Rihanna: ಮಿನಿ ಸ್ಕರ್ಟ್‌ ತೊಟ್ಟು, ಬ್ರಾ, ಅಂಡರ್‌ವೇರ್‌ ತೋರಿಸುತ್ತ ಓಡಾಡಿದ ಪಾಪ್‌ ಗಾಯಕಿ ರಿಹಾನಾ; Video ಇಲ್ಲಿದೆ - Vistara News

ವಿದೇಶ

Rihanna: ಮಿನಿ ಸ್ಕರ್ಟ್‌ ತೊಟ್ಟು, ಬ್ರಾ, ಅಂಡರ್‌ವೇರ್‌ ತೋರಿಸುತ್ತ ಓಡಾಡಿದ ಪಾಪ್‌ ಗಾಯಕಿ ರಿಹಾನಾ; Video ಇಲ್ಲಿದೆ

Rihanna: ಒಳ ಉಡುಪುಗಳನ್ನು ತೋರಿಸುತ್ತ, ರಸ್ತೆ ಮೇಲೆ ಓಡಾಡಿದ ವಿಡಿಯೊವನ್ನು ರಿಹಾನಾ ಅವರೇ ಹಂಚಿಕೊಂಡಿದ್ದಾರೆ. ಅವರ ವಿಡಿಯೊಗೆ ಸಾವಿರಾರು ಜನ ಪ್ರತಿಕ್ರಿಯಿಸಿದ್ದು, ಒಂದಷ್ಟು ಜನ ಹೊಗಳಿದ್ದರೆ, ಇನ್ನೊಂದಿಷ್ಟು ಜನ ಟೀಕಿಸಿದ್ದಾರೆ. ಇದಕ್ಕೂ ಮೊದಲು ಕೂಡ ರಿಹಾನಾ ಅವರ ಉಡುಪು, ಸಾರ್ವಜನಿಕ ವರ್ತನೆಗಳ ಬಗ್ಗೆ ಚರ್ಚೆಯಾಗಿತ್ತು.

VISTARANEWS.COM


on

Rihanna
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬ್ರಿಡ್ಜ್‌ಟೌನ್‌: ಬಾರ್ಬಡಾಸ್‌ನ ಪಾಪ್‌ ಗಾಯಕಿ (Pop Singer), ಜಾಗತಿಕ ಖ್ಯಾತಿಯ ರಿಹಾನಾ (Rihanna) ಅವರಿಗೆ ಬಾರ್ಬಡಾಸ್‌ ಮಾತ್ರವಲ್ಲ ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ಅವರ ಮ್ಯೂಸಿಕ್‌ ಶೋಗೆ ಜನ ಕಾಯುತ್ತಿರುತ್ತಾರೆ. ಇನ್ನು, ರಿಹಾನಾ ಅವರೂ ಅಷ್ಟೇ, ಗಾಯನದ ಜತೆಗೆ ವಿಚಿತ್ರ ನೃತ್ಯ, ಉಡುಪುಗಳಿಂದಲೂ ಖ್ಯಾತಿ ಗಳಿಸಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ರಿಹಾನಾ ಅವರು ಸಾರ್ವಜನಿಕವಾಗಿಯೇ ಬ್ರಾ ಹಾಗೂ ಅಂಡರ್‌ವೇರ್‌ ತೋರಿಸುತ್ತ ಓಡಾಡಿದ್ದು, ಈಗ ವಿಡಿಯೊ (Viral Video) ಭಾರಿ ವೈರಲ್‌ ಆಗಿದೆ.

ಹೌದು, ಮಿನಿ ಸ್ಕರ್ಟ್‌ ಹಾಗೂ ದೊಗಳೆ ಅಂಗಿ ಧರಿಸಿದ ರಿಹಾನಾ, ರಸ್ತೆ ಮೇಲೆ ಓಡಾಡಿದ್ದಾರೆ. ಇದರ ಮಧ್ಯೆ ಅವರು ಧರಿಸಿದ್ದ ಬ್ರಾ ಹಾಗೂ ಪ್ಯಾಂಟೀಸ್‌ಅನ್ನು ತೋರಿಸಿದ್ದಾರೆ. ಈ ವಿಡಿಯೊವನ್ನು ಅವರು ಹಂಚಿಕೊಳ್ಳುವ ಜತೆಗೆ, “ಮುಂದಿನ ಬೇಸಿಗೆಯವರೆಗೆ ನಾನು ಸಿಕ್ಸ್‌ ಪ್ಯಾಕ್‌ ಮಾಡಲು ಆಗುವುದಿಲ್ಲ. ಅಲ್ಲಿಯವರೆಗೆ, ನನ್ನ ಶೂ ಹಾಗೂ ಪ್ಯಾಂಟೀಸ್‌ ಮ್ಯಾಚಿಂಗ್‌ ಇರುವ ರೀತಿ ನೋಡಿಕೊಳ್ಳುತ್ತೇನೆ” ಎಂಬುದಾಗಿ ಒಕ್ಕಣೆ ಬರೆದುಕೊಂಡಿದ್ದಾರೆ. ಇದಕ್ಕೆ ಸಾವಿರಾರು ಜನ ಪ್ರತಿಕ್ರಿಯಿಸಿದ್ದು, ಒಂದಷ್ಟು ಜನ ಹೊಗಳಿದ್ದರೆ, ಇನ್ನೊಂದಿಷ್ಟು ಜನ ಟೀಕಿಸಿದ್ದಾರೆ. ಇದಕ್ಕೂ ಮೊದಲು ಕೂಡ ರಿಹಾನಾ ಅವರ ಉಡುಪು, ಸಾರ್ವಜನಿಕ ವರ್ತನೆಗಳ ಬಗ್ಗೆ ಚರ್ಚೆಯಾಗಿತ್ತು.

ಕೆಲ ತಿಂಗಳ ಹಿಂದೆ ಮುಕೇಶ್‌ ಅಂಬಾನಿ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್‌ ಅವರ ಪ್ರಿ ವೆಡ್ಡಿಂಗ್‌ ಸಮಾರಂಭದಲ್ಲಿ ಪಾಪ್‌ ಐಕಾನ್‌ ರಿಹಾನಾ ಸ್ಟೇಜ್‌ ಶೋ ನೀಡುವಾಗ ಇದ್ದಕ್ಕಿಂದ್ದಂತೆ, ಪರ್ಫಮಾನ್ಸ್ ಮಧ್ಯೆ ಆಕೆ ಧರಿಸಿದ್ದ ಫ್ಲೊರಸೆಂಟ್‌ ಗ್ರೀನ್ ಶೇಡ್‌ನ ತೆಳುವಾದ ಡಿಸೈನರ್‌ವೇರ್‌ ಕೈಗಳ ಕೆಳಗೆ ಹರಿದು ಹೋಗಿತ್ತು. ತಕ್ಷಣಕ್ಕೆ ಆಕೆಗೆ ಇದು ಗೊತ್ತಾಗದಿದ್ದರೂ, ಆಕೆಯ ಬಹುತೇಕ ಫೋಟೋಗಳಲ್ಲಿ ಇದು ದಾಖಲಾಗಿ ಉಳಿದು ಹೋಯಿತು. ಈ ಫೋಟೊಗಳು ವೈರಲ್‌ ಆಗಿದ್ದವು.

ಜಗತ್ತಿನ ಯಾವುದೇ ಮೂಲೆಯಲ್ಲಿ ರಿಹಾನಾ ಅವರ ಲೈವ್‌ ಮ್ಯೂಸಿಕ್‌ ಶೋ ನಡೆದರೆ, ಅಲ್ಲೆಲ್ಲ ಲಕ್ಷಾಂತರ ಜನ ಸೇರುತ್ತಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಅವರ ಹಾಡಿಗೆ ಕಿವಿಯಾಗುತ್ತಾರೆ. ಹಾಗಾಗಿ, ಯಾವುದೇ ಶೋಗೆ ಇಡೀ ತಂಡವನ್ನು ಕರೆದುಕೊಂಡು ಹೋಗುವ ರಿಹಾನಾ ಅವರು ಸುಮಾರು 66-74 ಕೋಟಿ ರೂ. ಚಾರ್ಜ್‌ ಮಾಡುತ್ತಾರೆ. ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್‌ ಅವರ ವಿವಾಹಪೂರ್ವ ಕಾರ್ಯಕ್ರಮದಲ್ಲೂ ಲೈವ್‌ ಶೋಗಾಗಿ ರಿಹಾನಾ ಅವರು ಸುಮಾರು 74 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ತಿಳಿದುಬಂದಿತ್ತು.

ಇದನ್ನೂ ಓದಿ: Wardrobe Malfunction 2024: ಪಾಪ್‌ ಐಕಾನ್‌ ರಿಹಾನಾ ಡ್ರೆಸ್‌ ಎಡವಟ್ಟು! ಹೀಗಾಗದಂತೆ ಎಚ್ಚರ ವಹಿಸುವುದು ಹೇಗೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral Video: ತಲೆಯಿಂದ ಡಿಚ್ಚಿ ಹೊಡೆದು ಬೋಟ್‌ಅನ್ನೇ ಪಲ್ಟಿ ಮಾಡಿದ ತಿಮಿಂಗಿಲ! ಮೈನವಿರೇಳಿಸುವ ವಿಡಿಯೊ!

Viral Video: ಇಂಗ್ಲೆಂಡ್‌ನ ಪೋರ್ಟ್ಸ್ ಮೌತ್ ಕರಾವಳಿಯಿಂದ ಅರ್ಧ ಮೈಲಿ ದೂರದಲ್ಲಿ ಲಂಗರು ಹಾಕಿದ್ದ ಬೋಟ್‌ನ ಮೇಲ್ಭಾಗದಿಂದ 30 ಅಡಿ ಉದ್ದದ ತಿಮಿಂಗಿಲ ಇದ್ದಕ್ಕಿದ್ದಂತೆ ಮೇಲಕ್ಕೆ ನೆಗೆದಿದೆ. ಅದರ ತಲೆ 23 ಅಡಿ ಉದ್ದದ ಬೋಟ್‌ಗೆ ಡಿಕ್ಕಿ ಹೊಡೆದಿದೆ. ಆಗ ಬೋಟ್‌ ಪಲ್ಟಿಯಾಗಿದೆ. ಈ ಸಮಯದಲ್ಲಿ ಬೋಟ್‌ನಲ್ಲಿದ್ದ ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ. ಈ ವಿಡಿಯೊ ಈಗ ವೈರಲ್‌ ಆಗಿದೆ. ಬೋಟ್‌ ಪಲ್ಟಿಯಾಗುವ ದೃಶ್ಯ ಭಯ ಹುಟ್ಟಿಸುತ್ತದೆ.

VISTARANEWS.COM


on

Viral Video
Koo


ಇಂಗ್ಲೆಂಡ್‌ನ ಪೋರ್ಟ್ಸ್ ಮೌತ್ ಬಂದರಿನಲ್ಲಿ ಮಂಗಳವಾರ ಬೆಳಗ್ಗೆ ತಿಮಿಂಗಿಲವೊಂದು ಬೋಟೊಂದಕ್ಕೆ ಹಾರಿ ಅದನ್ನು ಪಲ್ಟಿ ಮಾಡಿದೆ. ಈ ಭಯಾನಕ ಘಟನೆಯನ್ನು ಹತ್ತಿರದಲ್ಲಿದ್ದ ಬೋಟ್‌ನವರು ವಿಡಿಯೊ ಮಾಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ವಿಡಿಯೊದಲ್ಲಿ ಪೋರ್ಟ್ಸ್ ಮೌತ್ ಕರಾವಳಿಯಿಂದ ಅರ್ಧ ಮೈಲಿ ದೂರದಲ್ಲಿ ಲಂಗರು ಹಾಕಿದ್ದ ಬೋಟ್‌ನ ಮೇಲ್ಭಾಗದಿಂದ 30 ಅಡಿ ಉದ್ದದ ತಿಮಿಂಗಿಲ ನೆಗೆದಿದೆ. ಅದರ ತಲೆ 23 ಅಡಿ ಉದ್ದದ ಬೋಟ್‌ಗೆ ಡಿಕ್ಕಿ ಹೊಡೆದು ಅದನ್ನು ಪಲ್ಟಿಯಾಗಿಸಿದೆ. ಕಾಲಿನ್ ಯಾಗರ್ (16) ಮತ್ತು ಅವರ ಸಹೋದರ ವ್ಯಾಟ್ (19) ಎಂಬುವರು ಬಂದರಿನಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಈ ಆಘಾತಕಾರಿ ಘಟನೆ ನಡೆದಿದೆ. ತಕ್ಷಣ ಬೇರೆ ಬೋಟ್‌ನವರು ಅವರಿಗೆ ಸಹಾಯ ಮಾಡಲು ಧಾವಿಸಿದರು. ಒಬ್ಬ ವ್ಯಕ್ತಿ ಪಲ್ಟಿಯಾದ ಬೋಟ್‌ನಿಂದ ಜಿಗಿದರೆ, ಇನ್ನೊಬ್ಬನು ಜಿಗಿಯಲು ಸಾಧ್ಯವಾಗದೆ ಅಲ್ಲೇ ಈಜಿ ಪಾರಾಗಿದ್ದಾನೆ ಎಂಬುದಾಗಿ ತಿಳಿದುಬಂದಿದೆ. ಘಟನೆಯಲ್ಲಿ ಇಬ್ಬರಿಗೂ ಯಾವುದೇ ಹೆಚ್ಚಿನ ಗಾಯವಾಗಿಲ್ಲ. ತಿಮಿಂಗಿಲಕ್ಕೆ ಯಾವುದೇ ಹಾನಿಯಾಗಿಲ್ಲ ಎನ್ನಲಾಗಿದೆ. ಎಕ್ಸ್ ಬಳಕೆದಾರ ರಿಯಾನ್ ವಿಟ್ನಿ ಎಂಬುವರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ.‌

ಸಮುದ್ರ ಸಂಶೋಧಕರ ಪ್ರಕಾರ ಈ ಬೃಹತ್ ತಿಮಿಂಗಿಲವು ಉದ್ದೇಶಪೂರ್ವಕವಾಗಿ ಹೀಗೆ ದಾಳಿ ಮಾಡಿಲ್ಲ. ಬದಲಾಗಿ ಸಣ್ಣ ಮೀನುಗಳನ್ನು ಕಂಡಾಗ ಅವು ದೊಡ್ಡ ಬಾಯಿ ತೆರೆದು ಅವುಗಳನ್ನು ನುಂಗಲು ಮೇಲಕ್ಕೆ ಹಾರುತ್ತವೆ. ಹಾಗಾಗಿ ಈ ಬೋಟ್‌ ಅಂತಹ ಸ್ಥಳದಲ್ಲಿದ್ದರಿಂದ ಅವು ಬೋಟನ್ನು ನೋಡದೆ ಮೇಲಕ್ಕೆ ಹಾರಿದ್ದರಿಂದ ಈ ಘಟನೆ ಸಂಭವಿಸಿರಬಹುದು. “ನಾನು 30 ವರ್ಷಗಳಿಂದ ತಿಮಿಂಗಿಲಗಳನ್ನು ನೋಡುತ್ತಿದ್ದೇನೆ ಮತ್ತು ತಿಮಿಂಗಿಲಗಳ ಬಗ್ಗೆ ಸಂಶೋಧನೆ ನಡೆಸುತ್ತಿದ್ದೇನೆ. ಹಂಪ್ಬ್ಯಾಕ್ ತಿಮಿಂಗಿಲವು ಉದ್ದೇಶಪೂರ್ವಕವಾಗಿ ಹಡಗಿಗೆ ಅಥವಾ ದೋಣಿಗಳಿಗೆ ಡಿಕ್ಕಿ ಹೊಡೆಯುವುದನ್ನು ನಾನು ಎಂದೂ ನೋಡಿಲ್ಲ” ಎಂದು ಸಂಶೋಧಕರೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಯುವಕನಿಗೆ ಜಾಡಿಸಿ ಒದ್ದ ಜಿಮ್‌ ಮಾಲೀಕನನ್ನು ಮತ್ತೊಬ್ಬ ಯುವಕ ಇರಿದು ಕೊಂದ; ವಿಡಿಯೊ ಇದೆ

ಇಲ್ಲಿ ವಿಶೇಷವಾಗಿ ಜೂನ್ ಮತ್ತು ಆಗಸ್ಟ್ ನಡುವೆ ತಿಮಿಂಗಿಲಗಳು ಸಾಮಾನ್ಯವಾಗಿ ಹೆಚ್ಚಾಗಿ ಕಂಡು ಬರುತ್ತವೆ. ಆದರೆ ತಿಮಿಂಗಿಲ ಹಡಗಿನ ಮೇಲೆ ದಾಳಿ ಮಾಡಿದ್ದು ಮಾತ್ರ ಇದೇ ಮೊದಲ ಘಟನೆ ಎನ್ನಲಾಗುತ್ತದೆ. ಈ ಘಟನೆಗೂ ಮೊದಲು ಇದೇ ಪ್ರದೇಶದಲ್ಲಿ ತಿಮಿಂಗಿಲವೊಂದು ಪತ್ತೆಯಾಗಿದ್ದನ್ನು ವೀಕ್ಷಕರು ಗಮನಿಸಿದ್ದಾರೆ ಎನ್ನಲಾಗಿದೆ.

Continue Reading

ಕ್ರೈಂ

Cheating Case: ಅಮೆರಿಕದ ಮಹಿಳೆಗೆ ದಿಲ್ಲಿಯ ಯುವಕ 3.3 ಕೋಟಿ ರೂ. ಟೋಪಿ ಹಾಕಿದ್ದು ಹೇಗೆ ನೋಡಿ!

ಕ್ರಿಪ್ಟೋಕರೆನ್ಸಿ ಮಾರಾಟ ಮಾಡುವ ದೆಹಲಿ ಮೂಲದ ಬುಕ್ಕಿಯೊಬ್ಬ (Cheating Case) ಅಮೆರಿಕದ ಮಹಿಳೆಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದು ಜಾರಿ ನಿರ್ದೇಶನಾಲಯದ ತನಿಖೆಯಿಂದ ಬಹಿರಂಗವಾಗಿದೆ. ಆರೋಪಿಯನ್ನು ಈಗ ಬಂಧಿಸಲಾಗಿದೆ. ಆರೋಪಿಗಳು ಜನರನ್ನು ವಂಚಿಸಿ ಬೇರೆಬೇರೆಯವರ ಖಾತೆಗೆ ಹಣ ವರ್ಗಾಯಿಸಿಕೊಳ್ಳುತ್ತಿದ್ದರು ಎನ್ನುವುದು ತನಿಖೆಯಿಂದ ಬಯಲಾಗಿದೆ.

VISTARANEWS.COM


on

By

Cheating Case
Koo

ನವದೆಹಲಿ: ಅಮೆರಿಕದ ಮಹಿಳೆಯೊಬ್ಬರಿಗೆ (US women) ದೆಹಲಿಯ (delhi) ವ್ಯಕ್ತಿಯೊಬ್ಬ ಬರೋಬ್ಬರಿ 4 ಲಕ್ಷ ಡಾಲರ್ ಅಂದರೆ 3.3 ಕೋಟಿ ರೂ.ಯನ್ನು ಹೈಟೆಕ್‌ ತಂತ್ರ ಬಳಸಿ ವಂಚಿಸಿದ (Cheating Case) ಘಟನೆ ಬೆಳಕಿಗೆ ಬಂದಿದೆ. ಲಿಸಾ ರೋತ್‌ ಎಂಬ ಮಹಿಳೆಗೆ ಮೈಕ್ರೋಸಾಫ್ಟ್‌ನ ಏಜೆಂಟ್ (agent of Microsoft) ಎಂದು ಸುಳ್ಳು ಹೇಳಿ, ಅವರಿಗೆ ಹೆಚ್ಚಿನ ಹಣದ ಆಮಿಷವೊಡ್ಡಿ ಪೂರ್ವ ದೆಹಲಿಯ ದಿಲ್ಶಾದ್ ಗಾರ್ಡನ್‌ನಲ್ಲಿ ಬಳಿಯ ನಿವಾಸಿ ಲಕ್ಷ್ಯ ವಿಜ್ ಎಂಬಾತ ವಂಚಿಸಿದ್ದ.

2023ರ ಜುಲೈ 4ರಂದು ಲಿಸಾ ರೋತ್‌ಗೆ ಲಕ್ಷ್ಯ ವಿಜ್ ಕರೆ ಮಾಡಿ ಕ್ರಿಪ್ಟೋಕರೆನ್ಸಿ ವ್ಯಾಲೆಟ್‌ಗೆ 4,00,000 ಡಾಲರ್‌ಗಳನ್ನು ವರ್ಗಾಯಿಸಲು ಕೇಳಿದ್ದಾನೆ ಎನ್ನಲಾಗಿದೆ. ಘಟನೆ ನಡೆದು ಒಂದು ವರ್ಷದ ಬಳಿಕ ಜಾರಿ ನಿರ್ದೇಶನಾಲಯವು ದೆಹಲಿ ಮೂಲದ ಬುಕ್ಕಿ ಮತ್ತು ಕ್ರಿಪ್ಟೋಕರೆನ್ಸಿ ಹ್ಯಾಂಡ್ಲರ್ ಅನ್ನು ಲಕ್ಷ್ಯ ವಿಜ್ ನನ್ನು ಬಂಧಿಸಿದೆ. ಕಳೆದ ವರ್ಷ ಮಾರ್ಚ್‌ನಲ್ಲಿ ಗುಜರಾತ್ ಪೊಲೀಸರು ಪೂರ್ವ ದೆಹಲಿಯ ಕ್ರಾಸ್ ರಿವರ್ ಮಾಲ್‌ ನಲ್ಲಿ ಆತನನ್ನು ಬಂಧಿಸಿದಾಗ ಆತನ ಮಾಹಿತಿ ಬಹಿರಂಗವಾಗಿದೆ. ಬಳಿಕ ದೆಹಲಿ ಪೊಲೀಸ್‌ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿ ಅವನನ್ನು ಬಿಡುಗಡೆ ಮಾಡಿದ್ದರು ಎನ್ನಲಾಗಿದೆ.

ವಂಚನೆ ಬೆಳಕಿಗೆ ಬಂದಿದ್ದು ಹೇಗೆ?

ರೋತ್ ವರ್ಗಾವಣೆ ಮಾಡಿದ ಹಣ ಪ್ರಫುಲ್ ಗುಪ್ತಾ ಮತ್ತು ಅವರ ತಾಯಿ ಸರಿತಾ ಗುಪ್ತಾ ಅವರ ವ್ಯಾಲೆಟ್‌ಗಳಿಗೆ ಹೋಗಿತ್ತು. ತನಿಖೆಯ ವೇಳೆ ಕರಣ್ ಚುಗ್ ಎಂಬ ವ್ಯಕ್ತಿ ಗುಪ್ತಾ ಅವರಿಂದ ಈ ಹಣವನ್ನು ಪಡೆದು ಬೇರೆ ಬೇರೆ ವ್ಯಾಲೆಟ್‌ಗಳಲ್ಲಿ ಠೇವಣಿ ಇಟ್ಟಿರುವುದು ಪತ್ತೆಯಾಯಿತು. ಇದರ ಅನಂತರ ಕ್ರಿಪ್ಟೋಕರೆನ್ಸಿಯನ್ನು ಮಾರಾಟ ಮಾಡುವ ಮೂಲಕ ಈ ಮೊತ್ತವನ್ನು ವಿವಿಧ ಭಾರತೀಯ ನಕಲಿ ಖಾತೆಗಳಿಗೆ ವರ್ಗಾಯಿಸಲಾಯಿತು. ಕರಣ್ ಮತ್ತು ಲಕ್ಷ್ಯ ಅವರ ಸೂಚನೆ ಮೇರೆಗೆ ಈ ಹಣವನ್ನು ವರ್ಗಾಯಿಸಲಾಯಿತು. ಅನಂತರ ಅವರು ಫೇರ್ ಪ್ಲೇ 24ನಂತಹ ಬೆಟ್ಟಿಂಗ್ ಅಪ್ಲಿಕೇಶನ್‌ಗಳಲ್ಲಿ ಜನರಿಂದ ಪಡೆದ ಹಣವನ್ನು ಬಳಸಿದರು. ತನಿಖಾ ಸಂಸ್ಥೆಯು ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಕಳೆದ ತಿಂಗಳು ಹಲವು ಸ್ಥಳಗಳಲ್ಲಿ ದಾಳಿ ನಡೆಸಿ ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದೆ. ಅಪರಾಧದಲ್ಲಿ ಬಳಸಲಾದ ಕ್ರಿಪ್ಟೋ ವ್ಯಾಲೆಟ್‌ಗಳನ್ನು ಹೊಂದಿರುವವರ ಹೇಳಿಕೆಗಳನ್ನು ಸಹ ದಾಖಲಿಸಲಾಗಿದೆ.

ಇದನ್ನೂ ಓದಿ: Bitcoin Scam: ಬಿಟ್‌‌ ಕಾಯಿನ್ ಹಗರಣ; ಆರೋಪಿಗಳಾದ ಶ್ರೀಕಿ, ಖಂಡೇಲ್ ವಾಲಾ ಜೈಲಿನಿಂದ ಬಿಡುಗಡೆ

ತನಿಖೆಯಲ್ಲಿ ಲಕ್ಷ್ಯ ಅವರ ಆದೇಶದ ಮೇರೆಗೆ ಎಲ್ಲಾ ವ್ಯಾಲೆಟ್‌ಗಳಿಗೆ ಹಣ ವರ್ಗಾವಣೆಯಾಗಿದ್ದು, ಈ ವಂಚನೆಯ ಮಾಸ್ಟರ್‌ಮೈಂಡ್‌ ಎಂದು ತಿಳಿದುಬಂದಿದೆ. ಪ್ರಮುಖ ಆರೋಪಿ ಲಕ್ಷ್ಯ ವಿಜ್ ನನ್ನು ದೆಹಲಿಯ ರೂಸ್ ಅವೆನ್ಯೂ ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, 5 ದಿನಗಳ ಜಾರಿ ನಿರ್ದೇಶನಾಲಯದ ಬೇಡಿಕೆಯ ಮೇರೆಗೆ ಆತನನ್ನು ಅವರ ವಶಕ್ಕೆ ಒಪ್ಪಿಸಲಾಗಿದೆ.

Continue Reading

Latest

Mr. Bean: ‘ಮಿಸ್ಟರ್ ಬೀನ್’ ಖ್ಯಾತಿಯ ರೋವನ್ ಅಟ್ಕಿನ್ಸನ್ ಹಾಸಿಗೆ ಹಿಡಿದಿದ್ದಾರೆಯೇ? ಭಾರೀ ವೈರಲಾಗ್ತಿದೆ ಈ ಫೋಟೊ

Mr. Bean ಮನಸ್ಸಿಗೆ ಎಷ್ಟೇ ನೋವಾಗಿದ್ದರೂ ತಿಳಿ ಹಾಸ್ಯವೊಂದು ಆ ಘಾಸಿಗೊಳಿಸಿದ ಮನಸ್ಸನ್ನು ತಂಗಾಳಿಯೊಂದು ತಾಕಿ ಹೋದ ಹಾಗೇ ತಂಪನೀಯುತ್ತದೆ. ಮಿಸ್ಟರ್ ಬೀನ್ ಎಷ್ಟೋ ನೊಂದ ಮನಸ್ಸಿನ ನೋವನ್ನು ತಮ್ಮ ಹಾಸ್ಯ ನಟನೆಯ ಮೂಲಕ ಕಡಿಮೆ ಮಾಡಿದ್ದಾರೆಂದರೆ ತಪ್ಪಾಗಲಾರದು. ಅವರ ನಟನೆ ಬಿದ್ದು ಬಿದ್ದು ನಗುವ ಹಾಗೇ ಮಾಡುತ್ತಿತ್ತು. ಈಗ ಮಿಸ್ಟರ್ ಬೀನ್ ಖ್ಯಾತಿಯ ಹಾಲಿವುಡ್ ನಟ ರೋವನ್ ಅಟ್ಕಿನ್ಸನ್ ಆರೋಗ್ಯ ಹದಗೆಟ್ಟು ಬೆಡ್ ಮೇಲೆ ಮಲಗಿರುವ ಪೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 69 ವರ್ಷದ ನಟ ಹಾಸಿಗೆ ಮೇಲೆ ಮಲಗಿದ್ದ ಪೋಟೊ ನೋಡಿ ಅವರ ಅಭಿಮಾನಿಗಳು ದಂಗಾಗಿದ್ದಾರೆ.

VISTARANEWS.COM


on

Mr. Bean
Koo


ಲಂಡನ್ :ತಮ್ಮ ವಿಭಿನ್ನ ವಿಚಿತ್ರ ಹಾವಭಾವದೊಂದಿಗೆ ನಟಿಸಿ ಜನರನ್ನು ನಗೆಯ ಕಡಲಿನಲ್ಲಿ ತೇಲುವಂತೆ ಮಾಡುತ್ತಿದ್ದ ಮಿಸ್ಟರ್ ಬೀನ್ ಖ್ಯಾತಿಯ ಹಾಲಿವುಡ್ ನಟ ರೋವನ್ ಅಟ್ಕಿನ್ಸನ್ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧರು ಕೂಡ ಇವರ ಹಾಸ್ಯವನ್ನು ನೋಡಿ ನಗುತ್ತಿದ್ದರು ಮತ್ತು ತಮ್ಮ ಎಲ್ಲಾ ನೋವನ್ನು ಮರೆಯುತ್ತಿದ್ದರು. ಅಂತಹ ಮಹಾನ್ ನಟನ ಬಗ್ಗೆ ಕಳೆದ ಕೆಲವು ದಿನಗಳಲ್ಲಿ, ಕೆಟ್ಟ ಸುದ್ದಿಯೊಂದು ಹರಿದಾಡುತ್ತಿತ್ತು. ಅದೇನೆಂದರೆ ಮಿಸ್ಟರ್ ಬೀನ್ (Mr. Bean) ಖ್ಯಾತಿಯ ಹಾಲಿವುಡ್ ನಟ ರೋವನ್ ಅಟ್ಕಿನ್ಸನ್ ಆರೋಗ್ಯ ಹದಗೆಟ್ಟು ಬೆಡ್ ಮೇಲೆ ಮಲಗಿರುವ ಪೋಟೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ಕೂಡಲೇ, ಇದು ಹೆಚ್ಚಿನ ಗಮನ ಸೆಳೆಯುವ ಮೂಲಕ ಸಖತ್ ವೈರಲ್ ಆಯಿತು. 69 ವರ್ಷದ ನಟ ಹಾಸಿಗೆ ಮೇಲೆ ಮಲಗಿದ್ದ ಪೋಟೊ ನೋಡಿ ಅವರ ಅಭಿಮಾನಿಗಳು ದಂಗಾಗಿದ್ದರು.

ಆದರೆ ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಮಿಸ್ಟರ್ ಬೀನ್ ಬಗ್ಗೆ ಸುಳ್ಳು ಸುದ್ದಿಗಳು ಹರಿದಾಡಿದ್ದವು. 2017ರಲ್ಲಿ ಮೊದಲ ಬಾರಿಗೆ ರೋವನ್ ಅಟ್ಕಿನ್ಸನ್ ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ ಅನ್ನೋ ಮಾಹಿತಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇದು ಅವರ ಅಭಿಮಾನಿಗಳಲ್ಲಿ ದೊಡ್ಡ ಆಘಾತವನ್ನುಂಟುಮಾಡಿತ್ತು. ಆದರೆ ಈ ಸುದ್ಧಿ ಸುಳ್ಳು ಎಂದಾಗ ನಿಟ್ಟುಸಿರು ಬಿಟ್ಟಿದ್ದರು. ಹಾಗಾಗಿ ಅಟ್ಕಿನ್ಸನ್ ಅವರು ಅನಾರೋಗ್ಯದಲ್ಲಿರುವಂತೆ ತೋರಿಸುತ್ತಿದ್ದ ವೈರಲ್ ಆದ ಫೋಟೊದ ಬಗ್ಗೆ ಮಾಹಿತಿ ಕಲೆಹಾಕಿದಾಗ ಆ ಫೋಟೊ ಸಂಪೂರ್ಣವಾಗಿ ನಕಲಿ ಎಂಬುದಾಗಿ ತಿಳಿದುಬಂದಿದೆ. ವರದಿ ಪ್ರಕಾರ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಪೋಟೊವನ್ನು ತಂತ್ರಜ್ಞಾನಗಳನ್ನು ಬಳಸಿ ಎಡಿಟ್ ಮಾಡಿರುವುದಾಗಿ ತಿಳಿದುಬಂದಿದೆ. ಅಲ್ಲದೇ ವೈರಲ್ ಪೋಟೋದಲ್ಲಿರುವುದು ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ಬ್ಯಾರಿ ಬಾಲ್ಡರ್ಸ್ಟೋನ್ ಎಂಬ ವೃದ್ಧನದು ಎಂಬುದು ತಿಳಿದುಬಂದಿದೆ.

ಎಡಿಟ್ ಮಾಡಿದ ಫೋಟೊವನ್ನು ಮೂಲ ಫೋಟೊದೊಂದಿಗೆ ಹೋಲಿಸಿದಾಗ, ‘ಮಿಸ್ಟರ್ ಬೀನ್ ಇನ್ 2024’ ಎಂದು ಹೇಳಿಕೊಳ್ಳುವ ಫೋಟೊಗಳು ನಕಲಿ ಎಂಬುದು ಸ್ಪಷ್ಟವಾಯಿತು. ತಂತ್ರಜ್ಞಾನಗಳು ಪ್ರಗತಿ ಹೊಂದುತ್ತಿರುವ ಈ ಕಾಲದಲ್ಲಿ ಈ ವಿಷಯಗಳು ಸಾಮಾನ್ಯವಾಗಿವೆ. ಹಾಗಾಗಿ ಇಂತಹ ವಿಚಾರಗಳು ಇನ್ನು ಮುಂದೆ ಜನರಲ್ಲಿ ಆಘಾತವನ್ನುಂಟು ಮಾಡುವುದಿಲ್ಲ. ಮುಲ್ತಾನ್ ಸುಲ್ತಾನ್ಸ್ ಮತ್ತು ಇಸ್ಲಾಮಾಬಾದ್ ಯುನೈಟೆಡ್ ನಡುವಿನ ಪಿಎಸ್ಎಲ್ 2024 ಫೈನಲ್ ಪಂದ್ಯದ ವೇಳೆ ಪಾಕ್ ಬೀನ್ ಕಾಣಿಸಿಕೊಂಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ವೃದ್ಧನ ಗುದದ್ವಾರದಲ್ಲಿತ್ತು 16 ಇಂಚಿನ ಸೋರೆಕಾಯಿ! ವೈದ್ಯರಿಗೇ ಗಾಬರಿ!

ಹಾಲಿವುಡ್ ನಟ ಇತ್ತೀಚೆಗೆ ಬ್ರಿಟಿಷ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಆರೋಗ್ಯಕರವಾಗಿ ಮತ್ತು ಸದೃಢವಾಗಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ರೋವನ್ ಅಟ್ಕಿನ್ಸನ್ ಅವರ ಆರೋಗ್ಯದ ಬಗ್ಗೆ ಇನ್ನೂ ಚಿಂತಿಸಬೇಕಾಗಿಲ್ಲ. ಬಿಬಿಸಿ ಕಾಮಿಡಿ ಶೋ ‘ನಾಟ್ ದಿ ನೈನ್ ಒ’ಕ್ಲಾಕ್’ ನ್ಯೂಸ್ ಮೂಲಕ ಖ್ಯಾತಿ ಗಳಿಸಿದ ಹಾಲಿವುಡ್ ನಟ ಜಾನಿ ಇಂಗ್ಲಿಷ್, ಮ್ಯಾನ್ ವರ್ಸಸ್ ಬೀ, ಜಾನಿ ಇಂಗ್ಲಿಷ್ ರೀಬಾರ್ನ್ ಮತ್ತು ದಿ ಥಿನ್ ಬ್ಲೂ ಲೈನ್ ಮುಂತಾದ ಚಿತ್ರಗಳಲ್ಲಿ ನಟಿಸಿ ಹೆಸರುವಾಸಿಯಾಗಿದ್ದಾರೆ.

Continue Reading

ದೇಶ

Mamata Banerjee: ಬಾಂಗ್ಲಾ ನಿರಾಶ್ರಿತರಿಗೆ ಬಂಗಾಳದಲ್ಲಿ ಆಶ್ರಯ; ಮಮತಾ ಹೇಳಿಕೆಗೆ ಭಾರೀ ವಿರೋಧ

Mamata Banerjee: ಜು.21ರಂದು ಹುತಾತ್ಮ ದಿನದಂದು ತೃಣಮೂಲ ಕಾಂಗ್ರೆಸ್‌ ನಡೆಸಿದ ಮೆಗಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಹಿಂಸಾಚಾರ ಪೀಡಿತ ಬಾಂಗ್ಲಾದೇಶದ ಜನರು ನಮ್ಮ ಬಾಗಿಲನ್ನು ತಟ್ಟಿದರೆ ಸರ್ಕಾರ ಅವರಿಗೆ ಆಶ್ರಯ ನೀಡುತ್ತದೆ ಎಂದಿದ್ದರು. ಅದೂ ಅಲ್ಲದೇ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಬಾಂಗ್ಲಾದೇಶದಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದರು.

VISTARANEWS.COM


on

mamatha banerjee
Koo

ಢಾಕಾ: ಬಾಂಗ್ಲಾದೇಶ(Bangladesh)ದ ನಿರಾಶ್ರಿತರಿಗೆ ಆಶ್ರಯ ನೀಡುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ(West Bengal) ಮಮತಾ ಬ್ಯಾನರ್ಜಿ(Mamata Banerjee) ಹೇಳಿಕೆ ಕೊಟ್ಟಿರುವ ವಿರುದ್ಧ ಬಾಂಗ್ಲಾ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ. ನಿರಾಶ್ರಿತರಿಗೆ ನೆಲೆ ಕಲ್ಪಿಸಿದರೆ ದೇಶದಲ್ಲಿ ಭಯೋತ್ಪಾದನೆ ಹೆಚ್ಚಾಗುತ್ತದೆ. ಇಂತಹ ಘೋಷಣೆಗಳ ಲಾಭವನ್ನು ಭಯೋತ್ಪಾದಕರು ಪಡೆಯುವುದು ನಿಶ್ಚಿತ ಎಂದು ಹೇಳಿದೆ.

ಜು.21ರಂದು ಹುತಾತ್ಮ ದಿನದಂದು ತೃಣಮೂಲ ಕಾಂಗ್ರೆಸ್‌ ನಡೆಸಿದ ಮೆಗಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಹಿಂಸಾಚಾರ ಪೀಡಿತ ಬಾಂಗ್ಲಾದೇಶದ ಜನರು ನಮ್ಮ ಬಾಗಿಲನ್ನು ತಟ್ಟಿದರೆ ಸರ್ಕಾರ ಅವರಿಗೆ ಆಶ್ರಯ ನೀಡುತ್ತದೆ ಎಂದಿದ್ದರು. ಅದೂ ಅಲ್ಲದೇ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಬಾಂಗ್ಲಾದೇಶದಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದರು.

ಅಧಿಕೃತ ಮೂಲಗಳ ಪ್ರಕಾರ ಬಾಂಗ್ಲಾದೇಶ ಸರ್ಕಾರ ಮಮತಾ ಬ್ಯಾನರ್ಜಿ ಹೇಳಿಕೆಯನ್ನು ಬಹಳ ಉಗ್ರವಾಗಿ ಖಂಡಿಸಿದೆ. ಬಾಂಗ್ಲಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದೆ. ನಿರ್ದಿಷ್ಟವಾಗಿ ನಿರಾಶ್ರಿತರಿಗೆ ಆಶ್ರಯ ನೀಡುವ ಭರವಸೆಯು ಅನೇಕ ಜನರನ್ನು ಪ್ರಚೋದಿಸಬಹುದು, ವಿಶೇಷವಾಗಿ ಭಯೋತ್ಪಾದಕರು ಮತ್ತು ದುಷ್ಕರ್ಮಿಗಳು ಅಂತಹ ಘೋಷಣೆಯ ಲಾಭವನ್ನು ಪಡೆದುಕೊಳ್ಳಬಹುದು ಎಂದಿದೆ.

‘ಬಾಂಗ್ಲಾದೇಶದ ಅಸಹಾಯಕ ಜನರಿಗೆ’ ಆಶ್ರಯ ನೀಡುವ ಕುರಿತು ಮಮತಾ ಬ್ಯಾನರ್ಜಿಯವರ ಹೇಳಿಕೆಯನ್ನು ಅದರ ಸರ್ಕಾರವು ‘ಪ್ರಚೋದನಕಾರಿ’ ಎಂದು ಭಾರತದ ಹೈಕಮಿಷನ್‌ಗೆ ಪ್ರತಿಭಟನೆ ನಡೆಸಿದೆ ಎಂದು ವರದಿಗಳು ತಿಳಿಸಿವೆ. ವಿದೇಶಾಂಗ ಸಚಿವ ಮತ್ತು ಆಡಳಿತಾರೂಢ ಅವಾಮಿ ಲೀಗ್ ಪಕ್ಷದ ಹಿರಿಯ ಸದಸ್ಯ ಡಾ ಮೊಹಮ್ಮದ್ ಹಸನ್ ಮಹಮೂದ್ ಅವರು ಬಾಂಗ್ಲಾದೇಶದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಬ್ಯಾನರ್ಜಿ ಅವರ ಮಾತುಗಳು ಜನರನ್ನು ‘ಗೊಂದಲ’ ಮತ್ತು ‘ತಪ್ಪು’ ಮೂಡಿಸಬಹುದು ಎಂದು ಹೇಳಿದ್ದಾರೆ.

ಸರ್ಕಾರಿ ಉದ್ಯೋಗಗಳಲ್ಲಿನ ಮೀಸಲಾತಿ ವ್ಯವಸ್ಥೆಯಲ್ಲಿ ಸುಧಾರಣೆಗೆ ಒತ್ತಾಯಿಸಿ ಬಾಂಗ್ಲಾದೇಶ ದಲ್ಲಿ ಹಲವು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಹಿಂಸಾಸ್ವರೂಪ ಪಡೆದಿರುವ ಮಧ್ಯೆಯೇ ಅಲ್ಲಿನ ಸರ್ವೋಚ್ಚ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಕೋಲಾಹಲಕ್ಕೆ ಕಾರಣವಾದ ಬಾಂಗ್ಲಾ ವಿಮೋಚನೆ ಹೋರಾಟದಲ್ಲಿ ಭಾಗಿಯಾಗಿದ್ದವರ ಕುಟುಂಬದವರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ. 30ರಷ್ಟು ಮೀಸಲಾತಿ ನೀಡುವ ನಿಯಮವನ್ನು ಕೋರ್ಟ್‌ ಹಿಂತೆಗೆದುಕೊಂಡಿದೆ. ಆದರೆ ಸಂಪೂರ್ಣ ರದ್ದುಗೊಳಿಸಲಿಲ್ಲ. ಶೇ. 30ರಷ್ಟಿದ್ದ ಮೀಸಲಾತಿಯನ್ನು ಶೇ. 5ಕ್ಕೆ ಇಳಿಸಲಾಗಿದೆ.

ಇದನ್ನೂ ಓದಿ: Bangladesh Protests: ಬಾಂಗ್ಲಾದಲ್ಲಿ ನಿಲ್ಲದ ಹಿಂಸಾಚಾರ; 1000 ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್‌; ಸಾವಿನ ಸಂಖ್ಯೆ 115ಕ್ಕೆ ಏರಿಕೆ

Continue Reading
Advertisement
NEET UG 2024
ದೇಶ4 hours ago

NEET UG 2024: ನೀಟ್‌ ಪ್ರಶ್ನೆಪತ್ರಿಕೆಯನ್ನು ಎಗರಿಸಿದ್ದು ಯಾವ ಕೇಂದ್ರದಿಂದ? ಸಿಬಿಐ ಸ್ಫೋಟಕ ಮಾಹಿತಿ ಬಯಲು

V Sumangala
ಕರ್ನಾಟಕ4 hours ago

V Sumangala: ಶಿಕ್ಷಣ ಇಲಾಖೆಯಲ್ಲಿ 1.62 ಕೋಟಿ ರೂ. ಅಕ್ರಮ; DSERT ನಿರ್ದೇಶಕಿ ಸುಮಂಗಲಾ ಅಮಾನತು!

Sri lanka Team
ಕ್ರೀಡೆ5 hours ago

Sri lanka Team: ಟಿ20 ಸರಣಿ ಆರಂಭಕ್ಕೂ ಮುನ್ನವೇ ಲಂಕಾಗೆ ಗಾಯದ ಬರೆ; ಇಬ್ಬರು ವೇಗಿಗಳು ಔಟ್​

HD Deve Gowda
ದೇಶ6 hours ago

HD Deve Gowda: ವ್ಹೀಲ್‌ಚೇರ್‌ನಲ್ಲೇ ತೆರಳಿ ಮೋದಿಯನ್ನು ಭೇಟಿಯಾದ ದೇವೇಗೌಡ; ಇಲ್ಲಿವೆ ಫೋಟೊಗಳು

Team India
ಕ್ರೀಡೆ6 hours ago

Team India: ಲಂಕಾ ಸರಣಿಗೂ ಮುನ್ನವೇ ಟೀಮ್​ ಇಂಡಿಯಾ ಜೆರ್ಸಿಯಲ್ಲಿ ಮಹತ್ವದ ಬದಲಾವಣೆ

Atal Setu
ಪ್ರಮುಖ ಸುದ್ದಿ6 hours ago

Atal Setu: ಅಟಲ್‌ ಸೇತು ಮೇಲೆ ಕಾರಿನಲ್ಲಿ ಬಂದು, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ; ಏನಾಗಿತ್ತು?

Health Minister Dinesh Gundurao instructs to send a team of deputy directors to dengue hot spots
ಕರ್ನಾಟಕ7 hours ago

Dengue Fever: ಬೆಂಗಳೂರಿನಲ್ಲೇ ಶೇ.50ರಷ್ಟು ಡೆಂಗ್ಯೂ ಪ್ರಕರಣಗಳು; ಹಾಟ್‌ಸ್ಪಾಟ್‌ಗಳಿಗೆ ಅಧಿಕಾರಿಗಳ ತಂಡ

Media Connect Founder and ceo Dr Divya Rangenahalli honored at Chess Festival in bengaluru
ಬೆಂಗಳೂರು7 hours ago

Media Connect: ಚೆಸ್‌ ಹಬ್ಬದಲ್ಲಿ ಮೀಡಿಯಾ ಕನೆಕ್ಟ್‌ ಸಂಸ್ಥಾಪಕಿ ಡಾ. ದಿವ್ಯಾ ರಂಗೇನಹಳ್ಳಿಗೆ ಸನ್ಮಾನ

1200 farmers suicides in last 15 months in Karnataka says Minister Pralhad Joshi Minister Pralhad Joshi alleges
ಕರ್ನಾಟಕ7 hours ago

Pralhad Joshi: ಕರ್ನಾಟಕದಲ್ಲಿ ಕಳೆದ 15 ತಿಂಗಳಲ್ಲಿ 1200 ರೈತರ ಆತ್ಮಹತ್ಯೆ!

BJP Protest
ಕರ್ನಾಟಕ7 hours ago

BJP Protest: ದಾಖಲೆ ನೀಡದೆ ಹೇಡಿಯಂತೆ ಪಲಾಯನ; ಸಿಎಂ ರಾಜೀನಾಮೆ ಪಡೆಯಲು ರಾಜ್ಯಪಾಲರಿಗೆ ಆರ್‌.ಅಶೋಕ್‌ ಮನವಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ10 hours ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್14 hours ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ15 hours ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ16 hours ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ2 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ2 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

Udupi News
ಉಡುಪಿ2 days ago

Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ

murder case
ರಾಮನಗರ3 days ago

Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ

karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ6 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

ಟ್ರೆಂಡಿಂಗ್‌