IND VS BANGLA | ಮಳೆ ಪೀಡಿತ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಭಾರತಕ್ಕೆ 5 ರನ್​ ಗೆಲುವು; ಸೆಮಿಫೈನಲ್​ ಹಾದಿ ಮತ್ತಷ್ಟು ಸುಗಮ - Vistara News

Latest

IND VS BANGLA | ಮಳೆ ಪೀಡಿತ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಭಾರತಕ್ಕೆ 5 ರನ್​ ಗೆಲುವು; ಸೆಮಿಫೈನಲ್​ ಹಾದಿ ಮತ್ತಷ್ಟು ಸುಗಮ

ಮಳೆ ಪೀಡಿತ ಪಂದ್ಯದಲ್ಲಿ ಭಾರತ(IND VS BANGLA) ತಂಡದ ವಿರುದ್ಧ ಬಾಂಗ್ಲಾದೇಶ 5 ರನ್​ ಅಂತರದ ಸೋಲನುಭವಿಸಿದೆ.

VISTARANEWS.COM


on

t20
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಡಿಲೇಡ್​: ಮಳೆ ಪೀಡಿತ ಪಂದ್ಯದಲ್ಲಿ ಭಾರತ(IND VS BANGLA) ತಂಡದ ವಿರುದ್ಧ ಬಾಂಗ್ಲಾದೇಶ 5 ರನ್​ ಅಂತರದ ಸೋಲನುಭವಿಸಿದೆ. ಭಾರತ ಈ ಗೆಲುವಿನೊಂದಿಗೆ ಬಿ ಗ್ರೂಪ್​ನ ಅಂಕಪಟ್ಟಿಯಲ್ಲಿ 6 ಅಂಕದೊಂದಿಗೆ ಅಗ್ರಸ್ಥಾನಕ್ಕೇರಿತು. ಜತೆಗೆ ಭಾರತದ ಸೆಮಿಫೈನಲ್​ ಹಾದಿಯೂ ಮತ್ತಷ್ಟು ಸುಗಮಗೊಂಡಿದೆ. ಆದರೆ ಬಾಂಗ್ಲಾ ಈ ಸೋಲಿನಿಂದ ಕೂಟದಿಂದ ಬಹುತೇಕ ಹೊರಬಿದ್ದಂತಾಗಿದೆ.

ಅಡಿಲೇಡ್​ ಓವಲ್​ ಮೈದಾನದಲ್ಲಿ ನಡೆದ ಬುಧವಾರದ ಟಿ20 ವಿಶ್ವ ಕಪ್​ನ ಸೂಪರ್-12 ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಭಾರತ ತಂಡ ರಾಹುಲ್​ (50) ಮತ್ತು ವಿರಾಟ್​ ಕೊಹ್ಲಿ(64* ) ಅರ್ಧಶತಕದ ಬ್ಯಾಟಿಂಗ್​ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 184 ರನ್​ ಗಳಿಸಿತು. ಬಳಿಕ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡ ಮಳೆಯಿಂದ ಕಡಿತಗೊಂಡ 16 ಓವರ್​ನಲ್ಲಿ 6 ವಿಕೆಟ್​ಗೆ 145 ರನ್​ ಗಳಿಸಿ ಸೋಲನುಭವಿಸಿತು.

ಮಳೆಯಿಂದ ಓವರ್​ ಕಡಿತ

ಚೇಸಿಂಗ್​ ನಡೆಸುತ್ತಿದ ಬಾಂಗ್ಲಾ 7 ಓವರ್​ಗಳಲ್ಲಿ ವಿಕೆಟ್​ ನಷ್ಟವಿಲ್ಲದೆ 66 ರನ್​ ಗಳಿಸಿ ಉತ್ತಮ ಸ್ಥಿಯಲ್ಲಿತ್ತು. ಈ ವೇಳೆ ಮಳೆ ಸುರಿದ ಕಾರಣ ಪಂದ್ಯವನ್ನು ಕೆಲ ಕಾಲ ಸ್ಥಗಿತಗೊಳಿಸಲಾಯಿತು. ಬಳಿಕ ಪಂದ್ಯವನ್ನು 16 ಓವರ್​ಗೆ ಸೀಮಿತ ಗೊಳಿಸಿ ಬಾಂಗ್ಲಾದೇಶಕ್ಕೆ 151 ರನ್​ ಗುರಿ ನಿಗದಿಪಡಿಸಲಾಯಿತು. ಅದಾಗಲೇ ಬಾಂಗ್ಲಾದೇಶ 7 ಓವರ್​ನಲ್ಲಿ 66 ರನ್​ ಗಳಿಸಿತ್ತು. ಆಗ ಬಾಂಗ್ಲಾದೇಶಕ್ಕೆ 54 ಎಸೆತದಲ್ಲಿ 85 ರನ್​ ಅವಶ್ಯವಿತ್ತು. ಸುಲಭ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾ ಅದಾಗಲೇ ಗೆಲುವಿನ ಸಂಭ್ರಮಾಚರಣೆಯಲ್ಲಿ ತೊಡಗಿತ್ತು. ಆದರೆ ಆರಂಭಿಕರಾದ ಲಿಟ್ಟನ್​ ದಾಸ್​ ಮತ್ತು ಶಂಟೋ ​ವಿಕೆಟ್ ಪತನದ ಬಳಿಕ ನಾಟಕೀಯ ಕುಸಿತ ಕಂಡು ಅಂತಿಮವಾಗಿ ಸೋಲಿನ ಸುಳಿಗೆ ಸಿಲುಕಿತು.

ಅಂತಿಮ ಓವರ್​ನಲ್ಲಿ ಬಾಂಗ್ಲಾ ತಂಡಕ್ಕೆ ಗೆಲುವಿಗೆ 20 ರನ್‌ ಅಗತ್ಯವಿತ್ತು. ಈ ಓವರ್​ ಎಸೆಯಲು ಬಂದ ಅರ್ಶ್​ದೀಪ್​ ಸಿಂಗ್​ ಎರಡನೇ ಎಸೆತದಲ್ಲಿ ಸಿಕ್ಸರ್ ಮತ್ತು ನಾಲ್ಕನೇ ಎಸೆತದಲ್ಲಿ ಬೌಂಡರಿ ಬಿಟ್ಟುಕೊಡುವ ಮೂಲಕ ಭಾರತದ ಪಾಳಯದಲ್ಲಿ ಆತಂಕ ಮೂಡಿಸಿದರು, ಆಗ ಅಂತಿಮ ಎಸೆತದಲ್ಲಿ ಬಾಂಗ್ಲಾ ಗೆಲುವಿಗೆ 7 ರನ್​ ಅಗತ್ಯವಿತ್ತು. ಈ ಎಸೆತದಲ್ಲಿ ಒಂದು ರನ್​ ಬಿಟ್ಟುಕೊಟ್ಟ ಅರ್ಶ್​ದೀಪ್​ ಸಿಂಗ್ ಭಾರತಕ್ಕೆ 5 ರನ್​ ಜಯ ತಂದಿತ್ತರು.

ಲಿಟ್ಟನ್​ ದಾಸ್​ ಸ್ಫೋಟಕ ಬ್ಯಾಟಿಂಗ್​

ಚೇಸಿಂಗ್​ ವೇಳೆ ಬಾಂಗ್ಲಾದೇಶದ ಆರಂಭಿಕ ಆಟಗಾರ ಲಿಟ್ಟನ್​ ದಾಸ್​ ಜಿದ್ದಿಗೆ ಬಿದ್ದವರಂತೆ ಭಾರತದ ಬೌಲರ್​ಗಳಿಗೆ ಸಿಕ್ಸರ್​ ಮತ್ತು ಬೌಂಡರಿ ರುಚಿ ತೋರಿಸಿದರು. ಕೇವಲ 27 ಎಸೆತದಲ್ಲಿ 60 ರನ್​ ಸಿಡಿಸಿದರು. ಈ ವೇಳೆ 7 ಬೌಂಡರಿ ಮತ್ತು ಮೂರು ಸಿಕ್ಸರ್ ಸಿಡಿಯಿತು. ಅಶ್ವಿನ್​ ಅವರ ಓವರ್​ನಲ್ಲಿ ರನ್​ ಓಡುವ ಯತ್ನದಲ್ಲಿ ರಾಹುಲ್​ ಅವರ ಡೈರೆಕ್ಟ್​ ಥ್ರೋಗೆ ರನೌಟ್​ ಆಗಿ ಪೆವಿಲಿಯನ್​ ಸೇರಿದರು. ಇಲ್ಲಿಗೆ ಭಾರತದದ ಕೈ ಮೇಲಾಯಿತು. ಲಿಟ್ಟನ್​ ದಾಸ್​ ಮತ್ತು ಶಂಟೋ ಮೊದಲ ವಿಕೆಟ್​ಗೆ 68 ರನ್​ ಒಟ್ಟುಗೂಡಿಸಿದರೂ ಇನ್ನುಳಿದ ಆಟಗಾರರು ವೈಫಲ್ಯ ಅನುಭವಿದ್ದು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು.

ಕೊಹ್ಲಿ ಅರ್ಧಶತಕ

ಪಾಕಿಸ್ತಾನ ಮತ್ತು ನೆದರ್ಲೆಂಡ್ಸ್​ ವಿರುದ್ಧ ಅರ್ಧಶತಕ ಸಿಡಿಸಿ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ ಬ್ಯಾಟಿಂಗ್​ ವೈಫಲ್ಯ ಕಂಡ ವಿರಾಟ್​ ಕೊಹ್ಲಿ, ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್​ ಪ್ರದರ್ಶನ ತೋರಿದರು. ಆರಂಭದಿಂದಲೇ ಬಾಂಗ್ಲಾ ಬೌಲರ್​ಗಳ ಮೇಲೆರಗಿದ ಕೊಹ್ಲಿ 44 ಎಸೆತದಲ್ಲಿ 8 ಬೌಂಡರಿ ಹಾಗೂ ಒಂದು ಸಿಕ್ಸರ್​ ನೆರವಿನೊಂದಿಗೆ ಅಜೇಯ 64 ರನ್​ ಗಳಿಸಿದರು. ಇದರ ಜತೆಗೆ ಟಿ20 ವಿಶ್ವ ಕಪ್​ನಲ್ಲಿ ಅತ್ಯಧಿಕ ರನ್​ ಗಳಿಸಿದ ವಿಶ್ವ ದಾಖಲೆಯನ್ನು ಕೊಹ್ಲಿ ಬರೆದರು. ಈ ಮೊದಲು ಲಂಕಾದ ಮಹೇಲ ಜಯವರ್ಧನೆ (1016) ಅವರ ಹೆಸರಿನಲ್ಲಿದ ಈ ದಾಖಲೆ ಮುರಿಯಿತು. ಅಂತಿಮವಾಗಿ ಆರ್​. ಅಶ್ವಿನ್​ ಅಜೇಯ 16 ರನ್​ ಗಳಿಸಿದರು.

ಕಳಪೆ ಬ್ಯಾಟಿಂಗ್​ನಿಂದ ಹೊರ ಬಂದ ರಾಹುಲ್​

ಸತತ ಬ್ಯಾಟಿಂಗ್​ ವೈಫಲ್ಯ ಅನುಭವಿಸಿ ಟೀಕೆಗೆ ಗುರಿಯಾಗಿದ್ದ ಟೀಮ್​ ಇಂಡಿಯಾ ಆರಂಭಿಕ ಬ್ಯಾಟರ್​ ಕೆ.ಎಲ್​. ರಾಹುಲ್​ ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್​ ಪ್ರದರ್ಶನ ತೋರುವ ಮೂಲಕ ತಮ್ಮ ಬ್ಯಾಟಿಂಗ್​ ಫಾರ್ಮ್ ಕಂಡುಕೊಂಡರು. ಆರಂಭದಲ್ಲಿ ಕೊಂಚ ನಿಧಾನ ಗತಿಯ ಬ್ಯಾಟಿಂಗ್​ಗೆ ಮುಂದಾದ ರಾಹುಲ್​, ಬಳಿಕ ಆಕ್ರಮಣಕಾರಿ ಆಟಕ್ಕೆ ಮುಂದಾದರು.​ 32 ಎಸೆತ ಎದುರಿಸಿದ ಅವರು ಮೂರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್​ ನೆರವಿನಿಂದ 50 ರನ್​ ಗಳಿಸಿ ಶಕಿಬ್​ ಅಲ್​ ಹಸನ್​ಗೆ ವಿಕೆಟ್​ ಒಪ್ಪಿಸಿದರು. ನಾಯಕ ರೋಹಿತ್​ ಶರ್ಮಾ(2) ಒಂದು ಜೀವದಾನ ಪಡೆದರೂ ಇದನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ವೈಫಲ್ಯ ಕಂಡರು. ಕ್ಯಾಚ್​ ಬಿಟ್ಟ ಹಸನ್​ ಮಹ್ಮುದ್ ಮುಂದಿನ ಓವರ್​ನಲ್ಲಿ ರೋಹಿತ್​ ವಿಕೆಟ್​ ಕಿತ್ತರು. ಉಳಿದಂತೆ ಸೂರ್ಯಕುಮಾರ್​ 16 ಎಸೆತದಲ್ಲಿ 30 ರನ್​ ಗಳಿಸಿದರು.

ಸಂಕ್ಷಿಪ್ತ ಸ್ಕೋರ್

ಭಾರತ 20 ಓವರ್‌ಗಳಲ್ಲಿ 184/6 (ವಿರಾಟ್‌ ಕೊಹ್ಲಿ 64*, ಕೆ.ಎಲ್‌.ರಾಹುಲ್‌ 50, ಹಸನ್‌ ಮೆಹ್ಮೂದ್‌ 47ಕ್ಕೆ3).

ಬಾಂಗ್ಲಾದೇಶ: 16 ಓವರ್​ಗಳಲ್ಲಿ 6 ವಿಕೆಟ್​ಗೆ 145 (ಲಿಟ್ಟನ್​ ದಾಸ್​ 66, ಶಂಟೊ 21, ಹಾರ್ದಿಕ್​ ಪಾಂಡ್ಯ 28ಕ್ಕೆ 2, ಅರ್ಶ್​ದೀಪ್​ ಸಿಂಗ್​ 38ಕ್ಕೆ2)

ಇದನ್ನೂ ಓದಿ | Virat Kohli | ಕಿಂಗ್ ಕೊಹ್ಲಿ ಈಗ ಟಿ20 ವಿಶ್ವ ಕಪ್ ಟಾನ್ ರನ್ ಸರದಾರ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Physical Abuse: ಮಧ್ಯಪ್ರದೇಶದಲ್ಲೂ ಬುಲ್ಡೋಜರ್‌ ಅಸ್ತ್ರ; ವಿದ್ಯಾರ್ಥಿನಿ ಅತ್ಯಾಚಾರ ಆರೋಪಿಯ ಮನೆ ನೆಲಸಮ

ಮಧ್ಯಪ್ರದೇಶದ ಭೋಪಾಲ್ ನ ಸಿಧಿಯಲ್ಲಿ ಒಟ್ಟು ಏಳು ಮಂದಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ನಡೆಸಲಾಗಿದ್ದು (Physical Abuse), ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿಯ ಮನೆಯನ್ನು ಜಿಲ್ಲಾಡಳಿತ ನೆಲಸಮಗೊಳಿಸಿದೆ.

VISTARANEWS.COM


on

By

physical abuse
Koo

ಮಧ್ಯಪ್ರದೇಶ: ವಾಯ್ಸ್ ಮಾಡ್ಯುಲೇಷನ್ ಆ್ಯಪ್ (voice modulation app) ಬಳಸಿ ಮಧ್ಯಪ್ರದೇಶದ (madhyapradesh) ಭೋಪಾಲ್ ನ (bhopal) ಸಿಧಿಯಲ್ಲಿ ನಾಲ್ವರು ಅಪ್ರಾಪ್ತ ಬಾಲಕಿಯರು ಸೇರಿದಂತೆ ಏಳು ಕಾಲೇಜು ವಿದ್ಯಾರ್ಥಿನಿಯರ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ (Physical Abuse) ಸಂಬಂಧಿಸಿ ವಿಶೇಷ ತನಿಖಾ ತಂಡ (Special Investigation Team- SIT)) ರಚನೆಗೆ ಮುಖ್ಯಮಂತ್ರಿ (Chief Minister) ಮೋಹನ್ ಯಾದವ್ (Mohan Yadav ) ಆದೇಶಿಸಿದ್ದಾರೆ.

ಈ ಬಳಿಕ ಸಿಧಿ ಜಿಲ್ಲಾಡಳಿತವು ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿಗಳಲ್ಲಿ ಒಬ್ಬನಾದ ಬ್ರಿಜೇಶ್ ಪ್ರಜಾಪತಿಯ ಮನೆಯನ್ನು ನೆಲಸಮಗೊಳಿಸಿದೆ. ರೇವಾ ವ್ಯಾಪ್ತಿಯ ಐಜಿ ಮಹೇಂದ್ರ ಸಿಕರ್ವಾರ್ ಅವರು ಎಲ್ಲಾ ಮೂವರು ಆರೋಪಿಗಳನ್ನು ಬಂಧಿಸಿರುವುದಾಗಿ ಘೋಷಿಸಿದರು. ತನಿಖೆಗಾಗಿ ಒಂಬತ್ತು ಸದಸ್ಯರ ಎಸ್‌ಐಟಿಯನ್ನು ರಚಿಸಲಾಗಿದೆ. ಸಿಧಿಯ ಉಪ ವಿಭಾಗೀಯ ಪೊಲೀಸ್ ಅಧಿಕಾರಿ (SDOP) ರೋಶ್ನಿ ಸಿಂಗ್ ಠಾಕೂರ್ ಅವರು ಇದರ ಮುಖ್ಯಸ್ಥರಾಗಿದ್ದಾರೆ ಎಂದು ತಿಳಿಸಿದರು.

ಪ್ರಮುಖ ಆರೋಪಿಗಳು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಯೋಜನೆ ರೂಪಿಸಿದ್ದು, ವಿದ್ಯಾರ್ಥಿ ವೇತನ ನೀಡುವ ನೆಪದಲ್ಲಿ ಈ ದುಷ್ಕೃತ್ಯ ಎಸಗುತ್ತಿದ್ದರು ಎಂದು ಮಹೇಂದ್ರ ಸಿಕರ್ವಾರ್ ಹೇಳಿದರು. ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಯನ್ನು ಬ್ರಿಜೇಶ್ ಪ್ರಜಾಪತಿ (30) ಎಂದು ಗುರುತಿಸಲಾಗಿದೆ. ಆತನ ಇಬ್ಬರು ಸಹಚರರನ್ನು ಸಿಧಿ ನಿವಾಸಿಗಳಾದ ರಾಹುಲ್ ಪ್ರಜಾಪತಿ ಮತ್ತು ಸಂದೀಪ್ ಪ್ರಜಾಪತಿ ಎಂದು ಗುರುತಿಸಲಾಗಿದೆ.


ಘಟನೆಯ ಹಿನ್ನೆಲೆ ಏನು?

ಘಟನೆಯ ಕುರಿತು ವಿವರಿಸಿದ ಐಜಿ ಮಹೇಂದ್ರ ಸಿಕರ್ವಾರ್, ಬ್ರಿಜೇಶ್ ಪ್ರಜಾಪತಿ ಮೂರು ವರ್ಷಗಳ ಹಿಂದೆ ಜಬಲ್‌ಪುರದ ಉಕ್ಕಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಆತನ ಕೈ ಮತ್ತು ಕಾಲುಗಳು ಸುಟ್ಟುಹೋಗಿವೆ ಎಂದು ಪ್ರಜಾಪತಿ ತನಿಖೆ ವೇಳೆ ಹೇಳಿಕೊಂಡಿದ್ದಾನೆ. ಸ್ವಲ್ಪ ಸಮಯದ ಅನಂತರ ಆತ ಗುಜರಾತ್‌ಗೆ ಹೋಗಿದ್ದು, ಅಲ್ಲಿಂದ ಹಿಂದಿರುಗಿದ ಬಳಿಕ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಎಂದು ತಿಳಿಸಿದರು.

ಮಹಿಳಾ ಕಾಲೇಜು ಉದ್ಯೋಗಿಯ ಧ್ವನಿಯನ್ನು ಅನುಕರಿಸಲು ವಾಯ್ಸ್ ಮಾಡ್ಯುಲೇಶನ್ ಅಪ್ಲಿಕೇಶನ್ ಅನ್ನು ಬಳಸಿರಿವ ಪ್ರಜಾಪತಿ ಉದ್ದೇಶಿತ ಮಹಿಳೆಯರನ್ನು ನಿರ್ಜನ ಪ್ರದೇಶಕ್ಕೆ ಕರೆದು ಹೇಯ ಕೃತ್ಯ ಎಸಗುತ್ತಿದ್ದ. ಪೊಲೀಸರಿಂದ ತಪ್ಪಿಸಿಕೊಳ್ಳಲು ಸಂತ್ರಸ್ತರ ಮೊಬೈಲ್ ಫೋನ್ ಗಳನ್ನು ಕಸಿದುಕೊಳ್ಳುತ್ತಿದ್ದರು ಎಂದು ಐಜಿ ತಿಳಿಸಿದರು.

ಇದನ್ನೂ ಓದಿ: Swati Maliwal case: ಕೋರ್ಟ್‌ ವಿಚಾರಣೆ ವೇಳೆ ಕಣ್ಣೀರಿಟ್ಟ ಸ್ವಾತಿ ಮಲಿವಾಲ್‌!

ಪ್ರಜಾಪತಿ ಕತ್ತಲೆಯ ಸಮಯದಲ್ಲಿ ಅಪರಾಧ ಎಸಗುತ್ತಿದ್ದ. ಆತ ಗುರಿಯಾಗಿಸಿದ ಮಹಿಳೆಯನ್ನು ಬೈಕ್‌ನಲ್ಲಿ ಎತ್ತಿಕೊಂಡು ಹೋಗುತ್ತಿದ್ದರು ಮತ್ತು ತಮ್ಮ ಗುರುತನ್ನು ಮರೆಮಾಚಲು ಹೆಲ್ಮೆಟ್ ಮತ್ತು ಕೈಗವಸುಗಳನ್ನು ಧರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆತನ ಸಹಚರರಾದ ರಾಹುಲ್ ಮತ್ತು ಸಂದೀಪ್ ಅವರ ಸಹಾಯದಿಂದ ಸಂತ್ರಸ್ತರ ಮೊಬೈಲ್ ಮಾರಾಟ ಮಾಡುತ್ತಿದ್ದ. ಬಂಧಿತ ಆರೋಪಿಯಿಂದ ಒಟ್ಟು 16 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

IPL 2024 : ಇದು ಕಾಕತಾಳಿಯವೇ? ಐಪಿಎಲ್ ಮತ್ತು ಡಬ್ಲ್ಯುಪಿಎಲ್​ ಫೈನಲ್ ರಿಸಲ್ಟ್​​ನಲ್ಲಿದೆ ಸಾಮ್ಯತೆ

IPL 2024: ಈ ವರ್ಷದ ಆರಂಭದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫೈನಲ್ ಪಂದ್ಯದಲ್ಲಿ ಮೆಗ್ ಲ್ಯಾನಿಂಗ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡವನ್ನು ಸೋಲಿಸುವ ಮೂಲಕ ಡಬ್ಲ್ಯುಪಿಎಲ್​​ನ ಎರಡನೇ ಆವೃತ್ತಿಯನ್ನು ಗೆದ್ದುಕೊಂಡಿತು.

VISTARANEWS.COM


on

IPL 2024
Koo

ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ (WPL 2024) 2024 ಫೈನಲ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) 2024 ಫೈನಲ್ ನಡುವಿನ ಕೆಲವು ವಿಲಕ್ಷಣ ಹೋಲಿಕೆಗಳು ಕ್ರಿಕೆಟ್ ಪ್ರೇಮಿಗಳನ್ನು ಅಚ್ಚರಿಗೆ ಒಳಪಡಿಸಿವೆ. ಪ್ಯಾಟ್ ಕಮಿನ್ಸ್ ನೇತೃತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿದ ಕೋಲ್ಕತಾ ನೈಟ್ ರೈಡರ್ಸ್ (KKR) ಮೂರನೇ ಬಾರಿಗೆ ಐಪಿಎಲ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ವರ್ಷದ ಆರಂಭದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫೈನಲ್ ಪಂದ್ಯದಲ್ಲಿ ಮೆಗ್ ಲ್ಯಾನಿಂಗ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡವನ್ನು ಸೋಲಿಸುವ ಮೂಲಕ ಡಬ್ಲ್ಯುಪಿಎಲ್​​ನ ಎರಡನೇ ಆವೃತ್ತಿಯನ್ನು ಗೆದ್ದುಕೊಂಡಿತು.

ಶ್ರೇಯಸ್ ಅಯ್ಯರ್ ನೇತೃತ್ವದ ಕೆಕೆಆರ್ 18.3 ಓವರ್​ಗಳಲ್ಲಿ ಸನ್​ರೈಸರ್ಸ್​​ ಹೈದರಾಬಾದ್ ತಂಡವನ್ನು 113 ರನ್​ ಗಳಿಗೆ ಆಲೌಟ್ ಮಾಡಿತ್ತು. ಏತನ್ಮಧ್ಯೆ, ಸ್ಮೃತಿ ಮಂದಾನ ನೇತೃತ್ವದ ಆರ್ಸಿಬಿ ಕೂಡ ಮಾರ್ಚ್ 17 ರಂದು ಅಷ್ಟೇ ಓವರ್​​ಗಳಲ್ಲಿ ಡೆಲ್ಲಿ ತಂಡವನ್ನು ಅದೇ ಮೊತ್ತಕ್ಕೆ ಕಟ್ಟಿಹಾಕಿತ್ತು. ಇದು ಎರಡು ಫೈನಲ್ ಗಳ ನಡುವಿನ ಪ್ರಮುಖ ಹೋಲಿಕೆಗಳಲ್ಲಿ ಒಂದಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಡಬ್ಲ್ಯುಪಿಎಲ್​ ಮತ್ತು ಐಪಿಎಲ್​ನಲ್ಲಿ ಸೋತ ಎಸ್ಆರ್​ಎಚ್​ ಮತ್ತು ಡಿಸಿ ತಂಡ ನಾಯಕರು ಆಸ್ಟ್ರೇಲಿಯಾದ ಕ್ರಿಕೆಟಿಗರು. ಅವರೆಂದರೆ ಎಸ್​ಆರ್​ಎಚ್​ ತಂಡ ಪ್ಯಾಟ್​ ಕಮಿನ್ಸ್ ಮತ್ತು ಡಿಸಿ ಮಹಿಳಾ ತಂಡ ಮೆಗ್​ ಲ್ಯಾನಿಂಗ್. ಮುಂದುವರಿಂತೆ ಈ ಇಬ್ಬರೂ ಅದಕ್ಕಿಂತ ಹಿಂದೆ ಐಸಿಸಿ ಟೂರ್ನಿಗಳಲ್ಲಿ (ವಿಶ್ವ ಕಪ್​, ಟೆಸ್ಟ್ ಚಾಂಪಿಯನ್​ಷಿಪ್​​) ಭಾರತ ತಂಡವನ್ನು ಸೋಲಿಸಿದ್ದರು. ಕಮಿನ್ಸ್ 2023 ರ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ (ಡಬ್ಲ್ಯುಟಿಸಿ) ಫೈನಲ್​​ನಲ್ಲಿ ಹಾಗೂ 2023 ರ ಏಕದಿನ ವಿಶ್ವಕಪ್ ಫೈನಲ್​​ನಲ್ಲಿ ಭಾರತ ತಂಡವನ್ನು ಸೋಲಿಸಿದ್ದರು. ಲ್ಯಾನಿಂಗ್ ಆಸ್ಟ್ರೇಲಿಯಾದ ಮಹಿಳಾ ತಂಡವನ್ನು 2022 ರ ಟಿ 20 ಮಹಿಳಾ ವಿಶ್ವಕಪ್ ಫೈನಲ್ ಪ್ರಶಸ್ತಿಗೆ ಕೊಂಡೊಯ್ದಿದ್ದರು. ಅಲ್ಲಿ ಭಾರತ ಸೋತಿತ್ತು . ಇದೀಗ ಭಾರತೀಯ ನಾಯಕರು ಆ ಆಸ್ಟ್ರೇಲಿಯನ್ ಆಟಗಾರರ ನಾಯಕತ್ವದ ತಂಡವನ್ನು ಮಣಿಸಿದ್ದಾರೆ. ಶ್ರೇಯಸ್​ ಅಯ್ಯರ್​ ಪ್ಯಾಟ್​ ಕಮಿನ್ಸ್ ನೇತೃತ್ವದ ಎಸ್​ಆರ್​ಎಚ್​ ತಂಡವನ್ನು ಸೋಲಿಸಿದರೆ, ಸ್ಮೃತಿ ಮಂಧಾನ ಅವರು ಆರ್​ಸಿಬಿ ಮೂಲಕ ಮೆಗ್​ ಲ್ಯಾನಿಂಗ್ ಅವರನ್ನು ಮಣಿಸಿದ್ದರು.

ಕೆಕೆಆರ್ ಬೌಲರ್​ಗಳಿಗೆ ಭರ್ಜರಿ ಖಷಿ

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕಮಿನ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಮಿಚೆಲ್ ಸ್ಟಾರ್ಕ್ ಮತ್ತು ವೈಭವ್ ಅರೋರಾ ಪವರ್​ಪ್ಲೇನಲ್ಲಿ ತಲಾ ಮೂರು ಓವರ್​ಗಳನ್ನು ಎಸೆದು ಎಸ್​ಆರ್​ಎಚ್ ತಂಡ ಮೂರು ವಿಕೆಟ್​ಗಳನ್ನು ಪಡೆದರು. ಆರೆಂಜ್ ಆರ್ಮಿ 18.3 ಓವರ್​ಗಳಲ್ಲಿ 113 ರನ್​ಗಳಿಗೆ ಆಲೌಟ್ ಆಯಿತು. ಆಸೀಸ್ ಪರ ಆ್ಯಂಡ್ರೆ ರಸೆಲ್ 3 ವಿಕೆಟ್ ಕಿತ್ತರೆ, ಸ್ಟಾರ್ಕ್ ಹಾಗೂ ಹರ್ಷಿತ್ ರಾಣಾ ತಲಾ 2 ವಿಕೆಟ್ ಪಡೆದರು.

ಇದನ್ನೂ ಓದಿ: Virat Kohli: ಐಪಿಎಲ್​ 2024ರ ಸಾಧನೆ ಕುರಿತು ಹೇಳಿಕೆ ನೀಡಿದ ವಿರಾಟ್ ಕೊಹ್ಲಿ

ಉತ್ತರವಾಗಿ ಆಡಿದ ಕೆಕೆಆರ್ ಪರ ಸುನಿಲ್ ನರೈನ್ ಬೇಗನೆ ನಿರ್ಗಮಿಸಿದರು. ಆದರೆ ವೆಂಕಟೇಶ್ ಅಯ್ಯರ್ (26 ಎಸೆತಗಳಲ್ಲಿ 52* ರನ್) ಮತ್ತು ರಹಮಾನುಲ್ಲಾ ಗುರ್ಬಾಜ್ (32 ಎಸೆತಗಳಲ್ಲಿ 39 ರನ್) 45 ಎಸೆತಗಳಲ್ಲಿ 91 ರನ್​ಗಳ ಜೊತೆಯಾಟವನ್ನು ನೀಡಿದರು. ನಂತರ, ಶ್ರೇಯಸ್ ಅಯ್ಯರ್ ಮಧ್ಯದಲ್ಲಿ ವೆಂಕಟೇಶ್ ಅವರೊಂದಿಗೆ ಸೇರಿಕೊಂಡರು ಪಂದ್ಯವನ್ನು ಪೂರ್ಣಗೊಳಿಸಿದರು. ಅಂತಿಮವಾಗಿ ಕೆಕೆಆರ್ 57 ಎಸೆತಗಳು ಬಾಕಿ ಇರುವಾಗಲೇ 8 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

Continue Reading

ಪ್ರಮುಖ ಸುದ್ದಿ

Virat Kohli: ಐಪಿಎಲ್​ 2024ರ ಸಾಧನೆ ಕುರಿತು ಹೇಳಿಕೆ ನೀಡಿದ ವಿರಾಟ್ ಕೊಹ್ಲಿ

Virat kohli: ಪ್ರಸಕ್ತ ಐಪಿಎಲ್‌ ಋತುವಿನಲ್ಲಿ ಆರೇಂಜ್‌ ಕ್ಯಾಪ್‌ ಗೌರವ ಪಡೆದಿರುವುದಕ್ಕೆ ರನ್‌ ಮಷೀನ್‌ ವಿರಾಟ್‌ ಕೊಹ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ನನ್ನ ತಂಡಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂಬ ತುಡಿತದಿದಲೇ ಪ್ರತಿ ಪಂದ್ಯವನ್ನು ಆಡುತ್ತೇನೆ. ಉತ್ತಮ ಪ್ರದರ್ಶನ ನೀಡಿ, ಆರೇಂಜ್‌ ಕ್ಯಾಪ್‌ ಪಡೆದಿರುವುದು ಖುಷಿಯಾಗಿದೆ. ಬೆಂಬಲ ನೀಡಿದ ಫ್ಯಾನ್ಸ್‌ಗೆ ಧನ್ಯವಾದಗಳು ಎಂದು ವಿರಾಟ್‌ ಕೊಹ್ಲಿ ಹೇಳಿದ್ದಾರೆ.

VISTARANEWS.COM


on

Virat kohli
Koo

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಐಪಿಎಲ್​ 2024ನೇ ಆವೃತ್ತಿಯ (IPL 2024) ಎಲಿಮಿನೇಷನ್ ಹಂತ ದಾಟಲು ವಿಫಲವಾಗಿರಬಹುದು. ಆದರೆ ಆ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಬ್ಯಾಟಿಂಗ್​ ಮೂಲಕ ಅತ್ಯಂತ ಪ್ರಕಾಶಮಾನವಾಗಿ ಮಿಂಚಿದರು. ಈ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಕೊಹ್ಲಿ ಐಪಿಎಲ್ 2024 ರ ಆರೆಂಜ್ ಕ್ಯಾಪ್ ಗೆದ್ದಿದ್ದಾರೆ.

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಪಿಎಲ್ 2024 ರ ಫೈನಲ್​​ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಸನ್​ರೈಸರ್ಸ್​ ಹೈದರಾಬಾದ್ (SRH) ಅನ್ನು ಎಂಟು ವಿಕೆಟ್ಗಳಿಂದ ಸೋಲಿಸಿದ ನಂತರ ಕೊಹ್ಲಿಗೆ ಆರೆಂಜ್ ಕ್ಯಾಪ್ ಟ್ರೋಫಿಯನ್ನು ನೀಡಲಾಯಿತು.

ಎರಡನೇ ಬಾರಿಗೆ ಆರೆಂಜ್ ಕ್ಯಾಪ್ ಟ್ರೋಫಿ ಗೆದ್ದ ವಿರಾಟ್ ಕೊಹ್ಲಿ

ಐಪಿಎಲ್ 2024 ವಿಜೇತ ನಾಯಕ ಶ್ರೇಯಸ್ ಅಯ್ಯರ್ ಅವರು ಕೊಹ್ಲಿ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು, ಏಕೆಂದರೆ ಮಾಜಿ ಆರ್​ಸಿಬಿ ನಾಯಕ ಚೆನ್ನೈನಲ್ಲಿ ಉಪಸ್ಥಿತರಿರಲಿಲ್ಲ. ರಾಜಸ್ಥಾನ್ ರಾಯಲ್ಸ್ (ಆರ್​ಆರ್​​) ವಿರುದ್ಧದ ಎಲಿಮಿನೇಟರ್ ಸೋಲಿನ ನಂತರ ಆರ್​​ಸಿಬಿ ಐಪಿಎಲ್ 2024 ರಿಂದ ಹೊರಬಿದ್ದ ನಂತರ ಅವರು ಪ್ರಸ್ತುತ ಆಟದಿಂದ ಸಣ್ಣ ವಿರಾಮದಲ್ಲಿದ್ದಾರೆ.

ಐಪಿಎಲ್ 2024 ರ ಋತುವಿನಲ್ಲಿ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ವಿಶ್ವದ ಅತಿದೊಡ್ಡ ಟಿ 20 ವೈಭವದಲ್ಲಿ ಪ್ರಮುಖ ಬ್ಯಾಟರ್​ಗಳಲ್ಲಿ ಒಬ್ಬರಾಗಿ ತಮ್ಮ ಸ್ಥಾನಮಾನವನ್ನು ಖಾತರಿಪಡಿಸಿದ್ದರು. ಬಲಗೈ ಬ್ಯಾಟ್ಸ್ಮನ್ 15 ಇನ್ನಿಂಗ್ಸ್​ಗಳಲ್ಲಿ 61.75 ಸರಾಸರಿ ಮತ್ತು 154.70 ಸ್ಟ್ರೈಕ್ ರೇಟ್​ನಲ್ಲಿ 741 ರನ್ ಗಳಿಸಿದ್ದು, ಈ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು.

ಇದನ್ನೂ ಓದಿ: Mitchell Starc : ಐಪಿಎಲ್ ಯಶಸ್ಸಿನ ಶ್ರೇಯಸ್ಸನ್ನು ಪತ್ನಿಗೆ ಅರ್ಪಿಸಿದ ಸ್ಟಾರ್ಕ್​; ಅವರ ಪತ್ನಿಯೂ ಕ್ರಿಕೆಟರ್​

ಐಪಿಎಲ್ 2024 ರಲ್ಲಿ ಅಜೇಯ 113 ರನ್ ಗಳಿಸುವ ಮೂಲಕ ಆರ್​ಸಿಬಿಗೆ ಅಗ್ರ ಕ್ರಮಾಂಕದಲ್ಲಿ ಅವರ ಸ್ಥಿರತೆ ಗಮನಾರ್ಹವಾಗಿದೆ. ಇದರಲ್ಲಿ ಐದು ಅರ್ಧಶತಕಗಳು ಮತ್ತು ಒಂದು ಶತಕವನ್ನು ಒಳಗೊಂಡಿದೆ. ಅಗತ್ಯವಿದ್ದಾಗ ರನ್ ರೇಟ್ ಅನ್ನು ವೇಗಗೊಳಿಸುವ ಕೊಹ್ಲಿಯ ಸಾಮರ್ಥ್ಯವು ಈ ಋತುವಿನಲ್ಲಿ ಆರ್​ಸಿಬಿಯ ಪ್ಲೇಆಫ್ ಪ್ರವೇಶದಲ್ಲಿ ಜಾಹೀರಾಯಿತು.

ತಮ್ಮ ಆಕರ್ಷಕ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಹೊರತಾಗಿ ಕೊಹ್ಲಿ ಸವಾಲಿನ ಪಂದ್ಯಗಳ ಮೂಲಕ ಆರ್​ಸಿಬಿಯನ್ನು ಪ್ರೇರೇಪಿಸಿದರು. ಕಠಿಣ ಸಂದರ್ಭಗಳಲ್ಲಿ ತಮ್ಮ ತಂತ್ರಗಾರಿಕೆಯ ಜಾಣ್ಮೆಯನ್ನು ಒದಗಿಸಿದರು. ಹೆಚ್ಚುವರಿಯಾಗಿ, ಕೊಹ್ಲಿಯ ಶಕ್ತಿಯ ಮಟ್ಟವು ಋತುವಿನಾದ್ಯಂತ ಅಸಾಧಾರಣವಾಗಿತ್ತು. ಐಪಿಎಲ್ 2024 ರ ಪ್ಲೇಆಫ್​ನಲ್ಲಿ ಆರ್​ಸಿಬಿ ಸೋತರೂ, ಅವರ ಪ್ರದರ್ಶನವು ಎದ್ದು ಕಾಣುತ್ತಿತ್ತು.

ಆರೆಂಜ್ ಕ್ಯಾಪ್ ಸ್ವೀಕರಿಸಲು ತುಂಬಾ ಗೌರವವಿದೆ: ವಿರಾಟ್ ಕೊಹ್ಲಿ

ಐಪಿಎಲ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಎರಡನೇ ಬಾರಿಗೆ ಆರೆಂಜ್ ಕ್ಯಾಪ್ ಪ್ರಶಸ್ತಿಯನ್ನು ಗೆದ್ದರು. 2016ರ ಐಪಿಎಲ್ ಟೂರ್ನಿಯಲ್ಲಿ 973 ರನ್ ಬಾರಿಸಿ ಮೊದಲ ಬಾರಿಗೆ ಪ್ರಶಸ್ತಿ ಗೆದ್ದಿದ್ದರು. ಎರಡನೇ ಬಾರಿಗೆ ಆರೆಂಜ್ ಕ್ಯಾಪ್ ಟ್ರೋಫಿಯನ್ನು ಗೆದ್ದ ನಂತರ, ಕೊಹ್ಲಿ ಎಲ್ಲರ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದರು.

ಈ ಗೌರವವನ್ನು ಸ್ವೀಕರಿಸಿದ ನಂತರ ಮಾತನಾಡಿದ ವಿರಾಟ್ ಕೊಹ್ಲಿ, “ಈ ಋತುವಿನಲ್ಲಿ ಆರೆಂಜ್ ಕ್ಯಾಪ್ ಸ್ವೀಕರಿಸಲು ತುಂಬಾ ಗೌರವವಿದೆ. ಇದು ಸವಾರಿಯ ರೋಲರ್-ಕೋಸ್ಟರ್ ಆಗಿತ್ತು, ಋತುವಿನಾದ್ಯಂತ ನನ್ನ ತಂಡಕ್ಕಾಗಿ ನಾನು ಪ್ರದರ್ಶನ ನೀಡಿದ ರೀತಿಯಿಂದ ನನಗೆ ನಿಜವಾಗಿಯೂ ಸಂತೋಷವಾಯಿತು. ಆದರೆ ಅದಕ್ಕಿಂತ ಮುಖ್ಯವಾಗಿ ದ್ವಿತೀಯಾರ್ಧದಲ್ಲಿ ಅರ್ಹತೆ ಪಡೆಯಲು ನಾವು ಪ್ರತಿ ಪಂದ್ಯವನ್ನು ಗೆಲ್ಲಬೇಕಾಗಿತ್ತು. ಇದನ್ನು ಐಪಿಎಲ್​ನ 2025 ರ ಋತುವಿನಲ್ಲಿಯೂ ಪುನರಾವರ್ತಿಸಲು ನಾನು ಆಶಿಸುತ್ತೇನೆ. ನಿಮ್ಮ ಬೆಂಬಲಕ್ಕಾಗಿ ಎಲ್ಲರಿಗೂ ಧನ್ಯವಾದಗಳು.

ವಿಶೇಷವೆಂದರೆ, ಜೂನ್ 1 ರಿಂದ ಪ್ರಾರಂಭವಾಗುವ ಮುಂಬರುವ ಐಸಿಸಿ ಟಿ 20 ವಿಶ್ವಕಪ್ 2024 ಗಾಗಿ ಯುಎಸ್ಎಗೆ ತಡವಾಗಿ ಪ್ರಯಾಣಿಸಲಿರುವ ಕಾರಣ ಕೊಹ್ಲಿ ನ್ಯೂಯಾರ್ಕ್ಗೆ ಭಾರತೀಯ ಆಟಗಾರರ ಮೊದಲ ಗುಂಪಿನೊಂದಿಗೆ ವಿಮಾನವನ್ನು ತಪ್ಪಿಸಿಕೊಂಡರು. ಜೂನ್ 5 ರಂದು ಐರ್ಲೆಂಡ್ ವಿರುದ್ಧ ಭಾರತ ತನ್ನ ಅಭಿಯಾನವನ್ನು ಪ್ರಾರಂಭಿಸಿದ ಮೆಗಾ ಈವೆಂಟ್ಗೆ ಮುಂಚಿತವಾಗಿ ಬಿಸಿಸಿಐ ಅವರ ಮನವಿಯನ್ನು ಅನುಮೋದಿಸಿದೆ ಎಂದು ವರದಿಯಾಗಿದೆ.

Continue Reading

ಕ್ರೀಡೆ

Mitchell Starc : ಐಪಿಎಲ್ ಯಶಸ್ಸಿನ ಶ್ರೇಯಸ್ಸನ್ನು ಪತ್ನಿಗೆ ಅರ್ಪಿಸಿದ ಸ್ಟಾರ್ಕ್​; ಅವರ ಪತ್ನಿಯೂ ಕ್ರಿಕೆಟರ್​

Mitchell Strac :ಸ್ಟಾರ್ಕ್ ಅವರ ಪತ್ನಿ ಆಸ್ಟ್ರೇಲಿಯಾ ಮಹಿಳೆಯರ ತಂಡದ ವಿಕೆಟ್​ ಕೀಪರ್ ಬ್ಯಾಟರ್​ ಅಲಿಸ್ಸಾ ಹೀಲಿ ಕೂಡ ಪಂದ್ಯಗಳ ಸಮಯದಲ್ಲಿ ತಮ್ಮ ಪತಿಯನ್ನು ಹುರಿದುಂಬಿಸಲು ಆಗಮಿಸಿದ್ದರು. ಆಸ್ಟ್ರೇಲಿಯಾ ಮಹಿಳಾ ತಂಡದ ನಾಯಕಿಯೂ ಆಗಿರುವ ಹೀಲಿ, ವಾಂಖೆಡೆ ಕ್ರೀಡಾಂಗಣದಲ್ಲಿ ಹಾರ್ದಿಕ್ ಪಾಂಡ್ಯ ಅವರ ಮುಂಬೈ ಇಂಡಿಯನ್ಸ್ ವಿರುದ್ಧದ ಕೆಕೆಆರ್ ಪಂದ್ಯದ ವೇಳೆ ಮೊದಲ ಬಾರಿಗೆ ಕಾಣಿಸಿಕೊಂಡರು.

VISTARANEWS.COM


on

Mitchell Starc
Koo

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ (IPL 2024) ಪುನರಾಗಮನ ಮಾಡಲು ಸಹಾಯ ಮಾಡಿದ ಪತ್ನಿ ಅಲಿಸ್ಸಾ ಹೀಲಿ ಅವರನ್ನು ಮಿಚೆಲ್ ಸ್ಟಾರ್ಕ್ ಶ್ಲಾಘಿಸಿದ್ದಾರೆ. ಆಸ್ಟ್ರೇಲಿಯಾದ ಎಡಗೈ ವೇಗದ ಬೌಲರ್ 24.75 ಕೋಟಿ ರೂ.ಗೆ ಖರೀದಿಸಿದ ನಂತರ ಅವರ ಹೆಗಲ ಮೇಲೆ ಭಾರಿ ನಿರೀಕ್ಷೆಗಳಿದ್ದವು. ವಾಸ್ತವವಾಗಿ, ಅವರು ನಗದು ಶ್ರೀಮಂತ ಟಿ 20 ಲೀಗ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಆದಾಗ್ಯೂ, ಅವರು ತಮ್ಮ ಮೊದಲ 2 ಪಂದ್ಯಗಳಲ್ಲಿ ಒಂದೇ ಒಂದು ವಿಕೆಟ್ ಪಡೆಯದೆ 12.50 ಎಕಾನಮಿ ದರದಲ್ಲಿ 100 ರನ್​ಗಳನ್ನು ಸೋರಿಕೆ ಮಾಡಿದ ನಂತರ ಅವರು ತಮ್ಮ ಕಷ್ಟದ ಸಮಯವನ್ನು ಎದುರಿಸದಿರು. ಲೀಗ್ ಹಂತದ ಕೊನೆಯ ಹಂತದಲ್ಲಿ ಫಾರ್ಮ್​ ಕಂಡುಕೊಳ್ಳುವ ಮೂಲಕ ಟೀಕಾಕಾರರಿಗೆ ಉತ್ತರ ನೀಡಿದರು.

ಸ್ಟಾರ್ಕ್ ಅವರ ಪತ್ನಿ ಆಸ್ಟ್ರೇಲಿಯಾ ಮಹಿಳೆಯರ ತಂಡದ ವಿಕೆಟ್​ ಕೀಪರ್ ಬ್ಯಾಟರ್​ ಅಲಿಸ್ಸಾ ಹೀಲಿ ಕೂಡ ಪಂದ್ಯಗಳ ಸಮಯದಲ್ಲಿ ತಮ್ಮ ಪತಿಯನ್ನು ಹುರಿದುಂಬಿಸಲು ಆಗಮಿಸಿದ್ದರು. ಆಸ್ಟ್ರೇಲಿಯಾ ಮಹಿಳಾ ತಂಡದ ನಾಯಕಿಯೂ ಆಗಿರುವ ಹೀಲಿ, ವಾಂಖೆಡೆ ಕ್ರೀಡಾಂಗಣದಲ್ಲಿ ಹಾರ್ದಿಕ್ ಪಾಂಡ್ಯ ಅವರ ಮುಂಬೈ ಇಂಡಿಯನ್ಸ್ ವಿರುದ್ಧದ ಕೆಕೆಆರ್ ಪಂದ್ಯದ ವೇಳೆ ಮೊದಲ ಬಾರಿಗೆ ಕಾಣಿಸಿಕೊಂಡರು. ಅಂದಿನಿಂದ ಸ್ಟಾರ್ಕ್ ಹಿಂತಿರುಗಿ ನೋಡಿಲ್ಲ. ಹೀಲಿಯ ಉಪಸ್ಥಿತಿಯು ತನ್ನ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಸ್ಟಾರ್ಕ್ ಹೇಳಿದರು.

“ಅಲಿಸ್ಸಾ ಬಂದ ನಂತರ ಎಲ್ಲವೂ ಉತ್ತಮವಾಗಿ ಸಾಗಿದೆ ” ಎಂದು ಸ್ಟಾರ್ಕ್ ಸ್ಟಾರ್ ಸ್ಪೋರ್ಟ್ಸ್​ಗೆ ತಿಳಿಸಿದ್ದಾರೆ.

ಸ್ಟಾರ್ಕ್ ಅತ್ಯುತ್ತಮ ಪ್ರದರ್ಶನ

ಪ್ಲೇಆಫ್ ಮತ್ತು ಫೈನಲ್​ನಲ್ಲಿ ಸ್ಟಾರ್ಕ್ ತಮ್ಮನ್ನು ತಾವು ಅತ್ಯುತ್ತಮ ಆಟಗಾರ ಎಂಬುದನ್ನು ಸಾಬೀತು ಮಾಡಿದರು. ಅಹಮದಾಬಾದ್​​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಎಸ್​ಆರ್​ಎಚ್​​ ವಿರುದ್ಧದ ಕ್ವಾಲಿಫೈಯರ್ 1 ರಲ್ಲಿ, ನೈಟ್ ರೈಡರ್ಸ್ 8 ವಿಕೆಟ್​ಗಳಿಂದ ಗೆದ್ದ ನಂತರ ಸ್ಟಾರ್ಕ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು. ಸ್ಟಾರ್ಕ್ ಟ್ರಾವಿಸ್ ಹೆಡ್ ಅವರನ್ನು ಬೌಲ್ಡ್ ಮಾಡಿ ಮಿಂಚಿದ್ದರು. ಅ ಪಂದ್ಯದಲ್ಲಿ 4 ಓವರ್​ಗಳಲ್ಲಿ 34 ರನ್ ಬಿಟ್ಟುಕೊಟ್ಟು 3 ವಿಕೆಟ್​ ಪಡೆದುಕೊಂಡಿದ್ದರು.

ಇದನ್ನೂ ಓದಿ: Mitchell Strac : ಐಪಿಎಲ್ ಯಶಸ್ಸಿನ ಶ್ರೇಯಸ್ಸನ್ನು ಪತ್ನಿಗೆ ಅರ್ಪಿಸಿದ ಸ್ಟಾರ್ಕ್​; ಅವರ ಪತ್ನಿಯೂ ಕ್ರಿಕೆಟರ್​ 

ಫೈನಲ್​ನಲ್ಲಿ ಸ್ಟಾರ್ಕ್ ತಮ್ಮ ಫಾರ್ಮ್ ಅನ್ನು ಮುಂದುವರಿಸಿದರು. ಮತ್ತೆ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದರು. ಈ ಬಾರಿ, ಅವರು 3-0-14-2 ರ ಅತ್ಯುತ್ತಮ ಸ್ಪೆಲ್ ಎಸೆದರು, ನೈಟ್ ರೈಡರ್ಸ್ ಫೈನಲ್​ನಲ್ಲಿ 8 ವಿಕೆಟ್​ಗಳಿಂದ ಗೆದ್ದು ಮೂರನೇ ಬಾರಿಗೆ ಟ್ರೋಫಿಯನ್ನು ಎತ್ತಿಹಿಡಿದಿತು. 14 ಪಂದ್ಯಗಳನ್ನಾಡಿರುವ 34ರ ಹರೆಯದ ಸ್ಟಾರ್ಕ್ 10.61ರ ಎಕಾನಮಿ ರೇಟ್ನಲ್ಲಿ 17 ವಿಕೆಟ್​​ ಕಬಳಿಸಿದ್ದಾರೆ.

Continue Reading
Advertisement
Porsche Crash
ದೇಶ12 mins ago

Porsche Crash: ಕಾರು ಅಪಘಾತ; ದುಡ್ಡಿಗಾಗಿ ರಕ್ತದ ಮಾದರಿಯನ್ನು ಡಸ್ಟ್‌ಬಿನ್‌ಗೆ ಎಸೆದ ಗುಮಾಸ್ತನ ಬಂಧನ!

Prajwal Revanna Case
ಪ್ರಮುಖ ಸುದ್ದಿ33 mins ago

Prajwal Revanna Case: ಪ್ರಜ್ವಲ್‌ ಪ್ರತ್ಯಕ್ಷವಾದ ಬೆನ್ನಲ್ಲೇ ನಿರೀಕ್ಷಣಾ ಜಾಮೀನಿಗೆ ಭವಾನಿ ರೇವಣ್ಣ ಅರ್ಜಿ

Hemchand Manjhi
ದೇಶ50 mins ago

Hemchand Manjhi: ಕಳೆದ ತಿಂಗಳು ಪಡೆದಿದ್ದ ಪದ್ಮಶ್ರೀ ಪ್ರಶಸ್ತಿ ವಾಪಸ್‌ ನೀಡಿದ ಹೇಮಚಂದ್‌ ಮಾಂಝಿ; ಏಕೆ?

Prajwal Revanna Case
ಕರ್ನಾಟಕ1 hour ago

Prajwal Revanna Case: ವಿಚಾರಣೆಗೆ ಬರುವ ಪ್ರಜ್ವಲ್‌ ನಿರ್ಧಾರ ಸ್ವಾಗತಿಸುವೆ ಎಂದ ಸಚಿವ ಪರಮೇಶ್ವರ್‌

Rahul Gandhi
ದೇಶ1 hour ago

Rahul Gandhi: ರಾಹುಲ್‌ ಗಾಂಧಿ ಜಿಂದಾಬಾದ್‌ ಎನ್ನುತ್ತಲೇ ಕುಸಿದ ವೇದಿಕೆ; ತಬ್ಬಿಬ್ಬಾದ ಕಾಂಗ್ರೆಸ್‌ ನಾಯಕ, ವಿಡಿಯೊ ಇಲ್ಲಿದೆ

Karnataka Weather Forecast
ಮಳೆ2 hours ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

HairStyle Craze
ಫ್ಯಾಷನ್2 hours ago

Hairstyle Craze: ಸೋಷಿಯಲ್‌ ಮೀಡಿಯಾದಲ್ಲಿ ರಂಗೇರಿದ ಹೇರ್‌ ಸ್ಟೈಲ್ಸ್

Lok Sabha Election 2024
ಕರ್ನಾಟಕ2 hours ago

Lok Sabha Election 2024: ಲೋಕಸಭೆ ಚುನಾವಣೆ ಮತ ಎಣಿಕೆ; ಜೂ. 4ರಂದು ಬೆಂಗಳೂರಿನಲ್ಲಿ ನಿಷೇಧಾಜ್ಞೆ

Prajwal Revanna Video
ಕರ್ನಾಟಕ2 hours ago

Prajwal Revanna Video: ಪ್ರಜ್ವಲ್‌ ಪ್ರತ್ಯಕ್ಷನಾಗಿದ್ದಕ್ಕೆ ಸಮಾಧಾನ ಆಯ್ತು ಎಂದ ಎಚ್‌ಡಿಕೆ; ಫಸ್ಟ್‌ ರಿಯಾಕ್ಷನ್‌ ಹೀಗಿದೆ

Mouthwashes
ಆರೋಗ್ಯ2 hours ago

Mouthwashes: ಬಾಯಿಯ ಎಲ್ಲ ಸಮಸ್ಯೆಗಳಿಗೂ ಮೌತ್‌ವಾಷ್‌ ಪರಿಹಾರವೆ? ಇದರ ಇತಿಮಿತಿ ಬಗ್ಗೆಯೂ ತಿಳಿದಿರಲಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ2 hours ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 day ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 day ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ5 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ6 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು6 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು6 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ1 week ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಟ್ರೆಂಡಿಂಗ್‌