Alia Bhatt: ಪುತ್ರಿಯರಿಗೆ ಮುಸ್ಲಿಂ ಹೆಸರುಗಳನ್ನು ಇಟ್ಟಾಗ ನನ್ನ ತಾಯಿಗೆ ಚಿಂತೆಯಾಗಿತ್ತು ಎಂದ ಆಲಿಯಾ ಭಟ್‌ ತಂದೆ! - Vistara News

ಬಾಲಿವುಡ್

Alia Bhatt: ಪುತ್ರಿಯರಿಗೆ ಮುಸ್ಲಿಂ ಹೆಸರುಗಳನ್ನು ಇಟ್ಟಾಗ ನನ್ನ ತಾಯಿಗೆ ಚಿಂತೆಯಾಗಿತ್ತು ಎಂದ ಆಲಿಯಾ ಭಟ್‌ ತಂದೆ!

Alia Bhatt: ತಮ್ಮ ಹೆಣ್ಣುಮಕ್ಕಳಾದ ಆಲಿಯಾ ಮತ್ತು ಶಾಹೀನ್‌ ಭಟ್ ಅವರಿಗೆ ಮುಸ್ಲಿಂ ಹೆಸರುಗಳನ್ನು ಇಟ್ಟಾಗ ಮಹೇಶ್‌ ಭಟ್‌ (Alia Bhatt and Shaheen) ತಾಯಿ ಚಿಂತಿತರಾಗಿದ್ದರು ಎಂದು ಹೇಳಿಕೊಂಡಿದ್ದಾರೆ.

VISTARANEWS.COM


on

Mahesh Bhatt said his mother was worried after he gave daughters Muslim names
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬಾಲಿವುಡ್‌ ನಟಿ ಆಲಿಯಾ ಭಟ್ (Alia Bhatt) ಅವರ ತಂದೆ ಮಹೇಶ್ ಭಟ್ ಆಗಾಗ ವೈಯಕ್ತಿಕ ಹೇಳಿಕೆ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಮಹೇಶ್ ಅವರ ತಂದೆ ನಾನಾಭಾಯ್ ಭಟ್ ಗುಜರಾತಿ ಬ್ರಾಹ್ಮಣರಾಗಿದ್ದರು ಮತ್ತು ತಾಯಿ ಶಿರಿನ್ ಮೊಹಮ್ಮದ್ ಅಲಿ ಮುಸ್ಲಿಂ. ತಮ್ಮ ಹೆಣ್ಣುಮಕ್ಕಳಾದ ಆಲಿಯಾ ಮತ್ತು ಶಾಹೀನ್‌ ಭಟ್ ಅವರಿಗೆ ಮುಸ್ಲಿಂ ಹೆಸರುಗಳನ್ನು ಇಟ್ಟಾಗ ಮಹೇಶ್‌ ಭಟ್‌ (Alia Bhatt and Shaheen) ತಾಯಿ ಚಿಂತಿತರಾಗಿದ್ದರು ಎಂದು ಹೇಳಿಕೊಂಡಿದ್ದಾರೆ.

ಮಹೇಶ್ ಭಟ್‌ ಹಳೆಯ ಸಂದರ್ಶನವೊಂದರಲ್ಲಿ ತಮ್ಮ ಕುಂಟುಂಬದ ಬಗ್ಗೆ ಹೇಳಿಕೊಂಡಿದ್ದರು. ʻʻನನ್ನ ತಾಯಿ ಮುಸ್ಲಿಂ ಆಗಿದ್ದರೆ, ತಂದೆ ಜನಿವಾರ ಧರಿಸಿದ್ದರು. ಇಬ್ಬರೂ (ತಂದೆ ಮತ್ತು ತಾಯಿ) ತಮ್ಮ ವೈಯಕ್ತಿಕ ನಂಬಿಕೆಗಳನ್ನು ಉಳಿಸಿಕೊಂಡು ಬಂದರುʼʼಎಂದು ಹೇಳಿಕೊಂಡಿದ್ದಾರೆ.

“ನನ್ನ ತಾಯಿ ಯಾವಾಗಲೂ ದೊಡ್ಡದ್ದಾಗಿ ಹಣೆಗೆ ಬಿಂದಿ ಇಡುತ್ತಿದ್ದರು ಮತ್ತು ಸೀರೆಯನ್ನು ಧರಿಸುತ್ತಿದ್ದರು. ಅದೇ ಸಮಯದಲ್ಲಿ, ಅವರು ಏನೋ ಮರೆಮಾಚುವಂತೆ ನನಗೆ ಅನ್ನಿಸುತ್ತಿತ್ತು. ನಮ್ಮ ದೈನಂದಿನ ಜೀವನದಲ್ಲಿ ಅವಳ ಜಾತಿ ಎಲ್ಲಿ ಹಸ್ತಕ್ಷೇಪ ಮಾಡುತ್ತದೆ ಎಂದು ಅವರು ಭಾವಿಸಿದ್ದರು. 1992 ರಲ್ಲಿ ನಡೆದ ಕೋಮುಗಲಭೆಗಳ ಸಮಯದಲ್ಲಿ ಹೆಚ್ಚು ಚಿಂತಿತಳಾಗಿದ್ದಳು. ಆಲಿಯಾಗೆ ಮುಸ್ಲಿಂ ಹೆಸರನ್ನು ಇಟ್ಟಾಗ ಮತ್ತಷ್ಟು ಚಿಂತಿತಳಾದಳು. ನನ್ನ ಎರಡನೇ ಹೆಂಡತಿ (ಸೋನಿ ರಜ್ದಾನ್) ಆಲಿಯಾ ಹೆಸರನ್ನು ಇಷ್ಟಪಟ್ಟರುʼʼಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Kannada New Movie: `ನೈಸ್ ರೋಡ್’ ಸಿನಿಮಾಗೆ ನೋಟಿಸ್ ; ಅಷ್ಟಕ್ಕೂ ಆಗಿದ್ದೇನು?

1970 ರಲ್ಲಿ, ಮಹೇಶ್ ಲೋರೆನ್ ಬ್ರೈಟ್ ಅವರನ್ನು ವಿವಾಹವಾದರು (ನಂತರದ ಹೆಸರು ಕಿರಣ್ ಭಟ್ ಎಂದು ಬದಲಾಯಿತು), ಅವರಿಗೆ ಇಬ್ಬರು ಮಕ್ಕಳಿದ್ದರು. ರಾಹುಲ್ ಮತ್ತು ಪೂಜಾ ಭಟ್. 1986ರಲ್ಲಿ ನಟ ಸೋನಿ ರಜ್ದಾನ್ ಅವರನ್ನು ವಿವಾಹವಾದರು. ಆಗ ಶಾಹೀನ್ ಮತ್ತು ಆಲಿಯಾ ಭಟ್ ಜನಿಸಿದರು. ಆಲಿಯಾ ಮಾರ್ಚ್ 1993 ರಲ್ಲಿ ಜನಿಸಿದರು. ಇದೀಗ ನಟ ರಣಬೀರ್ ಕಪೂರ್ ಅವರನ್ನು ವಿವಾಹವಾಗಿದ್ದಾರೆ.

ಹಿಂದಿಯಲ್ಲಿ ಆಲಿಯಾ ಭಟ್ ನಟನೆಯ ‘ಜಿಗ್ರಾ’ ಸಿನಿಮಾ ಕೂಡ ಅಕ್ಟೋಬರ್​ನಲ್ಲಿ ಬಿಡುಗಡೆ ಆಗಲಿದೆ. ಇದಲ್ಲದೆ ರಾಜ್​ಕುಮಾರ್ ರಾವ್ ಹಾಗೂ ತೃಪ್ತಿ ದಮ್ರಿ ನಟನೆಯ ‘ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ’ ಹಾಗೂ ಶಾಹಿದ್ ಕಪೂರ್-ಪೂಜಾ ಹೆಗ್ಡೆ ನಟನೆಯ ‘ದೇವ’ ಕೂಡ ಇದೇ ಸಂದರ್ಭದಲ್ಲಿ ಬಿಡುಗಡೆ ಆಗಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Health Tips: ಉಪಾಹಾರದಲ್ಲಿ ಇವುಗಳು ಬೇಡವೇ ಬೇಡ ಎನ್ನುತ್ತಾರೆ ಮಾಧುರಿ ದೀಕ್ಷಿತ್ ಪತಿ ಡಾ. ಶ್ರೀರಾಮ್ ನೆನೆ

ಕಾರ್ಡಿಯೊಥೊರಾಸಿಕ್ ಸರ್ಜನ್ ಆಗಿರುವ ಡಾ. ನೆನೆ ಈಗ ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಆರೋಗ್ಯಕರ ಜೀವನಕ್ಕಾಗಿ (Health Tips) ನಾವು ತಪ್ಪಿಸಬೇಕಾದ ಉಪಹಾರದ ಮಾಹಿತಿ ನೀಡಿದ್ದಾರೆ. ಇದರಲ್ಲಿ ಬಿಳಿ ಬ್ರೆಡ್, ಸಕ್ಕರೆಯ ಧಾನ್ಯಗಳು, ಹಣ್ಣಿನ ರಸ, ಸಂಸ್ಕರಿಸಿದ ಮಾಂಸ, ಸಿಹಿಯಾದ ಮೊಸರು ಈ ಆಯ್ಕೆಗಳನ್ನು ತಪ್ಪಿಸಬೇಕು ಎಂದು ಹೇಳಿದ್ದು, ಇದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

VISTARANEWS.COM


on

By

Health Tips
Koo

ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ (Bollywood actress Madhuri Dixit) ಅವರ ಪತಿ ಡಾ. ಶ್ರೀರಾಮ್ ನೆನೆ (Dr Shriram Nene) ಅವರು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ನಿಯಮಿತವಾಗಿ ಆರೋಗ್ಯ ಸಂಬಂಧಿತ (health tips) ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಅವರು ಹೃದಯಾಘಾತದ (heart attack case) ಅಪಾಯವು ಏಕೆ ಹೆಚ್ಚು ಎಂಬುದನ್ನು ಹಂಚಿಕೊಂಡಿದ್ದು, ಇದಕ್ಕಾಗಿ ಆರೋಗ್ಯಕರ ಉಪಹಾರ ಹೇಗಿರಬೇಕು ಎಂದು ಹೇಳಿದ್ದಾರೆ.

ಕಾರ್ಡಿಯೊಥೊರಾಸಿಕ್ ಸರ್ಜನ್ ಆಗಿರುವ ಡಾ. ನೆನೆ ಈಗ ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಆರೋಗ್ಯಕರ ಜೀವನಕ್ಕಾಗಿ ನಾವು ತಪ್ಪಿಸಬೇಕಾದ ಉಪಹಾರದ ಮಾಹಿತಿ ನೀಡಿದ್ದಾರೆ. ಇದರಲ್ಲಿ ಬಿಳಿ ಬ್ರೆಡ್, ಸಕ್ಕರೆಯ ಧಾನ್ಯಗಳು, ಹಣ್ಣಿನ ರಸ, ಸಂಸ್ಕರಿಸಿದ ಮಾಂಸ, ಸಿಹಿಯಾದ ಮೊಸರು ಈ ಆಯ್ಕೆಗಳನ್ನು ತಪ್ಪಿಸಬೇಕು ಎಂದು ಹೇಳಿದ್ದಾರೆ.

ಬಿಳಿ ಬ್ರೆಡ್

ಬಿಳಿ ಬ್ರೆಡ್ ಅನ್ನು ಕಡಿಮೆ ಗುಣಮಟ್ಟದ ಕಾರ್ಬೋಹೈಡ್ರೇಟ್‌ಗಳೊಂದಿಗೆ ಸಂಸ್ಕರಿಸಲಾಗುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಕಾರಣವಾಗಬಹುದು. ಬಿಳಿ ಬ್ರೆಡ್ ಅನ್ನು ಅತಿಯಾಗಿ ಸೇವಿಸುವುದರಿಂದ ಬೊಜ್ಜು, ಹೃದ್ರೋಗ ಮತ್ತು ಮಧುಮೇಹ ಉಂಟಾಗುತ್ತದೆ.

ಸಕ್ಕರೆ ಧಾನ್ಯಗಳು

ಸಕ್ಕರೆ ಸಿರಿಧಾನ್ಯಗಳು ಸರಳವಾದ ಕಾರ್ಬೋಹೈಡ್ರೇಟ್ ಆಹಾರ ಪದಾರ್ಥಗಳಾಗಿವೆ. ಇದು ಹೆಚ್ಚಿನ ಹಸಿವು ಮತ್ತು ಶುಗರ್ ಮಟ್ಟ ಹೆಚ್ಚಿಸಲು ಕಾರಣವಾಗಬಹುದು. ಇದು ಟೈಪ್ 2 ಮಧುಮೇಹ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.

ಹಣ್ಣಿನ ರಸ

ಹಣ್ಣುಗಳನ್ನು ಜ್ಯೂಸ್ ಮಾಡುವುದರಿಂದ ಅವುಗಳಲ್ಲಿರುವ ಅಗತ್ಯ ಪೋಷಕಾಂಶಗಳ ನಷ್ಟಕ್ಕೆ ಕಾರಣವಾಗುತ್ತದೆ. ಜ್ಯೂಸ್ ಮಾಡುವುದು ಹೆಚ್ಚಿನ ಸಕ್ಕರೆಗಳನ್ನು ಬಿಡುಗಡೆ ಮಾಡುತ್ತದೆ. ಹಣ್ಣಿನ ರಸವು ಬೊಜ್ಜು ಮತ್ತು ತೂಕ ಹೆಚ್ಚಾಗಲು ಕಾರಣವಾಗಬಹುದು.


ಸಂಸ್ಕರಿಸಿದ ಮಾಂಸ

ಬೆಳಗಿನ ಉಪಾಹಾರಕ್ಕಾಗಿ ಸಂಸ್ಕರಿಸಿದ ಮಾಂಸವನ್ನು ತಿನ್ನುವುದು ಹೊಟ್ಟೆ ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಕೂಡ ಸಂಸ್ಕರಿಸಿದ ಮಾಂಸವನ್ನು ಸೇವಿಸುವ ಕೆಲವು ಅಡ್ಡಪರಿಣಾಮಗಳಾಗಿವೆ.

ಇದನ್ನೂ ಓದಿ: Actor Shahrukh Khan: ಅಮೆರಿಕದಲ್ಲಿ ಶಾರುಖ್ ಖಾನ್‌ಗೆ ಶಸ್ತ್ರಚಿಕಿತ್ಸೆ; ಬಾಲಿವುಡ್‌ ಬಾದ್‌ಶಾಗೆ ಕಾಡುತ್ತಿರುವ ಸಮಸ್ಯೆ ಏನು?

ಸಿಹಿಯಾದ ಮೊಸರು

ಮೊಸರಿನಲ್ಲಿರುವ ನೈಸರ್ಗಿಕ ಸಕ್ಕರೆ ಆರೋಗ್ಯಕರವಾಗಿದ್ದರೂ ಸುವಾಸನೆಯ ಮೊಸರು ಅಧಿಕ ಸಕ್ಕರೆಯನ್ನು ಹೊಂದಿರುತ್ತದೆ. ಇದು ತೂಕ ಹೆಚ್ಚಾಗುವುದು, ಟೈಪ್ 2 ಮಧುಮೇಹ ಮತ್ತು ಕೆಲವು ರೀತಿಯ ಕ್ಯಾನ್ಸರ್ ಬೆಳವಣಿಗೆಗೆ ಕಾರಣವಾಗುತ್ತದೆ.

Continue Reading

ಬಾಲಿವುಡ್

Asim Riaz: ಸ್ಪರ್ಧಿಯನ್ನು ಹೊರಗೆ ಹಾಕಿದ ʻಖತ್ರೋನ್ ಕೆ ಖಿಲಾಡಿʼ ಶೋ; ಪೋಸ್ಟ್‌ ಮೂಲಕ ಪರೋಕ್ಷವಾಗಿ ತಿರುಗೇಟು ಕೊಟ್ಟ ಅಸಿಮ್ ರಿಯಾಜ್!

Asim Riaz: ಖತ್ರೋನ್ ಕೆ ಖಿಲಾಡಿ 14 ರಿಂದ ಅಸಿಮ್ ರಿಯಾಜ್ ನಿರೂಪಕ ರೋಹಿತ್ ಶೆಟ್ಟಿ ಅವರೊಂದಿಗೆ ತೀವ್ರ ವಾಗ್ವಾದ ನಡೆದು, ಬಳಿಕ ಅವರನ್ನು ಕಾರ್ಯಕ್ರಮದಿಂದ ಹೊರಹಾಕಲಾಯಿತು.

VISTARANEWS.COM


on

Asim Riaz Drops Cryptic Post After Fight With Rohit Shetty
Koo

ಬೆಂಗಳೂರು: ವಾರಾಂತ್ಯದಲ್ಲಿ ಪ್ರಸಾರವಾದ ʻಖತ್ರೋನ್ ಕೆ ಖಿಲಾಡಿ 14ʼ (Khatron Ke Khiladi 14)ರಲ್ಲಿ ರೋಹಿತ್ ಶೆಟ್ಟಿ ಜತೆಗಿನ ಮೆಗಾ ಫೈಟ್‌ನಿಂದ ಅಸಿಮ್ ರಿಯಾಜ್ ಹೊರನಡೆಯುವಂತಾಗಿದೆ. ಕಾರ್ಯಕ್ರಮ ಮತ್ತು ನಿರೂಪಕರನ್ನು ‘ಅಗೌರವ’ ಮಾಡಿದ್ದಕ್ಕಾಗಿ ರಿಯಾಜ್‌ಗೆ ಈ ಗತಿ ಬಂದಿದೆ. ಬಿಗ್ ಬಾಸ್ 13′ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಮಾಡೆಲ್ ಆಸಿಮ್ ರಿಯಾಜ್ ಅವರು (Asim Riaz) ಸಹಸ್ಪರ್ಧಿ ಪಾರಸ್ ಛಾಬ್ರಾ, ಸಿದ್ದಾರ್ಥ್ ಶುಕ್ಲಾ ಜೊತೆಗೆ ಸಾಕಷ್ಟು ಬಾರಿ ಕದನಕ್ಕಿಳಿದಿದ್ದರು. ಅಸಿಮ್ ರಿಯಾಜ್ ಅವರು ಈ ಶೋನ ರನ್ನರ್ ಅಪ್ ಆಗಿದ್ದರು. ಆಸಿಮ್ ಅವರಿಗೆ ದೊಡ್ಡ ಮಟ್ಟದ ಅಭಿಮಾನಿ ಬಳಗವೂ ಇದೆ. ಈ ಘಟನೆ ಆದ ಬಳಿಕ ಅಸಿಮ್ ರಿಯಾಜ್ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

ಇತ್ತೀಚೆಗೆ, ಅಸಿಮ್ ರಿಯಾಜ್ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ನಾಲ್ಕು ನಾಯಿಗಳು ಮತ್ತು ಒಂದು ಚಿರತೆಯನ್ನು ಒಳಗೊಂಡಿರುವ ಚಿತ್ರ ಹಂಚಿಕೊಂಡಿದ್ದಾರೆ. ನಾಯಿಗಳು ಮುಂದೆ ನಿಂತಿದ್ದರೆ, ಚಿರತೆ ಹಿಂದೆ ಕುಳಿತಿರುವುದು ಕಂಡುಬಂದಿದೆ. “ಕೆಲವೊಮ್ಮೆ ನೀವು ಉತ್ತಮರು ಎಂದು ಸಾಬೀತುಪಡಿಸಲು ಪ್ರಯತ್ನಿಸುವುದು ಅವಮಾನಕ್ಕೆ ಕಾರಣವಾಗುತ್ತದೆ” ಎಂದು ಪರೋಕ್ಷವಾಗಿ ಈ ಘಟನೆ ಕುರಿತಂತೆ ಪೋಸ್ಟ್‌ ಮಾಡಿದ್ದಾರೆ.

ಖತ್ರೋನ್ ಕೆ ಖಿಲಾಡಿ 14 ರಿಂದ ಅಸಿಮ್ ರಿಯಾಜ್ ನಿರೂಪಕ ರೋಹಿತ್ ಶೆಟ್ಟಿ ಅವರೊಂದಿಗೆ ತೀವ್ರ ವಾಗ್ವಾದ ನಡೆದು, ಬಳಿಕ ಅವರನ್ನು ಕಾರ್ಯಕ್ರಮದಿಂದ ಹೊರಹಾಕಲಾಯಿತು.

ಇದನ್ನೂ ಓದಿ: Kannada New Movie: ಭಾರಿ ಮೊತ್ತಕ್ಕೆ ಮಾರಾಟವಾಯ್ತು ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಸಿನಿಮಾ ಆಡಿಯೊ ಹಕ್ಕು

ಆಶಿಶ್ ಮತ್ತು ನಿಯತಿ ಟಾಸ್ಕ್ ಮುಗಿಸಿ ಎಲಿಮಿನೇಷನ್ ನಿಂದ ಪಾರಾದರು. ಆದರೆ, ಅಸಿಮ್‌ಗೆ ಸಾಧ್ಯವಾಗಲಿಲ್ಲ. ಈ ಶೋನಲ್ಲಿ ಕೊಟ್ಟಿದ್ದ ಒಂದು ಟಾಸ್ಕ್‌ನ್ನು ಆಸಿಮ್ ಪೂರ್ಣ ಮಾಡಲು ಆಗಲಿಲ್ಲ, ಆಗ ಅವರು ಅಸಾಧ್ಯವಾದ ಸ್ಟಂಟ್ ಇಟ್ಟಿದ್ದೀರಿ ಎಂದು ಆಯೋಜಕರ ಬಳಿ ವಾದ ಮಾಡಿದ್ದಾರೆ. ಅಷ್ಟೇ ಅಲ್ಲದೆ ಆಯೋಜಕರಿಂದ ಅವರು ಒಂದು ರೂಪಾಯಿಯನ್ನು ತಗೊಳ್ಳೋದಿಲ್ಲ ಎಂದು ಹೇಳಿದ್ದಾರೆ.

“ನೀವು ಊಹಿಸಲೂ ಸಾಧ್ಯವಾಗದಷ್ಟು ಹಣ ನನ್ನ ಬಳಿ ಇದೆ. ಆರು ತಿಂಗಳಲ್ಲಿ ನಾಲ್ಕು ಕಾರು ಬದಲಾಯಿಸುತ್ತೇನೆ. ನನಗೆ ಹಣ ಬೇಕು ಎಂದು ನೀವು ಭಾವಿಸುತ್ತೀರಾ? ನಾನು ಇಲ್ಲಿರುವುದು ಅಭಿಮಾನಿಗಳಿಗಾಗಿಯೇ ಹೊರತು ಈ ಸೋತವರಿಗಾಗಿ ಅಲ್ಲ, ”ಎಂದು ಅವರು ಅಹಂನಿಂದಲೇ ಹೇಳಿದ್ದಾರೆ.

ಅಷ್ಟೇ ಅಲ್ಲದೆ ಸಹಸ್ಪರ್ಧಿಗಳನ್ನು ‘ಹೇಡಿಗಳು’ ಎಂತಲೂ ಕರೆದಿದ್ದಾರೆ. ಇನ್ನು ಆ ಟಾಸ್ಕ್‌ನ ರಿಹರ್ಸಲ್ ವಿಡಿಯೋ ನೋಡಿದ ನಂತರದಲ್ಲಿ ಕ್ಷಮೆ ಕೇಳಿದ್ದಾರೆ. ಇನ್ನು ರೋಹಿತ್‌ ಕೂಡ “ನಿನ್ನ ಸಮಸ್ಯೆ ಏನು? ನನ್ನ ಮಾತು ಕೇಳು, ಇಲ್ಲದಿದ್ದರೆ ಎತ್ತಿ ಹಾಕಿ ಬಿಸಾಕುವೆ” ಎಂದು ಎಚ್ಚರಿಕೆ ಕೊಟ್ಟಿದ್ದರು. ಅದರಂತೆ ಹೊರಗೆ ಹಾಕಲಾಗಿದೆ.

Continue Reading

ಸಿನಿಮಾ

Ranbir Kapoor: ಮುದ್ದಿನ ಮಡದಿ ಅಲಿಯಾ ಕುರಿತ ಸೀಕ್ರೆಟ್ ಮಾಹಿತಿ ಹಂಚಿಕೊಂಡ ರಣಬೀರ್!

ಪಾಡ್ ಕಾಸ್ಟ್ ಸಂದರ್ಶನದಲ್ಲಿ ಇತ್ತೀಚೆಗೆ ರಣಬೀರ್ ಕಪೂರ್ (Ranbir Kapoor) ಅವರು ಆಲಿಯಾ ಅವರೊಂದಿಗಿನ ಮದುವೆಯ ಬಗ್ಗೆ, ಮಗಳು ರಹಾ ಬಗ್ಗೆ, ಅಲಿಯಾ ಮತ್ತು ತಮ್ಮ ನಡುವೆ ಇರುವ ವಯಸ್ಸಿನ ಅಂತರ, ಸಂಬಂಧಗಳ ಕುರಿತಾಗಿ ನಿಖಿಲ್ ಕಾಮತ್ ಅವರೊಂದಿಗೆ ಮುಕ್ತವಾಗಿ ಮಾತನಾಡಿದ್ದಾರೆ.

VISTARANEWS.COM


on

By

Ranbir Kapoor
Koo

ಬಾಲಿವುಡ್‌ನ ಕ್ಯೂಟ್ ಕಪಲ್ (Bollywood Cute couple) ಎಂದೇ ಕರೆಯಲ್ಪಡುವ ರಣಬೀರ್ ಕಪೂರ್ (Ranbir Kapoor) ಮತ್ತು ಅಲಿಯಾ ಭಟ್ (Alia Bhatt) 2022ರಲ್ಲಿ ದಾಂಪತ್ಯ ಜೀವನಕ್ಕೆ ಪ್ರವೇಶ ಪಡೆದಿದ್ದು, ಇವರಿಗೆ ಮುದ್ದಾದ ಮಗಳಿದ್ದಾಳೆ. ಇತ್ತೀಚೆಗೆ ಪಾಡ್ ಕಾಸ್ಟ್ ಸಂದರ್ಶನದಲ್ಲಿ (Podcast interview) ರಣಬೀರ್ ಕಪೂರ್ ಅವರು ಆಲಿಯಾ ಅವರೊಂದಿಗಿನ ಮದುವೆಯ ಬಗ್ಗೆ, ತಮ್ಮ ನಡುವೆ ಇರುವ ವಯಸ್ಸಿನ ಅಂತರ ಕುರಿತು ನಿಖಿಲ್ ಕಾಮತ್ ಅವರೊಂದಿಗೆ ಮುಕ್ತವಾಗಿ ಮಾತನಾಡಿದ್ದಾರೆ.

ತಮ್ಮ ಮಾತಿನಲ್ಲಿ ರಣಬೀರ್, ನಾನು ತುಂಬಾ ಅದೃಷ್ಟಶಾಲಿ. ನಾನು ಮದುವೆಯಾಗಿರುವವರೊಂದಿಗೆ ಸ್ನೇಹಿತರಂತೆ ತುಂಬಾ ಹತ್ತಿರವಾಗಿದ್ದೇನೆ. ಅವರೊಂದಿಗೆ ನಾನು ಚಾಟ್ ಮಾಡಬಹುದು, ನಗಬಹುದು. ಅವಳು ನನ್ನ ಬೆಸ್ಟ್ ಫ್ರೆಂಡ್ ಹಾಗೆ. ಹೀಗಾಗಿ ನಾನು ನಿಜವಾಗಿಯೂ ಅದೃಷ್ಟಶಾಲಿಯಾಗಿದ್ದೇನೆ ಎಂದು ಹೇಳಿದ್ದಾರೆ.

ಆಲಿಯಾ ಅದ್ಭುತ ವ್ಯಕ್ತಿ. ನನಗಿಂತ 11 ವರ್ಷ ಚಿಕ್ಕವಳು. ಇದು ತುಂಬಾ ತಮಾಷೆಯಾಗಿದೆ; ಸಂಜಯ್ ಲೀಲಾ ಬನ್ಸಾಲಿಯವರು ಬಾಲ್ಯವಿವಾಹದ ಕುರಿತು ‘ಬಾಲಿಕಾ ವಧು’ ಎಂಬ ಚಿತ್ರವನ್ನು ನಿರ್ಮಿಸಲು ಬಯಸಿದ್ದರಿಂದ ನಾನು ಆಲಿಯಾಳನ್ನು 9 ವರ್ಷ ಮತ್ತು ನಾನು 20 ವರ್ಷದವಳಿದ್ದಾಗ ಮೊದಲ ಬಾರಿಗೆ ಭೇಟಿಯಾದೆ. ನಾವು ಒಟ್ಟಿಗೆ ಫೋಟೋಶೂಟ್ ಮಾಡಿದ್ದೇವೆ ಎಂದು ತಿಳಿಸಿದರು.

ಆಲಿಯಾಳನ್ನು ನಾನು ಭೇಟಿಯಾದ ವಿಶೇಷ ವ್ಯಕ್ತಿ ಎಂದೇ ಭಾವಿಸಿದೆ. ನಟ, ಕಲಾವಿದ, ವ್ಯಕ್ತಿ, ಮಗಳು ಮತ್ತು ಸಹೋದರಿಯಾಗಿ ನನಗೆ ಅವಳ ಬಗ್ಗೆ ಅಪಾರ ಗೌರವವಿದೆ. ಅವಳು ನಿಜವಾಗಿಯೂ ನನ್ನನ್ನು ನಗಿಸುತ್ತಾಳೆ. ನಾನು ಅವಳೊಂದಿಗೆ ರಜೆಯಲ್ಲಿ ಹೋಗಲು ಇಷ್ಟಪಡುತ್ತೇನೆ. ಅಂತೆಯೇ ನಾನು ಅವಳೊಂದಿಗೆ ಮನೆಯಲ್ಲಿರಲು ಇಷ್ಟಪಡುತ್ತೇನೆ ಎಂದು ಹೇಳಿದರು.

Ranbir Kapoor
Ranbir Kapoor


ಅಲಿಯಾ ಮಹತ್ವಾಕಾಂಕ್ಷೆಯುಳ್ಳವಳು ಮತ್ತು ಅತಿಯಾಗಿ ಸಾಧಿಸುವವಳು. ಕೆಲಸವೆಂದರೆ ಅವಳು ತುಂಬಾ ಉತ್ಸಾಹಭರಿತಳು. ಅತ್ಯಂತ ಭಾವೋದ್ರಿಕ್ತ, ಅತ್ಯಂತ ಬುದ್ಧಿವಂತೆಯೂ ಹೌದು. ನಾನು ಮಾತನಾಡುವಾಗ ಅವಳು ಕೇಳುತ್ತಾಳೆ. ನಮ್ಮಿಬ್ಬರ ಸಂಬಂಧದಲ್ಲಿ ಅವಳು ಹೆಚ್ಚು ಪ್ರಯತ್ನ ಮಾಡಿದ್ದಾಳೆ ಎಂದು ತಿಳಿಸಿದರು.

ಆಲಿಯಾ ತನಗಾಗಿ ಹೆಚ್ಚು ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ಒಪ್ಪಿಕೊಂಡ ರಣಬೀರ್, ನಾನು ಅವಳಿಗಾಗಿ ಬದಲಾದದ್ದಕ್ಕಿಂತ ಅವಳು ನನಗಾಗಿ ಹೆಚ್ಚು ಬದಲಾಗಿದ್ದಾಳೆ. ನಾನು ಅದನ್ನು ಒಪ್ಪಿಕೊಳ್ಳುತ್ತಿದ್ದೇನೆ. ಆದರೆ ನಾನು ಅವಳಿಗಾಗಿ ಏನಾದರೂ ಮಾಡಬೇಕು, ನಾನು ಸ್ವಲ್ಪ ಬದಲಾಗಬೇಕು…


ಅವಳು ತುಂಬಾ ಜೋರಾಗಿ ಮಾತನಾಡುತ್ತಿದ್ದಳು. ನನ್ನ ತಂದೆಯ ಸ್ವರವು ಗಟ್ಟಿಯಾಗಿದ್ದ ಕಾರಣ ಯಾವಾಗಲೂ ನಮ್ಮ ನಡುವೆ ಗಲಾಟೆ ನಡೆಯುತ್ತಿತ್ತು. ಆದ್ದರಿಂದ ಅವಳು ನಿಜವಾಗಿಯೂ ಬದಲಾಯಿಸಲು ಪ್ರಯತ್ನಗಳನ್ನು ಮಾಡಿದಳು ಮತ್ತು ಅದು ಸುಲಭವಲ್ಲ. ಜೀವನದ 30 ವರ್ಷಗಳನ್ನು ನಿರ್ದಿಷ್ಟ ರೀತಿಯಲ್ಲಿ ಮಾತನಾಡುತ್ತಿದ್ದುದನ್ನು ಬದಲಾಯಿಸುವುದು ಸುಲಭವಲ್ಲ. ಅವಳು ನನಗೆ ನಿರಾಳವಾಗಿಸುವ ಕೆಲವು ವಿಷಯಗಳನ್ನು ಮಾಡುತ್ತಾಳೆ. ಅವಳ ಹುಟ್ಟುಹಬ್ಬದಂದು ನಾನು ಒಮ್ಮೆ ಕೇಕ್ ಅನ್ನು ತಯಾರಿಸಿದೆ ಎಂಬುದನ್ನು ಈ ವೇಳೆ ಹಂಚಿಕೊಂಡರು.

ಇದನ್ನೂ ಓದಿ: Martin Movie: ಆ.4ಕ್ಕೆ ಮಾರ್ಟಿನ್ ಚಿತ್ರದ ಟ್ರೈಲರ್‌ 1 ರಿಲೀಸ್‌; ವಿಎಫ್‌ಎಕ್ಸ್‌ ವಂಚನೆ ಬಗ್ಗೆ ನಿರ್ಮಾಪಕ ಹೇಳಿದ್ದೇನು?

ನಾವು ಡೇಟಿಂಗ್ ಪ್ರಾರಂಭಿಸಿದ ಮೊದಲ ವರ್ಷದಿಂದ ಒಟ್ಟಿಗೆ ವಾಸಿಸುತ್ತಿದ್ದೇವೆ. 2018ರಲ್ಲಿ ಬ್ರಹ್ಮಾಸ್ತ್ರ ಎಂಬ ಚಿತ್ರವನ್ನು ಮಾಡಿದ್ದೇವೆ. ಸಾಂಕ್ರಾಮಿಕ ಸಮಯದಲ್ಲಿ ನಾವು ಒಟ್ಟಿಗೆ ವಾಸಿಸುತ್ತಿದ್ದಾಗ ನಮ್ಮ ಸಂಬಂಧವು ಗಟ್ಟಿಯಾಯಿತು ಎಂದು ಅವರು ಹೇಳಿದರು.

Continue Reading

ಸಿನಿಮಾ

Aryan Khan: ದಿಲ್ಲಿಯ ಸಣ್ಣ ಮನೆಯಲ್ಲಿದ್ದ ಶಾರುಖ್‌ ದಂಪತಿ; ಅಲ್ಲಿನ ಬಂಗಲೆಯನ್ನು 37 ಕೋಟಿ ರೂ.ಗೆ ಖರೀದಿಸಿದ ಪುತ್ರ!

ಆರ್ಯನ್ ಖಾನ್ (Aryan Khan) ಅವರು ದಕ್ಷಿಣ ದೆಹಲಿಯ ಪಂಚಶೀಲ್ ಪಾರ್ಕ್‌ನಲ್ಲಿ 37 ಕೋಟಿ ರೂ. ಮೌಲ್ಯದ ಎರಡು ಮಹಡಿಯ ಬಂಗಲೆಯನ್ನು ಖರೀದಿಸಿದ್ದಾರೆ. ಶಾರುಖ್ ಖಾನ್ ಮತ್ತು ಅವರ ಪತ್ನಿ ಗೌರಿ ಖಾನ್ ತಮ್ಮ ಆರಂಭಿಕ ದಿನಗಳಲ್ಲಿ ಇದೇ ಕಟ್ಟಡದ ನೆಲಮಾಳಿಗೆ ಮತ್ತು ನೆಲಮಹಡಿಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.

VISTARANEWS.COM


on

By

Aryan Khan
Koo

ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಅವರ ಪುತ್ರ (son of shah rukh khan) ಆರ್ಯನ್ ಖಾನ್ (Aryan Khan:) ತಮ್ಮ ಚೊಚ್ಚಲ ನಿರ್ದೇಶನದ ಶೋ ‘ಸ್ಟಾರ್‌ಡಮ್’ (stardom) ಮೂಲಕ ಬಾಲಿವುಡ್‌ಗೆ (bollywood) ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಈ ನಡುವೆ ಅವರು ಈಗ ದೆಹಲಿಯಲ್ಲಿ 37 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಬಂಗಲೆಯನ್ನು (luxury property) ಖರೀದಿಸಿದ್ದಾರೆ.

ಆರ್ಯನ್ ಖಾನ್ ಅವರು ದಕ್ಷಿಣ ದೆಹಲಿಯ ಪಂಚಶೀಲ್ ಪಾರ್ಕ್‌ನಲ್ಲಿ 37 ಕೋಟಿ ರೂ. ಮೌಲ್ಯದ ಎರಡು ಮಹಡಿಯ ಬಂಗಲೆಯನ್ನು ಖರೀದಿಸಿದ್ದಾರೆ. ಶಾರುಖ್ ಖಾನ್ ಮತ್ತು ಅವರ ಪತ್ನಿ ಗೌರಿ ಖಾನ್ ತಮ್ಮ ಆರಂಭಿಕ ದಿನಗಳಲ್ಲಿ ಇದೇ ಕಟ್ಟಡದ ನೆಲಮಾಳಿಗೆ ಮತ್ತು ನೆಲಮಹಡಿಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.

ಆರ್ಯನ್ ಖಾನ್ ಅವರ ಖರೀದಿಯ ವಹಿವಾಟನ್ನು ಮೇ 2024ರಲ್ಲಿ ನೋಂದಾಯಿಸಲಾಗಿದ್ದು 2.64 ಕೋಟಿ ರೂಪಾಯಿಗಳ ಮುದ್ರಾಂಕ ಶುಲ್ಕವನ್ನು ಪಾವತಿಸಲಾಗಿದೆ. ವರದಿಯ ಪ್ರಕಾರ, ಆರ್ಯನ್ ಅವರ ತಾಯಿ ಪ್ರಸಿದ್ಧ ಇಂಟೀರಿಯರ್ ಡಿಸೈನರ್ ಗೌರಿ ಖಾನ್ ಅವರು ಮನೆಯನ್ನು ವಿನ್ಯಾಸಗೊಳಿಸಿದ್ದಾರೆ. ಇದು ದಂಪತಿಗೆ ಭಾವನಾತ್ಮಕ ಮಹತ್ವವನ್ನು ಹೊಂದಿದೆ. ಯಾಕೆಂದರೆ ಇದು ಅವರು ಮೊದಲು ಭೇಟಿಯಾದ ನಗರವಾಗಿದೆ.

Aryan Khan
Aryan Khan


ಶಾರುಖ್ ಖಾನ್ ಅವರು ಪಂಚಶೀಲ್ ಪಾರ್ಕ್‌ನಲ್ಲಿ 27,000 ಚದರ ಅಡಿ ವಿಸ್ತೀರ್ಣ ಹೊಂದಿರುವ ಹೆರಿಟೇಜ್ ವಿಲ್ಲಾವನ್ನು ಹೊಂದಿದ್ದಾರೆ. ಅವರು 2001ರಲ್ಲಿ 13 ಕೋಟಿ ರೂ. ಗೆ ಈ ಆಸ್ತಿಯನ್ನು ಖರೀದಿಸಿದ್ದರು. ಅದರ ಮೌಲ್ಯ ಈಗ ಸುಮಾರು 200 ಕೋಟಿ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: Bollywood Divorce Case: ವಿಚ್ಛೇದನದ ಬಳಿಕ ಪತ್ನಿಗೆ ದುಬಾರಿ ʼಜೀವನಾಂಶʼ ನೀಡಿದ ಬಾಲಿವುಡ್ ಸ್ಟಾರ್‌ಗಳಿವರು!


ಆರ್ಯನ್ ಖಾನ್ ತಮ್ಮ ನಿರ್ದೇಶನದ ಚೊಚ್ಚಲ ವೆಬ್‌ ಸಿರೀಸ್‌ ʼಸ್ಟಾರ್‌ಡಮ್‌ʼನೊಂದಿಗೆ ತೆರೆಗೆ ಬರಲು ಸಿದ್ಧರಾಗಿದ್ದಾರೆ. ಇದರಲ್ಲಿ ಅವರು ಪ್ರಮುಖ ನಾಯಕರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಶಾರುಖ್ ಖಾನ್, ರಣಬೀರ್ ಕಪೂರ್ ಮತ್ತು ರಣವೀರ್ ಸಿಂಗ್ ಅತಿಥಿ ಪಾತ್ರದಲ್ಲಿ ಬಾಬಿ ಡಿಯೋಲ್ ಮತ್ತು ಮೋನಾ ಕಪೂರ್ ಮಹತ್ವದ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.

Continue Reading
Advertisement
Crocodile Attack
Latest28 seconds ago

Crocodile Attack: ತಂದೆಯ ಜೀವ ಉಳಿಸಲು ಮೊಸಳೆ ಬಾಯಿಗೆ ಕೈ ಹಾಕಿದ ಬಾಲಕ!

Viral Video
Latest3 mins ago

Viral Video: ನಾಗದೇವತೆ ವಿಗ್ರಹದ ಮೇಲೆ ಹೆಡೆ ಬಿಚ್ಚಿ ನಿಂತ ನಾಗರ ಹಾವು!

Nutrients For The Human Body
ಆರೋಗ್ಯ6 mins ago

Nutrients For The Human Body: ನಮ್ಮ ದೇಹವೆಂಬ ಕಾರ್ಯಾಲಯದಲ್ಲಿ ಕೆಲಸ ಮಾಡುವ 22 ಪೋಷಕಾಂಶಗಳ ಬಗ್ಗೆ ನಿಮಗೆ ಗೊತ್ತೇ?

Our government has changed the concept of Anganwadi says Minister Lakshmi Hebbalkar
ಕರ್ನಾಟಕ15 mins ago

Lakshmi Hebbalkar: ಅಂಗನವಾಡಿ ಪರಿಕಲ್ಪನೆಯನ್ನೇ ನಮ್ಮ ಸರ್ಕಾರ ಬದಲಾಯಿಸಿದೆ; ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Congress government
ಕರ್ನಾಟಕ24 mins ago

Congress government: ನಮ್ಮ ಸರ್ಕಾರ ಅಲುಗಾಡಿಸಿದರೆ ರಕ್ತಕ್ರಾಂತಿ ಆಗುತ್ತೆ: ಕೆ.ಎಂ.ಶಿವಲಿಂಗೇಗೌಡ ಎಚ್ಚರಿಕೆ

Nino Salukvadze
ಕ್ರೀಡೆ44 mins ago

Nino Salukvadze: ತಂದೆಯ ಆಸೆಯಂತೆ 10ನೇ ಒಲಿಂಪಿಕ್ಸ್ ಆಡಿ ದಾಖಲೆ ಬರೆದ ಜಾರ್ಜಿಯಾದ ಮಹಿಳಾ ಶೂಟರ್‌

2100 crore rupees investment in the state by Sunsera Company; Sign the agreement
ಇನ್ವೆಸ್ಟ್ ಕರ್ನಾಟಕ48 mins ago

Invest Karnataka: ಸನ್ಸೇರಾ ಕಂಪನಿಯಿಂದ ರಾಜ್ಯದಲ್ಲಿ 2,100 ಕೋಟಿ ರೂ. ಹೂಡಿಕೆ; ರಾಮನಗರದಲ್ಲಿ ಘಟಕ

Kaftan Kurta Fashion
ಫ್ಯಾಷನ್50 mins ago

Kaftan Kurta Fashion: ಸಿಂಪಲ್‌ ಲುಕ್‌ಗೆ ಸಾಥ್‌ ನೀಡುವ ದೊಗಲೆ ಕಫ್ತಾನ್‌ ಕುರ್ತಾ!

Paris Olympics
ಕ್ರೀಡೆ50 mins ago

Paris Olympics: ಒಲಿಂಪಿಕ್ಸ್​ನಲ್ಲಿ ನಾಳೆ ಭಾರತದ ಸ್ಪರ್ಧೆಗಳ ವೇಳಾಪಟ್ಟಿ ಹೀಗಿದೆ; 4 ಪದಕ ನಿರೀಕ್ಷೆ!

Toyota company investment in the state will continue as usual says Minister MB Patil
ಕರ್ನಾಟಕ50 mins ago

MB Patil: ರಾಜ್ಯದಲ್ಲಿ ಟೊಯೋಟಾ ಕಂಪನಿಯ ಹೂಡಿಕೆ ಅಬಾಧಿತ; ಸಚಿವ ಎಂ‌.ಬಿ. ಪಾಟೀಲ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ1 day ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 day ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ2 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ2 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ2 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ3 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ3 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ3 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ3 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

ಟ್ರೆಂಡಿಂಗ್‌