Guava benefits | ಪೇರಲೆ ಹಣ್ಣು: ಬಣ್ಣ ಯಾವುದಾದರೆ ಚೆನ್ನ? - Vistara News

ಆರೋಗ್ಯ

Guava benefits | ಪೇರಲೆ ಹಣ್ಣು: ಬಣ್ಣ ಯಾವುದಾದರೆ ಚೆನ್ನ?

ಪೇರಳೆ ಹಣ್ಣಿನಲ್ಲಿ ಬಿಳಿ ಹಾಗೂ ಕೆಂಪು ಬಣ್ಣವೆಂದು ಎರಡು ವಿಧ. ಯಾವ ಬಣ್ಣದ ಹಣ್ಣು ಆರೋಗ್ಯಕ್ಕೆ ಹೆಚ್ಚು ಉತ್ತಮ ಎಂಬುದು ನಿಮಗೆ ಗೊತ್ತೆ? ಇಲ್ಲಿದೆ ಅದರ ಆರೋಗ್ಯ ಲಾಭಗಳ ವಿವರ.

VISTARANEWS.COM


on

guava nutrition
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಋತುಮಾನಕ್ಕೆ ತಕ್ಕ ಹಣ್ಣುಗಳ ಸೇವನೆ ಒಳ್ಳೆಯದು ಎಂಬ ಮಾತುಗಳನ್ನು ನಾವು ಕೇಳಿಯೇ ಇರುತ್ತೇವೆ. ಆದರೆ ಆಯಾ ಕಾಲಕ್ಕೆ ದೊರೆಯುವ ಹಣ್ಣುಗಳಲ್ಲೂ ಕೆಲವೊಮ್ಮೆ ನಾನಾ ಬಣ್ಣ, ರುಚಿ, ಗಾತ್ರಗಳಲ್ಲಿ ಇರುತ್ತವಲ್ಲ, ಯಾವುದನ್ನು ಆಯ್ದುಕೊಳ್ಳುವುದು ಎಂಬ ಗೊಂದಲ ಉಂಟಾಗಬಹುದು. ಉದಾ, ಸೀಬೆ ಕಾಯಿ, ಚೇಪೆ ಕಾಯಿ ಅಥವಾ ಪೇರಲೆ ಕಾಯಿ ಎಂದೆಲ್ಲಾ ಕರೆಸಿಕೊಳ್ಳುವ ಈ ಫಲ, ಬಿಳಿ ಅಥವಾ ತಿಳಿ ಹಳದಿ ಮತ್ತು ಕೆಂಪು ಅಥವಾ ತಿಳಿಗುಲಾಬಿ ಬಣ್ಣಗಳಲ್ಲಿ ಬರುತ್ತದೆ. ಯಾವ ಬಣ್ಣದ ಫಲದ ಗುಣಧರ್ಮಗಳೇನು, ಯಾವುದು ಹೆಚ್ಚು ಸೂಕ್ತ ಎಂಬಂಥ ಪ್ರಶ್ನೆಗಳಿದ್ದರೆ, ಇಲ್ಲಿದೆ ಉತ್ತರ.

ಪೇರಲೆ ಹಣ್ಣು ಯಾರಿಗೆ ಬೇಡ? ಇನ್ನೊಬ್ಬರ ಮನೆಯ ಮರದಿಂದ ಕಿತ್ತು/ಕದ್ದು ತಿನ್ನುವುದಕ್ಕೆಂದೇ ಇರುವ ಹಣ್ಣುಗಳ ಪೈಕಿ ಇದೂ ಒಂದಲ್ಲವೇ? ಆದರೆ ಪೇರಲೆಯನ್ನು ತೀರಾ ಮಾಗಿದ್ದು ತಿನ್ನುವುದಕ್ಕಿಂತ ಸ್ವಲ್ಪ ಕಾಯಿದ್ದಾಗಲೇ ತಿನ್ನುವುದು ಸೂಕ್ತ ಎನ್ನುತ್ತಾರೆ ಆಹಾರ ತಜ್ಞರು. ತೀರಾ ಹಣ್ಣಾಗಿದ್ದರೆ ನೆಗಡಿ-ಕೆಮ್ಮಿನಂಥ ಸಮಸ್ಯೆಗಳು ಕೆಲವೊಮ್ಮೆ ಕಾಣಿಸಿಕೊಳ್ಳಬಹುದು. ಸ್ವಲ್ಪ ಸಿಹಿ, ಚೂರು ಹುಳಿ ರುಚಿಯನ್ನು ಹೊಂದಿರುವ ಈ ಫಲ, ಕಾಯಿದ್ದಾಗ ಸ್ವಲ್ಪ ಒಗರು ಇರುವುದಕ್ಕೂ ಸಾಕು. ಪೇರಲೆಯ ಬಣ್ಣ ಯಾವುದೇ ಇರಲಿ, ಈ ಹಣ್ಣಿನಲ್ಲಿ ರಕ್ತದ ಸಕ್ಕರೆ ಅಂಶವನ್ನು ನಿಯಂತ್ರಿಸುವ ಗುಣವಿದೆ. ಹೃದಯದ ಆರೋಗ್ಯಕ್ಕೂ ಒಳ್ಳೆಯದು. ಜೀರ್ಣಾಂಗದ ಆರೋಗ್ಯಕ್ಕೆ ಸಹಕಾರಿ, ತೂಕ ಇಳಿಸುವವರಿಗೆ ಒಳ್ಳೆಯ ಆಯ್ಕೆ, ಮಾತ್ರವಲ್ಲದೆ ನಮ್ಮ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿ, ಚರ್ಮದ ಕಾಂತಿಗೂ ನೆರವು ನೀಡುತ್ತದೆ.

ಇಷ್ಟೊಂದು ಗುಣಗಳ ಗಣಿಯಾಗಿರುವ ಈ ಹಣ್ಣು ತನ್ನ ಬಣ್ಣಕ್ಕನುಗುಣವಾಗಿ ಕೆಲವು ಭಿನ್ನ ಗುಣಗಳನ್ನು ಹೊಂದಿದೆ. ಅಂದರೆ, ಕೆಂಪು ಪೇರಲೆಯ ಗುಣಗಳನ್ನು ನೋಡುವುದಾದರೆ- ಇದರಲ್ಲಿ ನೀರಿನ ಪ್ರಮಾಣ ಹೆಚ್ಚು. ವಿಟಮಿನ್‌ ಸಿ, ಸ್ಟಾರ್ಚ್‌ ಮತ್ತು ಸಕ್ಕರೆಯ ಅಂಶ ಕಡಿಮೆ. ಬೀಜಗಳು ಕಡಿಮೆ ಇರುವುದರಿಂದ ಪೇಯವಾಗಿ ಬಳಸುವುದಕ್ಕೆ ಹೆಚ್ಚು ಯುಕ್ತ. ಕ್ಯಾರೆಟ್‌, ಟೊಮೇಟೊದಂಥ ತರಕಾರಿಗಳಲ್ಲಿ ಕೆಂಬಣ್ಣಕ್ಕೆ ಕಾರಣವಾಗುವಂಥ ಅತ್ಯುಪಕಾರಿ ಕೆರೋಟಿನಾಯ್ಡ್‌ಗಳ ಮತ್ತು ಪಾಲಿಫೆನೋಲ್‌ಗಳ ಇರುವಿಕೆಯೇ ಪೇರಲೆಯ ಕೆಂಪು ಬಣ್ಣಕ್ಕೆ ಕಾರಣ. ಕೆರೋಟಿನಾಯ್ಡ್‌ಗಳ ಸಾಂದ್ರತೆ ಹೆಚ್ಚಿದಂತೆ ತಿಳಿಗುಲಾಬಿಯಿಂದ ಪೇರಲೆಯ ಬಣ್ಣ ಕೆಂಪಿನೆಡೆಗೆ ತಿರುಗುತ್ತದೆ. ಒಮೇಗಾ ೩ ಫ್ಯಾಟಿ ಆಮ್ಲ ಸಾಕಷ್ಟು ಪ್ರಮಾಣದಲ್ಲಿದ್ದು, ಆಂಟಿ ಆಕ್ಸಿಡೆಂಟ್‌ಗಳ ಉತ್ತಮ ಮೂಲವಿದು.

ಇದನ್ನೂ ಓದಿ | Skin care Foods | ತ್ವಚೆಯ ಕಾಂತಿ ವೃದ್ಧಿಗಾಗಿ ಈ ಆಹಾರ ತಪ್ಪದೇ ಸೇವಿಸಿ

ಇನ್ನು ಬಿಳಿ ಅಥವಾ ತಿಳಿಹಳದಿ ಬಣ್ಣದ ಪೇರಲೆಯ ಬಗ್ಗೆ ಹೇಳುವುದಾದರೆ, ಇದರಲ್ಲಿ ಸಕ್ಕರೆ ಪ್ರಮಾಣ ಕೆಂಪು ಪೇರಲೆಗಿಂತ ಸ್ವಲ್ಪ ಹೆಚ್ಚು. ಬೀಜವೂ ಹೆಚ್ಚಾಗಿದ್ದು, ವಿಟಮಿನ್‌ ಸಿ ಮತ್ತು ಸ್ಟಾರ್ಚ್‌ ಪ್ರಮಾಣವೂ ಅಧಿಕ. ಇದು ಸಹ ಆಂಟಿ ಆಕ್ಸಿಡೆಂಟ್‌ಗಳ ಉತ್ತಮ ಮೂಲ. ಆದರೆ ಕೆಂಪು ಬಣ್ಣಕ್ಕೆ ಕಾರಣವಾಗುವ ಕೆರೋಟಿನಾಯ್ಡ್‌ ಮತ್ತು ಪಾಲಿಫೆನೋಲ್‌ಗಳು ಬಿಳಿ ಪೇರಲೆಯಲ್ಲಿಲ್ಲ. ಉಳಿದಂತೆ, ನಾರು, ವಿಟಮಿನ್‌-ಎ ನಂಥ ಅಂಶಗಳು ಎರಡೂ ಬಗೆಯ ಪೇರಲೆಗಳಲ್ಲಿ ಸಮಾನವಾಗಿವೆ. ಒಟ್ಟಿನಲ್ಲಿ, ‌ʻಸೂಪರ್‌ ಫ್ರೂಟ್ʼ ಎಂಬ ಕಿರೀಟವಿರುವುದು ಕೆಂಪು ಪೇರಲೆಗೆ ಎನ್ನುವುದು ನಿಜ.

ಖರೀದಿಸುವಾಗ ಗಮನಿಸಿ: ಆದಷ್ಟು ಕುಂದಿಲ್ಲದ ಹಣ್ಣುಗಳನ್ನು ಖರೀದಿಸುವುದು ಸೂಕ್ತ. ಸಣ್ಣ ಅಥವಾ ಮಧ್ಯಮ ಗಾತ್ರದ ಹಣ್ಣುಗಳು ನಮ್ಮ ಆಯ್ಕೆಯಾಗಿದ್ದರೆ ಅನುಕೂಲ. ಕಾರಣ, ವಿಟಮಿನ್‌-ಸಿ ಹೆಚ್ಚಿರುವ ಹಣ್ಣುಗಳನ್ನು ಕತ್ತರಿಸಿ ಇಡುವುದು ಸೂಕ್ತವಲ್ಲದ್ದರಿಂದ, ಒಮ್ಮೆಗೆ ಒಂದು ಹಣ್ಣನ್ನು ತಿಂದು ಮುಗಿಸಲು ಆಗುವಂತಿರಲಿ ಹಣ್ಣುಗಳ ಗಾತ್ರ. ಎಲ್ಲೆಲ್ಲಿಂದಲೋ ಆಮದಾಗಿ ಬರುವ ಪೇರಲೆಗಳಿಗಿಂತ, ಸ್ಥಳೀಯವಾಗಿ ಬೆಳೆಯುವ ಪೇರಲೆಯ ಜಾತಿಯ ಬಳಕೆ ಉತ್ತಮ. ಹಾಗಂತ ರುಚಿಗಾಗಿ ಬೇರೆಬೇರೆ ಊರುಗಳ ಪೇರಲೆ ಖರೀದಿಸುವುದು ತಪ್ಪಲ್ಲ.

ಇದನ್ನೂ ಓದಿ : Avocado benefits | ಹಲವು ಕ್ಯಾನ್ಸರ್‌ಗಳಿಗೆ ಮದ್ದು ಈ ಬೆಣ್ಣೆ ಹಣ್ಣು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Breakfast Tips: ಬೆಳಗಿನ ಉಪಾಹಾರಕ್ಕೆ ಈ 5 ಬಗೆಯ ಆಹಾರಗಳನ್ನು ಸೇವಿಸಬೇಡಿ!

Breakfast Tips: ಬ್ರೇಕ್‌ಫಾಸ್ಟ್‌ ಅನ್ನು ಬಿಡುವುದು ಆರೋಗ್ಯದ ಲಕ್ಷಣವಲ್ಲ. ಅಷ್ಟೇ ಅಲ್ಲ. ಉತ್ತಮ ಆರೋಗ್ಯಕರ ಬೆಳಗಿನ ಉಪಾಹಾರವೂ ಕೂಡಾ ನಮ್ಮ ಆರೋಗ್ಯದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಆದರೆ ಕೆಲವು ಅನಾರೋಗ್ಯಕರ ತಿನಿಸುಗಳನ್ನು ಇಂದಿನ ಧಾವಂತದ ಯುಗದಲ್ಲಿ ಬಹುತೇಕರು ಬೆಳಗಿನ ಉಪಹಾರಕ್ಕಾಗಿ ಸೇವಿಸುತ್ತಾರೆ. ಸಂಸ್ಕರಿಸಿದ ಇಂತಹ ಆಹಾರಗಳನ್ನು ಬೆಳಗಿನ ಉಪಾಹಾರಕ್ಕಾಗಿ ಸೇವಿಸಿದರೆ, ನಮ್ಮ ಜೀರ್ಣಾಂಗ ವ್ಯವಸ್ಥೆಗೆ ನಾವೇ ಅಪಚಾರ ಬಗೆದಂತೆ. ಬನ್ನಿ, ಯಾವೆಲ್ಲ ಆಹಾರಗಳನ್ನು ಬೆಳಗ್ಗಿನ ಉಪಹಾರಕ್ಕೆ ತಿನ್ನಲೇಬಾರದು ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

Breakfast Tip
Koo

ಇಡೀ ದಿನದ ಆಹಾರಕ್ರಮದಲ್ಲಿ ಬಹಳ ಮುಖ್ಯವಾದದ್ದು ಬೆಳಗ್ಗಿನ ಉಪಾಹಾರ (Breakfast Tips). ಇದನ್ನು ಸರಿಯಾಗಿ ಮಾಡದಿದ್ದರೆ ಅದು ಇಡೀ ದಿನದ ಕೆಲಸದ ಮೇಲೆ ಪ್ರಭಾವ ಬೀರುತ್ತದೆ. ಉಪಾಹಾರವನ್ನೇ ಬಿಟ್ಟರೆ ಕೇವಲ ದೇಹವಷ್ಟೇ ಅಲ್ಲ, ಮನಸ್ಸೂ ಕೂಡ ಸರಿ ಇರುವುದಿಲ್ಲ. ಕಿರಿಕಿರಿ, ಏನೋ ಕಳೆದುಕೊಂಡ ಭಾವ ಅಷ್ಟೇ ಅಲ್ಲ, ಶಕ್ತಿಗುಂದುವಿಕೆ, ಇಡೀ ದಿನದ ಕೆಲಸಕ್ಕೆ ಶಕ್ತಿ ಇಲ್ಲದಂತಾಗುವುದು ಇತ್ಯಾದಿ ಪರಿಣಾಮ ಕಂಡುಬರುತ್ತದೆ. ಹೀಗಾಗಿ, ಬ್ರೇಕ್‌ಫಾಸ್ಟ್‌ ಅನ್ನು ಬಿಡುವುದು ಆರೋಗ್ಯದ ಲಕ್ಷಣವಲ್ಲ. ಅಷ್ಟೇ ಅಲ್ಲ. ಉತ್ತಮ ಆರೋಗ್ಯಕರ ಬೆಳಗಿನ ಉಪಾಹಾರವೂ ಕೂಡಾ ನಮ್ಮ ಆರೋಗ್ಯದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಆದರೆ ಕೆಲವು ಅನಾರೋಗ್ಯಕರ ತಿನಿಸುಗಳನ್ನು ಇಂದಿನ ಧಾವಂತದ ಯುಗದಲ್ಲಿ ಬಹುತೇಕರು ಬೆಳಗಿನ ಉಪಹಾರಕ್ಕಾಗಿ ಸೇವಿಸುತ್ತಾರೆ. ಸಂಸ್ಕರಿಸಿದ ಇಂತಹ ಆಹಾರಗಳನ್ನು ಬೆಳಗಿನ ಉಪಹಾರಕ್ಕಾಗಿ ಸೇವಿಸಿದರೆ, ನಮ್ಮ ಜೀರ್ಣಾಂಗ ವ್ಯವಸ್ಥೆಗೆ ನಾವೇ ಅಪಚಾರ ಬಗೆದಂತೆ. ಬನ್ನಿ, ಯಾವೆಲ್ಲ ಆಹಾರಗಳನ್ನು ಬೆಳಗ್ಗಿನ ಉಪಹಾರಕ್ಕೆ ತಿನ್ನಲೇಬಾರದು ಎಂಬುದನ್ನು ನೋಡೋಣ.

Yogurt vs Curd

ಫ್ಲೇವರ್ಡ್‌ ಮೊಸರು

ಅಂಗಡಿಗಳಲ್ಲಿ ದೊರೆಯುವ ಬಗೆಬಗೆಯ ಫ್ಲೇವರ್ಡ್‌ ಮೊಸರುಗಳು ತಿನ್ನಲು ಬಲು ರುಚಿ. ಸ್ಟ್ರಾಬೆರಿ, ಬ್ಲೂಬೆರ್ರಿ, ರಸ್‌ಬೆರ್ರಿ, ಮಾವು ಇತ್ಯಾದಿ ಇತ್ಯಾದಿ ಬಗೆಬಗೆಯ ಮೊಸರುಗಳು ಡಬ್ಬಗಳಲ್ಲಿ ಇಂದು ಲಭ್ಯ. ಸುಲಭವಾಗಿ ಅಂಗಡಿಗಳಲ್ಲಿ ದೊರೆಯುವ ಆರೋಗ್ಯಕರ ಆಹಾರ ಎಂದು ಬಹುತೇಕರು ಇದನ್ನು ಆಗಾಗ ಬಳಸುವುದುಂಟು. ಆದರೆ, ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಕ್ಕರೆ, ಕೃತಕ ಪದಾರ್ಥಗಳೂ ಇರುವುದರಿಂದ ಇವು ಖಂಡಿತ ಒಳ್ಳೆಯದು ಮಾಡಲಾರವು. ಇವುಗಳ ಒಳ್ಳೆಯ ಗುಣಗಳಿಗಿಂತ ಅಡ್ಡ ಪರಿಣಾಮಗಳೇ ಹೆಚ್ಚು. ತೂಕ ಹೆಚ್ಚಾಗುವಿಕೆ, ಶೀತ, ಕಫಗಳನ್ನು ಹೆಚ್ಚಿಸುತ್ತವೆ.

Serials

ಸಿರಿಯಲ್‌ಗಳು

ಬೆಳಗ್ಗೆ ಎದ್ದ ಕೂಡಲೇ ಸುಲಭವಾಗಿ ಮಾಡಬಹುದಾದ ಬ್ರೇಕ್‌ಫಾಸ್ಟ್‌ಗಳ ಪೈಕಿ, ಒಂದು. ಬಹುತೇಕರು ತಿನ್ನುವುದು ಇಂದು ಇವನ್ನೇ. ಬೆಳಗ್ಗೆ ಎದ್ದ ಕೂಡಲೇ ಒಂದಿಷ್ಟು ಸಿರಿಯಲ್‌ ಅನ್ನು ಬೌಲ್‌ನಲ್ಲಿ ಹಾಕಿ ಅದಕ್ಕೆ ಸ್ವಲ್ಪ ಹಾಲು ಹಾಕಿ ಸೇವಿಸಿದರೆ ಮುಗೀತು. ಆಫೀಸ್‌ ಹೊರಡುವ ಗಡಿಬಿಡಿಯಲ್ಲಿ ಬಹುತೇಕರು ಹೀಗೆ ಇದನ್ನು ತಿನ್ನುವುದು ಹೆಚ್ಚು. ಆದರೆ, ಕಾರ್ನ್‌ ಫ್ಲೇಕ್ಸ್‌ ಸೇರಿದಂತೆ ಇಂಥ ಸಿರಿಯಲ್‌ಗಳು ಸಂಸ್ಕರಿಸಿದ ಆಹಾರಗಳ ಪೈಕಿ ಒಂದಾಗಿರುವುದರಿಂದ ಹಾಗೂ ಇವುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಕ್ಕರೆ ಹಾಗೂ ಕೃತಕ ವಸ್ತುಗಳೂ ಸೇರಿಸಲ್ಪಟ್ಟಿರುವುದರಿಂದ ಆರೋಗ್ಯಕ್ಕೆ ಅಂದುಕೊಂಡ ಹಾಗೆ ಒಳ್ಳೆಯದನ್ನು ಮಾಡಲಾರವು. ಅಡ್ಡ ಪರಿಣಾಮಗಳೂ ಇವೆ.

Fruit Juice Side Effects

ಹಣ್ಣಿನ ರಸ

ಹಣ್ಣು ಆರೋಗ್ಯಕ್ಕೆ ಒಳ್ಳೆಯದು ನಿಜ. ಹಾಗೆಯೇ ಹಣ್ಣಿನ ರಸವೂ ಕೂಡಾ. ಆದರೆ, ಹಣ್ಣಿನ ರಸ ಒಳ್ಳೆಯದು ಅಂದುಕೊಂಡು ಬೆಳಗ್ಗೆ ಹಣ್ಣಿನ ರಸ ಕುಡಿದರೆ ಖಂಡಿತ ಒಳ್ಳೆಯದಾಗದು. ಇದರಿಂದ ಇದ್ದಕ್ಕಿದ್ದ ಹಾಗೆ ರಕ್ತದಲ್ಲಿನ ಗ್ಲುಕೋಸ್‌ ಪ್ರಮಾಣ ಏರುತ್ತದೆ. ಒಂದು ಹಣ್ಣು ತಿನ್ನುವುದಕ್ಕೂ ಹಣ್ಣಿನ ರಸ ಕುಡಿಯುವುದಕ್ಕೂ ವ್ಯತ್ಯಾಸವಿದೆ. ಒಂದು ಲೋಟ ಹಣ್ಣಿನ ರಸಕ್ಕೆ ಸಾಕಷ್ಟು ಹಣ್ಣುಗಳು ಬೇಕಾಗುತ್ತವೆ, ಅಷ್ಟೇ ಅಲ್ಲ, ಹಣ್ಣಿನ ನಾರಿನಂಶವನ್ನು ಎಸೆದು ಬಿಡಲಾಗುತ್ತದೆ. ಆದರೆ, ಹಣ್ಣಿನಲ್ಲಿ ಹಾಗಲ್ಲ. ಹಾಗಾಗಿ ಜ್ಯೂಸ್‌ಗಿಂತ ಹಣ್ಣನ್ನು ಹಾಗೆಯೇ ತಿನ್ನುವುದು ಬಹಳ ಒಳ್ಳೆಯದು. ಬೆಳಗ್ಗೆ ಉಪಹಾರಕ್ಕಂತೂ ಹಣ್ಣಿನ ರಸ ಕುಡಿಯುವುದು ಒಳ್ಳೆಯದಲ್ಲ.

Waffle

ವ್ಯಾಫಲ್

ಪ್ಯಾನ್‌ಕೇಕ್‌ಗಳು ಹಾಗೂ ವ್ಯಾಫಲ್‌ಗಳನ್ನು ಬೆಳಗಿನ ಹೊತ್ತು ಉಪಹಾರಕ್ಕೆ ತಿನ್ನುವುದು ಒಳ್ಳೆಯದಲ್ಲ. ಇದರಲ್ಲಿ ಹೆಚ್ಚು ಮೈದಾ ಇರುತ್ತದೆ. ಅಷ್ಟೇ ಅಲ್ಲ, ಇದರಲ್ಲಿ ಯಾವುದೇ ಪೋಷಕಾಂಶಗಳಿರುವುದಿಲ್ಲ. ಉದಾಸೀನತೆಯನ್ನು ಹೆಚ್ಚು ಮಾಡುವ ಯಾವುದೇ ಶಕ್ತಿ ನೀಡದ ಆಹಾರವಿದು.

Cakes, Muffins

ಕೇಕ್‌, ಮಫಿನ್‌ಗಳು

ಬೆಳಗಿನ ಉಪಾಹಾರಕ್ಕೆ ಕೇಕ್‌, ಮಫಿನ್‌ನಂತಹ ಆಹಾರಗಳು ಒಳ್ಳೆಯದಲ್ಲ. ಮೈದಾ, ಸಕ್ಕರೆ, ಎಣ್ಣೆ ಇತ್ಯಾದಿಗಳೇ ಹೆಚ್ಚಿರುವ ಈ ಆಹಾರದಲ್ಲಿ ಒಳ್ಳೆಯ ಅಂಶಗಳು ಕಡಿಮೆ. ಹೆಚ್ಚು ಕ್ಯಾಲರಿಯ, ಹೆಚ್ಚು ಕೊಬ್ಬಿನ ಆಹಾರ. ಸಕ್ಕರೆಯ ಪ್ರಮಾಣವೂ ಹೆಚ್ಚು. ಹಾಗಾಗಿ ಈ ಬೆಳಗಿನ ಉಪಹಾರಕ್ಕೆ ಆರೋಗ್ಯಕರವಲ್ಲ.

ಇದನ್ನೂ ಓದಿ: Sabja Seeds Benefits: ಸಬ್ಜಾ ಬೀಜವನ್ನು ನೆನೆಹಾಕಿ ಸೇವಿಸಿದರೆ ಹಲವು ಆರೋಗ್ಯ ಸಮಸ್ಯೆ ದೂರ

Continue Reading

ಆರೋಗ್ಯ

Sabja Seeds Benefits: ಸಬ್ಜಾ ಬೀಜವನ್ನು ನೆನೆಹಾಕಿ ಸೇವಿಸಿದರೆ ಹಲವು ಆರೋಗ್ಯ ಸಮಸ್ಯೆ ದೂರ

Sabja Seeds Benefits: ಸಬ್ಜಾ, ಚಿಯಾ, ಕುಂಬಳಕಾಯಿ ಬೀಜಗಳಂತಹ ಇತ್ತೀಚೆಗೆ ಹೆಚ್ಚು ಚಾಲ್ತಿಗೆ ಬಂದ ಬೀಜಗಳ ಸೇವನೆ ಮಾಡಿರಬಹುದು. ಇವೆಲ್ಲವೂ ನೈಸರ್ಗಿಕವಾಗಿ ಲಭ್ಯವಿರುವ ಪೋಷಕಾಂಶಗಳ ಪವರ್‌ಹೌಸ್‌ಗಳು. ಇದರಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು, ಕೆಲವು ನಿಮಿಷಗಳ ಕಾಲ ನೆನೆಸಿಟ್ಟು ನಂತರ ತಿನ್ನುವುದರಿಂದ ಸಾಕಷ್ಟು ಆರೋಗ್ಯದ ಲಾಭಗಳಿವೆ. ಕಡಿಮೆ ಕ್ಯಾಲರಿಯಿರುವ ಇವುಗಳನ್ನು ತೂಕ ಇಳಿಸುವ ಪಯಣದಲ್ಲಿರುವ ಪ್ರತಿಯೊಬ್ಬರೂ ಈ ಸಬ್ಜಾ ಹಾಗೂ ಚಿಯಾ ಬೀಜಗಳನ್ನು ಬಳಕೆ ಮಾಡುತ್ತಿರಬಹುದು. ಆದರೆ, ಇವನ್ನು ನೆನೆ ಹಾಕಿಯೇ ಬಳಸಬೇಕು ಯಾಕೆ ಎಂಬ ಒಂದು ಪ್ರಶ್ನೆ ನಿಮ್ಮನ್ನು ಕಾಡಿರಬಹುದು. ಇದಕ್ಕೆ ಇಲ್ಲಿದೆ ಉತ್ತರ.

VISTARANEWS.COM


on

Sabja Seeds Benefits
Koo

ನಿಮಗೆ ಆರೋಗ್ಯದ ಬಗ್ಗೆ ಕಾಳಜಿಯಿದ್ದರೆ, ಖಂಡಿತಾ ಸಬ್ಜಾ, ಚಿಯಾ, ಕುಂಬಳಕಾಯಿ ಬೀಜಗಳಂತಹ ಇತ್ತೀಚೆಗೆ ಹೆಚ್ಚು ಚಾಲ್ತಿಗೆ ಬಂದ ಬೀಜಗಳ ಸೇವನೆ ಮಾಡಿರಬಹುದು. ಇವೆಲ್ಲವೂ ನೈಸರ್ಗಿಕವಾಗಿ ಲಭ್ಯವಿರುವ ಪೋಷಕಾಂಶಗಳ ಪವರ್‌ಹೌಸ್‌ಗಳು. ಇದರಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು, ಕೆಲವು ನಿಮಿಷಗಳ ಕಾಲ ನೆನೆಸಿಟ್ಟು ನಂತರ ತಿನ್ನುವುದರಿಂದ ಸಾಕಷ್ಟು ಆರೋಗ್ಯದ ಲಾಭಗಳಿವೆ. ಕಡಿಮೆ ಕ್ಯಾಲರಿಯಿರುವ ಇವುಗಳನ್ನು ತೂಕ ಇಳಿಸುವ ಪಯಣದಲ್ಲಿರುವ ಪ್ರತಿಯೊಬ್ಬರೂ ಈ ಸಬ್ಜಾ ಹಾಗೂ ಚಿಯಾ ಬೀಜಗಳನ್ನು ಬಳಕೆ ಮಾಡುತ್ತಿರಬಹುದು. ಆದರೆ, ಇವನ್ನು ನೆನೆ ಹಾಕಿಯೇ ಬಳಸಬೇಕು ಯಾಕೆ ಎಂಬ ಒಂದು ಪ್ರಶ್ನೆ ನಿಮ್ಮನ್ನು ಕಾಡಿರಬಹುದು. ಅಂತಹ ಗೊಂದಲವಿದ್ದರೆ (Sabja Seeds Benefits) ಅದಕ್ಕೆ ಉತ್ತರ ಇಲ್ಲಿದೆ. ಸಬ್ಜಾ ಬೀಜಗಳನ್ನು ಹಾಗೆಯೇ ಹಸಿಯಾಗಿ ನೆನೆಸದೆ ಯಾಕೆ ತಿನ್ನಬಾರದು ಎಂಬುದಕ್ಕೆ ಮೊದಲು ಸಬ್ಜಾ ಹಾಗೂ ಚಿಯಾ ಬೀಜಗಳ ನಡುವಿನ ವ್ಯತ್ಯಾಸ ತಿಳಿದುಕೊಳ್ಳೋಣ.ಬಹಳಷ್ಟು ಮಂದಿ ಚಿಯಾ ಬೀಜಗಳು ಹಾಗೂ ಸಬ್ಜಾ ಬೀಜಗಳ ನಡುವೆ ಗೊಂದಲಕ್ಕೆ ಬೀಳುವುದುಂಟು. ಎರಡನ್ನೂ ಒಂದೇ ಎಂದು ತಿಳಿದುಕೊಳ್ಳುವುದುಂಟು. ಆದರೆ, ಇವೆರಡೂ ಬೇರೆ ಬೇರೆ. ಇವೆರಡನ್ನೂ ಸರಿಯಾಗಿ ಗಮನಿಸಿ ನೋಡಿದರೆ ಬೇರೆ ಬೇರೆ ಎಂದು ತಿಳಿಯುತ್ತದೆ. ಸಬ್ಜಾ ಬೀಜ ಕಡು ಕಪ್ಪಗಿದ್ದರೆ, ಚಿಯಾ ಬೀಜ ಕಪ್ಪು, ಬೂದು, ಬಿಳಿ ಹಾಗೂ ಕಂದು ಬಣ್ಣಗಳಿಂದ ಮಿಶ್ರಿತವಾಗಿರುತ್ತದೆ. ಸಬ್ಜಾಕ್ಕೆ ಅದರದ್ದೇ ಆದ ರುಚಿಯಿದ್ದರೆ, ಚಿಯಾ ಬೀಜಕ್ಕೆ ಹೇಳಿಕೊಳ್ಳುವ ರುಚಿಯೇನೂ ಇಲ್ಲ. ಆದರೆ, ಇವೆರಡೂ ಬೀಜಗಳನ್ನು ಸಲಾಡ್‌ ಹಾಗೂ ಇತರ ಆಹಾರಗಳ ಜೊತೆ ಸೇರಿಸಿ ತಿನ್ನುವುದರಿಂದ ನಮ್ಮ ದೇಹಕ್ಕೆ ಸೇರ್ಪಡೆಯಾಗುವ ಪೋಷಕಾಂಶಗಳ ಪ್ರಮಾಣ ಹೆಚ್ಚು.

Sabja Seeds

ಸಬ್ಜಾ ಬೀಜಗಳನ್ನು ಯಾಕೆ ನೀರಿನಲ್ಲಿ ನೆನೆಸದೆ ತಿನ್ನಬೇಕು ಗೊತ್ತೇ? ಸಬ್ಜಾ ಬೀಜಗಳು ತೀರಾ ಚಿಕ್ಕದಾದ ಕಪ್ಪಗಿನ ಬೀಜಗಳಾಗಿದ್ದು, ನೀರಿನಲ್ಲಿ ಅಥವಾ ಯಾವುದೇ ದ್ರವದಲ್ಲಿ ಹಾಕಿದ ಕೂಡಲೇ ಊದಿಕೊಳ್ಳುತ್ತವೆ. ಆದರೆ ಊದಿಕೊಳ್ಳುವ ಮೊದಲೇ ಹಾಗೆಯೇ ಹಸಿಯಾಗಿಯೇ ತಿಂದರೆ ಇದು ದೇಹ ಪ್ರವೇಶಿಸಿದ ಮೇಲೆ ಎಲ್ಲಿ ಬೇಕಾದರೂ ಹೀಗೆ ಊದಿಕೊಂಡು ಕೆಲವೊಮ್ಮೆ ಸಿಕ್ಕಿಹಾಕಿಕೊಂಡ ಅನುಭವ ಕೊಡಬಹುದು.ಹೀಗಾಗಿ ಇದನ್ನು ಯಾವಾಗಲೂ ನೀರಿನಲ್ಲಿ ನೆನೆ ಹಾಕಿಯೇ ತಿನ್ನಬೇಕು. ಒಂದು ಚಮಚ ಸಬ್ಜಾ ಬೀಜಗಳನ್ನು ನೀರಿನಲ್ಲಿ ನೆನೆಸಿ ಊಟದ ನಂತರ ಸೇವಿಸುವುದು ಒಳ್ಳೆಯದು. ಸಬ್ಜಾ ಬೀಜಗಳಿಂದ ಹಲವಾರು ಆರೋಗ್ಯಕರ ಲಾಭಗಳಿವೆ. ಅದಕ್ಕಾಗಿಯೇ ಇತ್ತೀಚೆಗಿನ ದಿನಗಳಲ್ಲಿ ಹಲವರು ಇದನ್ನು ತಮ್ಮ ನಿತ್ಯ ಆಹಾರದಲ್ಲಿ ಇದನ್ನು ಸೇರಿಸಿಕೊಂಡಿದ್ದಾರೆ.

Soaking sabja seeds
  • ನಿಮ್ಮ ದೇಹ ಉಷ್ಣ ಪ್ರಕೃತಿಯದಾಗಿದ್ದರೆ, ಸಬ್ಜಾ ಬೀಜ ಬಹಳ ಒಳ್ಳೆಯದು. ಇದು ದೇಹವನ್ನು ತಂಪು ಮಾಡುವ ಗುಣವನ್ನು ಹೊಂದಿದೆ.
  • ಮದುಮೇಹಿಗಳಿಗೆ ಸಬ್ಜಾ ಬೀಜ ಒಳ್ಳೆಯದು. ದೇಹದ ಸಕ್ಕರೆಯ ಮಟ್ಟವನ್ನು ಇದು ಸಮತೋಲನದಲ್ಲಿ ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.
  • ಮಲಬದ್ಧತೆಯ ಸಮಸ್ಯೆ ಇರುವ ಮಂದಿಗೂ ಸಬ್ಜಾ ಬೀಜಗಳು ಅತ್ಯುತ್ತಮ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಬೆಳಗ್ಗೆ ಸರಿಯಾಗಿ ಸುಲಭವಾಗಿ ಮಲವಿಸರ್ಜನೆಯಾಗುತ್ತದೆ.
  • ತೂಕ ಇಳಿಸುವ ಮಂದಿಗೂ ಸಬ್ಜಾ ಬೀಜ ಅತ್ಯುತ್ತಮ. ಎರಡು ಚಮಚ ಸಬ್ಜಾ ಬೀಜವನ್ನು ಒಂದು ಲೋಟ ನೀರಿನಲ್ಲಿ ಮೊದಲೇ ನೆನೆಸಿಟ್ಟು ಸೇವಿಸಿದರೆ, ಇದು ಜೀರ್ಣಕಾರಿ ಕಿಣ್ವಗಳನ್ನು ಬಿಡುಗಡೆ ಮಾಡುವ ಮೂಲಕ ಜೀರ್ಣಕ್ರಿಯೆ ಸರಾಗವಾಗಿ ಆಗಿ ತೂಕ ಇಳಿಕೆಗೆ ಸಹಾಯವಾಗುತ್ತದೆ. ಸಬ್ಜಾ ಬೀಜಕ್ಕೆ ತನ್ನದೇ ಆದ ರುಚಿ ಇಲ್ಲದೇ ಇರುವುದರಿಂದ ಅನೇಕ ತಿನಿಸುಗಳಿಗೆ ಹಾಗೂ ಪೇಯಗಳಿಗೆ ಬಳಸುವ ಮೂಲಕ ನಿತಯವೂ ನಿಮ್ಮ ಹೊಟ್ಟೆ ಸೇರುವಂತೆ ಮಾಡಬಹುದು. ಮಿಲ್ಕ್‌ ಶೇಕ್‌ಗಳಲಲಿ, ಸ್ಮೂದಿಗಳಲ್ಲಿ, ಲೆಮನೇಡ್‌ಗಳಲ್ಲಿ, ಸಲಾಡ್‌ ಹಾಗೂ ಡೆಸರ್ಟ್‌ಗಳಲ್ಲೂ ಇದನ್ನು ಬಳಸಬಹುದು.

ಇದನ್ನೂ ಓದಿ: Swim Benefits: ನಿತ್ಯವೂ ಈಜಿದರೆ ಸಾಕು; ಇದಕ್ಕಿಂತ ದೊಡ್ಡ ಬೇರೆ ವ್ಯಾಯಾಮ ಇನ್ನೊಂದು ಬೇಡ!

Continue Reading

ಆರೋಗ್ಯ

Swim Benefits: ನಿತ್ಯವೂ ಈಜಿದರೆ ಸಾಕು; ಇದಕ್ಕಿಂತ ದೊಡ್ಡ ಬೇರೆ ವ್ಯಾಯಾಮ ಇನ್ನೊಂದು ಬೇಡ!

swim benefits: ಫಿಟ್‌ನೆಸ್‌ನ ಭಾಗವಾಗಿ ಈಜುತ್ತಿದ್ದರೆ ಅದೂ ಕೂಡಾ ಒಳ್ಳೆಯದೇ. ಇತ್ತೀಚೆಗಿನ ದಿನಗಳಲ್ಲಿ ಈಜು ಮಕ್ಕಳಾದಿಯಾಗಿ ಹಿರಿಯರೂ ಕೂಡಾ ಕಲಿತು ತಮ್ಮ ಫಿಟ್‌ನೆಸ್‌ನ ಭಾಗವಾಗಿ ರೂಪಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಹಾಗೆ ನೋಡಿದರೆ, ಈಜುವುದು ಎಲ್ಲದಕ್ಕಿಂತ ಅತ್ಯುತ್ತಮವಾದ ಕಾರ್ಡಿಯೋ ವ್ಯಾಯಾಮ. ಬನ್ನಿ, ಈಜುವುದರಿಂದ ನಮ್ಮ ಆರೋಗ್ಯಕ್ಕೆ, ಫಿಟ್‌ನೆಸ್‌ಗೆ ಯಾವೆಲ್ಲ ಉಪಯೋಗಗಳಿವೆ ಎಂಬುದನ್ನು ನೋಡೋಣ.

VISTARANEWS.COM


on

swim benefits
Koo

ಹಳ್ಳಿಗಳಲ್ಲಿ ಬೆಳೆದ ನಮ್ಮ ಬಾಲ್ಯಗಳನ್ನು ನೆನೆಪಿಸಿಕೊಂಡರೆ ಅನೇಕರಿಗೆ ಬೇಸಿಗೆ ಬಂದೊಡನೆ ಅಜ್ಜಿಮನೆಯ ಕೆರೆ ಕೊಳ್ಳ, ಹೊಳೆಗಳಲ್ಲೆಲ್ಲ ಈಜಾಡಿಕೊಂಡು ಮಜವಾಗಿ ಕಾಲ ಕಳೆದದ್ದು ನೆನಪಿಗೆ ಬರಬಹುದು. ಆಗೆಲ್ಲ, ಈಜುವ ತರಗತಿ ಹೋಗದೆ, ಹಳ್ಳಿಗಳಲ್ಲೇ ಬಹುತೇಕರು ಬಾಲ್ಯದ ಭಾಗವಾಗಿ ಈಜು ಕಲಿತುಕೊಳ್ಳುತ್ತಿದ್ದರು. ಈಗ ನಗರಗಳಲ್ಲಿ ಎಲ್ಲರಿಗೂ ಈಜು ಬೇಕಾದ ಸಮಯಕ್ಕೆ ಕಲಿತುಕೊಳ್ಳಬಹುದು. ಈಜು ಗೊತ್ತಿದ್ದವರು ಈಜುಕೊಳಗಳಲ್ಲಿ ದುಡ್ಡುಕೊಟ್ಟು ನಿತ್ಯವೂ ಈಜಿ ಬರಬಹುದು. ಈಜಲು ತಿಳಿದಿದ್ದರೆ ಅದು ಒಳಳೆಯದು. ಫಿಟ್‌ನೆಸ್‌ನ ಭಾಗವಾಗಿ ಈಜುತ್ತಿದ್ದರೆ ಅದೂ ಕೂಡಾ ಒಳ್ಳೆಯದೇ. ಇತ್ತೀಚೆಗಿನ ದಿನಗಳಲ್ಲಿ ಈಜು ಮಕ್ಕಳಾದಿಯಾಗಿ ಹಿರಿಯರೂ ಕೂಡಾ ಕಲಿತು ತಮ್ಮ ಫಿಟ್‌ನೆಸ್‌ನ ಭಾಗವಾಗಿ ರೂಪಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಹಾಗೆ ನೋಡಿದರೆ, ಈಜುವುದು ಎಲ್ಲದಕ್ಕಿಂತ ಅತ್ಯುತ್ತಮವಾದ ಕಾರ್ಡಿಯೋ ವ್ಯಾಯಾಮ. ಬನ್ನಿ, ಈಜುವುದರಿಂದ ನಮ್ಮ ಆರೋಗ್ಯಕ್ಕೆ, ಫಿಟ್‌ನೆಸ್‌ಗೆ ಯಾವೆಲ್ಲ ಉಪಯೋಗಗಳಿವೆ ಎಂಬುದನ್ನು (swim benefits) ನೋಡೋಣ.

image of Benefits Of Swimming For Women
  • ಈಜು ಸುಲಭ ಖಂಡಿತ ಅಲ್ಲ ನಿಜ. ಆದರೆ, ಈಜಲು ಗೊತ್ತಿದ್ದರೆ, ಈಜುತ್ತಿದ್ದರೆ, ನೀವು ಬೇರೆ ವ್ಯಾಯಾಮಕ್ಕೆ ಹಾಕಿದ ಶ್ರಮವನ್ನು ಈಜಲು ಹಾಕಬೇಕಿಲ್ಲ. ಆದರೂ, ಇಡೀ ದೇಹಕ್ಕೆ ಅತ್ಯುತ್ತಮ ವ್ಯಾಯಾಮ ಇದರಿಂದ ದೊರೆಯುತ್ತದೆ. ಮಂಡಿ ನೋವು, ಸಂಧಿವಾತ, ಬೊಜ್ಜು ಇತ್ಯಾದಿ ಸಮಸ್ಯೆಗಳಿರುವ ಮಂದಿಯೂ ನಿರಾಯಾಸವಾಗಿ ಈಜಿ ಇದರಿಂದ ಲಾಭ ಪಡೆಯಬಹುದು.
  • ಈಜುವುದರಿಂದ ಹೃದಯ ಗಟ್ಟಿಯಾಗಿರುತ್ತದೆ. ಇದು ಕೊಲೆಸ್ಟೆರಾಲ್‌ ಮಟ್ಟವನ್ನು ಸರಿಯಾಗಿಟ್ಟು, ಅಧಿಕ ರಕ್ತದೊತ್ತಡವನ್ನೂ ಸಮತೋಲನಕ್ಕೆ ತಂದು, ಹೃದಯ ಅಚ್ಚುಕಟ್ಟಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುತ್ತದೆ.
  • ಶ್ವಾಸಕೋಶಕ್ಕೆ ಈಜು ಅತ್ಯಂತ ಒಳ್ಳೆಯದು. ಈಜಿನ ಜೊತೆ ಉಸಿರಾಟದ ಗಮನವೂ ಇರಬೇಕಾದ್ದರಿಂದ ಇಲ್ಲಿ ಶ್ವಾಸಕೋಶಕ್ಕೆ ಅತ್ಯಂತ ಹೆಚ್ಚು ವ್ಯಾಯಾಮ ದೊರೆಯುತ್ತದೆ. ಅಸ್ತಮಾ, ಅಥವಾ ಶ್ವಾಸಕೋಶದ ಸಮಸ್ಯೆ ಇರುವ ಮಂದಿ ತಮ್ಮ ಶ್ವಾಸಕೋಶಕ್ಕೆ ನೀಡಬಹುದಾದ ಉತ್ತಮ ವ್ಯಾಯಾಮ ಇದು.
  • ಈಜುವುದರಿಂದ ಹೆಚ್ಚು ಕ್ಯಾಲರಿ ಕರಗಿಸಬಹುದು. ಅರ್ಧ ಗಂಟೆ ಈಜುವುದರಿಂದ ೨೫೦ ಕ್ಯಾಲರಿಯಷ್ಟನ್ನು ಕರಗಿಸಬಹುದು. ಬೇರೆ ಯಾವ ವ್ಯಾಯಾಮದಲ್ಲಿಯೂ ಇಷ್ಟು ಕಡಿಮೆ ಸಮಯದಲ್ಲಿ ಇಷ್ಟು ಕ್ಯಾಲರಿ ಕರಗದು.
  • ಮಾಂಸಖಂಡಗಳ ಬಲವರ್ಧನೆಗೆ, ನಿಮ್ಮ ದೇಹದ ತೂಕ ಇಳಿಸಿ ಟೋನ್‌ ಮಾಡಲು ಈಜುವುದು ಒಳ್ಳೆಯ ವ್ಯಾಯಾಮ. ಇದರಿಂದ ಮಾಂಸಖಂಡಗಳು ದೃಢವಾಗುತ್ತದೆ.
  • ಈಜುವುದರಿಂದ ಮಿದುಳು ಚುರುಕಾಗುತ್ತದೆ. ವಯಸ್ಸಾದಂತೆ ಮಿದುಳಿಗೂ ವ್ಯಾಯಾಮ ನೀಡಲು ಈಜಬಹುದು.
  • ಆರೋಗ್ಯಕರವಾಗಿ ವಯಸ್ಸಾಗಬೇಕೆಂಬ ಆಸೆ ನಿಮಗಿದ್ದರೆ ನಿತ್ಯವೂ ಈಜಲು ಸಮಯ ಮೀಸಲಿಡಿ. ದೇಹದ ಎಲ್ಲ ಕೆಲಸವೂ ಸಮತೋಲನದಲ್ಲಿ ಇರಲು ಈಜುವುದರಿಂದ ಸಹಾಯವಾಗುತ್ತದೆ.
  • ಮೆನೋಪಾಸ್‌ ಹತ್ತಿರ ಬರುತ್ತಿದ್ದಂತೆ ಮಹಿಳೆಯರ ಎಲುಬಿನ ಸಾಂದ್ರತೆ ಕಡಿಮೆಯಾಗತೊಡಗುತ್ತದೆ. ಇಂಥ ಸಮಯದಲ್ಲಿ ಈಜುವುದರಿಂದ ಎಲುಬಿನ ಮೇಲೆ ಸಕಾರಾತ್ಮಕ ಪ್ರಭಾವ ಬೀಳುವುದರಿಂದ ಎಲುಬು ಸವೆತದಂಥ ಸಮಸ್ಯೆ ಬಹುಬೇಗನೆ ಬಾರದು.
  • ನೀವು ಈಗಷ್ಟೇ ವ್ಯಾಯಾಮದ ಬಗ್ಗೆ ಆಸಕ್ತಿ ತೋರಿಸುತ್ತಿದ್ದೀರಿ ಎಂದಾದಲ್ಲಿ, ಈಜು ನಿಮಗೆ ಅತ್ಯುತ್ತಮ ವ್ಯಾಯಾಮ. ಇಡೀ ದೇಹಕ್ಕೆ ಏಕಕಾಲದಲ್ಲಿ ವ್ಯಾಯಾಮ ದೊರೆಯುವುದು ಈಜಿನಿಂದ ಮಾತ್ರ.
  • ಕೇವಲ ಈಜಷ್ಟೇ ಅಲ್ಲ, ಈಜುಕೊಳದೊಳಗೆ ನಡೆಯುವುದರಿಂದ, ಕೈಬೀಸುವುದರಿಂದ ಹೊರಗೆ ನಡಿಗೆ ಮಾಡಿದ್ದರಿಂದ ಹೆಚ್ಚು ಫಲ ದೊರೆತುತ್ತದೆ. ಅದಕ್ಕಾಗಿಯೇ ವಾಟರ್‌ ಏರೋಬಿಕ್ಸ್‌ ಇತ್ಯಾದಿಗಳೂ ಕೂಡಾ ಈಗ ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿವೆ.

ಇದನ್ನೂ ಓದಿ: Weight Loss Tips: ಕಪ್ಪು ಬಣ್ಣದ ಆಹಾರಗಳಿಂದ ತೂಕ ಇಳಿಸಿ!

Continue Reading

ಚಿಕ್ಕಮಗಳೂರು

Dengue Fever : ಡೆಂಗ್ಯೂ ಮಹಾಮಾರಿಗೆ ಚಿಕ್ಕಮಗಳೂರಿನಲ್ಲಿ ಬಾಲಕಿ ಬಲಿ; ಈವರೆಗೆ ಐವರು ಸಾವು

Dengue Fever : ಪ್ರಸಕ್ತ ವರ್ಷ ರಾಜ್ಯದಲ್ಲಿ ಡೆಂಗ್ಯೂ ಜ್ವರಕ್ಕೆ ಐವರು ಬಲಿಯಾಗಿದ್ದಾರೆ. ಚಿಕ್ಕಮಗಳೂರಿನಲ್ಲಿ ಬಾಲಕಿಯೊಬ್ಬಳು ಮಹಾಮಾರಿಗೆ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.

VISTARANEWS.COM


on

By

Dengue Fever
Koo

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಡೆಂಗ್ಯೂ ಮಹಾಮಾರಿಗೆ (Dengue Fever) ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ಸಾನಿಯಾ (6) ಮೃತ ದುರ್ದೈವಿ. ಚಿಕ್ಕಮಗಳೂರಿನ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಘಟನೆ ನಡೆದಿದೆ.

ಡೆಂಗ್ಯೂ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಾನಿಯಾಳನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಬಾಲಕಿ ಮೃತಪಟ್ಟಿದ್ದಾಳೆ. ರಾಜ್ಯ ಸರ್ಕಾರದ ವಿರುದ್ಧ ಮೃತ ಬಾಲಕಿ ತಂದೆ ಆಸಿಫ್‌ ಬೇಸರ ವ್ಯಕ್ತಪಡಿಸಿದ್ದಾರೆ. ನನಗೆ ಯಾವುದೇ ಸಹಾಯ ಬೇಡ, ಸರ್ಕಾರಿ ಆಸ್ಪತ್ರೆ ಅಭಿವೃದ್ಧಿ ಮಾಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಡೆಂಗ್ಯೂ ಕಾಯಿಲೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸ ಸಿಗುತ್ತಿಲ್ಲ. ಸರಕಾರಿ ಆಸ್ಪತ್ರೆಯಲ್ಲಿ ಬಡವರಿಗೆ ಹೆಚ್ಚಿನ ಸೌಲಭ್ಯ ಸಿಗಬೇಕು. ನನ್ನ ಮಗಳಿಗಾದ ಸ್ಥಿತಿ ಯಾರಿಗೂ ಆಗುವುದು ಬೇಡ ಎಂದು ಸರ್ಕಾರಿ ಆಸ್ಪತ್ರೆಗಳ ನಿರ್ಲಕ್ಷಕ್ಕೆ ಹಾಗೂ ಸರ್ಕಾರಕ್ಕೆ ಛೀಮಾರಿ ಹಾಕಿದರು.

4 ಸಾವಿರ ಗಡಿ ದಾಟಿದ ಡೆಂಗ್ಯೂ; ಐವರು ಸಾವು

ಹವಾಮಾನ ವೈಪರೀತ್ಯ ಮತ್ತು ಮಳೆಯಿಂದಾಗಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಆತಂಕ ಮೂಡಿಸಿದೆ. 2024ರಲ್ಲಿ ಈ ವರೆಗೆ (ಜೂನ್‌) 93,012 ಶಂಕಿತವಾಗಿದ್ದು, ಇದರಲ್ಲಿ 40,918 ಮಂದಿಯ ರಕ್ತ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಆ ಪ್ರಕಾರ 4364 ಮಂದಿಗೆ ಡೆಂಗ್ಯೂ ಜ್ವರ ದೃಢಪಟ್ಟಿದೆ. ಡೆಂಗ್ಯೂ ಜ್ವರಕ್ಕೆ ಚಿಕಿತ್ಸೆ ಫಲಿಸದೇ ಐವರು ಮೃತಪಟ್ಟಿದ್ದಾರೆ. ಶಿವಮೊಗ್ಗ, ಬಾಗಲಕೋಟೆ, ಗದಗದಲ್ಲಿ ತಲಾ ಒಬ್ಬರು ಹಾಗೂ ಹಾಸನದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಇದನ್ನೂ ಓದಿ: Dengue Prevention: ರಾಜ್ಯದಲ್ಲಿ 6000ಕ್ಕೂ ಡೆಂಗ್ಯೂ ಪ್ರಕರಣ; ಇದರಿಂದ ಪಾರಾಗಲು ಹೀಗೆ ಮಾಡಿ

ಡೆತ್‌ ಆಡಿಟಿಂಗ್‌ಗೆ ಮುಂದಾದ ಬಿಬಿಎಂಪಿ

ರಾಜ್ಯ ರಾಜಧಾನಿಯಲ್ಲಿ ಡೆಂಗ್ಯೂ ಪ್ರಕರಣಗಳು ವಿಪರೀತ ಏರಿಕೆ ಆಗಿವೆ. ಬೆಂಗಳೂರಲ್ಲಿ ಜನವರಿಯಿಂದ ಈವರೆಗೆ 1,385 ಮಂದಿಗೆ ಡೆಂಗ್ಯೂ ಜ್ವರ ಕಂಡು ಬಂದಿದೆ. ಈವರೆಗೆ ಡೆಂಗ್ಯೂನಿಂದ ಮೃತಪಟ್ಟ ವರದಿ ಆಗಿಲ್ಲ. ಆದರೆ ಇಬ್ಬರು ಡೆಂಗ್ಯೂ ಜ್ವರದಿಂದ ಮೃತಪಟ್ಟಿರುವ ಶಂಕೆ ಇದ್ದು, ಸಾವಿಗೆ ಕಾರಣ ತಿಳಿಯುವ ಸಲುವಾಗಿ ಡೆತ್ ಆಡಿಟ್‌ಗೆ ಬಿಬಿಎಂಪಿ ಮುಂದಾಗಿದೆ.

ಇನ್ನೂ 3,470 ಲಾರ್ವಾ ಉತ್ಪತ್ತಿ ತಾಣ ಪತ್ತೆಯಾಗಿದ್ದು, ಇದರಲ್ಲಿ 2,004 ತಾಣಗಳ ನಾಶ ಮಾಡಲಾಗಿದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗ ಮಾಹಿತಿ ನೀಡಿದೆ. ಪಾಲಿಕೆಯ ಆರೋಗ್ಯ ಸಿಬ್ಬಂದಿ ನಿನ್ನೆವರೆಗೂ 17,877 ಮನೆಗಳ ಸಮೀಕ್ಷೆ ನಡೆಸಿದ್ದಾರೆ. ಆಡಿಟ್ ಬಳಿಕ ವರದಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ರವಾನೆ ಮಾಡಲಾಗುತ್ತದೆ.

ಡೆಂಗ್ಯೂ ಹೇಗೆ ಹರಡುತ್ತದೆ?

ಡೆಂಗ್ಯೂ ಜ್ವರ ಸೊಳ್ಳೆಯಿಂದ ಹರಡುವ ವೈರಲ್ ಸೋಂಕು ಆಗಿದೆ. ಇದು ಈಡಿಪಸ್‌ ಎಂಬ ಹೆಣ್ಣು ಸೊಳ್ಳೆಗಳ ಕಡಿತದಿಂದ ಹರಡುತ್ತದೆ. ಸೊಳ್ಳೆ ಕಚ್ಚಿದ 4-7 ದಿನಗಳ ನಂತರ ರೋಗ ಲಕ್ಷಣಗಳು ಸಾಮಾನ್ಯವಾಗಿ ಕಂಡು ಬರುತ್ತವೆ. ಇದರ ಪ್ರಭಾವ 10 ದಿನಗಳವರೆಗೆ ಇರುತ್ತದೆ. ಹೀಗಾಗಿ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಸ್ವಚ್ಛತೆಗೆ ಆದ್ಯತೆ ನೀಡುವುದು ಉತ್ತಮವಾಗಿದೆ.

ಡೆಂಗ್ಯೂ ಜ್ವರ ತಲೆನೋವಿನಂತಹ ರೋಗಲಕ್ಷಣಗಳನ್ನು ಉಂಟು ಮಾಡಬಹುದು. ಡೆಂಗ್ಯೂವನ್ನು ಹೆಮರಾಜಿಕ್ ಜ್ವರ ಎಂದೂ ಕರೆಯಲಾಗುತ್ತದೆ. ಡೆಂಗ್ಯೂ ಜ್ವರದ ತೀವ್ರ ಸ್ವರೂಪವು ತೀವ್ರ ರಕ್ತಸ್ರಾವ, ರಕ್ತದೊತ್ತಡ ಹಾಗೂ ರಕ್ತಕಣಗಳ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿ ವ್ಯಕ್ತಿಯ ಸಾವಿಗೂ ಕಾರಣವಾಗಬಹುದು. ಅಧಿಕ ಜ್ವರ, ತೀವ್ರ ತಲೆನೋವು, ವಾಂತಿ, ದೇಹದ ವಿವಿಧ ಭಾಗಗಳಲ್ಲಿ ದದ್ದುಗಳು, ಗ್ರಂಥಿಗಳಲ್ಲಿ ಊತ, ಮೂಳೆ ಮತ್ತು ಕೀಲು ನೋವು, ರಕ್ತಸ್ರಾವವಾಗವುದು ರೋಗ ಲಕ್ಷಣಗಳಾಗಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Rain Tragedy
ಪ್ರಮುಖ ಸುದ್ದಿ1 hour ago

Rain Tragedy: ಪ್ರವಾಸಿಗರ ಕಣ್ಣಮುಂದೆಯೇ ಜಲಪಾತದಲ್ಲಿ ಕೊಚ್ಚಿ ಹೋದ ಒಂದೇ ಕುಟುಂಬದ 7 ಮಂದಿ; ಇಲ್ಲಿದೆ ವಿಡಿಯೊ

T20 World Cup 2024
ಪ್ರಮುಖ ಸುದ್ದಿ2 hours ago

T20 World Cup 2024 : ವೆಸ್ಟ್​ ಇಂಡೀಸ್​ನಲ್ಲಿ ಅಪಾಯಕಾರಿ ಚಂಡಮಾರುತದಲ್ಲಿ ಸಿಲುಕಿಕೊಂಡ ಚಾಂಪಿಯನ್ ಭಾರತ ತಂಡ

Rohit Sharma
ಪ್ರಮುಖ ಸುದ್ದಿ3 hours ago

Rohit Sharma : ತಲೆ ಪಕ್ಕದಲ್ಲೇ ಟ್ರೋಫಿ ಇಟ್ಟುಕೊಂಡು ನಿದ್ದೆ ಮಾಡಿದ ರೋಹಿತ್ ಶರ್ಮಾ

VSK Media Awards 2024
ಬೆಂಗಳೂರು3 hours ago

VSK Media Awards 2024: ಲೋಕಹಿತಕ್ಕಾಗಿ ಪತ್ರಿಕೋದ್ಯಮ ಶ್ರಮಿಸಬೇಕು: ಪ್ರಫುಲ್ಲ ಕೇತ್ಕರ್

NIA Raid
ದೇಶ3 hours ago

NIA Raid: ಹಿಜ್ಬು-ಉತ್‌-ತಹ್ರೀರ್‌ ಉಗ್ರ ಸಂಘಟನೆ ಜೊತೆ ನಂಟು-10 ಕಡೆಗಳಲ್ಲಿ NIA ರೇಡ್‌; ಶಂಕಿತ ಉಗ್ರರು ಅರೆಸ್ಟ್‌

Basavakalyan News
ಬೀದರ್‌4 hours ago

Basavakalyan News: ರಾತ್ರಿ ಮಣ್ಣಲ್ಲಿ ಹೂತಿದ್ದ ಮಗು ಬೆಳಗ್ಗೆ ಜೋಕಾಲಿಯಲ್ಲಿ ಪ್ರತ್ಯಕ್ಷ!

T20 World Cup
ಪ್ರಮುಖ ಸುದ್ದಿ4 hours ago

T20 World Cup 2024 : ವಿಶ್ವ ಚಾಂಪಿಯನ್ ಭಾರತ ತಂಡಕ್ಕೆ ಸಿಗಲಿದೆ ಪ್ರಧಾನಿ ಮೋದಿಯ ಭರ್ಜರಿ ಆತಿಥ್ಯ

Goldman of Bihar
ವೈರಲ್ ನ್ಯೂಸ್4 hours ago

Goldman of Bihar: ಈತ ಬಂಗಾರದ ಮನುಷ್ಯ! ಕೊರಳಲ್ಲಿದೆ 5 ಕೆಜಿ ಚಿನ್ನ! ಬೈಕ್‌ನಲ್ಲೂ ಇದೆ ಬಂಗಾರ!

Lacchi Poojarthi
ಕರ್ನಾಟಕ4 hours ago

Lacchi Poojarthi: ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ತಾಯಿ ನಿಧನ

T20 World Cup 2024
ಪ್ರಮುಖ ಸುದ್ದಿ4 hours ago

T20 World Cup 2024 : ವಿಶ್ವ ಕಪ್​ ಗೆದ್ದ ಭಾರತ ತಂಡಕ್ಕೆ ಬರೋಬ್ಬರಿ 125 ಕೋಟಿ ರೂ. ಬಹುಮಾನ ಘೋಷಿಸಿದ ಬಿಸಿಸಿಐ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ7 hours ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು12 hours ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ1 day ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ2 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ2 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ3 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು3 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ4 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

ಟ್ರೆಂಡಿಂಗ್‌