Congress politics : ಸಿಎಂ ರೇಸ್‌ಗೆ ಸತೀಶ್‌ ಜಾರಕಿಹೊಳಿ ಎಂಟ್ರಿ; ವಾಲ್ಮೀಕಿ ಸಮಾಜದವರೇ ಸಿಎಂ ಎಂದ ಆಪ್ತ - Vistara News

ಕರ್ನಾಟಕ

Congress politics : ಸಿಎಂ ರೇಸ್‌ಗೆ ಸತೀಶ್‌ ಜಾರಕಿಹೊಳಿ ಎಂಟ್ರಿ; ವಾಲ್ಮೀಕಿ ಸಮಾಜದವರೇ ಸಿಎಂ ಎಂದ ಆಪ್ತ

Congress Politics : ಸಿಎಂ ಹುದ್ದೆಗೆ ನಾಯಕರೂ ಅರ್ಹರು ಎಂದು ಹೇಳುವ ಮೂಲಕ ಸತೀಶ್‌ ಜಾರಕಿಹೊಳಿ ಅವರ ಹೆಸರನ್ನು ಮುಂಚೂಣಿಗೆ ತರುವ ಪ್ರಯತ್ನವೊಂದು ನಡೆದಿದೆ. ಇದು ಸಿಎಂ ಗದ್ದುಗೆ ಫೈಟ್‌ನ ಒಂದು ಭಾಗ ಎನ್ನಲಾಗುತ್ತಿದೆ.

VISTARANEWS.COM


on

Siddaramaiah Venkatappa Nayaka Satish Jarakiholi
ಸಿಎಂ ಸಿದ್ದರಾಮಯ್ಯ, ರಾಜಾ ವೆಂಕಟಪ್ಪ ನಾಯಕ ಮತ್ತು ಸತೀಶ್‌ ಜಾರಕಿಹೊಳಿ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಸಿಎಂ ಗದ್ದುಗೆ ಪೈಪೋಟಿಗೆ (Chief Minister fight) ಮತ್ತೊಂದು ಸಮುದಾಯ ಎಂಟ್ರಿ ಕೊಟ್ಟಿದೆ. ದಲಿತ, ಒಕ್ಕಲಿಗ, ಲಿಂಗಾಯತ ಸಿಎಂ ಕೂಗಿನ ಬೆನ್ನಲ್ಲೇ ಈಗ ನಾಯಕ ಸಮುದಾಯದಿಂದಲೂ (Nayaka community) ಬೇಡಿಕೆ ಕೇಳಿಬಂದಿದೆ. ಈಗ ಬೇಡಿಕೆ ಮಂಡಿಸಿರುವುದು ವಾಲ್ಮೀಕಿ ಸಮುದಾಯ (Congress politics). ಅಂದರೆ ಹಿರಿಯ ನಾಯಕ ಸತೀಶ್‌ ಜಾರಕಿಹೊಳಿ (Satish Jarakiholi) ಅವರ ಪರವಾಗಿ ಈ ಬ್ಯಾಟಿಂಗ್‌ ನಡೆದಿದೆ.

ರಾಜ್ಯದಲ್ಲಿ ಎರಡೂವರೆ ವರ್ಷಗಳ ಬಳಿಕ ಸಿದ್ದರಾಮಯ್ಯ (CM Siddaramaiah) ಅವರು ಸೀಟು ಬಿಟ್ಟುಕೊಡಬೇಕಾಗುತ್ತದೆ, ಡಿ.ಕೆ. ಶಿವಕುಮಾರ್‌ (DK Shivakumar) ಅವರು ಎರಡನೇ ಭಾಗದಲ್ಲಿ ಸಿಎಂ ಆಗುತ್ತಾರೆ ಎಂದು ಅವರ ಆಪ್ತರು ಸುದ್ದಿ ಹಬ್ಬಿಸುತ್ತಿರುವ ಹಿನ್ನೆಲೆಯಲ್ಲಿ ಭಾರಿ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ.

ಈಗಾಗಲೇ ಲಿಂಗಾಯತರು ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹರು ಎಂದು ಶಾಮನೂರು ಶಿವಶಂಕರಪ್ಪ ಅವರು ಹೇಳಿದ್ದರೆ, ದಲಿತರಿಗೆ ಅವಕಾಶ ಕೊಡಿ ಎಂಬ ಬೇಡಿಕೆ ಇಟ್ಟಿದ್ದಾರೆ ಜಿ. ಪರಮೇಶ್ವರ್‌. ಅದರ ನಡುವೆ ನಾಯಕ ಸಮುದಾಯಕ್ಕೆ ಬೇಕು ಎಂದು ಕೇಳಿದ್ದು ಸತೀಶ್‌ ಜಾರಕಿಹೊಳಿ ಅವರ ಪರಮಾಪ್ತರಾಗಿರುವ ಯಾದಗಿರಿ ಜಿಲ್ಲೆಯ ಸುರಪುರ ಶಾಸಕ ರಾಜಾ ವೆಂಕಟಪಪ್ಪ ನಾಯಕ ಅವರು.

ರಾಜಾ ವೆಂಕಟಪ್ಪ ನಾಯಕ ಹೇಳಿದ್ದೇನು?

ಸುರಪುರದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯ ವೇಳೆ ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಅವರು ನಾಯಕ ಸಮುದಾಯಕ್ಕೆ ಸಿಎಂ ಗಾದಿ ಬೇಕು ಎಂಬಂತೆ ಬೇಡಿಕೆ ಇಟ್ಟಿದ್ದಾರೆ.

ಸತೀಶ್‌ ಜಾರಕಿಹೊಳಿ ಮಾತ್ರವಲ್ಲ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಆಪ್ತರಾಗಿರುವ ಅವರು, ಸರ್ಕಾರ ಚೇಂಜ್ ಮಾಡುವ ಶಕ್ತಿ ನಮ್ಮ ಸಮಾಜದ ಲೀಡರ್‌ಗಳಿಗೆ ಇದೆ ಎಂದು ಹೇಳಿದ್ದಾರೆ.

Raja venkatappa Nayaka in Valmiki jayanti programme
ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ರಾಜಾ ವೆಂಕಟಪ್ಪ ನಾಯಕ

ʻʻಸರ್ಕಾರ ಚೇಂಜ್ ಮಾಡುವ ಶಕ್ತಿ ನಮ್ಮ ಸಮಾಜದ ಲೀಡರ್‌ಗಳಿಗೆ ಇದೆ. ಆ ರಾಜಕೀಯ ಶಕ್ತಿಯನ್ನು ಗಟ್ಟಿಗೊಳಿಸುವ ಪ್ರಯತ್ನ ಮಾಡ್ತಿದ್ದೇವೆʼʼ ಎಂದು ನೆರೆದವರ ಚಪ್ಪಾಳೆಗಳ ನಡುವೆ ವೆಂಕಟಪ್ಪ ನಾಯಕ ಹೇಳಿದರು. ಹಾಗಂತ ಅವರು ಸತೀಶ್‌ ಜಾರಕಿಹೊಳಿ ಅವರ ಹೆಸರನ್ನೇನೂ ಹೇಳಿಲ್ಲ. ಆದರೆ, ಅವರು ಹೇಳಿದ್ದು ಸತೀಶ್‌ ಜಾರಕಿಹೊಳಿ ಅವರನ್ನು ದೃಷ್ಟಿಯಲ್ಲಿಟ್ಟುಕೊಂಡೇ ಎನ್ನುವುದು ಬಹುತೇಕರ ಅಭಿಪ್ರಾಯ.

ರಾಜಾ ವೆಂಕಟಪ್ಪ ನಾಯಕ ಅವರು ಆಡಿದ ಮಾತುಗಳನ್ನು ಕೇಳಿ

ರಾಜಾ ವೆಂಕಟಪ್ಪ ನಾಯಕ ಹೇಳಿಕೆಗೆ ಯಾಕೆ ಇಷ್ಟು ಮಹತ್ವ?

ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಗಾದಿಗಾಗಿ ಭಾರಿ ಹೋರಾಟವೇ ನಡೆಯುತ್ತಿದೆ. ಎರಡೂವರೆ ವರ್ಷದ ಬಳಿಕ ಸಿದ್ದರಾಮಯ್ಯ ಅವರು ಪಟ್ಟ ಬಿಟ್ಟು ಕೊಡುವ ರೀತಿಯಲ್ಲಿ ಹೈಕಮಾಂಡ್‌ನಲ್ಲಿ ಮಾತುಕತೆ ಆಗಿದೆ ಎನ್ನುವುದು ಡಿ.ಕೆ. ಶಿವಕುಮಾರ್‌ ಆಪ್ತರ ಅಭಿಪ್ರಾಯ. ಆದರೆ, ಸಿದ್ದರಾಮಯ್ಯ ಆಪ್ತರು ಮಾತ್ರ ಐದು ವರ್ಷವೂ ಸಿದ್ದರಾಮಯ್ಯ ಅವರೇ ಸಿಎಂ ಎಂದು ಬಹಿರಂಗವಾಗಿಯೇ ಹೇಳುತ್ತಿದ್ದಾರೆ.

ಹೀಗೆ ಡಿ.ಕೆ.ಶಿವಕುಮಾರ್‌ ಬಣದವರು ಮುಖ್ಯಮಂತ್ರಿ ಹುದ್ದೆಗೆ ತಮ್ಮ ಹಕ್ಕು ಮಂಡನೆ ಮಾಡಿದಾಗಲೆಲ್ಲ ಹೊಸ ಹೊಸ ವರಸೆಗಳು ಹುಟ್ಟಿಕೊಂಡಿವೆ. ಡಿ.ಕೆ. ಶಿವಕುಮಾರ್‌ ಹೊರತುಪಡಿಸಿ ಇನ್ನೂ ಮೂವರು ಡಿಸಿಎಂಗಳನ್ನು ಮಾಡಬೇಕು ಎಂಬ ಸಚಿವ ಕೆ.ಎನ್‌. ರಾಜಣ್ಣ ಅವರ ಹೇಳಿಕೆಯ ಹಿಂದೆಯೂ ಇದೇ ತಂತ್ರವಿದೆ ಎನ್ನಲಾಗಿದೆ.

ಮೂರು ದಿನದ ಹಿಂದೆ ಡಿ.ಕೆ. ಶಿವಕುಮಾರ್‌ ಆಪ್ತ ಶಾಸಕ ಮಂಡ್ಯದ ರವಿ ಗಣಿಗ ಅವರು ಡಿ.ಕೆ. ಶಿವಕುಮಾರ್‌ ಎರಡೂವರೆ ವರ್ಷದ ಬಳಿಕ ಸಿಎಂ ಆಗುತ್ತಾರೆ ಎಂಬ ಹೇಳಿಕೆಯನ್ನು ನೀಡಿದ್ದರು. ಅದೇ ದಿನ ರಾತ್ರಿ ಡಾ.ಜಿ ಪರಮೇಶ್ವರ್‌ ಅವರ ನಿವಾಸದಲ್ಲಿ ಭೋಜನ ಕೂಟ ಏರ್ಪಾಡಾಗಿತ್ತು. ಅದರಲ್ಲಿ ಸಿದ್ದರಾಮಯ್ಯ ಬಣದ ಪ್ರಮುಖ ನಾಯಕರೆಲ್ಲ ಭಾಗಿಯಾಗಿದ್ದರು. ಈ ಸಭೆಯಿಂದ ಡಾ. ಜಿ ಪರಮೇಶ್ವರ್‌ ಅವರು ತಾನೂ ಸಿಎಂ ಹುದ್ದೆ ಆಕಾಂಕ್ಷಿ ಎಂಬ ಸಂದೇಶ ಹೊರಬಿತ್ತು. ಒಂದು ವೇಳೆ ಸಿಎಂ ಬದಲಾವಣೆ ಆಗುವುದಿದ್ದರೆ ನನ್ನ ಹೆಸರೂ ಪರಿಗಣಿಸಿ ಎಂದು ಸ್ವತಃ ಪರಮೇಶ್ವರ್‌ ಅವರು ಸಿದ್ದರಾಮಯ್ಯ ಅವರ ಮುಂದೆ ಬೇಡಿಕೆ ಮಂಡಿಸಿದರು ಎಂದು ಹೇಳಲಾಗುತ್ತಿದೆ.

ಅದಾಗಿ ಎರಡೇ ದಿನದಲ್ಲಿ ನಾಯಕ ಸಮುದಾಯದಿಂದ ಮುಖ್ಯಮಂತ್ರಿ ಪಟ್ಟದ ಬೇಡಿಕೆ ಕೇಳಿಬಂದಿದೆ. ಅಂದರೆ, ಇದೆಲ್ಲವೂ ಒಂದು ವೇಳೆ ಸಿದ್ದರಾಮಯ್ಯ ಅವರನ್ನು ಬದಲಾಯಿಸುವುದಿದ್ದರೆ ತಮ್ಮನ್ನು ಪರಿಗಣಿಸಿ ಎಂಬ ಆಗ್ರಹ ರೂಪದಲ್ಲಿದೆ. ಅಂದರೆ ಒಟ್ಟಾರೆಯಾಗಿ ಸಿದ್ದರಾಮಯ್ಯ ಅವರನ್ನೇ ಉಳಿಸಿಕೊಳ್ಳಬೇಕು ಎಂಬ ಪ್ರಧಾನ ಬೇಡಿಕೆಯನ್ನು ಈ ಮೂಲಕ ಮಂಡಿಸಲಾಗುತ್ತಿದೆ. ಬದಲಾಯಿಸಲು ಪ್ರಯತ್ನಿಸಿದರೆ ತೊಂದರೆಯಾಗಬಹುದು ಎಂಬ ಸಂದೇಶದ ರವಾನೆಯಾಗಿಯೂ ಇದು ಕಾಣುತ್ತಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಂಡ್ಯ

Mandya News : ನಾಲ್ವರು ಬಾಲಕರ ಪ್ರೀತಿ-ಪ್ರೇಮದ ಅಪಪ್ರಚಾರ; ಗಾಳಿ ಸುದ್ದಿಗೆ ಬಾಲಕಿ ಆತ್ಮಹತ್ಯೆ

Mandya News : ಯುವಕರ ಹುಡುಕಾಟಕ್ಕೆ ವಿದ್ಯಾರ್ಥಿನಿಯೊಬ್ಬಳು ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಯುವಕನನ್ನು ಪ್ರೀತಿಸುತ್ತಿದ್ದಾಳೆ ಎಂದು ಗಾಳಿ ಸುದ್ದಿ ಹಬ್ಬಿಸಿದ್ದರು. ಇದರಿಂದ ಊರಿನಲ್ಲಿ ತನ್ನ ಮಾರ್ಯಾದೆ ಹೋಯ್ತು ಅಂತ ಮನನೊಂದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

VISTARANEWS.COM


on

By

Girl commits suicide after being fed up with rumours of love
Koo

ಮಂಡ್ಯ: ನಾಲ್ವರು ಯುವಕರಿಂದ ಪ್ರೀತಿ, ಪ್ರೇಮದ ಅಪಪ್ರಚಾರ ಹಾಗೂ ಕಿರುಕುಳಕ್ಕೆ ಬೇಸತ್ತ ವಿದ್ಯಾರ್ಥಿನಿ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾಳೆ. ಮಂಡ್ಯದ (Mandya News) ಹನಕೆರೆ ಗ್ರಾಮದಲ್ಲಿ ಘಟನೆ ನಡೆದಿದೆ. ಇಂಪನಾ (14) ಆತ್ಮಹತ್ಯೆ ಮಾಡಿಕೊಂಡವಳು.

ಗಗನ್, ಸಂಜಯ್ ,ಮಹೇಂದ್ರ ಹಾಗೂ ಲೋಹಿತ್ ಎಂಬ ಯುವಕರಿಂದ ಕಿರುಕುಳದ ಆರೋಪ ಕೇಳಿ ಬಂದಿದೆ. ಹನಕೆರೆ ಗ್ರಾಮದ ಗಗನ್ ಮತ್ತು ಸ್ನೇಹಿತರು ಸೇರಿ ಇಂಪನಾ- ಮಹೇಂದ್ರ ಎಂಬಾತನನ್ನು ಪ್ರೀತಿ ಮಾಡುತ್ತಿದ್ದಾಳೆ ಎಂದು ಗಾಳಿ ಸುದ್ದಿ ಹಬ್ಬಿಸಿದ್ದರು.

ಅಲ್ಲದೆ ಆಕೆ ಮಾತಾಡುವುದನ್ನು ರೆಕಾರ್ಡ್ ಮಾಡಿಕೊಂಡು ವೈರಲ್ ಮಾಡಿದ್ದರು. ಇದರಿಂದ ಬೇಸತ್ತ ಇಂಪನಾ ಮನೆಯಲ್ಲಿ ಯಾರೂ ಇಲ್ಲದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅದೇ ಗ್ರಾಮದ ಖಾಸಗಿ ಶಾಲೆಯಲ್ಲಿ ಇಂಪನಾ 9ನೇ ತರಗತಿ ಓದುತ್ತಿದ್ದಳು.

Girl commits suicide after being fed up with rumours of love
Girl commits suicide after being fed up with rumours of love

ಒಬ್ಬಳೇ ಮಗಳನ್ನು ಕಳೆದುಕೊಂಡು ಇಂಪನಾ ಹೆತ್ತವರು ಕಣ್ಣೀರು ಹಾಕುತ್ತಿದ್ದಾರೆ. ಗಗನ್ ಸೇರಿ ನಾಲ್ವರು ತನ್ನ ಮಗಳಿಗೆ ಕಿರುಕುಳ ನೀಡಿ ಆಕೆಯ ಸಾವಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ನಾಲ್ವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Actor Darshan : ಬಳ್ಳಾರಿಯಿಂದ ನಟ ದರ್ಶನ್‌ ಮತ್ತೆ ಬೆಂಗಳೂರಿಗೆ ಶಿಫ್ಟ್‌! ಪತ್ನಿ ಬಂದು ಹೋದ್ಮೆಲೆ ಫುಲ್ ಆಕ್ಟೀವ್

ಶಿವಮೊಗ್ಗದಲ್ಲಿ ರೈತ ಆತ್ಮಹತ್ಯೆ

ಸಾಲಬಾಧೆ ತಾಳಲಾರದೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಮೊಗ್ಗದ ಹೊಸನಗರ ತಾಲೂಕಿನ ನರ್ತಿಗೆ ಗ್ರಾಮದಲ್ಲಿ ಘಟನೆ ನಡೆದಿದೆ. ಎನ್.ಟಿ. ತಿಮ್ಮಪ್ಪ (52) ಆತ್ಮಹತ್ಯೆಗೆ ಶರಣಾದ ರೈತ. ತನ್ನ ತೋಟದ ಕೆಲಸಕ್ಕೆ ತೆರಳಿದ್ದ ವೇಳೆ ಕೀಟನಾಶಕ ಸೇವಿಸಿ‌ ಆತ್ಮಹತ್ಯೆಗೆ‌ ಶರಣಾಗಿದ್ದಾರೆ. ಸುಮಾರು 6 ಲಕ್ಷ 50 ಸಾವಿರ ಸಾಲ ಪಡೆದಿದ್ದರು. ಬ್ಯಾಂಕ್ ಸೇರಿದಂತೆ ವಿವಿಧ ಸಂಘ ಸಂಸ್ಥೆ ಸಾಲ ಮಾಡಿದ್ದರು. ಸಾಲ ತೀರಿಸಲಾಗದೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸಿನಿಮಾ

Actor Darshan : ಸೆಂಟ್ರಲ್‌ ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ಸಿಕ್ಕಿದ್ದು ಯಾವಾಗಿನಿಂದ ಗೊತ್ತಾ? ಬಿಸ್ಕತ್‌ ಹಾಕಿಲ್ವಾ ಸುಮ್ಮಿನಿರು ಅಂದ್ರಾ ಕರಿಯಾ!

Actor darshan : ಸೆಂಟ್ರಲ್‌ ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ಸಿಕ್ಕಿದ್ದು ಯಾವಾಗಿನಿಂದ ಗೊತ್ತಾ? ಜೈಲು ಸಿಬ್ಬಂದಿ ಬ್ಯಾರಕ್‌ಗೆ ಹೋಗಿ ಅಂದರೆ ಬಿಸ್ಕತ್‌ ಹಾಕಿಲ್ವಾ ಸುಮ್ಮಿನಿರು ಅಂದ್ದರಂತೆ.

VISTARANEWS.COM


on

By

Do you know when Darshan got royalty in Central Jail
Koo

ಬೆಂಗಳೂರು: ಸೆಂಟ್ರಲ್‌ ಜೈಲಿನಲ್ಲಿ ನಟ ದರ್ಶನ್‌ (Actor Darshan) ಫೋಟೊ ವೈರಲ್‌ ಆಗಿದ್ದೆ ತಡ ಈಗ ಒಂದೊಂದೆ ವಿಚಾರಗಳು ಹೊರಬರುತ್ತಿವೆ. ಇಷ್ಟಕ್ಕೂ ಜೈಲು ಸೇರಿದ್ದ ನಟ ದರ್ಶನ್‌ಗೆ ರಾಜಾತಿಥ್ಯ ಸಿಕ್ಕಿದ್ದು ಯಾವಾಗಿನಿಂದ ಗೊತ್ತಾ? ಜೈಲುಪಾಲಾದ ಮೂರೇ ದಿನ ಸಾಮಾನ್ಯ ಕೈದಿಯಂತಿದ್ದ ದರ್ಶನ್, ಬಳಿಕ ನಾಲ್ಕನೇ ದಿನದಿಂದ ರಾಜಾತಥ್ಯ ಸಿಗುತಿತ್ತಂತೆ. ಇನ್ನು ಜೈಲು ಸಿಬ್ಬಂದಿ ನಿಮ್ಮ ಬ್ಯಾರಕ್‌ಗೆ ತೆರಳಿ ಎಂದು ಸೂಚಿಸುತ್ತಿದ್ದರಂತೆ. ಈ ವೇಳೆ ಫಿಲ್ಮಿ ಸ್ಟೈಲ್‌ನಲ್ಲೇ ದರ್ಶನ್‌ ಆವಾಜ್ ಹಾಕಿ ‘ಬಿಸ್ಕತ್ ಹಾಕಿಲ್ವಾ’ ಸುಮ್ಮನಿರು ಅಂತಿದ್ದರಂತೆ. ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆದ ಬಳಿಕ ಒಂದೊಂದೆ ಸತ್ಯ ಹೊರಗೆ ಬರುತ್ತಿದೆ.

ಬದಲಾದ ಬೆಂಗಳೂರು ಸೆಂಟ್ರೆಲ್‌ ಜೈಲ್‌ ಚಿತ್ರಣ

ಬೆಂಗಳೂರು: ದರ್ಶನ್ ಸಿಗರೇಟ್‌ ಸೇದುವ ಫೋಟೊ ವೈರಲ್ ಆದ ಬಳಿಕ ಪರಪ್ಪನ ಅಗ್ರಹಾರ ಜೈಲಿನ ಚಿತ್ರಣವೇ ಬದಲಾಗಿದೆ. ಒಂದೆಡೆ ಜೈಲು ಸಿಬ್ಬಂದಿ ಪ್ರತಿಭಟಿಸುತ್ತಿದ್ದರೆ, ಮತ್ತೊಂದೆಡೆ ಕೈದಿಗಳಿಂದಲೂ ಧರಣಿ ನಡೆದಿದೆ ಎನ್ನಲಾಗಿದೆ. ನಮಗೆ ಬೀಡಿ, ಸಿಗರೇಟ್ ಸಿಗುತ್ತಿಲ್ಲ. ನಮ್ಗೆ ಇರೋದಕ್ಕೆ ಆಗುತ್ತಿಲ್ಲ ಎಂದು ನಿನ್ನೆ ಶನಿವಾರ ಪ್ರತಿಭಟಿಸಿದ್ದಾರೆ. ಫೋಟೊ ವೈರಲ್ ಬಳಿಕ ಜೈಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಹಾಗಾಗಿ ಬೀಡಿ, ಸಿಗರೇಟ್ ಸಂಪೂರ್ಣ ಬಂದ್ ಆಗಿದೆ.

ಇದನ್ನೂ ಓದಿ: Police Firing: ಪೊಲೀಸರ ಮೇಲೆ ಚಾಕುಯಿಂದ ದಾಳಿ ಮಾಡಿದ ದರೋಡೆಕೋರ; ಆರೋಪಿ ಕಾಲಿಗೆ ಫೈರಿಂಗ್‌ ಮಾಡಿದ ಖಾಕಿ

ಹಿಂಡಲಗಾ ಜೈಲಿನಲ್ಲಿ ಸಿಗರೇಟ್‌ಗಾಗಿ ಕೈದಿಗಳಿಂದಲ್ಲೂ ಡಿಮ್ಯಾಂಡ್‌

ಬೆಂಗಳೂರು ಜೈಲಲ್ಲಿ ದರ್ಶನ್ ಸಿಗರೇಟ್ ಸೇದಿದ ಎಫೆಕ್ಟ್ ಇತರ ಕೈದಿಗಳಿಂದಲೂ ಡಿಮ್ಯಾಂಡ್ ಬಂದಿದೆ. ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಕೈದಿಗಳ ವಿಶೇಷ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ ನಡೆದಿದೆ. ಬೀಡಿ, ಸಿಗರೇಟ್, ತಂಬಾಕು ಕೊಡುವವರಗೆ ನಾವು ತಿಂಡಿ ತಿನ್ನಲ್ಲ ಎನ್ನುತ್ತಿದ್ದಂತೆ. ಬೆಳಗಿನ ಉಪಹಾರ ಮಾಡದೆ ಪ್ರೊಟ್ಟೆಸ್ಟ್‌ ಮಾಡುತ್ತಿದ್ದರಂತೆ. ಇದೀಗ ಈ ಬೇಡಿಕೆ ಜೈಲಧಿಕಾರಿಗಳಿಗೆ ತಲೆ ನೋವಾಗಿದೆ. ಸದ್ಯ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ಜೈಲಾಧಿಕಾರಿಗಳು ಇದ್ದಾರೆ. ಬೀಡಿ ಸಿಗರೇಟ್ ನೀಡದಿದ್ದರೆ ಮಧ್ಯಾಹ್ನ ಊಟವನ್ನೂ ಮಾಡಲ್ಲ ಎಂದು ಬೆದರಿಕೆ ಹಾಕುತ್ತಿದ್ದರಂತೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬಳ್ಳಾರಿ

Actor Darshan : ಬಳ್ಳಾರಿಯಿಂದ ನಟ ದರ್ಶನ್‌ ಮತ್ತೆ ಬೆಂಗಳೂರಿಗೆ ಶಿಫ್ಟ್‌! ಪತ್ನಿ ಬಂದು ಹೋದ್ಮೆಲೆ ಫುಲ್ ಆಕ್ಟೀವ್

Actor Darshan : ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಪಡೆದು ಬಳ್ಳಾರಿ ಜೈಲು ಪಾಲಾಗಿರುವ ನಟ ದರ್ಶನ್‌ಗೆ ಅಲ್ಲಿನ ವ್ಯವಸ್ಥೆ ಸರಿ ಹೋಗುತ್ತಿಲ್ವಾಂತೆ. ಹೀಗಾಗಿ ಆರೋಗ್ಯದ ನೆಪವೊಡ್ಡಿ ಬಳ್ಳಾರಿಯಿಂದ ಮತ್ತೆ ಬೆಂಗಳೂರಿಗೆ ಶಿಫ್ಟ್‌ ಆಗಲು ಯೋಚಿಸುತ್ತಿದ್ದರಂತೆ.

VISTARANEWS.COM


on

By

Actor Darshan shifted back to Bengaluru from Ballari
Koo

ಬಳ್ಳಾರಿ/ಬೆಂಗಳೂರು: ನಟ ದರ್ಶನ್‌ ಬಳ್ಳಾರಿಯಿಂದ ಮತ್ತೆ ಬೆಂಗಳೂರು ಜೈಲಿಗೆ (Actor Darshan) ಶಿಫ್ಟ್ ಆಗ್ತಾರಾ ಇಂತಹದೊಂದು ಸುದ್ದಿ ಹರಿದಾಡುತ್ತಿದೆ. ದರ್ಶನ್‌ಗೆ ಬಳ್ಳಾರಿಯಲ್ಲಿ ‌ನಿಜ ಜೈಲಿನ ದರ್ಶನವಾಗುತ್ತಿದೆ. ಪರಪ್ಪನ ಅಗ್ರಹಾರದಲ್ಲಿ ಆರಾಮಾಗಿದ್ದ ದರ್ಶನ್‌ಗೆ ಬಳ್ಳಾರಿಯಲ್ಲಿ ಇರಲಾಗುತ್ತಿಲ್ವಂತೆ. ನಿನ್ನೆ ಪತ್ನಿ ಭೇಟಿಯ ವೇಳೆ ಬಳ್ಳಾರಿ ಜೈಲಿನ ಸಂಕಷ್ಟ ಹೇಳಿಕೊಂಡರಂತೆ. ಬೆನ್ನು ನೋವು, ಕೈ ನೋವು ಇರುವುದರಿಂದ ಇಂಡಿಯನ್ ಟಾಯ್ಲೆಟ್ ಸಮಸ್ಯೆ ಆಗುತ್ತಿದೆ. ಒಂದು ಕಡೆಗೆ ನೋವು, ಜೈಲ್‌ನ ವ್ಯವಸ್ಥೆ ನನಗೆ ಸರಿ ಹೋಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.

ಆರೋಗ್ಯ, ತಾಂತ್ರಿಕ ತೊಂದರೆ ನೆಪವೊಡ್ಡಿ ವಕೀಲರ ಮೂಲಕ ಬೆಂಗಳೂರಿಗೆ ಶಿಫ್ಟ್ ಆಗಲು ಪ್ಲ್ಯಾನ್‌ ನಡೆದಿದೆ ಎನ್ನಲಾಗಿದೆ. ವಕೀಲರ ಮೂಲಕ ಕೋರ್ಟ್‌ಗೆ ಮನವಿ ಸಲ್ಲಿಸಲು ತಯಾರಿ ನಡೆಸಿದ್ದಾರೆ. ಈ ಹಿಂದೆ ಕೋರ್ಟ್‌ನಲ್ಲಿ ಮನೆಯೂಟ ಕೇಳಿದಾಗ ನಿರಾಕರಣೆ ಮಾಡಿತ್ತು. ಇದೇ ವಾರದಲ್ಲಿ ದರ್ಶನ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಆಗುವ ಸಾಧ್ಯತೆ ಇದೆ. ಇದರ ಮಧ್ಯೆ ಮತ್ತೆ ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲು ಕೋರ್ಟ್‌ ಒಪ್ಪಿಗೆ ನೀಡುತ್ತಾ? ಎಂಬ ಪ್ರಶ್ನೆ ಉದ್ಭವಿಸಿದೆ.

ಬೆಂಗಳೂರಿಗೆ ಶಿಫ್ಟ್ ಆಗಬೇಕು ಅಂದರೆ ದರ್ಶನ್‌ಗೆ ಮೇಜರ್ ಸಮಸ್ಯೆ ಇರಬೇಕು. ಅದರಲ್ಲೂ ಹಾರ್ಟ್ ಸಮಸ್ಯೆ, ಕಿಡ್ನಿ ಸಂಬಂಧಿಸಿದ ಗಂಭೀರ ಸಮಸ್ಯೆ ಇರಬೇಕು. ಆಗ ಮಾತ್ರ ಯಾವುದೇ ಕೈದಿಯನ್ನು ಬೆಂಗಳೂರಿಗೆ ಶಿಫ್ಟ್ ಮಾಡುವ ಸಾಧ್ಯತೆ ಇರುತ್ತೆ. ಆದರೆ ದರ್ಶನ್ ಅವರಿಗೆ ಸ್ಪೈನಲ್ ಕಾರ್ಡ್, ಎಡಗೈ ಮೂಳೆ ನೋವು ಮಾತ್ರ ಇದೆ. ಇದು ಜೈಲ್ ರೂಲ್ಸ್ ಪ್ರಕಾರ ಮೇಜರ್ ಸಮಸ್ಯೆ ಅಲ್ಲ ಎನ್ನಲಾಗುತ್ತಿದೆ.

ಚಾರ್ಜ್ ಶೀಟ್ ಸಲ್ಲಿಕೆ ಆದ ಬಳಿಕ ಬೇಲ್‌ಗೆ ಅರ್ಜಿ ಹಾಕುವ ಸಾಧ್ಯತೆ ಇದೆ. ಬೇಲ್‌ಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದರಿಂದ ಜೈಲ್ ಟು ಜೈಲ್ ಶಿಫ್ಟ್ ಮಾಡುವುದು ಅನುಮಾನವಿದೆ. ದರ್ಶನ್‌ಗೆ ಈಗಿರುವ ಸಮಸ್ಯೆಗೆ ಚಿಕಿತ್ಸೆ ನೀಡಲು ಜೈಲಲ್ಲೇ ನುರಿತ ವೈದ್ಯರಿದ್ದಾರೆ. ಕಿಡ್ನಿ ಸಮಸ್ಯೆ, ಹಾರ್ಟ್ ಸಮಸ್ಯೆ ಇದ್ದರೆ ಜೈಲಿನಲ್ಲೇ ಟ್ರೀಟ್ಮೆಂಟ್‌ಗೆ ಬಳ್ಳಾರಿಯಲ್ಲೇ ಖಾಸಗಿ ವೈದ್ಯರಿದ್ದಾರೆ. ಬಳ್ಳಾರಿಯಲ್ಲೂ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳು ಇದ್ದಾವೆ ಅಲ್ಲಿ ಚಿಕಿತ್ಸೆ ನೀಡೋದಕ್ಕೆ ಅವಕಾಶ ಇದೆ. ಗಂಭೀರ ಸಮಸ್ಯೆಗೆ ಬಳ್ಳಾರಿಯಲ್ಲಿನ ಚಿಕಿತ್ಸೆ ಕೊಡಲು ಆಗದೇ ಹೋದರೆ ಬೆಂಗಳೂರಿಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ.

ಪತ್ನಿ ಭೇಟಿ ನಂತರ ಕಣ್ತುಂಬ ನಿದ್ದೆ ಮಾಡಿದ ದಾಸ

ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಮೂರನೇ ರಾತ್ರಿ ಕಳೆದಿರುವ ಕೊಲೆ ಆರೋಪಿ ದರ್ಶನ್ ಭಾನುವಾರ ಬೆಳಗ್ಗೆ ಎದ್ದು ವಾಕಿಂಗ್ ಮಾಡಿದ್ದಾರೆ. ಬಳ್ಳಾರಿ ಸೆಂಟ್ರಲ್ ಜೈಲಿಗೆ ಬಂದಾಗಿನಿಂದ ಇದೇ ಮೊದಲ ಬಾರಿಗೆ ಬೆಳಗ್ಗೆ ವಾಕಿಂಗ್ ಮಾಡಿದ್ದು, ಎರಡು ರಾತ್ರಿ ನಿದ್ದೆ ಇಲ್ಲದೇ ಒದ್ದಾಡಿದ್ದರು. ನಿನ್ನೆ ಶನಿವಾರ ಪತ್ನಿ ವಿಜಯಲಕ್ಷ್ಮಿ ಭೇಟಿ ಮಾಡಿ ಹೋದ ಬೆನ್ನಲ್ಲೇ ನಿರಾಳರಾಗಿರುವ ದರ್ಶನ್ ರಾತ್ರಿ ಚೆನ್ನಾಗಿ ನಿದ್ದೆ ಮಾಡಿದ್ದರಂತೆ. ಪತ್ನಿ ವಿಜಯಲಕ್ಷ್ಮಿ ಮೈಸೂರು ಚಾಮುಂಡೇಶ್ವರಿ ದೇವಿಯ ಕುಂಕುಮ, ಅಕ್ಷತೆ, ಪ್ರಸಾದ ತಂದು ಕೊಟ್ಟಿದ್ದರು. ಸುದೀರ್ಘ ಅರ್ಧ ಗಂಟೆ ದರ್ಶನ್ ಜತೆ ಮುಂದಿನ ಕಾನೂನು ಹೋರಾಟದ ಬಗ್ಗೆ ಚರ್ಚೆ ನಡೆಸಿದ್ದರು. ಪತ್ನಿ ಬಂದು ಹೋದ ಬೆನ್ನಲ್ಲೇ ಇಂದು ಫುಲ್ ಆಕ್ಟೀವ್ ಆಗಿದ್ದಾರೆ.

ಇದನ್ನೂ ಓದಿ: Rishab Shetty And NTR: ತಾಯಿ ಜತೆಗೆ ಉಡುಪಿ ಶ್ರೀಕೃಷ್ಣನಿಗೆ ನಮಿಸಿದ ತೆಲುಗು ನಟ ಜ್ಯೂ.ಎನ್‌ಟಿಆರ್‌; ಜತೆಯಾದ ಡಿವೈನ್‌ ಸ್ಟಾರ್‌ ರಿಷಬ್‌

ಸೆಂಟ್ರಲ್‌ ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ಸಿಕ್ಕಿದ್ದು ಯಾವಾಗಿನಿಂದ ಗೊತ್ತಾ?

ಸೆಂಟ್ರಲ್‌ ಜೈಲಿನಲ್ಲಿ ನಟ ದರ್ಶನ್‌ ಫೋಟೊ ವೈರಲ್‌ ಆಗಿದ್ದೆ ತಡ ಈಗ ಒಂದೊಂದೆ ವಿಚಾರಗಳು ಹೊರಬರುತ್ತಿವೆ. ಇಷ್ಟಕ್ಕೂ ಜೈಲು ಸೇರಿದ್ದ ನಟ ದರ್ಶನ್‌ಗೆ ರಾಜಾತಿಥ್ಯ ಸಿಕ್ಕಿದ್ದು ಯಾವಾಗಿನಿಂದ ಗೊತ್ತಾ? ಜೈಲುಪಾಲಾದ ಮೂರೇ ದಿನ ಸಾಮಾನ್ಯ ಕೈದಿಯಂತಿದ್ದ ದರ್ಶನ್, ಬಳಿಕ ನಾಲ್ಕನೇ ದಿನದಿಂದ ರಾಜಾತಥ್ಯ ಸಿಗುತಿತ್ತಂತೆ. ಇನ್ನು ಜೈಲು ಸಿಬ್ಬಂದಿ ನಿಮ್ಮ ಬ್ಯಾರಕ್‌ಗೆ ತೆರಳಿ ಎಂದು ಸೂಚಿಸುತ್ತಿದ್ದರಂತೆ. ಈ ವೇಳೆ ಫಿಲ್ಮಿ ಸ್ಟೈಲ್‌ನಲ್ಲೇ ದರ್ಶನ್‌ ಆವಾಜ್ ಹಾಕಿ ‘ಬಿಸ್ಕತ್ ಹಾಕಿಲ್ವಾ’ ಸುಮ್ಮನಿರು ಅಂತಿದ್ದರಂತೆ. ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆದ ಬಳಿಕ ಒಂದೊಂದೆ ಸತ್ಯ ಹೊರಗೆ ಬರುತ್ತಿದೆ.

ಬದಲಾದ ಬೆಂಗಳೂರು ಸೆಂಟ್ರೆಲ್‌ ಜೈಲ್‌ ಚಿತ್ರಣ

ಬೆಂಗಳೂರು: ದರ್ಶನ್ ಸಿಗರೇಟ್‌ ಸೇದುವ ಫೋಟೊ ವೈರಲ್ ಆದ ಬಳಿಕ ಪರಪ್ಪನ ಅಗ್ರಹಾರ ಜೈಲಿನ ಚಿತ್ರಣವೇ ಬದಲಾಗಿದೆ. ಒಂದೆಡೆ ಜೈಲು ಸಿಬ್ಬಂದಿ ಪ್ರತಿಭಟಿಸುತ್ತಿದ್ದರೆ, ಮತ್ತೊಂದೆಡೆ ಕೈದಿಗಳಿಂದಲೂ ಧರಣಿ ನಡೆದಿದೆ ಎನ್ನಲಾಗಿದೆ. ನಮಗೆ ಬೀಡಿ, ಸಿಗರೇಟ್ ಸಿಗುತ್ತಿಲ್ಲ. ನಮ್ಗೆ ಇರೋದಕ್ಕೆ ಆಗುತ್ತಿಲ್ಲ ಎಂದು ನಿನ್ನೆ ಶನಿವಾರ ಪ್ರತಿಭಟಿಸಿದ್ದಾರೆ. ಫೋಟೊ ವೈರಲ್ ಬಳಿಕ ಜೈಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಹಾಗಾಗಿ ಬೀಡಿ, ಸಿಗರೇಟ್ ಸಂಪೂರ್ಣ ಬಂದ್ ಆಗಿದೆ.

ಹಿಂಡಲಗಾ ಜೈಲಿನಲ್ಲಿ ಸಿಗರೇಟ್‌ಗಾಗಿ ಕೈದಿಗಳಿಂದಲ್ಲೂ ಡಿಮ್ಯಾಂಡ್‌

ಬೆಂಗಳೂರು ಜೈಲಲ್ಲಿ ದರ್ಶನ್ ಸಿಗರೇಟ್ ಸೇದಿದ ಎಫೆಕ್ಟ್ ಇತರ ಕೈದಿಗಳಿಂದಲೂ ಡಿಮ್ಯಾಂಡ್ ಬಂದಿದೆ. ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಕೈದಿಗಳ ವಿಶೇಷ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ ನಡೆದಿದೆ. ಬೀಡಿ, ಸಿಗರೇಟ್, ತಂಬಾಕು ಕೊಡುವವರಗೆ ನಾವು ತಿಂಡಿ ತಿನ್ನಲ್ಲ ಎನ್ನುತ್ತಿದ್ದಂತೆ. ಬೆಳಗಿನ ಉಪಹಾರ ಮಾಡದೆ ಪ್ರೊಟ್ಟೆಸ್ಟ್‌ ಮಾಡುತ್ತಿದ್ದರಂತೆ. ಇದೀಗ ಈ ಬೇಡಿಕೆ ಜೈಲಧಿಕಾರಿಗಳಿಗೆ ತಲೆ ನೋವಾಗಿದೆ. ಸದ್ಯ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ಜೈಲಾಧಿಕಾರಿಗಳು ಇದ್ದಾರೆ. ಬೀಡಿ ಸಿಗರೇಟ್ ನೀಡದಿದ್ದರೆ ಮಧ್ಯಾಹ್ನ ಊಟವನ್ನೂ ಮಾಡಲ್ಲ ಎಂದು ಬೆದರಿಕೆ ಹಾಕುತ್ತಿದ್ದರಂತೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕಲಬುರಗಿ

Police Firing: ಪೊಲೀಸರ ಮೇಲೆ ಚಾಕುಯಿಂದ ದಾಳಿ ಮಾಡಿದ ದರೋಡೆಕೋರ; ಆರೋಪಿ ಕಾಲಿಗೆ ಫೈರಿಂಗ್‌ ಮಾಡಿದ ಖಾಕಿ

Police Firing: ಕಲಬುರಗಿಯಲ್ಲಿ ಗುಂಡಿನ ಸದ್ದು ಕೇಳಿ ಬಂದಿದೆ. ಪೊಲೀಸರ ಮೇಲೆ ಚಾಕುಯಿಂದ ದಾಳಿ ಮಾಡಿದ ದರೋಡೆಕೋರನ ಕಾಲಿಗೆ ಫೈರಿಂಗ್‌ ಮಾಡಿ ಹಿಡಿದಿದ್ದಾರೆ.

VISTARANEWS.COM


on

By

police Firing
Koo

ಕಲಬುರಗಿ: ಕಲಬುರಗಿ ನಗರದಲ್ಲಿ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್ (Police Firing) ನಡೆದಿದೆ. ಕಲಬುರಗಿ ನಗರ ಹೊರವಲಯದ ಬೇಲೂರು ಕ್ರಾಸ್ ಬಳಿ ಘಟನೆ ನಡೆದಿದೆ. ಆರೋಪಿ ಅವತಾರ್‌ಸಿಂಗ್ ಮೇಲೆ ಸಬ್ ಅರ್ಬನ್ ಠಾಣೆ ಪೊಲೀಸರು ಕಾಲಿಗೆ ಫೈರಿಂಗ್‌ ಮಾಡಿದ್ದಾರೆ. ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆಗೈಯ್ದು ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಸಬ್ ಅರ್ಬನ್ ಠಾಣೆ ಇನ್‌ಸ್ಪೆಕ್ಟರ್‌ ಸಂತೋಷ್ ತಟ್ಟೆಪಲ್ಲಿ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಾಳು ಆರೋಪಿ ಅವತಾರ್‌ಸಿಂಗ್ ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಅವತಾರ್ ಸಿಂಗ್‌ ಪೊಲೀಸರ ಮೇಲೆಯೇ ಚಾಕುಯಿಂದ ದಾಳಿ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ್ದ. ಈ ವೇಳೆ ಒಂದು ಸುತ್ತು ಗಾಳಿಯಲ್ಲಿ ಗುಂಡಿ ಹಾರಿಸಿ ಶರಣಾಗುವಂತೆ ಪೊಲೀಸರು ವಾರ್ನಿಂಗ್‌ ನೀಡಿದ್ದಾರೆ. ಆದರೆ ಇದಕ್ಕೆ ಕ್ಯಾರೆ ಎನ್ನದ ಅವತಾರ್ ಸಿಂಗ್ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದ. ಆತ್ಮರಕ್ಷಣೆಗಾಗಿ ಆರೋಪಿ ಬಲಗಾಲಿಗೆ ಗುಂಡು ಹಾರಿಸಿದ್ದಾರೆ.

ಈ ಅವತಾರ್‌ ಸಿಂಗ್‌ನ ಅವಾತರ ಒಂದೊಂದ್‌ ಅಲ್ಲ. ದರೋಡೆ, ರಾಬರಿ ಸೇರಿ ಅವತಾರ್ ಸಿಂಗ್ ಮೇಲೆ 13 ಕೇಸ್‌ಗಳಿವೆ. ಢಾಬಾವೊಂದರ ರಾಬರಿ ಕೇಸ್‌ನಲ್ಲಿ ಪೊಲೀಸರಿಗೆ ಬೇಕಾಗಿದ್ದ ಅವತಾರ ಸಿಂಗ್‌ಗಾಗಿ ಕಳೆದ ಮೂರು ದಿನಗಳಿಂದ ಪೊಲೀಸರು ಹುಡುಕಾಟ ನಡೆಸಿದ್ದರು. ಈ ವೇಳೆ ಉಪಳಾವ ಕ್ರಾಸ್ ಬಳಿ ಇರುವ ಖಚಿತ ಮಾಹಿತಿ ಮೇರೆಗೆ ಅರೆಸ್ಟ್ ಮಾಡಲು ಹೋಗಿದ್ದರು. ಈ ವೇಳೆ ಪೊಲೀಸರ ಮೇಲೆಯೇ ಚಾಕುಯಿಂದ ದಾಳಿಗೆ ಮುಂದಾದಾಗ ಫೈರಿಂಗ್ ಮಾಡಿದ್ದಾರೆ. ಈ ಗಲಾಟೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗೆ ಗಾಯವಾಗಿದ್ದು, ನಗರ ಟ್ರಾಮಾ ಕೇರ್‌ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇತ್ತ ಆರೋಪಿ ಅವತಾರ್ ಸಿಂಗ್‌ಗೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಎರಡು ಲಕ್ಷ ಲೂಟಿ ಮಾಡಿದ್ದ ಅವತಾರ್‌ ಸಿಂಗ್‌ ಗ್ಯಾಂಗ್‌

ಈ ಖತರ್ನಾಕ್‌ ಅವತಾರ್‌ ಸಿಂಗ್‌ ಏಪ್ರಿಲ್‌ ತಿಂಗಳಲ್ಲಿ‌ ಪಟ್ನಾ ಬಳಿಯ ಢಾಬಾದಲ್ಲಿ ದರೋಡೆ ಮಾಡಿದ್ದರು. ಸುಮಾರು 10ಕ್ಕೂ ಹೆಚ್ಚು ಮಂದಿ ಈ ಗ್ಯಾಂಗ್‌ ಢಾಬಾದಲ್ಲಿದ್ದ 2ಲಕ್ಷ ರೂ. ದರೋಡೆ ಮಾಡಿದ್ದರು. ರೌಡಿಶೀಟರ್‌ ಆಗಿರುವ ಅವತಾರ್‌ ಸಿಂಗ್‌ ದರೋಡೆ ಮಾಡುತ್ತಿದ್ದ ಸಿಸಿ‌ಟಿವಿ ದೃಶ್ಯ ಲಭ್ಯವಾಗಿದೆ. ಲಾಂಗ್, ಮಚ್ಚಿನಿಂದ ಎಂಟ್ರಿ ಕೊಟ್ಟಿದ್ದ ಈ ಗ್ಯಾಂಗ್‌ ಹಲ್ಲೆ‌ ಮಾಡಿ‌ ಬೆದರಿಸಿ‌ ದರೋಡೆ ಮಾಡಿದ್ದರು. ದರೋಡೆ ಬಳಿಕ ಬೆಂಗಳೂರಿನಲ್ಲಿ ನಾಲ್ಕೈದು ತಿಂಗಳು ತಲೆ ಮರೆಸಿಕೊಂಡಿದ್ದ ಆರೋಪಿ ಅವತಾರ್ ಸಿಂಗ್, ಕಲಬುರಗಿಗೆ ಆಗಮಿಸಿದ್ದಾಗ ಪೊಲೀಸರು ಲಾಕ್‌ ಮಾಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Girl commits suicide after being fed up with rumours of love
ಮಂಡ್ಯ20 mins ago

Mandya News : ನಾಲ್ವರು ಬಾಲಕರ ಪ್ರೀತಿ-ಪ್ರೇಮದ ಅಪಪ್ರಚಾರ; ಗಾಳಿ ಸುದ್ದಿಗೆ ಬಾಲಕಿ ಆತ್ಮಹತ್ಯೆ

Do you know when Darshan got royalty in Central Jail
ಸಿನಿಮಾ52 mins ago

Actor Darshan : ಸೆಂಟ್ರಲ್‌ ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ಸಿಕ್ಕಿದ್ದು ಯಾವಾಗಿನಿಂದ ಗೊತ್ತಾ? ಬಿಸ್ಕತ್‌ ಹಾಕಿಲ್ವಾ ಸುಮ್ಮಿನಿರು ಅಂದ್ರಾ ಕರಿಯಾ!

Actor Darshan shifted back to Bengaluru from Ballari
ಬಳ್ಳಾರಿ56 mins ago

Actor Darshan : ಬಳ್ಳಾರಿಯಿಂದ ನಟ ದರ್ಶನ್‌ ಮತ್ತೆ ಬೆಂಗಳೂರಿಗೆ ಶಿಫ್ಟ್‌! ಪತ್ನಿ ಬಂದು ಹೋದ್ಮೆಲೆ ಫುಲ್ ಆಕ್ಟೀವ್

police Firing
ಕಲಬುರಗಿ2 hours ago

Police Firing: ಪೊಲೀಸರ ಮೇಲೆ ಚಾಕುಯಿಂದ ದಾಳಿ ಮಾಡಿದ ದರೋಡೆಕೋರ; ಆರೋಪಿ ಕಾಲಿಗೆ ಫೈರಿಂಗ್‌ ಮಾಡಿದ ಖಾಕಿ

karnataka weather Forecast
ಮಳೆ8 hours ago

Karnataka Weather : ರಾಜ್ಯಾದ್ಯಂತ ಮುಂದಿನ 24 ಗಂಟೆಯಲ್ಲಿ ವ್ಯಾಪಕ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ8 hours ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

Rishab Shetty And NTR
ಸಿನಿಮಾ16 hours ago

Rishab Shetty And NTR: ತಾಯಿ ಜತೆಗೆ ಉಡುಪಿ ಶ್ರೀಕೃಷ್ಣನಿಗೆ ನಮಿಸಿದ ತೆಲುಗು ನಟ ಜ್ಯೂ.ಎನ್‌ಟಿಆರ್‌; ಜತೆಯಾದ ಡಿವೈನ್‌ ಸ್ಟಾರ್‌ ರಿಷಬ್‌

UPSC
ಪ್ರಮುಖ ಸುದ್ದಿ17 hours ago

CET/NEET: ಮೊದಲ ಬಾರಿಗೆ ಆನ್ ಲೈನ್ ಪಾವತಿ ಜಾರಿ, ಒಳ್ಳೆಯ ಪ್ರತಿಕ್ರಿಯೆ

TA Saravana elected as new chairman of government assurances committee
ಕರ್ನಾಟಕ17 hours ago

TA Sharavana : ಸರ್ಕಾರಿ ಭರವಸೆಗಳ ಸಮಿತಿಯ ನೂತನ ಅಧ್ಯಕ್ಷರಾಗಿ ಟಿ.ಎ ಶರವಣ ಆಯ್ಕೆ

Hair Care Habits
ಆರೋಗ್ಯ18 hours ago

Amla For Your Hair: ತಲೆಗೂದಲ ಆರೈಕೆಯಲ್ಲಿ ನೆಲ್ಲಿಕಾಯಿಯ ಬಳಕೆ ಹೇಗೆ?

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ11 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್23 hours ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್3 days ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ1 week ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ3 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ3 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ3 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು4 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ4 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ4 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ4 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌