UAV | ಮಾನವ ರಹಿತ ಹಾರಾಟದಲ್ಲಿ ಭಾರತದ ನೂತನ ಮೈಲಿಗಲ್ಲು! - Vistara News

ತಂತ್ರಜ್ಞಾನ

UAV | ಮಾನವ ರಹಿತ ಹಾರಾಟದಲ್ಲಿ ಭಾರತದ ನೂತನ ಮೈಲಿಗಲ್ಲು!

ಭಾರತೀಯ ಮಿಲಿಟರಿಗಾಗಿ ಡಿಆರ್‌ಡಿಒ ಸ್ಥಳೀಯವಾಗಿ ಅಭಿವೃದ್ಧಿಪಡಿಸಿರುವ ಚಾಲಕರಹಿತ ವಿಮಾನದ ಪರೀಕ್ಷಾರ್ಥ ಹಾರಾಟ ಚಿತ್ರದುರ್ಗದಲ್ಲಿ ಜುಲೈ 1 ರಂದು ಯಶಸ್ವಿಯಾಗಿ ನಡೆಯಿತು. ಈ ವಿಮಾನದ ಮಹತ್ವವೇನು ಎಂಬುದನ್ನು ವಿವರಿಸುವ ತಜ್ಞರ ಲೇಖನ ಇಲ್ಲಿದೆ.

VISTARANEWS.COM


on

indian uav
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಗಿರೀಶ್ ಲಿಂಗಣ್ಣ
ಸ್ಟೆಲ್ತ್ ವಿಂಗ್ ಫ್ಲೈಯಿಂಗ್ ಟೆಸ್ಟ್ ಬೆಡ್ ಅಥವಾ ಸ್ವಿಫ್ಟ್ ಎಂಬ ಹೆಸರಿನ ಭಾರತದ ಪ್ರಥಮ ಮಾನವ ರಹಿತ ಯುದ್ಧ ವಿಮಾನದ (ಅನ್ ಮ್ಯಾನ್ಡ್ ಕಾಂಬ್ಯಾಟ್ ಏರಿಯಲ್ ವೆಹಿಕಲ್ – ಯುಸಿಎವಿ UAV ) ಯಶಸ್ವಿ ಪ್ರಥಮ ಹಾರಾಟ ಪ್ರಯೋಗ ಇತ್ತೀಚೆಗೆ ನಮ್ಮ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ನಡೆದಿದೆ. ಇದು ಈ ಯೋಜನೆಯಲ್ಲಿ ಒಂದು ನೂತನ ಮೈಲಿಗಲ್ಲಾಗಿದೆ.

ಕರ್ನಾಟಕದ ಚಿತ್ರದುರ್ಗದಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ ಈ ಯೋಜನೆಯ ಅಂಗವಾಗಿ ನಿರ್ಮಾಣಗೊಂಡ ವಿಮಾನವು ತನ್ನ ಪ್ರಥಮ ಹಾರಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

“ಹಾರಾಟದ ಸಂದರ್ಭದಲ್ಲಿ ವಿಮಾನವು ಸಂಪೂರ್ಣ ಸ್ವಯಂಚಾಲಿತ ವಿಧಾನದಲ್ಲಿ ಯಾವ ತೊಂದರೆಯೂ ಇಲ್ಲದೆ ಯಶಸ್ವಿ ಪ್ರಥಮ ಹಾರಾಟ ಕೈಗೊಂಡಿತು. ಈ ವಿಮಾನವು ಸ್ವಯಂಚಾಲಿತ ಟೇಕಾಫ್, ವೇ ಪಾಯಿಂಟ್ ನ್ಯಾವಿಗೇಷನ್, ಹಾಗೂ ಟಚ್ ಡೌನ್ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದೆ. ಈ ವಿಮಾನವು ಇಂತಹ ಪ್ರಮುಖ ರಕ್ಷಣಾ ತಂತ್ರಜ್ಞಾನದಲ್ಲಿ ಸ್ವಾವಲಂಬನೆಯ ಕಡೆಗಿನ ಪ್ರಮುಖ ಹೆಜ್ಜೆಯಾಗಿದ್ದು, ಭವಿಷ್ಯದ ಪ್ರಮುಖ ತಂತ್ರಜ್ಞಾನವಾದ ಮಾನವ ರಹಿತ ವಿಮಾನ ನಿರ್ಮಾಣದ ವಿಚಾರದಲ್ಲಿ ಅತ್ಯಂತ ಮಹತ್ವದ ಘಟ್ಟವಾಗಿದೆ” ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಹೇಳಿತ್ತು.

ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ಈ ಯಶಸ್ವಿ ಹಾರಾಟಕ್ಕಾಗಿ ಡಿಆರ್‌ಡಿಓ ಸಂಸ್ಥೆಯನ್ನು ಶ್ಲಾಘಿಸಿ, ಇದು ಮಾನವ ರಹಿತ ವಿಮಾನ ನಿರ್ಮಾಣದ ಪ್ರಮುಖ ಹೆಜ್ಜೆಯಾಗಿದ್ದು, ಸೇನಾ ತಂತ್ರಜ್ಞಾನದ ವಿಚಾರದಲ್ಲಿ ‘ಆತ್ಮನಿರ್ಭರ ಭಾರತದ ನಿರ್ಮಾಣʼಕ್ಕಾಗಿ ಹೊಸ ಹಾದಿಯನ್ನು ತೋರುತ್ತದೆ ಎಂದಿದ್ದರು. ಈ ಸುದ್ದಿ ಮಾಧ್ಯಮಗಳಲ್ಲಿ ಬಂದಿದೆ.

ಚೆನ್ನೈನಲ್ಲಿ ಉಪಕರಣ ತಯಾರು

ಸ್ವಿಫ್ಟ್ ಯೋಜನೆಗೆ ಅಗತ್ಯವುಳ್ಳ ರಿಟ್ರ್ಯಾಕ್ಟೇಬಲ್ ಲ್ಯಾಂಡಿಂಗ್ ಗೇರ್ ಸೊಲ್ಯುಷನ್ನನ್ನು ಡಿಆರ್‌ಡಿಓ ಸಂಸ್ಥೆಯ, ಚೆನ್ನೈನಲ್ಲಿರುವ ಕಾಂಬ್ಯಾಕ್ಟ್ ವೆಹಿಕಲ್ಸ್ ರಿಸರ್ಚ್ ಆ್ಯಂಡ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್ ಒದಗಿಸಿದೆ. ಅಕ್ಟೋಬರ್ 2020ರಲ್ಲಿ ಪ್ರಕಟವಾದ ತನ್ನ ತಂತ್ರಜ್ಞಾನ ಬುಲೆಟಿನ್ ನಲ್ಲಿ ಡಿಆರ್‌ಡಿಓ ತಾನು ಈಗಾಗಲೇ ಈ ಯೋಜನೆಗೆ ಅಗತ್ಯವಿರುವ ಲ್ಯಾಂಡಿಂಗ್ ಗೇರ್ ನಿರ್ಮಾಣದ ಕಾರ್ಯವನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ಹಾರಾಟಕ್ಕೆ ಅಗತ್ಯವಿರುವ ಉಪಕರಣಗಳ ನಿರ್ಮಾಣದಲ್ಲಿ ತೊಡಗಿದ್ದೇವೆ ಎಂದಿತ್ತು.

“ತಂತ್ರಜ್ಞಾನ ಪ್ರದರ್ಶಕ (ಟೆಕ್ನಾಲಜಿ ಡೆಮಾನ್ಸ್ಟ್ರೇಟರ್) ಸ್ವಿಫ್ಟ್ ಯುಎವಿ ಒಂದು ಘಾತಕ್ ಯುಸಿಎವಿಯ (ಅನ್ ಮ್ಯಾನ್ಡ್ ಕಾಂಬ್ಯಾಟ್ ಏರ್ ವೆಹಿಕಲ್) ಆವೃತ್ತಿಯಾಗಿದೆ. ಈ ಸ್ವಿಫ್ಟ್ ಯುಎವಿಯ ಪ್ರಾಥಮಿಕ ಗುರಿ ಎಂದರೆ ಮಾನವ ರಹಿತ ಚಾಲನೆಯಲ್ಲಿ ಅತಿವೇಗದ ಲ್ಯಾಂಡಿಂಗ್ ಹಾಗೂ ಮಾನವ ರಹಿತ ಚಾಲನೆಯಲ್ಲಿ ಸ್ಟೆಲ್ತ್ ತಂತ್ರಜ್ಞಾನವನ್ನು ಬಳಸಿಕೊಳ್ಳುವುದು” ಎಂದು ಡಿಆರ್‌ಡಿಓ ಹೇಳಿದೆ.

ಈ ವಿಮಾನದ ಒಂದು ಮಾದರಿಯನ್ನು ಸ್ಟೆಲ್ತ್ ಯುಸಿಎವಿ ನಿರ್ಮಾಣದಲ್ಲಿ ಭಾಗಿಯಾಗಿರುವ ಐಐಟಿ ಕಾನ್ಪುರ ಅಪ್ಲೋಡ್ ಮಾಡಿರುವ ವೀಡಿಯೋದಲ್ಲಿ ಕಾಣಬಹುದಾಗಿದೆ. ಆ ವೀಡಿಯೋದಲ್ಲಿ ಕಂಡಿರುವ ಮಾದರಿ ಖಂಡಿತವಾಗಿಯೂ ಸ್ವಿಫ್ಟ್ ಹಾರಾಟದ ಮಾದರಿ ಅಥವಾ ಮೂಲ ಮಾದರಿ ಆಗಿರುವ ಸಾಧ್ಯತೆ ಹೆಚ್ಚಿದೆ. ನೋಡುಗರು ಅದರಲ್ಲಿ ವಿಮಾನದ ಅಂಡರ್ ಕ್ಯಾರೇಜ್ ಮತ್ತು ಲ್ಯಾಂಡಿಂಗ್ ಗೇರ್‌ಗಳನ್ನು ಗಮನಿಸಬಹುದಾಗಿದೆ. ಆ ವಿಮಾನವನ್ನು ಕಾನ್ಪುರ ಐಐಟಿ ಉಪನ್ಯಾಸಕರೊಬ್ಬರು ಏರೋ ಮಾಡೆಲಿಂಗ್ ಪ್ರಯೋಗಾಲಯದಲ್ಲಿ ನೀಡಿದ ಉಪನ್ಯಾಸದ ವೇಳೆ ಹಿಂಬದಿಯಲ್ಲಿ ಇಡಲಾಗಿತ್ತು.

ಘಾತಕ್ ಒಂದು ಮಾನವ ರಹಿತ ವಿಮಾನವಾಗಿ ನಿರ್ಮಾಣಗೊಂಡಿದ್ದು, ಇದನ್ನು ವಿಚಕ್ಷಣಾ ಉದ್ದೇಶದಿಂದ ಮತ್ತು ಪೂರ್ವ ನಿರ್ಧಾರಿತ ಗುರಿಯ ಮೇಲೆ ಆಯುಧಗಳ ಮೂಲಕ ನಿಖರವಾಗಿ ದಾಳಿ ಮಾಡುವ ಎರಡೂ ಉದ್ದೇಶಗಳಿಗೂ ಬಳಸಿಕೊಳ್ಳಬಹುದು.

ಚಳ್ಳಕೆರೆಯಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್‌

ತಯಾರಾಗಿದ್ದು ಬೆಂಗಳೂರಿನಲ್ಲಿ

ಬೆಂಗಳೂರು ಮೂಲದ ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ (ಎಡಿಎ) ಡಿಆರ್‌ಡಿಓನ ಡಿಫೆನ್ಸ್ ಎಲೆಕ್ಟ್ರಾನಿಕ್ಸ್ ಅಪ್ಲಿಕೇಶನ್ ಲ್ಯಾಬೋರೇಟರಿ ಹಾಗೂ ಇನ್ನಿತರ ಪ್ರಯೋಗಾಲಯಗಳ ಜೊತೆಗೆ ಯುಸಿಎವಿ ನಿರ್ಮಾಣದಲ್ಲಿ ತೊಡಗಿದೆ.

2009ರ ಆಸುಪಾಸಿನಲ್ಲಿ, ಈ ಯೋಜನೆಯ ಕುರಿತಾದ ಪ್ರಯೋಗಗಳು ಆರಂಭಗೊಂಡವು. ಆ ಸಂದರ್ಭದಲ್ಲಿ ಈ ಯೋಜನೆಯನ್ನು ಎಯುಆರ್‌ಎ (ಅಟಾನಮಸ್ ಅನ್ ಮ್ಯಾನ್ಡ್ ರಿಸರ್ಚ್ ಏರ್ ಕ್ರಾಫ್ಟ್) ಎಂದು ಕರೆಯಲಾಗುತ್ತಿತ್ತು. ಭಾರತ ಈಗ ಐದನೇ ತಲೆಮಾರಿನ ಸ್ಟೆಲ್ತ್ ಫೈಟರ್ ನಿರ್ಮಾಣಗೊಳಿಸುತ್ತಿದ್ದು, ಅದನ್ನು ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್ ಅಥವಾ ಎಎಂಸಿಎ ಎಂದು ಕರೆಯಲಾಗುತ್ತದೆ.

ಘಾತಕ್ ಯೋಜನೆಯನ್ನು 2016 ಮೇಯಲ್ಲಿ ಲೀಡ್ ಇನ್ ಯೋಜನೆ ಎಂಬುದಾಗಿ ಗುರುತಿಸಿದ್ದು, 2017ರ ಆರಂಭದಿಂದ ಯೋಜನೆಗೆ ಹಣಕಾಸಿನ ಪೂರೈಕೆ ನಡೆಯುತ್ತಿದೆ. ಪ್ರಸ್ತುತ ಯುಸಿಎವಿ ಒಂದು ರಹಸ್ಯ ಯೋಜನೆಯಾಗಿರುವುದರಿಂದ ಅದರ ತಾಂತ್ರಿಕ ವೈಶಿಷ್ಟ್ಯಗಳ ಕುರಿತು ಮಾಹಿತಿ ಇನ್ನೂ ಲಭ್ಯವಾಗಿಲ್ಲ. ರಾಷ್ಟ್ರೀಯ ಭದ್ರತಾ ಸಲಹೆಗಾರರು ಹಾಗೂ ಪ್ರಧಾನಮಂತ್ರಿ ಕಚೇರಿ ಈ ರಹಸ್ಯ ಯೋಜನೆಯ ಸಂಪೂರ್ಣ ನಿಯಂತ್ರಣ ಹೊಂದಿದ್ದಾರೆ.

ಬಹಿರಂಗ ಗೊಂಡಿದ್ದು ಇಷ್ಟೇ ಮಾಹಿತಿ!

ಆರಂಭದಲ್ಲಿ ಎಯುಆರ್‌ಎ (ಅಟಾನಮಸ್ ಅನ್ ಮ್ಯಾನ್ಡ್ ರಿಸರ್ಚ್ ಏರ್ಕ್ರಾಫ್ಟ್) ಎಂದು ಕರೆಯಲ್ಪಡುತ್ತಿದ್ದ ಈ ಯೋಜನೆ, ಭಾರತದ ಐದನೇ ತಲೆಮಾರಿನ ಸ್ಟೆಲ್ತ್ ಫೈಟರ್ ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್ (ಎಎಂಸಿಎ) ಯೋಜನೆಯ ಭಾಗವಾಗಿ, 2009ರಲ್ಲಿ ಚಾಲನೆ ಪಡೆಯಿತು. ಬೆಂಗಳೂರು ಮೂಲದ ಎಡಿಎ ಪ್ರಸ್ತುತ ಈ ಯೋಜನೆಯ ಕುರಿತು ಡಿಫೆನ್ಸ್ ಇಲೆಕ್ಟ್ರಾನಿಕ್ಸ್ ಅಪ್ಲಿಕೇಶನ್ ಲ್ಯಾಬೋರೇಟರಿ ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಪ್ರಧಾನ ವಿಭಾಗಗಳ ಜೊತೆ ಕಾರ್ಯ ನಿರ್ವಹಿಸುತ್ತಾ ಬಂದಿದೆ.

ಪ್ರಯೋಗ ಹಾರಾಟದ ಕುರಿತಾಗಿ ಅಧಿಕೃತ ದಿನಾಂಕಗಳ ಲಭ್ಯತೆ ಇಲ್ಲವಾದರೂ, ಇದರ ಪ್ರಯೋಗಗಳನ್ನು ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಗೆ ಸಮೀಪದಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್ ನಲ್ಲಿ ಎರಡು ತಿಂಗಳ ಹಿಂದೆಯೇ ಕೈಗೊಂಡಂತೆ ಕಾಣುತ್ತದೆ.

ಈ ಮೂಲ ಮಾದರಿಯ ಪ್ರಾಥಮಿಕ ಹಂತದ ಪರೀಕ್ಷೆಗಳು ಅಂತಿಮ ಘಾತಕ್ ಯುಎವಿ ನಿರ್ಮಾಣದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿವೆ. ಈ ಪರೀಕ್ಷೆಗಳು ಜೂನ್ 2021ರಲ್ಲಿ ಆರಂಭಗೊಂಡಿದ್ದವು. ಡಿಆರ್ಡಿಓದ ಅಂಗವಾದ ಏರೋನಾಟಿಕಲ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್ (ಎಡಿಇ) ಈ ಮಾನವ ರಹಿತ, ಸ್ಟೆಲ್ತಿ ಘಾತಕ್ ಯುಸಿಎವಿಯನ್ನು ಪ್ರಾಥಮಿಕವಾಗಿ ಭಾರತೀಯ ವಾಯುಪಡೆಯ ಸ್ಟೆಲ್ತ್ ಬಾಂಬರ್ ಆಗಿ ತಯಾರಿಸುತ್ತಿದೆ.

ಕಾಂಬ್ಯಾಟ್ ವೆಹಿಕಲ್ಸ್ ರಿಸರ್ಚ್ ಆ್ಯಂಡ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್ (ಸಿವಿಆರ್ಡಿಇ1-ಟನ್) ಸ್ವಿಫ್ಟ್ ಯೋಜನೆಗಾಗಿ ನಿರ್ಮಿಸಿದ ವೆಯ್ಟ್ ಕ್ಲಾಸ್ ರಿಟ್ರಾಕ್ಟೇಬಲ್ ಲ್ಯಾಂಡಿಂಗ್ ಗೇರ್ ಈಗಾಗಲೇ ಡೈರೆಕ್ಟರೇಟ್ ಜನರಲ್ ಆಫ್ ಏರೋನಾಟಿಕಲ್ ಕ್ವಾಲಿಟಿ ಅಶೂರೆನ್ಸ್ ಹಾಗೂ ಸೆಂಟರ್ ಫಾರ್ ಮಿಲಿಟರಿ ಏರ್ ವರ್ದಿನೆಸ್ ಆ್ಯಂಡ್ ಸರ್ಟಿಫಿಕೇಷನ್ (ಸಿಇಎಂಐಎಲ್ಎಸಿ) (ಡಿಜಿಎಕ್ಯುಎ) ಸಂಸ್ಥೆಗಳಿಂದ ಪ್ರಮಾಣಪತ್ರವನ್ನು ಪಡೆದುಕೊಂಡಿದೆ.

ಸ್ವಿಫ್ಟ್ ಅಂದಾಜು 13 ಅಡಿಗಳ ಉದ್ದವಿದ್ದು, ಅದರ ರೆಕ್ಕೆಯನ್ನು ಸೇರಿದಾಗ ಗಾತ್ರ 16 ಅಡಿಗಳಿಗಿಂತ ಸ್ವಲ್ಪ ಹೆಚ್ಚು ವಿಶಾಲವಾಗಿದ್ದು, 2,300 ಪೌಂಡ್ ತೂಕ ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.

ಏನಿದು ಸ್ವಿಫ್ಟ್ ಯುಎವಿ?

ತಂತ್ರಜ್ಞಾನ ಪ್ರದರ್ಶಕ (ಟೆಕ್ನಾಲಜಿ ಡೆಮಾನ್ಸ್ಟ್ರೇಟರ್) ಸ್ವಿಫ್ಟ್ ಯುಎವಿ ಒಂದು ಘಾತಕ್ ಯುಸಿಎವಿಯ (ಅನ್ ಮ್ಯಾನ್ಡ್ ಕಾಂಬ್ಯಾಟ್ ಏರ್ ವೆಹಿಕಲ್) ಆವೃತ್ತಿಯಾಗಿದೆ. ಈ ಸ್ವಿಫ್ಟ್ ಯುಎವಿಯ ಪ್ರಾಥಮಿಕ ಗುರಿ ಎಂದರೆ ಮಾನವ ರಹಿತ ಚಾಲನೆಯಲ್ಲಿ ಅತಿವೇಗದ ಲ್ಯಾಂಡಿಂಗ್ ಹಾಗೂ ಮಾನವ ರಹಿತ ಚಾಲನೆಯಲ್ಲಿ ಸ್ಟೆಲ್ತ್ ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಎಂದು ಡಿಆರ್‌ಡಿಓ ಹೇಳಿದೆ.

2020ರಲ್ಲಿ ಈ ಕುರಿತು ಮಾಹಿತಿ ನೀಡಿದ್ದ ಡಿಆರ್‌ಡಿಓ, ಈ ಯೋಜನೆಗೆ ಅಗತ್ಯವಿರುವ ಹಾರಾಟ ಉಪಕರಣಗಳ ತಯಾರಿಕೆಯ ಕಾರ್ಯ ಆರಂಭವಾಗಿದ್ದು, ಯೋಜನೆಯ ಲ್ಯಾಂಡಿಂಗ್ ಗೇರ್ ನಿರ್ಮಾಣ ಕಾರ್ಯ ಸಂಪೂರ್ಣವಾಗಿದೆ ಎಂದು ತಿಳಿಸಿತ್ತು.

ಮೂಲಗಳ ಪ್ರಕಾರ, ಡಿಆರ್‌ಡಿಓದ ಚೆನ್ನೈ ಮೂಲದ ಕಾಂಬ್ಯಾಟ್ ವೆಹಿಕಲ್ಸ್ ರಿಸರ್ಚ್ ಆ್ಯಂಡ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್ ಇತ್ತೀಚೆಗೆ ವಿಮಾನದ ಲ್ಯಾಂಡಿಂಗ್ ಗೇರ್ ವ್ಯವಸ್ಥೆಯನ್ನು ಸಾಗಾಟಗೊಳಿಸಿತ್ತು.

– ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು

ಇದನ್ನೂ ಓದಿ|ನಮ್ಮ ಚಳ್ಳಕೆರೆ; ಭಾರತದ ಭವಿಷ್ಯದ ವಿಜ್ಞಾನ ಕೇಂದ್ರ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Isha Ambani: ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಶ್ಲಾಘಿಸಿದ ಇಶಾ ಅಂಬಾನಿ

Isha Ambani: ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಹಾಗೂ ಮಾಹಿತಿ ಮತ್ತು ಸಂವಹನ ಕ್ಷೇತ್ರಗಳಲ್ಲಿ ಯುವತಿಯರ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕು. ಹೆಣ್ಣುಮಕ್ಕಳು ತಂತ್ರಜ್ಞಾನ ಕ್ಷೇತ್ರವನ್ನು ವೃತ್ತಿಯನ್ನಾಗಿ ತೆಗೆದುಕೊಳ್ಳಬೇಕು. ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆ ಹಾಗೂ ಪುರುಷರ ಪಾಲ್ಗೊಳ್ಳುವಿಕೆ ಅನುಪಾತವು ಸಮಾನವಾಗಿ ಇರಬೇಕು ಎಂದು ರಿಲಯನ್ಸ್ ಇಂಡಸ್ಟ್ರೀಸ್ ನಿರ್ದೇಶಕಿ ಇಶಾ ಅಂಬಾನಿ ತಿಳಿಸಿದ್ದಾರೆ.

VISTARANEWS.COM


on

Isha Ambani
Koo

ನವದೆಹಲಿ: ನಾಲ್ಕನೇ ಕೈಗಾರಿಕೆ ಕ್ರಾಂತಿಯಾದ ಈ ಡಿಜಿಟಲ್ ಯುಗದಲ್ಲಿ ಭಾರತ ದೇಶವು ವಿಶ್ವನಾಯಕ ಆಗಿ ಹೊರಹೊಮ್ಮಲು ಹೆಣ್ಣು ಮಕ್ಕಳನ್ನು ಮುಂದೆ ತರಬೇಕು. ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಹಾಗೂ ಮಾಹಿತಿ ಮತ್ತು ಸಂವಹನ ಕ್ಷೇತ್ರಗಳಲ್ಲಿ ಯುವತಿಯರ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕು ಎಂದು ರಿಲಯನ್ಸ್ ಇಂಡಸ್ಟ್ರೀಸ್ ನಿರ್ದೇಶಕಿ ಇಶಾ ಅಂಬಾನಿ (Isha Ambani) ಅಭಿಪ್ರಾಯಪಟ್ಟರು.

ದೂರಸಂಪರ್ಕ ಇಲಾಖೆಯಿಂದ ಆಯೋಜಿಸಿದ್ದ ಗರ್ಲ್ಸ್ ಇನ್ ಐಸಿಟಿ ಇಂಡಿಯಾ– 2024 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೆಣ್ಣುಮಕ್ಕಳು ತಂತ್ರಜ್ಞಾನ ಕ್ಷೇತ್ರವನ್ನು ವೃತ್ತಿಯನ್ನಾಗಿ ತೆಗೆದುಕೊಳ್ಳಬೇಕು. ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆ ಹಾಗೂ ಪುರುಷರ ಪಾಲ್ಗೊಳ್ಳುವಿಕೆ ಅನುಪಾತವು ಸಮಾನವಾಗಿ ಇರಬೇಕು. ಇದಕ್ಕಾಗಿ ನಾವು ಇನ್ನೂ ಬಹಳ ದೂರ ಸಾಗಬೇಕಿದೆ ಎಂದು ಹೇಳಿದರು.

ಇದನ್ನೂ ಓದಿ: Karnataka Weather: ಇಂದು, ನಾಳೆ ಗುಡುಗು, ಮಿಂಚು ಸಹಿತ ಭಾರಿ ಮಳೆ; ಉತ್ತರ ಒಳನಾಡಿನಲ್ಲಿ ಆರೆಂಜ್ ಅಲರ್ಟ್

ಭಾರತ ಸರ್ಕಾರ, ಅಂತಾರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ (ದಕ್ಷಿಣ ಏಷ್ಯಾ), ಇನ್ನೋವೇಶನ್ ಸೆಂಟರ್ – ದೆಹಲಿ ಮತ್ತು ಇತರ ಯುಎನ್ ಏಜೆನ್ಸಿಗಳ ದೂರಸಂಪರ್ಕ ಇಲಾಖೆ ಜಂಟಿಯಾಗಿ ‘ಗರ್ಲ್ಸ್ ಇನ್ ಇನ್ಫರ್ಮೇಷನ್ ಅಂಡ್ ಕಮ್ಯುನಿಕೇಷನ್ ಟೆಕ್ನಾಲಜಿ (ಜಿಐಸಿಟಿ) ಇಂಡಿಯಾ – 2024’ ಅನ್ನು ಆಯೋಜಿಸಿವೆ.

ಇನ್ನು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದ ಇಶಾ ಅಂಬಾನಿ, ಸರ್ಕಾರವು ಅಗತ್ಯ ಸುಧಾರಣೆಗಳನ್ನು ಮಾಡುತ್ತಿದೆ ಮತ್ತು ಅದರ ಫಲಿತಾಂಶಗಳು ಸಹ ಗೋಚರಿಸುತ್ತಿವೆ. ಕಳೆದ ಒಂದು ದಶಕದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರನ್ನು ಗಮನಿಸಿದರೆ ಮಹಿಳಾ ಪ್ರಾತಿನಿಧ್ಯವು ಶೇ. 6ರಷ್ಟು ಹೆಚ್ಚಾಗಿದೆ. ಆದರೆ ಉದ್ಯಮವು ತನ್ನ ಪಾತ್ರವನ್ನು ನಿರ್ವಹಿಸಬೇಕಾಗಿದೆ. ಮಹಿಳೆಯರ ವೃತ್ತಿ ಜೀವನದಲ್ಲಿ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಅಂತಹ ವಿಧಾನಗಳು ಮತ್ತು ಸಾಧನಗಳನ್ನು ಸಿದ್ಧಪಡಿಸಬೇಕು. ಒಟ್ಟಾರೆಯಾಗಿ, ನಮ್ಮ ಹೆಣ್ಣುಮಕ್ಕಳು ನಾಳಿನ ನಾಯಕತ್ವ ವಹಿಸುವುದಕ್ಕೆ ಸಮಾನ ಅವಕಾಶಗಳನ್ನು ಹೊಂದಿರುವ ಭವಿಷ್ಯವನ್ನು ನಾವು ರೂಪಿಸಬಹುದು ಎಂದು ಹೇಳಿದರು.

ಇದನ್ನೂ ಒದಿ: Fortis Hospital: ರೋಬೋಟಿಕ್‌ ನೆರವಿನಿಂದ ಇಬ್ಬರಿಗೆ ‘ಸಂಕೀರ್ಣ ಕಿಡ್ನಿ ಕಸಿ’ ಆಪರೇಷನ್ ಸಕ್ಸೆಸ್!

ಇಶಾ ಅವರು ತಮ್ಮ ತಾಯಿ ನೀತಾ ಅಂಬಾನಿಯವರ ಮಾತನ್ನು ಉಲ್ಲೇಖಿಸಿ, “ಒಬ್ಬ ಪುರುಷನನ್ನು ಸಬಲಗೊಳಿಸಿದರೆ ಆತ ತನ್ನ ಕುಟುಂಬವನ್ನು ಪೋಷಿಸುತ್ತಾನೆ, ಆದರೆ ಮಹಿಳೆ ಸಬಲಳಾಗಿದ್ದರೆ, ಅವಳು ಇಡೀ ಗ್ರಾಮವನ್ನು ಪೋಷಿಸುತ್ತಾಳೆ” ಎಂದು ಅವರು ಪದೇ ಪದೇ ಹೇಳುತ್ತಾರೆ. “ನನಗೆ ಅಮ್ಮ ಹೇಳುವ ಮಾತಿನಲ್ಲಿ ಸಂಪೂರ್ಣ ವಿಶ್ವಾಸವಿದೆ. ಮಹಿಳೆಯರು ಹುಟ್ಟಿನಿಂದಲೇ ನಾಯಕಿಯರು. ಅವರಲ್ಲಿರುವ ಸಹಜವಾದ ನಿಸ್ವಾರ್ಥತೆಯು ಅತ್ಯುತ್ತಮ ನಾಯಕರನ್ನಾಗಿ ಮಾಡುತ್ತದೆ. ಮಹಿಳಾ ಉದ್ಯೋಗಿಗಳನ್ನು ಅವರ ವೃತ್ತಿ ಜೀವನದ ಆರಂಭದಿಂದಲೂ ಪ್ರೋತ್ಸಾಹಿಸಬೇಕು ಮತ್ತು ಕೇವಲ ಕಾಗದದ ಮೇಲೆ ಮಾತ್ರ ವೈವಿಧ್ಯತೆ ಮತ್ತು ಒಳಗೊಳ್ಳುವಿಕೆಯನ್ನು ತೋರಿಸುವುದರಿಂದ ಯಾವುದೇ ಬದಲಾವಣೆಯನ್ನು ಆಗುವುದಿಲ್ಲ ಎಂದು ನಾನು ಬಲವಾಗಿ ನಂಬುತ್ತೇನೆ ಎಂದು ತಿಳಿಸಿದರು.

Continue Reading

ತಂತ್ರಜ್ಞಾನ

Google Update: ಕೃತಕ ಬುದ್ಧಿಮತ್ತೆ, ವಂಚನೆ ತಡೆಯಲು ಅಲರ್ಟ್‌; ಗೂಗಲ್‌ ಹೊಸ ಘೋಷಣೆಗಳು ಏನೇನು?

ಕೃತಕ ಬುದ್ಧಿಮತ್ತೆಯಿಂದ ವೆಬ್ ಸೈಟ್ ಲಿಂಕ್ ಗಳಿಗಾಗಿ ರಚಿಸಲಾದ ಹುಡುಕಾಟ ಎಂಜಿನ್ ಅನ್ನು ಗೂಗಲ್ (Google Update) ಅನಾವರಣಗೊಳಿಸಿದೆ. ಈ ದಿಟ್ಟ ಮತ್ತು ಜವಾಬ್ದಾರಿಯುತ ವಿಧಾನವು ನಮ್ಮ ಧ್ಯೇಯವನ್ನು ಬಳಕೆದಾರರಿಗೆ ತಲುಪಿಸಲು ಮತ್ತು ಎಲ್ಲರಿಗೂ ಎಐ ಅನ್ನು ಹೆಚ್ಚು ಆಪ್ತ ಗೊಳಿಸಲು ಸಹಾಯಕವಾಗಿಸುವುದು ಎಂದು ಗೂಗಲ್ ಕಂಪೆನಿಯ ಸಿಇಒ ಸುಂದರ್ ಪಿಚೈ ತಿಳಿಸಿದ್ದಾರೆ.

VISTARANEWS.COM


on

By

Google Update
Koo

ವೆಬ್ ಸೈಟ್ ಲಿಂಕ್‌ಗಳ (website link) ಮೂಲಕ ಕೃತಕ ಬುದ್ಧಿಮತ್ತೆಯಿಂದ (artificial intelligence) ರಚಿಸಲಾದ, ಆಗಾಗ ಒಲವು ತೋರುವ ಪ್ರತಿಕ್ರಿಯೆಗಳಿಗೆ ಹುಡುಕಾಟ ಎಂಜಿನ್ ಅನ್ನು ಗೂಗಲ್ (Google Update) ಅನಾವರಣಗೊಳಿಸಿರುವುದಾಗಿ ವಾರ್ಷಿಕ ಡೆವಲಪರ್‌ಗಳ ಸಮ್ಮೇಳನದಲ್ಲಿ ಕಂಪೆನಿಯ ಸಿಇಒ (CEO) ಸುಂದರ್ ಪಿಚೈ (Sundar Pichai) ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಸುಂದರ್ ಪಿಚೈ, ಈ ದಿಟ್ಟ ಮತ್ತು ಜವಾಬ್ದಾರಿಯುತ ವಿಧಾನವು ನಮ್ಮ ಧ್ಯೇಯವನ್ನು ಬಳಕೆದಾರರಿಗೆ ತಲುಪಿಸಲು ಮತ್ತು ಎಲ್ಲರಿಗೂ ಎಐ ಅನ್ನು ಹೆಚ್ಚು ಸಹಾಯಕವಾಗಿಸಲು ಪ್ರಯತ್ನಿಸಲಾಗುವುದು ಎಂದರು.

ಪ್ರಮುಖ ಪ್ರಕಟಣೆಗಳು ಏನೇನು?:

ಫೈರ್‌ಬೇಸ್ ಜೆನ್‌ಕಿಟ್

ಫೈರ್‌ಬೇಸ್ ಪ್ಲಾಟ್‌ಫಾರ್ಮ್‌ಗೆ ಫೈರ್‌ಬೇಸ್ ಜೆನ್‌ಕಿಟ್ ಎಂಬ ಹೊಸ ಸೇರ್ಪಡೆ ಇದ್ದು, ಇದು ಗೋ ಬೆಂಬಲದೊಂದಿಗೆ ಜಾವಾ ಸ್ಕ್ರಿಪ್ಟ್/ಟೈಪ್‌ಸ್ಕ್ರಿಪ್ಟ್‌ನಲ್ಲಿ ಎಐ-ಚಾಲಿತ ಅಪ್ಲಿಕೇಶನ್‌ಗಳನ್ನು ನಿರ್ಮಿಸಲು ಡೆವಲಪರ್‌ಗಳಿಗೆ ಸುಲಭವಾಗುತ್ತದೆ. ಫ್ರೇಮ್‌ವರ್ಕ್ ಮುಕ್ತ ಮೂಲವಾಗಿರುತ್ತದೆ ಮತ್ತು ವಿಷಯ ಉತ್ಪಾದನೆ, ಸಾರಾಂಶ, ಪಠ್ಯ ಅನುವಾದ ಮತ್ತು ಚಿತ್ರಗಳನ್ನು ಉತ್ಪಾದಿಸಲು ಬಳಸಬಹುದು ಎಂದು ಕಂಪನಿ ಹೇಳಿದೆ.

ಲರ್ನ್‌ ಎಲ್‌ಎಂ

ಕಂಪನಿಯು ಲರ್ನ್‌ಎಲ್‌ಎಂ ಅನ್ನು ಅನಾವರಣಗೊಳಿಸಿದ್ದು, ಇದು ಕಲಿಕೆಗಾಗಿ “ಫೈನ್-ಟ್ಯೂನ್ಡ್” ಉತ್ಪಾದಕ ಎಐ ಮಾದರಿಗಳ ಹೊಸ ಕುಟುಂಬವಾಗಿದೆ. ಗೂಗಲ್‌ನ ಡೀಪ್‌ಮೈಂಡ್ ಎಐ ಸಂಶೋಧನಾ ವಿಭಾಗ ಮತ್ತು ಗೂಗಲ್ ರಿಸರ್ಚ್ ನಡುವಿನ ಸಹಯೋಗ- ಮಾದರಿಗಳು ವಿವಿಧ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ “ಸಂಭಾಷಣೆಯ” ಬೋಧನೆಯನ್ನು ನೀಡುತ್ತದೆ ಎಂದು ಗೂಗಲ್ ಹೇಳಿದೆ.

ಯೂಟ್ಯೂಬ್ ರಸಪ್ರಶ್ನೆಗಳು

ಯೂಟ್ಯೂಬ್ ಎಐ ರಚಿತವಾದ ರಸಪ್ರಶ್ನೆಗಳನ್ನು ಸಹ ಹೊಂದಿದೆ. ಇದು ಶೈಕ್ಷಣಿಕ ವಿಡಿಯೋಗಳನ್ನು ವೀಕ್ಷಿಸುತ್ತಿರುವಾಗ ಬಳಕೆದಾರರಿಗೆ ಸಾಂಕೇತಿಕವಾಗಿ “ತಮ್ಮ ಕೈಯನ್ನು ಮೇಲಕ್ಕೆತ್ತಲು” ಅನುಮತಿಸುತ್ತದೆ. ಉಪಕರಣವನ್ನು ಬಳಸಿಕೊಂಡು, ನೀವು ಪ್ರಶ್ನೆಗಳನ್ನು ಕೇಳಬಹುದು, ವಿವರಣೆಗಳನ್ನು ಪಡೆಯಬಹುದು ಅಥವಾ ವಿಷಯದ ಬಗ್ಗೆ ರಸಪ್ರಶ್ನೆ ತೆಗೆದುಕೊಳ್ಳಬಹುದು.

ಜೆಮ್ಮಾ 2 ನವೀಕರಣಗಳು

ಗೂಗಲ್ ಜೆಮ್ಮಾ 2ಗೆ ಹೊಸ 27 ಬಿಲಿಯನ್ ಪ್ಯಾರಾಮೀಟರ್ ಮಾದರಿಯನ್ನು ಸೇರಿಸಲಿದೆ ಮತ್ತು ಈ ಮಾದರಿಗಳ ಮುಂದಿನ ಪೀಳಿಗೆಯು ಈ ವರ್ಷದ ಜೂನ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಕಂಪನಿ ತಿಳಿಸಿದೆ.

ಗೂಗಲ್ ಪ್ಲೇಗೆ ಬದಲಾವಣೆಗಳು

ಗೂಗಲ್ ಪ್ಲೇ ಅಪ್ಲಿಕೇಶನ್‌ಗಳಿಗಾಗಿ ಹೊಸ ಅನ್ವೇಷಣೆ ವೈಶಿಷ್ಟ್ಯವನ್ನು ಹೊಂದಿರುತ್ತದೆ. ಬಳಕೆದಾರರನ್ನು ಪಡೆದುಕೊಳ್ಳಲು ಹೊಸ ಮಾರ್ಗಗಳು, ಪ್ಲೇ ಪಾಯಿಂಟ್‌ಗಳಿಗೆ ನವೀಕರಣಗಳು ಮತ್ತು ಗೂಗಲ್ ಪ್ಲೇ ಎಸ್ ಡಿಕೆ ಕನ್ಸೋಲ್ ಮತ್ತು ಪ್ಲೇ ಇಂಟೆರ್ ಗ್ರಿಟಿ ಎಪಿಐ ನಂತಹ ವರ್ಧನೆಗಳನ್ನು ಒಳಗೊಂಡಿರುತ್ತದೆ.


ಇದನ್ನೂ ಓದಿ: Warning For Android Users: ಆಂಡ್ರಾಯ್ಡ್ ಬಳಕೆದಾರರಿಗೆ ಕಾದಿದೆ ಅಪಾಯ; ಸರ್ಕಾರದಿಂದ ಗಂಭೀರ ಎಚ್ಚರಿಕೆ

ಕರೆಗಳ ಸಮಯದಲ್ಲಿ ವಂಚನೆಯ ಅಲರ್ಟ್‌

ಕರೆಗಳ ಸಮಯದಲ್ಲಿ ಸಂಭಾವ್ಯ ವಂಚನೆಗಳ ಬಗ್ಗೆ ಬಳಕೆದಾರರನ್ನು ಎಚ್ಚರಿಸುವ ವೈಶಿಷ್ಟ್ಯವನ್ನು ಗೂಗಲ್ ಪೂರ್ವವೀಕ್ಷಣೆ ಮಾಡಿದೆ. ಇದನ್ನು ಆಂಡ್ರಾಯ್ಡ್‌ನ ಭವಿಷ್ಯದ ಆವೃತ್ತಿಯಲ್ಲಿ ನಿರ್ಮಿಸಲಾಗುವುದು ಮತ್ತು ನೈಜ ಸಮಯದಲ್ಲಿ ಸಾಮಾನ್ಯವಾಗಿ ಸ್ಕ್ಯಾಮ್‌ಗಳೊಂದಿಗೆ ಸಂಯೋಜಿತವಾಗಿರುವ ಸಂಭಾಷಣೆ ಮಾದರಿಗಳನ್ನು ಪರಿಣಾಮಕಾರಿಯಾಗಿ ಕೇಳಲು ಜೆಮಿನಿ ನ್ಯಾನೋವನ್ನು ಬಳಸುತ್ತದೆ ಎಂದು ಕಂಪೆನಿ ಹೇಳಿದೆ.

ಒಟ್ಟಿನಲ್ಲಿ ಪ್ರಾಜೆಕ್ಟ್ ಅಸ್ಟ್ರಾ, ಸುಧಾರಿತ ನೋಡುವ ಮತ್ತು ಮಾತನಾಡುವ ಎಐ ಏಜೆಂಟ್, ವೆಯೋ ಜನರೇಟಿವ್ ಎಐ ವಿಡಿಯೋ ಮಾದರಿ ಮತ್ತು 6 ನೇ ತಲೆಮಾರಿನ ಟ್ರಿಲಿಯಮ್ ಟೆನ್ಸರ್ ಪ್ರೊಸೆಸಿಂಗ್ ಯುನಿಟ್ ಅನ್ನು ಗೂಗಲ್ ನ ವಾರ್ಷಿಕ ಡೆವಲಪರ್ ಕಾನ್ಫರೆನ್ಸ್ I/O ನಲ್ಲಿ ಘೋಷಿಸಲಾಯಿತು. ಹುಡುಕಾಟದಲ್ಲಿ ಎಐ ಅವಲೋಕನ, ಜೆಮಿನಿ 1.5 ಪ್ರೊ ಸುಧಾರಣೆಗಳು ಮತ್ತು ಹೊಸ 1.5 ಫ್ಲ್ಯಾಶ್ ಮಾದರಿಯನ್ನು ಹೊರತರುವುದಾಗಿ ಗೂಗಲ್ ಘೋಷಿಸಿತು. ಜೆಮಿನಿಯೊಂದಿಗೆ ಫೋಟೋಗಳನ್ನು ಹುಡುಕಲು ಹೊಸ ಮಾರ್ಗವಾದ ‘ಫೋಟೋಗಳನ್ನು ಕೇಳಿ’ ಅನ್ನು ಕೂಡ ಘೋಷಿಸಲಾಗಿದೆ.

Continue Reading

ತಂತ್ರಜ್ಞಾನ

Facebook, Instagram Down: ಫೇಸ್‌ಬುಕ್‌, ಇನ್​ಸ್ಟಾಗ್ರಾಮ್​ ಸರ್ವರ್​ ಡೌನ್​; ಬಳಕೆದಾರರ ಪರದಾಟ

Facebook, Instagram Down: ಮೆಟಾ ಒಡೆತನದ ಫೇಸ್‌ಬುಕ್‌ (Facebook) ಹಾಗೂ ಇನ್‌ಸ್ಟಾಗ್ರಾಂ (Instagram) ಸರ್ವರ್‌ ಡೌನ್‌ (Server Down) ಆಗಿದ್ದು, ಸಾಮಾಜಿಕ ಜಾಲತಾಣಗಳಿಲ್ಲದೆ ಪ್ರಪಂಚದಾದ್ಯಂತದ ಜನ ಪರದಾಡುತ್ತಿದ್ದಾರೆ (Facebook, Instagram Down). ಸಾವಿರಾರು ಬಳಕೆದಾರರ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ವಿಶ್ವಾದ್ಯಂತ ಕಾರ್ಯನಿರ್ವಹಿಸುತ್ತಿಲ್ಲ ಎಂದು ಇಂಟರ್‌ನೆಟ್‌ ಟ್ರಾಫಿಕ್‌ ಮೇಲೆ ನಿಗಾ ಇರಿಸುವ ಡೌನ್‌ ಡಿಟೆಕ್ಟರ್‌ ಸಂಸ್ಥೆ ಹೇಳಿದೆ.

VISTARANEWS.COM


on

Facebook, Instagram Down
Koo

ನವದೆಹಲಿ: ಮೆಟಾ ಒಡೆತನದ ಫೇಸ್‌ಬುಕ್‌ (Facebook) ಹಾಗೂ ಇನ್‌ಸ್ಟಾಗ್ರಾಂ (Instagram) ಸರ್ವರ್‌ ಡೌನ್‌ (Server Down) ಆಗಿದ್ದು, ಸಾಮಾಜಿಕ ಜಾಲತಾಣಗಳಿಲ್ಲದೆ ಪ್ರಪಂಚದಾದ್ಯಂತದ ಜನ ಪರದಾಡುತ್ತಿದ್ದಾರೆ (Facebook, Instagram Down). ಇಂಟರ್‌ನೆಟ್‌ ಟ್ರಾಫಿಕ್‌ ಮೇಲೆ ನಿಗಾ ಇರಿಸುವ ಡೌನ್‌ ಡಿಟೆಕ್ಟರ್‌ ಸಂಸ್ಥೆಯ ಪ್ರಕಾರ, ಸಾವಿರಾರು ಬಳಕೆದಾರರ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ವಿಶ್ವಾದ್ಯಂತ ಕಾರ್ಯನಿರ್ವಹಿಸುತ್ತಿಲ್ಲ. ಈ ಬಗ್ಗೆ ಸುಮಾರು 18,000ಕ್ಕೂ ಹೆಚ್ಚು ವರದಿಗಳು ಬಂದಿದ್ದು, ಆ ಪೈಕಿ ಶೇ. 59ರಷ್ಟು ಮಂದಿ ಅಪ್ಲಿಕೇಶನ್ ಪ್ರವೇಶಿಸುವಾಗ ಸಮಸ್ಯೆಗಳನ್ನು ಎದುರಿಸಿದರೆ ಶೇ. 34ರಷ್ಟು ಬಳಿಕೆದಾರರು ಸರ್ವರ್ ಸಂಪರ್ಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಶೇ. 7ರಷ್ಟು ಮಂದಿಗೆ ಲಾಗಿನ್ ಮಾಡುವಾಗ ಸಮಸ್ಯೆ ಕಂಡು ಬಂದಿದೆ.

ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ಬಳಕೆದಾರರು ತಾವು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಆ್ಯಪ್‌ ಓಪನ್‌ ಮಾಡುವಾಗ ʼSomething went wrong. There’s an issue and the page could not be loadedʼ, ʼError loading media’ ಮುಂತಾದ ಮೆಸೇಜ್‌ ಕಂಡು ಬರುತ್ತಿದೆ ಎಂದು ಬಳಕೆದಾರರು ದೂರಿದ್ದಾರೆ. ಇಂಟರ್‌ನೆಟ್‌ ಮೇಲ್ವಿಚಾರಣಾ ಗುಂಪು ನೆಟ್‌ಬ್ಲಾಕ್ಸ್‌ (NetBlocks) ಕೂಡ ಎರಡು ಸಾಮಾಜಿಕ ಜಾಲತಾಣದ ವೆಬ್‌ಸೈಟ್‌ಗಳು ಪ್ರಸ್ತುತ ‘ಅಂತಾರಾಷ್ಟ್ರೀಯ ಸ್ಥಗಿತಗಳನ್ನು’ ಅನುಭವಿಸುತ್ತಿವೆ ಎಂಬ ಅಂಶವನ್ನು ಗಮನಿಸಿದೆ.

“ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ ಸೇರಿದಂತೆ ಮೆಟಾ ಪ್ಲಾಟ್‌ಫಾರ್ಮ್‌ಗಳು ಪ್ರಸ್ತುತ ಅಂತಾರಾಷ್ಟ್ರೀಯ ಸ್ಥಗಿತಗಳನ್ನು ಅನುಭವಿಸುತ್ತಿವೆ. ಇದು ದೇಶೀಯ ಮಟ್ಟದ ಇಂಟರ್‌ನೆಟ್‌ ಅಡೆತಡೆಗಳು ಅಥವಾ ಫಿಲ್ಟರಿಂಗ್‌ಗೆ ಸಂಬಂಧಿಸಿಲ್ಲ” ಎಂದು ನೆಟ್‌ಬ್ಲಾಕ್ಸ್‌ ತಿಳಿಸಿದೆ. ವಿಶೇಷವೆಂದರೆ ಈ ವರ್ಷದ ಮಾರ್ಚ್‌ನಲ್ಲಿಯೂ ಇದೇ ರೀತಿಯ ಸಮಸ್ಯೆ ಕಂಡು ಬಂದಿತ್ತು. ಪ್ರಪಂಚದಾದ್ಯಂತದ ಲಕ್ಷಾಂತರ ಬಳಕೆದಾರರು ತಮ್ಮ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ಖಾತೆ ಲಾಗ್ ಔಟ್ ಆಗುತ್ತಿರುವ ಬಗ್ಗೆ ದೂರು ನೀಡಿದ್ದರು.

ನೆಟ್ಟಿಗರು ಏನಂದ್ರು?

ಮೆಟಾ ಫ್ಲಾಟ್‌ಫಾರ್ಮ್‌ನಲ್ಲಿ ಪದೇ ಪದೆ ಇಂತಹ ಸಮಸ್ಯೆ ಎದುರಾಗುತ್ತಿರುವ ಬಗ್ಗೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೇರೆ ಯಾವ ಅಪ್ಲಿಕೇಷನ್‌ಗಳಲ್ಲಿಯೂ ಇಷ್ಟರ ಮಟ್ಟಿಗೆ ಸಮಸ್ಯೆ ಕಂಡುಬರುತ್ತಿಲ್ಲ ಎಂದು ಹೇಳಿದ್ದಾರೆ. ಪರಿಸ್ಥಿತಿಯಿಂದ ನಿರಾಶೆಗೊಂಡ ಬಳಕೆದಾರರೊಬ್ಬರು ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ಸ್ಥಗಿತದ ಬಗೆಗಿನ ನೆಟ್‌ಬ್ಲಾಕ್ಸ್‌ ಪೋಸ್ಟ್‌ಗೆ ಪ್ರತಿಕ್ರಿಯಿಸಿ, “ಬಹುಶಃ ಈ ಸಮಸ್ಯೆ ಬಗೆಹರಿಯುವಂತೆ ಕಾಣಿಸುತ್ತಿಲ್ಲʼʼ ಎಂದು ಹೇಳಿದ್ದಾರೆ. ʼʼಮೆಟಾ ಸರ್ವರ್‌ನಲ್ಲಿ ಸಮಸ್ಯೆ ಎದುರಾಗಿರಬೇಕು. ಅದೇ ಕಾರಣಕ್ಕೆ ಫೇಸ್‌ಬುಕ್‌ ಕೂಡ ಕೆಲಸ ಮಾಡುತ್ತಿಲ್ಲʼʼ ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Facebook Server: ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಸರ್ವರ್‌ ಡೌನ್;‌ ನಿಮ್ಮ ಖಾತೆ ಚೆಕ್‌ ಮಾಡಿಕೊಳ್ಳಿ

ಈ ವರ್ಷ ಮಾರ್ಚ್‌ನಲ್ಲಿ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂ ಸರ್ವರ್‌ ಡೌನ್‌ ಆಗಿತ್ತು. ಕೆಲಹೊತ್ತು ಮೊಬೈಲ್‌ ಹಾಗೂ ಕಂಪ್ಯೂಟರ್‌ನಲ್ಲಿ ಎರಡೂ ಖಾತೆಗಳು ಲಾಗ್‌ಔಟ್‌ ಆಗಿದ್ದು, ಮತ್ತೆ ಲಾಗ್‌ಇನ್‌ ಆಗುತ್ತಿರಲಿಲ್ಲ. ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂ ಇಲ್ಲದೆ ಜನ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಮೆಟಾ ಕಂಪನಿಯು ಪ್ರತಿಕ್ರಿಯಿಸಿದ್ದು, ಜನರ ಕ್ಷಮೆಯಾಚಿಸಿತ್ತು.

Continue Reading

ತಂತ್ರಜ್ಞಾನ

WhatsApp Update: ಅಪ್‌ಡೇಟ್ ಆಗಲಿದೆ ವಾಟ್ಸ್‌ಆಪ್ ಚಾನೆಲ್; ಹೊಸ ಆಪ್ಶನ್‌ ಏನೇನು?

ಒಂದು ವರ್ಷದ ಹಿಂದೆ ಪರಿಚಯಿಸಲಾದ ವಾಟ್ಸ್ ಆಪ್ ಚಾನೆಲ್ (WhatsApp Update) ಶೀಘ್ರದಲ್ಲೇ ಅಪ್ ಡೇಟ್ ಅಗಲಿದ್ದು, ಹಲವಾರು ವಿಶೇಷತೆಗಳು ಲಭ್ಯವಾಗುವ ಸುಳಿವು ಸಿಕ್ಕಿದೆ. ವಾಟ್ಸ್‌ ಆಪ್‌ ಚಾನೆಲ್‌ನಲ್ಲಿ ಹೊಸ ಬದಲಾವಣೆಗಳು ಏನೇನು ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

By

WhatsApp Update
Koo

ಸಂದೇಶ (messaging) ಕಳುಹಿಸಲು, ಕರೆ (calling) ಮಾಡಲು ಮೀಸಲಾಗಿದ್ದ ವಾಟ್ಸ್ ಆಪ್ (WhatsApp Update) 2023ರ ಜೂನ್‌ನಲ್ಲಿ ವಾಟ್ಸ್ ಆಪ್ ಚಾನೆಲ್ ಪರಿಚಯಿಸಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿತು. ಸುಮಾರು ಒಂದು ವರ್ಷದ ಹಿಂದೆ ಪರಿಚಯಿಸಲಾದ ವಾಟ್ಸ್ ಆಪ್ ಚಾನೆಲ್ ಶೀಘ್ರದಲ್ಲಿ ರಚಿಸಲು ಮತ್ತು ಫಾಲೋ ಮಾಡಲು ಬಳಕೆದಾರರಿಗೆ ಅನುಕೂಲವಾಗುವಂತೆ ಹೊಸ ವೈಶಿಷ್ಟ್ಯವನ್ನು ( feature) ಪರಿಚಯಿಸಲು ಇದೀಗ ವಾಟ್ಸ್ ಆಪ್ ಮುಂದಾಗಿದೆ.

ವ್ಯಾಪಾರಿಗಳು, ವಿಷಯ ರಚನೆಕಾರರಿಗೆ ವಾಟ್ಸ್ ಆಪ್ ಪ್ಲಾಟ್‌ಫಾರ್ಮ್ ಸಾಕಷ್ಟು ವೈಶಿಷ್ಟ್ಯವನ್ನು ಒದಗಿಸುತ್ತಿದ್ದು, ಬಹುಪಯೋಗಿಯಾಗಿದೆ. ಚಾನೆಲ್‌ಗಳ ಹಲವು ವೈಶಿಷ್ಟ್ಯವು ಕಳೆದ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಬಂದಿತು ಮತ್ತು ಅಂದಿನಿಂದ ಜನರು ಇದನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ. ಇದೀಗ ಗ್ರಾಹಕರ ಸಲಹೆಗಳ ಮೇರೆಗೆ ವಾಟ್ಸ್ ಆಪ್ ಚಾನೆಲ್‌ಗಳಲ್ಲಿ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲಾಗುತ್ತಿದೆ. ಶೀಘ್ರದಲ್ಲೇ ಇದು ಬಳಕೆದಾರರಿಗೆ ಲಭ್ಯವಾಗಲಿದೆ.

ಏನು ವಿಶೇಷ?

ಮಾಹಿತಿ ಪ್ರಕಾರ ವಾಟ್ಸ್ ಆಪ್ ಈಗ ಲಿಂಕ್ ಮಾಡಲಾದ ಸಾಧನಗಳಲ್ಲಿಯೂ ಚಾನೆಲ್‌ಗಳನ್ನು ನಿರ್ವಹಿಸಲು, ರಚಿಸಲು ಮತ್ತು ವೀಕ್ಷಿಸಲು ಬಳಕೆದಾರರಿಗೆ ಅವಕಾಶ ನೀಡುವ ವೈಶಿಷ್ಟ್ಯವನ್ನು ಪರಿಚಯಿಸಲಿದೆ. ಈ ವೈಶಿಷ್ಟ್ಯವು ಇಲ್ಲಿಯವರೆಗೆ ಪ್ರಾಥಮಿಕ ಸಾಧನಗಳಿಗೆ ಮಾತ್ರ ಸೀಮಿತವಾಗಿತ್ತು. ಇದರರ್ಥ ನೀವು ಸಂಪರ್ಕಿತ ಸಾಧನದಲ್ಲಿ ವಾಟ್ಸ್ ಆಪ್ ಅನ್ನು ನಿರ್ವಹಿಸುತ್ತಿದ್ದರೂ ಚಾನಲ್‌ಗಳಿಂದ ನವೀಕರಣಗಳನ್ನು ಪಡೆಯಬಹುದು ಮತ್ತು ಅವುಗಳನ್ನು ನಿರ್ವಹಿಸಬಹುದು.


ವಾಟ್ಸ್ ಆಪ್ ಬೀಟಾ ಇನ್ಫೋದಲ್ಲಿನ ವರದಿ ಪ್ರಕಾರ, ವಾಟ್ಸ್ ಆಪ್ ಬಳಕೆದಾರರು ತಮ್ಮ ಲಿಂಕ್ ಮಾಡಲಾದ ಸಾಧನಗಳಿಂದ ಚಾನಲ್‌ಗಳನ್ನು ರಚಿಸಲು, ವೀಕ್ಷಿಸಲು ಮತ್ತು ಸಂವಹನ ಮಾಡುವ ಸಾಮರ್ಥ್ಯವನ್ನು ಹೊರತರಲು ಪ್ರಾರಂಭಿಸಿದೆ. ಈ ಅಭಿವೃದ್ಧಿಯು ಹಿಂದಿನ ಆವೃತ್ತಿಗಳಿಂದ ಗಮನಾರ್ಹ ಬದಲಾವಣೆಯನ್ನು ಹೊಂದಿದೆ. ಅಲ್ಲಿ ಚಾನಲ್ ನಿರ್ವಹಣೆಯನ್ನು ಪ್ರಾಥಮಿಕ ಸಾಧನಕ್ಕೆ ನಿರ್ಬಂಧಿಸಲಾಗಿದೆ. ಆಂಡ್ರಾಯ್ಡ್ ಗಾಗಿ ಗೂಗಲ್ ಪ್ಲೇ ಸ್ಟೋರ್ ಮತ್ತು ಐಒಎಸ್ ಗಾಗಿ ಟೆಸ್ಟ್ ಪ್ಲೈಟ್ ಅಪ್ಲಿಕೇಶನ್ ಮೂಲಕ ಲಭ್ಯವಿರುವ ಇತ್ತೀಚಿನ ನವೀಕರಣಗಳಲ್ಲಿ ಈ ಮಿತಿಯನ್ನು ತಿಳಿಸಲಾಗಿದೆ.

ಪರೀಕ್ಷೆ ಹಂತದಲ್ಲಿ

ಪೋರ್ಟಲ್ ಹಂಚಿಕೊಂಡ ಸ್ಕ್ರೀನ್‌ಶಾಟ್ ಪ್ರಕಾರ ಕೆಲವು ಬಳಕೆದಾರರು ಈಗಾಗಲೇ ಈ ಹೊಸ ಸಾಮರ್ಥ್ಯವನ್ನು ಪರೀಕ್ಷಿಸುತ್ತಿದ್ದಾರೆ. ಇದು ಹಂತ ಹಂತದ ರೋಲ್‌ಔಟ್ ಅನ್ನು ಸೂಚಿಸುತ್ತದೆ. ಈ ಹಿಂದೆ ಬಳಕೆದಾರರು ತಮ್ಮ ಚಾನಲ್‌ಗಳನ್ನು ಲಿಂಕ್ ಮಾಡಲಾದ ಸಾಧನಗಳಿಂದ ನಿರ್ವಹಿಸಲು ಸಾಧ್ಯವಾಗಲಿಲ್ಲ. ಇದು ಅವರ ಪ್ರಾಥಮಿಕ ಸಾಧನದಲ್ಲಿ ಹೊರತು ಅಪ್ಲಿಕೇಶನ್‌ನ ವೈಶಿಷ್ಟ್ಯಗಳೊಂದಿಗೆ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಅವರ ಸಾಮರ್ಥ್ಯವನ್ನು ನಿರ್ಬಂಧಿಸುತ್ತದೆ.

ಈಗ, ಅಪ್‌ಡೇಟ್‌ನೊಂದಿಗೆ ವಾಟ್ಸ್ ಆಪ್ ಏಕೀಕೃತ ಅನುಭವವನ್ನು ಖಾತ್ರಿಗೊಳಿಸುತ್ತದೆ. ಬಳಕೆಯಲ್ಲಿರುವ ಸಾಧನವನ್ನು ಲೆಕ್ಕಿಸದೆಯೇ ಚಾನೆಲ್‌ಗಳೊಂದಿಗೆ ಸಂವಹನ ನಡೆಸಲು ಬಳಕೆದಾರರಿಗೆ ಅವಕಾಶ ನೀಡುತ್ತದೆ. ವರದಿಯ ಪ್ರಕಾರ ಈ ವೈಶಿಷ್ಟ್ಯವು ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿರುತ್ತದೆ.

ಇದನ್ನೂ ಓದಿ: Xiaomi Smart Phone: ವರ್ಷಾಂತ್ಯಕ್ಕೆ ಬರಲಿದೆ ಶಿಯೊಮಿಯ ಫೋಲ್ಡಿಂಗ್​ ಫೋನ್​ಗಳು; ಇಲ್ಲಿದೆ ಸಂಪೂರ್ಣ ವಿವರ

ಲಿಂಕ್ ಮಾಡಲಾದ ಸಾಧನಗಳಲ್ಲಿ ಚಾನೆಲ್‌ಗಳನ್ನು ನಿರ್ವಹಿಸುವ ಸಾಮರ್ಥ್ಯವು ಪ್ರಸ್ತುತ ಆಯ್ದ ಬೀಟಾ ಪರೀಕ್ಷಕರಿಗೆ ಲಭ್ಯವಿದೆ ಮತ್ತು ಭವಿಷ್ಯದಲ್ಲಿ ಹೆಚ್ಚಿನ ಬಳಕೆದಾರರಿಗೆ ಪ್ರವೇಶಿಸಲು ನಿರೀಕ್ಷಿಸಲಾಗಿದೆ. ಐಒಎಸ್ ಬಳಕೆದಾರರು ಬಳಕೆದಾರರ ಪ್ರೊಫೈಲ್ ಫೋಟೋಗಳ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಳ್ಳುವುದನ್ನು ತಡೆಯಲು ವಾಟ್ಸ್ ಆಪ್ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ವೈಶಿಷ್ಟ್ಯವು ಮೊದಲು ಆಂಡ್ರಾಯ್ಡ್ ಬಳಕೆದಾರರಿಗೆ ಸೀಮಿತವಾಗಿತ್ತು ಆದರೆ ಭವಿಷ್ಯದಲ್ಲಿ ಐಫೋನ್ ಮಾಲೀಕರಿಗೆ ಸಹ ಇದು ಲಭ್ಯವಾಗಲಿದೆ.

Continue Reading
Advertisement
T20 World Cup 2024
ಕ್ರೀಡೆ4 mins ago

KMF Nandini Logo: ನಂದಿನಿ ಲೋಗೋ ಇರುವ ಜೆರ್ಸಿ ಅನಾವರಣಗೊಳಿಸಿದ ಸ್ಕಾಟ್ಲೆಂಡ್

Job Alert
ಉದ್ಯೋಗ6 mins ago

Job Alert: ಗುಡ್‌ನ್ಯೂಸ್‌: 277 ಗ್ರೂಪ್‌ ಬಿ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಿಸಿದ ಕೆಪಿಎಸ್‌ಸಿ; ಇಲ್ಲಿದೆ ಹೊಸ ವೇಳಾಪಟ್ಟಿ

IPL 2024 Points Table
ಕ್ರೀಡೆ30 mins ago

IPL 2024 Points Table: ಪಂಜಾಬ್​ಗೆ ಗೆಲುವು; ಅಂಕಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದ ಮುಂಬೈ

Indian Railway
ಮಹಿಳೆ33 mins ago

Indian Railway: ಮಹಿಳಾ ಪ್ರಯಾಣಿಕರಿಗೆ ರೈಲಿನಲ್ಲಿ ಎಷ್ಟೊಂದು ಸುರಕ್ಷತಾ ಕ್ರಮಗಳಿವೆ ನೋಡಿ!

pes students self harming
ಕ್ರೈಂ39 mins ago

Student Self harming: ಪಿಇಎಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ, ಪೋಷಕರ ಪ್ರತಿಭಟನೆ; ಟಾಪರ್‌ಗಳೇ ಸಾಯ್ತಿರೋದ್ಯಾಕೆ?

Sachin Tendulkar
ದೇಶ46 mins ago

Sachin Tendulkar: ಸಚಿನ್ ತೆಂಡೂಲ್ಕರ್ ಸೆಕ್ಯೂರಿಟಿ ಗಾರ್ಡ್‌ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

777 Charlie Dog Gives Birth To 6 Puppies Rakshit Shetty on live
ಸಿನಿಮಾ47 mins ago

777 Charlie: 6 ಮುದ್ದಾದ ಮರಿಗಳಿಗೆ ಜನ್ಮ ನೀಡಿದ ಚಾರ್ಲಿ: ರಕ್ಷಿತ್‌ ಶೆಟ್ಟಿ ಸರ್‌ಪ್ರೈಸ್‌ ಲೈವ್‌ !

Kangana Ranaut
Lok Sabha Election 20241 hour ago

Kangana Ranaut: ಬಾಲಿವುಡ್‌ ʼಕ್ವೀನ್‌ʼ ಕಂಗನಾ ಹೆಸರಿನಲ್ಲಿದೆ 50 ಎಲ್ಐಸಿ ಪಾಲಿಸಿ; ಏಜೆಂಟ್‌ ಅತ್ಯಂತ ಲಕ್ಕಿ ಎಂದ ನೆಟ್ಟಿಗರು

anjali murder case hubli
ಕ್ರೈಂ1 hour ago

Anjali Murder Case: ಅಂಜಲಿ ಹಂತಕನಿಗೆ ಸ್ನೇಹಿತನೇ ಪ್ರೇರಣೆ? ಅವನೂ ಕೊಲೆ ಆರೋಪಿ!

Viral Video
ವೈರಲ್ ನ್ಯೂಸ್2 hours ago

Viral Video: 160 ಕಿ.ಮೀ. ವೇಗದಲ್ಲಿ ಡ್ರೈವಿಂಗ್‌..ಇನ್‌ಸ್ಟಾಗ್ರಾಂನಲ್ಲಿ ಲೈವ್‌..ಡೆಡ್ಲಿ ಆಕ್ಸಿಡೆಂಟ್‌! ವೈರಲಾಯ್ತು ಶಾಕಿಂಗ್‌ ವಿಡಿಯೋ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ1 day ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ1 day ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ2 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20242 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20242 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ2 days ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು2 days ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ2 days ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ3 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ3 days ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌