Worlds Oldest Office Worker: ನಿವೃತ್ತಿ ಬಗ್ಗೆ ಇನ್ನೂ ಯೋಚನೆಯನ್ನೇ ಮಾಡಿಲ್ಲವಂತೆ 94ರ ಈ ಅಜ್ಜಿ! - Vistara News

ವಿದೇಶ

Worlds Oldest Office Worker: ನಿವೃತ್ತಿ ಬಗ್ಗೆ ಇನ್ನೂ ಯೋಚನೆಯನ್ನೇ ಮಾಡಿಲ್ಲವಂತೆ 94ರ ಈ ಅಜ್ಜಿ!

ಜಪಾನಿನ ಯಸುಕೊ ತಮಾಕಿ ಅವರಿಗೆ ವಯಸ್ಸು 94 ಕಳೆದರೂ ಇನ್ನೂ ನಿವೃತ್ತಿ (Worlds Oldest Office Worker: ನಿವೃತ್ತಿಯ ಬಗ್ಗೆ ಇನ್ನೂ ಯೋಚನೆಯನ್ನೇ ಮಾಡಿಲ್ಲವಂತೆ ಈ ಅಜ್ಜಿ) ಬಗ್ಗೆ ಯೋಚಿಸಿಲ್ಲ. ಎರಡನೇ ವಿಶ್ವ ಯುದ್ಧದ ಸಮಯದಿಂದಲೂ ಕೆಲಸ ಮಾಡುತ್ತಿರುವ ಇವರು ಒಸಾಕಾದ ನಿಶಿ ವಾರ್ಡ್‌ನಲ್ಲಿರುವ ಸನ್‌ಕೋ ಇಂಡಸ್ಟ್ರೀಸ್ ನಲ್ಲಿ 68 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.

VISTARANEWS.COM


on

Worlds Oldest Office Worker
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

40-50 ವರ್ಷವಾದರೆ ಸಾಕು ನಾವು ಕೆಲಸದಿಂದ ನಿವೃತ್ತಿ (retirement) ಪಡೆದು ಯಾವಾಗ ಮನೆಯಲ್ಲಿ ವಿಶ್ರಾಂತಿಯಲ್ಲಿ ಕಾಲ ಕಳೆಯುವುದು ಎಂದು ಯೋಚಿಸುತ್ತೇವೆ. ಆದರೆ ಈಕೆ ಮಾತ್ರ ವಯಸ್ಸು 94 ಆದರೂ ಇನ್ನೂ ನಿವೃತ್ತಿಯ ಬಗ್ಗೆ ಯೋಚಿಸಿಯೇ (Worlds Oldest Office Worker) ಇಲ್ಲವಂತೆ. ಯುವಕರನ್ನೂ ನಾಚಿಸುವಂತೆ ಈಗಲೂ ಬೆಳಗ್ಗಿನಿಂದ ಸಂಜೆಯವರೆಗೆ ಕಂಪೆನಿಯಲ್ಲಿ ಓಡಾಡುತ್ತಾಳೆ, ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿ ಮನೆಗೆ ತೆರಳುತ್ತಾಳೆ.

ಜಪಾನಿನ (japan) ಯಸುಕೊ ತಮಾಕಿ (Yasuko Tamaki) ಅವರ ವಯಸ್ಸಿಗ 94. ಎರಡನೇ ವಿಶ್ವ ಯುದ್ಧದ (2nd world war) ಸಮಯದಿಂದಲೂ ಕೆಲಸ ಮಾಡುತ್ತಿರುವ ಇವರನ್ನು ಜಪಾನಿನ ಕೆಲಸದ ಪ್ರತಿಭೆ ಎಂದು ಕರೆಯಲಾಗುತ್ತದೆ.

1930ರ ಮೇ 15ರಂದು ಜನಿಸಿರುವ ತಮಾಕಿ 1956ರಿಂದ ಒಸಾಕಾದ ನಿಶಿ ವಾರ್ಡ್‌ನಲ್ಲಿರುವ ಸನ್‌ಕೋ ಇಂಡಸ್ಟ್ರೀಸ್ ನಲ್ಲಿ ಸರಿಸುಮಾರು 68 ವರ್ಷಗಳಿಂದ ಕೆಲಸ ಮಾಡುತ್ತಿರುವ ಇವರು ಈಗ ವಿಶ್ವದ ಅತ್ಯಂತ ಹಿರಿಯ ಉದ್ಯೋಗಿಯಾಗಿ ದಾಖಲೆ ಬರೆದಿದ್ದರೆ. ಅಲ್ಲದೇ ಕಂಪೆನಿಯಲ್ಲಿ ಅವರ ಸುದೀರ್ಘ ಸೇವೆಗಾಗಿ ಅವರು ಈಗ ಹಳೆಯ ಕಚೇರಿ ವ್ಯವಸ್ಥಾಪಕರಾಗಿ ಗುರುತಿಸಲ್ಪಟ್ಟಿದ್ದಾರೆ.


ಕಂಪೆನಿಯ ಅಧ್ಯಕ್ಷರೂ ತಮಾಕಿ ಅವರಿಗಿಂತ 12 ವರ್ಷ ಕಿರಿಯರಾಗಿದ್ದಾರೆ. ವಾರದಲ್ಲಿ 5 ದಿನಗಳ ಕಾಲ ಕೆಲಸ ಮಾಡುವ ಇವರು ಪ್ರತಿದಿನ ಬೆಳಗ್ಗೆ 9 ಗಂಟೆಗೆ ಪ್ರಾರಂಭಿಸಿ ಸಂಜೆ 5 ಗಂಟೆಗೆ ಮುಗಿಸುತ್ತಾರೆ.
ಕಂಪ್ಯೂಟರ್ ಕೆಲಸದಲ್ಲಿ ಪರಿಣತಿ ಪಡೆದಿರುವ ಇವರು ಯುವಕರಿಗಿಂತ ವೇಗವಾಗಿ ಕಂಪ್ಯೂಟರ್ ನಲ್ಲಿ ಕೆಲಸವನ್ನು ಮಾಡಿ ಮುಗಿಸುತ್ತಾರೆ.

ತಮಾಕಿ ಅವರಿಗೆ ತಮ್ಮ ಮೇಜಿನ ಬಳಿಯೇ ಸಾಯಬೇಕು ಎನ್ನುವ ಇಚ್ಛೆ ಇದೆ ಎನ್ನುತ್ತಾರೆ ಕಂಪೆನಿಯ ವ್ಯವಹಾರಗಳ ವಿಭಾಗದ ಮುಖ್ಯಸ್ಥ ಹಿರೋಹಿಕೊ ಸಾಟೊ ಹೇಳಿದರು.

ಕಂಪೆನಿಯಲ್ಲಿ ಸುದೀರ್ಘ ವೃತ್ತಿಜೀವನವನ್ನು ನಡೆಸಿರುವ ತಮಾಕಿ ಪ್ರಸ್ತುತ ಹೊಸ ಉದ್ಯೋಗಿಗಳಿಗೆ ತರಬೇತಿ ನೀಡುತ್ತಾರೆ, ಕಂಪೆನಿಯ ಸಾಮಾನ್ಯ ವ್ಯವಹಾರಗಳ ವಿಭಾಗದಲ್ಲಿ ಲೆಕ್ಕಪತ್ರ ನಿರ್ವಹಣೆ ಮತ್ತು ಇತರ ಕ್ಲೆರಿಕಲ್ ಕಾರ್ಯವಿಧಾನಗಳನ್ನು ನಡೆಸುತ್ತಾರೆ. ಕಂಪೆನಿಯಲ್ಲಿ ಈಗ 430 ಕ್ಕೂ ಹೆಚ್ಚು ಉದ್ಯೋಗಿಗಳಿದ್ದು, ತಮಾಕಿ ಅವರು 1956 ರಲ್ಲಿ ವೃತ್ತಿ ಪ್ರಾರಂಭಿಸಿದಾಗ ಕೇವಲ 20 ಮಂದಿಯಷ್ಟೇ ಇದ್ದರು. ಕಂಪೆನಿಯ ಸಂಪೂರ್ಣ ಬೆಳವಣಿಗೆಯನ್ನು ಅವರು ವೀಕ್ಷಿಸಿದ್ದಾರೆ.

40ನೇ ವಯಸ್ಸಿನಲ್ಲಿ ತಮಾಕಿ ಅವರು ವಿಭಾಗದ ಮುಖ್ಯಸ್ಥರಾದರು. ನಿವೃತ್ತಿಯ ವಯಸ್ಸನ್ನು ದಾಟಿದ ಮೇಲೂ ಅವರು ನಿವೃತ್ತಿಯಾಗುವ ಯಾವುದೇ ಯೋಜನೆಯನ್ನು ಹೊಂದಿಲ್ಲ. ಅವರು ತಮ್ಮ ಕೌಶಲವನ್ನು ಬೆಳೆಸಿಕೊಳ್ಳಲು ತರಬೇತಿಯನ್ನು ಪಡೆಯುತ್ತಲೇ ಇರುತ್ತಾರೆ. 67 ನೇ ವಯಸ್ಸಿನಲ್ಲಿ ಕಂಪ್ಯೂಟರ್ ಕಲಿತಿರುವ ಅವರು, 70 ನೇ ವಯಸ್ಸಿನಲ್ಲಿ ಸ್ಕೀ ರೆಸಾರ್ಟ್‌ಗೆ ಹೋಗಿದ್ದರು. 86 ನೇ ವಯಸ್ಸಿನಲ್ಲಿ ತಮ್ಮ ಶಿಕ್ಷಣವನ್ನು ಮುಂದುವರಿಸುವ ನಿರ್ಧಾರ ಕೈಗೊಂಡರು.


ಅಧಿಕೃತ ನಿವೃತ್ತಿ ವಯಸ್ಸು ಎಂದರೆ ಏನೂ ಅಲ್ಲ ಎನ್ನುವ ತಮಾಕಿ, ನನಗೆ ಭವಿಷ್ಯವಿದೆ. ನಾಳೆಗಾಗಿ ನಾನು ವರ್ತಮಾನದಲ್ಲಿ ಬಲವಾಗಿ ಬದುಕುತ್ತೇನೆ ಎನ್ನುತ್ತಾರೆ.


ಗಿನ್ನೆಸ್ ದಾಖಲೆ

90 ನೇ ವಯಸ್ಸಿನಲ್ಲಿ ವಿವಿಧ ಸಾಮಾಜಿಕ ಮಾಧ್ಯಮದ ಮೂಲಕ ಹೆಚ್ಚು ಪ್ರಚಾರ ಪಡೆದ ಅವರನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ ಸಂಸ್ಥೆಯು ಗುರುತಿಸಿದೆ. ವಿಶ್ವದ ಅತ್ಯಂತ ಹಳೆಯ ಸಾಮಾನ್ಯ ವ್ಯವಹಾರಗಳ ವಿಭಾಗದ ಉದ್ಯೋಗಿ ಎಂಬ ಪ್ರಮಾಣಪತ್ರವನ್ನು ನೀಡಿ ಗೌರವಿಸಿದೆ.

ಇದನ್ನೂ ಓದಿ: Indian origin family killed: ಟೆಕ್ಸಾಸ್‌ನಲ್ಲಿ ಭೀಕರ ಅಪಘಾತ; ಭಾರತೀಯ ಮೂಲದ ದಂಪತಿ, ಮಗಳು ದುರ್ಮರಣ

ಜೀವನದಲ್ಲಿ ಮದುವೆಯನ್ನೇ ಆಗದ ತಮಾಕಿ ಕಂಪೆನಿಯನ್ನೇ ತನ್ನ ಸಂಗಾತಿಯನ್ನಾಗಿ ಮಾಡಿಕೊಂಡಿದ್ದಾರೆ. ಈ ವಿಶ್ವದಲ್ಲಿ ನಾನೊಬ್ಬನೇ ಎಷ್ಟು ದೂರ ನಡೆಯಲು ಸಾಧ್ಯವೋ ಎಂಬುದನ್ನು ನೋಡಲು ಶ್ರಮಿಸುತ್ತೇನೆ ಎನ್ನುತ್ತಾರೆ ತಮಾಕಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

PM Modi US Visit : ಸೆಪ್ಟೆಂಬರ್‌ನಲ್ಲಿ ಅಮೆರಿಕ ಪ್ರವಾಸ ಮಾಡಲಿದ್ದಾರೆ ಮೋದಿ; ಅಮೆರಿಕ ಚುನಾವಣೆ ನಡುವೆ ಕುತೂಹಲ ಮೂಡಿಸಿದೆ ಅವರ ಭೇಟಿ

PM Modi US Visit : ಭಾರತೀಯ-ಅಮೆರಿಕನ್ ಡಯಾಸ್ಪೊರಾ ಅಸೋಸಿಯೇಷನ್ (ಐಎಡಿಎ) ಈ ಸಮುದಾಯ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಇದು “ಪ್ರಜಾಪ್ರಭುತ್ವ, ಅಂತರ್ಗತ ಆರ್ಥಿಕ ಅಭಿವೃದ್ಧಿ ಮತ್ತು ಪರಸ್ಪರ ಗೌರವದ ಹಂಚಿಕೆಯ ಮೌಲ್ಯಗಳನ್ನು” ಮುನ್ನಡೆಸಲು ಭಾರತ-ಯುಎಸ್ ಸಹಕಾರವನ್ನು ಉತ್ತೇಜಿಸುವ ಲಾಭರಹಿತ ಸಂಸ್ಥೆಯಾಗಿದೆ. ದೇಣಿಗೆಗಳ ಮೂಲಕ ವೆಚ್ಚಗಳನ್ನು ಭರಿಸಲಾಗುತ್ತದೆ.

VISTARANEWS.COM


on

PM Modi to visits US
Koo

ನವದೆಹಲಿ: ವಿಶ್ವಸಂಸ್ಥೆಯ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 22 ರಂದು ನ್ಯೂಯಾರ್ಕ್‌‌ಗೆ (PM Modi US Visit) ತೆರಳಲಿದ್ದಾರೆ. ಅವರು ಅಲ್ಲಿನ ಪ್ರಮುಖ ಸಮುದಾಯ ಕಾರ್ಯಕ್ರವೊಂದನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ‘ಮೋದಿ ಆ್ಯಂಡ್‌ ಯುಎಸ್: ಪ್ರೋಗ್ರೆಸ್‌ ಟುಗೆದರ್’ ಎಂಬ ಥೀಮ್ ಹೊಂದಿರುವ ಕಾರ್ಯಕ್ರಮವು ಭಾರತ ಹಾಗೂ ಅಮೆರಿಕ ನಡುವಿನ ಸಾಂಸ್ಕೃತಿಕ ಸಂಬಂಧವನ್ನು ಬಿಂಬಿಸುವ ಉದ್ದೇಶದ್ದು. ಜಗತ್ತು ಒಂದು ಕುಟುಂಬ, ವಿಭಿನ್ನತೆಯೇ ಅದರ ಮೂಲಾಧಾರ. ಉತ್ತಮ ಜಗತ್ತಿನ ನಿರ್ಮಾಣಕ್ಕಾಗಿ ಜನ ಕಲ್ಯಾಣವೇ ಧ್ಯೇಯ ಎಂಬುವ ಶೀರ್ಷಿಕೆಯನ್ನೂ ಈ ಕಾರ್ಯಕ್ರಮ ಹೊಂದಿದೆ.

ಭಾರತೀಯ-ಅಮೆರಿಕನ್ ಡಯಾಸ್ಪೊರಾ ಅಸೋಸಿಯೇಷನ್ (ಐಎಡಿಎ) ಈ ಸಮುದಾಯ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಇದು “ಪ್ರಜಾಪ್ರಭುತ್ವ, ಅಂತರ್ಗತ ಆರ್ಥಿಕ ಅಭಿವೃದ್ಧಿ ಮತ್ತು ಪರಸ್ಪರ ಗೌರವದ ಹಂಚಿಕೆಯ ಮೌಲ್ಯಗಳನ್ನು” ಮುನ್ನಡೆಸಲು ಭಾರತ-ಯುಎಸ್ ಸಹಕಾರವನ್ನು ಉತ್ತೇಜಿಸುವ ಲಾಭರಹಿತ ಸಂಸ್ಥೆಯಾಗಿದೆ. ದೇಣಿಗೆಗಳ ಮೂಲಕ ವೆಚ್ಚಗಳನ್ನು ಭರಿಸಲಾಗುತ್ತದೆ.

ಈ ಬೆಳವಣಿಗೆಯ ಬಗ್ಗೆ ಮಾಹಿತಿ ಇರುವವರೊಬ್ಬರು ವಿವರ ನೀಡಿ, ಈ ಸಭೆಯಲ್ಲಿ ಸುಮಾರು 15,000 ಜನರು ಭಾಗವಹಿಸುವ ನಿರೀಕ್ಷೆಯಿದೆ. ಇದು ಅಮೆರಿಕದಲ್ಲಿ ಮೋದಿ ಭಾಷಣ ಮಾಡಿದ ಹಿಂದಿನ ಸಂದರ್ಭಗಳಿಗೆ ಹೋಲಿಸಿದರೆ ವಿಭಿನ್ನವಾಗಿದೆ. ವಲಸಿಗರು ಮತ್ತು ಅವರ ಭವಿಷ್ಯ ಮತ್ತು ಭಾರತದೊಂದಿಗಿನ ಸಂಬಂಧಗಳನ್ನು ಹೆಚ್ಚಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಅಮೆರಿಕದ ಚುನಾವಣಾ ಋತುವಿನ ಮಧ್ಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದ ಹೊರತಾಗಿಯೂ ಇದು ರಾಜಕೀಯೇತರ ಕಾರ್ಯಕ್ರಮವಾಗಿದೆ. ಈ ಬಾರಿ ಯಾವುದೇ ಚುನಾಯಿತ ಅಧಿಕಾರಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.

ಮೋದಿ ಅಮೆರಿಕದಲ್ಲಿರುವ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮೋದಿ ಮಾತನಾಡುತ್ತಿರುವುದು ಇದು ಐದನೇ ಬಾರಿ. 2014ರಲ್ಲಿ, ಅವರು ನ್ಯೂಯಾರ್ಕ್‌‌ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌‌ನಲ್ಲಿ ಭಾಷಣ ಮಾಡಿದ್ದರು ಅಲ್ಲಿ ಸಾವಿರಾರು ಭಾರತೀಯ-ಅಮೆರಿಕನ್ನರು ಮತ್ತು ಕಾಂಗ್ರೆಸ್ ಪ್ರತಿನಿಧಿಗಳು ಮತ್ತು ಸೆನೆಟರ್‌ಗಳು ಸೇರಿದಂತೆ ಡಜನ್‌‌ಗಟ್ಟಲೆ ಚುನಾಯಿತ ಅಧಿಕಾರಿಗಳು ಭಾಗವಹಿಸಿದ್ದರು. 2015 ರಲ್ಲಿ, ಅವರು ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್‌‌ನಲ್ಲಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ್ದರು. ಸಿಲಿಕಾನ್ ವ್ಯಾಲಿಯ ಟೆಕ್ ಸಮುದಾಯವೇ ಈ ಕಾರ್ಯಕ್ರಮದಲ ಆಕರ್ಷಣೆಯಾಗಿತ್ತು. 2017ರಲ್ಲಿ ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಸಣ್ಣ ಕಾರ್ಯಕ್ರಮವೊಂದರಲ್ಲಿ ಮೋದಿ ಸಮುದಾಯ ಸಂಘಟನೆಗಳ ನಾಯಕರೊಂದಿಗೆ ಮಾತನಾಡಿದ್ದರು. 2019 ರಲ್ಲಿ, ಕಳೆದ ಅಧ್ಯಕ್ಷೀಯ ಚುನಾವಣೆಗೆ ಒಂದು ವರ್ಷ ಮೊದಲು, ಮೋದಿ ಮತ್ತು ಅಂದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೂಸ್ಟನ್‌‌ನಲ್ಲಿ ಭಾರತೀಯ-ಅಮೆರಿಕನ್ನರ ಅತಿದೊಡ್ಡ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು. ಈ ಕಾರ್ಯಕ್ರಮ ರಾಜಕೀಯವಾಗಿ ಟೀಕೆಗೆ ಒಳಗಾಯಿತು.

ಇದನ್ನೂ ಓದಿ: Bharat Bandh today : ಇಂದು ಭಾರತ್ ಬಂದ್‌; ಯಾವೆಲ್ಲಾ ಸೇವೆ ಇರುತ್ತೆ? ಏನಿರೋದಿಲ್ಲ? ಇಲ್ಲಿದೆ ಕಂಪ್ಲೀಟ್‌ ಡೀಟೆಲ್ಸ್‌

ಕಳೆದ ವರ್ಷ ಯುಎಸ್‌ಗೆ ಅಧಿಕೃತ ಭೇಟಿ ನೀಡಿದಾಗ 8000 ಭಾರತೀಯ-ಅಮೆರಿಕನ್ನರು ಶ್ವೇತಭವನದಲ್ಲೇ ಮೋದಿಗೆ ಸ್ವಾಗತ ನೀಡಿದ್ದರು. ಕೆನಡಿ ಸೆಂಟರ್‌ನಲ್ಲಿ ಭಾರತೀಯ- ಅಮೆರಿಕನ್ ವೃತ್ತಿಪರರೊಂದಿಗೆ ಮಾತನಾಡಿದ್ದರು. ವಾಷಿಂಗ್ಟನ್ ಡಿಸಿಯ ರೇಗನ್ ಕೇಂದ್ರದಲ್ಲಿ ಮತ್ತೊಂದು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ್ದರು.

ಈ ಬಾರಿ ಅಮೆರಿಕದ ಚುನಾವಣೆ ಬಲವಾದ ಭಾರತೀಯ-ಅಮೆರಿಕನ್ ಆಯಾಮವನ್ನು ಹೊಂದಿರುವ ಸಮಯದಲ್ಲಿ ಮೋದಿಯವರ ಕಾರ್ಯಕ್ರಮ ಬಂದಿದೆ. ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರು ಕಪ್ಪು-ಅಮೆರಿಕನ್ ಮತ್ತು ಭಾರತೀಯ-ಅಮೆರಿಕನ್ ಎಂದು ಗುರುತಿಸಿಕೊಂಡಿದ್ದಾರೆ. ಅವರ ತಾಯಿ ತಮಿಳು ಮತ್ತು 1958 ರಲ್ಲಿ ಭಾರತದಿಂದ ವಲಸೆ ಹೋಗಿದ್ದರು ರಿಪಬ್ಲಿಕನ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿ ಜೆ.ಡಿ.ವ್ಯಾನ್ಸ್ ಅವರ ಪತ್ನಿ ಉಷಾ ವ್ಯಾನ್ಸ್ ಆಂಧ್ರಪ್ರದೇಶದ ವಲಸಿಗರ ಪುತ್ರಿ. ರಾಜಕೀಯ ವಿಜ್ಞಾನಿಗಳಾದ ದೇವೇಶ್ ಕಪೂರ್, ಮಿಲನ್ ವೈಷ್ಣವ್ ಮತ್ತು ಸುಮಿತ್ರಾ ಬದ್ರಿನಾಥನ್ ನಡೆಸಿದ 2020 ರ ಸಮೀಕ್ಷೆಯ ಪ್ರಕಾರ, ಭಾರತೀಯ-ಅಮೆರಿಕನ್ ಸಮುದಾಯವು ಬಹುಪಾಲು ಡೆಮಾಕ್ರಟ್‌ ಪಕ್ಷದ ಪರವಾಗಿದ್ದಾರೆ.

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ತಮ್ಮ ಅಧಿಕಾರಾವಧಿಯ ಕೊನೆಯ ವರ್ಷದಲ್ಲಿ ಆಯೋಜಿಸಿರುವ ಪ್ರಮುಖ ಕಾರ್ಯಕ್ರಮವಾದ ಶೃಂಗಸಭೆಯಲ್ಲಿ ಭಾಗವಹಿಸುವುದು ಮೋದಿಯವರ ಭೇಟಿಯ ಅಧಿಕೃತ ಉದ್ದೇಶ. ಜಿ 20 ಅಧ್ಯಕ್ಷ ಸ್ಥಾನ ಸೇರಿದಂತೆ ಇತ್ತೀಚಿನ ವರ್ಷಗಳಲ್ಲಿ ಭಾರತದ ಆಕಾಂಕ್ಷೆಗಳನ್ನು ಗುಟೆರೆಸ್ ಬೆಂಬಲಿಸಿದ್ದಾರೆ. ಕಳೆದ ತಿಂಗಳು ಯುಎನ್ ಬಿಡುಗಡೆ ಮಾಡಿದ ಸಾಮಾನ್ಯ ಚರ್ಚೆಯ ಭಾಷಣಕಾರರ ತಾತ್ಕಾಲಿಕ ಪಟ್ಟಿಯ ಪ್ರಕಾರ, ಮೋದಿ ಸೆಪ್ಟೆಂಬರ್ 26 ರಂದು ಯುಎನ್ ಜನರಲ್ ಅಸೆಂಬ್ಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

Continue Reading

ಪ್ರಮುಖ ಸುದ್ದಿ

Lashkar-e-Taiba : ಎಲ್ಇಟಿ- ಹಮಾಸ್ ಒಂದಾಗುತ್ತಿದೆಯೇ? ಜಾಗತಿಕ ಆತಂಕ ತಂದಿಟ್ಟ ಉಗ್ರಗಾಮಿ ಸಂಘಟನೆಗಳ ಮುಖ್ಯಸ್ಥರ ಭೇಟಿ

Lashkar-e-Taiba : ಯುಎಸ್ ಮತ್ತು ಭಾರತದಿಂದ ಭಯೋತ್ಪಾದಕ ಎಂದು ಕರೆಯಲ್ಪಟ್ಟಿರುವ ಖಾಲಿದ್ ಕಳೆದ ವಾರ ಟೆಹ್ರಾನ್‌ನಲ್ಲಿ ಹಮಾಸ್‌ನ ಹಿಂದಿನ ನಾಯಕ ಇಸ್ಮಾಯಿಲ್ ಹನಿಯೆಹ್ ಅವರ ಹತ್ಯೆಗೆ ಸಂತಾಪ ವ್ಯಕ್ತಪಡಿಸಲು ಮೆಶಾಲ್‌ನನ್ನು ಭೇಟಿಯಾಗಿದ್ದ. ಖಾಲಿದ್ ಜತೆ ಮತ್ತೊಬ್ಬ ಉನ್ನತ ಎಲ್ಇಟಿ ನಾಯಕ ಫೈಸಲ್ ನದೀಮ್ ಇದ್ದ. ಇವರಿಬ್ಬರನ್ನು 2018 ರಲ್ಲಿ ಯುಎಸ್ ಖಜಾನೆ ಇಲಾಖೆ. ಜಾಗತಿಕ ಭಯೋತ್ಪಾದಕರು ಎಂದು ಕರೆದಿತ್ತು.

VISTARANEWS.COM


on

Lashkar-e-Taiba
Koo

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಮರದ ಉದ್ವಿಗ್ನತೆಯ ಮಧ್ಯೆ, ಲಷ್ಕರ್-ಎ-ತೈಬಾ (Lashkar-e-Taiba ) ಮುಖ್ಯಸ್ಥ ಹಫೀಜ್ ಸಯೀದ್‌‌ನ ಆಪ್ತ ಸಹಾಯಕ ಸೈಫುಲ್ಲಾ ಖಾಲಿದ್ ಕತಾರ್‌ನ ದೋಹಾದಲ್ಲಿ ಹಮಾಸ್‌‌ನ ಹೊಸ ರಾಜಕೀಯ ಮುಖ್ಯಸ್ಥ ಖಾಲಿದ್ ಮೆಶಾಲ್ ಅವರನ್ನು ಭೇಟಿಯಾಗಿರುವುದಾಗಿ ವರದಿಯಾಗಿದೆ. ಅವರಿಬ್ಬರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿವೆ. ಈ ಭೇಟಿಯು ಎರಡು ಭಯೋತ್ಪಾದಕ ಗುಂಪುಗಳ ನಡುವಿನ ಸಂಭಾವ್ಯ ಮೈತ್ರಿಯಾಗಿರಬಹುದು ಎನ್ನಲಾಗಿದ್ದು ಜಾಗತಿಕ ಕಳವಳ ಹುಟ್ಟುಹಾಕಿದೆ.

ಯುಎಸ್ ಮತ್ತು ಭಾರತದಿಂದ ಭಯೋತ್ಪಾದಕ ಎಂದು ಕರೆಯಲ್ಪಟ್ಟಿರುವ ಖಾಲಿದ್ ಕಳೆದ ವಾರ ಟೆಹ್ರಾನ್‌ನಲ್ಲಿ ಹಮಾಸ್‌ನ ಹಿಂದಿನ ನಾಯಕ ಇಸ್ಮಾಯಿಲ್ ಹನಿಯೆಹ್ ಅವರ ಹತ್ಯೆಗೆ ಸಂತಾಪ ವ್ಯಕ್ತಪಡಿಸಲು ಮೆಶಾಲ್‌ನನ್ನು ಭೇಟಿಯಾಗಿದ್ದ. ಖಾಲಿದ್ ಜತೆ ಮತ್ತೊಬ್ಬ ಉನ್ನತ ಎಲ್ಇಟಿ ನಾಯಕ ಫೈಸಲ್ ನದೀಮ್ ಇದ್ದ. ಇವರಿಬ್ಬರನ್ನು 2018 ರಲ್ಲಿ ಯುಎಸ್ ಖಜಾನೆ ಇಲಾಖೆ. ಜಾಗತಿಕ ಭಯೋತ್ಪಾದಕರು ಎಂದು ಕರೆದಿತ್ತು.

2008 ರ ಮುಂಬೈ ದಾಳಿಯ ರೂವಾರಿ ಎಲ್ಇಟಿ ಮತ್ತು ಇಸ್ರೇಲ್‌ನೊಂದಿಗೆ ಸಂಘರ್ಷ ನಡೆಸುತ್ತಿರುವ ಹಮಾಸ್ ಜತೆಗಿನ ಸಂಪರ್ಕವನ್ನು ಹೊಂದಿದೆ. ಭಯೋತ್ಪಾದಕ ಗುಂಪುಗಳ ಈ ಸಂಯೋಜನೆಯು ಉಗ್ರಗಾಮಿ ಮೈತ್ರಿಗಳ ವಿಸ್ತರಿಸುತ್ತಿರುವ ಜಾಲದ ಕಳವಳ ಉಂಟು ಮಾಡಿದೆ. ಅದೇ ರೀತಿ ಅವರ ಕಾರ್ಯಾಚರಣೆ ವ್ಯಾಪ್ತಿ ವಿಸ್ತರಣೆಯಾಬಹುದು ಎಂಬ ಊಹೆಗೂ ಕಾರಣವಾಗಿದೆ.

ಸೈಫುಲ್ಲಾ ಖಾಲಿದ್ ಜಮಾತ್-ಉದ್-ದವಾ (ಜೆಯುಡಿ) ಸ್ಥಾಪಕ ಸದಸ್ಯನಾಗಿದ್ದು. ಎಲ್ಇಟಿಯ ರಾಜಕೀಯ ಬಣವಾದ ಮಿಲ್ಲಿ ಮುಸ್ಲಿಂ ಲೀಗ್ (ಎಂಎಂಎಲ್) ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದಾನೆ. ಪಾಕಿಸ್ತಾನದಲ್ಲಿಯೇ ಎಂಎಂಎಲ್ ಅನ್ನು ರಾಜಕೀಯ ಪಕ್ಷವಾಗಿ ನೋಂದಾಯಿಸದಂತೆ ನಿರ್ಬಂಧಿಸಲಾಗಿದೆ. ಏತನ್ಮಧ್ಯೆ ಖಾಲಿದ್‌‌ನ ಇತ್ತೀಚಿನ ಭೇಟಿಗಳು ಎಲ್ಇಟಿಯ ಅಂತಾರಾಷ್ಟ್ರೀಯ ಸಂಪರ್ಕಗಳನ್ನು ಬಹಿರಂಗಪಡಿಸಿದೆ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಇಂದು ಬಾಂಗ್ಲಾದೇಶದ ಹಿಂದೂ ಉಳಿದರೆ, ನಾಳೆ ಹಿಂದೂ-ಭಾರತ ಉಳಿದೀತು!

ಖಾಲಿದ್ ಮತ್ತು ನದೀಮ್ ರನ್ನು ಯುಎಸ್ ಖಜಾನೆ ಇಲಾಖೆ ಅವರು ಹೊಂದಿರುವ ಭಯೋತ್ಪಾದನೆಯ ಹಿನ್ನೆಲೆಯ ಮೂಲಕ ಗುರುತಿಸಿದೆ. ಪ್ರಾದೇಶಿಕ ಅಸ್ಥಿರತೆಯ ನಡುವೆ ಈ ಎರಡು ಉಗ್ರಗಾಮಿ ಸಂಘಟನೆಗಳ ಒಗ್ಗೂಡುವಿಕೆಯು ಅಪಾಯಕಾರಿ ವಿಸ್ತರಣೆಯನ್ನು ಸೂಚಿಸುತ್ತದೆ. ಅವರ ಚಟುವಟಿಕೆಗಳಲ್ಲಿ ಹೆಚ್ಚಿನ ಸಮನ್ವಯದ ಭಯವನ್ನು ಹುಟ್ಟು ಹಾಕಿದೆ.

Continue Reading

ಅಂಕಣ

ನನ್ನ ದೇಶ ನನ್ನ ದನಿ ಅಂಕಣ: ಇಂದು ಬಾಂಗ್ಲಾದೇಶದ ಹಿಂದೂ ಉಳಿದರೆ, ನಾಳೆ ಹಿಂದೂ-ಭಾರತ ಉಳಿದೀತು!

ನನ್ನ ದೇಶ ನನ್ನ ದನಿ ಅಂಕಣ: ಬಾಂಗ್ಲಾದೇಶದ (Bangladesha) ಹಿಂದೂಗಳ (Hindus) ಮೇಲಾಗುತ್ತಿರುವ ಹೇಯ ಹಿಂಸೆ, ಅತ್ಯಾಚಾರಗಳಿಗೆ ಅಂತ್ಯ ಹಾಡಬೇಕಾದರೆ, ಪರಿಣಾಮಕಾರಿಯಾದ “ಸರ್ಜಿಕಲ್ ವಾರ್” ಆಗಬೇಕೆಂಬುದನ್ನು ಸೇನಾಧಿಕಾರಿಗಳಾಗಿದ್ದವರೇ ಹೇಳಿದ್ದಾರೆ.

VISTARANEWS.COM


on

ನನ್ನ ದೇಶ ನನ್ನ ದನಿ ಅಂಕಣ bangladesh hindus
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

ajjampura manjunath ನನ್ನ ದೇಶ ನನ್ನ ದನಿ

:: ಅಜ್ಜಂಪುರ ಮಂಜುನಾಥ

ನನ್ನ ದೇಶ ನನ್ನ ದನಿ ಅಂಕಣ: ಇದು 1948ರ ಮಾತು. ಶ್ರೀಪ್ರಕಾಶರು ಪಾಕಿಸ್ತಾನದಲ್ಲಿ (Pakistan) ಭಾರತದ (India) ಹೈಕಮಿಷನರ್ (ರಾಯಭಾರಿ) ಆಗಿದ್ದರು. ಪಾಕಿಸ್ತಾನವು ಅದಾಗಲೇ ಇಸ್ಲಾಮೀ ಪ್ರಭುತ್ವವೆಂದು (Islamic country) ಘೋಷಿಸಿಕೊಂಡಾಗಿತ್ತು. ಹಿಂದೂಗಳ ಮೇಲೆ, ಸಿಖ್ಖರ ಮೇಲೆ ದಾಳಿ, ಅತ್ಯಾಚಾರ, ಹತ್ಯಾಕಾಂಡ, ಅಂಗಡಿ ಮನೆಗಳಿಗೆ – ದೇವಾಲಯಗಳಿಗೆ – ಗುರುದ್ವಾರಗಳಿಗೆ ಬೆಂಕಿ ಹಚ್ಚುವುದು ಆ ಭೂಪ್ರದೇಶದಲ್ಲಿ ಬಹಳ ಕಾಲದಿಂದಲೂ ನಡೆದೇ ಇತ್ತು. ಆದರೆ, 1948ರ ವೇಳೆಗೆ ಒಂದಿಷ್ಟು ಕಡಿಮೆ ಆಗಿತ್ತು. ಪ್ರಾಯಶಃ ದಾಳಿಮಾಡಲು ಮುಸ್ಲಿಮೇತರರೇ ಸಿಕ್ಕುತ್ತಿರಲಿಲ್ಲವೆಂದು ಕಾಣುತ್ತದೆ. ಒಂದು ದಿನ ಹಿಂದೂ ದೇವಾಲಯವೊಂದರ (Hindu Temple) ಮೇಲೆ ದಾಳಿಯಾದ ಸುದ್ದಿ ಬಂದಿತು. ಅಲ್ಲಿದ್ದ ಕೆಲವು ವಸ್ತುಗಳು ಕಳವು ಆದ ಮತ್ತು ದೇವಾಲಯಕ್ಕೆ ಹಾನಿಯಾದ ಸುದ್ದಿ ಬಂದಿತು. ಶ್ರೀಪ್ರಕಾಶರು ಪೊಲೀಸರನ್ನು ಮತ್ತು ಉಳಿದ ಅಧಿಕಾರಿಗಳನ್ನು, ರಾಜಕಾರಣಿಗಳನ್ನು ಸಂಪರ್ಕಿಸಿದರು. ಅದ್ಭುತವಾದ ಉತ್ತರ ಬಂದಿತು: “ಇದು ಇಸ್ಲಾಮೀ ಪ್ರಭುತ್ವ. ಇಲ್ಲಿ ಕಳ್ಳತನ ಇತ್ಯಾದಿ ಜರುಗುವುದೇ ಇಲ್ಲ. ಏನೂ ಆಗಿಯೇ ಇಲ್ಲ”. ಶ್ರೀಪ್ರಕಾಶರು ವಿಚಾರಿಸಿದಾಗ, ಪೊಲೀಸರು ಯಾವುದೇ ದೂರು ಸಹ ಸ್ವೀಕರಿಸಿರಲಿಲ್ಲ. FIR ಸಹ ಹಾಕಿರಲಿಲ್ಲ ಎಂಬುದು ತಿಳಿದುಬಂದಿತು. ಶ್ರೀಪ್ರಕಾಶರಿಗೆ ದಿಗ್ಭ್ರಮೆಯಾಯಿತು. ಇಸ್ಲಾಮೀ ಪ್ರಭುತ್ವಗಳು ಹೇಗಿರುತ್ತವೆ, ಅಲ್ಲಿ ಮುಸ್ಲಿಮೇತರರ ಪಾಡೇನು ಎಂಬುದು ಅವರಿಗೇನೋ ತಿಳಿಯಿತು. ಆದರೆ, ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಿದ ಭಾರತದ ಇಲ್ಲಿನ ಸರ್ಕಾರಕ್ಕೆ, ಪಕ್ಷಕ್ಕೆ, ಅಧಿಕಾರಾರೂಢರಿಗೆ ಅರ್ಥವಾಗಲೇ ಇಲ್ಲ. ಅವರು ಕೇಳಿಸಿಕೊಳ್ಳುತ್ತಲೂ ಇರಲಿಲ್ಲ. 76 ವರ್ಷಗಳ ಅನಂತರವೂ ಇಂದಿಗೂ, ಪರಿಸ್ಥಿತಿಯಲ್ಲಿ ತುಂಬ ಬದಲಾವಣೆಯೇನೂ ಆಗಿಲ್ಲ.

ನಾನು ದಾವಣಗೆರೆಯಲ್ಲಿದ್ದೆ. ಕಾರ್ಗಿಲ್ (Kargil War) ಮೇಲೆ ಪಾಕ್ ದಾಳಿ ಮಾಡಿತ್ತು. ಯುದ್ಧದ ಸಂದರ್ಭದಲ್ಲಿ ಆಯೋಜಿತವಾದ ಕಾರ್ಯಕ್ರಮವೊಂದರಲ್ಲಿ ನಿವೃತ್ತ ಸೇನಾಧಿಕಾರಿಯೊಬ್ಬರು ಮಾತನಾಡುತ್ತಿದ್ದರು ಮತ್ತು ಬಹಳ ಮಹತ್ತ್ವದ ಮಾತನ್ನೂ ಹೇಳಿದರು. “ನೋಡಿ, ಇಲ್ಲಿ ನೀವು ಇದು ಪಾಕಿಸ್ತಾನದ 4ನೆಯ ಆಕ್ರಮಣ ಎಂದು ಹೇಳುತ್ತಿದ್ದೀರಿ. ನಾನೊಬ್ಬ ನಿವೃತ್ತ ಸೇನಾಧಿಕಾರಿ. ಗಡಿಯಲ್ಲಿ ಇದ್ದೆ ಮತ್ತು ಯುದ್ಧಗಳಲ್ಲಿ ಸ್ವತಃ ಭಾಗವಹಿಸಿದ್ದೇನೆ. ಪಾಕಿಸ್ತಾನದ ಆಕ್ರಮಣವು 1947ರಿಂದ ನಿರಂತರವಾಗಿ ನಡೆಯುತ್ತಲೇ ಇದೆ. ಬೇರೆಬೇರೆ ರೂಪದಲ್ಲಿ, ದಾಳಿ ನಡೆಯುತ್ತಲೇ ಇದೆ. ಇಂದಿಗೂ ನಿಂತೇ ಇಲ್ಲ, ಒಮ್ಮೆಯೂ ನಿಂತಿಲ್ಲ”. ನಾವೆಲ್ಲ ಅವಾಕ್ಕಾದೆವು. ನಿಜ. ಪಾಕಿಸ್ತಾನವೇ ಅನೇಕ ಬಾರಿ ಘೋಷಿಸಿರುವಂತೆ ಅದು, ಎಂದೆಂದಿಗೂ ಮುಗಿಯದ ಇಸ್ಲಾಮೀ ಆಕ್ರಮಣ. ಆದರೆ, ನಮಗೆ, ಭಾರತೀಯರಿಗೆ ಅದು ಅರ್ಥವಾಗಿಯೇ ಇಲ್ಲ.

    1947ರ ದೇಶವಿಭಜನೆಗೆ (Partition) ಮೊದಲು ಮತ್ತು ಅನಂತರ, ಬಂಗಾಳದಲ್ಲಿ ಆದ – ಆಗುತ್ತಿರುವ ಅತ್ಯಾಚಾರ, ದಾಳಿ, ವಿಧ್ವಂಸಗಳಿಗೆ ಕೊನೆ ಮೊದಲಿಲ್ಲ. 1971ರ ಬಾಂಗ್ಲಾ ದೇಶದ ವಿಮೋಚನೆಗೆ ಮೊದಲು ಹಿಂದೂಗಳ ಮೇಲೆ, ಬೌದ್ಧರ ಮೇಲೆ ಆದ ನರಮೇಧ, ಅತ್ಯಾಚಾರಗಳು ಅನೂಹ್ಯ ಪ್ರಮಾಣದವು. ವಿಮೋಚನೆಯ ಅನಂತರ ಕೆಲಕಾಲ ಸ್ವಲ್ಪ ಕಡಿಮೆಯಾಗಿತ್ತು, ಎನ್ನಬಹುದು, ಅಷ್ಟೇ. ಜಿಯಾಉರ್ ರೆಹಮಾನ್, ಖಲೀದಾ ಜಿಯಾ ಅವರ ಅವಧಿಯಲ್ಲಿ ಈ ಹಿಂಸೆ ಕಿರುಕುಳಗಳು ಮತ್ತೆ ಮಿತಿ ಮೀರಿದವು. “ದುರದೃಷ್ಟವಶಾತ್” ನಮ್ಮ ಪತ್ರಕರ್ತರು, ಲೇಖಕರು ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶಗಳಲ್ಲಾದ ಭೀಕರ ಹಿಂಸಾಚಾರಗಳನ್ನು ವರದಿ ಮಾಡಲೂ ಇಲ್ಲ, ಪುಸ್ತಕ ಬರೆಯಲೂ ಇಲ್ಲ. ಈ ಕಾರಣಕ್ಕೆ, ಅವಿಭಜಿತ ಬಂಗಾಳ ಎನ್ನಲಾಗುತ್ತಿದ್ದ ಆ ಪ್ರದೇಶದಲ್ಲಿ ಕಳೆದ ಎಂಟು ದಶಕಗಳಲ್ಲಿ ನಡೆದ ಮತೀಯ ವಿಧ್ವಂಸ ಮತ್ತು ನರಹತ್ಯಾಕಾಂಡಗಳ ಬಗೆಗೆ ಸಮರ್ಪಕವಾದ ಮತ್ತು ಸಮಗ್ರವಾದ ದಾಖಲೆಗಳೇ ಸಿಕ್ಕುವುದಿಲ್ಲ. ಸಹಸ್ರ ಸಹಸ್ರ ವರ್ಷಗಳ ಖ್ಯಾತಿಯ ಸಂಸ್ಕೃತಿ, ಸಂಗೀತ, ಸಾಹಿತ್ಯ, ನೃತ್ಯ, ವಿದ್ವತ್ತುಗಳ ಅತ್ಯದ್ಭುತವಾದ ಬಂಗಾಳವು ಈಗಲೂ ನಿರಂತರವಾಗಿ ನಾಶವಾಗುತ್ತಲೇ ಇದೆ. ಕ್ರಾಂತಿಕಾರಿಗಳ, ಸುಭಾಷ್ ಚಂದ್ರ ಬೋಸ್, ರವೀಂದ್ರನಾಥ ಟ್ಯಾಗೋರ್ ಅವರ, ರಾಮಕೃಷ್ಣ ಪರಮಹಂಸ – ವಿವೇಕಾನಂದರ, ಬಂಕಿಮಚಂದ್ರರ, ಸತ್ಯಜಿತ್ ರಾಯ್ ಅವರ ಪ್ರತಿಭಾನ್ವಿತ ಬಂಗಾಳವು ಅನಿಯಂತ್ರಿತ ಮತಾಂತರದ ಪರಿಪ್ರೇಕ್ಷ್ಯದಲ್ಲಿ ಜಿಹಾದೀ ಪಶುಗಳ ಕೊಂಪೆಯಾಗಿಹೋಗಿದೆ.

    ಹಿಂದೂ-ಭಾರತ ಇನ್ನಾದರೂ ಕಣ್ಣುಬಿಡಬೇಕಾಗಿದೆ. ಬಂಗಾಳ, ಕೇರಳ, ಕಾಶ್ಮೀರಗಳನ್ನು ಉಳಿಸಿಕೊಳ್ಳಲೇಬೇಕಾಗಿದೆ.

    ಇತಿಹಾಸಕಾರ, ಅಪರೂಪದ ಚಿಂತಕ, ಸೀತಾರಾಮ ಗೋಯಲ್ ಅವರು ಮಹತ್ತ್ವದ ದಾಖಲೆಗಳ ಮತ್ತು ಮಾಹಿತಿಗಳ ತಮ್ಮ “Hindu Temples : What Happened To Them” (Volume 1 – A preliminary Survey) ಗ್ರಂಥದಲ್ಲಿ ಬಹಳ ಮುಖ್ಯವಾದ ಸಾಕ್ಷ್ಯಾಧಾರಗಳನ್ನು ನೀಡಿದ್ದಾರೆ. 1989ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರು (ಆ ಸಂದರ್ಭದ ರಾಜಕೀಯ ಲಾಭ ಪಡೆಯಲು) ರಾಮಜನ್ಮಭೂಮಿ ಆವರಣದಲ್ಲಿ ಶಿಲಾನ್ಯಾಸಕ್ಕೆ ಅನುಮತಿ ನೀಡಿದರು. ಆಗಿನ್ನೂ ಬಾಬ್ರಿ ಮಸೀದಿಯ ವಿವಾದಿತ ಕಟ್ಟಡ ಇತ್ತು (ಅದರ ಧ್ವಂಸ ಆಗಿದ್ದು 6ನೆಯ ಡಿಸೆಂಬರ್ 1992ರಲ್ಲಿ). ಇಷ್ಟಕ್ಕೇ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಹಿಂದೂ ಮಂದಿರಗಳ ಮೇಲೆ ದಾಳಿಗಳಾದವು, ಹಿಂದೂಗಳ ಮೇಲೆ ಅತ್ಯಾಚಾರ ನರಹತ್ಯೆಗಳು ಮುಗಿಬಿದ್ದವು. ಭಾರತದ ಹಿಂದೂಗಳ ಬೆಂಬಲದಿಂದ, ರಕ್ತ ಬೆವರುಗಳ ನೆರವಿನಿಂದ ಹುಟ್ಟಿಕೊಂಡ ಈ ಬಾಂಗ್ಲಾದೇಶದಲ್ಲಿ ಅಕ್ಷರಶಃ ನೂರಾರು ದೇವಾಲಯಗಳ ಧ್ವಂಸವಾಯಿತು, ಹಿಂದೂಗಳ ನರಮೇಧವಾಯಿತು, ಅಂಗಡಿ – ಮನೆಗಳನ್ನು ಸುಟ್ಟುಹಾಕಲಾಯಿತು. ಇನ್ನು ಮಹಿಳೆಯರ ಮೇಲೆ ಅನೂಹ್ಯ ಪ್ರಮಾಣದಲ್ಲಿ ಅತ್ಯಾಚಾರ ನಡೆಯಿತು. ಗೋಯಲ್ ಅವರು ಈ ಮಹತ್ತ್ವದ ಗ್ರಂಥದ 7ನೆಯ ಅಧ್ಯಾಯದಲ್ಲಿ ಈ ವಿಧ್ವಂಸದ ವಿವರಗಳನ್ನು ಪಟ್ಟಿ ಮಾಡಿದ್ದಾರೆ. ಪಾಪ, ಉಳಿದ ಅನೇಕ ಪತ್ರಕರ್ತರು, ಲೇಖಕರು ಪಟ್ಟಿ ಮಾಡುವುದಿರಲಿ, ಗ್ರಂಥರಚನೆಯಿರಲಿ, ಮಾತು ಸಹ ಆಡಲಿಲ್ಲ, ಖಂಡಿಸಲೂ ಇಲ್ಲ, ಪ್ರತಿಕ್ರಿಯಿಸಲೂ ಇಲ್ಲ.

    Bangladesh Unrest
    Bangladesh Unrest

    ಶಿಕಾಗೋ ಮೂಲದ ಡಾ|| ರಿಚರ್ಡ್ ಎಲ್. ಬೆನ್ ಕಿನ್ ದಾಖಲಿಸಿರುವ “A Quiet Case of Ethnic Cleansing” (ಮೊದಲ ಆವೃತ್ತಿ 2012) ಬಹಳ ಮಹತ್ತ್ವದ ಮತ್ತು ಅಪರೂಪದ ಗ್ರಂಥ. ಇಲ್ಲಿ ಬಂಗಾಳದ ಪ್ರದೇಶದ ಮತೀಯ ವಿಧ್ವಂಸ ಮತ್ತು ನರಹತ್ಯಾಕಾಂಡಗಳ ಬಗೆಗೆ ಅನೇಕ ಪ್ರಾತಿನಿಧಿಕ ದಾಖಲೆಗಳೇ ಇವೆ. ಈ ಗ್ರಂಥದ ಅನುಬಂಧ 1 ರಲ್ಲಿ ರಿಚರ್ಡ್ ಅವರು 2009 ಈ ಒಂದು ವರ್ಷದಲ್ಲಾದ ಹಲವು ಪ್ರಮುಖ ಭಯಾನಕ ಘಟನೆಗಳನ್ನು ಕೋಷ್ಟಕ (Table) ರೂಪದಲ್ಲಿ ನೀಡಿದ್ದಾರೆ. ಹಿಂದೂ ಹೆಣ್ಣು ಮಕ್ಕಳನ್ನು ಅಪಹರಿಸುವುದು, ಒತ್ತೆಯಿಟ್ಟುಕೊಂಡು ಹಣ ಕೀಳುವುದು, ಅತ್ಯಾಚಾರ ಮಾಡುವುದು, ಬಲವಂತದ ಮತಾಂತರ ಮಾಡುವುದು, ಹತ್ಯೆ ಮಾಡುವುದು, ಅದೇರೀತಿ ಹಿಂದೂಗಳ ಅಂಗಡಿ ಮುಂಗಟ್ಟುಗಳಿಗೆ ಬೆಂಕಿ, ಹಿಂದೂಗಳ ನರಹತ್ಯೆ, ಮತಾಂತರ ಇತ್ಯಾದಿಗಳ ವಿವರಗಳಿಲ್ಲಿವೆ. ಈ ಪ್ರಕರಣಗಳಲ್ಲಿ ಬಾಂಗ್ಲಾದೇಶದ ಇಸ್ಲಾಮೀ ಪ್ರಭುತ್ವದ ಪೊಲೀಸರು ದೂರುಗಳನ್ನು ಕೈಗೆ ಸ್ವೀಕರಿಸಲೂ ಇಲ್ಲ, ಸ್ವೀಕರಿಸಿದರೂ FIR ಹಾಕಲಿಲ್ಲ, ಇನ್ನು ಕ್ರಮ ತೆಗೆದುಕೊಳ್ಳುವುದಂತೂ ಇಲ್ಲವೇ ಇಲ್ಲ. ಇಸ್ಲಾಮೀ ಪ್ರಭುತ್ವದ ದೇಶಗಳು ಇರುವುದೇ ಹಾಗೆ, ಅಲ್ಲಿ ಅಲ್ಪಸಂಖ್ಯಾತರಿಗೆ ಸ್ವಾತಂತ್ರ್ಯವೂ ಇಲ್ಲ, ಕನಿಷ್ಠ ಮರ್ಯಾದೆಯೂ ಇಲ್ಲ, ಅಸ್ತಿತ್ವವೂ ಇಲ್ಲ.

    ಪ್ರಸ್ತುತ ಬಾಂಗ್ಲಾದೇಶದಲ್ಲಿ ಬೀಭತ್ಸ ಹಿಂಸಾಪರ್ವ ವಿಜೃಂಭಿಸುತ್ತಿದೆ. ಬೆಂಕಿ ಹಚ್ಚುವುದು, ದೇವಾಲಯಗಳ ನಾಶ, ನರಹತ್ಯೆಗಳಿರಲಿ, ಅಲ್ಲಿನ ಜಿಹಾದಿಗಳು ತಾವು ಹಿಂದೂ ಹೆಣ್ಣುಮಕ್ಕಳ ಮೇಲೆ ಎಸಗುತ್ತಿರುವ ಭಯಾನಕ ಅತ್ಯಾಚಾರದ ವೀಡಿಯೋಗಳನ್ನು ಸ್ವತಃ ಅವರೇ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ.

    ಇದು ಬರಿಯ ಯುದ್ಧವಲ್ಲ, ಬರಿಯ ಆಕ್ರಮಣವಲ್ಲ, ಇದು ಅವೆಲ್ಲವುಗಳನ್ನು ಮೀರಿದ ಘನಘೋರವಾದ ಅಮಾನವೀಯ ಅತ್ಯಾಚಾರ, ಹಿಂಸಾಚಾರ. ಇಂತಹ ಈ ಜಿಹಾದೀ ದುಷ್ಟಜಂತುಗಳನ್ನು ಕ್ಷಣಮಾತ್ರವೂ ತಡ ಮಾಡದೇ ಕೊಂದುಹಾಕುವುದೇ ಸರಿಯಾದ ಕ್ರಮ. ಪ್ರಸಕ್ತ ಭಾರತದ ಆಶಾಕಿರಣ ಯೋಗಿ ಆದಿತ್ಯನಾಥರು. ಅವರು “ವಿಷಕ್ರಿಮಿಗಳಿಗೆ ಅವರದ್ದೇ ಭಾಷೆಯಲ್ಲಿ ಉತ್ತರಿಸಬೇಕು, ಬೇರೆ ಯಾವುದೂ ಅವರಿಗೆ ಅರ್ಥ ಆಗುವುದಿಲ್ಲ” ಎನ್ನುತ್ತಿರುತ್ತಾರೆ. 20ನೆಯ ಶತಮಾನದ ಆರಂಭದಲ್ಲಿಯೇ ಪಾಕಿಸ್ತಾನದ ದುಷ್ಟ ಪರಿಕಲ್ಪನೆ ಹುಟ್ಟಿದ್ದೇ ಅಲಿಗಢ ವಿಶ್ವವಿದ್ಯಾಲಯದಲ್ಲಿ. ಮುಸ್ಲಿಂ ಬಾಹುಳ್ಯದ ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಪಾಲನೆ ಬಹಳ ಬಹಳ ಕಷ್ಟದ ಕೆಲಸ. ಎಲ್ಲ ರಾಜಕೀಯ ಪಕ್ಷಗಳೂ ಇಡೀ ದೇಶವನ್ನು, ಮುಖ್ಯವಾಗಿ ಉತ್ತರ ಪ್ರದೇಶವನ್ನು ಕಳೆದ ಏಳು ದಶಕಗಳಿಂದ ಕುಲಗೆಡಿಸುತ್ತಲೇ ಇವೆ. ಈ ಪರಿಪ್ರೇಕ್ಷ್ಯದಲ್ಲಿ ಅಭಿವೃದ್ಧಿಯ ಜೊತೆಯಲ್ಲಿ, ಅತ್ಯದ್ಭುತವಾದ ಕಾನೂನು ಮತ್ತು ಸುವ್ಯವಸ್ಥೆಗಳು ಸಾಧ್ಯವಾಗಿರುವುದು ಯೋಗಿಜೀ ಅವರ ಹೆಗ್ಗಳಿಕೆ. ಅವರಿಂದಾಗಿ ಬರೀ ಉತ್ತರ ಪ್ರದೇಶ ಮಾತ್ರವಲ್ಲ, ಪರೋಕ್ಷವಾಗಿ ಭಾರತವೂ ಉಳಿಯಲು ಸಾಧ್ಯವಾಗಿದೆ.

    ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಂತಹ ಇಸ್ಲಾಮೀ ಪ್ರಭುತ್ವಗಳಿಗೆ ಸಂದೇಶ ಕಳುಹಿಸುವುದು, ವಿನಂತಿ ಸಲ್ಲಿಸುವುದು, ಎಚ್ಚರಿಕೆ ನೀಡುವುದು, ಮಾತುಕತೆ – ಚರ್ಚೆ ಮಾಡುವುದು, ಯಾವುದೂ ಅರ್ಥವಾಗುವುದಿಲ್ಲ. ಅವೆಲ್ಲಾ ಸಂಪೂರ್ಣ ನಿಷ್ಪ್ರಯೋಜಕ. ಕೈಲಾಗದ ಹೇಡಿಗಳನ್ನು ನೋಡಿ ಜಿಹಾದಿಗಳು ಗಹಗಹಿಸಿ ನಗುವ ನೂರಾರು ವೀಡಿಯೋಗಳನ್ನು ನಾವೆಲ್ಲರೂ ನೋಡಿಯೇಇದ್ದೇವೆ.

    ಸೆಪ್ಟೆಂಬರ್ 2016ರಲ್ಲಿ ಭಾರತದ “ಸರ್ಜಿಕಲ್ ಸ್ಟ್ರೈಕ್” ಪಾಕಿಸ್ತಾನಕ್ಕೆ ಅರ್ಥವಾಯಿತು. ಬೇರೆ ಯಾವ ಭಾಷೆಯೂ ಇಂತಹವರಿಗೆ ಅರ್ಥ ಆಗುವುದಿಲ್ಲ, ಎನ್ನುವ ಮಾತೂ ರುಜುವಾತಾಯಿತು. ಈಗ ಬಾಂಗ್ಲಾದೇಶದ ಹಿಂದೂಗಳ ಮೇಲಾಗುತ್ತಿರುವ ಹೇಯ ಹಿಂಸೆ, ಅತ್ಯಾಚಾರಗಳಿಗೆ ಅಂತ್ಯ ಹಾಡಬೇಕಾದರೆ, ಪರಿಣಾಮಕಾರಿಯಾದ “ಸರ್ಜಿಕಲ್ ವಾರ್” ಆಗಬೇಕೆಂಬುದನ್ನು ಸೇನಾಧಿಕಾರಿಗಳಾಗಿದ್ದವರೇ ಹೇಳಿದ್ದಾರೆ. ಗೂಟದ ಕಾರುಗಳಲ್ಲಿ ಕುಳಿತವರು, ತಮಗೆ ಬೆಂಬಲ ನೀಡಿದ ಹಿಂದೂ-ಭಾರತವನ್ನು ಗೌರವಿಸಲಾದರೂ ತಕ್ಷಣ ಕ್ರಮ ತೆಗೆದುಕೊಳ್ಳಬೇಕಾಗಿದೆ.

    ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಜಿಹಾದಿ, ಮಿಷನರಿಗಳ ಸಾವಿರ ಹಿರೋಷಿಮಾಗಳು ಕಾಯುತ್ತಿವೆ

    Continue Reading

    ವಿದೇಶ

    Imran Khan: ಆಕ್ಸ್‌ಫರ್ಡ್ ವಿವಿ ಕುಲಪತಿಯಾಗಲು ಅರ್ಜಿ ಸಲ್ಲಿಸಿದ ಪಾಕ್‌ ಮಾಜಿ ಪ್ರಧಾನಿ!

    ಆಕ್ಸ್‌ಫರ್ಡ್‌ನ ಹಳೆಯ ವಿದ್ಯಾರ್ಥಿಯಾದ ಇಮ್ರಾನ್‌ ಖಾನ್ (Imran Khan) ಅವರು ತಮ್ಮ ಪಕ್ಷದ ಲಂಡನ್ ಮೂಲದ ವಕ್ತಾರರಾದ ಸೈಯದ್ ಜುಲ್ಫಿಕರ್ ಬುಖಾರಿ ಅವರ ಮೂಲಕ ಪ್ರತಿಷ್ಠಿತ ವಿಶ್ವವಿದ್ಯಾನಿಲಯದ ಮುಂದಿನ ಕುಲಪತಿಯಾಗಲು ವಿನಂತಿಯನ್ನು ಔಪಚಾರಿಕವಾಗಿ ಸಲ್ಲಿಸಿದ್ದಾರೆ ಎಂದು ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷ ತಿಳಿಸಿದೆ. ಇಮ್ರಾನ್‌ ಖಾನ್‌ ಅವರ ಈ ನಡೆ ಕುತೂಹಲ ಮೂಡಿಸಿದೆ.

    VISTARANEWS.COM


    on

    By

    Imran Khan
    Koo

    ಇಸ್ಲಾಮಾಬಾದ್: ಜೈಲಿನಲ್ಲಿರುವ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (PTI) ಮುಖ್ಯಸ್ಥ ಮತ್ತು ಪಾಕಿಸ್ತಾನದ (pakistan) ಮಾಜಿ ಪ್ರಧಾನಿ (ex PM) ಇಮ್ರಾನ್ ಖಾನ್ (Imran Khan) ಅವರು ಬ್ರಿಟನ್‌ನ (Britain) ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ (Oxford University) ಮುಂದಿನ ಕುಲಪತಿಯಾಗಲು ಬಯಸಿದ್ದು, ಆ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಸೋಮವಾರ ತಿಳಿಸಿದೆ.

    ಆಕ್ಸ್‌ಫರ್ಡ್ ನ ಹಳೆಯ ವಿದ್ಯಾರ್ಥಿಯಾದ ಖಾನ್ ಅವರು ತಮ್ಮ ಪಕ್ಷದ ಲಂಡನ್ ಮೂಲದ ವಕ್ತಾರರಾದ ಸೈಯದ್ ಜುಲ್ಫಿಕರ್ ಬುಖಾರಿ ಅವರ ಮೂಲಕ ಪ್ರತಿಷ್ಠಿತ ವಿಶ್ವವಿದ್ಯಾನಿಲಯದ ಮುಂದಿನ ಕುಲಪತಿಯಾಗಲು ವಿನಂತಿಯನ್ನು ಔಪಚಾರಿಕವಾಗಿ ಸಲ್ಲಿಸಿದರು ಎಂದು ಪಕ್ಷವು ತಿಳಿಸಿದೆ.

    ಪಾಕಿಸ್ತಾನದ ರಾಷ್ಟ್ರೀಯ ನಾಯಕ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್, ಪಾಕಿಸ್ತಾನದ ಅತಿದೊಡ್ಡ ರಾಜಕೀಯ ಪಕ್ಷವಾದ ಪಿಟಿಐ ಸಂಸ್ಥಾಪಕರು, ಅಧ್ಯಕ್ಷರು, ಮಾಜಿ ಕ್ರಿಕೆಟಿಗರು, ಲೋಕೋಪಕಾರಿಯೂ ಆಗಿದ್ದು, ಅವರಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯೂ ಹೌದು. ಜೈಲುವಾಸದಲ್ಲಿರುವಾಗಲೇ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಕುಲಪತಿ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ ಎಂದು ಪಿಟಿಐ ಎಕ್ಸ್ ನಲ್ಲಿ ಹೇಳಿದೆ.

    ಒಂದು ವರ್ಷಕ್ಕೂ ಹೆಚ್ಚು ಕಾಲ ಕಾನೂನುಬಾಹಿರವಾಗಿ ಸೆರೆವಾಸದಲ್ಲಿದ್ದರೂ ಖಾನ್ ಅವರ ತತ್ತ್ವಗಳು ಮತ್ತು ಕಾರಣಗಳಿಗಾಗಿ ಅವರು ಬದ್ಧರಾಗಿದ್ದಾರೆ. ಅರ್ಜಿಯನ್ನು ಔಪಚಾರಿಕವಾಗಿ ಸಲ್ಲಿಸಲಾಗಿದೆ ಎಂದು ಜುಲ್ಫಿ ಬುಖಾರಿ ದೃಢಪಡಿಸಿದ್ದಾರೆ ಎಂದು ಪಿಟಿಐ ತಿಳಿಸಿದೆ.

    ಹಾಂಗ್‌ಕಾಂಗ್‌ನ ಕೊನೆಯ ಬ್ರಿಟಿಷ್ ಗವರ್ನರ್ ಕ್ರಿಸ್ ಪ್ಯಾಟನ್ ಫೆಬ್ರವರಿಯಲ್ಲಿ ಆಕ್ಸ್‌ಫರ್ಡ್ ಚಾನ್ಸೆಲರ್ ಹುದ್ದೆಯಿಂದ ಕೆಳಗಿಳಿಯುವುದಾಗಿ ಘೋಷಿಸಿದ ಅನಂತರ ಖಾನ್ ಅವರ ಪಕ್ಷದ ಘೋಷಣೆ ಬಂದಿದೆ.
    ವಿಶ್ವವಿದ್ಯಾನಿಲಯದ ವೆಬ್‌ಸೈಟ್ ಪ್ರಕಾರ, ಮುಂದಿನ 10 ವರ್ಷಗಳ ಅವಧಿಯ ಅಭ್ಯರ್ಥಿಗಳ ಪಟ್ಟಿಯನ್ನು ಅಕ್ಟೋಬರ್‌ವರೆಗೆ ಸಾರ್ವಜನಿಕಗೊಳಿಸಲಾಗುವುದಿಲ್ಲ ಮತ್ತು ಆ ತಿಂಗಳ ಕೊನೆಯಲ್ಲಿ ಮತದಾನ ನಡೆಯಲಿದೆ ಎನ್ನಲಾಗಿದೆ.

    ಖಾನ್ ಅವರು ತತ್ತ್ವಶಾಸ್ತ್ರ, ರಾಜಕೀಯ ಮತ್ತು ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದ ಅನಂತರ 1975ರಲ್ಲಿ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. ಬಳಿಕ ಅವರು ಪಾಕಿಸ್ತಾನದ ಶ್ರೇಷ್ಠ ಕ್ರಿಕೆಟ್ ಆಟಗಾರರಲ್ಲಿ ಒಬ್ಬರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಬ್ರಿಟನ್‌ನ ಗಾಸಿಪ್ ನಿಯತಕಾಲಿಕೆಗಳ ಪುಟಗಳನ್ನು ನಿಯಮಿತವಾಗಿ ಸ್ಥಾನ ಪಡೆದ ಅವರು, ಪಾಕಿಸ್ತಾನದ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದರು. ಬ್ರಿಟಿಷ್ ಸಮಾಜವಾದಿ ಮತ್ತು ಚಲನಚಿತ್ರ ನಿರ್ಮಾಪಕಿ ಜೆಮಿಮಾ ಗೋಲ್ಡ್ ಸ್ಮಿತ್ ಸೇರಿದಂತೆ ತಮ್ಮ ಜೀವನದಲ್ಲಿ ಮೂರು ಬಾರಿ ವಿವಾಹವಾಗಿರುವ ಅವರು, 2005 ರಿಂದ 2014 ರವರೆಗೆ ಬ್ರಾಡ್‌ಫೋರ್ಡ್ ವಿಶ್ವವಿದ್ಯಾಲಯದ ಕುಲಪತಿಯಾಗಿ ಸೇವೆ ಸಲ್ಲಿಸಿದರು. ಅನಂತರ ರಾಜಕೀಯಕ್ಕೆ ಪ್ರವೇಶ ಪಡೆದರು. 2018 ರಿಂದ 2022 ರವರೆಗೆ ಪಾಕಿಸ್ತಾನದ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.


    2022ರಲ್ಲಿ ಖಾನ್ ಅವರು ವಿಶ್ವಾಸ ಮತವನ್ನು ಗೆಲ್ಲಲು ಸಾಧ್ಯವಾಗದ ಕಾರಣ ಪ್ರಧಾನಿ ಸ್ಥಾನವನ್ನು ಕಳೆದುಕೊಂಡರು. ರಾಜಕೀಯ ಪುನರಾಗಮನಕ್ಕಾಗಿ ಹೋರಾಡಿದ ಅವರು ರಾಲಿಗಳಲ್ಲಿ ಭಾರಿ ಜನಸಮೂಹವನ್ನು ಸೇರಿಸಿದರು.

    ಇದನ್ನೂ ಓದಿ: Death Penalty: ಈ 7 ದೇಶಗಳಲ್ಲಿ ಅತ್ಯಾಚಾರ ನಡೆಸಿದರೆ ಮರಣ ದಂಡನೆಯೇ ಶಿಕ್ಷೆ!

    ಖಾನ್ ಅವರನ್ನು ಭ್ರಷ್ಟಾಚಾರ ಮತ್ತು ಹಿಂಸಾಚಾರದಂತಹ ವಿವಿಧ ಆರೋಪಗಳ ಮೇಲೆ ಕಳೆದ ವರ್ಷದ ಆಗಸ್ಟ್‌ನಲ್ಲಿ ಬಂಧಿಸಲಾಯಿತು. ಒಂದು ವರ್ಷ ಜೈಲಿನಲ್ಲಿ ಕಳೆದರು. ಅವರು ಅಧಿಕಾರವನ್ನು ವಶಪಡಿಸಿಕೊಳ್ಳುವುದನ್ನು ತಡೆಯಲು ರಾಜಕೀಯ ಪ್ರೇರಿತ ಪ್ರಯತ್ನಗಳು ಕಾರಣ ಎಂಬ ಆರೋಪವನ್ನು ಅವರು ತಳ್ಳಿ ಹಾಕಿದ್ದಾರೆ.

    Continue Reading
    Advertisement
    Gold In Country
    ವಾಣಿಜ್ಯ19 mins ago

    Gold In Country: ಅತೀ ಹೆಚ್ಚು ಚಿನ್ನವನ್ನು ಹೊಂದಿರುವ ದೇಶಗಳಲ್ಲಿ ಭಾರತ ಯಾವ ಸ್ಥಾನದಲ್ಲಿದೆ?

    Viral Video
    Latest21 mins ago

    Viral Video: ತಂದೆಯ ವಿರುದ್ಧ ಎಫ್ಐಆರ್ ದಾಖಲಿಸಿದ 5 ವರ್ಷದ ಬಾಲಕ; ಅಸಲಿ ಕಾರಣವೇನು ಗೊತ್ತಾ?

    Viral Video
    Latest23 mins ago

    Viral Video: ಆ್ಯಪಲ್ ಹೀಗೂ ತಿನ್ನಬಹುದು; ನೀವೂ ಟ್ರೈ ಮಾಡಿ ನೋಡಿ!

    Couple death
    ಕ್ರೈಂ3 hours ago

    Couple Death: ಪತ್ನಿಯ ಅನುಮಾನಾಸ್ಪದ ಸಾವು; ಜನರ ಆಕ್ರೋಶಕ್ಕೆ ಹೆದರಿ ಗಂಡ ಕೂಡ ಆತ್ಮಹತ್ಯೆ

    Mimi Chakraborty
    ಪ್ರಮುಖ ಸುದ್ದಿ3 hours ago

    Mimi Chakraborty : ಕೋಲ್ಕೊತಾ ಅತ್ಯಾಚಾರ ಪ್ರಕರಣವನ್ನು ವಿರೋಧಿಸಿದ ನಟಿ ಮಿಮಿ ಚಕ್ರವರ್ತಿಗೆ ಅತ್ಯಾಚಾರ ಬೆದರಿಕೆ!

    ದೇಶ3 hours ago

    Physical Abuse : ಅಶ್ಲೀಲ ಚಿತ್ರ ತೋರಿಸಿ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕ ಶಿಕ್ಷನ ಬಂಧನ

    Rishab Shetty
    ಪ್ರಮುಖ ಸುದ್ದಿ4 hours ago

    Rishab Shetty : ಭಾರತವನ್ನು ಕೆಟ್ಟದಾಗಿ ತೋರಿಸುವ ಸಿನಿಮಾಗಳಿಗೆ ಹಿಗ್ಗಾಮುಗ್ಗಾ ಜಾಡಿಸಿದ ರಿಷಭ್‌ ಶೆಟ್ಟಿ

    food poisoning tumkur
    ತುಮಕೂರು4 hours ago

    Food Poisoning: ಬೀಗರೂಟ ಸೇವಿಸಿ ಮನೆಗೆ ಬಂದವರು ಅಸ್ವಸ್ಥ; 20ಕ್ಕೂ ಹೆಚ್ಚು ಮಂದಿ ಆಸ್ಪತ್ರೆಪಾಲು

    PM Modi to visits US
    ಪ್ರಮುಖ ಸುದ್ದಿ4 hours ago

    PM Modi US Visit : ಸೆಪ್ಟೆಂಬರ್‌ನಲ್ಲಿ ಅಮೆರಿಕ ಪ್ರವಾಸ ಮಾಡಲಿದ್ದಾರೆ ಮೋದಿ; ಅಮೆರಿಕ ಚುನಾವಣೆ ನಡುವೆ ಕುತೂಹಲ ಮೂಡಿಸಿದೆ ಅವರ ಭೇಟಿ

    Job Alert
    ಕರ್ನಾಟಕ4 hours ago

    Banking Recruitment 2024: ರಾಷ್ಟ್ರೀಯ ಬ್ಯಾಂಕ್‌‌ಗಳಲ್ಲಿ 4455 ಹುದ್ದೆಗೆ ನೇಮಕ: ಅರ್ಜಿ ಸಲ್ಲಿಸಲು ಇಂದು ಅಂತಿಮ ದಿನ

    Sharmitha Gowda in bikini
    ಕಿರುತೆರೆ11 months ago

    Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

    Kannada Serials
    ಕಿರುತೆರೆ10 months ago

    Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

    Bigg Boss- Saregamapa 20 average TRP
    ಕಿರುತೆರೆ10 months ago

    Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

    Kannada Serials
    ಕಿರುತೆರೆ11 months ago

    Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

    galipata neetu
    ಕಿರುತೆರೆ9 months ago

    Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

    Kannada Serials
    ಕಿರುತೆರೆ11 months ago

    Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

    Bigg Boss' dominates TRP; Sita Rama fell to the sixth position
    ಕಿರುತೆರೆ10 months ago

    Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

    geetha serial Dhanush gowda engagement
    ಕಿರುತೆರೆ8 months ago

    Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

    Kannada Serials
    ಕಿರುತೆರೆ11 months ago

    Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

    varun
    ಕಿರುತೆರೆ9 months ago

    Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

    karnataka Weather Forecast
    ಮಳೆ2 weeks ago

    Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

    Bellary news
    ಬಳ್ಳಾರಿ2 weeks ago

    Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

    Maravoor bridge in danger Vehicular traffic suspended
    ದಕ್ಷಿಣ ಕನ್ನಡ2 weeks ago

    Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

    Wild Animals Attack
    ಚಿಕ್ಕಮಗಳೂರು2 weeks ago

    Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

    Karnataka Weather Forecast
    ಮಳೆ2 weeks ago

    Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

    assault case
    ಬೆಳಗಾವಿ2 weeks ago

    Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

    karnataka rain
    ಮಳೆ3 weeks ago

    Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

    karnataka Rain
    ಮಳೆ3 weeks ago

    Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

    Karnataka Rain
    ಮಳೆ3 weeks ago

    Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

    karnataka Rain
    ಮಳೆ3 weeks ago

    Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

    ಟ್ರೆಂಡಿಂಗ್‌