್. ವಯಸ್ಸು 79. ಸ್ವಿಟ್ಜರ್ಲೆಂಡ್ ನವರಾದ ಇವರು ಎಂಎಸ್ ಸಿ ಯ ಸಹಸಂಸ್ಥಾಪಕರಲ್ಲಿ ಒಬ್ಬರಾಗಿದ್ದ ಪತಿಯಿಂದ ಶೇ. 50ರಷ್ಟು ಪಾಲು ಪಡೆದರು. ಎಂಎಸ್ ಸಿಯ ಕಂಪನಿಯಲ್ಲಿ ರಾಫೆಲಾ ವಿಶ್ವದ ಅತಿದೊಡ್ಡ ಹಡಗುಗಳನ್ನು ಅಲಂಕರಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ.


ಸಾವಿತ್ರಿ ಜಿಂದಾಲ್ ಮತ್ತು ಕುಟುಂಬ

ಆರನೇ ಸ್ಥಾನದಲ್ಲಿರುವ ಇವರ ನಿವ್ವಳ ಮೌಲ್ಯ 33.5 ಶತಕೋಟಿ ಡಾಲರ್. ವಯಸ್ಸು 74. ಉಕ್ಕು ಉದ್ಯಮದಲ್ಲಿರುವ ಇವರು ಭಾರತದ ಪೌರತ್ವವನ್ನು ಪಡೆದಿದ್ದಾರೆ. ಜಿಂದಾಲ್ ಗ್ರೂಪ್‌ನ ಅಧ್ಯಕ್ಷೆರಾಗಿರುವ ಈ ಇವರು ಓಂ ಪ್ರಕಾಶ್ ಜಿಂದಾಲ್ ಅವರ ಪತ್ನಿ. ಭಾರತದ ಅತ್ಯಂತ ಶ್ರೀಮಂತ ಮಹಿಳೆ. ಜಿಂದಾಲ್ ಗ್ರೂಪ್ ಉಕ್ಕು, ವಿದ್ಯುತ್, ಸಿಮೆಂಟ್ ಮತ್ತು ಮೂಲಸೌಕರ್ಯ ಒದಗಿಸುವ ಕಾರ್ಯದಲ್ಲಿ ಸಕ್ರಿಯವಾಗಿದೆ.

ಮ್ಯಾಕೆಂಜಿ ಸ್ಕಾಟ್

ಐದನೇ ಸ್ಥಾನದಲ್ಲಿರುವ ಇವರ ನಿವ್ವಳ ಮೌಲ್ಯ 35.6 ಶತಕೋಟಿ ಡಾಲರ್. ವಯಸ್ಸು 53. ಯು.ಎಸ್. ನವರಾದ ಇವರು 2019 ರಲ್ಲಿ ಜೆಫ್ ಬೆಜೋಸ್ ಅವರ ವಿಚ್ಛೇದನದ ಬಳಿಕ ಅಮೆಜಾನ್‌ ನಲ್ಲಿ ಶೇ. 4ರಷ್ಟು ಪಾಲನ್ನು ಪಡೆದರು.

ಜಾಕ್ವೆಲಿನ್ ಮಾರ್ಸ್

ನಾಲ್ಕನೇ ಸ್ಥಾನದಲ್ಲಿರುವ ಇವರ ನಿವ್ವಳ ಮೌಲ್ಯ 38.5 ಶತಕೋಟಿ ಡಾಲರ್. ವಯಸ್ಸು: 84. ಯುಎಸ್ ನವರಾದ ಇವರು ಕ್ಯಾಂಡಿ, ಸಾಕುಪ್ರಾಣಿಗಳ ಆಹಾರದಿಂದ ಆದಾಯ ಗಳಿಸುತ್ತಿದ್ದಾರೆ.
Mars Inc ನ ಉತ್ತರಾಧಿಕಾರಿ ಜಾಕ್ವೆಲಿನ್ ಮಾರ್ಸ್ ತನ್ನ ಸಹೋದರ ಜಾನ್ ಮಾರ್ಸ್ ಮತ್ತು ಇನ್ನೋರ್ವ ದಿವಂಗತ ಸಹೋದರ ಫಾರೆಸ್ಟ್ ಜೂನಿಯರ್ ಅವರ ನಾಲ್ಕು ಹೆಣ್ಣುಮಕ್ಕಳೊಂದಿಗೆ ಈ ಉದ್ಯಮ ನಡೆಸುತ್ತಿದ್ದಾರೆ. ಇವರ ಕಂಪೆನಿಯು M&Ms, Snickers, Ben’s Original ಮತ್ತು Pedigree ನಂತಹ ಸಾಂಪ್ರದಾಯಿಕ ಬ್ರ್ಯಾಂಡ್‌ಗಳನ್ನು ಹೊಂದಿದೆ. ಇದನ್ನು ಆಕೆಯ ಅಜ್ಜ ಫ್ರಾಂಕ್ ಸಿ. ಮಾರ್ಸ್ ಸ್ಥಾಪಿಸಿದ್ದರು.

ಜೂಲಿಯಾ ಕೋಚ್ ಮತ್ತು ಕುಟುಂಬ

ಮೂರನೇ ಸ್ಥಾನದಲ್ಲಿರುವ ಇವರ ನಿವ್ವಳ ಮೌಲ್ಯ 64.3 ಶತಕೋಟಿ ಡಾಲರ್. ವಯಸ್ಸು: 61. ಅಮೆರಿಕದವರಾದ ಇವರು ಎರಡನೇ ಸ್ಥಾನದಿಂದ ಮೂರನೇ ಸ್ಥಾನ ಕ್ಕೆ ಇಳಿದಿದ್ದಾರೆ. ಜೂಲಿಯಾ ತನ್ನ ಮೂವರು ಮಕ್ಕಳೊಂದಿಗೆ ಕೋಚ್ ಇಂಡಸ್ಟ್ರೀಸ್‌ನಲ್ಲಿ ಶೇ. 42ರಷ್ಟು ಪಾಲನ್ನು ಹೊಂದಿದ್ದಾರೆ. ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‌ನ ಟ್ರಸ್ಟಿಯಾಗಿರುವ ಇವರು ತೈಲ ಸಂಸ್ಕರಣೆ ಮತ್ತು ಪೇಪರ್ ಟವೆಲ್‌ಗಳವರೆಗಿನ ವ್ಯವಹಾರಗಳನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: Forbes India: ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಖ್ಯಾತ ನಟಿ, ಕನ್ನಡತಿ ರಶ್ಮಿಕಾ ಮಂದಣ್ಣ

ಆಲಿಸ್ ವಾಲ್ಟನ್

ಎರಡನೇ ಸ್ಥಾನದಲ್ಲಿರುವ ಇವರ ನಿವ್ವಳ ಮೌಲ್ಯ 72.3 ಶತಕೋಟಿ ಡಾಲರ್. ವಯಸ್ಸು 74. ಅಮೆರಿಕದವರಾದ ಇವರು ವಾಲ್‌ಮಾರ್ಟ್‌ನ ಉದ್ಯಮದಲ್ಲಿದ್ದಾರೆ. ಅಮೆರಿಕದ ಅತ್ಯಂತ ಶ್ರೀಮಂತ ಮಹಿಳೆ ಎಂದು ಗುರುತಿಸಿಕೊಂಡಿರುವ ಇವರು ವಾಲ್ಮಾರ್ಟ್ ಸಂಸ್ಥಾಪಕ ಸ್ಯಾಮ್ ವಾಲ್ಟನ್ ಅವರ ಏಕೈಕ ಪುತ್ರಿ.


ಫ್ರಾಂಕೋಯಿಸ್ ಬೆಟೆನ್‌ಕೋರ್ಟ್ ಮೇಯರ್ಸ್ ಮತ್ತು ಕುಟುಂಬ

ಫೋರ್ಬ್ ಪಟ್ಟಿಯಲ್ಲಿ ಮೊದಲನೇ ಸ್ಥಾನ ಗಳಿಸಿರುವ ಇವರ ನಿವ್ವಳ ಮೌಲ್ಯ 99.5 ಶತಕೋಟಿ ಡಾಲರ್. ವಯಸ್ಸು 70. ಫ್ರಾನ್ಸ್ ನವರಾದ ಇವರು ಲೋರಿಯಲ್ ಸಂಸ್ಥಾಪಕರ ಮೊಮ್ಮಗಳು. ಸತತ ನಾಲ್ಕನೇ ವರ್ಷ ವಿಶ್ವದ ಅತ್ಯಂತ ಶ್ರೀಮಂತ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

Continue Reading

ರಾಜಕೀಯ

All Eyes on Rafah: 30 ಮಿಲಿಯನ್ ಜನರನ್ನು ತಲುಪಿದ ‘ಆಲ್ ಐಸ್ ಆನ್ ರಫಾ’ ಪೋಸ್ಟ್‌!

All Eyes on Rafah:’ಆಲ್ ಐಸ್ ಆನ್ ರಫಾ’ ಎಐ ನಿರ್ಮಿತ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈಗಾಗಲೇ 30 ಮಿಲಿಯನ್ ಜನರನ್ನು ಇದು ತಲುಪಿದ್ದು, ಸಾಕಷ್ಟು ಸಲೆಬ್ರಿಟಿಗಳು ಇದನ್ನು ಹಂಚಿಕೊಳ್ಳುತ್ತಿದ್ದಾರೆ.

VISTARANEWS.COM


on

By

All Eyes on Rafah
Koo

ನವದೆಹಲಿ: ಹಲವಾರು ಮಂದಿಯ ಇನ್ ಸ್ಟಾಗ್ರಾಮ್ (Instagram) ಖಾತೆಗಳಲ್ಲಿ ಮಂಗಳವಾರ ‘ಆಲ್ ಐಸ್ ಆನ್ ರಫಾ’ (All Eyes on Rafah) ಎಂಬ ಶೀರ್ಷಿಕೆಯೊಂದಿಗೆ ಚಿತ್ರ ಕಾಣಿಸಿಕೊಂಡಿದೆ. ಸೋಶಿಯಲ್ ಮೀಡಿಯಾ (social media) ಬಳಕೆದಾರರು ಎಐ (artificial intelligence) ರಚಿತವಾದ ಚಿತ್ರವನ್ನು ಪೋಸ್ಟ್ ಮಾಡಿದ್ದು, ಹಲವಾರು ಟೆಂಟ್ ಮನೆಗಳನ್ನು (tent house) ಚಿತ್ರದಲ್ಲಿ ಕಾಣಬಹುದಾಗಿದೆ.

ಆಲ್ ಐಸ್ ಆನ್ ರಫಾ ಚಿತ್ರವು ಗಾಝಾದ ದಕ್ಷಿಣದಲ್ಲಿರುವ ರಾಫಾ ನಗರದ ನಿರಾಶ್ರಿತರ ಶಿಬಿರದಲ್ಲಿರುವ ಡೇರೆಗಳನ್ನು ತೋರಿಸಿದೆ. ಅಲ್ಲಿ ಇಸ್ರೇಲ್ ನಿಂದ ನಡೆಸಿದ ದಾಳಿಯ ಅನಂತರ ಅನೇಕ ಪ್ಯಾಲೇಸ್ಟಿನಿಯರು ಇಲ್ಲಿಗೆ ಸ್ಥಳಾಂತರಗೊಂಡಿದ್ದಾರೆ. ಇಸ್ರೇಲ್ ದಾಳಿಯನ್ನು ಖಂಡಿಸಿ ಪ್ಯಾಲೆಸ್ಟೈನ್‌ ಗೆ ಬೆಂಬಲ ಸೂಚಿಸಿ ಅನೇಕರು ಇನ್ ಸ್ಟಾ ಗ್ರಾಮ್ ನಲ್ಲಿ ‘ಆಲ್ ಐಸ್ ಆನ್ ರಫಾ’ ಘೋಷಣೆಯೊಂದಿಗೆ ಹಂಚಿಕೊಂಡಿದ್ದಾರೆ. ಇದನ್ನು ಇನ್ ಸ್ಟಾ ಗ್ರಾಮ್ ನಲ್ಲಿ ಹಂಚಿಕೊಂಡಿರುವವರ ಸಂಖ್ಯೆ 30 ಮಿಲಿಯನ್ ದಾಟಿದೆ.

ಪ್ಯಾಲೇಸ್ಟಿನಿಯನ್ನರ ವಿರುದ್ಧದ ದಾಳಿಯನ್ನು ಖಂಡಿಸಿ ಮತ್ತು ಕದನ ವಿರಾಮಕ್ಕೆ ಒತ್ತಾಯಿಸಲು ಇದು ಸಾಮಾಜಿಕ ಜಾಲತಾಣದ ಮೂಲಕ ಜನರನ್ನು ಒಗ್ಗೂಡಿಸುತ್ತಿದೆ. ವರದಿಗಳ ಪ್ರಕಾರ ಡಬ್ಲ್ಯೂ ಹೆಚ್ ಒ ಪ್ರತಿನಿಧಿ ರಿಚರ್ಡ್ ಪೀಪರ್‌ಕಾರ್ನ್ ಅವರು ಫೆಬ್ರವರಿಯಲ್ಲಿ ಮೊದಲು ಈ ಘೋಷಣೆಯನ್ನು ಮಾಡಿದರು. ಡೇರೆ ಶಿಬಿರಗಳಿಂದ ತುಂಬಿದ ಪ್ರದೇಶವನ್ನು ಚಿತ್ರದಲ್ಲಿ ಕಾಣಬಹುದು. ಇದು ಇತ್ತೀಚಿನದು. ಎಲ್ಲರ ಗಮನ ಸೆಳೆಯಲು ಇದು ಅವರ ಪ್ರಯತ್ನ. ಇಸ್ರೇಲ್ ದಾಳಿಯಿಂದ ರಫಾದಲ್ಲಿ ಕನಿಷ್ಠ 45 ನಾಗರಿಕರು ಮೃತಪಟ್ಟಿದ್ದಾರೆ ಎಂದು ಹಲವರು ನೆಟ್ಟಿಗರು ಕಾಮೆಂಟ್ ನಲ್ಲಿ ಹೇಳಿದ್ದಾರೆ.

ಪೋಸ್ಟ್‌ ಶೇರ್‌ ಮಾಡಿದ ಸೆಲೆಬ್ರಿಟಿಗಳು

ಭಾರತೀಯ ನಟರಾದ ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ ಕರೀನಾ ಕಪೂರ್ ಖಾನ್ ಮತ್ತು ವರುಣ್ ಧವನ್ ಸೇರಿದಂತೆ ಅನೇಕ ಬಾಲಿವುಡ್ ತಾರೆಯರು ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮ ಸಲಹೆಗಾರ ಮ್ಯಾಟ್ ನವರ್ರಾ ಅವರು “‘ಆಲ್ ಐಸ್ ಆನ್ ರಾಫಾ’ ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇಷ್ಟೊಂದು ದೊಡ್ಡ ಮಟ್ಟದ ಬೆಂಬಲ ಸಿಗುತ್ತದೆ ಎಂದು ನಾವು ಆರಂಭದಲ್ಲಿ ಭಾವಿಸಿರಲಿಲ್ಲ. ಸಾಕಷ್ಟು ಪ್ರಭಾವಿಗಳು ಮತ್ತು ಸೆಲೆಬ್ರಿಟಿಗಳು ಇದನ್ನು ಹಂಚಿಕೊಂಡಿದ್ದಾರೆ. ಈ ಸಂದೇಶದ ಭಾವನೆ ಅಥವಾ ಉದ್ದೇಶ ಒಂದೇ. ಅನೇಕರನ್ನು ತಲುಪುವುದು ಮತ್ತು ಅಲ್ಲಿನ ಪರಿಸ್ಥಿತಿ ಬಗ್ಗೆ ಎಲ್ಲರ ಗಮನ ಸೆಳೆಯುವುದು.

ಇದನ್ನೂ ಓದಿ: Viral Video: ಭಾರತ-ಚೀನಾ ಯೋಧರ ನಡುವೆ ಹಗ್ಗಜಗ್ಗಾಟ; ಗೆದ್ದವರು ಯಾರು? ವಿಡಿಯೊ ನೋಡಿ!

ರಫಾ ನಿರ್ಮೂಲನೆ ಮಾಡುವ ಗುರಿ

ಇದರ ನಡುವೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ದೇಶದಲ್ಲಿ ಈ ಸಾವುನೋವುಗಳು ‘ದುರಂತ’ ಎಂದು ಹೇಳಿದ್ದಾರೆ. ರಫಾವನ್ನು ಹಮಾಸ್‌ ಉಗ್ರರ ಕಟ್ಟ ಕಡೆಯ ಭದ್ರಕೋಟೆ ಎಂದಿರುವ ನೆತನ್ಯಾಹು, ಅದನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿರುವುದಾಗಿ ತಿಳಿಸಿದ್ದರು. ಈ ಪ್ರದೇಶದಲ್ಲಿ ಸುಮಾರು 14 ದಶಲಕ್ಷಕ್ಕೂ ಹೆಚ್ಚು ಪ್ಯಾಲೇಸ್ಟಿನಿಯರು ಆಶ್ರಯ ಪಡೆದಿದ್ದಾರೆ. ಪ್ಯಾಲೇಸ್ಟಿನ್ ಮೇಲಿನ ಇಸ್ರೇಲ್‌ ದಾಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

Continue Reading

ವಿದೇಶ

All Eyes on Rafah: ಪ್ಯಾಲೆಸ್ತೀನ್‌ಗೆ ಬೆಂಬಲಿಸಿ ರೋಹಿತ್‌ ಪತ್ನಿ ಪೋಸ್ಟ್‌; ಫುಲ್‌ ಟ್ರೋಲ್‌- ಏನಿದು ʼಆಲ್‌ ಐಸ್‌ ಆನ್‌ ರಫಾʼ?

All Eyes on Rafah:ಕ್ರಿಕೆಟಿಗ ರೋಹಿತ್‌ ಶರ್ಮಾ(Rohit Sharma) ಪತ್ನಿ ರಿತಿಕಾ ಸಜ್ದೇಹ್‌ ಕೂಡ ಸಾಮಾಜಿಕ ಜಾಲತಾಣದಲ್ಲಿ ಆಲ್ ಐಸ್‌ ಆನ್‌ ರಫಾ ಫೋಟೋ ಶೇರ್‌ ಮಾಡಿ ಪ್ಯಾಲೆಸ್ತೀನ್‌ಗೆ ಬೆಂಬಲ ಸೂಚಿಸಿದ್ದರು. ಇದರ ಬೆನ್ನಲ್ಲೇ ಅವರು ಭಾರೀ ಟೀಕೆಗೆ ಗುರಿಯಾಗಿದ್ದು, ಆಕೆಗೆ ರಫಾ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲ ಎಂದು ನೆಟ್ಟಿಗರು ಜರಿದಿದ್ದಾರೆ.

VISTARANEWS.COM


on

All Eyes on Rafah
Koo

ನವದೆಹಲಿ: ಇಸ್ರೇಲ್-ಪ್ಯಾಲೆಸ್ಟೈನ್ ಯುದ್ಧ(Israel-Palestine War) ಮುಂದುವರೆದಿರುವಂತೆಯೇ, ಇನ್ಸ್ಟಾಗ್ರಾಮ್, ಫೇಸ್ಬುಕ್ ಮತ್ತು ಎಕ್ಸ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ “ಎಲ್ಲರ ಕಣ್ಣುಗಳು ರಫಾ ಮೇಲೆ ”(All Eyes on Rafah) ಎನ್ನುವ ಫೋಟೋ ವು ವೈರಲ್ ಆಗಿದೆ. ಇದರ ಬೆನ್ನಲ್ಲೇ ಈ ಫೋಟೋಗಳನ್ನು ಹಂಚಿಕೊಂಡು ಸಿನಿಮಾ ತಾರೆಯರು, ಸೆಲೆಬ್ರಿಟಿಗಳು ಪ್ಯಾಲೆಸ್ತೀನ್‌ ಪರವಾಗಿ ಧ್ವನಿ ಎತ್ತಿದ್ದಾರೆ. ಅದೇ ರೀತಿ ಕ್ರಿಕೆಟಿಗ ರೋಹಿತ್‌ ಶರ್ಮಾ(Rohit Sharma) ಪತ್ನಿ ರಿತಿಕಾ ಸಜ್ದೇಹ್‌ ಕೂಡ ಸಾಮಾಜಿಕ ಜಾಲತಾಣದಲ್ಲಿ ಆಲ್ ಐಸ್‌ ಆನ್‌ ರಫಾ ಫೋಟೋ ಶೇರ್‌ ಮಾಡಿ ಪ್ಯಾಲೆಸ್ತೀನ್‌ಗೆ ಬೆಂಬಲ ಸೂಚಿಸಿದ್ದರು. ಇದರ ಬೆನ್ನಲ್ಲೇ ಅವರು ಭಾರೀ ಟೀಕೆಗೆ ಗುರಿಯಾಗಿದ್ದು, ಆಕೆಗೆ ರಫಾ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲ ಎಂದು ನೆಟ್ಟಿಗರು ಜರಿದಿದ್ದಾರೆ.

ರಫಾ ಎಲ್ಲಿದೆ ಅನ್ನೋದಾದರೂ ಗೊತ್ತಿದೆಯೇ? ಕಾಶ್ಮೀರಿ ಪಂಡಿತರ ನರಮೇಧ, ಹಿಂದೂಗಳ ಮೇಲಿನ ದೌರ್ಜನ್ಯ, ಹಿಂಸಾಚಾರ, ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ನರಮೇಧ ಇವುಗಳ ಬಗ್ಗೆ ಮೌನವಹಿಸಿದ್ದಿರಿ. ಈಗ ಹೇಗೆ ಪ್ಯಾಲೆಸ್ತೀನ್‌ ಪರವಾಗಿ ಧ್ವನಿ ಎತ್ತಲು ಸಾಧ್ಯವಾಯ್ತು ಎಂದು ಪ್ರಶ್ನಿಸಿದ್ದಾರೆ. ಇನ್ನು ಟ್ರೋಲ್‌ ಆಗುತ್ತಿದ್ದಂತೆ ರಿತಿಕಾ ಪೋಸ್ಟ್‌ ಡಿಲೀಟ್‌ ಮಾಡಿದ್ದಾರೆ.

ಏನಿದು ಆಲ್ ಐಸ್ ಆನ್ ರಫಾ ಫೋಟೋ?

ಆಲ್ ಐಸ್ ಆನ್ ರಫಾ ಚಿತ್ರವು ಗಾಝಾದ ದಕ್ಷಿಣದಲ್ಲಿರುವ ರಾಫಾ ನಗರದ ನಿರಾಶ್ರಿತರ ಶಿಬಿರದಲ್ಲಿ ಡೇರೆಗಳನ್ನು ತೋರಿಸುತ್ತದೆ, ಅಲ್ಲಿ ಇಸ್ರೇಲ್ನಿಂದ ನಡೆಯುತ್ತಿರುವ ದಾಳಿಯ ನಂತರ ಅನೇಕ ಫೆಲೆಸ್ತೀನೀಯರು ಸ್ಥಳಾಂತರಗೊಂಡಿದ್ದಾರೆ. ಸ್ಥಳೀಯ ಅಧಿಕಾರಿಗಳ ಪ್ರಕಾರ, ಭಾನುವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 45 ನಾಗರಿಕರು ಸಾವನ್ನಪ್ಪಿದ್ದಾರೆ. ಇದರ ನಂತರ ಈ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು.

ರಫಾ ಮೇಲೆ ಎಲ್ಲರ ಕಣ್ಣು ಅರ್ಥ

‘ರಫಾ ಮೇಲೆ ಎಲ್ಲರ ಕಣ್ಣುಗಳು’ ಚಿತ್ರವು ನಡೆಯುತ್ತಿರುವ ಯುದ್ಧದ ಬಗ್ಗೆ ಜಾಗೃತಿ ಮೂಡಿಸಲು ಕರೆ ನೀಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಆಕ್ರಮಿತ ಫೆಲೆಸ್ತೀನ್ ಪ್ರದೇಶಗಳ ಕಚೇರಿಯ ನಿರ್ದೇಶಕ ರಿಕ್ ಪೀಪರ್ಕಾರ್ನ್ ಅವರ ಹೇಳಿಕೆಯಿಂದ ಈ ಘೋಷಣೆ ಹುಟ್ಟಿಕೊಂಡಿದೆ ಎಂದು ತೋರುತ್ತದೆ. ಫೆಬ್ರವರಿಯಲ್ಲಿ, “ಎಲ್ಲರ ಕಣ್ಣುಗಳು ರಫಾ ಮೇಲೆ ಇವೆ” ಎಂದು ಅವರು ಹೇಳಿದರು. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ನಗರವನ್ನು ಸ್ಥಳಾಂತರಿಸುವ ಯೋಜನೆಗೆ ಆದೇಶಿಸಿದ ಸ್ವಲ್ಪ ಸಮಯದ ನಂತರ ಈ ಬೆಳವಣಿಗೆ ನಡೆದಿದೆ.

ರಫಾವನ್ನು ಹಮಾಸ್‌ ಉಗ್ರರ ಕಟ್ಟ ಕಡೇಯ ಭದ್ರಕೋಟೆ ಎಂದಿರುವ ನೆತನ್ಯಾಹು, ಅದನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿರುವುದಾಗಿ ತಿಳಿಸಿದ್ದರು. ಈ ಪ್ರದೇಶದಲ್ಲಿ ಸುಮಾರು 14 ದಶಲಕ್ಷಕ್ಕೂ ಹೆಚ್ಚು ಫೆಲೆಸ್ತೀನೀಯರು ಆಶ್ರಯ ಪಡೆದಿದ್ದು, ಇಸ್ರೇಲ್‌ ನಡೆಸಿದ ದಾಳಿಯಲ್ಲಿ 45ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು. ಪ್ಯಾಲೆಸ್ಟೈನ್ ಮೇಲಿನ ಇಸ್ರೇಲ್‌ನ ಇತ್ತೀಚಿನ ದಾಳಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾಗಿ ಖಂಡಿಸಲಾಗುತ್ತಿದೆ. ಈ ಸಾಲಿನಲ್ಲಿ ಹಲವು ಭಾರತೀಯ ಸೆಲೆಬ್ರಿಟಿಗಳು ಸಹ ಸೇರಿದ್ದಾರೆ.

ಇದನ್ನೂ ಓದಿ:Aditi Prabhudeva: ತಾಯಿಯಾದ ಬಳಿಕ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ಅದಿತಿ ಪ್ರಭುದೇವ!

ರಫಾ ಮೇಲಿನ ಇತ್ತೀಚಿನ ಇಸ್ರೇಲ್​​ ದಾಳಿಯು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಅನೇಕರು ಗಾಜಾದಲ್ಲಿ ಶೀಘ್ರ ಕದನ ವಿರಾಮಕ್ಕೆ ಕರೆ ನೀಡಿದ್ದಾರೆ. ಪ್ಯಾಲೆಸ್ಟೈನ್ ಜನರನ್ನು ಬೆಂಬಲಿಸಿ ಮಾತನಾಡಿದವರಲ್ಲಿಸೌತ್ ಸ್ಟಾರ್ ನಟಿ ಸಮಂತಾ ರುತ್ ಪ್ರಭು ಕೂಡ ಒಬ್ಬರು. ಇಸ್ರೇಲ್‌ನ ಕ್ರಮಗಳನ್ನು ಖಂಡಿಸುವ ಬರಹವನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿ ಸೆಕ್ಷನ್​ನಲ್ಲಿ ಶೇರ್ ಮಾಡಿದ್ದಾರೆ.

Continue Reading
Advertisement
Modi Meditation
ದೇಶ2 mins ago

Modi Meditation: ಮೋದಿ ಧ್ಯಾನ ಮಾಡುವುದೂ ನೀತಿ ಸಂಹಿತೆ ಉಲ್ಲಂಘನೆ ಎಂದ ಕಾಂಗ್ರೆಸ್;‌ ಆಯೋಗಕ್ಕೆ ದೂರು!

T20 World Cup 2024
ಕ್ರೀಡೆ6 mins ago

T20 World Cup 2024: ಟಿ20 ವಿಶ್ವಕಪ್​ನಲ್ಲಿ ಎಷ್ಟು ಬೌಲರ್​ಗಳು ಹ್ಯಾಟ್ರಿಕ್​ ವಿಕೆಟ್​ ಕಿತ್ತ ಸಾಧನೆ ಮಾಡಿದ್ದಾರೆ?

Self Harming
ಕರ್ನಾಟಕ46 mins ago

Self Harming: ಶಾಲೆಗೆ ಹೋಗಲು ಬೇಸತ್ತು 11 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ

Rudram II
ದೇಶ1 hour ago

Rudram II: ಆಗಸದಿಂದಲೇ ವೈರಿಗಳನ್ನು ನಾಶಪಡಿಸುವ ರುದ್ರಂ II ಕ್ಷಿಪಣಿ ಪ್ರಯೋಗ ಯಶಸ್ವಿ; ಶತ್ರುಗಳಿಗೆ ನಡುಕ!

Chahal-Dhanashree
ಕ್ರೀಡೆ2 hours ago

Chahal-Dhanashree: ಶೀಘ್ರದಲ್ಲೇ ಸಿಹಿ ಸುದ್ದಿ ನೀಡಲಿದ್ದಾರಾ ಚಹಲ್?; ಕುತೂಹಲ ಮೂಡಿಸಿದ ಪತ್ನಿಯ ಪೋಸ್ಟ್!

Timing change of 5 trains arriving at Sri Siddharooda Swamiji Railway Station Hubballi
ಹುಬ್ಬಳ್ಳಿ2 hours ago

Hubballi Train: ಪ್ರಯಾಣಿಕರೇ ಗಮನಿಸಿ; ಹುಬ್ಬಳ್ಳಿಗೆ ಆಗಮಿಸುವ 5 ರೈಲುಗಳ ಸಮಯ ಬದಲಾಗಿದೆ

Valmiki corporation Scam
ಕರ್ನಾಟಕ2 hours ago

Valmiki Corporation Scam: ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಪ್ರಕರಣ; ಎಂಡಿ, ಲೆಕ್ಕಾಧಿಕಾರಿ ಅಮಾನತು

PM Kisan Samman
ಕೃಷಿ2 hours ago

PM Kisan Samman: ಪಿಎಂ ಕಿಸಾನ್ ಸಮ್ಮಾನ್ 17ನೇ ಕಂತಿನ ಹಣ ಬಿಡುಗಡೆ ಯಾವಾಗ? ಪರಿಶೀಲಿಸುವುದು ಹೇಗೆ?

Nita Ambani
ವಾಣಿಜ್ಯ2 hours ago

Nita Ambani: ನೀತಾ ಅಂಬಾನಿ ಕುಡಿಯುವ ನೀರಿನ ಬಾಟಲಿಯ ಬೆಲೆ 49 ಲಕ್ಷ ರೂಪಾಯಿ!

Team India Coach
ಕ್ರೀಡೆ2 hours ago

Team India Coach: ಅಭಿಮಾನಿಗಳು ಬಯಸಿದರೂ ಕೋಚ್​ ಹುದ್ದೆಗೆ ಧೋನಿ ಅನರ್ಹ; ಕಾರಣವೇನು?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ1 day ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 day ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ3 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು3 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ7 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌