Bangalore Kambala : ಕ್ರಿಕೆಟ್‌ಗಿಂತಲೂ ಮೊದಲೇ ಶುರುವಾಗಿತ್ತು DAY and NIGHT ಕಂಬಳ! - Vistara News

ಉಡುಪಿ

Bangalore Kambala : ಕ್ರಿಕೆಟ್‌ಗಿಂತಲೂ ಮೊದಲೇ ಶುರುವಾಗಿತ್ತು DAY and NIGHT ಕಂಬಳ!

Bangalore Kambala : ಕ್ರಿಕೆಟ್‌ ಜಗತ್ತಿನಲ್ಲಿ ಹೊನಲು ಬೆಳಕಿನ ಪಂದ್ಯಾಟಗಳು ಶುರುವಾಗುವ ಮೊದಲೇ ಕಂಬಳದಲ್ಲಿ ಇದನ್ನು ಅಳವಡಿಸಲಾಗಿತ್ತು ಎಂದರೆ ನಂಬುತ್ತೀರಾ? ಇದಕ್ಕೆ ಕಾರಣ ಕರಾವಳಿಯ ಆಧುನಿಕ ಚಿಂತನೆ

VISTARANEWS.COM


on

Kambala in Flood light
ಹೊನಲು ಬೆಳಕಿನಲ್ಲಿ ಕಂಬಳದ ನೋಟ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಇವತ್ತು ಹಗಲು-ರಾತ್ರಿ ಪಂದ್ಯ, Day and Night match ಎಂದ ಕೂಡಲೇ ಮೊದಲು ನೆನಪಾಗುವುದು ಕ್ರಿಕೆಟ್‌ ಪಂದ್ಯಾಟ. ಆದರೆ, ಕ್ರಿಕೆಟ್‌ನಲ್ಲಿ ಹೊನಲು ಬೆಳಕಿನ ಪಂದ್ಯ (Floodlit Match) ಆರಂಭವಾಗುವ ಎಷ್ಟೋ ವರ್ಷಗಳ ಮೊದಲೇ ಕಂಬಳದಲ್ಲಿ ಹಗಲು-ರಾತ್ರಿ ಕೂಟ ಆರಂಭಗೊಂಡಿತ್ತು. ಕ್ರಿಕೆಟ್‌ನ ಹೊನಲು ಬೆಳಕಿನ ಪಂದ್ಯಾಟಗಳನ್ನು ಆಯೋಜಿಸಲು ಜಗತ್ತಿನ ದೊಡ್ಡ ರಾಷ್ಟ್ರಗಳೇ ನೂರು ಬಾರಿ ಯೋಚಿಸುತ್ತಿದ್ದ ಹೊತ್ತಿನಲ್ಲಿ ಕರಾವಳಿಯ ಸಾಮಾನ್ಯ ಹಳ್ಳಿಗಳಲ್ಲಿ ಹೊನಲು ಬೆಳಕಿನ ಕೂಟ ಶುರುವಾಗಿತ್ತು. ಅಂದರೆ, ಕ್ರಿಕೆಟ್‌ ಜಗತ್ತಿನ ಮೊದಲ ಮೊದಲ ಡೇ ಎಂಡ್‌ ನೈಟ್‌ ಮ್ಯಾಚ್‌ (Day and Night Cricket Match) ನಡೆದಿದ್ದು 1979ರಲ್ಲಿ. ಆದರೆ, ಕಂಬಳದಲ್ಲಿ ಇದು 1971ರಲ್ಲೇ ಜಾರಿಗೆ ಬಂದು ಬಳಿಕ ನಿರಂತರವಾಗಿ ನಡೆಯುತ್ತಿದೆ. ನವೆಂಬರ್‌ 25 ಮತ್ತು 26ರಂದು ನಡೆಯುವ ಬೆಂಗಳೂರು ಕಂಬಳ (Bangalore Kambala)ವೂ ಹೊನಲುಬೆಳಕಿನಲ್ಲೇ ನಡೆಯುತ್ತದೆ.

ಕರಾವಳಿಯ ಕಂಬಳಕ್ಕೆ ಅದೆಷ್ಟೋ ಶತಮಾನಗಳ ಇತಿಹಾಸವಿದೆ. ಕೃಷಿ ಬದುಕಿನೊಂದಿಗೆ ಬೆಸೆದುಕೊಂಡ ಧಾರ್ಮಿಕ ಆಚರಣೆಯಾಗಿರುವುದರಿಂದ ಕೃಷಿಯಷ್ಟೇ ಇತಿಹಾಸವನ್ನು ಇದಕ್ಕೂ ಅನ್ವಯಿಸಬಹುದು. ಆದರೆ, ಜಾನಪದ ಸಂಪ್ರದಾಯಕ್ಕೆ ಕ್ರೀಡಾ ರೂಪ ಸಿಕ್ಕಿ ಅದು ಈಗ ಜಗತ್ತನ್ನು ಸೆಳೆಯಲು ಕಾರಣವಾದ ಆಧುನಿಕ ಕಂಬಳದ ಸ್ವರೂಪ ಪಡೆದದ್ದು 1969ರಲ್ಲಿ. ಅಂದರೆ, ಮೊದಲ ಆಧುನಿಕ ಕಂಬಳ ಆರಂಭವಾಗಿದ್ದು 1969ರಲ್ಲಿ. ಕರಾವಳಿಯಲ್ಲಿ ಗದ್ದೆಗಳಲ್ಲಿ ಕೋಣ ಓಡಿಸುವ ನೂರಾರು ಕಂಬಳಗಳು ನಡೆಯುತ್ತವೆ. ಆದರೆ, ಕಂಬಳಕ್ಕಾಗಿಯೇ ಕರೆ ಮತ್ತು ಸ್ಟೇಡಿಯಂಗಳನ್ನು ನಿರ್ಮಿಸಿ ನಡೆಯುತ್ತಿರುವ ಕಂಬಳಗಳ ಸಂಖ್ಯೆ ಸುಮಾರು 28. ಇವುಗಳನ್ನು ಆಧುನಿಕ ಕಂಬಳಗಳು ಅನ್ನುತ್ತಾರೆ. ಇಲ್ಲಿ ತಂತ್ರಜ್ಞಾನ, ಕ್ರೀಡೆಯ ಎಲ್ಲ ನಿಯಮಗಳ ಬಳಕೆ, ಸೆಕೆಂಡಿನಷ್ಟು ನೂರನೇ ಒಂದು ಭಾಗದಷ್ಟು ಕರಾರುವಕ್ಕಾದ ಫಲಿತಾಂಶ ವಿಶ್ಲೇಷಣೆ, ಥರ್ಡ್‌ ಅಂಪಾಯರ್‌ ಸೇರಿದಂತೆ ಎಲ್ಲ ವ್ಯವಸ್ಥೆಗಳು ಇರುತ್ತವೆ.

Kambala in Flood light

ಬಜಗೋಳಿ ಕಂಬಳ ಇತಿಹಾಸದ ಮೊದಲ ಆಧುನಿಕ ಕಂಬಳ

ಕೇವಲ ಗದ್ದೆಗಳಿಗೆ ಸೀಮಿತವಾಗಿದ್ದ ಜಾನಪದ ಕ್ರೀಡೆಯನ್ನು ಮೊದಲ ಬಾರಿ ಅದಕ್ಕೆಂದೇ ನಿರ್ಮಿಸಿದ ಅವಳಿ ಕರೆಗಳಲ್ಲಿ ನಡೆಸಿದ ಕೀರ್ತಿ ಸಲ್ಲುವುದು 1969ರಲ್ಲಿ ಆರಂಭಗೊಂಡ ಬಜಗೋಳಿಯ ಲವ-ಕುಶ ಕಂಬಳಕ್ಕೆ. ಅದನ್ನು ಆರಂಭಿಸಿದ ಗುಣಪಾಲ ಜೈನ್‌ ಅವರು ಆಧುನಿಕ ಕಂಬಳದ ಪಿತಾಮಹ ಎಂಬ ಕೀರ್ತಿ ಹೊಂದಿದ್ದಾರೆ. ಮುಂದೆ ದಕ್ಷಿಣೋತ್ತರ ಕನ್ನಡದಲ್ಲಿ ಹಲವಾರು ಕರೆ ಕಂಬಳಗಳು ಹುಟ್ಟಿಕೊಂಡವು. ಕೆಲವು ಕಾಲಾಂತರದಲ್ಲಿ ಸ್ಥಗಿತಗೊಂಡವು. ಕೆಲವು ಮತ್ತೆ ಪುನರುಜ್ಜೀವನಗೊಂಡಿವೆ, ಕೆಲವು ಹೊಸದಾಗಿ ಆರಂಭಗೊಂಡಿವೆ. ಈಗ ಕಂಬಳ ಸಮಿತಿ ಆಶ್ರಯದಲ್ಲಿ ಸುಮಾರು 28 ಕಂಬಳಗಳು ನಡೆಯುತ್ತಿವೆ.

ಆಧುನಿಕ ಕಂಬಳದ ಪ್ರಯೋಗಶಾಲೆಗಳು

1969ರಲ್ಲಿ ಆರಂಭವಾದ ಬಜಗೋಳಿ ಕಂಬಳದ ಕಲ್ಪನೆಯನ್ನು ಇಟ್ಟುಕೊಂಡು 1976ರಲ್ಲಿ ಅಳದಂಗಡಿಯಲ್ಲಿ ಲಯನ್ಸ್ ಕ್ಲಬ್ ವತಿಯಿಂದ ವೀರೇಂದ್ರ-ಸುರೇಂದ್ರ ಜೋಡುಕರೆ ಕಂಬಳ ಆರಂಭವಾಯಿತು. 1976ರಲ್ಲಿ ಬೋಳಂತೂರು ಮತ್ತು 1970ರಲ್ಲಿ ಮಿಜಾರು ಗುತ್ತು ಆನಂದ ಆಳ್ವರ ನೇತೃತ್ವದಲ್ಲಿ ಮಿಜಾರು ಕಂಬಳ ಶುರುವಾದವು. ಇವು ನಾಲ್ಕು ಆಧುನಿಕ ಕಂಬಳ ಲೋಕದ ಆಧಾರ ಸ್ತಂಭಗಳು. ಹಲವು ಪ್ರಯೋಗಗಳ ಲ್ಯಾಬೊರೇಟರಿಗಳು.
ಕಂಬಳ ಕರೆ ನಿರ್ಮಾಣ, ಕರೆಗಳ ಉದ್ದದ ಸ್ಪಷ್ಟ ಲೆಕ್ಕಾಚಾರ, ಕೋಣಗಳ ಹಿರಿಯ-ಕಿರಿಯ ವಿಭಾಗೀಕರಣ, ಹಗ್ಗ, ನೇಗಿಲು, ಹಲಗೆ, ಕನೆಹಲಗೆ ಓಟಗಳ ವಿಭಜನೆ, ಆರೂವರೆ, ಏಳುವರೆ ಕೋಲು ನಿಶಾನೆಗೆ ನೀರು ಹಾಕುವ ಸಂಭ್ರಮಗಳೆಲ್ಲವೂ ಹೊಸ ದಿಕ್ಕು ಪಡೆದದ್ದು ಇಲ್ಲಿಂದಲೇ.

Kambala Scene from Coastal

ಮೊದಲು ಕಂಬಳಕ್ಕೆ ಟಿಕೆಟ್‌ ಕೊಟ್ಟೇ ಹೋಗಬೇಕಾಗಿತ್ತು!

ನಿಜವೆಂದರೆ, ಆಧುನಿಕ ಕಂಬಳದ ಆರಂಭಿಕ ವರ್ಷಗಳಲ್ಲಿ ಕಂಬಳ ನೋಡಲು ಟಿಕೆಟ್‌ ಕೊಡಬೇಕಾಗಿತ್ತು. ಇಡೀ ಕಂಬಳದ ಗದ್ದೆಗೆ 360 ಡಿಗ್ರಿಯಲ್ಲೂ ಪರದೆಗಳಿಂದ ಮುಚ್ಚಿ ಆಗಮನ-ನಿರ್ಗಮನದ ಗೇಟುಗಳನ್ನು ಮಾತ್ರ ತೆರೆಯಲಾಗುತ್ತಿತ್ತು. ಕ್ರೀಡಾಂಗಣದ ಅಕ್ಕಪಕ್ಕದ ಮರಗಳಲ್ಲಿ ಕುಳಿತರೂ ಕಾಣದಂತೆ ಕಟ್ಟೆಚ್ಚರ ವಹಿಸಲಾಗುತ್ತಿತ್ತು.

ಕಂಬಗಳ ಕೋಣಗಳು ಓಟ ಆರಂಭಿಸಿ ಕೊನೆಯದಾಗಿ ಗುರಿ ಮುಟ್ಟುವ ಭಾಗದಲ್ಲಿರುವ ಮಂಜೊಟ್ಟಿ ಎನ್ನುವ ಎತ್ತರದ ವೇದಿಕೆಗೆ ಗರಿಷ್ಠ ದರ. ಕೋಣಗಳು ಓಡುವ ಅವಳಿ ಕರೆಗಳ ಉದ್ದಕ್ಕೂ ಮೂರ್ನಾಲ್ಕು ಹಂತಗಳಲ್ಲಿ ನಿರ್ಮಿಸಿರುವ ಗ್ಯಾಲರಿಗಳಲ್ಲಿ ಕುಳಿತುಕೊಳ್ಳಲು ಬೇರೆ ಟಿಕೆಟ್‌. ಎಲ್ಲೂ ಕುಳಿತುಕೊಳ್ಳದೆ ಓಡಾಡುತ್ತಲೇ ಕಂಬಳ ನೋಡಲು ಇನ್ನೊಂದು ಟಿಕೆಟ್‌. ಒಳಗೆ ನೂರಾರು ಹೋಟೆಲ್‌, ಅಂಗಡಿ, ಸ್ಟಾಲ್‌ಗಳು. ಸುಮಾರು 10-20 ವರ್ಷ ಈ ವ್ಯವಸ್ಥೆ ಇದ್ದದ್ದು ಬಳಿಕ ಬಯಲು ಕಂಬಳವಾಗಿ ಬದಲಾಯಿತು. ಈಗ ಕೆಲವೇ ಕಡೆಗಳಲ್ಲಿ ಮಾತ್ರ ಸ್ಟೇಡಿಯಂನ ವ್ಯವಸ್ಥೆ, ಗ್ಯಾಲರಿ ವ್ಯವಸ್ಥೆ ಇದೆ.

Gadde kambala Nota
ಇದು ಗದ್ದೆ ಕಂಬಳದ ನೋಟ

ಮೊದಲ ಹೊನಲು ಬೆಳಕಿನ ಕಂಬಳ ಹುಟ್ಟಿದ ಕಥೆಯೇ ರೋಚಕ

ಸಾಮಾನ್ಯವಾಗಿ ಆರಂಭಿಕ ವರ್ಷಗಳಲ್ಲಿ ಕಂಬಳ ಎಂದರೆ ಬೆಳಗ್ಗೆ ಆರಂಭವಾಗಿ ಸಂಜೆ ಕತ್ತಲಾಗುವುದರ ಒಳಗೆ ಮುಗಿಯುವ ಒಂದು ಪಂದ್ಯಾಟ. ಇದು ಹಗಲು-ರಾತ್ರಿಯ, ಹೊನಲು ಬೆಳಕಿನ ಕೂಟವಾಗಿ ಪರಿವರ್ತನೆಯಾಗಿದ್ದು 1971ರಲ್ಲಿ. ಈ ಸ್ಥಿತ್ಯಂತರದ ಹಿಂದೆಯೂ ಒಂದು ಕತೆ ಇದೆ.

1969ರಲ್ಲಿ ಮೊದಲ ಆಧುನಿಕ ಕಂಬಳ ಬಜಗೋಳಿಯಲ್ಲಿ ಆರಂಭವಾಗಿತ್ತು. ಸ್ಪರ್ಧೆಯ ತುರುಸು ಮೊದಲ ಬಾರಿ ಅಲ್ಲಿ ತೆರೆದುಕೊಂಡಿತ್ತು. ಮರು ವರ್ಷ ಕತ್ತಲಾಗುವುದರ ಒಳಗೆ ಓಟ ಮುಗಿಸುವ ಪ್ಲ್ಯಾನ್‌ ಸಕ್ಸಸ್‌ ಆಗಲಿಲ್ಲ. ನಿಗದಿಯಂತೆ ಫೈನಲ್‌ ಸಮಯದ ಒಳಗೆ ನಡೆದರೂ ಅಲ್ಲೊಂದು ಅಚ್ಚರಿ ನಡೆಯಿತು. ಫೈನಲ್‌ನಲ್ಲಿ ಕಂಕನಾಡಿ ಜೆ. ರಾಮಪ್ಪ ಮತ್ತು ಎಣ್ಮೂರು ಆದಪ್ಪ ಗೌಡರ ಕೋಣಗಳ ನಡುವಿನ ಓಟದಲ್ಲಿ ಸಮ-ಸಮ ಫಲಿತಾಂಶ ಬಂತು. ಮತ್ತೊಮ್ಮೆ ಓಡಿಸೋಣವೆಂದರೆ ಕತ್ತಲಾಗಿ ಹೋಗಿತ್ತು. ಬಹುಮಾನವನ್ನು ಇಬ್ಬರಿಗೂ ಹಂಚಲಾಯಿತು.

ಹಾಗಾಗಿ ಮುಂದಿನ ವರ್ಷದಿಂದಲೇ ಅಂದರೆ 1971ರಿಂದಲೇ ಹೊನಲು ಬೆಳಕಿನ ವ್ಯವಸ್ಥೆ ಬಂತು. ಸುಮಾರು 10ಕ್ಕೂ ಅಧಿಕ ಎಕರೆ ಪ್ರದೇಶಕ್ಕೆ ವಿದ್ಯುದ್ದೀಪದ ಅಳವಡಿಕೆ, ಕರೆಗಳಿಗೆ ಅನ್ವಯವಾಗುವಂತೆ ಪ್ರಖರ ಬೆಳಕಿನ ವ್ಯವಸ್ಥೆಯನ್ನು ಆ ಕಾಲದಲ್ಲೇ ಸುಸಜ್ಜಿತವಾಗಿ ನಡೆಸಲಾಗಿತ್ತು.

ಈಗ ರಾತ್ರಿ ಕಂಬಳವೇ ಆಕರ್ಷಕ

ಹೊನಲು ಬೆಳಕಿನ ಕಂಬಳವಾಗಿ ನಡೆದ ಪರಿವರ್ತನೆ ಕಂಬಳಕ್ಕೆ ಹೊಸ ಆಕರ್ಷಣೆಯನ್ನು ಹುಟ್ಟಿಸಿತು. ದೀಪದ ಬೆಳಕಿನಲ್ಲಿ ಕೋಣಗಳ ಓಟ, ಕನಹಲಗೆ ಮೂಲಕ ನೀರು ಎತ್ತರಕ್ಕೆ ಚಿಮ್ಮುವುದನ್ನು ಬೆಳಕಿನಲ್ಲಿ ನೋಡಿದರೆ ಅದರ ಸೊಗಸೇ ಬೇರೆ. ಹೀಗಾಗಿ ಈಗ ನಡೆಯುತ್ತಿರುವ ಆಧುನಿಕ ಕಂಬಳಗಳಲ್ಲಿ ರಾತ್ರಿಯ ಆಕರ್ಷಣೆಯೇ ಹೆಚ್ಚು. ಈ ಹೊತ್ತಿನಲ್ಲಿ ಲಕ್ಷಾಂತರ ಕಂಬಳ ಅಭಿಮಾನಿಗಳು ಅಲ್ಲಿ ನೆರೆಯುತ್ತಾರೆ. ಮಧ್ಯರಾತ್ರಿ ಬಳಿಕದ ಯಾವುದೋ ಜಾವದಲ್ಲಿ ಕೇಳುವ ಅಲೆ ಬುಡಿಯೆರ್‌ ಎಂಬ ಸದ್ದೇ ರೋಮಾಂಚನ ಮೂಡಿಸುತ್ತದೆ.

ರಾತ್ರಿ ಕಂಬಳ ಹೇಗಿರುತ್ತದೆ? ಈ ವಿಡಿಯೊ ನೋಡಿ.. ಕೃಪೆ: ನಮ್ಮ ಕಂಬಳ

ಕ್ರಿಕೆಟ್‌ಗಿಂತಲೂ ಮೊದಲೇ ಡೇ ಎಂಡ್‌ ನೈಟ್ ಪ್ರಯೋಗ‌

ಈ ಡೇ ಎಂಡ್‌ ನೈಟ್‌ ಪ್ರಯೋಗ ಕ್ರಿಕೆಟ್‌ಗಿಂತಲೂ ಮೊದಲೇ ನಡೆದಿರುವುದು ಕರಾವಳಿ ಭಾಗದ ಜನರ ಆಧುನಿಕ ಚಿಂತನೆಯ ಸೂಚಕವೂ ಹೌದು.

ಕ್ರಿಕೆಟ್‌ ಇತಿಹಾಸದಲ್ಲಿ ಮೊದಲ ಡೇ ಎಂಡ್‌ ನೈಟ್‌ ಮ್ಯಾಚ್‌ ನಡೆದಿದ್ದು 1979ರ ನವೆಂಬರ್‌ 27ರಂದು. ಆಸ್ಟ್ರೇಲಿಯಾ ಮತ್ತು ವೆಸ್ಟ್‌ ಇಂಡೀಸ್‌ ತಂಡಗಳ ನಡುವೆ ಆಸ್ಟ್ರೇಲಿಯಾ ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆದಿದೆ (ಇದರಲ್ಲಿ ಆಸ್ಟ್ರೇಲಿಯಾ ಗೆದ್ದಿತ್ತು). ಭಾರತದಲ್ಲಿ ಮೊದಲ ಹೊನಲು ಬೆಳಕಿನ ಕಂಬಳ ನಡೆದಿರುವುದು 1984ರಲ್ಲಿ. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ದಿಲ್ಲಿಯ ಜವಾಹರಲಾಲ್‌ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಜಯ ಸಾಧಿಸಿತ್ತು.

ಇದನ್ನೂ ಓದಿ: Bangalore kambala : ಪುನೀತ್‌ ನೆನಪಿನಲ್ಲಿ ಬೆಂಗಳೂರು ಕಂಬಳ, ಕರೆಗಳ ಹೆಸರೇನು?

ಏಕದಿನ ಕ್ರಿಕೆಟ್‌ನ ಬಳಿಕ ಟೆಸ್ಟ್‌ ಕ್ರಿಕೆಟ್‌ ಹೊನಲು ಬೆಳಕಿಗೆ ಹೊರಳಲು 36 ವರ್ಷಗಳೇ ಬೇಕಾದವು. ಈ ಬಾರಿಯೂ ಈ ರಿಸ್ಕ್‌ ತೆಗೆದುಕೊಂಡದ್ದು ಆಸ್ಟ್ರೇಲಿಯಾವೇ. 2015ರ (ಕೇವಲ ಎಂಟು ವರ್ಷದ ಹಿಂದೆ) ನವೆಂಬರ್‌ 27ರಂದು ಕ್ರಿಕೆಟ್‌ ಜಗತ್ತಿನ ಮೊದಲ ಹೊನಲು ಬೆಳಕಿನ ಟೆಸ್ಟ್‌ ಪಂದ್ಯ ನಡೆಯಿತು (1979ರಲ್ಲೂ ನವೆಂಬರ್‌ 27ಕ್ಕೇ ಏಕದಿನ ಕ್ರಿಕೆಟ್‌ನ ಮೊದಲ ಹೊನಲು ಬೆಳಕಿನ ಪಂದ್ಯ ನಡೆದಿತ್ತು).

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Drowned In water : ಕೆರೆಯಲ್ಲಿ ಈಜಲು ಹೋದ ಬಾಲಕರು ನೀರುಪಾಲು

Drowned In water : ಬಾಗಲಕೋಟೆಯಲ್ಲಿ ಬಾಲಕರಿಬ್ಬರು ಕೆರೆಯಲ್ಲಿ ಈಜಲು ಹೋಗಿ ನೀರುಪಾಲಾಗಿರುವ ದುರ್ಘಟನೆ ನಡೆದಿದೆ. ಉಡುಪಿಯಲ್ಲಿ ಟಿಪ್ಪರ್‌ಗೆ ಸ್ಕೂಟರ್‌ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ (Road Accident) ಮೃತಪಟ್ಟಿದ್ದಾರೆ.

VISTARANEWS.COM


on

By

Drowned in water
Koo

ಬಾಗಲಕೋಟೆ: ಸೋಮವಾರ ಬೆಳಗ್ಗೆ ಈಜಲು ಕೆರೆಗೆ (Drowned In water) ಇಳಿದ ಬಾಲಕರಿಬ್ಬರು ಹೆಣವಾಗಿ ವಾಪಸ್‌ ಆಗಿದ್ದಾರೆ. ಬಾಗಲಕೋಟೆಯ ಬನಹಟ್ಟಿ ಕೆರೆಯಲ್ಲಿ ದುರ್ಘಟನೆ ನಡೆದಿದೆ. ಸಂಜಯ್ ಲಕ್ಷ್ಮಣ ತಳವಾರ್ (12), ಸಮರ್ಥ ಸದಾಶಿವ ತಳವಾರ್ (10) ಮೃತ ದುರ್ದೈವಿಗಳು.

ಸಂಜಯ್‌ ಹಾಗೂ ಸಮರ್ಥ ಈಜಲು ಕೆರೆ ಬಳಿ ಹೋಗಿದ್ದಾರೆ. ಈ ವೇಳೆ ಸಮರ್ಥ್‌ ನೀರಿನಿಂದ ಹೊರಬರಲು ಆಗದೆ ಪರದಾಡಿದ್ದಾನೆ. ಇದನ್ನು ಗಮನಿಸಿದ ಸಂಜಯ್‌ ಮುಳುಗುತ್ತಿದ್ದ ಸಮರ್ಥ್‌ನನ್ನು ಹಿಡಿಯಲು ಹೋಗಿದ್ದಾನೆ. ಆದರೆ ಇಬ್ಬರು ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳಕ್ಕೆ ಬನಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರ ಸಹಾಯದಿಂದ ಪೊಲೀಸರು ಮೃತದೇಹಗಳನ್ನು ಹೊರಕ್ಕೆ ತೆಗೆದಿದ್ದಾರೆ. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Lok Sabha Election 2024: ಇಂಡಿಗನತ್ತ ಮತಗಟ್ಟೆ ಧ್ವಂಸ ಪ್ರಕರಣ; ಬಂಧಿತರಾಗಿದ್ದ 46 ಮಂದಿಗೆ ಜಾಮೀನು

Drowned in water.. road Accident

ಉಡುಪಿಯಲ್ಲಿ ಟಿಪ್ಪರ್‌ಗೆ ಸ್ಕೂಟರ್‌ ಡಿಕ್ಕಿ; ಸವಾರ ಸಾವು

ಉಡುಪಿಯ ಕಾರ್ಕಳ ಸಮೀಪದ ಬಳ್ಳಿ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಕಮಲ್ (32) ಮೃತ ದುರ್ದೈವಿ. ಟಿಪ್ಪರ್‌ಗೆ ಸ್ಕೂಟರ್‌ ಡಿಕ್ಕಿ ಹೊಡೆದ ಪರಿಣಾಮ ಕಮಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊರ್ವ ಸ್ಕೂಟರ್ ಸವಾರ ಪ್ರಸನ್ನ ಎಂಬಾತ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ನೈಸ್ ರಸ್ತೆಯಲ್ಲಿ ಹಿಟ್ ಆ್ಯಂಡ್ ರನ್‌ಗೆ ಸವಾರ ಸಾವು

ಬೆಂಗಳೂರಿನ ನೈಸ್‌ ರಸ್ತೆಯಲ್ಲಿ ಹಿಟ್ ಆ್ಯಂಡ್ ರನ್‌ಗೆ ಬೈಕ್‌ ಸವಾರ ಮೃತಪಟ್ಟಿದ್ದಾನೆ. ವಿನಾಯಕ ಎಸ್ ಪಲ್ಲೆದ್ (20) ಮೃತ ದುರ್ದೈವಿ. ಹಿಂಬದಿ ಸವಾರ ಗಿರೀಶ್ (22) ಎಂಬಾತ ಗಂಭೀರ ಗಾಯಗೊಂಡಿದ್ದಾರೆ. ನೈಸ್ ರಸ್ತೆಯ ಮಂಗನಹಳ್ಳಿಯ ಗೊಲ್ಲರಹಟ್ಟಿಯಲ್ಲಿ ಘಟನೆ ನಡೆದಿದೆ. ಜ್ಞಾನಭಾರತಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather : ವರ್ಷಾಘಾತಕ್ಕೆ ಜನ ಸುಸ್ತು; ಮಳೆಯಾಟಕ್ಕೆ ಬಿರುಗಾಳಿ ಸಾಥ್‌

Bengaluru Rain : ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಗುಡುಗು ಸಹಿತ ಬಿರುಗಾಳಿ ಮಳೆಯಾಗುವ (Heavy Rain alert) ನಿರೀಕ್ಷೆ ಇದೆ. ಜತೆಗೆ ಬಿಸಿಲಿನಿಂದ ತತ್ತರಿಸಿದ್ದ ಒಳನಾಡಿನಲ್ಲಿ ಗರಿಷ್ಠ ತಾಪಮಾನವು ಇಳಿಕೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka weather Forecast) ನೀಡಿದೆ.

VISTARANEWS.COM


on

By

Karnataka Weather Forecast
Koo

ಬೆಂಗಳೂರು: ಮುಂದಿನ 5 ದಿನಗಳು ರಾಜ್ಯದ ಒಳನಾಡು ಭಾಗದಲ್ಲಿ ಗರಿಷ್ಠ ತಾಪಮಾನವು 2-4 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗುವ ಸಾಧ್ಯತೆ ಇದೆ. ಇದರಿಂದಾಗಿ ಬೇಸಿಗೆಯಿಂದ ತತ್ತರಿಸಿದ್ದವರಿಗೆ ವಾತಾವರಣವು ತಂಪಾಗಿ ಇರಲಿದೆ. ಮುಂದಿನ 24 ಗಂಟೆಯಲ್ಲಿ ಬಿರುಗಾಳಿಯೊಂದಿಗೆ ಭಾರಿ ಮಳೆಯಾಗುವ (Rain news) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ. ಪ್ರತ್ಯೇಕ ಕಡೆಗಳಲ್ಲಿ ಗುಡುಗು, ಸಿಡಿಲು ಸಂಭವಿಸಲಿದೆ.

ರಾಜಧಾನಿ ಬೆಂಗಳೂರಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಸಾಧಾರಣ ಮಳೆಯೊಂದಿಗೆ ಗುಡುಗು ಸಹಿತ ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29 ಮತ್ತು 22 ಡಿ.ಸೆ ಇರಲಿದೆ.

ಇದನ್ನೂ ಓದಿ: Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

ಕರಾವಳಿಯಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯ ಎಚ್ಚರಿಕೆಯನ್ನು ನೀಡಲಾಗಿದೆ. ಮಲೆನಾಡಿನ ಕೊಡಗು, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಹಾಗೂ ದಕ್ಷಿಣ ಒಳನಾಡಿನ ಮೈಸೂರು, ಚಾಮರಾಜನಗರದಲ್ಲಿ ಗಾಳಿಯು ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬೀಸಲಿದ್ದು, ಭಾರೀ ಮಳೆಯೊಂದಿಗೆ ಗುಡುಗು ಇರಲಿದೆ.

ಜತೆಗೆ ಮಂಡ್ಯ, ರಾಮನಗರ, ದಾವಣಗೆರೆ ಜಿಲ್ಲೆಗಳಲ್ಲಿ ಗಾಳಿ ಸಹಿತ ಮಳೆಯಾಗಲಿದೆ. ಕರಾವಳಿಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆ ಇದೆ. ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ವಿಜಯಪುರ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ವಿಜಯನಗರ ಸೇರಿದಂತೆ ಚಿತ್ರದುರ್ಗದ ಅನೇಕ ಸ್ಥಳಗಳಲ್ಲಿ ಗುಡುಗು ಸಹಿತ ಗಾಳಿಯೊಂದಿಗೆ (40-50 kmph) ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Drown in Lake: ಮೀನು ಹಿಡಿಯಲು ಕೆರೆಗೆ ಹೋಗಿದ್ದ ಇಬ್ಬರು ನೀರು ಪಾಲು

Drown in Lake: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಶಿರ್ಲಾಲುವಿನ ಉಬ್ಬರಬೈಲಿನಲ್ಲಿ ಘಟನೆ ನಡೆದಿದೆ. ಮೀನಿಗೆ ಬಲೆ‌ ಹಾಕುವಾಗ ಆಯತಪ್ಪಿ ಕೆರೆಗೆ ಬಿದ್ದು ಇಬ್ಬರು ನೀರುಪಾಲಾಗಿದ್ದಾರೆ

VISTARANEWS.COM


on

Drowned in Lake
Koo

ಉಡುಪಿ: ಮೀನು ಹಿಡಿಯಲು ಹೋಗಿದ್ದ ಇಬ್ಬರು ನೀರು ಪಾಲಾಗಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಶಿರ್ಲಾಲುವಿನ ಉಬ್ಬರಬೈಲಿನಲ್ಲಿ ನಡೆದಿದೆ. ಮುಡ್ಡಾಯಿಗುಡ್ಡೆ ಹರೀಶ್ ಪೂಜಾರಿ (48), ಹೃತೇಶ್ ಪೂಜಾರಿ (18) ಮೃತಪಟ್ಟವರು.

ಮೀನು ಹಿಡಿಯಲೆಂದು ಉಬ್ಬರಬೈಲು ಕೆರೆಗೆ ಹೋಗಿದ್ದಾಗ ದುರ್ಘಟನೆ ನಡೆದಿದೆ. ಮೀನಿಗೆ ಬಲೆ‌ ಹಾಕುವಾಗ ಆಯತಪ್ಪಿ ಕೆರೆಗೆ ಬಿದ್ದು ಇಬ್ಬರೂ ನೀರುಪಾಲಾಗಿದ್ದಾರೆ. ಕಾರ್ಕಳ ಅಜೆಕಾರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ | Harish Poonja: ಪೊಲೀಸರಿಗೆ ಧಮ್ಕಿ; ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್‌ಐಆರ್

ಅನಾರೋಗ್ಯದಿಂದ ತಾಯಿ ಸಾವು, ಶವದ ಜತೆ 4 ದಿನ ಕಳೆದ ಬುದ್ಧಿಮಾಂದ್ಯ ಪುತ್ರಿಯೂ ಮೃತ್ಯು!

Kundapur News

ಉಡುಪಿ: ಒಂದೆಡೆ ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಮೃತಪಟ್ಟಿದ್ದರೆ, ಆ ಬಗ್ಗೆ ಅರಿವೇ ಇಲ್ಲದ ಬುದ್ಧಿಮಾಂದ್ಯ ಪುತ್ರಿಯೂ ಕೂಡ ತೀವ್ರ ಅಸ್ವಸ್ಥಗೊಂಡು ಕೊನೆಯುಸಿರೆಳೆದಿರುವ ಮನ ಕಲಕುವ ಘಟನೆ ಜಿಲ್ಲೆಯ ಕುಂದಾಪುರ (Kundapur News) ತಾಲೂಕಿನ ಮೂಡುಗೋಪಾಡಿಯ ದಾಸನಹಾಡಿಯಲ್ಲಿ ನಡೆದಿದೆ.

ತಾಯಿ ಜಯಂತಿ ಶೆಟ್ಟಿ (62), ಮಗಳು ಪ್ರಗತಿ ಶೆಟ್ಟಿ (32) ಮೃತರು. ಅನಾರೋಗ್ಯದಿಂದ ಬಳಲುತ್ತಿದ್ದ ಜಯಂತಿ ಶೆಟ್ಟಿ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ತಾಯಿಯ ಶವದ ಜತೆಗೆ 4 ದಿನ ಕಳೆದಿದ್ದ ಬುದ್ಧಿಮಾಂದ್ಯ ಪುತ್ರಿ, ತೀವ್ರ ಅಸ್ವಸ್ಥಗೊಂಡಿದ್ದಳು.

ಮನೆಯಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಪರಿಶೀಲಿಸಿದಾಗ ಮಹಿಳೆ ಮೃತಪಟ್ಟಿರುವ ವಿಷಯ ಬೆಳಕಿಗೆ ಬಂದಿದೆ. ಈ ವೇಳೆ ತೀವ್ರ ಅಸ್ವಸ್ಥಗೊಂಡಿದ್ದ ಮಗಳನ್ನು ರಕ್ಷಿಸಿದ್ದ ಕುಂದಾಪುರ ಪೊಲೀಸರು, ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಯುವತಿ ಮೃತಪಟ್ಟಿದ್ದಾಳೆ.

ಇದನ್ನೂ ಓದಿ | Viral News: ಬಾಯ್‌ಫ್ರೆಂಡ್‌ನ ಗುಪ್ತಾಂಗವನ್ನೇ ಕಟ್‌ ಮಾಡಿ ಕಸದ ಬುಟ್ಟಿಗೆ ಎಸೆದ ಮಹಿಳೆ

ಮಳೆಗೆ ತುಂಡಾಗಿ ಬಿದ್ದ ವಿದ್ಯುತ್ ತಂತಿ; ಶಾಕ್‌ನಿಂದ ವ್ಯಕ್ತಿ ಸ್ಪಾಟ್‌ ಡೆತ್‌

Electric shock in udupi

ಉಡುಪಿ: ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ (Electric shock) ಮೃತಪಟ್ಟಿದ್ದಾರೆ. ಇರ್ಷಾದ್ (56) ಮೃತ ದುರ್ದೈವಿ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರಿನಲ್ಲಿ ಘಟನೆ ನಡೆದಿದೆ.

ಮನೆಯಿಂದ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಈ ದುರಂತ ನಡೆದಿದೆ. ಶನಿವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆ (Rain News) ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ವಿದ್ಯುತ್ ತಂತಿ ನೆಲದ ಮೇಲೆ ಬಿದ್ದಿರುವುದನ್ನು ಗಮನಿಸದ ಇರ್ಷಾದ್ ತುಳಿದಿದ್ದಾರೆ. ಕ್ಷಣಾರ್ಧದಲ್ಲೇ ಇರ್ಷಾದ್‌ ಶಾಕ್‌ನಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಇದನ್ನೂ ಓದಿ: Suspicious Case : ಮೈಸೂರಿನಲ್ಲಿ ದಂಪತಿ ಅನುಮಾನಾಸ್ಪದ ಸಾವು; ಕೊಲೆಯೋ.. ಆತ್ಮಹತ್ಯೆಯೋ?

ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಮೆಸ್ಕಾಂ ಸಿಬ್ಬಂದಿ ಮತ್ತು ಬೈಂದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೈಂದೂರು ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಇನ್ನೂ ತುಂಡಾಗಿದ್ದ ವಿದ್ಯುತ್ ತಂತಿಯನ್ನು ಸರಿಪಡಿಸುವ ಕಾರ್ಯದಲ್ಲಿ ಮೆಸ್ಕಾಂ ಸಿಬ್ಬಂದಿ ತೊಡಗಿದ್ದಾರೆ.

Continue Reading

ಕರ್ನಾಟಕ

Kundapur News: ಅನಾರೋಗ್ಯದಿಂದ ತಾಯಿ ಸಾವು, ಶವದ ಜತೆ 4 ದಿನ ಕಳೆದ ಬುದ್ಧಿಮಾಂದ್ಯ ಪುತ್ರಿಯೂ ಮೃತ್ಯು!

Kundapur News: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೂಡುಗೋಪಾಡಿಯ ದಾಸನಹಾಡಿಯಲ್ಲಿ ಮನ ಕಲಕುವ ಘಟನೆ ನಡೆದಿದೆ. ತಾಯಿ ಶವದ ಜತೆ 4 ದಿನ ಕಳೆದಿದ್ದ ಬುದ್ಧಿಮಾಂದ್ಯ ಪುತ್ರಿಯೂ ಕೂಡ ತೀವ್ರ ಅಸ್ವಸ್ಥಗೊಂಡು ಕೊನೆಯುಸಿರೆಳೆದಿದ್ದಾಳೆ.

VISTARANEWS.COM


on

Kundapur News
Koo

ಉಡುಪಿ: ಒಂದೆಡೆ ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಮೃತಪಟ್ಟಿದ್ದರೆ, ಆ ಬಗ್ಗೆ ಅರಿವೇ ಇಲ್ಲದ ಬುದ್ಧಿಮಾಂದ್ಯ ಪುತ್ರಿಯೂ ಕೂಡ ತೀವ್ರ ಅಸ್ವಸ್ಥಗೊಂಡು ಕೊನೆಯುಸಿರೆಳೆದಿರುವ ಮನ ಕಲಕುವ ಘಟನೆ ಜಿಲ್ಲೆಯ ಕುಂದಾಪುರ (Kundapur News) ತಾಲೂಕಿನ ಮೂಡುಗೋಪಾಡಿಯ ದಾಸನಹಾಡಿಯಲ್ಲಿ ನಡೆದಿದೆ.

ತಾಯಿ ಜಯಂತಿ ಶೆಟ್ಟಿ (62), ಮಗಳು ಪ್ರಗತಿ ಶೆಟ್ಟಿ (32) ಮೃತರು. ಅನಾರೋಗ್ಯದಿಂದ ಬಳಲುತ್ತಿದ್ದ ಜಯಂತಿ ಶೆಟ್ಟಿ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ತಾಯಿಯ ಶವದ ಜತೆಗೆ 4 ದಿನ ಕಳೆದಿದ್ದ ಬುದ್ಧಿಮಾಂದ್ಯ ಪುತ್ರಿ, ತೀವ್ರ ಅಸ್ವಸ್ಥಗೊಂಡಿದ್ದಳು.

ಮನೆಯಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಪರಿಶೀಲಿಸಿದಾಗ ಮಹಿಳೆ ಮೃತಪಟ್ಟಿರುವ ವಿಷಯ ಬೆಳಕಿಗೆ ಬಂದಿದೆ. ಈ ವೇಳೆ ತೀವ್ರ ಅಸ್ವಸ್ಥಗೊಂಡಿದ್ದ ಮಗಳನ್ನು ರಕ್ಷಿಸಿದ್ದ ಕುಂದಾಪುರ ಪೊಲೀಸರು, ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಯುವತಿ ಮೃತಪಟ್ಟಿದ್ದಾಳೆ.

ಇದನ್ನೂ ಓದಿ | Viral News: ಬಾಯ್‌ಫ್ರೆಂಡ್‌ನ ಗುಪ್ತಾಂಗವನ್ನೇ ಕಟ್‌ ಮಾಡಿ ಕಸದ ಬುಟ್ಟಿಗೆ ಎಸೆದ ಮಹಿಳೆ

ಮಳೆಗೆ ತುಂಡಾಗಿ ಬಿದ್ದ ವಿದ್ಯುತ್ ತಂತಿ; ಶಾಕ್‌ನಿಂದ ವ್ಯಕ್ತಿ ಸ್ಪಾಟ್‌ ಡೆತ್‌

Electric shock in udupi

ಉಡುಪಿ: ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ (Electric shock) ಮೃತಪಟ್ಟಿದ್ದಾರೆ. ಇರ್ಷಾದ್ (56) ಮೃತ ದುರ್ದೈವಿ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರಿನಲ್ಲಿ ಘಟನೆ ನಡೆದಿದೆ.

ಮನೆಯಿಂದ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಈ ದುರಂತ ನಡೆದಿದೆ. ಶನಿವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆ (Rain News) ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ವಿದ್ಯುತ್ ತಂತಿ ನೆಲದ ಮೇಲೆ ಬಿದ್ದಿರುವುದನ್ನು ಗಮನಿಸದ ಇರ್ಷಾದ್ ತುಳಿದಿದ್ದಾರೆ. ಕ್ಷಣಾರ್ಧದಲ್ಲೇ ಇರ್ಷಾದ್‌ ಶಾಕ್‌ನಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಇದನ್ನೂ ಓದಿ: Suspicious Case : ಮೈಸೂರಿನಲ್ಲಿ ದಂಪತಿ ಅನುಮಾನಾಸ್ಪದ ಸಾವು; ಕೊಲೆಯೋ.. ಆತ್ಮಹತ್ಯೆಯೋ?

ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಮೆಸ್ಕಾಂ ಸಿಬ್ಬಂದಿ ಮತ್ತು ಬೈಂದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೈಂದೂರು ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಇನ್ನೂ ತುಂಡಾಗಿದ್ದ ವಿದ್ಯುತ್ ತಂತಿಯನ್ನು ಸರಿಪಡಿಸುವ ಕಾರ್ಯದಲ್ಲಿ ಮೆಸ್ಕಾಂ ಸಿಬ್ಬಂದಿ ತೊಡಗಿದ್ದಾರೆ.

Continue Reading
Advertisement
ಲಕ್ಕೂರು ಆನಂದ lakkuru Anand
ಶ್ರದ್ಧಾಂಜಲಿ7 mins ago

ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕವಿ ಲಕ್ಕೂರು ಆನಂದ ನಿಧನ, ಅನುಮಾನಾಸ್ಪದ ಸಾವು ಕೇಸು

Prajwal Revanna Case Shivarame Gowdas Deve Gowda suicide statement says Nikhil Kumaraswamy
ರಾಜಕೀಯ11 mins ago

Prajwal Revanna Case: ಶಿವರಾಮೇಗೌಡರ ದೇವೇಗೌಡ ಆತ್ಮಹತ್ಯೆ ಹೇಳಿಕೆ; ನಿಖಿಲ್‌ ಕುಮಾರಸ್ವಾಮಿ ಕೆಂಡ

murder case in Belgavi
ಬೆಳಗಾವಿ23 mins ago

Baby Death : ಮಲತಾಯಿಯ ಕ್ರೌರ್ಯಕ್ಕೆ ಬಲಿಯಾಯ್ತಾ 3 ವರ್ಷದ ಕಂದಮ್ಮ?

rave party telugu actress hema
ಕ್ರೈಂ25 mins ago

‌Rave Party: ʼರೇವ್‌ ಪಾರ್ಟಿಯಲ್ಲಿ ನಾನಿಲ್ಲʼ ಎಂದು ವಿಡಿಯೋ ಮಾಡಿದ ತೆಲುಗು ನಟಿ; ಐವರ ಬಂಧನ

Payal Rajput Accuses Rakshana Producers Of Not Clearing Her Dues
ಟಾಲಿವುಡ್36 mins ago

Payal Rajput: ನಿರ್ಮಾಪಕನ ವಿರುದ್ಧ ‘ಹೆಡ್‌ಬುಷ್’ ನಟಿಯ ಗಂಭೀರ ಆರೋಪ!

Salman Khan Ultimate Sex Symbol Says Malaika Arora
ಬಾಲಿವುಡ್40 mins ago

Salman Khan: ʻಅಲ್ಟಿಮೇಟ್ ಸೆಕ್ಸ್ ಸಿಂಬಲ್ʼ ನನ್ನ ಗಂಡ ಅಲ್ಲ, ಅದು ಸಲ್ಮಾನ್‌ ಖಾನ್‌ ಎಂದಳು ಖ್ಯಾತ ನಟಿ!

Ebrahim Raisi
ವಿದೇಶ42 mins ago

Ebrahim Raisi: ಹೆಲಿಕಾಪ್ಟರ್‌ ದುರಂತಕ್ಕೂ ಮುಂಚಿನ ಇಬ್ರಾಹಿಂ ರೈಸಿ ವಿಡಿಯೋ ವೈರಲ್‌

One year for the government Cm Siddaramaiah reveals many dreams and media interaction live
ರಾಜಕೀಯ51 mins ago

CM Siddaramaiah: ಸರ್ಕಾರಕ್ಕೆ ಒಂದು ವರ್ಷ; ಹಲವು ಕನಸು ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ! ಮಾಧ್ಯಮ ಸಂವಾದದ ಲೈವ್‌ ಇಲ್ಲಿದೆ

Drowned in water
ಬೆಂಗಳೂರು1 hour ago

Drowned In water : ಕೆರೆಯಲ್ಲಿ ಈಜಲು ಹೋದ ಬಾಲಕರು ನೀರುಪಾಲು

gold rate today sai pallavi
ಚಿನ್ನದ ದರ2 hours ago

Gold Rate Today: 22 ಕ್ಯಾರಟ್‌ ಚಿನ್ನದ ಬೆಲೆ 500 ರೂ. ಏರಿಕೆ; ಇಂದಿನ ಬಂಗಾರದ ಧಾರಣೆ ಹೀಗಿದೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ21 hours ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ22 hours ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ23 hours ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ3 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ3 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ4 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು4 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ5 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

ಟ್ರೆಂಡಿಂಗ್‌