How to Buy Fresh Garlic: ಬೆಳ್ಳುಳ್ಳಿ ಖರೀದಿಸುವಾಗ ಇನ್ನು ಮುಂದೆ ಹುಷಾರಾಗಿರಿ! - Vistara News

ಲೈಫ್‌ಸ್ಟೈಲ್

How to Buy Fresh Garlic: ಬೆಳ್ಳುಳ್ಳಿ ಖರೀದಿಸುವಾಗ ಇನ್ನು ಮುಂದೆ ಹುಷಾರಾಗಿರಿ!

How to Buy Fresh Garlic: ಬೆಳ್ಳುಳ್ಳಿಯಲ್ಲಿ ಹೇಗೆ ಕಲಬೆರಕೆ ಸಾಧ್ಯ ಎಂದು ಹೌಹಾರಬೇಡಿ. ನಕಲಿ ಬೆಳ್ಳುಳ್ಳಿಯೂ ಮಾರುಕಟ್ಟೆಯನ್ನು ಪ್ರವೇಶಿಸುವ ಮೂಲಕ ಇಂಥ ಆಹಾರಗಳೂ ಕೂಡ ನಕಲಿ ಸಿಗುತ್ತಿವೆ ಎಂಬುದು ಸಾಬೀತಾಗಿದೆ. ಆ ಮೂಲಕ ಯಾವುದನ್ನೂ ನಂಬುವಂತಿಲ್ಲ ಎಂಬ ಎಚ್ಚರಿಕೆಯನ್ನೂ ಇದು ನೀಡಿದೆ. ಬೆಳ್ಳುಳ್ಳಿ ಖರೀದಿಸುವಾಗ ಯಾವ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು? ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Blood Pressure
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಆಹಾರದಲ್ಲಿ ಕಲಬೆರಕೆ ಎಂಬುದು ಇತ್ತೀಚೆಗೆ ಸರ್ವೇ ಸಾಮಾನ್ಯ. ಯಾವುದೇ ಆಹಾರವನ್ನು ಕೂಲಂಕುಷವಾಗಿ ಪರೀಕ್ಷೆ ಮಾಡಿದರೂ ಒಂದಲ್ಲ ಒಂದು ವಿಧದಲ್ಲಿ ಕಲಬೆರಕೆಯ ಅಪಾಯ ಇದ್ದೇ ಇದೆ. ಹಾಲು, ಪನೀರ್‌, ತುಪ್ಪ, ಚೀಸ್‌ ಸೇರಿದಂತೆ ಹಲವು ನಿತ್ಯ ಬಳಕೆಯ ಆಹಾರಗಳಲ್ಲಿ ಕಲಬೆರಕೆ ಕಂಡು ಬರುತ್ತಿರುವುದು ಇತ್ತೀಚಿನ ದಿನಗಳಲ್ಲಿ ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಇದೀಗ ಸರದಿ ಬೆಳ್ಳುಳ್ಳಿಯದು. ಬೆಳ್ಳುಳ್ಳಿಯಲ್ಲಿ ಹೇಗೆ ಕಲಬೆರಕೆ ಸಾಧ್ಯ ಎಂದು ಹೌಹಾರಬೇಡಿ. ನಕಲಿ ಬೆಳ್ಳುಳ್ಳಿಯೂ ಮಾರುಕಟ್ಟೆಯನ್ನು ಪ್ರವೇಶಿಸುವ ಮೂಲಕ ಇಂಥ ಆಹಾರಗಳೂ ಕೂಡ ನಕಲಿ ಸಿಗುತ್ತಿವೆ ಎಂಬುದು ಸಾಬೀತಾಗಿದೆ. ಆ ಮೂಲಕ ಯಾವುದನ್ನೂ ನಂಬುವಂತಿಲ್ಲ ಎಂಬ ಎಚ್ಚರಿಕೆಯನ್ನೂ ಇದು ನೀಡಿದೆ. ಇತ್ತೀಚೆಗಷ್ಟೇ ಮಹಾರಾಷ್ಟ್ರದ ಅಕೋಲ ಜಿಲ್ಲೆಯಲ್ಲಿ ನಕಲಿ ಬೆಳ್ಳುಳ್ಳಿಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದು ಭಾರೀ ಸುದ್ದಿಯಾಗುತ್ತಿದೆ. ಇದರ ವಿಡಿಯೋಗಳೂ ವೈರಲ್‌ ಆಗುತ್ತಿವೆ. ವಿಡಿಯೋನಲ್ಲಿ ಒಬ್ಬಾತ ಬೆಳ್ಳುಳ್ಳಿಯ ಸಿಪ್ಪೆ ಸುಲಿಯುತ್ತಿದ್ದು, ಒಳಗೆ ನಿಜವಾದ ಬೆಳ್ಳುಳಿಯ ಎಸಳಿನ ಬದಲಾಗಿ ಸಿಮೆಂಟ್‌ನಿಂದ ಮಾಡಲ್ಪಟ್ಟ ಗಟ್ಟಿಯಾದ ಬೆಳ್ಳುಳ್ಳಿ ಎಸಳುಗಳು ದೊರೆತುದು ಗ್ರಾಹಕರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ. ಹೀಗೂ ನಕಲಿ ಸೃಷ್ಟಿಯಾಗುತ್ತದೆಯೇ ಎಂಬ ಆತಂಕವನ್ನೂ ಇದು ಸೃಷ್ಟಿ ಮಾಡಿದೆ. ಬನ್ನಿ, ನೀವೂ ಬೆಳ್ಳುಳ್ಳಿ ಕೊಳ್ಳುವ ಮೊದಲು ಕೆಲವು ಸಾಮಾನ್ಯ ಪರೀಕ್ಷೆಗಳನ್ನು ಮಾಡಿಯೇ ಖರೀದಿಸಿಕೊಳ್ಳಿ. ಇಲ್ಲಿವೆ (How to Buy Fresh Garlic) ಸರಿಯಾದ ಬೆಳ್ಳುಳ್ಳಿಯ ಆಯ್ಕೆಯ ಟಿಪ್ಸ್‌:

Garlic Sore Throat

ಬೆಳ್ಳುಳ್ಳಿಯನ್ನು ಕೊಳ್ಳುವಾಗ ಗಡಿಬಿಡಿ ಮಾಡಬೇಡಿ. ಸಮಾಧಾನದಿಂದ ಅದರ ಆಕಾರ ಹಾಗೂ ಗಾತ್ರವನ್ನು ಪರಿಶೀಲಿಸಿ. ಸಣ್ಣ ಎಸಳುಗಳ ಬೆಳ್ಳುಳ್ಳಿ ಕಾಣಿಸಿದರೆ ಕೊಂಚ ಎಚ್ಚರಿಕೆ ವಹಿಸಿ. ಇಂಥದ್ದರಲ್ಲಿ ನಕಲಿ ಇರುವ ಸಂಭವ ಹೆಚ್ಚು.

ಬೆಳ್ಳುಳ್ಳಿಯ ಬಣ್ಣವನ್ನು ಗಮನಿಸಿ. ಸಾಮಾನ್ಯವಾಗಿ ಬೆಳ್ಳುಳ್ಳಿ ಬೆಳ್ಳಗೆ ಇದ್ದರೂ ಅದರ ಸಿಪ್ಪೆಯಲ್ಲಿ ಅಲ್ಲಲ್ಲಿ, ಪಿಂಕ್‌ ಹಾಗೂ ನೇರಳೆ ಬಣ್ಣದ ರೇಖೆಗಳು, ಕುರುಹುಗಳು ಇರುತ್ತವೆ. ನಿಮ್ಮ ಬೆಳ್ಳುಳ್ಳಿ ಬಹಳ ಬಿಳಿಯಿದ್ದರೆ ಹಾಗೂ ಹಳದಿ ಬಣ್ಣದ ಛಾಯೆಗಳು ಅಲ್ಲಲ್ಲಿ ಕಾಣಿಸಿದರೆ ಅದು ನಕಲಿಯಾಗಿರುವ ಸಾಧ್ಯತೆ ಹೆಚ್ಚು.

garlic

ಅತ್ಯಂತ ಒಳ್ಳೆಯ ಉಪಾಯ ಎಂದರೆ ನೀವೇ ಮುಟ್ಟಿ ನೋಡಿ ಖರೀದಿಸುವುದು. ಬೆಳ್ಳುಳ್ಳಿಯನ್ನು ಕೈಯಲ್ಲಿ ಹಿಡಿದು, ಅದರ ಎಸಳೊಂದನ್ನು ಸ್ವಲ್ಪ ಹಿಸುಕಿ ನೋಡಿ. ಅದು ಅತಿಯಾಗಿ ಮೆದುವಾಗಿದ್ದರೆ, ಅದು ಕಲಬೆರಕೆಯಾಗಿರಲೂಬಹುದು. ಇಂಜೆಕ್ಷನ್‌ ನೀಡಿದ ಬೆಳ್ಳುಳ್ಳಿಗಳೂ ಮಾರುಕಟ್ಟೆಗೆ ಬರುತ್ತವೆ. ಹಾಗಾಗಿ ಈ ಬಗ್ಗೆಯೂ ಎಚ್ಚರಿಕೆ ವಹಿಸಿ.

ಬೆಳ್ಳುಳ್ಳಿಯ ಪರೀಕ್ಷೆಯನ್ನೂ ನೀವು ಮಾಡಬಹುದು. ಬೆಳ್ಳುಳ್ಳಿ ತನ್ನ ವಾಸನೆಯ ಮೂಲಕವೇ ಪ್ರಸಿದ್ಧವಾದ್ದರಿಂದ ಇದರ ಗಾಢತೆಯ ಅರಿವು ಪ್ರತಿಯೊಬ್ಬರಿಗೂ ಇದ್ದೇ ಇದೆ. ಹಾಗಾಗಿ, ಒಮ್ಮೆ ಸ್ವಲ್ಪ ಹಿಸುಕಿ ಮೂಸಿ ನೋಡಿ. ಸ್ವಲ್ಪ ಕೆಮಿಕಲ್‌ ಯುಕ್ತ ವಾಸನೆ ಬಂದರೂ ಅದು ನಕಲಿಯೋ, ಕಲಬೆರಕೆಯದ್ದೋ ಆಗಿರಬಹುದು.

Garlic

ಇವ್ಯಾವುವೂ ಗೊತ್ತಾಗದಿದ್ದರೆ ನೀರಿನಲ್ಲಿ ಹಾಕುವ ಪರೀಕ್ಷೆಯನ್ನೂ ಮಾಡಬಹುದು. ನಿಜವಾದ ಬೆಳ್ಳುಳ್ಳಿ ನೀರಿನಲ್ಲಿ ಮುಳುಗುತ್ತದೆ. ನಕಲಿಯಾಗಿದ್ದರೆ ತೇಲುವ ಸಂಭವ ಹೆಚ್ಚು.

ಇದನ್ನೂ ಓದಿ: Home Remedies: ಮಕ್ಕಳನ್ನು ಕಾಡುವ ಶೀತ-ಕೆಮ್ಮಿಗೆ ಮನೆಯಲ್ಲೇ ಇದೆ ಉಪಶಮನ

ದರದ ಬಗ್ಗೆ ಗಮನ ಕೊಡಿ. ಬೆಳ್ಳುಳ್ಳಿಗೆ ದರ ಹೆಚ್ಚಿರುವ ಸಮಯದಲ್ಲಿ, ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಕೊಡುವ ವ್ಯಾಪಾರಿಯ ಬೆಳ್ಳುಳ್ಳಿಗಳಲ್ಲಿ ನಕಲಿಯೂ ಮಿಕ್ಸ್‌ ಆಗಿರಬಹುದು. ನಿಮಗೆ ಕಾಣುವ, ನಿಮ್ಮ ಕೈಗೆ ಸಿಗುವ ಬೆಳ್ಳುಳ್ಳಿ ನಿಜವಾದೇ ನೀಡಿ, ನಿಮಗೆ ಪ್ಯಾಕ್‌ ಮಾಡುವ ಬೆಳ್ಳುಳ್ಳಿಯಲ್ಲಿ ನಕಲಿ ಮಿಕ್ಸ್‌ ಆಗಿರುವ ಸಾಧ್ಯತೆಯೂ ಇಲ್ಲದಿಲ್ಲ. ಹಾಗಾಗಿ ಅತಿ ಕಡಿಮೆ ಬೆಲೆಗೆ ಸಿಗುವ ಬೆಳ್ಳುಳ್ಳಿಯ ಆಸೆಗೆ ಕೆಟ್ಟ ಬೆಳ್ಳುಳ್ಳಿ ಖರೀದಿಸಿ ಮೋಸ ಹೋಗಬೇಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆಹಾರ/ಅಡುಗೆ

Non Vegetarian Population: ಜಗತ್ತಿನಲ್ಲಿ ಕುಸಿಯುತ್ತಿದೆ ಮಾಂಸಾಹಾರಿಗಳ ಸಂಖ್ಯೆ! ಕಡಿಮೆ ಮಾಂಸಾಹಾರದ ದೇಶಗಳಲ್ಲಿ ಭಾರತವೇ ನಂ.1

ಆರೋಗ್ಯದ ಕಾಳಜಿಯಿಂದ, ಧರ್ಮ ಮತ್ತು ಸಂಸ್ಕೃತಿಯ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಸಸ್ಯಾಹಾರಿ ಆಹಾರವನ್ನು ಅನುಸರಿಸುತ್ತಾರೆ. ವಿಶ್ವದಲ್ಲಿ ಹಲವು ದೇಶಗಳಲ್ಲಿ ಮಾಂಸಾಹಾರಿಗಳು ಕಡಿಮೆಯಾಗುತ್ತಿದ್ದಾರೆ. ಅದರಲ್ಲೂ ಈ ಪ್ರಮುಖ ಏಳು ದೇಶಗಳು ಕಡಿಮೆ ಮಾಂಸಾಹಾರಿ ಜನರನ್ನು (Non Vegetarian Population) ಹೊಂದಿದೆ.

VISTARANEWS.COM


on

By

Non Vegetarian Population
Koo

ಆರೋಗ್ಯಕರ ಜೀವನಶೈಲಿಗಾಗಿ ಅನೇಕರು ಮಾಂಸಾಹಾರವನ್ನು (Non Vegetarian Population) ತ್ಯಜಿಸಿ ಸಸ್ಯಾಹಾರವನ್ನು (vegetarian) ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಜನರು ಪ್ರಾಣಿಗಳ ಬಗ್ಗೆ ವಿಶೇಷ ಪ್ರೀತಿ ಮತ್ತು ಕಾಳಜಿಯಿಂದಾಗಿ ಸಸ್ಯಾಹಾರವನ್ನೇ ಆಹಾರದಲ್ಲಿ (food) ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಕೆಲವು ಸಂದರ್ಭಗಳಲ್ಲಿ ಜನರು ಧರ್ಮ ಮತ್ತು ಸಂಸ್ಕೃತಿಯ ಕಾರಣದಿಂದ ಸಸ್ಯಾಹಾರಿ ಆಹಾರವನ್ನು ಅನುಸರಿಸುತ್ತಾರೆ. ವಿಶ್ವದಲ್ಲಿ ಹಲವು ದೇಶಗಳಲ್ಲಿ ಮಾಂಸಾಹಾರಿಗಳು ಕಡಿಮೆಯಾಗುತ್ತಿದ್ದಾರೆ. ಅದರಲ್ಲೂ ಈ ಪ್ರಮುಖ ಏಳು ದೇಶಗಳು ಕಡಿಮೆ ಮಾಂಸಾಹಾರಿ ಜನರನ್ನು ಹೊಂದಿದೆ.


ಭಾರತ

ಭಾರತವು ವಿಶ್ವದಲ್ಲೇ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮಾಂಸಾಹಾರ ಸೇವಿಸುವ ಜನರನ್ನು ಹೊಂದಿರುವ ದೇಶವಾಗಿದೆ. ʼವರ್ಲ್ಡ್‌ ಅಟ್ಲಾಸ್ʼ ಪ್ರಕಾರ ಪ್ರತಿ ವರ್ಷಕ್ಕೆ ತಲಾ ಒಬ್ಬರು ಕೇವಲ 3 ಕೆಜಿ ಮಾಂಸವನ್ನು ಮಾತ್ರ ಸೇವಿಸುತ್ತಾರೆ. ಇದಕ್ಕೆ ಹಲವಾರು ಅಂಶಗಳು ಕೊಡುಗೆ ನೀಡುತ್ತದೆ. ಇದರಲ್ಲಿ ಧರ್ಮವು ಅತ್ಯಂತ ಪ್ರಮುಖವಾದದ್ದು.


ಮೆಕ್ಸಿಕೋ

ಮೆಕ್ಸಿಕೋದಲ್ಲಿ ಸುಮಾರು ಶೇ. 19ರಷ್ಟು ಜನರು ಸಸ್ಯಾಹಾರಿಗಳು. ಅಲ್ಲಿನ ಜನರು ಆರೋಗ್ಯ ಕಾಳಜಿ, ಪ್ರಾಣಿ ಹಕ್ಕುಗಳು ಮತ್ತು ಪರಿಸರ ಸಮಸ್ಯೆಗಳಿಂದಾಗಿ ಸಸ್ಯ ಆಧಾರಿತ ಆಹಾರಕ್ಕೆ ಬದಲಾಗುತ್ತಿದ್ದಾರೆ. ಪ್ರಮುಖ ನಗರಗಳಲ್ಲಿ ಹೆಚ್ಚು ಸಸ್ಯಾಹಾರಿ ರೆಸ್ಟೋರೆಂಟ್‌ಗಳೇ ಇವೆ.

ಇಸ್ರೇಲ್

ಮಾಂಸಾಹಾರ ಸೇವನೆಯನ್ನು ನಿರ್ಬಂಧಿಸುವ ಜುದಾಯಿಸಂನಿಂದಾಗಿ ಇಸ್ರೇಲ್ ಕಡಿಮೆ ಮಾಂಸಾಹಾರಿ ಜನಸಂಖ್ಯೆಯನ್ನು ಹೊಂದಿದೆ. ದೇಶವು ವೇಗವಾಗಿ ಸಸ್ಯಾಹಾರಿಗಳಿಗೆ ಸ್ವರ್ಗವಾಗಿ ಮಾರ್ಪಡುತ್ತಿದೆ. ನೂರಾರು ರೆಸ್ಟೋರೆಂಟ್‌ಗಳು ಇಲ್ಲಿ ಸಸ್ಯಾಹಾರಿ ಊಟವನ್ನೇ ನೀಡುತ್ತಿವೆ. 2014 ರಲ್ಲಿ ವಿಶ್ವದ ಅತಿದೊಡ್ಡ ಸಸ್ಯಾಹಾರಿ ಉತ್ಸವವನ್ನು ಟೆಲ್ ಅವಿವ್‌ನಲ್ಲಿ ಆಯೋಜಿಸಲಾಯಿತು.

ಇಥಿಯೋಪಿಯಾ

ಆಫ್ರಿಕನ್ ದೇಶವು ಮಾಂಸ ಸೇವನೆಯ ಪ್ರಮಾಣವನ್ನು ಬಹಳ ಕಡಿಮೆ ಹೊಂದಿದೆ. ಬಡತನದ ಪ್ರಮಾಣ ಹೆಚ್ಚಿರುವುದರಿಂದ ಹೆಚ್ಚಿನ ಜನರಿಗೆ ಮಾಂಸಾಹಾರ ಇಲ್ಲಿ ದೊರೆಯುತ್ತಿಲ್ಲ. ಸರಾಸರಿಯಾಗಿ ದೇಶದ ಜನರು ತಲಾ 2.58 ಕೆ.ಜಿ. ಗೋಮಾಂಸ ಮತ್ತು ಕರುವಿನ ಮಾಂಸವನ್ನು ಸೇವಿಸುತ್ತಾರೆ. ಕೇವಲ 0.45 ಕೆ.ಜಿ. ಕೋಳಿ ಮಾಂಸಗಳನ್ನು ಸೇವಿಸುತ್ತಾರೆ.

ತೈವಾನ್

ಬೌದ್ಧಧರ್ಮದ ಕಾರಣದಿಂದಾಗಿ ತೈವಾನ್ ಗಣನೀಯ ಪ್ರಮಾಣದ ಸಸ್ಯಾಹಾರಿ ಜನಸಂಖ್ಯೆಯನ್ನು ಹೊಂದಿದೆ. ಯಾಕೆಂದರೆ ಧರ್ಮವು ಮಾಂಸ ಮುಕ್ತ ಆಹಾರಕ್ಕಾಗಿ ಪ್ರತಿಪಾದಿಸುತ್ತದೆ. ಅಲ್ಲದೇ ದೇಶದಲ್ಲಿ ಹಲವಾರು ಬಾಯಲ್ಲಿ ನೀರೂರಿಸುವಂತ ಸಸ್ಯಾಹಾರಿ ಪಾಕಪದ್ಧತಿಗಳಿವೆ. ಸರ್ಕಾರವು ಶಾಲೆಗಳು ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ಸಸ್ಯಾಹಾರಿ ಆಯ್ಕೆಗಳನ್ನೇ ಒದಗಿಸುತ್ತದೆ.


ಜರ್ಮನಿ

ಜರ್ಮನಿಯಲ್ಲಿ ಹೆಚ್ಚು ಜನರು ಮಾಂಸಾಹಾರಿ ಜೀವನಶೈಲಿಯನ್ನು ಬಿಟ್ಟು ಸಸ್ಯಾಹಾರಿ ಆಹಾರವನ್ನು ಆರಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಬಲವಾದ ಪ್ರಾಣಿ ಹಕ್ಕುಗಳ ಆಂದೋಲನವನ್ನು ಹೊಂದಿದೆ. ಇದು ಮಾಂಸಾಹಾರಿ ಜನಸಂಖ್ಯೆಯ ಕುಸಿತಕ್ಕೆ ಕಾರಣವಾಗಿದೆ. ಬರ್ಲಿನ್‌ನಂತಹ ಪ್ರಮುಖ ನಗರಗಳು ಹೆಚ್ಚು ಸಸ್ಯಾಹಾರಿ ರೆಸ್ಟೊರೆಂಟ್‌ಗಳನ್ನು ಹೊಂದಿದ್ದು ಅವು ಸೌರ್‌ಕ್ರಾಟ್ ಮತ್ತು ಪ್ರಿಟ್ಜೆಲ್‌ಗಳಂತಹ ಸಾಂಪ್ರದಾಯಿಕ ಭಕ್ಷ್ಯಗಳನ್ನು ನೀಡುತ್ತವೆ.

ಇದನ್ನೂ ಓದಿ: Indian Dessert 2024: ವಿಶ್ವದ ಪ್ರಸಿದ್ಧ ʼಸಿಹಿತಿಂಡಿ ತಾಣʼಗಳ ಪಟ್ಟಿಯಲ್ಲಿ ಸ್ಥಾನ ಪಡೆದ 10 ಭಾರತೀಯ ಸ್ವೀಟ್‌ ಸ್ಟಾಲ್‌ಗಳಿವು

ಮೊಜಾಂಬಿಕ್

ಪೂರ್ವ ಆಫ್ರಿಕಾದ ದೇಶವು ವಿಶ್ವದ ಅತ್ಯಂತ ಬಡ ದೇಶಗಳಲ್ಲಿ ಒಂದಾಗಿದೆ. ಪರಿಣಾಮವಾಗಿ, ಸರಾಸರಿ ಮಾಂಸ ಸೇವನೆಯು ಅಲ್ಲಿ ಕಡಿಮೆಯಾಗಿದೆ. ಮೊಜಾಂಬಿಕ್‌ನಲ್ಲಿರುವ ಜನರು ಹೆಚ್ಚಾಗಿ ಆಮದು ಮಾಡಿಕೊಂಡ ಮಾಂಸವನ್ನು ಸೇವಿಸುತ್ತಾರೆ.

Continue Reading

ಆರೋಗ್ಯ

Health Tips: ಮಲಗುವ ಮುನ್ನ ಹಾಲು, ಬೆಲ್ಲ ಸೇವಿಸಿದರೆ ಹಲವು ಸಮಸ್ಯೆಗಳಿಗೆ ಪರಿಹಾರ

ಕಬ್ಬಿನ ರಸದಿಂದ ಕಚ್ಚಾ ರೂಪದಲ್ಲಿ ಸಂಗ್ರಹಿಸುವ ಬೆಲ್ಲವು ಅನೇಕ ಆರೋಗ್ಯಕರ ಗುಣವನ್ನು (Health Tips) ಹೊಂದಿದೆ. ಪ್ರತಿ ದಿನ ರಾತ್ರಿ ಮಲಗುವ ಮುನ್ನ ಹಾಲು ಮತ್ತು ಬೆಲ್ಲವನ್ನು ಸೇವಿಸಲು ಆಯುರ್ವೇದದಲ್ಲಿ ಶಿಫಾರಸು ಮಾಡಲಾಗುತ್ತದೆ. ಇದರಿಂದ ಸಾಕಷ್ಟು ಪ್ರಯೋಜಗಳು ಇವೆ. ಅವು ಯಾವುದು ಎನ್ನುವ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

Health Tips
Koo

ಉತ್ತಮ ಆರೋಗ್ಯಕ್ಕಾಗಿ (Health Tips) ಹಾಲು (milk benefits) ಸೇವಿಸಬೇಕು ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಬರೀ ಹಾಲು ಕುಡಿಯುವುದು ಬೇಸರ. ಹೀಗಾಗಿ ಕೆಲವರು ಅರಶಿನ ಹಾಲು (turmeric milk), ಬೆಲ್ಲದ ಹಾಲನ್ನು (jaggery milk) ಶಿಫಾರಸು ಮಾಡುತ್ತಾರೆ. ಅರಶಿನ ಹಾಲಿನ ಪ್ರಯೋಜನಗಳ ಬಗ್ಗೆ ಸಾಕಷ್ಟು ಮಂದಿಗೆ ಗೊತ್ತಿದೆ. ಆದರೆ ಬೆಲ್ಲದ ಹಾಲು ಸೇವನೆಯು ಕೆಲವೊಂದು ಪ್ರಯೋಜನಗಳನ್ನು ಹೊಂದಿದೆ. ಇದಕ್ಕೆ ಆಯುರ್ವೇದ ತಜ್ಞರು ನೀಡಿರುವ ಸಲಹೆಗಳು ಇಲ್ಲಿವೆ.

ಹಾಲು ಉತ್ತಮ ಗುಣಮಟ್ಟದ ಪ್ರೊಟೀನ್ ಅನ್ನು ಹೊಂದಿದೆ. ಸ್ನಾಯುಗಳ ದುರಸ್ತಿ ಮತ್ತು ಬೆಳವಣಿಗೆಗೆ ಇದರ ಸೇವನೆ ಅವಶ್ಯಕವಾಗಿದೆ. ಹಾಲಿನಲ್ಲಿ ಬಿ12 ಮತ್ತು ವಿಟಮಿನ್ ಡಿಯಂತಹ ಪೋಷಕಾಂಶಗಳಿದ್ದು, ನರಗಳ ಕಾರ್ಯ ಮತ್ತು ಮೂಳೆಗಳ ಆರೋಗ್ಯಕ್ಕೆ ಅತ್ಯಂತ ಅವಶ್ಯಕವಾಗಿ ಬೇಕಾಗುವ ಆಹಾರವಾಗಿದೆ.

ಕಬ್ಬಿನ ರಸದಿಂದ ಕಚ್ಚಾ ರೂಪದಲ್ಲಿ ಸಂಗ್ರಹಿಸುವ ಬೆಲ್ಲವು ಅನೇಕ ಖನಿಜಗಳು ಮತ್ತು ವಿಟಮಿನ್‌ಗಳ ರೂಪದಲ್ಲಿ ಪೌಷ್ಟಿಕಾಂಶವನ್ನು ಒದಗಿಸುತ್ತದೆ. ಬೆಲ್ಲವು ಜೀರ್ಣಕಾರಿ ಬೆಂಕಿಯನ್ನು ಉತ್ತೇಜಿಸುತ್ತದೆ ಮತ್ತು ಕಫ ದೋಷವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಬೆಲ್ಲವು ಜೀರ್ಣವಾಗದ ಆಹಾರಗಳು ಮತ್ತು ಕರುಳಿನಲ್ಲಿ ಸಂಗ್ರಹವಾಗಬಹುದಾದ ಜೀವಾಣುಗಳನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ.

ಇದಲ್ಲದೆ ಬೆಲ್ಲವು ಕಬ್ಬಿನಾಂಶವನ್ನು ಹೊಂದಿದೆ. ಇದು ವಿಶೇಷವಾಗಿ ಕಬ್ಬಿಣದ ಕೊರತೆಯಿರುವ ವ್ಯಕ್ತಿಗಳಲ್ಲಿರಕ್ತಹೀನತೆಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಸಣ್ಣ ಪ್ರಮಾಣದ ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಇತರ ಖನಿಜಗಳನ್ನು ಹೊಂದಿರುವ ಬೆಲ್ಲವು ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡುತ್ತದೆ ಮತ್ತು ಚಯಾಪಚಯ ಪ್ರಕ್ರಿಯೆಗಳನ್ನು ಸುಸ್ಥಿಯಲ್ಲಿ ಇರಿಸುತ್ತದೆ.

ಸಂಸ್ಕರಿಸಿದ ಸಕ್ಕರೆಗಿಂತ ಭಿನ್ನವಾಗಿ ಬೆಲ್ಲವು ಕಡಿಮೆ ಗ್ಲೈಸೆಮಿಕ್ ಅನ್ನು ಹೊಂದಿದೆ. ಅಂದರೆ ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟದ ನಿಧಾನಗತಿಯ ಏರಿಕೆಗೆ ಕಾರಣವಾಗುತ್ತದೆ. ಇದು ಶಕ್ತಿಯ ಮಟ್ಟವನ್ನು ನಿರ್ವಹಿಸಲು ಉತ್ತಮ ಪರ್ಯಾಯವಾಗಿದೆ ಎನ್ನುತ್ತಾರೆ ಆಯುರ್ವೇದ ತಜ್ಞರು.

ಹಲವು ಸಮಸ್ಯೆಗಳಿಗೆ ಪರಿಹಾರ

ಹಾಲು ಮತ್ತು ಬೆಲ್ಲವು ಜೀರ್ಣಾಂಗ ವ್ಯವಸ್ಥೆಯಲ್ಲಿ ಶುಷ್ಕತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೆಚ್ಚುವರಿ ಶಾಖ ಮತ್ತು ಅತಿಯಾದ ಶೀತವನ್ನು ಕಡಿಮೆ ಮಾಡುತ್ತದೆ. ಇದು ಶಾಂತತೆ ಮತ್ತು ಸ್ಥಿರತೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ನಿದ್ರೆಯ ಸಮಸ್ಯೆಗಳು ಮತ್ತು ನಿದ್ರಾಹೀನತೆಗೆ ಇದು ಅತ್ಯುತ್ತಮ ಪರಿಹಾರವಾಗಿದೆ.

ಹಾಲಿನಲ್ಲಿರುವ ಕ್ಯಾಲ್ಸಿಯಂ ದೃಢವಾದ ಮೂಳೆ ಮತ್ತು ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಮುಖ್ಯವಾಗಿದೆ. ಬೆಲ್ಲವು ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಮೂಳೆಯ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.

ಮಿತವಾಗಿ ಸೇವಿಸಬೇಕು

ಬೆಲ್ಲ ಮಿಶ್ರಿತ ಹಾಲು ಮಿತವಾಗಿ ಸೇವಿಸುವುದು ಉತ್ತಮ. ವಿಶೇಷವಾಗಿ ರಕ್ತದಲ್ಲಿ ಸಕ್ಕರೆಯ ಸಮಸ್ಯೆ ಇರುವವರಿಗೆ ಬೆಲ್ಲವು ನೈಸರ್ಗಿಕ ಸಿಹಿಕಾರಕವಾಗಿದ್ದರೂ ಸಹ ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ.
ಡೈರಿ ಉತ್ಪನ್ನಗಳ ಅಲರ್ಜಿ ಇರುವವರು ಈ ಮಿಶ್ರಣವನ್ನು ತಪ್ಪಿಸಬೇಕು. ಬಾದಾಮ್ ಅಥವಾ ತೆಂಗಿನ ಹಾಲಿನಂತಹ ಪರ್ಯಾಯಗಳನ್ನು ಪರಿಗಣಿಸಬೇಕು ಎನ್ನುತ್ತಾರೆ ಪರಿಣತ ವೈದ್ಯರು.

15 ದಿನಗಳಿಗೊಮ್ಮೆ ಬೆಲ್ಲದೊಂದಿಗೆ ಹಾಲನ್ನು ಸೇವಿಸುವುದು ಉತ್ತಮ. ಆದರೆ ಇದನ್ನು ದೈನಂದಿನ ಅಭ್ಯಾಸವಾಗಿ ಸೇವಿಸುವುದು ಸರಿಯಲ್ಲ ಎಂಬ ಅಭಿಪ್ರಾಯವೂ ಇದೆ.


ವೈಜ್ಞಾನಿಕ ದೃಷ್ಟಿಕೋನದಿಂದ ಕ್ಯಾಲ್ಸಿಯಂ ಮತ್ತು ಕಬ್ಬಿಣದ ನಡುವಿನ ಸಂಭಾವ್ಯ ಪರಸ್ಪರ ಕ್ರಿಯೆಯಿಂದಾಗಿ ಹಾಲು ಮತ್ತು ಬೆಲ್ಲವನ್ನು ಸಂಯೋಜಿಸುವುದು ಸೂಕ್ತವಲ್ಲ. ಹಾಲಿನಲ್ಲಿ ಕ್ಯಾಲ್ಸಿಯಂ ಅಧಿಕವಾಗಿದೆ. ಇದು ಬೆಲ್ಲದಲ್ಲಿ ಕಂಡುಬರುವ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ. ಇದರಿಂದಾಗಿ ಬೆಲ್ಲದ ಪೌಷ್ಟಿಕಾಂಶದ ಪ್ರಯೋಜನಗಳನ್ನು ಒಟ್ಟಿಗೆ ಸೇವಿಸಿದಾಗ ಸಂಭಾವ್ಯವಾಗಿ ಇದು ಅದರ ಪ್ರಭಾವವನ್ನು ಕಡಿಮೆ ಮಾಡುತ್ತದೆ ಎಂಬ ಅಭಿಪ್ರಾಯವೂ ಇದೆ.

ಇದನ್ನೂ ಓದಿ: Eye Care Food: ನೀವು ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದೀರಾ? ಈ ಆಹಾರಗಳನ್ನು ಸೇವಿಸಿ

Continue Reading

ಬೆಂಗಳೂರು

Fortis Hospital: ಜನನಾಂಗದಿಂದ ಹೊರಗೆ ಚಾಚಿದ್ದ ಗರ್ಭಕೋಶ ರೋಬೋಟಿಕ್‌ ಮೂಲಕ ಮರುಸ್ಥಾಪನೆ!

39 ವರ್ಷದ ಅನಿವಾಸಿ ಭಾರತೀಯ ಮಹಿಳೆಯ ಜನನಾಂಗದ ಮೂಲಕ ಹೊರಗೆ ಹಿಗ್ಗಿಕೊಂಡಿದ್ದ ಗರ್ಭಕೋಶವನ್ನು ಫೋರ್ಟಿಸ್‌ ಆಸ್ಪತ್ರೆ (Fortis Hospital) ವೈದ್ಯರ ತಂಡ ಯಶಸ್ವಿಯಾಗಿ ರೋಬೋಟಿಕ್‌ ಶಸ್ತ್ರಚಿಕಿತ್ಸೆಯಿಂದ ಯಥಾಸ್ಥಿತಿಯಲ್ಲಿ ಇರಿಸಲು ಯಶಸ್ವಿಯಾಗಿದೆ. ಇದು ಅಪರೂಪದ ಶಸ್ತ್ರ ಚಿಕಿತ್ಸೆಯಾಗಿದೆ. ಫೋರ್ಟಿಸ್ ಆಸ್ಪತ್ರೆಯ ಮೂತ್ರಶಾಸ್ತ್ರ, ಸ್ತ್ರೀರೋಗ-ಆಂಕೊಲಾಜಿ ಮತ್ತು ರೋಬೋಟಿಕ್ ಶಸ್ತ್ರಚಿಕಿತ್ಸೆಯ ಹಿರಿಯ ಸಲಹೆಗಾರರಾದ ಡಾ. ರುಬಿನಾ ಶಾನವಾಜ್ ಅವರ ತಂಡ ಈ ಶಸ್ತ್ರಚಿಕಿತ್ಸೆ ನಡೆಸಿದೆ. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Fortis Hospital
Koo

ಬೆಂಗಳೂರು: 39 ವರ್ಷದ ಅನಿವಾಸಿ ಭಾರತೀಯ ಮಹಿಳೆಗೆ ತನ್ನ ಜನನಾಂಗದ ಮೂಲಕ ಹೊರಗೆ ಹಿಗ್ಗಿಕೊಂಡಿದ್ದ ಗರ್ಭಕೋಶವನ್ನು ಫೋರ್ಟಿಸ್‌ ಆಸ್ಪತ್ರೆ (Fortis Hospital) ವೈದ್ಯರ ತಂಡ ಯಶಸ್ವಿಯಾಗಿ ರೋಬೋಟಿಕ್‌ ಮೂಲಕ ಶಸ್ತ್ರಚಿಕಿತ್ಸೆಯ ನಡೆಸಿ ಯಥಾಸ್ಥಿತಿಗೆ ಪುನಃಸ್ಥಾಪಿಸಿದೆ.

ಫೋರ್ಟಿಸ್ ಆಸ್ಪತ್ರೆಯ ಮೂತ್ರಶಾಸ್ತ್ರ, ಸ್ತ್ರೀರೋಗ-ಆಂಕೊಲಾಜಿ ಮತ್ತು ರೋಬೋಟಿಕ್ ಶಸ್ತ್ರಚಿಕಿತ್ಸೆಯ ಹಿರಿಯ ಸಲಹೆಗಾರರಾದ ಡಾ. ರುಬಿನಾ ಶಾನವಾಜ್ ಅವರ ತಂಡ ಈ ಶಸ್ತ್ರಚಿಕಿತ್ಸೆ ನಡೆಸಿದೆ.

ಇದನ್ನೂ ಓದಿ: Pralhad Joshi: ಮುಂಬೈ, ಕೋಲ್ಕತಾದಲ್ಲಿ ಇವಿ ಬ್ಯಾಟರಿ ಚಾರ್ಜರ್ ಘಟಕಕ್ಕೆ ಬೆಂಗಳೂರು ಮಾದರಿ

ಈ ಕುರಿತು ಮಾತನಾಡಿದ ಡಾ. ರುಬಿನಾ, ಎರಡು ಮಕ್ಕಳನ್ನು ಹೊಂದಿರುವ 39 ವರ್ಷದ ಎನ್‌ಆರ್‌ಐ ಮಹಿಳೆಗೆ ನಾಲ್ಕು ವರ್ಷಗಳ ಹಿಂದೆಯೇ ಗರ್ಭಕೋಶವು ಜನನಾಂಗದ ಮೂಲಕ ಹೊರಗೆ ಚಾಚಿಕೊಂಡಿತ್ತು. ಸಾಮಾನ್ಯವಾಗಿ ಋತುಬಂಧ ನಿಂತ ಬಳಿಕ ಈ ಸಮಸ್ಯೆ ಕೆಲವರಲ್ಲಿ ಕಾಣಿಸುತ್ತದೆ. ಆದರೆ ಇವರಿಗೆ ಋತುಬಂಧ ನಿಲ್ಲುವ ಮೊದಲೇ ಗರ್ಭಕೋಶ ಜನನಾಂಗದ ಮೂಲಕ ಚಾಚಿಕೊಂಡಿತ್ತು. ಈ ಸಮಸ್ಯೆಯಿಂದ ಇವರು ದಿನನಿತ್ಯದ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅಷ್ಟೇ ಅಲ್ಲ, ಕಿಬ್ಬೊಟ್ಟೆ ನೋವು, ಹೊಟ್ಟೆ ಉಬ್ಬುವಿಕೆಯಿಂದ ತೊಡೆಗಳ ಅಸ್ವಸ್ಥತೆ, ಮೂತ್ರ ವಿಸರ್ಜನೆ ಮಾಡುವುದು ಸಹ ಕಷ್ಟಕರವಾಗಿತ್ತು. ಕೆಲವರು ಇದಕ್ಕೆ ಗರ್ಭಕೋಶವನ್ನೇ ತೆಗೆದುಹಾಕುವ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳುತ್ತಾರೆ. ಆದರೆ, ಫೋರ್ಟಿಸ್‌ ಆಸ್ಪತ್ರೆಯಲ್ಲಿ ಕೆಳಗೆ ಜಾರಿದ ಗರ್ಭಕೋಶವನ್ನು ರೋಬೋಟಿಕ್‌ ಸಹಾಯದ ಮೂಲಕ ಮೇಲೆತ್ತುವ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುತ್ತದೆ. ಅಂತೆಯೇ ಇವರಿಗೂ ಸಹ ಹಲವು ಆಸ್ಪತ್ರೆಗಳಲ್ಲಿ ಗರ್ಭಕೋಶವನ್ನು ತೆಗೆಸುವಂತೆಯೇ ಸಲಹೆ ನೀಡಲಾಗಿತ್ತು.

ಇದನ್ನೂ ಓದಿ: Gold Rate Today: ಆಭರಣ ಪ್ರಿಯರಿಗೆ ಗೋಲ್ಡನ್‌ ಟೈಮ್‌; ಚಿನ್ನದ ದರ ಇಂದು ಕೂಡ ಇಳಿಮುಖ

ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದ ಇವರಿಗೆ “ರೋಬೋಟ್-ಅಸಿಸ್ಟೆಡ್ ಸ್ಯಾಕ್ರೋ-ಹಿಸ್ಟರೊಪೆಕ್ಸಿ ಶಸ್ತ್ರಚಿಕಿತ್ಸೆಯ ಸಲಹೆ ನೀಡಲಾಯಿತು. ಈ ಶಸ್ತ್ರಚಿಕಿತ್ಸೆಯ ಮೂಲಕ ಕೆಳಗೆ ಜಾರಲಾದ ಗರ್ಭಕೋಶವನ್ನು ಅದೇ ಸ್ಥಳದಲ್ಲಿ ಕೂರಿಸಲಾಯಿತು. ಇದೀಗ ಅವರು ಚೇತರಿಸಿಕೊಂಡಿದ್ದಾರೆ ಎಂದು ವಿವರಿಸಿದರು.

Continue Reading

ಆರೋಗ್ಯ

Health Tips: ನಿಂತು ಊಟ ಮಾಡುವುದಕ್ಕಿಂತ ಕೂತು ಊಟ‌ ಮಾಡಿದರೆ ಏನೇನು ಲಾಭಗಳಿವೆ ನೋಡಿ!

Health Tips: ಏಷ್ಯಾದ ಬಹುತೇಕ ಸಂಸ್ಕೃತಿಗಳಲ್ಲಿ ʻಊಟʼ ಎಂದರೆ ಕೆಳಗೆ ಕುಳಿತೇ ತಿನ್ನುವ ಕ್ರಮವಿತ್ತು. ಹಳೆಯ ಕಾಲದವರಂತೆ ಪಟ್ಟಾಗಿ ಕೆಳಗೆ ಕೂತು ತಿನ್ನುವ ಕ್ರಮವೀಗ ಅಪರೂಪದಲ್ಲಿ ಅಪರೂಪ. ಹೀಗೆ ಸ್ವಸ್ಥವಾಗಿ ಕೂತು, ನಿರುಮ್ಮಳ ಮನಸ್ಸಿನಿಂದ ಊಟ ಮಾಡುವುದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಲಾಭದಾಯಕ ಎನ್ನುತ್ತವೆ ಕೆಲವು ಅ‍ಧ್ಯಯನಗಳು. ಏನು ಪ್ರಯೋಜನ ಹೀಗೆ ನೆಮ್ಮದಿಯಾಗಿ ಕೂತು ಉಣ್ಣುವುದರಿಂದ? ಈ ಲೇಖನ ಓದಿ

VISTARANEWS.COM


on

Health Tips
Koo

ಬದುಕಿನ (Health Tips) ಇನ್ನೊಂದು ಹೆಸರೇ ಧಾವಂತ ಎಂಬುದು. ಗಡಿಬಿಡಿಯ ಹೊರತಾಗಿ ಇನ್ನೇನೂ ಇಲ್ಲ ಅನುಭವಿಸುವುದಕ್ಕೆ ಎನ್ನುವಂತೆ ಬದುಕುತ್ತೇವೆ ನಾವು. ಎಲ್ಲಿಯವರೆಗೆ ಎಂದರೆ ಎಷ್ಟೇ ದುಡಿದರೂ ಕೂತು ತಿನ್ನುವುದಕ್ಕೆ ನಮಗೆ ಸಮಯವಿಲ್ಲ. ಆದರೆ ಕೂತು ತಿನ್ನುವುದಕ್ಕೂ ಅದರದ್ದೇ ಆದ ಪ್ರಯೋಜನಗಳಿವೆ ಎನ್ನುತ್ತವೆ ಅಧ್ಯಯನಗಳು. ಅಂದರೆ ಕೆಲಸ ಮಾಡದೆ ಕೂತು ತಿನ್ನುವ ಬಗ್ಗೆ ಹೇಳುತ್ತಿರುವುದಲ್ಲ, ತಿನ್ನುವಾಗ ಕುಳಿತುಕೊಳ್ಳುವುದರ ಬಗ್ಗೆ ಇಲ್ಲಿ ಮಾತು. ಏಷ್ಯಾದ ಬಹುತೇಕ ಸಂಸ್ಕೃತಿಗಳಲ್ಲಿ ʻಊಟʼ ಎಂದರೆ ಕೆಳಗೆ ಕುಳಿತೇ ತಿನ್ನುವ ಕ್ರಮವಿತ್ತು. ಹಳೆಯ ಕಾಲದವರಂತೆ ಪಟ್ಟಾಗಿ ಕೆಳಗೆ ಕೂತು ತಿನ್ನುವ ಕ್ರಮವೀಗ ಅಪರೂಪದಲ್ಲಿ ಅಪರೂಪ. ಹೀಗೆ ಸ್ವಸ್ಥವಾಗಿ ಕೂತು, ನಿರುಮ್ಮಳ ಮನಸ್ಸಿನಿಂದ ಊಟ ಮಾಡುವುದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಲಾಭದಾಯಕ ಎನ್ನುತ್ತವೆ ಕೆಲವು ಅ‍ಧ್ಯಯನಗಳು. ಏನು ಪ್ರಯೋಜನ ಹೀಗೆ ನೆಮ್ಮದಿಯಾಗಿ ಕೂತುಣ್ಣುವುದರಿಂದ?

Improved Digestion Tea Benefits

ಜೀರ್ಣಾಂಗಗಳು ಚುರುಕು

ನಿಂತು, ಓಡುತ್ತಾ ಅಥವಾ ಇನ್ನಾವುದೇ ಭಂಗಿಯಲ್ಲಿ ತಿನ್ನುವುದಕ್ಕಿಂತ, ಕುಳಿತು ಬೆನ್ನು ನೇರವಾಗಿ ಇರಿಸಿಕೊಂಡು ತಿನ್ನುವುದು ಜೀರ್ಣಾಂಗಗಳ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ನೈಸರ್ಗಿಕವಾಗಿ ಜೀರ್ಣಾಂಗಗಳು ರಚನೆಯಾದ ರೀತಿಯಲ್ಲೇ ನೇರವಾಗಿ ಅವುಗಳನ್ನು ಇರಿಸಿಕೊಂಡು ಊಟ ಮಾಡುವುದರಿಂದ, ಆಹಾರ ತಡೆಯಿಲ್ಲದಂತೆ ಪಚನೇಂದ್ರಿಯಗಳಲ್ಲಿ ಸಾಗಬಹುದು. ಇದರಿಂದ ಹೊಟ್ಟೆ ಉಬ್ಬರಿಸುವುದು ಅಥವಾ ಹುಳಿತೇಗಿನಂಥ ತೊಂದರೆಗಳನ್ನು ಕಡಿಮೆ ಮಾಡಲು ಸಾಧ್ಯ ಎನ್ನಲಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿದ್ದು, ಕುಳಿತು ವಿಶ್ರಾಂತಿಯಲ್ಲಿ ಊಟ ಮಾಡುವಾಗ ದೇಹ-ಮನಸ್ಸಿಗೆ ದೊರೆಯುವ ಆರಾಮದ ಭಾವ. ಒತ್ತಡದಲ್ಲಿ ಗಬಗಬ ಮುಕ್ಕಿ ಓಡುವುದಕ್ಕೂ, ನಿರುಮ್ಮಳವಾಗಿ ಕುಳಿತು ತಿನ್ನುವುದಕ್ಕೂ ದೇಹದ ಅಂಗಗಳು ಪ್ರತಿಕ್ರಿಯಿಸುವ ರೀತಿ ತೀರಾ ಭಿನ್ನ. ಏನನ್ನು ಉಣ್ಣುತ್ತಿದ್ದೀರಿ, ಅದರ ರುಚಿ ಹೇಗಿದೆ, ಅದು ನಿಮಗೆಷ್ಟು ಬೇಕು/ ಸಾಕು- ಇಂಥ ಎಲ್ಲ ಭಾವನೆಗಳು ಊಟ ಮಾಡುವಾಗ ಮನದಲ್ಲಿರಬೇಕು. ಏನೋ ತಿಂದೆ, ಎಷ್ಟೋ ತಿಂದೆ ಎನ್ನುವ ಉದಾಸೀನ ಭಾವನೆ ನಮ್ಮ ದೇಹದ ಮೇಲೂ ಅಡ್ಡ ಪರಿಣಾಮ ಬೀರುತ್ತದೆ.

Iamge Of Early Dinner Benefits

ಭಂಗಿ ಸುಧಾರಣೆ

ಕುರ್ಚಿ ಮೇಲೆ ಕೂರುವುದು ಅಥವಾ ನಿಂತು ತಿನ್ನುವುದು ಮುಂತಾದ ಇನ್ನಾವುದೇ ರೀತಿಯ ಊಟ/ ತಿಂಡಿಯ ಭಂಗಿಗಿಂತಲೂ ಕೆಳಗೆ ಶಿಸ್ತಾಗಿ ಕುಳಿತು ಉಣ್ಣುವುದು ದೇಹದ ಭಂಗಿಯನ್ನು ಸುಧಾರಿಸುತ್ತದೆ. ಉದಾ, ದಿನವಿಡೀ ಕುರ್ಚಿಯಲ್ಲಿ ಬೆನ್ನಿಗೆ ಆಧಾರ ನೀಡಿಯೇ ಕುಳಿತುಕೊಳ್ಳುತ್ತೇವೆ. ಅದರರ್ಥ, ಬೆನ್ನಿನ ಭಾಗ ಸ್ನಾಯುಗಳನ್ನು ನಾವು ಬಳಸುತ್ತಿಲ್ಲ. ಊಟಕ್ಕೆಂದು ಕೆಳಗೆ ಕೂರುವಾಗ ಬೆನ್ನಿಗೆ ಯಾವುದೇ ಆಧಾರವಿರುವುದಿಲ್ಲ. ಆಗ ಬೆನ್ನಿನ ಸ್ನಾಯುಗಳು ಕೆಲಸ ಮಾಡಲೇಬೇಕು; ಮಾಂಸಪೇಶಿಗಳು ಉದ್ದೀಪನಗೊಳ್ಳಲೇಬೇಕು.
ಈ ಮೂಲಕ ಬೆನ್ನು ಮತ್ತು ಪಕ್ಕೆಯ ಸ್ನಾಯುಗಳನ್ನು ಸಕ್ರಿಯ ಮಾಡಿ, ದೇಹದ ಅಂಗ-ಭಂಗಿಗಳನ್ನು, ಕೀಲು-ಸ್ನಾಯುಗಳ ಆರೋಗ್ಯವನ್ನು ಸುಧಾರಿಸಲು ಸಾಧ್ಯವಾಗುತ್ತದೆ. ನಿಯಮಿತವಾಗಿ ಕಾಲು ಮಡಿಸಿದ ಭಂಗಿಯಲ್ಲಿ ಕೆಳಗೆ ಕೂರುವುದರಿಂದ ಕೆಳಬೆನ್ನು, ಸೊಂಟ, ಪೃಷ್ಠ, ತೊಡೆ ಮತ್ತು ಕಿಬ್ಬೊಟ್ಟೆಯ ಸ್ನಾಯುಗಳು ಬಲವಾಗುತ್ತವೆ. ಬೆನ್ನು ಮೂಳೆಯ ಆರೋಗ್ಯ ಸುಧಾರಿಸುತ್ತದೆ. ರಕ್ತ ಪರಿಚಲನೆ ಉತ್ತಮವಾಗುತ್ತದೆ. ಇದು ಊಟದ ಸಮಯದಲ್ಲಿ ಮಾತ್ರವಲ್ಲ, ದಿನವಿಡೀ ನಮ್ಮೆಲ್ಲ ಚಟುವಟಿಕೆಗಳಿಗೆ ನೆರವಾಗುವ ರೀತಿಯಲ್ಲಿ ಆರೋಗ್ಯ ಸುಧಾರಿಸಿಕೊಳ್ಳಲು ನೆರವಾಗುತ್ತದೆ.

ಇದನ್ನೂ ಓದಿ: Home Remedies: ಮಕ್ಕಳನ್ನು ಕಾಡುವ ಶೀತ-ಕೆಮ್ಮಿಗೆ ಮನೆಯಲ್ಲೇ ಇದೆ ಉಪಶಮನ

ಮಾನಸಿಕ ಆರೋಗ್ಯ

ಊಟ ಮಾಡುವಾಗ ಮಾನಸಿಕ ಸ್ಥಿತಿ ಹೇಗಿರುತ್ತದೆ ಎನ್ನುವುದು ಅತ್ಯಂತ ಗುರುತರವಾದದ್ದು. ಆದರೆ ಅದನ್ನೆಲ್ಲ ಗಾಳಿಗೆ ತೂರಿರುವ ನಾವು, ಟಿವಿ ನೋಡುತ್ತಾ, ಮೊಬೈಲ್‌ ಗೀರುತ್ತಾ ಅಥವಾ ಆ ಹೊತ್ತಿಗೆ ಸಂಬಂಧವಿಲ್ಲ ಇನ್ನೇನೋ ಮಾಡುತ್ತಾ ಉಣ್ಣುತ್ತೇವೆ. ಊಟಕ್ಕೂ ಒಂದು ಶ್ರದ್ಧೆ ಬೇಕು, ಹೊತ್ತಿಗೆ ಸರಿಯಾಗಿ ಹಸಿವು ತಣಿಸಿದ ಅನ್ನದ ಬಗೆಗೆ ಕೃತಜ್ಞತೆ ಬೇಕು. ಇದನ್ನೆಲ್ಲ ಮನದಲ್ಲಿ ಇರಿಸಿಕೊಳ್ಳುವುದಕ್ಕೆ ಊಟಕ್ಕಾಗಿ ಒಂದು ಘಳಿಗೆಯನ್ನು ಮೀಸಲಿಟ್ಟರೆ ಮಾತ್ರವೇ ಸಾಧ್ಯ. ವಿಶ್ರಾಂತಿಯ ಭಾವದೊಂದಿಗೆ ಕೂತು ಊಟ ಮಾಡುವುದು ಇಂಥ ಕಾರಣಗಳಿಗೆ ಮುಖ್ಯವಾಗುತ್ತದೆ.
ಆಹಾರದ ಘಮ, ರುಚಿ, ಬಣ್ಣ ಇತ್ಯಾದಿಗಳೆಲ್ಲ ನಮ್ಮ ಜೀರ್ಣ ರಸದ ಸ್ರವಿಸುವಿಕೆಯನ್ನು ಹೆಚ್ಚಿಸಬಲ್ಲವು. ಅದನ್ನೆಲ್ಲ ಗಮನಿಸುವಷ್ಟು ವ್ಯವಧಾನ ನಮಗಿರಬೇಕು. ಇದು ಊಟದ ಸಂತೃಪ್ತಿಯನ್ನು ಹೆಚ್ಚಿಸಬಲ್ಲದು. ಅಂದರೆ ಪರಾತಗಟ್ಟಲೆ ತಿನ್ನದಿದ್ದರೂ, ಸ್ವಲ್ಪ ತಿಂದಷ್ಟಕ್ಕೇ ತೃಪ್ತಿಯನ್ನು ನೀಡಬಲ್ಲದು. ಇದು ಸತ್ವಗಳನ್ನು ಹೀರಿಕೊಳ್ಳಲು ದೇಹಕ್ಕೆ ನೆರವಾಗುವುದೇ ಅಲ್ಲದೆ, ತೂಕ ಇಳಿಸುವ ಉದ್ದೇಶ ಇದ್ದವರಿಗೆ ವರದಂತೆ ಕೆಲಸ ಮಾಡುತ್ತದೆ. ಹಾಗಾಗಿ ಕೂತು ಊಟ ಮಾಡಿ, ಉಂಡೆದ್ದ ಮೇಲೆ ಅದನ್ನು ಕರಗಿಸಿ!

Continue Reading
Advertisement
viral video
ವೈರಲ್ ನ್ಯೂಸ್33 mins ago

Viral Video: ಮೈಮೇಲೆ ಒಂದಲ್ಲ..ಎರಡಲ್ಲ ಬರೋಬ್ಬರಿ 25ಕೆ.ಜಿ ಚಿನ್ನ; ತಿಮ್ಮಪ್ಪನ ಸನ್ನಿಧಿಗೆ ಬಂದ ವಿಶೇಷ ಭಕ್ತರು ಇವರೇ ನೋಡಿ

Lorry Accident
ಕರ್ನಾಟಕ52 mins ago

Lorry Accident: ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ; 16 ಕಾರ್ಮಿಕರಿಗೆ ಗಂಭೀರ ಗಾಯ

ಕರ್ನಾಟಕ1 hour ago

Muda Scam: ದೆಹಲಿಯಲ್ಲಿ ರಾಹುಲ್‌ ಗಾಂಧಿಯನ್ನು ಭೇಟಿಯಾದ ಸಿಎಂ ಸಿದ್ದರಾಮಯ್ಯ; ಕಾನೂನು ಹೋರಾಟದ ಬಗ್ಗೆ ಚರ್ಚೆ

Uttara Kannada News
ಉತ್ತರ ಕನ್ನಡ1 hour ago

Uttara Kannada News: ಹೊಸ ಆಧಾರ್ ನೋಂದಣಿ, ತಿದ್ದುಪಡಿಗೆ ಅವಕಾಶ

Invest Karnataka
ಬೆಂಗಳೂರು1 hour ago

Invest Karnataka: ಇಂಧನ ತಂತ್ರಜ್ಞಾನ; ರಾಜ್ಯದಲ್ಲಿ 8,300 ಕೋಟಿ ರೂ. ಹೂಡಿಕೆ ಮಾಡಲಿರುವ ಷೆರ್ವನ್‌ ಇಂಡಿಯಾ

UPSC Exam calendar
ದೇಶ2 hours ago

UPSC Exam calendar: UPSC ಪರಿಷ್ಕೃತ ಪರೀಕ್ಷಾ ಕ್ಯಾಲೆಂಡರ್‌ ರಿಲೀಸ್‌; ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

7th pay commission
ಕರ್ನಾಟಕ2 hours ago

7th pay commission: ರಾಜ್ಯ ಸರ್ಕಾರಿ ನೌಕರರ ಪರಿಷ್ಕೃತ ವೇತನ ಶ್ರೇಣಿ ಪ್ರಕಟ; ಯಾರಿಗೆ ಎಷ್ಟು ಏರಿಕೆ?

Viral Video
Latest2 hours ago

Viral Video: ವಿಮಾನ ನಿಲ್ದಾಣದಲ್ಲಿ ಹೃದಯಾಘಾತ; ಸಿಪಿಆರ್ ಮಾಡಿ ಜೀವ ಉಳಿಸಿದ ಅಧಿಕಾರಿಗಳು

Recurring Deposit
ಮನಿ-ಗೈಡ್3 hours ago

Recurring Deposit: ಸಣ್ಣ, ಆರಂಭಿಕ ಹೂಡಿಕೆದಾರರಿಗೆ ಸೂಕ್ತ ಪೋಸ್ಟ್ ಆಫೀಸ್‌ನ ಆರ್‌ಡಿ; ಏನಿದರ ಲಾಭ?

Kannada New Movie
ಬೆಂಗಳೂರು3 hours ago

Kannada New Movie: ರಕ್ಷಿತ್ ಶೆಟ್ಟಿ ನಿರ್ಮಾಣದ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದ ಟ್ರೇಲರ್ ರಿಲೀಸ್‌; ಸಿನಿಮಾ ಬಿಡುಗಡೆ ಯಾವಾಗ?

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌