Health Tips: ಉಪಾಹಾರದಲ್ಲಿ ಇವುಗಳು ಬೇಡವೇ ಬೇಡ ಎನ್ನುತ್ತಾರೆ ಮಾಧುರಿ ದೀಕ್ಷಿತ್ ಪತಿ ಡಾ. ಶ್ರೀರಾಮ್ ನೆನೆ - Vistara News

ಆರೋಗ್ಯ

Health Tips: ಉಪಾಹಾರದಲ್ಲಿ ಇವುಗಳು ಬೇಡವೇ ಬೇಡ ಎನ್ನುತ್ತಾರೆ ಮಾಧುರಿ ದೀಕ್ಷಿತ್ ಪತಿ ಡಾ. ಶ್ರೀರಾಮ್ ನೆನೆ

ಕಾರ್ಡಿಯೊಥೊರಾಸಿಕ್ ಸರ್ಜನ್ ಆಗಿರುವ ಡಾ. ನೆನೆ ಈಗ ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಆರೋಗ್ಯಕರ ಜೀವನಕ್ಕಾಗಿ (Health Tips) ನಾವು ತಪ್ಪಿಸಬೇಕಾದ ಉಪಹಾರದ ಮಾಹಿತಿ ನೀಡಿದ್ದಾರೆ. ಇದರಲ್ಲಿ ಬಿಳಿ ಬ್ರೆಡ್, ಸಕ್ಕರೆಯ ಧಾನ್ಯಗಳು, ಹಣ್ಣಿನ ರಸ, ಸಂಸ್ಕರಿಸಿದ ಮಾಂಸ, ಸಿಹಿಯಾದ ಮೊಸರು ಈ ಆಯ್ಕೆಗಳನ್ನು ತಪ್ಪಿಸಬೇಕು ಎಂದು ಹೇಳಿದ್ದು, ಇದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

VISTARANEWS.COM


on

Health Tips
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ (Bollywood actress Madhuri Dixit) ಅವರ ಪತಿ ಡಾ. ಶ್ರೀರಾಮ್ ನೆನೆ (Dr Shriram Nene) ಅವರು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ನಿಯಮಿತವಾಗಿ ಆರೋಗ್ಯ ಸಂಬಂಧಿತ (health tips) ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಅವರು ಹೃದಯಾಘಾತದ (heart attack case) ಅಪಾಯವು ಏಕೆ ಹೆಚ್ಚು ಎಂಬುದನ್ನು ಹಂಚಿಕೊಂಡಿದ್ದು, ಇದಕ್ಕಾಗಿ ಆರೋಗ್ಯಕರ ಉಪಹಾರ ಹೇಗಿರಬೇಕು ಎಂದು ಹೇಳಿದ್ದಾರೆ.

ಕಾರ್ಡಿಯೊಥೊರಾಸಿಕ್ ಸರ್ಜನ್ ಆಗಿರುವ ಡಾ. ನೆನೆ ಈಗ ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಆರೋಗ್ಯಕರ ಜೀವನಕ್ಕಾಗಿ ನಾವು ತಪ್ಪಿಸಬೇಕಾದ ಉಪಹಾರದ ಮಾಹಿತಿ ನೀಡಿದ್ದಾರೆ. ಇದರಲ್ಲಿ ಬಿಳಿ ಬ್ರೆಡ್, ಸಕ್ಕರೆಯ ಧಾನ್ಯಗಳು, ಹಣ್ಣಿನ ರಸ, ಸಂಸ್ಕರಿಸಿದ ಮಾಂಸ, ಸಿಹಿಯಾದ ಮೊಸರು ಈ ಆಯ್ಕೆಗಳನ್ನು ತಪ್ಪಿಸಬೇಕು ಎಂದು ಹೇಳಿದ್ದಾರೆ.

ಬಿಳಿ ಬ್ರೆಡ್

ಬಿಳಿ ಬ್ರೆಡ್ ಅನ್ನು ಕಡಿಮೆ ಗುಣಮಟ್ಟದ ಕಾರ್ಬೋಹೈಡ್ರೇಟ್‌ಗಳೊಂದಿಗೆ ಸಂಸ್ಕರಿಸಲಾಗುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಕಾರಣವಾಗಬಹುದು. ಬಿಳಿ ಬ್ರೆಡ್ ಅನ್ನು ಅತಿಯಾಗಿ ಸೇವಿಸುವುದರಿಂದ ಬೊಜ್ಜು, ಹೃದ್ರೋಗ ಮತ್ತು ಮಧುಮೇಹ ಉಂಟಾಗುತ್ತದೆ.

ಸಕ್ಕರೆ ಧಾನ್ಯಗಳು

ಸಕ್ಕರೆ ಸಿರಿಧಾನ್ಯಗಳು ಸರಳವಾದ ಕಾರ್ಬೋಹೈಡ್ರೇಟ್ ಆಹಾರ ಪದಾರ್ಥಗಳಾಗಿವೆ. ಇದು ಹೆಚ್ಚಿನ ಹಸಿವು ಮತ್ತು ಶುಗರ್ ಮಟ್ಟ ಹೆಚ್ಚಿಸಲು ಕಾರಣವಾಗಬಹುದು. ಇದು ಟೈಪ್ 2 ಮಧುಮೇಹ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.

ಹಣ್ಣಿನ ರಸ

ಹಣ್ಣುಗಳನ್ನು ಜ್ಯೂಸ್ ಮಾಡುವುದರಿಂದ ಅವುಗಳಲ್ಲಿರುವ ಅಗತ್ಯ ಪೋಷಕಾಂಶಗಳ ನಷ್ಟಕ್ಕೆ ಕಾರಣವಾಗುತ್ತದೆ. ಜ್ಯೂಸ್ ಮಾಡುವುದು ಹೆಚ್ಚಿನ ಸಕ್ಕರೆಗಳನ್ನು ಬಿಡುಗಡೆ ಮಾಡುತ್ತದೆ. ಹಣ್ಣಿನ ರಸವು ಬೊಜ್ಜು ಮತ್ತು ತೂಕ ಹೆಚ್ಚಾಗಲು ಕಾರಣವಾಗಬಹುದು.


ಸಂಸ್ಕರಿಸಿದ ಮಾಂಸ

ಬೆಳಗಿನ ಉಪಾಹಾರಕ್ಕಾಗಿ ಸಂಸ್ಕರಿಸಿದ ಮಾಂಸವನ್ನು ತಿನ್ನುವುದು ಹೊಟ್ಟೆ ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಕೂಡ ಸಂಸ್ಕರಿಸಿದ ಮಾಂಸವನ್ನು ಸೇವಿಸುವ ಕೆಲವು ಅಡ್ಡಪರಿಣಾಮಗಳಾಗಿವೆ.

ಇದನ್ನೂ ಓದಿ: Actor Shahrukh Khan: ಅಮೆರಿಕದಲ್ಲಿ ಶಾರುಖ್ ಖಾನ್‌ಗೆ ಶಸ್ತ್ರಚಿಕಿತ್ಸೆ; ಬಾಲಿವುಡ್‌ ಬಾದ್‌ಶಾಗೆ ಕಾಡುತ್ತಿರುವ ಸಮಸ್ಯೆ ಏನು?

ಸಿಹಿಯಾದ ಮೊಸರು

ಮೊಸರಿನಲ್ಲಿರುವ ನೈಸರ್ಗಿಕ ಸಕ್ಕರೆ ಆರೋಗ್ಯಕರವಾಗಿದ್ದರೂ ಸುವಾಸನೆಯ ಮೊಸರು ಅಧಿಕ ಸಕ್ಕರೆಯನ್ನು ಹೊಂದಿರುತ್ತದೆ. ಇದು ತೂಕ ಹೆಚ್ಚಾಗುವುದು, ಟೈಪ್ 2 ಮಧುಮೇಹ ಮತ್ತು ಕೆಲವು ರೀತಿಯ ಕ್ಯಾನ್ಸರ್ ಬೆಳವಣಿಗೆಗೆ ಕಾರಣವಾಗುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Ear Infections During Monsoon: ಮಳೆಗಾಲದಲ್ಲಿ ಕಾಡುವ ಕಿವಿನೋವಿನಿಂದ ಮುಕ್ತರಾಗಲು ಸರಳ ಉಪಾಯ ಇಲ್ಲಿದೆ

Ear Infections during Monsoon: ವಾತಾವರಣದಲ್ಲಿ ತೇವಾಂಶ ಹೆಚ್ಚಿದಾಗ ಕಿವಿಯ ಸೋರುವುದು, ಕಿವಿನೋವು ಕಾಟ ಕೊಡುತ್ತಲೇ ಇರುತ್ತವೆ. ಕಿವಿ ಕಟ್ಟಿದಂತಾಗುವುದು, ಕಿರಿಕಿರಿ, ಸರಿಯಾಗಿ ಕೇಳದಂತಾಗುವುದು, ಬಿಟ್ಟು ಬಿಟ್ಟು ಕಾಡುವ ನೋವು ಇತ್ಯಾದಿಗಳೆಲ್ಲ ಸೋಂಕಿನ ಲಕ್ಷಣಗಳು. ಮಳೆಗಾಲದಲ್ಲಿ ಕಾಡುವ ಕಿವಿಯ ಸೋಂಕುಗಳನ್ನು ನಿಯಂತ್ರಿಸುವುದು ಹೇಗೆ? ಈ ಬಗ್ಗೆ ಇಲ್ಲಿದೆ ಉಪಯುಕ್ತ ಮಾಹಿತಿ.

VISTARANEWS.COM


on

Ear Infections during Monsoon
Koo

ಮಳೆಗಾಲದ ಆರೋಗ್ಯ ಸಮಸ್ಯೆಗಳು (Ear Infections during Monsoon) ನಾನಾ ರೀತಿಯವು. ಹೆಚ್ಚಿನ ತೇವಾಂಶ ಇರುವಲ್ಲೆಲ್ಲ ವೈರಸ್‌, ಫಂಗಸ್‌ ಮತ್ತು ಬ್ಯಾಕ್ಟೀರಿಯಗಳ ಬೆಳವಣಿಗೆ ಸಮೃದ್ಧವಾಗಿ ಆಗುತ್ತದೆ. ಉದಾ: ಕಿವಿಯನ್ನೇ ಗಮನಿಸಿದರೆ ಮುಖದಂಚಿಗಿನ ಈ ಪುಟ್ಟ ಬಾವಿಗಳಲ್ಲಿ ಎಷ್ಟೊಂದು ತೇವಾಂಶ ಸೇರಿಕೊಳ್ಳುತ್ತದೆಂದರೆ ಜೋರು ಮಳೆಯಲ್ಲಿ ಕಿವಿನೋವು ಎಷ್ಟೋ ಮಂದಿಗೆ ಬಿಡುವುದೇ ಇಲ್ಲ. ಆಗಾಗ ಕಿವಿಯ ಸೋರುವುದು, ಸೋಂಕುಗಳು ಕಾಟ ಕೊಡುತ್ತಲೇ ಇರುತ್ತವೆ. ಕಿವಿ ಕಟ್ಟಿದಂತಾಗುವುದು, ಕಿರಿಕಿರಿ, ಸರಿಯಾಗಿ ಕೇಳದಂತಾಗುವುದು, ಸೋರುವುದು, ಬಿಟ್ಟು ಬಿಟ್ಟು ಕಾಡುವ ನೋವು ಇತ್ಯಾದಿಗಳೆಲ್ಲ ಸೋಂಕಿನ ಲಕ್ಷಣಗಳು. ಮಳೆಗಾಲದಲ್ಲಿ ಕಾಡುವ ಕಿವಿಯ ಸೋಂಕುಗಳನ್ನು ನಿಯಂತ್ರಿಸುವುದು ಹೇಗೆ?

ear clean

ಸ್ವಚ್ಛತೆ

ಕಿವಿಯ ಹೊರಭಾಗದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಲ್ಳುವುದು ಅಗತ್ಯ. ಅದಕ್ಕಾಗಿ ಸ್ವಚ್ಛವಾದ ಹತ್ತಿಯ ವಸ್ತ್ರದಿಂದ ಕಿವಿಯ ಹೊರಭಾಗವನ್ನು ಒರೆಸಿ ಶುಚಿ ಮಾಡಿ. ಸ್ನಾನ ಆದ ನಂತರ ಅಥವಾ ಹೊರಗಿನಿಂದ ಬಂದಾಗ ಮಳೆಯಲ್ಲಿ ನೆನೆದಿದ್ದರೆ ಕಿವಿಯ ಹೊರಭಾಗವನ್ನು ಒರೆಸಿ ಒಣಗಿಸಿಕೊಳ್ಳುವುದು ಅಗತ್ಯ. ಇದಕ್ಕಾಗಿ ಕಿವಿಯೊಳಗೆ ಹತ್ತಿಯನ್ನೋ ಅಥವಾ ಇನ್ನೇನನ್ನಾದರೂ ತುರುಕುವ ಸಾಹಸ ಮಾಡಬೇಡಿ.

ಇಯರ್‌ ಪ್ಲಗ್‌

ಕಿವಿಯೊಳಗೆ ಹಾಕುವಂಥ ಯಾವುದೇ ಉಪಕರಣಗಳಾದರೂ ಕಿವಿಯ ಪೊರೆಯ ಅತ್ಯಂತ ಸಮೀಪದಲ್ಲೇ ಇರುತ್ತವೆ. ಹಾಗಾಗಿ ಅವುಗಳ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಿ. ಅವುಗಳಲ್ಲೂ ಫಂಗಸ್‌ ಬೆಳೆಯುವ ಅಪಾಯವಿದೆ. ಹಾಗಾಗಿ ಇಯರ್‌ಪ್ಲಗ್‌, ಹೆಡ್‌ಫೋನ್‌ ಗಳನ್ನು ಆಗಾಗ ಶುಚಿ ಮಾಡಿ ಇರಿಸಿಕೊಳ್ಳಿ. ಇದರಿಂದ ರೋಗಾಣುಗಳು ಕಿವಿಯನ್ನು ಪ್ರವೇಶಿಸುವ ಸಾಧ್ಯತೆ ಕಡಿಮೆಯಾಗುತ್ತದೆ.

ear bud
ear bud

ಕಡ್ಡಿ ಹಾಕಬೇಡಿ

ಕಡ್ಡಿಗಳು, ಹತ್ತಿಯ ಸ್ವಾಬ್‌ಗಳು ಮುಂತಾದ ಯಾವುದನ್ನೂ ಕಿವಿಯೊಳಗೆ ಸ್ವಚ್ಛತೆಯ ನೆವದಿಂದ ಹಾಕಬೇಡಿ. ಕಿವಿಯನ್ನು ಸ್ವಚ್ಛ ಮಾಡುವುದಕ್ಕಿಂತ ಹೆಚ್ಚು ಹಾನಿಯನ್ನೇ ಮಾಡುತ್ತವೆ ಈ ವಸ್ತುಗಳು. ಹೀಗೆ ಹಾಕುವ ವಸ್ತುಗಳಲ್ಲೇ ರೋಗಾಣುಗಳು ಇರಬಹುದು. ಅವು ಶುಚಿ ಮಾಡುವ ಬದಲು ಕಿವಿಯಲ್ಲಿರುವ ಕುಗ್ಗೆಯನ್ನು ಇನ್ನಷ್ಟು ಒಳಗೆ ತಳ್ಳಿ ಹಾನಿ ಮಾಡಬಹುದು. ಒಂದೊಮ್ಮೆ ಕಿವಿಯನ್ನು ಶುಚಿ ಮಾಡುವುದು ಅಗತ್ಯ ಎಂದಾದರೆ, ತಜ್ಞರ ನೆರವು ಪಡೆಯಿರಿ.

ಈಜಬೇಡಿ

ಮಳೆಗಾಲದ ದಿನಗಳಲ್ಲಿ ಈಜುಕೊಳಗಳಿಗೆ ಇಳಿಯುವುದು ಕ್ಷೇಮವಲ್ಲ. ಆ ನೀರಿನಲ್ಲಿ ಹಲವು ರೀತಿಯ ರೋಗಾಣುಗಳು ಇರಬಹುದು. ಕೇವಲ ಈಜುವುದೇ ಅಲ್ಲ, ಯಾವುದೇ ರೀತಿಯ ಜಲಸಾಹಸಗಳು ಈ ದಿನಗಳಲ್ಲಿ ಸರಿಯಲ್ಲ. ಇಷ್ಟಾಗಿಯೂ ನೀರಿಗಿಳಿಯುವುದು ಅನಿವಾರ್ಯ ಎಂದಾದರೆ ಜಲ ನಿರೋಧಕ (ವಾಟರ್‌ ರೆಸಿಸ್ಟೆಂಟ್‌) ಇಯರ್‌ ಪ್ಲಗ್‌ಗಳನ್ನು ಬಳಸುವುದು ಒಳ್ಳೆಯದು. ಇವು ಕಿವಿ ಮತ್ತು ನೀರಿನ ನಡುವೆ ಗೋಡೆಯನ್ನು ಸೃಷ್ಟಿ ಮಾಡಿ, ಕಿವಿಗೆ ನೀರು ಹೋಗದಂತೆ ತಡೆಯುತ್ತವೆ.

ವಿಶ್ರಾಂತಿ ನೀಡಿ

ನಮ್ಮ ಕಿವಿಗೂ ವಿಶ್ರಾಂತಿ ಬೇಕು. ಸದಾ ಕಾಲ ಕೇಳುತ್ತಲೇ ಇರುವ ಅವುಗಳಿಗೆ ದಿನವಿಡೀ ಇಯರ್‌ ಫೋನ್‌ ತುಂಬಿಸಿಟ್ಟರೆ ಕಷ್ಟ. ಇದರಿಂದ ಕಿವಿಯಲ್ಲಿನ ತೇವಾಂಶವೂ ಹೆಚ್ಚುತ್ತದೆ. ಹಾಗಾಗಿ ಕೇಳುವ ಕಾಯಕದಿಂದ ದಿನದ ಸ್ವಲ್ಪ ಹೊತ್ತು ಅವುಗಳಿಗೆ ವಿಶ್ರಾಂತಿ ನೀಡಿ. ಸುತ್ತಲಿನ ಜಗತ್ತಿನ ಶಬ್ದಗಳನ್ನು ನಿಲ್ಲಿಸಲಂತೂ ಸಾಧ್ಯವಿಲ್ಲ. ಹಾಗಾಗಿ ಕಿವಿಗೆ ಹಾಕುವ ಉಪಕರಣಗಳನ್ನು ಕಡಿಮೆ ಮಾಡಿ.

ಇದನ್ನೂ ಓದಿ:Thyroid Health Formulas: ನಿಮ್ಮ ಥೈರಾಯ್ಡ್‌ ನಿಮ್ಮ ಕೈಯಲ್ಲಿ! ಥೈರಾಯ್ಡ್‌ ಆರೋಗ್ಯಕ್ಕೆ ಇಲ್ಲಿವೆ ಆರು ಸೂತ್ರಗಳು

ತಜ್ಞರೇ ಬೇಕು

ಇಷ್ಟಾಗಿ ಕಿವಿಯಲ್ಲಿ ನೋವು, ಕಿರಿಕಿರಿ ಅಥವಾ ಯಾವುದೇ ರೀತಿಯ ತೊಂದರೆಯಿದ್ದರೂ ಸ್ವಯಂವೈದ್ಯ ಮಾಡಬೇಡಿ. ಔಷಧಿ ಅಂಗಡಿಯಿಂದ ಯಾವುದಾದರೂ ಡ್ರಾಪ್ಸ್‌ ತಂದು ಹಾಕುವುದು, ಪ್ರತಿಜೈವಿಕ ಡ್ರಾಪ್‌ ಪ್ರಯೋಗಿಸುವುದು, ಯಾವುದೋ ಸೊಪ್ಪಿನ ರಸ ಅಥವಾ ತೈಲ ಕಿವಿಗೆ ಹನಿಸುವುದು ಮುಂತಾದ ಯಾವುದೇ ನಾಟಿ ಪದ್ಧತಿಗಳು ಕಿವಿಯನ್ನು ತೀವ್ರ ತೊಂದರೆಗೆ ದೂಡಬಹುದು. ಬದಲಿಗೆ, ನೇರವಾಗಿ ಇಎನ್‌ಟಿ ವೈದ್ಯರ ಬಳಿ ಹೋಗಿ.

Continue Reading

ಆರೋಗ್ಯ

Thyroid Health Formulas: ನಿಮ್ಮ ಥೈರಾಯ್ಡ್‌ ನಿಮ್ಮ ಕೈಯಲ್ಲಿ! ಥೈರಾಯ್ಡ್‌ ಆರೋಗ್ಯಕ್ಕೆ ಇಲ್ಲಿವೆ ಆರು ಸೂತ್ರಗಳು

Thyroid Health Formulas: ಚಿಟ್ಟೆಯ ಆಕಾರದಲ್ಲಿರುವ ಥೈರಾಯ್ಡ್‌ ಗ್ರಂಥಿ ನಮ್ಮ ದೇಹದಲ್ಲಿ ಹಲವು ಕೆಲಸಗಳನ್ನು ನಿರ್ವಹಿಸುತ್ತದೆ. ಮುಖ್ಯವಾಗಿ ನಮ್ಮ ಒಳ್ಳೆಯ ನಿದ್ದೆಗೆ, ತೂಕ ಸಮತೋಲನದಲ್ಲಿ ಇಟ್ಟುಕೊಳ್ಳಲು, ಖಿನ್ನತೆ ಹಾಗೂ ಉದ್ವೇಗದಂತಹ ಮಾನಸಿಕ ಸಮಸ್ಯೆಗಳು ಬರದಂತೆ ಇರಲು ಥೈರಾಯ್ಡ್‌ ಪಾತ್ರವೂ ದೊಡ್ಡದು. ನಮ್ಮ ರಕ್ತದ ಪರೀಕ್ಷೆ ನಡೆಸಿ ಥೈರಾಯ್ಡ್‌ ಸಮಸ್ಯೆಯಿದೆಯೇ ಎಂದು ನೋಡಿದಾಗ ಅದಕ್ಕೆ ಸಂಬಂಧಿಸಿದ ಔಷಧವನ್ನು ನೀಡಲಾಗುತ್ತದೆ. ಆದರೆ ನಮ್ಮ ಆಹಾರ ಕ್ರಮ, ಸೇವಿಸಬೇಕಾದ ಆಹಾರದ ಬಗ್ಗೆ ಅಷ್ಟಾಗಿ ಯಾರೂ ಗಮನ ಹರಿಸುವುದಿಲ್ಲ. ಥೈರಾಯ್ಡ್‌ಗ್ರಂಥಿಯ ಆರೋಗ್ಯಕ್ಕೆ ನಾವು ತೆಗೆದುಕೊಳ್ಳುವ ಆಹಾರವೂ ಅಷ್ಟೇ ಮುಖ್ಯ. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Thyroid problem
Koo

ಥೈರಾಯ್ಡ್‌ ನಮ್ಮ ದೇಹದ ಅತ್ಯಂತ ಮುಖ್ಯವಾದ ಹಾಗೂ ಅಷ್ಟೇ ನಿರ್ಲಕ್ಷ್ಯಕ್ಕೆ ಒಳಗಾದ ಗ್ರಂಥಿಗಳಲ್ಲಿ ಒಂದು. ಚಿಟ್ಟೆಯ ಆಕಾರದಲ್ಲಿರುವ ಥೈರಾಯ್ಡ್‌ ಗ್ರಂಥಿ ನಮ್ಮ ದೇಹದಲ್ಲಿ ಹಲವು ಕೆಲಸಗಳನ್ನು ನಿರ್ವಹಿಸುತ್ತದೆ. ಮುಖ್ಯವಾಗಿ ನಮ್ಮ ಒಳ್ಳೆಯ ನಿದ್ದೆಗೆ, ತೂಕ ಸಮತೋಲನದಲ್ಲಿ ಇಟ್ಟುಕೊಳ್ಳಲು, ಖಿನ್ನತೆ ಹಾಗೂ ಉದ್ವೇಗದಂತಹ ಮಾನಸಿಕ ಸಮಸ್ಯೆಗಳು ಬರದಂತೆ ಇರಲು ಥೈರಾಯ್ಡ್‌ ಪಾತ್ರವೂ ದೊಡ್ಡದು. ನಮ್ಮ ರಕ್ತದ ಪರೀಕ್ಷೆ ನಡೆಸಿ ಥೈರಾಯ್ಡ್‌ ಸಮಸ್ಯೆಯಿದೆಯೇ ಎಂದು ನೋಡಲಾಗಿ ಅದಕ್ಕೆ ಸಂಬಂಧಿಸಿದ ಔಷಧವನ್ನು ನೀಡಲಾಗುತ್ತದೆ. ಆದರೆ, ನಮ್ಮ ಆಹಾರ ಕ್ರಮ, ಸೇವಿಸಬೇಕಾದ ಆಹಾರದ ಬಗ್ಗೆ ಅಷ್ಟಾಗಿ ಯಾರೂ ಗಮನ ಹರಿಸುವುದಿಲ್ಲ. ಥೈರಾಯ್ಡ್‌ಗ್ರಂಥಿಯ ಆರೋಗ್ಯಕ್ಕೆ ನಾವು ತೆಗೆದುಕೊಳ್ಳುವ ಆಹಾರವೂ ಅಷ್ಟೇ ಮುಖ್ಯ. ಥೈರಾಯ್ಡ್‌ ಗ್ರಂಥಿಯ ಆರೋಗ್ಯಕ್ಕೆ ಪೂರಕವಾದ ಪೋಷಕಾಂಶಗಳು ಸುಲಭವಾಗಿ ನಾವು ಸೇವಿಸುವ ಆಹಾರಗಳಲ್ಲಿ ದೊರೆಯುತ್ತದೆ. ಆದರೆ, ಅವುಗಳನ್ನು ಸೇವಿಸಬೇಕಾದ್ದು ನಮ್ಮ ಕರ್ತವ್ಯ ಅಷ್ಟೇ. ಬನ್ನಿ, ನಮ್ಮ ಥೈರಾಯ್ಡ್‌ ಆರೋಗ್ಯವಾಗಿರಬೇಕೆಂದರೆ ನಾವು (Thyroid Health Formulas) ಗಮನಿಸಬೇಕಾದ ಅಂಶಗಳೇನು ನೋಡೋಣ.

ಅಯೋಡಿನ್‌ ನಿರ್ಲಕ್ಷಿಸಬೇಡಿ

ಥೈರಾಯ್ಡ್‌ ಹಾರ್ಮೋನ್‌ ಥೈರಾಕ್ಸಿನ್‌ ಉತ್ಪಾದನೆಗೆ ಅಯೋಡಿನ್‌ ಬೇಕೇ ಬೇಕು. ಆದರೆ, ಈ ಅಯೋಡಿನ್‌ ಕಡಿಮೆಯೂ ಆಗಬಾರದು. ಹೆಚ್ಚೂ ಆಗಬಾರದು. ಹೆಚ್ಚಾದರೆ, ಗಾಯಟೆರ್‌ ಎಂಬ ಸಮಸ್ಯೆ ಬಂದೀತು. ಅಯೋಡಿನ್‌ ಕಡಿಮೆಯಾಗದಂತೆ ಅಯೋಡಿನ್‌ ಹೆಚಿರುವ ಆಹಾರಗಳಾದ ಸೀವೀಡ್‌ಗಳು, ಅಯೋಡೈಸ್ಡ್‌ ಉಪ್ಪು, ಮೀನು ಮತ್ತಿತರ ಸೀಫುಡ್‌ ಸೇವಿಸಬಹುದು. ಸೀವೀಡ್‌ಗಳ ಸೇವನೆಯಿಂದ ಹಲವು ಬಗೆಯ ಖನಿಜಾಂಶಗಳನ್ನು ನಾವು ಪಡೆಯಬಹುದು. ಕೆಲ್ಪ್‌, ನೊರಿ, ಕೊಂಬು ಮತ್ತಿತರ ಸೀವೀಡ್‌ಗಳು ಥೈರಾಯ್ಡ್‌ಗೆ ಬಹಳ ಒಳ್ಳೆಯದು. ಇವುಗಳು ರೈಬೋಫ್ಲೇವಿನ್‌ ಎಂಬ ಬಿ ವಿಟಮಿನ್‌ ಬಗೆಯನ್ನೂ ಹೊಂದಿದ್ದು, ಇವು ಖಿನ್ನತೆ ಹಾಗೂ ಉದ್ವೇಗದ ಸಮಸ್ಯೆಗಳಿಗೂ ಬಹಳ ಸಹಕಾರಿ.

ಪ್ರೊಟೀನ್‌ ಹೆಚ್ಚು ಸೇವಿಸಿ

ಥೈರಾಯ್ಡ್‌ ಹಾರ್ಮೋನನ್ನು ದೇಹದ ಎಲ್ಲ ಅಂಗಾಂಶಗಳಿಗೆ ಸಾಗಿಸುವ ಕೆಲಸ ಮಾಡುವುದು ಪ್ರೊಟೀನ್‌. ಹೀಗಾಗಿ ಥೈರಾಯ್ಡ್‌ನ ಆರೋಗ್ಯದಲ್ಲಿ ಪ್ರೊಟೀನ್‌ನ ಪಾತ್ರ ಮಹತ್ವದ್ದು. ಮೊಟ್ಟೆ, ಬೀಜಗಳು, ಮೀನು, ಪನೀರ್‌, ಟೋಫು, ಬೇಳೆಕಾಳುಗಳು ಇತ್ಯಾದಿಗಳನ್ನು ಸೇವಿಸುವ ಮೂಲಕ ಪ್ರೊಟೀನ್‌ ದೇಹಕ್ಕೆ ಸದಾ ಲಭ್ಯವಾಗುವಂತೆ ನೋಡಿಕೊಳ್ಳಿ.

ಇವುಗಳಿಂದ ದೂರವಿರಿ

ನಿಮಗೆ ಥೈರಾಯ್ಡ್‌ ಸಮಸ್ಯೆ ಇದ್ದರೆ ಗಾಯೆಟ್ರೋಜೆನ್‌ಗಳಿಂದ ದೂರವಿರಿ. ಅಂದರೆ ಗಾಯೆಟ್ರೋಜೆನ್‌ ಎಂಬ ರಾಸಾಯಿಕಗಳು ಅಯೋಡಿನ್‌ ಹೀರುವಿಕೆಗೆ ಅಡ್ಡಗಾಲು ಹಾಕುತ್ತವೆ. ಇದು ಬ್ರೊಕೋಲಿ, ಕ್ಯಾಬೇಜ್‌, ಹೂಕೋಸು, ಟರ್ನಿಪ್‌, ನೆಲಗಡಲೆ, ಮೂಲಂಗಿ, ಸೋಯಾಬೀನ್‌, ಬಸಳೆಯಂತಹುಗಳಲ್ಲಿ ಇವೆ. ಇವುಗಳನ್ನು ಆದಷ್ಟೂ ಹಸಿಯಾಘಿ ತಿನ್ನದಿರಿ. ಬೇಯಿಸಿ ತಿನ್ನಲಡ್ಡಿಯಿಲ್ಲ. ಯಾಕೆಂದರೆ ಬೇಯಿಸಿದಾಗ ಇವುಗಳ ಗಾಯೆಟ್ರೋಜೆನ್‌ ಕ್ರಿಯಾಶೀಲತೆ ಕಳೆದುಕೊಳ್ಳುತ್ತದೆ.

Sour Curd

ಮೊಸರು, ಮಜ್ಜಿಗೆ ಸೇವಿಸಿ

ನಿಮ್ಮ ಜೀರ್ಣಾಂಗವ್ಯೂಹದ ಆರೋಗ್ಯ ಹೆಚ್ಚು ನೋಡಿಕೊಳ್ಳಿ. ಮುಖ್ಯವಾಗಿ ಪ್ರೊಬಯಾಟಿಕ್‌ಗಳನ್ನು ಸೇವಿಸಿ. ಮೊಸರು, ಮಜ್ಜಿಗೆ ಸೇವಿಸಿ. ಬೆಳ್ಳುಳ್ಳಿಯನ್ನೂ ಹೆಚ್ಚು ಸೇವಿಸಿ.

ಕೊಬ್ಬು ಮರೆಯಬೇಡಿ

ಕೊಬ್ಬುಯುಕ್ತ ಆಹಾರ ಸೇವಿಸಿ. ಹಾರ್ಮೋನಿನ ಸಮತೋಲನಕ್ಕೆ ಒಳ್ಳೆಯ ಕೊಬ್ಬು ಬೇಕೇಬೇಕು. ಆದರೆ ಹೆಚ್ಚಾಗಬಾರದು ಅಷ್ಟೇ. ದೇಸೀ ತುಪ್ಪ, ಚೀಸ್‌, ಬೆಣ್ಣೆ, ತೆಂಗಿನೆಣ್ಣೆ, ಹಾಲು, ಫ್ಲ್ಯಾಕ್‌ಸೀಡ್‌, ಸಿಯಾ ಸೀಡ್‌ ಇತ್ಯಾದಿಗಳನ್ನು ಸೇವಿಸಿ.

ಇದನ್ನೂ ಓದಿ: Vitamin D Deficiency: ನೀವು ಸಂತೋಷವಾಗಿಲ್ಲವೇ? ವಿಟಮಿನ್‌ ಡಿ ಕೊರತೆಯೂ ಇದಕ್ಕೆ ಕಾರಣವಿರಬಹುದು!

ಸಕ್ಕರೆ ಸೇವನೆಯ ಬಗ್ಗೆ ನಿಗಾ ಇಡಿ

ಥೈರಾಯ್ಡ್‌ಗೂ ಸಕ್ಕರೆಗೂ ಅಷ್ಟಾಗಿ ಆಗಿಬರದು. ಇನ್ಸುಲಿನ್‌ ಮಟ್ಟದಲ್ಲಿ ವ್ಯತ್ಯಾಸವಾದರೆ ಥೈರಾಯ್ಡ್‌ ಗ್ರಂಥಿ ಆರೋಗ್ಯವಾಗಿರದು. ಇವಲ್ಲದೆ, ನಿತ್ಯವೂ ವ್ಯಾಯಾಮ, ನಡಿಗೆ, ಚುರುಕಾಗಿರುವುದು ಅತ್ಯಂತ ಮುಖ್ಯ. ಒಳ್ಳೆಯ ಆಹಾರ ಸೇವನೆ ಅತ್ಯಗತ್ಯ. ಸಂಸ್ಕರಿಸಿದ ಆಹಾರಗಳನ್ನು ದೂರವಿಡಿ. ಎಲ್ಲ ಪೋಷಕಾಂಶಗಳೂ ದೇಹಕ್ಕೆ ಲಭಿಸುವಂತೆ ಆಹಾರಕ್ರಮ ರೂಪಿಸಿ. ಆಗ ನಿಮ್ಮ ಥೈರಾಯ್ಡ್‌ ಗ್ರಂಥಿ ಆರೋಗ್ಯವಾಗಿರುತ್ತದೆ.

Continue Reading

Latest

Snake Bite: ಮಳೆಗಾಲದಲ್ಲಿ ಹಾವುಗಳ ಕಾಟ ಹೆಚ್ಚು; ಕಚ್ಚಿದರೆ ಈ ಕ್ರಮ ಅನುಸರಿಸಿ ಅಪಾಯದಿಂದ ಪಾರಾಗಿ!

Snake Bite: ಹಾವುಗಳ ಕಡಿತದಿಂದ ಸಾಕಷ್ಟು ಜನ ಜೀವ ಕಳೆದುಕೊಂಡಿದ್ದಾರೆ. ಇನ್ನು ಮಳೆಗಾಲದಲ್ಲಿ ಹೆಚ್ಚಾಗಿ ವಿಷಕಾರಿ ಹಾವುಗಳು ಬಿಲದಿಂದ ಹೊರ ಬರುವ ಸಾಧ್ಯತೆ ಹೆಚ್ಚು. ಈ ವಿಷಕಾರಿ ಹಾವುಗಳ ಕಡಿತದಿಂದ ಸಾವು ಸಂಭವಿಸಬಹುದು. ಆದರೆ ಸಕಾಲಿಕವಾಗಿ ಇದಕ್ಕೆ ಸೂಕ್ತ ಕ್ರಮ ಕೈಗೊಂಡರೆ ಜೀವವನ್ನು ಉಳಿಸಬಹುದು. ವಿಷಕಾರಿ ಹಾವು ಕಚ್ಚಿದಾಗ ಏನು ಮಾಡಬೇಕು ಎಂಬುದರ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

Snake Bite
Koo


ಮಳೆಗಾಲದಲ್ಲಿ, ವಿಷಕಾರಿ ಹಾವುಗಳು ತಾವು ಅವಿತುಕೊಂಡಿದ್ದ ಸ್ಥಳಗಳಿಂದ ಹೊರಬರುವುದು ಹೆಚ್ಚು. ಇದರಿಂದ ಅವು ರಸ್ತೆ, ದಾರಿಗಳಲ್ಲಿ ಎಲ್ಲೆಂದರಲ್ಲಿ ಓಡಾಡುತ್ತಿರುತ್ತವೆ. ಕೆಲವೊಮ್ಮೆ ಮನೆಯೊಳಗೂ ಪ್ರವೇಶಿಸುತ್ತವೆ. ಹಾಗಾಗಿ ಅವುಗಳು ಕಚ್ಚುವ ಅಪಾಯವೂ ಮಳೆಗಾಲದಲ್ಲಿ ಹೆಚ್ಚಾಗಿರುತ್ತದೆ. ಎಲ್ಲ ಹಾವುಗಳು ವಿಷಕಾರಿಯಲ್ಲ. ಆದರೆ ಕೆಲವು ಪ್ರಕಾರದ ಹಾವು ಕಚ್ಚಿದರೆ ಸಾವು ಸಂಭವಿಸಬಹುದು. ಆದರೆ ಅದಕ್ಕೆ ತ್ವರಿತವಾಗಿ ಚಿಕಿತ್ಸೆ ನೀಡುವುದರಿಂದ ಮತ್ತು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದರಿಂದ ಜೀವವನ್ನು ಉಳಿಸಬಹುದು. ವಿಷಕಾರಿ ಹಾವು ಕಚ್ಚಿದ (Snake Bite) ತಕ್ಷಣ ಏನು ಮಾಡಬೇಕು ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಹಾವು ಕಚ್ಚಿದೆ ಎಂಬುದನ್ನು ತಿಳಿಯುವ ಲಕ್ಷಣಗಳೇನು?

ಹಾವು ಕಚ್ಚಿದೆ ಎಂಬುದನ್ನು ತ್ವರಿತವಾಗಿ ಪತ್ತೆ ಹಚ್ಚಿದರೆ ಅದಕ್ಕೆ ತಕ್ಷಣ ಕ್ರಮ ಕೈಗೊಳ್ಳಬಹುದು. ಹಾಗಾಗಿ ಹಾವು ಕಚ್ಚಿದ ಸುತ್ತಲಿನ ಸ್ಥಳದಲ್ಲಿ ಆಗಾಗ ನೋವು ಕಾಣಿಸುತ್ತದೆ ಮತ್ತು ಊದಿಕೊಂಡಿರುತ್ತದೆ. ಹಾಗೇ ಹಾವು ಕಡಿತಕ್ಕೊಳಗಾದ ವ್ಯಕ್ತಿಯಲ್ಲಿ ಸ್ನಾಯು ಬಿಗಿತ ಮತ್ತು ಅನಿಯಂತ್ರಿತ ನಡುಕ ಉಂಟಾಗುತ್ತದೆ. ಕಚ್ಚಿದ ನಂತರ ವಾಕರಿಕೆ ಮತ್ತು ವಾಂತಿ ಸಮಸ್ಯೆ ಕಂಡುಬರಬಹುದು. ಅಲ್ಲದೇ ಹಾವು ಕಚ್ಚಿದ ಸ್ಥಳದಲ್ಲಿ ಚರ್ಮದ ಬಣ್ಣ ಬದಲಾವಣೆಯಾಗುತ್ತದೆ. ಚರ್ಮದ ಬಣ್ಣ ಹೆಚ್ಚಾಗಿ ನೀಲಿ ಅಥವಾ ಹಸಿರಾಗುತ್ತದೆ. ಇದು ವಿಷದ ಹರಡುವಿಕೆಯನ್ನು ಸೂಚಿಸುತ್ತದೆ. ಆಗ ರಕ್ತದೊತ್ತಡದಲ್ಲಿ ಕುಸಿತ ಮತ್ತು ತಲೆತಿರುಗುವಿಕೆ ಅಥವಾ ಮೂರ್ಛೆ ಹೋಗುವ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಅಷ್ಟೇ ಅಲ್ಲದೇ ವ್ಯಕ್ತಿ ಅತಿಯಾದ ಬೆವರುವುದು ಮತ್ತು ನಿಶ್ಯಕ್ತಿತನ ಕಾಣಿಸಿಕೊಳ್ಳಬಹುದು.

ಹಾವು ಕಚ್ಚಿದ ತಕ್ಷಣ ಈ ರೀತಿ ಪ್ರಥಮ ಚಿಕಿತ್ಸೆ ಮಾಡಿ:

ಹಾವು ಕಚ್ಚಿದಾಗ ಹೆದರದೆ ಶಾಂತವಾಗಿರಬೇಕು. ಯಾಕೆಂದರೆ ಆತಂಕ ಹೆಚ್ಚಾದೆ ರಕ್ತ ಸಂಚಾರ ವೇಗವಾಗಿ ವಿಷ ದೇಹಕ್ಕೆ ಬೇಗ ಹರಡುತ್ತದೆ. ಹಾಗಾಗಿ ಹಾವು ಕಡಿತಕ್ಕೊಳಗಾದ ವ್ಯಕ್ತಿಗೆ ಸಾಧ್ಯವಾದಷ್ಟು ಶಾಂತವಾಗಿರಲು ಹೇಳಿ. ರಕ್ತ ಸಂಚಾರದ ಮೂಲಕ ವಿಷ ದೇಹಕ್ಕೆ ಹರಡುವುದನ್ನು ತಡೆಯಲು ಹಾವು ಕಚ್ಚಿದ ಭಾಗದಿಂದ ರಕ್ತ ಮೇಲಕ್ಕೆ ಹೋಗದಂತೆ ದಾರದಿಂದ ಬಿಗಿಯಾಗಿ ಕಟ್ಟಿ. ಹಾವು ಕಚ್ಚಿದ ಪ್ರದೇಶವನ್ನು ಶುದ್ಧ ನೀರಿನಿಂದ ನಿಧಾನವಾಗಿ ಸ್ವಚ್ಛಗೊಳಿಸಿ. ಆದರೆ ಕಠಿಣ ರಾಸಾಯನಿಕಗಳು ಅಥವಾ ಸೋಂಕು ನಿವಾರಕಗಳನ್ನು ಬಳಸಬೇಡಿ.

ಹಾವು ಕಚ್ಚಿದ ಗಾಯವನ್ನು ಕತ್ತರಿಸಬೇಡಿ ಅಥವಾ ವಿಷವನ್ನು ಹೀರಲು ಪ್ರಯತ್ನಿಸಬೇಡಿ. ಗಾಯಕ್ಕೆ ಐಸ್ ಹಚ್ಚಬೇಡಿ. ಯಾಕೆಂದರೆ ಐಸ್ ಅಂಗಾಂಶದ ಹಾನಿಯನ್ನು ಇನ್ನಷ್ಟು ಹದಗೆಡಿಸುತ್ತದೆ.

ವೈದ್ಯರ ಬಳಿ ಕರೆದುಕೊಂಡು ಹೋಗುವ ಮೊದಲು ಈ ಮನೆಮದ್ದು ಮಾಡಬಹುದು

ಹಾವು ಕಚ್ಚಿದ ವ್ಯಕ್ತಿಗೆ ತುಪ್ಪವನ್ನು ನೀಡುವುದರಿಂದ ವಾಂತಿಯನ್ನು ಪ್ರಚೋದಿಸಬಹುದು. ಇದು ಹೊಟ್ಟೆಯಿಂದ ಸ್ವಲ್ಪ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಲಭ್ಯವಿದ್ದರೆ ಕಚ್ಚಿದ ಪ್ರದೇಶಕ್ಕೆ ಕಾಂಟೋಲಾ (ಸ್ಥಳೀಯ ಗಿಡಮೂಲಿಕೆ) ಪೇಸ್ಟ್ ಅನ್ನು ಹಚ್ಚಿ. ಇದು ವಿಷದ ಪರಿಣಾಮಗಳನ್ನು ಕಡಿಮೆ ಮಾಡಲು ಮತ್ತು ಸೋಂಕನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿ ಪೇಸ್ಟ್ ಮತ್ತು ಜೇನುತುಪ್ಪದ ಮಿಶ್ರಣವನ್ನು ಹಾವು ಕಚ್ಚಿದ ಪ್ರದೇಶಕ್ಕೆ ಹಚ್ಚಬಹುದು.
ಸಾಧ್ಯವಾದಷ್ಟು ಬೇಗ ಹತ್ತಿರದ ಆಸ್ಪತ್ರೆ ಅಥವಾ ವೈದ್ಯರ ಬಳಿ ಕರೆದುಕೊಂಡು ಹೋಗಿ ವೈದ್ಯಕೀಯ ಚಿಕಿತ್ಸೆ ಕೊಡಿಸಿ. ಮನೆಯಲ್ಲೇ ಗಾಯಕ್ಕೆ ಚಿಕಿತ್ಸೆ ನೀಡಲು ಪ್ರಯತ್ನಿಸಬೇಡಿ. ಕಚ್ಚಿದ ಪ್ರದೇಶದಲ್ಲಿ ರಕ್ತಸ್ರಾವವಾಗುತ್ತಿದ್ದರೆ ರಕ್ತಸ್ರಾವವನ್ನು ನಿಲ್ಲಿಸಲು ಪ್ರಯತ್ನಿಸಬೇಡಿ. ಇದು ಸ್ವಲ್ಪ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಹಾವನ್ನೇ ಮಣಿಸಿ ʼಸ್ನೇಹಿತʼನ ಜೀವ ಉಳಿಸಿದ ಹಲ್ಲಿ! ಅದ್ಭುತ ವಿಡಿಯೊ; ತಪ್ಪದೇ ನೋಡಿ!

ಹಾವು ಕಡಿತದ ಅಪಾಯ ತಡೆಗಟ್ಟಲು ಈ ಕ್ರಮ ಪಾಲಿಸಿ

ಮಳೆಗಾಲದಲ್ಲಿ ಹಾವು ಹೆಚ್ಚು ಕಾಣಿಸಿಕೊಳ್ಳುವ ಪ್ರದೇಶಗಳಲ್ಲಿ ನಡೆಯುವಾಗ ಜಾಗರೂಕರಾಗಿರಿ. ಇಂತಹ ಪ್ರದೇಶಗಳಲ್ಲಿ ನಡೆಯುವಾಗ ಬೂಟುಗಳು ಮತ್ತು ಉದ್ದನೆಯ ಪ್ಯಾಂಟ್‌ಗಳನ್ನು ಬಳಸಿ. ಮನೆಗಳು ಮತ್ತು ತೋಟಗಳನ್ನು ಸ್ವಚ್ಛವಾಗಿರಿಸಿಕೊಳ್ಳಿ. ನಿಮ್ಮ ಮನೆಯ ಸುತ್ತಲೂ ಹಾವು ಅಡಗಿರುವ ಪೊದೆಗಳನ್ನು ತೆಗೆದುಹಾಕಿ.

Continue Reading

Latest

Custard Apple Benefits: ಕ್ಯಾನ್ಸರ್‌ ಸೇರಿದಂತೆ ಹಲವು ರೋಗಗಳನ್ನು ತಡೆಯುವ ಶಕ್ತಿ ಸೀತಾಫಲಕ್ಕಿದೆ!

Custard Apple Benefits: ಸೀತಾಫಲ ಉಷ್ಣವಲಯದ ಹಣ್ಣು. ರುಚಿಗೆ ಮಾತ್ರವಲ್ಲ, ಇದನ್ನು ತಿಂದರೆ ಹಲವು ಆರೋಗ್ಯ ಪ್ರಯೋಜನಗಳೂ ಇವೆ. ಇದರಲ್ಲಿ ಪೋಷಕಾಂಶಗಳು ಸಮೃದ್ಧವಾಗಿವೆ. ಸೀತಾಫಲ ತಿನ್ನುವುದರಿಂದ ಏನೆಲ್ಲ ಆರೋಗ್ಯ (Custard Apple Benefits) ಪ್ರಯೋಜನಗಳಿವೆ ಎಂಬುದರ ಮಾಹಿತಿ ಇಲ್ಲಿದೆ.

VISTARANEWS.COM


on

Custard Apple Benefits
Koo

ಸೀತಾಫಲ ಉಷ್ಣವಲಯದ ಹಣ್ಣು. ಇದು ಬಹಳ ಸಿಹಿಯಾಗಿ ಪರಿಮಳಯುಕ್ತವಾಗಿರುತ್ತದೆ. ರುಚಿಗೆ ಮಾತ್ರವಲ್ಲ, ಇದನ್ನು ತಿಂದರೆ ಹಲವು ಆರೋಗ್ಯ ಪ್ರಯೋಜನಗಳೂ ಇವೆ. ಇದರಲ್ಲಿ ಪೋಷಕಾಂಶಗಳು ಸಮೃದ್ಧವಾಗಿವೆ. ಹಾಗಾದರೆ ಸೀತಾಫಲ ತಿನ್ನುವುದರಿಂದ ಏನೆಲ್ಲ ಆರೋಗ್ಯ (Custard Apple Benefits) ಪ್ರಯೋಜನವಿದೆ ಎಂಬುದು ಗೊತ್ತಿರಲಿ.

custard apple fruit Custard Apple Benefits

1. ವಿಟಮಿನ್ ಸಿ ಸಮೃದ್ಧ

ಸೀತಾಫಲದಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಪ್ರತಿರಕ್ಷಣಾ ಕಾರ್ಯ, ಚರ್ಮದ ಆರೋಗ್ಯವನ್ನು ಉತ್ತಮವಾಗಿಡುತ್ತದೆ ಮತ್ತು ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಅಗತ್ಯ ಖನಿಜಗಳನ್ನು ಹೊಂದಿರುವುದರಿಂದ  ಇದು ಹೃದಯದ ಆರೋಗ್ಯ, ಸ್ನಾಯುಗಳ ಕಾರ್ಯ ಮತ್ತು ಮೂಳೆಗಳನ್ನು ಬಲಪಡಿಸುತ್ತದೆ.

Image Of Custard Apple Benefits

2. ಹೆಚ್ಚಿನ ಫೈಬರ್ ಅಂಶ

ಸೀತಾಫಲದಲ್ಲಿ ಹೆಚ್ಚಿನ ಫೈಬರ್ ಅಂಶವಿದ್ದು, ಇದನ್ನು  ನಿಯಮಿತವಾಗಿ ಸೇವಿಸಿದರೆ  ಕರುಳಿನ ಚಲನೆ ಉತ್ತಮವಾಗಿರುತ್ತದೆ. ಇದು ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಇದು ನೈಸರ್ಗಿಕ ಜೀರ್ಣಕಾರಿ ಕಿಣ್ವಗಳನ್ನು ಸಹ ಹೊಂದಿರುತ್ತದೆ, ಅದು ಪ್ರೋಟೀನ್ ಗಳು ಮತ್ತು ಇತರ ಪೋಷಕಾಂಶಗಳ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

Antioxidants in it keep immunity strong Benefits Of Mandakki

3. ರೋಗ ನಿರೋಧಕ ಶಕ್ತಿ

ಸೀತಾಫಲ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಬಿಳಿ ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಮತ್ತು ಸೋಂಕುಗಳು ಮತ್ತು ಕಾಯಿಲೆಗಳಿಂದ ರಕ್ಷಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ಉತ್ಕರ್ಷಣ ನಿರೋಧಕಗಳನ್ನು ಸಹ ಹೊಂದಿರುತ್ತದೆ. ಅದು ಜೀವಕೋಶಗಳನ್ನು ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತದಿಂದ ರಕ್ಷಿಸುತ್ತದೆ.

Heart Health Fish Benefits

4. ಹೃದಯದ ಆರೋಗ್ಯ ಸುಧಾರಣೆ

ಸೀತಾಫಲ  ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ. ಇದು ಸೋಡಿಯಂನ ಪರಿಣಾಮಗಳನ್ನು ಪ್ರತಿರೋಧಿಸುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ ಹೃದಯರಕ್ತನಾಳಗಳು  ಆರೋಗ್ಯವಾಗಿರುತ್ತವೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಹೃದಯದ ಆರೋಗ್ಯಕ್ಕೆ ಪ್ರಯೀಜನಕಾರಿಯಾಗಿದೆ.

Weight Loss Slim Body Healthy Lifestyle Concept Benefits Of Saffron

5. ತೂಕ ನಿರ್ವಹಣೆಯಲ್ಲಿ ಸಹಾಯ

ಸೀತಾಫಲ ತೂಕ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ. ಇತರ ಹಣ್ಣುಗಳಿಗೆ ಹೋಲಿಸಿದರೆ ಸೀತಾಫಲ ಕಡಿಮೆ ಕ್ಯಾಲೊರಿಗಳನ್ನು ಹೊಂದಿರುತ್ತದೆ, ಇದು ತಮ್ಮ ತೂಕವನ್ನು ನಿಯಂತ್ರಿಸುವವರಿಗೆ ಉತ್ತಮ ಆಯ್ಕೆಯಾಗಿದೆ. ಇದರಲ್ಲಿರುವ ಫೈಬರ್ ಅಂಶವು ನಿಮ್ಮ ಹೊಟ್ಟೆ ಹೆಚ್ಚು ಸಮಯದವರೆಗೆ ತುಂಬಿರುವಂತೆ ಮಾಡುತ್ತದೆ, ಇದರಿಂದ ನೀವು ಅತಿಯಾಗಿ ತಿನ್ನುವ ಅಭ್ಯಾಸ ಕಡಿಮೆಯಾಗುತ್ತದೆ.

Rich in vitamin C it can boost immunity Custard Apple Benefits

6. ಚರ್ಮದ ಆರೋಗ್ಯ ಸುಧಾರಣೆ

ಇದು ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ, ಇದು ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಮತ್ತು ಫ್ರೀ ರಾಡಿಕಲ್ಸ್ ಗಳಿಂದ ಉಂಟಾಗುವ ಹಾನಿಯಿಂದ ಚರ್ಮವನ್ನು ರಕ್ಷಿಸುತ್ತದೆ, ಇದರಿಂದ ನಿಮ್ಮ ಚರ್ಮ ಆರೋಗ್ಯಕರ, ಹೆಚ್ಚು ತಾರುಣ್ಯದಿಂದ ಕೂಡಿರುತ್ತದೆ. ಈ ಹಣ್ಣಿನಲ್ಲಿರುವ ಹೆಚ್ಚಿನ ನೀರಿನ ಅಂಶವು ಚರ್ಮವನ್ನು ಹೈಡ್ರೇಟ್ ಆಗಿಡಲು ಸಹಾಯ ಮಾಡುತ್ತದೆ.

Knee bone mass Bone erosion and deterioration Pumpkin Benefits

7. ಮೂಳೆ ಬಲಪಡಿಸುತ್ತದೆ

ಸೀತಾಫಲ ಮೂಳೆಯ ಆರೋಗ್ಯವನ್ನು ಕಾಪಾಡುತ್ತದೆ. ಮೂಳೆಗಳನ್ನು ಬಲಪಡಿಸಲು ಮತ್ತು ಆಸ್ಟಿಯೊಪೊರೋಸಿಸ್ ನಂತಹ ಸಮಸ್ಯೆಗಳನ್ನು ತಡೆಗಟ್ಟಲು ಇದು ಅತ್ಯಗತ್ಯ. ಇದು ಮೂಳೆ ಖನಿಜೀಕರಣ ಮತ್ತು ಒಟ್ಟಾರೆ ಮೂಳೆಯ ಆರೋಗ್ಯವನ್ನು ಕಾಪಾಡುತ್ತದೆ.

Image Of Custard Apple Benefits

8. ದೇಹಕ್ಕೆ ಶಕ್ತಿ

ಸೀತಾಫಲ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಇದರಲ್ಲಿರುವ ನೈಸರ್ಗಿಕ ಸಕ್ಕರೆಗಳು ಮತ್ತು ಕಾರ್ಬೋಹೈಡ್ರೇಟ್‍ಗಳು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತವೆ, ಇದು ಶಕ್ತಿಯ ಮಟ್ಟವನ್ನು ಮರು ಉತ್ಪಾದನೆ ಮಾಡಲು ಸಹಕಾರಿಯಾಗುವ ಹಣ್ಣಾಗಿದೆ.

Cancer Prevention Guava Benefits

9. ಕ್ಯಾನ್ಸರ್‌ಗೆ ತಡೆ

ಇದು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಗಟ್ಟುವ ಅನ್ನೋನೇಸಿಯಸ್ ಅಸಿಟೋಜೆನಿನ್‌ಗಳಂತಹ ಸಂಯುಕ್ತಗಳನ್ನು ಒಳಗೊಂಡಿದೆ. ಆದರೆ ಈ ಬಗ್ಗೆ ಇನ್ನೂ ಹೆಚ್ಚಿನ ಮಟ್ಟದ ಸಂಶೋಧನೆ ನಡೆಯುವುದು ಅಗತ್ಯ ಎನ್ನಲಾಗಿದೆ.

Stress Reduction Tea Benefits

10. ಮಾನಸಿಕ ಆರೋಗ್ಯಕ್ಕೆ ಉತ್ತಮ

ಈ ಹಣ್ಣು ಮಾನಸಿಕ ಆರೋಗ್ಯವನ್ನು ಉತ್ತಮವಾಗಿರಿಸುತ್ತದೆ. ಈ ಹಣ್ಣಿನಲ್ಲಿ ವಿಟಮಿನ್ ಬಿ 6 ನಂತಹ ಬಿ ಜೀವಸತ್ವಗಳಿವೆ, ಇದು ಮೆದುಳಿನ ಕಾರ್ಯವನ್ನು ಉತ್ತಮವಾಗಿಸುತ್ತದೆ ಮತ್ತು ಮನಸ್ಥಿತಿಯನ್ನು ನಿರ್ವಹಿಸಲು ಮತ್ತು ಖಿನ್ನತೆ ಮತ್ತು ಆತಂಕದ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಮಾರುಕಟ್ಟೆಯಲ್ಲಿ ಅಥವಾ ನಿಮ್ಮ ಮನೆಯಲ್ಲಿ ಬೆಳೆದ ಸೀತಾಫಲ ಹಣ್ಣುಗಳನ್ನು ಪ್ರತಿದಿನ ಸೇವಿಸಿ. ಇದರಿಂದ ನಿಮ್ಮ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ. ಆದರೆ ಅತಿಯಾಗಿ ಸೇವಿಸಿಬೇಡಿ.

ಇದನ್ನೂ ಓದಿ: Side Effects Of Dry Fruits: ಆರೋಗ್ಯಕ್ಕೆ ಒಳ್ಳೆಯದೆಂದು ಒಣಬೀಜಗಳನ್ನು ಅತಿಯಾಗಿ ತಿನ್ನುತ್ತೀರಾ? ಎಚ್ಚರ!

Continue Reading
Advertisement
Gunfire On School
Latest4 mins ago

Gunfire On School: ಶಾಲೆಯೊಳಗೆ ಗನ್‌ ತಂದು 10 ವರ್ಷದ ಹುಡುಗನಿಗೆ ಗುಂಡು ಹಾರಿಸಿದ 5 ವರ್ಷದ ಬಾಲಕ!

Ibbani Thabbida Ileyali movie Helu Gelati song released
ಕರ್ನಾಟಕ22 mins ago

Kannada New Movie: ರೆಟ್ರೋ ಸ್ಟೈಲ್‌ನಲ್ಲಿ ಮೂಡಿಬಂದ ʼಹೇಳು ಗೆಳತಿʼ; ಚರಣ್‌ರಾಜ್ ಕಂಠಸಿರಿಗೆ ಕೇಳುಗರು ಫಿದಾ

Ashwini Ponnappa
ಕ್ರೀಡೆ33 mins ago

Ashwini Ponnappa: ‘ಇದು ನನ್ನ ಕೊನೆಯ ಒಲಿಂಪಿಕ್ಸ್​’; ನಿವೃತ್ತಿ ಘೋಷಿಸಿದ ಶಟ್ಲರ್​ ಅಶ್ವಿನಿ ಪೊನ್ನಪ್ಪ

Ismail Haniyeh
ವಿದೇಶ54 mins ago

Ismail Haniyeh: ಒಸಾಮಾ ರೀತಿಯೇ ಹಮಾಸ್‌ನ ಇಸ್ಮಾಯಿಲ್‌ ಹನಿಯೇಹ್‌ನನ್ನು ಕೊಂದ ಇಸ್ರೇಲ್;‌ ಆಪರೇಷನ್‌ನ ಡಿಟೇಲ್ಸ್‌ ಇಲ್ಲಿದೆ

Mahesh Bhatt said his mother was worried after he gave daughters Muslim names
ಬಾಲಿವುಡ್1 hour ago

Alia Bhatt: ಪುತ್ರಿಯರಿಗೆ ಮುಸ್ಲಿಂ ಹೆಸರುಗಳನ್ನು ಇಟ್ಟಾಗ ನನ್ನ ತಾಯಿಗೆ ಚಿಂತೆಯಾಗಿತ್ತು ಎಂದ ಆಲಿಯಾ ಭಟ್‌ ತಂದೆ!

Jagdeep Dhankhar
ದೇಶ1 hour ago

Parliament Session: RSS ಬಗ್ಗೆ ದೋಷಾರೋಪಣೆ ಸಲ್ಲದು; ಜಗದೀಪ್ ಧನ್‌ಕರ್ ಹೇಳಿಕೆ- ಪ್ರತಿಪಕ್ಷಗಳು ವಾಕ್‌ಔಟ್‌!

Paris Olympics Boxing
ಕ್ರೀಡೆ1 hour ago

Paris Olympics Boxing: ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ ಬಾಕ್ಸರ್​ ಲವ್ಲಿನಾ ಬೊರ್ಗೊಹೇನ್‌

Muda Scam
ಕರ್ನಾಟಕ2 hours ago

Muda Scam: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ; ಲೋಕಾಯುಕ್ತಕ್ಕೆ ಪ್ರಮುಖ ದಾಖಲೆ ಸಲ್ಲಿಕೆ

Paris Olympics
ಕ್ರೀಡೆ2 hours ago

Paris Olympic: ಹುಟ್ಟು ಹಬ್ಬದ ದಿನವೇ ಗೆಲುವು ಸಾಧಿಸಿ ಪ್ರೀ-ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಶ್ರೀಜಾ ಅಕುಲಾ

Indian Navy Recruitment
ಉದ್ಯೋಗ2 hours ago

Indian Navy Recruitment: ಭಾರತೀಯ ನೌಕಾ ಪಡೆಯಲ್ಲಿದೆ ಉದ್ಯೋಗಾವಕಾಶ; ಅಪ್ಲೈ ಮಾಡಲು ಆ. 2 ಕೊನೆಯ ದಿನ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ1 day ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 day ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ2 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ2 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ2 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ3 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ3 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ3 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ3 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

ಟ್ರೆಂಡಿಂಗ್‌