Nandini Milk: ಹಾಲು ಉತ್ಪಾದಿಸಿದ ರೈತರಿಗಿಲ್ಲ ಹಣ; ವಿದೇಶಿ ಕ್ರಿಕೆಟ್‌ ಟೀಂಗೆ ಪ್ರಾಯೋಜಕತ್ವ: ಸರ್ಕಾರದ ವಿರುದ್ಧ ಅಶೋಕ್‌ ಗರಂ - Vistara News

ರಾಜಕೀಯ

Nandini Milk: ಹಾಲು ಉತ್ಪಾದಿಸಿದ ರೈತರಿಗಿಲ್ಲ ಹಣ; ವಿದೇಶಿ ಕ್ರಿಕೆಟ್‌ ಟೀಂಗೆ ಪ್ರಾಯೋಜಕತ್ವ: ಸರ್ಕಾರದ ವಿರುದ್ಧ ಅಶೋಕ್‌ ಗರಂ

Nandini Milk: ಸರ್ಕಾರದ ಕಾರ್ಯವೈಖರಿ ವಿರುದ್ಧ ಅಸಮಾಧಾನವನ್ನು ಹೊರಹಾಕಿದ್ದಾರೆ. ಈಗಾಗಲೇ ಸರ್ಕಾರದ ಮೇಲೆ ಮುಗಿಬಿದ್ದಿರುವ ಪ್ರತಿಪಕ್ಷಗಳು, ಈಗ ಮತ್ತಷ್ಟು ಸಮಸ್ಯೆಗಳನ್ನು ಹೊತ್ತು ಜನರ ಮುಂದಿಡಲು ಪ್ರಯತ್ನ ಮಾಡುತ್ತಿವೆ. ಇದರ ಭಾಗವಾಗಿ ಈಗ ಅಂತಾರಾಷ್ಟ್ರೀಯ ಕ್ರಿಕೆಟ್‌ ಪ್ರಾಯೋಜಕತ್ವಕ್ಕೆ ಹಣ ಹಾಕಿರುವ ಬಗ್ಗೆ ಆರ್.‌ ಅಶೋಕ್‌ ಪ್ರಶ್ನೆ ಮಾಡಿದ್ದಾರೆ. ರಾಜ್ಯದ ವಿವಿಧ ಹಾಲು ಒಕ್ಕೂಟಗಳಿಗೆ ಹಾಲು ಸರಬರಾಜು ಮಾಡುವ 26 ಲಕ್ಷಕ್ಕೂ ಹೆಚ್ಚು ರೈತರಿಗೆ ಸಲ್ಲಬೇಕಾದ 703 ಕೋಟಿ ರೂಪಾಯಿ ಪ್ರೋತ್ಸಾಹ ಧನವನ್ನು ಕಳೆದ 8 ತಿಂಗಳಿನಿಂದ ಬಾಕಿ ಉಳಿಸಿಕೊಂಡಿದೆ ಈ ರೈತ ವಿರೋಧಿ ಕಾಂಗ್ರೆಸ್‌ ಸರ್ಕಾರ ಎಂದು ಟೀಕಿಸಿದ್ದಾರೆ.

VISTARANEWS.COM


on

Nandini Milk No incentives for milk producers Ashok slams govt for sponsoring foreign cricket team
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಕೊಡದ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ಗರಂ ಆಗಿದ್ದಾರೆ. ಒಂದು ಕಡೆ 26 ಲಕ್ಷಕ್ಕೂ ಹೆಚ್ಚು ರೈತರಿಗೆ ಸಲ್ಲಬೇಕಾದ 703 ಕೋಟಿ ರೂಪಾಯಿ ಪ್ರೋತ್ಸಾಹ ಧನವನ್ನು ಬಾಕಿ ಉಳಿಸಿಕೊಂಡು ಮತ್ತೊಂದು ಕಡೆ ಕೆಎಂಎಫ್‌ ಸಂಸ್ಥೆಯ ನಂದಿನಿ ಹಾಲು (Nandini Milk) ಉತ್ಪಾದನೆಯಿಂದ ಬಂದ ಲಾಭದಲ್ಲಿ ಕೋಟ್ಯಂತರ ರೂಪಾಯಿ ಹಣ ಬಳಸಿಕೊಂಡು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಪ್ರಾಯೋಜಕತ್ವವನ್ನು ಪಡೆದುಕೊಳ್ಳಲಾಗಿದೆ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಈ ಸಂಬಂಧ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಆರ್.‌ ಅಶೋಕ್‌, ಸರ್ಕಾರದ ಕಾರ್ಯವೈಖರಿ ವಿರುದ್ಧ ಅಸಮಾಧಾನವನ್ನು ಹೊರಹಾಕಿದ್ದಾರೆ. ಈಗಾಗಲೇ ಸರ್ಕಾರದ ಮೇಲೆ ಮುಗಿಬಿದ್ದಿರುವ ಪ್ರತಿಪಕ್ಷಗಳು, ಈಗ ಮತ್ತಷ್ಟು ಸಮಸ್ಯೆಗಳನ್ನು ಹೊತ್ತು ಜನರ ಮುಂದಿಡಲು ಪ್ರಯತ್ನ ಮಾಡುತ್ತಿವೆ. ಇದರ ಭಾಗವಾಗಿ ಈಗ ಅಂತಾರಾಷ್ಟ್ರೀಯ ಕ್ರಿಕೆಟ್‌ ಪ್ರಾಯೋಜಕತ್ವಕ್ಕೆ ಹಣ ಹಾಕಿರುವ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: Phone tapping: ಗೃಹ ಸಚಿವರಿಗೆ ಅಶೋಕ್‌ ರೈಟಿಂಗ್‌ನಲ್ಲಿ ಕಂಪ್ಲೇಂಟ್‌ ಕೊಡಲಿ; ಫೋನ್‌ ಕದ್ದಾಲಿಕೆ ಆರೋಪಕ್ಕೆ ಡಿಕೆಶಿ ತಿರುಗೇಟು

ಆರ್.‌ ಅಶೋಕ್‌ ಪೋಸ್ಟ್‌ನಲ್ಲೇನಿದೆ?

“ರಾಜ್ಯದ ವಿವಿಧ ಹಾಲು ಒಕ್ಕೂಟಗಳಿಗೆ ಹಾಲು ಸರಬರಾಜು ಮಾಡುವ 26 ಲಕ್ಷಕ್ಕೂ ಹೆಚ್ಚು ರೈತರಿಗೆ ಸಲ್ಲಬೇಕಾದ 703 ಕೋಟಿ ರೂಪಾಯಿ ಪ್ರೋತ್ಸಾಹ ಧನವನ್ನು ಕಳೆದ 8 ತಿಂಗಳಿನಿಂದ ಬಾಕಿ ಉಳಿಸಿಕೊಂಡಿದೆ ಈ ರೈತ ವಿರೋಧಿ ಕಾಂಗ್ರೆಸ್‌ ಸರ್ಕಾರ.

ಸಿಎಂ ಸಿದ್ದರಾಮಯ್ಯ ಅವರೇ, ಚುನಾವಣೆ ಸಂದರ್ಭದಲ್ಲಿ ನಂದಿನಿ ಹೆಸರಲ್ಲಿ ರಾಜಕೀಯ ಮಾಡಿ ಈಗ ಅಮೃತದಂತಹ ಹಾಲು ಕೊಡುವ ರೈತರ ಬಾಳಲ್ಲಿ ವಿಷ ಹಿಂಡುವ ಪಾಪದ ಕೆಲಸ ಮಾಡುತ್ತಿದ್ದೀರಲ್ಲ, ಇದೇನಾ ನೀವು ನಮ್ಮ ನಂದಿನಿ ಬ್ರ್ಯಾಂಡ್ ಉಳಿಸುವ ಪರಿ?

ಇದನ್ನೂ ಓದಿ: Phone tapping: ಸಿಬಿಐಗೆ ಫೋನ್‌ ಕದ್ದಾಲಿಕೆ ಪ್ರಕರಣ ವಹಿಸಲಿ: ಸರ್ಕಾರಕ್ಕೆ ಅಶೋಕ್‌ ಸವಾಲು ಏನು?

ನಂದಿನಿ ಸಂಸ್ಥೆಯ ಕೋಟ್ಯಂತರ ರೂಪಾಯಿ ಹಣ ಬಳಸಿಕೊಂಡು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಪ್ರಾಯೋಜಕತ್ವ ಪಡೆಯಲು ನಿಮ್ಮ ಸರ್ಕಾರದ ಬಳಿ ಇದೆ. ಆದರೆ, ನಂದಿನಿ ಬ್ರ್ಯಾಂಡ್ ಅನ್ನ ಕಟ್ಟಿ, ಬೆಳೆಸಿ, ಪೋಷಿಸುತ್ತಿರುವ ಹೈನುಗಾರರಿಗೆ ಸಮಯಕ್ಕೆ ಸರಿಯಾಗಿ ಪ್ರೋತ್ಸಾಹ ಧನ ನೀಡಲು ತಮ್ಮ ಬಳಿ ಹಣವಿಲ್ಲ ಅಲ್ಲವೇ ಸಿದ್ದರಾಮಯ್ಯನವರೇ? ನಾಡಿನ ರೈತರ ಶಾಪ ತಮಗೆ ತಟ್ಟದೇ ಇರದು” ಎಂದು ಆರ್.‌ ಅಶೋಕ್‌ ರೈತರ ಸಮಸ್ಯೆಗಳ ಬಗ್ಗೆ ವಿವರಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ರಾಜಕೀಯ

MLA Muniratna: ಅತ್ಯಾಚಾರ, ಹನಿಟ್ರ್ಯಾಪ್‌ ಆರೋಪ; ಜೈಲಿನಿಂದ ಹೊರಬರುತ್ತಿದ್ದಂತೆ ಶಾಸಕ ಮುನಿರತ್ನ ಮತ್ತೆ ಅರೆಸ್ಟ್‌

MLA Muniratna: ಜಾತಿನಿಂದನೆ ಪ್ರಕರಣದಿಂದ ಜಾಮೀನು ಪಡೆದು ಹೊರ ಬಂದ ಶಾಸಕ ಮುನಿರತ್ನರನ್ನು ಅತ್ಯಾಚಾರ ಹಾಗೂ ಹನಿಟ್ರ್ಯಾಪ್‌ ಆರೋಪದ (Physical abuse) ಮೇಲೆ ಕಗ್ಗಲಿಪುರ ಪೊಲೀಸರು ಬಂಧಿಸಿದ್ದಾರೆ.

VISTARANEWS.COM


on

By

allegations of rape honeytrap Mla Munirathna arrested again by Kaggalipura police as soon as he came out of jail
Koo

ಬೆಂಗಳೂರು: ಜಾತಿ ನಿಂದನೆ ಹಾಗೂ ಕೊಲೆ ಬೆದರಿಕೆ ಕೇಸ್‌ನಲ್ಲಿ ಜೈಲುಪಾಲಾಗಿದ್ದ ಶಾಸಕ ಮುನಿರತ್ನಗೆ (MLA Muniratna) ಕೋರ್ಟ್‌ ಷರತ್ತು ಬದ್ಧ ಜಾಮೀನು ನೀಡಿತ್ತು. ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್‌ ಆಗಿ ಹೊರ ಬಂದಾತಕ್ಷಣ ಕಗ್ಗಲಿಪುರ ಪೊಲೀಸರು (Kaggalipura police) ಹಾಗೂ ಡಿವೈಎಸ್‌ಪಿ ದಿನಕರ್ ಶೆಟ್ಟಿ ಮುನಿರತ್ನರನ್ನು ವಶಕ್ಕೆ ಪಡೆದಿದ್ದಾರೆ. ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ, ಹನಿಟ್ರ್ಯಾಪ್‌ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಜೈಲಿನಿಂದ ಬಿಡುಗಡೆಯಾದ ಬಳಿಕ ಕಗ್ಗಲೀಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಇನ್ನು ಅತ್ಯಾಚಾರ ಪ್ರಕರಣ ಸಂಬಂಧ ನಿನ್ನೆ ಗುರುವಾರ ಪೊಲೀಸರು ಸಂತ್ರಸ್ತೆಯನ್ನು ಕರೆದೊಯ್ದು ಕೃತ್ಯ ನಡೆದ ಸ್ಥಳದಲ್ಲಿ ಮಹಜರು ನಡೆಸಿದ್ದಾರೆ. ಮುತ್ಯಾಲನಗರದ ಗೋಡೌನ್, ನೆಲಮಂಗಲ ಬಳಿ ಮಹಜರು ಮಾಡಿ ನ್ಯಾಯಾಧೀಶರ ಮುಂದೆ ಸಿಆರ್ ಪಿಸಿ 164 ಅಡಿಯಲ್ಲಿ ಸಂತ್ರಸ್ತೆಯ ಹೇಳಿಕೆ ದಾಖಲಿಸಿದ್ದಾರೆ.

ಏನಿದು ಪ್ರಕರಣ?

ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ ಸಂಬಂಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಕೋವಿಡ್ ಸಮಯದಲ್ಲಿ ನನ್ನ ಸಾಮಾಜಿಕ ಸೇವೆಯನ್ನು ಗುರುತಿಸಿ ಮುನಿರತ್ನ ಕರೆ ಮಾಡಿದ್ದರು. ಅದರಂತೆ ಭೇಟಿಯಾದ ಸಂತ್ರಸ್ತೆ ಹಾಗೂ ಮುನಿರತ್ನ ನಡುವೆ ಆತ್ಮೀಯತೆ ಬೆಳೆದಿತ್ತು. ಆಗಾಗ ವಿಡಿಯೊ ಕಾಲ್‌ ಮೂಲಕ ಮಾತನಾಡುತ್ತಿದ್ದರು. ಹೀಗೊಂದು ದಿನ ನಗ್ನವಾಗಿ ವಿಡಿಯೊ ಕರೆ ಮಾಡುವಂತೆ ಒತ್ತಾಯಿಸಿದಾಗ ಸಂತ್ರಸ್ತೆ ನಿರಾಕರಿಸಿದ್ದರಂತೆ. ಇದಾದ ಬಳಿಕ ಸಂತ್ರಸ್ತೆಯನ್ನು ಗೋಡೌನ್‌ಗೆ ಕರೆಸಿಕೊಂಡು ನಿನ್ನ ನೋಡಿದರೆ ಮೈ ಜುಮ್‌ ಎನಿಸುತ್ತೆ ಎಂದೇಳಿ ತಬ್ಬಿಕೊಳ್ಳಲು ಮುಂದಾಗಿದ್ದರಂತೆ.

ಇದಕ್ಕೆ ಸಂತ್ರಸ್ತೆ ಆಕ್ಷೇಪಿಸಿದಾಗ ರಾಜಕೀಯಕ್ಕೆ ಬರಬೇಕಾದರೆ ಇದೆಲ್ಲಾ ಕಾಮನ್ ಎಂದಿದ್ದಾರೆ. ನಾನು ಕಿರುಚಿಕೊಳ್ಳುತ್ತೇನೆ ಎಂದಾಗ ನಾನು ಶಾಸಕ, ಅಪಾರ ಜನಬೆಂಬಲವಿದೆ ಸುಮ್ಮನಿದ್ದರೆ ಸರಿ , ಇಲ್ಲವಾದರೆ ನಿನ್ನ ವಿರುದ್ಧವೇ ಕಂಪ್ಲೆಂಟ್ ನೀಡುತ್ತೇನೆ ಎಂದು ಹೆದರಿಸಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದರಂತೆ. ಅತ್ಯಾಚಾರದ ಬಳಿಕ ಈ ರೂಂನಲ್ಲಿ ಸೀಕ್ರೆಟ್ ವೀಡಿಯೊ ರೆಕಾರ್ಡರ್ ಇಟ್ಟಿದ್ದು, ಎಲ್ಲಾ ದೃಶ್ಯಗಳು ಸೆರೆಯಾಗಿದೆ. ನಿನ್ನ ವಿಡಿಯೊ ಎಡಿಟ್ ಮಾಡಿ ಹಂಚುತ್ತೇನೆ. ಹೇಳಿದಂತೆ ಕೇಳಬೇಕು ಅಂತಾ ಹನಿಟ್ರ್ಯಾಪ್ ಮಾಡುವಂತೆ ಹೇಳಿ ನನ್ನನ್ನು ಬಳಸಿಕೊಂಡರು ಎಂದು ಸಂತ್ರಸ್ತೆ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.

ಜತೆಗೆ ಚಿತ್ರೀಕರಿಸಿದ ವಿಡಿಯೊಗಳನ್ನು ಟಿವಿಯಲ್ಲಿ ಹಾಕಿ ತೋರಿಸುತ್ತಾ, 2020 ರಿಂದ 2022ರ ಅವಧಿಯಲ್ಲಿ ನಿರಂತರ ಅತ್ಯಾಚಾರ ನಡೆಸಿದ್ದಾರೆ. ಇದೇ ವೇಳೆ ಹನಿಟ್ರ್ಯಾಪ್‌ಗು ಬಳಕೆ ಮಾಡಿಕೊಂಡಿದ್ದಾರೆ. ಹೇಳಿದಂತೆ ಕೇಳಲಿಲ್ಲ ಅಂದರೆ ಗಂಡ ಮತ್ತು ಮಕ್ಕಳಿಗೆ ವಿಡಿಯೊ ತೋರಿಸೋದಾಗಿ ಬೆದರಿಕೆ ಹಾಕಿದ್ದಾರೆ. ತನಗೆ ಪರಿಚಯ ಇರುವ ಮತ್ತೊಬ್ಬ ಮಹಿಳೆ ಜತೆ ಸೇರಿ ಆತ ಹೇಳಿದವರನ್ನು ಹನಿಟ್ರ್ಯಾಪ್ ಮಾಡಿಸಿದ್ದಾರೆ. ಮರ್ಯಾದೆ ಹಾಗು ಪ್ರಾಣಕ್ಕೆ ಅಂಜಿ ಶಾಸಕ ಮುನಿರತ್ನ ಹೇಳಿದಂತೆ ಕೇಳಿದ್ದೇನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಯಾವ್ಯಾವ ಸೆಕ್ಷನ್‌ನಡಿ ಕೇಸ್?

354A – ಲೈಂಗಿಕ ದೌರ್ಜನ್ಯ
354C – ಮಹಿಳೆಯರ ಇಚ್ಛೆಗೆ ವಿರುದ್ಧವಾಗಿ ಚಿತ್ರೀಕರಣ
376N(2) – ಸರ್ಕಾರಿ ಸೇವಕನಿಂದ ಅತ್ಯಾಚಾರ
506 – ಜೀವ ಬೆದರಿಕೆ
504 – ಉದ್ದೇಶಪೂರ್ವಕವಾಗಿ ನಿಂದನೆ
120(B) – ಅಪರಾಧಿಕ ಒಳಸಂಚು
149 -ಕಾನೂನು ಬಾಹಿರ ಸಭೆ
406 – ನಂಬಿಕೆ ದ್ರೋಹ
384 – ಸುಲಿಗೆ
308 – ಹತ್ಯೆ ಮಾಡಲು ಪ್ರಯತ್ನ, ಐಟಿ ಆಕ್ಟ್ 66,66e

ಮಹಿಳೆಯೊಬ್ಬರನ್ನು ಮುಂದಿಟ್ಟುಕೊಂಡು ಮುನಿರತ್ನ ಹನಿಟ್ರ್ಯಾಪ್‌ ಮಾಡಿಸುತ್ತಿದ್ದನಂತೆ. ತನಗೆ ಆಗದವರನ್ನು ಮಟ್ಟ ಹಾಕಲು ಹನಿಟ್ರ್ಯಾಪ್‌ ಮಾಡಿ ಅವರಿಗೆ ಏಡ್ಸ್‌ ಸೋಂಕಿತರ ರಕ್ತ ಇಂಜೆಕ್ಟ್‌ ಮಾಡಿಸುತ್ತಿದ್ದ ಎನ್ನಲಾಗಿದೆ. ಮುನಿರತ್ನನ ಈ ಭಯಾನಕ ಕೃತ್ಯಕ್ಕೆ ಹಲವರು ಬಲಿಯಾಗಿದ್ದಾರೆ. ತನ್ನ ಎದುರಾಳಿ ಸ್ಥಳೀಯ ಕಾರ್ಪೋರೇಟರ್‌ಗಳನ್ನು ಸೈಲೆಂಟ್ ಮಾಡಿಸಿದ್ದು ಹೀಗೆ, ಅದರಲ್ಲಿ ಮಾಗಡಿ ಎಂಎಲ್‌ಎ ಸಹ ಒಬ್ಬರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹನಿಟ್ರ್ಯಾಪ್, ಏಡ್ಸ್ ಹರಡಿಸುವ ಕೃತ್ಯ, ಡ್ರಗ್ಸ್ ದಂಧೆ ಬಗ್ಗೆಯೂ ಎಫ್ಐಆರ್‌ನಲ್ಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

MLA Muniratna: ಬಿಜೆಪಿ ಪಕ್ಷದ ಒಬ್ಬೊಬ್ಬ ನಾಯಕನೂ ಮುನಿರತ್ನನಂತಹ ಮುತ್ತು ರತ್ನಗಳೇ! ಕಾಂಗ್ರೆಸ್‌ ಟೀಕೆ

MLA Muniratna: ಬಿಜೆಪಿ ಪಕ್ಷದ ಒಬ್ಬೊಬ್ಬ ನಾಯಕನೂ ಮುನಿರತ್ನನಂತಹ ಮುತ್ತು ರತ್ನಗಳೇ! ಈ ಎಲ್ಲಾ ವಿಕೃತ ವಿದ್ಯೆಗಳು ಆರ್‌ಎಸ್ಎಸ್ ಶಾಖೆಯಲ್ಲಿ ಟ್ರೈನಿಂಗ್ ಕೊಡಲಾಗುತ್ತಿದೆಯೇ? ಎಂದು ಪ್ರಶ್ನಿಸಿ ಕಾಂಗ್ರೆಸ್‌ ಪಕ್ಷ ಟೀಕಿಸಿ ಪ್ರಶ್ನಿಸಿದೆ.

VISTARANEWS.COM


on

By

Congress expresses displeasure over BJP MLA Munirathnas rape case
Koo

ಬೆಂಗಳೂರು: ಜಾತಿ ನಿಂದನೆ ಹಾಗೂ ಕೊಲೆ ಬೆದರಿಕೆ ಆರೋಪದಡಿ ಜೈಲುಪಾಲಾಗಿರುವ ಶಾಸಕ ಮುನಿರತ್ನ (MLA Muniratna) ವಿರುದ್ಧ ಅತ್ಯಾಚಾರ ಹಾಗೂ ಹನಿಟ್ರ್ಯಾಪ್‌ ಪ್ರಕರಣಗಳು ದಾಖಲಾಗಿವೆ. ಇದರ ಬೆನ್ನೆಲ್ಲೇ ಟ್ವೀಟ್‌ (ಎಕ್ಸ್) ಮೂಲಕ ಬಿಜೆಪಿ ಹಾಗೂ ಶಾಸಕ ಮುನಿರತ್ನ ವಿರುದ್ಧ ಕಾಂಗ್ರೆಸ್ ಪಕ್ಷ ಕಿಡಿಕಾರಿದೆ.

ಮುನಿರತ್ನರ ಹಗರಣಗಳು ಕುಕೃತ್ಯಗಳ ಬಂಡಾರ ಬಗೆದಷ್ಟೂ ಹೊರಬರುತ್ತಿವೆ. ಮಹಿಳೆಯರನ್ನು ಮಂಚಕ್ಕೆ ಕಳಿಸಿ ಎಂದಿದ್ದಲ್ಲದೆ, ಹಲವು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾರೆ. ಮಹಿಳೆಯರನ್ನು ಬ್ಲ್ಯಾಕ್‌ಮೇಲ್‌ ಮಾಡಿ ಹನಿಟ್ರಾಪ್‌ಗೆ ಬಳಸಿಕೊಂಡಿದ್ದು, ವಿರೋಧಿಗಳಿಗೆ ಏಡ್ಸ್ ಹಬ್ಬಿಸಲು ಯತ್ನಿಸಿದ್ದು. ಎಂತೆಂತಹ ವಿಕಾರ, ವಿಕೃತ ಕೃತ್ಯಗಳನ್ನು ಎಸಗಿದ್ದಾರೆ ಎಂದು ಜನಸಾಮಾನ್ಯರು ಊಹಿಸಲೂ ಸಾಧ್ಯವಿಲ್ಲ. ಈ ಎಲ್ಲಾ ವಿಕೃತ ವಿದ್ಯೆಗಳು ಆರ್‌ಎಸ್ಎಸ್ ಶಾಖೆಯಲ್ಲಿ ಟ್ರೈನಿಂಗ್ ಕೊಡಲಾಗುತ್ತಿದೆಯೇ? ಎಂದು ಪ್ರಶ್ನಿಸಿ ಟ್ವೀಟ್‌ ಮಾಡಲಾಗಿದೆ.

ಬೆದರಿಕೆ, ಕಮಿಷನ್ ವಸೂಲಿ, ಭ್ರಷ್ಟಾಚಾರ, ದಲಿತರ ಜಾತಿ ನಿಂದನೆ ಹಾಗೂ ಮಹಿಳೆಯರ ಘನತೆಗೆ ಧಕ್ಕೆ ಬಿಜೆಪಿ ಶಾಸಕ ಮುನಿರತ್ನರ ಕುಕೃತ್ಯಗಳು ಒಂದೆರಡಲ್ಲ, ಈಗ ಹೊಸದಾಗಿ ಅತ್ಯಾಚಾರ, ಹನಿಟ್ರ್ಯಾಪ್ ನಂತಹ ಪ್ರಕರಣಗಳೂ ಹೊರಬಂದಿವೆ. ಬಿಜೆಪಿ ಪಕ್ಷದ ಒಬ್ಬೊಬ್ಬ ನಾಯಕನೂ ಮುನಿರತ್ನನಂತಹ ಮುತ್ತು ರತ್ನಗಳೇ! ಎಂದು ವ್ಯಂಗ್ಯ ಮಾಡಿದ್ದಾರೆ. ಇಷ್ಟೆಲ್ಲಾ ಮಾಡಬಾರದ ಕೆಲಸ ಮಾಡಿದ್ದರೂ ಬಿಜೆಪಿ ನಾಯಕರು ಕೊಳಕ ಮುನಿರತ್ನನನ್ನು ಸಮರ್ಥಿಸುವುದು ನಾಚಿಕೆಗೇಡಿನ ಪರಮಾವಧಿ ಎಂದು ಟೀಕಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ರಾಜಕೀಯ

MLA Muniratna: ಎದುರಾಳಿಗಳ ಮಟ್ಟ ಹಾಕಲು ಶಾಸಕ ಮುನಿರತ್ನರಿಂದ ಏಡ್ಸ್‌ ಟ್ರ್ಯಾಪ್‌! ಎಫ್‌ಐಆರ್‌ನಲ್ಲಿದೆ ಬೆಚ್ಚಿಬೀಳಿಸುವ ಅಂಶ

MLA Muniratna: ತನ್ನ ಎದುರಾಳಿಗಳ ಮಟ್ಟ ಹಾಕಲು ಶಾಸಕ ಮುನಿರತ್ನ ನೇರವಾಗಿ ಫೈಟ್ ಮಾಡದೆ ಹನಿಟ್ರ್ಯಾಪ್ ಬಲೆಗೆ ಬೀಳಿಸುತ್ತಿದ್ದ. ಸಂತ್ರಸ್ತೆ ನೀಡಿದ ಎಫ್‌ಐಆರ್‌ನಲ್ಲಿ ಬೆಚ್ಚಿಬೀಳಿಸುವ ಅಂಶವಿದೆ.

VISTARANEWS.COM


on

Honeytrap by MLA Munirathna
Koo

ಬೆಂಗಳೂರು: ಜಾತಿ ನಿಂದನೆ ಆರೋಪದಡಿ ಜೈಲು ಪಾಲಾಗಿರುವ ಶಾಸಕ ಮುನಿರತ್ನ (MLA Muniratna) ವಿರುದ್ಧ ಅತ್ಯಾಚಾರ ಪ್ರಕರಣವು ದಾಖಲಾಗಿದೆ. ಸಂತ್ರಸ್ತೆ ನೀಡಿರುವ ದೂರಿನಲ್ಲಿ ಭಯಾನಕ ಅಂಶ ಬೆಚ್ಚಿಬೀಳಿಸುವಂತಿದೆ.‌ ಸಂತ್ರಸ್ತೆಯನ್ನು ಮುಂದಿಟ್ಟುಕೊಂಡು ಮುನಿರತ್ನ ಹನಿಟ್ರ್ಯಾಪ್‌ ಮಾಡಿಸುತ್ತಿದ್ದನಂತೆ. ತನಗೆ ಆಗದವರನ್ನು ಮಟ್ಟ ಹಾಕಲು ಹನಿಟ್ರ್ಯಾಪ್‌ ಮಾಡಿ ಅವರಿಗೆ ಏಡ್ಸ್‌ ಸೋಂಕಿತರ ರಕ್ತ ಇಂಜೆಕ್ಟ್‌ ಮಾಡಿಸುತ್ತಿದ್ದ ಎನ್ನಲಾಗಿದೆ. ಮುನಿರತ್ನನ ಈ ಭಯಾನಕ ಕೃತ್ಯಕ್ಕೆ ಹಲವರು ಬಲಿಯಾಗಿದ್ದಾರೆ. ತನ್ನ ಎದುರಾಳಿ ಸ್ಥಳೀಯ ಕಾರ್ಪೋರೇಟರ್‌ಗಳನ್ನು ಸೈಲೆಂಟ್ ಮಾಡಿಸಿದ್ದು ಹೀಗೆ, ಅದರಲ್ಲಿ ಮಾಗಡಿ ಎಂಎಲ್‌ಎ ಸಹ ಒಬ್ಬರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹನಿಟ್ರ್ಯಾಪ್, ಏಡ್ಸ್ ಹರಡಿಸುವ ಕೃತ್ಯ, ಡ್ರಗ್ಸ್ ದಂಧೆ ಬಗ್ಗೆಯೂ ಎಫ್ಐಆರ್‌ನಲ್ಲಿದೆ.

ಇಷ್ಟಕ್ಕೂ ಎಫ್‌ಐಆರ್‌ನಲ್ಲಿ ಏನಿದೆ?

ನಾನು (ಸಂತ್ರಸ್ತೆ) ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುತ್ತೇನೆ. ಕೋವಿಡ್‌ ಸಂದರ್ಭದಲ್ಲಿ ನಮ್ಮ ಏರಿಯಾದ ಕಾರ್ಪೋರೇಟರ್ ನನಗೆ ಪರಿಚಯವಿದ್ದು, ಕೋವಿಡ್‌ನಿಂದ ಬಳಲುತ್ತಿರುವ ಜನರಿಗಾಗಿ ಮಾಸ್ ವಿತರಣೆ ಮಾಡಲು 5,000 ಕ್ಕೂ ಹೆಚ್ಚು ಮಾಸ್ಕ್‌ಗಳನ್ನುಕಾರ್ಪೋರೇಟರ್‌ರಿಗೆ ನೀಡಿದ್ದೆ. ಇದನ್ನು ತಿಳಿದ ಶಾಸಕ ಮುನಿರತ್ನಂ ನಾಯ್ದು ನನಗೆ ವಾಟ್ಸ್ ಆಪ್‌ ಮುಖಾಂತರ ಕರೆ ಮಾಡಿ ನಮಸ್ತೆ ಲೀಡರ್ ನಾನು ಈ ಭಾಗದ ಶಾಸಕ ನಮ್ಮ ಕ್ಷೇತ್ರದಲ್ಲಿ, ನೀವು ಮಾಸ್ಕ್ ವಿತರಣೆ ಮಾಡುತ್ತೀರಿ, ನಿಮ್ಮ ಬಗ್ಗೆ ಕೇಳಿದ್ದೀನಿ ನನ್ನನ್ನು ಭೇಟಿ ಮಾಡಿ ಎಂದು ತಿಳಿಸಿರುತ್ತಾರೆ.

ಅದರಂತೆ ನಾನು ಮರುದಿನ ಸಂಜೆಯವರೆಗೆ ವಾಟ್ಸ್ ಆಫ್ ಮುಖಾಂತರ ಕಾಲ್ ಮಾಡಿ ಸಿಗುವುದಾಗಿ ತಿಳಿಸಿದಾಗ, ನಾನು ಕ್ಷೇತ್ರದ ಕೆಲಸದಲ್ಲಿ ತೊಡಗಿಕೊಂಡಿರುತ್ತೇನೆ. ಇದನ್ನು ಮುಗಿಸಿ 20 ನಿಮಿಷಗಳ ನಂತರ ರಾಮಯ್ಯ ಸಮಾಧಿ ಹತ್ತಿರವಿರುವ ಅವರ ಆಫೀಸ್ ಹತ್ತಿರ ಬರಲು ತಿಳಿಸಿದರು. ಅದರಂತೆ ನಾನು ಅವರ ಹೇಳಿದ ಸಮಯಕ್ಕೆ ಅವರನ್ನು ಭೇಟಿ ಮಾಡಿ ಪರಿಚಯ ಮಾಡಿಕೊಂಡೆನು. ಆ ಸಮಯದಲ್ಲಿ, ನನಗೆ ಪರಿಚಯವಿರುವ ಕಾರ್ಪೋರೇಟರ್ ಅವರ ಗಂಡ 3-4 ಬಾರಿ ಕರೆ ಮಾಡಿರುತ್ತಾರೆ. ನಾನು ಅದನ್ನು ಸೈಲೆಂಟ್ ಮಾಡಲು ಹೋದಾಗ ಇದು ಯಾರು ಎಂದು ಮುನಿರತ್ನಂ ಪ್ರಶ್ನಿಸುತ್ತಾರೆ. ಅದಕ್ಕೆ ನಾನು ಸ್ಥಳೀಯ ಕಾರ್ಪೋರೇಟರ್ ಗಂಡ ಎಂದು ಹೇಳಿದೆ.

ಅದಕ್ಕೆ ಮುನಿರತ್ನ ಮೇಡಮ್ ನಾನು ನಿಮಗೆ ಒಂದು ಸಹಾಯ ಕೇಳುತ್ತೇನೆ, ನೀವು ಸಹಾಯ ಮಾಡುತ್ತೀರೆಂದು ನಂಬಿರುತ್ತೇನೆ, ಈಗ ಬೇಡ ಮುಂದೊಂದು ದಿನ ಕೇಳುವುದಾಗಿ ತಿಳಿಸಿರುತ್ತಾರೆ. ಹಾಗೂ ನನ್ನನ್ನು ತುಂಬಾ ಹತ್ತಿರದಿಂದ ಸ್ನೇಹ ಬಳಸಿ ಗುಡ್ ಮಾರ್ನೀಂಗ್, ಗುಡ್ ನೈಟ್ ಹಾಗೂ ಪ್ರೇಮಗೀತೆ ಕಳುಹಿಸುತ್ತಿದ್ದ, ಹಾಗೂ ವಿಡಿಯೋ ಕಾಲ್ ಮುಖಾಂತರ ನನಗೆ ಕರೆ ಮಾಡಿ ವಿಚಾರಿಸುತ್ತ ನನ್ನ ಬಳಿ ಎಲ್ಲಾ ವಿಚಾರಗಳನ್ನು ಹೇಳಿಕೊಳ್ಳುತ್ತಿದ್ದ.

ಒಂದು ದಿನ 10ಕ್ಕೂ ಹೆಚ್ಚು ಬಾರಿ ವಿಡಿಯೋ ಕಾಲ್ ಮಾಡುತ್ತಿದ್ದ. ಆಗ ನಾನು ಆ ದಿನ ಸ್ನಾನಕ್ಕೆ ಹೋಗುವ ಸಂದರ್ಭದಲ್ಲಿ ವಿಡಿಯೋ ಕಾಲ್ ಮಾಡಿದ್ದ. ಸ್ನಾನದ ನಂತರ ನನ್ನ ಮೊಬೈಲ್ ಗಮನಿಸಿದಾಗ ಮುನಿರತ್ನ ಕಾಲ್ ಮಾಡಿರುವ ಬಗ್ಗೆ ತಿಳಿದು ಮತ್ತೆ ನಾನು ವಾಟ್ಸ್ ಆಫ್ ಕಾಲ್ ಮಾಡಿದಾಗ ಮುನಿರತ್ನ ಏಕೆ ಕಾಲ್ ರಿಸೀವ್ ಮಾಡಿಲ್ಲ ಎಂದಾಗ ಸರ್ ನಾನು ಸ್ನಾನಕ್ಕೆ ಹೋಗಿದ್ದೆ. ಈಗ ನನ್ನ ಮೊಬೈಲ್ ಗಮನಿಸಿದಾಗ ನೀವು ಕಾಲ್ ಮಾಡಿರುವ ಬಗ್ಗೆ, ತಿಳಿಯಿತು. ಅದಕ್ಕೆ ಈಗ ಕಾಲ್ ಮಾಡಿದೆ ಎಂದೆ. ಆಗ ಮುನಿರತ್ನ, ಈಗ ನೀನು ಎಲ್ಲಿರುವೆ ಎಂದು ಕೇಳಿದಾಗ, ನಾನು ರೂಮ್‌ನಲ್ಲಿ ಇದ್ದೀನಿ ಎಂದು ತಿಳಿಸಿರುತ್ತೇನೆ. ಆಗ ಮುನಿರತ್ನ ನೀನು ನನಗೆ ವಿಡಿಯೋ ಕಾಲ್ ಮಾಡಿ ನನಗೆ ನಗ್ನವಾಗಿ ದೇಹವನ್ನು ತೋರಿಸು ಎಂದು ಹೇಳುತ್ತಾರೆ. ಇದಕ್ಕೆ ನಾನು ಒಪ್ಪುವುದಿಲ್ಲ.

ನಂತರ ಮುನಿರತ್ನ ರವರು ನನ್ನನ್ನು ಗೋಡನ್ ಹತ್ತಿರ ಬಾ ಎಂದು ಕರೆಯುತ್ತಾನೆ. 3-4 ದಿನಗಳ ನಂತರ ಅದರಂತೆ ನಾನು ಆ ಗೋಡನ್‌ಗೆ ಭೇಟಿ ಮಾಡಲು ಹೋದ ಸಂದರ್ಭದಲ್ಲಿ ಗನ್ ಮ್ಯಾನ್ ವಿಜಯಕುಮಾರ ಮತ್ತು ಮುನಿರತ್ನ ನನಗಾಗಿ ಕಾಯುತ್ತಿರುತ್ತಾರೆ. ನಾನು ದ್ವಿಚಿಕ್ರ ವಾಹನದಲ್ಲಿ ಅವರಿರುವ ಸ್ಥಳಕ್ಕೆ ಭೇಟಿ ನೀಡಿದಾಗ ಮುನಿರತ್ನ ಸ್ವತಃ ತನ್ನ 2ನೇ ಫ್ಲೋರ್‌ಗೆ ಕರೆದುಕೊಂಡು ಹೋಗುತ್ತಾರೆ. ನಿಮ್ಮನ್ನು ನೋಡಿದರೆ ನನ್ನ ಮೈ ಜುಂ ಎನಿಸುತ್ತದೆ ಎಂದು ಕಾಮುಕನಾಗಿ ವರ್ತಿಸುತ್ತಾರೆ. ನಿಮ್ಮನ್ನು ಒಂದು ಬಾರಿ ತಬ್ಬಿಕೊಳ್ಳಲು ಎಂದು ಕೇಳುತ್ತಾರೆ. ಅದಕ್ಕೆ ನಾನು ವಿರೋಧ ಮಾಡಿದಾಗ, ರಾಜಕೀಯಕ್ಕೆ ಬರಬೇಕಾದರೆ ಇವೆಲ್ಲ ಕಾಮನ್ ಎಂದು ನಿಧಾನಕ್ಕೆ ಹೇಳುತ್ತಾ ತನ್ನ ಗನ್ ಮ್ಯಾನ್ ವಿಜಯಕುಮಾರನನ್ನು ಹೊರಗೆ ಹೋಗಲು ಸನ್ನೆಯ ಮುಖಾಂತರ ತಿಳಿಸುತ್ತಾನೆ. ಮತ್ತು ಅವನಿಗೆ ಯಾರನ್ನು ಮೇಲಕ್ಕೆ ಬಿಡಬೇಡ ಎಂದು ಹೇಳುತ್ತಾನೆ. ನಂತರ ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡು ನೀನಿಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ತಿಳಿಸುತ್ತಾನೆ. ಇವನ ವರ್ತನೆಯಿಂದ ಗಾಬರಿಗೊಂಡ ನಾನು ಕಿರುಚುತ್ತೇನೆಂದು ಹೇಳುತ್ತೇನೆ, ಅದಕ್ಕೆ ಮುನಿರತ್ನ ನಾನು ಶಾಸಕ ನನಗೆ ಅಪರ ಜನ ಸಮೂಹ ಬೆಂಬಲವಿದೆ. ನಿನ್ನ ವಿರುದ್ಧವೆ ಕಂಪ್ಲೇಂಟ್ ಮಾಡಿಸುತ್ತೇನೆ, ಸುಮ್ಮನಿದ್ದರೆ ಸರಿ ಎಂದು ನನ್ನ ಮೇಲೆ ಅತ್ಯಾಚಾರ ಮಾಡುತ್ತಾನೆ.

ನಂತರ ಅಳುತ್ತಿದ್ದಾಗ ಇಲ್ಲಿ ನಡೆದ ಬಗ್ಗೆ ಯಾರಿಗಾದರೂ ತಿಳಿಸಿದರೆ ಈ ಗೋಡೌನ್‌ನಲ್ಲಿ ಹಲವಾರು ಕ್ಯಾಮೆರಾಗಳನ್ನು ಫೀಟ್ ಮಾಡಿರುತ್ತೇನೆ. ಇದನ್ನೆಲ, ಕೆಲವೊಂದು ವಿಡಿಯೊ ಎಡಿಟ್‌ ಮಾಡಿ ನಿನ್ನದು ಮಾತ್ರ ನಗ್ನ ಚಿತ್ರವನ್ನು ಬಿಡುಗಡೆ ಮಾಡುತ್ತೇನೆಂದು ಬೆದರಿಸುತ್ತಾನೆ. ಇದನ್ನೇ ಬಳಸಿಕೊಂಡು ನನ್ನನ್ನು ಹಲವಾರು ಬಾರಿ ಅತ್ಯಾಚಾರ ಮಾಡುತ್ತಾನೆ. ಅದರ ವಿಡಿಯೋ ಚಿತ್ರವನ್ನು ನನಗೆ ಟಿವಿಯಲ್ಲಿ ಹಾಕಿ ತೋರಿಸುತ್ತಾನೆ. ಇದನ್ನು ನೋಡಿ ನನಗೆ ಗಾಬರಿಯಾಯಿತು. ದಯಮಾಡಿ ಇದನ್ನು ಡಿಲೀಟ್ ಮಾಡಿ ಎಂದು ಕಾಲು ಹಿಡಿದು ಪರಿಪರಿಯಾಗಿ ಕೇಳಿಕೊಳ್ಳುತ್ತೇನೆ. ನಂತರ ಮುನಿರತ್ನ ರವರು ಇದನ್ನೇ ಬಂಡವಾಳ ಮಾಡಿಕೊಂಡು ನನಗೆ ಪ್ರಾಣ ಬೆದರಿಕೆ ಒಡ್ಡಿ ಬೆದರಿಸಿದ್ದಾರೆ.

ನಾನು ಹೇಳಿದ ಎಲ್ಲಾ ಕೆಲಸಗಳನ್ನು ಮಾಡಲೇಬೇಕೆಂದು ಬಲವಂತ ಮಾಡುತ್ತಾನೆ. ನಂತರ ನಿಮ್ಮ ಏರಿಯಾ ಕಾರ್ಪೋರೇಟರ್‌ ಪತಿ ನಿನ್ನ ಬಳಿ ಯಾವ ರೀತಿ ಇದ್ದಾನೆ ಎಂದು ಕೇಳುತ್ತಾನೆ. ಅದಕ್ಕೆ ನಾನು ಅವನು ಸಹ ನಿಮ್ಮಂತೆಯೇ ನನ್ನನ್ನು ಬಳಸಿಕೊಳ್ಳಲು ಬಲವಂತ ಮಾಡುತ್ತಾನೆ. ಅದಕ್ಕೆ ನಾನು ಒಪ್ಪದೆ ಅಂತರ ಕಾಯ್ದು ಕೊಳ್ಳುತ್ತೇನೆ ಎಂದಾಗ ಬೇಡ ಅವನು ಹೇಳಿದಂತೆ ಕೇಳು, ನೀನು ಕೇಳಿ ವಿಡಿಯೋ ಮಾಡಿಕೊಂಡು ನನಗೆ ಕೊಡಬೇಕೆಂದು ಕೇಳುತ್ತಾನೆ. ಇವರ ಬೆದರಿಕೆಗೆ ಒಡ್ಡಿ ಬೇರೆ ಯಾವ ದಾರಿಯಿಲ್ಲದೆ ನಾನು ಮಾಡಿಸಿಕೊಳ್ಳಲು ಒಪ್ಪುತ್ತೇನೆ. ಅದಕ್ಕೆ ಮುನಿರತ್ನ ರವರು ಈ ಕೆಲಸವನ್ನು ನಿನ್ನ ಕೈಯಲಿ ಆಗದಿದ್ದರೆ, ನನಗೆ ಪರಿಚಯವಿರುವ ರಾಧ ಎಂಬ ಮಹಿಳೆಯನ್ನು ಕಳುಹಿಸಿಕೊಡುತ್ತೇನೆ. ಈ ಬಗ್ಗೆ ಅವಳಿಗೆ ಎಲ್ಲವೂ ತಿಳಿದಿರುತ್ತದೆ. ಹಾಗೂ ಕ್ಯಾಮೆರಾ ಬಗ್ಗೆಯೂ ಎಲ್ಲ ಗೊತ್ತು ಅವರೊಂದಿಗೆ ನೀನು ಸಹಕರಿಸು ಸಾಕು ಎಂದು ಹೇಳುತ್ತಾನೆ.

ಅವನು ಹೇಳಿದ ನಂತರ ರಾಧ ಮತ್ತು ನಾನು ರಾಮಯ್ಯ ಸಮಾಧಿ ಬಳಿ ಇರುವ ಅಪಾರ್ಟ್‌ಮೆಂಟ್‌ನಲ್ಲಿ ಮುನಿರತ್ನ ಸಂಬಂಧಿ ಸುಧಾಕರ್ ಕ್ಯಾಮೆರಾ ಫಿಟ್ ಮಾಡಲು ನಮ್ಮಿಬ್ಬರ ಜತೆ ಕಳುಹಿಸಿಕೊಡುತ್ತಾನೆ. ನಂತರ ಕಾರ್ಪೋರೇಟರ್‌ ಪತಿಗೆ ಮುನಿರತ್ನ ಕಳುಹಿಸಿಕೊಟ್ಟ ರಾಧ ಎಂಬ ಮಹಿಳೆಯನ್ನು ಪರಿಚಯಿಸಿ ಅವರಿಬ್ಬರು ನಡೆಸಿದ ಅಶ್ಲೀಲ ಚಿತ್ರವನ್ನು ಸುಧಾಕರ್ ಫಿಕ್ಸ್ ಮಾಡಿಸಿದ ಕ್ಯಾಮೆರಾವನ್ನು ತೆಗೆದುಕೊಂಡು ಮತ್ತು ನನ್ನ ಮೊಬೈಲ್ ಕೂಡ ತೆಗೆದುಕೊಂಡು, ಲ್ಯಾಪ್ಟಾಪ್ ಗಳಲ್ಲಿ, ಸ್ಟೋರೇಜ್ ಮಾಡಿಕೊಂಡು ಮತ್ತು ಆ ವಿಡಿಯೋ ಡೈರೆಕ್ಟರ್ ಆಗಿ ನೋಡಲು ಮುನಿರತ್ನ ರವರು ACT wifi ಕೂಡ ಹಾಕಿಸಿಕೊಂಡಿರುತ್ತಾರೆ.

ಸುಧಾಕರ್ ಕಡೆಯಿಂದ ಡೈರೆಕ್ಟ್ ಲೈವ್ ನೋಡಲು ಮುಂದೊಂದು ದಿನ ಇದು ಯಾವ ರೀತಿ ತಿರುವು ಪಡೆಯುತ್ತದೆ ಎಂದು ಭಯಬಿದ್ದು ರೂಮ್ ನಲ್ಲಿ ಫೀಟ್ ಮಾಡಿದ್ದ ಕ್ಯಾಮಾರಗಳು ಮತ್ತು ಫೀಟ್ ಮಾಡಿದ್ದ ವ್ಯಕ್ತಿಯ ಚಿತ್ರವನ್ನು ನನ್ನ ಮೊಬೈಲ್ ನಲ್ಲಿ, ಪೋಟೋ ತಗೊಂಡು ಅಲ್ಲಿಂದ ಹೊರಟೆ, ತದನಂತರ 3-4 ದಿನ ಬಿಟ್ಟು ನನಗೆ ಮುನಿರತ್ನ ನನಗೆ ಕಾಲ್ ಮಾಡಿ ಬಹಳ ಖುಷಿಯಾಯಿತು ಲೀಡರ್ ನಿನಗೆ ಏನು ಬೇಕೆಂದು ಕೇಳಿದಾಗ ಸಾಕಪ್ಪ ನಿನ್ನ ಸಹವಾಸ ದಯವಿಟ್ಟು ನನ್ನ ವಿಡಿಯೋವನ್ನು ಡಿಲೀಟ್ ಮಾಡು ಎಂದು ಬೇಡಿದೆ. ಆಯ್ತು ನನ್ನ ಕಛೇರಿಗೆ ಬಾ ಎಂದು ಹೇಳುತ್ತಾನೆ. ನಾನು ನಿರಾಕರಿಸಿದಾಗ ನನ್ನ ಮನೆಯ ಬಳಿ ಇರುವ ಫ್ಲೈ ಓವರ್ ಮೇಲೆ ಬಂದು ಮೇಲಿಂದ ಮೇಲೆ ಕಾಲ್ ಮಾಡುತ್ತಾನೆ. ನೀನು ಬರದೆ ಇದ್ದರೆ, ನಾನು ನಿನ್ನ ಮನೆಗೆ ಬರುತ್ತೇನೆ, ನಿನ್ನ ವಿಡಿಯೋವನ್ನು ನಿನ್ನ ಗಂಡ ಮಕ್ಕಳಿಗೆ ತೋರಿಸುತ್ತೇನೆ ಎಂದು ಬೆದರಿಸಿದಾಗ ಅನಿವಾರ್ಯವಾಗಿ ಹೆದರಿ ನಾನು ಹೋಗಿ ಅವನನ್ನು ಭೇಟಿ ಮಾಡುತ್ತೇನೆ.

ಆಗ ಕಾರ್ಪೋರೇಟರ್‌ ಪತಿಗೆ ನಾನು ಕಳುಹಿದ್ದು ಏಡ್ಸ್ (ಹೆಚ್.ಐ.ವಿ) ಪೇಶೆಂಟ್ ಗೊತ್ತಾ ಎಂದು ಹೇಳಿದಾಗ ನನಗೆ ಶಾಕ್ ಆಗುತ್ತೆ, ಮತ್ತು ನೀನು ಇನ್ನೊಂದು ಕೆಲಸ ಮಾಡಬೇಕು, ಕಾರ್ಪೋರೇಟರ್‌ ಮಗ ಕರಣ್‌ (ಹೆಸರು ಬದಲಾಯಿಸಲಾಗಿದೆ) ಅವನಿಗೂ ಸಹ ಹೆಚ್.ಐ.ವಿ ಪೇಶೆಂಟ್‌ ಅನ್ನು ಕಳುಹಿಸಬೇಕು, ಇಲ್ಲ ಯಾರನ್ನಾದರೂ ಕಳುಹಿಸುತ್ತೇನೆ, ಇಂಜೆಕ್ಟ್ ಮಾಡುವುದಕ್ಕೆ ಹೆಲ್ಪ್‌ ಮಾಡು ಎಂದು ಹೇಳುತ್ತಾನೆ. ಆಗ ನಾನು ಯಾವುದೇ ಕಾರಣಕ್ಕು ಇದು ಸಾದ್ಯವಿಲ್ಲ. ಆ ಮಗು ನನ್ನ ಮಗನ ಜತೆಯವನು, ಯಾವುದೇ ಕಾರಣಕ್ಕು ಸಾಧ್ಯವಿಲ್ಲ, ಎಂದು ಹೇಳಿ ಹೊರಟು ಹೋಗಿ ಫೋನ್ ಸ್ವಿಚ್ ಆಫ್ ಮಾಡಿಕೊಂಡೆ.

ನಂತರ ಇನ್ನೂ 3-4 ಹುಡುಗಿಯರನ್ನು ಬಿಟ್ಟು ಕಾರ್ಪೋರೇಟರ್‌ ಪತಿಯ ವಿಡಿಯೋ ಮಾಡಿಸಿಕೊಂಡು ಈ ಎಲ್ಲ ವಿಡಿಯೋಗಳನ್ನು ತನ್ನ ಸಂಜಯ್ ನಗರ ಆಫೀಸ್‌ನಲ್ಲಿ ಟಿ.ವಿ ಗೆ ಕನೆಕ್ಟ್ ಮಾಡಿ ನನ್ನನ್ನು ಕೂರಿಸಿಕೊಂಡು ತೋರಿಸಿ ವಿಕೃತಿ ಮೆರೆಯುತ್ತಿದ್ದ, ಮತ್ತು ಗಂಗಣ್ಣ ಎಂಬ ವ್ಯಕ್ತಿಯ ವಿಡಿಯೋ ಮಾಡಬೇಕು ಎಂದು ಬಲವಂತದಿಂದ ನನ್ನ ಬಳಿ ಮಾಡಿಸಿ ಎಲೆಕ್ಷನ್ ಟೈಮ್ ನಲ್ಲಿ ಅದನ್ನು ತೋರಿಸಿ ಬೆದರಿಸಿದ. ಹಾಗೂ ಪೊಲೀಸರ ವಿಡಿಯೋಗಳನ್ನು ಕೂಡ ಅವರ ಬಳಿ ಇರಿಸಿಕೊಂಡು ಅವರಿಗೆಲ್ಲ, ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ. ನನಗೂ ಸಹ ತೋರಿಸುತ್ತಾನೆ. ಮತ್ತು ಮಾಗಡಿ ಎಂ.ಎಲ್.ಎ ನನ್ನ ಜೊತೆ ಸಲುಗೆಯಿಂದ ಮಾತನಾಡುವ ಹಾಗೇ ಮಾಡಿ ಅದನ್ನು ಕೂಡ ಇಟ್ಟುಕೊಂಡು ಬೆದರಿಸಿದ್ದ. ನನ್ನ ಮಗ ಕಾಲೇಜಿಗೆ ಹೋಗುವಾಗ ನನ್ನ ಮಗನನ್ನು ಕಿಡ್ಡಾಫ್ ಮಾಡುತ್ತೇನೆಂದು ಅವರ ಗನ್ ಮಾನ್ ಶ್ರೀನಿವಾಸ ರವರಿಂದ ಹೇಳಿಸಿದ.

ಇದೆಲ್ಲದರ ನಂತರ ಒಂದು ವಾರ ನನಗೆ ಕಾಲ್ ಮಾಡಿರುವುದಿಲ್ಲ. ಒಂದು ದಿನ ರಾತ್ರಿ ನನಗೆ ಕಾಲ್ ಮಾಡಿ ಅಜೇಂಟ್ ಆಗಿ ನನಗೆ ಮನೆಯ ಹತ್ತಿರ ಬರಲು ಹೇಳುತ್ತಾರೆ. ನಾನು ನನ್ನ ಯಜಮಾನರನ್ನು ಕರೆದುಕೊಂಡು ರಾತ್ರಿ 9.30 ಕ್ಕೆ ಅವರ ಮನೆಯ ಹತ್ತಿರ ಹೋಗುತ್ತೇನೆ. ಆಗ ಅವರು ಊಟ ಮಾಡುತ್ತಿರುತ್ತಾರೆ, ನಂತರ ನನ್ನನ್ನು ಲಾನ್ ನಲ್ಲಿ ಕರೆದುಕೊಂಡು ಹೋಗಿ ಇದೊಂದು ನನಗೆ ಕೆಲಸ ಮಾಡಿಕೊಡು ಇನ್ನು ಲೈಫ್‌ನಲ್ಲಿ, ನಿನ್ನ ಹತ್ತಿರ ಏನೂ ಕೇಳುವುದಿಲ್ಲ ಎಂದು ಪ್ರಾಮೀಸ್ ಮಾಡಿದ ಆಗ ನಾನು ಏನೂ ಎಂತ ಕೇಳಿದಾಗ ಒಂದು ಹೆಂಗಸು ನನ್ನ ರಿಲೇಟೀವ್ ಮಗು 8 ವರ್ಷ, ಅವಳಿಗೆ ರೇಪ್ ಮಾಡಿಸುತ್ತೇನೆಂದು ಹೇಳುತ್ತಿದ್ದಾಳೆ ಅದಕ್ಕೆ ಅವಳನ್ನು ಕೆಟ್ಟವಳು ಎಂದು ಬಿಂಬಿಸಬೇಕು ಅಷ್ಟೆ ಎಂದರು. ಆಗ ನೀವು ಒಬ್ಬರೇ ಆಗುವುದಿಲ್ಲ… ಇದಕ್ಕೆ ಒಂದು ಟೀಮ್ ಸೆಟ್ ಆಫ್ ಮಾಡಬೇಕು ಎಂದು ಕಿರಣ್ ಕುಮಾರ್ ಎಂಬ ಅವರ ರಿಲೇಟೀವ್ ಹುಡುಗನನ್ನು ಕರೆಸಿಕೊಂಡ. ಆತ ನನಗೂ ಫ್ಯಾಮಿಲಿ ಫ್ರೆಂಡ್ ಆಗಿರುತ್ತಾನೆ. ನೀವೆಲ್ಲ, ಒಂದು ಟೀಮ್ ಮಾಡಿಕೊಂಡು ಈ ಕೆಲಸ ಮಾಡಿಕೊಡಿ ಎಂದು ಕಣ್ಣೀರು ಹಾಕುತ್ತಾನೆ. ಸರಿ ಎಂದಾಗ ಸ್ವಾತಿ ಹೊಟೇಲ್ ರಾಜಾಜಿನಗರ ಅಲ್ಲಿ, ಒಂದು ಬರ್ತಾಡೆ ಪಾರ್ಟಿ ಆರೇಂಜ್ ಮಾಡುತ್ತಾರೆ.

ನಾನು ನನ್ನ ಸ್ನೇಹಿತೆ ಯಶೋಧರವರನ್ನು ಕರೆದುಕೊಂಡು ಹೋಗುತ್ತೇನೆ. ಅಲ್ಲಿಗೆ ಕಿರಣ್ ಕೂಡ ಬಂದಿರುತ್ತಾನೆ. ಗನ್ ಮ್ಯಾನ್ ವಿಜಯ ಕುಮಾರ ನಮ್ಮನ್ನು ರಿಸೀವ್ ಮಾಡುತ್ತಾರೆ, ಲಕ್ಷ್ಮೀ ರವರ ಬರ್ತಾಡೆ ಪಾರ್ಟಿ ಆದಾಗಿರುತ್ತದೆ, ಲಗ್ಗೆರೆ ವಾರ್ಡ್‌(ಗೊರಗುಂಟೆಪಾಳ್ಯ). ಅವಳನ್ನು ವರ್ಕರ್, ಅಲ್ಲಿ ನಮಗೆ ವಿದ್ಯಾ ಹಿರೇಮಠ ಎಂಬುವವರನ್ನು ಎಲ್ಲಾರು ಪರಿಚಯ ಮಾಡಿಕೊಂಡು ಡಿನ್ನರ್ ಮುಗಿಸಿ ಪೋನ್ ನಂಬರ್ ಎಕೆಂಜ್ ಮಾಡಿಕೊಂಡು ಹೊರಡುತ್ತೇವೆ. ಇನ್ನು ಕಾಲ್ ಮೆಸೇಜ್ ಎಲ್ಲವೂ ಸ್ಮಾರ್ಟ್ ಆಗುತ್ತೆ, ಎಲ್ಲರೂ ಒಂದು ಗ್ರೂಪ್ ಮಾಡಿಕೊಂಡು ಮಾತನಾಡುತ್ತಿರುತ್ತೇವೆ. ಎಲ್ಲವನ್ನೂ ರೆಕಾರ್ಡ್ ಮಾಡಿಕೊಂಡು ಮುನಿರತ್ನ ರವರಿಗೆ ಕಳುಹಿಸಿಕೊಟ್ಟಿರುತ್ತೇವೆ. ನಂತರ ಒನ್‌ ಡೇ ಟ್ರಿಪ್ ಅಂತ ಗುಹಾಂತರ ರೆಸಾರ್ಟ್ ಗೆ ಎಲ್ಲರೂ ಹೋಗುತ್ತೇವೆ. ಅಲ್ಲಿ ಕಿರಣ್ ಫ್ರೆಂಡ್ಸ್‌ ಆದ ಲೋಹಿತ್ ಗೌಡ(ಲೋಕಿ) ಮತ್ತು ಮಂಜುನಾಥ್ ಇವರು ಜಾಯಿನ್‌ ಆಗುತ್ತಾರೆ. ಎಲ್ಲರೂ ಕಪಲ್ಸ್ ಅಂತೇಳಿ ಹೋಗುತ್ತೇವೆ.

ರೂಮ್‌ನಲ್ಲಿ ಕ್ಯಾಮೆರಾ ಫಿಕ್ಸ್ ಮಾಡಿಸಿ, ಎಲ್ಲರೂ ಸ್ವಿಮ್ಮಿಂಗ್ ಮಾಡಿ ಡ್ರೆಸ್ ಚೆಂಜ್ ಮಾಡುವ ದೃಶ್ಯಾಗಳನ್ನು ಚಿತ್ರೀಸಿಕೊಳ್ಳುತ್ತಾರೆ. ಲಕ್ಷ್ಮೀ, ಯಶೋಧದು ಕೂಡ, ಇದು ಸಾಕಾಗಲ್ಲ, ಅಂತ ಹೇಳಿ ನೆಕ್ಸ್ ಚಿಕ್ಕಬಳ್ಳಾಪುರದ ರೆಸಾರ್ಟ್ ಗೆ ಹೋಗುತ್ತೇವೆ. ನಾನು ಲೋಕಿ, ಕಿರಣ್, ಯಶೋಧ, ಮಂಜು, ಲಕ್ಷ್ಮಿ, ವಿದ್ಯಾ, ಹಿರೇಮಠ್‌ ಎಲ್ಲರೂ ಅಲ್ಲಿ ಅವಳಿಗೆ ಸ್ಲೀಪಿಂಗ್ ಟಾಬ್ಲೆಟ್ ಹಾಕಿರುವ ಓ.ಆರ್.ಎಸ್ ಅನ್ನು ಕುಡಿಸಿ ಲೋಕಿ, ಕಿರಣ್, ಮಂಜು ಅವಳೊಂದಿಗೆ ಕೆಟ್ಟ ವಿಡಿಯೋಸ್, ಪೋಟೋಸ್ ತೆಗೆದುಕೊಂಡು. ನಂತರ ಇದು ಸಾಕಾಗಲ್ಲ ಅಂತ ಹೇಳಿ 3 ದಿನ ಟ್ರಿಪ್ ಹೋಗಿ ಅಲ್ಲಿ, ಅವಳಿಗೆ ನ್ಯೂಡಲ್ಸ್ ,, ಡ್ರಿಂಕ್ಸ್ ಎಲ್ಲಾ ಕೊಟ್ಟು ಡ್ಯಾನ್ಸ್ ಮಾಡಿಸಿ ವಿಡಿಯೋ ಮಾಡಿಕೊಳ್ಳುತ್ತಾನೆ.

ಆ ನಂತರ 3ನೇ ದಿನ ರಾತ್ರಿ ಮುನಿರತ್ನ ಗನ್ ಮ್ಯಾನ್ ವಿಜಿಯ ಕುಮಾರ ಬಂದು ಬ್ಯಾಗ್ ಅಲ್ಲಿ ಡ್ರಗ್ಸ್ ಎಲ್ಲವನ್ನು ಕಿರಣ್ ಕೈಯಲ್ಲಿ ತಂದುಕೊಟ್ಟು ಅದನ್ನು ವಿದ್ಯಾ ಹಿರೇಮ‌ಠ ರೂಮ್ ಅಲ್ಲಿ ಇಡುವಂತೆ ಹೇಳುತ್ತಾರೆ, ಮತ್ತು ನಮ್ಮನ್ನೆಲ್ಲ ಅವಳೊಂದಿಗೆ ಜಗಳ ಮಾಡಿ ಅವಳನ್ನು ಅಲ್ಲಿಯೇ ಬಿಟ್ಟು ಹೊರಡಲು ಮುನಿರತ್ನ ಹೇಳುತ್ತಾರೆ, ನಾವು ಹೊರಡಲು ನಮಗೆ ಹೊಯ್ಸಳದಲ್ಲಿ ಎಸ್ಮಾರ್ಟ್ ಮಾಡುತ್ತಾರೆ ಪೊಲೀಸ್‌ನವರು, ನಾವು ಹೊರಡುತ್ತೇವೆ ಬೆಂಗಳೂರಿಗೆ ನಂತರ ಲೋಕಿಯಿಂದ ಅನ್ನಪೂರ್ಣೇಶ್ವರಿ ಲೇಔಟ್ ಪೊಲೀಸ್ ಸ್ಟೇಷನ್ ನಲ್ಲಿ ವಿದ್ಯಾ ಮೇಲೆ ಬ್ಲ್ಯಾಕ್ ಮೇಲ್ ಮಾಡಿದ್ದಾರೆಂದು ಕಂಪ್ಲೆಂಟ್ ಕೊಡಿಸಿ ಅವಳನ್ನು ಅರೆಸ್ಟ್ ಮಾಡಿಸಿ ರೇಡ್ ಮಾಡಿ ನಂತರ ಕಂಪ್ಲೇಂಟ್ ವಾಪಸ್ ತಗೋತಾರೆ, ಈ ವಿಷಯವಾಗಿ ರಾಮನಗರ ಕಮಿಷಿನರ್ ಆಫೀಸ್‌ನಲ್ಲಿ, ದೂರು ಸಹ ಸಲ್ಲಿಸಿರುತ್ತೇನೆ.

ಇದನ್ನು ತಿಳಿದ ಮುನಿರತ್ನ ರವರು ನನಗೆ ನೀನು ಇದನ್ನು ಮುಂದುವರಿಸಿದರೆ, ನಿನಗೂ ಮತ್ತು ಕುಟುಂಬದವರ ಜೀವ ಹಾಗೂ ಮಾನ ಮಾರ್ಯದೆ ಕಳೆಯುವುದಾಗಿ ಹಾಗೂ ನನ್ನ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುತ್ತೇನೆಂದು ಬೆದರಿಕೆ ಹಾಕಿದರು. ಅದರಿಂದ ನಾನು ನಿಮ್ಮ ನೊಟೀಸ್ ಗೆ ಹಾಜರು ಆಗಿರುವುದಿಲ್ಲ,. ಈಗ ಮುನಿರತ್ನ ಕಾನೂನಿನ ಬಂಧನದಲ್ಲಿರುವುದರಿಂದ ಮತ್ತೆ ಹೊರಗೆ ಬಂದು ನನಗೆ ಮತ್ತು ನನ್ನ ಕುಟುಂಬಕ್ಕೆ ತೊಂದರೆ ಮಾಡಬಹುದೆಂದು ತಿಳಿದು ನಿಮಗೆ ಈ ಮೂಲಕ ನನ್ನನ್ನು ಅನೇಕ ಬಾರಿ ಗೋಡನ್, ಕಾರ್ ಗಳಲ್ಲಿ, ಅತ್ಯಾಚಾರಗೈದು ಅವನ ದುಷ್ಟಾತ್ಮಗಳಿಗೆ ಜೀವ ಬೆದರಿಕೆ ಹಾಕಿ ನನ್ನನ್ನು ಬಳಸಿಕೊಂಡಿರುತ್ತಾನೆ. ತಾವು ನನಗೆ ಮುನಿರತ್ನರಿಂದ ಆದ ಅನ್ಯಾಯಕ್ಕೆ ಕಾನೂನಿನ ಮೂಲಕ ನ್ಯಾಯ ಮತ್ತು ರಕ್ಷಣೆ ಕೊಡಬೇಕೆಂದು ಮನವಿ ಮಾಡಿದ್ದಾರೆ.

ಪೊಲೀಸರಿಂದ ಮಹಜರ್‌

ಶಾಸಕ ಮುನಿರತ್ನ ಮೇಲೆ‌ ಅತ್ಯಾಚಾರ ಆರೋಪ ಹಿನ್ನೆಲೆಯಲ್ಲಿ ಜೆಪಿ ಪಾರ್ಕ್ ಬಳಿಯ ಗೋಡಾನ್‌ನಲ್ಲಿ ಸಂತ್ರಸ್ತೆಯನ್ನು ಕರೆತಂದು ಕಗ್ಗಲಿಪುರ ಪೊಲೀಸರಿಂದ ಸ್ಥಳ ಮಹಜರ್‌ಗೆ ಮುಂದಾದರು. ಗೋಡಾನ್ ಕೀ ಇಲ್ಲದೇ ಹೊರಗೆ ನಿಲ್ಲುವಂತಾಯಿತು. ಸ್ಥಳಕ್ಕೆ ಎಫ್.ಎಸ್.ಎಲ್ ತಂಡದ ಹಾಗೂ ಸೋಕೊ ಟೀಂ ಹಾಜರಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ರಾಜಕೀಯ

MLA Muniratna: ನಿನ್ನ ನೋಡಿದ್ರೆ ಮೈಜುಮ್‌ ಎನಿಸುತ್ತೆ ಎಂದು ಶಾಸಕ ಮುನಿರತ್ನ ನನ್ನ ತಬ್ಬಿಕೊಂಡರು! ವಿಡಿಯೊ ಮಾಡಿ ಬೆದರಿಕೆ

MLA Muniratna: ನಿನ್ನ ನೋಡಿದ್ರೆ ಮೈಜುಮ್‌ ಎನಿಸುತ್ತೆ ಎಂದು ಶಾಸಕ ಮುನಿರತ್ನ ನನ್ನ ತಬ್ಬಿಕೊಂಡು ಅತ್ಯಾಚಾರವೆಸಗಿದರು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಶಾಸಕ ಮುನಿರತ್ನಗೆ ಲೈಂಗಿಕ ದೌರ್ಜನ್ಯ ಸಂಕಷ್ಟ ಎದುರಾಗಿದೆ.

VISTARANEWS.COM


on

By

Sexual harassment allegations against MLA Munirathna
Koo

ಬೆಂಗಳೂರು: ಜಾತಿನಿಂದನೆ ಹಾಗೂ ಜೀವ ಬೆದರಿಕೆ ಆರೋಪದಲ್ಲಿ ಸಿಲುಕಿರುವ ಮಾಜಿ ಸಚಿವ ಕಂ ಶಾಸಕ ಮುನಿರತ್ನ (MLA Muniratna)ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ. ಈ ಮಧ್ಯೆ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಸಂಕಷ್ಟ ಎದುರಾಗಿದ್ದು, ಪ್ರಕರಣ ದಾಖಲಾಗಿದೆ. ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ ಸಂಬಂಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಎಫ್‌ಐಆರ್‌ನಲ್ಲಿ‌ನ ಅಂಶಗಳು ಏನೇನು?

1)ಕೋವಿಡ್ ಸಮಯದಲ್ಲಿ ನನ್ನ ಸೇವೆ ಗುರುತಿಸಿ ಕರೆ ಮಾಡಿದ್ದ ಮುನಿರತ್ನ
2) ನಮಸ್ತೆ ಲೀಡರ್ ನಾನು ನಿಮ್ಮ ಭಾಗದ ಶಾಸಕ ನನ್ನನ್ನು ಬಂದು ಕರೆ ಮಾಡಿ ಎಂದಿದ್ದ ಮುನಿರತ್ನ
3) ಅದರಂತೆ ಭೇಟಿ ಬಳಿಕ ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು.
4) ಆಗಾಗ ವೀಡಿಯೊ ಕಾಲ್‌ ಮೂಲಕ ಮಾತನಾಡುತ್ತಿದ್ದರು.
5) ಈ ವೇಳೆ ನಗ್ನವಾಗಿ ಕರೆ ಮಾಡುವಂತೆ ಒತ್ತಾಯಿಸಿದಾಗ ನಾನು ನಿರಾಕರಿಸಿದ್ದೆ.
6) ಸ್ಪಾಟ್‌ವೊಂದಕ್ಕೆ ಬರೋದಕ್ಕೆ ಹೇಳಿ ನಿನ್ನ ನೋಡಿದರೆ ಮೈ ಜುಮ್‌ ಎನಿಸುತ್ತೆ ಎಂದೇಳಿ ತಬ್ಬಿಕೊಳ್ಳಲು ಮುಂದಾದರು.
7) ನಾನು ಆಕ್ಷೇಪಿಸಿದಾಗ ರಾಜಕೀಯಕ್ಕೆ ಬರಬೇಕಾದರೆ ಇದೆಲ್ಲಾ ಕಾಮನ್ ಎಂದರು.
8) ನಾನು ಕಿರುಚಿಕೊಳ್ಳುತ್ತೇನೆ ಎಂದಾಗ ಶಾಸಕನಿದ್ದೇನೆ ಅಪಾರ ಜನಬೆಂಬಲವಿದೆ ಸುಮ್ಮನಿದ್ದರೆ ಸರಿ , ಇಲ್ಲವಾದರೆ ನಿನ್ನ ವಿರುದ್ಧವೇ ಕಂಪ್ಲೆಂಟ್ ನೀಡುತ್ತೇನೆ ಎಂದು ಹೆದರಿಸಿ ಅತ್ಯಾಚಾರ ಎಸಗಿದರು.

9) ಅತ್ಯಾಚಾರದ ಬಳಿಕ ಈ ರೂಂನಲ್ಲಿ ಸೀಕ್ರೆಟ್ ವೀಡಿಯೊ ರೆಕಾರ್ಡರ್ ಇಟ್ಟಿದ್ದು, ಎಲ್ಲಾ ದೃಶ್ಯಗಳು ಸೆರೆಯಾಗಿದ್ದು , ನಿನ್ನ ವೀಡಿಯೊ ಎಡಿಟ್ ಮಾಡಿ ಹಂಚುತ್ತೇನೆ. ಹೇಳಿದಂತೆ ಕೇಳಬೇಕು ಅಂತಾ ಹನಿಟ್ರ್ಯಾಪ್ ಮಾಡುವಂತೆ ಹೇಳಿ ಬಳಸಿಕೊಂಡರು.
10) ಜತೆಗೆ ಚಿತ್ರೀಕರಿಸಿದ ವಿಡಿಯೊಗಳನ್ನು ಟಿವಿಯಲ್ಲಿ ಹಾಕಿ ನನಗೆ ತೋರಿಸಿದ್ದಾರೆ.
11) ಇದೇ ವಿಡಿಯೊ ಇಟ್ಕೊಂಡು 2020 ರಿಂದ 2022 ರ ಅವಧಿಯಲ್ಲಿ ನಿರಂತರ ಅತ್ಯಾಚಾರ ನಡೆಸಿದ್ದಾರೆ. ಇದೇ ವೇಳೆ ಹನಿಟ್ರ್ಯಾಪ್‌ಗು ಬಳಕೆ ಮಾಡಿಕೊಂಡಿದ್ದಾರೆ.
12) ಹೇಳಿದಂತೆ ಕೇಳಲಿಲ್ಲ ಅಂದರೆ ಗಂಡ ಮತ್ತು ಮಕ್ಕಳಿಗೆ ವಿಡಿಯೊ ತೋರಿಸೋದಾಗಿ ಬೆದರಿಕೆ ಹಾಕಿದ್ದಾರೆ.
13) ತನಗೆ ಪರಿಚಯ ಇರುವ ಮತ್ತೊಬ್ಬ ಮಹಿಳೆ ಜತೆ ಸೇರಿ ಆತ ಹೇಳಿದವರನ್ನು ಹನಿಟ್ರ್ಯಾಪ್ ಮಾಡಿಸಿದ್ದಾರೆ.
14) ಮರ್ಯಾದೆ ಹಾಗು ಪ್ರಾಣಕ್ಕೆ ಅಂಜಿ ಶಾಸಕ ಮುನಿರತ್ನ ಹೇಳಿದಂತೆ ಕೇಳಿದ್ದೇನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಯಾವ್ಯಾವ ಸೆಕ್ಷನ್‌ನಡಿ ಕೇಸ್?

354A – ಲೈಂಗಿಕ ದೌರ್ಜನ್ಯ
354C – ಮಹಿಳೆಯರ ಇಚ್ಛೆಗೆ ವಿರುದ್ಧವಾಗಿ ಚಿತ್ರೀಕರಣ
376N(2) – ಸರ್ಕಾರಿ ಸೇವಕನಿಂದ ಅತ್ಯಾಚಾರ
506 – ಜೀವ ಬೆದರಿಕೆ
504 – ಉದ್ದೇಶಪೂರ್ವಕವಾಗಿ ನಿಂದನೆ
120(B) – ಅಪರಾಧಿಕ ಒಳಸಂಚು
149 -ಕಾನೂನು ಬಾಹಿರ ಸಭೆ
406 – ನಂಬಿಕೆ ದ್ರೋಹ
384 – ಸುಲಿಗೆ
308 – ಹತ್ಯೆ ಮಾಡಲು ಪ್ರಯತ್ನ, ಐಟಿ ಆಕ್ಟ್ 66,66e

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Use nandini ghee compulsorily in temple prasadam Order of the Department of Religious Endowments
ಕರ್ನಾಟಕ4 ಗಂಟೆಗಳು ago

Nandini ghee: ದೇವಸ್ಥಾನಗಳ ಪ್ರಸಾದದಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪವನ್ನೇ ಬಳಸಿ; ಧಾರ್ಮಿಕ ದತ್ತಿ ಇಲಾಖೆ ಆದೇಶ

Temporary additional coaches to be attached to 34 trains for Dasara 2024
ಬೆಂಗಳೂರು5 ಗಂಟೆಗಳು ago

Dasara 2024: ಪ್ರಯಾಣಿಕರಿಗೆ ಗುಡ್‌ನ್ಯೂಸ್‌; ದಸರಾ ಹಬ್ಬಕ್ಕೆ 34 ರೈಲುಗಳಿಗೆ ತಾತ್ಕಾಲಿಕ ಹೆಚ್ಚುವರಿ ಬೋಗಿಗಳ ಜೋಡಣೆ

Theft case
ಬೆಂಗಳೂರು5 ಗಂಟೆಗಳು ago

Theft case : ಮಧ್ಯರಾತ್ರಿಯಲ್ಲಿ ವಕೀಲನಿಗೆ ಚಾಕು ತೋರಿಸಿ ಸುಲಿಗೆ ಮಾಡಿ ಬೆದರಿಕೆ ಹಾಕಿದ ಖದೀಮರು

Also test the prasadam of the holy places of the state Pralhad Joshi urges state government
ಬೆಂಗಳೂರು8 ಗಂಟೆಗಳು ago

Tirupati laddu Row : ತಿರುಪತಿ ಲಡ್ಡು ಬಳಿಕ ರಾಜ್ಯದ ಪವಿತ್ರ ಕ್ಷೇತ್ರಗಳ ಪ್ರಸಾದವನ್ನೂ ಪರೀಕ್ಷೆಗೊಳಪಡಿಸಿ; ರಾಜ್ಯ ಸರ್ಕಾರಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹ

Road Accident
ಬೆಂಗಳೂರು9 ಗಂಟೆಗಳು ago

Road Accident : ಚಾಲಕ ಕಾರಿನೊಳಗೆ ಮಲಗಿದ್ದಾಗಲೇ ನಡುರಾತ್ರಿ ಹೊತ್ತಿ ಉರಿದ ಕಾರು! ಅಗ್ನಿ ಅವಘಡಕ್ಕೆ ಕಾರಣ ನಿಗೂಢ!

Road Accident
ಕೋಲಾರ9 ಗಂಟೆಗಳು ago

Road Accident: ಅಪರಿಚಿತ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ ಸವಾರನ ತಲೆಯೇ ಕಟ್‌! ಭೀಕರ ದೃಶ್ಯಕ್ಕೆ ಬೆಚ್ಚಿ ಬಿದ್ದ ಜನರು

Good news for the children of yellow board drivers Do this to get a scholarship under Vidyanidhi
ಬೆಂಗಳೂರು ಟೆಕ್ ಸಮ್ಮಿಟ್10 ಗಂಟೆಗಳು ago

Students Scholarship : ಯೆಲ್ಲೋ ಬೋರ್ಡ್‌ ವಾಹನ ಚಾಲಕರ ಮಕ್ಕಳಿಗೆ ಗುಡ್‌ ನ್ಯೂಸ್‌; ವಿದ್ಯಾನಿಧಿಯಡಿ ಸ್ಕಾಲರ್‌ಶಿಪ್‌ ಪಡೆಯಲು ಹೀಗೆ ಮಾಡಿ

allegations of rape honeytrap Mla Munirathna arrested again by Kaggalipura police as soon as he came out of jail
ರಾಜಕೀಯ10 ಗಂಟೆಗಳು ago

MLA Muniratna: ಅತ್ಯಾಚಾರ, ಹನಿಟ್ರ್ಯಾಪ್‌ ಆರೋಪ; ಜೈಲಿನಿಂದ ಹೊರಬರುತ್ತಿದ್ದಂತೆ ಶಾಸಕ ಮುನಿರತ್ನ ಮತ್ತೆ ಅರೆಸ್ಟ್‌

Dina Bhavishya
ಭವಿಷ್ಯ16 ಗಂಟೆಗಳು ago

Dina Bhavishya : ಈ ರಾಶಿಯವರು ಇಂದು ದೊಡ್ಡ ಯೋಜನೆಯತ್ತ ಗಮನ ಹರಿಸುವಿರಿ

MCC Seat Retention, Opportunity to Cancel KEA Seat Deadline to Cancel Seats by 11 AM on September 20
ಬೆಂಗಳೂರು1 ದಿನ ago

KEA : ಎಂಸಿಸಿ ಸೀಟು ಉಳಿಸಿಕೊಂಡು, ಕೆಇಎ ಸೀಟು ರದ್ದತಿಗೆ ಅವಕಾಶ; ಸೀಟು ರದ್ದು ಪಡಿಸಿಕೊಳ್ಳಲು ನಾಳೆವರೆಗೂ ಗಡುವು

Kannada Serials
ಕಿರುತೆರೆ11 ತಿಂಗಳುಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ12 ತಿಂಗಳುಗಳು ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ11 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ10 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ11 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್3 ವಾರಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್3 ವಾರಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ4 ವಾರಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ1 ತಿಂಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 ತಿಂಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 ತಿಂಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 ತಿಂಗಳುಗಳು ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌