ವಿಸ್ತಾರ Explainer | ಭಾರತವನ್ನು ಎದುರು ಹಾಕಿಕೊಂಡರೆ ಪಾಕಿಸ್ತಾನ ಕ್ರಿಕೆಟ್‌ ಬರ್ಬಾದ್‌; ಯಾಕೆ ಗೊತ್ತೆ? - Vistara News

ಕ್ರಿಕೆಟ್

ವಿಸ್ತಾರ Explainer | ಭಾರತವನ್ನು ಎದುರು ಹಾಕಿಕೊಂಡರೆ ಪಾಕಿಸ್ತಾನ ಕ್ರಿಕೆಟ್‌ ಬರ್ಬಾದ್‌; ಯಾಕೆ ಗೊತ್ತೆ?

ಭಾರತ ಕ್ರಿಕೆಟ್‌ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸದೇ ಇರುವುದಕ್ಕೆ ಬಿಸಿಸಿಐ ವಿರುದ್ಧ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಪ್ರತೀಕಾರ ತೀರಿಸಲು ಮುಂದಾದರೆ ದೊಡ್ಡ ಮಟ್ಟದ ನಷ್ಟ ಅನುಭವಿಸಲಿದೆ.

VISTARANEWS.COM


on

ind vs pak
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಕ್ರಿಕೆಟ್‌ ಪಂದ್ಯವೆಂದರೆ ಅದೊಂದು ಮಿನಿ ಸಮರ. ಗ್ರೌಂಡ್‌ನ ಒಳಗೆ, ಹೊರಗೆ, ಟಿವಿಗಳಲ್ಲಿ, ನ್ಯೂಸ್‌ ಚಾನೆಲ್‌ಗಳಲ್ಲಿ, ಹಳ್ಳಿಗಳ ಕಟ್ಟೆಗಳಲ್ಲಿ ಸೇರಿದಂತೆ ಎಲ್ಲೆಡೆ ಬಿಗ್‌ ಫೈಟ್‌. ಎರಡೂ ದೇಶಗಳ ನಡುವಿನ ರಾಜಕೀಯ ವೈಷಮ್ಯ ಕ್ರಿಕೆಟ್‌ ಆಟದಲ್ಲಿ ಹಾಗೂ ಮಾತಿನಲ್ಲಿ ಎದ್ದು ಕಾಣುತ್ತದೆ ಹಾಗೂ ಜಿದ್ದಿಗೆ ಕೊನೆಯೇ ಇರುವುದಿಲ್ಲ. ತೋಳು ತಟ್ಟಿ ಪಂಥಾಹ್ವಾನ ನೀಡುವುದು, ಗೆದ್ದ ಮೇಲೆ ಬೆನ್ನು ತಟ್ಟಿಕೊಳ್ಳುವುದು, ಪರಸ್ಪರ ನಿಂದನೆ, ಕೈ ಕೈ ಹಿಸುಕಿಕೊಳ್ಳುವುದು, ಒಂದೆರಡು ಟಿವಿ ಸೆಟ್‌ಗಳು ಉಡೀಸ್ ಆಗುವುದು ಮಾಮೂಲು. ಇತ್ತಂಡಗಳ ನಡುವಿನ ಹಣಾಹಣಿಯೊಂದಕ್ಕೆ ವೇದಿಕೆ ಸಜ್ಜುಗೊಳ್ಳುತ್ತಿದ್ದಂತೆ ಆರಂಭಗೊಳ್ಳುವ ಚರ್ಚೆ, ವಿಶ್ಲೇಷಣೆ, ಮೂದಲಿಕೆಗಳು ಪಂದ್ಯದ ಫಲಿತಾಂಶ ಪ್ರಕಟಗೊಂಡ ನಂತರವೂ ಹಲವು ದಿನಗಳ ಕಾಲ ಮುಂದುವರಿಯುತ್ತದೆ. ದೇಶ ವಿಭಜನೆ ಬಳಿಕ ೧೯೫೨ರಲ್ಲಿ ನಡೆದ ಮೊದಲ ಸರಣಿಯಲ್ಲಿ ಆರಂಭಗೊಂಡ ಈ ಜಿದ್ದು ಈಗಲೂ ಮುಂದುವರಿದಿದ್ದು, ಕೊನೆಯಾಗುವ ಯಾವ ಲಕ್ಷಣವೂ ತೋರುತ್ತಿಲ್ಲ. ಏತನ್ಮಧ್ಯೆ, ಭಾರತ ಹಾಗೂ ಪಾಕಿಸ್ತಾನ ನಡುವಿನ ರಾಜಕೀಯ ಸಂಬಂಧವೂ ದಿನೇದಿನೆ ಹಳಸುತ್ತಿದೆ. ಹೀಗೆ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವಿನ ಜಿದ್ದು ಎಲ್ಲಿಂದ ಆರಂಭ, ಇತ್ತಂಡಗಳ ಪಂದ್ಯದ ಕಿಮ್ಮತ್ತೇನು, ಈ ದೇಶಗಳ ನಡುವಿನ ವೈರತ್ವ ಕೊನೆಯಾಗಬಹುದೇ ಎಂಬಿತ್ಯಾದಿ ವಿಷಯಗಳ ಬಗ್ಗೆ ಸಂಕ್ಷಿಪ್ತ ನೋಟ (ವಿಸ್ತಾರ Explainer) ಇಲ್ಲಿದೆ.

ಯಾಕೆ ಮತ್ತೆ ಚರ್ಚೆ?

ವಿರಾಟ್‌ ಕೊಹ್ಲಿ

ಕೆಲವು ದಿನಗಳ ಹಿಂದೆ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್‌ ತಂಡಗಳ ನಡುವಿನ ಕ್ರಿಕೆಟ್‌ ವೈರತ್ವ ಮತ್ತೆ ಮುನ್ನೆಲೆಗೆ ಬಂದಿದೆ. ಅದಕ್ಕೆ ಕಾರಣ ೨೦೨೩ರಲ್ಲಿ ಪಾಕಿಸ್ತಾನದಲ್ಲಿ ಆಯೋಜನೆಗೊಂಡಿರುವ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿ. ಏಷ್ಯಾ ಕ್ರಿಕೆಟ್ ಕೌನ್ಸಿಲ್‌ನಿಂದ (ಎಸಿಸಿ) ಆತಿಥ್ಯದ ಹಕ್ಕು ಪಡೆದುಕೊಂಡಿರುವ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ತನ್ನ ನೆಲದಲ್ಲೇ ಟೂರ್ನಿ ಆಯೋಜಿಸಲು ಮುಂದಾಗಿದೆ. ಆದರೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಅಸಾಧ್ಯ ಎಂದಿದೆ. ನಾವು ಬರಬೇಕಿದ್ದರೆ ತಟಸ್ಥ ತಾಣದಲ್ಲಿ ಪಂದ್ಯ ನಡೆಯಲಿ. ಯಾವ ಕಾರಣಕ್ಕೂ ನಮ್ಮ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುವುದಿಲ್ಲ ಎಂಬುದಾಗಿ ಹೇಳಿಕೆ ಕೊಟ್ಟಿದೆ. ಏಷ್ಯಾ ಕ್ರಿಕೆಟ್‌ ಕೌನ್ಸಿಲ್‌ನ ಮುಖ್ಯಸ್ಥರೂ ಆಗಿರುವ ಜಯ್‌ ಶಾ ಅವರು ಟೂರ್ನಿ ತಟಸ್ಥ ತಾಣದಲ್ಲೇ ನಡೆಯಲಿದೆ ಎಂಬುದನ್ನು ಒತ್ತಿ ಹೇಳಿದ್ದಾರೆ. ಭಾರತದ ಹೇಳಿಕೆಗೆ ಬೇಸ್ತು ಬಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಹಾಗಾದರೆ ನಮ್ಮ ತಂಡವನ್ನು ಮುಂದಿನ ವರ್ಷ ಭಾರತದಲ್ಲಿ ನಡೆಯುವ ಏಕ ದಿನ ವಿಶ್ವ ಕಪ್‌ಗೆ ಕಳುಹಿಸುವುದಿಲ್ಲ ಎಂದು ಬಾಲಿಷ ಹೇಳಿಕೆ ಕೊಟ್ಟಿದೆ. ಆದರೆ, ಪಾಕಿಸ್ತಾನದ ಬೆದರಿಕೆಗೆ ಕಿಮ್ಮತ್ತಿಲ್ಲ ಎಂಬುದು ಎಲ್ಲಿಗೂ ಗೊತ್ತಿರುವ ಸಂಗತಿ.

ಸದ್ಯದ ಪರಿಸ್ಥಿತಿಯಲ್ಲಿ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರಕಾರ ಸಮ್ಮತಿ ನೀಡದು. ಇದರ ಅರಿವಿರುವ ಬಿಸಿಸಿಐ ನಮ್ಮ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುವುದಿಲ್ಲ ಎಂಬುದಾಗಿ ಮೊದಲೇ ಹೇಳಿಕೆ ಕೊಟ್ಟಿದೆ. ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಕೂಡ, ಜಗತ್ತಲ್ಲಿ ಏನೂ ಬೇಕಾದರೂ ಆಗಬಹುದು, ಆದರೆ ಇದೊಂದು ಕಷ್ಟ ಎಂಬರ್ಥದಲ್ಲಿ ಮಾತನಾಡಿದ್ದಾರೆ.

ಯಾಕೆ ಕಳುಹಿಸುವುದಿಲ್ಲ?

ಕ್ರಿಕೆಟ್‌ ಹೊರತುಪಡಿಸಿ ಉಳಿದ ಕ್ರೀಡಾ ಕ್ಷೇತ್ರದ ಕ್ರೀಡಾಪಟುಗಳು ಪಾಕಿಸ್ತಾನಕ್ಕೆ ಹೋಗುತ್ತಾರೆ. ಅಲ್ಲಿನ ಕ್ರೀಡಾಪಟುಗಳೂ ಭಾರತಕ್ಕೆ ಬಂದು ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಾರೆ. ಅಥ್ಲೆಟಿಕ್ಸ್‌, ಚೆಸ್‌, ಟೆನಿಸ್‌ಗೆ ಇಲ್ಲದ ನಿರ್ಬಂಧ ಕ್ರಿಕೆಟ್‌ಗೆ ಮಾತ್ರ ಸೀಮಿತ ಯಾಕೆ ಎನ್ನುವ ಪ್ರಶ್ನೆಯೂ ಸಹಜ. ಉತ್ತರವೂ ಅಷ್ಟೇ ಸರಳ. ಭಾರತ ಹಾಗೂ ಪಾಕಿಸ್ತಾನದ ನಾಗರಿಕರು ಕ್ರಿಕೆಟ್‌ಗೆ ಇನ್ನಿಲ್ಲದ ಪ್ರಾಮುಖ್ಯತೆ ಕೊಡುತ್ತಾರೆ. ಕ್ರಿಕೆಟ್‌ ಅವರ ಜೀವಾಳ. ಕ್ರಿಕೆಟ್‌ ತಾರೆಗಳನ್ನು ಅವರು ಹೃದಯದಲ್ಲಿಟ್ಟು ಆರಾಧಿಸುತ್ತಾರೆ. ಎಲ್ಲದರ ಮಧ್ಯೆ ಎರಡೂ ದೇಶಗಳಲ್ಲಿ ಕ್ರಿಕೆಟ್‌ ತಂಡಗಳಲ್ಲಿ ಹಲವು ಸ್ಟಾರ್‌ಗಳಿದ್ದಾರೆ.

ind vs aus

ಭಾರತದ ಹಾಲಿ ತಂಡವನ್ನು ಪರಿಗಣಿಸುವುದಾದರೆ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮ, ಕೆ ಎಲ್‌ ರಾಹುಲ್‌ ಅವರಂತಹ ಸ್ಟಾರ್‌ಗಳ ದಂಡೇ ಇದೆ. ಇಂಥ ಆಟಗಾರರನ್ನು ಒಳಗೊಂಡ ತಂಡವನ್ನು ಬೇರೆ ದೇಶಕ್ಕೆ ಕಳುಹಿಸುವಾಗ ಅವರ ಸುರಕ್ಷತೆಯ ಬಗ್ಗೆಯೂ ಕಾಳಜಿ ಅಗತ್ಯ. ಸುರಕ್ಷತೆ ಎಂಬುದು ಎರಡೂ ದೇಶಗಳ ನಡುವಿನ ರಾಜಕೀಯ ಸಂಬಂಧವನ್ನು ಅವಲಂಬಿಸಿರುತ್ತದೆ. ಭಾರತ ಮತ್ತು ಪಾಕಿಸ್ತಾನದ ದ್ವಿಪಕ್ಷೀಯ ಸಂಬಂಧ ಹಳಸಿ ಹೋಗಿರುವ ಪ್ರಸ್ತುತ ಸಂದರ್ಭದಲ್ಲಿ ಆ ದೇಶಕ್ಕೆ ನಮ್ಮ ಸ್ಟಾರ್‌ ಆಟಗಾರರನ್ನು ಕಳುಹಿಸಿಕೊಡುವುದು ಉಚಿತವಲ್ಲ ಎಂಬುದುಎಲ್ಲರ ಅಭಿಪ್ರಾಯ. ಹೇಳಿಕೇಳಿ ಪಾಕಿಸ್ತಾನ, ಭಯೋತ್ಪಾದಕರ ನೆಲೆವೀಡು. ಅಲ್ಲಿಗೆ ನಮ್ಮ ಆಟಗಾರರನ್ನು ಕಳುಹಿಸಿ ಸಂಕಷ್ಟಕ್ಕೆ ದೂಡಲು ಬಿಸಿಸಿಐ ಹಿರಿ ತಲೆಗಳು ಸಿದ್ಧರಿಲ್ಲ.

ಈ ಹಿಂದೆ ಪಾಕಿಸ್ತಾನಕ್ಕೆ ಪ್ರವಾಸ ಹೋಗಿದ್ದ ಶ್ರೀಲಂಕಾ ಕ್ರಿಕೆಟ್‌ ತಂಡದ ಆಟಗಾರರು ಪ್ರಯಾಣಿಸುತ್ತಿದ್ದ ಬಸ್‌ಗೆ ಭಯೋತ್ಪಾದಕರ ಗುಂಡಿನ ದಾಳಿ ನಡೆದಿತ್ತು. ವಿಶ್ವ ಕ್ರಿಕೆಟ್‌ನ ಅತ್ಯಂತ ಕರಾಳ ಘಟನೆ ಇದು. ಇಂಥ ದೇಶಕ್ಕೆ ಭಾರತ ತಂಡದ ಆಟಗಾರರನ್ನು ಹೇಗೆ ಕಳುಹಿಸಿತು?

ಇದು ಬರೇ ಆಟಗಾರರ ವಿಷಯಕ್ಕೆ ಸೀಮಿತವಾಗಿರುವ ಸಂಗತಿಯಲ್ಲ. ಅಲ್ಲಿ ಕ್ರಿಕೆಟ್‌ ಮ್ಯಾಚ್‌ ನಡೆದರೆ ಭಾರತದ ಕ್ರಿಕೆಟ್‌ ಅಭಿಮಾನಿಗಳು ಪಂದ್ಯ ವೀಕ್ಷಣೆಗೆ ಹೋಗುತ್ತಾರೆ. ವೀಸಾ ನೀಡುವಿಕೆ, ಅವರ ಸುರಕ್ಷತೆ ಸೇರಿದಂತೆ ಎಲ್ಲವೂ ಭಾರತಕ್ಕೆ ಸವಾಲು. ಅಲ್ಲಿ ಒಬ್ಬ ಭಾರತೀಯನ ಮೇಲೆ ಆಕ್ರಮಣ ನಡೆದರೂ ಅದು ದೊಡ್ಡ ವಿಷಯವಾಗಿ ಮಾರ್ಪಡುತ್ತದೆ. ಭದ್ರತಾ ವೈಫಲ್ಯ ಎಂಬುದು ಪಾಕಿಸ್ತಾನದಲ್ಲಿ ಮಾಮೂಲಿ ಸಂಗತಿ. ಅಲ್ಲಿನ ಸರಕಾರವೂ ಆರ್ಥಿಕವಾಗಿ ಸೊರಗಿದೆ. ಇಂಥ ಸಂದರ್ಭದಲ್ಲಿ ಸ್ಟಾರ್‌ ಆಟಗಾರರನ್ನು ಒಳಗೊಂಡಿರುವ ಭಾರತ ತಂಡಕ್ಕೆ ರಕ್ಷಣೆ ಕೊಡುವುದಕ್ಕೆ ಅವರಿಗೆ ಸಾಧ್ಯವಿಲ್ಲ ಎಂಬುದು ಬಿಸಿಸಿಐ ಅಭಿಪ್ರಾಯ.

ಯಾರಿಗೆ ಲಾಸ್‌?

ಭಾರತ ತಂಡ ಪಾಕಿಸ್ತಾನಕ್ಕೆ ಹೋಗದಿದ್ದರೆ ಅಥವಾ ಪಾಕಿಸ್ತಾನ ತಂಡ ಭಾರತಕ್ಕೆ ಬರದಿದ್ದರೆ ಯಾರಿಗೆ ನಷ್ಟ ಎಂಬುದು ಸದ್ಯದ ಚರ್ಚೆ. ಎರಡೂ ಪ್ರಸಂಗಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ನಷ್ಟ. ಭಾರತ ತಂಡ ಪಾಕಿಸ್ತಾನಕ್ಕೆ ಹೋಗದಿದ್ದರೆ ಉಳಿದ ತಂಡಗಳೂ ಟೂರ್ನಿಗೆ ಹಿಂದೇಟು ಹಾಕುವ ಸಾಧ್ಯತೆಗಳಿವೆ. ಭಾರತ ಬರದಿದ್ದರೂ ಪರ್ವಾಗಿಲ್ಲ. ಇಲ್ಲೇ ಪಂದ್ಯ ನಡೆಸುತ್ತೇವೆ ಎಂದು ಪಿಸಿಬಿ ಏನಾದರೂ ತೀರ್ಮಾನಿಸಿದರೆ? ಅದೊಂದು ಕೆಟ್ಟ ನಿರ್ಧಾರವಾಗಲಿದೆ ಹಾಗೂ ಪಿಸಿಬಿ ಬರ್ಬಾದ್ ಅಗೋದು ಗ್ಯಾರಂಟಿ. ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಪಂದ್ಯವೇ ಇಲ್ಲದ ಆ ಟೂರ್ನಿಯನ್ನು ನೋಡಲು ಪ್ರೇಕ್ಷಕರು ಮುಂದೆ ಬರುವುದಿಲ್ಲ. ಹೀಗಾಗಿ ಟಿಕೆಟ್‌ ಮಾರಾಟದಿಂದ ಬರುವ ಆದಾಯ ಸಂಪೂರ್ಣ ಖೋತಾ. ಪ್ರಾಯೋಜಕರು ಆ ಕಡೆ ಕತ್ತೆತ್ತಿಯೂ ನೋಡುವುದಿಲ್ಲ. ನೇರ ಪ್ರಸಾರದ ಹಕ್ಕುಗಳ ಮಾರಾಟವೂ ಕನಿಷ್ಠ ದರಕ್ಕೆ ಬಿಡ್ ಆಗಬಹುದು. ಈ ಎರಡೂ ಆದಾಯಗಳನ್ನು ನಷ್ಟ ಮಾಡಿಕೊಂಡು ಟೂರ್ನಿಗೆ ಆತಿಥ್ಯ ವಹಿಸಿ ಮಾಡುವುದು ಏನಿದೆ?

ಏಷ್ಯಾ ಕ್ರಿಕೆಟ್‌ ಕೌನ್ಸಿಲ್‌ ಆತಿಥ್ಯವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ನೀಡಿರುವ ಹೊರತಾಗಿಯೂ ಟೂರ್ನಿಯ ಮೇಲಿನ ಹಿಡಿತ ಕಳೆದುಕೊಳ್ಳುವುದಿಲ್ಲ. ಏಷ್ಯಾ ಕ್ರಿಕೆಟ್‌ ಕೌನ್ಸಿಲ್‌, ಪಂದ್ಯವನ್ನು ತಟಸ್ಥ ತಾಣದಲ್ಲಿ ನಡೆಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ಬಹುಮತದೊಂದಿಗೆ ವ್ಯಕ್ತಪಡಿಸಿದರೆ, ಪಿಸಿಬಿ ಅದನ್ನು “ಕೈ ಕಟ್‌, ಬಾಯ್‌ ಮುಚ್‌’ ಎಂದು ಒಪ್ಪಲೇಬೇಕಾಗುತ್ತದೆ. ಈ ವಿಚಾರದಲ್ಲಿ ಏಷ್ಯಾ ಕ್ರಿಕೆಟ್ ಕೌನ್ಸಿಲ್‌ನಲ್ಲಿ ಸದಸ್ಯತ್ವ ಹೊಂದಿರುವ ಬಾಂಗ್ಲಾದೇಶ, ಶ್ರೀಲಂಕಾ ಕ್ರಿಕೆಟ್‌ ಸಂಸ್ಥೆಗಳೂ ಬಿಸಿಸಿಐ ಪರವಾಗಿರುತ್ತದೆ. ಇನ್ನು ಅತಿ ಹೆಚ್ಚು ಆದಾಯ ತಂದುಕೊಡುವ ಬಿಸಿಸಿಐ ವಿರೋಧಿ ನಿರ್ಧಾರವನ್ನು ಕ್ರಿಕೆಟ್‌ನ ಜಾಗತಿಕ ಸಂಸ್ಥೆ ಐಸಿಸಿ ಕೂಡ ತಳೆಯದು. ಹೀಗಾಗಿ ಈ ವಿಚಾರದಲ್ಲಿ ಬಿಸಿಸಿಐ ಗೆಲುವು ನಿಶ್ಚಿತ.

ಇದಕ್ಕೆ ಪ್ರತಿಯಾಗಿ ೨೦೨೩ರಲ್ಲಿ ನಡೆಯುವ ವಿಶ್ವ ಕಪ್‌ಗೆ ತನ್ನ ತಂಡವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭಾರತಕ್ಕೆ ಕಳುಹಿಸದಿದ್ದರೂ ಅವರಿಗೇ ನಷ್ಟ. ಐಸಿಸಿ ಟೂರ್ನಿಯೊಂದರಲ್ಲಿ ಪಾಲ್ಗೊಳ್ಳುವ ಅವಕಾಶ ಕಳೆದುಕೊಂಡರೆ ಆ ಕ್ರಿಕೆಟ್‌ ಮಂಡಳಿಗೆ ಉಳಿಗಾಲವೇ ಇಲ್ಲ. ಐಸಿಸಿಯಿಂದ ಯಾವುದೇ ಆದಾಯ ಹಂಚಿಕೆ ಆ ಕ್ರಿಕೆಟ್‌ ಮಂಡಳಿಗೆ ಆಗದು. ಇಲ್ಲೂ ಪಿಸಿಬಿಗೆ ಆರ್ಥಿಕ ಹಿಂಜರಿತ. ಈಗ ಬರವುದಿಲ್ಲ ಎಂದು ಬೆದರಿಕೆ ಹಾಕಿದರೂ, ಮುಂದೆ ತಂಡವನ್ನು ಕಳುಹಿಸಿಯೇ ಕಳುಹಿಸುತ್ತದೆ. ಒಂದು ವೇಳೆ ಕೊನೇ ತನಕ ಹಠ ಹಿಡಿದರೂ, ಐಸಿಸಿ ಮಧ್ಯಸ್ಥಿಕೆ ವಹಿಸಲಿದೆ.

ತಟಸ್ಥ ತಾಣ ಯಾವುದು?

ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಾಲಿಗೆ ತಟಸ್ಥ ತಾಣ ದುಬೈ. ಅಲ್ಲಿನ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಮ್‌ ಭಾರತದ ಪಾಲಿಗೆ ಸುರಕ್ಷಿತ ತಾಣ. ನೇರ ಪ್ರಸಾರ, ಭದ್ರತೆ, ಟೈಮ್‌ ಜೋನ್‌ ಸೇರಿದಂತೆ ಎಲ್ಲ ವಿಚಾರದಲ್ಲೂ ಅನುಕೂಲಕರ. ಶಾರ್ಜಾ ಹಾಗೂ ಅಬು ಧಾಬಿಯೂ ಈ ಪಟ್ಟಿಯಲ್ಲಿವೆ. ದಶಕಗಳ ಹಿಂದೆ ಕೆನಡಾದ ಟೊರಂಟೊವನ್ನು ಕೂಡ ತಟಸ್ಥ ತಾಣವಾಗಿ ಆಯ್ಕೆ ಮಾಡಲಾಗುತ್ತಿತ್ತು.

ಭಾರತ – ಪಾಕ್‌ ಕ್ರಿಕೆಟ್‌ ವೈರತ್ವ ಎಲ್ಲಿಂದ ಆರಂಭ?

team india

ದೇಶ ವಿಭಜಗೊಂಡು ಎರಡೂ ದೇಶಗಳೂ ಪರಸ್ಪರ ದ್ವೇಷ ಬೆಳೆಸಿಕೊಂಡ ಬಳಿಕದಿಂದಲೇ ಕ್ರಿಕೆಟ್‌ ತಂಡಗಳ ನಡುವೆಯೂ ವೈರತ್ವ ಶುರುವಾಯಿತು. ೧೯೪೭ರಲ್ಲಿ ಎರಡೂ ದೇಶಗಳಿಗೆ ಸ್ವಾತಂತ್ರ್ಯ ದೊರಕಿದರೂ ಮೊದಲ ದ್ವಿಪಕ್ಷೀಯ ಸರಣಿ ನಡೆದಿದ್ದು ೧೯೫೨ರಲ್ಲಿ. ಎರಡೂ ದೇಶಗಳ ರಾಜಕೀಯ ದ್ವೇಷ ಕ್ರಿಕೆಟ್‌ನೊಂದಿಗೆ ಬೆರೆತಿತು. ಪಂದ್ಯವನ್ನು ಗೆದ್ದರೆ ಯುದ್ಧದ್ದಲಿ ಗೆದ್ದಂತೆ ಎಂಬ ಭಾವ ಸೃಷ್ಟಿಯಾಯಿತು.

ಕಣಿವೆ ರಾಜ್ಯ ಜಮ್ಮು- ಕಾಶ್ಮೀರದ ಮೇಲಿನ ಹಕ್ಕು ಸ್ಥಾಪನೆ ವಿಚಾರದಲ್ಲಿ ಆರಂಭಗೊಂಡ ಬಿಕ್ಕಟ್ಟು ಹಾಗೂ ಆ ಬಳಿಕ ನಡೆದ ಇಂಡೋ-ಪಾಕ್‌ ಸಮರಗಳ ಪ್ರಭಾವ ಹಲವು ಬಾರಿ ಕ್ರಿಕೆಟ್‌ ಪಂದ್ಯಗಳಿಗೂ ತಟ್ಟಿದೆ. ೧೯೫೨ರಲ್ಲಿ ಪಾಕ್‌ ತಂಡ ಮೊದಲ ಬಾರಿ ಭಾರತಕ್ಕೆ ಬಂತು. ಆದರೆ, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಹಣಾಹಣಿ ೧೯೬೨ರಲ್ಲಿ ಕೊನೆಗೊಂಡಿತು. ೧೯೬೨ರಿಂದ ೧೯೭೭ರವರೆಗೆ ಕ್ರಿಕೆಟ್ ಸಂಬಂಧವೇ ಇರಲಿಲ್ಲ. ೧೯೬೫ ಹಾಗೂ ೧೯೭೧ರಲ್ಲಿ ನಡೆದ ಎರಡೂ ದೇಶಗಳ ನಡುವಿನ ಯುದ್ಧವೇ ಅದಕ್ಕೆ ಕಾರಣ.

೧೯೭೮ರಲ್ಲಿ ಭಾರತ ತಂಡದ ಮತ್ತೆ ಪಾಕಿಸ್ತಾನಕ್ಕೆ ಪ್ರವಾಸ ಮಾಡಿತ್ತು. ಅಲ್ಲಿಗೆ ದೀರ್ಘ ಕಾಲದ ವೈಷಮ್ಯ ಕೊನೆಗೊಂಡಿತ್ತು. ೧೯೭೯ರಲ್ಲಿ ಪಾಕ್‌ ತಂಡ ಭಾರತಕ್ಕೂ ಬಂತು. ೧೯೮೪ರಲ್ಲಿ ಭಾರತ ತಂಡದ ಪಾಕ್‌ ಪ್ರವಾಸ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಹತ್ಯೆಯ ಕಾರಣಕ್ಕೆ ಸ್ಥಗಿತಗೊಂಡಿತ್ತು. ಅ೮೦ ಹಾಗೂ ೯೦ರ ದಶಕದಲ್ಲಿ ಇತ್ತಂಡಗಳ ನಡುವಿನ ಪಂದ್ಯಗಳು ಯುಎಇನಲ್ಲಿ ನಡೆದಿದ್ದವು.

೧೯೯೯ರಲ್ಲಿ ಭಾರತದ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಪಾಕಿಸ್ತಾನಕ್ಕೆ ಐತಿಹಾಸಿಕ ಭೇಟಿ ನೀಡಿದ ಬಳಿಕ ಪಾಕ್‌ ತಂಡ ಭಾರತಕ್ಕೆ ಬಂದಿತ್ತು. ಅದಾದ ಬೆನ್ನಲ್ಲೇ ಕಾರ್ಗಿಲ್‌ ಯುದ್ಧ ನಡೆಯಿತು. ಬಳಿಕ ಕ್ರಿಕೆಟ್‌ ಸಂಬಂಧ ಹಳಸಿ ಹೋಯಿತು. ೨೦೦೩ರಲ್ಲಿ ವಾಜಪೇಯಿ ಮತ್ತೆ ಪಾಕಿಸ್ತಾನ ಜತೆಗಿನ ಶಾಂತಿಯ ಒಪ್ಪಂದ ಮಾಡಿಕೊಂಡ ಬಳಿಕ ೧೫ ವರ್ಷಗಳ ಮುನಿಸು ಮುಗಿದು ಭಾರತ ತಂಡ ಪಾಕಿಸ್ತಾನಕ್ಕೆ ಭೇಟಿ ನೀಡಿತು. ೨೦೦೫ ಹಾಗೂ ೨೦೦೬ರಲ್ಲಿ ಮತ್ತೆ ಪ್ರವಾಸಗಳು ನಡೆದವು. ೨೦೦೮ರಲ್ಲಿ ಪಾಕ್‌ ಚಿತಾವಣೆಯಿಂದ ಮುಂಬಯಿ ಭಯೋತ್ಪಾದನಾ ದಾಳಿ (೨೬/೧೧) ನಡೆಯಿತು. ಹೀಗಾಗಿ ೨೦೦೯ರಲ್ಲಿ ನಿಗದಿಯಾಗಿದ್ದ ಪಾಕ್‌ ಪ್ರವಾಸ ಕೈಗೊಳ್ಳಲು ಬಿಸಿಸಿಐ ನಿರಾಕರಿಸಿತು. ಅಲ್ಲಿಂದ ಭಾರತ ತಂಡ ಪಾಕಿಸ್ತಾನಕ್ಕೆ ಕಾಲಿಟ್ಟಿಲ್ಲ. ಮುಂದೆಯೂ ಹೋಗುವುದಿಲ್ಲ ಎಂದು ಶಪಥ ಮಾಡಿದೆ.

೨೦೦೯ರಲ್ಲಿ ಪಾಕಿಸ್ತಾನಕ್ಕೆ ಪ್ರವಾಸ ಮಾಡಿದ್ದ ಶ್ರೀಲಂಕಾ ತಂಡದ ಆಟಗಾರರು ಇದ್ದ ಬಸ್‌ ಮೇಲೆ ಭಯೋತ್ಪಾದಕರ ದಾಳಿ ನಡೆಯಿತು. ಸುರಕ್ಷಿತವಲ್ಲದ ಪಾಕಿಸ್ತಾನಕ್ಕೆ ಬೇರೆ ದೇಶಗಳ ಕ್ರಿಕೆಟ್‌ ತಂಡಗಳು ಕಾಲಿಡಲಿಲ್ಲ. ಈ ವಿಚಾರದಲ್ಲಿ ಎಲ್ಲರೂ ಭಾರತ ಪರ ನಿಂತವು. ಈ ಘಟನೆಯಿಂದಾಗಿ ಪಾಕಿಸ್ತಾನದ ನಿಜ ಬಣ್ಣ ಬಯಲಾಯಿತು. ಏತನ್ಮಧ್ಯೆ, ೨೦೧೩ರಲ್ಲಿ ಪಾಕಿಸ್ತಾನ ಕ್ರಿಕೆಟ್‌ ತಂಡ ಭಾರತಕ್ಕೆ ಆಗಮಿಸಿತ್ತು. ಅದುವೇ ಕೊನೇ ಸರಣಿ. ಅಲ್ಲಿಂದ ಎರಡೂ ದೇಶಗಳ ಕ್ರಿಕೆಟ್‌ ಮಂಡಳಿಗಳು ಹಲವು ಒಪ್ಪಂದಕ್ಕೆ ಮುಂದಾಗಿದ್ದವು. ಆದರೆ, ಇಂಥ ಒಪ್ಪಂದಕ್ಕೆ ಭಾರತ ಸರಕಾರದ ಒಪ್ಪಿಗೆ ಅಗತ್ಯವಾಗಿತ್ತು. ಎಲ್ಲ ಪ್ರಸ್ತಾಪಗಳನ್ನು ಸರಕಾರ ತಳ್ಳಿ ಹಾಕಿತು. ಈಗ ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ.

ಆಟಗಾರರಿಗೂ ಅಷ್ಟೇ ಜಿದ್ದು

ಎರಡೂ ದೇಶಗಳ ನಡುವಿನ ರಾಜಕೀಯ ವಿರೋಧ ಮೈದಾನದಲ್ಲೂ ಪ್ರಕಟಗೊಂಡಿದ್ದವು. ೧೯೯೨ರಲ್ಲಿ ಕಿರಣ್‌ ಮೋರೆ ಹಾಗೂ ಜಾವೆದ್ ಮೀಯಾಂದಾದ್‌ ನಡುವಿನ ಗಲಾಟೆ, ೧೯೯೬ರಲ್ಲಿ ವೆಂಕಟೇಶ್‌ ಪ್ರಸಾದ್‌ ಹಾಗೂ ಅಮಿರ್‌ ಸೋಹೈಲ್ ನಡುವಿನ ಜಿದ್ದು, ೨೦೦೭ರಲ್ಲಿ ಕಾನ್ಪುರದಲ್ಲಿ ನಡೆದ ಪಂದ್ಯದಲ್ಲಿ ಶಾಹಿದ್‌ ಅಫ್ರಿದಿ ಹಾಗೂ ಗೌತಮ್‌ ಗಂಭೀರ್‌ ಕಿತ್ತಾಡಿಕೊಂಡಿರುವುದು, ೨೦೧೦ರಲ್ಲಿ ಶೋಯೆಬ್‌ ಅಖ್ತರ್‌ ಹಾಗೂ ಹರ್ಭಜನ್ ಸಿಂಗ್ ಕಚ್ಚಾಡಿಕೊಂಡಿರುವುದು, ೨೦೧೦ರಲ್ಲಿ ಗೌತಮ್‌ ಗಂಭೀರ್ ಹಾಗೂ ಕಮ್ರಾನ್‌ ಅಕ್ಮಲ್‌ ಜಗಳವಾಡಿಕೊಂಡಿರುವುದು ಕ್ರಿಕೆಟ್‌ ಪ್ರೇಮಿಗಳ ಮನದಲ್ಲಿ ಇನ್ನೂ ಅಚ್ಚಳಿಯದೇ ಉಳಿದ ಘಟನೆಗಳಾಗಿವೆ.

ಈಗ ಹೇಗಿದೆ ಆಟಗಾರರ ವರ್ತನೆ?

indo̲̲-pak

ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್‌ ತಂಡಗಳ ಆಟಗಾರರು ಈಗ ಮೊದಲಿನಂತೆ ಗ್ರೌಂಡ್‌ನಲ್ಲಿ ಕಚ್ಚಾಡುವುದಿಲ್ಲ. ಎದುರು ಸಿಕ್ಕಾಗ ಪರಸ್ಪರ ಅಭಿಮಾನದಿಂದಲೇ ಮಾತನಾಡುತ್ತಾರೆ. ೨೦೨೧ರ ಟಿ೨೦ ವಿಶ್ವ ಕಪ್‌ನಲ್ಲಿ ಪರಸ್ಪರ ಎದುರಾದಾಗ, ಕಳೆದ ತಿಂಗಳು ನಡೆದ ಏಷ್ಯಾ ಕಪ್‌ನಲ್ಲಿ ಎರಡು ಸಲ ಪರಸ್ಪರ ಎದುರಾದಾಗಲೂ ಇತ್ತಂಡಗಳ ಆಟಗಾರರು ಸಂಭ್ರಮದಿಂದಲೇ ಎದುರುಗೊಂಡಿದ್ದರು. ಎರಡೂ ದೇಶಗಳ ಆಟಗಾರರು ಪ್ರೀತಿ, ಅಭಿಮಾನದಿಂದ ಮಾತನಾಡುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದವು. ಪಾಕಿಸ್ತಾನದ ಬೌಲರ್‌ ಹ್ಯಾರಿಸ್ ರವೂಫ್‌, ಟೀಮ್‌ ಇಂಡಿಯಾ ಸ್ಟಾರ್ ಬ್ಯಾಟರ್‌ ವಿರಾಟ್‌ ಕೊಹ್ಲಿಯಿಂದ ಟಿ ಶರ್ಟ್‌ ಮೇಲೆ ಆಟೋಗ್ರಾಫ್‌ ಪಡೆದಿರುವುದು, ರೋಹಿತ್ ಶರ್ಮ ಅವರು ಪಾಕ್‌ ತಂಡದ ನಾಯಕನ ಕೈ ಕುಲುಕಿ ಮಾತನಾಡಿದ್ದು, ಪಾಕ್‌ ಬೌಲರ್‌ ಶಾಹಿನ್‌ ಶಾ ಅಫ್ರಿದಿ ಜತೆ ಭಾರತ ತಂಡದ ಆಟಗಾರರ ಒಡನಾಟ ಇದಕ್ಕೆಲ್ಲ ಸ್ಪಷ್ಟ ಉದಾಹರಣೆ. ಆದರೆ, ಪರಸ್ಪರ ಗೆದ್ದೇ ತೀರಬೇಕು ಎಂಬ ಇತ್ತಂಡಗಳ ಆಟಗಾರರ ಮೇಲಿನ ಒತ್ತಡ ಇನ್ನೂ ಕಡಿಮೆಯಾಗಿಲ್ಲ.

ಆಯೋಜಕರಿಗೆ ಹಬ್ಬ?

ಭಾರತ- ಪಾಕ್‌ ತಂಡಗಳ ನಡುವಿನ ಜಿದ್ದು ಟೂರ್ನಿ ಆಯೋಜಕರ ಪಾಲಿಗೆ ಆದಾಯದ ಮೂಲ. ಎರಡೂ ದೇಶಗಳ ನಡುವಿನ ಪಂದ್ಯ ಆಯೋಜನೆಗೊಂಡರೆ ಆದಾಯ ಮತ್ತು ಪ್ರಾಯೋಜಕತ್ವ ಹುಡುಕಿಕೊಂಡು ಬರುತ್ತದೆ. ಪ್ರೇಕ್ಷಕರ ಗ್ಯಾಲರಿಗಳೂ ತುಂಬಿ ತುಳುಕುತ್ತವೆ. ಪಂದ್ಯದ ಟಿಕೆಟ್‌ ಬಿಡುಗಡೆಗೊಂಡ ಕ್ಷಣಾರ್ಧದಲ್ಲೇ ಸೋಲ್ಡ್‌ ಔಟ್‌ ಆಗುತ್ತದೆ. ನೇರ ಪ್ರಸಾರದ ಹಕ್ಕು ಕೂಡ ಲಾಭದಾಯಕ ಮೊತ್ತಕ್ಕೆ ಸೇಲ್‌ ಆಗುತ್ತದೆ. ಹೀಗಾಗಿ ಪ್ರತಿ ಐಸಿಸಿ ಟೂರ್ನಿಯಲ್ಲೂ ಭಾರತ ಹಾಗೂ ಪಾಕಿಸ್ತಾನ ಒಂದೇ ಗುಂಪಿನಲ್ಲಿರುತ್ತದೆ ಹಾಗೂ ಆರಂಭದಲ್ಲೇ ಒಂದು ಪಂದ್ಯ ನಿಗದಿ ಮಾಡಲಾಗುತ್ತದೆ. ಅಲ್ಲಿಂದ ಇಡೀ ಟೂರ್ನಿಗೆ ಕಳೆ ಬರುತ್ತದೆ.

ಭಾರತ ಮತ್ತು ಪಾಕಿಸ್ತಾನಗಳ ನಡುವಿನ ದ್ವಿಪಕ್ಷೀಯ ಸಂಬಂಧ ಸದ್ಯಕ್ಕೆ ಸರಿಹೋಗುವ ಯಾವುದೇ ಲಕ್ಷಗಳು ಇಲ್ಲ. ಹೀಗಾಗಿ ಕ್ರಿಕೆಟ್‌ ತಂಡಗಳ ನಡುವಿನ ವೈರತ್ವವೂ ಮುಂದುವರಿಯುವುದರಲ್ಲಿ ಅನುಮಾನ ಇಲ್ಲ. ಆದರೆ, ಬಿಸಿಸಿಐ ಜಾಗತಿಕ ಮಟ್ಟದಲ್ಲಿ ಅತ್ಯಂತ ಬಲಿಷ್ಠ ಕ್ರಿಕೆಟ್‌ ಸಂಸ್ಥೆಯಾಗಿರುವ ಕಾರಣ ನೇರ ಸಮರದಲ್ಲಿ ಗೆಲುವು ನಮ್ಮದೇ.

ಇದನ್ನೂ ಓದಿ | IND vs PAK | ಭಾರತ ಮತ್ತು ಪಾಕಿಸ್ತಾನ ಪಂದ್ಯದಲ್ಲಿ ಆಟಗಾರರ ನಡುವಿನ ಬಿಗ್‌ ಫೈಟ್‌ಗಳು ಇಲ್ಲಿವೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IPL 2024: ಕೊಹ್ಲಿಯನ್ನು ಹಿಂದಿಕ್ಕಿ ಆರೆಂಜ್​ ಕ್ಯಾಪ್​ ಪಡೆದ ಗಾಯಕ್ವಾಡ್​; ಪರ್ಪಲ್​ ಕ್ಯಾಪ್​ ಹೋಲ್ಡರ್​ ಯಾರು?

IPL 2024: ಪರ್ಪಲ್​ ಕ್ಯಾಪ್​ಗಾಗಿ ಮೂರು ಬೌಲರ್​ಗಳ ಮಧ್ಯೆ ಭಾರೀ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. ಜಸ್​ಪ್ರೀತ್​ ಬುಮ್ರಾ, ಮುಸ್ತಫಿಜುರ್​ ರೆಹಮಾನ್​, ಹರ್ಷಲ್​ ಪಟೇಲ್​ ತಲಾ 14 ವಿಕೆಟ್​ ಕಿತ್ತು ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

VISTARANEWS.COM


on

IPL 2024
Koo

ಬೆಂಗಳೂರು: ಪ್ರಸಕ್ತ ಸಾಗುತ್ತಿರುವ 17ನೇ ಆವೃತ್ತಿಯ ಐಪಿಎಲ್​(IPL 2024) ಟೂರ್ನಿಯ ಲೀಗ್​ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಇನ್ನು ಬೆರಳೆಣಿಕೆಯ ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಎಲ್ಲ ತಂಡಗಳು ಪ್ಲೇ ಆಫ್​ ಪ್ರವೇಶಿಸಲು ಹರಸಾಹಸ ಪಡುತ್ತಿವೆ. ಜತೆಗೆ ಕೆಲವು ಆಟಗಾರರ ಮಧ್ಯೆ ಆರೆಂಜ್​ ಕ್ಯಾಚ್(Orange Cap)​ ಮತ್ತು ಪರ್ಪಲ್​ ಕ್ಯಾಪ್​ಗಾಗಿ(purple cap)​ ತೀವ್ರ ಪೈಪೋಟಿ ಏರ್ಪಟ್ಟಿದೆ.

ಈ ಆವೃತ್ತಿಯಲ್ಲಿ 48 ಪಂದ್ಯದ ಮುಕ್ತಾಯದ ವರೆಗೆ ರನ್​ಗಳಿಕೆಯಲ್ಲಿ ಅಗ್ರಸ್ಥಾನ ಪಡೆದು ಆರೆಂಜ್​ ಕ್ಯಾಪ್​ ಧರಿಸಿದ್ದ ವಿರಾಟ್​ ಕೊಹ್ಲಿ(500 ರನ್​​)ಯನ್ನು ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ನಾಯಕ ಋತುರಾಜ್​ ಗಾಯಕ್ವಾಡ್(509 ರನ್​)​ ಹಿಂದಿಕ್ಕಿದ್ದಾರೆ. ನಿನ್ನೆ(ಬುಧವಾರ) ನಡೆದ ಪಂಜಾಬ್​ ಕಿಂಗ್ಸ್​ ಎದುರಿನ ಪಂದ್ಯದಲ್ಲಿ 62 ರನ್​ ಬಾರಿಸುವ ಮೂಲಕ ಗಾಯಕ್ವಾಡ್(Ruturaj Gaikwad)​​ ಈ ಸಾಧನೆ ಮಾಡಿದರು. ಸದ್ಯ ಉಭಯ ಆಟಗಾರರ ಮಧ್ಯೆ ಆರೆಂಜ್​ ಕ್ಯಾಪ್​ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಟೂರ್ನಿಯ ಅಂತ್ಯದಲ್ಲಿ ಯಾರು ಅತ್ಯಧಿಕ ರನ್​ ಗಳಿಸಿರುತ್ತಾರೋ ಅವರಿಗೆ ಸರಣಿ ಶ್ರೇಷ್ಠ ಪ್ರಶಸ್ತಿಯಾಗಿ ಟಾಟಾ ಕಂಪೆನಿಯ ಎಲೆಕ್ಟ್ರಿಕ್​ ಕಾರ್​ ಸಿಗಲಿದೆ.

ಆರೆಂಜ್ ಕ್ಯಾಪ್​​ ರೇಸ್​ನಲ್ಲಿರುವ ಟಾಪ್​ 5 ಬ್ಯಾಟರ್​ಗಳು


ಋತುರಾಜ್​ ಗಾಯಕ್ವಾಡ್​-509 ರನ್​(10 ಇನಿಂಗ್ಸ್​)

ವಿರಾಟ್​ ಕೊಹ್ಕಿ-500 ರನ್​(10 ಇನಿಂಗ್ಸ್​)

ಸಾಯಿ ಸುದರ್ಶನ್​- 418 ರನ್​( 10 ಇನಿಂಗ್ಸ್​)

ಕೆ.ಎಲ್​ ರಾಹುಲ್​-406 ರನ್​( 10 ಇನಿಂಗ್ಸ್​)

ರಿಷಭ್​ ಪಂತ್​-398 ರನ್​(11 ಇನಿಂಗ್ಸ್​)

ಇದನ್ನೂ ಓದಿ Virat kohli : ಕಾಮೆಂಟ್ರಿ ಬಾಕ್ಸ್​​ನಲ್ಲಿ ಕುಳಿತು ವಿಮರ್ಶೆ ಮಾಡುವುದು ಸುಲಭ; ಕೊಹ್ಲಿ ತಿರುಗೇಟು ಕೊಟ್ಟಿದ್ದು ಯಾರಿಗೆ?

ಪರ್ಪಲ್​ ಕ್ಯಾಕ್​ಗೆ ಮೂರು ಮಂದಿಯ ಮಧ್ಯೆ ಫೈಟ್​


ಅತ್ಯಧಿಕ ವಿಕೆಟ್​ ಪಡೆದ ಬೌಲರ್​ಗೆ ನೀಡುವ ಪರ್ಪಲ್​ ಕ್ಯಾಪ್​ಗಾಗಿ ಮೂರು ಬೌಲರ್​ಗಳ ಮಧ್ಯೆ ಭಾರೀ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. ಜಸ್​ಪ್ರೀತ್​ ಬುಮ್ರಾ, ಮುಸ್ತಫಿಜುರ್​ ರೆಹಮಾನ್​, ಹರ್ಷಲ್​ ಪಟೇಲ್​ ತಲಾ 14 ವಿಕೆಟ್​ ಕಿತ್ತು ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಉತ್ತಮ ಬೌಲಿಂಗ್​ ಇಕಾನಮಿ ಹೊಂದಿರುವ ಕಾರಣ ಸದ್ಯ ಈ ಕ್ಯಾಪ್​ ಬುಮ್ರಾ ಬಳಿ ಇದೆ. ಇನ್ನುಳಿದಂತೆ ಆರು ಮಂದಿ ಬೌಲರ್​ಗಳು ತಲಾ 13 ವಿಕೆಟ್​ ಕಿತ್ತಿದ್ದಾರೆ. ಇವರಿಗೂ ಕೂಡ ಮುಂದಿನ ಪಂದ್ಯಗಳಲ್ಲಿ ಹೆಚ್ಚಿನ ವಿಕೆಟ್​ ಕಿತ್ತರೆ ಪರ್ಪಲ್​ ಕ್ಯಾಪ್​ ಪಡೆಯುವ ಅವಕಾಶವಿದೆ.

ಪರ್ಪಲ್​ ಕ್ಯಾಪ್​​ ರೇಸ್​ನಲ್ಲಿರುವ ಟಾಪ್​ 5 ಬೌಲರ್​ಗಳು


ಜಸ್​ಪ್ರೀತ್​ ಬುಮ್ರಾ-14 ವಿಕೆಟ್​(10 ಪಂದ್ಯ)

ಮುಸ್ತಫಿಜುರ್​ ರೆಹಮಾನ್​-14 ವಿಕೆಟ್​(9 ಪಂದ್ಯ​)

ಹರ್ಷಲ್​ ಪಟೇಲ್​-14 ವಿಕೆಟ್​(10 ಪಂದ್ಯ​)

ಮತೀಶ ಪತಿರಾಣ-13 ವಿಕೆಟ್​(6 ಪಂದ್ಯ)

ಟಿ ನಟರಾಜನ್​-13 ವಿಕೆಟ್​(7 ಪಂದ್ಯ)

Continue Reading

ಕ್ರಿಕೆಟ್

T20 World Cup: ಟಿ20 ವಿಶ್ವಕಪ್​ ತಂಡ ಸೇರಲು ರಾಹುಲ್​ಗೆ ಇನ್ನೂ ಇದೆ ಅವಕಾಶ

T20 World Cup: ಮೇ 25 ರ ತನಕ ಐಸಿಸಿ ಅನುಮತಿ ಇಲ್ಲದೆ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಆ ಬಳಿಕದ ಯಾವುದೇ ಬದಲಾವಣೆ ಮಾಡಬೇಕಿದ್ದರೆ ಐಸಿಸಿ ತಾಂತ್ರಿಕ ಸಮಿತಿಯ ಅನುಮತಿ ಅತ್ಯಗತ್ಯ. ಇದು ಕೂಡ ಆಟಗಾರರು ಗಾಯಗೊಂಡರೆ ಮಾತ್ರ ಬದಲಿ ಆಟಗಾರನ ಆಯ್ಕೆಯನ್ನು ಐಸಿಸಿ ಮಾನ್ಯ ಮಾಡುತ್ತದೆ.

VISTARANEWS.COM


on

T20 World Cup
Koo

ದುಬೈ: ಟಿ20 ವಿಶ್ವಕಪ್​ಗೆ(T20 World Cup) ಈಗಾಗಲೇ ಭಾರತ 15 ಸದಸ್ಯರ ಮತ್ತು ಮೀಸಲು ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ಸ್ಟಾರ್​ ಆಟಗಾರ ಕೆ.ಎಲ್​ ರಾಹುಲ್(KL Rahul)​ ಅವರನ್ನು ಈ ತಂಡದಿಂದ ಕೈಬಿಡಲಾಗಿದೆ. ಆದರೆ, ರಾಹುಲ್​ಗೆ ಇನ್ನೂ ಕೂಡ ತಂಡ ಸೇರುವ ಅವಕಾಶವೊಂದಿದೆ. ಇದು ಹೇಗೆ ಎನ್ನುವ ಮಾಹಿತಿ ಇಂತಿದೆ.

ಮೇ 25 ರ ತನಕ ಐಸಿಸಿ ಅನುಮತಿ ಇಲ್ಲದೆ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಆ ಬಳಿಕದ ಯಾವುದೇ ಬದಲಾವಣೆ ಮಾಡಬೇಕಿದ್ದರೆ ಐಸಿಸಿ ತಾಂತ್ರಿಕ ಸಮಿತಿಯ ಅನುಮತಿ ಅತ್ಯಗತ್ಯ. ಇದು ಕೂಡ ಆಟಗಾರರು ಗಾಯಗೊಂಡರೆ ಮಾತ್ರ ಬದಲಿ ಆಟಗಾರನ ಆಯ್ಕೆಯನ್ನು ಐಸಿಸಿ ಮಾನ್ಯ ಮಾಡುತ್ತದೆ. ಅವಕಾಶ ಸಿಕ್ಕ ಆಟಗಾರರ ಪೈಕಿ ಯಾರಾದರು ಗಾಯಗೊಂಡು ಅಲಭ್ಯರಾದರೆ ಆಗ ರಾಹುಲ್​ಗೆ ಅವಕಾಶ ಸಿಗಬಹುದು. ಇನ್ನೊಂದು ಸಾಧ್ಯತೆ ಎಂದರೆ ತಂಡ ಬದಲಾವಣೆಯ ಅಂತಿಮ ದಿನವಾದ 25ರಂದು ಅಚ್ಚರಿ ಎಂಬಂತೆ ರಾಹುಲ್​ ಆಯ್ಕೆಯಾಗುವ ಸಾಧ್ಯತೆಯೂ ಇದೆ.

ಕೆಲ ತಂಡಗಳು ಗೇಮ್ ಸ್ಟ್ರಟಜಿ ಮಾಡಿಕೊಂಡು ಕೆಲ ಸ್ಟಾರ್​ ಆಟಗಾರರನ್ನು ಮೊದಲ ಪಟ್ಟಿಯಿಂದ ಕೈಬಿಟ್ಟು ಆ ಬಳಿಕ ಅಚ್ಚರಿ ಎಂಬಂತೆ ತಂಡಕ್ಕೆ ಆಯ್ಕೆ ಮಾಡಿಕೊಳ್ಳುತ್ತದೆ. ಇದರ ಹಿಂದಿರುವ ಕಾರಣವೆಂದರೆ ಎದುರಾಳಿ ತಂಡಗಳ ಪೂರ್ವ ಯೋಜನೆಯನ್ನು ಬುಡಮೇಲು ಮಾಡುವುದು. ಕಳೆದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಅನುಭವಿ ಆಟಗಾರ ಮಾರ್ನಸ್​ ಲನುಶೇನ್​ ಅವರನ್ನು ಆಯ್ಕೆ ಮಾಡಿರಲಿಲ್ಲ. ಇನ್ನೇನು ತಂಡ ಬದಲಾವಣೆಗೆ ಅಂತಿಮ ದಿನ ಬಾಕಿ ಇರುವಾಗ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಹೀಗಾಗಿ ಭಾರತ ಕೂಡ ರಾಹುಲ್​ ಅವರನ್ನು ಈ ರೀತಿ ಆಯ್ಕೆ ಮಾಡುವ ಸಾಧ್ಯತೆಯೂ ಕಂಡು ಬಂದಿದೆ.

ಇದನ್ನೂ ಓದಿ T20 World Cup 2024: ಡ್ರಾಪ್ -ಇನ್ ಪಿಚ್ ಅಳವಡಿಕೆ ಕಾರ್ಯ ಆರಂಭಿಸಿದ ಐಸಿಸಿ

ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ದ್ವಿತೀಯ ಪಂದ್ಯ ಜೂನ್‌ 9 ರಂದು ಪಾಕ್​ ವಿರುದ್ಧ ಆಡಲಿದ. ಭಾರತ ತನ್ನ ಎಲ್ಲ ಲೀಗ್‌ ಪಂದ್ಯಗಳನ್ನು ಅಮೆರಿಕದಲ್ಲೇ ಆಡದೆ. ಇದರಲ್ಲಿ ಮೂರು ಪಂದ್ಯಗಳು ನ್ಯೂಯಾರ್ಕ್‌ ಮತ್ತು ಒಂದು ಪಂದ್ಯ ಫ್ಲೋರಿಡಾದಲ್ಲಿ ನಡೆಯಲಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆದರೆ, ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ. ಜೂನ್​ 29ಕ್ಕೆ ಫೈನಲ್​ ಪಂದ್ಯ ಸಾಗಲಿದೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್​ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್​ ಸಿಂಗ್​, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್

Continue Reading

ಕ್ರೀಡೆ

MS Dhoni: ರನ್​ ಓಡದೆ ಸ್ವಾರ್ಥ ತೋರಿದ ಧೋನಿ; ನೆಟ್ಟಿಗರಿಂದ ಭಾರೀ ಟೀಕೆ

MS Dhoni: ಯಾವುದೇ ವಿವಾದಗಳಿಗೆ ಒಳಗಾಗದೆ ಶಾಂತ ಸ್ವಭಾವದಿಂದ ಆಡುವ ಧೋನಿ ಹಲವು ಬಾರಿ ಸಹ ಆಟಗಾರರ ಶತಕ ಮತ್ತು ಅರ್ಧಶತಕಕ್ಕೋಸ್ಕರ ರನ್​ ಗಳಿಸದೆ ಅವಕಾಶ ಒದಗಿಸಿಕೊಟ್ಟಿದ್ದಾರೆ. ಆದರೆ, ಪಂಬಾಬ್​ ವಿರುದ್ಧದ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್​ ನಡೆಸುವ ಸಲುವಾಗಿ ಸ್ವಾರ್ಥಿಯಾಗಿ ಕಂಡು ಬಂದರು.

VISTARANEWS.COM


on

MS Dhoni
Koo

ಚೆನ್ನೈ: ಚೆನ್ನೈ ಸೂಪರ್​ ಕಿಂಗ್ಸ್ ತಂಡದ ಮಾಜಿ ನಾಯಕ​ ಮಹೇಂದ್ರ ಸಿಂಗ್ ಧೋನಿ(MS Dhoni) ಬುಧವಾರ ನಡೆದ ಪಂಜಾಬ್​ ಲಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ತೋರಿದ ವರ್ತನೆಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದು ಮಾಡುತ್ತಿದೆ. ಹಲವು ನೆಟ್ಟಿಗರು ಧೋನಿ ಇಷ್ಟೊಂದು ಸ್ವಾರ್ಥಿಯಾಗಬಾರದೆಂದು ಟೀಕಿಸಿದ್ದಾರೆ.

ಯಾವುದೇ ವಿವಾದಗಳಿಗೆ ಒಳಗಾಗದೆ ಶಾಂತ ಸ್ವಭಾವದಿಂದ ಆಡುವ ಧೋನಿ ಹಲವು ಬಾರಿ ಸಹ ಆಟಗಾರರ ಶತಕ ಮತ್ತು ಅರ್ಧಶತಕಕ್ಕೋಸ್ಕರ ರನ್​ ಗಳಿಸದೆ ಅವಕಾಶ ಒದಗಿಸಿಕೊಟ್ಟಿದ್ದಾರೆ. ಧೋನಿಯ ಈ ನಡೆಯ ಬಗ್ಗೆ ಅನೇಕರು ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದರು. ಆದರೆ, ಪಂಬಾಬ್​ ವಿರುದ್ಧದ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್​ ನಡೆಸುವ ಸಲುವಾಗಿ ಸ್ವಾರ್ಥಿಯಾಗಿ ಕಂಡು ಬಂದರು.

ಚೆನ್ನೈ ಬ್ಯಾಟಿಂಗ್​ ಇನಿಂಗ್ಸ್​ನ ಅಂತಿಮ ಓವರ್​ನಲ್ಲಿ ಅರ್ಷದೀಪ್​ ಎಸೆದ ಈ ಓವರ್​ನ ಮೂರನೇ ಎಸೆತವನ್ನು ಧೋನಿ ಬಲವಾಗಿ ಹೊಡೆದರು. ಚೆಂಡು ಬೌಂಡರಿ ಲೈನ್​ ಬಳಿ ಹೋದರೂ ಕೂಡ ಧೋನಿ ರನ್​ ಓಡದೆ ಸ್ವಾರ್ಥ ತೋರಿದರು. ನಾನ್​ಸ್ಟ್ರೈಕ್​ನಲ್ಲಿದ್ದ ಡೇರಿಯಲ್​ ಮಿಚೆಲ್​ ಅವರು ರನ್​ಗಾಗಿ ಓಡಿ ಕ್ರೀಸ್​ ಬಳಿ ಬಂದರು. ಈ ವೇಳೆ ಧೋನಿ ಅವೇಶದಲ್ಲಿಯೇ ಮಿಚೆಲ್​ಗೆ ಹಿಂದೆ ಹೋಗುವಂತೆ ತಿಳಿಸಿದರು. ಸ್ಟ್ರೈಕ್​ ತನಕ ಓಡಿದ್ದ ಮಿಚೆಲ್​ ಮತ್ತೆ ನಾನ್​ಸ್ಟ್ರೈಕರ್​ ಬಳಿಗೆ ಓಡಿ ಬಂದರು. ಮುಂದಿನ ಎಸೆತವನ್ನು ಧೋನಿ ಬೀಟ್​ ಮಾಡಿದರು. 5ನೇ ಎಸೆತದಲ್ಲಿ ಸಿಕ್ಸರ್​ ಬಾರಿಸಿ ಅಂತಿಮ ಎಸೆತದಲ್ಲಿ ರನೌಟ್​ ಆದರು.

ಇದನ್ನೂ ಓದಿ IPL 2024 Points Table: ಚೆನ್ನೈ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಪ್ರಗತಿ ಸಾಧಿಸಿದ ಪಂಜಾಬ್​

ಬ್ಯಾಟಿಂಗ್​ಗಾಗಿ ಆಸೆ ತೋರಿದ ಧೋನಿಯ ಈ ಸ್ವಾರ್ಥವನ್ನು ಅನೇಕ ನೆಟ್ಟಿಗರು ಟೀಕಿಸಿದ್ದಾರೆ. ಇದು ಮತ್ತೊಬ್ಬ ಆಟಗಾರನಿಗೆ ಮಾಡುವ ಅವಮಾನ ಎಂದು ಕಮೆಂಟ್​ ಮಾಡಿದ್ದಾರೆ. ಈ ಘಟನೆಯ ವಿಡಿಯೊ ಎಲ್ಲಡೆ ವೈರಲ್(viral video)​ ಆಗಿದೆ. ಧೋನಿ ಸ್ಟ್ರೈಕ್​ ಉಳಿಸಿಕಿಕೊಂಡರೂ ಕೂಡ ಅವರಿಂದ ದೊಡ್ಡ ಮೊತ್ತ ದಾಖಲಿಸಲು ಸಾಧ್ಯವಾಗಲಿಲ್ಲ. 11  ಎಸೆತಗಳಿಂದ 14 ರನ್ ಮಾತ್ರ ಗಳಿಸಿದರು.

ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ(IPL 2024) 49 ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್​ ಆಯ್ದುಕೊಂಡ ಪಂಜಾಬ್​ ಇದಕ್ಕೆ ತಕ್ಕ ಪ್ರದರ್ಶನ ನೀಡುವು ಮೂಲಕ ಚೆನ್ನೈ ತಂಡವನ್ನು 162 ರನ್​ಗೆ ಕಟ್ಟಿಹಾಕಿತು. ಸಾಧಾರಣ ಮೊತ್ತದ ಗುರಿಯನ್ನು ಅಷ್ಟೇ ಸೊಗಸಾಗಿ ಬೆನ್ನಟ್ಟಿದ ಪಂಜಾಬ್​ ಬ್ಯಾಟರ್​ಗಳು 17.5 ಓವರ್​ಗಳಲ್ಲಿ ಕೇವಲ 3 ವಿಕೆಟ್​ಗೆ 163 ರನ್​ ಬಾರಿಸಿ ಗೆಲುವು ಸಾಧಿಸಿತು.

Continue Reading

ಕ್ರೀಡೆ

PBKS vs CSK: ಕೆಕೆಆರ್​ ದಾಖಲೆ ಹಿಂದಿಕ್ಕಿದ ಪಂಜಾಬ್​ ಕಿಂಗ್ಸ್

PBKS vs CSK: ಚೆನ್ನೈಗೆ ತವರಿನಲ್ಲೇ ಅತ್ಯಧಿಕ ಸೋಲುಣಿಸಿದ ದಾಖಲೆ ಮುಂಬೈ ಇಂಡಿಯನ್ಸ್​ ತಂಡದ ಪರವಾಗಿದೆ. ಚಿದಂಬರಂ ಸ್ಟೇಡಿಯಂನಲ್ಲಿ ಚೆನ್ನೈ ವಿರುದ್ಧ ಮುಂಬೈ ಇದುವರೆಗೆ 5 ಪಂದ್ಯಗಳನ್ನು ಜಯಿಸಿದೆ. ಪಂಜಾಬ್​ 4 ಬಾರಿ ಸೋಲುಣಿಸಿ ಕೆಕೆಆರ್​(3 ಬಾರಿ) ತಂಡದ ದಾಖಲೆಯನ್ನು ಹಿಂದಿಕ್ಕಿದೆ.

VISTARANEWS.COM


on

PBKS vs CSK
Koo

ಚೆನ್ನೈ: ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​(PBKS vs CSK) ತಂಡದ ವಿರುದ್ಧ ಗೆಲುವು ಸಾಧಿಸುವ ಮೂಲಕ ಪಂಜಾಬ್​ ಕಿಂಗ್ಸ್​ ದಾಖಲೆಯೊಂದನ್ನು ನಿರ್ಮಿಸಿದೆ. ಚೆನ್ನೈಗೆ ತವರಿನಲ್ಲಿಯೇ ಅತ್ಯಧಿಕ ಸೋಲುಣಿಸಿದ 2ನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೇ ವೇಳೆ ಕೆಕೆಆರ್​(3 ಬಾರಿ) ತಂಡದ ದಾಖಲೆಯನ್ನು ಹಿಂದಿಕ್ಕಿದೆ.

ಚೆನ್ನೈಗೆ ತವರಿನಲ್ಲೇ ಅತ್ಯಧಿಕ ಸೋಲುಣಿಸಿದ ದಾಖಲೆ ಮುಂಬೈ ಇಂಡಿಯನ್ಸ್​ ತಂಡದ ಪರವಾಗಿದೆ. ಚಿದಂಬರಂ ಸ್ಟೇಡಿಯಂನಲ್ಲಿ ಚೆನ್ನೈ ವಿರುದ್ಧ ಮುಂಬೈ ಇದುವರೆಗೆ 5 ಪಂದ್ಯಗಳನ್ನು ಜಯಿಸಿದೆ. ಪಂಜಾಬ್​ 4 ಬಾರಿ ಸೋಲುಣಿಸಿದೆ. ಇಲ್ಲಿನ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ(IPL 2024) 49 ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್​ ಆಯ್ದುಕೊಂಡ ಪಂಜಾಬ್​ ಇದಕ್ಕೆ ತಕ್ಕ ಪ್ರದರ್ಶನ ನೀಡುವು ಮೂಲಕ ಚೆನ್ನೈ ತಂಡವನ್ನು 162 ರನ್​ಗೆ ಕಟ್ಟಿಹಾಕಿತು. ಸಾಧಾರಣ ಮೊತ್ತದ ಗುರಿಯನ್ನು ಅಷ್ಟೇ ಸೊಗಸಾಗಿ ಬೆನ್ನಟ್ಟಿದ ಪಂಜಾಬ್​ ಬ್ಯಾಟರ್​ಗಳು 17.5 ಓವರ್​ಗಳಲ್ಲಿ ಕೇವಲ 3 ವಿಕೆಟ್​ಗೆ 163 ರನ್​ ಬಾರಿಸಿ ಗೆಲುವಿನ ಪತಾಕೆ ಹಾರಿಸಿದರು. ಇದು ಈ ಆವೃತ್ತಿಯಲ್ಲಿ ಚೆನ್ನೈಗೆ ತವರಿನಲ್ಲಿ ಎದುರಾದ 2ನೇ ಸೋಲಾಗಿದೆ. ಇದಕ್ಕೂ ಮುನ್ನ ಲಕ್ನೋ ವಿರುದ್ಧ ಸೋಲು ಕಂಡಿತ್ತು.

ಚೇಸಿಂಗ್​ ವೇಳೆ ಕಳೆದ ಪಂದ್ಯದ ಶತಕ ವೀರ ಜಾನಿ ಬೇರ್​ಸ್ಟೋ 46 ರನ್​ ಬಾರಿಸಿ ಈ ಪಂದ್ಯದಲ್ಲಿಯೂ ತಮ್ಮ ಬ್ಯಾಟಿಂಗ್​ ಪ್ರತಾಪ ತೋರಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ಕೊಟ್ಟ ಅವರು ಪ್ರತಿ ಓವರ್​ನಲ್ಲಿಯೂ ಕನಿಷ್ಠ ಒಂದು ಬೌಂಡರಿ ಅಥವಾ ಸಿಕ್ಸರ್​ ಬಾರಿಸುತ್ತಲೇ ಮುನ್ನುಗಿದರು. ಇವರಿಗೆ 2ನೇ ಕ್ರಮಾಂಕದಲ್ಲಿ ಆಡಲಿಳಿದ ದಕ್ಷಿಣ ಆಫ್ರಿಕಾದ ಹಾರ್ಡ್​ ಹಿಟ್ಟರ್​ ರೀಲಿ ರೂಸೊ ಉತ್ತಮ ಸಾಥ್​ ನೀಡಿದರು. ಬೇರ್​ಸ್ಟೋ ವಿಕೆಟ್​ ಪತನದ ಬಳಿಕ ಇವರು ತಂಡವನ್ನು ಆಧರಿಸಿದರು. 23 ಎಸೆತ ಎದುರಿಸಿ 43(5 ಬೌಂಡರಿ, 2 ಸಿಕ್ಸರ್​) ರನ್​ ಬಾರಿಸಿದರು. ಅಂತಿಮವಾಗಿ ಶಶಾಂಕ್​ ಸಿಂಗ್​(25) ಮತ್ತು ಹಂಗಾಮಿ ನಾಯಕ ಸ್ಯಾಮ್​ ಕರನ್​(26) ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು. ಇದೇ ವೇಳೆ ಶಶಾಂಕ್ ಟಿ20 ಕ್ರಿಕೆಟ್​ನಲ್ಲಿ 2 ಸಾವಿರ ರನ್​ಗಳ ಗಡಿ ದಾಡಿದರು.

ಇದನ್ನೂ ಓದಿ IPL 2024 Points Table: ಚೆನ್ನೈ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಪ್ರಗತಿ ಸಾಧಿಸಿದ ಪಂಜಾಬ್​

ಮೊದಲು ಬ್ಯಾಟಿಂಗ್​ ನಡೆಸಿದ ಚೆನ್ನೈ ತಂಡ ಉತ್ತಮ ಆರಂಭವೇನೊ ಪಡೆಯಿತು. ನಾಯಕ ಋತುರಾಜ್​ ಗಾಯಕ್ವಾಡ್​ ಮತ್ತು ಅನುಭವಿ ಹಾಗೂ ಹಿರಿಯ ಆಟಗಾರ ಅಜಿಂಕ್ಯ ರಹಾನೆ ಸೇರಿಕೊಂಡು ಮೊದಲ ವಿಕೆಟ್​ಗೆ 64 ರನ್​ ಒಟ್ಟುಗೂಡಿಸಿದರು. ರಹಾನೆ 29 ರನ್​ ಗಳಿಸಿ ವಿಕೆಟ್​ ಕಳೆದುಕೊಂಡರು. ಉತ್ತಮ ಸ್ಥಿತಿಯಲ್ಲಿದ್ದ ಚೆನ್ನೈ ರಹಾನೆ ವಿಕೆಟ್​ ಪತನದ ಬಳಿಕ ದಿಢೀರ್​ ಕುಸಿತ ಕಂಡಿತು. ಸತತವಾಗಿ ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಒಂದೆಡೆ ಸಹ ಆಟಗಾರರ ವಿಕೆಟ್ ಬೀಳುತ್ತಿದ್ದರೂ ಕೂಡ ಮತ್ತೊಂದು ತುದಿಯಲ್ಲಿ ಕ್ರೀಸ್​ ಕಚ್ಚಿ ನಿಂತ ಗಾಯಕ್ವಾಡ್​ ತಮ್ಮ ಶಕ್ತಿ ಮೀರಿದ ಬ್ಯಾಟಿಂಗ್​ ಪ್ರದರ್ಶನದ ಮೂಲಕ ತಂಡದ ಮೊತ್ತವನ್ನು ಹಿಗ್ಗಿಸುವ ಪ್ರಯತ್ನ ಮುಂದುವರಿಸಿದರು. ಒಂದು ಹಂತದಲ್ಲಿ ಸಮೀರ್ ರಿಜ್ವಿ ಅವರಿಂದ ಸಣ್ಣ ಮಟ್ಟದ ಜತೆಯಾಟದ ಬೆಂಬಲ ಸಿಕ್ಕರೂ ಕೂಡ ಇದು ಹೆಚ್ಚು ಹೊತ್ತು ಸಾಗಲಿಲ್ಲ. 21 ರನ್​ ಗಳಿಸಿದ್ದ ವೇಳೆ ರಿಜ್ವಿ ಕೂಡ ಔಟಾದರು. ಗಾಯಕ್ವಾಡ್​ 48 ಎಸೆತಗಳಿಂದ 5 ಬೌಂಡರಿ ಮತ್ತು 2 ಸಿಕ್ಸರ್​ ಬಾರಿಸಿ 62 ರನ್​ ಗಳಿಸಿದರು.

Continue Reading
Advertisement
Bhoomi Shetty African braids Look style
ಸಿನಿಮಾ5 mins ago

Bhoomi Shetty: ಆಫ್ರಿಕನ್‌ ಲುಕ್‌ನಲ್ಲಿ ನಮ್ಮ ʻಕಿನ್ನರಿʼ ನಟಿ! ಈ ಚೇಂಜ್‌ ಹೇಗನಿಸುತ್ತೆ ನಿಮಗೆ?

prajwal revanna case lookout notice
ಕ್ರೈಂ9 mins ago

Prajwal Revanna Case: ಏನಿದು ಲುಕ್ ಔಟ್ ನೋಟಿಸ್? ಜಾರಿ ಅಧಿಕಾರ ಯಾರಿಗೆ? ಇದಕ್ಕೂ ತಡೆ ತರಬಹುದಾ?

School Jobs Scam
Lok Sabha Election 202417 mins ago

School Jobs Scam: ಶಾಲಾ ನೇಮಕಾತಿ ಹಗರಣದ ಬಗ್ಗೆ ಟಿಎಂಸಿಗೆ ತಿಳಿದಿತ್ತು; ಹಿರಿಯ ನಾಯಕ ಕುನಾಲ್ ಘೋಷ್ ಆರೋಪ

elephant attack
ಬೆಂಗಳೂರು ಗ್ರಾಮಾಂತರ18 mins ago

Elephant attack : ಜಮೀನಿಗೆ ತೆರಳಿದ್ದ ರೈತನ ಅಟ್ಟಾಡಿಸಿ ಕೊಂದ ಒಂಟಿ ಸಲಗ

Delhi Lieutenant Governor
ದೇಶ28 mins ago

Delhi Lieutenant Governor: ದೆಹಲಿಯ DCW ಗುತ್ತಿಗೆ ನೌಕರರಿಗೆ ಬಿಗ್‌ ಶಾಕ್‌; 220ಕ್ಕೂ ಹೆಚ್ಚು ನೌಕರರು ವಜಾ

Prajwal Revanna Case Application seeking exemption from appearing before SIT rejected
ಕ್ರೈಂ33 mins ago

Prajwal Revanna Case: SIT ಮುಂದೆ ಹಾಜರಾಗಲು ವಿನಾಯಿತಿ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕಾರ? ತನಿಖೆಗೆ ಆತುರ ಏಕೆ?

IPL 2024
ಕ್ರೀಡೆ33 mins ago

IPL 2024: ಕೊಹ್ಲಿಯನ್ನು ಹಿಂದಿಕ್ಕಿ ಆರೆಂಜ್​ ಕ್ಯಾಪ್​ ಪಡೆದ ಗಾಯಕ್ವಾಡ್​; ಪರ್ಪಲ್​ ಕ್ಯಾಪ್​ ಹೋಲ್ಡರ್​ ಯಾರು?

Temperature Warning
ರಾಯಚೂರು35 mins ago

Temperature Warning : ಬೆಂಕಿ ಇಲ್ಲದೆ ರಣ ಬಿಸಿಲಲ್ಲೇ ಮೊಟ್ಟೆ ಬೇಯಿಸಿ ಆಮ್ಲೇಟ್ ತಿಂದ ರಾಯಚೂರು ಮಂದಿ

Swara Bhasker reveals big difference between Kangana Ranaut and herself
ಬಾಲಿವುಡ್36 mins ago

Swara Bhasker: ಕಂಗನಾ- ಸ್ವರಾ ಭಾಸ್ಕರ್ ನಡುವಿನ ದೊಡ್ಡ ವ್ಯತ್ಯಾಸವೇನು? ನಟಿಯ ಬಾಯಲ್ಲೇ ಕೇಳಿ!

Yakshagana Artist No more
ದಕ್ಷಿಣ ಕನ್ನಡ54 mins ago

Yakshagana Artist: ವೇಷ ಕಳಚುತ್ತಿರುವಾಗಲೇ ಹೃದಯ ಸ್ತಬ್ಧ ; ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಇನ್ನಿಲ್ಲ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ8 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ2 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

ಟ್ರೆಂಡಿಂಗ್‌