Dream Of Retired Couple: ನಿರಂತರ ಮೂರೂವರೆ ವರ್ಷಗಳ ನೌಕಾಯಾನಕ್ಕಾಗಿ ತಮ್ಮದೆಲ್ಲವನ್ನೂ ಮಾರಿದ ದಂಪತಿ! - Vistara News

ಪ್ರವಾಸ

Dream Of Retired Couple: ನಿರಂತರ ಮೂರೂವರೆ ವರ್ಷಗಳ ನೌಕಾಯಾನಕ್ಕಾಗಿ ತಮ್ಮದೆಲ್ಲವನ್ನೂ ಮಾರಿದ ದಂಪತಿ!

ಕಳೆದ ಎರಡು ವಾರಗಳಿಂದ ಗ್ರೇಸ್ ಮತ್ತು ಜೆರ್ರಿ ಗ್ರೇಡಿ ಯಾವುದೇ ಸೂಟ್‌ಕೇಸ್‌ ಭಾರ ಎತ್ತಿಕೊಳ್ಳದೇ ವಾಸ ಮಾಡುತ್ತಿದ್ದಾರೆ. ಯಾಕೆಂದರೆ ಅವರು ಈಗ ತಮ್ಮ ಜೀವಮಾನದ ಕನಸನ್ನು (Dream Of Retired Couple) ನನಸಾಗಿಸಿಕೊಳ್ಳುವ ದಾರಿಯಲ್ಲಿ ನಡೆಯುತ್ತಿದ್ದಾರೆ. ಪ್ರವಾಸಿ ದಂಪತಿಯ ಕುತೂಹಲಕರ ಕಥನ ಇಲ್ಲಿದೆ.

VISTARANEWS.COM


on

Dream Of Retired Couple
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬದುಕಿನಲ್ಲಿ ಎಲ್ಲರಿಗೂ ಒಂದಲ್ಲ ಒಂದು ರೀತಿಯ ಕನಸುಗಳಿರುತ್ತವೆ. ಅದರಲ್ಲೂ ಕೆಲವರು ತಮ್ಮ ಕನಸು (dream) ನನಸು ಮಾಡಿಕೊಳ್ಳಲು ಎಲ್ಲವನ್ನೂ ತ್ಯಾಗ ಮಾಡಲು ಸಿದ್ಧರಾಗುತ್ತಾರೆ. ಅಂಥವರಲ್ಲಿ ಒಬ್ಬರಾಗಿದ್ದಾರೆ ಅಮೆರಿಕನ್ (American)-ಇಟಾಲಿಯನ್ ನ (Italian) ಈ ದಂಪತಿ (Dream Of Retired Couple). ಇವರು ತಮ್ಮ ಕನಸನ್ನು ಸಾಕಾರಗೊಳಿಸಲು ತಮ್ಮದು ಎಂದೆನಿಸಿಕೊಂಡಿದ್ದ, ತಾವು ಜೀವಮಾನದಲ್ಲಿ ಗಳಿಸಿದ್ದ ಎಲ್ಲವನ್ನೂ ಮಾರಾಟ ಮಾಡಿದ್ದಾರೆ.

ಕಳೆದ ಎರಡು ವಾರಗಳಿಂದ ಗ್ರೇಸ್ ಮತ್ತು ಜೆರ್ರಿ ಗ್ರೇಡಿ ಯಾವುದೇ ಸೂಟ್‌ಕೇಸ್‌ ಭಾರ ಎತ್ತಿಕೊಳ್ಳದೇ ವಾಸ ಮಾಡುತ್ತಿದ್ದಾರೆ. ಯಾಕೆಂದರೆ ಅವರು ಈಗ ತಮ್ಮ ಜೀವಮಾನದ ಕನಸನ್ನು ನನಸಾಗಿಸಿಕೊಳ್ಳುವ ದಾರಿಯಲ್ಲಿ ನಡೆಯುತ್ತಿದ್ದಾರೆ.

70ರ ಹರೆಯದಲ್ಲಿರುವ ಈ ದಂಪತಿ ಶೀಘ್ರದಲ್ಲೇ ಪ್ರಪಂಚದಾದ್ಯಂತ (world tour) ನಿರಂತರ ಮೂರೂವರೆ ವರ್ಷಗಳ ವಿಹಾರಕ್ಕೆ (cruise) ತೆರಳಲಿದ್ದಾರೆ. ಈ ವಿಹಾರ ನಡೆಸಲಿರುವ ಸುಮಾರು 800 ಪ್ರಯಾಣಿಕರಲ್ಲಿ ಇವರೂ ಸೇರಿದ್ದಾರೆ.

ಇವರ ಈ ವಿಹಾರವು ಮೇ 30ರಂದು ಪ್ರಾರಂಭವಾಗಲಿದೆ. ಎಲ್ಲಾ ಏಳು ಖಂಡಗಳಾದ್ಯಂತ 147 ದೇಶಗಳಲ್ಲಿ 425 ಬಂದರುಗಳಿಗೆ ಈ ಸಂದರ್ಭದಲ್ಲಿ ಇವರು ಭೇಟಿ ನೀಡಲಿದ್ದಾರೆ. ಈ ಪ್ರವಾಸದ ವೇಳೆ ಯಾವುದೇ ದೇಶಕ್ಕೆ ಹೋದರೂ ಅಲ್ಲಿ ವಸಂತ ಮತ್ತು ಬೇಸಿಗೆಯ ಋತುವಾಗಿರುವುದು ಖಾತ್ರಿ ಪಡಿಸಲಾಗಿದೆ. ಈ ವಿಹಾರದಲ್ಲಿ ವಿಲ್ಲಾ ವೈ ಒಡಿಸ್ಸಿ ಎಂಬ ಎರಡು ವಸತಿ ಹಡಗುಗಳು ಮಾತ್ರ ಬಳಕೆಯಾಗಲಿದೆ.


ವಿಹಾರಕ್ಕಾಗಿ ಎಲ್ಲವನ್ನೂ ಮಾರಾಟ ಮಾಡಿದ ದಂಪತಿ

ಗ್ರೇಡಿ ದಂಪತಿ ಎರಡು ವರ್ಷಗಳ ಹಿಂದೆ ಗ್ರೇಸ್‌ನ ತಾಯ್ನಾಡು ಸಿಸಿಲಿಗೆ ತೆರಳಿ, ಅಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ತಮ್ಮ ಮನೆಯನ್ನು ಮಾರಾಟ ಮಾಡಿದ ಅನಂತರ ಅವರು ಕಳೆದ ಕೆಲವು ತಿಂಗಳುಗಳಿಂದ ತಮ್ಮ ಪ್ರವಾಸಕ್ಕೆ ಧನಸಹಾಯಕ್ಕಾಗಿ ತಮ್ಮ ಇತರ ಅಮೂಲ್ಯವಾದ ಆಸ್ತಿಯನ್ನು ಮಾರಾಟ ಮಾಡಿದ್ದಾರೆ.

ಸಾಹಸಕ್ಕೆ ಹೊಸದಲ್ಲ

ನಾವು ನಮ್ಮ ಹೆಚ್ಚಿನ ವಸ್ತುಗಳನ್ನು ಸ್ನೇಹಿತರಿಗೆ ಮಾರಾಟ ಮಾಡಿದ್ದೇವೆ ಎಂದು ಹೇಳುವ ಗ್ರೇಸ್ ದಂಪತಿಗೆ ಸಾಹಸವೇನು ಹೊಸತಲ್ಲ. ಕನಿಷ್ಠ ವಸ್ತುಗಳ ಬಳಕೆಯನ್ನು ಅಭ್ಯಾಸ ಮಾಡಿಕೊಂಡಿರುವ ಇವರು ಪ್ರತಿದಿನ ಒಂದೇ ಬಟ್ಟೆಯನ್ನು ಧರಿಸುತ್ತಾರೆ. ರಾತ್ರಿ ತೊಳೆದು ಹಾಕುತ್ತಾರೆ. ಹೀಗಾಗಿ ವಾರ್ಡ್ ರೋಬ್ ನ ಅಗತ್ಯ ನಮಗಿಲ್ಲ ಎನ್ನುತ್ತಾರೆ ಗ್ರೇಸ್.

ಭೂಮಿಯಲ್ಲಿ ವಾಸಿಸುವುದಕ್ಕಿಂತ ಇದು ಹೆಚ್ಚು ದುಬಾರಿಯಲ್ಲ ಎನ್ನುವ ಇವರು ವಿಲ್ಲಾ ವೈ ಒಡಿಸ್ಸಿಯಲ್ಲಿ ಒಂದು ವಸತಿ ಕೋಣೆಯನ್ನು ಬಾಡಿಗೆಗೆ ಪಡೆದಿದ್ದಾರೆ. ಇದರ ಬಾಡಿಗೆ ವರ್ಷಕ್ಕೆ ಸರಿಸುಮಾರು 36.22 ಲಕ್ಷ ರೂಪಾಯಿಗಳು.
ಕ್ರೂಸ್ ದರ ಕೈಗೆಟುಕುವಂತಿದೆ. ವಾರ್ಷಿಕ ಬಾಡಿಗೆ, ಬಾಲ್ಕನಿಯೊಂದಿಗೆ ಹೊರಗಿನ ಕ್ಯಾಬಿನ್ ನಲ್ಲಿ ವರ್ಷಕ್ಕೆ ಸುಮಾರು 60.57 ಲಕ್ಷ ರೂ. ವೆಚ್ಚವಾಗಲಿದೆ.


ಕ್ರೂಸ್ ವಿಶೇಷ ಏನು?

ವಿಲ್ಲಾ ವೈ ಒಡಿಸ್ಸಿಯನ್ನು 1993ರಲ್ಲಿ ನಿರ್ಮಿಸಲಾಯಿತು. ಸಂಪೂರ್ಣವಾಗಿ 12 ಮಿಲಿಯನ್ ಡಾಲರ್ ನಲ್ಲಿ ದುರಸ್ತಿ ಕಾರ್ಯಗಳನ್ನು ನಡೆಸಲಾಗಿದೆ. ವಿಲ್ಲಾ ವೈ ಒಡಿಸ್ಸಿಯಲ್ಲಿ ಪ್ರಯಾಣಿಕರು ಒಳಾಂಗಣ ಕ್ಯಾಬಿನ್‌ಗೆ ಪ್ರತಿ ವ್ಯಕ್ತಿಗೆ ದಿನಕ್ಕೆ 7,421.79 ರೂ., ಹೊರಾಂಗಣ ಕ್ಯಾಬಿನ್‌ಗಳಿಗೆ 9,923.52 ರೂ. ಮತ್ತು ಬಾಲ್ಕನಿಯಲ್ಲಿರುವವರಿಗೆ 16,594.79 ರೂ. ಪಾವತಿಸಬೇಕಾಗುತ್ತದೆ.

ಅತಿಥಿಗಳಿಗೆ ರಾತ್ರಿಯ ಊಟದಲ್ಲಿ ಅನಿಯಮಿತ ಆಹಾರ, ತಂಪು ಪಾನೀಯ ಮತ್ತು ಆಲ್ಕೊಹಾಲ್ ಲಭ್ಯವಿರುತ್ತದೆ. ಉಚಿತ ವೈಫೈ ಮತ್ತು ಔಷಧ ಮತ್ತು ಇತರ ಕಾರ್ಯವಿಧಾನ ಹೊರತುಪಡಿಸಿ ನಿರಂತರ ವೈದ್ಯಕೀಯ ತಪಾಸಣೆಗಳನ್ನು ನಡೆಸಲಾಗುತ್ತದೆ.

24/7 ಕೊಠಡಿ ಸೇವೆ, ವಾರಕ್ಕೊಮ್ಮೆ ಕೊಠಡಿ ಸ್ವಚ್ಛತೆ ಮತ್ತು ಎರಡು ವಾರಕ್ಕೊಮ್ಮೆ ಲಾಂಡ್ರಿ ಸೇವೆ ಎಲ್ಲವನ್ನೂ ಕ್ರೂಸ್ ನ ದರದಲ್ಲಿ ಸೇರಿಸಲಾಗಿದೆ.

ಪ್ರತ್ಯೇಕ ಪ್ರವಾಸ, ವಿಮಾನಯಾನಕ್ಕೆ ಹೋಲಿಸಿದರೆ ಇದು ಅಗ್ಗವಾಗಿದೆ ಎನ್ನುತ್ತಾರೆ ಗ್ರೇಸ್.

ಬಹು ದಿನಗಳ ಕನಸು

ಗ್ರೇಸ್ ದಂಪತಿ ಮೂರು ವರ್ಷಗಳ ಲೈಫ್ ಅಟ್ ಸೀ ಕ್ರೂಸಸ್ ಟ್ರಿಪ್‌ಗೆ ಸೇರಲು ನಿರ್ಧರಿಸಿದ್ದರು. ಆದರೆ ನವೆಂಬರ್ 2023 ರಲ್ಲಿ ಅದನ್ನು ಅನಿರೀಕ್ಷಿತವಾಗಿ ರದ್ದುಗೊಳಿಸಲಾಯಿತು. ಮರುಪಾವತಿಯನ್ನು ಕೋರಿ ಸಾಕಷ್ಟು ಮಂದಿ ಪ್ರವಾಸವನ್ನು ಕೈಬಿಟ್ಟರು. ನಾವು ಅಲೆಮಾರಿಗಳು, ಸಾಕಷ್ಟು ಪ್ರಯಾಣಿಸಿದ್ದೇವೆ. ನಾನು ಯಾವುದರ ಬಗ್ಗೆಯೂ ಚಿಂತಿಸುವುದಿಲ್ಲ ಎನ್ನುತ್ತಾರೆ ಗ್ರೇಸ್.

ಇದನ್ನೂ ಓದಿ: Munnar Tour: ಪ್ರಕೃತಿಯ ನಡುವೆ ಅವಿತಿರುವ ಸೌಂದರ್ಯದ ಗಣಿ ಮುನ್ನಾರ್! ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕು

ಕ್ರೂಸ್ ಗೆ ಹಣ ಪಾವತಿ ಮಾಡಲು ಆಯ್ಕೆಗಳಿವೆ. 16 ವಿಭಾಗಗಳು ಪಾವತಿಯ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. ಪ್ರಯಾಣಿಕರು ಮುಂಗಡ ಠೇವಣಿ ಮತ್ತು ಪ್ರತಿ ವಿಭಾಗಕ್ಕೆ 30 ದಿನಗಳ ಮೊದಲು ಉಳಿದ ಹಣವನ್ನು ಪಾವತಿಸಬೇಕಾಗುತ್ತದೆ. ಯಾವುದೇ ಹಂತದಲ್ಲಿ ಹಡಗನ್ನು ತೊರೆಯಲು ಬಯಸಿದರೆ ಸಂಪೂರ್ಣ ಮರುಪಾವತಿಗಾಗಿ ಅವರು ಹೊಸ ವಿಭಾಗಕ್ಕಿಂತ ಕನಿಷ್ಠ ಆರು ತಿಂಗಳ ಮೊದಲು ಸೂಚನೆಯನ್ನು ನೀಡಬೇಕಾಗುತ್ತದೆ ಎಂದು ಗ್ರೇಸ್ ತಿಳಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Railway Rules: ರೈಲು ಪ್ರಯಾಣಿಕರು ತಿಳಿದುಕೊಳ್ಳಲೇಬೇಕಾದ ನಿಯಮಗಳು

Railway Rules: ರೈಲಿನ ಪ್ರಯಾಣ ಆರಾಮದಾಯಕವಾಗಿರುತ್ತದೆ. ಇನ್ನು ಖರ್ಚು ಕೂಡ ಕಡಿಮೆ ಎನ್ನಬಹುದು. ಮಕ್ಕಳು, ವಯಸ್ಸಾದವರಿಗೆ ಈ ರೈಲಿನ ಪ್ರಯಾಣ ಉತ್ತಮವಾಗಿರುತ್ತದೆ. ಆದರೆ ಪ್ರತಿಯೊಬ್ಬ ರೈಲ್ವೆ ಪ್ರಯಾಣಿಕರು ತಿಳಿದುಕೊಳ್ಳಬೇಕಾದ 7 ಪ್ರಮುಖ ಭಾರತೀಯ ರೈಲ್ವೆ ನಿಯಮಗಳು ಇಲ್ಲಿವೆ. ಈ ನಿಯಮಗಳ ಬಗ್ಗೆ ಅರಿವಿದ್ದರೆ ಇನ್ಮುಂದೆ ಖುಷಿಯಾಗಿ ರೈಲಿನ ಪ್ರಯಾಣವನ್ನು ಎಂಜಾಯ್ ಮಾಡಬಹುದು.ಆ ನಿಯಮಗಳು ಏನು ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

Railway Rules
Koo

ಬೆಂಗಳೂರು: ರೈಲಿನಲ್ಲಿ ಪ್ರಯಾಣಿಸುವುದೆಂದರೆ ಎಲ್ಲರಿಗೂ ತುಂಬಾ ಇಷ್ಟ. ಯಾಕೆಂದರೆ ಅಲ್ಲಿ ನಿಮಗೆ ಪ್ರಯಾಣದ ವೇಳೆ ವಾಂತಿ, ತಲೆ ಸುತ್ತುವುದು, ಶೌಚಾಲಯದಂತಹ ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ. ಮತ್ತು ಇದರ ದರ ಕೂಡ ತುಂಬಾ ಕಡಿಮೆ ಇರುತ್ತದೆ. ಹಾಗಾಗಿ ನಿಮಗೆ ಇಡೀ ಭಾರತವನ್ನು ಅನ್ವೇಷಣೆ ಮಾಡಲು ಭಾರತೀಯ ರೈಲ್ವೆ ಒಂದು ಅತ್ಯುತ್ತಮ ಮಾರ್ಗವಾಗಿದೆ. ಭಾರತೀಯ ರೈಲ್ವೆ 7,000ಕ್ಕೂ ಹೆಚ್ಚು ನಿಲ್ದಾಣಗಳು ಮತ್ತು ಪ್ರತಿದಿನ 23 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಾರೆ. ಆದರೆ ಈ ಸಂಸ್ಥೆ ಪ್ರಯಾಣಿಕರಿಗೆ ಕೆಲವು ನಿಯಮಗಳು ಮತ್ತು ನಿಬಂಧನೆಗಳನ್ನು ಹಾಕುತ್ತದೆ. ಹಾಗಾಗಿ ಪ್ರತಿಯೊಬ್ಬ ಪ್ರಯಾಣಿಕರು ತಿಳಿದುಕೊಳ್ಳಬೇಕಾದ 7 ಪ್ರಮುಖ ಭಾರತೀಯ ರೈಲ್ವೆ ನಿಯಮಗಳು(Railway Rules) ಇಲ್ಲಿವೆ:

ಟಿಕೆಟ್ ಬುಕಿಂಗ್:

ರೈಲಿನಲ್ಲಿ ಪ್ರಯಾಣಿಸುವಾಗ ಎಲ್ಲಾ ಪ್ರಯಾಣಿಕರು ತಮ್ಮ ಟಿಕೆಟ್ ಮರೆಯದೆ ಕೊಂಡೊಯ್ಯಬೇಕು. ಟಿಕೆಟ್‌ಗಳನ್ನು ಆನ್‌ಲೈನ್‌, ರೈಲ್ವೆ ನಿಲ್ದಾಣಗಳಲ್ಲಿ ಅಥವಾ ಅಧಿಕೃತ ಟ್ರಾವೆಲ್ ಏಜೆಂಟ್‌ಗಳ ಮೂಲಕ ಕಾಯ್ದಿರಿಸಬಹುದು. ಟಿಕೆಟ್ ಇಲ್ಲದೆ ಪ್ರಯಾಣಿಸುವುದು ದಂಡ ಮತ್ತು ಶಿಕ್ಷೆಗೆ ಕಾರಣವಾಗುತ್ತದೆ.

ಲಗೇಜ್:

ಪ್ರಯಾಣಿಕರು ತಮ್ಮೊಂದಿಗೆ ಸಾಮಾನುಗಳನ್ನು ಲಗೇಜ್‌ನಲ್ಲಿ ಕೊಂಡೊಯ್ಯಲು ಅವಕಾಶವಿದೆ, ಆದರೆ ತೂಕವು ಅನುಮತಿಸಲಾದ ತೂಕದ ಮಿತಿಯನ್ನು ಮೀರಬಾರದು. ಫಸ್ಟ್ ಎಸಿ ಮತ್ತು 2ನೇ ಎಸಿಗೆ 40 ಕೆಜಿ, 3ನೇ ಎಸಿ ಮತ್ತು ಚೇರ್ ಕಾರ್ ಗೆ 35 ಕೆಜಿ, ಸ್ಲೀಪರ್ ಕ್ಲಾಸ್ ಗೆ 15 ಕೆಜಿ ಲಗೇಜ್ ಸಾಗಿಸಲು ಮಿತಿ ಇದೆ. ಪ್ರಯಾಣಿಕರು ಯಾವುದೇ ಅಪಾಯಕಾರಿ ಸರಕುಗಳನ್ನು ಸಾಗಿಸಲು ಅನುಮತಿ ಇಲ್ಲ.

ಮದ್ಯಪಾನ:

ರೈಲಿನಲ್ಲಿ ಮದ್ಯ ಸೇವನೆಗೆ ಅವಕಾಶವಿಲ್ಲ. ರೈಲಿನಲ್ಲಿ ಆಲ್ಕೋಹಾಲ್ ಸೇವನೆಯನ್ನು ನಿಷೇಧಿಸಲಾಗಿದೆ. ಮದ್ಯ ಸೇವಿಸಿ ಸಿಕ್ಕಿ ಬಿದ್ದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

ಧೂಮಪಾನ:

ರೈಲುಗಳು, ಪ್ಲಾಟ್ ಫಾರ್ಮ್‌ಗಳು ಮತ್ತು ನಿಲ್ದಾಣದ ಆವರಣದಲ್ಲಿ ಧೂಮಪಾನವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಆಹಾರ:

ಪ್ರಯಾಣಿಕರು ತಮ್ಮದೇ ಆದ ಆಹಾರವನ್ನು ತೆಗೆದುಕೊಂಡು ಹೋಗಬಹುದು ಅಥವಾ ಪ್ಲಾಟ್‌ಫಾರ್ಮ್‌ನಲ್ಲಿರುವ ಆಹಾರ ಮಳಿಗೆಗಳಿಂದ ಆಹಾರವನ್ನು ಖರೀದಿಸಬಹುದು.

ರದ್ದತಿ ಮತ್ತು ಮರುಪಾವತಿ:

ಪ್ರಯಾಣಿಕರು ತಮ್ಮ ಟಿಕೆಟ್ ಅನ್ನು ರದ್ದುಗೊಳಿಸಲು ಬಯಸಿದರೆ, ಅವರು ಅದನ್ನು ರೈಲು ನಿರ್ಗಮನ ಸಮಯದ ಮೊದಲು ಮಾಡಬೇಕು. ಮತ್ತು ಭಾರತೀಯ ರೈಲ್ವೆಯ ರದ್ದತಿ ನೀತಿಯ ಪ್ರಕಾರ ಮರುಪಾವತಿ ನೀಡಲಾಗುವುದು.

ಸುರಕ್ಷತೆ:

ಪ್ರಯಾಣಿಕರು ತಮ್ಮ ವಸ್ತುಗಳ ಬಗ್ಗೆ ಅವರೇ ಕಾಳಜಿ ವಹಿಸಬೇಕು ಮತ್ತು ಪ್ರಯಾಣಿಸುವಾಗ ಅಮೂಲ್ಯವಾದ ವಸ್ತುಗಳನ್ನು ಒಯ್ಯುವುದನ್ನು ತಪ್ಪಿಸಬೇಕು. ಈ ವಿಚಾರದಲ್ಲಿ ಅವರು ಸಹ ಪ್ರಯಾಣಿಕರೊಂದಿಗೆ ವಾದಗಳು ಅಥವಾ ಜಗಳಗಳಲ್ಲಿ ತೊಡಗುವುದನ್ನು ತಪ್ಪಿಸಬೇಕು.

ಪ್ರಶ್ನೆ-ಉತ್ತರಗಳು:

  • ಪ್ರಶ್ನೆ 1: ಭಾರತೀಯ ರೈಲ್ವೆಯಲ್ಲಿ ನಾನು ರೈಲು ಟಿಕೆಟ್ ಗಳನ್ನು ಹೇಗೆ ಕಾಯ್ದಿರಿಸಬಹುದು?
  • ನೀವು ಭಾರತೀಯ ರೈಲ್ವೆಯಲ್ಲಿ ರೈಲು ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಕಾಯ್ದಿರಿಸಬಹುದು. ಅದಕ್ಕಾಗಿ ಐಆರ್‌ಟಿಸಿ ವೆಬ್‌ಸೈಟ್‌ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಅಥವಾ ವಿವಿಧ ರೈಲ್ವೆ ನಿಲ್ದಾಣಗಳಲ್ಲಿನ ರೈಲ್ವೆ ಮೀಸಲಾತಿ ಕೌಂಟರ್‌ಗಳಲ್ಲಿ ಟಿಕೆಟ್ ಪಡೆಯಬಹುದು.
  • ಪ್ರಶ್ನೆ 2: ನಾನು ಭಾರತೀಯ ರೈಲ್ವೆಯಲ್ಲಿ ಆಹಾರವನ್ನು ಸಾಗಿಸಬಹುದೇ?
  • ಎ 2: ಹೌದು, ನೀವು ನಿಮ್ಮ ಮನೆಯಲ್ಲಿ ತಯಾರಿಸಿದ ಆಹಾರವನ್ನು ಒಯ್ಯಬಹುದು ಅಥವಾ ಪ್ಯಾಂಟ್ರಿ ಕಾರು ಅಥವಾ ಪ್ಲಾಟ್ ಫಾರ್ಮ್‌ನಲ್ಲಿರುವ ಆಹಾರ ಮಳಿಗೆಗಳಿಂದ ಆಹಾರವನ್ನು ಖರೀದಿಸಬಹುದು.
Continue Reading

ಪ್ರವಾಸ

Assam Tour: ಅಸ್ಸಾಂನ ಪೆಲ್ಲಿಂಗ್‌ನಲ್ಲಿ ಮೋಡಿ ಮಾಡುವ 8 ಆಕರ್ಷಕ ಸಂಗತಿಗಳಿವು

Assam Tour: ಪ್ರಕೃತಿ, ಸಂಸ್ಕೃತಿ ಮತ್ತು ಸಾಹಸವು ಪರಸ್ಪರ ಸಾಮರಸ್ಯದಿಂದ ಹೇಗೆ ಸಹಬಾಳ್ವೆ ನಡೆಸಬಹುದು ಎಂಬುದರ ಸಂಕೇತವೇ ಪೆಲ್ಲಿಂಗ್. ವಿಸ್ಮಯ-ಸ್ಫೂರ್ತಿದಾಯಕ ಹಲವು ತಾಣಗಳು, ಆಳವಾಗಿ ಬೇರೂರಿರುವ ಸಂಪ್ರದಾಯ ಮತ್ತು ಸ್ನೇಹಪರ ದಾರಿಗಳು ಪೆಲ್ಲಿಂಗ್‌ ಪ್ರವಾಸವನ್ನು (Pelling Tour) ಶಾಶ್ವತವಾಗಿ ನನಪಿನಲ್ಲಿ ಉಳಿಯುವಂತೆ ಮಾಡುತ್ತದೆ.

VISTARANEWS.COM


on

By

Assam Tour
Koo

ಆಕರ್ಷಕ ಪರಿಸರ, ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು (Assam Tour) ಹೊಂದಿರುವ ಪುಟ್ಟ ಗ್ರಾಮ ಪೆಲ್ಲಿಂಗ್ (Pelling Tour) ಹಿಮಾಲಯದ (himalaya) ಇಳಿಜಾರಿನಲ್ಲಿದೆ. ತನ್ನ ಸೌಂದರ್ಯದಿಂದಲೇ ಸಿಕ್ಕಿಂಗೆ (sikkim) ಬರುವ ಪ್ರವಾಸಿಗರನ್ನು (tourist) ತನ್ನತ್ತ ಸೆಳೆಯುತ್ತದೆ. ಪ್ರಕೃತಿಯ ಮಡಿಲಲ್ಲಿ ಮನ ಶಾಂತಿಯನ್ನು ಹುಡುಕುವವರಿಗೆ ಇದು ಸೂಕ್ತ ಸ್ಥಳವಾಗಿದೆ. ಪೆಲ್ಲಿಂಗ್ನಲ್ಲಿ ಅತ್ಯಂತ ಆಸಕ್ತಿದಾಯಕ ಹಲವಾರು ತಾಣಗಳಿವೆ. ಈ ತಾಣಗಳು ನಿಮ್ಮ ಪ್ರವಾಸದ ಅನುಭವ1ವನ್ನು ರೋಮಾಂಚಕಗೊಳಿಸುವುದು ಮಾತ್ರವಲ್ಲ ಸ್ಮರಣೀಯಗೊಳಿಸುತ್ತದೆ.

ಕಾಂಚನಜುಂಗಾ

ಪ್ರಪಂಚದ ಮೂರನೇ ಅತೀ ಎತ್ತರದ ಶಿಖರವಾದ ಕಾಂಚನಜುಂಗಾವನ್ನು ಪೆಲ್ಲಿಂಗ್‌ನಿಂದ ಅತ್ಯಂತ ಹತ್ತಿರದಿಂದ ನೋಡಬಹುದು. ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಪರ್ವತವು ಗುಲಾಬಿ ಬಣ್ಣಕ್ಕೆ ತಿರುಗುವುದು ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತದೆ. ಹಚ್ಚ ಹಸಿರಿನ ಕಾಡುಗಳ ನಡುವೆ ಹರಿಯುವ ಜಲಪಾತಗಳು ತನ್ನ ಸೌಂದರ್ಯದಿಂದ ಮೋಡಿಮಾಡುವುದು ಮಾತ್ರವಲ್ಲ ಎಲ್ಲರನ್ನೂ ಬೆರಗುಗೊಳಿಸುತ್ತದೆ.

ಸಾಂಸ್ಕೃತಿಕ ವೈಭವ

ಲೆಪ್ಚಾಗಳು, ಭುಟಿಯಾಗಳು ಮತ್ತು ನೇಪಾಳಿಗಳು ಸೇರಿದಂತೆ ವಿವಿಧ ಸಮುದಾಯಗಳ ಜನರು ಪೆಲ್ಲಿಂಗ್‌ನಲ್ಲಿ ವಾಸಿಸುತ್ತಿದ್ದಾರೆ. ಹೀಗಾಗಿ ಇಲ್ಲಿ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆಯ ಸಂಗಮವಾಗಿದೆ. ಇಲ್ಲಿನ ಜನರು ತಮ್ಮ ಧಾರ್ಮಿಕತೆ ಮತ್ತು ಅವರಲ್ಲಿ ಐಕ್ಯತೆಯನ್ನು ತೋರಿಸಲು ಆಚರಿಸುವ ಬುಮ್ಚು ಹಬ್ಬದ ಸಂದರ್ಭದಲ್ಲಿ ಪಾಂಗ್ಟೋಡ್ ಚಾಮ್ ನೃತ್ಯ ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತದೆ. ಈ ವೇಳೆ ಸಿಕ್ಕಿಮರ ಆತಿಥ್ಯವನ್ನು ಅನುಭವಿಸಬಹುದು.


ಸಾಹಸ ಪ್ರಿಯರಿಗಾಗಿ ಸಾಕಷ್ಟು ಅವಕಾಶ

ಜೀವನದಲ್ಲಿ ರೋಮಾಂಚನವನ್ನು ಬಯಸುವವರಿಗೆ ಪೆಲ್ಲಿಂಗ್‌ನಲ್ಲಿ ಸಾಕಷ್ಟು ಉತ್ಸಾಹ ತುಂಬುವ ತಾಣಗಳಿವೆ. ಯುಕ್ಸೋಮ್ ಅಥವಾ ಖೆಚಿಯೋಪಾಲ್ರಿ ಸರೋವರವಿರುವ ಹತ್ತಿರದ ಹಳ್ಳಿಗಳಿಗೆ ಪಾದಯಾತ್ರೆ ಮಾಡುವಾಗ ವಿವಿಧ ಜಾತಿಯ ಪ್ರಾಣಿಗಳನ್ನು ಕಣ್ತುಂಬಿಕೊಳ್ಳಬಹುದು. ಸಾಹಸ ಪ್ರಿಯ ಪ್ರವಾಸಿಗರು ಪ್ಯಾರಾಗ್ಲೈಡಿಂಗ್, ರಿವರ್ ರಾಫ್ಟಿಂಗ್ ಅಥವಾ ಮೌಂಟೇನ್ ಬೈಕಿಂಗ್‌ನಂತಹ ಚಟುವಟಿಕೆಗಳನ್ನು ನಡೆಸಬಹುದು.

ಆಧ್ಯಾತ್ಮಿಕ ಧಾಮ

ಪೆಲ್ಲಿಂಗ್ ಸುತ್ತಮುತ್ತ ಇರುವ ಅನೇಕ ಹಳೆಯ ಮಠಗಳಲ್ಲಿ ಪೆಮಯಾಂಗಟ್ಸ್ ಮಠವು ಒಂದಾಗಿದೆ. ಸಂಕೀರ್ಣವಾದ ಧಾರ್ಮಿಕ ಕಲಾಕೃತಿಗಳು ಮತ್ತು ಶಿಲ್ಪಗಳನ್ನು ಹೊಂದಿರುವ ಇದು ಸಂದರ್ಶಕರನ್ನು ಮೋಡಿ ಮಾಡುತ್ತದೆ. ಮನ ಶಾಂತಿ ಬಯಸುವವರು ಇಲ್ಲಿ ಸನ್ಯಾಸಿಗಳಂತೆ ಜೀವನ ನಡೆಸಬಹುದು.

ಸುಸ್ಥಿರ ಪ್ರವಾಸೋದ್ಯಮ

ಪೆಲ್ಲಿಂಗ್ ಸುಸ್ಥಿರ ಪ್ರವಾಸೋದ್ಯಮಕ್ಕೆ ಮೀಸಲಾಗಿದೆ. ಪರಿಸರ ಸ್ನೇಹಿ ಯೋಜನೆಗಳಿಗೆ ಇದು ಒತ್ತು ನೀಡುತ್ತದೆ. ಸ್ಥಳೀಯ ಜನರ ಜೀವನೋಪಾಯವನ್ನು ಬೆಂಬಲಿಸುವ ಜೊತೆಗೆ ಜವಾಬ್ದಾರಿಯುತ ಪ್ರಯಾಣವನ್ನು ಪ್ರೋತ್ಸಾಹಿಸುವ ಹಲವಾರು ಸಮುದಾಯ ಆಧಾರಿತ ಪ್ರವಾಸೋದ್ಯಮಗಳಿಗೆ ಇಲ್ಲಿ ಅವಕಾಶ ನೀಡಲಾಗಿದೆ.


ಸ್ಥಳೀಯ ಖಾದ್ಯಗಳನ್ನು ಸವಿಯಬಹುದು

ಸಿಕ್ಕಿಮೀಸ್ ಪಾಕಪದ್ಧತಿ ಬಾಯಲ್ಲಿ ನೀರುಣಿಸುತ್ತದೆ. ವಿಶಿಷ್ಟವಾದ ರುಚಿ ಮತ್ತು ಪದಾರ್ಥಗಳನ್ನು ಇದು ಒಳಗೊಂಡಿದೆ. ಸ್ಥಳೀಯ ಆಹಾರಗಳಾದ ಮೊಮೊಸ್, ತುಕ್ಪಾ ಮತ್ತು ಗುಂಡ್ರುಕ್ ಹಾಗೂ ಟಿಬೆಟಿಯನ್ನರು ಮತ್ತು ನೇಪಾಳಿಗಳ ಭಕ್ಷ್ಯಗಳನ್ನು ಸವಿಯಬಹುದು. ಸಾವಯವ ಹಣ್ಣು, ತರಕಾರಿಗಳ ಅಧಿಕೃತ ಪಾಕವಿಧಾನಗಳನ್ನು ಆನಂದಿಸಬಹುದು.

ಇದನ್ನೂ ಓದಿ: Baby Moon: ಹನಿಮೂನ್‌ನಂತೆ ಬೇಬಿಮೂನ್; ಜನಪ್ರಿಯವಾಗುತ್ತಿರುವ ಹೊಸ ಟ್ರೆಂಡ್!

ಹಕ್ಕಿಗಳ ಕಲರವ

ಪೆಲ್ಲಿಂಗ್ ಸುತ್ತಮುತ್ತ ನಿತ್ಯಹರಿದ್ವರ್ಣ ಪರಿಸರದ ನಡುವೆ ಹಲವಾರು ಪಿಕ್ನಿಕ್ ತಾಣಗಳಿವೆ. ಮೋಡಿ ಮಾಡುವ ಚಿಲಿಪಿಲಿ ಹಕ್ಕಿಗಳ ಕಲರವವನ್ನು ಕೇಳಿ ಆನಂದಿಸುತ್ತಾ ಆಧುನಿಕ ಒತ್ತಡದ ಬದುಕಿನಿಂದ ದೂರವಾಗಿ ಮನಃಶಾಂತಿಯನ್ನು ಆನಂದಿಸಬಹುದು.

ವರ್ಷ ಪೂರ್ತಿ ವಿಶಿಷ್ಟ ಅನುಭವ

ಪೆಲ್ಲಿಂಗ್ ನಲ್ಲಿ ವರ್ಷ ಪೂರ್ತಿ ವಿಭಿನ್ನ ಋತುಗಳನ್ನು ಇಲ್ಲಿ ಆನಂದಿಸಬಹುದು. ವಸಂತಕಾಲದಲ್ಲಿ ಆಕಾಶವು ಸ್ಪಷ್ಟವಾಗಿರುವಾಗ ಪ್ರವಾಸಿಗರು ಪ್ರಕೃತಿಯ ನಡುವೆ ಹೆಜ್ಜೆ ಹಾಕಬಹುದು. ಆಕರ್ಷಕ ಛಾಯಾಚಿತ್ರಗಳನ್ನು ತೆಗೆದುಕೊಳ್ಳಬಹುದು. ಮಳೆಗಾಲದಲ್ಲಿ ಪ್ರಕೃತಿ ಪ್ರಿಯರು ಇಲ್ಲಿ ಅದ್ಭುತ ನೋಟಗಳನ್ನು ಕಣ್ತುಂಬಿಕೊಳ್ಳಬಹುದು. ಶರತ್ಕಾಲ ಮತ್ತು ಚಳಿಗಾಲದಲ್ಲಿ ಪ್ರವಾಸಿಗರು ಹಿಮಾಲಯದ ಸೌಂದರ್ಯವನ್ನು ಕಣ್ಮನದಲ್ಲಿ ತುಂಬಿಕೊಳ್ಳಬಹುದು.

Continue Reading

ವಿದೇಶ

World’s Newest Countries: ಇವು ವಿಶ್ವದ 10 ಹೊಸ ರಾಷ್ಟ್ರಗಳು! ಏನು ಈ ರಾಷ್ಟ್ರಗಳ ವಿಶೇಷ?

ಸಮಯದೊಂದಿಗೆ ಜಾಗತಿಕವಾಗಿಯೂ ಹಲವಾರು ಬದಲಾವಣೆಗಳು ಆಗುತ್ತಲೇ ಇರುತ್ತದೆ. ಪ್ರಸ್ತುತ ಜಗತ್ತಿನಲ್ಲಿ 195 ದೇಶಗಳಿವೆ. ಇವುಗಳಲ್ಲಿ ಕೆಲವು ಸಾಕಷ್ಟು ಹಳೆಯವು ಮತ್ತು ಕೆಲವು ಸಾಕಷ್ಟು ಹೊಸದು. ಇದರಲ್ಲಿ ಹತ್ತು ರಾಷ್ಟ್ರಗಳು ಕಳೆದ ಎರಡು ದಶಕಗಳಲ್ಲಿ (World’s Newest Countries) ಸ್ಥಾಪನೆಯಾಗಿರುವುದು. ಈ ಹತ್ತು ದೇಶಗಳ ಸಂಕ್ಪಿಪ್ತ ಪರಿಚಯ ಇಲ್ಲಿದೆ.

VISTARANEWS.COM


on

By

World's Newest Countries
Koo

ಕಳೆದ ಎರಡು ದಶಕಗಳಲ್ಲಿ ವಿಶ್ವದಲ್ಲಿ ಹತ್ತು ಹೊಸ ರಾಷ್ಟ್ರಗಳು (World’s Newest Countries) ರೂಪುಗೊಂಡಿದ್ದು, ಇದರಲ್ಲಿ ದಕ್ಷಿಣ ಸುಡಾನ್ (South Sudan) ಇತ್ತೀಚೆಗೆಷ್ಟೇ ಹುಟ್ಟಿಕೊಂಡಿದೆ. ಸಾಕಷ್ಟು ಸವಾಲುಗಳನ್ನು ಎದುರಿಸಿ ರೂಪುಗೊಂಡಿರುವ ಈ ಹೊಸ ರಾಷ್ಟ್ರಗಳು ಅನೇಕ ಅವಕಾಶಗಳನ್ನೂ ಸೃಷ್ಟಿಸಿದೆ.

ದಕ್ಷಿಣ ಸೂಡಾನ್ ಇದೀಗ ವಿಶ್ವದ ಹೊಸ ದೇಶಗಳ ಪಟ್ಟಿಯಲ್ಲಿದೆ. 2011ರ ಜುಲೈ 9ರಂದು ಸ್ವತಂತ್ರಗೊಂಡ (gained independence) ದಕ್ಷಿಣ ಸುಡಾನ್ ಈಗ ವಿಶ್ವದಲ್ಲಿ ಅಸ್ತಿತ್ವದಲ್ಲಿರುವ ಹೊಸ ದೇಶವಾಗಿದೆ. ಇದರೊಂದಿಗೆ ಹೊಸ ದೇಶಗಳ ಪಟ್ಟಿಯಲ್ಲಿ ಕೊಸೊವೊ (Kosovo), ಮಾಂಟೆನೆಗ್ರೊ (Montenegro), ಸೆರ್ಬಿಯಾ (Serbia), ಪೂರ್ವ ಟಿಮೋರ್ (East Timor) , ಪಲಾವ್ (Palau), ಎರಿಟ್ರಿಯಾ (Eritrea), ಜೆಕ್ ರಿಪಬ್ಲಿಕ್ (Czech Republic), ಸ್ಲೋವಾಕಿಯಾ (Slovakia) ಮತ್ತು ಕ್ರೊಯೇಷಿಯಾ (Croatia) ಕೂಡ ಸೇರ್ಪಡೆಯಾಗಿದೆ.

ಸಮಯದೊಂದಿಗೆ ಜಾಗತಿಕವಾಗಿಯೂ ಹಲವಾರು ಬದಲಾವಣೆಗಳು ಆಗುತ್ತಲೇ ಇರುತ್ತದೆ. ಪ್ರಸ್ತುತ ಜಗತ್ತಿನಲ್ಲಿ 195 ದೇಶಗಳಿವೆ. ಇವುಗಳಲ್ಲಿ ಕೆಲವು ಸಾಕಷ್ಟು ಹಳೆಯವು ಮತ್ತು ಕೆಲವು ಸಾಕಷ್ಟು ಹೊಸದು. ಇದರಲ್ಲಿ ಹತ್ತು ರಾಷ್ಟ್ರಗಳು ಕಳೆದ ಎರಡು ದಶಕಗಳಲ್ಲಿ ಸ್ಥಾಪನೆಯಾಗಿರುವುದು.

ಇತ್ತೀಚಿಗೆ ಸ್ಥಾಪನೆಯಾಗಿರುವ ಪ್ರಪಂಚದ ಹೊಸ ಅಥವಾ ಕಿರಿಯ ರಾಷ್ಟ್ರಗಳು ಅನನ್ಯ ಸವಾಲುಗಳನ್ನು ಎದುರಿಸುತ್ತಿರುವ ನಡುವೆ ಇಲ್ಲಿ ಸಾಕಷ್ಟು ಅವಕಾಶಗಳೂ ಎದ್ದು ಕಾಣುತ್ತಿವೆ. ದಶಕಗಳ ಸಂಘರ್ಷದಿಂದ ಹುಟ್ಟಿದ ದಕ್ಷಿಣ ಸುಡಾನ್‌ನಿಂದ ಹಿಡಿದು ಕೊಸೊವೊ ಅಂತಾರಾಷ್ಟ್ರೀಯ ಮನ್ನಣೆಯ ಹಾದಿಯನ್ನು ಪಡೆಯುವವರೆಗೆ ಪ್ರತಿಯೊಂದು ದೇಶಗಳು ವಿಶಿಷ್ಟವಾದ ಇತಿಹಾಸವನ್ನು ಹೊಂದಿವೆ.

ದಕ್ಷಿಣ ಸುಡಾನ್

2011ರ ಜುಲೈ 9ರಂದು ಸ್ವಾತಂತ್ರ್ಯ ಪಡೆದ ದಕ್ಷಿಣ ಸುಡಾನ್ ಈ ಮೂಲಕ ದಶಕಗಳ ಅಂತರ್ಯುದ್ಧದಕ್ಕೆ ಅಂತ್ಯವನ್ನು ಹಾಡಿತ್ತು. ವೈವಿಧ್ಯಮಯ ಜನಾಂಗೀಯ ಗುಂಪುಗಳಿಗೆ ಮತ್ತು ರಾಜಕೀಯ ಸ್ಥಿರತೆಯ ಹೋರಾಟಗಳಿಗೆ ಈ ರಾಷ್ಟ್ರ ಹೆಸರುವಾಸಿಯಾಗಿದೆ.


ಕೊಸೊವೊ

2008ರ ಫೆಬ್ರವರಿ 17ರಂದು ಸೆರ್ಬಿಯಾದಿಂದ ಕೊಸೊವೊ ಸ್ವಾತಂತ್ರ್ಯವನ್ನು ಘೋಷಿಸಿತು. ಅನೇಕ ದೇಶಗಳಿಂದ ಗುರುತಿಸಲ್ಪಟ್ಟಿದ್ದರೂ ಅಂತಾರಾಷ್ಟ್ರೀಯ ಮನ್ನಣೆ ಪಡೆಯುವಲ್ಲಿ ಸವಾಲುಗಳನ್ನು ಎದುರಿಸುತ್ತಿದೆ.


ಮಾಂಟೆನೆಗ್ರೊ

2006ರ ಜೂನ್ 3ರಂದು ಜನಾಭಿಪ್ರಾಯ ಸಂಗ್ರಹಣೆಯ ಅನಂತರ ಮಾಂಟೆನೆಗ್ರೊ ಸ್ಟೇಟ್ ಯೂನಿಯನ್ ಆಫ್ ಸರ್ಬಿಯಾ ಮತ್ತು ಮಾಂಟೆನೆಗ್ರೊದಿಂದ ಸ್ವಾತಂತ್ರ್ಯವನ್ನು ಘೋಷಿಸಿತು. ಇದು ಆಡ್ರಿಯಾಟಿಕ್ ಕರಾವಳಿಗಳಿಗೆ ಹೆಸರುವಾಸಿಯಾಗಿದೆ ಮತ್ತು ಯುರೋಪಿಯನ್ ಯೂನಿಯನ್ ಸದಸ್ಯತ್ವಕ್ಕಾಗಿ ಅಭ್ಯರ್ಥಿಯಾಗಿದೆ.


ಸೆರ್ಬಿಯಾ

ಸೆರ್ಬಿಯಾ ಮತ್ತು ಮಾಂಟೆನೆಗ್ರೊ ರಾಜ್ಯ ಒಕ್ಕೂಟದ ವಿಸರ್ಜನೆಯ ಅನಂತರ ಸೆರ್ಬಿಯಾ 2006ರ ಜೂನ್ 5ರಂದು ಸ್ವಾತಂತ್ರ್ಯವನ್ನು ಘೋಷಿಸಿತು. ಇದು ಆರ್ಥಿಕ ಸುಧಾರಣೆಗಳು ಮತ್ತು ಯುರೋಪಿಯನ್ ಏಕೀಕರಣದ ಮೇಲೆ ಕೇಂದ್ರೀಕರಿಸಿದೆ.


ಪೂರ್ವ ಟಿಮೋರ್

2002ರ ಮೇ 20ರಂದು ರೂಪುಗೊಂಡ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಟಿಮೋರ್- ಲೆಸ್ಟೆ, ಆಗ್ನೇಯ ಏಷ್ಯಾದ ಒಂದು ಸುಂದರವಾದ ದ್ವೀಪ ರಾಷ್ಟ್ರವಾಗಿದೆ.


ಪಲಾವ್

1994ರ ಅಕ್ಟೋಬರ್ 1ರಂದು ಪಲಾವ್ ರಾಷ್ಟ್ರ ಕಾಂಪ್ಯಾಕ್ಟ್ ಆಫ್ ಫ್ರೀ ಅಸೋಸಿಯೇಷನ್ ​​ಅಡಿಯಲ್ಲಿ ಯುನೈಟೆಡ್ ಸ್ಟೇಟ್ಸ್ ನಿಂದ ಸ್ವತಂತ್ರವಾಯಿತು. ಇದು ಸಮುದ್ರದ ಜೀವವೈವಿಧ್ಯತೆ ಮತ್ತು ಪರಿಸರ ಸಂರಕ್ಷಣೆಯಲ್ಲಿನ ಪ್ರಯತ್ನಗಳಿಗೆ ಹೆಸರುವಾಸಿಯಾಗಿದೆ.


ಎರಿಟ್ರಿಯಾ

ಸುದೀರ್ಘ ಸ್ವಾತಂತ್ರ್ಯ ಹೋರಾಟದ ಅನಂತರ 1993ರ ಮೇ 24ರಂದು ಎರಿಟ್ರಿಯಾ ಇಥಿಯೋಪಿಯಾದಿಂದ ಸ್ವಾತಂತ್ರ್ಯ ಪಡೆಯಿತು. ಇದು ಆಡಳಿತ, ಮಾನವ ಹಕ್ಕುಗಳು ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಸವಾಲುಗಳನ್ನು ಎದುರಿಸುತ್ತಿದೆ.


ಜೆಕ್ ಗಣರಾಜ್ಯ

ಜೆಕೊಸ್ಲೊವಾಕಿಯಾದ ಶಾಂತಿಯುತ ವಿಸರ್ಜನೆಯ ಅನಂತರ 1993ರ ಜನವರಿ 1ರಂದು ಜೆಕ್ ರಿಪಬ್ಲಿಕ್ ಅಥವಾ ಜೆಕಿಯಾ ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಿತು. ಪ್ರಾಗ್ ಅದರ ರಾಜಧಾನಿ. ಇದು ವಾಸ್ತುಶಿಲ್ಪದ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ.

ಇದನ್ನೂ ಓದಿ: Sam Pitroda: ಸಾಗರೋತ್ತರ ಕಾಂಗ್ರೆಸ್‌ ಅಧ್ಯಕ್ಷರಾಗಿ ಸ್ಯಾಮ್‌ ಪಿತ್ರೋಡಾ ಮತ್ತೆ ನೇಮಕ; ದಕ್ಷಿಣ ಭಾರತೀಯರನ್ನು ಆಫ್ರಿಕನ್ನರಿಗೆ ಹೋಲಿಸಿದ್ದ ನಾಯಕ


ಸ್ಲೋವಾಕಿಯಾ

ಜೆಕೊಸ್ಲೊವಾಕಿಯಾದ ಇತರ ಅರ್ಧಭಾಗವಾದ ಸ್ಲೋವಾಕಿಯಾ ಕೂಡ 1993ರ ಜನವರಿ 1ರಂದು ಸ್ವಾತಂತ್ರ್ಯವನ್ನು ಗಳಿಸಿತು. ಜೆಕ್ ಗಣರಾಜ್ಯದೊಂದಿಗೆ ಪ್ರತ್ಯೇಕ ರಾಷ್ಟ್ರವಾಯಿತು.


ಕ್ರೊಯೇಷಿಯಾ

ಕ್ರೊಯೇಷಿಯಾ ಗಣರಾಜ್ಯವು 1991ರ ಜೂನ್ 25ರಂದು ಸ್ವಾತಂತ್ರ್ಯವನ್ನು ಘೋಷಿಸಿತು. ಕ್ರೊಯೇಷಿಯಾ ಯುರೋಪ್‌ನಲ್ಲಿ ರೋಮಾಂಚಕ ಪ್ರವಾಸಿ ತಾಣವಾಗಿ ಹೆಚ್ಚು ಜನಪ್ರಿಯವಾಗುತ್ತಿದೆ.

Continue Reading

ಪ್ರವಾಸ

Baby Moon: ಹನಿಮೂನ್‌ನಂತೆ ಬೇಬಿಮೂನ್; ಜನಪ್ರಿಯವಾಗುತ್ತಿರುವ ಹೊಸ ಟ್ರೆಂಡ್!

ಹೊಸ ಕುಟುಂಬದ ಸದಸ್ಯರ ಆಗಮನದ ಮೊದಲು ಮಾಡುವ ಸಣ್ಣ ವಿಶ್ರಾಂತಿಯನ್ನು ಬೇಬಿಮೂನ್ (Baby Moon) ಎಂದು ಕರೆಯಲಾಗುತ್ತದೆ. ಈ ಸಂದರ್ಭ ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖ ಘಟ್ಟವಾಗಿದೆ. ಬದುಕಿನಲ್ಲಿ ಹೊಸ ಅಧ್ಯಯನವೊಂದು ಪ್ರಾರಂಭಿಸುವ ಮೊದಲು ತಯಾರಿ ಮಾಡಿಕೊಳ್ಳಲು ಸಾಕಷ್ಟು ಅವಕಾಶವನ್ನು ಇದು ಸೃಷ್ಟಿ ಮಾಡುತ್ತದೆ ಮತ್ತು ಸುಂದರ ನೆನಪುಗಳನ್ನು ನಮ್ಮದಾಗಿಸುತ್ತದೆ.

VISTARANEWS.COM


on

By

Baby Moon
Koo

ಇತ್ತೀಚಿನ ವರ್ಷಗಳಲ್ಲಿ ಹನಿಮೂನ್‌ನಂತೆ (Honeymoon) ಬೇಬಿಮೂನ್ (Baby Moon) ಕೂಡ ಹೆಚ್ಚು ಪ್ರಚಲಿತದಲ್ಲಿದೆ. ಹೊಸದಾಗಿ ಮದುವೆಯಾದ ದಂಪತಿ ಹನಿಮೂನ್‌ಗೆ ತೆರಳಿದರೆ ಮಗುವಿನ ನಿರೀಕ್ಷೆಯಲ್ಲಿರುವ ಪೋಷಕರು (parents) ಬೇಬಿಮೂನ್‌ಗೆ ತೆರಳುತ್ತಾರೆ. ಗರ್ಭಧಾರಣೆಯ (pregnancy) ಬಳಿಕ ಅಲ್ಲಿ ಇಲ್ಲಿ ಸುತ್ತಾಡುವುದಕ್ಕೆ ನಿರ್ಬಂಧವಿದ್ದರೂ ಸುರಕ್ಷಿತ ಪ್ರಯಾಣದ ಸದುಪಯೋಗ ಪಡೆದುಕೊಂಡು ಹೆಚ್ಚಿನವರು ಬೇಬಿ ಮೂನ್‌ಗಾಗಿ ತೆರಳುತ್ತಿದ್ದಾರೆ.

bipasha basu and karan grover
ಬಿಪಾಶಾ ಬಸು ಮತ್ತು ಕರಣ್ ಗ್ರೋವರ್

ಬೇಬಿಮೂನ್ ಎಂದರೇನು?

ಮಗುವಿನ ನಿರೀಕ್ಷೆಯಲ್ಲಿರುವ ಪೋಷಕರು ಸಂಭ್ರಮ ಮತ್ತು ವಿಶ್ರಾಂತಿಗಾಗಿ ಪ್ರವಾಸ ಹೋಗುವುದನ್ನು ಬೇಬಿ ಮೂನ್ ಎಂದು ಕರೆಯಲಾಗುತ್ತದೆ. ಇದು ಇತ್ತೀಚಿನ ಟ್ರೆಂಡ್. ಮಗು ಹುಟ್ಟುವ ಮೊದಲು ಪ್ರವಾಸದ ಕಲ್ಪನೆಯು ವಿವಿಧ ಸಂಸ್ಕೃತಿಗಳಲ್ಲಿ ಬಹಳ ಹಿಂದಿನಿಂದಲೇ ಆಚರಣೆ ಮಾಡಲಾಗುತ್ತದೆ. ಈಗ ಇದನ್ನು ಪ್ರಪಂಚದಾದ್ಯಂತ ಪಾಲಿಸಲಾಗುತ್ತಿದೆ. ಬೇಬಿ ಮೂನ್ ಗಾಗಿ ಕೆಲವು ರೆಸಾರ್ಟ್‌ಗಳು ವಿಶೇಷ ಪ್ಯಾಕೇಜ್‌ಗಳನ್ನು ನೀಡುತ್ತಿದೆ. ಸ್ವಯಂ-ಆರೈಕೆಗೆ ಹೆಚ್ಚು ಒತ್ತು ನೀಡುವುದು ಇದರ ಆದ್ಯತೆಯಾಗಿದೆ. ಪೋಷಕರಿಗೆ ತಮ್ಮ ಸಂಬಂಧಗಳನ್ನು ಬಲಪಡಿಸಲು ಇದು ಅಮೂಲ್ಯ ಕ್ಷಣಗಳನ್ನು ಒದಗಿಸುತ್ತದೆ.

alia bhatt and ranbir kapoor
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್

ಬೇಬಿ ಮೂನ್ ಪ್ರಾಮುಖ್ಯತೆ ಏನು?

ಗರ್ಭಾವಸ್ಥೆಯ ದೈಹಿಕ ಮತ್ತು ಭಾವನಾತ್ಮಕ ಸವಾಲುಗಳ ನಡುವೆ ವಿಶ್ರಾಂತಿ ಮತ್ತು ಪುನರ್ಯೌವನಗೊಳಿಸುವಿಕೆಗೆ ನಿರ್ಣಾಯಕ ಅವಕಾಶವನ್ನು ಒದಗಿಸುವ ಮೂಲಕ ಬೇಬಿಮೂನ್ ಮಗುವಿನ ನಿರೀಕ್ಷೆಯಲ್ಲಿರುವ ನಿರೀಕ್ಷಿತ ದಂಪತಿಗೆ ಅಪಾರ ಪ್ರಾಮುಖ್ಯತೆಯನ್ನು ಹೊಂದಿದೆ. ಪೋಷಕರಾಗಲು ಸಿದ್ಧತೆ ಮಾಡಿಕೊಳ್ಳಲು ಇದು ಅವಕಾಶ ನೀಡುತ್ತದೆ. ಮಗುವಿನ ಜನನ ಯೋಜನೆಗಳು ಮತ್ತು ಶಿಶುಪಾಲನಾ ವ್ಯವಸ್ಥೆಗಳ ಕುರಿತು ಚರ್ಚೆ, ಸನ್ನದ್ಧತೆ ಮತ್ತು ಏಕತೆಯ ಪ್ರಜ್ಞೆಯನ್ನು ಇದು ಬೆಳೆಸುತ್ತವೆ. ಅಲ್ಲದೇ ಇದು ತಮ್ಮ ಜೀವನದ ಮುಂದಿನ ಅಧ್ಯಾಯವನ್ನು ಪ್ರಾರಂಭಿಸುವ ಮೊದಲು ಅವರ ಬಂಧವನ್ನು ಬಲಪಡಿಸಲು ಮತ್ತು ಅವರ ಹುಟ್ಟಲಿರುವ ಮಗುವಿನೊಂದಿಗೆ ಪ್ರೀತಿ ಮತ್ತು ಸಂಪರ್ಕದ ಅಡಿಪಾಯವನ್ನು ಹಾಕಲು, ಪಾಲಿಸಬೇಕಾದ ಕರ್ತವ್ಯಗಳ ಬಗ್ಗೆ ತಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಚರ್ಚಿಸಲು ಅಮೂಲ್ಯವಾದ ಅವಕಾಶವನ್ನು ನೀಡುತ್ತದೆ.

ishita dutta and vatsal sheth
ಇಶಿತಾ ದತ್ತಾ ಮತ್ತು ವತ್ಸಲ್ ಶೇತ್

ಮಾನಸಿಕ ಪ್ರಯೋಜನಗಳು

ಬೇಬಿಮೂನ್ ಮಗುವಿನ ನಿರೀಕ್ಷೆಯಲ್ಲಿರುವ ಪೋಷಕರಿಗೆ ಮಾನಸಿಕ ಪ್ರಯೋಜನಗಳನ್ನು ನೀಡುತ್ತದೆ. ಒತ್ತಡದಿಂದ ವಿರಾಮವನ್ನು ಒದಗಿಸುತ್ತದೆ. ದಂಪತಿ ತಮ್ಮ ಮಗುವಿನ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಲು ಅನುವು ಮಾಡಿಕೊಡುತ್ತದೆ. ತಾಯಿಯ ಯೋಗಕ್ಷೇಮವನ್ನು ಉತ್ತೇಜಿಸುತ್ತದೆ ಮತ್ತು ಮಗುವಿಗೆ ಶಾಂತ ವಾತಾವರಣವನ್ನು ನೀಡುತ್ತದೆ. ಆತಂಕಗಳನ್ನು ಪರಿಹರಿಸಲು ಮತ್ತು ಭಾವನೆಗಳನ್ನು ಹಂಚಿಕೊಳ್ಳಲು ಪೋಷಕರಿಗೆ ಭರವಸೆ ಮತ್ತು ವಿಶ್ವಾಸವನ್ನು ತುಂಬಲು ಇದು ಸಹಕರಿಸುತ್ತದೆ. ಬೇಬಿ ಮೂನ್ ಸಮಯದಲ್ಲಿ ಪೇರೆಂಟ್ ಹುಡ್ ಅನ್ನು ನಿರೀಕ್ಷಿಸುವುದು ದಂಪತಿಯ ಉತ್ಸಾಹವನ್ನು ಸಕಾರಾತ್ಮಕ ಅನುಭವಗಳಾಗಿ ಪರಿವರ್ತಿಸಲು ಅನುವು ಮಾಡಿಕೊಡುತ್ತದೆ. ಇದರಿಂದ ತಾಯಿಯ ಸಂಪೂರ್ಣ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ. ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ನಿರೀಕ್ಷೆಯನ್ನು ಉತ್ತೇಜಿಸುತ್ತದೆ.

ಸಂಬಂಧಗಳನ್ನು ಬಲಪಡಿಸುವುದು

ಬೇಬಿಮೂನ್ ಸಮಯದಲ್ಲಿ ಕುಟುಂಬದ ಬಂಧ ಬಲವಾಗುತ್ತದೆ. ನಿರೀಕ್ಷಿತ ಪೋಷಕರಿಗೆ ಸಹಾಯ, ಮಾರ್ಗದರ್ಶನ ಮತ್ತು ಭಾವನಾತ್ಮಕ ಬೆಂಬಲವನ್ನು ನೀಡಲು ಇದು ಸಹಾಯ ಮಾಡುತ್ತದೆ. ಈ ವಿಶೇಷ ಸಂದರ್ಭದಲ್ಲಿ ಒಟ್ಟಿಗೆ ಸಮಯ ಕಳೆಯುವುದು, ಮುಕ್ತ ಸಂವಹನ ಮತ್ತು ಕುಟುಂಬಕ್ಕೆ ಮುಂಬರುವ ಮಗುವಿನ ಸೇರ್ಪಡೆಗಾಗಿ ಉತ್ಸಾಹ ಮತ್ತು ನಿರೀಕ್ಷೆಯನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ. ಮಗುವಿನ ನಿರೀಕ್ಷೆಯಲ್ಲಿರುವ ದಂಪತಿಗೆ ತಮ್ಮ ಬೆಂಬಲ ಮತ್ತು ಬದ್ಧತೆಯನ್ನು ಪುನರುಚ್ಚರಿಸುವ ಸಮಯವಾಗಿ ಇದು ಕಾರ್ಯನಿರ್ವಹಿಸುತ್ತದೆ. ದಂಪತಿಯ ಸಂಬಂಧವನ್ನು ಬಲಪಡಿಸುತ್ತದೆ.

shriya saran and Andrei Koscheev
ಶ್ರಿಯಾ ಸರನ್ ಮತ್ತು ಆಂಡ್ರೇ ಕೊಸ್ಚೆವ್

ಬೇಬಿ ಮೂನ್ ಯೋಜನೆ

ಬೇಬಿಮೂನ್ ಅನ್ನು ಯೋಜಿಸಲು ಪ್ರಯಾಣವನ್ನು ಪ್ರಾರಂಭಿಸುವಾಗ ಪ್ರತಿ ತಿರುವಿನಲ್ಲಿ ವಿಶ್ರಾಂತಿ ಮತ್ತು ಸೌಕರ್ಯಗಳಿಗೆ ಆದ್ಯತೆ ನೀಡುವುದು ಅತ್ಯಗತ್ಯ. ನಿರೀಕ್ಷಿತ ಪೋಷಕರ ಅಗತ್ಯತೆಗಳನ್ನು ಪೂರೈಸುವ ಗಮ್ಯಸ್ಥಾನ ಮತ್ತು ವಸತಿಗಳನ್ನು ಆಯ್ಕೆ ಮಾಡುವುದರೊಂದಿಗೆ ಇದು ಪ್ರಾರಂಭವಾಗುತ್ತದೆ. ವಿಶ್ರಾಂತಿಗೆ ಅನುಕೂಲಕರವಾದ ಪ್ರಶಾಂತ ಪರಿಸರವನ್ನು ಒದಗಿಸುವ ಸ್ಥಳಗಳನ್ನು ಆರಿಸಿಕೊಳ್ಳಿ. ಅದು ಶಾಂತವಾದ ಬೀಚ್‌ಸೈಡ್ ರಿಟ್ರೀಟ್, ಸ್ನೇಹಶೀಲ ಪರ್ವತ ಕ್ಯಾಬಿನ್ ಅಥವಾ ಐಷಾರಾಮಿ ಸ್ಪಾ ರೆಸಾರ್ಟ್ ಹೀಗೆ.. ಯಾವುದಾದರೊಂದನ್ನು ಆಯ್ಕೆ ಮಾಡಬಹುದು. ಪ್ರಯಾಣದ ಅಪಾಯ ಮತ್ತು ಗರ್ಭಧಾರಣೆಯ ಹಂತವನ್ನು ಆಧರಿಸಿ ಮುನ್ನೆಚ್ಚರಿಕೆಗಳ ಬಗ್ಗೆ ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸಿ. ದೂರದ ಪ್ರಯಾಣ ಮಾಡಲು ಸಾಧ್ಯವಾಗದವರಿಗೆ ಅಥವಾ ಮನೆಯ ಹತ್ತಿರ ಇರಲು ಇಷ್ಟಪಡುವವರಿಗೆ ಸ್ಮರಣೀಯ ಬೇಬಿಮೂನ್ ಅನುಭವವನ್ನು ರಚಿಸಲು ಇನ್ನೂ ಸಾಕಷ್ಟು ಆಯ್ಕೆಗಳಿವೆ. ಬಜೆಟ್ ಸ್ನೇಹಿ ಸ್ಥಳೀಯ ವಿಹಾರಗಳನ್ನು ಅನ್ವೇಷಿಸಿ.

deepika padukone and ranbir kapoor
ದೀಪಿಕಾ ಪಡುಕೋಣೆ ಮತ್ತು ರಣಬೀರ್ ಕಪೂರ್

ಬೇಬಿಮೂನ್‌ಗೆ ನವೀನ ಯೋಜನೆ

ಬೇಬಿಮೂನ್ ಪ್ರಯಾಣದಲ್ಲಿನ ಅನುಭವ ಹೆಚ್ಚಿಸಲು ಕೆಲವು ಟ್ರಾವೆಲ್ ಕಂಪೆನಿಗಳು ಈಗ ನವೀನ ಸೇವೆಗಳು ಮತ್ತು ಪ್ಯಾಕೇಜ್‌ಗಳನ್ನು ನಿರೀಕ್ಷಿತ ಪೋಷಕರ ಅಗತ್ಯಗಳಿಗೆ ಅನುಗುಣವಾಗಿ ನೀಡುತ್ತವೆ. ವಿಶೇಷ ಸೌಕರ್ಯ, ಪ್ರಸವಪೂರ್ವ ಆರೈಕೆ ಆಯ್ಕೆ ಮತ್ತು ವಿಶ್ರಾಂತಿ-ಕೇಂದ್ರಿತ ಚಟುವಟಿಕೆಗಳನ್ನು ಒದಗಿಸುತ್ತವೆ.

ಇದನ್ನೂ ಓದಿ: Solo Trip: ಒಂಟಿಯಾಗಿ ಪ್ರವಾಸ ಹೊರಡುವ ಯೋಚನೆಯೇ? ಹಾಗಿದ್ದರೆ ಇಲ್ಲಿಗೊಮ್ಮೆ ಭೇಟಿ ನೀಡಿ!

ಸ್ವಯಂ ಕಾಳಜಿ ಆದ್ಯತೆಯಾಗಿರಲಿ

ನಿರೀಕ್ಷಿತ ತಾಯಂದಿರ ಯೋಗಕ್ಷೇಮವನ್ನು ಉತ್ತೇಜಿಸಲು ಬೇಬಿ ಮೂನ್ ಅನುಭವದಲ್ಲಿ ಸ್ವಯಂ-ಆರೈಕೆಯನ್ನು ಸೇರಿಸುವುದು ನಿರ್ಣಾಯಕವಾಗಿದೆ. ಗರ್ಭಾವಸ್ಥೆಯು ದೈಹಿಕ ಅಸ್ವಸ್ಥತೆ, ಹಾರ್ಮೋನುಗಳ ಬದಲಾವಣೆಗಳು ಮತ್ತು ಹೆಚ್ಚಿನ ಒತ್ತಡದ ಮಟ್ಟವನ್ನು ಉಂಟು ಮಾಡಬಹುದು. ಈ ವಿಶೇಷ ಸಮಯದಲ್ಲಿ ತಾಯಿ ಮತ್ತು ಮಗುವಿನ ಯೋಗಕ್ಷೇಮಕ್ಕೆ ಆದ್ಯತೆ ನೀಡುವುದು ಅತ್ಯಗತ್ಯ. ಪ್ರಸವಪೂರ್ವ ಮಸಾಜ್‌ಗಳು ಮತ್ತು ಧ್ಯಾನದಂತಹ ವಿಶ್ರಾಂತಿ ತಂತ್ರಗಳಿಗೆ ಆದ್ಯತೆ ನೀಡುವುದರಿಂದ ಒತ್ತಡವನ್ನು ನಿವಾರಿಸಬಹುದು ಮತ್ತು ಗರ್ಭಾವಸ್ಥೆಯಲ್ಲಿ ಒಟ್ಟಾರೆ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಪ್ರಸವಪೂರ್ವ ಮಸಾಜ್‌ಗಳು ಗರ್ಭಿಣಿಯರಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತವೆ. ಅವರು ಸ್ನಾಯುವಿನ ಒತ್ತಡವನ್ನು ನಿವಾರಿಸಲು, ಕಾಲು ಮತ್ತು ಪಾದಗಳಲ್ಲಿ ಊತವನ್ನು ಕಡಿಮೆ ಮಾಡಲು, ಬೆನ್ನುನೋವು ಮತ್ತು ಕೀಲು ನೋವನ್ನು ನಿವಾರಿಸಲು ಮತ್ತು ರಕ್ತಪರಿಚಲನೆಯನ್ನು ಸುಧಾರಿಸಲು ಇದು ಸಹಾಯ ಮಾಡಬಹುದು. ಗರ್ಭಾವಸ್ಥೆಯಲ್ಲಿ ಮತ್ತು ಬೇಬಿಮೂನ್ ಸಮಯದಲ್ಲಿ ಸ್ವಯಂ-ಆರೈಕೆಯನ್ನು ಉತ್ತೇಜಿಸಲು ಧ್ಯಾನವು ಮತ್ತೊಂದು ಪ್ರಬಲ ಸಾಧನವಾಗಿದೆ. ಇದು ನಿರೀಕ್ಷಿತ ತಾಯಂದಿರಿಗೆ ತಮ್ಮ ಮನಸ್ಸನ್ನು ಶಾಂತಗೊಳಿಸಲು, ಆತಂಕವನ್ನು ಕಡಿಮೆ ಮಾಡಲು ಮತ್ತು ಆಂತರಿಕ ಶಾಂತಿಯ ಭಾವವನ್ನು ಬೆಳೆಸಲು ಅನುವು ಮಾಡಿಕೊಡುತ್ತದೆ.

Continue Reading
Advertisement
T20 World Cup 2024 prize money
ಕ್ರೀಡೆ14 mins ago

T20 World Cup 2024 Prize Money:ಚಾಂಪಿಯನ್​ ಭಾರತ ತಂಡಕ್ಕೆ ಸಿಕ್ಕ ಬಹುಮಾನ ಮೊತ್ತವೆಷ್ಟು?

Text Book
ಕರ್ನಾಟಕ14 mins ago

Text Book: ರಾಜ್ಯ ಪಠ್ಯಕ್ರಮದ ವಿರುದ್ಧ ವೀರಶೈವ ಮಠಾಧೀಶರ ಅಸಮಾಧಾನ; ಸಿಎಂಗೆ ಪತ್ರ

Virat Kohli video calls Anushka Sharma after winning
ಬಾಲಿವುಡ್15 mins ago

Virat Kohli: ವಿಶ್ವಕಪ್ ಗೆದ್ದ ನಂತರ ಅನುಷ್ಕಾ ಶರ್ಮಾಗೆ ವಿಡಿಯೊ ಕಾಲ್‌ ಮಾಡಿ ಫ್ಲೈಯಿಂಗ್ ಕಿಸ್‌ ಕೊಟ್ಟ ವಿರಾಟ್ ಕೊಹ್ಲಿ!

Sabja Seeds Benefits
ಆರೋಗ್ಯ18 mins ago

Sabja Seeds Benefits: ಸಬ್ಜಾ ಬೀಜವನ್ನು ನೆನೆಹಾಕಿ ಸೇವಿಸಿದರೆ ಹಲವು ಆರೋಗ್ಯ ಸಮಸ್ಯೆ ದೂರ

Physical Abuse
ಚಿಕ್ಕಬಳ್ಳಾಪುರ26 mins ago

Physical Abuse : ಆಟವಾಡುತ್ತಿದ್ದ 6 ವರ್ಷದ ಬಾಲಕಿ ಮೇಲೆ 17 ವರ್ಷದ ಬಾಲಕನಿಂದ ಅತ್ಯಾಚಾರ

Mann Ki Baat
ದೇಶ36 mins ago

Mann Ki Baat: ನಾಲ್ಕು ತಿಂಗಳ ನಂತರ ಮೋದಿ ʼಮನ್‌ ಕೀ ಬಾತ್‌ʼ; Live ಲಿಂಕ್ ಇಲ್ಲಿದೆ

Rahul Dravid
ಕ್ರೀಡೆ37 mins ago

Rahul Dravid: ನಾಯಕನಾಗಿ ಸೋಲಿನ ಅವಮಾನ ಎದುರಿಸಿದ್ದ ಮೈದಾನದಲ್ಲೇ ಕೋಚ್​ ಆಗಿ ವಿಶ್ವಕಪ್​ ಎತ್ತಿ ಹಿಡಿದ ದ್ರಾವಿಡ್

Shiva Rajkumar Tweet About India's T20 Victory about rahul
ಕ್ರಿಕೆಟ್48 mins ago

Shiva Rajkumar: ರಾಹುಲ್ ದ್ರಾವಿಡ್ ಫೋಟೊ ಶೇರ್‌ ಮಾಡಿ ‘ಗೋಡೆ’ ಮೇಲೆ ವರ್ಲ್ಡ್ ಕಪ್ ಇಡೋರ್ ಆಗ್ಬೇಕು ಎಂದ ಶಿವಣ್ಣ

T20 World Cup 2024 Anushka Sharma reveals Vamika biggest concern
ಕ್ರಿಕೆಟ್1 hour ago

T20 World Cup 2024: ಟೀಮ್​ ಇಂಡಿಯಾ ಗೆದ್ದ ಬಳಿಕ ವಿರಾಟ್‌- ಅನುಷ್ಕಾ ಮಗಳ ವಿಶೇಷ ಕಾಳಜಿ ಏನಾಗಿತ್ತು?

T20 World Cup final
ಕ್ರೀಡೆ1 hour ago

T20 World Cup final: ತ್ರಿವರ್ಣ ಧ್ವಜ ಹಿಡಿದು ಜಮ್ಮು-ಕಾಶ್ಮೀರದಲ್ಲಿ ಮೊಳಗಿದ ವಿಜಯೋತ್ಸವ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ18 hours ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ1 day ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ2 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ3 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು3 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ3 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ6 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

ಟ್ರೆಂಡಿಂಗ್‌