Holi 2024: ಹೋಳಿ ಬಣ್ಣ ಸುರಕ್ಷಿತವಾಗಿ ಕ್ಲೀನ್ ಮಾಡುವ 6 ಸುಲಭ ವಿಧಾನಗಳಿವು - Vistara News

ಆರೋಗ್ಯ

Holi 2024: ಹೋಳಿ ಬಣ್ಣ ಸುರಕ್ಷಿತವಾಗಿ ಕ್ಲೀನ್ ಮಾಡುವ 6 ಸುಲಭ ವಿಧಾನಗಳಿವು

ಬಣ್ಣದೋಕುಳಿ (Holi 2024) ಆಡಿದ ಮೇಲೆ ರಂಗು ತೆಗೆಯುವುದು ಹೇಗೆ? ಹಠಮಾರಿ ಬಣ್ಣಗಳಿಗೆ ಬುದ್ಧಿ ಕಲಿಸುವುದಕ್ಕೆ ಕಠೋರವಾದ ರಾಸಾಯನಿಕಗಳನ್ನು ಹಾಕಿದರೆ ಚರ್ಮದ ಸ್ಥಿತಿ… ದೇವ್ರೇ ಗತಿ! ಅದಕ್ಕಾಗಿ ಯಾವುದೇ ರಾಸಾಯನಿಕಗಳಿಲ್ಲದ ಸರಳ ಉಪಾಯಗಳು ಇಲ್ಲಿವೆ.

VISTARANEWS.COM


on

holi cleen face
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೋಳಿ (Holi 2024) ಆಡುವುದು ಎಲ್ಲರಿಗೂ ಬೇಕು. ಆದರೆ ಆಡಿದ ನಂತರ ಆ ಬಣ್ಣ ತೆಗೆಯುವುದು ಯಾರಿಗೂ ಬೇಡ. ಸಾಂಪ್ರದಾಯಿಕ ‌ʻಗುಲಾಲ್ʼ ಅಥವಾ ಗುಲಾಬಿ ರಂಗನ್ನು ಮೋರೆಯೆಲ್ಲಾ ಬಳಿದುಕೊಂಡು ದಿನಗಟ್ಟಲೆ, ಆ ಬಣ್ಣ ಇಳಿಯದೆ ಕೆಂಬಣ್ಣದ ಮುಖವರ್ಣಿಕೆಯಲ್ಲಿ ಊರೆಲ್ಲ ಸುತ್ತುವುದು ಅಷ್ಟೇನು ಇಷ್ಟವಾಗುವ ಸಂಗತಿಯಲ್ಲ. ಜೊತೆಗೆ, ಅಲರ್ಜಿ, ಕಿರಿಕಿರಿಯಂಥವು ಕಾಣಬಹುದು. ಆದರೆ ಬಿಡದೆ ಹಠ ಮಾಡುವ ಬಣ್ಣಗಳನ್ನು ಸುರಕ್ಷಿತವಾಗಿ ತೆಗೆಯುವುದು ಹೇಗೆ? ಹೆಚ್ಚು ರಾಸಾಯನಿಕಗಳನ್ನು ಬಳಸಿದಷ್ಟೂ ಚರ್ಮಕ್ಕೆ ಇನ್ನಷ್ಟು ಹಾನಿಯಾಗುತ್ತದೆ. ಈ ವಿಷಯದಲ್ಲಿ ನಮ್ಮ ಅಡುಗೆಮನೆಯ ಕೆಲವು ವಸ್ತುಗಳು ಉಪಯುಕ್ತ ನೆರವು ನೀಡಬಲ್ಲವು.

Coconut oil for Fungal Infection Home Remedies

ಕೊಬ್ಬರಿ ಎಣ್ಣೆ

ಬಿಡದೆ ಕಾಡುವ ಬಣ್ಣಗಳನ್ನು ತೆಗೆಯುವುದರಲ್ಲಿ ಮತ್ತು ಚರ್ಮಕ್ಕೆ ಯಾವುದೇ ಹಾನಿಯಾಗದಂತೆ ಕಾಪಾಡುವುದರಲ್ಲಿ ಕೊಬ್ಬರಿ ಎಣ್ಣೆ ನಂಬರ್‌ ೧! ಚರ್ಮದ ಒಳಗೆ ಪ್ರವೇಶಿಸಿ ಕಾಡುವ ಬಣ್ಣದ ಸೂಕ್ಷ್ಮ ಕಣಗಳನ್ನು ತೆಗೆದು ಚರ್ಮದ ಕೋಶಗಳಿಗೆ ಅಗತ್ಯವಾದ ಆರೈಕೆಯನ್ನು ಈ ಎಣ್ಣೆ ನೀಡುತ್ತದೆ. ತ್ವಚೆಯ ತೇವವನ್ನು ಹೆಚ್ಚಿಸಿ, ಯಾವುದೇ ಹಾನಿಯಾಗುವುದನ್ನು ತಡೆಯುತ್ತದೆ. ಸಾಮಾನ್ಯವಾಗಿ ಯಾವುದೇ ಬಣ್ಣಗಳನ್ನಾದರೂ ಈ ಎಣ್ಣೆ ಕ್ಷಿಪ್ರವಾಗಿ ಕರಗಿಸಿ ಬಿಡಿಸಬಲ್ಲದು. ಬಣ್ಣದೋಕುಳಿ ಆಡುವುದಕ್ಕೆ ಮುನ್ನ ಚರ್ಮಕ್ಕೆ ಢಾಳಾಗಿ ಕೊಬ್ಬರಿ ಎಣ್ಣೆಯನ್ನು ಲೇಪಿಸಿಕೊಳ್ಳುವುದು ಉತ್ತಮ ಮಾರ್ಗ.

Lemon Anti Infective Foods

ನಿಂಬೆಹಣ್ಣು

ಶುಂಠ ಬಣ್ಣಗಳನ್ನು ಒದ್ದೋಡಿಸುವುದಕ್ಕೆ ನಿಂಬೆರಸವೂ ಒಳ್ಳೆಯ ಉಪಾಯ. ಇದರಲ್ಲಿರುವ ನೈಸರ್ಗಿಕ ಆಮ್ಲೀಯ ಅಂಶಗಳು ಬಣ್ಣ ತೆಗೆಯುತ್ತವೆ. ಇದನ್ನು ಚರ್ಮದ ಮೇಲೆ ಸ್ವಲ್ಪವೇ ಹಾಕಿ ನಯವಾಗಿ ಮಸಾಜ್‌ ಮಾಡಿದರೆ ಸಾಕಾದೀತು. ಮುಖದ ಚರ್ಮಕ್ಕೆ ಇದು ಕೊಂಚ ಕಠೋರವಾಗಬಹುದು. ಆದರೆ ದೇಹದ ಉಳಿದೆಡೆ ಇದನ್ನು ಅಲ್ಪ ಪ್ರಮಾಣದಲ್ಲಿ ಬಳಸಬಹುದು. ಒಂದೊಮ್ಮೆ ಬಟ್ಟೆಗೆ ಅಂಟಿರುವ ಬಣ್ಣ ಹೋಗದಿದ್ದರೆ, ಅದಕ್ಕೂ ನಿಂಬೆರಸ ಹಾಕಿ ಉಜ್ಜಿ ತೊಳೆಯಬಹುದು. ಬಟ್ಟೆಗಳೂ ಬಣ್ಣದಿಂದ ಮುಕ್ತಿ ಪಡೆಯುತ್ತವೆ.

Aloe Vera Herbs For Hair Growth Aloe vera contains enzymes that can promote healthy hair growth by removing dead skin cells from the scalp and promoting hair follicle health.

ಲೋಳೆಸರ

ಬಹಳಷ್ಟು ಮನೆಗಳಲ್ಲಿ ಸಣ್ಣದೊಂದು ಕುಂಡದಲ್ಲಿ ಇದ್ದಿರಬಹುದು ಲೋಳೆಸರ. ಇದರ ಒಳಗಿನ್‌ ಲೋಳೆಯಂಥ ಅಥವಾ ಜೆಲ್‌ ಅಂಶವನ್ನು ಚರ್ಮಕ್ಕೆ ಧಾರಾಳವಾಗಿ ಹಾಕಿ ನಯವಾಗಿ ಮಸಾಜ್‌ ಮಾಡಿ, ಕೆಲವು ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಉಗುರು ಬಿಸಿ ನೀರಿನಿಂದ ತೊಳೆಯಿರಿ. ಚರ್ಮಕ್ಕೆ ಯಾವುದೇ ಕಿರಿಕಿರಿ ಆಗದಂತೆ ಜೋಪಾನವಾಗಿ ಬಣ್ಣವನ್ನು ಸೂಕ್ಷ್ಮ ರಂಧ್ರಗಳಿಂದ ಬಿಡಿಸುವ ಕೆಲಸವನ್ನಿದು ಮಾಡುತ್ತದೆ. ಒಂದೊಮ್ಮೆ ಲೋಳೆಸರ ಇಲ್ಲದಿದ್ದರೆ, ರಾಸಾಯನಿಕಗಳು ಸೇರದ ಶುದ್ಧ, ನೈಸರ್ಗಿಕ ಅಲೋವೇರಾ ಜೆಲ್‌ ಮಾರುಕಟ್ಟೆಯಲ್ಲಿ ದೊರೆತರೆ, ಅದನ್ನೂ ಉಪಯೋಗಿಸಬಹುದು.

Image Of Mustard Oil Benefits

ಸಾಸಿವೆ ಎಣ್ಣೆ

ಯಾವುದೇ ರಾಸಾಯನಿಕಗಳಿಲ್ಲದ ಸಾಸಿವೆ ಎಣ್ಣೆ ಸಹ ಹೋಗಲೊಲ್ಲದ ಬಣ್ಣಗಳನ್ನು ಚರ್ಮದಿಂದ ಬಿಡಿಸಬಲ್ಲದು. ಬಣ್ಣ ಅಂಟಿಕೊಂಡಿರುವ ಭಾಗಕ್ಕೆ ಸಾಸಿವೆ ಎಣ್ಣೆ ಹಾಕಿ ನಯವಾಗಿ ಮಸಾಜ್‌ ಮಾಡಿ, ಉಗುರು ಬಿಸಿ ನೀರಿನಿಂದ ತೊಳೆಯಿರಿ. ಚರ್ಮಕ್ಕೆ ಬೇಕಿರುವ ತೇವವನ್ನು ನೀಡಿ, ಬಣ್ಣವನ್ನು ತೆಗೆದು, ತ್ವಚೆಯನ್ನು ಹೊಳಪಾಗಿಸಿ ಮೃದುವಾಗಿಸಬಲ್ಲದು ಈ ಎಣ್ಣೆ.

ಸೈಂಧವ ಲವಣ

ಈ ಉಪ್ಪನ್ನು ನುಣ್ಣನೆಯ ಪುಡಿ ಮಾಡಿ ತೆಂಗಿನೆಣ್ಣೆಯ ಜೊತೆಗೆ ಸೇರಿಸಿ, ಸ್ಕ್ರಬ್‌ ಮಾಡಬಹುದು. ಇದನ್ನು ಮಾಡುವಾಗ ಕೆಲವು ಹನಿ ಎಸೆನ್ಶಿಯಲ್‌ ಆಯಿಲ್‌ಗಳಲ್ಲಿ ಯಾವುದನ್ನಾದರೂ ಒಂದೆರಡು ಹನಿ ಸೇರಿಸಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ. ಆದರೆ ಇದನ್ನು ಮುಖಕ್ಕೆ ಹಾಕುವಾಗ ಜಾಗ್ರತೆ ಮಾಡಿ, ತರಿಯಾದ ಈ ಸ್ಕ್ರಬ್‌ನಿಂದ ಉಜ್ಜಿದರೆ ಚರ್ಮಕ್ಕೆ ಹಾನಿಯಾದರೆ ಕಷ್ಟ. ಹಾಗಾಗಿ ಬಳಸುವಾಗ ನಾಜೂಕಿರಲಿ. ಇದನ್ನು ತೆಂಗಿನೆಣ್ಣೆಯ ಬದಲು ನಿಂಬೆರಸದೊಂದಿಗೆ ಸೇರಿಸಿ, ವಸ್ತ್ರಗಳ ಕಲೆ ತೆಗೆಯಲು ಉಪಯೋಗಿಸಬಹುದು.

curd For Hair Loss

ಮೊಸರು

ಮಜ್ಜಿಗೆ, ಮೊಸರಿಲ್ಲದ ಅಡುಗೆಮನೆಯೇ ಇಲ್ಲ ಎನ್ನಬಹುದು. ಮೊಸರಿನಲ್ಲಿರುವ ನೈಸರ್ಗಿಕ ಹುಳಿಯಂಶವು ಬಣ್ಣಗಳನ್ನು ಕರಗಿಸಲು ನೆರವಾಗುತ್ತದೆ. ಜೊತೆಗೆ ಜಿಡ್ಡಿನಂಶವು ಚರ್ಮಕ್ಕೆ ಬೇಕಾದ ತೇವವನ್ನು ನೀಡುತ್ತದೆ. ಬಣ್ಣದ ಕಲೆಯಾಗಿರುವ ಚರ್ಮದ ಭಾಗಕ್ಕೆ ಗಟ್ಟಿ ಮೊಸರನ್ನು ಧಾರಾಳವಾಗಿ ಲೇಪಿಸಿ ಹತ್ತಾರು ನಿಮಿಷಗಳ ಕಾಲ ಬಿಡಿ. ನಂತರ ಉಗುರು ಬಿಸಿ ನೀರಿನಿಂದ ತೊಳೆಯಿರಿ. ಇದರಿಂದ ಚರ್ಮಕ್ಕೆ ಅಗತ್ಯವಾಗ ಪೋಷಣೆಯೂ ದೊರೆಯುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Covaxin Safety: ಕೊವ್ಯಾಕ್ಸಿನ್‌ನಿಂದ ಅಡ್ಡ ಪರಿಣಾಮ ಎಂದು ಬನಾರಸ್‌ ವಿವಿ ವರದಿ; ವೈದ್ಯ ಸಂಶೋಧನಾ ಸಂಸ್ಥೆ ಆಕ್ಷೇಪ

Covaxin Safety: ಬಿಎಚ್‌ಯು ಸಂಶೋಧನೆ ಮಾಡುವ ಮುನ್ನ ಸರಿಯಾದ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿಲ್ಲ. ಸಂಶೋಧನೆಗೆ ಬಳಸಿರುವ ಜನಸಂಖ್ಯೆ ಪ್ರಮಾಣಕ್ಕೂ, ಸ್ಟಡಿ ವರದಿಗೂ ತುಂಬ ವ್ಯತ್ಯಾಸವಿದೆ. ಅಡ್ಡ ಪರಿಣಾಮ ಉಂಟಾಗಿದೆ ಎಂಬುದಾಗಿ ಹೇಳಿದವರನ್ನು ವರದಿ ತಯಾರಿಸಲು ಟೆಲಿಫೋನ್‌ ಮೂಲಕ ಸಂಪರ್ಕಿಸಲಾಗಿದೆಯೇ ಹೊರತು, ಅವರ ಅಭಿಪ್ರಾಯವನ್ನು ನೇರವಾಗಿ ಪಡೆದುಕೊಂಡಿಲ್ಲ ಎಂದು ಐಸಿಎಂಆರ್‌ ಅಸಮಾಧಾನ ವ್ಯಕ್ತಪಡಿಸಿದೆ.

VISTARANEWS.COM


on

Covaxin Safety
Koo

ನವದೆಹಲಿ: ಬ್ರಿಟನ್‌ನಲ್ಲಿ ಅಸ್ಟ್ರಾಜೆನಿನಾ ಕೊರೊನಾ ನಿರೋಧಕ ಕೋವಿಶೀಲ್ಡ್‌ ಲಸಿಕೆ ಪಡೆದವರಿಗೆ ಅಡ್ಡ ಪರಿಣಾಮ ಉಂಟಾಗಿದೆ ಎಂಬುದಾಗಿ ಸ್ವತಃ ಕಂಪನಿಯೇ ಒಪ್ಪಿಕೊಂಡ ಬಳಿಕ ಭಾರತದಲ್ಲೂ ಕೊರೊನಾ ನಿರೋಧಕ ಲಸಿಕೆಯ ಸುರಕ್ಷತೆಗೆ ಬಗ್ಗೆ ಚರ್ಚೆಯಾಗುತ್ತಿದೆ. ಅದರಲ್ಲೂ, ದೇಶೀಯವಾಗಿ ಭಾರತ್‌ ಬಯೋಟೆಕ್‌ (Bharat Biotech) ಅಭಿವೃದ್ಧಿಪಡಿಸಿದ ಕೊವ್ಯಾಕ್ಸಿನ್‌ ಅಡ್ಡಪರಿಣಾಮಗಳ ಕುರಿತು ಬನಾರಸ್‌ ಹಿಂದು ವಿವಿ (BHU) ವರದಿ ಬಿಡುಗಡೆ ಮಾಡಿದೆ. ಕೊವ್ಯಾಕ್ಸಿನ್‌ ಪಡೆದ ಮೂವರಲ್ಲಿ ಒಬ್ಬರಿಗೆ ಅಡ್ಡ ಪರಿಣಾಮ ಉಂಟಾಗಿದೆ ಎಂಬುದಾಗಿ ಬಿಎಚ್‌ಯು ಪ್ರಕಟಿಸಿದ ವರದಿಗೆ ಈಗ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ICMR) ಆಕ್ರೋಶ ವ್ಯಕ್ತಪಡಿಸಿದೆ.

ಐಸಿಎಂಆರ್‌ ಮಹಾ ನಿರ್ದೇಶಕ ರಾಜೀವ್‌ ಬಾಹ್ಲ್‌ ಅವರು ಬಿಎಚ್‌ಯು ಅಧ್ಯಯನ ವರದಿಯನ್ನು ನಿರಾಕರಿಸಿದ್ದಾರೆ. “ಬಿಎಚ್‌ಯು ಸಂಶೋಧನೆ ಮಾಡುವ ಮುನ್ನ ಸರಿಯಾದ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿಲ್ಲ. ಸಂಶೋಧನೆಗೆ ಬಳಸಿರುವ ಜನಸಂಖ್ಯೆ ಪ್ರಮಾಣಕ್ಕೂ, ಸ್ಟಡಿ ವರದಿಗೂ ತುಂಬ ವ್ಯತ್ಯಾಸವಿದೆ. ಅಡ್ಡ ಪರಿಣಾಮ ಉಂಟಾಗಿದೆ ಎಂಬುದಾಗಿ ಹೇಳಿದವರನ್ನು ವರದಿ ತಯಾರಿಸಲು ಟೆಲಿಫೋನ್‌ ಮೂಲಕ ಸಂಪರ್ಕಿಸಲಾಗಿದೆಯೇ ಹೊರತು, ಅವರ ಅಭಿಪ್ರಾಯವನ್ನು ನೇರವಾಗಿ ಪಡೆದುಕೊಂಡಿಲ್ಲ. ಸಂಶೋಧನೆಗೆ ಬಳಸಿರುವ ಅಂಕಿ-ಅಂಶಗಳನ್ನು ಸರಿಯಾಗಿ ಅವಲೋಕನ ಮಾಡಿಲ್ಲ” ಎಂಬುದಾಗಿ ರಾಜೀವ್‌ ಬಾಹ್ಲ್‌ ಹೇಳಿದ್ದಾರೆ.

“ಲಸಿಕೆಯ ಅಡ್ಡ ಪರಿಣಾಮ, ಲಸಿಕೆಯ ಸುರಕ್ಷತೆ ಬಗ್ಗೆ ಅಧ್ಯಯನ ಮಾಡಲು ತುಂಬ ಮಾನದಂಡಗಳನ್ನು ಅನುಸರಿಸಬೇಕಾಗುತ್ತದೆ. ಬಿಎಚ್‌ಯು ಇಂತಹ ಮಾನದಂಡಗಳನ್ನು ಅನುಸರಿಸುವುದು ಬಿಡಿ, ಅಧ್ಯಯನ ಮಾಡುವ ತಜ್ಞರಿಗೆ ತಾಂತ್ರಿಕ ಹಾಗೂ ಹಣಕಾಸು ನೆರವು ಕೂಡ ಒದಗಿಸಿಲ್ಲ. ಹಾಗಾಗಿ, ಲಸಿಕೆಯ ಸುರಕ್ಷತೆಯ ಬಗ್ಗೆ ಬನಾರಸ್‌ ಹಿಂದು ವಿವಿ ಮಾಡಿದ ಸಂಶೋಧನಾ ವರದಿಯು ವೈಜ್ಞಾನಿಕತೆಯ ಆಧಾರದ ಮೇಲಿಲ್ಲ” ಎಂದು ಹೇಳಿದ್ದಾರೆ.

ಕೊವ್ಯಾಕ್ಸಿನ್‌ ಲಸಿಕೆ ಪಡೆದ ಸುಮಾರು 926 ಜನರನ್ನು ಸಂಪರ್ಕಿಸಿ ಲಸಿಕೆಯ ಸುರಕ್ಷತೆ, ಅಡ್ಡ ಪರಿಣಾಮಗಳ ಕುರಿತು ಅಧ್ಯಯನ ವರದಿ ತಯಾರಿಸಿದೆ. ಲಸಿಕೆ ಪಡೆದ ಮೂವರಲ್ಲಿ ಒಬ್ಬರಿಗೆ ಅಡ್ಡ ಪರಿಣಾಮ ಉಂಟಾಗಿದೆ. ಲಸಿಕೆ ಪಡೆದವರಿಗೆ ಪಾರ್ಶ್ವವಾಯು, ನರಗಳಿಗೆ ಸಂಬಂಧಿಸಿದ ಕಾಯಿಲೆ, ಕೆಮ್ಮು, ಮೂಗು ಸೋರುವಿಕೆ, ಗಂಟಲು ಕೆರೆತ, ಉಸಿರಾಟ ಸಮಸ್ಯೆ ಸೇರಿ ಹಲವು ಅಡ್ಡ ಪರಿಣಾಮಗಳು ಕಾಣಿಸಿಕೊಂಡಿವೆ” ಎಂಬುದಾಗಿ ವರದಿ ತಿಳಿಸಿತ್ತು.

ಭಾರತ್‌ ಬಯೋಟೆಕ್‌ ಹೇಳುವುದೇನು?

“ಸುರಕ್ಷತೆ ಹಾಗೂ ದಕ್ಷತೆಯೇ ಮೊದಲು ಎಂಬ ದೃಷ್ಟಿಕೋನದಿಂದ ಹಲವು ಮಾನದಂಡಗಳನ್ನು ಇಟ್ಟುಕೊಂಡು ಲಸಿಕೆಯನ್ನು ಉತ್ಪಾದಿಸಲಾಗಿದೆ. ಭಾರತದಲ್ಲಿ ಕೇಂದ್ರ ಸರ್ಕಾರದ ಲಸಿಕಾಕರಣ ಯೋಜನೆಯ ವೇಳೆ ಅತಿ ಹೆಚ್ಚು ಪ್ರಯೋಗಕ್ಕೀಡಾದ ಲಸಿಕೆ ಎಂದರೆ ಅದು ಕೊವ್ಯಾಕ್ಸಿನ್‌ ಮಾತ್ರ. ಪರವಾನಗಿ ಪ್ರಕ್ರಿಯೆಯ ವೇಳೆ ಸುಮಾರು 27 ಸಾವಿರ ಅಂಶಗಳ ಕುರಿತು ಅಧ್ಯಯನ, ಪರಿಶೀಲನೆ ನಡೆಸಲಾಗಿದೆ. ವೈದ್ಯಕೀಯ ಪ್ರಯೋಗಕ್ಕೂ ಲಸಿಕೆಯನ್ನು ಒಳಪಡಿಸಲಾಗಿದೆ. ಹಾಗಾಗಿ, ಲಸಿಕೆಯು ಸಂಪೂರ್ಣವಾಗಿ ಸುರಕ್ಷಿತವಾಗಿದೆ” ಎಂಬುದಾಗಿ ಭಾರತ್‌ ಬಯೋಟೆಕ್‌ ಕಂಪನಿ ತಿಳಿಸಿದೆ.

ಇದನ್ನೂ ಓದಿ: Covaxin: ಕೊವ್ಯಾಕ್ಸಿನ್‌ ಸುರಕ್ಷಿತ ಲಸಿಕೆ ಎಂದ ಭಾರತ್‌ ಬಯೋಟೆಕ್;‌ ಸೈಡ್‌ ಎಫೆಕ್ಟ್‌ ಆರೋಪದ ಬೆನ್ನಲ್ಲೇ ಸ್ಪಷ್ಟನೆ!

Continue Reading

ಆರೋಗ್ಯ

Hair Conditioner: ರಾಸಾಯನಿಕ ಹೇರ್‌ ಕಂಡೀಷನರ್‌ ಬಿಡಿ; ಈ 5 ನೈಸರ್ಗಿಕ ಹೇರ್ ಕಂಡೀಷನರ್ ಬಳಸಿ

ನುಣುಪಾಗಿ ನಯವಾಗಿ ಹೊಳಪಾಗಿದ್ದ ಕೂದಲು ನಿಸ್ತೇಜವಾಗಿ ಬಾಡುತ್ತದೆ. ಮಾರುಕಟ್ಟೆಯ ಜಾಹೀರಾತುಗಳನ್ನು ನೋಡಿ, ಏನಾದರೊಂದು ಹೊಸ ಶಾಂಪೂ, ಕಂಡೀಶನರ್‌ ಪ್ರಯತ್ನಿಸುವ ಮಂದಿ ನೈಸರ್ಗಿಕವಾದ ಕಂಡೀಶನರ್‌ಗಳ ಮೊರೆ ಹೋದರೆ ಖಂಡಿತವಾಗಿಯೂ ಉತ್ತಮ ಪ್ರಯೋಜನ ಪಡೆಯಬಲ್ಲರು. ಮಾರುಕಟ್ಟೆಯ ಕಂಡೀಶನರ್‌ಗೆ ಸೆಡ್ಡು ಹೊಡೆಯುವಂಥ ನೈಸರ್ಗಿಕ ಕಂಡೀಷನರ್‌ಗಳ (Hair conditioner) ಬಗ್ಗೆ ಇಲ್ಲಿದೆ ಮಾಹಿತಿ.

VISTARANEWS.COM


on

Hair Conditioner
Koo

ಕೂದಲ ಪೋಷಣೆ ಎಷ್ಟು ಮಾಡಿದರೂ ಸಾಲದು. ಬಿಡದೆ ಕಾಡುವ ಕೂದಲ ಸಮಸ್ಯೆ ಒಂದೆರಡಲ್ಲ. ಒಂದೋ ತಲೆಹೊಟ್ಟು, ಸೀಳುತುದಿಗಳು, ಒಣಕಲಾಗುದು, ಉದುರುವುದು ಇತ್ಯಾದಿ ಇತ್ಯಾದಿ ಸಮಸ್ಯೆಗಳು ಕಾಡುತ್ತಲೇ ಇರುತ್ತವೆ. ಈಗ ಬೇಸಿಗೆಯಲ್ಲಂತೂ ತಿರುಗಾಡಿ ಮನೆಗೆ ಬಂದಾಗ ಕೂದಲು ಒಣಕಲಾಗಿ ಹಾರಾಡುತ್ತಾ, ಬಾಚಿಕೊಳ್ಳಲು ಕಷ್ಟವಾಗುತ್ತದೆ. ನುಣುಪಾಗಿ ನಯವಾಗಿ ಹೊಳಪಾಗಿದ್ದ ಕೂದಲು ನಿಸ್ತೇಜವಾಗಿ ಬಾಡುತ್ತದೆ. ಮಾರುಕಟ್ಟೆಯ ಜಾಹಿರಾತುಗಳನ್ನು ನೋಡಿ, ಏನಾದರೊಂದು ಹೊಸ ಶಾಂಪೂ, ಕಂಡೀಶನರ್‌ ಪ್ರಯತ್ನಿಸುವ ಮಂದಿ ನೈಸರ್ಗಿಕವಾದ ಕಂಡೀಶನರ್‌ಗಳ ಮೊರೆ ಹೋದರೆ ಖಂಡಿತವಾಗಿಯೂ ಉತ್ತಮ ಪ್ರಯೋಜನ ಪಡೆಯಬಲ್ಲರು. ಮಾರುಕಟ್ಟೆಯ ಕಂಡೀಶನರ್‌ಗೆ ಸೆಡ್ಡು ಹೊಡೆಯುವಂಥ ನೈಸರ್ಗಿಕ ಕಂಡೀಷನರ್‌ಗಳೇ ಇರುವಾಗ ರಾಸಾಯನಿಕ ಸಹಾಯ ಯಾಕೆ ಬೇಕು ಹೇಳಿ? ಬನ್ನಿ, ನೈಸರ್ಗಿಕ ಹೇರ್‌ ಕಂಡೀಷನರ್‌ಗಳಾಗಿ (Hair conditioner) ಯಾವುದನ್ನು ಬಳಸಬಹುದು ಎಂಬುದನ್ನು ನೋಡೋಣ.

Egg conditioner

ಮೊಟ್ಟೆಯ ಕಂಡೀಷನರ್‌

ಇದು ಕೂದಲ ಪೋಷಣೆಗೆ ಹೇಳಿ ಮಾಡಿಸಿದಂತಹ ಕಂಡೀಷನರ್‌. ಒಂದೇ ಬಳಕೆಯಲ್ಲಿ ನಿಮ್ಮ ಕೂದಲಲ್ಲಿ ಗಣನೀಯ ಬದಲಾವಣೆಯನ್ನು ನೀವು ಕಾಣುತ್ತೀರಿ. ಕೂದಲ ಮೇಳೆ ಅಡ್ಡ ಪರಿಣಾಮಗಳಾಗಬಹುದು ಎಂಬ ಭಯವೂ ಇಲ್ಲ. ಮೊಟ್ಟೆಯ ಬಿಳಿ ಲೋಳೆ, ಆಲಿವ್‌ ಎಣ್ಣೆ, ಜೇನುತುಪ್ಪ ಹಾಗೂ ವಿನೆಗರ್‌ ಇವನ್ನೆಲ್ಲ ಸೇರಿಸಿ ಚೆನ್ನಾಗಿ ಕಲಕಿಕೊಂಡು ಪೇಸ್ಟ್‌ನಂತೆ ತಲೆಗೆ ಕೂದಲ ಬುಡದಿಂದ ತುದಿಯವರೆಗೆ ಹಚ್ಚಿಕೊಳ್ಳಿ. ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲ ಇದನ್ನು ಹಾಗೆಯೇ ತಲೆಯಲ್ಲಿರಲು ಬಿಟ್ಟು ನಂತರ ಮೆದುವಾದ ಶಾಂಪೂವಿನಿಂದ ತೊಳೆಯಿರಿ. ಯಾವ ಕಂಡೀಷನರ್‌ ಅಗತ್ಯವೂ ಇಲ್ಲದೆ ನಿಮ್ಮ ಕೂದಲು ಕಂಡೀಷನರ್‌ ಬಳಸಿದಂತೆ ಪಳಪಳಿಸುತ್ತದೆ.

Banana conditioner

ಬಾಳೆಹಣ್ಣಿನ ಕಂಡೀಷನರ್

ಒಂದು ಚೆನ್ನಾಗಿ ಹಣ್ಣಾದ ಬಾಳೆಹಣ್ಣನ್ನು ತೆಗೆದುಕೊಂಡು ಒಂದು ಚಮಚ ಜೇನುತುಪ್ಪ, ಆಲಿವ್‌ ಎಣ್ಣೆ ಇವಿಷ್ಟನ್ನೂ ತೆಗೆದುಕೊಂಡು ಪೇಸ್ಟ್‌ ಮಾಡಿ ತಲೆಗೆ ಹಚ್ಚಿ. ಅರ್ಧ ಗಂಟೆ ಬಿಟ್ಟು ತಲೆಗೆ ಸ್ನಾನ ಮಾಡುವುದರಿಂದ ಕೂದಲು ನಯವಾಗಿ ಹೊಳೆಯುತ್ತದೆ.‌ ಈ ಪೇಸ್ಟ್‌ ಜೊತೆಗೆ ಏಕಿದ್ದರೆ ಮೊಟ್ಟೆಯ ಬಿಳಿ ಲೋಳೆಯನ್ನೂ ಸೇರಿಸಬಹುದು.

ತೆಂಗಿನೆಣ್ಣೆ ಕಂಡೀಷನರ್

ತೆಂಗಿನ ಎಣ್ಣೆಗೆ ಒಂದು ಚಮಚ ಜೇನುತುಪ್ಪ, ನಿಂಬೆಹಣ್ಣಿನ ರಸ, ಮೊಸರು ಹಾಗೂ ರೋಸ್‌ ವಾಟರ್‌ ಸೇರಿಸಿ. ಇವನ್ನು ಚೆನ್ನಾಗಿ ಮಿಕ್ಸ್‌ ಮಾಡಿ ತಲೆಗೆ ಹಚ್ಚಿ ಮಸಾಜ್‌ ಮಾಡಿಕೊಳ್ಳಿ. ನಂತರ ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿ. ಕೂದಲು ಆರೋಗ್ಯಯುತವಾಗಿ ಕಂಗೊಳಿಸುತ್ತದೆ.

ಇದನ್ನೂ ಓದಿ: Health Tips in Kannada: ಕುತ್ತಿಗೆ ನೋವಿನಿಂದ ಬಳಲುತ್ತಿದ್ದೀರಾ? ಈ ಸಂಗತಿ ತಿಳಿದುಕೊಂಡಿರಿ

ಅಗಸೆಬೀಜದ ಕಂಡೀಷನರ್

ಎರಡು ಚಮಚ ಅಗಸೆ ಬೀಜವನ್ನು ನೀರಿಗೆ ಹಾಕಿ ಸ್ವಲ್ಪ ಹೊತ್ತು ಕುದಿಸಿ. ಅದು ಕುದಿರುವ ಸಂದರ್ಭ ಜೆಲ್‌ನಂತಾಗುತ್ತದೆ. ಸ್ವಲ್ಪ ಆರಿದ ಮೇಲೆ ಅದನ್ನು ಸೋಸಿಕೊಂಡು ಅದರಿಂದ ದೊರೆತ ಜೆಲ್‌ಗೆ, ಆಲೊವೆರಾ ಜೆಲ್‌ ಹಾಗೂ ತೆಂಗಿನೆಣ್ಣೆ ಸ್ವಲ್ಪ ಸೇರಿಸಿ. ಈ ಮೂರನ್ನೂ ಚೆನ್ನಾಗಿ ಮಿಕ್ಸ್‌ ಮಾಡಿ, ಕೂದಲ ಬುಡದಿಂದ ತುದಿಯವರೆಗೂ ಹಚ್ಚಿ. ಅರ್ಧ ಗಂಟೆ ಬಿಟ್ಟು ತೊಳೆದರೆ, ಯಾವ ಕಂಡೀಷನರ್‌ ಕೂಡಾ ಅಗತ್ಯವೇ ಇಲ್ಲ. ನಿಸ್ತೇಜವಾಗಿದ್ದ ಕೂದಲು ಒಂದೇ ಸಲಕ್ಕೆ ಪಳಪಳಿಸುವ ಹೊಳಪನ್ನು ಪಡೆಯುತ್ತದೆ.

Tips To Prevent Curd

ಮೊಸರಿನ ಕಂಡೀಷನರ್

ಒಂದು ಬೌಲ್‌ನಲ್ಲಿ ಗಟ್ಟಿ ಮೊಸರು ತೆಗೆದುಕೊಂಡು ಅದಕ್ಕೆ, ಮೊಟ್ಟೆಯ ಬಿಳಿ ಲೋಳೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ. ಈ ಮಿಶ್ರಣವನ್ನು ತಲೆ ಕೂದಲಿಂದ ಬುಡದವರೆಗೆ ಹಚ್ಚಿ ಅರ್ಧ ಗಂಟೆಯ ಬಳಿಕ ಕೂದಲು ತೊಳೆಯಿರಿ. ಯಾವ ಕಂಡೀಷನರ್‌ ಹಾಕುವ ಅಗತ್ಯವೇ ಇಲ್ಲ. ಕೂದಲು ಸೊಂಪಾಗಿ ಬೆಳೆಯುತ್ತದೆ. ಹೊಟ್ಟಿನ ಸಮಸ್ಯೆಯಿದ್ದರೂ ಮಂಗಮಾಯ. ರಾಸಾಯನಿಕಯುಕ್ತ ಕಂಡೀಷನರ್‌ ಬಳಸುವ ಬದಲು, ವಾರಕ್ಕೊಮ್ಮೆಯಾದರೂ ಇಂತಹ ನೈಸರ್ಗಿಕ ಕಂಡೀಷನಿಂಗ್‌ ಮಾಡುವುದರಿಂದ ಕೂದಲನ್ನು ಯಾವ ಸಮಸ್ಯೆಯೂ ಬಾಧಿಸುವುದಿಲ್ಲ.

Continue Reading

ಆರೋಗ್ಯ

Healthy Diet: ಬೆಣ್ಣೆ ಆರೋಗ್ಯಕ್ಕೆ ಒಳ್ಳೆಯದೇ ಕೆಟ್ಟದ್ದೇ? ಈ ಸಂಗತಿ ತಿಳಿದುಕೊಂಡಿರಿ

ಬೆಣ್ಣೆ ಆರೋಗ್ಯಕ್ಕೆ ಕೆಟ್ಟದು ಎಂದು ಕೆಲವರು ಭಾವಿಸುತ್ತಾರೆ. ಆದರೆ ನೀವು ಅದನ್ನು ಮಿತವಾಗಿ ಸೇವಿಸಿದರೆ ಅದು ಕೆಟ್ಟದ್ದಲ್ಲ ಎನ್ನುತ್ತಾರೆ ಇನ್ನು ಕೆಲವರು. ಹೌದು ಬೆಣ್ಣೆಯನ್ನು ಮಿತವಾಗಿ ಸೇವಿಸಿದರೆ ಮಾತ್ರ ಆರೋಗ್ಯಕರ ಆಹಾರದ (Healthy Diet) ಭಾಗವಾಗುವುದು ನಿಜ. ಈ ಕುರಿತು ಇಲ್ಲಿದೆ ಉಪಯುಕ್ತ ಮಾಹಿತಿ.

VISTARANEWS.COM


on

By

Healthy Diet
Koo

ಹಾಲು (milk), ಮೊಸರು (curd), ತುಪ್ಪ (ghee), ಬೆಣ್ಣೆ (butter) ಇಲ್ಲದೇ ಇದ್ದರೆ ಭಾರತೀಯರ ಮನೆಗಳಲ್ಲಿ ಅಡುಗೆ ಕೆಲಸ ಕಾರ್ಯಗಳು ಒಂದೂ ನಡೆಯುವುದಿಲ್ಲ. ಆರೋಗ್ಯದ ವಿಚಾರದಲ್ಲಿ (Healthy Diet) ಹಾಲು, ತುಪ್ಪ, ಮೊಸರಿನ ಬಗ್ಗೆ ಅಷ್ಟೇನು ಸಂದೇಹವಿಲ್ಲ. ಆದರೆ ಬೆಣ್ಣೆಯ ವಿಚಾರ ಬಂದಾಗ ಇದು ಆರೋಗ್ಯಕರ ಹೌದೋ ಅಲ್ಲವೋ ಎನ್ನುವ ಗೊಂದಲ ಕಾಡುತ್ತದೆ.

ಭಾರತೀಯ ಮನೆಗಳ ಪಾಕ ಶಾಲೆಯಲ್ಲಿ ಬಹುವಿಧವಾಗಿ ಬಳಸುವ ಬೆಣ್ಣೆಯು ಅದರ ಪೋಷಕಾಂಶದಿಂದಲೂ ಹೆಚ್ಚು ಮೌಲ್ಯಯುತ ಎಂದೆನಿಸಿದೆ. ಇದು ಹಲವಾರು ಪೋಷಕಾಂಶಗಳ ಕೇಂದ್ರೀಕೃತ ಮೂಲವಾಗಿದೆ. ಇದರಲ್ಲಿ ಕೊಬ್ಬು ಕರಗಬಲ್ಲ ವಿಟಮಿನ್‌ಗಳಾದ ಎ, ಇ ಮತ್ತು ಕೆ2 ವಿವಿಧ ದೈಹಿಕ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆರೋಗ್ಯಕರ ದೃಷ್ಟಿ, ಚರ್ಮವನ್ನು ಕಾಪಾಡಿಕೊಳ್ಳಲು ಮತ್ತು ಒಟ್ಟಾರೆ ದೇಹದ ಪ್ರತಿರಕ್ಷೆಯನ್ನು ಬೆಂಬಲಿಸಲು ಇವುಗಳು ಅತ್ಯಗತ್ಯ.

ಬೆಣ್ಣೆ ಆರೋಗ್ಯಕ್ಕೆ ಕೆಟ್ಟದು ಎಂದು ಕೆಲವರು ಭಾವಿಸುತ್ತಾರೆ. ಆದರೆ ನೀವು ಅದನ್ನು ಮಿತವಾಗಿ ಸೇವಿಸಿದರೆ ಅದು ಕೆಟ್ಟದ್ದಲ್ಲ ಎನ್ನುತ್ತಾರೆ ಇನ್ನು ಕೆಲವರು. ಹೌದು ಬೆಣ್ಣೆಯನ್ನು ಮಿತವಾಗಿ ಸೇವಿಸಿದರೆ ಮಾತ್ರ ಆರೋಗ್ಯಕರ ಆಹಾರದ ಭಾಗವಾಗುವುದು ನಿಜ. ಅಲ್ಲದೇ ಉತ್ತಮ ಗುಣಮಟ್ಟದ ಬೆಣ್ಣೆಯನ್ನು ಆಯ್ಕೆ ಮಾಡಲು ಸೂಚಿಸಲಾಗುತ್ತದೆ. ಏಕೆಂದರೆ ಇದು ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುತ್ತದೆ. ದೇಹಕ್ಕೆ ಅಗತ್ಯವಾದ ಉತ್ತಮ ಕೊಬ್ಬಿನಾಂಶಗಳು ಬೆಣ್ಣೆ, ಆಲಿವ್ ಎಣ್ಣೆ, ಆವಕಾಡೊಗಳಿಂದಲೂ ಸಿಗುತ್ತದೆ.


ಹೆಚ್ಚುವರಿ ಬೆಣ್ಣೆಯನ್ನು ಸೇವಿಸಿದರೆ ಏನಾಗುತ್ತದೆ?

ಬೆಣ್ಣೆಯಲ್ಲಿ ಸ್ಯಾಚುರೇಟೆಡ್ ಕೊಬ್ಬಿನಂಶ ಹೆಚ್ಚಿರುತ್ತದೆ. ಇದನ್ನು ಅಧಿಕವಾಗಿ ಸೇವಿಸಿದಾಗ ಎಲ್‌ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.

ಬೆಣ್ಣೆಯು ಕ್ಯಾಲೋರಿ ದಟ್ಟವಾಗಿರುತ್ತದೆ. ಆದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ತೂಕ ಹೆಚ್ಚಾಗಬಹುದು. ಬೆಣ್ಣೆಯನ್ನು ಮಿತವಾಗಿ ಸೇವಿಸಲು ಯಾವಾಗಲೂ ಸಲಹೆ ನೀಡಲಾಗುತ್ತದೆ.

ಹಲವಾರು ಅಧ್ಯಯನಗಳ ಪ್ರಕಾರ ಬೆಣ್ಣೆಯು ರಕ್ತದ ಲಿಪಿಡ್ ಮಟ್ಟವನ್ನು ಹಾನಿಗೊಳಿಸುತ್ತದೆ. ಹೃದಯದ ಪರಿಸ್ಥಿತಿಗಳು ಅಥವಾ ಕೊಲೆಸ್ಟ್ರಾಲ್ ನಿಂದ ಬಳಲುತ್ತಿರುವವರಿಗೆ, ಮಿತವಾಗಿರುವುದು ಮುಖ್ಯವಾಗಿದೆ.

ಇದನ್ನೂ ಓದಿ: Tips for Mothers: ಆಹಾರ- ಆರೋಗ್ಯ; ದುಡಿಯುವ ಬ್ಯುಸಿ ತಾಯಂದಿರಿಗೆ ಇಲ್ಲಿದೆ ಕಿವಿಮಾತು!

ಬೆಣ್ಣೆಯು ಲ್ಯಾಕ್ಟೋಸ್ ಮತ್ತು ಡೇರಿ ಪ್ರೋಟೀನ್‌ಗಳನ್ನು ಹೊಂದಿರುತ್ತದೆ. ಇದು ಡೇರಿ ಅಲರ್ಜಿಯಿಂದ ಬಳಲುತ್ತಿರುವವರಿಗೆ ಸಮಸ್ಯೆಯಾಗಬಹುದು. ಬೆಣ್ಣೆಯನ್ನು ಸೇವಿಸಿದ ಅನಂತರ ಉಬ್ಬುವುದು, ಗ್ಯಾಸ್ ಅಥವಾ ಅತಿಸಾರದಂತಹ ಜೀರ್ಣಕಾರಿ ತೊಂದರೆಗಳನ್ನು ಅವರು ಅನುಭವಿಸಬಹುದು.

ಬೆಣ್ಣೆಯನ್ನು ಮಿತವಾಗಿ ಸೇವಿಸಿದಾಗ ಆರೋಗ್ಯಕರ ಆಹಾರದ ಭಾಗವಾಗಬಹುದು. ಅದರ ಸ್ಯಾಚುರೇಟೆಡ್ ಕೊಬ್ಬಿನಂಶವನ್ನು ಗಮನದಲ್ಲಿಟ್ಟುಕೊಳ್ಳುವುದು ಮತ್ತು ಸಾಧ್ಯವಾದಾಗ ಉತ್ತಮ ಗುಣಮಟ್ಟದ ಆಯ್ಕೆಗಳನ್ನು ಆರಿಸುವುದು ಅತ್ಯಗತ್ಯ. ವೈವಿಧ್ಯಮಯ ಮತ್ತು ಸಮತೋಲಿತ ಆಹಾರದ ಭಾಗವಾಗಿ ಬೆಣ್ಣೆಯನ್ನು ಆನಂದಿಸುವುದು ಉತ್ತಮ.

Continue Reading

ಆರೋಗ್ಯ

West Nile fever : ಕೇರಳದಲ್ಲಿ ವೆಸ್ಟ್‌ ನೈಲ್ ಭೀತಿ; ಮೈಸೂರು ಗಡಿಭಾಗದಲ್ಲಿ ಆರೋಗ್ಯ ಇಲಾಖೆ ಅಲರ್ಟ್‌

West Nile fever : ಕೇರಳದಲ್ಲಿ ವೆಸ್ಟ್‌ ನೈಲ್‌ ಜ್ವರವು ಹೆಚ್ಚಾಗಿ ಆವರಿಸುತ್ತಿದೆ. ಮೈಸೂರಿನ ಗಡಿಭಾಗದಲ್ಲೂ ಜ್ವರ ಹರಡುವ ಕಾರಣಕ್ಕೆ ಆರೋಗ್ಯ ಇಲಾಖೆ ಅಲರ್ಟ್‌ ಆಗಿದೆ. ಈಗಾಗಲೇ ಗಡಿ ಭಾಗದಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ಈ ಕುರಿತು ಜನರಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ.

VISTARANEWS.COM


on

By

West Nile fever Health department on alert
Koo

ಮೈಸೂರು: ನಿಫಾ, ಕೋವಿಡ್, ಹಕ್ಕಿ ಜ್ವರ, ಹಂದಿ ಜ್ವರ ಬಳಿಕ ಈಗ ವೆಸ್ಟ್ ನೈಲ್ ಜ್ವರದ ಭೀತಿ ಹೆಚ್ಚಾಗಿದೆ. ನೆರೆಯ ಕೇರಳದಲ್ಲಿ ವೆಸ್ಟ್‌ ನೈಲ್ ಜ್ವರ (West Nile fever) ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕೇರಳದ ಗಡಿ ಹಂಚಿಕೊಂಡಿರುವ ಮೈಸೂರು ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ (Health department) ಅಲರ್ಟ್ ಆಗಿದೆ.

ಎಚ್‌ಡಿ ಕೋಟೆ ತಾಲೂಕಿನ ಡಿ.ಬಿ ಕುಪ್ಪೆ ಸೇರಿದಂತೆ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಚೆಕ್ ಪೋಸ್ಟ್‌ಗಳಲ್ಲಿ ತೀವ್ರ ನಿಗಾವಹಿಸಲಾಗಿದೆ. ಗಡಿ ಭಾಗದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ತಪಾಸಣೆಯೊಂದಿಗೆ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಈ ಹಿಂದೆ ಕೋವಿಡ್, ಹಂದಿಜ್ವರ, ನಿಫಾ ವೈರಸ್‌ ಕೇರಳದಲ್ಲಿ ಕಾಣಿಸಿಕೊಂಡು ನಂತರ ಕರ್ನಾಟಕಕ್ಕೂ ಹರಡಿತ್ತು. ಹೀಗಾಗಿ ಕೇರಳ ಗಡಿ ಮೂಲಕ ಮೈಸೂರಿಗೆ ಪ್ರವೇಶ ಪಡೆಯುವ ರೋಗಿಗಳಿಂದ ರಾಜ್ಯಕ್ಕೂ ಹರಡುವ ಸಾಧ್ಯತೆ ಇದೆ. ಹೀಗಾಗಿ ಹೆಚ್ಚಿನ ಮುಂಜಾಗ್ರತೆಯನ್ನು ವಹಿಸಲಾಗುತ್ತಿದೆ.

ಎಚ್‌ಡಿ ಕೋಟೆಯ ಗಡಿ ಭಾಗದಲ್ಲಿ ಹಲವರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಜ್ವರ, ತಲೆನೋವು, ಶೀತದಿಂದ ಬಳಲುತ್ತಿದ್ದಾರೆ. ಹೀಗಾಗಿ ಎಚ್‌ಡಿಕೋಟೆಯ ತಾಲೂಕು ಆರೋಗ್ಯಾಧಿಕಾರಿಗಳು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಸ್ಯಾಂಪಲ್ ರವಾನಿಸಿದ್ದಾರೆ.

West Nile fever  Health department on alert
ಜನರಲ್ಲಿ ವೆಸ್ಟ್‌ ನೈಲ್‌ ಜ್ವರದ ಕುರಿತು ಜಾಗೃತಿ ಮೂಡಿಸುತ್ತಿರುವ ಆರೋಗ್ಯಾಧಿಕಾರಿಗಳು

ಈ ಬಗ್ಗೆ ಮೈಸೂರು ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಪಿ.ಸಿ ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ. ಈಗಾಗಲೇ ಆರೋಗ್ಯ ಇಲಾಖೆಯು ಕಾಡಂಚಿನ ಗ್ರಾಮದ ಮನೆ – ಮನೆಗೆ ತೆರಳಿ ಮಾಹಿತಿ ನೀಡುತ್ತಿದ್ದೇವೆ. ಸಾಮಾನ್ಯ ಜ್ವರಕ್ಕೆ ನೀಡುವಂತೆ ವೆಸ್ಟ್ ನೈಲ್ ಜ್ವರಕ್ಕೂ ಚಿಕಿತ್ಸೆ ನೀಡಲಾಗುತ್ತದೆ.

ವೆಸ್ಟ್‌ ನೈಲ್‌ ಜ್ವರದ ಲಕ್ಷಣಗಳಿವು

1) ದಿಢೀರ್‌ ಜ್ವರ ಬರುವುದು
2) ವಿಪರೀತ ಮೈ-ಕೈ ನೋವು, ತಲೆನೋವು ಕಾಣಿಸಿಕೊಳ್ಳುವುದು
3) ದೇಹದ ಮೇಲೆ ದದ್ದುಗಳು ಕಾಣಿಸಿಕೊಳ್ಳುವುದು
4) ಕೆಲವೊಮ್ಮೆ ವಾಂತಿ ಆಗಲಿದೆ. ಇವು ವೆಸ್ಟ್ ನೈಲ್ ಜ್ವರದ ಲಕ್ಷಣಗಳಾಗಿವೆ. ಸಾಮಾನ್ಯವಾಗಿ ಈ ವೈರಸ್‌ ಸೊಳ್ಳೆಗಳಿಂದ ಹರಡುತ್ತದೆ. ಸೋಂಕಿತ ಪಕ್ಷಿಗಳನ್ನು ತಿನ್ನುವಾಗ ಸೋಂಕಿಗೆ ಒಳಗಾಗುತ್ತವೆ. ಅವು ಮನುಷ್ಯನನ್ನು ಕಚ್ಚಿದಾಗ ಈ ವೆಸ್ಟ್‌ ಬೈಲ್‌ ಜ್ವರ ಕಾಣಿಸಿಕೊಳ್ಳುತ್ತದೆ.

ಈ ರೀತಿಯ ಲಕ್ಷಣಗಳು ಕಂಡು ಬಂದರೆ ಕೂಡಲೇ ಸಮೀಪದ ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ವೆಸ್ಟ್ ನೈಲ್ ಜ್ವರ ಮಾರಣಾಂತಿಕವಲ್ಲ. ಹಾಗಾಗಿ ಜನರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ, ಆದರೆ ಎಚ್ಚರಿಕೆಯಿಂದ ಇರಬೇಕು.

ಇದನ್ನೂ ಓದಿ: Uttara Kannada News: ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರ ವಹಿಸಿ: ಡಿಸಿ ಮಾನಕರ್‌

ಮೈಸೂರಿನಲ್ಲಿ ಕಾಲರಾ ಅಟ್ಟಹಾಸ; ಕಲುಷಿತ ನೀರು ಕುಡಿದು 114 ಜನಕ್ಕೆ ಕಾಯಿಲೆ!

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ವಿಧಾನಸಭೆ ಕ್ಷೇತ್ರವಾದ ವರುಣದಲ್ಲಿ (Varuna) ಶುದ್ಧ ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತ್ತಿದ್ದು, ತಗಡೂರು ಗ್ರಾಮದಲ್ಲಿ ಇದರಿಂದ ಜನ ಕಾಲರಾಗೆ ತುತ್ತಾಗುತ್ತಿದ್ದಾರೆ. ತಗಡೂರು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ, ಕಲುಷಿತ ನೀರು ಸೇವಿಸಿದ ಕಾರಣ 25 ಗ್ರಾಮಸ್ಥರು ಸೇರಿ 114 ಮಂದಿ ಕಾಲರಾ (Cholera) ಕಾಯಿಲೆಯಿಂದ ಬಳಲುತ್ತಿದ್ದಾರೆ. ವಾಂತಿ-ಭೇದಿಯಿಂದ ಜನ ತತ್ತರಿಸಿ ಹೋಗಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ.

ತಗಡೂರು ಗ್ರಾಮವು ನಂಜನಗೂಡು ತಾಲೂಕಿಗೆ ಸೇರಿದರೂ ವರುಣ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ತಗಡೂರು ಗ್ರಾಮ ಪಂಚಾಯಿತಿಯ 1, 2 ಹಾಗೂ 3ನೇ ವಾಸಿಸುತ್ತಿರುವ ಜನರು ಕಾಲರಾಗೆ ತುತ್ತಾಗಿದ್ದಾರೆ. 114 ರೋಗಿಗಳಲ್ಲಿ ಐವರ ಸ್ಥಿತಿ ಗಂಭೀರವಾದ ಕಾರಣ ಅವರನ್ನು ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದವರಿಗೆ ತಗಡೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದರ ಮಧ್ಯೆಯೇ, ಕಾಲರಾ ಹರಡಲು ಅಧಿಕಾರಿಗಳ ನಿರ್ಲಕ್ಷ್ಯವೇ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

12 ಕೈ ಪಂಪ್‌ಗಳಿದ್ದರೂ ಪ್ರಯೋಜನ ಇಲ್ಲ

ಗ್ರಾಮದಲ್ಲಿ 12 ಕೈ ಪಂಪ್‌ಗಳಿದ್ದು, ನಾಲ್ಕು ಕೈಪಂಪ್‌ಗಳ ನೀರು ಕುಡಿಯಲು ಯೋಗ್ಯವಿಲ್ಲ. ಆತಂಕಕಾರಿ ವರದಿ ಇದ್ದರೂ ತಗಡೂರು ಗ್ರಾಮ ಪಂಚಾಯಿತಿ ಅಧಿಕಾರಿಗಳು ಎಚ್ಚೆತ್ತುಕೊಂಡು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ. ಹಾಗಾಗಿ, ಕಲುಷಿತ ನೀರು ಸೇವಿಸಿ ನೂರಾರು ಜನ ಅಸ್ವಸ್ಥರಾಗಿದ್ದಾರೆ. ಇದರಿಂದಾಗಿ ಗ್ರಾಮಸ್ಥರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಕಿಡಿ ಕಾರುತ್ತಿದ್ದಾರೆ.

ಜನಾಕ್ರೋಶದ ಬಳಿಕ ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳು.

ದಿಢೀರ್‌ ಕ್ರಮಕ್ಕೆ ಮುಂದಾದ ಅಧಿಕಾರಿಗಳು

ಗ್ರಾಮದಲ್ಲಿ ನೂರಾರು ಜನ ಕಾಲರಾಗೆ ತುತ್ತಾಗಿರುವ ಸುದ್ದಿ ತಿಳಿಯುತ್ತಲೇ ಅಧಿಕಾರಿಗಳ ದಂಡೇ ಗ್ರಾಮಕ್ಕೆ ತೆರಳಿದೆ. ಗ್ರಾಮಕ್ಕೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಕುಮಾರಸ್ವಾಮಿ, ನಂಜನಗೂಡು ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು, ಜಿಲ್ಲಾ ಕಾಲರಾ ವೈದ್ಯಾಧಿಕಾರಿ ಡಾ. ಪುಟ್ಟತಾಯಮ್ಮ, ತಾಲೂಕು ವೈದ್ಯಾಧಿಕಾರಿ ಡಾ. ಈಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಗ್ರಾಮದಲ್ಲಿರುವ ಸಾರ್ವಜನಿಕರಿಗೆ ಕೂಡ ಪ್ರತಿರೋಧಕ ಚುಚ್ಚುಮದ್ದು ನೀಡಲಾಗುತ್ತಿದೆ. ಪ್ರತಿ ಮನೆ ಮನೆಗೆ ಒಆರ್‌ಎಸ್ ಪೌಡರ್ ವಿತರಣೆ ಮಾಡಲಾಗಿದೆ. ಮನೆಯಲ್ಲಿ ಬಿಸಿ ನೀರು ಸೇವನೆ ಮಾಡಲು ಪ್ರತ್ಯೇಕವಾಗಿ ಕುಡಿಯುವ ನೀರಿನ ಟ್ಯಾಂಕ್ ವ್ಯವಸ್ಥೆ ಮಾಡಲಾಗಿದೆ.

ಗ್ರಾಮದಲ್ಲಿ ಅಧಿಕಾರಿಗಳು ಬೀಡು ಬಿಟ್ಟಿದ್ದು, ದಿನಕ್ಕೆ ಮೂರು ಬಾರಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಜತೆಗೂಡಿ ವೈದ್ಯಾಧಿಕಾರಿಗಳು ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ. ಇಷ್ಟಾದರೂ ಪಿಡಿಒ ದಿವಾಕರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ ನಾಪತ್ತೆಯಾಗಿದ್ದು, ಸಂಬಂಧಪಟ್ಟ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Covaxin Safety
ದೇಶ36 mins ago

Covaxin Safety: ಕೊವ್ಯಾಕ್ಸಿನ್‌ನಿಂದ ಅಡ್ಡ ಪರಿಣಾಮ ಎಂದು ಬನಾರಸ್‌ ವಿವಿ ವರದಿ; ವೈದ್ಯ ಸಂಶೋಧನಾ ಸಂಸ್ಥೆ ಆಕ್ಷೇಪ

Food department deletes name from ration card list even though it is alive
ವಿಜಯನಗರ40 mins ago

Food Department : ಜೀವಂತ ಇದ್ದವಳನ್ನು ಸತ್ತಿದ್ದಾಗಿ ಘೋಷಿಸಿದ ಆಹಾರ ಇಲಾಖೆ; ರೇಷನ್‌ ಕಾರ್ಡ್‌ನಿಂದಲೇ ಹೆಸರು ಡಿಲೀಟ್‌

History Of Ice Cream
ಆಹಾರ/ಅಡುಗೆ41 mins ago

History Of Ice Cream: ಎಲ್ಲರ ನೆಚ್ಚಿನ ಐಸ್‌ಕ್ರೀಮ್‌ ಹುಟ್ಟಿದ್ದು ಹೇಗೆ?

IPL 2024
ಕ್ರೀಡೆ42 mins ago

IPL 2024: ಮೋದಿ ಸ್ಟೇಡಿಯಂನಲ್ಲಿ ನಡೆಯುವ ಐಪಿಎಲ್​ ಪ್ಲೇ ಆಫ್​ ಪಂದ್ಯಕ್ಕೆ ಐಸಿಸ್‌ ಉಗ್ರರ ಕಾಟ; ಪಂದ್ಯಕ್ಕೂ ಮುನ್ನ ನಾಲ್ವರ ಬಂಧನ

Silver Jewel Trend
ಫ್ಯಾಷನ್52 mins ago

Silver Jewel Trend: ಬಂಗಾರದ ಆಭರಣಗಳಿಗೆ ಸೆಡ್ಡು ಹೊಡೆದ ಸಿಲ್ವರ್‌ ಜ್ಯುವೆಲರಿಗಳು!

Prajwal Revanna Case
ಪ್ರಮುಖ ಸುದ್ದಿ54 mins ago

Prajwal Revanna Case: ನಾನು ಸೇರಿ ಸುಮಾರು 30 ಜನರ ಫೋನ್ ಟ್ಯಾಪ್: ಸರ್ಕಾರದ ವಿರುದ್ಧ ಎಚ್‌ಡಿಕೆ ಬಾಂಬ್‌!

Holenarasipura sexual assault case SIT moves HC against HD Revanna bail order
ಕ್ರೈಂ59 mins ago

HD Revanna: ರೇವಣ್ಣಗೆ ಜಾಮೀನು ಸಿಕ್ಕರೂ ಸಿಗದ ರಿಲೀಫ್‌; ಎಸ್‌ಐಟಿಯಿಂದ ಹೈಕೋರ್ಟ್‌ ಮೊರೆ

Due to heavy rain in Shira water entered houses and shops
ತುಮಕೂರು1 hour ago

Heavy Rain: ಶಿರಾದಲ್ಲಿ ಭಾರೀ ಮಳೆಗೆ ಮನೆ, ಅಂಗಡಿಗಳಿಗೆ ನುಗ್ಗಿದ ನೀರು

Lok Sabha Election 2024 Shah Rukh Khan booth in Mumbai
ಬಾಲಿವುಡ್1 hour ago

Lok Sabha Election 2024: ಕುಟುಂಬದ ಜತೆ ಬಂದು ಮತ ಚಲಾಯಿಸಿದ ಶಾರುಖ್‌ ಖಾನ್‌

Trichy Tour
ಪ್ರವಾಸ1 hour ago

Trichy Tour: ದಾಂಪತ್ಯದ ಲವಲವಿಕೆಯನ್ನು ಮತ್ತೆ ಜೀವಂತಗೊಳಿಸಲು ತಿರುಚಿರಾಪಳ್ಳಿಗೆ ಹೋಗಿ ಬನ್ನಿ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ4 hours ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ1 day ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ1 day ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ1 day ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ3 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ3 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ4 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು4 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಟ್ರೆಂಡಿಂಗ್‌