Delhi Tour: ದೆಹಲಿಗೆ ಪ್ರವಾಸಕ್ಕೆ ಹೋದಾಗ ಮಿಸ್ ಮಾಡದೇ ಈ ಅದ್ಭುತ ಸ್ಥಳಗಳಿಗೆ ಭೇಟಿ ನೀಡಿ! - Vistara News

ಲೈಫ್‌ಸ್ಟೈಲ್

Delhi Tour: ದೆಹಲಿಗೆ ಪ್ರವಾಸಕ್ಕೆ ಹೋದಾಗ ಮಿಸ್ ಮಾಡದೇ ಈ ಅದ್ಭುತ ಸ್ಥಳಗಳಿಗೆ ಭೇಟಿ ನೀಡಿ!

Delhi Tour: ಮನಸ್ಸು ಕೂಡ ಆಗಾಗಾ ಬದಲಾವಣೆ ಕೇಳುತ್ತೆ. ಆಗ ತಡಮಾಡದೇ ನಿಮ್ಮದೊಂದು ಬ್ಯಾಗ್ ಗೆ ನಾಲ್ಕು ಜೊತೆ ಬಟ್ಟೆ ಹಾಕಿಕೊಂಡು ತಿರುಗಾಡಿ ಬಂದುಬಿಡಿ. ಅದರಿಂದ ಸಿಗುವ ಜೀವನೋತ್ಸವವನ್ನು ವರ್ಣಿಸಲು ಪದಗಳೇ ಸಿಗದು! ಇಲ್ಲಿ ದೆಹಲಿಯ ಕಡೆ ನೀವು ಪ್ರವಾಸಕ್ಕೆ ಹೋದಾಗ ನೋಡಬಹುದಾದಂಥ ಸ್ಥಳಗಳ ಕುರಿತು ಮಾಹಿತಿ ಇದೆ. ಇದು ನಿಮಗೆ ದೆಹಲಿಯ ಬಗ್ಗೆ ತಿಳಿಯಲು ಸಾಧ್ಯವಾಗಬಹುದು.

VISTARANEWS.COM


on

Delhi Tour
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದೆಹಲಿ: ಪ್ರವಾಸವೆಂದರೆ ಯಾರಿಗೆ ಇಷ್ಟವಿರಲ್ಲ! ಕೆಲಸದ ಒತ್ತಡ, ಮನಸ್ಸಿಗೆ ಕಿರಿಕಿರಿ ಆದಾಗ ಒಂದೊಳ್ಳೇ ಪ್ರವಾಸ (Tour) ಮಾಡಿದರೆ ಅದರಿಂದ ಸಿಗುವ ಖುಷಿನೇ ಬೇರೆ. ಪ್ರವಾಸವೆಂದಾಕ್ಷಣ ವಿದೇಶಕ್ಕೆ ಹೋಗಬೇಕೆಂದೇನಿಲ್ಲ. ನಮ್ಮ ದೇಶದ ರಾಜಧಾನಿಯಾದ (Captial) ದೆಹಲಿಗೆ ಪ್ರವಾಸ (Delhi Tour) ನೀಡಿದರೆ ಅದ್ಭುತವಾದ ಸ್ಥಳಗಳನ್ನು ಕಣ್ತುಂಬಿಕೊಳ್ಳಬಹುದು. ಇಲ್ಲಿನ ಕಿಕ್ಕಿರಿದ ಜನಸಂದಣಿ, ಜನರ ಜಂಜಾಟದ ಜೀವನವನ್ನು ನೋಡಿದರೆ ದೆಹಲಿಗೆ ಹೋಗುವುದೇ ಬೇಡ ಎಂದೆನಿಸುತ್ತದೆ. ಆದರೆ  ದೆಹಲಿ ಕೇವಲ ಗದ್ದಲದ ನಗರ ಮಾತ್ರವಲ್ಲ ಇಲ್ಲಿ ನೋಡಲು ಪ್ರಮುಖ ಐತಿಹಾಸಿಕ ಸ್ಥಳಗಳು, ಶಾಂತಿಯುತವಾದ ಗಿರಿಧಾಮಗಳಿವೆ.

ದೆಹಲಿಯ ಸುತ್ತಮುತ್ತ ನೀವು ನೋಡಬಹುದಾದಂತಹ ಬಹಳ ಅದ್ಭುತವಾದ ಸ್ಥಳಗಳಿವೆ. ಹಾಗಾಗಿ ಪ್ರವಾಸಕ್ಕೆ ಪ್ಲ್ಯಾನ್ ಮಾಡುತ್ತಿರುವವರು ಒಮ್ಮೆ ದೆಹಲಿಯ ಈ ಸ್ಥಳಗಳಿವೆ ಭೇಟಿ ನೀಡಿ. ಇದರಿಂದ  ನಿಮ್ಮ ಪ್ರವಾಸ ಅವಿಸ್ಮರಣೀಯವಾಗಿರುತ್ತದೆ.

Delhi Tour

ಆಗ್ರಾ

ದೆಹಲಿಯಿಂದ ಸ್ವಲ್ಪ ದೂರದಲ್ಲಿರುವ ಆಗ್ರಾದಲ್ಲಿ ಪ್ರೀತಿಯ ಸಾರಾವನ್ನೇ ಎತ್ತಿ ಹಿಡಿದಿರುವ ಐತಿಹಾಸಿಕ ಸ್ಮಾರಕ ತಾಜ್ ಮಹಲ್ ಇದೆ. ಈ ನಗರ ಮೊಘಲರ ವೈಭವಕ್ಕೆ ಸಾಕ್ಷಿಯಾಗಿದೆ. ಅಲ್ಲದೇ ಇದರ ಹೊರತಾಗಿ ಇಲ್ಲಿ ಆಗ್ರಾ ಕೋಟೆ, ಫತೇಪುರ್ ಸಿಕ್ರಿ ಮತ್ತು ಇತ್ಮಾದ್-ಉದ್-ದೌಲಾ ಸಮಾಧಿ ಮುಂತಾದ ನೀವು ಭೇಟಿ ನೀಡಬಹುದಾದ ಸ್ಥಳಗಳಿವೆ.

Delhi Tour

ಜೈಪುರ

ರಾಜಸ್ಥಾನ ರಾಜ್ಯದ ರಾಜಧಾನಿಯಾಗಿರುವ ಜೈಪುರವನ್ನು  ಪಿಂಕ್ ಸಿಟಿ ಎಂದು ಕರೆಯುತ್ತಾರೆ. ದೆಹಲಿಯಿಂದ ಇಲ್ಲಿಗೆ ಐದೂವರೆ ಗಂಟೆಗಳ ಪ್ರಯಾಣ. ರಾಜಮನೆತನಗಳು ಆಡಳಿತ ನಡೆಸಿರುವ ಈ ಸ್ಥಳದಲ್ಲಿ ಭವ್ಯವಾದ ಕೋಟೆಗಳು, ಅರಮನೆಗಳು ಮತ್ತು ವರ್ಣರಂಜಿತವಾದ ಮಾರುಕಟ್ಟೆಗಳಿವೆ. ಅಲ್ಲದೇ ಇಲ್ಲಿರುವ ಅಮೇರ್ ಕೋಟೆ, ಸಿಟಿ ಪ್ಯಾಲೇಸ್, ಹವಾ ಮಹಲ್, ಜಂತರ್  ಮಂತರ್ ಇತ್ಯಾದಿಗಳು ಈ ಸ್ಥಳಕ್ಕೆ ಸಂಬಂಧಿಸಿದ ಸುವರ್ಣ ಗತಕಾಲದ ಕಥೆಗಳನ್ನು ತಿಳಿಸುತ್ತದೆ.

Delhi Tour

ಹೃಷಿಕೇಶ

ಹಿಮಾಲಯದ ಹೆಬ್ಬಾಗಿಲು ಎಂದು ಕರೆಯುವ ಹೃಷಿಕೇಶ ಪ್ರಕೃತಿ ಪ್ರಿಯರಿಗೆ ಹಾಗೂ ಆಧ್ಯಾತ್ಮಕ ಚಿಂತಕರಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಇಲ್ಲಿ ಗಂಗಾ ನದಿ ಹರಿಯುವುದರಿಂದ ಈ ಸ್ಥಳ ಪೂಜ್ಯನೀಯ ಸ್ಥಳ ಎಂದೆನಿಸಿಕೊಂಡಿದೆ. ಇಲ್ಲಿ ಧ್ಯಾನಕ್ಕಾಗಿ ಬೀಟಲ್ಸ್ ಆಶ್ರಮಕ್ಕೆ ಭೇಟಿ ನೀಡಬಹುದು. ಹಾಗೇ ಅದ್ಭುತವಾದ ಅನುಭವವನ್ನು ಪಡೆಯಲು ಲಕ್ಷ್ಮಣ ಜುಲಾಗೆ ಭೇಟಿ ನೀಡಬಹುದು. ಹಾಗೇ ಸಂಜೆಯ ವೇಳೆ ಗಂಗಾ ಆರತಿಯಲ್ಲಿ ಪಾಲ್ಗೊಳ್ಳಬಹುದು.

Delhi Tour

ಜಿಮ್ ಕಾರ್ಬೆಟ್ ನ್ಯಾಶನಲ್ ಪಾರ್ಕ್

ಇದು ಒಂದು ರಾಷ್ಟ್ರೀಯ ಉದ್ಯಾನವನವಾಗಿದೆ. ಇದು ಉತ್ತರಾಖಂಡ್ ರಾಜ್ಯದಲ್ಲಿದೆ. ದಿಲ್ಲಿಯಿಂದ ಇಲ್ಲಿಗೆ ಐದು ಗಂಟೆಗಳ ಪ್ರಯಾಣ. ಹಾಗಾಗಿ ವನ್ಯಜೀವಿ ಪ್ರೇಮಿಗಳು ಇಲ್ಲಿಗೆ ಭೇಟಿ ನೀಡುವುದನ್ನು ತಪ್ಪಿಸಲೇಬಾರದು. ಇಲ್ಲಿ ಬಂಗಾಳ ಹುಲಿಗಳು ಸೇರಿದಂತೆ ವಿವಿಧ ಜಾತಿಯ ಪ್ರಾಣಿ ಹಾಗೂ ಪಕ್ಷಿಗಳನ್ನು ನೋಡಬಹುದು. ಇಲ್ಲಿ ರೋಮಾಂಚನಕಾರಿಯಾದ ಸಫಾರಿ ಮಾಡಬಹುದು.

Delhi Tour

ನೀಮ್ರಾನಾ ಕೋಟೆ

ನೀಮ್ರಾನಾ ಕೋಟೆ ಒಂದು ಆಕರ್ಷಕ ಸ್ಥಳವಾಗಿದೆ. ಇದು ದಿಲ್ಲಿ-ಜೈಪುರ ಹೆದ್ದಾರಿಯಲ್ಲಿದೆ. 15ನೇ ಶತಮಾನದ ಹಿಂದಿನ ಈ ಕೋಟೆಯನ್ನು ಪಾರಂಪರಿಕ  ಹೋಟೆಲ್ ಆಗಿ ಪುನರ್ ಸ್ಥಾಪಿಸಲಾಗಿದೆ. ಇದು ಪ್ರವಾಸಿಗರಿಗೆ ರಾಜಮನೆತನದವರ ಗತಕಾಲದ ಅನುಭವವನ್ನು ನೀಡುತ್ತದೆ. ಬಹಳ ವಿಸ್ತಾರವಾದ ಕೋಟೆಯ ಸಂಕೀರ್ಣ, ರಾಜನಿಗೆ ಭಕ್ಷ್ಯಗಳ ನೀಡುವಂತಹ ಡೈನಿಂಗ್ ಟೇಬಲ್ ಗಳನ್ನು ಇಲ್ಲಿ ನೋಡಬಹುದು.

Delhi Tour

ಮಥುರಾ ಮತ್ತು ವೃಂದಾವನ

ಭಗವಂತ ಕೃಷ್ಣನು ಇಲ್ಲಿ ಜನಿಸಿದ ಹಿನ್ನೆಲೆಯಲ್ಲಿ ಇದನ್ನು ಪವಿತ್ರ ಸ್ಥಳವೆಂದು ಪರಿಗಣಿಸಲಾಗುತ್ತದೆ. ಉತ್ತರ ಪ್ರದೇಶದಲ್ಲಿರುವ ಈ ಅವಳಿ ಸ್ಥಳಗಳು ಪುರಾಣ ಮತ್ತು ಆಧ್ಯಾತ್ಮಿಕತೆಯ ಬಗ್ಗೆ ಸಾರುತ್ತದೆ. ಮಥುರಾದಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡಬಹುದು ಮತ್ತು ವೃಂದಾವನದಲ್ಲಿ ರೋಮಾಂಚಕ ಸ್ಥಳಗಳು ಮತ್ತು ದೇವಾಲಯದ ಬೀದಿಗಳಲ್ಲಿ ಸುತ್ತಾಡಬಹುದು. ಹೋಳಿ ಸಮಯದಲ್ಲಿ ಇಲ್ಲಿ ಹೆಚ್ಚಿನ ಆಚರಣೆಗಳನ್ನು ನೋಡಬಹುದು.

ಇದನ್ನೂ ಓದಿ:Monsoon Tour: ಮಳೆಗಾಲದ ಪ್ರವಾಸಕ್ಕೆ ಸೂಕ್ತ ಬೆಂಗಳೂರು ಸಮೀಪದ ಈ 8 ಅದ್ಭುತ ಸ್ಥಳಗಳು

Delhi Tour

ಲ್ಯಾನ್ಸ್ ಡೌನ್

ಇದು ಉತ್ತರಾಖಂಡದ ಗರ್ವಾಲ್ ಪ್ರದೇಶದಲ್ಲಿರುವ ಗಿರಿಧಾಮವಾಗಿದೆ. ಈ ಸ್ಥಳ ದಟ್ಟವಾದ ಓಕ್ ಕಾಡುಗಳಿಂದ ಸುತ್ತುವರಿದಿದೆ. ಇಲ್ಲಿ ಶಾಂತಿಯುತವಾದ ವಾತಾವರಣವನ್ನು ಕಾಣಬಹುದು. ಇಲ್ಲಿ ಐತಿಹಾಸಿಕ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಬಹುದು, ಹಿಮಾಲಯ ಶಿಖರಗಳ ವಿಹಂಗಮ ನೋಟವನ್ನು ಸವಿಯಬಹುದು. ಪ್ರಕೃತಿ ಪ್ರಿಯರು, ಸಾಹಸಮಯಿಗಳು ಹಾಗೂ ಏಕಾಂತವನ್ನು ಬಯಸುವವರು ಇಲ್ಲಿಗೆ ಭೇಟಿ ನೀಡಬಹುದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Internet Addiction: ಈ 10 ಲಕ್ಷಣಗಳು ನಿಮ್ಮಲ್ಲಿದ್ದರೆ, ನೀವೂ ಇಂಟರ್ನೆಟ್‌ ಚಟಕ್ಕೆ ಬಿದ್ದಿದ್ದೀರಿ ಎಂದರ್ಥ!

Internet addiction: ಆನ್‌ಲೈನ್‌ ಗೀಳಿನಿಂದಾಗಿ ಹಲವು ವಿಚಾರಗಳಲ್ಲಿ ನಾವು ಹಿಂದೆ ಬೀಳುತ್ತೇವೆ. ಏಕಾಗ್ರತೆ, ಓದುವ ಅಭ್ಯಾಸ, ದೈಹಿಕ ಚಟುವಟಿಕೆ ಇತ್ಯಾದಿಗಳೂ ಕೂಡಾ ಇದರಿಂದಾಗಿ ಕುಂಠಿತವಾಗುತ್ತಿದೆ. ದೈಹಿಕ ಹಾಗೂ ಮಾನಸಿಕವಾಗಿ ಇದು ಸಾಕಷ್ಟು ಕೆಟ್ಟ ಪರಿಣಾಮ ಬೀರುವುದರಿಂದ ಆದಷ್ಟು ಆರಂಭಿಕ ಹಂತದಲ್ಲಿರುವಾಗಲೇ ಈ ಚಟಕ್ಕೆ ಕಡಿವಾಣ ಹಾಕಬೇಕು.

VISTARANEWS.COM


on

Internet Addiction
Koo

ಲಂಗು ಲಗಾಮಿಲ್ಲದೆ ಇಂಟರ್ನೆಟ್‌ ಬಳಸುವ ಅಭ್ಯಾಸ ಇಂದು ಮಕ್ಕಳಾದಿಯಾಗಿ ಹಿರಿಯರನ್ನೂ ಕಾಡುತ್ತಿದೆ. ಇದರಿಂದ ದಿನನಿತ್ಯದ ಚಟುವಟಿಕೆಗಳಿಗೂ ಸಾಕಷ್ಟು ಸಮಸ್ಯೆಯೂ ಆಗುತ್ತಿದೆ. ಹಲವು ವಿಚಾರಗಳಲ್ಲಿ ನಾವು ಹಿಂದೆ ಬೀಳುತ್ತೇವೆ. ಏಕಾಗ್ರತೆ, ಓದುವ ಅಭ್ಯಾಸ, ದೈಹಿಕ ಚಟುವಟಿಕೆ ಇತ್ಯಾದಿಗಳೂ ಕೂಡಾ ಇದರಿಂದಾಗಿ ಕುಂಠಿತವಾಗುತ್ತಿದೆ. ದೈಹಿಕ ಹಾಗೂ ಮಾನಸಿಕವಾಗಿ ಇದು ಸಾಕಷ್ಟು ಕೆಟ್ಟ ಪರಿಣಾಮ ಬೀರುವುದರಿಂದ ಆದಷ್ಟು ಆರಂಭಿಕ ಹಂತದಲ್ಲಿರುವಾಗಲೇ ಈ ಚಟಕ್ಕೆ ಕಡಿವಾಣ ಹಾಕಬೇಕು. ಇಂಟರ್ನೆಟ್‌ ಅಡಿಕ್ಷನ್‌ ಅಥವಾ ಅಂತರ್ಜಾಲ ಚಟ (Internet addiction) ಎಂಬುದು ಇತ್ತೀಚಿನ ದಶಕದಲ್ಲಿ ಅತ್ಯಂತ ಹೆಚ್ಚಾಗಿ ಎಲ್ಲರನ್ನೂ ಬಿಡದೆ ಕಾಡುವ ದೌರ್ಬಲ್ಯ. ಅತ್ಯಂತ ಹೆಚ್ಚು, ಲಂಗು ಲಗಾಮಿಲ್ಲದೆ ಇಂಟರ್ನೆಟ್‌ ಬಳಸುವ ಅಭ್ಯಾಸ ಇಂದು ಮಕ್ಕಳಾದಿಯಾಗಿ ಹಿರಿಯರನ್ನೂ ಕಾಡುತ್ತಿದೆ. ಇದರಿಂದ ದಿನನಿತ್ಯದ ಚಟುವಟಿಕೆಗಳಿಗೂ ಸಾಕಷ್ಟು ಸಮಸ್ಯೆಯೂ ಆಗುತ್ತಿದೆ. ಹಲವು ವಿಚಾರಗಳಲ್ಲಿ ನಾವು ಹಿಂದೆ ಬೀಳುತ್ತೇವೆ. ಏಕಾಗ್ರತೆ, ಓದುವ ಅಭ್ಯಾಸ, ದೈಹಿಕ ಚಟುವಟಿಕೆ ಇತ್ಯಾದಿಗಳೂ ಕೂಡಾ ಇದರಿಂದಾಗಿ ಕುಂಠಿತವಾಗುತ್ತಿದೆ. ದೈಹಿಕ ಹಾಗೂ ಮಾನಸಿಕವಾಗಿ ಇದು ಸಾಕಷ್ಟು ಕೆಟ್ಟ ಪರಿಣಾಮ ಬೀರುವುದರಿಂದ ಆದಷ್ಟು ಆರಂಭಿಕ ಹಂತದಲ್ಲಿರುವಾಗಲೇ ಈ ಚಟಕ್ಕೆ ಕಡಿವಾಣ ಹಾಕಬೇಕು. ನಿಮಗೇ ತಿಳಿಯದಾ ಹಾಗೆ ನೀವು ಇಂಟರ್ನೆಟ್‌ ದಾಸರಾಗಿದ್ದೀರಾ? ಇಂಟರ್ನೆಟ್‌ನ ಚಟಕ್ಕೆ ಬಿದ್ದಿದ್ದೀರಾ? ಬನ್ನಿ, ಈ ಕೆಳಗಿನ ಅಭ್ಯಾಸಗಳು ನಿಮ್ಮಲ್ಲಿದ್ದರೆ ನೀವೂ ಇದರ ದಾಸರಾಗಿದ್ದೀರಿ ಎಂಬಲ್ಲಿ ಯಾವ ಸಂಶಯವೂ ಇಲ್ಲ.

woman holding mobile phone in social network and internet addiction

ಸದಾ ಇಂಟರ್ನೆಟ್‌ನದ್ದೇ ಧ್ಯಾನ

ಆಗಾಗ ನಿಮಗೆ ಆನ್‌ಲೈನ್‌ನ ಕೆಲಸಗಳೇ ಮನಸ್ಸಿನಲ್ಲಿ ಜ್ಞಾಪಕಕ್ಕೆ ಬರುತ್ತಿದೆಯಾ? ನೀವು ಯಾವುದಾದರೂ ಬೇರೆ ಕೆಲಸಕ್ಕೆ ಗಮನ ಕೊಡುವಾಗಲೂ ನೀವು ಕೆಲ ಹೊತ್ತಿನ ನಂತರ ಇಂಟರ್ನೆಟ್‌ನ ಬಳಕೆಯ ಬಗ್ಗೆ ಯೋಚನೆ ಮಾಡುತ್ತೀರುತ್ತೀರಿ ಎಂದಾದಲ್ಲಿ ನೀವು ಚಟಕ್ಕೆ ಬಿದ್ದಿದ್ದೀರಿ ಎಂದರ್ಥ.

ಕಡಿಮೆ ಬಳಸಲು ಸಾಧ್ಯವಾಗುತ್ತಿಲ್ಲ

ಇಂಟರ್ನೆಟ್‌ ಬಳಕೆಯನ್ನು ಕಡಿಮೆ ಮಾಡಲು ನಿಮ್ಮ ಕೈಯಲ್ಲಿ ಸಾಧ್ಯವಾಗುತ್ತಿಲ್ಲವೇ? ಹೆಚ್ಚು ಸಮಯವನ್ನು ಆನ್‌ಲೈನ್‌ನಲ್ಲಿ, ಅಥವಾ ಇಂಟರ್ನೆಟ್‌ ಆಧರಿಸಿದ ಕೆಲಸದಲ್ಲಿ ಕಳೆಯಲು ಇಷ್ಟಪಡುತ್ತೀರಿ ಅಥವಾ ಅದರಿಂದ ಹೊರಗೆ ಬರಲು ನೀವು ಯೋಚಿಸಿದರೂ ಸಾಧ್ಯವಾಗುತ್ತಿಲ್ಲ ಎಂದಾದಲ್ಲಿ ಅದು ಚಟವೇ.

ನಿತ್ಯ ಕೆಲಸಗಳನ್ನು ಬಿಟ್ಟು…

ನಿಮ್ಮ ಖಾಸಗಿ ಕೆಲಸಗಳನ್ನು ನಿರ್ಲಕ್ಷ್ಯ ಮಾಡಿ ನೀವು ಆನ್‌ಲೈನ್‌, ಅಥವಾ ಇಂಟರ್ನೆಟ್‌ನಲ್ಲಿರಲು ಬಯಸುತ್ತೀರಿ ಎಂದಾದಲ್ಲಿ ನೀವು ಚಟಕ್ಕೆ ಬಿದ್ದಿದ್ದೀರಿ ಎಂದರ್ಥ. ಮನೆಕೆಲಸಗಳು, ನಿಮ್ಮ ನಿತ್ಯಕೆಲಸಗಳು, ಡೆಡ್‌ಲೈನ್‌ಗಳು ಮರೆತು ನೀವು ಇದಕ್ಕೆ ದಾಸರಾಗಿದ್ದೀರಿ ಎಂದರೆ ಅದು ನಿಮಗೆ ಒಳ್ಳೆಯದಲ್ಲ.

Boy Plays Computer Game at Home, Gaming Addiction

ಇಂಟರ್‌ನೆಟ್‌ ಸಿಗದಿದ್ದಾಗ ಚಡಪಡಿಕೆ

ಇಂಟರ್‌ನೆಟ್‌ ಸಿಗದಿದ್ದಾಗ, ಇಂಟರ್ನೆಟ್‌ ಬಳಸಲು ಸಾಧ್ಯವಾಗುತ್ತಿಲ್ಲ ಎಂದಾದಾಗ ಕಿರಿಕಿರಿಯಾಗುತ್ತಿದೆಯೋ, ಬೇರೆ ಕೆಲಸಕ್ಕೆ ಗಮನ ಕೊಡಲು ಸಾಧ್ಯವಾಗುತ್ತಿಲ್ಲವೋ ಹಾಗಾದರೆ ಅದು ಇಂಟರ್ನೆಟ್‌ ಚಟದ ಕಾರಣದಿಂದಾಗಿಯೇ.

ಇಂಟರ್ನೆಟ್‌ ಅವಲಂಬನೆ

ನಿಮ್ಮ ತೊಂದರೆಗಳನ್ನು, ಬೇಸರಗಳನ್ನು ಮರೆಯಲು, ಒತ್ತಡವನ್ನು, ಋಣಾತ್ಮಕ ಚಿಂತನೆಗಳನ್ನು ಕಡಿಮೆ ಮಾಡಲು ಇಂಟರ್ನೆಟ್‌ನಲ್ಲಿರುವುದರ ಮೂಲಕ ಪಾರಾಗಲು ಪ್ರಯತ್ನಿಸುತ್ತೀರಿ ಎಂದರೆ ಅದು ಖಂಡಿತ ಚಟವೇ. ನಿಮ್ಮ ಈ ಭಾವನೆಗಳಿಗೆ ಬೇರೆ ಕಾರಣ ಹುಡುಕಿ ಅದನ್ನು ಸರಿ ಮಾಡಬೇಕೇ ಹೊರತು, ಇಂಟರ್ನೆಟ್‌ ನಿಮ್ಮ ಪಲಾಯನದ ಹಾದಿ ಆಗಬಾರದು.

ಕುಟುಂಬದವರ ಜೊತೆ ಮುಚ್ಚಿಡುತ್ತೀರಿ

ಆನ್‌ಲೈನ್‌/ ಇಂಟರ್ನೆಟ್‌ನಲ್ಲಿ ನೀವು ಕಳೆದ ಸಮಯವನ್ನು ನಿಮ್ಮ ಕುಟುಂಬದವರ ಜೊತೆ ಮುಚ್ಚಿಡುತ್ತೀರಿ ಎಂದಾದಲ್ಲಿ ಖಂಡಿತವಾಗಿಯೂ ನೀವು ಅದರ ದಾಸರಾಗಿದ್ದೀರಿ ಎಂದರ್ಥ.

Addicted to internet

ವಾಗ್ವಾದಗಳನ್ನು ಸೃಷ್ಟಿಸುತ್ತಿದೆಯೆ?

ಇಂಟರ್ನೆಟ್‌ ಬಳಕೆಯೇ ನಿಮ್ಮ ಹಾಗೂ ನಿಮ್ಮ ಸಂಗಾತಿಯ/ಪ್ರೀತಿಪಾತ್ರರ/ಹೆತ್ತವರ ಜೊತೆಗೆ ವಾಗ್ವಾದಗಳನ್ನು ಸೃಷ್ಟಿಸುತ್ತಿದೆ ಎಂದಾದಲ್ಲಿ ನೀವು ಇಂಟರ್ನೆಟ್‌ ಚಟಕ್ಕೆ ಬಿದ್ದಿದ್ದೀರಿ ಎಂದರ್ಥ. ಸಂಬಂಧಗಳ ಮಹತ್ವವನ್ನು ಅರಿಯದೆ, ಅದಕ್ಕೆ ಸರಿಯಾದ ಸಮಯವನ್ನು ನೀಡದೆ, ನೀವು ಇಂಟರ್ನೆಟ್‌ ಮೂಲಕ ನಿಮ್ಮ ಶಾಂತಿ ಕಂಡುಕೊಳ್ಳುತ್ತೀರಿ ಎಂದರೆ ಅದು ಒಳ್ಳೆಯ ಬೆಳವಣಿಗೆಯಲ್ಲ.

ಕಣ್ಣು ಸುಸ್ತಾದಂತೆ ಅನಿಸುವುದು

ಕಣ್ಣು ಸುಸ್ತಾದಂತೆ ಅನಿಸುವುದು, ಬೆನ್ನು ನೋವು, ಸೊಂಟ ನೋವು, ನಿದ್ದೆಯಲ್ಲಿ ಸಮಸ್ಯೆ ಇತ್ಯಾದಿಗಳು ನಿಮ್ಮನ್ನು ಕಾಡುತ್ತಿದೆ ಎಂದರೆ ನೀವು ಅತಿಯಾಗಿ ಇಂಟರ್ನೆಟ್‌ ಬಳಸುತ್ತಿದ್ದೀರಿ ಎಂದರ್ಥ,

Addicted From Social Media Woman

ಹೊರಗಿನ ಆಸಕ್ತಿ ಕಡಿಮೆ

ಹೊರಗಿನ ಕೆಲಸ, ವ್ಯಾಯಾಮ, ಇತರ ಚಟುವಟಿಕೆಗಳಲ್ಲಿ ಆಸಕ್ತಿ ಕಡಿಮೆಯಾಗಿದೆ ಎಂದಾದಲ್ಲಿ ಹಾಗೂ ನೀವು ಆನ್‌ಲೈನ್‌ ಇರುವುದನ್ನೇ ಇಷ್ಟಪಡುತ್ತೀರಿ, ಅದಕ್ಕಾಗಿ ಕಾರಣ ಹುಡುಕುತ್ತೀರಿ ಎಂದಾದಲ್ಲಿ ನಿಮಗೆ ಇಂಟರ್ನೆಟ್‌ ಚಟವೇ.

ಇದನ್ನೂ ಓದಿ: Back Acne Problem: ಬೆನ್ನಿನ ಮೇಲಿನ ಮೊಡವೆಗಳ ಸಮಸ್ಯೆಯೇ? ಇಲ್ಲಿವೆ ಸರಳ ಪರಿಹಾರಕ್ಕೆ ಅಷ್ಟಸೂತ್ರಗಳು!

ಆನ್‌ಲೈನ್‌ನಲ್ಲೇ ಹೆಚ್ಚು ಸಮಯ

ದಿನಗಳೆದಂತೆ ಹೆಚ್ಚು ಹೆಚ್ಚು ಸಮಯ ಆನ್‌ಲೈನ್‌ಗಾಗಿ ಮೀಸಲಿಡುತ್ತಿದ್ದೀರಿ ಹಾಗೂ ಅದರಿಂದ ಸಂತೋಷ ಪಡೆಯುತ್ತಿದ್ದೀರಿ ಎಂದರೂ ಕೂಡಾ ನೀವು ಇಂಟರ್ನೆಟ್‌ ದಾಸರಾಗಿದ್ದೀರಿ ಎಂದರ್ಥ. ಇಂತಹ ಲಕ್ಷಣಗಳು ಕಂಡು ಬಂದಲ್ಲಿ ಅದನ್ನು ಮೊದಲೇ ಅರಿತುಕೊಂಡು ಈ ಅಭ್ಯಾಸವನ್ನು ಕಡಿಮೆ ಮಾಡಲು ಪ್ರಾಮಾಣಿಕ ಪ್ರಯತ್ನ, ಆಪ್ತ ಸಮಾಲೋಚನೆ ಹಾಗೂ ತಜ್ಞರ ನೆರವು ಪಡೆಯುವುದು ಅತ್ಯಂತ ಅಗತ್ಯ.

Continue Reading

ಫ್ಯಾಷನ್

Ashada Sale 2024: ಆಷಾಢ ಸೇಲ್‌ನಲ್ಲಿ ಶಾಪಿಂಗ್‌ ಮಾಡುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ 5 ಸಂಗತಿಗಳು

Ashada Sale 2024: ಪ್ರತಿ ವರ್ಷದಂತೆ ಈ ಬಾರಿಯೂ ಆಷಾಢ ಸೇಲ್‌ ಎಲ್ಲೆಡೆ ಆರಂಭವಾಗಿದೆ. ಈ ಸೇಲ್‌ನಲ್ಲಿ ಖರೀದಿಸುವವರು ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡಲ್ಲಿ, ಉತ್ತಮ ಖರೀದಿಯೊಂದಿಗೆ ಒಂದಿಷ್ಟು ಉಳಿತಾಯ ಕೂಡ ಮಾಡಬಹುದು ಎನ್ನುತ್ತಾರೆ ಶಾಪಿಂಗ್‌ ಎಕ್ಸ್‌ಫರ್ಟ್ಸ್‌. ಆದರೆ, ಅದು ಹೇಗೆ? ಇಲ್ಲಿದೆ ಸಿಂಪಲ್‌ ಟಿಪ್ಸ್.

VISTARANEWS.COM


on

Ashada Sale 2024
ಚಿತ್ರಗಳು: ಮಿಂಚು
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನೀವು ಆಷಾಢದಲ್ಲಿ ನಡೆಯುವ ಸೇಲ್‌ನಲ್ಲಿ (Ashada Sale 2024) ಶಾಪಿಂಗ್‌ ಮಾಡುತ್ತೀದ್ದೀರಾ! ಈ ಆಷಾಢದಲ್ಲಿ ಕಡಿಮೆ ಬೆಲೆಗೆ ಸಿಗುವುದೆಂದು ಖರೀದಿಗೆ ಮುಂದಾಗಿದ್ದೀರಾ? ಹಾಗಾದಲ್ಲಿ, ಒಂದಿಷ್ಟು ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಿ. ಆಗಷ್ಟೇ! ನೀವು ಈ ಖರೀದಿಯ ಸದುಪಯೋಗದೊಂದಿಗೆ ಕೊಂಚ ಉಳಿತಾಯ ಕೂಡ ಮಾಡಬಹುದು ಎನ್ನುತ್ತಾರೆ ಶಾಪಿಂಗ್‌ ಎಕ್ಸ್‌ಫರ್ಟ್ಸ್‌. “ಪ್ರತಿ ವರ್ಷದಂತೆ ಈ ಬಾರಿಯೂ ಆಷಾಢ ಸೇಲ್‌ ಎಲ್ಲೆಡೆ ಆರಂಭವಾಗಿದೆ. ಮಾಲ್‌ಗಳಲ್ಲಿ ಮಾತ್ರವಲ್ಲ, ಸಾಕಷ್ಟು ಜ್ಯುವೆಲರಿ ಶಾಪ್‌ಗಳು ಹಾಗೂ ಬಟ್ಟೆ ಅಂಗಡಿಗಳು ಕೂಡ ಈ ಸೇಲ್‌ ಆಯೋಜಿಸುತ್ತಿವೆ. ಅಲ್ಲದೇ, ಸಾಕಷ್ಟು ಎಕ್ಸಿಬೀಷನ್‌ಗಳು ಕೂಡ ನಡೆಯುತ್ತಿವೆ. ಇನ್ನು, ಇದಕ್ಕೆ ಪೂರಕ ಎಂಬಂತೆ, ಮುಂಬರುವ ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು ಸಾಕಷ್ಟು ಮಂದಿ ಈ ಸೇಲ್ನಲ್ಲಿ ಶಾಪಿಂಗ್‌ ಮಾಡುವುದು ಕಂಡು ಬರುತ್ತಿದೆ” ಎನ್ನುತ್ತಾರೆ ಶಾಪಿಂಗ್‌ ಎಕ್ಸ್‌ಫರ್ಟ್ ರಾಘವ್‌ ಹಾಗೂ ಧನ್ಯ ಶರ್ಮಾ.

Ashada Sale 2024

ಫೆಸ್ಟಿವ್‌ ಸೀಸನ್‌ಗೆ ಈಗಲೇ ಖರೀದಿಸಿ

ಮುಂಬರುವ ಫೆಸ್ಟಿವ್‌ ಸೀಸನ್‌ಗೆ ಈಗಲೇ ಖರೀದಿ ಆರಂಭಿಸಬಹುದು. ಹಾಗೆಂದು ಕಂಡಕಂಡದ್ದನ್ನೇಲ್ಲಾ ಖರೀದಿಸಿದಲ್ಲಿ, ಹಣ ವ್ಯಯವಾಗಬಹುದು. ಎಥ್ನಿಕ್‌ ಡಿಸೈನರ್‌ವೇರ್‌ಗಳು ಈ ಆಷಾಡ ಸೇಲ್‌ನಲ್ಲಿ ಕಡಿಮೆ ಬೆಲೆಗೆ ದೊರಕುತ್ತವೆ. ಅಂತಹವನ್ನು ಕೊಂಡಲ್ಲಿ, ಮುಂಬರುವ ಹಬ್ಬಗಳಿಗೆ ಖರೀದಿಸುವ ಜವಾಬ್ದಾರಿ ಕೊಂಚ ಕಡಿಮೆಯಾಗಬಹುದು.

Ashada Sale 2024

ಆಭರಣಗಳ ಖರೀದಿ

ಬೆಳ್ಳಿ-ಬಂಗಾರದ ಆಭರಣಗಳನ್ನು ಮುಂಬರುವ ಶ್ರಾವಣದಲ್ಲಿ ಖರೀದಿ ಮಾಡುವ ಯೋಚನೆಯಿದ್ದಲ್ಲಿ, ಅದನ್ನು ಮುಂದೂಡದೇ ಈ ಸಮಯದಲ್ಲೆ ಜಾರಿಗೊಳಿಸಿ. ಹೌದು, ಕೆಲವು ಅಂಗಡಿಗಳಲ್ಲಿ ಆಷಾಡ ಸೇಲ್‌ನಲ್ಲಿ ಮೇಕಿಂಗ್‌ ಚಾರ್ಜ್‌, ವೇಸ್ಟೆಜ್‌ ಎಲ್ಲವನ್ನು ಕಡಿತಗೊಳಿಸಲಾಗಿರುತ್ತದೆ. ಇದರಿಂದ ನಿಮಗೆ ಕೊಂಚ ಲಾಭವಾದರೂ ಆಗಬಹುದು.

Ashada Sale 2024

ಆನ್‌ಲೈನ್‌ ಸೇಲ್‌ನ ಸದುಪಯೋಗ

ಆನ್‌ಲೈನ್‌ ಶಾಪಿಂಗ್‌ ಮಾಡುವಾಗ ಎಚ್ಚರವಹಿಸಿ. ಆನ್‌ಲೈನ್‌ ಶಾಪಿಂಗ್‌ ಮಾಡಿ. ಕಣ್ಣಿಗೆ ಬೇಕಾದ ವಸ್ತುಗಳನ್ನು ಮನೆಯಲ್ಲೆ ಕುಳಿತು ಖರೀದಿಸಬಹುದು. ಫ್ಯಾಷನ್‌ವೇರ್ಸ್‌, ಬ್ಯೂಟಿ ಪ್ರಾಡಕ್ಟ್ಸ್, ಕಿಚನ್‌ ಸಾಮಗ್ರಿಗಳಿಂದ ಹಿಡಿದು ಸಾಕಷ್ಟು ವಸ್ತುಗಳಿಗೆ ಆಷಾಡ ಸೇಲ್‌ನಲ್ಲಿ ಆಫರ್‌ಗಳ ಸುರಿಮಳೆಯನ್ನೇ ಕಾಣಬಹುದು.

Ashada Sale 2024

ಎಕ್ಸ್‌ಚೇಗ್‌ಗೆ ಅವಕಾಶವಿರುವುದಿಲ್ಲ

ಯಾವುದೇ ಒಂದು ಸೇಲ್‌ನಲ್ಲಿ ಶಾಪಿಂಗ್‌ ಮಾಡುವಾಗ ತೀರಾ ಅಗತ್ಯವಾಗಿರುವಂತವಕ್ಕೆ ಮಾತ್ರ ಆದ್ಯತೆ ನೀಡಬೇಕು. ಯಾಕೆಂದರೇ, ಅವಕ್ಕೆ ಎಕ್ಸ್ಚೇಂಜ್‌ ಸೌಲಭ್ಯ ಇರುವುದಿಲ್ಲ ಎಂಬುದು ನೆನಪಿರಲಿ.

ಇದನ್ನೂ ಓದಿ: Paris Fashion Week: ಪ್ಯಾರಿಸ್‌ ಹಾಟ್‌ ಕೌಚರ್‌ ಫ್ಯಾಷನ್‌ ವೀಕ್ 2024ರ ಹೈಲೈಟ್ಸ್

ಮಾಲ್‌ಗಳಲ್ಲಿ ಶಾಪಿಂಗ್‌

ಮಾಲ್‌ಗಳಲ್ಲಿ ಲಭ್ಯವಿರುವ ಆಷಾಡ ಸೇಲ್‌ನಲ್ಲಿ, ನೀವು ನಾನಾ ಪಾಪುಲರ್‌ ಬ್ರಾಂಡ್‌ನ ಗುಣ ಮಟ್ಟದ ಫ್ಯಾಷನ್‌ವೇರ್ಸ್ ಹಾಗೂ ಆಕ್ಸೆಸರೀಸ್‌ಗಳನ್ನು ಕಡಿಮೆ ಬೆಲೆಗೆ ಖರೀದಿಸಬಹುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Star Fashion: ಬ್ಲ್ಯಾಕ್‌ & ವೈಟ್‌ ಪ್ರಿಂಟೆಡ್‌ ಜಂಪ್‌ಸೂಟ್‌ನಲ್ಲಿ ನಟಿ ಆರೋಹಿ ನಾರಾಯಣ್‌ ಸ್ಟೈಲಿಶ್‌ ಲುಕ್‌!

Star Fashion: ಸ್ಯಾಂಡಲ್‌ವುಡ್‌ ನಟಿ ಆರೋಹಿ ನಾರಾಯಣ್‌, ಅಬ್‌ಸ್ಟ್ರಾಕ್ಟ್ ಪ್ರಿಂಟ್ಸ್ ಇರುವಂತಹ ಬ್ಲ್ಯಾಕ್‌ & ವೈಟ್‌ ಜಂಪ್‌ಸೂಟ್‌ನಲ್ಲಿ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿದ್ದಾರೆ. ಹಾಗಾದಲ್ಲಿ, ಈ ಡ್ರೆಸ್‌ ವಿಶೇಷತೆಯೇನು? ಇವರಂತೆಯೇ ಕಾಣಿಸಲು ಸ್ಟೈಲಿಂಗ್‌ ಮಾಡುವುದು ಹೇಗೆ ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

Star Fashion
ಚಿತ್ರಗಳು: ಆರೋಹಿ ನಾರಾಯಣ್‌, ನಟಿ, ಫೋಟೋ ಕೃಪೆ: ಸಂದೀಪ್‌ ಹೊಲ್ಲಾ, ಹೊಲ್ಲಾ ಫೋಟೋಗ್ರಾಫಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬ್ಲ್ಯಾಕ್‌ & ವೈಟ್‌ ಪ್ರಿಂಟೆಡ್‌ ಜಂಪ್‌ಸೂಟ್‌ನಲ್ಲಿ ನಟಿ ಅರೋಹಿ ನಾರಾಯಣ್‌ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿದ್ದು, ಫ್ಯಾಷನ್‌ ಪ್ರಿಯರ ಗಮನ ಸೆಳೆದಿದೆ.

Star Fashion

ಅಬ್‌ಸ್ಟ್ರಾಕ್ಟ್ ಪ್ರಿಂಟೆಡ್‌ ಜಂಪ್‌ಸೂಟ್‌

ಹಾಲ್ಟರ್‌ ನೆಕ್‌ಲೈನ್‌ನ ಅಬ್‌ಸ್ಟ್ರಾಕ್ಟ್ ಪ್ರಿಂಟ್ಸ್ ಇರುವಂತಹ ಬ್ಲ್ಯಾಕ್‌ & ವೈಟ್‌ ಬೋ, ಜಂಪ್‌ಸೂಟ್‌ನಲ್ಲಿ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿರುವ ಫೋಟೋಗಳನ್ನು ನಟಿ ಆರೋಹಿ ನಾರಾಯಣ್‌, ಬ್ಯಾಕ್‌ ಟು ಬ್ಯಾಕ್‌ ಸೋಷಿಯಲ್‌ ಮೀಡಿಯಾದಲ್ಲಿ , ಅಪ್‌ಲೋಡ್‌ ಮಾಡಿದ್ದು, ಇದು ಫ್ಯಾಷನ್‌ ಪ್ರಿಯ ಅಭಿಮಾನಿಗಳನ್ನು ಆಕರ್ಷಿಸಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ಜಂಪ್‌ ಸೂಟ್‌ ಇವರಿಗೆ ಬಾಲಿವುಡ್‌ ಸೆಲೆಬ್ರೆಟಿ ಲುಕ್‌ ನೀಡಿದೆ.

Star Fashion

ನಟಿ ಆರೋಹಿ ನಾರಾಯಣ್‌ ಸ್ಟೈಲಿಶ್‌ ಲುಕ್‌

ಸ್ಯಾಂಡಲ್‌ವುಡ್‌ ನಟಿಯಾಗಿರುವ ಆರೋಹಿ ನಾರಾಯಣ್‌ ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು, ಮಾಡೆಲಿಂಗ್‌ ಕೂಡ ಮಾಡಿದ್ದಾರೆ. ಆಗಾಗ್ಗೆ ಸಾಕಷ್ಟು ಫ್ಯಾಷೆನಬಲ್‌ ಲುಕ್‌ ಇರುವಂತಹ ಫೋಟೋಶೂಟ್‌ಗಳಲ್ಲಿ ಪಾಲ್ಗೊಳ್ಳುತ್ತಲೇ ಇರುತ್ತಾರೆ. ಅವರ ಪ್ರತಿಯೊಂದು ಡ್ರೆಸ್‌ಗಳಲ್ಲೂ ಫ್ಯಾಷನ್‌ ಸೆನ್ಸ್ ಎದ್ದು ಕಾಣುತ್ತದೆ. ಅವರ ಸ್ಟೈಲಿಂಗ್‌ ಕೂಡ ಎಂತಹವರನ್ನು ಆಕರ್ಷಿಸುವಂತದ್ದಾಗಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು. ಅವರು ಹೇಳುವಂತೆ, ಆರೋಹಿಯ ಫ್ಯಾಷನ್‌ ಕೊಂಚ ವಿಭಿನ್ನವಾಗಿರುವುದು ಕಂಡು ಬರುತ್ತದೆ. ಅಲ್ಲದೇ, ಅವರ ಮುಖದ ಮೇಲಿನ ಮುಗುಳ್ನಗೆ ಹಾಗೂ ನಗು ಇಡೀ ಅವರ ಲುಕ್‌ಗೆ ಸಾಥ್‌ ನೀಡುತ್ತಿದೆ ಎಂದಿದ್ದಾರೆ.

Star Fashion

ಜಂಪ್‌ಸೂಟ್‌ ವಿನ್ಯಾಸ

ಸ್ಟೈಲಿಸ್ಟ್‌ಗಳು ಹೇಳುವಂತೆ, ಜಂಪ್‌ ಸೂಟ್‌ಗಳೆಂದಾಕ್ಷಣ ಎಲ್ಲವೂ ಒಂದೇ ಬಗೆಯದ್ದಾಗಿ ಇರುವುದಿಲ್ಲ! ನೋಡಲು ವಿನ್ಯಾಸ ಒಂದೇ ತರಹದ್ದಾಗಿದ್ದರೂ ಅವುಗಳ ಪ್ರಿಂಟ್ಸ್, ನೆಕ್‌ಲೈನ್‌, ವೇಸ್ಟ್‌ಲೇನ್‌ ಹಾಗೂ ಸ್ಲೀವ್‌ಗಳಿಂದ ಅವನ್ನು ವಿಂಗಡಿಸಬಹುದು. ಅವರವರ ಆಯ್ಕೆಗೆ ತಕ್ಕಂತೆ ಅವು ಹೈಲೈಟಾಗುತ್ತವೆ ಎನ್ನುತ್ತಾರೆ.

ಇದನ್ನೂ ಓದಿ: Monsoon Rain Boots Fashion: ಮಕ್ಕಳ ಮಾನ್ಸೂನ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾದ 3 ಬಗೆಯ ರೈನ್‌ ಬೂಟ್ಸ್

ಜಂಪ್ ಸೂಟ್‌ನಲ್ಲಿ ಆರೋಹಿಯಂತೆ ಸ್ಟೈಲಿಶ್‌ ಆಗಿ ಕಾಣಿಸಲು ಹೀಗೆ ಮಾಡಿ

  • ಟ್ರೆಂಡಿಯಾಗಿರುವ ಪ್ರಿಂಟೆಡ್‌ ಜಂಪ್‌ ಸೂಟ್‌ ಆಯ್ಕೆ ಮಾಡಿ
  • ಧರಿಸುವ ಜಂಪ್‌ಸೂಟ್‌ನ ನೆಕ್‌ಲೈನ್‌ಗೂ ಪ್ರಾಮುಖ್ಯತೆ ನೀಡಿ.
  • ವೆಸ್ಟರ್ನ್‌ ಲುಕ್‌ಗೆ ಹೊಂದುವಂತ ಮೇಕೋವರ್‌ಗೆ ಸೈ ಎನ್ನಿ.
  • ಮಿನಿಮಲ್‌ ಆಕ್ಸೆಸರೀಸ್‌ ಧರಿಸಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಕೊಡಗು

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

Heart Attack: ಕೆಲಸಕ್ಕೆ ಹಾಜರಾಗಿದ್ದಲೇ ಹಠಾತ್ ಹೃದಯಾಘಾತ ಸಂಭವಿಸಿದ್ದು, ಕೊಡಗಿನಲ್ಲಿ ಯುವತಿಯೊಬ್ಬಳ ಪ್ರಾಣಪಕ್ಷಿ ಹಾರಿ ಹೋಗಿದೆ.

VISTARANEWS.COM


on

By

Heart Attack
Koo

ಕೊಡಗು: ಇತ್ತೀಚೆಗೆ ಯುವಜನತೆಯಲ್ಲೇ ಹಾರ್ಟ್‌ ಅಟ್ಯಾಕ್‌ ಹೆಚ್ಚಾಗುತ್ತಿದ್ದು, ಆತಂಕ ಮೂಡಿಸಿದೆ. ಹೃದಯವು ಯಾವ ಕ್ಷಣದಲ್ಲಿ ಆಘಾತಕ್ಕೆ (Heart Attack) ಒಳಗಾಗುತ್ತದೆ ಎಂದು ಅಂದಾಜಿಸಲೂ ಸಾಧ್ಯವಿಲ್ಲ. ನಿಂತ ನಿಲುವಿನಲ್ಲೇ ಬದುಕನ್ನು ಸ್ತಬ್ಧಗೊಳಿಸುವ ನಿರ್ನಾಮ ಶಕ್ತಿಯನ್ನು ಅದು ಹೊಂದಿದೆ. ಕುಳಿತಲ್ಲೇ ಕುಸಿಯುವುದು, ನಿಂತಲ್ಲೇ ಉರುಳಿ ಬೀಳುವುದು, ಮಲಗಿದಲ್ಲೇ ಮರಣಿಸುವುದು, ನೃತ್ಯ ಮಾಡುತ್ತಲೇ ಹೃದಯ ಸ್ತಬ್ಧವಾಗುವುದು. ಹೀಗೆ ಸಾವಿನ ಹತ್ತಾರು ಭಯಾನಕ ಸನ್ನಿವೇಶಗಳನ್ನು ನಾವು ನೋಡಿದ್ದೇವೆ. ಇದೀಗ ಕೊಡಗಿನಲ್ಲಿ ಯುವತಿಯೊಬ್ಬಳು ಹೃದಯಾಘಾತಕ್ಕೆ ಬಲಿಯಾಗಿದ್ದಾಳೆ.

ಮಡಿಕೇರಿ ತಾಲೂಕಿನ ನೆಲಜಿ ಗ್ರಾಮದ ಮಣವಟ್ಟಿರ ಪೊನ್ನಪ್ಪ ಅವರ ಮಗಳು ನಿಲಿಕ ಪೊನ್ನಪ್ಪ (24) ಮೃತ ದುರ್ದೈವಿ. ಗುರುವಾರ ಬೆಳಗ್ಗೆ ನಿಲಿಕ ಕರ್ತವ್ಯಕ್ಕೆಂದು ಮನೆಯಿಂದ ಹೊರಟಾಗ ಹೃದಯ ಬಡಿತವೇ ನಿಂತು ಹೋಗಿದೆ. ಎದೆ ನೋವೆಂದು ಒದ್ದಾಡಿದ ನಿಲಿಕ ಕುಸಿದು ಬಿದ್ದಿದ್ದಳು. ಕೂಡಲೇ ಅಲ್ಲಿದ್ದವರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅದಾಗಲೇ ಆಕೆಯ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ವೈದ್ಯರು ದೃಢಪಡಿಸಿದ್ದರು.

ಇದನ್ನೂ ಓದಿ: Silent Heart Attack: ಏನಿದು ಸೈಲೆಂಟ್‌ ಹಾರ್ಟ್‌ ಅಟ್ಯಾಕ್‌? ಇದರ ಲಕ್ಷಣಗಳೇನು?

ಕ್ಯಾಸಿನೋದಲ್ಲಿ 33 ಕೋಟಿ ರೂ. ಜಾಕ್‌ಪಾಟ್‌; ಖುಷಿ ಹೆಚ್ಚಾಗಿ ಹಾರ್ಟ್‌ ಅಟ್ಯಾಕ್‌!

ತುಂಬಾ ಖುಷಿಯಾದಾಗ ಕೆಲವರಿಗೆ ತಮ್ಮ ಖುಷಿಯನ್ನು ಹೇಗೆ ವ್ಯಕ್ತಪಡಿಸುವುದು ಎಂದು ಗೊತ್ತಾಗುವುದಿಲ್ಲ. ಇನ್ನು ಕೆಲವರಿಗೆ ಯಾವುದಾದರೂ ಶಾಕಿಂಗ್‌ ನ್ಯೂಸ್‌ ಸುದ್ದಿ ಹೇಳಿದರೂ ಯಾವುದೇ ತರಹದ ಪ್ರತಿಕ್ರಿಯೆ ವ್ಯಕ್ತಪಡಿಸುವುದಿಲ್ಲ. ಇಷ್ಟೆಲ್ಲಾ ಪೀಠಿಕೆ ಯಾಕೆಂದರೆ ಇಲ್ಲೊಬ್ಬರು ಖುಷಿಯನ್ನು ತಡೆದುಕೊಳ್ಳಲಾಗದೇ ಮೃತಪಟ್ಟ ಘಟನೆ ನಡೆದಿದೆ. ಸಿಂಗಾಪುರದ ಮರೀನಾ ಬೇ ಸ್ಯಾಂಡ್ಸ್ ಕ್ಯಾಸಿನೊನದಲ್ಲಿ ಕೋಟಿ ಕೋಟಿ ಹಣ ಗೆದ್ದ ವ್ಯಕ್ತಿಯೊಬ್ಬರು ಖುಷಿಯನ್ನು ತಡೆದುಕೊಳ್ಳಲಾಗದೇ ಮೃತಪಟ್ಟಿರುವ ವಿಡಿಯೊವೊಂದು ವೈರಲ್‌ (Viral Video) ಆಗಿದೆ.

ಸಿಂಗಾಪುರದ ಮರೀನಾ ಬೇ ಸ್ಯಾಂಡ್ಸ್ ಕ್ಯಾಸಿನೊದಲ್ಲಿ 4 ಮಿಲಿಯನ್ ಡಾಲರ್ (ಸುಮಾರು 33 ಕೋಟಿ ರೂ. ) ಜಾಕ್‌ಪಾಟ್‌ ಗೆದ್ದ ಶ್ರೀಮಂತ ವ್ಯಕ್ತಿಯೊಬ್ಬ ಗೆಲುವಿನ ಖುಷಿ ತಡೆದುಕೊಳ್ಳಲಾಗದೆ ಹೃದಯ ಸ್ತಂಭನದಿಂದ (Heart attack) ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ. ಕ್ಯಾಸಿನೊಗೆ ನಿಯಮಿತವಾಗಿ ಭೇಟಿ ನೀಡುತ್ತಿದ್ದ ವ್ಯಕ್ತಿ ಪ್ರತಿ ಸಲ ಬರಿಗೈಯಲ್ಲಿ ವಾಪಾಸ್‌ ಆಗುತ್ತಿದ್ದರಂತೆ. ಆದರೆ ಈ ಬಾರಿ ಮಾತ್ರ ಇವರಿಗೆ ಜಾಕ್‌ಪಾಟ್‌ ಹೊಡೆದಿದೆ.

ಇದನ್ನೂ ಓದಿ: Prevent Heart Attack: ಹೃದಯಾಘಾತದಿಂದ ಪಾರಾಗಲು ಈ 10 ಸರಳ ಟಿಪ್ಸ್ ಪಾಲಿಸಿ

ಅವರು ನಿರೀಕ್ಷಿಸದಂತಹ ಖುಷಿ ಅಂದು ಅವರ ಪಾಲಿಗೆ ಒಲಿದು ಬಂದಿತ್ತು. ಹಣ ಗೆದ್ದ ಖುಷಿಯಲ್ಲಿದ್ದ ಅವರು ಆ ಖುಷಿಯನ್ನು ಅನುಭವಿಸಲು ಮಾತ್ರ ಆಗಲಿಲ್ಲ. ಗೆದ್ದ ಉತ್ಸಾಹದಲ್ಲಿದ್ದ ಅವರು ಕಾರ್ಡಿಯಾಕ್ ಅರೆಸ್ಟ್‌ ಆಗಿ ಅಲ್ಲೆ ಕುಸಿದು ಬಿದ್ದರು. ಜಾಕ್‌ಪಾಟ್‌ ಹೊಡೆದ ಖುಷಿಯನ್ನು ತಡೆದುಕೊಳ್ಳಲಾಗದೆ ಭಾವಪರವಶರಾಗಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕುಸಿದುಬಿದ್ದ ವ್ಯಕ್ತಿಗೆ ಕ್ಯಾಸಿನೊ ಸಿಬ್ಬಂದಿ ಮತ್ತು ತುರ್ತು ವೈದ್ಯಕೀಯ ಚಿಕಿತ್ಸೆ ಒದಗಿಸಿದರೂ ವ್ಯಕ್ತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅತಿಯಾದ ಸಂತೋಷವೇ ವ್ಯಕ್ತಿಯ ಕಾರ್ಡಿಯಾಕ್‌ ಅರೆಸ್ಟ್‌ಗೆ ಕಾರಣ ಎಂದು ವೈದ್ಯರು ಘೋಷಿಸಿದರು.

ಮರೀನಾ ಕೊಲ್ಲಿಯಲ್ಲಿರುವ ಈ ಕ್ಯಾಸಿನೊ ಅದರ ನಾಲ್ಕು ಹಂತದ ಗೇಮಿಂಗ್ ಫ್ಲೋರ್ರ ಸ್ಪೇಸ್ ಮತ್ತು 2300ಕ್ಕೂ ಹೆಚ್ಚಿನ ಸ್ಲಾಟ್ ಯಂತ್ರಗಳೊಂದಿಗೆ ಹೊಸ ಮತ್ತು ಜನಪ್ರಿಯ ಎಲೆಕ್ಟ್ರಾನಿಕ್ ಗೇಮಿಂಗ್ ಆಯ್ಕೆಯನ್ನೂ ಗ್ರಾಹಕರಿಗೆ ಒದಗಿಸುತ್ತದೆ. 250ಕ್ಕೂ ಹೆಚ್ಚಿನ ಆಟಗಳೊಂದಿಗೆ ಭೇಟಿನೀಡುವ ಪ್ರತಿಯೊಬ್ಬರಿಗೂ ಭರಪೂರ ಮನರಂಜನೆ ಒದಗಿಸುತ್ತದೆ. ಇಲ್ಲಿ ಮೂವತ್ತಕ್ಕೂ ಹೆಚ್ಚಿನ ಖಾಸಗಿ ಗೇಮಿಂಗ್ ಕೊಠಡಿಗಳಿವೆ. 500ಕ್ಕೂ ಹೆಚ್ಚಿನ ಗೇಮಿಂಗ್ ಟೇಬಲ್‌ಗಳಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
IND vs ENG Semi Final
ಕ್ರೀಡೆ57 mins ago

IND vs ENG Semi Final: ಇಂಗ್ಲೆಂಡ್​ ಮಣಿಸಿ 10 ವರ್ಷಗಳ ಬಳಿಕ ಫೈನಲ್​ ಪ್ರವೇಶಿಸಿದ ಭಾರತ

Abhyas Trial
ದೇಶ3 hours ago

Abhyas Trial: ದೇಶದ ಕ್ಷಿಪಣಿ ವ್ಯವಸ್ಥೆಗೆ ಬಲ ತುಂಬುವ ‘ಅಭ್ಯಾಸ್’‌ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿ

Congress Protest
ಕರ್ನಾಟಕ3 hours ago

ಹಾಲು, ಪೆಟ್ರೋಲ್‌ ಬೆಲೆ ಏರಿಸಿ, ಎಸಿ ಬಸ್‌ನಲ್ಲಿ ಪ್ರತಿಭಟನೆಗೆ ಹೊರಟ ಕಾಂಗ್ರೆಸ್‌ ಹಣದ ಮೂಲ ಏನು? ಬಿಜೆಪಿ ಪ್ರಶ್ನೆ

NEET Aspirant
ದೇಶ4 hours ago

NEET Aspirant: ನೀಟ್‌ ಅಕ್ರಮ ಬಯಲಾದ ಬೆನ್ನಲ್ಲೇ 17 ವರ್ಷದ NEET ಅಭ್ಯರ್ಥಿ ಆತ್ಮಹತ್ಯೆ; ಸಾವಿಗೆ ಯಾರು ಹೊಣೆ?

Tata Motors has taken the lead in the SUV market with Nexon Punch
ಕರ್ನಾಟಕ4 hours ago

Tata Motors: ನೆಕ್ಸಾನ್, ಪಂಚ್‌ ಮೂಲಕ ಎಸ್‌ಯುವಿ ಮಾರುಕಟ್ಟೆಯಲ್ಲಿ ಮುನ್ನಡೆ ಸಾಧಿಸಿದ ಟಾಟಾ ಮೋಟಾರ್ಸ್

Rohit Sharma
ಕ್ರೀಡೆ4 hours ago

Rohit Sharma: ಟಿ20 ವಿಶ್ವಕಪ್​ ಟೂರ್ನಿಯಲ್ಲಿ ವಿಶ್ವ ದಾಖಲೆ ಬರೆದ ಹಿಟ್​ಮ್ಯಾನ್ ರೋಹಿತ್

virat kohli
ಕ್ರೀಡೆ5 hours ago

Virat Kohli: ಮೊದಲ ಬಾರಿಗೆ ಸೆಮಿಫೈನಲ್​ನಲ್ಲಿ ಸಿಂಗಲ್​ ಡಿಜಿಟ್​ಗೆ ಔಟ್​ ಆದ​ ಕೊಹ್ಲಿ; ಸಮಾಧಾನಪಡಿಸಿದ ಕೋಚ್​

DCM DK Shivakumar latest statement about CM change issue
ಪ್ರಮುಖ ಸುದ್ದಿ5 hours ago

DK Shivakumar: ಸಿಎಂ ಬದಲಾವಣೆ; ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದ ಡಿ.ಕೆ. ಶಿವಕುಮಾರ್

roopantara Movie First Look Poster released
ಕರ್ನಾಟಕ5 hours ago

Kannada New Movie: ‘ರೂಪಾಂತರ’ಗೊಂಡ ರಾಜ್ ಬಿ. ಶೆಟ್ಟಿ! ಮತ್ತೊಂದು ವಿಭಿನ್ನ ಚಿತ್ರ

Hosur Airport
ಪ್ರಮುಖ ಸುದ್ದಿ5 hours ago

Hosur Airport: ಬೆಂಗಳೂರಿನಿಂದ ಕೇವಲ 40 ಕಿ.ಮೀ ದೂರದ ಹೊಸೂರಿನಲ್ಲಿ ಹೊಸ ಏರ್‌ಪೋರ್ಟ್‌!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ7 hours ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ9 hours ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು11 hours ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ14 hours ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ3 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ6 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ7 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 week ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು2 weeks ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು2 weeks ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

ಟ್ರೆಂಡಿಂಗ್‌