Health Tips Kannada: ಚಹಾದಿಂದ ಅಸಿಡಿಟಿಯೇ? ಹಾಗಾದರೆ ನೀವು ಈ 5 ತಪ್ಪುಗಳನ್ನು ಮಾಡುತ್ತಿದ್ದೀರಿ ಎಂದರ್ಥ! - Vistara News

ಆರೋಗ್ಯ

Health Tips Kannada: ಚಹಾದಿಂದ ಅಸಿಡಿಟಿಯೇ? ಹಾಗಾದರೆ ನೀವು ಈ 5 ತಪ್ಪುಗಳನ್ನು ಮಾಡುತ್ತಿದ್ದೀರಿ ಎಂದರ್ಥ!

ಚಹಾ ಕೊಡುವ ಒಂದು ಆಪ್ತ ಭಾವ, ನಮ್ಮದೇ ಆದ ಕ್ಷಣಗಳು ಬೇರೆ ಯಾವುದರಲ್ಲಿಯೂ ದಕ್ಕದು. ಚಹಾ ಪ್ರಿಯರಿಗೆ ಚಹಾವೆಂದರೆ ಅದು ಕೇವಲ ಪೇಯವಂತೂ ಖಂಡಿತ ಅಲ್ಲ. ಅದೊಂದು ಭಾವ. ಅದಕ್ಕೇ, ಚಹಾ ಬಿಡಲು ಹೊರಟರೂ ಅನೇಕರಿಗೆ ಅದು ಸಾಧ್ಯವಾಗುವುದೇ ಎಲ್ಲ. ಜೀವನದುದ್ದಕ್ಕೂ ಅದು ಅಂಟಿಕೊಂಡೇ ಇರುತ್ತದೆ. ಆದರೆ, ಹೀಗೆ ಚಹಾ ಪ್ರಿಯರಾದವರಿಗೆಲ್ಲರಿಗೂ ಚಹಾವನ್ನು ಹೀಗೆ ಕುಡಿಯುವ ಭಾಗ್ಯ ದಕ್ಕದು. ಆರೋಗ್ಯದ ದೃಷ್ಟಿಯಿಂದ ಚಹ ತಯಾರಿಸುವುದು ಹೇಗೆ? ಈ ಕುರಿತು ಇಲ್ಲಿದೆ ವಿವರ.

VISTARANEWS.COM


on

Health Tips Kannada Acidity from tea Then you are making these 5 mistakes
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಚಹಾ ಯಾರಿಗೆ ಇಷ್ಟವಿಲ್ಲ ಹೇಳಿ. ಚಹಾ (Health Tips Kannada) ಬಯಸದವರಿಗಿಂತಲೂ ಚಹಾ ಬಯಸುವ ಮಂದಿಯೇ ಹೆಚ್ಚು. ನಿತ್ಯವೂ ಎದ್ದ ಕೂಡಲೇ ಚಹಾ ಕುಡಿಯದಿದ್ದರೆ ಏನೋ ಕಳೆದುಕೊಂಡ ಭಾವ ಅನೇಕರಿಗೆ. ಅದೇನೋ, ಚಹಾ ಕುಡಿದ ತಕ್ಷಣ ಆ ದಿನ ಆರಂಭವಾದ ಸೂಚನೆ, ಒಂದು ಪಾಸಿಟಿವ್‌ ಆರಂಭ. ಚಹಾ ಕೊಡುವ ಒಂದು ಆಪ್ತ ಭಾವ, ನಮ್ಮದೇ ಆದ ಕ್ಷಣಗಳು ಬೇರೆ ಯಾವುದರಲ್ಲಿಯೂ ದಕ್ಕದು. ಚಹಾ ಪ್ರಿಯರಿಗೆ ಚಹಾವೆಂದರೆ ಅದು ಕೇವಲ ಪೇಯವಂತೂ ಖಂಡಿತ ಅಲ್ಲ. ಅದೊಂದು ಭಾವ. ಅದಕ್ಕೇ, ಚಹಾ ಬಿಡಲು ಹೊರಟರೂ ಅನೇಕರಿಗೆ ಅದು ಸಾಧ್ಯವಾಗುವುದೇ ಎಲ್ಲ. ಜೀವನದುದ್ದಕ್ಕೂ ಅದು ಅಂಟಿಕೊಂಡೇ ಇರುತ್ತದೆ.

ಆದರೆ, ಹೀಗೆ ಚಹಾ ಪ್ರಿಯರಾದವರಿಗೆಲ್ಲರಿಗೂ ಚಹಾವನ್ನು ಹೀಗೆ ಕುಡಿಯುವ ಭಾಗ್ಯ ದಕ್ಕದು. ಯಾಕೆಂದರೆ ಹಲವರಿಗೆ ಚಹಾ ಕುಡಿದರೆ ಅಸಿಡಿಟಿಯ ಸಮಸ್ಯೆ. ಹೀಗಾಗಿ, ಇಷ್ಟದ ಪೇಯವಾದರೂ ಅನೇಕರಿಗೆ ಈ ಸಮಸ್ಯೆಯಿಂದಾಗಿ ದೂರವಿರಬೇಕಾದ ಅನಿವಾರ್ಯತೆ. ಇನ್ನೂ ಕೆಲವರಿಗೆ ಚಹಾದಿಂದ ಅಸಿಡಿಟಿ ಎಂಬುದೇ ತಮಾಷೆಯಾಗಿ ಕಂಡರೆ ಆಶ್ಚರ್ಯವಿಲ್ಲ. ಆದರೆ, ಚಹಾದಿಂದ ಕೆಲವರಿಗೆ ಅಸಿಡಿಟಿ ಸಮಸ್ಯೆ ಉಂಟಾಗುವುದು ಸತ್ಯ. ಬನ್ನಿ, ಚಹಾದಿಂದ ಅಸಿಡಿಟಿ ನಿಮಗಾಗಿದ್ದರೆ ನೀವು ಈ ಐದು ತಪ್ಪುಗಳನ್ನು ಮಾಡುತ್ತಿರಲೂಬಹುದು.

1. ಚಹಾವನ್ನು ಮಾಡುವ ಕ್ರಮದಲ್ಲೇ ವ್ಯತ್ಯಾಸವಾಗುವುದರಿಂದಲೂ ಈ ಸಮಸ್ಯೆ ಬರಬಹುದು. ಚಹಾ ಪುಡಿಯನ್ನು ಹಾಕಿ ಸಿಮ್‌ನಲ್ಲಿಟ್ಟು ಅಗತ್ಯಕ್ಕಿಂತ ಸ್ವಲ್ಪ ಹೆಚ್ಚೇ ಕುದಿಸುವುದು ಕೂಡಾ ಇದಕ್ಕೆ ಕಾರಣ. ಸ್ಟ್ರಾಂಗ್‌ ಖಡಕ್‌ ಚಹಾ ಮಾಡುವ ಉತ್ಸಾಹದಲ್ಲಿ ಅನೇಕರು ಚಹಾ ಪುಡಿಯನ್ನು ಹೆಚ್ಚು ಹೊತ್ತು ಕುದಿಸುವುದುಂಟು. ಹಾಲಿನಲ್ಲಿ ಚಹಾಪುಡಿಯನ್ನು ಹೆಚ್ಚು ಹೊತ್ತು ಕುದಿಸುವುದರಿಂದ ಪ್ರೊಟೀನ್‌ ಹಾಗೂ ಲ್ಯಾಕ್ಟೋಸ್‌ ಬ್ರೇಕ್‌ಡೌನ್‌ ಆಗುವುದರಿಂದ ಅಸಿಡಿಟಿ ಆಗುವುದುಂಟು. ಚಹಾಪುಡಿಯನ್ನು ಸ್ವಲ್ಪ ನೀರಿನಲ್ಲಿ ಕುದಿಸಿಕೊಂಡ ಮೇಲೆ ಹಾಲು ಹಾಕಿ ಚಹಾ ಮಾಡಿ. ಇದರಿಂದ ಹಾಲಿನ ಸತ್ವವೂ ಹಾಗೆಯೇ ಉಳಿಯುತ್ತದೆ.

ಇದನ್ನೂ ಓದಿ: Health Tips Kannada: ಹೊಟ್ಟೆಯುಬ್ಬರಕ್ಕೆ ಇವೆ ಸರಳ ಮನೆಮದ್ದುಗಳು

2. ಆಗಷ್ಟೇ ಮಾಡಿದ ಚಹಾವನ್ನು ಗಂಟೆಗಟ್ಟಲೆ ಹಾಗೆಯೇ ಇಟ್ಟು ಆಮೇಲೆ ಕುಡಿಯುವುದರಿಂದಲೂ ಅಸಿಡಿಟಿ ಉಂಟಾಗಬಹುದು. ಚಹಾ ಯಾವಾಗಲೂ ಮಾಡಿದ ತಕ್ಷಣ ಬಿಸಿಬಿಸಿ ಹಾಗೆಯೇ ಕುಡಿದು ಬಿಡಬೇಕು. ಮಾಡಿದ ಮೇಲೆ ೧೦ ನಿಮಿಷಗಳೊಳಗಾಗಿ ಚಹಾ ಕುಡಿದುಬಿಡಿ.

3. ಬೆಳಗ್ಗೆ ಮಾಡಿದ ಚಹಾ ಉಳಿಯಿತು ಎಂದು ಸಂಜೆಗೆ ತೆಗೆದಿಡಬೇಡಿ. ಕುದಿಸಿ ಕುಡಿದರಾಯಿತು ಎಂದು ನೀವು ಅಂದುಕೊಳ್ಳಬಹುದು. ಆದರೆ ಚಹಾವನ್ನು ಮತ್ತೆ ಕುದಿಸಿ ಕುಡಿಯುವುದು ಖಂಡಿತ ಆರೋಗ್ಯಕ್ಕೆ ಒಳ್ಳೆಯದಲ್ಲ. ಮುಖ್ಯವಾಗಿ ಹಾಲು ಹಾಕಿದ ಚಹಾವನ್ನು ಹಾಗೆಯೇ ಇಟ್ಟು ಮತ್ತೆ ಬಿಸಿ ಮಾಡಿ ಕುಡಿಯುವುದರಿಂದ ಅಸಿಡಿಟಿ ಸಮಸ್ಯೆಗಳು ಹೆಚ್ಚಾಗುತ್ತವೆ.

4. ಅತಿಯಾಗಿ ಚಹಾ ಕುಡಿಯಬೇಡಿ. ಯಾರಾದರೂ ಜೊತೆಗೊಂದು ಬೈಟೂ ಚಹಾ ಕುಡಿಯೋಣ ಎಂದು ಪ್ರೀತಿಯಿಂದ ಕರೆದರೆ ಇಲ್ಲ ಎನ್ನಲಾಗುವುದಿಲ್ಲ ನಿಜ. ಆದರೆ, ದಿನಕ್ಕೆ ನೀವೆಷ್ಟು ಚಹಾ ಕುಡಿಯುತ್ತೀರಿ ಎಂಬ ಬಗ್ಗೆ ನಿಗಾ ಇರಲಿ. ಬೆಳಗ್ಗೆ ಒಂದು ಚಹಾ, ಸಂಜೆ ಇನ್ನೊಂದು ಕಪ್‌ ಸಾಕು. ಅಗತ್ಯ ಬಿದ್ದಲ್ಲಿ ಕಚೇರಿಯಲ್ಲಿ ಗೆಳೆಯರ ಜೊತೆ ಮಧ್ಯದಲ್ಲೊಂದು ಚಹಾ ಕುಡಿಯಬಹುದು ಅಷ್ಟೇ. ಮೂರಕ್ಕಿಂತ ಹೆಚ್ಚು ಕಪ್‌ ಚಹಾ ಒಳ್ಳೆಯದಲ್ಲ. ನಿಮ್ಮ ಅಸಿಡಿಟಿಯ ಮೂಲ ಅತಿಯಾದ ಚಹಾ ಕುಡಿಯುವುದೂ ಕೂಡಾ ಇರಬಹುದು ನೆನಪಿಡಿ.

5 ಕೆಲವು ಆಹಾರಗಳನ್ನು ಚಹಾದ ಜೊತೆ ಸೇವಿಸಬೇಡಿ. ಪಾಲಕ್‌, ಬ್ರೊಕೋಲಿಯಂತಹ ಹಸಿರು ಸೊಪ್ಪು ತರಕಾರಿಗಳಿಂದ ತಯಾರಿಸಿದ ಆಹಾರಗಳನ್ನು ಚಹಾದ ಜೊತೆಗೆ ಸೇವಿಸಬೇಡಿ. ತಂಪಾದ ಫ್ರುಟ್‌ ಸಲಾಡ್‌ಗಳು, ಸಲಾಡ್‌ಗಳು, ನಿಂಬೆಹಣ್ಣಿನ ಆಹಾರ ಪದಾರ್ಥಗಳು, ಅರಿಶಿನ, ಮೊಸರು ಇತ್ಯಾದಿಗಳನ್ನು ಚಹಾದ ಜೊತೆ ಸೇವಿಸಬೇಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Belly Fat Loss Drinks: ಹೊಟ್ಟೆಯ ಕೊಬ್ಬನ್ನು ಕರಗಿಸಲು ಈ ಐದು ಪಾನೀಯಗಳನ್ನು ಸೇವಿಸಿ

ಹೊಟ್ಟೆಯ ಕೊಬ್ಬನ್ನು (Belly Fat Loss Drinks) ಕರಗಿಸುವುದು ಸುಲಭವಲ್ಲ. ಆದರೆ ಬರೀ ಹೊಟ್ಟೆಯಲ್ಲಿ ಕೆಲವು ಪಾನೀಯಗಳೊಂದಿಗೆ ದಿನನಿತ್ಯದ ವ್ಯಾಯಾಮ, ಸಮತೋಲಿತ ಆಹಾರ ಸೇವನೆಯೊಂದಿಗೆ ಸುಲಭವಾಗಿ ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳಬಹುದು. ಚೆನ್ನಾಗಿ ಹೈಡ್ರೇಟೆಡ್ ಆಗಿರುವುದು ಚಯಾಪಚಯವನ್ನು ಹೆಚ್ಚಿಸುತ್ತದೆ, ಹಸಿವನ್ನು ಕಡಿಮೆ ಮಾಡುತ್ತದೆ. ಅದಕ್ಕಾಗಿ ಈ ಐದು ಪಾನೀಯಗಳು ಸಹಾಯ ಮಾಡುತ್ತವೆ.

VISTARANEWS.COM


on

By

Belly Fat Loss Drinks
Koo

ಒಮ್ಮೆ ಹೊಟ್ಟೆಯಲ್ಲಿ ಕೊಬ್ಬು ಶೇಖರಣೆಯಾದರೆ (Belly Fat Loss Drinks) ಅದನ್ನು ಕರಗಿಸುವುದು ಸುಲಭವಲ್ಲ. ಆದರೆ ಜೀವನ ಶೈಲಿಯಲ್ಲಿ (life style) ಬದಲಾವಣೆ ಮಾಡಿಕೊಂಡು, ಆಹಾರದಲ್ಲಿ (food) ಕೊಂಚ ಶಿಸ್ತು ಅಳವಡಿಸಿಕೊಂಡರೆ ಹೊಟ್ಟೆಯ ಕೊಬ್ಬನ್ನು (Belly Fat) ಕರಗಿಸಬಹುದು. ಮುಖ್ಯವಾಗಿ ಚಯಾಪಚಯವನ್ನು ಹೆಚ್ಚಿಸುವ ತೂಕ ನಿರ್ವಹಣೆಯನ್ನು ಬೆಂಬಲಿಸುವ ಪಾನೀಯದೊಂದಿಗೆ ದಿನವನ್ನು ಆರಂಭಿಸಿದರೆ ಹೊಟ್ಟೆಯ ಸುತ್ತಲಿನ ಕೊಬ್ಬನ್ನು ಬಹು ಬೇಗನೆ ಕಳೆದುಕೊಳ್ಳಬಹುದು.

ನಮ್ಮ ದೇಹವು ಶೇ. 60ರಷ್ಟು ನೀರನ್ನು ಒಳಗೊಂಡಿರುತ್ತದೆ. ತಾಪಮಾನವನ್ನು ನಿಯಂತ್ರಿಸುವುದು, ಸೋಂಕುಗಳನ್ನು ತಡೆಗಟ್ಟುವುದು ಮತ್ತು ಜೀವಕೋಶಗಳಿಗೆ ನೇರವಾಗಿ ಪ್ರಮುಖ ಪೋಷಕಾಂಶಗಳು ಮತ್ತು ಖನಿಜಗಳನ್ನು ಒದಗಿಸುವಂತಹ ದೇಹದಲ್ಲಿನ ಅನೇಕ ಪ್ರಮುಖ ಕಾರ್ಯಗಳಲ್ಲಿ ನೀರು ಸಹಾಯ ಮಾಡುತ್ತದೆ.

ಒಳಾಂಗಗಳ ಕೊಬ್ಬು ಎಂದೂ ಕರೆಯಲ್ಪಡುವ ಹೊಟ್ಟೆಯ ಕೊಬ್ಬು ಕೇವಲ ಕೊಬ್ಬು ಅಲ್ಲ. ಇದು ಅನೇಕ ಆರೋಗ್ಯ ಅಪಾಯಗಳಿಗೆ ಅಹ್ವಾನ ನೀಡುತ್ತದೆ. ವಿಶೇಷವಾಗಿ ಕಿಬ್ಬೊಟ್ಟೆಯ ಪ್ರದೇಶದಲ್ಲಿ ಸಂಗ್ರಹವಾಗುವ ಕೊಬ್ಬು ಅನೇಕ ಆರೋಗ್ಯ ಸಮಸ್ಯೆಗಳು ಮತ್ತು ರೋಗಗಳಿಗೆ ಕಾರಣವಾಗಬಹುದು.

ಬರೀ ಹೊಟ್ಟೆಗೆ ಸೇವನೆ ಮಾಡುವ ಪಾನೀಯಗಳೊಂದಿಗೆ ದಿನನಿತ್ಯದ ವ್ಯಾಯಾಮ, ಸಮತೋಲಿತ ಆಹಾರ ಸೇವನೆಯೊಂದಿಗೆ ಸುಲಭವಾಗಿ ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳಬಹುದು.

ಚೆನ್ನಾಗಿ ಹೈಡ್ರೇಟೆಡ್ ಆಗಿರುವುದು ಚಯಾಪಚಯವನ್ನು ಹೆಚ್ಚಿಸುತ್ತದೆ, ಹಸಿವನ್ನು ಕಡಿಮೆ ಮಾಡುತ್ತದೆ ಮತ್ತು ದೇಹವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಇವೆಲ್ಲವೂ ಹೆಚ್ಚು ಪರಿಣಾಮಕಾರಿ ತೂಕ ನಷ್ಟಕ್ಕೆ ಕಾರಣವಾಗುತ್ತದೆ. ಈ ಐದು ಪಾನೀಯಗಳನ್ನು ದೇಹದ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.


ಸೋಂಪು ಕಾಳಿನ ನೀರು

ಬರೀ ಹೊಟ್ಟೆಗೆ ಸೋಂಪು ಕಾಳಿನ ನೀರು ಸೇವಿಸುವುದರಿಂದ ಸಾಕಷ್ಟು ಪ್ರಯೋಜನವನ್ನು ಕೊಡುತ್ತದೆ. ಸೋಂಪು ಕಾಳಿನ ನೀರು ಉತ್ಕರ್ಷಣ ನಿರೋಧಕಗಳು, ಫೈಬರ್ ಮತ್ತು ಖನಿಜಗಳಿಂದ ಸಮೃದ್ಧವಾಗಿವೆ. ಈ ಮೂರೂ ತೂಕವನ್ನು ಕಳೆದುಕೊಳ್ಳಲು ಅವಶ್ಯಕವಾಗಿದೆ. ಹೆಚ್ಚಿನ ಫೈಬರ್ ದೀರ್ಘಕಾಲದವರೆಗೆ ಹೊಟ್ಟೆ ತುಂಬಿದಂತೆ ಮಾಡುತ್ತದೆ. ಕಡುಬಯಕೆಗಳನ್ನು ತಪ್ಪಿಸಲು ಮತ್ತು ಹೆಚ್ಚುವರಿ ಕ್ಯಾಲೊರಿಗಳನ್ನು ತಿನ್ನುವುದನ್ನು ತಡೆಯುತ್ತದೆ. ದೇಹದ ಕಲ್ಮಶವನ್ನು ತೆಗೆದುಹಾಕುತ್ತದೆ ಮತ್ತು ತೂಕ ನಷ್ಟಕ್ಕೆ ಸುಲಭವಾಗಿ ಬೆಂಬಲಿಸುತ್ತದೆ.

Belly Fat Loss Drinks


ಹಸಿರು ಚಹಾ

ಹಸಿರು ಚಹಾವು ತೂಕವನ್ನು ನಿರ್ವಹಿಸಲು ಬಯಸುವವರ ಜನಪ್ರಿಯ ಬೆಳಗಿನ ಪಾನೀಯವಾಗಿದೆ. ಹಸಿರು ಚಹಾವು ಉತ್ಕರ್ಷಣ ನಿರೋಧಕಗಳು ಮತ್ತು ಇತರ ಹಲವಾರು ಸಂಯುಕ್ತಗಳಿಂದ ತುಂಬಿರುತ್ತದೆ. ಹಸಿರು ಚಹಾವು ಚಯಾಪಚಯವನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ನಿಯಮಿತ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯ ಭಾಗವಾಗಿ ಪ್ರತಿದಿನ ಇದನ್ನು ಸೇವಿಸುದರಿಂದ ತೂಕವನ್ನು ನಿಯಂತ್ರಿಸಬಹುದು.

Belly Fat Loss Drinks


ಅಲೋವೆರಾ ಜ್ಯೂಸ್

ಅಲೋವೆರಾ ಜ್ಯೂಸ್ ತೂಕ ನಿರ್ವಹಣೆಗೆ ಪರಿಣಾಮಕಾರಿಯಾಗಿದೆ. ಅಲೋವೆರಾ ಜ್ಯೂಸ್ ಹಲವು ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಆರೋಗ್ಯಕರ ಜೀವನಶೈಲಿಯ ಭಾಗವಾಗಿ ನಿಯಮಿತವಾಗಿ ಇದನ್ನು ಸೇವಿಸಿದರೆ ಕೊಬ್ಬನ್ನು ಸುಡುತ್ತದೆ. ಚಯಾಪಚಯವನ್ನು ಹೆಚ್ಚಿಸುತ್ತದೆ. ಅಲೋವೆರಾವು ನೈಸರ್ಗಿಕ ನಿರ್ವಿಶೀಕರಣ ಗುಣಲಕ್ಷಣಗಳನ್ನು ಹೊಂದಿದೆ. ಇದು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ.

Belly Fat Loss Drinks


ದಾಲ್ಚಿನ್ನಿ ನೀರು

ದಾಲ್ಚಿನ್ನಿ ನೀರು ಚಯಾಪಚಯವನ್ನು ಹೆಚ್ಚಿಸಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಬೆಚ್ಚಗಿನ ನೀರಿನಲ್ಲಿ ಒಂದು ಚಿಟಿಕೆ ದಾಲ್ಚಿನ್ನಿ ಸೇರಿಸಿ ಮತ್ತು ಅದನ್ನು ದಿನದ ಮೊದಲ ಪಾನೀಯವಾಗಿ ಕುಡಿಯಿರಿ. ದಾಲ್ಚಿನ್ನಿಯು ದೇಹದ ತೂಕವನ್ನು ನಿಯಂತ್ರಿಸುತ್ತದೆ. ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ.

Belly Fat Loss Drinks


ಬಿಸಿ ನಿಂಬೆ ನೀರು

ಬೆಚ್ಚಗಿನ ನಿಂಬೆ ನೀರು ತಯಾರಿಸುವುದು ಸುಲಭವಾಗಿದೆ ಮತ್ತು ತೂಕ ನಷ್ಟ ಪಾನೀಯಗಳಲ್ಲಿ ಒಂದಾಗಿದೆ. ಇದು ಚಯಾಪಚಯವನ್ನು ಹೆಚ್ಚಿಸಲು, ನಿರ್ವಿಶೀಕರಣವನ್ನು ಉತ್ತೇಜಿಸಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ನಿಂಬೆಯಲ್ಲಿ ಸಿಟ್ರಿಕ್ ಆಮ್ಲವಿದ್ದು ಜೀರ್ಣಕ್ರಿಯೆಯನ್ನು ವರ್ಧಿಸುತ್ತದೆ ಮತ್ತು ಹಲವಾರು ಜೀರ್ಣಕಾರಿ ಸಮಸ್ಯೆಗಳನ್ನು ತಡೆಯುತ್ತದೆ.

ಇದನ್ನೂ ಓದಿ: Mosquitoes Bite: ಎಣ್ಣೆ ಹೊಡೆಯುವವರನ್ನು ಸೊಳ್ಳೆಗಳು ಕಚ್ಚುವುದು ಹೆಚ್ಚು! ಇದಕ್ಕಿದೆ ವೈಜ್ಞಾನಿಕ ಕಾರಣ!

ದಿನಕ್ಕೆ ಎಷ್ಟು ನೀರು ಕುಡಿಯಬೇಕು?

ದೇಹದ ತೂಕ ಇಳಿಸಲು ದಿನಕ್ಕೆ ಕನಿಷ್ಠ 2 ಲೀಟರ್ (60 ರಿಂದ 80 ಔನ್ಸ್ ) ನೀರನ್ನು ಕುಡಿಯಲು ಸಲಹೆ ನೀಡಲಾಗುತ್ತದೆ. ದೇಹದ ತೂಕ, ಚಟುವಟಿಕೆಯ ಮಟ್ಟ ಮತ್ತು ಹವಾಮಾನವನ್ನು ಆಧರಿಸಿ ಇದರಲ್ಲಿ ವ್ಯತ್ಯಾಸಗಳಾಗುತ್ತವೆ. ದೇಹದ ತೂಕದ ಅರ್ಧದಷ್ಟು ಔನ್ಸ್ ನೀರು ಕುಡಿಯಬೇಕು. ಇದರಿಂದ ಅದು ಚಯಾಪಚಯವನ್ನು ಹೆಚ್ಚಿಸುತ್ತದೆ, ಹಸಿವನ್ನು ಕಡಿಮೆ ಮಾಡುತ್ತದೆ ಮತ್ತು ಒಟ್ಟಾರೆ ದೇಹದ ಕಾರ್ಯವನ್ನು ಬೆಂಬಲಿಸುತ್ತದೆ.

Continue Reading

ಆರೋಗ್ಯ

Monsoon Skincare: ಮಳೆಗಾಲದಲ್ಲಿ ಚರ್ಮದ ಆರೈಕೆ ಹೇಗಿರಬೇಕು?

Monsoon Skincare: ಚಳಿಗಾಲಕ್ಕೆ ನಮ್ಮ ಚರ್ಮ ಹೆಚ್ಚಿನ ಆರೈಕೆಯನ್ನು ಬೇಡುತ್ತದೆ ಎಂಬುದು ನಮಗೆ ಗೊತ್ತಿದೆ. ಆದರೆ ಮಳೆಗಾಲದಲ್ಲಿ ಈ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ ನಾವು. ತೇವಾಂಶ ಹೆಚ್ಚಿರುವ ಋತುವಿನಲ್ಲೂ ಚರ್ಮಕ್ಕೆ ಬೇರೆ ರೀತಿಯ ಆರೈಕೆ ಬೇಕಾಗುತ್ತದೆ? ಈ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

Monsoon Skincare
Koo

ಕಾಲಕ್ಕೆ ತಕ್ಕಂತೆ ನಡೆಯಬೇಕು ಎಂಬ ಮಾತು ಸರ್ವಕಾಲಕ್ಕೂ ಸತ್ಯ. ಏಕೆಂದರೆ, ಬೇಸಿಗೆಯಲ್ಲಿದ್ದಂತೆ ಮಳೆಗಾಲದಲ್ಲಿ ಇರುವುದಕ್ಕೆ ಸಾಧ್ಯವಿಲ್ಲ. ಮಳೆಗಾಲಕ್ಕೆಂದೇ ಕೆಲವು ಪ್ರದೇಶಗಳಲ್ಲಿ ವಿಶೇಷ ತಯಾರಿಯೂ ಬೇಕಾಗುತ್ತದೆ. ಮೂರು ತಿಂಗಳು ಸತತವಾಗಿ ಮಳೆ ಚಚ್ಚುವ ಸ್ಥಳಗಳಲ್ಲಿ ಹೊರ ಜಗತ್ತಿನ ಸಂಪರ್ಕವೂ ಕಡಿಮೆಯಾಗಬಹುದು. ಅದಕ್ಕಾಗಿ ಅಕ್ಕಿ-ಬೇಳೆಗಳಲ್ಲಿ ಶೇಖರಿಸಿಟ್ಟುಕೊಂಡು, ಕೆಲವು ವಿಶೇಷ ಬಗೆಯ ತರಕಾರಿಗಳನ್ನು ಬೇಸಿಗೆಯಲ್ಲಿ ಒಣಗಿಸಿಟ್ಟುಕೊಂಡು, ದೀರ್ಘಕಾಲ ಬಾಳಿಕೆ ಬರುವ ಬೂದುಗುಂಬಳ, ಸಿಹಿಕುಂಬಳ, ಗಡ್ಡೆಗೆಣಸುಗಳು ಮುಂತಾದವನ್ನು ಮಳೆಗಾಲಕ್ಕೆಂದೇ ಕಾಪಿಟ್ಟುಕೊಳ್ಳುತ್ತಾರೆ. ಇವೆಲ್ಲ ಕೆಲವು ಪ್ರದೇಶಗಳ ಮಾತಾಯಿತು. ಆದರೆ ಹಾಗೆಲ್ಲ ಇಲ್ಲದ ಸ್ಥಳಗಳಲ್ಲೂ ಮಳೆಗಾಲಕ್ಕೆ ಸ್ವಲ್ಪ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಸೂಕ್ತ ವಸ್ತ್ರಗಳು, ಭಿನ್ನ ರೀತಿಯ ಆಹಾರಗಳು… ಹೀಗೆ. ಆದರೆ ತ್ವಚೆಯ ಆರೈಕೆಗಾಗಿ ನಾವೇನು ಮಾಡುತ್ತೇವೆ? ಚಳಿಗಾಲಕ್ಕೆ ನಮ್ಮ ಚರ್ಮ ಹೆಚ್ಚಿನ ಆರೈಕೆಯನ್ನು ಬೇಡುತ್ತದೆ ಎಂಬುದು ನಮಗೆ ಗೊತ್ತಿದೆ. ಆದರೆ ಮಳೆಗಾಲದಲ್ಲಿ ಈ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ ನಾವು. ತೇವಾಂಶ ಹೆಚ್ಚಿರುವ ಋತುವಿನಲ್ಲೂ ಚರ್ಮಕ್ಕೆ ಬೇರೆ ರೀತಿಯ ಆರೈಕೆ ಬೇಕಾಗುತ್ತದೆ. ಏನದು ಎಂಬುದನ್ನು ತಿಳಿಯೋಣ.
ಹವಾಮಾನ ಶುಷ್ಕವಾಗಿದ್ದಾಗ ಹೆಚ್ಚಿನ ತೇವವನ್ನು ತ್ವಚೆಗೆ ನಾವೇ ಒದಗಿಸಬೇಕಾಗುತ್ತದೆ. ಆದರೆ ಋತುಮಾನವೇ ಒದ್ದೆ ಸುರಿಯುತ್ತಿರುವಾಗ ಚರ್ಮದ ಸೂಕ್ಷ್ಮ ರಂಧ್ರಗಳು ಮುಚ್ಚಿಬಿಡಬಹುದು. ಕಾರಣ, ತೈಲದಂಥ ಸೇಬಮ್‌ ಸ್ರವಿಸುವಿಕೆ ಹೆಚ್ಚಾಗುತ್ತದೆ. ಇದರ ಜೊತೆಗೆ, ವೈರಸ್‌, ಬ್ಯಾಕ್ಟೀರಿಯಗಳ ಕಾಟವೂ ಹೆಚ್ಚಿರುತ್ತದೆ. ಇವೆಲ್ಲದರ ಫಲವಾಗಿ ಚರ್ಮ ಹೊಳಪು ಕಳೆದುಕೊಂಡು, ಮಂಕಾಗಿ, ಎಣ್ಣೆ ಸುರಿದು, ಮೊಡವೆಗಳೂ ಹೆಚ್ಚುವಂತಾಗುತ್ತದೆ. ಹಾಗಾಗಿ ಮಳೆಗಾಲದಲ್ಲಿ ಚರ್ಮದ ಆರೈಕೆಯನ್ನು (Monsoon Skincare) ಪ್ರತ್ಯೇಕವಾಗಿ ಮಾಡಬೇಕಾಗುತ್ತದೆ.

Asian woman face wash exfoliate scrub soap foam with skincare cl

ಸ್ವಚ್ಛತೆ

ಎಣ್ಣೆ ಸುರಿಯುವ ಮುಖವನ್ನು ತೊಳೆದು ಶುದ್ಧವಾಗಿ ಇರಿಸಿಕೊಳ್ಳುವುದು ಮುಖ್ಯ. ಅದಕ್ಕಾಗಿ ಒಳ್ಳೆಯ ಕ್ಲೆನ್ಸರ್‌ ಬಳಸಿ. ಮುಖದ ಎಣ್ಣೆಯನ್ನು ತೆಗೆಯುವ ನೆವದಲ್ಲಿ, ತ್ವಚೆಯ ನೈಸರ್ಗಿಕ ತೈಲವನ್ನೂ ಕಿತ್ತು ತೆಗೆಯುವಂಥ ಕಠೋರ ಕ್ಲೆನ್ಸರ್‌ಗಳು ಬೇಡ. ಆದರೆ ಎಣ್ಣೆಗರೆಯುವ ಮುಖವನ್ನು ಸರಿಯಾಗಿ ಸ್ವಚ್ಛಗೊಳಿಸುವಂತಿರಬೇಕು. ಜೊತೆಗೆ ಸನ್‌ಬ್ಲಾಕ್‌, ಮೇಕಪ್‌ ಮುಂತಾದ ಯಾವುದನ್ನೇ ಆದರೂ ಮುಖದ ಮೇಲೆ ಉಳಿಸಿಕೊಳ್ಳುವಂತಿಲ್ಲ. ಅದನ್ನೂ ರಾತ್ರಿ ಮಲಗುವ ಮುನ್ನ ಸಂಪೂರ್ಣ ತೆಗೆಯಬೇಕಾಗುತ್ತದೆ. ಹಾಗಿಲ್ಲದಿದ್ದರೆ ಚರ್ಮದ ರಂಧ್ರಗಳು ಬಿಗಿಯುವುದು ಖಚಿತ.

ಎಕ್ಸ್‌ಫಾಲಿಯೇಟರ್‌

ಲಘುವಾದ ಸ್ಕ್ರಬ್‌ಗಳು ಈ ಹೊತ್ತಿಗೆ ಬೇಕು. ಕಾರಣ, ಒಮ್ಮೆ ಮನೆಯಿಂದ ಹೊರಗೆ ಹೋಗ ಬಂದರೆ ವಾತಾವರಣದ ಕೊಳೆಯೆಲ್ಲ ಎಣ್ಣೆ ಸುರಿಯುವ ಮುಖಕ್ಕೆ ಅಂಟಿಕೊಳ್ಳುತ್ತದೆ. ಹಾಗಾಗಿ ಮೇಲ್ಪದರದ ಕೊಳೆಯನ್ನು ಸೌಮ್ಯವಾಗಿ ತೆಗೆಯುವುದು ಅಗತ್ಯ. ಇದಕ್ಕಾಗಿ ನಿಮ್ಮಿಷ್ಟದ ಫೇಸ್‌ಮಾಸ್ಕ್‌ ಉಪಯೋಗಿಸಿದರೂ ಆದೀತು. ಇವುಗಳನ್ನು ವಾರದಲ್ಲಿ ಮೂರು ಬಾರಿಯವರೆಗೂ ಉಪಯೋಗಿಸಬಹುದು.

skin care

ಮಾಯಿಶ್ಚರೈಸರ್

ಇದು ಮಳೆಗಾಲದಲ್ಲೂ ಬೇಕು. ಆದರೆ ಬಹಳ ಜಿಡ್ಡಿರುವಂಥದ್ದನ್ನು ಬಳಸಬೇಡಿ. ಲಘುವಾಗಿ ಚರ್ಮಕ್ಕೆ ತೇವವನ್ನು ಒದಗಿಸಿದರೆ ಸಾಕಾಗುತ್ತದೆ. ಹಾಗೆಂದು ಸಂಪೂರ್ಣ ಬಳಸದೆಯೂ ಇರಬೇಡಿ. ಇದು ಗಾಳಿ ಜೋರಾಗಿರುವ ಸಮಯವಾದ್ದರಿಂದ ಚರ್ಮವೆಲ್ಲ ಬಿರಿದಂತೆ ಆಗಬಹುದು. ವಾತಾವರಣದಲ್ಲಿ ತೇವ ಹೆಚ್ಚಿರುವ ಕಾರಣ ತೀರಾ ಎಣ್ಣೆಯ ಕ್ರೀಮ್‌ಗಳು ಬೇಡ.

ಅತಿಯಾಗಬಾರದು

ಜಾಹೀರಾತುಗಳಲ್ಲಿ ಏನೇನೋ ನೋಡಿ, ಸಿಕ್ಕಿದ್ದೆಲ್ಲವನ್ನೂ ತಂದು ಮುಖಕ್ಕೆ ಬಳಿದು ಪ್ರಯತ್ನಿಸುವ ಕಾಲವಿದು. ಹ್ಯಾಲುರೋನಿಕ್‌ ಆಮ್ಲ, ಗ್ಲೈಕಾಲ್‌, ರೆಟಿನಾಲ್‌ ಮುಂತಾದ ಹತ್ತು ಹಲವು ಅಂಶಗಳಿರುವ ನಾಲ್ಕಾರು ಉತ್ಪನ್ನಗಳನ್ನು ಒಟ್ಟಿಗೇ ಮುಖಕ್ಕೆ ಹಚ್ಚಿಕೊಳ್ಳುವವರಿದ್ದಾರೆ. ಉದಾ, ವಿಟಮಿನ್‌ ಸಿ, ವಿಟಮಿನ್‌ ಇ ಮತ್ತು ರೆಟಿನಾಲ್‌- ಇವಿಷ್ಟನ್ನೂ ಒಟ್ಟಿಗೆ ಚರ್ಮಕ್ಕೆ ಲೇಪಿಸಿದರೆ ಚರ್ಮದ ಮೇಲಿರುವ ಸೂಕ್ಷ್ಮ ರಕ್ಷಾ ಪರದೆ ಸಂಪೂರ್ಣ ನಾಶವಾಗಬಹುದು. ಯಾವ ಅಂಶದ ಗುಣಗಳು ಏನೇನು ಎಂಬುದನ್ನು ತಿಳಿದು ಬಳಸಬೇಕು. ಈ ನಿಟ್ಟಿನಲ್ಲಿ ತಜ್ಞರಲ್ಲಿ ಕೇಳಿಯೇ ಮುಂದುವರಿಯಿರಿ.

ಇದನ್ನೂ ಓದಿ: Mosquito Repellent Plants: ನಿಮಗೆ ಗೊತ್ತೆ? ಈ 5 ಬಗೆಯ ಗಿಡಗಳು ಸೊಳ್ಳೆಗಳನ್ನು ಓಡಿಸುತ್ತವೆ!

ಪೋಷಕಾಂಶ

ನಮ್ಮ ಚರ್ಮದ ಆರೋಗ್ಯ ಶೇ. ೭೦ರಷ್ಟು ನಿರ್ಧಾರವಾಗುವುದು ನಮ್ಮ ದೇಹಕ್ಕೆ ದೊರೆಯುವ ಸತ್ವಗಳ ಮೇಲೆ. ಉಳಿದ ಶೇ. ೩೦ರಷ್ಟು ಮಾತ್ರವೇ ಇತರ ಆರೈಕೆಯನ್ನು ಅವಲಂಬಿಸಿದೆ. ಹಾಗಾಗಿ ಮಳೆಗಾಲವಾದರೂ ಸಾಕಷ್ಟು ನೀರು ಕುಡಿಯಿರಿ. ಈ ದಿನಗಳಲ್ಲಿ ದೊರೆಯುವ ಹಣ್ಣು-ತರಕಾರಿಗಳನ್ನು ತಿನ್ನಿ. ಜಿಡ್ಡಿ, ಕರಿದ ತಿಂಡಿಗಳನ್ನು ತಿಂದಷ್ಟೂ ಚರ್ಮದ ಅವಸ್ಥೆ ಹದಗೆಡುತ್ತದೆ. ದೇಹವನ್ನು ಆಗಾಗ ಡಿಟಾಕ್ಸ್‌ ಮಾಡಿ.

Continue Reading

ಆರೋಗ್ಯ

Mosquitoes Bite: ಎಣ್ಣೆ ಹೊಡೆಯುವವರನ್ನು ಸೊಳ್ಳೆಗಳು ಕಚ್ಚುವುದು ಹೆಚ್ಚು! ಇದಕ್ಕಿದೆ ವೈಜ್ಞಾನಿಕ ಕಾರಣ!

ಮಲೇರಿಯಾ, ಡೆಂಗ್ಯೂನಂತಹ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುವ ಹೆಣ್ಣು ಸೊಳ್ಳೆಗಳು (Mosquitoes Bite) ಸಂತಾನೋತ್ಪತ್ತಿಗಾಗಿ ಮಾನವರನ್ನು ಕಚ್ಚುತ್ತವೆ. ಅದರಲ್ಲೂ ಕೆಲವರನ್ನು ಹೆಚ್ಚಾಗಿ ಕಚ್ಚುತ್ತವೆ. ಇದಕ್ಕೆ ಹಲವು ಪ್ರಮುಖ ಕಾರಣಗಳಿವೆ. ಇದರಲ್ಲಿ ರಕ್ತದ ಪ್ರಕಾರವೂ ಒಂದು ಪ್ರಮುಖ ಕಾರಣ ಎಂಬುದು ಗೊತ್ತಿದೆಯೇ? ಅದು ಹೇಗೆ, ಬೇರೆ ಯಾರಿಗೆಲ್ಲ ಹೆಚ್ಚಾಗಿ ಸೊಳ್ಳೆಗಳು ಕಚ್ಚುತ್ತವೆ ಎನ್ನುವ ಮಾಹಿತಿ ಇಲ್ಲಿದೆ.

VISTARANEWS.COM


on

By

Mosquitoes Bite
Koo

ಒಂದೇ ಸಮಯದಲ್ಲಿ ಒಂದೇ ಸ್ಥಳದಲ್ಲಿ ಇದ್ದರೂ ಸಾಮಾನ್ಯವಾಗಿ ಕೆಲವರಿಗೆ ಮಾತ್ರ ಸೊಳ್ಳೆಗಳು (Mosquitoes Bite) ಹೆಚ್ಚಾಗಿ ಕಡಿಯುವುದನ್ನು ಕಾಣುತ್ತೇವೆ. ಆದರೆ ಯಾಕೆ ಎನ್ನುವ ಕುತೂಹಲವಂತೂ ಇದ್ದೇ ಇರುತ್ತದೆ. ಹೆಣ್ಣು ಸೊಳ್ಳೆಗಳು (female Mosquitoes) ಮಾತ್ರ ರಕ್ತದಿಂದ (blood) ಪ್ರೊಟೀನ್ ಗಳನ್ನು (proteins) ಪಡೆಯಲು ಮನುಷ್ಯರನ್ನು ಕಚ್ಚುತ್ತವೆ ಮತ್ತು ಬಳಿಕ ಮೊಟ್ಟೆಗಳನ್ನು ಇಡುತ್ತದೆ. ಅದರಲ್ಲೂ ಕೆಲವರಿಗೆ ಮಾತ್ರ ಹೆಚ್ಚಾಗಿ ಸೊಳ್ಳೆಗಳು ಕಚ್ಚುತ್ತವೆ.

ಕೆಲವರು ಸೊಳ್ಳೆಗಳಿಗೆ ಹೆಚ್ಚು ಆಕರ್ಷಕವಾಗಿರಲು ಹಲವು ಕಾರಣಗಳೂ ಇವೆ. ಬೆವರು, ಲ್ಯಾಕ್ಟಿಕ್ ಆಮ್ಲ, ಅಮೋನಿಯಾ ಮತ್ತು ಇತರ ಸಂಯುಕ್ತಗಳಿಂದ ಸೊಳ್ಳೆಗಳು ಕೆಲವರಿಗೆ ಹೆಚ್ಚಾಗಿ ಕಚ್ಚುತ್ತದೆ.

ಸೊಳ್ಳೆಗಳು ಮಲೇರಿಯಾ, ಝಿಕಾ ಮತ್ತು ಡೆಂಗ್ಯೂ ಜ್ವರದಂತಹ ಹಲವು ಸಾಂಕ್ರಾಮಿಕ ರೋಗಗಳನ್ನು ಹರಡುವ ಕಾರಣ ಸೊಳ್ಳೆ ಕಡಿತ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸುತ್ತದೆ.

ಸೂಳ್ಳೆಗಳು ಕೆಲವು ಜನರನ್ನು ಮಾತ್ರ ಹೆಚ್ಚಾಗಿ ಕಡಿಯಲು ಕಾರಣಗಳಿವೆ ಎನ್ನುತ್ತಾರೆ ವಿಜ್ಞಾನಿಗಳು. ಇದಕ್ಕಾಗಿ ವಿವಿಧ ಅಂಶಗಳ ಬಗ್ಗೆ ಸಂಶೋಧನೆ ನಡೆಸಲಾಗಿದ್ದು ಅದರಲ್ಲಿ ರಕ್ತದ ಪ್ರಕಾರವೂ ಒಂದು ಕಾರಣವಾಗಿದೆ.

Mosquitoes Bite


ರಕ್ತದ ಪ್ರಕಾರ ಹೇಗೆ ಕಾರಣ?

ಒಂದು ರಕ್ತದ ಪ್ರಕಾರವನ್ನು ಹೊಂದಿರುವ ಜನರು ಇತರರಿಗಿಂತ ಹೆಚ್ಚು ಸೊಳ್ಳೆ ಕಡಿತಕ್ಕೆ ಒಳಗಾಗುತ್ತಾರೆ. ಪೋಷಕರಿಂದ ಪಡೆದಿರುವ ವಿಭಿನ್ನ ರಕ್ತ ಪ್ರಕಾರಗಳನ್ನು ಹೊಂದಿರುವ ಜನರು ತಮ್ಮ ಕೆಂಪು ರಕ್ತ ಕಣಗಳ ಮೇಲ್ಮೈಯಲ್ಲಿ ನಿರ್ದಿಷ್ಟ ಪ್ರೋಟೀನ್‌ಗಳ (ಪ್ರತಿಜನಕ) ವಿಭಿನ್ನ ಸೆಟ್‌ಗಳನ್ನು ಹೊಂದಿರುತ್ತಾರೆ.

ಎ ಕೆಂಪು ರಕ್ತ ಕಣಗಳ ಮೇಲ್ಮೈಯಲ್ಲಿ ಎ ಪ್ರತಿಜನಕ ಮಾತ್ರ ಇರುತ್ತದೆ. ಬಿ ಕೆಂಪು ರಕ್ತ ಕಣಗಳ ಮೇಲ್ಮೈಯಲ್ಲಿ ಬಿ ಪ್ರತಿಜನಕ ಮಾತ್ರ, ಎಬಿ ಕೆಂಪು ರಕ್ತ ಕಣಗಳ ಮೇಲ್ಮೈಯಲ್ಲಿ ಎ ಮತ್ತು ಬಿ ಪ್ರತಿಜನಕ, ಒ ಕೆಂಪು ರಕ್ತ ಕಣಗಳ ಮೇಲ್ಮೈಯಲ್ಲಿ ಎ ಅಥವಾ ಬಿ ಪ್ರತಿಜನಕವಿರುವುದಿಲ್ಲ.

ಕೆಲವು ಜನರು ಲಾಲಾರಸ ಅಥವಾ ಕಣ್ಣೀರಿನಂತಹ ದೇಹದ ದ್ರವಗಳಲ್ಲಿ ಈ ಪ್ರತಿಜನಕಗಳನ್ನು ಹೊಂದಿರುತ್ತಾರೆ. ಎ ರಕ್ತದ ಪ್ರಕಾರವನ್ನು ಹೊಂದಿರುವವರು ಎ ಪ್ರಕಾರದ ಪ್ರತಿಜನಕವನ್ನು ಸ್ರವಿಸುತ್ತಾರೆ. ಒ ರಕ್ತದ ಗುಂಪು ಹೊಂದಿರುವವರು ಹೆಚ್ ಪ್ರತಿಜನಕವನ್ನು ಸ್ರವಿಸುತ್ತಾರೆ. ಅಧ್ಯಯನಗಳ ಪ್ರಕಾರ ಸೊಳ್ಳೆಗಳು ಇತರ ರಕ್ತ ಪ್ರಕಾರಗಳಿಗಿಂತ ಒ ರಕ್ತದ ಗುಂಪಿನ ಜನರಿಗೆ ಹೆಚ್ಚು ಆಕರ್ಷಿತವಾಗುತ್ತವೆ. ಇದಕ್ಕೆ ರಕ್ತದ ಪ್ರಕಾರ ಮತ್ತು ಸ್ರವಿಸುವ ಸ್ಥಿತಿ ಮುಖ್ಯ ಕಾರಣವಾಗಿದೆ.

ಸೊಳ್ಳೆಗಳು ಎ, ಬಿ ಪ್ರತಿಜನಕಕ್ಕಿಂತ ಹೆಚ್ ಪ್ರತಿಜನಕವನ್ನು ಹೊಂದಿರುವ ಜನರತ್ತ ಹೆಚ್ಚು ಆಕರ್ಷಿತವಾಗುತ್ತವೆ. ಯಾಕೆಂದರೆ ಇದು ಲಾಲಾರಸ ಮತ್ತು ಕಣ್ಣೀರಿನಲ್ಲಿ ಕಂಡುಬರುವುದರಿಂದ ಸೊಳ್ಳೆಗಳು ಒಬ್ಬ ವ್ಯಕ್ತಿಯನ್ನು ಸಮೀಪಿಸಿದಾಗ ಈ ಪ್ರತಿಜನಕಗಳನ್ನು ಬಹುಬೇಗನೆ ಗ್ರಹಿಸುತ್ತದೆ ಎನ್ನಲಾಗುತ್ತದೆ.

ಇನ್ನು ಹಲವು ಕಾರಣಗಳು

ಸೊಳ್ಳೆಗಳು ನಮ್ಮತ್ತ ಹೆಚ್ಚು ಆಕರ್ಷಿತವಾಗಲು ಇನ್ನು ಹಲವು ಕಾರಣಗಳಿವೆ.

ಇಂಗಾಲದ ಡೈಆಕ್ಸೈಡ್

ಉಸಿರಾಡುವಾಗ ಇಂಗಾಲದ ಡೈಆಕ್ಸೈಡ್ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾದರೆ ಸೊಳ್ಳೆಯು ಇವರತ್ತ ಬಹುಬೇಗನೆ ಆಕರ್ಷಿತಗೊಳ್ಳುತ್ತದೆ. ಗಾಳಿಯಲ್ಲಿ ಇಂಗಾಲದ ಡೈಆಕ್ಸೈಡ್‌ನ ಹೆಚ್ಚಳವು ಹತ್ತಿರದಲ್ಲಿರುವ ಸೊಳ್ಳೆಯನ್ನು ಎಚ್ಚರಿಸುತ್ತದೆ.

ದೇಹದ ವಾಸನೆ

ದೇಹದ ವಾಸನೆಯು ಇತರ ಜನರಿಗಿಂತ ಸೊಳ್ಳೆಗಳು ನಿಮ್ಮತ್ತ ಆಕರ್ಷಿತರಾಗಲು ಇನ್ನೊಂದು ಪ್ರಮುಖ ಕಾರಣ. ಯಾಕೆಂದರೆ ವಾಸನೆಯನ್ನು ಬಹುಬೇಗನೆ ಸೊಳ್ಳೆಗಳು ಗ್ರಹಿಸುತ್ತವೆ.
ಚರ್ಮದ ಮೇಲಿನ ಸಂಯುಕ್ತಗಳಲ್ಲಿ ಅಮೋನಿಯಾ ಮತ್ತು ಲ್ಯಾಕ್ಟಿಕ್ ಆಮ್ಲ ಸೊಳ್ಳೆಗಳನ್ನು ಬಹುಬೇಗನೆ ಆಕರ್ಷಿಸುತ್ತವೆ. ಚರ್ಮದ ಮೇಲೀನಾ ಬ್ಯಾಕ್ಟೀರಿಯಾಗಳು ಕೂಡ ದೇಹದ ವಾಸನೆಗೆ ಕಾರಣವಾಗಿರುತ್ತದೆ.

Mosquitoes Bite


ದೇಹದ ತಾಪಮಾನ

ದೇಹದ ತಾಪಮಾನವು ಸೊಳ್ಳೆಗಳನ್ನು ಆಕರ್ಷಿಸಲು ಕಾರಣವಾಗಿರುತ್ತದೆ. ದೇಹದ ತಾಪವು ಹೆಚ್ಚು ಇಂಗಾಲದ ಡೈಆಕ್ಸೈಡ್ ಉತ್ಪತ್ತಿಯಾಗಲು, ಕಾರಣವಾಗಿರುತ್ತದೆ.

ಬಣ್ಣ

ಈ ಬಗ್ಗೆ ಸ್ಪಷ್ಟತೆ ಇಲ್ಲ. ಆದರೂ ಸೊಳ್ಳೆಗಳು ಕಪ್ಪು ವಸ್ತುಗಳಿಗೆ ಹೆಚ್ಚು ಆಕರ್ಷಿತವಾಗುತ್ತವೆ ಎಂಬುದನ್ನು ಅಧ್ಯಯನವೊಂದು ಹೇಳಿದೆ. ನೀವು ಗಾಢ ಬಣ್ಣಗಳನ್ನು ಧರಿಸಿದರೆ ನೀವು ಹೆಚ್ಚು ಸೊಳ್ಳೆ ಕಡಿತವನ್ನು ಪಡೆಯುತ್ತೀರಿ ಎನ್ನಬಹುದು.

ಮದ್ಯಪಾನ

ಸೊಳ್ಳೆಗಳು ಮದ್ಯಪಾನ ಮಾಡುವ ಜನರತ್ತ ಹೆಚ್ಚು ಆಕರ್ಷಿತವಾಗಬಹುದು. ಇದರಲ್ಲಿ ವಾಸನೆ ಪ್ರಮುಖ ಅಂಶವಾಗಿದೆ ಎನ್ನಲಾಗುತ್ತದೆ. ಅಂದರೆ ಮದ್ಯಪಾನ ಮಾಡುವವರಿಗೆ ಸೊಳ್ಳೆಗಳು ಹೆಚ್ಚು ಕಚ್ಚುತ್ತವೆ ಎಂದಾಯಿತು!

ಇದನ್ನೂ ಓದಿ: Chandipura Virus: ಡೆಂಗ್ಯೂ ಹಾವಳಿ ನಡುವೆ ಕಾಡುತ್ತಿದೆ ಚಾಂದಿಪುರ ವೈರಸ್; ಇದುವರೆಗೆ 6 ಮಕ್ಕಳು ಬಲಿ: ಏನಿದರ ಲಕ್ಷಣ?

ಗರ್ಭಿಣಿಯರು

ಗರ್ಭಿಣಿಯರಲ್ಲದ ಮಹಿಳೆಯರಿಗೆ ಹೋಲಿಸಿದರೆ ಹೆಚ್ಚಿನ ಸಂಖ್ಯೆಯ ಸೊಳ್ಳೆಗಳು ಗರ್ಭಿಣಿಯರತ್ತ ಆಕರ್ಷಿತವಾಗುತ್ತದೆ. ಗರ್ಭಿಣಿಯರು ಹೆಚ್ಚು ಇಂಗಾಲದ ಡೈಆಕ್ಸೈಡ್ ಅನ್ನು ಬಿಡುಗಡೆ ಮಾಡುವುದರಿಂದ ಮತ್ತು ಹೆಚ್ಚಿನ ದೇಹದ ಉಷ್ಣತೆಯನ್ನು ಹೊಂದಿರುವುದರಿಂದ ಇವರತ್ತ ಸೊಳ್ಳೆಗಳು ಹೆಚ್ಚು ಆಕರ್ಷಿತರಾಗುತ್ತಾರೆ.

Continue Reading

ಆರೋಗ್ಯ

Walking Benefits: ಊಟದ ಬಳಿಕ ಕಿರು ನಡಿಗೆಯಿಂದ ಸಿಗುವ ಆರೋಗ್ಯ ಲಾಭಗಳು ಏನೇನು?

ಉತ್ತಮ ಆರೋಗ್ಯಕ್ಕಾಗಿ ದೈಹಿಕ ಚಟುವಟಿಕೆ ಬಹುಮುಖ್ಯವಾಗಿದೆ. ಅದರಲ್ಲೂ ನಡಿಗೆ (Walking Benefits) ದೇಹಕ್ಕೆ ಸಂಪೂರ್ಣ ವ್ಯಯಮವನ್ನು ಒದಗಿಸುತ್ತದೆ. ದೈನಂದಿನ ದಿನಚರಿಯಲ್ಲಿ ಊಟದ ಅನಂತರ ನಡಿಗೆಯನ್ನು ಸೇರಿಸುವುದು ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯವನ್ನು ಗಮನಾರ್ಹವಾಗಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಹೆಚ್ಚು ಸಮತೋಲಿತ ಮತ್ತು ಆರೋಗ್ಯಕರ ಜೀವನಶೈಲಿಗೆ ವಿಶೇಷವಾದ ಕೊಡುಗೆಯನ್ನು ನೀಡುತ್ತದೆ. ಸಾಕಷ್ಟು ಆರೋಗ್ಯ ಪ್ರಯೋಜನವನ್ನು ಒದಗಿಸುತ್ತದೆ.

VISTARANEWS.COM


on

By

Walking Benefits
Koo

ನಿತ್ಯದ ಒತ್ತಡದ ಜಂಜಾಟದಲ್ಲಿ ಈಗಿನ ಜನರಿಗೆ ನೆಮ್ಮದಿಯಾಗಿ ಕುಳಿತು ಊಟ (lunch) ಮಾಡಲು ಪುರುಸೊತ್ತಿಲ್ಲ. ಇದ್ದರೂ ಮೊಬೈಲ್ (mobile), ಟಿವಿಯಲ್ಲಿ (TV) ಮಗ್ನರಾಗಿ ಬಿಡುತ್ತಾರೆ. ಇನ್ನು ಊಟವಾದ ಬಳಿಕ ಮೊಬೈಲ್ ಕೈಯಲ್ಲಿ ಹಿಡಿದು ಕುಳಿತು ಬಿಡುತ್ತಾರೆ. ಹೀಗಾಗಿ ಊಟವಾದ ಬಳಿಕ ನಡೆಯುವ ಅಭ್ಯಾಸ (Walking Benefits) ಬಹುತೇಕ ಮಂದಿಯಲ್ಲಿ ಕಡಿಮೆಯಾಗಿದೆ.

ಊಟದ ಅನಂತರ ಕೊಂಚ ನಡೆದರೆ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಉತ್ತಮ ಆರೋಗ್ಯಕ್ಕಾಗಿ ದೈಹಿಕ ಚಟುವಟಿಕೆ ಬಹುಮುಖ್ಯವಾಗಿದೆ. ಅದರಲ್ಲೂ ನಡಿಗೆ ದೇಹಕ್ಕೆ ಸಂಪೂರ್ಣ ವ್ಯಯಮವನ್ನು ಒದಗಿಸುತ್ತದೆ.
ನಡಿಗೆಯು ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸುವ ವ್ಯಾಯಾಮವಾಗಿದೆ. ಇದು ಸ್ನಾಯುಗಳನ್ನು ಬಲಪಡಿಸುತ್ತದೆ, ಮಾನಸಿಕ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ ಮತ್ತು ತೂಕ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ.

ಊಟದ ಅನಂತರ ನಡೆಯುವುದು ವಿಶೇಷವಾಗಿ ಅನುಕೂಲಕರವಾಗಿದೆ. ಯಾಕೆಂದರೆ ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ವಿಶ್ರಾಂತಿಗೆ ದೇಹ ಮತ್ತು ಮನಸ್ಸನ್ನು ಉತ್ತೇಜಿಸುತ್ತದೆ. ಊಟದ ಅನಂತರದ ಚಟುವಟಿಕೆಯು ಉಬ್ಬುವುದು ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ದೂರ ಮಾಡುತ್ತದೆ. ಮಧುಮೇಹದಂತಹ ಚಯಾಪಚಯ ಅಸ್ವಸ್ಥತೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ತಿಂದ ಅನಂತರ ಸಣ್ಣ ನಡಿಗೆಯನ್ನು ಅಳವಡಿಸಿಕೊಳ್ಳುವುದರಿಂದ ಆರೋಗ್ಯವನ್ನು ಸ್ವಸ್ಥವಾಗಿ ಕಾಪಾಡಿಕೊಳ್ಳಬಹುದು.

Walking Benefits


ಊಟದ ಬಳಿಕ ನಡಿಗೆಯಿಂದ ಏನು ಪ್ರಯೋಜನ?

ಮಧ್ಯಾಹ್ನ ಮತ್ತು ರಾತ್ರಿ ಊಟದ ಬಳಿಕ ಕನಿಷ್ಠ ನೂರು ಹೆಜ್ಜೆ ನಡೆದರೆ ಸಾಕಷ್ಟು ಪ್ರಯೋಜನಗಳಿವೆ. ಅವುಗಳಲ್ಲಿ ಮುಖ್ಯವಾಗಿ:

ಹೃದಯ ರಕ್ತನಾಳದ ಆರೋಗ್ಯವನ್ನು ಹೆಚ್ಚಿಸುತ್ತದೆ

ಊಟದ ಅನಂತರ ಲಘು ನಡಿಗೆಯಲ್ಲಿ ತೊಡಗುವುದರಿಂದ ರಕ್ತದೊತ್ತಡ, ಎಲ್‌ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸಬಹುದು. ಇದು ಉತ್ತಮ ರಕ್ತಪರಿಚಲನೆ ಮತ್ತು ಹೃದಯದ ಕಾರ್ಯವನ್ನು ಉತ್ತೇಜಿಸುತ್ತದೆ. ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಹೃದಯರಕ್ತನಾಳದ ದಕ್ಷತೆಯನ್ನು ಹೆಚ್ಚಿಸುತ್ತದೆ.

ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ

ದೇಹದ ಸ್ವಾಭಾವಿಕ ಮೂಡ್ ಎಲಿವೇಟರ್‌ಗಳಾದ ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ವಾಕಿಂಗ್ ಒತ್ತಡ ಮತ್ತು ಆತಂಕವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಊಟದ ಅನಂತರದ ನಡಿಗೆಯು ದೇಹಕ್ಕೆ ವಿಶ್ರಾಂತಿಯನ್ನು ಕೊಡುತ್ತದೆ. ಮಾನಸಿಕ ಆಯಾಸವನ್ನು ಕಡಿಮೆ ಮಾಡುತ್ತದೆ ಮತ್ತು ಯೋಗಕ್ಷೇಮದ ಪ್ರಜ್ಞೆಯನ್ನು ಉತ್ತೇಜಿಸುತ್ತದೆ. ಮಾನಸಿಕ ಆರೋಗ್ಯ ಮತ್ತು ಒಟ್ಟಾರೆ ಜೀವನದ ಗುಣಮಟ್ಟಕ್ಕೆ ಉತ್ತಮ ಕೊಡುಗೆ ನೀಡುತ್ತವೆ.

ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ

ವಾಕಿಂಗ್‌ನಂತಹ ದೈಹಿಕ ಚಟುವಟಿಕೆಯು ಸಿರ್ಕಾಡಿಯನ್ ಲಯ ಮತ್ತು ವಿಶ್ರಾಂತಿಯನ್ನು ಉತ್ತೇಜಿಸುವ ಮೂಲಕ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ. ರಾತ್ರಿಯ ಊಟದ ಅನಂತರ ನಡೆಯುವುದು ನಿರ್ದಿಷ್ಟವಾಗಿ ವಿಶ್ರಾಂತಿ ಪಡೆಯಲು ಮತ್ತು ರಾತ್ರಿಯ ನಿದ್ರೆಗಾಗಿ ತಯಾರಾಗಲು ಸಹಾಯ ಮಾಡುತ್ತದೆ.

ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ

ಊಟದ ಅನಂತರ ನಡೆಯುವುದರಿಂದ ದೇಹದಾದ್ಯಂತ ರಕ್ತಪರಿಚಲನೆ ಮತ್ತು ಆಮ್ಲಜನಕದ ಹರಿವನ್ನು ಹೆಚ್ಚಿಸುವ ಮೂಲಕ ಶಕ್ತಿಯ ಮಟ್ಟವನ್ನು ಹೆಚ್ಚಿಸಬಹುದು. ಇದರಿಂದಾಗಿ ಹೆಚ್ಚು ಉತ್ಸಾಹದ ಅನುಭವ ಸಿಗುತ್ತದೆ. ದೈನಂದಿನ ಕೆಲಸಗಳಲ್ಲಿ ನಿರಂತರ ಶಕ್ತಿಯ ಮಟ್ಟ ಹೆಚ್ಚಿಸಲು ಇದು ಸಹಾಯ ಮಾಡುತ್ತದೆ.

ಆರೋಗ್ಯಕರ ಕರುಳಿನ ಸೂಕ್ಷ್ಮಜೀವಿಯನ್ನು ಉತ್ತೇಜಿಸುತ್ತದೆ

ವಾಕಿಂಗ್‌ನಂತಹ ನಿಯಮಿತ ದೈಹಿಕ ಚಟುವಟಿಕೆಯು ಕರುಳಿನ ಸೂಕ್ಷ್ಮಜೀವಿಯ ಮೇಲೆ ಧನಾತ್ಮಕವಾಗಿ ಪ್ರಭಾವ ಬೀರುತ್ತದೆ. ಸರಿಯಾದ ಜೀರ್ಣಕ್ರಿಯೆ, ಪ್ರತಿರಕ್ಷಣಾ ಕಾರ್ಯ, ಮತ್ತು ಮಾನಸಿಕ ಆರೋಗ್ಯಕ್ಕೂ ಆರೋಗ್ಯಕರ ಕರುಳಿನ ಸೂಕ್ಷ್ಮಾಣುಜೀವಿ ಅತ್ಯಗತ್ಯ. ವಾಕಿಂಗ್ ಕರುಳಿನ ಬ್ಯಾಕ್ಟೀರಿಯಾಗಳ ನಡುವೆ ವೈವಿಧ್ಯತೆ ಮತ್ತು ಸಮತೋಲನವನ್ನು ಉತ್ತೇಜಿಸುವ ಮೂಲಕ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ.

Walking Benefits


ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ

ನಡಿಗೆಯು ಗ್ಯಾಸ್ಟ್ರಿಕ್ ಜ್ಯೂಸ್ ಮತ್ತು ಆಹಾರವನ್ನು ಒಡೆಯಲು ಅಗತ್ಯವಾದ ಕಿಣ್ವಗಳ ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಇದು ಉಬ್ಬುವುದು, ಮಲಬದ್ಧತೆ ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ

ಊಟದ ಅನಂತರದ ನಡಿಗೆಯು ಇನ್ಸುಲಿನ್‌ಗೆ ದೇಹದ ಸೂಕ್ಷ್ಮತೆಯನ್ನು ಹೆಚ್ಚಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಧುಮೇಹ ಹೊಂದಿರುವ ವ್ಯಕ್ತಿಗಳಿಗೆ ಇದು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುವುದರಿಂದ ಶಕ್ತಿಯ ಕುಸಿತವನ್ನು ತಡೆಯಬಹುದು ಮತ್ತು ಮಧುಮೇಹಕ್ಕೆ ಸಂಬಂಧಿಸಿದ ದೀರ್ಘಕಾಲೀನ ತೊಡಕುಗಳ ಅಪಾಯವನ್ನು ಕಡಿಮೆ ಮಾಡಬಹುದು.

ತೂಕ ನಿರ್ವಹಣೆಗೆ ಸಹಾಯ

ಊಟದ ಅನಂತರ ನಡೆಯುವುದು ಕ್ಯಾಲೊರಿಗಳನ್ನು ಸುಡುಲು ಸಹಾಯ ಮಾಡುತ್ತದೆ. ಇದು ದೇಹದ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. ಈ ಚಟುವಟಿಕೆಯು ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ಹೆಚ್ಚುವರಿ ಕ್ಯಾಲೊರಿಗಳನ್ನು ಕೊಬ್ಬಿನಂತೆ ಸಂಗ್ರಹಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಬೊಜ್ಜು ಸಂಬಂಧಿತ ಕಾಯಿಲೆಗಳಾದ ಹೃದ್ರೋಗ, ಪಾರ್ಶ್ವವಾಯು ಮತ್ತು ಕೆಲವು ಕ್ಯಾನ್ಸರ್‌ಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: Tulsi Tea Benefits: ನಿತ್ಯವೂ ತುಳಸಿ ಚಹಾ ಕುಡಿಯುವುದರಿಂದ ಏನೆಲ್ಲ ಲಾಭಗಳಿವೆ ಗೊತ್ತೇ?

ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು

ನಡಿಗೆಯು ಮೆದುಳಿಗೆ ರಕ್ತದ ಹರಿವನ್ನು ಉತ್ತೇಜಿಸುತ್ತದೆ. ಇದು ಅರಿವಿನ ಕಾರ್ಯ, ಸ್ಮರಣೆ ಮತ್ತು ಏಕಾಗ್ರತೆಯನ್ನು ಸುಧಾರಿಸುತ್ತದೆ. ಊಟದ ಅನಂತರ ಒಂದು ಸಣ್ಣ ನಡಿಗೆಯು ಮನಸ್ಸನ್ನು ಉಲ್ಲಾಸಗೊಳಿಸಲು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಮಸ್ಯೆ-ಪರಿಹರಿಸುವ ಸಾಮರ್ಥ್ಯವನ್ನು ಸುಧಾರಿಸುತ್ತದೆ ಮತ್ತು ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ಒಟ್ಟಾರೆ ಮಾನಸಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.

Continue Reading
Advertisement
England vs West Indies
ಕ್ರೀಡೆ2 mins ago

England vs West Indies: ವೇಗದ ಅರ್ಧಶತಕ ಸಿಡಿಸಿ ವಿಶ್ವ ದಾಖಲೆ ಬರೆದ ಇಂಗ್ಲೆಂಡ್

Karnataka Rain
ಮಳೆ6 mins ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Vaibhavi Jagdish Bold Photo shoot
ಸ್ಯಾಂಡಲ್ ವುಡ್6 mins ago

Vaibhavi Jagdish: ಬೋಲ್ಡ್‌ ಫೋಟೊ ಹಂಚಿಕೊಂಡು ಕಮೆಂಟ್‌ ಸೆಕ್ಷನ್‌ ಆಫ್‌ ಮಾಡಿದ ಜೈ ಜಗದೀಶ್ ಪುತ್ರಿ!

Kannada Actress Many opportunities for this actress before the release Back Benchers'!
ಸ್ಯಾಂಡಲ್ ವುಡ್26 mins ago

Kannada Actress: `ಬ್ಯಾಕ್‍ ಬೆಂಚರ್ಸ್’ ಬಿಡುಗಡೆಗೂ ಮುನ್ನವೇ ಹಲವು ಅವಕಾಶಗಳು ಈ ನಟಿಗೆ!

Donald Trump
ವಿದೇಶ33 mins ago

Donald Trump: ಅಮೆರಿಕವೂ ಐರನ್ ಡೋಮ್ ಕ್ಷಿಪಣಿ ತಯಾರಿಸಲಿದೆ; ಡೊನಾಲ್ಡ್‌ ಟ್ರಂಪ್‌ ಸೂಚನೆ

ಪ್ರಮುಖ ಸುದ್ದಿ48 mins ago

Olympic Games: ಒಲಿಂಪಿಕ್ಸ್​ನಲ್ಲಿ ಮಹಿಳೆಯರು ಮೊದಲ ಬಾರಿಗೆ ಸ್ಪರ್ಧಿಸಿದ್ದು ಯಾವಾಗ?

Ram Pothineni double ismart second song out
ಟಾಲಿವುಡ್1 hour ago

Ram Pothineni: `ಡಬಲ್ ಇಸ್ಮಾರ್ಟ್’ ಸಿನಿಮಾದ ಎರಡನೇ ಹಾಡು ರಿಲೀಸ್!

UT Khader karnataka assembly live
ಪ್ರಮುಖ ಸುದ್ದಿ1 hour ago

Karnataka Assembly Live: ವಿಧಾನಸಭೆಯಲ್ಲಿ ಶಾಸಕರಿಗೆ ಮಧ್ಯಾಹ್ನ ಮಲಗಲು ವ್ಯವಸ್ಥೆ ಮಾಡಿಸಿದ ಸ್ಪೀಕರ್!

Sri Lanka Tour
ಕ್ರೀಡೆ1 hour ago

Sri Lanka Tour: ಸಂಜು, ಅಭಿಷೇಕ್​ಗೆ ಅವಕಾಶ ನೀಡದಕ್ಕೆ ಬಿಸಿಸಿಐ ವಿರುದ್ಧ ಕಿಡಿಕಾರಿದ ಸಂಸದ ​ತರೂರ್

Gold Rate Today
ಚಿನ್ನದ ದರ2 hours ago

Gold Rate Today: ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ; ಬಂಗಾರ ಇಂದು ಇಷ್ಟು ಅಗ್ಗ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ6 mins ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ20 hours ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ21 hours ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ3 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ4 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ4 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ4 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ5 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ5 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

ಟ್ರೆಂಡಿಂಗ್‌