Deepawali eco friendly crackers | ದೀಪಾವಳಿಗೆ ಬಂತು ಪರಿಸರಸ್ನೇಹಿ ಪ್ಲಾಂಟಬಲ್ ಸೀಡ್ ಪಟಾಕಿ - Vistara News

ಲೈಫ್‌ಸ್ಟೈಲ್

Deepawali eco friendly crackers | ದೀಪಾವಳಿಗೆ ಬಂತು ಪರಿಸರಸ್ನೇಹಿ ಪ್ಲಾಂಟಬಲ್ ಸೀಡ್ ಪಟಾಕಿ

ಪಟಾಕಿ ಪ್ರಿಯರಿಗೆಂದೇ ಇದೀಗ ಮಾರುಕಟ್ಟೆಯಲ್ಲಿ ಪರಿಸರಸ್ನೇಹಿ ಪ್ಲಾಂಟಬಲ್ ಸೀಡ್ ಪಟಾಕಿಗಳು ಬಂದಿವೆ. ಈ ಬಗ್ಗೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Deepawali eco friendly crackers
ಚಿತ್ರಗಳು : ಸೀಡ್ ಪೇಪರ್ ಇಂಡಿಯಾ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು


ಪಟಾಕಿ ಪ್ರಿಯರಿಗೆಂದೇ ಇದೀಗ ಇಕೋ ಫ್ರೆಂಡ್ಲಿ ಪ್ಲಾಂಟಬಲ್ ಪಟಾಕಿಗಳು ಎಂಟ್ರಿ ನೀಡಿವೆ. ಹೌದು. ಇನ್ಮುಂದೆ ಪಟಾಕಿ ಹೊಡೆದು ಪರಿಸರಕ್ಕೆ ಧಕ್ಕೆ ಮಾಡಿದೆವಲ್ಲ! ಪರಿಸರ ಹಾಳು ಮಾಡಿದೆವಲ್ಲ ಎಂದು ಪರಿತಪಿಸಬೇಕಾಗಿಲ್ಲ! ಬದಲಿಗೆ ಸಂತಸಪಡಬಹುದು. ಪರಿಸರಕ್ಕೆ ಪೂರಕವಾಗುವಂತಹ ಇಕೋ ಫ್ರೆಂಡ್ಲಿ ಪಟಾಕಿಗಳು ದೀಪಾವಳಿಗೆ ಮುನ್ನವೇ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

Deepawali eco friendly crackers


ಏನಿದು ಪರಿಸರಸ್ನೇಹಿ ಸೀಡ್ ಪಟಾಕಿ
ಪ್ಲಾಂಟಬಲ್ ಸೀಡ್ ಪಟಾಕಿಗಳು ಪರಿಸರಸ್ನೇಹಿಯಾಗಿದ್ದು, ಅವುಗಳು ಪಟ್ ಅಂದಾಗ ಅದರಲ್ಲಿ ತುಂಬಲಾಗಿದ್ದ ಮಿಶ್ರಣದಲ್ಲಿ ಅನೇಕ ಬಗೆಯ ಗಿಡಗಳ ಬೀಜಗಳು ಚದುರುತ್ತವೆ. ಇವು ಕಸದಲ್ಲಿ ಸೇರಿದರೂ ಕೂಡ ಮಣ್ಣಿನ ಸಂಪರ್ಕ ಪಡೆದ ತಕ್ಷಣ ಮೊಳಕೆಯೊಡೆದು ಸಸಿಗಳಾಗುತ್ತವೆ. ಪಟಾಕಿಯ ಒಳಗೆ ತುಂಬಲಾಗುವ ಸ್ಟಫ್ನಲ್ಲಿ ಕೆಮಿಕಲ್‌ಗಳ ಬದಲು ಅರ್ಗಾನಿಕ್ ಸಾಮಗ್ರಿಗಳನ್ನು ಬಳಸಲಾಗಿರುತ್ತದೆ. ಹಾಗಾಗಿ ಪಟಾಕಿ ಹೊಡೆದ ನಂತರ ಯಾವುದೇ ಅಡ್ಡ ಪರಿಣಾಮಗಳಾಗುವುದಿಲ್ಲ ಎನ್ನುತ್ತಾರೆ ಸೀಡ್ ಪೇಪರ್ ಇಂಡಿಯಾ ಕಂಪನಿಯ ಸಂಸ್ಥಾಪಕರು.

Deepawali eco friendly crackers


ಈ ಪಟಾಕಿ ಪರಿಸರಸ್ನೇಹಿ ಹೇಗೆ?
ಪರಿಸರಸ್ನೇಹಿ ಪ್ಲಾಂಟಬಲ್ ಪಟಾಕಿಗಳಿಂದ ಮಾಲಿನ್ಯ ಉಂಟಾಗುವ ಬದಲು ಹೊಸ ಸಸಿ ಬೆಳೆಯಲು ಆಸ್ಪದವಾಗುತ್ತದೆ. ಒಂದಿಷ್ಟು ದಿನ ಕಳೆದ ನಂತರ ಹೊಡೆದ ಪಟಾಕಿಯಲ್ಲೆ ಹೊಸ ಸಸಿಯೊಂದು ಬೆಳೆಯುತ್ತದೆ. ಅಚ್ಚರಿಯಾಗುತ್ತಿದೆಯಾ! ಅಚ್ಚರಿಯಾದರೂ ಇದು ಸತ್ಯ. ಹಾಗೆನ್ನುತ್ತಾರೆ ಈ ಕಾನ್ಸೆಪ್ಟನ್ನು ಯಶಸ್ವಿಗೊಳಿಸಿರುವ ಸೀಡ್ ಪೇಪರ್ ಇಂಡಿಯಾ ಸಂಸ್ಥೆಯ ರೋಷನ್. ಅವರು ಹೇಳುವಂತೆ, ಈ ಪಟಾಕಿಗಳು ಪರಿಸರಸ್ನೇಹಿ ಮಾತ್ರವಲ್ಲ, ಮಕ್ಕಳು ಸುರಕ್ಷತೆಯಿಂದ ಬಳಸಬಹುದಾದ ಪಟಾಕಿಗಳು.

Deepawali eco friendly crackers

ಉದಾಹರಣೆಗೆ ಲಕ್ಷ್ಮಿ ಬಾಂಬ್, ರಾಕೆಟ್, ಭೂಮಿ ಚಕ್ರ, ಹೂವಿನ ಕುಂಡ ಸೇರಿದಂತೆ ನಾನಾ ಪಟಾಕಿಗಳನ್ನು ಪ್ಲಾಂಟಬಲ್ ಸೀಡ್‌ವನ್ನೊಳಗೊಂಡ ಇಕೋ ಫ್ರೆಂಡ್ಲಿ ಪಟಾಕಿಗಳನ್ನಾಗಿ ಪರಿವರ್ತಿಸಲಾಗಿದೆ. ಇವನ್ನು ಸಿಡಿಸುವುದರಿಂದ ಮುಂದೆ ಪಶ್ಶ್ಚಾತ್ತಾಪವೂ ಆಗದು. ಬೇಸರವೂ ಮೂಡದು. ಬದಲಿಗೆ ಪರಿಸರಕ್ಕೆ ಕೊಡುಗೆ ನೀಡಿದಂತಾಗುತ್ತದೆ. ದೀಪಾವಳಿಯ ಸಂತಸವು ಇಮ್ಮಡಿಯಾಗುತ್ತದೆ ಎನ್ನುತ್ತಾರೆ ಅವರು. ಅವರ ಪ್ರಕಾರ, ಸೀಡ್ ಇಂಡಿಯಾ ಸಂಸ್ಥೆಯು ಸಾಮಾಜಿಕ ಕಳಕಳಿಯೊಂದಿಗೆ ಈ ಕಾನ್ಸೆಪ್ಟ್ ಜನರ ಮುಂದೆ ತಂದಿದೆ. ಪರಿಸರ ಕಾಪಾಡುವುದರೊಂದಿಗೆ ನಮ್ಮ ಸಂಸ್ಕೃತಿ ಹಾಗೂ ಆಚರಣೆಯನ್ನು ಬಿಡದಂತೆ ಆಚರಿಸುವುದು ಉದ್ದೇಶ ಎನ್ನುತ್ತಾರೆ ಅವರು.

Deepawali eco friendly crackers


ಆನ್‌ಲೈನ್‌ನಲ್ಲಿ ಪಟಾಕಿ ಲಭ್ಯ
ಆಫ್‌ಲೈನ್‌ ಹಾಗೂ ಆನ್‌ಲೈನ್‌ನಲ್ಲಿ ಈಗಾಗಲೇ ಇಂತಹ ಸಾಕಷ್ಟು ಇಕೋ ಫ್ರೆಂಡ್ಲಿ ಪಟಾಕಿಗಳು ಲಭ್ಯ. ಸೀಡ್ ಇಂಡಿಯಾ ಮಾತ್ರವಲ್ಲ, ಬಹಳಷ್ಟು ಸಂಸ್ಥೆಗಳು ಈಗಾಗಲೇ ಪರಿಸರಸ್ನೇಹಿ ಪಟಾಕಿಗಳನ್ನು ಬಿಡುಗಡೆ ಮಾಡಿ ಮಾರಾಟ ಮಾಡುತ್ತಿವೆ. ಇದು ಉತ್ತಮ ಬೆಳವಣಿಗೆ ಎನ್ನುತ್ತಾರೆ ಪಟಾಕಿ ಪ್ರೇಮಿಗಳು.

(ಲೇಖಕಿ ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ| Deepawali 2022 | ಪಟಾಕಿ ಹೊಡೆಯಲು ‌ದಿನಕ್ಕೆ 2 ಗಂಟೆ ಟೈಂ ಫಿಕ್ಸ್‌; ಗ್ರೀನ್‌ ಪಟಾಕಿಗಷ್ಟೇ ಗ್ರೀನ್‌ ಸಿಗ್ನಲ್!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Watermelon At Night: ಸಂಜೆ 7 ಗಂಟೆಯ ಕಲ್ಲಂಗಡಿ ಹಣ್ಣನ್ನು ತಿನ್ನಲು ಹೋಗಬೇಡಿ!

watermelon at night: ಭರಪೂರ ಪೋಷಕಾಂಶಗಳಿರುವ ಹೃದಯ ಸ್ನೇಹಿಯಾಗಿರುವ, ಕಿಡ್ನಿಯ ಆರೋಗ್ಯಕ್ಕೂ ಸಹಾಯ ಮಾಡುವ, ರಕ್ತದೊತ್ತಡವನ್ನೂ ಸಮತೋಲನಗೊಳಿಸುವ ಕಲ್ಲಂಗಡಿ ಹಣ್ಣು ಸೇವನೆಗೆ ಸೂಕ್ತ. ಆದರೆ ಕಲ್ಲಂಗಡಿ ಕಡಿಮೆ ಕ್ಯಾಲರಿಯೆಂದು ಸಂಜೆಯ ಮೇಲೆ, ರಾತ್ರಿಯ ಊಟಕ್ಕೆ ತಿನ್ನುತ್ತೀರಾದರೆ ಕೊಂಚ ಎಚ್ಚರವಿರಲಿ. ಇದು ಖಂಡಿತಾ ರಾತ್ರಿಯೂಟದ ಸಮಯಕ್ಕೆ ಹೇಳಿ ಮಾಡಿಸಿದ ಹಣ್ಣಲ್ಲ. ಕಡಿಮೆ ಕ್ಯಾಲರಿಯಾದ್ದರಿಂದ ಇದು ಬೇಗ ಕರಗೀತು ಎಂದು ನೀವು ಲೆಕ್ಕಾಚಾರ ಹಾಕಿದರೆ ನಿಮ್ಮ ಲೆಕ್ಕಾಚಾರ ಖಂಡಿತ ತಪ್ಪು. ಈ ಬಗ್ಗೆ ಮತ್ತಷ್ಟು ಮಾಹಿತಿಗೆ ಈ ಲೇಖನ ಓದಿ.

VISTARANEWS.COM


on

Watermelon At Nigh
Koo

ಪ್ರಕೃತಿದತ್ತವಾಗಿ ಸಿಗುವ ಹಣ್ಣು ಹಂಪಲುಗಳಿಂದ ದೇಹ ತಂಪು ಮಾಡಿಕೊಂಡು ಆರೋಗ್ಯವಾಗಿರಲು ಪ್ರಯತ್ನಿಸುತ್ತೇವೆ. ಸಾಕಷ್ಟು ಹಣ್ಣುಗಳು ತೂಕ ಇಳಿಕೆಗೆ ಪೂರಕವಾಗಿಯೂ ಇವೆ. ಹೆಚ್ಚು ಲೈಕೋಪೀನ್‌ ಇರುವ ಕಲ್ಲಂಗಡಿ ಹಣ್ಣೂ ಕೂಡಾ, ತೂಕ ಇಳಿಕೆಗೆ ಸಹಾಯ ಮಾಡುವ ಹಣ್ಣೇ ಆಗಿದೆ. ಆದರೆ, ಹಾಗಂತ, ಈ ಕಲ್ಲಂಗಡಿಯನ್ನೇ ತಿಂದು ತೂಕ ಇಳಿಸಲು ಪ್ರಯತ್ನಿಸುವ ಮಂದಿಯೂ ಇಲ್ಲದಿಲ್ಲ. ಕಡಿಮೆ ಕ್ಯಾಲರಿಯ, ಹೆಚ್ಚು ನೀರಿನಂಶ ಇರುವ ತಂಪಾದ ಹಣ್ಣು ಕಲ್ಲಂಗಡಿಯನ್ನು ತಿಂದು ತೂಕ ಇಳಿಸಿಕೊಂಡವರೂ ಇದ್ದಾರೆ ನಿಜ. ಭರಪೂರ ಪೋಷಕಾಂಶಗಳಿರುವ ಹೃದಯ ಸ್ನೇಹಿಯಾಗಿರುವ, ಕಿಡ್ನಿಯ ಆರೋಗ್ಯಕ್ಕೂ ಸಹಾಯ ಮಾಡುವ, ರಕ್ತದೊತ್ತಡವನ್ನೂ ಸಮತೋಲನಗೊಳಿಸುವ ಈ ಹಣ್ಣು ಸೇವನೆಗೆ ಸೂಕ್ತ. ಆದರೆ, ಕಲ್ಲಂಗಡಿ ಕಡಿಮೆ ಕ್ಯಾಲರಿಯೆಂದು ಸಂಜೆಯ ಮೇಲೆ, ರಾತ್ರಿಯ ಊಟಕ್ಕೆ ತಿನ್ನುತ್ತೀರಾದರೆ ಕೊಂಚ ಎಚ್ಚರವಿರಲಿ. ಇದು ಖಂಡಿತಾ ರಾತ್ರಿಯೂಟದ ಸಮಯಕ್ಕೆ ಹೇಳಿ ಮಾಡಿಸಿದ ಹಣ್ಣಲ್ಲ. ಕಡಿಮೆ ಕ್ಯಾಲರಿಯಾದ್ದರಿಂದ ಇದು ಬೇಗ ಕರಗೀತು ಎಂದು ನೀವು ಲೆಕ್ಕಾಚಾರ ಹಾಕಿದರೆ ನಿಮ್ಮ ಲೆಕ್ಕಾಚಾರ ಖಂಡಿತ ತಪ್ಪು. ಬನ್ನಿ, ಕಲ್ಲಂಗಡಿಯನ್ನು (watermelon at night) ಯಾಕೆ ರಾತ್ರಿ ತಿನ್ನಬಾರದು ಎಂಬುದನ್ನು ತಿಳಿಯೋಣ.

Watermelon

ಇದು ಆಮ್ಲೀಯ ಗುಣ ಹೊಂದಿದೆ

ವಾಟರ್‌ ಮೆಲನ್‌ ಎಂಬ ತನ್ನ ಹೆಸರೇ ಹೇಳುವಂತೆ, ಕಲ್ಲಂಗಡಿ ಹಣ್ಣಿನಲ್ಲಿ 90ಕ್ಕೂ ಹೆಚ್ಚು ಪ್ರತಿಶತ ನೀರಿದೆ. ಲೈಕೋಪೀನ್, ಪೊಟಾಶಿಯಂ, ಹಾಗೂ ಸಾಕಷ್ಟು ಪ್ರಮಾಣದಲ್ಲಿ ಇತರ ಪೋಷಕಾಂಶಗಳೂ ಇವೆ. ನಾರಿನಂಶವೂ ಹೆಚ್ಚಿದೆ. ಹಾಗಾಗಿ ಜೀರ್ಣಕ್ರಿಯೆಗೆ ಸಹಾಯವನ್ನೂ ಮಾಡುತ್ತದೆ ನಿಜ. ಆದರೆ, ಇವೆಲ್ಲ ಇದ್ದೂ, ಕಲ್ಲಂಗಡಿ ಹಣ್ಣನ್ನು ಯಾವಾಗ ಎಷ್ಟು ತಿನ್ನಬೇಕು ಎಂಬ ಅರಿವು ಇರಬೇಕು. ಮುಖ್ಯವಾಗಿ ರಾತ್ರಿ ಮಲಗಲು ಹೋಗುವ ಮುನ್ನ ತಿನ್ನಬಾರದು. ಅಂದರೆ, ರಾತ್ರಿಯೂಟ ಎಂದು ಕಲ್ಲಂಗಡಿ ಹಣ್ಣನ್ನು ತಿನ್ನಬಾರದು. ಸಂಜೆ ಏಳರ ನಂತರ ಕಲ್ಲಂಗಡಿ ಹಣ್ಣನ್ನು ತಿನ್ನುವುದು ಖಂಡಿತವಾಗಿಯೂ ಒಳ್ಳೆಯದಲ್ಲ. ಯಾಕೆಂದರೆ, ಕಲ್ಲಂಗಡಿ ಹಣ್ಣು ಸ್ವಲ್ಪ ಅಸಿಡಿಕ್‌ ಅಂದರೆ ಆಮ್ಲೀಯ ಗುಣವನ್ನೂ ಹೊಂದಿರುವುದರಿಂದ ದೇಹ ವಿಶ್ರಾಂತಿಗೆ ಹೊರಡುವ ಸಂದರ್ಭ ಇದರ ಸೇವನೆ ಒಳ್ಳೆಯದಲ್ಲ. ಅಷ್ಟೇ ಅಲ್ಲ, ಇದು ಜೀರ್ಣಕ್ರಿಯೆಯನ್ನೂ ನಿಧಾನಗೊಳಿಸುವ ಅಪಾಯವಿರುತ್ತದೆ.

Woman Eating Watermelon

ಮಧ್ಯಾಹ್ನ ಸೇವನೆ ಸೂಕ್ತ

ಕಲ್ಲಂಗಡಿ ಹಣ್ಣಿನ ಸೇವನೆಗೆ ಅತ್ಯಂತ ಒಳ್ಳೆಯ ಸಮಯ ಎಂದರೆ ಮಧ್ಯಾಹ್ನ ಹನ್ನೆರಡು ಗಂಟೆಯಿಂದ ಒಂದು ಗಂಟೆ. ಈ ಸಂದರ್ಭ ದೇಹದ ಜೀರ್ಣಕ್ರಿಯೆಯ ಶಕ್ತಿ ಅತ್ಯಂತ ಹೆಚ್ಚಿರುತ್ತದೆ. ಆಗ, ಕಲ್ಲಂಗಡಿ ಹಣ್ಣಿನ ಪೋಷಕಾಂಶಗಳೂ ಸಹ ದೇಹಕ್ಕೆ ಸಮರ್ಪಕವಾಗಿ ಸಿಗುತ್ತದೆ.

Digestive Issues Coffee Side Effects

ಜೀರ್ಣಕ್ರಿಯೆ ಸ್ನೇಹಿಯಲ್ಲ

ನಾವಂದುಕೊಂಡಂತೆ, ರಾತ್ರಿಯ ಹೊತ್ತು ಕಲ್ಲಂಗಡಿ ಹಣ್ಣು ಜೀರ್ಣಕ್ರಿಯೆಯ ಸ್ನೇಹಿಯಲ್ಲ. ಹಗಲಿನಲ್ಲಿ, ಇದು ಜೀರ್ಣಕ್ರಿಯೆಗೆ ಸಹಾಯ ಮಾಡಿದರೂ ರಾತ್ರಿಯಾದ ಮೇಲೆ, ದೇಹ ವಿಶ್ರಾಂತಿಯಲ್ಲಿರುವಾಗ ಇದರ ವರಸೆ ಬದಲಾಗುತ್ತದೆ. ಹಾಗಾಗಿ, ರಾತ್ರಿ ಇದನ್ನು ಸೇವಿಸಿದರೆ, ಮಾರನೇ ದಿನ ಹೊಟ್ಟೆ ಕೆಡುವುದು, ಚೆನ್ನಾಗಿ ಕರಗಿದ ಅನುಭವ ಆಗದೆ ಇರುವುದು, ಹೊಟ್ಟೆ ಸಂಬಂಧೀ ಕಿರಿಕಿರಿಗಳು ಉಂಟಾಗುವ ಸಂಭವ ಇವೆ.

Belly Fat Reduction

ತೂಕ ಏರುವ ಆತಂಕ

ಕಲ್ಲಂಗಡಿ ಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆಯ ಪ್ರಮಾಣ ಹೆಚ್ಚಿರುವುದರಿಂದ ರಾತ್ರಿ ಸೇವಿಸಿದರೆ, ತೂಕ ಹೆಚ್ಚಾಗುವ ಸಂಭವವೂ ಇದೆ.

Sleeping tips

ರಾತ್ರಿ ನಿದ್ರೆಗೆ ಭಂಗ

ಕೇವಲ ಇವಿಷ್ಟೇ ಅಲ್ಲ, ಕಲ್ಲಂಗಡಿ ಹಣ್ಣಿನಲ್ಲಿ ಹೆಚ್ಚು ನೀರಿರುವುದರಿಂದ ಆಗಾಗ ಮೂತ್ರ ಬರುವ ಸಂಭವ ಹೆಚ್ಚು. ಹೀಗಾಗಿ, ರಾತ್ರಿಯ ನಿದ್ದೆಗೆ ಭಂಗ ಉಂಟಾಗಲೂಬಹುದು.

Home Remedies For Cough And Cold

ನೆಗಡಿಯ ಆತಂಕ

ಶೀತ ಪ್ರಕೃತಿಯ ದೇಹ ಇರುವ ಮಂದಿಗೆ ರಾತ್ರಿ ಕಲ್ಲಂಗಡಿ ಸೇವನೆಯಿಂದ ತಲೆನೋವು, ನೆಗಡಿ ಬರುವ ಸಂಭವವೂ ಇದೆ. ಮಾರನೇ ದಿನ ತಲೆ ಭಾರವಾದ ಸ್ಥಿತಿ, ತಲೆನೋವಿನ ಸಮಸ್ಯೆಯೂ ಕೆಲವರಿಗೆ ಬರಬಹುದು. ಹಾಗಾಗಿ ಈ ಬಗ್ಗೆ ಜಾಗರೂಕರಾಗಿರಿ.

ಇದನ್ನೂ ಓದಿ: Seeds For Weight Loss: ತೂಕ ಇಳಿಸಿಕೊಳ್ಳಬೇಕೆ? ಈ 7 ಬೀಜಗಳನ್ನು ನಿಯಮಿತವಾಗಿ ಸೇವಿಸಿ

ಫ್ರಿಡ್ಜ್‌ನಲ್ಲಿಟ್ಟು ತಿನ್ನುವುದು ಒಳ್ಳೆಯದಲ್ಲ

ಕಲ್ಲಂಗಡಿ ಹಣ್ಣನ್ನು ಅಂಗಡಿಯಿಂದ ತಂದ ತಕ್ಷಣ ತಾಜಾ ಆಗಿರುವಾಗಲೇ ಕತ್ತರಿಸಿ ತಿನ್ನುವುದು ಒಳ್ಳೆಯದು. ಅದನ್ನು ಫ್ರಿಡ್ಜ್‌ನಲ್ಲಿಟ್ಟು ತಿನ್ನುವುದು ಒಳ್ಳೆಯದಲ್ಲ. ತಾಜಾ ತಿನ್ನುವುದರಿಂದ ಆರೋಗ್ಯದ ಲಾಭಗಳು ಹೆಚ್ಚು.

Continue Reading

ಫ್ಯಾಷನ್

Off Shoulder Tops Fashion: ನೀವೂ ಆಫ್‌ ಶೋಲ್ಡರ್‌ ಟಾಪ್‌ ಧರಿಸಬಹುದು! ಆದರೆ ಈ ಎಚ್ಚರಿಕೆ ವಹಿಸಿ

ಶೋಲ್ಡರ್ ಇಲ್ಲದ ಟಾಪ್‌ಗಳು (Off Shoulder Tops Fashion) ಧರಿಸುವುದು ಇಷ್ಟವಾದರೂ ಹೆಚ್ಚಾಗಿ ನಾವು ಇದರಲ್ಲಿ ಕಂಫರ್ಟ್ ಆಗಿರೋದು ಸಾಧ್ಯವಿಲ್ಲ. ಇದನ್ನು ಧರಿಸುವಾಗ ಕೆಲವೊಂದು ನಿಯಮಗಳನ್ನು ಪಾಲಿಸಿದರೆ ಸ್ಟೈಲಿಶ್ ಆಗಿ ಮಿಂಚಬಹುದು ಮಾತ್ರವಲ್ಲ ನೀವು ಹೆಚ್ಚು ಕಂಫರ್ಟ್ ಆಗಿ ಇರಬಹುದು. ಅದಕ್ಕಾಗಿ ಇಲ್ಲಿದೆ ಟಿಪ್ಸ್.

VISTARANEWS.COM


on

By

Off Shoulder Tops Fashion
Koo

ಶೋಲ್ಡರ್ ಇಲ್ಲದ ಟಾಪ್‌ಗಳು (Off Shoulder Tops Fashion) ಹೆಚ್ಚು ಸ್ಟೈಲಿಶ್ (stylish) ಲುಕ್ ನೀಡುವುದು ಮಾತ್ರವಲ್ಲ ಇದು ಟ್ರೆಂಡಿ (trendy) ಆಯ್ಕೆಯೂ ಹೌದು. ಆದರೆ ಹೆಚ್ಚಿನವರಿಗೆ ಇದನ್ನು ಧರಿಸುವುದು, ನಿರ್ವಹಣೆ ಮಾಡುವುದು ಸವಾಲಿನ ಕೆಲಸ. ಹೀಗಾಗಿ ಇಷ್ಟವಿದ್ದರೂ ಇಂತಹ ದಿರಸು ಹಾಕಿಕೊಂಡು ಹೊರಗೆ ಹೋಗಲು ಬಹುತೇಕ ಮಂದಿ ಹಿಂಜರಿಯುತ್ತಾರೆ. ಆದರೆ ಸರಿಯಾದ ರೀತಿಯಲ್ಲಿ ಶೋಲ್ಡರ್ ಇಲ್ಲದ ದಿರಸು ಧರಿಸಿದರೆ ಹೆಚ್ಚು ಕಂಫರ್ಟ್ ಫೀಲ್ ಆಗುವುದು ಮಾತ್ರವಲ್ಲ ಎಲ್ಲರ ನಡುವೆ ಸ್ಟೈಲಿಶ್ ಆಗಿಯೂ ಮಿಂಚಬಹುದು.

ಶೋಲ್ಡರ್ ಇಲ್ಲದ ದಿರಸುಗಳನ್ನು ಧರಿಸಲು ಈ ಆರು ಪ್ರಮುಖ ಸಲಹೆಗಳನ್ನು ಪಾಲಿಸಿ. ಆಗ ನೀವೂ ಸ್ಟೈಲಿಶ್ ಆಗಿ ಮಿಂಚಬಹುದು.

ಸ್ಟ್ರಾಪ್ ಇಲ್ಲದ ಬ್ರಾ ಆಯ್ಕೆ ಮಾಡಿ

ಶೋಲ್ಡರ್ ಇಲ್ಲದ ದಿರಸು ಧರಿಸಿ ಹೆಚ್ಚು ಕಂಫರ್ಟ್ ಆಗಬೇಕಾದರೆ ಸ್ಟ್ರಾಪ್ ಇಲ್ಲದ ಬ್ರಾ ಆಯ್ಕೆ ಮಾಡಬೇಕು. ಇದು ಆಫ್-ದ-ಶೋಲ್ಡರ್ ಟಾಪ್‌ಗಳಿಗೆ ಹೆಚ್ಚು ಬೆಂಬಲವನ್ನು ನೀಡುತ್ತದೆ. ಮುಖ್ಯವಾಗಿ ಎದೆ ಭಾಗ ಅಗಲವಾಗಿದ್ದರೆ ಸರಿಯಾದ ಒಳ ಉಡುಪು ಆಯ್ದುಕೊಳ್ಳುವುದು ಬಹು ಮುಖ್ಯವಾಗಿರುತ್ತದೆ. ಬ್ರ್ಯಾಂಡೆಡ್ ಒಳ ಉಡುಪುಗಳನ್ನು ಆಯ್ಕೆ ಮಾಡಿ. ಇದರಲ್ಲಿ ಒಳ ಉಡುಪಿನ ಮೇಲ್ಭಾಗ ಮತ್ತು ಕೆಳ ಭಾಗದಲ್ಲಿ ನಯವಾದ ಮತ್ತು ಆಕರ್ಷಕವಾದ ಸ್ಟ್ರಾಪ್ ಗಳನ್ನು ಹೊಂದಿರುತ್ತದೆ. ಇಂತವುಗಳು ಹೆಚ್ಚು ಕಂಫರ್ಟ್ ಕೊಡುತ್ತದೆ ಮತ್ತು ದಿರಿಸಿನ ಮೇಲಿನ ಅನುಮಾನವನ್ನು ಮನಸ್ಸಿನಿಂದ ತೊಡೆದು ಹಾಕುತ್ತದೆ.


ಸ್ಟ್ರಕ್ಚರ್ಡ್ ಟಾಪ್ಸ್

ಶೋಲ್ಡರ್ ಇಲ್ಲದ ದಿರಸು ಧರಿಸುವಾಗ ಮೇಲ್ಭಾಗದಲ್ಲಿ ಹೆಚ್ಚುವರಿ ಬೆಂಬಲ ಮತ್ತು ಸಹಾಯಕ್ಕೆ ಬಿಲ್ಟ್-ಇನ್ ಬೋನಿಂಗ್, ಅಂಡರ್‌ವೈರ್ ಅಥವಾ ನೆಕ್‌ಲೈನ್ ಸುತ್ತಲೂ ದಪ್ಪವಾದ ರಬ್ಬರ್ ಬ್ಯಾಂಡ್‌ ಇರುವುದನ್ನು ಖಚಿತಪಡಿಸಿಕೊಳ್ಳಿ. ರಚನಾತ್ಮಕ ಮೇಲ್ಭಾಗಗಳು ಹೆಚ್ಚು ಸ್ಟೈಲಿಶ್ ಲುಕ್ ನೀಡುವುದು ಮಾತ್ರವಲ್ಲ ದೇಹದ ಗಾತ್ರಕ್ಕೆ ತಕ್ಕಂತೆ ಸರಿಯಾಗಿ ಹೊಂದಿಕೆಯಾಗುವಂತೆ ಮಾಡಿ ಕೊಂಚ ಸ್ಲಿಮ್ ಮತ್ತು ಫಿಟ್ ಆಗಿರುವಂತೆ ತೋರಿಸುತ್ತದೆ.

ಮೃದು ಬಟ್ಟೆಗಳಿಗೆ ಆದ್ಯತೆ ನೀಡಿ

ಆಫ್-ದಿ-ಶೋಲ್ಡರ್ ಟಾಪ್‌ಗಳಿಗಾಗಿ ಹೆಚ್ಚು ದಪ್ಪವಾದ ಬಟ್ಟೆಗಳು ಸರಿಯಾದ ಆಯ್ಕೆಯಲ್ಲ. ತೆಳು ಮತ್ತು ಮೃದುವಾದ ಬಟ್ಟೆಗಳು ಹೆಚ್ಚು ಕಂಫರ್ಟ್ ಫೀಲ್ ಕೊಡುತ್ತದೆ. ಹತ್ತಿ, ಲೆನಿನ್ ಬಟ್ಟೆಗಳಿಂದ ವಿನ್ಯಾಸಗೊಳಿಸಿರುವ ದಿರಿಸನ್ನು ಆಯ್ಕೆ ಮಾಡಿಕೊಳ್ಳಬಹುದು.


ಸರಿಯಾದ ಬಾಟಮ್ ದಿರಸನ್ನು ಆಯ್ಕೆ ಮಾಡಿ

ಶೋಲ್ಡರ್ ಇಲ್ಲಿದ ದಿರಸು ಧರಿಸುವಾಗ ಸರಿಯಾದ ಬಾಟಮ್ ದಿರಸನ್ನು ಆಯ್ಕೆ ಮಾಡುವುದು ಕೂಡ ಬಹು ಮುಖ್ಯವಾಗಿದೆ. ಇದು ಶೋಲ್ಡರ್ ಲೆಸ್ ಟಾಪ್‌ಗಳಿಗೆ ಸಪೋರ್ಟಿವ್ ಆಗಿದ್ದರೆ ಹೆಚ್ಚು ಕಂಫರ್ಟ್ ಫೀಲ್ ಕೊಡುತ್ತದೆ. ಹೊಕ್ಕುಳ ಬಳಿ ಬರುವ ಜೀನ್ಸ್ ಅಥವಾ ಸ್ಕರ್ಟ್‌ ಗಳನ್ನು ಆಯ್ಕೆ ಮಾಡುವುದು ಮತ್ತು ಹೆಚ್ಚು ದಪ್ಪ, ಅಗಲವಾದ ಎಲಾಸ್ಟಿಕ್ ಇರುವ ಶೋಲ್ಡರ್ ಲೆಸ್ ಟಾಪ್ ಗಳಿಗೆ ಸ್ಟೈಲಿಶ್ ಲುಕ್ ನೀಡುತ್ತದೆ ಮಾತ್ರವಲ್ಲ ಸುಂದರವಾಗಿ ಕಾಣುವಂತೆ ಮಾಡುತ್ತದೆ. ಎ-ಲೈನ್ ಸ್ಕರ್ಟ್‌ಗಳು ಮತ್ತು ವೈಡ್ ಲೆಗ್ ಪ್ಯಾಂಟ್‌ಗಳು ಹೆಚ್ಚು ಸಮತೋಲನ ಸಾಧಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: International Mud Day: ಆರೋಗ್ಯ, ಸೌಂದರ್ಯದ ಪಾಲಿಗೆ ಹೊನ್ನು ಈ ಮಣ್ಣು!

ಸರಿಯಾದ ವಿನ್ಯಾಸವನ್ನು ಆಯ್ಕೆ ಮಾಡಿ

ಶೋಲ್ಡರ್ ಲೆಸ್ ಟಾಪ್ ಗಳಲ್ಲಿ ಭುಜದ ಮೇಲ್ಭಾಗ ಸಮಾನವಾಗಿ ಇರುವುದಿಲ್ಲ. ಎದೆ ಭಾಗ ದೊಡ್ಡದಾಗಿರುವವರಿಗೆ ಕಂಠರೇಖೆಯ ದಿರಿಸುಗಳು ಹೆಚ್ಚು ಸುಂದರವಾಗಿ ಕಾಣುತ್ತದೆ. ಇದು ಎದೆಯ ಭಾಗದಲ್ಲಿ ಸುತ್ತುವರೆದಿರುವ ಲೇಯರ್‌ಗಳು, ರಫಲ್ಸ್ ಅಥವಾ ಇತರ ವಿಶೇಷ ವಿನ್ಯಾಸವನ್ನು ಒಳಗೊಂಡಿರುತ್ತದೆ.


ಸೂಕ್ತ ಆಭರಣ ಧರಿಸಿ

ಶೋಲ್ಡರ್ ಲೆಸ್ ಟಾಪ್‌ಗಳನ್ನು ಆಯ್ಕೆ ಮಾಡುವಾಗ ದಪ್ಪ ಕಿವಿಯೋಲೆಗಳು, ನೆಕ್ಲೇಸ್‌ಗಳು ಕೂಡ ಗಮನ ಸೆಳೆಯುವಂತಿರಬೇಕು. ನೆಕ್ಲೇಸ್ ಧರಿಸಲು ಇಷ್ಟವಿಲ್ಲದೇ ಇದ್ದರೆ ಸ್ಟ್ರೈಕಿಂಗ್ ಕಿವಿಯೋಲೆಗಳನ್ನು ಆಯ್ಕೆ ಮಾಡಿ. ಇದರೊಂದಿಗೆ ಆಕರ್ಷಕ ಬೆಲ್ಟ್‌ ಗಳು ಸ್ಟೈಲಿಶ್ ಲುಕ್ ನೀಡುತ್ತದೆ ಮಾತ್ರವಲ್ಲ ಇದು ಸೊಂಟದ ಭಾಗ ಬಿಗಿಗೊಳಿಸಲು ಅದ್ಭುತವಾದ ಪರಿಕರವಾಗಿದೆ.

Continue Reading

ಆರೋಗ್ಯ

Healthy Foods For Kidney: ನಮ್ಮ ಕಿಡ್ನಿ ಆರೋಗ್ಯವಾಗಿರಲು ಈ ಆಹಾರ ಸೇವನೆ ಸೂಕ್ತ

Healthy foods for kidney: ಕಿಡ್ನಿಯ ಸಮಸ್ಯೆ ಇದ್ದವರು ಯಾವಾಗಲೂ ದೇಹವನ್ನು ತೇವಾಂಶದಿಂದ ಇಟ್ಟುಕೊಳ್ಳಬೇಕು. ಇದಕ್ಕಾಗಿ ನೀರು ಕುಡಿಯುವುದು ಒಳ್ಳೆಯದು. ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ನೀರಿನ ಪೂರೈಕೆ ಮಾಡುತ್ತಿದ್ದರೆ, ಮಧುಮೇಹ, ಅಧಿಕ ರಕ್ತದೊತ್ತಡ, ಮಾನಸಿಕ ಒತ್ತಡ, ಉದ್ವೇಗದಂತಹ ಸಮಸ್ಯೆಗಳನ್ನು ದೂರವಿರಿಸಬಹುದು. ಕಿಡ್ನಿಯ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಯಾವ ಆಹಾರಗಳನ್ನು ಸೇವಿಸಬಹುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

VISTARANEWS.COM


on

Healthy Foods For Kidney
Koo

ಕಿಡ್ನಿಯ ಆರೋಗ್ಯಕ್ಕೆ ಒಳ್ಳೆಯ ಆಹಾರ (healthy foods for kidney) ಅತ್ಯಂತ ಮುಖ್ಯ. ಕಿಡ್ನಿಯ ಸಮಸ್ಯೆ ಇದ್ದವರು ಯಾವಾಗಲೂ ದೇಹವನ್ನು ತೇವಾಂಶದಿಂದ ಇಟ್ಟುಕೊಳ್ಳಬೇಕು. ಇದಕ್ಕಾಗಿ ನೀರು ಕುಡಿಯುವುದು ಒಳ್ಳೆಯದು. ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ನೀರಿನ ಪೂರೈಕೆ ಮಾಡುತ್ತಿದ್ದರೆ, ಮಧುಮೇಹ, ಅಧಿಕ ರಕ್ತದೊತ್ತಡ, ಮಾನಸಿಕ ಒತ್ತಡ, ಉದ್ವೇಗದಂತಹ ಸಮಸ್ಯೆಗಳನ್ನು ದೂರವಿರಿಸಬಹುದು. ಈ ಸಮಸ್ಯೆಗಳನ್ನು ದೂರವಿಟ್ಟರೆ, ಕಿಡ್ನಿಯ ಸಮಸ್ಯೆಗೂ ಒಳ್ಳೆಯದೇ. ಬನ್ನಿ ನಾವು ಕಿಡ್ನಿಯ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಯಾವ ಆಹಾರಗಳನ್ನು ಸೇವಿಸಬಹುದು ಎಂಬುದನ್ನು ನೋಡೋಣ.

Raw Turmeric with Powder Cutout

ಅರಿಶಿನ

ಅರಿಶಿನದಲ್ಲಿ ಸಾಕಷ್ಟು ಆಂಟಿ ಇನ್‌ಫ್ಲಮೇಟರಿ ಗುಣಗಳಿರುವುದರಿಂದ ಕಿಡ್ನಿಯಲ್ಲಾಗಿರುವ ಉರಿಯೂತದ ಲಕ್ಷಣಗಳಿಗೆ ಇದು ಒಳ್ಳೆಯದನ್ನೇ ಮಾಡುತ್ತದೆ. ಬಿಸಿ ಹಾಲಿನಲ್ಲಿ ಚಿಟಿಕೆ ಅರಿಶಿನ ಹಾಕಿ ನಿತ್ಯವೂ ಸೇವಿಸಬಹುದು.

Red capsicum Foods For Sharpen The Eyes

ಕೆಂಪು ಕ್ಯಾಪ್ಸಿಕಂ

ಕೆಂಬಣ್ಣದ ಕ್ಯಾಪ್ಸಿಕಂನಲ್ಲಿ ವಿಟಮಿನ್‌ ಸಿ, ಆಂಟಿ ಆಕ್ಸಿಡೆಂಟ್ಸ್‌ ಹೇರಳವಾಗಿರುವುದರಿಂದ ಇದು ಕಿಡ್ನಿಯ ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು.

Gooseberries and Greengages close up Gooseberry Benefits

ನೆಲ್ಲಿಕಾಯಿ

ನೆಲ್ಲಿಕಾಯಿಯಲ್ಲಿ ವಿಟಮಿನ್‌ ಸಿ ಹಾಗೂ ಆಂಟಿ ಆಕ್ಸಿಡೆಂಟ್ಸ್‌ ಹೇರಳವಾಗಿದೆ. ಇದು ಕಿಡ್ನಿಯ ಕಾರ್ಯಶೈಲಿಯನ್ನು ಚುರುಕುಗೊಳಿಸುತ್ತದೆ. ಅಷ್ಟೇ ಅಲ್ಲ ಆಕ್ಸಿಡೇಟಿವ್‌ ಒತ್ತಡದಿಂದ ರಕ್ಷಿಸುತ್ತದೆ. ನೆಲ್ಲಿಕಾಯಿ ಚಟ್ನಿ, ಜ್ಯೂಸ್‌, ನೆಲಿಕಾಯಿ ಮೊರಬ್ಬ ಇತ್ಯಾದಿಗಳ ಸೇವನೆಯಿಂದ ದೇಹಕ್ಕೆ ಅಗತ್ಯ ಪ್ರಮಾಣದ ವಿಟಮಿನ್‌ ಸಿ ಪೂರೈಕೆ ಮಾಡಬಹುದು.

garlic Anti Infective Foods

ಬೆಳ್ಳುಳ್ಳಿ

ಬೆಳ್ಳುಳ್ಳಿಯು ಕೇವಲ ಕೊಲೆಸ್ಟೆರಾಲ್‌ ಇಳಿಸುವುದಕ್ಕೆ ಸಹಾಯ ಮಾಡುವುದಷ್ಟೇ ಅಲ್ಲ, ಅದು ಕಿಡ್ನಿಯ ಆರೋಗ್ಯವನ್ನೂ ಹೆಚ್ಚಿಸಿ ಚುರುಕಾಗಿಸುತ್ತದೆ. ಅಡುಗೆಯಲ್ಲಿ ಸಾಧ್ಯವಾದೆಡೆಯೆಲ್ಲ ಬೆಳ್ಳುಳ್ಳಿ ಬಳಸಿ. ಒಗ್ಗರಣೆಯಲ್ಲಿ ಬೆಳ್ಳುಳ್ಳಿಯನ್ನೂ ಸೇರಿಸಿ. ಆಗಾಗ ಬೆಳ್ಳುಳ್ಳಿ ಚಟ್ನಿ ಮಾಡಿ ಸೇವಿಸಿ. ಬೆಳ್ಳುಳ್ಳಿ ಪರಾಠಾ ಮಾಡಿ ಸೇವಿಸಿ. ಸೂಪ್‌ಗೆ ಬೆಳ್ಳುಳ್ಳಿ ಹಾಕಿ ಸೇವಿಸಿ.

Barley for Hot Flashes During Period

ಬಾರ್ಲಿ

ನಾರಿನಂಶ ಹೆಚ್ಚಿರುವ ಬಾರ್ಲಿಯಂತಹ ಧಾನ್ಯವನ್ನು ಬಳಕೆ ಮಾಡಲು ಕಲಿಯಿರಿ. ಇದು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಸಮತೋಲನದಲ್ಲಿಡಲು ಸಹಾಐ ಮಾಡುವುದಲ್ಲದೆ, ಕಿಡ್ನಿ ಸಮಸ್ಯೆಯನ್ನೂ ದೂರವಿರಿಸಲು ಸಹಾಯ ಮಾಡುತ್ತದೆ. ಬಾರ್ಲಿಯ ಒಂದು ಸರಳ ಸೂಪ್‌, ಅಥವಾ ತರಕಾರಿಗಳ ಜೊತೆಗೆ ಬಾರ್ಲಿಯನ್ನೂ ಬೇಯಿಸಿ ತಿನ್ನುವುದು ಇತ್ಯಾದಿಗಳನ್ನು ಟ್ರೈ ಮಾಡಬಹುದು.

banana stem

ಬಾಳೆದಂಡು

ಬಾಳೆಮರದ ದಂಡೂ ಕೂಡಾ ಕಿಡ್ನಿಕಲ್ಲಿಗೆ ಅತ್ಯಂತ ಒಳ್ಳೆಯ ಔಷಧಿ. ಮನೆಮದ್ದಾಗಿ ಇದನ್ನು ಬಳಕೆ ಮಾಡಿ ಕಿಡ್ನಿ ಸಮಸ್ಯೆಯಿಂದ ಪಾರಾದವರೂ ಇದ್ದಾರೆ. ಬಾಳೆದಂಡಿನ ರಸ ಹಿಂಡಿ ಅದರ ಜ್ಯೂಸನ್ನು ನಿತ್ಯವೂ ಕುಡಿಯುವುದರಿಂದ ಪ್ರಯೋಜನ ಪಡೆಯಬಹುದು. ಆದರೆ, ಪೊಟಾಶಿಯಂ ಹೆಚ್ಚಾದರೆ ಅದೂ ಕಿಡ್ನಿಗೆ ಆಪತ್ತು ತರಬಹುದು ಎಂಬುದು ನೆನಪಿರಲಿ.

Coconut water Foods For Fight Against Dengue Fever

ಎಳನೀರು

ನೈಸರ್ಗಿಕ ಎಲೆಕ್ಟ್ರೋಲೈಟ್‌ಗಳಿರುವ ಎಳನೀರು ದೇಹವನ್ನು ಸದಾ ತೇವಾಂಶದಿಂದಿಡಲು ಅನುಕೂಲಕರ. ಇದು ಕಿಡ್ನಿಯನ್ನು ಆರೋಗ್ಯವಾಗಿಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ದೇಹವನ್ನು ತಂಪಾಗಿಡುವ ಜೊತೆಗೆ ದೇಹಕ್ಕೆ ಬೇಕಾದ ಖನಿಜ ಲವಣಾಂಶಗಳನ್ನೂ ನೀಡುತ್ತದೆ. ಎಳನೀರಿನ ಜೊತೆಗೆ ನಿಂಬೆಹಣ್ಣು, ಪುದಿನ ಸೇರಿಸಿ ಕುಡಿಯುವುದರಿಂದಲೂ ಉತ್ತಮ ಪರಿಣಾಮ ಕಾಣಬಹುದು.

Blueberry Foods That Slow Down Ageing

ಬ್ಲೂಬೆರ್ರಿ

ಬ್ಲೂಬೆರ್ರಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್‌ಗಳಿದ್ದು, ಇದು ಕಿಡ್ನಿಯ ಸಮಸ್ಯೆಗಳು ಬಾರದಂತೆ ಮೊದಲೇ ತಡೆಯುತ್ತದೆ. ಬ್ಲೂಬೆರ್ರಿ ಸ್ಮೂದಿ, ಬ್ಲೂಬೆರ್ರಿ ಯೋಗರ್ಟ್‌ ಮತ್ತಿತರ ಆಹಾರಗಳನ್ನು ತಯಾರಿಸುವ ಮೂಲಕ ಬ್ಲೂಬೆರ್ರಿಯನ್ನು ಸೇವಿಸಬಹುದು.

Ginger Digestive Boosting Foods

ಶುಂಠಿ

ಶುಂಠಿಯಲ್ಲಿ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್‌ಗಳಿವೆ. ಇದು ಕಿಡ್ನಿಗೆ ಆಗುವ ಹಾನಿಗಳನ್ನು ತಡೆಯುತ್ತದೆ. ನಿತ್ಯವೂ ಶುಂಠಿಯನ್ನು ಆಹಾರದ ಜೊತೆಯಲ್ಲಿ ಬಳಕೆ ಮಾಡುವ ಮೂಲಕ ಶುಂಠಿಯ ಉಪಯೋಗವನ್ನು ಪಡೆಯಬಹುದು. ಬಿಸಿನೀರಿಗೆ ಶುಂಠಿಯನ್ನು ತುರಿದು ಹಾಕಿ ಕುಡಿಯುವುದು, ನಿಂಬೆಹಣ್ಣು, ಜೇನುತುಪ್ಪ ಸೇರಿಸಿ ಶುಂಠಿ ಚಹಾ ಮಾಡಿ ಕುಡಿಯುವುದು ಇತ್ಯಾದಿಗಳ ಮೂಲಕ ಶುಂಠಿಯ ಉಪಯೋಗವನ್ನು ದೇಹ ಪಡೆದುಕೊಳ್ಳುವಂತೆ ಮಾಡಬಹುದು.

Antioxidant Properties Cucumber Benefits

ಸೌತೆಕಾಯಿ

ಸೌತೆಕಾಯಿಯಲ್ಲಿ ನೀರಿನಂಶ ಬಹಳ ಹೆಚ್ಚಿರುವುದರಿಂದ ಸಹಜವಾಗಿಯೇ ಕಿಡ್ನಿಕಲ್ಲು ಮತ್ತಿತರ ಕಿಡ್ನಿ ಸಮಸ್ಯೆಗೆ ಇದು ಅತ್ಯಂತ ಒಳ್ಳೆಯದು. ಇದರ ಸೇವನೆಯಿಂದ ಕಿಡ್ನಿಯಲ್ಲಿರುವ ಹಾಗೂ ದೇಹದಲ್ಲಿರುವ ವಿಷಕಾರೀ ಅಂಶಗಳನ್ನು ಹೊರಕ್ಕೆ ಕಳಿಸುವಂತೆ ಮಾಡಬಹುದು. ಇದರ ಜೊತೆಗೆ ನಿಂಬೆಹಣ್ಣು ಹಿಂಡಿಯೂ ಸೇವಿಸಬಹುದು.

ಇದನ್ನೂ ಓದಿ: Weight Loss Tips: ಕಪ್ಪು ಬಣ್ಣದ ಆಹಾರಗಳಿಂದ ತೂಕ ಇಳಿಸಿ!

Continue Reading

ಆರೋಗ್ಯ

Breakfast Tips: ಬೆಳಗಿನ ಉಪಾಹಾರಕ್ಕೆ ಈ 5 ಬಗೆಯ ಆಹಾರಗಳನ್ನು ಸೇವಿಸಬೇಡಿ!

Breakfast Tips: ಬ್ರೇಕ್‌ಫಾಸ್ಟ್‌ ಅನ್ನು ಬಿಡುವುದು ಆರೋಗ್ಯದ ಲಕ್ಷಣವಲ್ಲ. ಅಷ್ಟೇ ಅಲ್ಲ. ಉತ್ತಮ ಆರೋಗ್ಯಕರ ಬೆಳಗಿನ ಉಪಾಹಾರವೂ ಕೂಡಾ ನಮ್ಮ ಆರೋಗ್ಯದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಆದರೆ ಕೆಲವು ಅನಾರೋಗ್ಯಕರ ತಿನಿಸುಗಳನ್ನು ಇಂದಿನ ಧಾವಂತದ ಯುಗದಲ್ಲಿ ಬಹುತೇಕರು ಬೆಳಗಿನ ಉಪಹಾರಕ್ಕಾಗಿ ಸೇವಿಸುತ್ತಾರೆ. ಸಂಸ್ಕರಿಸಿದ ಇಂತಹ ಆಹಾರಗಳನ್ನು ಬೆಳಗಿನ ಉಪಾಹಾರಕ್ಕಾಗಿ ಸೇವಿಸಿದರೆ, ನಮ್ಮ ಜೀರ್ಣಾಂಗ ವ್ಯವಸ್ಥೆಗೆ ನಾವೇ ಅಪಚಾರ ಬಗೆದಂತೆ. ಬನ್ನಿ, ಯಾವೆಲ್ಲ ಆಹಾರಗಳನ್ನು ಬೆಳಗ್ಗಿನ ಉಪಹಾರಕ್ಕೆ ತಿನ್ನಲೇಬಾರದು ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

Breakfast Tip
Koo

ಇಡೀ ದಿನದ ಆಹಾರಕ್ರಮದಲ್ಲಿ ಬಹಳ ಮುಖ್ಯವಾದದ್ದು ಬೆಳಗ್ಗಿನ ಉಪಾಹಾರ (Breakfast Tips). ಇದನ್ನು ಸರಿಯಾಗಿ ಮಾಡದಿದ್ದರೆ ಅದು ಇಡೀ ದಿನದ ಕೆಲಸದ ಮೇಲೆ ಪ್ರಭಾವ ಬೀರುತ್ತದೆ. ಉಪಾಹಾರವನ್ನೇ ಬಿಟ್ಟರೆ ಕೇವಲ ದೇಹವಷ್ಟೇ ಅಲ್ಲ, ಮನಸ್ಸೂ ಕೂಡ ಸರಿ ಇರುವುದಿಲ್ಲ. ಕಿರಿಕಿರಿ, ಏನೋ ಕಳೆದುಕೊಂಡ ಭಾವ ಅಷ್ಟೇ ಅಲ್ಲ, ಶಕ್ತಿಗುಂದುವಿಕೆ, ಇಡೀ ದಿನದ ಕೆಲಸಕ್ಕೆ ಶಕ್ತಿ ಇಲ್ಲದಂತಾಗುವುದು ಇತ್ಯಾದಿ ಪರಿಣಾಮ ಕಂಡುಬರುತ್ತದೆ. ಹೀಗಾಗಿ, ಬ್ರೇಕ್‌ಫಾಸ್ಟ್‌ ಅನ್ನು ಬಿಡುವುದು ಆರೋಗ್ಯದ ಲಕ್ಷಣವಲ್ಲ. ಅಷ್ಟೇ ಅಲ್ಲ. ಉತ್ತಮ ಆರೋಗ್ಯಕರ ಬೆಳಗಿನ ಉಪಾಹಾರವೂ ಕೂಡಾ ನಮ್ಮ ಆರೋಗ್ಯದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಆದರೆ ಕೆಲವು ಅನಾರೋಗ್ಯಕರ ತಿನಿಸುಗಳನ್ನು ಇಂದಿನ ಧಾವಂತದ ಯುಗದಲ್ಲಿ ಬಹುತೇಕರು ಬೆಳಗಿನ ಉಪಹಾರಕ್ಕಾಗಿ ಸೇವಿಸುತ್ತಾರೆ. ಸಂಸ್ಕರಿಸಿದ ಇಂತಹ ಆಹಾರಗಳನ್ನು ಬೆಳಗಿನ ಉಪಹಾರಕ್ಕಾಗಿ ಸೇವಿಸಿದರೆ, ನಮ್ಮ ಜೀರ್ಣಾಂಗ ವ್ಯವಸ್ಥೆಗೆ ನಾವೇ ಅಪಚಾರ ಬಗೆದಂತೆ. ಬನ್ನಿ, ಯಾವೆಲ್ಲ ಆಹಾರಗಳನ್ನು ಬೆಳಗ್ಗಿನ ಉಪಹಾರಕ್ಕೆ ತಿನ್ನಲೇಬಾರದು ಎಂಬುದನ್ನು ನೋಡೋಣ.

Yogurt vs Curd

ಫ್ಲೇವರ್ಡ್‌ ಮೊಸರು

ಅಂಗಡಿಗಳಲ್ಲಿ ದೊರೆಯುವ ಬಗೆಬಗೆಯ ಫ್ಲೇವರ್ಡ್‌ ಮೊಸರುಗಳು ತಿನ್ನಲು ಬಲು ರುಚಿ. ಸ್ಟ್ರಾಬೆರಿ, ಬ್ಲೂಬೆರ್ರಿ, ರಸ್‌ಬೆರ್ರಿ, ಮಾವು ಇತ್ಯಾದಿ ಇತ್ಯಾದಿ ಬಗೆಬಗೆಯ ಮೊಸರುಗಳು ಡಬ್ಬಗಳಲ್ಲಿ ಇಂದು ಲಭ್ಯ. ಸುಲಭವಾಗಿ ಅಂಗಡಿಗಳಲ್ಲಿ ದೊರೆಯುವ ಆರೋಗ್ಯಕರ ಆಹಾರ ಎಂದು ಬಹುತೇಕರು ಇದನ್ನು ಆಗಾಗ ಬಳಸುವುದುಂಟು. ಆದರೆ, ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಕ್ಕರೆ, ಕೃತಕ ಪದಾರ್ಥಗಳೂ ಇರುವುದರಿಂದ ಇವು ಖಂಡಿತ ಒಳ್ಳೆಯದು ಮಾಡಲಾರವು. ಇವುಗಳ ಒಳ್ಳೆಯ ಗುಣಗಳಿಗಿಂತ ಅಡ್ಡ ಪರಿಣಾಮಗಳೇ ಹೆಚ್ಚು. ತೂಕ ಹೆಚ್ಚಾಗುವಿಕೆ, ಶೀತ, ಕಫಗಳನ್ನು ಹೆಚ್ಚಿಸುತ್ತವೆ.

Serials

ಸಿರಿಯಲ್‌ಗಳು

ಬೆಳಗ್ಗೆ ಎದ್ದ ಕೂಡಲೇ ಸುಲಭವಾಗಿ ಮಾಡಬಹುದಾದ ಬ್ರೇಕ್‌ಫಾಸ್ಟ್‌ಗಳ ಪೈಕಿ, ಒಂದು. ಬಹುತೇಕರು ತಿನ್ನುವುದು ಇಂದು ಇವನ್ನೇ. ಬೆಳಗ್ಗೆ ಎದ್ದ ಕೂಡಲೇ ಒಂದಿಷ್ಟು ಸಿರಿಯಲ್‌ ಅನ್ನು ಬೌಲ್‌ನಲ್ಲಿ ಹಾಕಿ ಅದಕ್ಕೆ ಸ್ವಲ್ಪ ಹಾಲು ಹಾಕಿ ಸೇವಿಸಿದರೆ ಮುಗೀತು. ಆಫೀಸ್‌ ಹೊರಡುವ ಗಡಿಬಿಡಿಯಲ್ಲಿ ಬಹುತೇಕರು ಹೀಗೆ ಇದನ್ನು ತಿನ್ನುವುದು ಹೆಚ್ಚು. ಆದರೆ, ಕಾರ್ನ್‌ ಫ್ಲೇಕ್ಸ್‌ ಸೇರಿದಂತೆ ಇಂಥ ಸಿರಿಯಲ್‌ಗಳು ಸಂಸ್ಕರಿಸಿದ ಆಹಾರಗಳ ಪೈಕಿ ಒಂದಾಗಿರುವುದರಿಂದ ಹಾಗೂ ಇವುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಕ್ಕರೆ ಹಾಗೂ ಕೃತಕ ವಸ್ತುಗಳೂ ಸೇರಿಸಲ್ಪಟ್ಟಿರುವುದರಿಂದ ಆರೋಗ್ಯಕ್ಕೆ ಅಂದುಕೊಂಡ ಹಾಗೆ ಒಳ್ಳೆಯದನ್ನು ಮಾಡಲಾರವು. ಅಡ್ಡ ಪರಿಣಾಮಗಳೂ ಇವೆ.

Fruit Juice Side Effects

ಹಣ್ಣಿನ ರಸ

ಹಣ್ಣು ಆರೋಗ್ಯಕ್ಕೆ ಒಳ್ಳೆಯದು ನಿಜ. ಹಾಗೆಯೇ ಹಣ್ಣಿನ ರಸವೂ ಕೂಡಾ. ಆದರೆ, ಹಣ್ಣಿನ ರಸ ಒಳ್ಳೆಯದು ಅಂದುಕೊಂಡು ಬೆಳಗ್ಗೆ ಹಣ್ಣಿನ ರಸ ಕುಡಿದರೆ ಖಂಡಿತ ಒಳ್ಳೆಯದಾಗದು. ಇದರಿಂದ ಇದ್ದಕ್ಕಿದ್ದ ಹಾಗೆ ರಕ್ತದಲ್ಲಿನ ಗ್ಲುಕೋಸ್‌ ಪ್ರಮಾಣ ಏರುತ್ತದೆ. ಒಂದು ಹಣ್ಣು ತಿನ್ನುವುದಕ್ಕೂ ಹಣ್ಣಿನ ರಸ ಕುಡಿಯುವುದಕ್ಕೂ ವ್ಯತ್ಯಾಸವಿದೆ. ಒಂದು ಲೋಟ ಹಣ್ಣಿನ ರಸಕ್ಕೆ ಸಾಕಷ್ಟು ಹಣ್ಣುಗಳು ಬೇಕಾಗುತ್ತವೆ, ಅಷ್ಟೇ ಅಲ್ಲ, ಹಣ್ಣಿನ ನಾರಿನಂಶವನ್ನು ಎಸೆದು ಬಿಡಲಾಗುತ್ತದೆ. ಆದರೆ, ಹಣ್ಣಿನಲ್ಲಿ ಹಾಗಲ್ಲ. ಹಾಗಾಗಿ ಜ್ಯೂಸ್‌ಗಿಂತ ಹಣ್ಣನ್ನು ಹಾಗೆಯೇ ತಿನ್ನುವುದು ಬಹಳ ಒಳ್ಳೆಯದು. ಬೆಳಗ್ಗೆ ಉಪಹಾರಕ್ಕಂತೂ ಹಣ್ಣಿನ ರಸ ಕುಡಿಯುವುದು ಒಳ್ಳೆಯದಲ್ಲ.

Waffle

ವ್ಯಾಫಲ್

ಪ್ಯಾನ್‌ಕೇಕ್‌ಗಳು ಹಾಗೂ ವ್ಯಾಫಲ್‌ಗಳನ್ನು ಬೆಳಗಿನ ಹೊತ್ತು ಉಪಹಾರಕ್ಕೆ ತಿನ್ನುವುದು ಒಳ್ಳೆಯದಲ್ಲ. ಇದರಲ್ಲಿ ಹೆಚ್ಚು ಮೈದಾ ಇರುತ್ತದೆ. ಅಷ್ಟೇ ಅಲ್ಲ, ಇದರಲ್ಲಿ ಯಾವುದೇ ಪೋಷಕಾಂಶಗಳಿರುವುದಿಲ್ಲ. ಉದಾಸೀನತೆಯನ್ನು ಹೆಚ್ಚು ಮಾಡುವ ಯಾವುದೇ ಶಕ್ತಿ ನೀಡದ ಆಹಾರವಿದು.

Cakes, Muffins

ಕೇಕ್‌, ಮಫಿನ್‌ಗಳು

ಬೆಳಗಿನ ಉಪಾಹಾರಕ್ಕೆ ಕೇಕ್‌, ಮಫಿನ್‌ನಂತಹ ಆಹಾರಗಳು ಒಳ್ಳೆಯದಲ್ಲ. ಮೈದಾ, ಸಕ್ಕರೆ, ಎಣ್ಣೆ ಇತ್ಯಾದಿಗಳೇ ಹೆಚ್ಚಿರುವ ಈ ಆಹಾರದಲ್ಲಿ ಒಳ್ಳೆಯ ಅಂಶಗಳು ಕಡಿಮೆ. ಹೆಚ್ಚು ಕ್ಯಾಲರಿಯ, ಹೆಚ್ಚು ಕೊಬ್ಬಿನ ಆಹಾರ. ಸಕ್ಕರೆಯ ಪ್ರಮಾಣವೂ ಹೆಚ್ಚು. ಹಾಗಾಗಿ ಈ ಬೆಳಗಿನ ಉಪಹಾರಕ್ಕೆ ಆರೋಗ್ಯಕರವಲ್ಲ.

ಇದನ್ನೂ ಓದಿ: Sabja Seeds Benefits: ಸಬ್ಜಾ ಬೀಜವನ್ನು ನೆನೆಹಾಕಿ ಸೇವಿಸಿದರೆ ಹಲವು ಆರೋಗ್ಯ ಸಮಸ್ಯೆ ದೂರ

Continue Reading
Advertisement
Parliament Sessions
ದೇಶ9 mins ago

Parliament Sessions: ಇಂದು ಸಂಸತ್‌ ಕಲಾಪ ಪುನರಾರಂಭ; ʼನೀಟ್‌ʼ ಚರ್ಚೆಗೆ ಪ್ರತಿಪಕ್ಷಗಳ ಪಟ್ಟು ಸಾಧ್ಯತೆ: Live ಇಲ್ಲಿ ನೋಡಿ

Watermelon At Nigh
ಆರೋಗ್ಯ9 mins ago

Watermelon At Night: ಸಂಜೆ 7 ಗಂಟೆಯ ಕಲ್ಲಂಗಡಿ ಹಣ್ಣನ್ನು ತಿನ್ನಲು ಹೋಗಬೇಡಿ!

Off Shoulder Tops Fashion
ಫ್ಯಾಷನ್9 mins ago

Off Shoulder Tops Fashion: ನೀವೂ ಆಫ್‌ ಶೋಲ್ಡರ್‌ ಟಾಪ್‌ ಧರಿಸಬಹುದು! ಆದರೆ ಈ ಎಚ್ಚರಿಕೆ ವಹಿಸಿ

shubham milk price hike
ಪ್ರಮುಖ ಸುದ್ದಿ11 mins ago

Milk Price Hike: ಹಾಲಿನ ದರ 4 ರೂ. ಹೆಚ್ಚಳ? ಶುಭಂ ಗೋಲ್ಡ್‌ ದರ ಏರಿಕೆ

irat Kohli's Heartfelt Tribute to Anushka Sharma
ಕ್ರಿಕೆಟ್19 mins ago

Virat Kohli: ಈ ಗೆಲುವು ನನ್ನದಷ್ಟೇ ಅಲ್ಲ, ನಿನ್ನದು ಕೂಡ ಎಂದು ಪತ್ನಿಗೆ ಪ್ರೀತಿ ವ್ಯಕ್ತಪಡಿಸಿದ ವಿರಾಟ್‌ ಕೊಹ್ಲಿ!

Birla Opus
ವಾಣಿಜ್ಯ30 mins ago

Birla Opus: ಬಿರ್ಲಾ ಪೇಂಟ್ ಜಾಹೀರಾತು ನಿಮಗೂ ಇಷ್ಟ ಆಗಿರಬೇಕಲ್ಲವೇ? ಇದರ ಸಂದೇಶ ಏನು? ಹಿನ್ನೆಲೆ ಏನು? ಕುತೂಹಲಕರ ಮಾಹಿತಿ

Kalki 2898 AD Prabhas Film Hits Jackpot 500 Cr WW In Opening
ಟಾಲಿವುಡ್44 mins ago

Kalki 2898 AD: ನಾಲ್ಕೇ ದಿನಕ್ಕೆ 500 ಕೋಟಿ ರೂ. ಗಳಿಕೆ ಕಂಡ ʻಕಲ್ಕಿʼ: ಪ್ರಭಾಸ್‌ ಅಬ್ಬರಕ್ಕೆ ಬಾಕ್ಸ್ ಆಫೀಸ್‌ ಧೂಳೀಪಟ!

hosur airport
ಪ್ರಮುಖ ಸುದ್ದಿ49 mins ago

Hosur Airport: ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಹೊಣೆ ಬಿಐಎಎಲ್‌ಗೆ! ಕರ್ನಾಟಕಕ್ಕೆ ಟಕ್ಕರ್‌ ಕೊಟ್ಟ ತಮಿಳುನಾಡು

Healthy Foods For Kidney
ಆರೋಗ್ಯ1 hour ago

Healthy Foods For Kidney: ನಮ್ಮ ಕಿಡ್ನಿ ಆರೋಗ್ಯವಾಗಿರಲು ಈ ಆಹಾರ ಸೇವನೆ ಸೂಕ್ತ

bengal assault case
ಕ್ರೈಂ1 hour ago

Assault Case: ಜೋಡಿಗೆ ಥಳಿತ; ʼಇದು ಮುಸ್ಲಿಂ ರಾಷ್ಟ್ರ…ʼ ಎಂದ ತೃಣಮೂಲ ಶಾಸಕ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ15 hours ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು20 hours ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ2 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ2 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ3 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು4 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ4 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

ಟ್ರೆಂಡಿಂಗ್‌