Viral Video: ಪ್ರೀತಿಯಿಂದ ಬಳಿ ಬಂದ ಯುವತಿಗೆ ಆನೆಯ ಉಗ್ರ ಪ್ರತಿಕ್ರಿಯೆ! ಶಾಕಿಂಗ್ ವಿಡಿಯೊ ಇಲ್ಲಿದೆ - Vistara News

ವೈರಲ್ ನ್ಯೂಸ್

Viral Video: ಪ್ರೀತಿಯಿಂದ ಬಳಿ ಬಂದ ಯುವತಿಗೆ ಆನೆಯ ಉಗ್ರ ಪ್ರತಿಕ್ರಿಯೆ! ಶಾಕಿಂಗ್ ವಿಡಿಯೊ ಇಲ್ಲಿದೆ

Viral Video: ತನ್ನ ಬಳಿ ಬಂದ ಮಹಿಳೆಯನ್ನು ಆನೆಯೊಂದು ಸೊಂಡಿಲಿನಿಂದ ತಳ್ಳಿ ನೆಲಕ್ಕೆ ಬೀಳಿಸುತ್ತಿರುವ ವಿಡಿಯೊ ವೈರಲ್‌ ಆಗಿದೆ.

VISTARANEWS.COM


on

viral video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸಾಮಾನ್ಯವಾಗಿ ಸಾಕಾನೆಗಳು ಶಾಂತ ಸ್ವಾಭಾವ ಹೊಂದಿರುತ್ತವೆ. ಮಾವುತನ ಮಾತು ಕೇಳಿಕೊಂಡು ತಮ್ಮಷ್ಟಕ್ಕೆ ತಾವಿರುತ್ತವೆ. ಆದರೆ ಕೆಲವೊಮ್ಮೆ ತಾಳ್ಮೆ ಕಳೆದುಕೊಂಡರೆ ಮಾತ್ರ ಅವನ್ನು ಎದುರಿಸಲು ಸಾಧ್ಯವೇ ಇಲ್ಲ. ಕೆಣಕಿದವರು ಕಥೆ ಮುಗಿಯಿತು ಅಂತನೇ ಅರ್ಥ. ಈ ರೀತಿಯ ಅನೇಕ ವಿಡಿಯೊಗಳು ಈ ಹಿಂದೆ ಇಂಟರ್‌ನೆಟ್‌ನಲ್ಲಿ ಸದ್ದು ಮಾಡಿವೆ. ಇದೀಗ ಮಹಿಳೆಯೊಬ್ಬರನ್ನು ಆನೆ ತಳ್ಳುತ್ತಿರುವ ದೃಶ್ಯ ವೈರಲ್‌ ಆಗಿದೆ (Viral Video). ಅದೃಷ್ಟವಶಾತ್‌ ಆಕೆಗೆ ಹೆಚ್ಚಿನ ಗಾಯಗಳಾಗಿಲ್ಲ. ತನ್ನ ಪಾಡಿಗೆ ಆಹಾರ ಸೇವಿಸುತ್ತಿದ್ದ ಆನೆಯೊಂದರ ಬಳಿಗೆ ಈ ಮಹಿಳೆ ತೆರಳಿದ್ದು, ಕೋಪದಿಂದ ಅದು ತಳ್ಳಿದೆ.

ವಿಡಿಯೊದಲ್ಲೇನಿದೆ?

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ʼʼಹುಡುಗಿ ಆನೆಯೊಂದಿಗೆ ಸ್ನೇಹ ಬೆಳೆಸಲು ಪ್ರಯತ್ನಿಸುತ್ತಾಳೆʼʼ ಎನ್ನುವ ಕ್ಯಾಪ್ಶನ್‌ನೊಂದಿಗೆ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಈಗಾಗಲೇ ಈ ವಿಡಿಯೊವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ವಿಡಿಯೊದಲ್ಲಿ ಮಹಿಳೆ ಆನೆಯೊಂದಿಗೆ ಸ್ನೇಹ ಬೆಳೆಸಲು ಪ್ರಯತ್ನಿಸುತ್ತಿರುವುದು ಕಾಣಬಹುದು. ಆಹಾರ ಸೇವಿಸುತ್ತಿರುವ ಆನೆಯ ಬಳಿಗೆ ನಡೆಯುತ್ತಾಳೆ. ಕೆಲವು ಕ್ಷಣಗಳ ನಂತರ ಕೋಪಗೊಂಡ ಆನೆ ಸೊಂಡಿಲಿನಿಂದ ತಳ್ಳುತ್ತದೆ. ಈ ರಭಸಕ್ಕೆ ಆಕೆ ನೆಲದ ಮೇಲೆ ಬೀಳುತ್ತಾಳೆ. ಬಳಿಕ ಆನೆಯ ಸಹವಾಸವೇ ಬೇಡ ಎನ್ನುವಂತೆ ಎದ್ದನೋ ಬಿದ್ದನೋ ಎಂದು ಸ್ಥಳದಿಂದ ಓಡಿ ಹೋಗುತ್ತಾಳೆ.

ನೆಟ್ಟಿಗರು ಏನಂದ್ರು?

ಈ ವಿಡಿಯೊ ನೋಡಿದ ಅನೇಕರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಆನೆ ಮೊದಲೇ ತನ್ನ ಬಳಿ ಬರಬೇಡ ಎಂದು ತಲೆ ಅಲ್ಲಾಡಿಸಿ ಸೂಚನೆ ನೀಡಿತ್ತು. ಹಾಗಿದ್ದೂ ಅದರ ಬಳಿಗೆ ಹೋಗಿದ್ದು ಆಕೆಯ ತಪ್ಪು ಎಂದು ಕೆಲವರು ಹೇಳಿದ್ದಾರೆ. ಪ್ರಾಣಿಗಳು ಆಹಾರ ಸೇವಿಸುವಾಗ ಅವುಗಳ ಬಳಿಗೆ ಹೋಗಲೇ ಬಾರದು. ಬೇಕಿದ್ದರೆ ಬೆಕ್ಕು, ನಾಯಿಯನ್ನೇ ನೋಡಿ. ಅವು ಏನನ್ನಾದರೂ ತಿನ್ನುವಾಗ ನಾವು ಬಳಿ ತೆರಳಿದರೆ ಅವು ಕೆರಳುತ್ತವೆ ಎಂದು ಇನ್ನು ಹಲವರು ಉಪದೇಶ ನೀಡಿದ್ದಾರೆ. ಇನ್ನು ಕೆಲವರಂತೂ ಆನೆಯ ವರ್ತನೆಗೆ ನೋಡಿ ಶಾಕ್‌ಗೆ ಒಳಗಾಗಿದ್ದಾರೆ.

ʼʼಕಾಡು ಪ್ರಾಣಿಗಳನ್ನು ಅವುಗಳ ಪಾಡಿಗೆ ಬಿಟ್ಟು ಬಿಡಿʼʼ ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. “ಜೋರಾಗಿ ಬಾಲ ಅಲ್ಲಾಡಿಸುತ್ತಿರುವ ಆನೆಯ ಹತ್ತಿರ ಹೋಗಲೇಬೇಡಿ. ಇದು ಆಕ್ರಮಣಕಾರಿ ಮನೋಭಾವದ ಸೂಚನೆ” ಎಂದು ಇನ್ನೊಬ್ಬರು ತಿಳಿಸಿದ್ದಾರೆ. ʼʼಆನೆ ಅಂತಲ್ಲ ಯಾವುದೇ ಕಾಡು ಪ್ರಾಣಿಗಳ ಜತೆ ಹುಡುಗಾಟ ಮಾಡಬೇಡಿʼʼ ಎಂದು ಮತ್ತೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ಆನೆಗೆ ದಾರಿ ಬಿಟ್ಟು ಕೊಟ್ಟ ಬಸ್‌ ಡ್ರೈವರ್‌; ನೆಟ್ಟಿಗರ ಮನಗೆದ್ದ ವಿಡಿಯೊ ಇಲ್ಲಿದೆ

ಪ್ರವಾಸಿಗರನ್ನು ಅಟ್ಟಿಸಿಕೊಂಡು ಬಂದಿದ್ದ ಆನೆ

ಕೆಲವು ದಿನಗಳ ಹಿಂದೆ ಬಂಡಿಪುರ ಹುಲಿ ಅಭಯಾರಣ್ಯದಲ್ಲಿ ಫೋಟೋ ತೆಗೆಯಲು ಕಾರಿನಿಂದ ಇಳಿದ ಇಬ್ಬರು ಪ್ರವಾಸಿಗರನ್ನು ಕಾಡಾನೆ ಅಟ್ಟಿಸುತ್ತಿರುವ ವಿಡಿಯೊ ಇತ್ತೀಚೆಗೆ ಇಂಟರ್‌ ನೆಟ್‌ನಲ್ಲಿ ಭಾರೀ ಸದ್ದು ಮಾಡಿತ್ತು. ರಸ್ತೆ ಮಧ್ಯೆ ವಾಹನ ನಿಲ್ಲಿಸಬಾರದು ಎನ್ನುವ ನಿಯಮ ಮೀರಿ ಯುವಕರ ಗುಂಪೊಂದು ದುಸ್ಸಾಹಸಕ್ಕೆ ಕೈ ಹಾಕಿತ್ತು. ಕೆರಳಿದ್ದ ಕಾಡಾನೆಯೊಂದು ಅವರನ್ನು ಅಟ್ಟಿಕೊಂಡು ಬಂದಿತ್ತು. ಕೂದಲೆಳೆ ಅಂತರದಲ್ಲಿ ಅವರು ಅಂದು ಪಾರಾಗಿದ್ದರು. ವಿಡಿಯೊ ವೈರಲ್‌ ಆದ ಬಳಿಕ ಈ ಯುವಕರ ಗುಂಪನ್ನು ಅನೇಕರು ಟೀಕಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral Video: ಮಹಿಳೆಯ ಎದೆ, ಕುತ್ತಿಗೆಗೆ ಭೀಕರವಾಗಿ ತಿವಿದ ಬೀದಿ ಹಸು; ಮೈ ನಡುಗಿಸುವ ವಿಡಿಯೊ

Viral Video: ಬೀದಿಯಲ್ಲಿ ಹಸುಗಳು ಮಹಿಳೆಯ ಮೇಲೆ ಕ್ರೂರವಾಗಿ ದಾಳಿ ಮಾಡುವುದನ್ನು ವಿಡಿಯೊದಲ್ಲಿ ಸೆರೆಹಿಡಿಯಲಾಗಿದೆ. ವೈರಲ್ ಆಗಿರುವ ಈ ವಿಡಿಯೊದಲ್ಲಿ, ಬೀದಿ ದನಗಳ ಗುಂಪು ಮಹಿಳೆಯ ಮೇಲೆ ದಾಳಿ ಮಾಡಿದೆ. ಹಸುವೊಂದು ಮಹಿಳೆಯ ಎದೆ ಹಾಗೂ ಕುತ್ತಿಗೆಗೆ ತೀವ್ರವಾಗಿ ತಿವಿದಿದೆ. ಕಾಲಿನಿಂದ ತುಳಿದು ತುಳಿದು ಘಾಸಿಗೊಳಿಸಿದೆ. ಈ ವಿಡಿಯೊ ಆತಂಕ ಮೂಡಿಸುತ್ತದೆ.

VISTARANEWS.COM


on

Viral Video
Koo


ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳು ಮನುಷ್ಯರ ಮೇಲೆ ದಾಳಿ ಮಾಡುವಂತಹ ಘಟನೆಗಳು ಹೆಚ್ಚು ಕಂಡುಬರುತ್ತಿದೆ. ಸಾಧು ಪ್ರಾಣಿಗಳಾದ ಹಸು, ಎಮ್ಮೆಗಳು ಕ್ರೂರ ಪ್ರಾಣಿಗಳಂತೆ ವರ್ತಿಸಲು ಶುರು ಮಾಡಿವೆ. ಎಲ್ಲೆಂದರಲ್ಲಿ ಜನರನ್ನು ಅಟ್ಟಾಡಿಸಿಕೊಂಡು ದಾಳಿ ಮಾಡುತ್ತಿವೆ. ಇದೀಗ ಅಂತಹದೊಂದು ಆಘಾತಕಾರಿ ಘಟನೆ ಹರಿಯಾಣದ ಕುರುಕ್ಷೇತ್ರದಲ್ಲಿ ನಡೆದಿದ್ದು, ಬೀದಿ ಹಸುವಿನ ದಾಳಿಗೆ ಮಹಿಳೆಯೊಬ್ಬರು ತುತ್ತಾಗಿ ಭೀಕರವಾಗಿ ಗಾಯಗೊಂಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ (Viral Video) ಹರಿದಾಡುತ್ತಿದೆ.

ಬೀದಿಯಲ್ಲಿ ಹಸುಗಳು ಮಹಿಳೆಯ ಮೇಲೆ ಕ್ರೂರವಾಗಿ ದಾಳಿ ಮಾಡುವುದನ್ನು ವಿಡಿಯೊದಲ್ಲಿ ಸೆರೆಹಿಡಿಯಲಾಗಿದೆ. ವೈರಲ್ ಆಗಿರುವ ಈ ವಿಡಿಯೊದಲ್ಲಿ, ಬೀದಿ ಹಸುಗಳ ಗುಂಪು ಮಹಿಳೆಯ ಮೇಲೆ ದಾಳಿ ಮಾಡಿದೆ. ಹಸುವೊಂದು ಮಹಿಳೆಯ ಎದೆ ಹಾಗೂ ಕುತ್ತಿಗೆಗೆ ತಿವಿದಿದೆ. ಕಾಲಿನಿಂದ ತುಳಿದು ತುಳಿದು ಘಾಸಿಗೊಳಿಸಿದೆ. ಹಲವಾರು ಜನರು ಮಹಿಳೆಯನ್ನು ಉಳಿಸಲು ಪ್ರಯತ್ನಿಸಿದರು. ಆದರೆ ದನಗಳು ಮಾತ್ರ ತಮ್ಮ ಕೃತ್ಯವನ್ನು ನಿಲ್ಲಿಸಲಿಲ್ಲ. ಇದರ ಪರಿಣಾಮವಾಗಿ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಹಸು ಮಹಿಳೆಯನ್ನು ತಿವಿದ ಭಯಾನಕ ದೃಶ್ಯದ ಬಗ್ಗೆ ಹಾಗೂ ಇದರ ಪರಿಣಾಮ ಮಹಿಳೆಯ ಎದೆ ಮತ್ತು ಗಂಟಲು ಹರಿದುಹಾಕಿರುವ ಬಗ್ಗೆ ಪ್ರತ್ಯಕ್ಷದರ್ಶಿಗಳು ವಿವರಿಸಿದಾಗ ಎಂಥವರಿಗೂ ಮೈ ಜುಮ್ಮೆನಿಸುತ್ತದೆ.

ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಭವಿಷ್ಯದಲ್ಲಿ ಇದೇ ರೀತಿಯ ದುರಂತಗಳು ನಡೆಯದಂತೆ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜನಾಗ್ರಹ ಕೇಳಿ ಬಂದಿದೆ. ಆದರೆ ಕುರುಕ್ಷೇತ್ರದ ಅಧಿಕಾರಿಗಳು ಘಟನೆಗೆ ಸಂಬಂಧಿಸಿದಂತೆ ಇನ್ನೂ ಕಠಿಣ ಕ್ರಮ ಕೈಗೊಂಡಿಲ್ಲ.

ಇದನ್ನೂ ಓದಿ: 1 ಸಾವಿರ ರೂ. ಲಂಚ ಪ್ರಕರಣ 25 ವರ್ಷಗಳ ಬಳಿಕ ಇತ್ಯರ್ಥ! ಹಿಂಗಾಂದ್ರೆ ಹೆಂಗೆ ಅಂತಿದ್ದಾರೆ ಜನ!

ಈ ಘಟನೆಗೆ ಸಂಬಂಧಿಸಿದಂತೆ ನಗರ ಪ್ರದೇಶಗಳಲ್ಲಿ ಆಕ್ರಮಣಕಾರಿ ಪ್ರಾಣಿಗಳ ಅನಿಯಂತ್ರಿತ ಉಪಸ್ಥಿತಿಯ ಬಗ್ಗೆ ಸಂಬಂಧಪಟ್ಟ ನಾಗರಿಕರು ಮತ್ತು ಸ್ಥಳೀಯ ನಿವಾಸಿಗಳು ಆಕ್ರೋಶ ಮತ್ತು ಭಯವನ್ನು ವ್ಯಕ್ತಪಡಿಸಿದ್ದಾರೆ. ಈ ಘಟನೆಯು ಕುರುಕ್ಷೇತ್ರದಲ್ಲಿ ಬೀದಿ ಪ್ರಾಣಿಗಳ ಸಮಸ್ಯೆಯನ್ನು ಪರಿಹರಿಸಲು ಅಧಿಕಾರಿಗಳಿಂದ ತುರ್ತು ಕ್ರಮ ಅಗತ್ಯವಿದೆ ಎಂಬುದನ್ನು ತಿಳಿಸುತ್ತದೆ.

Continue Reading

Latest

Viral Video: ಕೆಸರು ಗದ್ದೆಯಲ್ಲಿ ಹೊರಳಾಡಿದ ದಂಪತಿ; ವೈರಲ್ ಆಯ್ತು ಇವರಿಬ್ಬರ ನಾಗಿನಿ ಡ್ಯಾನ್ಸ್‌!

Viral Video: ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ವಿಡಿಯೊದಲ್ಲಿ, ದಂಪತಿ ನೀರಿನಿಂದ ತುಂಬಿರುವ ಹೊಲದಲ್ಲಿ ಹಾವಿನಂತೆ ನೃತ್ಯ ಮಾಡಿದ್ದಾರೆ. ಅವರಿಬ್ಬರು ಹೊಲದಲ್ಲಿನ ಕೆಸರಿನಲ್ಲಿ ಮಲಗಿಕೊಂಡು, ನಂತರ ನಿಂತು ಹಾವಿನಂತೆ ಹೊರಳಾಡಿದ್ದಾರೆ. ಇಲ್ಲಿ ಮಹಿಳೆ ರೊಮ್ಯಾಂಟಿಕ್ ಭಂಗಿಯಲ್ಲಿ ಕುಣಿದಿದ್ದಾಳೆ. ಇನ್ನು ಹೊಲದಲ್ಲಿ ಕೆಸರೇ ತುಂಬಿರುವುದರಿಂದ ದಂಪತಿಯ ಬಟ್ಟೆ, ಮೈ ಕೇಸರಿನಿಂದ ಬಳಿದುಕೊಂಡಿದೆ. ಈ ದೃಶ್ಯವು ಅನೇಕ ವೀಕ್ಷಕರನ್ನು ರಂಜಿಸಿದೆ!

VISTARANEWS.COM


on

Viral Video
Koo


ಜನರು ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಹಲವು ಬಗೆಯ ರೀಲ್ಸ್‌ಗಳನ್ನ ಮಾಡಿ ಹರಿಬಿಡುತ್ತಾರೆ. ಈ ರೀಲ್ಸ್ ಮೂಲಕ ಅನೇಕ ಪ್ರತಿಭೆಗಳು ಹೊರಗೆ ಬರುತ್ತವೆ. ಇದೀಗ ದಂಪತಿಯ ಅಂತಹದೊಂದು ಪ್ರತಿಭೆ ಹೊರಗೆ ಬಂದಿದೆ. ಇನ್ನೇನು ನಾಗರ ಪಂಚಮಿ ಹಬ್ಬ ಹತ್ತಿರ ಬರುತ್ತಿದೆ. ಜನರು ನಾಗದೇವರನ್ನು ನೆನೆದು ದೇವರಿಗೆ ಪೂಜೆ ಸಲ್ಲಿಸಲಿದ್ದಾರೆ. ಈ ಸಮಯದಲ್ಲಿ ಇದೀಗ ದಂಪತಿ ನಾಗಿನಿ ಡ್ಯಾನ್ಸ್ ಮೂಲಕ ಜನರಿಗೆ ನಾಗದೇವರ ದರ್ಶನ ನೀಡಿದ್ದಾರೆ. ಅವರ ಡ್ಯಾನ್ಸ್ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ. ಅವರ ಡ್ಯಾನ್ಸ್ ವೀಕ್ಷಕರ ಮುಖದಲ್ಲಿ ನಗುವನ್ನು ಮೂಡಿಸಿದೆ.

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ವಿಡಿಯೊದಲ್ಲಿ, ದಂಪತಿ ನೀರಿನಿಂದ ತುಂಬಿರುವ ಹೊಲದಲ್ಲಿ ಹಾವಿನಂತಹ ಚಲನೆಗಳಿಂದ ಸ್ಫೂರ್ತಿ ಪಡೆದ ನಾಗಿನ್ ಡ್ಯಾನ್ಸ್ ಅನ್ನು ಪ್ರದರ್ಶಿಸಿದ್ದಾರೆ. ಅವರಿಬ್ಬರು ಹೊಲದಲ್ಲಿನ ಕೆಸರಿನಲ್ಲಿ ಮಲಗಿಕೊಂಡು, ನಂತರ ನಿಂತು ಹಾವಿನಂತೆ ಬಳಕುತ್ತಾ ನೃತ್ಯ ಮಾಡಿದ್ದಾರೆ. ಇಲ್ಲಿ ಮಹಿಳೆ ರೊಮ್ಯಾಂಟಿಕ್ ಭಂಗಿಗಳನ್ನು ನೀಡಿದ್ದಾಳೆ. ಆ ಹೊಲದಲ್ಲಿ ಕೆಸರೇ ತುಂಬಿರುವುದರಿಂದ ದಂಪತಿಯ ಬಟ್ಟೆ, ಮೈ ಕೇಸರಿನಿಂದ ಬಳಿದುಕೊಂಡಿದೆ. ಈ ದೃಶ್ಯವು ಅನೇಕ ವೀಕ್ಷಕರನ್ನು ರಂಜಿಸಿದೆ ಮತ್ತು ಗೊಂದಲಕ್ಕೀಡು ಮಾಡಿದೆ.

ವಿನಯ್ ವಿಕೆ 9351 ಎಂಬ ಬಳಕೆದಾರರು ಯೂಟ್ಯೂಬ್‍ನಲ್ಲಿ ಹಂಚಿಕೊಂಡಿರುವ ಈ ವಿಡಿಯೊ ಶೀಘ್ರದಲ್ಲೇ ವೈರಲ್ ಆಗಿದ್ದು, ಸಾವಿರಾರು ವೀಕ್ಷಣೆಗಳನ್ನು ಗಳಿಸಿದೆ ಮತ್ತು ಅನೇಕರು ಕಾಮೆಂಟ್‌ಗಳನ್ನು ಮಾಡಿದ್ದಾರೆ. “ಲೈಕ್‌ಗಳು ಮತ್ತು ವೀಕ್ಷಣೆಗಳ ಹಸಿವು ಜನರನ್ನು ಹುಚ್ಚರನ್ನಾಗಿ ಮಾಡುತ್ತಿದೆ” ಎಂದು ಒಬ್ಬ ವೀಕ್ಷಕರು ಕಾಮೆಂಟ್ ಮಾಡಿದರೆ, ಇನ್ನೊಬ್ಬರು “ನಾಗಿನ್ ಈ ರೀತಿ ನೃತ್ಯ ಮಾಡುತ್ತಾರೆಯೇ” ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: 1 ಸಾವಿರ ರೂ. ಲಂಚ ಪ್ರಕರಣ 25 ವರ್ಷಗಳ ಬಳಿಕ ಇತ್ಯರ್ಥ! ಹಿಂಗಾಂದ್ರೆ ಹೆಂಗೆ ಅಂತಿದ್ದಾರೆ ಜನ!

ಸಾಮಾನ್ಯವಾಗಿ ಜನರು ಕೆಸರು ಕಾಲಿಗೆ ತಗುಲಿದರೆ ಅದನ್ನು ಕಂಡು ಅಸಹ್ಯಪಟ್ಟುಕೊಂಡು ಬೇಗನೆ ಹೋಗಿ ಸ್ವಚ್ಛಗೊಳಿಸಿಕೊಳ್ಳುತ್ತಾರೆ. ಅಂತಹದರಲ್ಲಿ ಈ ದಂಪತಿ ಕೆಸರು ಗದ್ದೆಯಲ್ಲೇ ಬಿದ್ದು ಉರುಳಾಡುತ್ತಿದ್ದಾರೆ. ಇದನ್ನು ನೋಡಿದರೆ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಜನರು ಎಷ್ಟು ದೂರ ಹೋಗುತ್ತಾರೆ ಮತ್ತು ಯಾವ ಕೆಲಸಕ್ಕೂ ಮುಂದಾಗುತ್ತಾರೆ ಎಂಬುದನ್ನು ಎತ್ತಿ ತೋರಿಸುತ್ತದೆ. ಕೆಲವು ವೀಕ್ಷಕರು ವಿಡಿಯೊವನ್ನು ಮನರಂಜನೆಯಾಗಿ ಕಂಡುಕೊಂಡರೆ, ಇತರರು ಆನ್‍ಲೈನ್‍ ಖ್ಯಾತಿಯಗಾಗಿ ಜನರು ಎಷ್ಟು ದೂರ ಹೋಗಬಹುದು ಎಂಬ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

Continue Reading

ಕ್ರೀಡೆ

Paris Olympics 2024: ಪರ್‌ಫೆಕ್ಟ್‌ ಕ್ಲಿಕ್‌ ಎಂದರೆ ಇದು; ಭಾರಿ ಸದ್ದು ಮಾಡುತ್ತಿದೆ ಒಲಿಂಪಿಕ್ಸ್‌ನ ಈ ವೈರಲ್‌ ಫೋಟೊ

Paris Olympics 2024: ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ ಈಗಾಗಲೇ ವಿಶ್ವದ ಕ್ರೀಡಾಸಕ್ತರ ಗಮನ ಸೆಳೆದಿದೆ. ಈ ಮಧ್ಯೆ ಸ್ಪರ್ಧೆಯ ನಡುವೆ ಎಎಫ್‌ಪಿ ಛಾಯಾಗ್ರಾಹಕ ಜೆರೋಮ್ ಬ್ರೌಲೆಟ್ ಕ್ಲಿಕ್ಕಿಸಿದ ಅಪರೂಪದ ಫೋಟೊವೊಂದು ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ಬ್ರೆಜಿಲ್‌ನ ಸರ್ಫಿಂಗ್‌ ಸ್ಪರ್ಧಿ ಗೇಬ್ರಿಯಲ್ ಮೆಡಿನಾ ನೀರಿನ ಮೇಲೆ ಜಿಗಿದು ಗಾಳಿಯಲ್ಲಿ ತೇಲುತ್ತಿರುವ ಕ್ಷಣದಲ್ಲಿ ಸೆರೆ ಹಿಡಿದ ಫೋಟೊ ಇದಾಗಿದೆ.

VISTARANEWS.COM


on

Paris Olympics 2024
Koo

ಪ್ಯಾರಿಸ್‌: ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ ಈಗಾಗಲೇ ವಿಶ್ವದ ಕ್ರೀಡಾಸಕ್ತರ ಗಮನ ಸೆಳೆದಿದೆ (Paris Olympics 2024). ಈ ಬಾರಿ ಭಾರತದ ಸಾಧನೆಯೂ ಉತ್ತಮವಾಗಿದ್ದು, ಎರಡು ಕಂಚಿನ ಪದಕ ತನ್ನದಾಗಿಸಿಕೊಂಡಿದೆ. ಈ ಮಧ್ಯೆ ಸ್ಪರ್ಧೆಯ ನಡುವೆ ಎಎಫ್‌ಪಿ ಛಾಯಾಗ್ರಾಹಕ (AFP photographer) ಜೆರೋಮ್ ಬ್ರೌಲೆಟ್ (Jerome Brouillet) ಕ್ಲಿಕ್ಕಿಸಿದ ಅಪರೂಪದ ಫೋಟೊವೊಂದು ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ಬ್ರೆಜಿಲ್‌ನ ಸರ್ಫಿಂಗ್‌ ಸ್ಪರ್ಧಿ ಗೇಬ್ರಿಯಲ್ ಮೆಡಿನಾ (Gabriel Medina) ಅವರು ಟಹೀಟಿಯಲ್ಲಿ ದಾಖಲೆಯ ಒಲಿಂಪಿಕ್ಸ್‌ ಸ್ಕೋರ್ ಗಳಿಸಿದ ನಂತರ ನೀರಿನಿಂದ ಹೊರ ಬರುತ್ತಿರುವ ಫೋಟೊ ಇದಾಗಿದ್ದು, ಗಮನ ಸೆಳೆಯುತ್ತಿದೆ (Viral News).

ಗೇಬ್ರಿಯಲ್ ಮೆಡಿನಾ ನೀರಿನ ಮೇಲೆ ಜಿಗಿದು ಗಾಳಿಯಲ್ಲಿ ತೇಲುತ್ತಿರುವ ಕ್ಷಣದಲ್ಲಿ ಸೆರೆ ಹಿಡಿದ ಫೋಟೊ ಇದಾಗಿದ್ದು, ಛಾಯಾಗ್ರಾಹಕ ಜೆರೋಮ್ ಬ್ರೌಲೆಟ್ ಅವರ ಕೌಶಲ್ಯಕ್ಕೆ, ಫರ್‌ಫೆಕ್ಟ್‌ ಟೈಮಿಂಗ್ಸ್‌ಗೆ ನೆಟ್ಟಿಗರು ಮನ ಸೋತಿದ್ದಾರೆ. ʼʼಆ ಕ್ಷಣಕ್ಕೆ ಇದು ಇಷ್ಟು ಪರಿಪೂರ್ಣವಾಗಿ ಬರುತ್ತದೆ ಎಂದುಕೊಂಡಿರಲಿಲ್ಲ. ಅಪೂರ್ವ ಕ್ಷಣವನ್ನು ಸೆರೆಹಿಡಿದಿದ್ದೇನೆ ಎನ್ನುವುದು ಗೊತ್ತಿತ್ತು. ಆದರೆ ಇಷ್ಟು ಪರಿಪೂರ್ಣವಾಗಿರುತ್ತದೆ ಎಂದುಕೊಂಡಿರಲಿಲ್ಲʼʼ ಎಂದು ಜೆರೋಮ್ ಬ್ರೌಲೆಟ್ ಪ್ರತಿಕ್ರಿಯಿಸಿದ್ದಾರೆ.

ʼʼಪರಿಸ್ಥಿತಿ ಅನುಕೂಲವಾಗಿದ್ದರಿಂದ ಇಂತಹ ಪರ್‌ಫೆಕ್ಟ್‌ ಫೋಟೊ ಕ್ಲಿಕ್ಕಿಸಲು ಸಾಧ್ಯವಾಯಿತು. ಅಂದು ನಿಜಕ್ಕೂ ಅಲೆಗಳು ನಾವು ಅಂದುಕೊಂಡದ್ದಕ್ಕಿಂತಲೂ ಎತ್ತರವಾಗಿದ್ದವು. ಆದರೂ ಫೋಟೊ ತೆಗೆಯುವುದಕ್ಕೆ ಹೆಚ್ಚು ಕಷ್ಟ ಎನಿಸಲಿಲ್ಲʼʼ ಎಂದು ನುಡಿದಿದ್ದಾರೆ.

ʼʼಗೇಬ್ರಿಯಲ್ ಮೆಡಿನಾ ಅವರು ಗಾಳಿಯಲ್ಲಿ ತೇಲುತ್ತಿರುವಾಗ ನಾಲ್ಕು ಬಾರಿ ಕ್ಯಾಮೆರಾ ಕ್ಲಿಕ್‌ ಮಾಡಿದ್ದೆ. ಈ ನಾಲ್ಕು ಶಾಟ್‌ಗಳಲ್ಲಿ ಪೈಕಿ ಇದೂ ಒಂದುʼʼ ಎಂದು ಅವರು ತಿಳಿಸಿದ್ದಾರೆ. ಸದ್ಯ ಈ ಫೋಟೊಕ್ಕೆ ಪ್ರಪಂಚದ ವಿವಿಧ ಮೂಲೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಆನ್‌ಲೈನ್‌ನಲ್ಲಿ ಲಕ್ಷಾಂತರ ಬಾರಿ ಶೇರ್‌ ಆಗಿದೆ. ಕೋಟ್ಯಾಂತರ ಮಂದಿ ಲೈಕ್‌ ಬಟನ್‌ ಒತ್ತಿದ್ದಾರೆ. ಸ್ವತಃ ಗೇಬ್ರಿಯಲ್ ಮೆಡಿನಾ ಅವರು ತಮ್ಮ ಇನ್‌ಸ್ಟಗ್ರಾಮ್‌ ಖಾತೆಯಲ್ಲಿ ಚಿತ್ರವನ್ನು ಪೋಸ್ಟ್ ಮಾಡಿದ್ದು 24 ಲಕ್ಷಕ್ಕೂ ಅಧಿಕ ಲೈಕ್ಸ್‌ ಬಂದಿದೆ.

ಯಾರು ಏನಂದ್ರು?

“ಇದು ಸಾರ್ವಕಾಲಿಕ ಶ್ರೇಷ್ಠ ಕ್ರೀಡಾ ಫೋಟೊಗಳಲ್ಲಿ ಒಂದು” ಎಂದು ಆಸ್ಟ್ರೇಲಿಯಾದ ಮಾಧ್ಯಮ ಸಂಸ್ಥೆ News.com.au ತನ್ನ ಫೇಸ್‌ಬುಕ್‌ ಪುಟದಲ್ಲಿ ಪೋಸ್ಟ್ ಮಾಡಿದೆ. ಟೈಮ್ ನಿಯತಕಾಲಿಕವು ಇದನ್ನು “2024ರ ಒಲಿಂಪಿಕ್ಸ್‌ನ ಅದ್ಭುತ ಫೋಟೊ” ಎಂದು ಬಣ್ಣಿಸಿದೆ.

“ಅದ್ಭುತ ಎಂದರೇನು ಎಂದು ಯಾರಾದರು ಕೇಳಿದಾಗ ಈ ಫೋಟೊವನ್ನು ಅವರಿಗೆ ತೋರಿಸಿ” ಎಂದು ಒಬ್ಬರು ಹೇಳಿದ್ದಾರೆ. ” ಜೆರೋಮ್ ಬ್ರೌಲೆಟ್ ಅವರ ಜೀವನದ ಅತ್ಯುತ್ತಮ ಫೋಟೊ ಇದಾಗಿರಲಿದೆ” ಎಂದು ಮತ್ತೊಬ್ಬರು ಶ್ಲಾಘಿಸಿದ್ದಾರೆ. ʼʼನನ್ನ ಕಣ್ಣನ್ನು ನನಗೇ ಸಂಬಲು ಸಾಧ್ಯವಾಗುತ್ತಿಲ್ಲʼʼ ಎಂದು ನೆಟ್ಟಿಗರೊಬ್ಬರು ಕಮೆಂಟ್‌ ಮಾಡಿದ್ದಾರೆ. ʼʼಆ ಕ್ಯಾಮೆರಾಮ್ಯಾನ್‌ಗೆ ವೇತನ ಹೆಚ್ಚಳದ ಅಗತ್ಯವಿದೆ. ನಂಬಲಾಗದ ಚಿತ್ರ” ಎಂದು ಮಗದೊಬ್ಬರು ತಿಳಿಸಿದ್ದಾರೆ. “ಗೇಬ್ರಿಯಲ್ ಮೆಡಿನಾ ಗಾಳಿಯಲ್ಲಿ ಹೊರಬಂದಂತೆ ಕಾಣುತ್ತಿದೆ” ಎಂದು ಹಲವರು ಹೇಳಿದ್ದಾರೆ.

ಇದನ್ನೂ ಓದಿ: Manu Bhaker: ಒಂದೇ ಆವೃತ್ತಿಯಲ್ಲಿ 2 ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಮನು ಭಾಕರ್

Continue Reading

ಆರೋಗ್ಯ

Health Tips: ಉಪಾಹಾರದಲ್ಲಿ ಇವುಗಳು ಬೇಡವೇ ಬೇಡ ಎನ್ನುತ್ತಾರೆ ಮಾಧುರಿ ದೀಕ್ಷಿತ್ ಪತಿ ಡಾ. ಶ್ರೀರಾಮ್ ನೆನೆ

ಕಾರ್ಡಿಯೊಥೊರಾಸಿಕ್ ಸರ್ಜನ್ ಆಗಿರುವ ಡಾ. ನೆನೆ ಈಗ ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಆರೋಗ್ಯಕರ ಜೀವನಕ್ಕಾಗಿ (Health Tips) ನಾವು ತಪ್ಪಿಸಬೇಕಾದ ಉಪಹಾರದ ಮಾಹಿತಿ ನೀಡಿದ್ದಾರೆ. ಇದರಲ್ಲಿ ಬಿಳಿ ಬ್ರೆಡ್, ಸಕ್ಕರೆಯ ಧಾನ್ಯಗಳು, ಹಣ್ಣಿನ ರಸ, ಸಂಸ್ಕರಿಸಿದ ಮಾಂಸ, ಸಿಹಿಯಾದ ಮೊಸರು ಈ ಆಯ್ಕೆಗಳನ್ನು ತಪ್ಪಿಸಬೇಕು ಎಂದು ಹೇಳಿದ್ದು, ಇದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

VISTARANEWS.COM


on

By

Health Tips
Koo

ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ (Bollywood actress Madhuri Dixit) ಅವರ ಪತಿ ಡಾ. ಶ್ರೀರಾಮ್ ನೆನೆ (Dr Shriram Nene) ಅವರು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ನಿಯಮಿತವಾಗಿ ಆರೋಗ್ಯ ಸಂಬಂಧಿತ (health tips) ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಅವರು ಹೃದಯಾಘಾತದ (heart attack case) ಅಪಾಯವು ಏಕೆ ಹೆಚ್ಚು ಎಂಬುದನ್ನು ಹಂಚಿಕೊಂಡಿದ್ದು, ಇದಕ್ಕಾಗಿ ಆರೋಗ್ಯಕರ ಉಪಹಾರ ಹೇಗಿರಬೇಕು ಎಂದು ಹೇಳಿದ್ದಾರೆ.

ಕಾರ್ಡಿಯೊಥೊರಾಸಿಕ್ ಸರ್ಜನ್ ಆಗಿರುವ ಡಾ. ನೆನೆ ಈಗ ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಆರೋಗ್ಯಕರ ಜೀವನಕ್ಕಾಗಿ ನಾವು ತಪ್ಪಿಸಬೇಕಾದ ಉಪಹಾರದ ಮಾಹಿತಿ ನೀಡಿದ್ದಾರೆ. ಇದರಲ್ಲಿ ಬಿಳಿ ಬ್ರೆಡ್, ಸಕ್ಕರೆಯ ಧಾನ್ಯಗಳು, ಹಣ್ಣಿನ ರಸ, ಸಂಸ್ಕರಿಸಿದ ಮಾಂಸ, ಸಿಹಿಯಾದ ಮೊಸರು ಈ ಆಯ್ಕೆಗಳನ್ನು ತಪ್ಪಿಸಬೇಕು ಎಂದು ಹೇಳಿದ್ದಾರೆ.

ಬಿಳಿ ಬ್ರೆಡ್

ಬಿಳಿ ಬ್ರೆಡ್ ಅನ್ನು ಕಡಿಮೆ ಗುಣಮಟ್ಟದ ಕಾರ್ಬೋಹೈಡ್ರೇಟ್‌ಗಳೊಂದಿಗೆ ಸಂಸ್ಕರಿಸಲಾಗುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಕಾರಣವಾಗಬಹುದು. ಬಿಳಿ ಬ್ರೆಡ್ ಅನ್ನು ಅತಿಯಾಗಿ ಸೇವಿಸುವುದರಿಂದ ಬೊಜ್ಜು, ಹೃದ್ರೋಗ ಮತ್ತು ಮಧುಮೇಹ ಉಂಟಾಗುತ್ತದೆ.

ಸಕ್ಕರೆ ಧಾನ್ಯಗಳು

ಸಕ್ಕರೆ ಸಿರಿಧಾನ್ಯಗಳು ಸರಳವಾದ ಕಾರ್ಬೋಹೈಡ್ರೇಟ್ ಆಹಾರ ಪದಾರ್ಥಗಳಾಗಿವೆ. ಇದು ಹೆಚ್ಚಿನ ಹಸಿವು ಮತ್ತು ಶುಗರ್ ಮಟ್ಟ ಹೆಚ್ಚಿಸಲು ಕಾರಣವಾಗಬಹುದು. ಇದು ಟೈಪ್ 2 ಮಧುಮೇಹ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.

ಹಣ್ಣಿನ ರಸ

ಹಣ್ಣುಗಳನ್ನು ಜ್ಯೂಸ್ ಮಾಡುವುದರಿಂದ ಅವುಗಳಲ್ಲಿರುವ ಅಗತ್ಯ ಪೋಷಕಾಂಶಗಳ ನಷ್ಟಕ್ಕೆ ಕಾರಣವಾಗುತ್ತದೆ. ಜ್ಯೂಸ್ ಮಾಡುವುದು ಹೆಚ್ಚಿನ ಸಕ್ಕರೆಗಳನ್ನು ಬಿಡುಗಡೆ ಮಾಡುತ್ತದೆ. ಹಣ್ಣಿನ ರಸವು ಬೊಜ್ಜು ಮತ್ತು ತೂಕ ಹೆಚ್ಚಾಗಲು ಕಾರಣವಾಗಬಹುದು.


ಸಂಸ್ಕರಿಸಿದ ಮಾಂಸ

ಬೆಳಗಿನ ಉಪಾಹಾರಕ್ಕಾಗಿ ಸಂಸ್ಕರಿಸಿದ ಮಾಂಸವನ್ನು ತಿನ್ನುವುದು ಹೊಟ್ಟೆ ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಕೂಡ ಸಂಸ್ಕರಿಸಿದ ಮಾಂಸವನ್ನು ಸೇವಿಸುವ ಕೆಲವು ಅಡ್ಡಪರಿಣಾಮಗಳಾಗಿವೆ.

ಇದನ್ನೂ ಓದಿ: Actor Shahrukh Khan: ಅಮೆರಿಕದಲ್ಲಿ ಶಾರುಖ್ ಖಾನ್‌ಗೆ ಶಸ್ತ್ರಚಿಕಿತ್ಸೆ; ಬಾಲಿವುಡ್‌ ಬಾದ್‌ಶಾಗೆ ಕಾಡುತ್ತಿರುವ ಸಮಸ್ಯೆ ಏನು?

ಸಿಹಿಯಾದ ಮೊಸರು

ಮೊಸರಿನಲ್ಲಿರುವ ನೈಸರ್ಗಿಕ ಸಕ್ಕರೆ ಆರೋಗ್ಯಕರವಾಗಿದ್ದರೂ ಸುವಾಸನೆಯ ಮೊಸರು ಅಧಿಕ ಸಕ್ಕರೆಯನ್ನು ಹೊಂದಿರುತ್ತದೆ. ಇದು ತೂಕ ಹೆಚ್ಚಾಗುವುದು, ಟೈಪ್ 2 ಮಧುಮೇಹ ಮತ್ತು ಕೆಲವು ರೀತಿಯ ಕ್ಯಾನ್ಸರ್ ಬೆಳವಣಿಗೆಗೆ ಕಾರಣವಾಗುತ್ತದೆ.

Continue Reading
Advertisement
BJP Protest
ಕರ್ನಾಟಕ31 seconds ago

BJP Protest: ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ; ಪ್ರತಾಪ್ ಸಿಂಹ, ಪುನೀತ್ ಕೆರೆಹಳ್ಳಿ ವಿರುದ್ಧ ಎಫ್‌ಐಆರ್‌!

Israel v/s Hamas
ವಿದೇಶ2 mins ago

Israel v/s Hamas: ಇಸ್ರೇಲ್‌‌ ಮುಂದಿನ ಟಾರ್ಗೆಟ್ ಯಾರು? ಇಲ್ಲಿದೆ ಹಮಾಸ್ ‘ಉಗ್ರ’ ನಾಯಕರ ಹಿಟ್‌ ಲಿಸ್ಟ್!

Wayanad Landslide
ದೇಶ34 mins ago

Wayanad Landslide: ವಯನಾಡು ಈಗ ಸಾವಿನ ಮನೆ: ಮೃತರ ಸಂಖ್ಯೆ 240, 160 ಶವ ಪತ್ತೆ, 220 ಜನ ಮಿಸ್ಸಿಂಗ್; ಭೀಕರ ಚಿತ್ರಣ ಇಲ್ಲಿದೆ

Sexual Abuse
Latest1 hour ago

Sexual Abuse: ಕ್ಲಾಸ್‌ಗೆ ಹೋಗಲು ಆಟೊ ಹತ್ತಿದ್ದ ಬಾಲಕಿ ಮೇಲೆ ಅತ್ಯಾಚಾರ; ಚಾಲಕ ಮೊಹಮ್ಮದ್‌ ಬಂಧನ

Karnataka Rain
ಕರ್ನಾಟಕ1 hour ago

Karnataka Rain: ಭದ್ರಾ ನದಿಯ ಆರ್ಭಟಕ್ಕೆ ಬಾಳೆಹೊನ್ನೂರು ಮುಳುಗಡೆ; ನದಿ ತಟದ ಸಂತೆ, ಮನೆ, ಅಂಗಡಿಗಳಿಗೆ ಜಲ ದಿಗ್ಬಂಧನ

FASTag new rule
ತಂತ್ರಜ್ಞಾನ1 hour ago

FASTag new rule: ಫಾಸ್ಟ್‌ಟ್ಯಾಗ್‌ ಬಳಕೆದಾರರೇ ಗಮನಿಸಿ; ನಾಳೆಯಿಂದ ಹೊಸ ನಿಯಮ ಜಾರಿ!

Koti Koti Rokka Galisi kannada song released
ಕರ್ನಾಟಕ1 hour ago

Kannada New Song: ಹೂಡಿ ಚಿನ್ನಿ ಕಂಠಸಿರಿಯಲ್ಲಿ ಮೂಡಿಬಂದ ʼಕೋಟಿ ಕೋಟಿ ರೊಕ್ಕ ಗಳಿಸಿʼ ಹಾಡು ರಿಲೀಸ್‌

Paris Olympics Archery
ಕ್ರೀಡೆ2 hours ago

Paris Olympics Archery: ಪ್ರೀ-ಕ್ವಾರ್ಟರ್‌ ಫೈನಲ್​ಗೇರಿದ ದೀಪಿಕಾ ಕುಮಾರಿ

ITR Filing
ವಾಣಿಜ್ಯ2 hours ago

ITR Filing: ಐಟಿ ರಿಟರ್ನ್ಸ್‌ ಗಡುವು ವಿಸ್ತರಣೆ ಇಲ್ಲ, ಕೊನೇ ಕ್ಷಣದಲ್ಲಿ ಪೋರ್ಟಲ್‌ ಕ್ರ್ಯಾಶ್;‌ ಇನ್ಫೋಸಿಸ್‌ ವಿರುದ್ಧ ಆಕ್ರೋಶ!

Gunfire On School
Latest2 hours ago

Gunfire On School: ಶಾಲೆಯೊಳಗೆ ಗನ್‌ ತಂದು 10 ವರ್ಷದ ಹುಡುಗನಿಗೆ ಗುಂಡು ಹಾರಿಸಿದ 5 ವರ್ಷದ ಬಾಲಕ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ1 day ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 day ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ2 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ2 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ2 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ3 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ3 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ3 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ3 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

ಟ್ರೆಂಡಿಂಗ್‌