ವಿಸ್ತಾರ Money Guide | ಲಾಭದಾಯಕ ಟಾಪ್- 5 ಲಾರ್ಜ್‌ ಕ್ಯಾಪ್‌ ಈಕ್ವಿಟಿ ಮ್ಯೂಚುಯಲ್‌ ಫಂಡ್‌ಗಳಿವು! - Vistara News

ಪ್ರಮುಖ ಸುದ್ದಿ

ವಿಸ್ತಾರ Money Guide | ಲಾಭದಾಯಕ ಟಾಪ್- 5 ಲಾರ್ಜ್‌ ಕ್ಯಾಪ್‌ ಈಕ್ವಿಟಿ ಮ್ಯೂಚುಯಲ್‌ ಫಂಡ್‌ಗಳಿವು!

ಮ್ಯೂಚುಯಲ್‌ ಫಂಡ್‌ಗಳಲ್ಲಿ ಹೆಚ್ಚು ಲಾಭ ತಂದುಕೊಡುವ ಲಾರ್ಜ್‌ ಕ್ಯಾಪ್‌ ಈಕ್ವಿಟಿ ಮ್ಯೂಚುಯಲ್‌ ಫಂಡ್‌ಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಉಪಯುಕ್ತ ಒಳನೋಟ (ವಿಸ್ತಾರ Money Guide) ಮತ್ತು ವಿವರಗಳು ಇಲ್ಲಿವೆ.

VISTARANEWS.COM


on

mutual fund
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶರತ್‌ ಎಂ.ಎಸ್‌. ಎಕ್ಸಿಕ್ಯುಟಿವ್‌ ಎಡಿಟರ್‌, ವಿಸ್ತಾರ ನ್ಯೂಸ್
ಮ್ಯೂಚಯಲ್‌ ಫಂಡ್‌ಗಳ ಬಗ್ಗೆ ಪ್ರಾಥಮಿಕ ಮಾಹಿತಿ ನಮಗೆಲ್ಲ ತಿಳಿದಿದೆ. ಅವುಗಳ ಬಗ್ಗೆ ಮತ್ತಷ್ಟು ವಿಸ್ತಾರವಾದ ಹಾಗೂ ಅತ್ಯಂತ ಉಪಯುಕ್ತವಾದ ವಿವರಗಳನ್ನು ತಿಳಿದುಕೊಳ್ಳೋಣ! ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ? ಹೆಚ್ಚು ಲಾಭ ಕೊಡುವ ಟಾಪ್‌ 5 ಲಾರ್ಜ್‌ ಕ್ಯಾಪ್‌ ಈಕ್ವಿಟಿ ಮ್ಯೂಚುಯಲ್‌ ಫಂಡ್‌ಗಳು ಯಾವುದು? ಅವುಗಳಲ್ಲಿ ಎಷ್ಟು ಆದಾಯ ಪಡೆಯಬಹುದು? (ವಿಸ್ತಾರ Money Guide) ಇಲ್ಲಿದೆ ಸಮಗ್ರ ವಿವರ!

ಮ್ಯೂಚುಯಲ್‌ ಫಂಡ್‌ ಮತ್ತು ಲಾರ್ಜ್‌ ಕ್ಯಾಪ್‌ ಈಕ್ವಿಟಿ ಮ್ಯೂಚುಯಲ್‌ ಫಂಡ್‌ ಎಂದರೇನು ಎಂದು ನೀವು ಕೇಳಬಹುದು. ಮ್ಯೂಚುಯಲ್‌ ಎಂದರೆ ಪರಸ್ಪರ ಫಂಡ್‌ ಎಂದರೆ ನಿಧಿ. ಪರಸ್ಪರರು ಸೇರಿ ಒಂದು ನಿಧಿಯನ್ನು ಸ್ಥಾಪಿಸಿ, ಅದರ ನಿರ್ವಹಣೆಗೆ ವೃತ್ತಿಪರ ವ್ಯವಸ್ಥಾಪಕರನ್ನು ನೇಮಿಸುವುದೇ ಮ್ಯೂಚುಯಲ್‌ ಫಂಡ್.‌ ಷೇರು ಮಾರುಕಟ್ಟೆಯಲ್ಲಿ ನೇರವಾಗಿ ಹೂಡಿಕೆ ಮಾಡಲು ಸಾಧ್ಯವಾಗದಿದ್ದವರಿಗೆ, ನುರಿತ ವ್ಯವಸ್ಥಾಪಕರ ನಿರ್ವಹಣೆಯಲ್ಲಿ ಪರೋಕ್ಷವಾಗಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಮ್ಯೂಚುಯಲ್‌ ಫಂಡ್‌ ಬೇಕಾಗುತ್ತದೆ. ಇದರಲ್ಲಿ ಪ್ರತಿ ತಿಂಗಳು‌ ಕನಿಷ್ಠ 500 ರೂ. 1000 ರೂ. ಅಥವಾ ಸಾಧ್ಯವಾದಾಗ ಹಣವನ್ನು ಹೂಡಿಕೆ ಮಾಡಲೂ ಅವಕಾಶ ಇದೆ. ಹಣಕಾಸು ತಜ್ಞರು ತಮ್ಮ ವೃತ್ತಿಪರ ನಿರ್ವಹಣೆಯ ಮೂಲಕ ಆದಾಯವನ್ನು ಹೆಚ್ಚಿಸುತ್ತಾರೆ.

ಲಾರ್ಜ್‌ ಕ್ಯಾಪ್‌ ಈಕ್ವಿಟಿ ಮ್ಯೂಚುಯಲ್‌ ಫಂಡ್‌ ಎಂದರೇನು?

ಷೇರು ಮಾರುಕಟ್ಟೆಯಲ್ಲಿ 7,500 ಕ್ಕೂ ಹೆಚ್ಚು ಕಂಪನಿಗಳಿವೆ. ಇದರಲ್ಲಿ ಯಾವುದು ಒಳ್ಳೆಯದು, ಯಾವುದು ಒಳ್ಳೆಯ ಕಂಪನಿ ಅಲ್ಲ, ಯಾವ ಕಂಪನಿಯಲ್ಲಿ ಹೂಡಿಕೆ ಮಾಡಬಹುದು ಎಂಬುದನ್ನು ತಿಳಿಯುವುದು ಅವಶ್ಯಕ. ಈ ನಿಟ್ಟಿನಲ್ಲಿ ಒಳ್ಳೆಯ ಈಕ್ವಿಟಿ ಮ್ಯೂಚುವಲ್‌ ಫಂಡ್ ‌ಗಳಲ್ಲಿ ಹೂಡಿಕೆ ಮಾಡುವುದು ಮುಖ್ಯ. ನಾವು ಈಗ ಟಾಪ್‌ 5 ಲಾರ್ಜ್‌ ಕ್ಯಾಪ್‌ ಈಕ್ವಿಟಿ ಮ್ಯೂಚುಯಲ್‌ ಫಂಡ್‌ ಕಂಪನಿಗಳ ಬಗ್ಗೆ ತಿಳಿದುಕೊಳ್ಳೋಣ.

ಲಾರ್ಜ್‌ ಕ್ಯಾಪ್‌ ಎಂದರೆ ಬೃಹತ್‌ ಕಂಪನಿಗಳು. ಭಾರತದ ಷೇರು ಮಾರುಕಟ್ಟೆಯಲ್ಲಿ ನೋಂದಣಿಯಾಗಿರುವ ಟಾಪ್‌ 100 ಕಂಪನಿಗಳಲ್ಲಿ ಮಾಡುವ ಮ್ಯೂಚುಯಲ್‌ ಫಂಡ್ ಹೂಡಿಕೆಯನ್ನು ಲಾರ್ಜ್‌ ಕ್ಯಾಪ್‌ ಅಥವಾ ಬ್ಲೂ ಚಿಪ್‌ ಕಂಪನಿಗಳಲ್ಲಿನ ಹೂಡಿಕೆ ಎನ್ನುತ್ತೇವೆ.‌ ಇದನ್ನು ಲಾರ್ಜ್‌ ಕ್ಯಾಪ್‌ ಈಕ್ವಿಟಿ ಮ್ಯೂಚುಯಲ್‌ ಫಂಡ್‌ ಎಂದು ಕರೆಯುತ್ತಾರೆ. ಈಗ ನಾವು ಲಾರ್ಜ್‌ ಕ್ಯಾಪ್‌ ಕೆಟಗರಿಯಲ್ಲಿ ಟಾಪ್‌ 5 ಯಾವುದು ಎಂಬುದನ್ನು ತಿಳಿಯೋಣ.

ಸಾಮಾನ್ಯವಾಗಿ ಜನರು ಯಾವ ಮ್ಯೂಚುಯಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಬೇಕು ಎಂದು ಕೇಳುತ್ತಾರೆ. ಯಾರದ್ದೋ ಸಲಹೆಗೆ ಯಾವುದೋ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಾರೆ. ಆದರೆ ಯಾವುದು ಬೆಸ್ಟ್‌ ಎಂದರೆ ಅದಕ್ಕೆ ಹಲವು ಆಯಾಮಗಳು ಇವೆ. ಇದನ್ನೆಲ್ಲ ಪರಿಗಣಿಸಿ ಇಲ್ಲಿ ಟಾಪ್‌ 5 ಆಯ್ಕೆ ಮಾಡಲಾಗಿದೆ.

ಟಾಪ್-‌ ೫ ಲಾರ್ಜ್‌ ಕ್ಯಾಪ್‌ ಈಕ್ವಿಟಿ ಫಂಡ್‌ಗಳು

1. ಕೆನರಾ ರೊಬೆಕೋ ಬ್ಲೂ ಚಿಪ್‌ ಈಕ್ವಿಟಿ ಫಂಡ್‌

2. ಕೋಟಕ್‌ ಬ್ಲೂ ಚಿಪ್‌ ಫಂಡ್‌ ಗ್ರೋಥ್‌ ಡೈರೆಕ್ಟ್‌

3. ಮಿರಾಯ್‌ ಅಸೆಟ್‌ ಲಾರ್ಜ್‌ ಕ್ಯಾಪ್‌ ಫಂಡ್‌ ಗ್ರೋಥ್‌ ಡೈರೆಕ್ಟ್‌

4. ಐಸಿಐಸಿಐ ಪ್ರೂರೆನ್ಸಿಯಲ್‌ ಬ್ಲೂಚಿಪ್‌ ಫಂಡ್‌ ಡೈರೆಕ್ಟ್‌ ಗ್ರೋಥ್‌

5. ಎಕ್ಸಿಸ್‌ ಬ್ಲೂಚಿಪ್‌ ಫಂಡ್‌ ಡೈರೆಕ್ಟ್‌ ಪ್ಲಾನ್‌ ಗ್ರೋಥ್

ಕೆನರಾ ರೊಬೆಕೋ ಬ್ಲೂ ಚಿಪ್‌ ಈಕ್ವಿಟಿ ಫಂಡ್‌ -CANARA ROBECO BLUCHIP EQUITY FUND : ಈ ಈಕ್ವಿಟಿ ಫಂಡ್‌ನಲ್ಲಿ ಕಳೆದ 5 ವರ್ಷಗಳಲ್ಲಿ 18.04% ಲಾಭ ಹೂಡಿಕೆದಾರರಿಗೆ ಲಭಿಸಿದೆ. ಇದರಲ್ಲಿ ಎಕ್ಸ್‌ಪೆನ್ಸ್‌ ಅನುಪಾತ ಅಂದರೆ ಕಮೀಶನ್‌ ಕೇವಲ 0.39% ಮಾತ್ರ. ಲಾರ್ಜ್‌ ಕ್ಯಾಪ್‌ ಕೆಟಗರಿಯಲ್ಲಿಯೇ ಇದು ಕಡಿಮೆ. ಕನಿಷ್ಠ 1000 ರೂ. ಹಾಗೂ 5000 ಲಂಪ್ಸಮ್‌ ಹೂಡಿಕೆ ಮಾಡಬಹುದು. ಈ ಫಂಡ್‌ನಲ್ಲಿ ಪ್ರತಿ ತಿಂಗಳು 10,000 ರೂ.ಗಳನ್ನು 5 ವರ್ಷಗಳ ಕಾಲ ಹೂಡಿಕೆ ಮಾಡಿದರೆ, ಒಟ್ಟು 6 ಲಕ್ಷ ರೂ. ಹೂಡಿಕೆ ಮಾಡುತ್ತೀರಿ. ನಿಮಗೆ ಸಿಗಬಹುದಾದ ಲಾಭ 3.41 ಲಕ್ಷ ರೂ. ಲಾಭ ಸಿಗುತ್ತದೆ. ಅಂದರೆ 18.04% ಲಾಭವನ್ನು ನಿರೀಕ್ಷಿಸಬಹುದು. ಆದರೆ ಮಾರುಕಟ್ಟೆಯ ರಿಸ್ಕ್‌ ಇದರಲ್ಲಿ ಇರುತ್ತದೆ. ಆದರೆ ಇದು ಬ್ಲೂ ಚಿಪ್‌ ಕಂಪನಿಗಳ ಹೂಡಿಕೆಯಾದ್ದರಿಂದ ಹೂಡಿಕೆ ಮಾಡಬಹುದು.

೨. ಕೋಟಕ್‌ ಬ್ಲೂ ಚಿಪ್‌ ಫಂಡ್‌ ಗ್ರೋಥ್‌ ಡೈರೆಕ್ಟ್‌: KOTAK BLUCHIP FUND GROWTH DIRECT: ಇದು ಹೂಡಿಕೆದಾರರಿಗೆ 5 ವರ್ಷಗಳಲ್ಲಿ 17.52% ಲಾಭ ತಂದುಕೊಟ್ಟಿದೆ. 4,997 ಕೋಟಿ ರೂ.ಗಳನ್ನು ಹೂಡಿಕೆ ಮಾಡಲಾಗಿದೆ. ಹಣಕಾಸು, ತಂತ್ರಜ್ಞಾನ, ಇಂಧನ, ಆಟೊಮೊಬೈಲ್‌ ವಲಯದಲ್ಲಿ ಹೂಡಿಕೆ ಮಾಡಲಾಗಿದೆ. ಎಕ್ಸ್‌ಪೆನ್ಸ್‌ ರೇಶಿಯೊ, ಲಾಭಾಂಶದ ಲೆಕ್ಕದಲ್ಲಿ ಕೋಟಕ್‌ ಬ್ಲೂ ಚಿಪ್‌ಗಿಂತ ಕೆನರಾ ರೊಬೋಕೊ ಉತ್ತಮ ಎನ್ನಬಹುದು.

೩. ಮಿರಾಯ್‌ ಅಸೆಟ್‌ ಲಾರ್ಜ್‌ ಕ್ಯಾಪ್‌ ಫಂಡ್‌ ಗ್ರೋಥ್‌ ಡೈರೆಕ್ಟ್‌- MIRAE ASSET LARGE CAP FUND GROWTH DIRECT : ಕಳೆದ 5 ವರ್ಷಗಳಲ್ಲಿ 16.3% ಲಾಭ ಕೊಟ್ಟಿದೆ. ಇದರಲ್ಲಿ 33,748 ಕೋಟಿ ರೂ. ಹೂಡಿಕೆ ಮಾಡಲಾಗಿದೆ. ಎಚ್‌ಡಿಎಫ್‌ಸಿ, ಐಸಿಐಸಿಐ, ಇನ್ಫೋಸಿಸ್‌, ರಿಲಯನ್ಸ್‌ ಇತ್ಯಾದಿ ಕಂಪನಿಗಳಲ್ಲಿ ಹೂಡಿಕೆ ಮಾಡಿದೆ. ಹಣಕಾಸು, ಟೆಕ್ನಾಲಜಿ, ಎನರ್ಜಿ, ಹೆಲ್ತ್‌ಕೇರ್‌ನಲ್ಲಿ ಹೂಡಿಕೆ ಮಾಡಿರುವುದನ್ನು ಗಮನಿಸಬಹುದು.

೪. ಐಸಿಐಸಿಐ ಪ್ರೂರೆನ್ಸಿಯಲ್‌ ಬ್ಲೂಚಿಪ್‌ ಫಂಡ್‌ ಡೈರೆಕ್ಟ್‌ ಗ್ರೋಥ್‌-ICICI PRUDENTIAL BLUCHIP FUND DIRECT GROWTH : ಈ ಫಂಡ್‌ನಲ್ಲಿ ಕಳೆದ ಐದು ವರ್ಷಗಳ ಲಾಭಾಂಶ 16.3% ಆಗಿದೆ. ಇದರಲ್ಲಿ 33,739 ಕೋಟಿ ರೂ. ಹೂಡಿಕೆ ಮಾಡಲಾಗಿದೆ. ಇತರ ಫಂಡ್‌ ಗೆ ಹೋಲಿಸಿದರೆ ಲಾಭಾಂಶದಲ್ಲಿ ಎರಡನೇ ಸ್ಥಾನದಲ್ಲಿ ಇದೆ. ಈ ಫಂಡ್‌ನಲ್ಲಿ ಎಕ್ಸ್‌ಪೆನ್ಸ್‌ ರೇಶಿಯೊ 1.0% ಇದೆ. ಅಂದರೆ ಕೆನರಾ ರೊಬೋಕೊಗಿಂತ ಹೆಚ್ಚು. ಸಿಪ್‌ ದೃಷ್ಟಿಯಿಂದ 100 ರೂ.ಗಳ ಅತ್ಯಂತ ಕಡಿಮೆ ಮೊತ್ತದಲ್ಲೂ ಹೂಡಿಕೆ ಮಾಡಬಹುದು. ಲಂಪ್ಸಮ್‌ನಲ್ಲೂ ಕನಿಷ್ಠ 100 ರೂ. ಹೂಡಿಕೆ ಮಾಡಬಹುದು.

5. ಎಕ್ಸಿಸ್‌ ಬ್ಲೂಚಿಪ್‌ ಫಂಡ್‌ ಡೈರೆಕ್ಟ್‌ ಪ್ಲಾನ್‌ ಗ್ರೋಥ್-AXIS BLUE CHIP FUND DIRECT PLAN GROWTH : ಇದು ಕಳೆದ ಐದು ವರ್ಷಗಳಲ್ಲಿ 15.31% ಲಾಭಾಂಶ ನೀಡುತ್ತದೆ. 36,980 ಕೋಟಿ ರೂ.ಗಳನ್ನು ಇದರಲ್ಲಿ ಹೂಡಲಾಗಿರುವುದು ವಿಶೇಷ. ಸಿಪ್‌ ಆಗಿ 500 ರೂ.ಗಳಿಂದಲೂ ಹೂಡಿಕೆ ಮಾಡಬಹುದು. ಇಲ್ಲಿ ಬಜಾಜ್‌ ಫೈನಾನ್ಸ್‌, ಡಿಮಾರ್ಟ್‌ ಕಂಪನಿಯಲ್ಲೂ (ಅವೆನ್ಯೂ ಮಾರ್ಕೆಟ್ಸ್) ಹೂಡಿಕೆ ಮಾಡಲಾಗಿದೆ.‌ ಸೇವಾ ವಲಯದಲ್ಲೂ ಹೂಡಿಕೆ ಮಾಡಿರುವುದನ್ನು ಗಮನಿಸಬಹುದು.

ಉಪಯುಕ್ತ ಟಿಪ್ಸ್:‌ 1. ಎಕ್ಸ್‌ಪೆನ್ಸ್‌ ರೇಶಿಯೊ (ಕಮಿಶನ್)‌ ಎಷ್ಟಿದೆ ಎಂದು ನೋಡಬೇಕು. ಎಕ್ಸ್‌ಪೆನ್ಸ್‌ ರೇಶಿಯೊ ಕಡಿಮೆಯಾಗಿ ಇರಬೇಕು. 2. ದೀರ್ಘಾವಧಿ ಹೂಡಿಕೆಯಲ್ಲಿ ಎಕ್ಸ್‌ಪೆನ್ಸ್‌ ರೇಶಿಯೊ ಜಾಸ್ತಿ ಇದ್ದರೆ ಲಕ್ಷಗಟ್ಟಲೆ ರೂ. ಕಮೀಶನ್‌ ಆಗುತ್ತದೆ. 3. ಮೊದಲ ಮೂರು ಫಂಡ್‌ಗಳ ಆಯ್ಕೆಯನ್ನು ಪರಿಶೀಲಿಸಬಹುದು.

DISCLAIMER: Stock Market and Mutual Funds investments are subject to market risks. There is no assurance and gurantee of returns neither the principal nor appreciation on the investments. Kindly seek advice from your financial planner before investing. User discretion advised. Information presented in this video is for educational purpose only. It has not been prepared with regard to the individual needs, objectives or financial situation of any particular person.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

CM Siddaramaiah: ₹2000 ಕೊಟ್ಟು ₹4740 ಕಿತ್ತುಕೊಳ್ಳುತ್ತಿರುವ ರಾಜ್ಯ ಸರಕಾರ! ನಿಮ್ಮ ಜೇಬಿಗೆ ಕತ್ತರಿ ಬೀಳುತ್ತಿರುವುದರ ಲೆಕ್ಕ ಇಲ್ಲಿದೆ ನೋಡಿ!

CM Siddaramaiah: ‘ಗ್ಯಾರಂಟಿ’ ಹೆಸರಲ್ಲಿ ನಮಗೆ ಗೊತ್ತಿಲ್ಲದಂತೆಯೇ ಜೇಬು ಖಾಲಿ ಆಗುತ್ತಿದೆ. ಇತ್ತೀಚೆಗೆ ಸರಕಾರ ಮಾಡುತ್ತಿರುವ ಬೆಲೆ ಏರಿಕೆಗಳನ್ನು, ಇಷ್ಟರಲ್ಲಿಯೇ ಮಾಡಲಿರುವ ಬೆಲೆಯೇರಿಕೆಗಳನ್ನು ಗಮನಿಸಿ ಈ ಮಾತು ಆಡಲಾಗುತ್ತಿದೆ. ಒಂದು ಕಡೆಯಿಂದ ಕೊಟ್ಟಂತೆ ನಟಿಸುತ್ತಿರುವ ಸರಕಾರ, ಇನ್ನೊಂದು ಕಡೆಯಿಂದ ಅದರ ದುಪ್ಪಟ್ಟು ಹಣ ನಮ್ಮ ಕಿಸೆಯಿಂದ ಪೀಕುತ್ತಿದೆ!

VISTARANEWS.COM


on

cm siddaramaiah price hikes
Koo

ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದ ಕಾಂಗ್ರೆಸ್‌ ಸರಕಾರ (Congress government) ರಾಜ್ಯದಲ್ಲಿ ಬಂದ ಕೂಡಲೇ ಚುನಾವಣೆ (Assembly Election) ಸಂದರ್ಭದಲ್ಲಿ ನೀಡಿದ ʼಗ್ಯಾರಂಟಿ ಯೋಜನೆʼಗಳನ್ನು (Guarantee schemes) ಜಾರಿ ಮಾಡಿತು. ಇದಕ್ಕಾಗಿ ಮುಂದೆ ಯಾವ ಬೆಲೆ ತೆರಬೇಕಾಗಲಿದೆಯೋ ಎಂಬ ಆತಂಕ ಆಗಲೇ ರಾಜ್ಯದ ಜನತೆಯನ್ನು ಕಾಡಿತ್ತು. ಅದು ಈ ನಿಜವಾಗುತ್ತಿದೆ. ಒಂದು ಕಡೆಯಿಂದ ಕೊಟ್ಟಂತೆ ನಟಿಸುತ್ತಿರುವ ಸರಕಾರ, ಇನ್ನೊಂದು ಕಡೆಯಿಂದ ಅದರ ದುಪ್ಪಟ್ಟು ಹಣ ನಮ್ಮ ಕಿಸೆಯಿಂದ ಪೀಕುತ್ತಿದೆ!

ಹೌದು, ಈ ಲೆಕ್ಕಾಚಾರ ನೋಡಿದರೆ ನೀವು ಖಂಡಿತಾ ಬಾಯಿ ಬಾಯಿ ಬಡಿದುಕೊಳ್ಳುತ್ತೀರಿ. ‘ಗ್ಯಾರಂಟಿ’ ಹೆಸರಲ್ಲಿ ನಮಗೆ ಗೊತ್ತಿಲ್ಲದಂತೆಯೇ ಜೇಬು ಖಾಲಿ ಆಗುತ್ತಿದೆ. ಇತ್ತೀಚೆಗೆ ಸರಕಾರ ಮಾಡುತ್ತಿರುವ ಬೆಲೆ ಏರಿಕೆಗಳನ್ನು, ಇಷ್ಟರಲ್ಲಿಯೇ ಮಾಡಲಿರುವ ಬೆಲೆಯೇರಿಕೆಗಳನ್ನು ಗಮನಿಸಿ ಈ ಮಾತು ಆಡಲಾಗುತ್ತಿದೆ. ಪೆಟ್ರೋಲ್‌, ಡೀಸೆಲ್‌ ಬೆಲೆ (Petrol price hike) ಏರಿಸಲಾಗಿದೆ; ಹಾಲು ದರವೂ (milk price hike) ಹೆಚ್ಚಿತು. ಮುಂದೆ ಕುಡಿಯವ ಕಾವೇರಿ ನೀರು (Kaveri Water Price hike) ಮತ್ತು ಆಲ್ಕೋಹಾಲ್‌ ದರಕ್ಕೂ (Liquor rates) ಸರಕಾರ ಕೈಹಾಕಲಿದೆ. ಶೀಘ್ರದಲ್ಲೇ ಟೀ- ಕಾಫಿ ರೇಟ್‌ ಏರಿಕೆಯೂ ಆಗಬಹುದು. ಮೆಡಿಕಲ್‌ ಸೀಟು ಶುಲ್ಕಗಳು ಹೆಚ್ಚಲಿವೆ, ಆಟೋ ದರ (Auto Fare) ಅಧಿಕವಾಗಲಿದೆ.

ಈಗ ಲೆಕ್ಕಾಚಾರ ತುಸು ನೋಡೋಣ. ಮೊದಲಿಗೆ ಸರಕಾರ ಏನು ಕೊಟ್ಟಿದೆ ಎಂಬ ಲೆಕ್ಕ.

ಗ್ಯಾರಂಟಿ ಯೋಜನೆಗಳು

ಗೃಹಲಕ್ಷ್ಮೀ – 2,000 ರೂ.
ಯುವನಿಧಿ – ಡಿಪ್ಲೊಮಾ 1500/- ಪದವೀಧರರಿಗೆ 3000/-
ಶಕ್ತಿಯೋಜನೆ – ಮಹಿಳೆಯರಿಗೆ ಸರ್ಕಾರಿ ಬಸ್​​ನಲ್ಲಿ ಉಚಿತ ಪ್ರಯಾಣ
ಅನ್ನಭಾಗ್ಯ – 5ಕೆಜಿ ಅಕ್ಕಿ & 170 ರೂಪಾಯಿ
ಗೃಹಜ್ಯೋತಿ – 200 ಯೂನಿಟ್​​ವರೆಗೆ ಉಚಿತ ವಿದ್ಯುತ್​​

ಇನ್ನು ಬೆಲೆ ಏರಿಕೆಗಳು

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ಪೆಟ್ರೋಲ್ – 3 ರೂಪಾಯಿ ಏರಿಕೆ
ಡೀಸೆಲ್ – 3.50 ರೂ. ಏರಿಕೆ
ಪೆಟ್ರೋಲ್ ಸದ್ಯದ ದರ – 103 ರೂ.
ಡೀಸೆಲ್ ಸದ್ಯದ ದರ – 89.20 ರೂ.
1 ದ್ವಿಚಕ್ರ ವಾಹನ – ದಿನಕ್ಕೆ 1 ಲೀಟರ್ ಬಳಕೆ
ತಿಂಗಳಿಗೆ ​ಬಳಕೆ ಸರಾಸರಿ ಹೆಚ್ಚಳ 30 ಲೀಟರ್​​ – ತಿಂಗಳಿಗೆ 100 ರೂ. ಹೆಚ್ಚಳ

ಹಾಲಿನ ದರ ಹೆಚ್ಚಳ

ಹಾಲಿನ ದರ – ವರ್ಷದಲ್ಲಿ 2 ಬಾರಿ ಏರಿಕೆ
ಮೊದಲು ಲೀಟರ್​​ಗೆ ಹೆಚ್ಚಾಗಿದ್ದು – 3 ರೂಪಾಯಿ
ಇದೀಗ ಲೀಟರ್​ಗೆ ಹೆಚ್ಚಾಗಿದ್ದು – 2 ರೂಪಾಯಿ
ಲೀಟರ್ ಹಾಲಿನ ಸದ್ಯದ ದರ – 44 ರೂ. (ನೀಲಿ ಪ್ಯಾಕೆಟ್)
1 ಕುಟುಂಬದಿಂದ ಹಾಲು ಬಳಕೆ – 1 ಲೀಟರ್
ತಿಂಗಳಿಗೆ ಕುಟುಂಬದಿಂದ ಬಳಕೆ – 30 ಲೀಟರ್
ಹಾಲಿನ ದರ ಹೆಚ್ಚಳದಿಂದ ಹೊರೆ – 150 ರೂ.

ತರಕಾರಿ ದರ ಏರಿಕೆ

ಹಣ್ಣು, ತರಕಾರಿ, ಸೊಪ್ಪು ಬೆಲೆ ನಿರಂತರ ಏರಿಕೆ
ಹಣ್ಣು, ತರಕಾರಿ ಏರಿಕೆಯಿಂದ ಹೆಚ್ಚುವರಿ ಹೊರೆ
ಟ್ರಾನ್ಸ್​ಪೋರ್ಟ್ ಚಾರ್ಜಸ್ ಸೇರಿ ವಿವಿಧ ಚಾರ್ಜಸ್
ಪ್ರತಿ ತಿಂಗಳಿಗೆ ಜನರಿಗೆ ಅಂದಾಜು 500 ರೂ. ಹೊರೆ

ದಿನಸಿ ವಸ್ತುಗಳ ಬೆಲೆ ಏರಿಕೆ

ದಿನಸಿ ವಸ್ತುಗಳು, ದಿನಬಳಕೆ ವಸ್ತುಗಳ ಬೆಲೆ ಏರಿಕೆ
ಅಕ್ಕಿ, ಬೇಳೆ, ಡಿಟರ್ಜೆಂಟ್​​ ಸೇರಿ ವಸ್ತುಗಳ ಬೆಲೆ ಗಗನಕ್ಕೆ
ದಿನಸಿ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಹೊರೆ
ತಿಂಗಳಿಗೆ ಅಂದಾಜು 700 ರೂಪಾಯಿಯಷ್ಟು ಜನರಿಗೆ ಹೊರೆ

ಮಾಂಸಪ್ರಿಯರಿಗೂ ಶಾಕ್

ರಾಜ್ಯದಲ್ಲಿ ಮಾಂಸದ ಬೆಲೆಯಲ್ಲೂ ಹೆಚ್ಚಳ
ಮಾಂಸದ ಬೆಲೆ ಹೆಚ್ಚಳದಿಂದ ಹೆಚ್ಚುವರಿ ಹೊರೆ
ಜನರಿಗೆ ತಿಂಗಳಿಗೆ ಅಂದಾಜು 300 ರೂಪಾಯಿ ಹೆಚ್ಚಳ

ಮದ್ಯಪ್ರಿಯರಿಗೆ ಬಿಗ್ ಶಾಕ್

2023ರ ಜುಲೈನಲ್ಲಿ ಬಿಯರ್ 10%, ಮದ್ಯ 20% ಏರಿಕೆ
3 ತಿಂಗಳ ಹಿಂದೆ ಬಿಯರ್ 10%, ಮದ್ಯ 25% ದರ ಹೆಚ್ಚಳ
ಜುಲೈ 1ರಿಂದ ಮತ್ತೆ ಅಬಕಾರಿ ದರ ಹೆಚ್ಚಳಕ್ಕೆ ನಿರ್ಧಾರ?

ವಾಣಿಜ್ಯ ವಿದ್ಯುತ್ ಬಳಕೆದಾರರಿಗೆ ಶಾಕ್!?

ಉಚಿತ ವಿದ್ಯುತ್​ ಮಧ್ಯೆಯೂ ವಾಣಿಜ್ಯ ಬಳಕೆ ವಿದ್ಯುತ್​ ದರ ಏರಿಕೆ
ಕೈಗಾರಿಕೆ ಸೇರಿ ವಾಣಿಜ್ಯ ಬಳಕೆಯ ವಿದ್ಯುತ್​ ದರ ಹೆಚ್ಚಳ
ವಿದ್ಯುತ್ ದರ ಹೆಚ್ಚಳದಿಂದ ವಸ್ತುಗಳ ಮೇಲೆ ಪರಿಣಾಮ
ಅಂದಾಜು 300 ರೂಪಾಯಿಯಷ್ಟು ಹೊರೆ ಬೀಳುವ ಸಾಧ್ಯತೆ

ಬಸ್ ಪ್ರಯಾಣಿಕರಿಗೆ ಬಿಗ್ ಶಾಕ್?

ಉಚಿತ ಪ್ರಯಾಣದ ನಡುವೆ ಬಸ್ ಟಿಕೆಟ್ ದರ ಏರಿಕೆ ಚಿಂತನೆ
ಗಂಡಸರ ಪ್ರಯಾಣದ ದರ ಹೆಚ್ಚಿಸಲು ಸರ್ಕಾರದ ಚಿಂತನೆ
ಶೀಘ್ರದಲ್ಲೇ ಸರ್ಕಾರಿ ಬಸ್​ಗಳ ಪ್ರಯಾಣದ ದರ ಏರಿಕೆ ಸಾಧ್ಯತೆ
ಖಾಸಗಿ ಬಸ್‌ಗಳ ದರವೂ ದುಬಾರಿಯಾಗುವ ಸಾಧ್ಯತೆ
ಟಿಕೆಟ್ ದರ ಏರಿಕೆಯಿಂದ ಪ್ರತಿ ಕುಟುಂಬಕ್ಕೂ ಹೆಚ್ಚುವರಿ ಹೊರೆ
1 ಕುಟುಂಬಕ್ಕೆ ಅಂದಾಜು 200 ರೂಪಾಯಿಯಷ್ಟು ಹೆಚ್ಚು ಹೊರೆ

ಜನರಿಗೆ ಜಲ‘ಶಾಕ್’!
ರಾಜ್ಯದ ಹಲವು ಕಡೆ ಕುಡಿಯುವ ನೀರಿನ ಸಮಸ್ಯೆ
ಹೆಚ್ಚು ಟ್ಯಾಂಕರ್ ನೀರು ಅವಲಂಬಿಸಿರುವ ಜನರು
ಟ್ಯಾಂಕರ್​ ಮೂಲಕ ನೀರು ತರಿಸಿಕೊಳ್ತಿರುವ ಜನರು
ಒಂದು ಟ್ಯಾಂಕರ್​​ ನೀರಿನ ಬೆಲೆ ಸುಮಾರು ₹2000

ತಿಂಗಳಿಗೆ 1 ಕುಟುಂಬಕ್ಕೆ ಅಂದಾಜು ಹೊರೆ

ಹಾಲು 30 ಲೀಟರ್ ಬಳಕೆ – 150 ರೂ.
ಪೆಟ್ರೋಲ್, ಡೀಸೆಲ್ 30 ಲೀ. – 90 ರೂ.
ತರಕಾರಿ – 500 ರೂಪಾಯಿ
ಮದ್ಯ – 500 ರೂಪಾಯಿ
ವಿದ್ಯುತ್ ವಾಣಿಜ್ಯ ಬಳಕೆ – 300 ರೂ.
ಬಸ್ ಟಿಕೆಟ್ ದರ – 200 ರೂ.
ದಿನಸಿ – 700 ರೂ.
ಮಾಂಸ – 300 ರೂ.
ಟ್ಯಾಂಕರ್ ನೀರು – 2,000 ರೂ.
ಒಟ್ಟು ಅಂದಾಜು ಹೊರೆ – 4740

ವರ್ಷಕ್ಕೆ ಎಷ್ಟು ಹೊರೆ?

ಪ್ರತಿ 1 ಕುಟುಂಬಕ್ಕೆ ತಿಂಗಳಿಗೆ 4740 ರೂ. ಅಧಿಕ ಹೊರೆ
ಪ್ರತಿ 1 ಕುಟುಂಬಕ್ಕೆ ವರ್ಷಕ್ಕೆ 56,880 ರೂ. ಅಧಿಕ ಹೊರೆ

ವರ್ಷಕ್ಕೆ ಎಷ್ಟು ಹೆಚ್ಚುವರಿ ಹೊರೆ?

ಕುಟುಂಬಕ್ಕೆ ಸರ್ಕಾರ ಕೊಡೋದು ವರ್ಷಕ್ಕೆ 24 ಸಾವಿರಕ್ಕೂ ಹೆಚ್ಚು
ಆದರೆ ಪ್ರತಿ 1 ಕುಟುಂಬಕ್ಕೆ ವರ್ಷಕ್ಕೆ 56,880 ರೂ. ಹೊರೆ
ಸರ್ಕಾರ ಕೊಟ್ಟ 24 ಸಾವಿರ ಬಿಟ್ಟರೆ 32,880 ರೂ. ಹೆಚ್ಚುವರಿ ಹೊರೆ
ಪ್ರತಿ 1 ಕುಟುಂಬಕ್ಕೆ ತಿಂಗಳಿಗೆ 4740 ರೂ. ಅಧಿಕ ಹೊರೆ
ಸರ್ಕಾರ ಕೊಡುವ 2 ಸಾವಿರ ಹೊರತುಪಡಿಸಿದರೆ 2740 ರೂ. ಹೆಚ್ಚುವರಿ ಹೊರೆ

ಇದನ್ನೂ ಓದಿ: CM Siddaramaiah: ತೈಲ, ಹಾಲು ಆಯ್ತು; ಮುಂದಿನ ಸರದಿಯಲ್ಲಿ ನೀರು, ಆಟೋ, ಬಸ್‌ ಟಿಕೆಟ್‌ ದರ ಏರಿಕೆ ಗ್ಯಾರಂಟಿ

Continue Reading

ಕ್ರೀಡೆ

Rohit Sharma : ಇಂಗ್ಲೆಂಡ್​ ಸೋಲಿಸುವ ಯೋಜನೆ ವಿವರಿಸಿದ ನಾಯಕ ರೋಹಿತ್ ಶರ್ಮಾ

Rohit Sharma: ಸೆಮಿಫೈನಲ್ ಪಂದ್ಯವನ್ನು ವಿಶ್ವ ಕಪ್​ನ ಮತ್ತೊಂದು ಪಂದ್ಯವೆಂದೇ ಪರಿಗಣಿಸುವುದಾಗಿ ಶರ್ಮಾ ಹೇಳಿದ್ದಾರೆ. ತಂಡ ಅದೇ ರೀತಿಯ ಭಾವನೆಯಲ್ಲಿದೆ. ಪ್ರತಿಯೊಬ್ಬರೂ ಅದರ ಪ್ರಾಮುಖ್ಯತೆಯ ಬಗ್ಗೆ ತಿಳಿದಿದ್ದರೂ ಸಮಾನ ಭಾವನೆ ಉತ್ತಮ ಎಂದು ಹೇಳಿದ್ದಾರೆ.

VISTARANEWS.COM


on

Rohit Sharma
Koo

ಬೆಂಗಳೂರು: ಗಯಾನಾದ ಪ್ರಾವಿಡೆನ್ಸ್​​ನಲ್ಲಿ ಜೂನ್ 27 ರಂದು ಇಂಗ್ಲೆಂಡ್ ವಿರುದ್ಧ ನಿರ್ಣಾಯಕ ಟಿ 20 ವಿಶ್ವಕಪ್ ಸೆಮಿಫೈನಲ್​​ನಲ್ಲಿ ಭಾರತ ತಂಡ ತಯಾರಿ ನಡೆಸುತ್ತಿದೆ. ಹಿಂದಿನ ಆವೃತ್ತಿಯಲ್ಲಿ ಸೆಮಿಫೈನಲ್​ ಸೋಲಿಗೆ ಪ್ರತೀಕಾರ ತೀರಿಸಲು ಸಜ್ಜಾಗುತ್ತಿದೆ. ಇವೆಲ್ಲದರ ನಡುವೆ ರೋಹಿತ್ ಶರ್ಮಾ (Rohit Sharma) ತಂಡದ ವಾತಾವರಣ ಮತ್ತು ಸ್ಪಷ್ಟ ಚಿಂತನೆಯನ್ನು ಅಭಿಮಾನಿಗಳಿಗೆ ವಿವರಿಸಿದ್ದಾರೆ. ಗೆದ್ದೇ ಗೆಲ್ಲುವೆವು ಎಂಬ ಭರವಸೆಯನ್ನು ನೀಡಿದ್ದಾರೆ.

ಸೆಮಿಫೈನಲ್ ಪಂದ್ಯವನ್ನು ವಿಶ್ವ ಕಪ್​ನ ಮತ್ತೊಂದು ಪಂದ್ಯವೆಂದೇ ಪರಿಗಣಿಸುವುದಾಗಿ ಶರ್ಮಾ ಹೇಳಿದ್ದಾರೆ. ತಂಡ ಅದೇ ರೀತಿಯ ಭಾವನೆಯಲ್ಲಿದೆ. ಪ್ರತಿಯೊಬ್ಬರೂ ಅದರ ಪ್ರಾಮುಖ್ಯತೆಯ ಬಗ್ಗೆ ತಿಳಿದಿದ್ದರೂ ಸಮಾನ ಭಾವನೆ ಉತ್ತಮ ಎಂದು ಹೇಳಿದ್ದಾರೆ.

“ನೋಡಿ, ಈ ಪಂದ್ಯವನ್ನು ನಾವು ವಿಶ್ವ ಕಪ್​ನಲ್ಲಿ ಆಡಲಿರುವ ಮತ್ತೊಂದು ಪಂದ್ಯವೆಂದು ಪರಿಗಣಿಸಲು ಬಯಸುತ್ತೇವೆ” ಎಂದು ಅವರು ಪಂದ್ಯದ ಮುನ್ನಾದಿನದಂದು ಸುದ್ದಿಗೋಷ್ಠೀಯಲ್ಲಿ ಹೇಳಿದ್ದಾರೆ. “ಮುಂದೆ ಏನಿದೆ ಮತ್ತು ಆಟದ ಸಂದರ್ಭ ಏನು ಮತ್ತು ಇವೆಲ್ಲದರ ಬಗ್ಗೆ ನಾವು ಯೋಚಿಸಲು ಬಯಸುವುದಿಲ್ಲ. ಪ್ರತಿಯೊಬ್ಬರಿಗೂ ಇದು ಸೆಮಿಫೈನಲ್ ಎಂದು ತಿಳಿದಿದೆ. ಆದರೆ ನಾವು ಅದರ ಬಗ್ಗೆ ಮತ್ತೆ ಮತ್ತೆ ಮಾತನಾಡಲು ಬಯಸುವುದಿಲ್ಲ. ಹಿಂದೆ ಏನಾಯಿತು ಎಂಬುದರ ಬಗ್ಗೆ ಯೋಚಿಸಬಾರದು.” ಎಂಬುದಾಗಿ ರೋಹಿತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಪಂದ್ಯವು 2022 ರ ಸೆಮಿಫೈನಲ್​ನ ಪುನರಾವರ್ತನೆಯಾಗಿದೆ. ಅಡಿಲೇಡ್​​ನಲ್ಲಿ ಇಂಗ್ಲೆಂಡ್​ ವಿರುದ್ಧ ಭಾರತವು ಹತ್ತು ವಿಕೆಟ್​ಗಳ ಹೀನಾಯ ಸೋಲನ್ನು ಅನುಭವಿಸಿತ್ತು. ನೋವಿನ ಇತಿಹಾಸದ ಹೊರತಾಗಿಯೂ ತಂಡವು ಸಕಾರಾತ್ಮಕ ಮನಸ್ಥಿತಿಯಲ್ಲಿದೆ ಎಂದು ಶರ್ಮಾ ಹೇಳಿದ್ದಾರೆ.

“ನಾವೆಲ್ಲರೂ, ತಂಡದ ಮನಸ್ಥಿತಿಯಲ್ಲಿದ್ದೇವೆ ಎಂದು ನಾನು ಭಾವಿಸುತ್ತೇನೆ. ನಾವು ಒಂದು ತಂಡವಾಗಿ ಉತ್ತಮವಾಗಿ ಆಡುತ್ತಿದ್ದೇವೆ. ಪರಸ್ಪರರ ಸಹಕಾರವನ್ನು ಆನಂದಿಸುತ್ತಿದ್ದೇವೆ. ಕೆಲವೊಮ್ಮೆ ಪರಸ್ಪರರ ಯಶಸ್ಸನ್ನು ಕಂಡಿದ್ದೇವೆ. ಈ ಪಂದ್ಯಾವಳಿಯಲ್ಲಿ ಕೆಲವು ಪಂದ್ಯಗಳಲ್ಲಿ ನಾವು ಒತ್ತಡಕ್ಕೆ ಒಳಗಾಗಿದ್ದೇವೆ. ಆದರೆ ನಾವು ಉತ್ತಮವಾಗಿ ಪ್ರತಿಕ್ರಿಯಿಸಿದ್ದೇವೆ ಎಂದು ನಾನು ಭಾವಿಸಿದ್ದೇನೆ ಎಂದು ರೋಹಿತ್ ನುಡಿದಿದ್ದಾರೆ.

ಅತಿಯಾದ ಯೋಚನೆ ಇಲ್ಲ

ನಾವು ಎಷ್ಟು ಚೆನ್ನಾಗಿ ಆಡಬಹುದು ಮತ್ತು ನಾವು ಹುಡುಕುತ್ತಿರುವ ಫಲಿತಾಂಶವನ್ನು ಸಾಧಿಸಲು ತಂಡವಾಗಿ ನಾವು ಏನು ಮಾಡಬಹುದು ಎಂಬುದರ ಬಗ್ಗೆ ನಾವು ಯೋಚಿಸುತ್ತಿದ್ದೇವೆ. ಅತಿಯಾದ ಯೋಚನೆ ಇಲ್ಲ. ಹೆಚ್ಚು ಯೋಚಿಸಿದರೆ, ಮೈದಾನದಲ್ಲಿ ತೆಗೆದುಕೊಳ್ಳಲು ಬಯಸುವ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. , ನಾವು ಏನು ಮಾಡಲು ಬಯಸುತ್ತೇವೆ ಎಂಬುದನ್ನು ನಮ್ಮ ಮನಸ್ಸಿನಲ್ಲಿ ಸ್ಪಷ್ಟಪಡಿಸಿಕೊಂಡಿದ್ದೇವೆ. ನಾವು ಆಟಗಾರರೊಂದಿಗೆ ಸಾಕಷ್ಟು ಮಾತನಾಡಿದ್ದೇವೆ. ಪ್ರತಿಯೊಬ್ಬರಿಂದ ಏನನ್ನು ನಿರೀಕ್ಷಿಸಲಾಗಿದೆ ಎಂಬುದನ್ನು ವಿವರಿಸಲಾಗಿದೆ “ಎಂದು ಶರ್ಮಾ ಹೇಳಿದರು.

ಇದನ್ನೂ ಓದಿ: IND vs ENG : ಭಾರತದ ವಿರುದ್ಧ ಹೂಡಲಿರುವ ತಂತ್ರಗಳನ್ನು ವಿವರಿಸಿದ ಇಂಗ್ಲೆಂಡ್ ಕೋಚ್​ ಮ್ಯಾಥ್ಯೂ ಮಾಟ್​

ಈ ಟಿ 20 ವಿಶ್ವಕಪ್​​ನಲ್ಲಿ ಎರಡೂ ತಂಡಗಳು ಮೊದಲ ಬಾರಿಗೆ ಪ್ರಾವಿಡೆನ್ಸ್​​ನಲ್ಲಿ ಆಡುತ್ತಿರುವುದರಿಂದ ಪಿಚ್​ ಪರಿಸ್ಥಿತಿಗಳನ್ನು ತ್ವರಿತವಾಗಿ ನಿರ್ಣಯಿಸಬೇಕಾಗುತ್ತದೆ. ನಿರ್ದಿಷ್ಟ ಶಾಟ್​ಗಳನ್ನು ಆಡುವುದು ಅಥವಾ ನಿರ್ದಿಷ್ಟ ರೀತಿಯ ಚೆಂಡುಗಳನ್ನು ಎಸೆಯುವುದು ಸೇರಿದಂತೆ ಮೈದಾನದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲು ತಂಡವು ಆಟಗಾರರನ್ನು ಅವಲಂಬಿಸಿದೆ ಎಂಬುದಾಗಿ ರೋಹಿತ್​ ಹೇಳಿದ್ದಾರೆ.

ನಮ್ಮ ಮುಂದೆ ಯಾವ ಪರಿಸ್ಥಿತಿಗಳಿವೆ ಮತ್ತು ನಾವು ಏನು ಮಾಡಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ. ನಾನು ಈ ಗುಂಪಿನ ಅನುಭವದ ಬಗ್ಗೆ ಮಾತನಾಡಿದ್ದೇನೆ, ಮತ್ತು ರಿವರ್ಸ್ ಸ್ವೀಪ್ ಆಡುತ್ತಿರಲಿ, ಯಾರ್ಕರ್ ಬೌಲಿಂಗ್ ಆಗಿರಲಿ, ಬೌನ್ಸರ್ ಬೌಲಿಂಗ್ ಮಾಡುತ್ತಿರಲಿ, ಆ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ಪ್ರತಿಯೊಬ್ಬ ಆಟಗಾರನಿಗೆ ಸ್ವಾತಂತ್ರ್ಯ ಇದೆ ಎಂದು ರೋಹಿತ್​ ಹೇಳಿದರು

Continue Reading

ಪ್ರಮುಖ ಸುದ್ದಿ

IND vs ENG : ಭಾರತದ ವಿರುದ್ಧ ಹೂಡಲಿರುವ ತಂತ್ರಗಳನ್ನು ವಿವರಿಸಿದ ಇಂಗ್ಲೆಂಡ್ ಕೋಚ್​ ಮ್ಯಾಥ್ಯೂ ಮಾಟ್​

IND vs ENG :ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮ್ಯಾಥ್ಯೂ , 2024 ರ ಟಿ 20 ವಿಶ್ವಕಪ್ನಲ್ಲಿ ಭಾರತ ತಂಡವು ಎಷ್ಟು ವಿಭಿನ್ನವಾಗಿ ಕಾಣುತ್ತದೆ. ಅಡಿಲೇಡ್ ಓವಲ್​​ನಲ್ಲಿ ಉತ್ತಮ ಪಿಚ್​ನಲ್ಲಿ 2022 ರ ಸೆಮೀಸ್​​ನಷ್ಟು ಸುಲಭವಿಲ್ಲ. ರೋಹಿತ್​ ಪಡೆಯ ವಿರುದ್ದ ಗೆಲ್ಲಬೇಕಾದರೆ ಎಷ್ಟು ರನ್​ ಬೇಕು ಎಂಬುದೇ ಪ್ರಶ್ನೆಯಾಗಿದೆ ಎಂದು ಹೇಳಿದ್ದಾರೆ.

VISTARANEWS.COM


on

IND vs ENG
Koo

ಬೆಂಗಳೂರು : 2024 ರ ಟಿ 20 ವಿಶ್ವಕಪ್ (T20 World Cup 2024)ಸೆಮಿಫೈನಲ್​ನಲ್ಲಿ ರೋಹಿತ್ ಶರ್ಮಾ (Rohit Sharma) ನೇತೃತ್ವದ ಭಾರತವು ಒಡ್ಡಲಿರುವ ತಂತ್ರಗಳ ಬಗ್ಗೆ ಬಗ್ಗೆ ಎಚ್ಚರಿಕೆಯಿಂದ ಇರಿ ಎಂದು ಇಂಗ್ಲೆಂಡ್ (IND vs ENG) ಮುಖ್ಯ ಕೋಚ್ ಮ್ಯಾಥ್ಯೂ ಮಾಟ್ ತನ್ನ ತಂಡದ ಆಟಗಾರರಿಗೆ ಹೇಳಿದ್ದಾರೆ. ಜತೆಗೆ ಭಾರತವು ಯಾವ ತಂತ್ರವನ್ನು ಹೂಡಲಿದೆ ಎಂಬುದನ್ನು ಹೇಳಿದ್ದಾರೆ. ಆದಾಗ್ಯೂ ಭಾರತಕ್ಕೆ ಸೆಡ್ಡು ಹೊಡೆಯುವುದು ಖಚಿತ ಎಂಬುದಾಗಿ ಹೇಳಿದ್ದಾರೆ.

ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆಯಲಿರುವ ಐಸಿಸಿ ಟಿ 20 ವಿಶ್ವಕಪ್ 2024 ರ 2 ನೇ ಸೆಮಿಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಭಾರತ ಮುಖಾಮುಖಿಯಾಗಲಿವೆ. 2022 ರಲ್ಲಿ ಅಡಿಲೇಡ್ ಓವಲ್​ನಲ್ಲಿ ನಡೆದ ಹಿಂದಿನ ಟಿ 20 ವಿಶ್ವಕಪ್ ಸೆಮಿಯಲ್ಲಿ ಭಾರತ ತಂಡವನ್ನು ಇಂಗ್ಲೆಂಡ್ 10 ವಿಕೆಟ್​​ಗಳಿಂದ ಸೋಲಿಸಿತ್ತು. ಅದಕ್ಕೆ ಪ್ರತಿಕಾರ ತೀರಿಸಲು ಭಾರತ ಸಜ್ಜಾಗಿದೆ. ಆದರೆ, ಜೋಸ್​ ಬಟ್ಲರ್​ ಪಡೆ ಪ್ರಶಸ್ತಿ ಉಳಿಸಿಕೊಳ್ಳುವುದಕ್ಕೆ ಉತ್ತಮ ಅಭಿಯಾನ ಮಾಡಿದೆ. ತಂಡವು ಅತ್ಯುತ್ತಮವಾಗಿ ಕಾಣುತ್ತಿದೆ ಮತ್ತು ಉತ್ತಮ ಫಲಿತಾಂಶ ಪಡೆದುಕೊಂಡಿದೆ.

ಇಂಗ್ಲೆಂಡ್​ ಖಂಡಿತವಾಗಿಯೂ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಸಾಮರ್ಥ್ಯ ಹೊಂದಿರುವ ತಂಡವಾಗಿದೆ. ಕಳೆದ ವರ್ಷ 50 ಓವರ್​ಗಳ ವಿಶ್ವಕಪ್​ನಿಂದ ಸಾಕಷ್ಟು ಕಲಿತಿದೆ ಮತ್ತು ಆ ಸುಧಾರಣೆ ಈ ಟೂರ್ನಿಯಲ್ಲಿ ಅನಾವರಣಗೊಂಡಿದೆ. ಆದಾಗ್ಯೂ ಸೆಮಿಫೈನಲ್​​ನಲ್ಲಿ ಅಜೇಯ ಭಾರತ ತಂಡವನ್ನು ಸೋಲಿಸಬೇಕಾಗಿದೆ. ಹಿಂದಿನ ಟಿ 20 ವಿಶ್ವಕಪ್ ಸೆಮಿಫೈನಲ್​​ನಲ್ಲಿ ಜೋಸ್ ಬಟ್ಲರ್ ಬಳಗವು ಭಾರತವನ್ನು ಸುಲಭವಾಗಿ ಎದುರಿಸಿತ್ತು. ಈ ಬಾರಿ ಪರಿಸ್ಥಿತಿ ಹಾಗಿಲ್ಲ ಎಂದು ಹೇಳಿದ್ದಾರೆ.

ವಿಭಿನ್ನ ತಂಡ

ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ವಿಭಿನ್ನವಾಗಿ ಕಾಣುತ್ತಿದೆ ಎಂದು ಮ್ಯಾಥ್ಯೂ ಮಾಟ್​​ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮ್ಯಾಥ್ಯೂ , 2024 ರ ಟಿ 20 ವಿಶ್ವಕಪ್ನಲ್ಲಿ ಭಾರತ ತಂಡವು ಎಷ್ಟು ವಿಭಿನ್ನವಾಗಿ ಕಾಣುತ್ತದೆ. ಅಡಿಲೇಡ್ ಓವಲ್​​ನಲ್ಲಿ ಉತ್ತಮ ಪಿಚ್​ನಲ್ಲಿ 2022 ರ ಸೆಮೀಸ್​​ನಷ್ಟು ಸುಲಭವಿಲ್ಲ. ರೋಹಿತ್​ ಪಡೆಯ ವಿರುದ್ದ ಗೆಲ್ಲಬೇಕಾದರೆ ಎಷ್ಟು ರನ್​ ಬೇಕು ಎಂಬುದೇ ಪ್ರಶ್ನೆಯಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Chris Silverwood : ಲಂಕಾ ಕೋಚ್​ ಕ್ರಿಸ್​ ಸಿಲ್ವರ್​ವುಡ್​​ ಏಕಾಏಕಿ ರಾಜೀನಾಮೆ

ರೋಹಿತ್ ಶರ್ಮಾ ಮತ್ತು ಅವರ ಮೆನ್ ಇನ್ ಬ್ಲೂ ಈ ಬಾರಿ ಇಂಗ್ಲೆಂಡ್ ವಿರುದ್ಧ ಕಠಿಣ ಹೋರಾಟ ನಡೆಸಲಿದೆ ಎಂದು ಮ್ಯಾಥ್ಯೂ ಮೊಟ್ ಹೇಳಿದ್ದಾರೆ. ಭಾರತವು ದೊಡ್ಡ ಮೊತ್ತವನ್ನು ದಾಖಲಿಸಲಿದೆ ಮತ್ತು ಹಾಲಿ ಚಾಂಪಿಯನ್ಸ್ ಆಗಿರುವ ತಮ್ಮ ತಂಡದ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತದೆ ಎಂದು ಮೊಟ್ ಅಭಿಪ್ರಾಯಪಟ್ಟಿದ್ದಾರೆ. 2024 ರ ಟಿ 20 ವಿಶ್ವಕಪ್​​ನಲ್ಲಿ ಅತ್ಯಂತ ಸಮತೋಲಿತ ಎರಡು ತಂಡಗಳ ನಡುವೆ ಉತ್ತಮ ಸ್ಪರ್ಧೆಯಾಗಲಿದೆ ಎಂದು ಇಂಗ್ಲೆಂಡ್ ಕೋಚ್ ಅಭಿಪ್ರಾಯಪಟ್ಟಿದ್ದಾರೆ.

ಭಾರತ ತಂಡ ಪವರ್​ಪ್ಲೇ ಅವಧಿಯನ್ನು ಬಳಸಿಕೊಳ್ಳಲಿದೆ. ಸ್ಕೋರ್ ನಮ್ಮ ಕೈಗೆಟುಕದಂತೆ ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಇಂದಿನ ಪಂದ್ಯವು ಎರಡು ಉತ್ತಮ ಬ್ಯಾಟಿಂಗ್ ಲೈನ್ಅಪ್​ಗಳನ್ನು ಹೊಂದಿದೆ ಎಂದು ನಾನು ಭಾವಿಸುತ್ತೇನೆ, ಬೌಲರ್​ಗಳು ಸಹ ಕ್ಲಾಸ್ ಆಗಿದ್ದಾರೆ. ಆದ್ದರಿಂದ ಆ ಪರಿಸ್ಥಿತಿಗಳನ್ನು ಯಾರು ಬಳಸಿಕೊಳ್ಳುತ್ತಾರೆ ಎಂಬುದೇ ನಿರ್ಣಾಯಕ ಮ್ಯಾಥ್ಯೂ ಮಾಟ್ ತಿಳಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

Chris Silverwood : ಲಂಕಾ ಕೋಚ್​ ಕ್ರಿಸ್​ ಸಿಲ್ವರ್​ವುಡ್​​ ಏಕಾಏಕಿ ರಾಜೀನಾಮೆ

Chris Silverwood : ಅವರ ಮುಂದಾಳತ್ವದ ಶ್ರೀಲಂಕಾ ಏಕದಿನ ಸ್ವರೂಪದಲ್ಲಿ ಆಸ್ಟ್ರೇಲಿಯಾ ವಿರುದ್ಧ ತವರು ಸರಣಿ ಗೆಲುವು ಮತ್ತು ಬಾಂಗ್ಲಾದೇಶದ ವಿರುದ್ಧ ಎರಡು ವಿದೇಶ ಟೆಸ್ಟ್ ಸರಣಿ ಗೆಲುವುಗಳು ಸೇರಿದಂತೆ ಗಮನಾರ್ಹ ದ್ವಿಪಕ್ಷೀಯ ಸರಣಿ ಗೆಲುವುಗಳನ್ನು ಗಳಿಸಿತು. ಏತನ್ಮಧ್ಯೆ, ಸಿಲ್ವರ್​ವುಡ್​ ತನ್ನ ನಿರ್ಗಮನಕ್ಕೆ ವೈಯಕ್ತಿಕ ಕಾರಣಗಳನ್ನು ನೀಡಿದ್ದಾರೆ.

VISTARANEWS.COM


on

Chris Silverwood
Koo

ಬೆಂಗಳೂರು: ಶ್ರೀಲಂಕಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಕ್ರಿಸ್ ಸಿಲ್ವರ್​ವುಡ್​ (Chris Silverwood ) ಏಕಾಏಕಿ ರಾಜೀನಾಮೆ ಪಡೆದಿದ್ದಾರೆ. ಭಾರತದಲ್ಲಿ ನಡೆದ 2023 ರ ಏಕದಿನ ವಿಶ್ವಕಪ್ ಮತ್ತು ವೆಸ್ಟ್ ಇಂಡೀಸ್ ಮತ್ತು ಯುಎಸ್ಎಯಲ್ಲಿ ನಡೆದ 2024 ರ ಟಿ 20 ವಿಶ್ವಕಪ್​​ನಲ್ಲಿ ತಂಡದ ನಿರಾಶಾದಾಯಕ ಪ್ರದರ್ಶನದ ನಂತರ ಅವರು ರಾಜೀನಾಮೆ ಕೊಟ್ಟಿದ್ದಾರೆ. ಶ್ರೀಲಂಕಾದೊಂದಿಗಿನ ಸಿಲ್ವರ್​ವುಡ್​ ಅವರ ಅಧಿಕಾರಾವಧಿ ಉತ್ತಮವಾಗಿ ಪ್ರಾರಂಭಗೊಂಡಿದ್ದರು. ತಂಡವು 2022 ರ ಟಿ 20 ಏಷ್ಯಾ ಕಪ್​​ನಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಿತ್ತು. 2023 ರಲ್ಲಿ 50 ಓವರ್​ಗಳ ಏಷ್ಯಾ ಕಪ್​ನಲ್ಲಿ ಫೈನಲ್​ಗೆ ಅರ್ಹತೆ ಪಡೆದಿತ್ತು.

ಅವರ ಮುಂದಾಳತ್ವದ ಶ್ರೀಲಂಕಾ ಏಕದಿನ ಸ್ವರೂಪದಲ್ಲಿ ಆಸ್ಟ್ರೇಲಿಯಾ ವಿರುದ್ಧ ತವರು ಸರಣಿ ಗೆಲುವು ಮತ್ತು ಬಾಂಗ್ಲಾದೇಶದ ವಿರುದ್ಧ ಎರಡು ವಿದೇಶ ಟೆಸ್ಟ್ ಸರಣಿ ಗೆಲುವುಗಳು ಸೇರಿದಂತೆ ಗಮನಾರ್ಹ ದ್ವಿಪಕ್ಷೀಯ ಸರಣಿ ಗೆಲುವುಗಳನ್ನು ಗಳಿಸಿತು. ಏತನ್ಮಧ್ಯೆ, ಸಿಲ್ವರ್​ವುಡ್​ ತನ್ನ ನಿರ್ಗಮನಕ್ಕೆ ವೈಯಕ್ತಿಕ ಕಾರಣಗಳನ್ನು ನೀಡಿದ್ದಾರೆ.

ಅಂತಾರಾಷ್ಟ್ರೀಯ ಕೋಚ್ ಆಗಿರುವುದು ಎಂದರೆ ಪ್ರೀತಿಪಾತ್ರರಿಂದ ದೂರವಿರುವುದು ಎಂದರ್ಥ. ನನ್ನ ಕುಟುಂಬದೊಂದಿಗೆ ಸುದೀರ್ಘ ಸಂಭಾಷಣೆಯ ನಂತರ ಮತ್ತು ಭಾರವಾದ ಹೃದಯದಿಂದ, ನಾನು ಮನೆಗೆ ಮರಳಲು ಮತ್ತು ಒಟ್ಟಿಗೆ ಕೆಲವು ಗುಣಮಟ್ಟದ ಸಮಯವನ್ನು ಕಳೆಯಲು ನಿರ್ಧಾರ ತೆಗೆದುಕೊಂಡಿದ್ದೇನೆ. ಉತ್ತಮ ನಿರ್ಧಾರಕ್ಕೆ ಸೂಕ್ತ ಸಮಯ ಎಂದು ನಾನು ಭಾವಿಸುತ್ತೇನೆ “ಎಂದು ಸಿಲ್ವರ್​ ವುಡ್​ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ಶ್ರೀಲಂಕಾದಲ್ಲಿದ್ದಾಗ ಬೆಂಬಲ ನೀಡಿದ ಆಟಗಾರರು, ತರಬೇತುದಾರರು, ಬ್ಯಾಕ್ರೂಮ್ ಸಿಬ್ಬಂದಿ ಮತ್ತು ಎಸ್ಎಲ್ಸಿಯ ಆಡಳಿತ ಮಂಡಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನಿಮ್ಮ ಬೆಂಬಲವಿಲ್ಲದೆ, ಯಾವುದೇ ಯಶಸ್ಸು ಸಾಧ್ಯವಾಗುತ್ತಿರಲಿಲ್ಲ. ಶ್ರೀಲಂಕಾ ಕ್ರಿಕೆಟ್​ ಭಾಗವಾಗಿರುವುದು ನನಗೆ ನಿಜವಾದ ಗೌರವವಾಗಿದೆ ಮತ್ತು ನಾನು ಅನೇಕ ಪ್ರೀತಿಯ ನೆನಪುಗಳನ್ನು ತೆಗೆದುಹಾಕುತ್ತೇನೆ, “ಎಂದು ಅವರು ಹೇಳಿದರು.

ಸಲಹೆಗಾರ ಹುದ್ದೆಯಿಂದ ಮಹೇಲಾ ಜಯವರ್ಧನೆ ರಾಜೀನಾಮೆ

ಸಿಲ್ವರ್ವುಡ್ ರಾಜೀನಾಮೆ ನೀಡುವ ಮೊದಲು, ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಅವರು 2022 ರಿಂದ ತಾವು ಹೊಂದಿದ್ದ ಸಲಹೆಗಾರ ಹುದ್ದೆಯಿಂದ ಕೆಳಗಿಳಿದಿದ್ದರು.

ಇದನ್ನೂ ಓದಿ: Louis Kimber: 127 ಎಸೆತಗಳಲ್ಲಿ 243 ರನ್ ಚಚ್ಚಿ ಹಲವು ದಾಖಲೆಗಳನ್ನು ಬರೆದ ಕೌಂಟಿ ಆಟಗಾರ ಲೂಯಿಸ್ ಕಿಂಬರ್

ಟಿ 20 ವಿಶ್ವಕಪ್​​ನಲ್ಲಿ ವನಿಂದು ಹಸರಂಗ ನೇತೃತ್ವದ ತಂಡದ ಪ್ರದರ್ಶನವು ವಿಶೇಷವಾಗಿ ನಿರಾಶಾದಾಯಕವಾಗಿತ್ತು. ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ನೇಪಾಳ ಮತ್ತು ನೆದರ್ಲ್ಯಾಂಡ್ಸ್ ಜೊತೆಗೆ ಮೊದಲ ಸುತ್ತಿನ ಗ್ರೂಪ್ ಡಿ ನಲ್ಲಿ ಸ್ಥಾನ ಪಡೆದ ಮಾಜಿ ಚಾಂಪಿಯನ್​​ಗಳು ಆರಂಭಿಕ ಹಂತವನ್ನು ಮೀರಿ ಮುನ್ನಡೆಯಲು ವಿಫಲಗೊಂಡಿದ್ದರು. ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶದ ವಿರುದ್ಧದ ಆರಂಭಿಕ ಸೋಲುಗಳು ಅವರ ಅವಕಾಶಗಳನ್ನು ತೀವ್ರವಾಗಿ ದುರ್ಬಲಗೊಳಿಸಿತ್ತು. ನೇಪಾಳ ವಿರುದ್ಧದ ಪಂದ್ಯವು ರದ್ದಾಗಿತ್ತು. ತಂಡದ ಏಕೈಕ ಗೆಲುವು ನೆದರ್ಲ್ಯಾಂಡ್ಸ್​ ವಿರುದ್ಧ ಬಂದಿತು. ಇದು ಯಾವುದೇ ಪರಿಣಾಮ ಬೀರಿರಲಿಲ್ಲ.

ಈ ಹಿನ್ನಡೆಯ ನಂತರ ಶ್ರೀಲಂಕಾ ಪುನರ್ನಿರ್ಮಾಣ ಮಾಡಲು ನೋಡುತ್ತಿರುವುದರಿಂದ, ಅವರ ಗಮನವು ಜುಲೈ ಮತ್ತು ಆಗಸ್ಸ್​ನಲ್ಲಿ ಭಾರತದ ವಿರುದ್ಧ ಮುಂಬರುವ ವೈಟ್-ಬಾಲ್ ಸರಣಿಯತ್ತ ತಿರುಗಲಿದೆ. ಮೂರು ಟಿ 20 ಮತ್ತು ಮೂರು ಏಕದಿನ ಪಂದ್ಯಗಳನ್ನು ಒಳಗೊಂಡಿರುವ ಈ ಸರಣಿಯು ತಂಡಕ್ಕೆ ಮರುಸಂಘಟನೆ ಮಾಡಲು ಮತ್ತು ಇತ್ತೀಚಿನ ನಿರಾಶೆಗಳನ್ನು ಬದಿಗಿಡಲು ಅನುವು ಮಾಡಿಕೊಡಲಿದೆ.

Continue Reading
Advertisement
cm siddaramaiah price hikes
ಕರ್ನಾಟಕ24 mins ago

CM Siddaramaiah: ₹2000 ಕೊಟ್ಟು ₹4740 ಕಿತ್ತುಕೊಳ್ಳುತ್ತಿರುವ ರಾಜ್ಯ ಸರಕಾರ! ನಿಮ್ಮ ಜೇಬಿಗೆ ಕತ್ತರಿ ಬೀಳುತ್ತಿರುವುದರ ಲೆಕ್ಕ ಇಲ್ಲಿದೆ ನೋಡಿ!

Mohan Yadav
ದೇಶ30 mins ago

Mohan Yadav: ಇನ್ಮುಂದೆ ಶಾಲಾ ಪಠ್ಯದಲ್ಲಿ ಇರಲಿದೆ ‘ತುರ್ತು ಪರಿಸ್ಥಿತಿ’ಯ ಅಧ್ಯಾಯ

Road Accident
ಕ್ರೈಂ42 mins ago

Road Accident : ರೈಲು ಬಡಿದು ವ್ಯಕ್ತಿ ಸಾವು;ನಿಂತಿದ್ದ ಬಸ್‌ಗೆ ಗುದ್ದಿ ಛಿದ್ರಗೊಂಡ ಹೊಸ ಕಾರು

Rohit Sharma
ಕ್ರೀಡೆ46 mins ago

Rohit Sharma : ಇಂಗ್ಲೆಂಡ್​ ಸೋಲಿಸುವ ಯೋಜನೆ ವಿವರಿಸಿದ ನಾಯಕ ರೋಹಿತ್ ಶರ್ಮಾ

Droupadi Murmu
ದೇಶ1 hour ago

Droupadi Murmu: ತುರ್ತು ಪರಿಸ್ಥಿತಿ ಸಂವಿಧಾನದ ಮೇಲೆ ನಡೆದಿರುವ ಅತಿದೊಡ್ಡ ದಾಳಿ; ದ್ರೌಪದಿ ಮುರ್ಮು

IND vs ENG
ಪ್ರಮುಖ ಸುದ್ದಿ1 hour ago

IND vs ENG : ಭಾರತದ ವಿರುದ್ಧ ಹೂಡಲಿರುವ ತಂತ್ರಗಳನ್ನು ವಿವರಿಸಿದ ಇಂಗ್ಲೆಂಡ್ ಕೋಚ್​ ಮ್ಯಾಥ್ಯೂ ಮಾಟ್​

karnataka Rains Effected
ಮಳೆ1 hour ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

Share Market
ವಾಣಿಜ್ಯ2 hours ago

Share Market: ಮೊದಲ ಬಾರಿಗೆ 79,000 ಅಂಕಗಳ ಗಡಿ ದಾಟಿದ ಸೆನ್ಸೆಕ್ಸ್; ಗರಿಷ್ಠ ಮಟ್ಟ ತಲುಪಿದ ನಿಫ್ಟಿ

pattanagere shed actor darshan renuka swamy murder
ಕ್ರೈಂ2 hours ago

Actor Darshan: ಪಟ್ಟಣಗೆರೆ ಶೆಡ್ಡಾ? ನಾವು ಅಲ್ಲಿಗೆ ಹೋಗೋಲ್ಲ ಅನ್ನುತ್ತಿರುವ ವಾಹನ ಮಾಲಿಕರು!

Chris Silverwood
ಪ್ರಮುಖ ಸುದ್ದಿ2 hours ago

Chris Silverwood : ಲಂಕಾ ಕೋಚ್​ ಕ್ರಿಸ್​ ಸಿಲ್ವರ್​ವುಡ್​​ ಏಕಾಏಕಿ ರಾಜೀನಾಮೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rains Effected
ಮಳೆ1 hour ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ3 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ6 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ6 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ7 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ2 weeks ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ2 weeks ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ2 weeks ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

ಟ್ರೆಂಡಿಂಗ್‌