Girl Ends life : ಅಯ್ಯೋ ದೇವ್ರೆ.. ಹೊಟ್ಟೆ ನೋವು ತಾಳಲಾರದೆ 17 ವರ್ಷದ ವಿದ್ಯಾರ್ಥಿನಿ ನೇಣಿಗೆ ಶರಣು - Vistara News

ಆರೋಗ್ಯ

Girl Ends life : ಅಯ್ಯೋ ದೇವ್ರೆ.. ಹೊಟ್ಟೆ ನೋವು ತಾಳಲಾರದೆ 17 ವರ್ಷದ ವಿದ್ಯಾರ್ಥಿನಿ ನೇಣಿಗೆ ಶರಣು

Girl ends life :17 ವರ್ಷದ ಬಾಲಕಿಯೊಬ್ಬಳು ಹೊಟ್ಟೆ ನೋವು ಸಹಿಸಲಾಗದೆ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಇಂಥ ಸಮಸ್ಯೆ ಹಲವು ಮಕ್ಕಳನ್ನು ಕಾಡುತ್ತಿದೆ. ಅದಕ್ಕೆ ಪರಿಹಾರವೇನು?

VISTARANEWS.COM


on

Stomach pain girl ends life Renuka
ಆತ್ಮಹತ್ಯೆ ಮಾಡಿಕೊಂಡ ರೇಣುಕಾ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೈಸೂರು: 17 ವರ್ಷದ ಬಾಲಕಿಯೊಬ್ಬಳು (17 Year old Girl) ಹೊಟ್ಟೆ ನೋವು ತಾಳಲಾರದೆ (Unbearable stomach ache) ನೇಣು ಬಿಗಿದುಕೊಂಡು ಆತ್ಮಹತ್ಯೆ (Ends life by Hanging) ಮಾಡಿಕೊಂಡ ದಾರುಣ ಘಟನೆ ನಂಜನಗೂಡು ತಾಲೂಕಿನ (Nanjanagudu taluk) ಗೋಳೂರು ಗ್ರಾಮದಲ್ಲಿ ನಡೆದಿದೆ.

ನಂಜನಗೂಡು ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ (First PU Student) ಯಾಗಿರುವ, ಮಹದೇವು ಎಂಬುವವರ ಪುತ್ರಿ ರೇಣುಕಾ(17) ಮೃತಪಟ್ಟವಳು.

ಈಕೆಗೆ ಆಗಾಗ್ಗೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತು ಎನ್ನಲಾಗಿದೆ. ಶುಕ್ರವಾರ ಆಕೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾಳೆ.

Stomach pain girl ends life

ಆಕೆಯ ಆತ್ಮಹತ್ಯೆ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಗೆ ಪೋಷಕರು ದೂರು ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಶಿವನಂಜಶೆಟ್ಟಿ, ಪಿಎಸ್ಐ ರಾಮಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶವವನ್ನು ಮರಣೋತ್ತರ ಪರೀಕ್ಷೆಗಾಗಿ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಿಂಗಳ ನೋವಿನ ಸಂಕಟವೇ?

ತಿಂಗಳ ಋತುಸ್ರಾವದ ವೇಳೆ ಕೆಲವು ಹೆಣ್ಣುಮಕ್ಕಳಿಗೆ ವಿಪರೀತವಾದ ನೋವು ಕಾಡುತ್ತದೆ. ಅದೇ ನೋವು ರೇಣುಕಾ ಸಾವಿಗೆ ಕಾರಣವಾಯಿತೇ ಎಂಬ ಸಂಶಯ ಕಾಡಿದೆ. ಋತುಸ್ರಾವಕ್ಕೆ ಮೊದಲು ಮತ್ತು ಅತಿ ರಕ್ತಸ್ರಾವದ ದಿನಗಳಲ್ಲಿ ಕೆಲವರಿಗೆ ತಡೆದುಕೊಳ್ಳಲು ಸಾಧ್ಯವಾಗದ ನೋವು ಕಾಡುತ್ತದೆ.

ರಕ್ತಹೀನತೆ ಇರುವವರು, ದೇಹದಲ್ಲಿ ಅಷ್ಟೊಂದು ಶಕ್ತಿ ಇಲ್ಲದವರನ್ನು ಇದು ಅತಿಯಾಗಿ ಕಾಡುತ್ತದೆ. ಕೆಲವರಲ್ಲಿ ಗರ್ಭಕೋಶದಲ್ಲಿ ಗುಳ್ಳೆಗಳು (ಸಿಸ್ಟ್‌) ಇದ್ದರೂ ಈ ಸಮಸ್ಯೆ ಕಂಡುಬರುತ್ತದೆ.

ಸಾಮಾನ್ಯವಾಗಿ ಈ ನೋವು ಒಂದು ಹಂತಕ್ಕೆ ಇರುತ್ತದೆ ಎಂದು ಹೆತ್ತವರು ಕೂಡಾ ಹೆಚ್ಚು ಗಮನ ಕೊಡುವುದಿಲ್ಲ. ಕೆಲವರು ನೋವಿನ ಮಾತ್ರೆ ತೆಗೆದುಕೊಳ್ಳಬಾರದು ಎಂದು ತಾಕೀತು ಮಾಡುತ್ತಾರೆ. ಹೀಗಾಗಿ ನೋವನ್ನು ತಡೆದುಕೊಳ್ಳಲು ಸಾಧ್ಯವೇ ಆಗದಿದ್ದಾಗ ಯಾತನೆ ಅನುಭವಿಸುತ್ತಾರೆ.

ಇದನ್ನೂ ಓದಿ: Menstrual Cramp Home Remedies: ಋತುಚಕ್ರGiದ ದಿನಗಳಲ್ಲಿ ಕಾಡುವ ನೋವಿನಿಂದ ಮುಕ್ತಿ ಪಡೆಯಬೇಕೇ? ಇಲ್ಲಿವೆ ಮನೆಮದ್ದು!

ಇಂಥ ಸಂಕಟಕ್ಕೆ ಏನು ಮಾಡಬೇಕು?

ತಿಂಗಳ ಋತುಸ್ರಾವದ ಸಂದರ್ಭದಲ್ಲಿ ಸೊಂಟ, ಬೆನ್ನು ನೋವು ಇರುತ್ತದೆ. ಹೀಗಾಗಿ ಈ ಸಂದರ್ಭದಲ್ಲಿ ಸ್ವಲ್ಪ ಹೆಚ್ಚು ವಿಶ್ರಾಂತಿಯನ್ನು ಪಡೆಯುವುದು ಉತ್ತಮ. ಒಂದು ವೇಳೆ ತಡೆಯಲು ಸಾಧ್ಯವಾಗದ ನೋವಿದ್ದರೆ ಮನೆಯವರಿಗೆ ತಿಳಿಸಿ ವೈದ್ಯರಲ್ಲಿಗೆ ಹೋಗುವುದು ಉತ್ತಮ. ಅದರಲ್ಲೂ ಮಹಿಳಾ ವೈದ್ಯರು, ಗೈನಕಾಲಜಿಸ್ಟ್‌ಗಳನ್ನು ಭೇಟಿಯಾಗುವುದು ಸರಿಯಾದ ಕ್ರಮ. ಒಂದು ವೇಳೆ ಮನೆಯಲ್ಲಿ ಈ ರೀತಿ ಪರೀಕ್ಷೆಗೆ ಹೆಚ್ಚು ಒಲವು ತೋರದಿದ್ದರೆ ಹೆಣ್ಣು ಮಕ್ಕಳು ತಮ್ಮ ಓರಗೆಯ ಗೆಳತಿಯರ ಜತೆಗಾದರೂ ಹೋಗಿ ಪರಿಶೀಲಿಸಿಕೊಳ್ಳುವುದು ಉತ್ತಮ. ಒಂದು ವೇಳೆ ಗಾಳಿಯ ಗುಳ್ಳೆಗಳು ಇದ್ದರೆ, ಬೇರೆ ಸಮಸ್ಯೆ ಇದ್ದರೆ ವೈದ್ಯರು ಪರಿಹಾರ ಹೇಳುತ್ತಾರೆ.

ಈ ನೋವನ್ನು ಸಹಿಸಿಕೊಂಡು ತುಂಬ ಕಷ್ಟಪಟ್ಟು ಆತ್ಮಹತ್ಯೆಯ ಬಗ್ಗೆ ಯೋಚನೆ ಮಾಡಬೇಕಾದ ಅನಿವಾರ್ಯತೆ ಇಲ್ಲ ಎನ್ನುವುದನ್ನು ಹೆಣ್ಣು ಮಕ್ಕಳು ಮನಗಂಡರೆ ರೇಣುಕಾನಂಥವರ ಸಾವನ್ನು ತಪ್ಪಿಸಬಹುದು, ಯಾತನೆಯಿಂದಲೂ ಹೊರಬರಬಹುದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Leg Cramps At Night: ರಾತ್ರಿ ಮಲಗಿದಾಗ ಕಾಡುವ ಕಾಲುನೋವಿಗೆ ಇದೆ ಪರಿಹಾರ!

ಹಗಲೆಲ್ಲ ದಣಿದು ರಾತ್ರಿ ಮಲಗುತ್ತಿದ್ದಂತೆ ಕಾಲಿನ ಸ್ನಾಯುಗಳಲ್ಲಿ ಹಿಂಡಿದಂತೆ ನೋವು ಪ್ರಾರಂಭವಾದರೆ? ನಿದ್ದೆಯಂತೂ ಹಾಳಾಗುತ್ತದೆ, ಆ ನೋವನ್ನು ಸಹಿಸುವುದು ಹೇಗೆ? ಯಾಕಾಗಿ ಬರುತ್ತದೆ ಇಂಥ ಸೆಳೆತ? ಇದಕ್ಕೆ ನಿಯಂತ್ರಣವಿಲ್ಲವೇ? ಇದಕ್ಕೆ ಪರಿಹಾರ ಏನು? ಈ ಎಲ್ಲ ಪ್ರಶ್ನೆಗಳಿಗೆ (Leg Cramps at Night) ಇಲ್ಲಿದೆ ಉತ್ತರ.

VISTARANEWS.COM


on

Leg Cramps At Night
Koo

ನಿದ್ದೆ ಮಾಡುವುದಕ್ಕೆ (Leg Cramps at Night?) ಎಷ್ಟೊಂದು ಸಮಸ್ಯೆಗಳು ನಮಗೆ! ಕಚೇರಿಯ ಕೆಲಸಗಳು ಮುಗಿಯುವುದಿಲ್ಲ, ಮೊಬೈಲ್‌ನಿಂದ ಬಿಡುವಾಗುವುದಿಲ್ಲ, ಲ್ಯಾಪ್‌ಟಾಪ್‌ ಕರೆಯುತ್ತಿರುತ್ತದೆ, ಮಲಗಿದರೂ ನಿದ್ದೆ ಬರುವುದಿಲ್ಲ… ಒಂದೆರಡೇ ಸಮಸ್ಯೆಗಳು? ನಿದ್ದೆಗೆ ಇರುವಷ್ಟು ತೊಂದರೆಗಳು ಸಾಲದು ಎಂಬಂತೆ ಕಾಲೂ ನೋವು ಕೊಡುತ್ತಿದ್ದರೆ, ದುರ್ಭಿಕ್ಷದಲ್ಲಿ ಅಧಿಕಮಾಸದ ಅವಸ್ಥೆ. ಹಗಲಿಡೀ ಸುಳಿವಿಲ್ಲದ ಕಾಲು ಸೆಳೆತ ರಾತ್ರಿಯಾಗುತ್ತಿದ್ದಂತೆ ಹಾಜರಾಗುತ್ತದೆ. ಯಾಕಾದರೂ ಹೀಗಾಗುತ್ತದೋ ಎಂದು ಗೊಣಗುತ್ತಾ ನರಳುವ ಬದಲು, ಈ ಅವಸ್ಥೆಯನ್ನು ಹತೋಟಿಗೆ ತರಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.

The man's calf muscle cramped, massage of male leg at home

ಏನು ನೋವಿದು?

ಕಾಲು ನೋವುಗಳಲ್ಲಿ ಹಲವಾರು ರೀತಿಯಿದೆ. ಇದೆಂಥ ನೋವು ಎಂದು ಕೇಳಿದರೆ, ರಾತ್ರಿ ಅಡ್ಡಾಗುತ್ತಿದ್ದಂತೆ ಮೀನಖಂಡಗಳಲ್ಲಿ ಸೆಳೆತ ಪ್ರಾರಂಭವಾಗುತ್ತದೆ. ಇದ್ದಕ್ಕಿದ್ದಂತೆ ಸ್ನಾಯುಗಳೆಲ್ಲ ಹಿಡಿದು ತಿರುಚಿದಂಥ ಅನುಭವ ತೀವ್ರ ವೇದನೆಯನ್ನು ನೀಡುತ್ತದೆ. ಕಾಲುಗಳಲ್ಲಿ ಒಂದೆಡೆ ಇಟ್ಟುಕೊಳ್ಳಲೂ ಕಷ್ಟ, ಹಾಗಂತ ಅಲ್ಲಾಡಿಸುವುದಕ್ಕೂ ಆಗದ ಸ್ಥಿತಿ. ಈ ಕಾಲು ಅಥವಾ ಮೀನಖಂಡದ ಸೆಳೆತ ಬಹಳಷ್ಟು ಜನರನ್ನು ಕಾಡಿಸುತ್ತದೆ.

ಏನು ಕಾರಣ?

ಇದಕ್ಕೆ ಕಾರಣಗಳು ಹಲವು. ದೀರ್ಘ ಕಾಲ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದು, ವ್ಯಾಯಾಮವಿಲ್ಲದ ಜಡತೆ, ನೀರು ಸಾಕಷ್ಟು ಕುಡಿಯದಿರುವುದು, ಕೆಲವು ಸ್ನಾಯುಗಳನ್ನು ಅತಿಯಾಗಿ ಬಳಸಿದ್ದರಿಂದ ಕಾಡುವ ದುರ್ಬಲತೆ ಅಥವಾ ಮಧುಮೇಹದಂಥ ಯಾವುದೋ ಆರೋಗ್ಯ ಸಮಸ್ಯೆ ಇದಕ್ಕೆ ಕಾರಣವಾಗಬಹುದು. ಸಾಮಾನ್ಯವಾಗಿ ಇಂಥ ಕಾಲು ಸೆಳೆತದಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗದಿದ್ದರೂ, ದಿನಾ ರಾತ್ರಿ ಇದೇ ಕತೆಯಾದರೆ ನಿದ್ದೆಗೆಟ್ಟೇ ಆರೋಗ್ಯ ಹಾಳಾದೀತು. ಹಾಗಾದರೆ ಏನು ಮಾಡಬೇಕು?

Outdoor Exercise

ವ್ಯಾಯಾಮ

ಮಲಗುವ ಸ್ವಲ್ಪ ಹೊತ್ತಿಗೆ ಮೊದಲು ಕೆಲವು ಸರಳವಾದ ವ್ಯಾಯಾಮಗಳನ್ನು ಮಾಡುವುದರಿಂದ ಕಾಲಿನ ಈ ಭಾಗಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸಬಹುದು. ಈ ಕ್ರಮದಿಂದ ಸ್ನಾಯುಗಳ ಸೆಳೆತ, ನೋವು ಕಡಿಮೆಯಾಗುತ್ತದೆ. ಎಂಥ ವ್ಯಾಯಾಮಗಳವು?

ಸ್ಟ್ರೆಚ್‌

ಮೀನಖಂಡಗಳ ಸ್ನಾಯುಗಳನ್ನು ಎಳೆದು ಹಿಗ್ಗಿಸಿದಂತೆ ಸ್ಟ್ರೆಚ್‌ ಮಾಡುವುದು ನೆರವಾಗುತ್ತದೆ. ಇದಕ್ಕಾಗಿ ಗೋಡೆ ಮತ್ತು ನೆಲದ ನಡುವೆ ಪಾದವನ್ನು ಜಾರುಬಂಡೆಯಂತೆ ತಾಗಿಸಿ ನಿಲ್ಲಿಸಿ. ಇನ್ನೊಂದು ಕಾಲನ್ನು ಒಂದಡಿ ಹಿಂದಿಟ್ಟು, ಜಾರುಬಂಡೆಯಂತೆ ನಿಲ್ಲಿದ ಕಾಲನ್ನು ಮುಂದೆ ನೂಕಿ. ಇದಕ್ಕಾಗಿ ಕೈಯಲ್ಲಿ ಗೋಡೆಯನ್ನು ಆಧರಿಸಿ ಹಿಡಿಯಿರಿ. ಈ ವ್ಯಾಯಾಮವು ನಿಖರವಾಗಿ ಮೀನಖಂಡದ ಸ್ನಾಯುವನ್ನೇ ಗುರಿಯಾಗಿಸಿ ಕೊಂಡಂಥದ್ದು.

Benefits Of Walking Every Day

ನಡಿಗೆ

ಸಾಮಾನ್ಯ ನಡಿಗೆಯೂ ಕಾಲಿಗೆ ರಕ್ತ ಸಂಚಾರ ಹೆಚ್ಚಿಸುತ್ತದೆ. ಆದರೆ ಇದು ಒಮ್ಮೆ ಕಾಲಿನ ಬೆರಳುಗಳ ಮೇಲೆ ಮತ್ತೊಮ್ಮೆ ಹಿಮ್ಮಡಿಯ ಮೇಲೆ ನಡೆಯುವಂಥ ಕ್ರಮ. ಹೀಗೆ ಹಿಮ್ಮಡಿಯ ಮೇಲೊಂದು ಸುತ್ತು ಮತ್ತು ಕಾಲ್ಬೆರಳುಗಳ ಮೇಲೊಂದು ಸುತ್ತು ಹಾಕುತ್ತಾ ಮನೆಯಲ್ಲೇ ನಾಲ್ಕಾರು ಬಾರಿ ನಡೆಯಿರಿ. ಇದರಿಂದ ಕಾಲುಗಳ ಸ್ನಾಯುಗಳು ಬಲಗೊಳ್ಳುತ್ತವೆ.

ತಿರುಗಿಸಿ

ಪಾದದ ಕೀಲನ್ನು ವೃತ್ತಾಕಾರದಲ್ಲಿ ನಿಧಾನಕ್ಕೆ ತಿರುಗಿಸಿ. ನಾಲ್ಕು ಬಾರಿ ಪ್ರದಕ್ಷಿಣೆಯಂತೆ ಮತ್ತೆ ನಾಲ್ಕು ಬಾರಿ ಅಪ್ರದಕ್ಷಿಣೆಯಂತೆ ತಿರುಗಿಸಿ. ಇದರಿಂದ ಕೀಲುಗಳ ಆರೋಗ್ಯ ವೃದ್ಧಿಸಿ, ಕಾಲುಗಳಿಗೆ ರಕ್ತ ಸಂಚಾರ ಹೆಚ್ಚುತ್ತದೆ. ಈ ವ್ಯಾಯಾಮವನ್ನು ಕೂತಲ್ಲೇ ಮಾಡಬಹುದು.

Dieting concept. Healthy Food. Beautiful Young Asian Woman

ಆಹಾರದಲ್ಲಿ ಬದಲಾವಣೆ

ದೇಹಕ್ಕೆ ನೀರು ಸಾಕಾಗದೆ ಇರುವುದು ಸ್ನಾಯುಗಳಲ್ಲಿ ಸೆಳೆತ ಬರುವುದಕ್ಕೆ ಪ್ರಮುಖ ಕಾರಣ. ಹಾಗಾಗಿ ದಿನಕ್ಕೆ ಮೂರು ಲೀ. ನೀರಿನ ಪ್ರಮಾಣ ತಪ್ಪಿಸಬೇಡಿ. ಅತಿಯಾಗಿ ಕೆಫೇನ್‌ ಮತ್ತು ಆಲ್ಕೋಹಾಲ್‌ ದೂರ ಮಾಡಿ. ಇದು ಸಮಸ್ಯೆಯನ್ನು ಬಿಗಡಾಯಿಸುತ್ತವೆ. ಬರೀ ನೀರು ಕುಡಿಯುವುದು ಕಷ್ಟ ಎನಿಸಿದರೆ, ಜೊತೆಗೆ ಎಲೆಕ್ಟ್ರೋಲೈಟ್‌ಗಳನ್ನು ಸೇರಿಸಿಕೊಳ್ಳಿ. ಇದರಿಂದ ಸ್ನಾಯುಗಳ ಕ್ಷಮತೆ ಹೆಚ್ಚುತ್ತದೆ. ಜೊತೆಗೆ ಬಾಳೆಹಣ್ಣು, ಪಾಲಕ್‌ ಸೊಪ್ಪು, ಕಾಯಿ-ಬೀಜಗಳು, ಡೇರಿ ಉತ್ಪನ್ನಗಳೆಲ್ಲ ಆಹಾರದಲ್ಲಿ ಇರಲಿ.

ಇದನ್ನೂ ಓದಿ: Glasses or Lenses?: ಕನ್ನಡಕವೋ ಕಾಂಟ್ಯಾಕ್ಟ್‌ ಲೆನ್ಸ್‌ ಬೇಕೋ? ಇದನ್ನು ಓದಿ, ನೀವೇ ನಿರ್ಧರಿಸಿ!

ಜೀವನಶೈಲಿಯ ಬದಲಾವಣೆ

ಜೀವನಶೈಲಿಯನ್ನು ಕೊಂಚ ಬದಲಾಯಿಸಿಕೊಂಡರೆ, ಇಂಥ ಕಿರಿಕಿರಿಗಳನ್ನು ದೂರ ಮಾಡಬಹುದು. ನಿತ್ಯವೂ ವ್ಯಾಯಾಮ ಮಾಡುವುದನ್ನು ತಪ್ಪಿಸಬೇಡಿ. ಇದರಿಂದ ಇಡೀ ಶರೀರದ ರಕ್ತ ಪರಿಚಲನೆ ಉತ್ತಮಗೊಳ್ಳುತ್ತದೆ. ಸ್ನಾಯುಗಳ ಆರೋಗ್ಯವೂ ವೃದ್ಧಿಸುತ್ತದೆ. ಸತ್ವಭರಿತ ಆಹಾರ ಸೇವನೆಯು ಸಹ ಸ್ನಾಯುಗಳ ಕ್ಷಮತೆಯನ್ನು ಹೆಚ್ಚಿಸುತ್ತದೆ. ಪಾದರಕ್ಷೆಗಳ ಬಗ್ಗೆ ಗಮನ ಕೊಡಿ. ಆರಾಮದಾಯಕ ಎನಿಸುವ ಚಪ್ಪಲಿಗಳಿಗೇ ಆದ್ಯತೆ ನೀಡಿ. ಅತಿ ಎತ್ತರದ ಚಪ್ಪಲಿಗಳು, ಬಿಗಿಯಾದ ಶೂಗಳು ಕಾಲಿನ ರಕ್ತ ಸಂಚಾರಕ್ಕೆ ತೊಂದರೆ ನೀಡುತ್ತವೆ. ಮಲಗುವ ಮುನ್ನ ಉಗುರು ಬಿಸಿ ನೀರಿನಲ್ಲಿ ಸ್ನಾನ ಮಾಡುವ ಅಭ್ಯಾಸ ಇರಿಸಿಕೊಂಡರೆ, ಇಂಥ ನೋವುಗಳು ಕಡಿಮೆಯಾಗಿ ಸುಖ ನಿದ್ದೆಗೆ ದಾರಿಯಾಗುತ್ತದೆ.

Continue Reading

ಕರ್ನಾಟಕ

Namma Clinic: ಬಸ್‌ ನಿಲ್ದಾಣ ಸೇರಿದಂತೆ 254 ಕಡೆ ʼನಮ್ಮ ಕ್ಲಿನಿಕ್‌ʼ ಸ್ಥಾಪನೆ

Namma Clinic: ಪ್ರಸಕ್ತ ಸಾಲಿನಲ್ಲಿ ಹೊಸದಾಗಿ 254 ನಮ್ಮ ಕ್ಲಿನಿಕ್‌ಗಳನ್ನು ಪ್ರಾರಂಭಿಸಲು ಅವಕಾಶವಿದ್ದು, ಸ್ಥಳ ಗುರುತಿಸುವ ಕಾರ್ಯ ಶೀಘ್ರದಲ್ಲಿ ಪೂರ್ಣಗೊಳಿಸಬೇಕು ಹಾಗೂ ಸ್ಥಳ ಗುರುತಿಸುವ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಆದ್ಯತೆ ನೀಡುವಂತೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ

VISTARANEWS.COM


on

Namma Clinic
Koo

ಬೆಂಗಳೂರು: ಬಸ್ ನಿಲ್ದಾಣಗಳು ಸೇರಿದಂತೆ (Namma Clinic) ಸಾರ್ವಜನಿಕ ಸ್ಥಳಗಳಲ್ಲಿ ʼನಮ್ಮ ಕ್ಲಿನಿಕ್‌ʼಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಗುರುವಾರ ವಿವಿಧ ಆರೋಗ್ಯ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ನೂತನ ನಮ್ಮ ಕ್ಲಿನಿಕ್‌ಗಳನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಸ್ಥಳ ಗುರುತಿಸಿ 15 ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 503 ನಮ್ಮ ಕ್ಲಿನಿಕ್‌ಗಳನ್ನು ಸದೃಢಗೊಳಿಸುವತ್ತ ಗಮನ ಹರಿಸಬೇಕು. ಪ್ರಸಕ್ತ ಸಾಲಿನಲ್ಲಿ ಹೊಸದಾಗಿ 254 ನಮ್ಮ ಕ್ಲಿನಿಕ್‌ಗಳನ್ನು ಪ್ರಾರಂಭಿಸಲು ಅವಕಾಶವಿದ್ದು, ಸ್ಥಳ ಗುರುತಿಸುವ ಕಾರ್ಯ ಶೀಘ್ರದಲ್ಲಿ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: Glasses or Lenses?: ಕನ್ನಡಕವೋ ಕಾಂಟ್ಯಾಕ್ಟ್‌ ಲೆನ್ಸ್‌ ಬೇಕೋ? ಇದನ್ನು ಓದಿ, ನೀವೇ ನಿರ್ಧರಿಸಿ!

ಸ್ಥಳ ಗುರುತಿಸುವ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಆದ್ಯತೆ ನೀಡುವಂತೆ ತಿಳಿಸಿದ ಸಚಿವರು, ವಿಶೇಷವಾಗಿ ಜೈಲುಗಳು ಹಾಗೂ ಬಸ್ ನಿಲ್ದಾಣಗಳಲ್ಲಿ, ನಮ್ಮ ಕ್ಲಿನಿಕ್‌ಗಳನ್ನ ಆರಂಭಿಸುವ ಕುರಿತು ಸ್ಥಳ ಗುರುತಿಸುವ ಕಾರ್ಯ 15 ದಿನಗಳ ಒಳಗಾಗಿ ಪೂರ್ಣಗೊಳಿಸಿ ಕ್ಯಾಬಿನೆಟ್ ಒಪ್ಪಿಗೆ ಪಡೆಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅನೀಲ್ ಕುಮಾರ್ ಎನ್.ಎಚ್.ಎಂ ಎಂ.ಡಿ ನವೀನ್ ಭಟ್ ಹಾಗೂ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಅವರಿಗೆ ಸೂಚಿಸಿದರು.

15 ನೇ ಹಣಕಾಸಿನಲ್ಲಿ ಆರೋಗ್ಯ ಯೋಜನೆಗಳ ಸ್ಥಿತಿಗತಿಗಳ ಕುರಿತು ಹಿರಿಯ ಆರೋಗ್ಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಸಚಿವರು, ಯೋಜನೆಗಳ ಶೀಘ್ರ ಕಾರ್ಯಗತಗೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕಾಗಿದೆ. ವಿಳಂಬ ನೀತಿಯನ್ನು ಅನುಸರಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: SSLC Examination 2 : 700ಕ್ಕೂ ಹೆಚ್ಚು ಕೇಂದ್ರಗಳಲ್ಲಿ ನಾಳೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಶುರು

ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡ ದುರಸ್ತಿ ಕಾರ್ಯಗಳು, ಆಸ್ಪತ್ರೆಗಳ ಮೂಲಸೌಕರ್ಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ 15ನೇ ಹಣಕಾಸಿನಲ್ಲಿ ಸಿಗುವ ಅನುದಾನವನ್ನು ಸಂಪೂರ್ಣವಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಇದೇ ವೇಳೆ ಆರೋಗ್ಯ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

Continue Reading

ಆರೋಗ್ಯ

Glasses or Lenses?: ಕನ್ನಡಕವೋ ಕಾಂಟ್ಯಾಕ್ಟ್‌ ಲೆನ್ಸ್‌ ಬೇಕೋ? ಇದನ್ನು ಓದಿ, ನೀವೇ ನಿರ್ಧರಿಸಿ!

ಕನ್ನಡಕ ಧರಿಸುವುದೋ ಅಥವಾ ಕಾಂಟ್ಯಾಕ್ಟ್‌ ಲೆನ್ಸ್‌ ಬಳಸುವುದೋ? ಈ ಪ್ರಶ್ನೆ ದೃಷ್ಟಿದೋಷ ಇರುವಂಥ ಹಲವರನ್ನು ಕಾಡಿರಬಹುದು. ಇವೆರಡಕ್ಕೂ ಅದರದ್ದೇ ಆದ ಇತಿ-ಮಿತಿಗಳಿವೆ. ನಿಮ್ಮ ಆದ್ಯತೆ ಯಾವುದು ಎನ್ನುವುದನ್ನು ನಿರ್ಧರಿಸುವುದಕ್ಕೆ ಬೇಕಾದ ಮಾಹಿತಿಗಳು (Glasses or Lenses) ಇಲ್ಲಿವೆ.

VISTARANEWS.COM


on

Glasses or Lenses
Koo

ಕಣ್ಣಿಗೆ ಪವರ್‌ ಇದ್ದರೆ ಆಗಾಗ ಕಾಡುವ ಪ್ರಶ್ನೆ- ಕನ್ನಡಕ ಹಾಕಬೇಕೆ ಅಥವಾ ಕಾಂಟ್ಯಾಕ್ಟ್‌ ಲೆನ್ಸ್‌ ಹಾಕಬೇಕೆ? ಇವೆರಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಂಡರೂ ದೃಷ್ಟಿದೋಪ ಸರಿಪಡಿಸುವುದು ಇದರ ಪ್ರಧಾನ ಉದ್ದೇಶವೆಂಬುದು ನಿಜ. ಆದರೆ ಜೊತೆಗೊಂದಿಷ್ಟು ಇದೆಯಲ್ಲ… ಕೊಸರು! ಇವೆರಡಕ್ಕೂ ಅವುಗಳದ್ದೇ ಆದ ಇತಿ-ಮಿತಿಗಳಿವೆ. ಅದರಲ್ಲೂ ಜೇಬಿಗೆಷ್ಟು ಭಾರ, ಯಾವುದು ಆರಾಮದಾಯಕ, ಧರಿಸುವವರ ಆದ್ಯತೆಗಳೇನು, ಜೀವನಶೈಲಿಗೆ ಹೊಂದುತ್ತದೆಯೇ ಎಂಬ ಹಲವು ವಿಷಯಗಳನ್ನು ಆಧರಿಸಿಯೇ ಆಯ್ಕೆ ಮಾಡುವುದಲ್ಲವೇ? ಇವೆಲ್ಲವುಗಳ ಜೊತೆಗೆ, ಕಣ್ಣಿನ ಆರೋಗ್ಯಕ್ಕೆ ಯಾವುದು ಹಿತ ಎನ್ನುವ ಪ್ರಶ್ನೆ ಮಹತ್ವದ್ದಾಗುತ್ತದೆ. ಯಾವುದು ಹಿತ ಈ (Glasses or Lenses) ಎರಡರೊಳಗೆ?

Glasses

ಕನ್ನಡಕ

ಶತಮಾನಗಳಿಂದ ಎಲ್ಲರ ದೃಷ್ಟಿದೋಷವನ್ನು ಸರಿಪಡಿಸುತ್ತ ಬಂದಿರುವ ಕನ್ನಡಕಗಳು ಯಾವುದೇ ತಲೆಬಿಸಿ ನೀಡದಂಥವು. ನಿಯಮಿತವಾಗಿ ನೇತ್ರವೈದ್ಯರಲ್ಲಿ ಹೋಗಿ ತಪಾಸಣೆ ಮಾಡಿಸಿಕೊಂಡು, ಕಣ್ಣಿನ ಪವರ್‌ ಎಷ್ಟಿದೆ ಎಂಬುದನ್ನು ನೋಡಿಕೊಂಡರಾಯಿತು. ಇರುವ ಕನ್ನಡಕವನ್ನು ಬದಲಾಯಿಸಬೇಕು ಎಂದಿದ್ದರೆ ವೈದ್ಯರೇ ಅದನ್ನು ಸೂಚಿಸುತ್ತಾರೆ. ಅದರಂತೆ ಕನ್ನಡದ ಬದಲಾಯಿಸಿದರೆ, ಮತ್ತಿನ್ನೇನೂ ಮಾಡಬೇಕಿಲ್ಲ. ಕನ್ನಡದ ಗಾಜನ್ನು ಒರೆಸಿ ಸ್ವಚ್ಛ ಮಾಡುವುದಕ್ಕಿಂತ ಹೆಚ್ಚಿನ ನಿರ್ವಹಣೆಯನ್ನು ಅದು ಬೇಡುವುದಿಲ್ಲ. ಇದು ದೃಷ್ಟಿ ದೋಷಕ್ಕೆ ಮದ್ದಷ್ಟೇ ಅಲ್ಲ, ಧೂಳು, ಬಿಸಿಲು, ಹಾನಿಕಾರಕ ಕಿರಣಗಳಿಂದಲೂ ರಕ್ಷಣೆಯನ್ನು ನೀಡಬಲ್ಲದು. ಅದರಲ್ಲೂ ಕೆಲವು ಸುಧಾರಿತ ಫೋಟೋಕ್ರೋಮಿಕ್‌ ಕನ್ನಡಕಗಳು ನೂರು ಪ್ರತಿಶತ ಅತಿನೇರಳೆ ಕಿರಣಗಳನ್ನು ತಡೆಗಟ್ಟಬಲ್ಲವು. ಈ ಕೆಲಸವನ್ನು ಯಾವುದೇ ಲೆನ್ಸ್‌ಗಳೂ ಮಾಡಲಾರವು. ಅವರವರ ಮುಖಮಂಡಲಕ್ಕೆ ಕಳೆಗಟ್ಟಿಸುವಂಥ ಸುಂದರ ಫ್ರೇಮ್‌ಗಳನ್ನು ಆಯ್ದುಕೊಂಡರೆ, ಕನ್ನಡಕವೂ ಫ್ಯಾಷನ್‌ ಘೋಷಣೆಯನ್ನು ಹೊರಡಿಸಬಲ್ಲದು. ಆದರೊಂದು, ಕನ್ನಡಕವನ್ನು ಹಾಕುವುದು ಅನಿವಾರ್ಯ ಎಂದಾಗ, ಕೆಲವೊಮ್ಮೆ ಅದು ಸಮಸ್ಯೆಯನ್ನೂ ಸೃಷ್ಟಿಸಬಲ್ಲದು. ಉದಾ, ಆಡುವುದು, ಓಡುವುದು ಮುಂತಾದ ದೈಹಿಕ ಚಟುವಟಿಕೆಗಳು ಮುಖ್ಯವಾಗಿದ್ದಾಗ ಕನ್ನಡಕ ತೊಡಕೆನಿಸುತ್ತದೆ. ನೃತ್ಯ, ನಟನೆಯಂಥ ಕಲೆಗಳಲ್ಲಿ ಕನ್ನಡಕ ಅಡಚಣೆ ಕೊಡುತ್ತದೆ. ಹೀಗೆ ಬಳಕೆದಾರರ ಮಿತ್ರ ಎನಿಸುವ ಕನ್ನಡಕವೂ ಕೆಲವೊಮ್ಮೆ ಕಣ್‌ ಕಣ್‌ ಬಿಡಿಸುತ್ತದೆ.

 Lenses

ಕಾಂಟ್ಯಾಕ್ಟ್‌ ಲೆನ್ಸ್‌

ಶತಮಾನಗಳ ಇತಿಹಾಸವಿಲ್ಲದ ಇದು, ಆಧುನಿಕ ಕಾಲದ್ದು. ಇಂದಿನ ಹಲವು ರೀತಿಯ ಅಗತ್ಯಗಳು ಮತ್ತು ಬದಲಾವಣೆಗಳಿಗೆ ಹೇಳಿ ಮಾಡಿಸಿದಂತದ್ದು. ಕನ್ನಡಕದ ಭಾರದಿಂದ ಮುಕ್ತಿ ನೀಡುವ ಇದು, ಮುಖದ ಸೌಂದರ್ಯವನ್ನು ಇದ್ದಂತೆಯೇ ಉಳಿಸುತ್ತದೆ. ಮದುವೆ, ನಾಮಕರಣದಂಥ ಸಾಮಾಜಿಕ ಕಾರ್ಯಕ್ರಮಗಳಿರಲಿ, ಆಟ, ಓಟದಂಥ ದೈಹಿಕ ಚಟುವಟಿಕೆಗಳಿರಲಿ, ನೃತ್ಯ-ನಟನೆಯಂಥ ಸಾಂಸ್ಕೃತಿಕ ಕಾರ್ಯಕ್ರಮಗಳಿರಲಿ- ಸಂದರ್ಭ ಯಾವುದೇ ಆದರೂ ಕಾಂಟ್ಯಾಕ್ಟ್‌ ಲೆನ್ಸ್‌ ಬಳಕೆ ಸೂಕ್ತವಾದದ್ದು. ವಾತಾವರಣದಲ್ಲಿ ತೇವ ಹೆಚ್ಚಿದ್ದಾಗ ಅಥವಾ ಮಾಸ್ಕ್‌ ಧರಿಸಿದಾಗ ಕನ್ನಡಕದ ಗಾಜಿನಂತೆ ಲೆನ್ಸ್‌ ಮಸುಕಾಗುವುದಿಲ್ಲ. ಹಾಗಾಗಿ ಕ್ರಿಯಾತ್ಮಕ ದೃಷ್ಟಿಯಿಂದಲೂ ಇದು ಕನ್ನಡಕಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸುತ್ತದೆ. ಕಾಂಟ್ಯಾಕ್ಟ್‌ ಲೆನ್ಸ್‌ ಬಳಸುವುದರಲ್ಲಿ ಇನ್ನೂ ಕೆಲವು ಲಾಭಗಳಿವೆ. ದೃಷ್ಟಿಯ ವ್ಯಾಪ್ತಿ ಕನ್ನಡಕ ಹಾಕಿದ ಸಂದರ್ಭಕ್ಕಿಂತ ಹೆಚ್ಚು ವಿಶಾಲವಾಗಿರುತ್ತದೆ ಲೆನ್ಸ್‌ನಲ್ಲಿ. ಜೊತೆಗೆ ನಿಖರತೆ ಮತ್ತು ಸ್ಪಷ್ಟತೆಯೂ ಅಧಿಕ. ಅದರಲ್ಲೂ ತೀವ್ರ ಅಸ್ಟಿಗ್ಮ್ಯಾಟಿಸಂ ಇರುವವರಲ್ಲಿ ದೃಷ್ಟಿಯ ನಿಖರತೆಯನ್ನು ಕನ್ನಡಕಕ್ಕಿಂತ ಸಾಕಷ್ಟು ಹೆಚ್ಚಿಸಬಲ್ಲದು ಕಾಂಟ್ಯಾಕ್ಟ್‌ ಲೆನ್ಸ್‌. ಎಲ್ಲಕ್ಕಿಂತ ಮುಖ್ಯವಾಗಿ ದೃಷ್ಟಿ ದೋಷ ಇರುವುದನ್ನು ಜಗಜ್ಜಾಹೀರು ಮಾಡದೆಯೇ, ಇದನ್ನು ಬಳಸಬಹುದು.

ಇದನ್ನೂ ಓದಿ: Rock Salt Or Powder Salt: ಬೆಳ್ಳನೆಯ ಪುಡಿ ಉಪ್ಪು ಆರೋಗ್ಯಕರವೇ ಅಥವಾ ಕಲ್ಲುಪ್ಪೇ?

ಜಾಗ್ರತೆ ಅಗತ್ಯ

ಕಾಂಟ್ಯಾಕ್ಟ್‌ ಲೆನ್ಸ್‌ಗಳು ತುಟ್ಟಿ. ಕನ್ನಡಕಗಳಂತೆ ಕಿಸೆಗೆ ಹಗುರವಲ್ಲ ಇವು. ಜೊತೆಗೆ ಇವುಗಳನ್ನು ಸದಾ ಬಳಸುತಿದ್ದರೆ ಕಣ್ಣುಗಳು ತೇವ ಕಳೆದುಕೊಂಡು ಶುಷ್ಕವಾಗುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇವುಗಳನ್ನು ಬಳಸುವಾಗ ಕೈಗಳ ಸ್ವಚ್ಛತೆಯ ಬಗ್ಗೆ ಜಾಗ್ರತೆ ಅಗತ್ಯ. ಹಾಗಿಲ್ಲದಿದ್ದರೆ ಕಣ್ಣಿಗೆ ಸೋಂಕು ಉಂಟಾಗಬಹುದು. ಈ ಕಾರಣದಿಂದಲೇ ಕನ್ನಡಕಗಳಿಗೆ ಹೋಲಿಸಿದರೆ, ಲೆನ್ಸ್‌ ಬಳಕೆದಾರರಲ್ಲಿ ಸೋಂಕಿನ ಪ್ರಮಾಣ ಹೆಚ್ಚು. ಲೆನ್ಸ್‌ಗಳು ಮತ್ತು ಅವುಗಳ ಡ್ರಾಪ್ಸ್‌ ವ್ಯಾಲಿಡಿಟಿಯನ್ನು ಆಗಾಗ ಪರಿಶೀಲಿಸುವುದು ಬಹುಮುಖ್ಯ. ಲೆನ್ಸ್‌ ಧರಿಸಿ ಈಜುವುದು, ರಾತ್ರಿ ನಿದ್ದೆ ಮಾಡುವುದು ಮುಂತಾದವು ಸಲ್ಲದು.

Continue Reading

ಆರೋಗ್ಯ

Health Tips Kannada: ನಮ್ಮ ದೇಹದಲ್ಲಿ ಉಪ್ಪಿನ ಅಂಶ ಕಡಿಮೆಯಾಗಿದೆ ಎಂದು ತಿಳಿಯುವುದು ಹೇಗೆ?

ದೇಹವೆಂಬ ದೇಗುಲವನ್ನು ಚೆನ್ನಾಗಿ ನೋಡಿಕೊಂಡರಷ್ಟೇ ಮಾನಸಿಕ ದೈಹಿಕವಾದ ಆರೋಗ್ಯ ಚೆನ್ನಾಗಿದ್ದೀತು. ದೇಹಕ್ಕೆ ಅಗತ್ಯವಾಗಿ ಬೇಕೇಬೇಕಾದ ಪೋಷಕಾಂಶಗಳನ್ನು ಸರಿಯಾಗಿ ಪೂರೈಸದಿದ್ದಲ್ಲಿ ಅದರ ಪರಿಣಾಮಗಳೂ ತಿಳಿದು ಬಂದಾವು. ಹಾಗಂತ ಪೋಷಕಾಂಶಗಳು ಅಗತ್ಯಕ್ಕಿಂತ ಹೆಚ್ಚಾದರೂ ಕೂಡಾ ಅದು ನಮಗೆ ಯಾವುದಾದರೊಂದು ಬಗೆಯಲ್ಲಿ ತಿಳಿದೇ ತಿಳಿಯುತ್ತದೆ. ಉದಾಹರಣೆಗೆ ಉಪ್ಪಿನ ಮೂಲಕ ದೇಹಕ್ಕೆ ಸಿಗುವ ಸೋಡಿಯಂ ಅತಿಯಾಗಲೂ ಬಾರದು. ಅಷ್ಟೇ ಅಲ್ಲ, ಕಡಿಮೆಯಾಗಲೂ ಬಾರದು. ಅಧಿಕ ರಕ್ತದೊತ್ತಡ, ಹೃದಯದ ಸಮಸ್ಯೆ ಇತ್ಯಾದಿ ಇರುವ ಮಂದಿಗೆ ಸೋಡಿಯಂ ಅತಿಯಾದರೂ (Health Tips Kannada) ಸಮಸ್ಯೆಯೇ.

VISTARANEWS.COM


on

Health Tips Kannada
Koo

ನಮ್ಮ ದೇಹ ಒಂದು ಸಂಕೀರ್ಣವಾದ ವ್ಯವಸ್ಥೆ. ಇದು ಆರೋಗ್ಯಕರವಾಗಿ ಇರಬೇಕೆಂದರೆ ನಾವು ಅದನ್ನು ಸರಿಯಾದ ಪೋಷಕಾಂಶಗಳನ್ನು ಕಾಲಕಾಲಕ್ಕೆ ಒದಗಿಸಿ ಚೆನ್ನಾಗಿ ನೋಡಿಕೊಳ್ಳಬೇಕು. ದೇಹವೆಂಬ ದೇಗುಲವನ್ನು ಚೆನ್ನಾಗಿ ನೋಡಿಕೊಂಡರಷ್ಟೇ ಮಾನಸಿಕ ದೈಹಿಕವಾದ ಆರೋಗ್ಯ ಚೆನ್ನಾಗಿದ್ದೀತು. ದೇಹಕ್ಕೆ ಅಗತ್ಯವಾಗಿ ಬೇಕೇಬೇಕಾದ ಪೋಷಕಾಂಶಗಳನ್ನು ಸರಿಯಾಗಿ ಪೂರೈಸದಿದ್ದಲ್ಲಿ ಅದರ ಪರಿಣಾಮಗಳೂ ತಿಳಿದು ಬಂದಾವು. ಹಾಗಂತ ಪೋಷಕಾಂಶಗಳು ಅಗತ್ಯಕ್ಕಿಂತ ಹೆಚ್ಚಾದರೂ ಕೂಡಾ ಅದು ನಮಗೆ ಯಾವುದಾದರೊಂದು ಬಗೆಯಲ್ಲಿ ತಿಳಿದೇ ತಿಳಿಯುತ್ತದೆ. ಉದಾಹರಣೆಗೆ ಉಪ್ಪಿನ ಮೂಲಕ ದೇಹಕ್ಕೆ ಸಿಗುವ ಸೋಡಿಯಂ ಅತಿಯಾಗಲೂ ಬಾರದು. ಅಷ್ಟೇ ಅಲ್ಲ, ಕಡಿಮೆಯಾಗಲೂ ಬಾರದು. ಅಧಿಕ ರಕ್ತದೊತ್ತಡ, ಹೃದಯದ ಸಮಸ್ಯೆ ಇತ್ಯಾದಿ ಇರುವ ಮಂದಿಗೆ ಸೋಡಿಯಂ ಅತಿಯಾದರೂ (Health Tips Kannada) ಸಮಸ್ಯೆಯೇ.
ಸೋಡಿಯಂ ಕ್ಲೋರೈಡ್‌ ಎಂಬ ಉಪ್ಪಿನಲ್ಲಿ ಶೇ 40ರಷ್ಟು ಸೋಡಿಯಂ ಇದ್ದರೆ ಶೇ 60ರಷ್ಟು ಕ್ಲೋರೈಡ್‌ ಇದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರಕಾರ ಒಬ್ಬ ಆರೋಗ್ಯವಂತ ದಿನಕ್ಕೆ ೫ ಗ್ರಾಂಗಿಂತ ಹೆಚ್ಚು ಸೋಡಿಯಂ ಸೇವಿಸಬಾರದು. ಐಸಿಎಂಆರ್‌ ಹೇಳುವಂತೆ ಒಬ್ಬನಿಗೆ ಪ್ರತಿನಿತ್ಯ 1.1ರಿಂದ 3.3 ಗ್ರಾಂ ಸೋಡಿಯಂ ಅಥವಾ 2.8ರಿಂದ 8.3 ಗ್ರಾಂ ಸೋಡಿಯಂ ಕ್ಲೋರೈಡ್‌ ಅಗತ್ಯವಿದೆ. ಅಂದರೆ, 2,300 ಎಂ.ಜಿಯಷ್ಟು ಉಪ್ಪು ನಾವು ಒಂದು ದಿನಕ್ಕೆ ಸೇವಿಸಬಹುದು. ಸಾಮಾನ್ಯವಾಗಿ ಅರ್ಥವಾಗುವ ಭಾಷೆಯಲ್ಲಿ ಹೇಳುವುದಾದರೆ, ಒಂದು ಚಮಚ ಉಪ್ಪು ಒಂದು ದಿನಕ್ಕೆ ನಮ್ಮ ದೇಹಕ್ಕೆ ಸಾಕು. ಆದರೆ, ಸದ್ಯ ನಾವೆಲ್ಲರೂ ನಮ್ಮ ದೇಹಕ್ಕೆ ನೀಡುತ್ತಿರುವ ಸೋಡಿಯಂ ಇದರ ದುಪ್ಪಟ್ಟಿದೆ. ಆದರೂ, ಬಹಳಷ್ಟು ಸಾರಿ ನಾವು ನಮ್ಮ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಸೋಡಿಯಂ ನೀಡುತ್ತಿದ್ದೇವಾ ಇಲ್ಲವಾ ಎಂಬುದು ತಿಳಿಯುವುದೇ ಇಲ್ಲ. ಆದರೆ, ದೇಹವು ತನಗೆ ಯಾವುದೇ ಪೋಷಕಾಂಶ ಕಡಿಮೆಯಾಗಲಿ, ಹೆಚ್ಚಾಗಲಿ ಹೇಳಿಯೇ ತೀರುತ್ತದೆ. ಆದರೆ, ಅದು ಹೇಳುವುದು ನಮಗೆ ಅರ್ಥವಾಗುತ್ತದೆಯೋ ಎಂಬುದು ಮುಖ್ಯ ವಿಚಾರ.
ಸೋಡಿಯಂ ನಮ್ಮ ದೇಹಕ್ಕೆ ಕಡಿಮೆಯಾದಾಗಲೂ ದೇಹ ಅದರದ್ದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ. ಹೇಗೆ ಸೋಡಿಯಂ ಹೆಚ್ಚಾದರೆ ಸಮಸ್ಯೆಯೋ ಹಾಗೆಯೇ ಸೋಡಿಯಂ ಕಡಿಮೆಯಾದರೂ ಸಮಸ್ಯೆಯೇ. ಸೋಡಿಯಂ ಕಡಿಮೆಯಾದರೆ, ಖಿನ್ನತೆ, ಸುಸ್ತು, ತಲೆಸುತ್ತು, ವಾಂತಿ, ತಲೆನೋವು, ಕಿರಿಕಿರಿಯಾಗುವುದು, ಗೊಂದಲ ಇತ್ಯಾದಿ ಸಮಸ್ಯೆಗಳೂ ಬರಬಹುದು.

Unexplained frequent headaches Excessive Use Of Electronic Gadgets

ತಲೆನೋವು

ನಮ್ಮ ನರಮಂಡಲಕ್ಕೆ ಸೋಡಿಯಂ ಬೇಕೇಬೇಕು. ಸೋಡಿಯಂ ಕಡಿಮೆಯಾದಾಗ ಅದರ ಪರಿಣಾಮವಾಗಿ ತಲೆನೋವು ಆರಂಭವಾಗುತ್ತದೆ. ಹಾಗಂತ ಎಲ್ಲ ತಲೆನೋವುಗಳು ಸೋಡಿಯಂ ಕೊರತೆಯಿಂದಲ್ಲ. ಆದರೆ, ಸೋಡಿಯಂ ಕೊರತೆಯೂ ಕೂಡ ತಲೆನೋವಿಗೆ ಕಾರಣವಾಗಿರಬಹುದು.

Have a headache Ashwagandha Herb Benefits

ತಲೆಸುತ್ತು ಹಾಗೂ ವಾಂತಿ

ಸೋಡಿಯಂನ ಮಟ್ಟ ಏರುಪೇರಾದಾಗ ದೇಹದಲ್ಲಿರುವ ನೀರೂ ಕೂಡಾ ಹೀಗೆ ಹೊರಹೋಗಬಹುದು.

ಗೊಂದಲ

ಸೋಡಿಯಂ ನರಮಂಡಲದ ಮೇಲೆ ನೇರವಾಗಿ ಪರಿಣಾಮ ಬೀರುವುದರಿಂದ ಮಿದುಳಿಗೆ ಈ ಸಮಸ್ಯೆ ಬರುತ್ತದೆ. ಇಲ್ಲಿ ಮಿದುಳು ಸಂದೇಶಗಳನ್ನು ಸರಿಯಾಗಿ ಕಳುಹಿಸಲು ಸಾಧ್ಯವಾಗದೆ, ಗೊಂದಲದಂತಹ ಮನಸ್ಥಿತಿ ನಿರ್ಮಾಣವಾಗುತ್ತದೆ.

ಇದನ್ನೂ ಓದಿ: Benefits Of Eating Guava: ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕೆ? ಸೀಬೆಕಾಯಿ ತಿನ್ನಿ!

ಮಾಂಸಖಂಡಗಳಲ್ಲಿ ಸೆಳೆತ

ಸೋಡಿಯಂ ಕೊರತೆಯಾದಾಗ, ದೇಹದಲ್ಲಿ ಬೇಡದ ವಸ್ತುಗಳು ಸರಿಯಾಗಿ ಹೊರಗೆ ಹೋಗಲು ಸಾಧ್ಯವಾಗದೆ, ಅವು ಹೀಗೆ ಮಾಂಸಖಂಡಗಳ ಮೇಲೆ ಅಡ್ಡ ಪರಿಣಾಮ ಬೀರುತ್ತವೆ. ಉದಾಹರಣೆಗೆ ಲ್ಯಾಕ್ಟಿಕ್‌ ಆಸಿಡ್‌ನಂತ ಬೇಡವಾದ ವಸ್ತು ದೇಹದಿಂದ ಕಾಲಕಾಲಕ್ಕೆ ಹೊರಹೋಗಲು ಸಾಧ್ಯವಾಗದೆ, ಹೀಗಾಗುತ್ತದೆ.
ಹೀಗಾಗಿ ದೇಹದಲ್ಲಿ ಸಮತೋಲನ ಕಾಯ್ದುಕೊಳ್ಳಲು, ಎಲ್ಲ ಅಂಗಾಗಗಳೂ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಸೋಡಿಯಂ ಬೇಕೇ ಬೇಕು. ಕೇವಲ ಸೋಡಿಯಂ ಮಾತ್ರವಲ್ಲ, ಎಲ್ಲ ಬಗೆಯ ಪೋಷಣೆಯೂ ಲಭ್ಯವಾಗಬೇಕು. ಹಾಗಾಗಿ, ಉಪ್ಪಿನ ಸೇವನೆಯ ಬಗ್ಗೆ ವಿಶೇಷ ಕಾಳಜಿ ಅತ್ಯಂತ ಅಗತ್ಯ. ಇದು ದೇಹಕ್ಕೆ ಕಡಿಮೆಯೂ ಆಗದಂತೆ, ಹೆಚ್ಚೂ ಆಗದಂತೆ ಕಾಳಜಿ ವಹಿಸಬೇಕು.

Continue Reading
Advertisement
Leg Cramps At Night
ಆರೋಗ್ಯ13 mins ago

Leg Cramps At Night: ರಾತ್ರಿ ಮಲಗಿದಾಗ ಕಾಡುವ ಕಾಲುನೋವಿಗೆ ಇದೆ ಪರಿಹಾರ!

Dina Bhavishya
ಭವಿಷ್ಯ1 hour ago

Dina Bhavishya: ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡುವುವರ ಬಗ್ಗೆ ಎಚ್ಚರಿಕೆ ಇರಲಿ

Jammu Kashmir
ದೇಶ6 hours ago

Jammu Kashmir: ಕಾಶ್ಮೀರದಲ್ಲಿ ಮತ್ತೊಂದು ದುರಂತ; ಸೇನಾ ವಾಹನ ಕಣಿವೆಗೆ ಬಿದ್ದು ಯೋಧ ಸಾವು, ನಾಲ್ವರಿಗೆ ಗಾಯ

Forest department agrees to give 500 acres for yEttina hole project work says DCM DK Shivakumar
ಕರ್ನಾಟಕ6 hours ago

DK Shivakumar: ಎತ್ತಿನಹೊಳೆ ಕಾಮಗಾರಿಗೆ 500 ಎಕರೆ ನೀಡಲು ಅರಣ್ಯ ಇಲಾಖೆ ಒಪ್ಪಿಗೆ

Maharaj
ಸಿನಿಮಾ7 hours ago

Maharaj: ಹಿಂದುಗಳಿಗೆ ಅವಮಾನ; ಆಮೀರ್‌ ಖಾನ್‌ ಪುತ್ರನ ‘ಮಹಾರಾಜ್’‌ ಸಿನಿಮಾ ಬಿಡುಗಡೆಗೆ ಕೋರ್ಟ್‌ ತಡೆ

ISIS Terrorists
ಕರ್ನಾಟಕ8 hours ago

ದೇಶದ ಪ್ರತಿ ಜಿಲ್ಲೆಗೂ ಉಗ್ರರ ನೇಮಿಸಲು ಬಳ್ಳಾರಿಯಲ್ಲಿ ಸಂಚು; ಎನ್‌ಐಎ ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಮಾಹಿತಿ!

Actress Ramya
ಕರ್ನಾಟಕ9 hours ago

Actress Ramya: ಕಾನೂನಿಗಿಂತ ಯಾರೂ ದೊಡ್ಡೋರಲ್ಲ; ದರ್ಶನ್‌ಗೆ ಮತ್ತೆ ನಟಿ ರಮ್ಯಾ ಕ್ಲಾಸ್!

Namma Clinic
ಕರ್ನಾಟಕ9 hours ago

Namma Clinic: ಬಸ್‌ ನಿಲ್ದಾಣ ಸೇರಿದಂತೆ 254 ಕಡೆ ʼನಮ್ಮ ಕ್ಲಿನಿಕ್‌ʼ ಸ್ಥಾಪನೆ

Maruti Suzuki
ಆಟೋಮೊಬೈಲ್9 hours ago

Maruti Suzuki: ಮಾರುತಿ ಸುಜುಕಿ ಸಿಎನ್‌ಜಿ ವಾಹನದ ಟೀಸರ್ ಔಟ್‌; ಹಲವು ವೈಶಿಷ್ಟ್ಯಗಳ ನಿರೀಕ್ಷೆ

Reliance Retail Tira unveils skin care brand Akind
ದೇಶ10 hours ago

Reliance Retail: ಚರ್ಮ ರಕ್ಷಣೆಯ ʼಅಕೈಂಡ್ʼ ಬ್ರಾಂಡ್‌ನ ಕ್ರೀಮ್‌ ಬಿಡುಗಡೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ3 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ3 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ3 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ3 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ6 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ7 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌