Arjun Rampal: ಅಕ್ರಮ ಸಂಬಂಧ ಕೆಲವರಿಗೆ ಚಟ, ಮಹಿಳೆಗಾಗಿ ಹಪಹಪಿಸುವುದನ್ನು ನಾನು ನೋಡಿದ್ದೇನೆ ಎಂದ ಖ್ಯಾತ ಬಾಲಿವುಡ್‌ ನಟ! - Vistara News

ಬಾಲಿವುಡ್

Arjun Rampal: ಅಕ್ರಮ ಸಂಬಂಧ ಕೆಲವರಿಗೆ ಚಟ, ಮಹಿಳೆಗಾಗಿ ಹಪಹಪಿಸುವುದನ್ನು ನಾನು ನೋಡಿದ್ದೇನೆ ಎಂದ ಖ್ಯಾತ ಬಾಲಿವುಡ್‌ ನಟ!

Arjun Rampal: ಅರ್ಜುನ್ ಈ ಹಿಂದೆ 1998 ರಿಂದ 2019 ರವರೆಗೆ ಮೆಹರ್ ಜೆಸಿಯಾ ಅವರನ್ನು ವಿವಾಹವಾದರು. ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಈಗ ಗೇಬ್ರಿಯೆಲಾ ಡಿಮೆಟ್ರಿಯಡ್ಸ್ ಜೊತೆ ಸಂಬಂಧ ಹೊಂದಿದ್ದಾರೆ. ನಟನಿಗೆ ಎರಡು ಗಂಡು ಮಕ್ಕಳು. ಆದರೆ, ಅರ್ಜುನ್ ಮತ್ತು ಗೇಬ್ರಿಯೆಲಾ ಅವಿವಾಹಿತರಾಗಿಯೇ ಉಳಿದಿದ್ದಾರೆ.

VISTARANEWS.COM


on

Arjun Rampal Says He Knows A Lot Of People Who Need Another Woman
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಪ್ಯಾರ್ ಇಷ್ಕ್ ಔರ್ ಮೊಹಬ್ಬತ್ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ ಅರ್ಜುನ್ ರಾಂಪಾಲ್ (Arjun Rampal), ಆ ನಂತರ ದಿವಾನಾಪನ್.. ಆಂಖೆ.. ದಿಲ್ ಹೈ ತುಮ್ಹಾರಾ.. ದಿಲ್ ಕಾ ರಿಷ್ತಾ.. ಅಸಂಭವ್.. ವಾದಾ.. ಹೀಗೆ ಒಂದಾದ ಮೇಲೊಂದು ಸಿನಿಮಾಗಳಲ್ಲಿ ನಾಯಕನಾಗಿ ಮಿಂಚಿದರು. ಇದೀಗ ಸಂದರ್ಶನವೊಂದರಲ್ಲಿ ಪ್ರೇಮ,ಮದುವೆ,ವಿಚ್ಛೇದನ,ಲಿವ್ ಇನ್ ರಿಲೇಶಿನ್‌ಶಿಫ್ ಬಗ್ಗೆ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ನಟ ಮಾತನಾಡಿ, “ನಾನು ಸೆಕ್ಸ್ ಅನ್ನು ಪ್ರೀತಿಸುತ್ತೇನೆ. ಲೈಂಗಿಕತೆಯು ನಿಮ್ಮ ಜೀವನದ ಒಂದು ಪ್ರಮುಖ ಭಾಗವಾಗಿದೆ ಎಂದು ನಾನು ಭಾವಿಸುತ್ತೇನೆ. ಹೌದು, ಒಬ್ಬ ಸಂಗಾತಿಯೊಂದಿಗೆ ಇರುವುದು ಇನ್ನೂ ಮುಖ್ಯ ಎಂದು ನಾನು ಭಾವಿಸುತ್ತೇನೆ. ನೀವು ಹಾಸಿಗೆಯನ್ನು ಹಂಚಿಕೊಳ್ಳುವಾಗ, ಶಕ್ತಿಯ ವಿನಿಮಯವಾಗುತ್ತದೆ. ನಮ್ಮ ಸಂಗಾತಿಯ ಜತೆ ಹಾಸಿಗೆ ಹಂಚಿಕೊಳ್ಳುವಾಗ ಅಲ್ಲೇನೋ ಒಂದು ರೀತಿಯ ಶಕ್ತಿ ಅಡಗಿದೆ ಎಂದು ನಾನು ಅಂದುಕೊಂಡಿದ್ದೇನೆ ಎಂದಿರುವ ಅರ್ಜುನ್ ರಾಂಪಾಲ್ ಲೈಂಗಿಕ ಕ್ರಿಯೆಯಲ್ಲಿ ದೊಡ್ಡ ಶಕ್ತಿ ವಿನಿಮಯವಾಗುತ್ತೆ ಎಂದು ಆ ಕ್ಷಣಕ್ಕೆ ನಮಗೆ ಗೊತ್ತಿರಲ್ಲ. ಆದರೆ ಆಗ ನಮ್ಮ ಡಿಎನ್ಎ ಎಲ್ಲೋ ಹೋಗಿರುತ್ತದೆ. ಆದ್ದರಿಂದ ಲೈಂಗಿಕತೆ ಅವಶ್ಯಕವಾಗಿ ಬೇಕುʼʼ ಎಂದು ಕೂಡ ಹೇಳಿದ್ದಾರೆ.

ಇದನ್ನೂ ಓದಿ: Krishnam Pranaya Sakhi: ಕೃಷ್ಣಂ ಪ್ರಣಯ ಸಖಿ ಸಿನಿಮಾದ 4ನೇ ಹಾಡು ಔಟ್;‌ ರೊಮ್ಯಾಂಟಿಕ್‌ ಸಾಂಗ್ ಇಲ್ಲಿ ಕೇಳಿ!

ಅಕ್ರಮ ಸಂಬಂಧದ ಬಗ್ಗೆಯೂ ಮಾತನಾಡಿರುವ ಅರ್ಜುನ್ ರಾಂಪಾಲ್, ಮದುವೆಯಾದರೂ ಅಕ್ರಮ ಸಂಬಂಧಕ್ಕೆ ಕೆಲವರು ಹಾತೊರೆಯುತ್ತಾರೆ ಅಂದರೆ ಅದು ಅವರ ಚಟ ಎಂದಿದ್ದಾರೆ. ಅಭ್ಯಾಸ ಎಂದಿದ್ದಾರೆ.”ಇದು ಒಂದು ಚಟ, ಇದು ಜನರು ತಮಗಾಗಿಯೇ ರಚಿಸಿಕೊಂಡಿರುವ ಅಭ್ಯಾಸವಾಗಿದೆ. ಮಹಿಳೆಗಾಗಿ ಹಪಹಪಿಸುವುದನ್ನು ನಾನು ನೋಡಿದ್ದೇನೆ ಎಂದಿರುವ ಅರ್ಜುನ್ ರಾಂಪಾಲ್, ಅವರದ್ದು ಅದ್ಹೇಗೆ ಸುಖಿ ದಾಂಪತ್ಯವಾಗುತ್ತೆ ಎನ್ನುವುದು ನನಗೆ ಈಗಲೂ ಅರ್ಥವಾಗುತ್ತಿಲ್ಲ ಎಂದಿದ್ದಾರೆ. ವಿವಾಹೇತರ ಸಂಬಂಧ ಚಟವಾದರೂ ಅದು ಯಾವತ್ತು ಒಳ್ಳೇಯದಲ್ಲʼʼಎಂದರು.

ಅರ್ಜುನ್ ಈ ಹಿಂದೆ 1998 ರಿಂದ 2019 ರವರೆಗೆ ಮೆಹರ್ ಜೆಸಿಯಾ ಅವರನ್ನು ವಿವಾಹವಾದರು. ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಈಗ ಗೇಬ್ರಿಯೆಲಾ ಡಿಮೆಟ್ರಿಯಡ್ಸ್ ಜೊತೆ ಸಂಬಂಧ ಹೊಂದಿದ್ದಾರೆ. ನಟನಿಗೆ ಎರಡು ಗಂಡು ಮಕ್ಕಳು. ಆದರೆ, ಅರ್ಜುನ್ ಮತ್ತು ಗೇಬ್ರಿಯೆಲಾ ಅವಿವಾಹಿತರಾಗಿಯೇ ಉಳಿದಿದ್ದಾರೆ.

ಅರ್ಜುನ್ ರಾಂಪಾಲ್ ಮತ್ತು ಗೇಬ್ರಿಯೆಲಾ ಡಿಮೆಟ್ರಿಯಾಡ್ಸ್ ಐದು ವರ್ಷಗಳಿಂದ ಒಟ್ಟಿಗೆ ಇದ್ದಾರೆ. ಆದರೆ ಮದುವೆಯಾಗಲು ನಿರ್ಧರಿಸಿಲ್ಲ.

ಚಿಕ್ಕ ವಯಸ್ಸಿನಲ್ಲಿಯೇ ತನಗಿಂತ ಹಿರಿಯರಾದ ಮಾಡೆಲ್ ಮೆಹರ್ ಜೆಸಿಯಾ ಅವರನ್ನು 1998ರಲ್ಲಿ ಮದುವೆಯಾದರು.ಇಬ್ಬರು ಮುದ್ದಾದ ಹೆಣ್ಣು ಮಕ್ಕಳ ತಂದೆಯಾದ ಮೇಲೂ ಅರ್ಜುನ್ ರಾಂಪಾಲ್ ತಮ್ಮ 20 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದರು. ಮಹಿಕಾ ಮತ್ತು ಮೈರಾ ಅವರನ್ನು ಅವರ ತಾಯಿ ಮೆಹರ್ ಜೊತೆಯಲ್ಲಿಯೇ ಇರುವಂತೆ ಹೇಳಿ ವಿಚ್ಛೇದನವನ್ನು ಪಡೆದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Amitabh Bachchan: ʼಕೌನ್‌ ಬನೇಗಾ ಕರೋಡ್‌ಪತಿʼ ಸ್ಪರ್ಧಿಗಳ ಎದುರು ನಾನು ಅಸಹಾಯಕ; ಅಮಿತಾಭ್‌ ಹೀಗೆ ಹೇಳಿದ್ದೇಕೆ?

ʼಕೌನ್ ಬನೇಗಾ ಕರೋಡ್‌ ಪತಿʼಯ ಹೊಸ ಸೀಸನ್ ಕುರಿತು ವಿವರ ಹಂಚಿಕೊಂಡ ಬಿಗ್ ಬಿ ಅಮಿತಾಭ್‌ ಬಚ್ಚನ್ (Amitabh Bachchan) ಅಸಹಾಯಕ ಭಾವನೆ ವ್ಯಕ್ತಪಡಿಸಿದ್ದಾರೆ. ಅವರು ʼಕೌನ್ ಬನೇಗಾ ಕರೋಡ್ ಪತಿʼ ಸರಣಿಯಲ್ಲಿ ಹಾಟ್ ಸೀಟ್‌ನಲ್ಲಿ ಕುಳಿತುಕೊಳ್ಳುವ ಸ್ಪರ್ಧಿಗಳ ಹೋರಾಟದ ಬಗ್ಗೆ ತಮ್ಮ ಪೋಸ್ಟ್‌ನಲ್ಲಿ ವಿವರವಾಗಿ ಹೇಳಿಕೊಂಡಿದ್ದಾರೆ.

VISTARANEWS.COM


on

By

Amitabh Bachchan
Koo

ಅಸಹಾಯಕನಾಗಿದ್ದೇನೆ ಎಂದೆನಿಸುತ್ತಿದೆ ಎಂಬುದಾಗಿ ಬಿಗ್ ಬಿ (big b) ಅಮಿತಾಭ್ ಬಚ್ಚನ್ (Amitabh Bachchan) ತಮ್ಮ ಹೊಸ ಬ್ಲಾಗ್ ಪೋಸ್ಟ್ ನಲ್ಲಿ (new blog) ಹೇಳಿಕೊಂಡಿದ್ದಾರೆ. ಕೌನ್ ಬನೇಗಾ ಕರೋಡ್ ಪತಿಯ (Kaun Banega Crorepati) ಹೊಸ ಸೀಸನ್ ಬಗ್ಗೆ ವಿವರ ಹಂಚಿಕೊಂಡ ಅವರು‌, ಸ್ಪರ್ಧಿಗಳ ಪೈಪೋಟಿಯ ಬಗ್ಗೆ ತಿಳಿಸಿದ್ದಾರೆ. ಜೊತೆಗೆ ಕೆಬಿಸಿ ಸೆಟ್‌ಗಳ ಕೆಲವು ದೃಶ್ಯಗಳನ್ನು ಹಂಚಿಕೊಂಡಿದ್ದಾರೆ.

ಕೌನ್ ಬನೇಗಾ ಕರೋಡ್ ಪತಿ ಸೆಟ್‌ಗಳಿಂದ ಹಿಂತಿರುಗಿದ್ದ ಅವರು ಹಾಟ್ ಸೀಟ್‌ನಲ್ಲಿ ಕುಳಿತಿರುವ ಸ್ಪರ್ಧಿಗಳ ಕೆಲವು ಕಥೆಗಳಿಗೆ ನಾನು ಸಾಕ್ಷಿಯಾಗಿದ್ದೇನೆ ಎಂದು ಹೇಳಿದ್ದಾರೆ. ಬದುಕಿನಲ್ಲಿ ಸಾಕಷ್ಟು ನೋವುಂಡಿದ್ದರೂ ಅವರು ಯಾವಾಗಲೂ ಹಾಟ್‌ಸೀಟ್‌ನಲ್ಲಿ ದೊಡ್ಡ ನಗುವಿನೊಂದಿಗೆ ಕುಳಿತುಕೊಳ್ಳುತ್ತಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಆಟಗಳಲ್ಲಿ ಕೆಲವು ಹೊಸ ಹೊಸ ಆಸಕ್ತಿದಾಯಕ ಬದಲಾವಣೆಗಳು, ಅದು ಬೀರುವ ಪ್ರಭಾವ ಮತ್ತು ಕಲಿಕೆಗಳು ಸಾಕಷ್ಟು. ಆದರೆ ಎಲ್ಲಕ್ಕಿಂತ ಹೆಚ್ಚಾಗಿ ‘ಭಾವನೆಗಳು’. ನಮ್ಮ ಮುಂದೆ ಸ್ಪರ್ಧಿಯ ಫಲಿತಾಂಶವು ಅವನ ಅಥವಾ ಅವಳ ಕಥೆಯನ್ನು ವಿವರಿಸುವಾಗ ಅದು ಎಲ್ಲವನ್ನೂ ಮೀರಿಸುತ್ತದೆ. ಬದುಕಿನಲ್ಲಿ ಸಾಕಷ್ಟು ಕಷ್ಟ ಪಟ್ಟಿರುವ ಅವರು ಹಾಟ್ ಸೀಟ್‌ನಲ್ಲಿ ತಮ್ಮನ್ನು ತಾವು ಕಂಡುಕೊಳ್ಳುತ್ತಾರೆ. ಅವರ ಆ ಕ್ಷಣದ ಭಾವನೆಯನ್ನು ವರ್ಣಿಸಲಾಗದು ಎಂದು ಅವರು ಬ್ಲಾಗ್‌ನಲ್ಲಿ ಹೇಳಿಕೊಂಡಿದ್ದಾರೆ.

ಇದು ನಿರಂತರ ಮುಂದುವರಿಯುತ್ತದೆ. ಒಬ್ಬರು ತುಂಬಾ ಅಸಹಾಯಕರಾಗುತ್ತಾರೆ. ಅವರ ಹೋರಾಟಗಳು, ಅನೇಕ ವರ್ಷಗಳ ಹೋರಾಟಕ್ಕೆ ಸಾಕ್ಷಿಯಾಗುವ ಲಕ್ಷಾಂತರ ಜನರ ಮುಂದೆ ಬರುವ ಅವರ ಜೀವನದ ಸ್ಥಿತಿ. ಆದರೆ ಅತ್ಯಂತ ಪ್ರೀತಿಯ ನಗುವಿನಲ್ಲಿ ನಮ್ಮನ್ನು ಕರಗುವಂತೆ ಮಾಡುತ್ತಾರೆ.

Amitabh Bachchan
Amitabh Bachchan


ಕಳೆದ ಕೆಲವು ದಿನಗಳಿಂದ ನಮ್ಮ ಮುಂದೆ ಬರುವ ಸ್ಪರ್ಧಿಗಳು ಮತ್ತು ಅವರ ಜೀವನವು ಅತ್ಯಂತ ಭಾವನಾತ್ಮಕ ಹಾಗೂ ಚಲನಶೀಲವಾಗಿದೆ. ನಾವು ಅವರ ನಿರೂಪಣೆಗಳ ಕೌತುಕದಲ್ಲಿ ಕುಳಿತು ಕೇಳುತ್ತೇವೆ. ಅವರ ಅಗತ್ಯಗಳಿಗಾಗಿ, ಅವರ ಕಠಿಣ ಜೀವನವನ್ನು ಜಯಿಸಲು ಸಹಾಯ ಹಸ್ತ ಚಾಚಲು ಪ್ರಯತ್ನಿಸುತ್ತೇವೆ ಎಂದು ಬಿಗ್ ಬಿ ಬರೆದಿದ್ದಾರೆ.

ಹೊರಗಿನ ಜಗತ್ತು ತಮ್ಮ ಶಕ್ತಿಯನ್ನು ಸುಟ್ಟು ಹಾಕಲಾರದು. ತಮ್ಮ ಜ್ಞಾನದ ಶಕ್ತಿಯಿಂದ ದುರ್ಬಲತೆಯನ್ನು ಧೈರ್ಯದಿಂದ ಗೆಲ್ಲುವವರು ತಮ್ಮ ಜೀವನವನ್ನು ಸುಗಮವಾಗಿಸುತ್ತಾರೆ. ಇದು ಅವರ ಸಾಧನೆಯ ಹಾದಿಯಲ್ಲಿ ಅಡ್ಡಿಯಾಗಿರುವವರಿಗೆ ಅವಮಾನ ಎಂದು ಸೂಪರ್ ಸ್ಟಾರ್ ಹೇಳಿದ್ದಾರೆ.

“ಹಾಟ್ ಸೀಟ್”ನಲ್ಲಿ ವಿಜಯವು ಯಶಸ್ಸಿನ ಆಕಾರದಲ್ಲಿ ಬಂದಾಗ ಕೆಲವರು ತಮ್ಮ ಉದಾರ ದೃಷ್ಟಿಕೋನದಿಂದ ನನ್ನನ್ನು ವಿಸ್ಮಯಗೊಳಿಸುತ್ತಾರೆ. ಹೊರಡುವವರಿಗೆ ಸರ್ವಶಕ್ತನು ಎಲ್ಲ ಶಕ್ತಿಯನ್ನು ದಯಪಾಲಿಸಲಿ. ಇವುಗಳಿಂದ ಪಾಠ ಕಲಿಯಬಹುದು ಎಂದು ಅಮಿತಾಭ್‌ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Ranveer Singh: ಓರಿಯಂತೆ ನಟನೆ ಮಾಡಿದ ರಣವೀರ್‌ ಸಿಂಗ್‌; ವಿಡಿಯೊ ವೈರಲ್‌!

ʼಕೌನ್ ಬನೇಗಾ ಕರೋಡ್ ಪತಿʼಯ ಹೊಸ ಸೀಸನ್ ಕೆಲವು ವಾರಗಳಿಂದ ತಯಾರಿಕೆ ಹಂತದಲ್ಲಿದೆ. ಆದರೆ ತಯಾರಕರು ಇನ್ನೂ ಪ್ರೀಮಿಯರ್ ದಿನಾಂಕವನ್ನು ಘೋಷಿಸಿಲ್ಲ.

Continue Reading

ಬಾಲಿವುಡ್

Ranveer Singh: ಓರಿಯಂತೆ ನಟನೆ ಮಾಡಿದ ರಣವೀರ್‌ ಸಿಂಗ್‌; ವಿಡಿಯೊ ವೈರಲ್‌!

Ranveer Singh: ಓರಿಯನ್ನು ಬಾಲಿವುಡ್ ʻಬೆಸ್​​ಫ್ರೆಂಡ್ ಫಾರೆವರ್ʼ ಎಂದೇ ಹೇಳುತ್ತಾರೆ. ಓರಿ ತನ್ನ ಫ್ಯಾಷನ್​ನಿಂದಾಗಿಯೂ ಸುದ್ದಿಯಾಗುತ್ತಾರೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ನ ಚೇರ್​ ಪರ್ಸನ್ ಆಫೀಸ್​ನಲ್ಲಿ ಸ್ಪೆಷಲ್ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದಾರೆ.ಹಲವು ಸಮಾರಂಭಗಳಲ್ಲಿ ಹಾಜಾರಾಗಲು 15ರಿಂದ 30 ಲಕ್ಷದವರೆಗೆ ಸಂಭಾವನೆ ಪಡೆಯುತ್ತಾರೆ.

VISTARANEWS.COM


on

Ranveer Singh mimics Orry funny interactions
Koo

ಬೆಂಗಳೂರು:  ಬಾಲಿವುಡ್ ನಟಿಯರ ಜತೆ (Orry Reveals Getting Paid) ಓರಿ ಎನ್ನುವ ಯುವಕ ಆಗಾಗ ಕಾಣಿಸಿಕೊಳ್ಳುತ್ತಾರೆ. ಪಾರ್ಟಿಗಳಂತೂ ಓರಿ ಇಲ್ಲದೆ ಅಪೂರ್ಣ ಎಂದೇ ಹೇಳಬೇಕು. ಜಾನ್ವಿ ಕಪೂರ್, ನೀಸಾ ದೇವಗನ್, ಸಾರಾ ಅಲಿ ಖಾನ್ ಮತ್ತು ಅನನ್ಯಾ ಪಾಂಡೆ (bollywood celebrities) ಅವರೊಂದಿಗೆ ಉತ್ತಮ ಸ್ನೇಹಿತರಾಗಿದ್ದಾರೆ ಈ ಓರಿ. ಇತ್ತೀಚೆಗೆ ಜಾಮ್‌ನಗರದಲ್ಲಿ ಅನಂತ್ ಅಂಬಾನಿ ವಿವಾಹ ಪೂರ್ವ ಸಮಾರಂಭದಲ್ಲಿ (anant ambani pre wedding) ರಿಹಾನ್ನಾ ಅವರೊಂದಿಗೆ ಕಾಣಿಸಿಕೊಂಡು ಓರಿ ಸಖತ್‌ ಸುದ್ದಿಯಾಗಿದ್ದರು. ಇದೋಗ ಓರಿಯನ್ನು ರಣವೀರ್ ಸಿಂಗ್ ಅನುಕರಣೆ ಮಾಡಿದ್ದಾರೆ.

ಪಾಪರಾಜಿಗಳು ಓರಿಯನ್ನು ಕಂಡಾಗ ಓರಿ ಅವರಿಗೆ ಪೋಸ್‌ ಕೊಡುವ ರೀತಿಯನ್ನು ನಟ ರಣವೀರ್‌ ಅನುಕರಣೆ ಮಾಡಿ ತೋರಿಸಿದ್ದಾರೆ. ರಣವೀರ್‌ ಥೇಟ್‌ ಓರಿಯಂತೆ ನಡೆದು ತೋರಿಸಿದ್ದಾರೆ. ಇದೀಗ ಈ ವಿಡಿಯೊವನ್ನು ಓರಿ ಇನ್‌ಸ್ಟಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಜತೆಗೆ “ಹೇಗೆ ಓರಿ, ಹಂತ 1 ” ಎಂದು ಕ್ಯಾಪ್ಷನ್‌ ಕೂಡ ಕೊಟ್ಟಿದ್ದಾರೆ. ಇದಕ್ಕೂ ಮುಂಚೆ ಅಂಬಾನಿ ಮದುವೆಯಲ್ಲಿ ದೀಪಿಕಾ ಪಡುಕೋಣೆ ಜತೆ ಓರಿ ಪೋಸ್‌ ಕೊಟ್ಟಿದ್ದರು.

ಓರಿಯನ್ನು ಬಾಲಿವುಡ್ ʻಬೆಸ್​​ಫ್ರೆಂಡ್ ಫಾರೆವರ್ʼ ಎಂದೇ ಹೇಳುತ್ತಾರೆ. ಓರಿ ತನ್ನ ಫ್ಯಾಷನ್​ನಿಂದಾಗಿಯೂ ಸುದ್ದಿಯಾಗುತ್ತಾರೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ನ ಚೇರ್​ ಪರ್ಸನ್ ಆಫೀಸ್​ನಲ್ಲಿ ಸ್ಪೆಷಲ್ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದಾರೆ.ಹಲವು ಸಮಾರಂಭಗಳಲ್ಲಿ ಹಾಜಾರಾಗಲು 15ರಿಂದ 30 ಲಕ್ಷದವರೆಗೆ ಸಂಭಾವನೆ ಪಡೆಯುತ್ತಾರೆ. ಓರಿ ಶಾರುಖ್ ಖಾನ್ ಮಗಳು ಸುಹಾನಾ ಖಾನ್​ಗೂ ಬೆಸ್ಟ್ ಫ್ರೆಂಡ್. ಸುಹಾನಾ ಖಾನ್ ಜತೆ ಓರಿ ಹಲವಾರು ಸಲ ಪಾರ್ಟಿಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Ranveer Singh:‌ ಒಂದೇ ಸಿನಿಮಾದಲ್ಲಿ ಬಾಲಿವುಡ್‌ನ ಐದು ಸ್ಟಾರ್ಸ್; ರಣವೀರ್ ಸಿಂಗ್ ಹೊಸ ಸಿನಿಮಾ ಅನೌನ್ಸ್!

ಓರಿ ಹೇಳಿಕೊಂಡಿರುವ ಪ್ರಕಾರ, ಶ್ರೀಮಂತ ಜನರೇ ಓರಿಯನ್ನು ಪಾರ್ಟಿ ಕರೆಯುತ್ತಾರೆ ಮತ್ತು ತಮ್ಮ ಹೆಂಡತಿ, ಮಕ್ಕಳೊಂದಿಗೆ ಫೋಟೋಗೆ ಪೋಸು ನೀಡುವಂತೆ ಕೇಳಿಕೊಳ್ಳುತ್ತಾರೆ. ಹೀಗೆ ನಾನು ಫೋಟೋ ತೆಗೆಸಿಕೊಳ್ಳಲು ಮತ್ತು ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲು ಹಣ ಪಡೆದುಕೊಳ್ಳುತ್ತೇನೆ. ಈ ಫೋಟೋಗಳಿಗಾಗಿ ಒಂದು ರಾತ್ರಿಗೆ ಕನಿಷ್ಠ 20ರಿಂದ 30 ಲಕ್ಷ ರೂಪಾಯಿ ಗಳಿಸುತ್ತೇನೆ ಎಂದು ಹೇಳಿಕೊಂಡಿದ್ದರು.

Continue Reading

Latest

Amitabh Bachchan-Sridevi Movies: ಅಮಿತಾಭ್ ಬಚ್ಚನ್ – ಶ್ರೀದೇವಿ ಜೊತೆಯಾಗಿ ನಟಿಸಿದ 5 ಸೂಪರ್ ಹಿಟ್ ಚಿತ್ರಗಳಿವು

Amitabh Bachchan-Sridevi Movies: ನಟಿ ಶ್ರೀದೇವಿ ಹಾಗೂ ಅಮಿತಾಭ್ ಬಚ್ಚನ್ ಇಬ್ಬರೂ ಹಿಂದಿ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದವರು.ಅಮಿತಾಭ್ ಬಚ್ಚನ್ ಮತ್ತು ಶ್ರೀದೇವಿ ಹಲವು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿ ಅಭಿಮಾನಿಗಳ ಮನಗೆದ್ದಿದ್ದಾರೆ. ಇವರಿಬ್ಬರೂ ಖುದಾ ಗವಾಹ್, ಇಂಗ್ಲಿಷ್ ವಿಂಗ್ಲಿಷ್ ,ಆಖ್ರಿ ರಾಸ್ತಾ, ಇನ್ಕ್ವಿಲಾಬ್, ಬಾಂಬೆ ಟಾಕೀಸ್ ಚಿತ್ರದಲ್ಲಿ ನಟಿಸಿದ್ದಾರೆ ಈ ಜೋಡಿ ನಟಿಸಿದ 5 ಚಿತ್ರಗಳ ಪಟ್ಟಿ ಹೀಗಿದೆ ನೋಡಿ. ವಿಡಿಯೊಗಳು ಕೂಡ ಇಲ್ಲಿವೆ.

VISTARANEWS.COM


on

Amitabh Bachchan-Sridevi Movies
Koo


ಮುಂಬೈ : ಮೆಗಾಸ್ಟಾರ್ ಅಮಿತಾಭ್‌ ಬಚ್ಚನ್ ಬಾಲಿವುಡ್‍ನಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿ ಸೂಪರ್ ಸ್ಟಾರ್ ಎನಿಸಿಕೊಂಡಿದ್ದಾರೆ. ಹಾಗಾಗಿ ಇವರ ಅಭಿಮಾನಿಗಳು ಇವರಿಗೆ ಬಿಗ್ ಬಿ ಎಂದೇ ಕರೆಯುತ್ತಾರೆ. ಅಲ್ಲದೇ ಬಾಲಿವುಡ್ ಜಗತ್ತಿನಲ್ಲಿ ತಮ್ಮ ಸೌಂದರ್ಯದ ಮೂಲಕ ಮೋಡಿ ಮಾಡಿ ದುಬೈನಲ್ಲಿ ದುರಂತವಾಗಿ ಸಾವಿಗೀಡಾದ ನಟಿ ಶ್ರೀದೇವಿ ಅವರು ಅಮಿತಾಭ್ ಬಚ್ಚನ್ (Amitabh Bachchan-Sridevi Movies) ಸೇರಿದಂತೆ ಹಿಂದಿ ಚಿತ್ರರಂಗದಲ್ಲಿ ಅನೇಕ ತಾರೆಗಳೊಂದಿಗೆ ಕೆಲಸ ಮಾಡಿದ್ದಾರೆ. ಬಚ್ಚನ್ ಮತ್ತು ಶ್ರೀದೇವಿ ಹಲವು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿ ಅಭಿಮಾನಿಗಳ ಮನಗೆದ್ದಿದ್ದಾರೆ. ಇದೀಗ ನೀವು ಈ ಜೋಡಿಯ ಚಿತ್ರ ನೋಡಲು ಬಯಸಿದ್ದರೆ ಈ ಜೋಡಿ ನಟಿಸಿದ 5 ಚಿತ್ರಗಳ ವಿವರ ಇಲ್ಲಿದೆ.

ಖುದಾ ಗವಾಹ್(Khuda Gawah):

ಅಮಿತಾಭ್ ಬಚ್ಚನ್ ಮತ್ತು ಶ್ರೀದೇವಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ ಖುದಾ ಗವಾ 1992ರಲ್ಲಿ ಬಿಡುಗಡೆಯಾಗಿತ್ತು. ಬಿಗ್ ಬಿ, ಬಾದ್ ಷಾ ಖಾನ್ ಪಾತ್ರವನ್ನು ನಿರ್ವಹಿಸಿದರೆ, ಶ್ರೀದೇವಿ ಬೆನಜೀರ್ ಮತ್ತು ಮೆಹೆಂದಿ ಎಂಬ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಬಾದ್ ಶಾ ಖಾನ್ ಬೆನಜೀರ್ ಳನ್ನು ಪ್ರೀತಿಸುತ್ತಾನೆ ಮತ್ತು ಅವಳ ತಂದೆಯನ್ನು ಕೊಂದ ಕೊಲೆಗಾರನನ್ನು ಕಂಡುಹಿಡಿಯಲು ಅವನು ಅಫ್ಘಾನಿಸ್ತಾನದಿಂದ ಭಾರತಕ್ಕೆ ಹೇಗೆ ಪ್ರಯಾಣಿಸುತ್ತಾನೆ ಎಂಬುದರ ಸುತ್ತ ಈ ಕಥೆ ಸುತ್ತುತ್ತದೆ. ಇದು ಈಗ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಲಭ್ಯವಿದೆ.

ಇಂಗ್ಲಿಷ್ ವಿಂಗ್ಲಿಷ್ (English Vinglish):

ಗೌರಿ ಶಿಂಧೆ ನಿರ್ದೇಶನದ ಇಂಗ್ಲಿಷ್ ವಿಂಗ್ಲಿಷ್ ಚಿತ್ರದಲ್ಲಿ ಶ್ರೀದೇವಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಶ್ರೀದೇವಿ ಮನೆಯಲ್ಲಿ ತಯಾರಿಸಿದ ಸಿಹಿತಿಂಡಿಗಳು ಮತ್ತು ತಿಂಡಿಗಳನ್ನು ಮಾರಾಟ ಮಾಡುವ ಉದ್ಯಮಿ ಶಶಿ ಗೋಡಬೋಲೆ ಪಾತ್ರವನ್ನು ನಿರ್ವಹಿಸಿದ್ದಾರೆ. ಆದಿಲ್ ಹುಸೇನ್ ಅವರ ಪತಿ ಸತೀಶ್ ಗೋಡಬೋಲೆ ಪಾತ್ರದಲ್ಲಿ ನಟಿಸಿದ್ದಾರೆ. ಅಮಿತಾಭ್ ಬಚ್ಚನ್ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಇಂಗ್ಲಿಷ್ ತಿಳಿಯದ ಶಶಿ ಇಂಗ್ಲಿಷ್ ಕಲಿತು ಹೇಗೆ ಮುಂದೆ ಸಾಗುತ್ತಾನೆ ಎಂಬುದನ್ನು ತಿಳಿಸುತ್ತದೆ. ಶಶಿ ಪಾತ್ರದಲ್ಲಿ ಶ್ರೀದೇವಿ ಅಮಿತಾಬ್ ಬಚ್ಚನ್ ಅವರನ್ನು ವಿಮಾನದಲ್ಲಿ ಪ್ರಯಾಣಿಸುವಾಗ ಭೇಟಿಯಾಗುತ್ತಾರೆ. ಈ ಚಿತ್ರವನ್ನು ನೀವು ಝೀ5 ನಲ್ಲಿ ನೋಡಬಹುದು.

ಆಖ್ರಿ ರಾಸ್ತಾ(Aakhree Rasta):

ಕೆ ಭಾಗ್ಯರಾಜ್ ನಿರ್ದೇಶನದ ಆಖ್ರಿ ರಾಸ್ತಾ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ತ್ರಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಮಿತಾಬ್ ಬಚ್ಚನ್ ಅವರು ಈ ಚಿತ್ರದಲ್ಲಿ ಡೇವಿಡ್ ಡಿ ಕೋಸ್ಟಾ ಪಾತ್ರದಲ್ಲಿ ನಟಿಸಿದ್ದಾರೆ ಹಾಗೂ ನಟಿ ಜಯಪ್ರದಾ ಪತ್ನಿ ಮೇರಿ ಡಿ’ಕೋಸ್ಟಾ ಪಾತ್ರವನ್ನು ಮಾಡಿದ್ದಾರೆ. ಪತ್ನಿ ಮೇರಿ ಡಿ’ಕೋಸ್ಟಾ ಅವರನ್ನು ಕೊಲೆ ಮಾಡಿದ ಆರೋಪ ಹೊತ್ತಿರುವ ಡೇವಿಡ್ ಡಿ ಕೋಸ್ಟಾ ಪಾತ್ರದ ಸುತ್ತ ಈ ಕಥೆ ಸುತ್ತುತ್ತದೆ. ಡಿ ಕೋಸ್ಟಾ ಅವರ ಮಗ ಜೇಮ್ಸ್ ಮತ್ತು ಅವರ ಸ್ನೇಹಿತ (ಅನುಪಮ್ ಖೇರ್) ಅವರ ಮಗ, ಸಿಐಡಿ ಇನ್ಸ್ಪೆಕ್ಟರ್ ವಿಜಯ್ ಅವರ ಪಾತ್ರವನ್ನು ಅಮಿತಾಬ್ ಬಚ್ಚನ್ ಅವರೇ ಮಾಡಿದ್ದಾರೆ. ವಿಜಯ್ ಗೆಳತಿ ವಿನಿತಾ ಭಟ್ನಾಗರ್ ಪಾತ್ರದಲ್ಲಿ ಶ್ರೀದೇವಿ ನಟಿಸಿದ್ದಾರೆ. ಈ ಚಿತ್ರವು 1986 ರಲ್ಲಿ ಬಿಡುಗಡೆಯಾಯಿತು. ಇದನ್ನು ಈಗ ಝೀ5ನಲ್ಲಿ ನೋಡಬಹುದು.

ಇನ್ಕ್ವಿಲಾಬ್ (Inquilaab):

ಇದು ಅಮಿತಾಭ್ ಬಚ್ಚನ್ ಮತ್ತು ಶ್ರೀದೇವಿ ಜೋಡಿಯಾಗಿ ನಟಿಸಿದ ಮೊದಲ ಚಿತ್ರವಾಗಿದೆ. ಟಿ ರಾಮರಾವ್ ನಿರ್ದೇಶನದ ಈ ಚಿತ್ರವು 1984ರಲ್ಲಿ ಬಿಡುಗಡೆಯಾಯಿತು. ಇದರಲ್ಲಿ ಬಿಗ್ ಬಿ ಅಮರನಾಥ್ ಪಾತ್ರವನ್ನು ನಿರ್ವಹಿಸಿದರೆ, ಶ್ರೀದೇವಿ ಈ ಚಿತ್ರದಲ್ಲಿ ಆಶಾ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಉತ್ಪಲ್ ದತ್, ಖಾದರ್ ಖಾನ್, ರಂಜೀತ್, ಶಕ್ತಿ ಕಪೂರ್ ಮತ್ತು ನಿರುಪಾ ರಾಯ್ ನಟಿಸಿದ್ದಾರೆ. ಈ ಚಿತ್ರದ ಕಥೆಯು ಬಚ್ಚನ್ ಅವರ ಪಾತ್ರವಾದ ಅಮರನಾಥ್ ಅಲಿಯಾಸ್ ಅಮರ್ ಸುತ್ತ ಸುತ್ತುತ್ತದೆ, ಉತ್ತಮ ಶಿಕ್ಷಣ ಪಡೆದ ಅಮರ್ ಗೆ ರಾಜಕಾರಣಿ ಶಂಕರ್ ನಾರಾಯಣ್ ಪಾತ್ರವನ್ನು ನಿರ್ವಹಿಸುತ್ತಿರುವ ಖಾದರ್ ಖಾನ್, ಪೊಲೀಸ್ ಅಧಿಕಾರಿಯಾಗಲು ತರಬೇತಿ ನೀಡಿ ನಂತರ ತನ್ನ ಅಪರಾಧ ಚಟುವಟಿಕೆಗಳಲ್ಲಿ ಅಮರ್ ನನ್ನು ಬಳಸುತ್ತಾನೆ. ಇದು ಈಗ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಲಭ್ಯವಿದೆ.

ಇದನ್ನೂ ಓದಿ: ಅಮೆಜಾನ್‌ನಲ್ಲಿ 55,000 ರೂ. ಮೊಬೈಲ್ ಫೋನ್ ಆರ್ಡರ್ ಮಾಡಿದವನಿಗೆ ಸಿಕ್ಕಿದ್ದು ಟೀ ಕಪ್!

ಬಾಂಬೆ ಟಾಕೀಸ್ (Bombay Talkies):

ಬಾಂಬೆ ಟಾಕೀಸ್ ಚಿತ್ರ 2013ರಲ್ಲಿ ಬಿಡುಗಡೆಯಾಯಿತು. ಕರಣ್ ಜೋಹರ್, ಅನುರಾಗ್ ಕಶ್ಯಪ್, ದಿಬಾಕರ್ ಬ್ಯಾನರ್ಜಿ ಮತ್ತು ಜೋಯಾ ಅಖ್ತರ್ ಅವರಂತಹ ಚಲನಚಿತ್ರ ಪರಿಣತರು ನಿರ್ದೇಶಿಸಿದ ನಾಲ್ಕು ವಿಭಾಗಗಳನ್ನು ಒಳಗೊಂಡ ಚಿತ್ರವಾಗಿದೆ. ಇದರಲ್ಲಿ ಅಮಿತಾಭ್ ಬಚ್ಚನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡರು. ತನ್ನ ತಂದೆಯ ಕೊನೆಯ ಆಸೆಯನ್ನು ಪೂರೈಸಲು ಅಲಹಾಬಾದ್ ನಿಂದ ಮುಂಬೈಗೆ ಪ್ರಯಾಣಿಸಿದ ವಿಜಯ್ ಪಾತ್ರದಲ್ಲಿ ವಿನೀತ್ ಕುಮಾರ್ ಸಿಂಗ್ ನಟಿಸಿದ್ದಾರೆ. ಶ್ರೀದೇವಿ ಇತರ ಜನಪ್ರಿಯ ನಟರೊಂದಿಗೆ ಬಾಂಬೆ ಟಾಕೀಸ್‌ನ ಅಪ್ನಾ ಬಾಂಬೆ ಟಾಕೀಸ್ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಅಮೀರ್ ಖಾನ್, ಕರಿಷ್ಮಾ ಕಪೂರ್, ಮಾಧುರಿ ದೀಕ್ಷಿತ್, ಅಕ್ಷಯ್ ಕುಮಾರ್, ಜೂಹಿ ಚಾವ್ಲಾ, ಸೈಫ್ ಅಲಿ ಖಾನ್, ಪ್ರಿಯಾಂಕಾ ಚೋಪ್ರಾ, ಫರ್ಹಾನ್ ಅಖ್ತರ್, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಕಪೂರ್ ಮತ್ತು ಇತರರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಈಗ ವೀಕ್ಷಿಸಲು ನೆಟ್‌ಫ್ಲಿಕ್ಸ್‌ನಲ್ಲಿ ಸಿಗಲಿದೆ.

Continue Reading

ಬಾಲಿವುಡ್

Akshay Kumar: ನಾನು ಸತ್ತೇ ಹೋದೆ ಎಂಬ ರೀತಿಯಲ್ಲಿ ಸಂತಾಪದ ಸಂದೇಶ ಕಳಿಸುತ್ತಾರೆ ಎಂದು ಗರಂ ಆದ ಅಕ್ಷಯ್‌ ಕುಮಾರ್‌!

Akshay Kumar: ಕೊವಿಡ್ ಬಳಿಕ 15 ಸಿನಿಮಾಗಳು ಬಿಡುಗಡೆಯಾಗಿದ್ದರೂ ಎರಡು ಮೂರು ಸಿನಿಮಾಗಳು ಬಿಟ್ಟರೆ, ಬೇರೆ ಸಿನಿಮಾಗಳು ಹಿಟ್‌ ಕಂಡೇ ಇಲ್ಲ. ಇದೀಗ ಅಕ್ಷಯ್‌ ಕುಮಾರ್‌ ಅವರ ಸಿನಿಮಾಗಳು ಸೋಲುತ್ತಿದ್ದಂತೆ ಸಂತಾಪ ಸೂಚಿಸುತ್ತಿದ್ದಾರೆ ನೆಟ್ಟಿಗರು. ಇದೀಗ ಈ ಬಗ್ಗೆ ನಟಿ ಖಡಕ್‌ ಆಗಿ ಉತ್ತರ ನೀಡಿದ್ದಾರೆ.

VISTARANEWS.COM


on

Akshay Kumar Bollywood folks send him condolence messages
Koo

ಬೆಂಗಳೂರು: ಅಕ್ಷಯ್ ಕುಮಾರ್ (Akshay Kumar) ಸಿನಿಮಾಗಳು ಸೋಲುತ್ತಲೇ ಇವೆ. ಕೊವಿಡ್ ಬಳಿಕ 15 ಸಿನಿಮಾಗಳು ಬಿಡುಗಡೆಯಾಗಿದ್ದರೂ ಎರಡು ಮೂರು ಸಿನಿಮಾಗಳು ಬಿಟ್ಟರೆ, ಬೇರೆ ಸಿನಿಮಾಗಳು ಹಿಟ್‌ ಕಂಡೇ ಇಲ್ಲ. ಇದೀಗ ಅಕ್ಷಯ್‌ ಕುಮಾರ್‌ ಅವರ ಸಿನಿಮಾಗಳು ಸೋಲುತ್ತಿದ್ದಂತೆ ಸಂತಾಪ ಸೂಚಿಸುತ್ತಿದ್ದಾರೆ ನೆಟ್ಟಿಗರು. ಇದೀಗ ಈ ಬಗ್ಗೆ ನಟಿ ಖಡಕ್‌ ಆಗಿ ಉತ್ತರ ನೀಡಿದ್ದಾರೆ.

ಬಚ್ಚನ್ ಪಾಂಡೆ, ಸಾಮ್ರಾಟ್ ಪೃಥ್ವಿರಾಜ್, ರಕ್ಷಾ ಬಂಧನ, ಮಿಷನ್ ರಾಣಿಗಂಜ್, ಬಡೇ ಮಿಯಾನ್ ಚೋಟೆ ಮಿಯಾನ್, ಸೆಲ್ಫಿ ಮತ್ತು ರಾಮ್ ಸೇತು ಸೇರಿದಂತೆ ಹೆಚ್ಚು ಫ್ಲಾಪ್‌ ಸಿನಿಮಾ ನೀಡಿದರು ಅಕ್ಷಯ್‌ ಕುಮಾರ್‌. ತೀರಾ ಇತ್ತೀಚೆಗೆ ಬಯೋಪಿಕ್ ʻಸರ್ಫಿರಾʼದಲ್ಲಿ ನಟಿಸಿದರು, ಇದು ತಮಿಳಿನ ಹಿಟ್ ಸೂರರೈ ಪೊಟ್ರುನ ರೀಮೇಕ್. ಅಕ್ಷಯ್ ಕುಮಾರ್ ಅವರ ಸಿನಿಮಾಗಳಿಗೆ ಬಂಡವಾಳ ಹೂಡಿದ ನಿರ್ಮಾಪಕರು ಸಂಕಷ್ಟದಲ್ಲಿ ಇದ್ದಾರೆ. ಆದರೆ, ಅಕ್ಷಯ್ ಸಂಭಾವನೆ ಕಡಿಮೆ ಮಾಡಿಕೊಳ್ಳಲು ಸಿದ್ಧರಿಲ್ಲ

ಶುಕ್ರವಾರ ಮುಂಬೈನಲ್ಲಿ ನಡೆದ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ, ಅಕ್ಷಯ್ “ಜನರು ಏನೇ ಹೇಳಿದರೂ ನಾನು ಕೆಲಸ ಮಾಡುತ್ತಲೇ ಇರುತ್ತೇನೆ” ಎಂದು ನಿಸ್ಸಂದಿಗ್ಧವಾಗಿ ಉತ್ತರಿಸಿದ್ದಾರೆ.

‘ಏನೇ ಆದರೂ ಒಳ್ಳೆಯದಕ್ಕೆ ಆಗೋದು. ನಾನು ಹೆಚ್ಚು ಆಲೋಚಿಸುವುದಿಲ್ಲ, ಒತ್ತಡ ತೆಗೆದುಕೊಳ್ಳುವುದಿಲ್ಲ. ನಾಲ್ಕೈದು ಸಿನಿಮಾ ಉತ್ತಮವಾಗಿ ಕೆಲಸ ಮಾಡಿಲ್ಲ ಎಂದ ಮಾತ್ರಕ್ಕೆ ನಾನು ಸತ್ತೇ ಹೋದ ಎಂಬ ರೀತಿಯಲ್ಲಿ ಸಂತಾಪದ ಸಂದೇಶ ಕಳಿಸುತ್ತಾರೆ’ ಎಂದಿದ್ದಾರೆ ಅಕ್ಷಯ್ ಕುಮಾರ್.

ಇದನ್ನೂ ಓದಿ: Kannada New Movie: ʻಟೆನೆಂಟ್’ ಸಿನಿಮಾದ ಫಸ್ಟ್‌ ಲುಕ್‌ ಪೋಸ್ಟರ್‌ ಔಟ್‌; ಸೋನು ಗೌಡ ನಾಯಕಿ!

ಇದನ್ನೂ ಓದಿ: Kannada New Movie: ʻಟೆನೆಂಟ್’ ಸಿನಿಮಾದ ಫಸ್ಟ್‌ ಲುಕ್‌ ಪೋಸ್ಟರ್‌ ಔಟ್‌; ಸೋನು ಗೌಡ ನಾಯಕಿ!

ʻʻನಾನು ಯಾವಾಗಲೂ ಕೆಲಸ ಮಾಡುತ್ತಲೇ ಇರುತ್ತೇನೆ. ಜನರು ಏನು ಹೇಳುತ್ತಾರೆ ಎಂಬುದು ಮುಖ್ಯವಲ್ಲ . ಬೆಳಗ್ಗೆ ನಾನು ಎದ್ದೇಳುತ್ತೇನೆ, ವ್ಯಾಯಾಮ ಮಾಡಿ, ಕೆಲಸಕ್ಕೆ ಹೊರಡುತ್ತೇನೆ ಮತ್ತು ಮನೆಗೆ ಹಿಂತಿರುಗುತ್ತೇನೆ. ನಾನು ಏನು ಸಂಪಾದಿಸಿದರೂ, ನಾನು ಸ್ವಂತವಾಗಿ ಸಂಪಾದಿಸುತ್ತೇನೆ . ನಾನು ಯಾರಿಂದಲೂ ಏನನ್ನೂ ಕಸಿದುಕೊಳ್ಳುವುದಿಲ್ಲ . ನನ್ನನ್ನು ಹೊಡೆದುರುಳಿಸುವವರೆಗೂ ನಾನು ಕೆಲಸ ಮಾಡುತ್ತಲೇ ಇರುತ್ತೇನೆ ನಾನು ಕಷ್ಟಪಟ್ಟು ಹಣ ಸಂಪಾದಿಸುತ್ತೇನೆಯೇ ಹೊರತು ಬೇಡಿಕೊಂಡಲ್ಲ. ನನ್ನ ಜೀವ ಇರೋವರೆಗೆ ನಾನು ಕೆಲಸ ಮಾಡುತ್ತೇನೆ’ ಎಂದಿದ್ದಾರೆ ಅಕ್ಷಯ್ ಕುಮಾರ್..”

ಅಕ್ಷಯ್ ಅವರ ಖೇಲ್ ಖೇಲ್ ಮೇ ಚಿತ್ರದಲ್ಲಿ ವಾಣಿ ಕಪೂರ್, ಫರ್ದೀನ್ ಖಾನ್ ಮತ್ತು ಆಮಿ ವಿರ್ಕ್ ಸಹ ನಟಿಸಿದ್ದಾರೆ. ಅಮರ್ ಕೌಶಿಕ್ ನಿರ್ದೇಶನದ ರಾಜ್‌ಕುಮಾರ್ ರಾವ್ ಮತ್ತು ಶ್ರದ್ಧಾ ಕಪೂರ್ ಅವರ ʻಸ್ಟ್ರೀಟ್ 2ʼ ರೊಂದಿಗೆ ಘರ್ಷಣೆಯಾಗುವ ಈ ಚಿತ್ರವನ್ನು ಆಗಸ್ಟ್ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾ ಮೂಲಕ ಅಕ್ಷಯ್ ಕುಮಾರ್ ದೊಡ್ಡ ಫ್ಲಾಪ್ ಕಂಡರು. ‘ಸರ್ಫಿರಾ’ ಕೂಡ ಕಳಪೆ ಗಳಿಕೆ ಮಾಡಿತು.

Continue Reading
Advertisement
Nursing student dies
ಕರ್ನಾಟಕ2 mins ago

Nursing Student Dies: 6ನೇ ಮಹಡಿಯಿಂದ ಬಿದ್ದು ನರ್ಸಿಂಗ್‌ ವಿದ್ಯಾರ್ಥಿನಿ ಸಾವು

Stock Market
ವಾಣಿಜ್ಯ17 mins ago

Stock Market: ಷೇರುಪೇಟೆಯಲ್ಲಿ ಮಹಾ ಪತನ; ಸೆನ್ಸೆಕ್ಸ್‌ 2,000 ಅಂಕಗಳಷ್ಟು ಕುಸಿತ

murder case
ಹಾಸನ24 mins ago

Murder Case : ಅಪರಿಚಿತ ವ್ಯಕ್ತಿಯ ಬರ್ಬರ ಹತ್ಯೆ; ಕೈ-ಕಾಲು ಬಿಗಿದು, ಕಲ್ಲು ಕಟ್ಟಿ ಕೆರೆಗೆ ಎಸೆದ ಹಂತಕರು

ಪ್ರಮುಖ ಸುದ್ದಿ42 mins ago

AAP VS Delhi LG: ಆಪ್‌ಗೆ ಹಿನ್ನಡೆ; ದಿಲ್ಲಿ ನಗರಸಭೆಗೆ ಸದಸ್ಯರನ್ನು ನೇಮಿಸುವ ಎಲ್‌ಜಿ ಅಧಿಕಾರ ಎತ್ತಿಹಿಡಿದ ಸುಪ್ರೀಂ ಕೋರ್ಟ್

Drowned in water
ಚಿಕ್ಕೋಡಿ55 mins ago

Drowned in water : ಆಟವಾಡುತ್ತಾ ಕಾಲುವೆಗೆ ಕಾಲು ಜಾರಿ ಬಿದ್ದು 4 ವರ್ಷದ ಬಾಲಕ ಸಾವು

Gold Rate Today
ಚಿನ್ನದ ದರ1 hour ago

Gold Rate Today: ಸತತ ಎರಡನೆ ದಿನವೂ ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ

Actor Darshan wife Vijayalakshmi darshan temple run
ಸ್ಯಾಂಡಲ್ ವುಡ್1 hour ago

Actor Darshan: ದರ್ಶನ್‌ ಬಿಡುಗಡೆಗಾಗಿ ವಿಜಯಲಕ್ಷ್ಮಿ ಹಾಗೂ ಅಳಿಯ ಟೆಂಪಲ್ ರನ್‌

Road Accident
ಬೆಂಗಳೂರು1 hour ago

Road Accident: ಲಾರಿಯ ಹಿಂಬದಿ ಚಕ್ರಕ್ಕೆ ಸಿಲುಕಿ ಕ್ಲೀನರ್ ಸಾವು; ಬೈಕ್‌ ಅಪಘಾತದಲ್ಲಿ ಸವಾರರಿಬ್ಬರು ಮೃತ್ಯು

Rahul Gandhi
ವೈರಲ್ ನ್ಯೂಸ್2 hours ago

Rahul Gandhi: ರಾಹುಲ್ ಗಾಂಧಿ ಅಲ್ಲ, ರಾಹುಲ್ ಖಾನ್! ಪಾಕಿಸ್ತಾನದ ಟಿವಿಯಲ್ಲಿ ಬಿಸಿಬಿಸಿ ಚರ್ಚೆ!

police inspector death thimmegowda
ಬೆಂಗಳೂರು2 hours ago

Inspector Death: ಮತ್ತೊಬ್ಬ ಪೊಲೀಸ್‌ ಇನ್‌ಸ್ಪೆಕ್ಟರ್‌ ಆತ್ಮಹತ್ಯೆ, ಎರಡು ತಿಂಗಳ ಹಿಂದೆ ಟ್ರಾನ್ಸ್‌ಫರ್‌ ಆಗಿದ್ದ ಸಿಸಿಬಿ ಎಸ್‌ಐ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ23 hours ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ4 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ4 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ4 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ6 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ6 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ7 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ7 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌