Bhuvneshwar Kumar | ಒಂದೇ ಪಂದ್ಯದಲ್ಲಿ ಹಲವು ದಾಖಲೆ ನಿರ್ಮಿಸಿದ ವೇಗಿ ಭುವನೇಶ್ವರ್​ ಕುಮಾರ್​ - Vistara News

T20 ವಿಶ್ವಕಪ್

Bhuvneshwar Kumar | ಒಂದೇ ಪಂದ್ಯದಲ್ಲಿ ಹಲವು ದಾಖಲೆ ನಿರ್ಮಿಸಿದ ವೇಗಿ ಭುವನೇಶ್ವರ್​ ಕುಮಾರ್​

ಗುರುವಾರದ ನೆದರ್ಲೆಂಡ್ಸ್​ ವಿರುದ್ಧದ ಟಿ20 ವಿಶ್ವ ಕಪ್​ ಪಂದ್ಯದಲ್ಲಿ ಮಾರಕ ಬೌಲಿಂಗ್​ ದಾಳಿ ನಡೆಸಿದ ಭುವನೇಶ್ವರ್​ ಕುಮಾರ್(Bhuvneshwar Kumar)​ ಹಲವು ದಾಖಲೆ ನಿರ್ಮಿಸಿದ್ದಾರೆ.

VISTARANEWS.COM


on

t20
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸಿಡ್ನಿ: ನೆದರ್ಲೆಂಡ್ಸ್​​ ವಿರುದ್ಧದ ಟಿ20 ವಿಶ್ವ ಕಪ್ ಪಂದ್ಯದಲ್ಲಿ ಭಾರತ ತಂಡದ ವೇಗಿ ಭುವನೇಶ್ವರ್ ಕುಮಾರ್ (Bhuvneshwar Kumar) ಹೊಸ ಇತಿಹಾಸ ಬರೆದಿದ್ದಾರೆ. ಈ ಪಂದ್ಯದಲ್ಲಿ ಬ್ಯಾಕ್ ಟು ಬ್ಯಾಕ್ 2 ಮೇಡನ್ ಓವರ್ ಎಸೆದು ಟಿ20 ಕ್ರಿಕೆಟ್​ನಲ್ಲಿ ಈ ದಾಖಲೆ ಬರೆದ ಮೊದಲ ಟೀಮ್ ಇಂಡಿಯಾ ಬೌಲರ್ ಎನಿಸಿಕೊಂಡರು.

ಅಷ್ಟೇ ಅಲ್ಲದೆ ಭುವಿ ಟಿ20 ವಿಶ್ವ ಕಪ್​ನಲ್ಲಿ ಈ ಸಾಧನೆ ಮಾಡಿದ ಮೂರನೇ ಬೌಲರ್ ಎನಿಸಿಕೊಂಡರು. ಇದಕ್ಕೂ ಮುನ್ನ ಇಂಗ್ಲೆಂಡ್​ನ ಗ್ರೇಮ್ ಸ್ವಾನ್ (2012), ಶ್ರೀಲಂಕಾದ ನುವಾನ್ ಕುಲಶೇಖರ (2014) ಮತ್ತು ರಂಗನಾ ಹೆರಾತ್ (2014) ಈ ಸಾಧನೆ ಮಾಡಿದ್ದರು. ಇದೀಗ ಭುವಿ ಕೂಡ ಈ ಸಾಧಕರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.

ಬುಮ್ರಾ ದಾಖಲೆ ಸರಿಗಟ್ಟಿದ ಭುವಿ

ಟಿ20 ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಪರ ಅತ್ಯಧಿಕ ಮೇಡನ್ ಓವರ್ ಎಸೆದ ಜಸ್​ಪ್ರೀತ್ ಬುಮ್ರಾ ದಾಖಲೆಯನ್ನು ಕೂಡ ಭುವಿ ಸರಿಗಟ್ಟಿದರು. ಬುಮ್ರಾ-ಭುವಿ ಟಿ20 ಕ್ರಿಕೆಟ್​ನಲ್ಲಿ ಒಟ್ಟು 9 ಮೇಡನ್ ಓವರ್ ಎಸೆಯುವ ಮೂಲಕ ಜಂಟಿ ವಿಶೇಷ ದಾಖಲೆ ಹೊಂದಿದ್ದಾರೆ. ಹಾಗೆಯೇ ಒಂದು ವರ್ಷದಲ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತ್ಯಧಿಕ ಮೇಡನ್ ಓವರ್​ ಮಾಡಿದ ದಾಖಲೆ ಕೂಡ ಭುವಿ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಬುಮ್ರಾ ಹೆಸರಿನಲ್ಲಿತ್ತು. ಬುಮ್ರಾ 2016ರಲ್ಲಿ 4 ಮೇಡನ್ ಓವರ್ ಮಾಡಿದ್ದರು. ಇದೀಗ 2022 ರಲ್ಲಿ ಭುವನೇಶ್ವರ್ ಕುಮಾರ್ 5 ಮೇಡನ್ ಓವರ್ ಎಸೆಯುವ ಮೂಲಕ ಒಂದು ವರ್ಷದಲ್ಲಿ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಮೇಡನ್ ಓವರ್ ಎಸೆದ ಬೌಲರ್ ಎಂಬ ವಿಶ್ವ ದಾಖಲೆ ಬರೆದಿದ್ದಾರೆ.

ಗುರುವಾರದ ನೆದರ್ಲೆಂಡ್ಸ್​ ವಿರುದ್ಧದ ಪಂದ್ಯದಲ್ಲಿ ಭುವನೇಶ್ವರ್​ ಕುಮಾರ್​ ಮೂರು ಓವರ್​ನಲ್ಲಿ 9 ರನ್​ ಬಿಟ್ಟುಕೊಟ್ಟು 2 ವಿಕೆಟ್​ ಕಿತ್ತು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಇದನ್ನೂ ಓದಿ | Rohit Sharma | ಸಿಕ್ಸರ್​ ಮೂಲಕ ಯುವರಾಜ್​ ಸಿಂಗ್​ ದಾಖಲೆ ಮುರಿದ ರೋಹಿತ್​ ಶರ್ಮಾ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Rahul Dravid: ಸೂಪರ್​-8 ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ತಾಳ್ಮೆ ಕಳೆದುಕೊಂಡ ಕೋಚ್​ ದ್ರಾವಿಡ್; ಕಾರಣವೇನು?

Rahul Dravid: ನಾನು ಯಾವುದೇ ವಿಷಯವನ್ನಾದರೂ ಬೇಗನೆ ಮರೆತುಬಿಡುತ್ತೇನೆ. ನಡೆದು ಹೋಗಿರುವ ಘಟನೆ ಬಗ್ಗೆ ಮತ್ತೆ ಮತ್ತೆ ಚಿಂತಿಸಿ ಪ್ರಯೋಜನವಿಲ್ಲ. ಇಂತಹ ಘಟನೆಯಿಂದ ನಾನು ಬೇಗನೇ ಹೊರಬರುತ್ತೇನೆ ಎಂದು ದ್ರಾವಿಡ್​ ಅವರು ಪತ್ರಕರ್ತರೊಬ್ಬರ ಪ್ರಶ್ನೆಗೆ ತುಸು ಕೋಪದಿಂದಲೇ ಉತ್ತರಿಸಿದ್ದಾರೆ.

VISTARANEWS.COM


on

Rahul Dravid
Koo

ಬಾರ್ಬಡೋಸ್​: ಅಫಘಾನಿಸ್ತಾನ(IND vs AFG) ವಿರುದ್ಧ ಇಂದು ನಡೆಯುವ ಸೂಪರ್​-8 ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಟೀಮ್​ ಇಂಡಿಯಾದ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್(Rahul Dravid)​ ತಾಳ್ಮೆ ಕಳೆದುಕೊಂಡ ಘಟನೆ ನಡೆಯಿತು. ಪತ್ರಕರ್ತರೊಬ್ಬರ ಪ್ರಶ್ನೆಗೆ ತುಸು ಕೋಪದಿಂದಲೇ ಉತ್ತರಿಸಿದ್ದಾರೆ.

ಸಾದಾ ಶಾಂತ ಸ್ವಭಾವದಿಂದ ವರ್ತಿಸುವ ದ್ರಾವಿಡ್​ ಅವರಿಗೆ ಪತ್ರಕರ್ತರೊಬ್ಬರು ಅಫಘಾನಿಸ್ತಾನ ವಿರುದ್ಧದ ಪಂದ್ಯಕ್ಕೆ ನಡೆಸಿದ ತಂಡದ ಸಿದ್ಧತೆಯ ಪ್ರಶ್ನೆಯನ್ನು ಕೇಳುವ ಬದಲು 27 ವರ್ಷಗಳ ಹಿಂದಿನ ಪಂದ್ಯವೊಂದರ ಬಗ್ಗೆ ಪ್ರಶ್ನೆ ಮಾಡಿ ದ್ರಾವಿಡ್​ ಅವರನ್ನು ವ್ಯಂಗವಾಡಿದರು. ನೀವು ಆಟಗಾರರಾಗಿ ಇಲ್ಲಿ ಆಡಿದ್ದೀರಿ. 97 ನಿಮ್ಮ ಟೆಸ್ಟ್‌ನ ಅತ್ಯುತ್ತಮ ನೆನಪುಗಳು ಅಲ್ಲವೇ? ಎಂದು ಕೇಳಿದ್ದಾರೆ. ಇದಕ್ಕೆ ಖಾರವಾಗಿಯೇ ಉತ್ತರಿಸಿದ ದ್ರಾವಿಡ್​, ಧನ್ಯವಾದಗಳು ಗೆಳೆಯ! ನಾನು ಇಲ್ಲಿ ಇದು ಮಾತ್ರವದಲ್ಲದೆ ಇತರ ಉತ್ತಮ ನೆನಪುಗಳನ್ನೂ ಕೂಡ ಹೊಂದಿದ್ದೇನೆ ಎಂದು ಹೇಳುವ ಮೂಲಕ ತಿರುಗೇಟು ನೀಡಿದರು.

ಪತ್ರಕರ್ತ ದ್ರಾವಿಡ್​ ಬಳಿ ಈ ಪ್ರಶ್ನೆಯನ್ನು ಕೇಳಲು ಕೂಡ ಒಂದು ಕಾರಣವಿದೆ. ಅದೇನೆಂದರೆ, 1997ರಲ್ಲಿ ಟೆಸ್ಟ್​ ಸರಣಿಯನ್ನಾಡಲು ಭಾರತ ತಂಡ ವೆಸ್ಟ್ ಇಂಡೀಸ್ ಪ್ರವಾಸ ಮಾಡಿದ್ದ ವೇಳೆ ದ್ರಾವಿಡ್​ ಕೂಡ ತಂಡದ ಭಾಗವಾಗಿದ್ದರು. ಬಾರ್ಬಡೋಸ್​ನಲ್ಲಿ ನಡೆದಿದ್ದ ಟೆಸ್ಟ್​ನಲ್ಲಿ ದ್ರಾವಿಡ್ 78 ರನ್​ ಮತ್ತು 2 ರನ್​ ಬಾರಿಸಿದ್ದರು. ಈ ಪಂದ್ಯವನ್ನು ಭಾರತ 38 ರನ್​ ಅಂತರದಿಂದ ಸೋಲು ಕಂಡಿತ್ತು. ಇದೀಗ ಭಾರತ ಸೂಪರ್​ 8 ಪಂದ್ಯವನ್ನು ಇದೇ ಮೈದಾನದಲ್ಲಿ ಆಡುತ್ತಿದೆ, ದ್ರಾವಿಡ್​ ತಂಡದ ಕೋಚ್​ ಆಗಿದ್ದಾರೆ, ಇದೇ ಕಾರಣಕ್ಕೆ ಈ ಪ್ರಶ್ನೆಯನ್ನು ಅವರಿಗೆ ಕೇಳಲಾಯಿತು. ಆದರೆ ಪತ್ರಕರ್ತ ಕೇಳಿದ ಪ್ರಶ್ನೆಯ ಧಾಟಿ ಮಾತ್ರ ಸರಿಯಿರಲಿಲ್ಲ. ಇದರಿಂದ ದ್ರಾವಿಡ್​ ಕೋಪಗೊಂಡರು.

ಇದನ್ನೂ ಓದಿ IND vs AFG: ಇಂದು ಭಾರತ-ಆಫ್ಘಾನ್​ ಸೂಪರ್​-8 ಪಂದ್ಯ; ಹವಾಮಾನ ವರದಿ ಹೇಗಿದೆ?

ಕೋಪದಲ್ಲೇ ಉತ್ತರಿಸಿದ ದ್ರಾವಿಡ್​, ಧನ್ಯವಾದಗಳು ಗೆಳೆಯ!.., ನಾನು ಯಾವುದೇ ವಿಷಯವನ್ನಾದರೂ ಬೇಗನೆ ಮರೆತುಬಿಡುತ್ತೇನೆ. ನಡೆದು ಹೋಗಿರುವ ಘಟನೆ ಬಗ್ಗೆ ಮತ್ತೆ ಮತ್ತೆ ಚಿಂತಿಸಿ ಪ್ರಯೋಜನವಿಲ್ಲ. ಇಂತಹ ಘಟನೆಯಿಂದ ನಾನು ಬೇಗನೇ ಹೊರಬರುತ್ತೇನೆ. ಅದು ನನ್ನ ವೈಶಿಷ್ಟ್ಯ. 1997ರಲ್ಲಿ ಏನು ನಡೆದಿದೆ ಎನ್ನುವುದರ ಬಗ್ಗೆ ನಾನು ಈಗ ಚಿಂತೆ ಮಾಡುವುದಿಲ್ಲ” ಎಂದು ಹೇಳುವ ಮೂಲಕ ಕೊಂಕು ಪ್ರಶ್ನೆ ಮಾಡಿದ ಪತ್ರಕರ್ತನಿಗೆ ಸರಿಯಾಗಿತೇ ತಿರುಗೇಟು ನೀಡಿದ್ದಾರೆ.

ಅಫಘಾನಿಸ್ತಾನ ವಿರುದ್ಧ ಇಂದು(ಗುರುವಾರ) ನಡೆಯುವ ಟಿ20 ವಿಶ್ವಕಪ್(T20 World Cup 2024)​ ಸೂಪರ್​-8 ಪಂದ್ಯದಲ್ಲಿ(IND vs AFG Super 8 match) ಭಾರತ(IND vs AFG) ತನ್ನ ಆಡುವ ಬಳಗದಲ್ಲಿ ಇಂದು ಬದಲಾವಣೆ ಮಾಡುವ ನಿರೀಕ್ಷೆ ಇದೆ. ವಿಂಡೀಸ್​ ಸ್ಪಿನ್​ ಸ್ನೇಹಿ ಮತ್ತು ನಿಧಾನ ಗತಿಯ ಪಿಚ್​ ಆಗಿರುವ ಕಾರಣ ಭಾರತ ಹೆಚ್ಚುವರಿ ಸ್ಪಿನ್ನರ್​ ಆಯ್ಕೆ ಮಾಡಿಕೊಳ್ಳಬಹುದು. ಶಿವಂ ದುಬೆ ಅವರನ್ನು ಕೈಬಿಟ್ಟು ಈ ಸ್ಥಾನದಲ್ಲಿ ಕುಲ್​ದೀಪ್​ ಯಾದವ್​ ಅಥವಾ ಯಜುವೇಂದ್ರ ಚಹಲ್​ ಅವರನ್ನು ಆಡಿಸಬಹುದು. ಉಳಿದಂತೆ ಯಾವುದೇ ಬದಲಾವಣೆ ಸಂಭವಿಸುವುದು ಅನುಮಾನ. ರೋಹಿತ್​ ಮತ್ತು ಕೊಹ್ಲಿಯೇ ಭಾರತದ ಇನಿಂಗ್ಸ್​ ಆರಂಭಿಸಬಹುದು.

Continue Reading

ಕ್ರೀಡೆ

WI vs ENG: ವಿಂಡೀಸ್​ಗೆ ನೀರು ಕುಡಿಸಿದ ಸಾಲ್ಟ್; ಇಂಗ್ಲೆಂಡ್​ಗೆ 8 ವಿಕೆಟ್​ ಭರ್ಜರಿ ಜಯ

WI vs ENG: ಆರಂಭದಲ್ಲಿ ಬಟ್ಲರ್​ ಜತೆ ಉತ್ತಮ ಜತೆಯಾಟ ನಡೆಸಿದ ಸಾಲ್ಟ್​ ಆ ಬಳಿಕ 4 ವಿಕೆಟ್​ಗೆ ಆಡಲಿಳಿದ ಜಾನಿ ಬೇರ್​ಸ್ಟೋ ಜತೆಗೂಡಿ ಸೊಗಸಾದ ಇನಿಂಗ್ಸ್​ ಕಟ್ಟಿದರು. ಉಭಯ ಆಟಗಾರರು ಜಿದ್ದಿಗೆ ಬಿದ್ದವರಂತೆ ಬ್ಯಾಟ್​ ಬೀಸಿ ವಿಂಡೀಸ್​ ಬೌಲರ್​ಗಳ ಬೆವರಿಳಿಸಿದರು

VISTARANEWS.COM


on

WI vs ENG
Koo

ಗ್ರಾಸ್‌ ಐಲೆಟ್‌ (ಸೇಂಟ್‌ ಲೂಸಿಯಾ): ಫಿಲ್​ ಸಾಲ್ಟ್​(87*) ಮತ್ತು ಜಾನಿ ಬೇರ್​ಸ್ಟೊ(48*) ಅವರ ಪ್ರಚಂಡ ಬ್ಯಾಟಿಂಗ್​ ಪ್ರದರ್ಶನದಿಂದ ವೆಸ್ಟ್​ ಇಂಡೀಸ್(WI vs ENG)​ ವಿರುದ್ಧ ಗುರುವಾರ ನಡೆದ ಸೂಪರ್​-8 ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ತಂಡ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಲೀಗ್​ ಹಂತದಲ್ಲಿ ಎಲ್ಲ ಪಂದ್ಯ ಗೆದ್ದು ಅಜೇಯ ಓಟ ಕಾಯ್ದುಕೊಂಡಿದ್ದ ವಿಂಡೀಸ್​ನ ಈ ಗೆಲುವಿನ ಓಟಕ್ಕೆ ಈಗ ಬ್ರೇಕ್​ ಬಿದ್ದಿದೆ.

ಸೇಂಟ್‌ ಲೂಸಿಯಾದ ಗ್ರಾಸ್‌ ಐಲೆಟ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ವೆಸ್ಟ್​ ಇಂಡೀಸ್​ ತಂಡ ಸಂಘಟಿತ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 180 ರನ್​ ಬಾರಿಸಿತು. ಜವಾಬಿತ್ತ ಇಂಗ್ಲೆಂಡ್​ ಈ ದೊಡ್ಡ ಮೊತ್ತವನ್ನು 17.3 ಓವರ್​ಗಳಲ್ಲಿ ಕೇವಲ 2 ವಿಕೆಟ್​ ನಷ್ಟಕ್ಕೆ 181 ರನ್​ ಬಾರಿಸಿ ಗೆಲುವಿನ ಬಾವುಟ ಹಾರಿಸಿತು.

ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್​ಗೆ ನಾಯಕ ಜಾಸ್​ ಬಟ್ಲರ್​ ಮತ್ತು ಫಿಲ್​ ಸಾಲ್ಟ್​ ಬಿರುಸಿನ ಬ್ಯಾಟಿಂಗ್​ ನಡೆಸಿ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್​ಗೆ 67 ರನ್​ ಒಟ್ಟುಗೂಡಿಸಿ ತಂಡಕ್ಕೆ ಉತ್ತಮ ಅಡಿಪಾಯ ನಿರ್ಮಿಸಿದರು. ಉತ್ತಮವಾಗಿ ಆಡುತ್ತಿದ್ದ ಈ ಜೋಡಿಯನ್ನು ರೋಸ್ಟನ್ ಚೇಸ್ ಬೇರ್ಪಡಿಸಿದರು. ಜಾಸ್​ ಬಟ್ಲರ್​ ವಿಕೆಟ್​ ಕೀಳುವ ಮೂಲಕ ವಿಂಡೀಸ್​ಗೆ ಆರಂಭಿಕ ಮುನ್ನಡೆ ತಂದುಕೊಟ್ಟರು. ಬಟ್ಲರ್​ 25 ರನ್​ ಬಾರಿಸಿದರು. ಬಟ್ಲರ್​ ವಿಕೆಟ್​ ಪತನದ ಬಳಿಕ ಆಡಲಿಳಿದ ಮೊಯಿನ್​ ಅಲಿ ನಿರೀಕ್ಷಿತ ಬ್ಯಾಟಿಂಗ್​ ತೋರುವಲ್ಲಿ ವಿಫಲರಾದರು. 10 ಎಸೆತ ಎದುರಿಸಿ ಕೇವಲ 13 ರನ್​ಗೆ ವಿಕೆಟ್​ ಒಪ್ಪಿಸಿದರು.

ಸಾಲ್ಟ್-ಬೇರ್​ಸ್ಟೊ​ ಪ್ರಚಂಡ ಬ್ಯಾಟಿಂಗ್​


ಈ ಬಾರಿಯ ಐಪಿಎಲ್​ ಟೂರ್ನಿಯಲ್ಲಿ ಕೆಕೆಆರ್​ ತಂಡದ ಪರ ಪ್ರಚಂಡ ಬ್ಯಾಟಿಂಗ್​ ನಡೆಸಿ ಗಮನಸೆಳೆದಿದ್ದ ಆರಂಭಿಕ ಆಟಗಾರ ಫಿಲ್​ ಸಾಲ್ಟ್​ ಅವರು ಟಿ20 ವಿಶ್ವಕಪ್​ ಟೂರ್ನಿಯಲ್ಲಿಯೂ ತಮ್ಮ ಬ್ಯಾಟಿಂಗ್​ ಪ್ರಾಬಲ್ಯ ಮುಂದುವರಿಸಿದ್ದಾರೆ. ವಿಂಡೀಸ್​ ವಿರುದ್ಧದ ಸೂಪರ್​ 8 ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಆರಂಭದಲ್ಲಿ ಬಟ್ಲರ್​ ಜತೆ ಉತ್ತಮ ಜತೆಯಾಟ ನಡೆಸಿದ ಸಾಲ್ಟ್​ ಆ ಬಳಿಕ 4 ವಿಕೆಟ್​ಗೆ ಆಡಲಿಳಿದ ಜಾನಿ ಬೇರ್​ಸ್ಟೋ ಜತೆಗೂಡಿ ಸೊಗಸಾದ ಇನಿಂಗ್ಸ್​ ಕಟ್ಟಿದರು. ಉಭಯ ಆಟಗಾರರು ಜಿದ್ದಿಗೆ ಬಿದ್ದವರಂತೆ ಬ್ಯಾಟ್​ ಬೀಸಿ ವಿಂಡೀಸ್​ ಬೌಲರ್​ಗಳ ಬೆವರಿಳಿಸಿದರು. ಫಿಲ್​ ಸಾಲ್ಟ್​ ಸಿಕ್ಸರ್​ ಮೂಲಕವೇ ಅರ್ಧಶತಕ ಪೂರ್ತಿಗೊಳಿಸಿದರು. 38 ಎಸೆತಗಳಲ್ಲಿ ಅವರ ಅರ್ಥಶತಕ ಪೂರೈಸಿದ ಸಾಲ್ಟ್​ ರೊಮಾರಿಯೋ ಶೆಫರ್ಡ್ ಅವರ ಒಂದೇ ಓವರ್​ನಲ್ಲಿ ಬರೋಬ್ಬರಿ ಮೂರು ಸಿಕ್ಸರ್​ ಮತ್ತು ಮೂರು ಬೌಂಡರಿ ಬಾರಿಸಿ 30 ರನ್​ ದೋಚಿದರು.

ಕಳೆದೊಂದು ವರ್ಷದಿಂದ ಘೋರ ಬ್ಯಾಟಿಂಗ್​ ವೈಫಲ್ಯ ಕಾಣುತ್ತಿದ್ದ ಜಾನಿ ಬೇರ್​ಸ್ಟೋ ಈ ಪಂದ್ಯದಲ್ಲಿ ಪ್ರಚಂಡ ಬ್ಯಾಟಿಂಗ್​ ಪ್ರದರ್ಶನ ತೋರಿದರು. ಕೇವಲ 26 ಎಸೆತಗಳಿಂದ ಅಜೇಯ 48(5 ಬೌಂಡರಿ, 2 ಸಿಕ್ಸರ್) ರನ್​ ಬಾರಿಸಿದರು. ಫಿಲ್​ ಸಾಲ್ಟ್​ 47 ಎಸೆತಗಳಿಂದ ಅಜೇಯ 87 ರನ್​ ಬಾರಿಸಿ ಗೆಲುವಿನ ಹೀರೊ ಎನಿಸಿಕೊಂಡರು. ಅವರ ಈ ಸೊಗಸಾದ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ ಬರೋಬ್ಬರಿ 5 ಸಿಕ್ಸರ್​ ಮತ್ತು 7 ಬೌಂಡರಿ ಸಿಡಿಯಿತು. ಬೇರ್​ಸ್ಟೋ ಮತ್ತೆ ಬ್ಯಾಟಿಂಗ್​ ಫಾರ್ಮ್​ಗೆ ಮರಳಿದ್ದು ತಂಡದ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚಿಸುವಂತೆ ಮಾಡಿದೆ.

ಇದಕ್ಕೂ ಮುನ್ನ ಬ್ಯಾಟಿಂಗ್​ ನಡೆಸಿದ ವಿಂಡೀಸ್​ ಪರ ಬ್ರಾಂಡನ್ ಕಿಂಗ್(23), ಜಾನ್ಸನ್ ಚಾರ್ಲ್ಸ್(38), ನಿಕೋಲಸ್​ ಪೂರನ್​(36) ಮತ್ತು ನಾಯಕ ರೋವ್ಮನ್ ಪೊವೆಲ್(36) ರನ್​ ಗಳಿಸಿ ಸಂಘಟಿತ ಬ್ಯಾಟಿಂಗ್​ ಪ್ರದರ್ಶನ ತೋರಿದರು. ಆದರೆ ಪಂದ್ಯ ಸೋತ ಕಾರಣ ಇವರ ಈ ಬ್ಯಾಟಿಂಗ್​ ಹೋರಾಟ ವ್ಯರ್ಥಗೊಂಡಿತು. ಇಂಗ್ಲೆಂಡ್​ ಪರ ಜೋಫ್ರ ಆರ್ಚರ್​, ಆದೀಸ್​ ರಶೀದ್​, ಮೊಯಿನ್​ ಅಲಿ ಲಿವಿಂಗ್​ಸ್ಟೋನ್​ ತಲಾ ಒಂದು ವಿಕೆಟ್​ ಕಿತ್ತರು.

Continue Reading

ಪ್ರಮುಖ ಸುದ್ದಿ

IND vs AFG: ಇಂದು ಭಾರತ-ಆಫ್ಘಾನ್​ ಸೂಪರ್​-8 ಪಂದ್ಯ; ಹವಾಮಾನ ವರದಿ ಹೇಗಿದೆ?

IND vs AFG: ಬ್ರಿಡ್ಜ್‌ಟೌನ್ ಕೆನ್ಸಿಂಗ್ಟನ್ ಓವಲ್ ಸ್ಟೇಡಿಯಂನ ಪಿಚ್​ ಬ್ಯಾಟಿಂಗ್​ ಸ್ನೇಹಿಯಾಗಿದೆ. ಇಲ್ಲಿ ದಾಖಲಾದ ಗರಿಷ್ಠ ಮೊತ್ತ 224 ರನ್​. 2022ರಲ್ಲಿ ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ವಿಂಡೀಸ್​ ಈ ಮೊತ್ತವನ್ನು ಪೇರಿಸಿತ್ತು. ಒಟ್ಟು ಇಲ್ಲಿ ಮೂರು ಬಾರಿ ಟಿ20 ಪಂದ್ಯದಲ್ಲಿ 200 ರನ್​ ದಾಖಲಾಗಿದೆ.

VISTARANEWS.COM


on

IND vs AFG
Koo

ಬ್ರಿಜ್‌ಟೌನ್‌ (ಬಾರ್ಬಡಾಸ್‌): ಇಂದು ನಡೆಯುವ ಟಿ20 ವಿಶ್ವಕಪ್(T20 World Cup 2024)​ ಸೂಪರ್​-8 ಕದನಕ್ಕೆ ಭಾರತ(IND vs AFG) ಮತ್ತು ಅಫಘಾನಿಸ್ತಾನ ಸಜ್ಜುಗೊಂಡಿದೆ. ಇತ್ತಂಡಗಳ ಈ ಕಾದಾಟ ಕೆನ್ಸಿಂಗ್ಟನ್‌ ಓವಲ್‌ ಸ್ಟೇಡಿಯಂನಲ್ಲಿ ನಡೆಯಲಿದೆ. ರೋಹಿತ್​ ಪಡೆ ಲೀಗ್‌ ಹಂತದಲ್ಲಿ ಅಜೇಯ ಪ್ರದರ್ಶನ ಕಾಯ್ದುಕೊಂಡು ಬಂದರೂ ಅಪಾಯಕಾರಿ ಅಫಘಾನಿಸ್ಥಾನದ ಸವಾಲು ಅಷ್ಟು ಸುಲಭವಲ್ಲ. ಇಂದಿನ ಪಂದ್ಯದ ಹವಾಮಾನ ವರದಿ(Barbados weather report), ಸಂಭಾವ್ಯ ತಂಡದ ಮಾಹಿತಿ ಇಂತಿದೆ.

ಹವಾಮಾನ ವರದಿ


ಭಾರತದಲ್ಲಿ ಈ ಪಂದ್ಯ ರಾತ್ರಿ ಪ್ರಸಾರಗೊಂಡರೂ ಕೂಡ ವೆಸ್ಟ್​ ಇಂಡೀಸ್​ನಲ್ಲಿ ಈ ಪಂದ್ಯ ಹಗಲು ಪಂದ್ಯವಾಗಿರಲಿದೆ. ಹೀಗಾಗಿ ಪಂದ್ಯಕ್ಕೆ ಯಾವುದೇ ಮಳೆ ಭೀತಿ ಇಲ್ಲ. ಪಂದ್ಯದ ಪ್ರಮುಖ ಭಾಗ ಬಿಸಿಲಿನ ವಾತಾವರಣದಿಂದಲೇ ಕೂಡಿರಲಿದೆ. ವಿಂಡೀಸ್​ನಲ್ಲಿ ಪಂದ್ಯ ಬೆಳಗ್ಗೆ 10.30 ಆರಂಭಗೊಳ್ಳಲಿದೆ. ತಾಪಮಾನವು ಗರಿಷ್ಠ 30 ರಷ್ಟಿರುತ್ತದೆ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ.

ಪಿಚ್​ ರಿಪೋರ್ಟ್​


ಬ್ರಿಡ್ಜ್‌ಟೌನ್ ಕೆನ್ಸಿಂಗ್ಟನ್ ಓವಲ್ ಸ್ಟೇಡಿಯಂನ ಪಿಚ್​ ಬ್ಯಾಟಿಂಗ್​ ಸ್ನೇಹಿಯಾಗಿದೆ. ಇಲ್ಲಿ ದಾಖಲಾದ ಗರಿಷ್ಠ ಮೊತ್ತ 224 ರನ್​. 2022ರಲ್ಲಿ ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ವಿಂಡೀಸ್​ ಈ ಮೊತ್ತವನ್ನು ಪೇರಿಸಿತ್ತು. ಒಟ್ಟು ಇಲ್ಲಿ ಮೂರು ಬಾರಿ ಟಿ20 ಪಂದ್ಯದಲ್ಲಿ 200 ರನ್​ ದಾಖಲಾಗಿದೆ. ಇದರಲ್ಲೊಂದು ಈ ಬಾರಿಯ ಟೂರ್ನಿಯಲ್ಲಿ ದಾಖಲಾದದ್ದು. ಇಂಗ್ಲೆಂಡ್​ ವಿರುದ್ಧ ಆಸೀಸ್​ 201 ರನ್​ ಬಾರಿಸಿತ್ತು. ಹೀಗಾಗಿ ನಾಳಿನ ಪಂದ್ಯ ಕೂಡ ಹೈ ಸ್ಕೋರಿಂಗ್​ ಎಂದು ನಿರೀಕ್ಷೆ ಮಾಡಬಹುದು.

ಇದನ್ನೂ ಓದಿ SA vs USA: ಮಿಂಚಿದ ಡಿಕಾಕ್; ಯುಎಸ್‌ಎ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ 18 ರನ್‌ಗಳ ಜಯ

ಟಿ20 ಮುಖಾಮುಖಿ


ಭಾರತ ಮತ್ತು ಅಫಘಾನಿಸ್ತಾನ ಇದುವರೆಗೆ ಒಟ್ಟು 8 ಟಿ20 ಪಂದ್ಯಗಳನ್ನು ಆಡಿದೆ. ಈ ಪೈಕಿ ಭಾರತ 7 ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. ಆಫ್ಘಾನ್​ ಎಲ್ಲ ಪಂದ್ಯಗಳನ್ನು ಸೋತಿದೆ. ಈ ಲೆಕ್ಕಾಚಾರದಲ್ಲಿ ಭಾರತ ಬಲಿಷ್ಠವಾಗಿದೆ. ಹಾಗಂತ ಈ ಸವಾಲನ್ನು ಅಷ್ಟು ಹಗುರವಾಗಿ ಕಾಣಬಾರದು. ಏಕೆಂದರೆ ಬಲಿಷ್ಠ ನ್ಯೂಜಿಲ್ಯಾಂಡ್​ ತಂಡವನ್ನು ಕೇವಲ 75 ರನ್​ಗೆ ಕೆಡವಿ ಹಾಕಿತ್ತು. ಹೀಗಾಗಿ ಭಾರತ ಯಾವುದೇ ಕಾರಣಕ್ಕೂ ಎದುರಾಳಿ ತಂಡವನ್ನು ದರ್ಬಲ ಎಂದು ಪರಿಗಣಿಸಬಾರದು.

ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಭಾರತ


ಭಾರತ ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್ ಸ್ಟೇಡಿಯಂನಲ್ಲಿ ಇದುವರೆಗೆ ಕೇವಲ 2 ಟಿ20 ಪಂದ್ಯವನ್ನು ಮಾತ್ರ ಆಡಿದೆ. ಈ ಎರಡೂ ಪಂದ್ಯಗಳಲಿಲ್ಲಯೂ ಟೀಮ್​ ಇಂಡಿಯಾ ಸೋಲು ಕಂಡಿತ್ತು. 2010ರಲ್ಲಿ ನಡೆದಿದ್ದ ಟಿ20 ವಿಶ್ವಕಪ್​ ಟೂರ್ನಿಯ ಪಂದ್ಯಗಳು ಇದಾಗಿತ್ತು. ಆಸ್ಟ್ರೇಲಿಯಾ ಮತ್ತು ವೆಸ್ಟ್​ ಇಂಡೀಸ್​ ವಿರುದ್ಧ ಅಂದು ಭಾರತ ಸೋಲು ಕಂಡಿತ್ತು. ಅಲ್ಲದೆ ಲೀಗ್​ ಹಂತದಲ್ಲೇ ನಿರ್ಗಮಿಸಿತ್ತು.

ಸಂಭಾವ್ಯ ತಂಡ


ಭಾರತ:
 ರೋಹಿತ್​ ಶರ್ಮ, ವಿರಾಟ್ ಕೊಹ್ಲಿ, ರಿಷಭ್​ ಪಂತ್​(ವಿಕೀ), ಸೂರ್ಯಕುಮಾರ್​ ಯಾದವ್​, ಹಾರ್ದಿಕ್​ ಪಾಂಡ್ಯ, ಅಕ್ಷರ್​ ಪಟೇಲ್​, ರವೀಂದ್ರ ಜಡೇಜಾ, ಕುಲ್​ದೀಪ್​ ಯಾದವ್​/ಶಿವಂ ದುಬೆ, ಜಸ್​ಪ್ರೀತ್​ ಬುಮ್ರಾ, ಅರ್ಶ್​ದೀಪ್​ ಸಿಂಗ್​, ಮೊಹಮ್ಮದ್​ ಸಿರಾಜ್​.

ಅಫಘಾನಿಸ್ತಾನ: ರಹಮಾನುಲ್ಲಾ ಗುರ್ಬಾಜ್ (ವಿಕೀ), ಇಬ್ರಾಹಿಂ ಝದ್ರಾನ್, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ಅಜ್ಮತುಲ್ಲಾ ಒಮರ್ಜಾಯ್, ರಶೀದ್ ಖಾನ್ (ನಾಯಕ), ಕರೀಮ್ ಜನ್ನತ್​, ನೂರ್ ಅಹ್ಮದ್, ನವೀನ್-ಉಲ್-ಹಕ್, ಫಜಲ್ಹಕ್ ಫಾರೂಕಿ.

Continue Reading

ಕ್ರೀಡೆ

SA vs USA: ಮಿಂಚಿದ ಡಿಕಾಕ್; ಯುಎಸ್‌ಎ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ 18 ರನ್‌ಗಳ ಜಯ

SA vs USA: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟಿ-20 ವಿಶ್ವಕಪ್‌ ಟೂರ್ನಿಯ ಸೂಪರ್‌ 8 ಹಂತದ ಮೊದಲ ಪಂದ್ಯದಲ್ಲಿ ಅಮೆರಿಕ ತಂಡವು 18 ರನ್‌ಗಳಿಂದ ಸೋಲನುಭವಿಸಿದೆ. ಗ್ರೂಪ್‌ ಹಂತದಲ್ಲಿ ಪಾಕಿಸ್ತಾನವನ್ನು ಕೂಡ ಅಮೆರಿಕ ತಂಡವು ಸೋಲಿಸುವ ಮೂಲಕ ಆ ತಂಡವನ್ನು ಮನೆಗೆ ಕಳುಹಿಸಿತ್ತು. ಈಗ ದಕ್ಷಿಣ ಆಫ್ರಿಕಾ ವಿರುದ್ಧವೂ ಯುಎಸ್‌ಎ ತಂಡವು ಉತ್ತಮ ಸ್ಪರ್ಧೆಯೊಡ್ಡಿತು.

VISTARANEWS.COM


on

RSA vs USA
Koo

ಆ್ಯಂಟಿಗುವಾ: ಐಸಿಸಿ ಟಿ-20 ವಿಶ್ವಕಪ್‌ ಟೂರ್ನಿಯ (T20 World Cup 2024) ಸೂಪರ್‌ 8 ಹಂತದ ಮೊದಲ ಪಂದ್ಯದಲ್ಲಿಯೇ ದಕ್ಷಿಣ ಆಫ್ರಿಕಾ ತಂಡವು ಕ್ರಿಕೆಟ್‌ ಶಿಶು ಅಮೆರಿಕ ತಂಡವನ್ನು (SA vs USA) 18 ರನ್‌ಗಳಿಂದ ಸೋಲಿಸುವ ಮೂಲಕ ಶುಭಾರಂಭ ಮಾಡಿದೆ. ಮತ್ತೊಂದೆಡೆ, ಗ್ರೂಪ್‌ ಹಂತದಲ್ಲಿಯೇ ಬಲಿಷ್ಠ ಪಾಕಿಸ್ತಾನ ತಂಡವನ್ನು ಸೋಲಿಸಿದ್ದ ಅಮೆರಿಕ ತಂಡವು ದಕ್ಷಿಣ ಆಫ್ರಿಕಾ ತಂಡಕ್ಕೂ ಸ್ಪರ್ಧೆಯೊಡ್ಡಿ, ಹೋರಾಡಿ ಸೋತಿತು ಎಂಬುದು ಗಮನಾರ್ಹವಾಗಿದೆ.

ವೆಸ್ಟ್‌ ಇಂಡೀಸ್‌ನ ಆ್ಯಂಟಿಗುವಾದ ಸರ್‌ ವಿವಿಯನ್‌ ರಿಚರ್ಡ್ಸ್‌ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಅಮೆರಿಕ ತಂಡವು ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡ ಕಾರಣ ಐಡೆನ್‌ ಮಾರ್ಕ್ರಮ್‌ ನೇತೃತ್ವದ ತಂಡವು ಮೊದಲು ಬ್ಯಾಟಿಂಗ್‌ಗೆ ಇಳಿಯಿತು. ಕ್ವಿಂಟನ್‌ ಡಿಕಾಕ್‌ 40 ಎಸೆತಗಳಲ್ಲಿ 7 ಬೌಂಡರಿ ಹಾಗೂ 5 ಸಿಕ್ಸರ್‌ ನೆರವಿನಿಂದ ಸಿಡಿಲಬ್ಬರದ ಬ್ಯಾಟಿಂಗ್‌ ನಡೆಸಿ 74 ರನ್‌ ಹಾಗೂ ನಾಯಕ ಐಡೆನ್‌ ಮಾರ್ಕ್ರಮ್‌ ಅವರ ಸಮಯೋಚಿತ 46 ರನ್‌ಗಳ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 194 ರನ್‌ ಗಳಿಸಿತು.

ದಕ್ಷಿಣ ಆಫ್ರಿಕಾ ನೀಡಿದ 195 ರನ್‌ಗಳ ಬೃಹತ್‌ ಗುರಿಯನ್ನು ಬೆನ್ನತ್ತಿದ ಅಮೆರಿಕ ತಂಡಕ್ಕೆ ಆರಂಭದಲ್ಲೇ ಆಘಾತ ಉಂಟಾಯಿತು. ತಂಡದ ಮೊತ್ತ 33 ಆಗಿದ್ದಾಗ ಸ್ಟೀವನ್‌ ಟೇಲರ್‌, 53 ರನ್‌ ಆಗಿದ್ದಾಗ ನಿತೀಶ್‌ ಕುಮಾರ್‌ ಹಾಗೂ 56 ರನ್‌ ಆಗಿದ್ದಾಗ ನಾಯಕ ಆರೋನ್‌ ಜೋನ್ಸ್‌ ಅವರು ವಿಕೆಟ್‌ ಒಪ್ಪಿಸಿದ ಕಾರಣ ಸಂಕಷ್ಟಕ್ಕೆ ಸಿಲುಕಿತ್ತು. ಒಂದೆಡೆ ವಿಕೆಟ್‌ ಬೀಳುತ್ತಿದ್ದರೂ ಆಂಡ್ರೀಸ್‌ ಗೌಸ್‌ ಅವರು ಮನಮೋಹಕ ಆಟವಾಡಿದರು. ಇದು ಒಂದು ಹಂತದಲ್ಲಿ ಅಮೆರಿಕಕ್ಕೆ ಗೆಲುವಿನ ಆಸೆ ಹುಟ್ಟಿಸಿತ್ತು.

ಆಂಡ್ರೀಸ್‌ ಗೌಸ್‌ ಅವರು 47 ಎಸೆತಗಳಲ್ಲಿ 5 ಬೌಂಡರ್‌ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ 80 ರನ್‌ ಹಾಗೂ ಹರ್ಮೀತ್‌ ಸಿಂಗ್‌ ಅವರು 22 ಎಸೆತಗಳಲ್ಲಿ 38 ರನ್‌ ಗಳಿಸಿದರು. ಆದರೆ, ಬೇರೆ ಯಾವೊಬ್ಬ ಆಟಗಾರನೂ ಸ್ಫೋಟಕ ಪ್ರದರ್ಶನ ತೋರದ ಕಾರಣ ನಿಗದಿತ 20 ಓವರ್‌ಗಳಲ್ಲಿ ಅಮೆರಿಕ ತಂಡವು 6 ವಿಕೆಟ್‌ ಕಳೆದುಕೊಂಡು 176 ರನ್‌ ಗಳಿಸಲಷ್ಟೇ ಶಕ್ತವಾಯಿತು. ಮನಮೋಹಕ ಆಟವಾಡಿದ ಕ್ವಿಂಟನ್‌ ಡಿಕಾಕ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

ಇದನ್ನೂ ಓದಿ: Virat Kohli: 100 ಶತಕ ಬಾರಿಸುವಂತೆ ಕೊಹ್ಲಿಗೆ ಆಶೀರ್ವಾದ ಮಾಡಿದ ವಿಂಡೀಸ್​ ದಂತಕಥೆ ಸರ್ ವೆಸ್ಲಿ ಹಾಲ್

Continue Reading
Advertisement
International Yoga Day 2024
ಆರೋಗ್ಯ56 seconds ago

Essay on Yoga: ವಿಶ್ವದ ಎಲ್ಲ ಜನರನ್ನು ಒಗ್ಗೂಡಿಸುತ್ತಿರುವುದು ಭಾರತದ ʼಯೋಗʼ

CM Siddaramaiah
ಪ್ರಮುಖ ಸುದ್ದಿ18 mins ago

CM Siddaramaiah: ಕರ್ನಾಟಕದಲ್ಲಿ ವಾಸಿಸುತ್ತಿರುವ ಪರ ಭಾಷಿಕರು ಕನ್ನಡ ಕಲಿಯಲೇಬೇಕು: ಸಿದ್ದರಾಮಯ್ಯ

Tumkur DC Shubha Kalyan inaugurated the Janaspandana programme in Koratagere
ತುಮಕೂರು29 mins ago

Koratagere News: ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರಕ್ಕೆ ಜನಸ್ಪಂದನ ಕಾರ್ಯಕ್ರಮ; ಡಿಸಿ ಶುಭ‌ ಕಲ್ಯಾಣ್

Power cut There will be power outage in various parts of Bengaluru on June 22
ಕರ್ನಾಟಕ31 mins ago

Power Cut: ಬೆಂಗಳೂರಿನ ವಿವಿಧ ಕಡೆ ಜೂ. 22ರಂದು ವಿದ್ಯುತ್‌ ವ್ಯತ್ಯಯ

Arvind Kejriwal
ದೇಶ32 mins ago

Arvind Kejriwal: ಅರವಿಂದ್‌ ಕೇಜ್ರಿವಾಲ್‌ಗೆ ಬಿಗ್‌ ರಿಲೀಫ್;‌ ಕೊನೆಗೂ ಸಿಕ್ಕಿತು ಜಾಮೀನು

Vijayanagara DC MS Diwakar meeting with officials of various departments
ವಿಜಯನಗರ34 mins ago

Vijayanagara News: ಜೂ. 21ರಂದು ಮುಖ್ಯಮಂತ್ರಿಗಳಿಂದ ಕೆಡಿಪಿ ಸಭೆ; ಡಿಸಿ ಎಂ.ಎಸ್.ದಿವಾಕರ್‌

Action will be taken to ensure that the Anganwadi workers do not suffer in any way says Minister Lakshmi Hebbalkar
ಬೆಂಗಳೂರು38 mins ago

Lakshmi Hebbalkar: ಲಕ್ಷ್ಮೀ ಹೆಬ್ಬಾಳಕರ್ ಭರವಸೆ; ಅಂಗನವಾಡಿ ನೌಕರರ ಮುಷ್ಕರ ವಾಪಸ್‌

Mecca Heatwave Death
ಪ್ರಮುಖ ಸುದ್ದಿ1 hour ago

Mecca Heatwave Death : ಮೆಕ್ಕಾದಲ್ಲಿ ನಿಧನ ಹೊಂದಿದ ಹಜ್​ ಯಾತ್ರಿಗಳಿಗೆ ಅಲ್ಲೇ ಸಂಸ್ಕಾರ; ಹಜ್​ ಕಮಿಟಿ ಮಾಹಿತಿ

CM Siddaramaiah
ಕರ್ನಾಟಕ1 hour ago

CM Siddaramaiah: ಪೆಟ್ರೋಲ್‌ ಬೆಲೆ ಏರಿಸಿದ್ದು ಗ್ಯಾರಂಟಿಗೋ? ಅಭಿವೃದ್ಧಿಗೋ? ಸಿದ್ದರಾಮಯ್ಯ ಹೀಗಂತಾರೆ!

Virat kohli
ಪ್ರಮುಖ ಸುದ್ದಿ2 hours ago

Virat kohli : ಕೊಹ್ಲಿಯನ್ನು ಮತ್ತೆ ಸ್ವಾರ್ಥಿ ಎಂದು ದೂರಿದ ಪಾಕಿಸ್ತಾನದ ಮೊಹಮ್ಮದ್ ಹಫೀಜ್​

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ3 hours ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು3 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು3 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ4 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ4 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ4 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ5 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ6 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು6 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು6 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

ಟ್ರೆಂಡಿಂಗ್‌