Eating Style: ಉಣ್ಣುವ ರೀತಿ ನಾವು ಎಂಥವರು ಎನ್ನುವುದನ್ನು ಬಯಲು ಮಾಡುತ್ತದೆ! ಅದು ಹೇಗೆ? - Vistara News

ಲೈಫ್‌ಸ್ಟೈಲ್

Eating Style: ಉಣ್ಣುವ ರೀತಿ ನಾವು ಎಂಥವರು ಎನ್ನುವುದನ್ನು ಬಯಲು ಮಾಡುತ್ತದೆ! ಅದು ಹೇಗೆ?

ನಮ್ಮ ಹಲವಾರು (Eating Style) ಅಭ್ಯಾಸಗಳಿಂದ, ಕೈಯ ರೇಖೆಗಳಿಂದ, ನಡೆಯುವ ವಿಧಾನದಿಂದ, ಬೆರಳಿನ ಉದ್ದದಿಂದ, ದೇಹದ ಆಕಾರದಿಂದ, ಬರೆಯುವ ಶೈಲಿಯಿಂದ, ಹಸ್ತಾಕ್ಷರದಿಂದ ಹೀಗೆ ಹಲವಾರು ವಿಧಾನಗಳಿಂದ ಪ್ರತಿಯೊಬ್ಬರ ವ್ಯಕ್ತಿತ್ವ, ಭವಿಷ್ಯ ಇತ್ಯಾದಿಗಳನ್ನು ಲೆಕ್ಕಾಚಾರ ಹಾಕುವ ವಿಧಾನವಿದೆ. ಆದರೆ ಉಣ್ಣುವ ವಿಧಾನದಿಂದಲೂ ನಿಮ್ಮ ವ್ಯಕ್ತಿತ್ವವನ್ನು ಅಳೆಯಬಹುದು ಎಂಬುದು ತಿಳಿದಿದೆಯೇ? ಹೌದು, ನೀವು ಹೇಗೆ ಉಣ್ಣುತ್ತೀರಿ ಎಂಬುದನ್ನು ಆಧರಿಸಿಯೂ ನಿಮ್ಮ ವ್ಯಕ್ತಿತ್ವ ಹೀಗೆ ಎಂದು ಹೇಳಬಹುದಂತೆ! ಈ ಬಗ್ಗೆ ಈ ಲೇಖನ (Eating Style) ಓದಿ.

VISTARANEWS.COM


on

Eating Style
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಒಬ್ಬ ವ್ಯಕ್ತಿತ್ವ ಒಟ್ಟಾರೆ (Eating Style) ಹೇಗೆ ಎಂದು ತಿಳಿಯಲು ಹಲವಾರು ಮಾನದಂಡಗಳಿರುತ್ತವೆ. ಒಮ್ಮೆ ಒಬ್ಬ ವ್ಯಕ್ತಿಯನ್ನು ಭೇಟಿಯಾದ ತಕ್ಷಣ ಈತ ಹೀಗೆಯೇ ಎಂದು ನಾವು ಹೇಳಲಾಗುವುದಿಲ್ಲ. ಒಂದಿಷ್ಟು ಕಾಲ ಜೊತೆಗೆ ಪಳಗಬೇಕು. ಆದರೆ, ವ್ಯಕ್ತಿತ್ವ ಹೀಗೆ ಎಂದು ಹೇಳಲು ಜ್ಯೋತಿಷ್ಯ ಸೇರಿದಂತೆ ಹಲವಾರು ವಿಧಾನಗಳಿವೆ. ನಮ್ಮ ಹಲವಾರು ಅಭ್ಯಾಸಗಳಿಂದ, ಕೈಯ ರೇಖೆಗಳಿಂದ, ನಡೆಯುವ ವಿಧಾನದಿಂದ, ಬೆರಳಿನ ಉದ್ದದಿಂದ, ದೇಹದ ಆಕಾರದಿಂದ, ಬರೆಯುವ ಶೈಲಿಯಿಂದ, ಹಸ್ತಾಕ್ಷರದಿಂದ ಹೀಗೆ ಹಲವಾರು ವಿಧಾನಗಳಿಂದ ಪ್ರತಿಯೊಬ್ಬರ ವ್ಯಕ್ತಿತ್ವ, ಭವಿಷ್ಯ ಇತ್ಯಾದಿಗಳನ್ನು ಲೆಕ್ಕಾಚಾರ ಹಾಕುವ ವಿಧಾನವಿದೆ. ಆದರೆ ಉಣ್ಣುವ ವಿಧಾನದಿಂದಲೂ ನಿಮ್ಮ ವ್ಯಕ್ತಿತ್ವವನ್ನು ಅಳೆಯಬಹುದು ಎಂಬುದು ತಿಳಿದಿದೆಯೇ? ಹೌದು, ನೀವು ಹೇಗೆ ಉಣ್ಣುತ್ತೀರಿ ಎಂಬುದನ್ನು ಆಧರಿಸಿಯೂ ನಿಮ್ಮ ವ್ಯಕ್ತಿತ್ವ ಹೀಗೆ ಎಂದು ಹೇಳಬಹುದಂತೆ. ಬನ್ನಿ, ಈ ಕೆಳಗಿನವರಲ್ಲಿ ನೀವು ಯಾವುದನ್ನು ಹೋಲುತ್ತೀರಿ ಎಂದು ಕಂಡುಕೊಳ್ಳಿ.

Family eating lunch

ನಿಧಾನವಾಗಿ ಉಣ್ಣುವವರು

ನಮ್ಮ ಪರಿಚಿತ ವರ್ಗದಲ್ಲಿ, ಸ್ನೇಹವರ್ಗದ ಗುಂಪಿನಲ್ಲಿ ಕೆಲವರಿರುತ್ತಾರೆ. ಅವರು ನಿಧಾನವಾಗಿ ಉಣ್ಣುವವರು. ಜೊತೆಗೆ ಕೂತರೆ, ಎಲ್ಲರೂ ಉಂಡ ನಂತರ ಕೊನೆಯಲ್ಲಿ ಊಟ ಮುಗಿಸಿ ಏಳುವವರು. ನಿಧಾನವಾಗಿ ಉಣ್ಣುವವರು ಯಾವಾಗಲೂ ಸವಿದು, ಪ್ರತಿ ತುತ್ತನ್ನೂ ಅನುಭವಿಸಿ ಉಣ್ಣುತ್ತಾರೆ. ಜೊತೆಯಲ್ಲಿ ಒಂದಿಷ್ಟು ಹರಟುತ್ತಾರೆ. ಎಲ್ಲಿಯದೋ ಸುದ್ದಿಯನ್ನು ಚಪ್ಪರಿಸಿ ಮಾತನಾಡುವ ಜೊತೆಗೆ ಊಟದಲ್ಲೂ ಮಾತಿನಲ್ಲೂ ಕಳೆದು ಹೋಗುತ್ತಾರೆ. ಬೇಗ ಉಣ್ಣುವುದೆಂದರೆ ಇವರಿಗೆ ಆಗದು. ಬೇಗ ಉಂಡರೆ ಸುಸ್ತಾಗಿಬಿಡುವ ಇವರು ಬಹಳ ಆತ್ಮವಿಶ್ವಾಸ ಉಳ್ಳವರು. ಆದರೆ ಪ್ರದರ್ಶನ, ಶೋಆಫ್‌ ಇವರಿಗೆ ಇಷ್ಟವಾಗದು. ನಾಯಕತ್ವ ಗುಣವೂ ಇವರಿಗಿದ್ದು, ಅಂತಹ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ. ಆದರೆ, ತಮ್ಮದೇ ಆದ ಸಮಯವನ್ನು ಇಷ್ಟಪಡುವವರು.

ಬೇಗ ಉಣ್ಣುವವರು

ಬೇಗ ಉಣ್ಣುವವರು ಯಾವಾಗಲೂ ಉಳಿದವರು ಅರ್ಧ ಉಂಡು ಮುಗಿಸುವಷ್ಟರಲ್ಲಿ ತಮ್ಮ ಊಟವನು ಮುಗಿಸಿರುತ್ತಾರೆ. ಇಂತಹ ಮಂದಿ ಯಾವಾಗಲೂ ಇನ್ನಷ್ಟು ಬೇಕು ಎಂಬ ಹಸಿವಿನಿಂದ ಕೂಡಿರುವ ವ್ಯಕ್ತಿತ್ವ ಉಳ್ಳವರು. ಬಹಳ ಮಹತ್ವಾಕಾಂಕ್ಷೆಯಿರುವ ಈ ಮಂದಿ ಸದಾ ಕೆಲಸ ಮಾಡಿಕೊಂಡಿರುವವರು. ಅವರು ಸಮಯಕ್ಕೆ ಬಹಳ ಮಹತ್ವ ಕೊಡುತ್ತಾರೆ. ಹಾಗೂ ಕೆಲವೊಮ್ಮೆ ತಮ್ಮ ಸಂತೋಷದ ಕ್ಷಣವನ್ನೂ ಬದಿಗೊತ್ತಿಬಿಡುವ ಗುಣದವರು.

Indian girl eating rice

ಕುತೂಹಲದಿಂದ ಉಣ್ಣುವವರು

ಸದಾ ಹೊಸ ಬಗೆಯ ಊಟಕ್ಕೆ, ಹೊಸ ಅಡುಗೆಯ ಬಗ್ಗೆ ಕುತೂಹಲ ಉಳಿಸಿಕೊಂಡಿರುವವರು. ಹೊಸದರ ಅನ್ವೇಷಣೆಯಲ್ಲಿರುವ, ಹೊಸತನಕ್ಕೆ ತುಡಿಯುವ ಮನಸ್ಥಿತಿಯ ಮಂದಿ ಇವರು. ಬಗೆಬಗೆಯ ಕಾಂಬಿನೇಶನ್‌ಗಳಲ್ಲಿ ಆಹಾರವನ್ನು ತಿಂದು ನೋಡುವ, ಹೊಸತನ್ನು ಟ್ರೈ ಮಾಡುವ ಮಂದಿ ಇವರು. ಇಂತಹ ಮಂದಿ ಹೃದಯ ಶ್ರೀಮಂತಿಕೆಯ ಮಂದಿ. ಜೀವನವನ್ನು ಚೆನ್ನಾಗಿ ಅನುಭವಿಸಬೇಕು, ಸುಖವಾಗಿ ಇರಬೇಕು ಎಂದು ಆ ಕ್ಷಣದ ಸುಖವನ್ನು ಅನುಭವಿಸುವವರು. ತಮ್ಮ ಕಂಫರ್ಟ್‌ ಝೋನ್‌ನಿಂದ ಹೊರಗೆ ಹೋಗುವುದಕ್ಕೆ ಇವರು ಹಿಂದೆಮುಂದೆ ನೋಡಲಾರರು.

ಇದನ್ನೂ ಓದಿ: Benefits of Poppy Seeds: ಗಸೆಗಸೆ ನಿದ್ದೆಗಷ್ಟೇ ಅಲ್ಲ, ಪೌಷ್ಟಿಕಾಂಶಗಳ ಆಗರವೂ ಹೌದು!

ಆಯ್ದು ತಿನ್ನುವವವರು

ಇಂತಹ ಮಂದಿ ಏನೇ ಕೊಟ್ಟರೂ ಅದರಲ್ಲಿ ಒಂದಿಷ್ಟು ಆಹಾರವನ್ನು ಎತ್ತಿಡುತ್ತಾರೆ. ಒಂದಿಷ್ಟನ್ನು ಮಾತ್ರ ಹೆಕ್ಕಿ ತಿಂದು ಉಳಿದುದನ್ನು ತಟ್ಟೆಯಲ್ಲಿ ಹಾಗೆಯೇ ಬಿಟ್ಟು ಏಳುತ್ತಾರೆ. ಈ ಮಂದಿ ಎಲ್ಲೇ ಹೋದರೂ ಒಂದಿಷ್ಟು ಬಗೆಯ ಆಹಾರವನ್ನು ಮಾತ್ರ ತಿನ್ನುತ್ತಾರೆ. ಇಂಥವರು ಆಹಾರದಲ್ಲಿ ಪ್ರಯೋಗಶೀಲ ಮನಸ್ಸನ್ನು ಹೊಂದಿರುವುದಿಲ್ಲ. ಹೊಸತನ್ನು ಟ್ರೈ ಮಾಡಲು ಅತೀವ ಆಸಕ್ತಿ ಇರುವುದಿಲ್ಲ. ಇಂತಹ ಮಂದಿ ಜೀವನದಲ್ಲಿ ನಿರ್ಧಿಷ್ಟ ಗುರಿಯನ್ನು ಹೊಂದಿರುತ್ತಾರೆ. ಆದರೆ, ಅತಿಯಾದ ಯೋಚನೆ, ಅತಿಯಾದ ಪ್ಲಾನಿಂಗ್‌ ಇವರು ಮಾಡುವುದಿಲ್ಲ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

International Mud Day: ಆರೋಗ್ಯ, ಸೌಂದರ್ಯದ ಪಾಲಿಗೆ ಹೊನ್ನು ಈ ಮಣ್ಣು!

International Mud Day: ಇಂದು ಅಂತಾರಾಷ್ಟ್ರೀಯ ಮಣ್ಣಿನ ದಿನ. ಮಣ್ಣು ಮುಕ್ಕುವುದೆಂದರೆ ಸೋಲುವ, ಮಣ್ಣೆರಚುವುದೆಂದರೆ ಹಾಳು ಮಾಡುವುದೆಂದೇ ಭಾವಿಸುವ ನಮಗೆ, ಮಣ್ಣಿನ ಸಾಂಗತ್ಯದಿಂದ ಬದುಕಿನಲ್ಲಿ ಆಗುವ ಧನಾತ್ಮಕ ಪರಿಣಾಮವನ್ನು ಅರಿಯುವುದಕ್ಕೆ ಇಂಥ ದಿನಗಳು ಅನುವು ಮಾಡಿಕೊಡುತ್ತವೆ.

VISTARANEWS.COM


on

International Mud Day
Koo

ಇಂದು ಅಂತಾರಾಷ್ಟ್ರೀಯ ಮಣ್ಣಿನ ದಿನ (International Mud Day). ಇತ್ತೀಚೆಗೆ ಮಣ್ಣಿನ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳ ಸುದ್ದಿಯನ್ನೇ ಕೇಳುತ್ತಿರುವ ನಮಗೆ ಮಣ್ಣಿನ ದಿನವೆಂದರೆ ಕಣ್‌ ಬಿಡುವಂತಾಗುವುದು ಸಹಜ. ಅಥವಾ ಎಂದಾದರೂ ಮಣ್ಣಲ್ಲಿ ಮಣ್ಣಾಗಿ ಹೋಗುವಂಥ ಆಧ್ಯಾತ್ಮದ ಬಗ್ಗೆ ಯೋಚಿಸಲೂ ಬಹುದು. ಇಂಥ ಯಾವ ವಿಷಯಕ್ಕೂ ಅಲ್ಲ, ಮಣ್ಣಾಟ ಆಡುವುದರಲ್ಲಿರುವ ಸೊಗಸನ್ನು ಎತ್ತಿ ಹಿಡಿಯುವ ಉದ್ದೇಶ ಈ ದಿನಕ್ಕಿದೆಯಂತೆ. ಮಣ್ಣು ಮುಕ್ಕುವುದೆಂದರೆ ಸೋಲುವ, ಮಣ್ಣೆರಚುವುದೆಂದರೆ ಹಾಳು ಮಾಡುವುದೆಂದೇ ಭಾವಿಸುವ ನಮಗೆ, ಮಣ್ಣಿನ ಸಾಂಗತ್ಯದಿಂದ ಬದುಕಿನಲ್ಲಿ ಆಗುವ ಧನಾತ್ಮಕ ಪರಿಣಾಮವನ್ನು ಅರಿಯುವುದಕ್ಕೆ ಇಂಥ ದಿನಗಳು ಅನುವು ಮಾಡಿಕೊಡುತ್ತವೆ. ಮಣ್ಣೆಂದರೆ ಕೃಷಿ ಎನ್ನುವ ಜನಪ್ರಿಯ ಕಲ್ಪನೆಯೇ ಮನಸ್ಸಿಗೆ ಬರುತ್ತದೆ. ಅದು ನಿಜವೂ ಹೌದು. ಅದಲ್ಲದೆ ಮಣ್ಣಿನ ಮಡಿಕೆಗಳಲ್ಲಿ ಆಹಾರ ಬೇಯಿಸುತ್ತಿದ್ದ ದಿನಗಳಿಂದ ಹಿಡಿದು ಮಣ್ಣನ್ನು ಔಷಧಿಯಾಗಿ ಉಪಯೋಗಿಸುವವರೆಗೆ ಬಹಳಷ್ಟು ಬಗೆಯಲ್ಲಿ ಮಣ್ಣಿನೊಂದಿಗೆ ನಮಗೆ ನಂಟಿದೆ. ಮಣ್ಣು ತಿಂದು ಬಾಯಲ್ಲಿ ಬ್ರಹ್ಮಾಂಡವನ್ನೇ ತೋರಿದ ತುಂಟ ಕೃಷ್ಣನಿಂದ ತೊಡಗಿ, ಮಣ್ಣಲ್ಲಾಡುವ ಎಲ್ಲ ಮಕ್ಕಳಿಗೂ ಕಲ್ಲು-ಮಣ್ಣುಗಳೇ ಮಿತ್ರರು. ಆದರೀಗ ಮಕ್ಕಳು ಮಣ್ಣಲ್ಲಾಡುವುದಕ್ಕಿಂತ ಮೊಬೈಲ್‌ನಲ್ಲಿ ಆಡುವುದೇ ಹೆಚ್ಚು. ಅಂದಹಾಗೆ, ಮಣ್ಣನ್ನು ಸೌಂದರ್ಯವರ್ಧಕವಾಗಿಯೂ ಬಳಸಲಾಗುತ್ತದೆ ಎಂಬುದು ಗೊತ್ತೇ?

ಮಣ್ಣಿಗೂ ಮಹತ್ವವಿದೆ

ಈಜಿಪ್ತ್‌ನ ರಾಣಿ ಕ್ಲಿಯೋಪಾತ್ರ ತನ್ನ ಚೆಲುವಿಗೂ ಹೆಸರಾಗಿದ್ದವಳು. ಅವಳ ಚರ್ಮದ ಕಾಂತಿಯ ದೇಖರೇಖಿಯಲ್ಲಿ ಮೃತ ಸಮುದ್ರದ (ಡೆಡ್‌ ಸೀ) ಮಣ್ಣನ್ನು ಬಳಸುತ್ತಿದ್ದಳಂತೆ. ಇಷ್ಟೇ ಅಲ್ಲ, ೧೯ನೇ ಶತಮಾನದಲ್ಲಿ ಐರೋಪ್ಯ ದೇಶಗಳ ಸ್ಪಾಗಳಲ್ಲಿ ʻಮಡ್‌ ಬಾತ್‌ʼ ಜನಪ್ರಿಯಗೊಂಡಿತು. ನೋವುಗಳಿಂದ ಮುಕ್ತರಾಗುವುದಕ್ಕೆ, ಚರ್ಮದ ಕಾಂತಿಗೆ ಹಾಗೂ ಇನ್ನೂ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಇದೇ ಮದ್ದು ಎಂಬಂತೆ ಇದನ್ನು ಬಿಂಬಿಸಲಾಗುತ್ತಿತ್ತು. ಇವೆಲ್ಲ ನಿಜವೇ? ಮಣ್ಣನ್ನು ಮೈಗೆಲ್ಲ ಮೆತ್ತಿಕೊಳ್ಳುವುದರಿಂದ ಆರೋಗ್ಯ ಚೆನ್ನಾಗಿ ಆಗುವುದೇ ಅಥವಾ ಇದೂ ಗಾಳಿ ಮೇಲಿನ ಗುಳ್ಳೆಯೇ? ಅಂತಾರಾಷ್ಟ್ರೀಯ ಮಣ್ಣಿನ ದಿನದ ಹಿನ್ನೆಲೆಯಲ್ಲಿ ಮಣ್ಣಿನ ಆರೋಗ್ಯ ಮತ್ತು ಸೌಂದರ್ಯವರ್ಧಕ ಅಂಶಗಳ ಬಗ್ಗೆ ಮಾಹಿತಿ.

ಮಣ್ಣಿನ ಸ್ನಾನ

ಹಲವಾರು ಶತಮಾನಗಳಿಂದ ಮಣ್ಣಿನ ಸ್ನಾನವನ್ನು ಚಿಕಿತ್ಸೆಯ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ. ಹಳೆಯ ಕಾಲದ ಈಜಿಪ್ತ್‌, ಗ್ರೀಕ್‌ ಮತ್ತು ರೋಮನ್ನರು ಇದನ್ನು ಸ್ವಾಸ್ಥ್ಯ ಮತ್ತು ಸೌಂದರ್ಯವನ್ನು ಉದ್ದೀಪಿಸುವ ಮಾರ್ಗವಾಗಿ ಬಳಸುತ್ತಿದ್ದರು. ಬೆಚ್ಚಗಿನ ಮಣ್ಣಿನಲ್ಲಿ ದೇಹವನ್ನು ನೆನೆಸುವುದು, ಆ ಮೂಲಕ ಆರ್ಥರೈಟಿಸ್‌ ನೋವುಗಳನ್ನು ಕಡಿಮೆ ಮಾಡಿಕೊಳ್ಳುವುದು ಅವರ ಕ್ರಮವಾಗಿತ್ತು. ಇದಕ್ಕಾಗಿ ಬಿಸಿನೀರಿನ ಬುಗ್ಗೆಗಳ ಪ್ರದೇಶವನ್ನು ಅವಲಂಬಿಸುತ್ತಿದ್ದರು. ಅದಲ್ಲದೆ, ಮಣ್ಣಿನ ಪುಟ್ಟ ಕೊಳಗಳನ್ನೂ ನಿರ್ಮಿಸಿಕೊಳ್ಳುತ್ತಿದ್ದರು. ಈ ನಿಸರ್ಗ ಚಿಕಿತ್ಸೆ ಇಂದಿಗೂ ಜನಪ್ರಿಯವಾಗಿದೆ. ಇದಕ್ಕಾಗಿ ಹಲವು ರೀತಿಯ ಮಣ್ಣುಗಳನ್ನು ಬಳಸಲಾಗುತ್ತದೆ. ಒಂದೊಂದು ಬಗೆಯ ಮಣ್ಣಿಗೂ ಅದರದ್ದೇ ಆದ ಅನುಕೂಲಗಳಿವೆ.

  • ಮೃತ ಸಮುದ್ರದ ಮಣ್ಣು: ಖನಿಜಗಳಿಂದ ಭರಿತವಾದ ಮಣ್ಣಿದು. ಮೆಗ್ನೀಶಿಯಂ, ಸೋಡಿಯಂ ಮತ್ತು ಪೊಟಾಶಿಯಂ ಅಂಶಗಳು ಇದರಲ್ಲಿ ಅತ್ಯಂತ ಸಾಂದ್ರವಾಗಿರುತ್ತವೆ. ಇದನ್ನು ಡಿಟಾಕ್ಸ್‌ ಮಾಡುವುದಕ್ಕೆ ಮತ್ತು ಚರ್ಮದ ತೇವ ಹೆಚ್ಚಿಸುವುದಕ್ಕೆ ಉಪಯೋಗಿಸಲಾಗುತ್ತದೆ.
  • ಜ್ವಾಲಾಮುಖಿಯ ಬೂದಿ-ಮಣ್ಣು: ಇದನ್ನು ಜ್ವಾಲಾಮುಖಿ ಇದ್ದಂಥ ಜಾಗಗಳಿಂದ ಮಾತ್ರವೇ ಸಂಗ್ರಹಿಸಬಹುದು. ಇದರ ಬೂದಿಯಲ್ಲಿ ಬಹಳಷ್ಟು ರೀತಿಯ ಖನಿಜಗಳು ಸೇರಿಕೊಂಡಿರುತ್ತವೆ. ಚರ್ಮವನ್ನು ಎಕ್‌ಫಾಲಿಯೇಟ್‌ ಮಾಡುವುದಕ್ಕೆ ಮತ್ತು ಶುದ್ಧೀಕರಿಸುವುದಕ್ಕೆ ಇದಕ್ಕಿಂತ ಒಳ್ಳೆಯದು ಇನ್ನೊಂದಿಲ್ಲ ಎಂಬ ಅಭಿಪ್ರಾಯವಿದೆ.
  • ಬೆಂಟೋನೈಟ್‌ ಮಣ್ಣು: ಇದು ಜೇಡಿಮಣ್ಣಿನಂಥದ್ದು. ಆದರೆ ಇದನ್ನೂ ಜ್ವಾಲಾಮುಖಿಯ ಪ್ರದೇಶದಿಂದಲೇ ಸಂಗ್ರಹಿಸಲಾಗುತ್ತದೆ.
  • ಮುಲ್ತಾನಿ ಮಿಟ್ಟಿ (ಫುಲ್ಲರ್ಸ್‌ ಅರ್ಥ್): ಇದೂ ಸಹ ಜೇಡಿಮಣ್ಣಿನಂಥದ್ದೇ ಆಗಿದ್ದು,‌ ಅತಿಯಾದ ಎಣ್ಣೆ ಸೂಸುವ ಮುಖಕ್ಕೆ ಇದನ್ನು ಬಳಸಲಾಗುತ್ತದೆ.

ಲಾಭಗಳೇನು?

ಮುಖಕ್ಕೆ ಮಣ್ಣಿನ ಲೇಪ ಮಾಡುವುದಕ್ಕೆ ಅದರದ್ದೇ ಆದ ಲಾಭಗಳಿವೆ. ಚರ್ಮದ ಕಶ್ಮಲಗಳನ್ನು ತೆಗೆದು, ಮುಖಕ್ಕೆ ಬೇಕಾದ ತೇವವನ್ನು ನೀಡುವುದು ಇದರ ಉದ್ದೇಶ. ಅದರಲ್ಲೂ ಖನಿಜಯುಕ್ತವಾದ ಮಣ್ಣನ್ನು ಲೇಪಿಸುವುದರಿಂದ ಚರ್ಮಕ್ಕೆ ಕಾಂತಿಯನ್ನು ಮರಳಿಸಬಹುದು. ಚರ್ಮದ ಮೇಲಿನ ಸತ್ತ ಕೋಶಗಳನ್ನು ತೆಗೆದು, ಹೊಳಪು ನೀಡುತ್ತದೆ. ನೋವುಗಳ ಪರಿಹಾರಕ್ಕಾಗಿ ಬೆಚ್ಚಗಿನ ಮಣ್ಣಿನಿಲ್ಲಿ ಹುದುಗಿ ಕೂರುವುದು ಜನಪ್ರಿಯ ಕ್ರಮ. ಇದರಿಂದ ಶರೀರಕ್ಕೆ ಬೇಕಾದ ವಿಶ್ರಾಂತಿಯನ್ನು ನೀಡಿ, ಒತ್ತಡವನ್ನೂ ನಿವಾರಿಸಿಕೊಳ್ಳಬಹುದು.

ಇದನ್ನೂ ಓದಿ: Orange Peel Benefits: ಕಿತ್ತಳೆ ಸಿಪ್ಪೆ ಎಸೆಯಬೇಡಿ; ಹೃದಯದ ಆರೋಗ್ಯಕ್ಕೆ ಇದು ಒಳ್ಳೆಯದು!

ತೊಂದರೆಗಳಿವೆಯೇ?

ಎಲ್ಲಕ್ಕಿಂತ ಮುಖ್ಯವಾಗಿದ್ದು ಅಲರ್ಜಿ. ಮಣ್ಣಲ್ಲಿ ಇರಬಹುದಾದ ಕೆಲವು ಖನಿಜಗಳು ಹಲವರ ಚರ್ಮಕ್ಕೆ ಅಲರ್ಜಿಯನ್ನು ತರಬಹುದು. ಇದಲ್ಲದೆ ಸ್ವಚ್ಛತೆಯ ಬಗ್ಗೆಯೂ ಗಮನ ನೀಡಬೇಕು. ಯಾವುದೇ ಸ್ಪಾದಲ್ಲಿ ಇಂಥವನ್ನು ಬಳಸುವುದಾದರೂ, ಶುಚಿತ್ವದ ಬಗ್ಗೆ ಬಹಳ ಲಕ್ಷ್ಯ ವಹಿಸುವಂಥ ಜಾಗವನ್ನೇ ಆಯ್ಕೆ ಮಾಡಿ. ಈಗಾಗಲೇ ಒಣ ಚರ್ಮದ ಸಮಸ್ಯೆ ಇರುವವರಿಗೆ ಬೆಂಟೋನೈಟ್‌ ಮಣ್ಣಿನ ಪ್ಯಾಕ್‌ ಹಾಕಿದರೆ ಶುಷ್ಕತೆ ಹೆಚ್ಚುತ್ತದೆ. ಹಾಗಾಗಿ ಯಾರಿಗೆ ಯಾವುದು ಎಂಬ ಬಗ್ಗೆ ಮಾಹಿತಿ ಹೊಂದುವುದು ಅಗತ್ಯ.

Continue Reading

ಚಿಕ್ಕಮಗಳೂರು

Dengue Fever : ಡೆಂಗ್ಯೂ ಮಹಾಮಾರಿಗೆ ಚಿಕ್ಕಮಗಳೂರಿನಲ್ಲಿ ಬಾಲಕಿ ಬಲಿ; ಈವರೆಗೆ ಐವರು ಸಾವು

Dengue Fever : ಪ್ರಸಕ್ತ ವರ್ಷ ರಾಜ್ಯದಲ್ಲಿ ಡೆಂಗ್ಯೂ ಜ್ವರಕ್ಕೆ ಐವರು ಬಲಿಯಾಗಿದ್ದಾರೆ. ಚಿಕ್ಕಮಗಳೂರಿನಲ್ಲಿ ಬಾಲಕಿಯೊಬ್ಬಳು ಮಹಾಮಾರಿಗೆ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.

VISTARANEWS.COM


on

By

Dengue Fever
Koo

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಡೆಂಗ್ಯೂ ಮಹಾಮಾರಿಗೆ (Dengue Fever) ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ಸಾನಿಯಾ (6) ಮೃತ ದುರ್ದೈವಿ. ಚಿಕ್ಕಮಗಳೂರಿನ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಘಟನೆ ನಡೆದಿದೆ.

ಡೆಂಗ್ಯೂ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಾನಿಯಾಳನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಬಾಲಕಿ ಮೃತಪಟ್ಟಿದ್ದಾಳೆ. ರಾಜ್ಯ ಸರ್ಕಾರದ ವಿರುದ್ಧ ಮೃತ ಬಾಲಕಿ ತಂದೆ ಆಸಿಫ್‌ ಬೇಸರ ವ್ಯಕ್ತಪಡಿಸಿದ್ದಾರೆ. ನನಗೆ ಯಾವುದೇ ಸಹಾಯ ಬೇಡ, ಸರ್ಕಾರಿ ಆಸ್ಪತ್ರೆ ಅಭಿವೃದ್ಧಿ ಮಾಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಡೆಂಗ್ಯೂ ಕಾಯಿಲೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸ ಸಿಗುತ್ತಿಲ್ಲ. ಸರಕಾರಿ ಆಸ್ಪತ್ರೆಯಲ್ಲಿ ಬಡವರಿಗೆ ಹೆಚ್ಚಿನ ಸೌಲಭ್ಯ ಸಿಗಬೇಕು. ನನ್ನ ಮಗಳಿಗಾದ ಸ್ಥಿತಿ ಯಾರಿಗೂ ಆಗುವುದು ಬೇಡ ಎಂದು ಸರ್ಕಾರಿ ಆಸ್ಪತ್ರೆಗಳ ನಿರ್ಲಕ್ಷಕ್ಕೆ ಹಾಗೂ ಸರ್ಕಾರಕ್ಕೆ ಛೀಮಾರಿ ಹಾಕಿದರು.

4 ಸಾವಿರ ಗಡಿ ದಾಟಿದ ಡೆಂಗ್ಯೂ; ಐವರು ಸಾವು

ಹವಾಮಾನ ವೈಪರೀತ್ಯ ಮತ್ತು ಮಳೆಯಿಂದಾಗಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಆತಂಕ ಮೂಡಿಸಿದೆ. 2024ರಲ್ಲಿ ಈ ವರೆಗೆ (ಜೂನ್‌) 93,012 ಶಂಕಿತವಾಗಿದ್ದು, ಇದರಲ್ಲಿ 40,918 ಮಂದಿಯ ರಕ್ತ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಆ ಪ್ರಕಾರ 4364 ಮಂದಿಗೆ ಡೆಂಗ್ಯೂ ಜ್ವರ ದೃಢಪಟ್ಟಿದೆ. ಡೆಂಗ್ಯೂ ಜ್ವರಕ್ಕೆ ಚಿಕಿತ್ಸೆ ಫಲಿಸದೇ ಐವರು ಮೃತಪಟ್ಟಿದ್ದಾರೆ. ಶಿವಮೊಗ್ಗ, ಬಾಗಲಕೋಟೆ, ಗದಗದಲ್ಲಿ ತಲಾ ಒಬ್ಬರು ಹಾಗೂ ಹಾಸನದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಇದನ್ನೂ ಓದಿ: Dengue Prevention: ರಾಜ್ಯದಲ್ಲಿ 6000ಕ್ಕೂ ಡೆಂಗ್ಯೂ ಪ್ರಕರಣ; ಇದರಿಂದ ಪಾರಾಗಲು ಹೀಗೆ ಮಾಡಿ

ಡೆತ್‌ ಆಡಿಟಿಂಗ್‌ಗೆ ಮುಂದಾದ ಬಿಬಿಎಂಪಿ

ರಾಜ್ಯ ರಾಜಧಾನಿಯಲ್ಲಿ ಡೆಂಗ್ಯೂ ಪ್ರಕರಣಗಳು ವಿಪರೀತ ಏರಿಕೆ ಆಗಿವೆ. ಬೆಂಗಳೂರಲ್ಲಿ ಜನವರಿಯಿಂದ ಈವರೆಗೆ 1,385 ಮಂದಿಗೆ ಡೆಂಗ್ಯೂ ಜ್ವರ ಕಂಡು ಬಂದಿದೆ. ಈವರೆಗೆ ಡೆಂಗ್ಯೂನಿಂದ ಮೃತಪಟ್ಟ ವರದಿ ಆಗಿಲ್ಲ. ಆದರೆ ಇಬ್ಬರು ಡೆಂಗ್ಯೂ ಜ್ವರದಿಂದ ಮೃತಪಟ್ಟಿರುವ ಶಂಕೆ ಇದ್ದು, ಸಾವಿಗೆ ಕಾರಣ ತಿಳಿಯುವ ಸಲುವಾಗಿ ಡೆತ್ ಆಡಿಟ್‌ಗೆ ಬಿಬಿಎಂಪಿ ಮುಂದಾಗಿದೆ.

ಇನ್ನೂ 3,470 ಲಾರ್ವಾ ಉತ್ಪತ್ತಿ ತಾಣ ಪತ್ತೆಯಾಗಿದ್ದು, ಇದರಲ್ಲಿ 2,004 ತಾಣಗಳ ನಾಶ ಮಾಡಲಾಗಿದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗ ಮಾಹಿತಿ ನೀಡಿದೆ. ಪಾಲಿಕೆಯ ಆರೋಗ್ಯ ಸಿಬ್ಬಂದಿ ನಿನ್ನೆವರೆಗೂ 17,877 ಮನೆಗಳ ಸಮೀಕ್ಷೆ ನಡೆಸಿದ್ದಾರೆ. ಆಡಿಟ್ ಬಳಿಕ ವರದಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ರವಾನೆ ಮಾಡಲಾಗುತ್ತದೆ.

ಡೆಂಗ್ಯೂ ಹೇಗೆ ಹರಡುತ್ತದೆ?

ಡೆಂಗ್ಯೂ ಜ್ವರ ಸೊಳ್ಳೆಯಿಂದ ಹರಡುವ ವೈರಲ್ ಸೋಂಕು ಆಗಿದೆ. ಇದು ಈಡಿಪಸ್‌ ಎಂಬ ಹೆಣ್ಣು ಸೊಳ್ಳೆಗಳ ಕಡಿತದಿಂದ ಹರಡುತ್ತದೆ. ಸೊಳ್ಳೆ ಕಚ್ಚಿದ 4-7 ದಿನಗಳ ನಂತರ ರೋಗ ಲಕ್ಷಣಗಳು ಸಾಮಾನ್ಯವಾಗಿ ಕಂಡು ಬರುತ್ತವೆ. ಇದರ ಪ್ರಭಾವ 10 ದಿನಗಳವರೆಗೆ ಇರುತ್ತದೆ. ಹೀಗಾಗಿ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಸ್ವಚ್ಛತೆಗೆ ಆದ್ಯತೆ ನೀಡುವುದು ಉತ್ತಮವಾಗಿದೆ.

ಡೆಂಗ್ಯೂ ಜ್ವರ ತಲೆನೋವಿನಂತಹ ರೋಗಲಕ್ಷಣಗಳನ್ನು ಉಂಟು ಮಾಡಬಹುದು. ಡೆಂಗ್ಯೂವನ್ನು ಹೆಮರಾಜಿಕ್ ಜ್ವರ ಎಂದೂ ಕರೆಯಲಾಗುತ್ತದೆ. ಡೆಂಗ್ಯೂ ಜ್ವರದ ತೀವ್ರ ಸ್ವರೂಪವು ತೀವ್ರ ರಕ್ತಸ್ರಾವ, ರಕ್ತದೊತ್ತಡ ಹಾಗೂ ರಕ್ತಕಣಗಳ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿ ವ್ಯಕ್ತಿಯ ಸಾವಿಗೂ ಕಾರಣವಾಗಬಹುದು. ಅಧಿಕ ಜ್ವರ, ತೀವ್ರ ತಲೆನೋವು, ವಾಂತಿ, ದೇಹದ ವಿವಿಧ ಭಾಗಗಳಲ್ಲಿ ದದ್ದುಗಳು, ಗ್ರಂಥಿಗಳಲ್ಲಿ ಊತ, ಮೂಳೆ ಮತ್ತು ಕೀಲು ನೋವು, ರಕ್ತಸ್ರಾವವಾಗವುದು ರೋಗ ಲಕ್ಷಣಗಳಾಗಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಆರೋಗ್ಯ

Orange Peel Benefits: ಕಿತ್ತಳೆ ಸಿಪ್ಪೆ ಎಸೆಯಬೇಡಿ; ಹೃದಯದ ಆರೋಗ್ಯಕ್ಕೆ ಇದು ಒಳ್ಳೆಯದು!

Orange Peel Benefits: ಸಿಪ್ಪೆ ಸುಲಿದು ರಸಭರಿತ ಕಿತ್ತಳೆಯನ್ನು ಬಾಯಿಗಿಟ್ಟರೆ, ಅಥವಾ ಜ್ಯೂಸ್‌ ಕುಡಿದರೆ, ಎಂಥಾ ಸೆಖೆಯಲ್ಲೂ ತಂಪಿನ, ಎಂಥಾ ಬಾಯಾರಿಕೆಯ ಸುಸ್ತಿನಲ್ಲೂ ಉಲ್ಲಾಸವನ್ನೂ ಶಕ್ತಿಯನ್ನೂ ಮತ್ತೆ ಜಿನುಗಿಸುವ ಶಕ್ತಿ ಇದೆ. ಆದರೆ, ಘಮಘಮಿಸುವ ಕಿತ್ತಳೆಯ ಸಿಪ್ಪೆಯನ್ನು ಮಾತ್ರ ನಾವು ಯಾವುದೇ ಯೋಚನೆ ಮಾಡದೆ ಎಸೆದು ಬಿಡುತ್ತೇವೆ. ನೀವು ವೇಸ್ಟ್‌ ಎಂದುಕೊಳ್ಳುವ ಈ ಸಿಪ್ಪೆಯಲ್ಲೂ ಬೇಕಾದಷ್ಟು ವಿಟಮಿನ್‌ ಸಿ, ನಾರಿನಂಶ ಹಾಗೂ ಪಾಲಿ ಫಿನಾಳ್‌ಗಳು ಇವೆ ಎಂದರೆ ನಂಬುತ್ತೀರಾ?

VISTARANEWS.COM


on

Orange Peel Benefits
Koo

ಕಿತ್ತಳೆ ಹಣ್ಣು ಹುಳಿಯನ್ನೂ ಸಿಹಿಯನ್ನೂ ಸಮಪ್ರಮಾಣದಲ್ಲಿ ಹೊಂದಿರುವ ದೇಹಕ್ಕೆ ಒಳ್ಳೆಯದನ್ನೇ ಬಯಸುವ ಹಣ್ಣು. ಇದರ ಘಮಕ್ಕೆ ಎಂಥ ಸಮಯದಲ್ಲೂ ನಮ್ಮನ್ನು ಬಡಿದೆಚ್ಚರಿಸುವ, ಉಲ್ಲಾಸವನ್ನು ತರುವ ಗುಣವಿದೆ. ಸಿಪ್ಪೆ ಸುಲಿದು ರಸಭರಿತ ಕಿತ್ತಳೆಯನ್ನು ಬಾಯಿಗಿಟ್ಟರೆ, ಅಥವಾ ಜ್ಯೂಸ್‌ ಕುಡಿದರೆ, ಎಂಥಾ ಸೆಖೆಯಲ್ಲೂ ತಂಪಿನ, ಎಂಥಾ ಬಾಯಾರಿಕೆಯ ಸುಸ್ತಿನಲ್ಲೂ ಉಲ್ಲಾಸವನ್ನೂ ಶಕ್ತಿಯನ್ನೂ ಮತ್ತೆ ಜಿನುಗಿಸುವ ಶಕ್ತಿ ಇದೆ. ಆದರೆ, ಘಮಘಮಿಸುವ ಕಿತ್ತಳೆಯ ಸಿಪ್ಪೆಯನ್ನು ಮಾತ್ರ ನಾವು ಯಾವುದೇ ಯೋಚನೆ ಮಾಡದೆ ಎಸೆದು ಬಿಡುತ್ತೇವೆ. ನೀವು ವೇಸ್ಟ್‌ ಎಂದುಕೊಳ್ಳುವ ಈ ಸಿಪ್ಪೆಯಲ್ಲೂ (Orange Peel Benefits) ಬೇಕಾದಷ್ಟು ವಿಟಮಿನ್‌ ಸಿ, ನಾರಿನಂಶ ಹಾಗೂ ಪಾಲಿ ಫಿನಾಳ್‌ಗಳು ಇವೆ ಎಂದರೆ ನಂಬುತ್ತೀರಾ?

Orange Peel

ಹೌದು. ಒಂದು ಚಮಚದಷ್ಟು ಕಿತ್ತಳೆ ಸಿಪ್ಪೆಯ ಪುಡಿಯಲ್ಲಿ ನಮ್ಮ ದೇಹಕ್ಕೆ ನಿತ್ಯವೂ ಬೇಕಾಗುವ ವಿಟಮಿನ್‌ ಸಿಯ ಶೇ.14ರಷ್ಟಿದೆಯಂತೆ. ಅಂದರೆ ಅದು ಒಳಗಿರುವ ಕಿತ್ತಳೆ ಹಣ್ಣಿನ ಮೂರು ಪಟ್ಟು ಹೆಚ್ಚು! ಕಿತ್ತಳೆ ಸಿಪ್ಪೆಯಲ್ಲಿ ಒಳಗಿನ ಹಣ್ಣಿಗಿಂತ ನಾಲ್ಕು ಪಟ್ಟು ಹೆಚ್ಚು ನಾರಿನಂಶವಿದೆಯಂತೆ. ಫ್ಲಾರಿಡಾ ವಿಶ್ವವಿದ್ಯಾಲಯವು ಕಿತ್ತಳೆ ಸಿಪ್ಪೆಯ ಸೇವನೆಯಿಂದ ಹೃದಯದ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ ಎಂದು ತನ್ನ ಸಂಶೋಧನಾ ವರದಿಯಲ್ಲಿ ಹೇಳಿದೆ. ನಮ್ಮ ದೇಹದಲ್ಲಿರುವ ಕೆಲವೊಂದು ಬ್ಯಾಕ್ಟೀರಿಯಾಗಳು ಹೃದಯದ ಕಾಯಿಲೆಯನ್ನು ಉಲ್ಬಣಗೊಳಿಸುವ ತಾಕತ್ತನ್ನು ಹೊಂದಿದೆಯಂತೆ. ಈ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಕುಂಠಿತಗೊಳಿಸುವ ಶಕ್ತಿ ಈ ಕಿತ್ತಳೆ ಸಿಪ್ಪೆಯಲ್ಲಿದೆಯಂತೆ. ಕಿತ್ತಳೆ ಸಿಪ್ಪೆಯಲ್ಲಿರುವ ಫೈಟೋ ಕೆಮಿಕಲ್‌ಗಳು ಹೃದಯದ ಕಾಯಿಲೆಗೆ ಪೂರಕವಾದ ಟ್ರೈಮೀಥೈಲಾಮೈನ್‌ ಉತ್ಪಾದನೆಯನ್ನು ತಗ್ಗಿಸುವ ಮೂಲಕ ಹೃದಯಸ್ನೇಹಿಯಾಗಿ ವರ್ತಿಸುತ್ತದೆ.

ನಿತ್ಯ ಸೇವಿಸಬೇಕಿಲ್ಲ

ಹಾಗಂತ ಕಿತ್ತಳೆ ಹಣ್ಣಿಸ ಸಿಪ್ಪೆ ಒಳ್ಳೆಯದು ಎಂದು ಅದನ್ನು ನಿತ್ಯವೂ ಸೇವಿಸಬಹುದು ಎಂದಲ್ಲ. ಹಾಗೆ ಸೇವಿಸುವುದೂ ಕೂಡಾ ಒಳ್ಳೆಯದಲ್ಲ. ಕಿತ್ತಳೆಯ ಸಿಪ್ಪೆ ಕಹಿ ರುಚಿಯನ್ನು ಹೊಂದಿರುತ್ತದೆ ಹಾಗೂ ಇದನ್ನು ಹಾಗೆಯೇ ತಿನ್ನಲಾಗುವುದಿಲ್ಲ ಎಂಬುದೂ ನಿಮಗೆ ಗೊತ್ತು. ಅಷ್ಟೇ ಅಲ್ಲ. ಕಿತ್ತಳೆಯ ಸಿಪ್ಪೆಯಲ್ಲಿ ಅದನ್ನು ಬೆಳೆಸುವ ಸಂದರ್ಭ ಸಿಂಪಡಿಸಿದ ರಾಜಾಯನಿಕಗಳೂ, ಕೀಟನಾಶಕಗಳೂ ಇರುವ ಸಂಭವ ಹೆಚ್ಚು. ಹೀಗಾಗಿ ಅದನ್ನು ಸರಿಯಾಘಿ, ಸರಿಯಾದ ಕ್ರಮದಲ್ಲಿ ತೊಳೆದುಕೊಂಡು ಕೆಲವು ಆಹಾರ ತಯಾರಿಕೆಯಲ್ಲಿ ಬಳಸಿಕೊಳ್ಳಬಹುದು.

ಕ್ಯಾಂಡಿ

ಕಿತ್ತಳೆ ಸಿಪ್ಪೆಯನ್ನು ಸಕ್ಕರೆ ಪಾಕದಲ್ಲಿ ಹಾಕಿ ಮಕ್ಕಳಿಗಾಗಿ ಸಿಹಿ ಕ್ಯಾಂಡಿಗಳನ್ನು ಮಾಡಬಹುದು. ಸಿಪ್ಪೆಯನ್ನು 15 ನಿಮಿಷ ನೀರಿನಲ್ಲಿ ಹಾಕಿಟ್ಟು ನಂತರ ಚೆನ್ನಾಗಿ ತೊಳೆದು, ಅದನ್ನು ನೀರಿನಲ್ಲಿ ೧೫ ನಿಮಿಷ ಕುದಿಸಿ, ಸಿಪ್ಪೆಯನ್ನು ಸಕ್ಕರೆ ಪಾಕಕ್ಕೆ ಹಾಕಿ ಒಣಗಿಸುವ ಮೂಲಕ ಒಳ್ಳೆಯ ನೈಸರ್ಗಿಕ ಕ್ಯಾಂಡಿ ಮಾಡಬಹುದು.

ಸ್ಮೂದಿ

ಸಣ್ಣ ಸಣ್ಣ ತುಂಡುಗಳನ್ನು ನೀವು ಮಾಡುವ ಸ್ಮೂದಿಗೆ ಹಾಕಬಹುದು.

ಕಿತ್ತಳೆ ಕೇಕ್‌

ಕಿತ್ತಳೆ ಕೇಕ್‌ಗಳನ್ನು ಮಾಡುವಾಗ ಕಿತ್ತಳೆಯ ಸಿಪ್ಪೆಯನ್ನು ತುರಿದು ಒಂದೆರಡು ಚಮಚದಷ್ಟು ಪೇಸ್ಟ್‌ ತಯಾರಿಸಿ ಹಾಕಿದರೆ, ಯಾವುದೇ ಕೃತಕ ಘಮದ ಅವಶ್ಯಕತೆಯೇ ಇಲ್ಲ.

ಕಿತ್ತಳೆ ಸಿಪ್ಪೆಯ ಚಹಾ

ಕಿತ್ತಳೆ ಸಿಪ್ಪೆಯ ಚಹಾ ಮಾಡಿ ಕುಡಿಯಬಹುದು. ನಿತ್ಯವೂ ಅಲ್ಲದಿದ್ದರೂ, ಯಾವಾಗಲಾದರೊಮ್ಮೆ ಕುಡಿಯುವ ಮೂಲಕ ಇದರ ಲಾಭ ಪಡೆಯಬಹುದು.

ಇದನ್ನೂ ಓದಿ: Internet Addiction: ಈ 10 ಲಕ್ಷಣಗಳು ನಿಮ್ಮಲ್ಲಿದ್ದರೆ, ನೀವೂ ಇಂಟರ್ನೆಟ್‌ ಚಟಕ್ಕೆ ಬಿದ್ದಿದ್ದೀರಿ ಎಂದರ್ಥ!

ಕಿತ್ತಳೆ ಸಿಪ್ಪೆಯನ್ನು ಚೆನ್ನಾಗಿ ತೊಳೆದು ಒಣಗಿಸಿ ಪುಡಿ ಮಾಡಿಟ್ಟುಕೊಂಡರೆ, ನೀವು ಮನೆಯಲ್ಲೇ ಮಾಡುವ ಫೇಸ್‌ಪ್ಯಾಕ್‌ಗಳಿಗೆ ಇವನ್ನು ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಬಹುದು. ಮುಖದ ಮೇಲಿನ ಕಲೆಗಳು, ಸುಕ್ಕು ನಿರಿಗೆಗಳಿಗೆ ಇದು ಬಹಳ ಒಳ್ಳೆಯದು. ಇದರ ನಿಯಮಿತ ಬಳಕೆಯಿಂದ ಮುಖ ತಾಜಾತನದಿಂದ ಹೊಳೆಯುತ್ತದೆ.

Continue Reading

ಆರೋಗ್ಯ

Sadhguru Jaggi Vasudev: ಮಕ್ಕಳಲ್ಲಿ ಅಲರ್ಜಿ ಸಮಸ್ಯೆಗೆ ಏನು ಪರಿಹಾರ? ಸದ್ಗುರು ಸಲಹೆ ಇಲ್ಲಿದೆ ಕೇಳಿ

ಅಲರ್ಜಿ ತೊಂದರೆಗಳು ಈಗ ಎಲ್ಲರಲ್ಲೂ ಸಾಮಾನ್ಯ. ಇದಕ್ಕೆ ಮುಖ್ಯ ಕಾರಣ ನಮ್ಮ ಆಹಾರ. ಆದರೆ ಅದು ಹೇಗೆ ಬಂತು, ಕಡಿಮೆ ಮಾಡುವುದು ಹೇಗೆ ಎನ್ನುವುದಕ್ಕೆ ನಮ್ಮಲ್ಲಿ ಉತ್ತರವಿರುವುದಿಲ್ಲ. ವೈದ್ಯರನ್ನು ಸಂಪರ್ಕಿಸಿ ಒಂದೆರಡು ದಿನ ಔಷಧ ಪಡೆದು ಸುಮ್ಮನಾಗುತ್ತೇವೆ. ಇದು ಮತ್ತೊಮ್ಮೆ , ಮಗದೊಮ್ಮೆ ಉಂಟಾಗುತ್ತಲೇ ಇರುತ್ತದೆ. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಅಲರ್ಜಿಯನ್ನು ನಾವು ಸಣ್ಣ ವಯಸ್ಸಿನಲ್ಲೇ ದೂರ ಮಾಡಬಹುದು. ಅದು ಹೇಗೆ ಎಂಬುದನ್ನು ಸದ್ಗುರು (Sadhguru Jaggi Vasudev) ಹೇಳಿರುವುದು ಹೀಗೆ.

VISTARANEWS.COM


on

By

Sadhguru Jaggi Vasudev
Koo

ಇತ್ತೀಚಿನ ದಿನಗಳಲ್ಲಿ ಸಣ್ಣ ಮಕ್ಕಳು (children’s) ಅಲರ್ಜಿ (allergies ) ತೊಂದರೆಯಿಂದ ಬಳಲುತ್ತಿರುತ್ತಾರೆ. ಎಷ್ಟೇ ಆರೈಕೆ ಮಾಡಿದರೂ ಸಂಪೂರ್ಣ ಗುಣಮುಖರಾಗುವುದಿಲ್ಲ. ಎಷ್ಟೋ ಬಾರಿ ಪೋಷಕರು (parents) ತಮ್ಮ ಮಕ್ಕಳಿಗೆ ಏಕೆ ಈ ತೊಂದರೆ ಕಾಣಿಸಿಕೊಂಡಿತು ಎಂದು ತಮ್ಮನ್ನು ತಾವು ಪ್ರಶ್ನಿಸುತ್ತಲೇ ಇರುತ್ತಾರೆ. ಆದರೆ ಅವರಿಗೆ ಇದಕ್ಕೆ ಉತ್ತರವೇ ಸಿಗುವುದಿಲ್ಲ. ಪ್ರಸಿದ್ಧ ಆಧ್ಯಾತ್ಮಿಕ ಮಾರ್ಗದರ್ಶಿ ಮತ್ತು ಆರೋಗ್ಯ ತಜ್ಞ ಸದ್ಗುರು ಜಗ್ಗಿ ವಾಸುದೇವ್ (Sadhguru Jaggi Vasudev) ಅವರು ಇದೀಗ ಮಕ್ಕಳಲ್ಲಿ ಉಂಟಾಗುವ ಅಲರ್ಜಿ ಸಮಸ್ಯೆಗಳಿಗೆ ಕಾರಣ ಮತ್ತು ಪರಿಹಾರವನ್ನು ಹೇಳಿದ್ದಾರೆ.

ಅಲರ್ಜಿ ತೊಂದರೆಗಳು ಈಗ ಎಲ್ಲರಲ್ಲೂ ಸಾಮಾನ್ಯ. ಇದಕ್ಕೆ ಮುಖ್ಯ ಕಾರಣ ನಮ್ಮ ಆಹಾರ. ಆದರೆ ಅದು ಹೇಗೆ ಬಂತು, ಕಡಿಮೆ ಮಾಡುವುದು ಹೇಗೆ ಎನ್ನುವುದಕ್ಕೆ ನಮ್ಮಲ್ಲಿ ಉತ್ತರವಿರುವುದಿಲ್ಲ. ವೈದ್ಯರನ್ನು ಸಂಪರ್ಕಿಸಿ ಒಂದೆರಡು ದಿನ ಔಷಧ ಪಡೆದು ಸುಮ್ಮನಾಗುತ್ತೇವೆ. ಇದು ಮತ್ತೊಮ್ಮೆ , ಮಗದೊಮ್ಮೆ ಉಂಟಾಗುತ್ತಲೇ ಇರುತ್ತದೆ. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಅಲರ್ಜಿಯನ್ನು ನಾವು ಸಣ್ಣ ವಯಸ್ಸಿನಲ್ಲೇ ದೂರ ಮಾಡಬಹುದು ಎಂದಿದ್ದಾರೆ ಅವರು.

ಮಗುವು ಅಲರ್ಜಿಯೊಂದಿಗೆ ಹೋರಾಡುವುದನ್ನು ನೋಡುವುದು ಪ್ರತಿಯೊಬ್ಬ ಪೋಷಕರಿಗೂ ಸಂಕಟ ಮತ್ತು ಅಸಮಾಧಾನವನ್ನು ಉಂಟುಮಾಡುತ್ತದೆ. ಎಷ್ಟೇ ಔಷಧ ಮಾಡಿದರೂ ಇದು ಗುಣವಾಗದೇ ಇರುವುದು ನಮ್ಮನ್ನು ಚಿಂತೆಗೆ ಈಡಾಗುವಂತೆ ಮಾಡುತ್ತದೆ. ಎಷ್ಟೋ ಬಾರಿ ಇದು ಪುಟ್ಟ ಮಕ್ಕಳಿಗೆ ತಮ್ಮ ಬದುಕಿನಲ್ಲಿ ಬೇಸರ, ನಿರಾಸೆಯನ್ನು ಉಂಟು ಮಾಡಬಹುದು. ಆದರೂ ಮಕ್ಕಳ ಈ ಅಲರ್ಜಿ ಸಮಸ್ಯೆಗಳನ್ನು ನೈಸರ್ಗಿಕವಾಗಿ ಪರಿಹರಿಸಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು, ಆಧ್ಯಾತ್ಮಿಕ ಚಿಂತಕರಾದ ಜಗ್ಗಿ ವಾಸುದೇವ್.

ಮಕ್ಕಳಲ್ಲಿ ಅಲರ್ಜಿಯನ್ನು ನಿರ್ವಹಿಸುವ ಕುರಿತು ಅವರು ತಮ್ಮ ಸಲಹೆಯನ್ನು ನೀಡಿದ್ದಾರೆ. ಸುಲಭವಾದ ಜೀವನಶೈಲಿ ಹೊಂದಾಣಿಕೆಯಿಂದ ಶಕ್ತಿಯುತವಾದ ಮನೆ ಚಿಕಿತ್ಸೆಗಳವರೆಗೆ ಎಲ್ಲವೂ ಅಲರ್ಜಿಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಮತ್ತು ಮಕ್ಕಳ ಸಾಮಾನ್ಯ ಆರೋಗ್ಯವನ್ನು ಹೆಚ್ಚಿಸಲು ಪ್ರೇರಣೆಯಾಗುತ್ತದೆ ಎನ್ನುತ್ತಾರೆ ಅವರು.
ಇತ್ತೀಚಿಗೆ ಅವರು ಅಲರ್ಜಿಯ ಪ್ರಮುಖ ವಿಷಯವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅಲರ್ಜಿಯನ್ನು ಜಯಿಸಲು ಪ್ರಮುಖ ಮಾರ್ಗಗಳನ್ನು ಸೂಚಿಸಿದ್ದಾರೆ.

ಇದನ್ನೂ ಓದಿ: Priyanka Chopra: ಬೆಳ್ಳುಳ್ಳಿ ಎಸಳು ಪಾದಗಳಿಗೆ ಉಜ್ಜುವುದರಿಂದ ಏನು ಪ್ರಯೋಜನ? ನಟಿ ಪ್ರಿಯಾಂಕಾ ಚೋಪ್ರಾ ಹೇಳಿದ್ದೇನು?

ಮಕ್ಕಳ ಬಗ್ಗೆ ಮಾತನಾಡಿದ ಅವರು, ಅಲರ್ಜಿಯಿಂದ ಪರಿಹಾರ ಪಡೆಯಲು ಹಲವು ದಾರಿಗಳಿವೆ. ಆರೋಗ್ಯಕರ ಜೀವಿಗಳಿಗೆ ಆಹಾರ ಸೇವನೆಯಲ್ಲಿ ಕೆಲವು ಬದಲಾವಣೆಗಳನ್ನು ಸಲಹೆ ನೀಡಿದ್ದಾರೆ.

ಮಕ್ಕಳಿಗೆ ಅಲರ್ಜಿಗಳು ಹೋಗಬೇಕಾದರೆ ಹಾಲು ಮತ್ತು ಮಾಂಸದ ಉತ್ಪನ್ನಗಳಿಂದ ಅವರನ್ನು ದೂರವಿರಿಸಿ. ಇವು ತುಂಬಾ ಕೆಟ್ಟದಾಗಿ ಅಲರ್ಜಿ ಉಂಟು ಮಾಡಬಲ್ಲದು. ಸ್ವಲ್ಪ ಅಲರ್ಜಿ ಕಾಣಿಸಿ ಕೊಂಡರೆ ಪರವಾಗಿಲ್ಲ. ತುಂಬಾ ಕೆಟ್ಟದಾಗಿ ಅಲರ್ಜಿಯಾಗಿದ್ದರೆ ಮಾಂಸ ಉತ್ಪನ್ನಗಳನ್ನು ತ್ಯಜಿಸಿ ಸಾಕಷ್ಟು ತರಕಾರಿ, ತಾಜಾ ಹಣ್ಣು ಮತ್ತು ವಸ್ತುಗಳನ್ನೇ ಅವರಿಗೆ ಸೇವಿಸಲು ಕೊಡಿ. ಇದರಿಂದ ಅವರು ಬಹುಬೇಗನೆ ಅಲರ್ಜಿ ತೊಂದರೆಯಿಂದ ಗುಣಮುಖರಾಗುತ್ತಾರೆ ಎಂದು ಸದ್ಗುರು ತಿಳಿಸಿದ್ದಾರೆ.

Continue Reading
Advertisement
International Mud Day
ಫ್ಯಾಷನ್3 mins ago

International Mud Day: ಆರೋಗ್ಯ, ಸೌಂದರ್ಯದ ಪಾಲಿಗೆ ಹೊನ್ನು ಈ ಮಣ್ಣು!

Physical relationship
ವಿದೇಶ21 mins ago

Physical relationship: ಕೈದಿ ಜೊತೆಗೆ ಲೈಂಗಿಕ ಕ್ರಿಯೆ ನಡೆಸಿದ್ದ ಮಹಿಳಾ ಜೈಲಾಧಿಕಾರಿ ಬಗ್ಗೆ ಶಾಕಿಂಗ್‌ ವಿಚಾರ ಬಯಲು

Actor Darshan does not need counseling says by shamitha malnad
ಸ್ಯಾಂಡಲ್ ವುಡ್26 mins ago

Actor Darshan: ದಚ್ಚು ಪರಿಸ್ಥಿತಿಗೆ ಪವಿತ್ರಾ ಕಾರಣ ಅನ್ನೋಕಾಗಲ್ಲ; ದರ್ಶನ್‌ಗೆ ಕೌನ್ಸೆಲಿಂಗ್‌ ಅಗತ್ಯ ಇಲ್ಲ ಎಂದ ಖ್ಯಾತ ಗಾಯಕಿ!

IND vs SA Final
ಕ್ರೀಡೆ37 mins ago

IND vs SA Final: ರಾಮನಾಮ ಸ್ಮರಣೆ ಮಾಡಿ ಭಾರತ ವಿರುದ್ಧ ಫೈನಲ್​ ಆಡಲಿದ್ದಾರೆ ದಕ್ಷಿಣ ಆಫ್ರಿಕಾ ಕ್ರಿಕೆಟಿಗ

karnataka weather Forecast
ಮಳೆ38 mins ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

Road Accident
ಕರ್ನಾಟಕ41 mins ago

Road Accident: ಮುಧೋಳ ಬಳಿ ಶಾಲಾ ಬಸ್‌ ಹರಿದು 4 ವರ್ಷದ ಬಾಲಕ ಸಾವು

T20 World Cup Final
ಪ್ರಮುಖ ಸುದ್ದಿ45 mins ago

T20 World Cup Final : ಭಾರತ ತಂಡದ ಗೆಲುವಿಗಾಗಿ ವಿಶ್ವ ಪ್ರಸಿದ್ಧ ಸಿದ್ಧಿವಿನಾಯಕ ದೇಗುದಲ್ಲಿ ವಿಶೇಷ ಪೂಜೆ

Manvita Kamath One and Half cinema song out
ಸ್ಯಾಂಡಲ್ ವುಡ್47 mins ago

Manvita Kamath: ಮದುವೆ ಆದ ಒಂದು ತಿಂಗಳ ಬೆನ್ನಲ್ಲೇ ಗುಡ್‌ ನ್ಯೂಸ್‌ ಕೊಟ್ಟ ʻಟಗರು ಪುಟ್ಟಿʼ!

Viral Video
Latest49 mins ago

Viral Video: ಮೊಬೈಲ್ ಕದ್ದ ಕಳ್ಳನಿಗೆ ದೇವರು ಕೊಟ್ಟ ಶಿಕ್ಷೆ ಮಾತ್ರ ಘೋರ! ವಿಡಿಯೊ ನೋಡಿ

Dr HS Shetty
ಪ್ರಮುಖ ಸುದ್ದಿ51 mins ago

Dr HS Shetty: ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನಿಂದ ಜುಲೈ 6ರಂದು 41 ಸಾವಿರ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ38 mins ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ7 hours ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ23 hours ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು2 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ2 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ5 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

ಟ್ರೆಂಡಿಂಗ್‌