Navaratri 2022 | ಜಗದಗಲಕೆ ಸಂಸ್ಕೃತಿಯ ಬಿಂಬ; ಬೊಂಬೆಹಬ್ಬ - Vistara News

ದಸರಾ ಸಂಭ್ರಮ

Navaratri 2022 | ಜಗದಗಲಕೆ ಸಂಸ್ಕೃತಿಯ ಬಿಂಬ; ಬೊಂಬೆಹಬ್ಬ

ಬೊಂಬೆ ಹಬ್ಬ ನವರಾತ್ರಿ ಹಬ್ಬದ ( Navaratri 2022 ) ಒಂದು ಭಾಗ. ಬೊಂಬೆ ಕೂರಿಸುವುದರಲ್ಲಿಯೇ ಸಂಸ್ಕೃತಿಯಿದೆ, ಕಲಾತ್ಮಿಕತೆಯಿದೆ. ಹೀಗಾಗಿಯೇ ಇಂದು ಇದು ಜಗದಗಲ ಪಸರಿಸಿದೆ. ಈ ಹಬ್ಬದ ಮಹತ್ವವನ್ನು ತಿಳಿಸುವ ಲೇಖನ ಇಲ್ಲಿದೆ.

VISTARANEWS.COM


on

Navaratri 2022
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Navaratri 2022

ಡಾ. ಗಣಪತಿ ಆರ್ ಭಟ್
ದಸರಾ ಸಂಭ್ರಮ (Navaratri 2022 ) ಎಲ್ಲೆಲ್ಲೂ ಮನೆ ಮಾಡಿದೆ. ಇದೇ ಹೊತ್ತಲ್ಲಿ ನಮ್ಮ ನಾಡಿನ ಹಳೆ ಮೈಸೂರು ಪ್ರಾಂತಗಳಲ್ಲಿರುವ ಯಾರ ಮನೆಗಾದರೂ ಭೇಟಿಕೊಟ್ಟು ನೋಡಿ. ಒಂದೆಡೆ ನಾನಾ ದೇವತೆಗಳು, ರಾಜರು, ಪ್ರಾಣಿ, ಪಕ್ಷಿ ಹೀಗೆ ಸಾಲುಸಾಲಾಗಿ ಕೂರಿಸಿಟ್ಟ ಸಾಲಭಂಜಿಕೆಗಳು ಚಿತ್ತಾಕರ್ಷಕ ಚಿತ್ತಾರಗಳ ನಿಮ್ಮನ್ನು ಸ್ವಾಗತಿದರೆ, ಇನ್ನೊಂದೆಡೆ, ಸೀತಾ ಸ್ವಯಂವರ, ರಾಮ-ರಾವಣರ ಯುದ್ಧ, ಪಾಂಡವರ ಸಾಹಸ, ಕೋಟೆ, ಅರಮನೆ, ನಗರ ಹೀಗೆ ನಾನಾ ಪ್ರಸಂಗಗಳನ್ನು ಬಿತ್ತರಿಸುತ್ತಾ ಬೊಂಬೆಗಳು ನಿಮ್ಮನ್ನು ಬರಸೆಳೆಯುತ್ತವೆ.

ದಸರಾ ಸಂಭ್ರಮ ಕಳೆಗಟ್ಟುತ್ತಿದ್ದಂತೆ ಮೈಸೂರು ಕರ್ನಾಟಕ ಪ್ರಾಂತದ ಮನೆ-ಮನೆಗಳಲ್ಲಿಯೂ ಗೊಂಬೆಹಬ್ಬದ ಮೂಲಕ ಸಣ್ಣದೊಂದು ವಿಶ್ವ ತೆರೆದುಕೊಳ್ಳುತ್ತದೆ. ಮೊಬೈಲ್ ಫೋನ್, ಹೆಡ್ ಸೆಟ್ ಇತ್ಯಾದಿ ತಂತ್ರಜ್ಞಾನದಿಂದ ಯುವಜನೆರೆಲ್ಲ ತಮ್ಮಷ್ಟಕ್ಕೆ ತಾವಿರುವ ಕಾಲದಲ್ಲೂ ಐತಿಹಾಸಿಕ ಹಿನ್ನೆಲೆಯುಳ್ಳ ಈ ಬೊಂಬೆ ಹಬ್ಬವು ಮನೆಯವರನ್ನೆಲ್ಲ ಒಂದುಗೂಡಿಸುತ್ತಿದೆ.

Navaratri 2022
ಅನುರಾಧ ಅವರ ಮನೆಯಲ್ಲಿ ಪಟ್ಟದ ಬೊಂಬೆಗಳ ಆರಾಧನೆ

ಭಾರತೀಯ ಸಂಸ್ಕೃತಿಯನ್ನು ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರಿಸುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಬಲ್ಲ ಈ ವಿಶಿಷ್ಟ ಆಚರಣೆಯು ಆಧುನಿಕ ಕಾಲದ ಆಡಂಬರಗಳ ಮಧ್ಯೆಯೂ ಕಳೆಗುಂದದೆ, ಎಲ್ಲರನ್ನೂ ಆಕರ್ಷಿಸುತ್ತಾ, ದೇಶ-ವಿದೇಶಗಳಲ್ಲೂ ಜನಮೆಚ್ಚುಗೆ ಪಡೆದುಕೊಂಡಿದೆ.

ಗೊಂಬೆಹಬ್ಬದ ಐತಿಹ್ಯ
ಜೀವನದ ನಾನಾ ಮೌಲ್ಯ ಮತ್ತು ಪಾರಮಾರ್ಥಿಕ ತತ್ವಗಳನ್ನು ಬೊಂಬೆಗಳ ಮೂಲಕ ಬಿಂಬಿಸುವ ಈ ವಿಶಿಷ್ಟ ಆಚರಣೆಯು ನಮ್ಮ ಮೈಸೂರು ಪ್ರಾಂತದಲ್ಲಿಯೇ ಮೊದಲಿಗೆ ಪ್ರಾರಂಭವಾಯಿತೆಂಬ ಪ್ರತೀತಿಯಿದೆ. ಗೊಲು ಅಥವಾ ಕೋಲು ಎಂಬ ಸ್ಥಳೀಯನಾಮಗಳಲ್ಲಿಯೂ ಕರೆಯಲಾಗುವ ಈ ಆಚರಣೆಯು ನಮಗೆಲ್ಲ ಗೊಂಬೆಹಬ್ಬ ಅಂತಲೇ ಪ್ರಸಿದ್ಧ. ಕರ್ನಾಟಕದ ಹಳೇ ಮೈಸೂರು ಪ್ರಾಂತವಲ್ಲದೆ, ತಮಿಳುನಾಡು, ಆಂಧ್ರಗಳಲ್ಲೂ ಈ ಆಚರಣೆ ಇದೆ.

ತಮಿಳುನಾಡಿನಲ್ಲಿ ಇದನ್ನು ಬೊಮ್ಮೈ ಗೊಲು ಅಂತ ಕರೆದರೆ, ಆಂಧ್ರ, ತೇಲಂಗಾಣ ಭಾಗಗಳಲ್ಲಿ ಬೊಮ್ಮಲ ಕೊಲವು ಅಂತ ಕರೆಯಲಾಗುತ್ತದೆ. ಹಾಗೆಂದರೆ ಗೊಂಬೆಗಳ ಸ್ಥಾಪನೆ ಎಂದರ್ಥವಿದೆ. ನಮ್ಮ ಮೈಸೂರಿನ ಮಹಾರಾಜರು ಈ ಸಂಸ್ಕೃತಿಯನ್ನು ಬೆಳೆಸಿದ್ದಲ್ಲದೆ, ಪಾಂಡ್ಯ, ಚೋಳರಾಜರುಗಳೂ ಈ ಸಂಸ್ಕೃತಿಯನ್ನು ವಿಸ್ತರಿಸಿದಂತೆ ತೋರುತ್ತದೆ. ಒಟ್ಟಾರೆ ಈ ಬೊಂಬೆಹಬ್ಬ ಸಂಪ್ರದಾಯಕ್ಕೆ ಸುಮಾರು 200ರಿಂದ 250ವರ್ಷಗಳ ಇತಿಹಾಸವಿದ್ದಂತೆ ತೋರುತ್ತದೆ.

ಕರುಳಬಳ್ಳಿಗೆ ಬೊಂಬೆಗಳ ಬಳುವಳಿ

Navaratri 2022
ಸಗಣಿಯಲ್ಲಿ ಮಾಡಿರುವ ಗೊಂಬೆ

ಗೊಂಬೆಹಬ್ಬದಲ್ಲಿ ಪ್ರಮುಖ ಆಕರ್ಷಣೆಯೆಂದರೆ ಪಟ್ಟದ ಗೊಂಬೆಗಳು. ಇವು ಭಾರತದಲ್ಲಿರುವ ಕುಟುಂಬ ವ್ಯವಸ್ಥೆಯಲ್ಲಿರುವ ಒಗ್ಗಟ್ಟನ್ನು, ಹಿರಿಮೆಯನ್ನು ಸಮರ್ಥವಾಗಿ ಸಾರುತ್ತವೆ. ರಾಜ-ರಾಣಿಯೆಂದು ಕರೆಸಿಕೊಳ್ಳುವ ಈ ಪಟ್ಟದ ಗೊಂಬೆಗಳನ್ನು ಹೆಣ್ಣುಮಕ್ಕಳು ತಮ್ಮ ಮದುವೆಯ ಸಂದರ್ಭದಲ್ಲಿ ತವರು ಮನೆಯಿಂದ ತರುವ ಸಂಪ್ರದಾಯವಿದೆ. ತಲೆತಲಾಂತರಗಳಿಂದ ಒಂದು ಮನೆಯಲ್ಲಿ ನಡೆದುಕೊಂಡು ಬರುವ ಗೊಂಬೆಗಳ ಹಬ್ಬದಲ್ಲಿ ಆ ಮನೆಯ ಅತ್ತೆ-ಸೊಸೆಯಂದಿರ ತವರುಗೊಂಬೆಗಳೆಲ್ಲ ಒಂದೆಡೆ ಇಡಲ್ಪಡುವುದರಿಂದ ಕುಟುಂಬದೊಳಗಿನ ಬಾಂಧವ್ಯವನ್ನು ಇದು ಸಹಜವಾಗಿಯೇ ಗಟ್ಟಿಗೊಳಿಸುತ್ತದೆ.

ಸದ್ಯ ಬೆಂಗಳೂರಿನ ಜೆ. ಪಿ ನಗರದಲ್ಲಿ ವಾಸವಿರುವ ಗೃಹಿಣಿ ಸರಳಾ ಅವರು ಕಳೆದ ಮೂವತ್ತು ವರ್ಷಗಳಿಂದ ತಪ್ಪದೇ ತಮ್ಮ ಮನೆಯಲ್ಲಿ ದಸರಾ ಬೊಂಬೆಗಳನ್ನು ಕೂರಿಸುತ್ತಾ ಬಂದಿದ್ದಾರೆ. “ನಾನು ಮದುವೆಯಾಗಿ ಗಂಡನ ಮನೆಗೆ ಬಂದಾಗ ನನ್ನ ತವರಿನಿಂದ ತಂದ ಪಟ್ಟದ ಗೊಂಬೆಗಳನ್ನು ನಮ್ಮ ಅತ್ತೆ ತಮ್ಮ ತವರಿನ ಬೊಂಬೆಗಳ ಜೊತೆ ಇಟ್ಟು ಈ ಮನೆಯ ಸಂಪ್ರದಾಯವನ್ನು ನನಗೆ ಹೇಳಿಕೊಟ್ಟರು. ಈಗಲೂ ನಾನು ಪ್ರತಿವರ್ಷ ದಸರಾದಲ್ಲಿ ನನ್ನ ಅತ್ತೆಯವರ ಹಾಗೂ ನನ್ನ ಪಟ್ಟದಗೊಂಬೆಗಳನ್ನು ಒಟ್ಟೊಟ್ಟಿಗೆ ಇಡುತ್ತೇನೆ. ಮುಂದೆ ಬರುವ ಸೊಸೆಯ ಪಟ್ಟದ ಬೊಂಬೆಗಳಿಗೆ ಎದುರು ನೋಡುತ್ತಿದ್ದೇನೆ” ಎನ್ನುತ್ತಾರೆ.

Navaratri 2022
ಆಧುನಿಕತೆಯ ಅಂದ ಪಡೆದ ಗೊಂಬೆ ಹಬ್ಬ

ಬೊಂಬೆಗಳನ್ನು ಜೋಡಿಸಿಡುವ ಸವಾಲು

ಬೊಂಬೆ ಕೂರಿಸಲು ಬೇಕಾಗುವ ಮೆಟ್ಟಿಲಾಕಾರದ ಚೌಕಟ್ಟು ಮಾಡುವುದು, ಬೊಂಬೆಗಳನ್ನು ಕ್ರಮದಲ್ಲಿಯೇ ಜೋಡಿಸುವುದು, ಅಲಂಕರಿಸುವುದು ಇವೆಲ್ಲ ನಿಜಕ್ಕೂ ಸವಾಲಿನ ಕೆಲಸವೇ ಸರಿ. ಐದು, ಏಳು, ಒಂಬತ್ತು ಹೀಗೆ ಬೆಸಸಂಖ್ಯೆಯಲ್ಲಿ ಪಾವಟಿಗೆಗಳನ್ನು ನಿರ್ಮಿಸಿ ಗೊಂಬೆಗಳನ್ನು ಕೂರಿಸುವುದು ನಿಯಮ. ಹೆಚ್ಚಾನೆಚ್ಚು ಕಡೆ ನವರಾತ್ರಿಯ ಸಂಕೇತವಾಗಿ ಒಂಬತ್ತು ಇಲ್ಲವೆ ದಸರಾದ ಸಂಕೇತವಾಗಿ ಹತ್ತು ಪಾವಟಿಗೆಗಳನ್ನು ನಿರ್ಮಿಸಿ ಗೊಂಬೆಗಳನ್ನು ಕೂರಿಸುವ ವಾಡಿಕೆಯಿದೆ.

ನಾನಾ ದೇವತೆಗಳ, ಋಷಿಗಳ, ಯಜ್ಞೋಪಕರಣಗಳ ಆಕೃತಿಯಿಂದ ಹಿಡಿದು ರಾಜ,ರಾಣಿ, ಸೈನಿಕರು, ವ್ಯಾಪಾರ, ವ್ಯವಹಾರ, ಪ್ರಾಣಿ, ಗಿಡ-ಮರ, ನಗರ ಮಹಾನಗರ ಹೀಗೆ ಭೂತ ಹಾಗೂ ವರ್ತಮಾನಗಳ ಬಿಂಬಗಳಾಗುತ್ತವೆ ನಾನಾ ಬೊಂಬೆಗಳು. ಮೇಲಸ್ತರದಿಂದ ಕೆಳ ಸ್ತರದವರೆಗೆ ಕ್ರಮವಾಗಿ ಮೊದಲು ದೇವತೆಗಳ, ಋಷಿಗಳ, ನಂತರ ರಾಜಪುರುಷರ ಗೊಂಬೆ, ಆನಂತರದಲ್ಲಿ ಮನುಷ್ಯ ಮತ್ತು ಪ್ರಾಣಿಗಳ ಗೊಂಬೆಗಳನ್ನು ಇಡುವ ನಿಯಮವಿದೆ.

Navaratri 2022
ಅಮೆರಿಕದ ಬೊಂಬೆ ಹಬ್ಬದಲ್ಲಿ ನಮ್ಮ ನಾಡಹಬ್ಬ ದಸರಾ

ನವರಾತ್ರಿಯ ಹಿಂದಿನದಿನದ ಅಮವಾಸ್ಯೆಯ ದಿನವೇ ಈ ಜೋಡಣೆ ಅಲಂಕಾರಗಳೆಲ್ಲ ಪ್ರಾರಂಭವಾಗಿ, ವಿಜಯದಶಮಿಯದಿನ ಶಯನೋತ್ಸವದೊಂದಿಗೆ ಬೊಂಬೆಗಳ ಹಬ್ಬ ಪರಿಸಮಾಪ್ತಿಯಾಗುತ್ತದೆ. ಕೆಲವರ ಮನೆಗಳಲ್ಲಿ ಸರಸ್ವತಿ ಪೂಜೆಯಿಂದ ವಿಜಯದಶಮಿಯವರೆಗೆ ಮೂರುದಿನ ಮಾತ್ರವೇ ಗೊಂಬೆಗಳನ್ನು ಕೂರಿಸುವ ಸಂಪ್ರದಾಯವೂ ಇದೆ.

ಭಾರತೀಯ ಸಂಸ್ಕೃತಿಯ ಅನಾವರಣ

ಬೊಂಬೆಹಬ್ಬದ ತಯಾರಿಯಲ್ಲಿ ಮಕ್ಕಳಿಂದ ಹಿಡಿದು ವೃದ್ಧಾದಿಯಾಗಿ ಮನೆ ಮಂದಿಯೆಲ್ಲ ಭಾಗಿಯಾಗಿ ಸಂಭ್ರಮಿಸುತ್ತಾರೆ. ಆದರೂ ಗೊಂಬೆಹಬ್ಬದಲ್ಲಿ ಮಹಿಳೆಯರ ಪಾತ್ರ ಬಹಳವೇ ಇರುವುದು ಕಾಣುತ್ತದೆ. ಗೃಹಿಣಿಯರು ಎಲ್ಲೇ ಹೋದರೂ, ತಮಗೆ ಕಂಡ, ಮನಸಿಗೆ ಬಂದ ಗೊಂಬೆಗಳನ್ನು ಖರೀದಿಸಿ ತಂದು, ಸಾಕಷ್ಟು ಮುತುವರ್ಜಿವಹಿಸಿ ವರ್ಷವಿಡೀ ಅವುಗಳನ್ನು ಕಾಪಾಡಿಕೊಳ್ಳುತ್ತಾರೆ. ಕೆಲ ಮನೆಗಳಲ್ಲಂತೂ ಮೂರು ನಾಲ್ಕು ತಲೆಮಾರುಗಳಿಂದ ಜೋಪಾನವಾಗಿ ಕಾಪಾಡಿಕೊಂಡು ಬಂದ ಸಾವಿರಾರು ಬೊಂಬೆಗಳಿವೆ.

ಇವೆಲ್ಲವನ್ನು ಒಪ್ಪವಾಗಿರಿಸುವ, ಅಲಂಕರಿಸುವ ಕಾರ್ಯವನ್ನು ಹೆಣ್ಣುಮಕ್ಕಳು ಬಹಳ ಆಸ್ಥೆಯಿಂದ ಮಾಡುವುದನ್ನು ನೋಡಿದರೆ ಸ್ತ್ರೀಯರ ಸೂಕ್ಷ್ಮಗ್ರಾಹಿತ್ವ ಮತ್ತು ಅಲಂಕಾರಿಕ ವಿಷಯದಲ್ಲಿ ಅವರಿಗಿರುವ ಕೌಶಲಮತಿ ವೇದ್ಯವಾಗುತ್ತದೆ. ಒಂದೊಂದು ವರ್ಷವೂ ಒಂದೊಂದು ಬಗೆಯ ವಿಷಯದ ಮೇಲೆ ಬೆಳಕು ಚೆಲ್ಲುವ ಸನ್ನಿವೇಶವನ್ನು ನಿರೂಪಿಸುವ ವಾಡಿಕೆಯೂ ಇರುವುದರಿಂದ ವೃತ್ತ-ವರ್ತಿಷ್ಯಮಾನ ಸಂಗತಿಗಳನ್ನು ಜೋಡಿಸುವ ಕೆಲಸ ಇಲ್ಲಿರುತ್ತದೆ. ಸೀತಾಸ್ವಯಂವರವೋ, ರಾಮ-ರಾವಣರ ಯುದ್ಧವೋ ಇಲ್ಲವೆ ಪಾಂಡವರ ವನವಾಸದ ಪ್ರಸಂಗವೋ ಹೀಗೆ ನಮ್ಮ ಪ್ರಾಚೀನ ಐತಿಹ್ಯಗಳ ಪ್ರದರ್ಶನಕ್ಕೆ ವೇದಿಕೆ ನಿರ್ಮಾಣವಾಗುತ್ತದೆ.

ರಾಮಾಯಣ, ಮಹಾಭಾರತಾದಿ ಗ್ರಂಥಗಳ ಅನೇಕ ವಿಚಾರಗಳು ಸದಾ ನೆನಪಿನಲ್ಲಿ ಉಳಿಯುವಂತೆ ಮಾಡಿ ಜೀವನಮೌಲ್ಯವನ್ನು ಕಲಿಯಲು, ಮಕ್ಕಳಿಗೆ ಪರಂಪರೆಯನ್ನು ಮನದಟ್ಟು ಮಾಡಲು ಒಳ್ಳೆಯ ಅವಕಾಶವನ್ನು ಮಾಡಿಕೊಡುತ್ತದೆ ಈ ಹಬ್ಬ.

ಆಧುನಿಕತೆಯ ಮೈಗೂಡಿಸಿಕೊಂಡ ಹಬ್ಬ

Navaratri 2022
ಅಮೆರಿಕದಲ್ಲಿ ಚಾಮುಂಡಿ ಬೆಟ್ಟ!

ಕುಟುಂಬಕ್ಕೆ ಹೆಚ್ಚಿನ ಪ್ರಾಧಾನ್ಯತೆ ಕೊಡುತ್ತಿದ್ದ ಹಿಂದಿನಕಾಲದಲ್ಲಿ ಗೊಂಬೆಗಳ ಸಂಗ್ರಹ ಮತ್ತು ಅಲಂಕಾರವು ಜೋರಾಗಿಯೇ ನಡೆಯುತ್ತಿತ್ತು. ಮಣ್ಣಿನ ಗೊಂಬೆಗಳ ಜೊತೆ ಸಗಣಿಯಿಂದ ಮಾಡಿದ, ವಿವಿಧ ಮಣಿಗಳ ಕಸೂತಿಯಿಂದ ಮಾಡಿದ, ಹಿತ್ತಾಳೆ ಇತ್ಯಾದಿ ಲೋಹಗಳಿಂದ ಮಾಡಿದ ಬೊಂಬೆಗಳಿರುತ್ತಿದ್ದವು. ಇಂದಿನ ನಗರದ ಜಂಜಡದ ನಡುವೆಯೂ ಲಭ್ಯವಿರುವ ಸೀಮಿತ ಅವಕಾಶದಲ್ಲಿಯೇ ಬೊಂಬೆ ಹಬ್ಬವನ್ನು ಚ್ಯುತಿ ಬರದಂತೆ ಆಚರಿಸಿಕೊಂಡು ಬರಲಾಗುತ್ತಿದೆ. ಲಭ್ಯವಿರುವ ಪ್ಲಾಸ್ಟಿಕ್, ಸೆರಾಮಿಕ್, ಫೈಬರ್ ಬೊಂಬೆಗಳೂ ಹಳೆಯ ಗೊಂಬೆಗಳ ಜೊತೆಗೆ ಸ್ಥಾನ ಪಡೆದು ರಾರಾಜಿಸುತ್ತವೆ.

ತುಮಕೂರಿನ ಮಧುಗಿರಿ ಮೂಲದ ಅನುರಾಧಾ ಅವರು ಚಿಕ್ಕವಯಸಿನಿಂದಲೇ ತಮ್ಮ ತಾಯಿ ಆಚರಿಸುತ್ತಿದ್ದ ಬೊಂಬೆ ಸಂಪ್ರದಾಯವನ್ನು ಗಮನಿಸಿಕೊಂಡು ಬೆಳೆದವರು. ಈಗಲೂ ಅವರು ಆ ಕಾಲದ ಪಟ್ಟದ ಗೊಂಬೆಗಳ ವೈಭವವನ್ನು ನೆನಪಿಸಿಕೊಳ್ಳುತ್ತಾರೆ. “ದಸರಾ ಬಂತೆಂದದರೆ ಕಟ್ಟಿಗೆಯ ಪಟ್ಟದಗೊಂಬೆಗಳನ್ನು ಪೆಟ್ಟಿಗೆಯಿಂದ ತೆಗೆದು ಇತರ ಗೊಂಬೆಗಳೊಟ್ಟಿಗೆ ಜೋಡಿಸಿಡುತ್ತಿದ್ದರು. ಆಗೆಲ್ಲ ಬಣ್ಣ-ಬಣ್ಣದ ಕಾಗದಗಳನ್ನು ಸುತ್ತಿ ಅಲಂಕರಿಸಿಡುತ್ತಿದ್ದರು. ಕಾಗದದಲ್ಲಿಯೇ ನೆರಿಗೆಯ ಸೀರೆ, ಬಣ್ಣದ ರವಿಕೆಯನ್ನು ಮಾಡಿ, ಮಿರುಗುವ ಜರತಾರಿಗಳನ್ನು ತೊಡಿಸುತ್ತಿದ್ದರು. ನಾಲ್ಕೈದು ವರ್ಷ ಅವುಗಳ ಬಣ್ಣ, ಅಲಂಕಾರ ಹಾಳಾಗದಂತೆ ಇಡುತ್ತಿದ್ದರು. ಈಗ ಅನೂಕೂಲಕ್ಕೆ ತಕ್ಕಂತೆ ಗೊಂಬೆಯ ಅಲಂಕಾರದ ಪದ್ಧತಿಯೂ ಬದಲಾಗಿದೆ” ಎನ್ನುತ್ತಾರೆ.

ವಿದೇಶಗಳಲ್ಲೂ ಮೆರಗು ಪಡೆದ ಬೊಂಬೆ ಹಬ್ಬ
ಅನೇಕ ಭಾರತೀಯ ಹಬ್ಬ-ಹರಿದಿನಗಳಂತೆಯೇ,ನಮ್ಮ ನಾಡಿನ ಮಣ್ಣಿನ ಈ ಅಪ್ಪಟ ಸಂಸ್ಕೃತಿಯನ್ನು ಮರೆಯದೇ ಇಂದು ಅನೇಕ ಅನಿವಾಸಿ ಭಾರತೀಯರು ತಾವಿರುವಲ್ಲಿಯೇ ಆಚರಿಸಿ ಸಂಭ್ರಮಿಸುತ್ತಾರೆ. ಆ ಪೈಕಿ, ಅಮೆರಿಕದ ನ್ಯೂಯಾರ್ಕ ನಲ್ಲಿ ಕಳೆದ ಅನೇಕ ವರ್ಷಗಳಿಂದ ನೆಲೆಸಿರುವ ಬೆಂಗಳೂರು ಮೂಲದ ಶ್ರೀನಿವಾಸ್ ಜಯಶಂಕರ್ ಮತ್ತು ಶ್ರೀಲಕ್ಷ್ಮಿ ತಮ್ಮ ಅಮೆರಿಕದ ನಿವಾಸದಲ್ಲಿ ಪ್ರತಿವರ್ಷ ದಸರಾದಲ್ಲಿ ಬೊಂಬೆ ಹಬ್ಬವನ್ನು ಜೋರಾಗಿ ಮಾಡುತ್ತಾರೆ. ತಾವು ಭಾರತಕ್ಕೆ ಬಂದಾಗಲೆಲ್ಲ ಮರೆಯದೆ, ನಾನಾ ಬೊಂಬೆಗಳನ್ನು ಖರೀದಿಸಿ ಕೊಂಡೊಯ್ಯುವ ಇವರ ಬಳಿ ಬೊಂಬೆಗಳ ಎಷ್ಟು ದೊಡ್ಡ ಸಂಗ್ರಹವಿದೆಯೆಂದು ಕೇಳಿದರೆ ನೀವು ಅಚ್ಚರಿ ಪಡುತ್ತೀರಿ. ಪ್ರತಿವರ್ಷ ಭಾರತೀಯ ಪರಂಪರೆಯನ್ನು ಬಿಂಬಿಸುವ ಒಂದೊಂದು ವಿಷಯವನ್ನು ಅಲ್ಲಿ ವಿಷದಪಡಿಸುತ್ತಾರೆ. ಈ ವರ್ಷವಂತೂ ಮೈಸೂರು ಅರಮನೆ, ಜಂಬೂಸವಾರಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಚೌಕ ಹೀಗೆ ಇಡೀ ಮೈಸೂರಿನ ದಸರಾ ಸಂಭ್ರಮವನ್ನು ಅಮೆರಿಕದ ತಮ್ಮ ಮನೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಅಮೆರಿಕದಲ್ಲಿರುವ ತಮ್ಮ ಬಂಧು-ಮಿತ್ರರನ್ನು ಮನೆಗೆ ಆಹ್ವಾನಿಸಿ ಔತಣ ಏರ್ಪಡಿಸುತ್ತಾರೆ. “ಭೌತಿಕವಾಗಿ ತಾಯ್ನೆಲದಿಂದ ದೂರವಿದ್ದರೂ, ಭಾರತೀಯತೆ ತಮ್ಮ ಹೃದಯದಲ್ಲೇ ಇರುವದಕ್ಕಾಗಿಯೇ ಈ ಆಚರಣೆ ಸಾಧ್ಯವಾಯಿತುʼʼ ಎನ್ನುವ ಶ್ರೀನಿವಾಸ್ ಜಯಶಂಕರ್‌ ಅನೇಕ ವರ್ಷಗಳಿಂದ ತಾವು ಕಳೆದು ಕೊಂಡಿದ್ದ ಬಂಧುಗಳ ಬಾಂಧವ್ಯ ಮತ್ತು ಸಂಸ್ಕೃತಿಯನ್ನು ಕಳೆದ ಆರು ವರ್ಷಗಳಿಂದ ಈ ಬೊಂಬೆ ಹಬ್ಬ ಆಚರಿಸುವ ಮೂಲಕ ಮತ್ತೆ ಪಡೆದುಕೊಂಡಿದ್ದೇವೆ ಎಂದು ಹೆಮ್ಮೆ ಪಡುತ್ತಾರೆ.

Navaratri 2022
ಅಮೆರಿಕದ ನ್ಯೂಯಾರ್ಕ್‌ನ ತಮ್ಮ ಮನೆಯಲ್ಲಿ ಪಾರಂಪರಿಕ ಗೊಂಬೆಗಳೊಂದಿಗೆ ಶ್ರೀನಿವಾಸ್ ಜಯಶಂಕರ್ ಮತ್ತು ಶ್ರೀಲಕ್ಷ್ಮಿ

ಒಟ್ಟಾರೆಯಾಗಿ ತಾತ್ವಿಕವಾದ ಜೀವನ ಮೌಲ್ಯವನ್ನು ಬಿಂಬಿಸುವುದಷ್ಟೇ ಅಲ್ಲದೆ ಸಾಂಸ್ಕೃತಿಕವಾಗಿ ಸಮಾಜ-ಸಮಾಜವನ್ನು ಬೆಸೆಯುವ ಶಕ್ತಿ ಈ ಗೊಂಬೆಹಬ್ಬಗಳಿರುವುದು ನಿಶ್ಚಿತ. ಹಾಗಾಗಿಯೇ ಗೊಂಬೆಹಬ್ಬ ಇಂದು ಕೇವಲ ಪ್ರಾಂತೀಯ ಆಚರಣೆಯಾಗಷ್ಟೇ ಉಳಿಯದೆ ಭಾರತೀಯ ಸಂಸ್ಕೃತಿಯನ್ನು ಆರಾಧಿಸುವ ಪ್ರತಿಯೊಬ್ಬರ ಮನೆಯ, ಊರ ಉತ್ಸವವಾಗಿ ಮಾರ್ಪಡುತ್ತಿದೆ. ಭಾರತೀಯ ಸಂಸ್ಕೃತಿಯನ್ನು ಬೊಂಬೆಗಳು ಜಗದಗಲಕ್ಕೆ ಸಾರುತ್ತಿವೆ.

ಲೇಖಕರು ಸಂಸ್ಕೃತ ಪ್ರಾಧ್ಯಾಪಕರು

ಇದನ್ನೂ ಓದಿ | Navaratri 2022 | ಸರಸ್ವತಿ ಪೂಜೆ ಎಂದು? ಪೂಜೆ ಹೇಗೆ ಮಾಡಬೇಕು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Mysore Dasara: ಚೆಕ್‌ ಬೌನ್ಸ್‌; ದಸರಾ ಕಲಾವಿದರಿಗೆ ಅವಮಾನ ಎಂದು ಯತ್ನಾಳ್‌ ಕಿಡಿ

Mysore Dasara: ಮೈಸೂರು ಉಸ್ತುವಾರಿ ಸಚಿವರು ಹಾಗೂ ಮುಖ್ಯ ಮಂತ್ರಿಗಳು ಕಲಾವಿದರಿಗೆ ಬೇಷರತ್ ಕ್ಷಮೆ ಕೇಳಿ ಲಲಿತಕಲೆ ಹಾಗೂ ಕರಕುಶಲ ಉಪಸಮಿತಿಯ ಸಂಬಂಧಪಟ್ಟ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಆಗ್ರಹಿಸಿದ್ದಾರೆ.

VISTARANEWS.COM


on

Basanagouda Patil Yatnal
Koo

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysore Dasara) ಮುಕ್ತಾಯವಾದರೂ ಕಲಾವಿದರ ಅಸಮಾಧಾನ ನಿಂತಿಲ್ಲ. ಅಧಿಕಾರಿಗಳ ಎಡವಟ್ಟಿನಿಂದ ಬಹುಮಾನದ ಚೆಕ್‌ ಬೌನ್ಸ್‌ ಆಗಿರುವುದರಿಂದ ಬಹುಮಾನ ವಿಜೇತರು ಅಲೆದಾಡುವಂತಾಗಿದೆ. ಚೆಕ್‌ ವಾಪಸ್‌ ಬಂದರೂ ಬ್ಯಾಂಕ್‌ ಖಾತೆಯಲ್ಲಿ ಹಣ ಕಡಿತವಾಗಿರುವುದಕ್ಕೆ ಕಲಾವಿದರೊಬ್ಬರು ಅಸಮಾಧಾನ ಹೊರಹಾಕಿದ್ದಾರೆ. ಮತ್ತೊಂದೆಡೆ ರಾಜ್ಯ ಸರ್ಕಾರದಿಂದ ಕಲಾವಿದರಿಗೆ ಅವಮಾನವಾಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಕಿಡಿ ಕಾರಿದ್ದಾರೆ.

ಅ.26 ರಂದು ಮೈಸೂರಿನ ಹವ್ಯಾಸಿ ಛಾಯಾಚಿತ್ರಗಾರ ಎನ್.ಜಿ. ಸುಧೀರ್‌ಗೆ 7 ಸಾವಿರ ರೂ. ಬಹುಮಾನದ ಚೆಕ್ ನೀಡಲಾಗಿತ್ತು‌. ಅ.27 ರಂದು ಸುದೀರ್ ಬ್ಯಾಂಕ್‌ಗೆ ಸಲ್ಲಿಸಿದ್ದರು. ಆದರೆ ಅ.30ರಂದು ಚೆಕ್ ವಾಪಸ್ ಆಗಿದೆ. ಈ ವೇಳೆ ಅಕೌಂಟ್‌ನಿಂದ 118 ರೂ. ಕಟ್ ಮಾಡಲಾಗಿದೆ.

ಇದನ್ನೂ ಓದಿ | Karnataka Politics : ನಾನು ಮುಖ್ಯಮಂತ್ರಿ ಆಗಲು ಸಿದ್ಧ ಎಂದ ಪ್ರಿಯಾಂಕ್ ಖರ್ಗೆ

ಈ ಬಗ್ಗೆ ಪ್ರತಿಕ್ರಿಯಿಸಿರುವ ಎನ್.ಜಿ. ಸುಧೀರ್, ಸ್ಪರ್ಧೆಯಲ್ಲಿ ಭಾಗಿಯಾಗಿ ಬಹುಮಾನ ಪಡೆದ ನನಗೆ 118 ರೂ. ದಂಡ ಬಿದ್ದಿದೆ. ಇಂತಹ ಬೇಜಾವ್ದಾರಿತನ ಏಕೆ? ತಮ್ಮಂತೆ ಸಾಕಷ್ಟು ಕಲಾವಿದರಿಗೆ ಅನ್ಯಾಯ ಆಗಿದೆ ಎಂದು ಅಧಿಕಾರಿಗಳ ವಿರುದ್ಧ ಬೇಸರ ಹೊರಹಾಕಿದ್ದಾರೆ.

ದಸರಾ ಲಲಿತ ಕಲೆ ಮತ್ತು ಕರಕುಶಲ ಉಪಸಮಿತಿಯಿಂದ ಕಲಾವಿದರಿಗೆ ನೀಡಿದ್ದ ಬಹುಮಾನದ ಚೆಕ್‌ಗಳು ನಗದಾಗಿ ಪರಿವರ್ತನೆ ಆಗದೆ ವಾಪಸ್‌ ಆಗುತ್ತಿವೆ. ಅಧಿಕಾರಿಗಳ ಸಹಿಯಲ್ಲಿನ ವ್ಯತ್ಯಾಸ ಇದಕ್ಕೆ ಕಾರಣವಾಗಿದೆ. ಉಪಸಮಿತಿಯ ಈ ಹಿಂದಿನ ಕಾರ್ಯಾಧ್ಯಕ್ಷ, ಕಾರ್ಯದರ್ಶಿಗಳ ಸಹಿಗಳೇ ಚೆಕ್‌ ಮೇಲೆ ಇದ್ದಿದ್ದರಿಂದ ಚೆಕ್‌ ಬೌನ್ಸ್‌ ಆಗಿವೆ ಎನ್ನಲಾಗಿದೆ. ಚೆಕ್ ವಾಪಸ್‌ ಆಗಿರುವುದು ತಿಳಿದುಬರುತ್ತಿದ್ದಂತೆ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಂಡಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ | Karnataka Politics : ಪರಮೇಶ್ವರ್‌ ಮುಖ್ಯಮಂತ್ರಿ ಆಗಬೇಕು; ನಾನು ಎಐಸಿಸಿಗೂ ಹೆದರಲ್ಲವೆಂದ ಕೆ.ಎನ್.‌ ರಾಜಣ್ಣ

ರಾಜ್ಯ ಸರ್ಕಾರದ ವಿರುದ್ಧ ಯತ್ನಾಳ್‌ ಆಕ್ರೋಶ

ಕಲಾವಿದರಿಗೆ ನೀಡಿದ್ದ ಚೆಕ್‌ ಬೌನ್ಸ್‌ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ದಸರಾ ಹಬ್ಬದಲ್ಲಿ ಭಾಗವಹಿಸಿದ ಕಲಾವಿದರಿಗೆ ನೀಡಿದ ಚೆಕ್ ಬೌನ್ಸ್ ಆಗಿರುವುದು ಕಲಾವಿದರಿಗೆ ಮಾಡಿದ ಅವಮಾನ. ಗಾಯದ ಮೇಲೆ ಬರೆ ಇಟ್ಟಂತೆ ಬೌನ್ಸ್ ಆದ ಚೆಕ್ ಬ್ಯಾಂಕ್‌ಗೆ ನೀಡಿದ್ದಕ್ಕೆ ಕಲಾವಿದರಿಗೆ ಬ್ಯಾಂಕ್ ದಂಡ ಹಾಕಿದೆ. ದಸರಾ ಹಾಗೂ ಮೈಸೂರು ಉಸ್ತುವಾರಿ ಸಚಿವರು ಹಾಗೂ ಮುಖ್ಯ ಮಂತ್ರಿಗಳು ಕಲಾವಿದರಿಗೆ ಬೇಷರತ್ ಕ್ಷಮೆ ಕೇಳಿ ಲಲಿತಕಲೆ ಹಾಗೂ ಕರಕುಶಲ ಉಪಸಮಿತಿಯ ಸಂಬಂಧಪಟ್ಟ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು. ಉತ್ತರದಾಯಿತ್ವವಿಲ್ಲದೆ, ಬೇಜವಾಬ್ದಾರಿ ವರ್ತನೆಯಿಂದ ಕೆಲಸ ಮಾಡುವವರಿಗೆ ಸರ್ಕಾರ ಶಿಸ್ತು ಕ್ರಮ ಜರುಗಿಸಲಿ. ಉಸ್ತುವಾರಿ ಸಚಿವರ ದುರಾಡಳಿತದಿಂದ ದಸರಾ ಸಂಭ್ರಮದಲ್ಲಿ ವಿದ್ಯುತ್ ಬೇಲಿ ಹಾರಿ ಬಂದು ಭದ್ರತಾ ವೈಫಲ್ಯವೆಸಗಿದ್ದು, ಈಗ ಕಲಾವಿದರಿಗೆ ನೀಡಿದ ಚೆಕ್ ಬೌನ್ಸ್ ನೀಡಿ ಸರಣಿ ವೈಫಲ್ಯಗಳು ಆಗಿವೆ ಎಂದು ಅಕ್ರೋಶ ಹೊರಹಾಕಿದ್ದಾರೆ.

Continue Reading

ಕರ್ನಾಟಕ

Mysore Dasara: ಮೈಸೂರು ದಸರಾ ಸಂಭ್ರಮದ ಸ್ಮರಣೀಯ ಚಿತ್ರಗಳಿವು

Mysore Dasara: ವಿಶ್ವ ವಿಖ್ಯಾತ ಮೈಸೂರು ದಸರಾ ಮಂಗಳವಾರ ಜಂಬೂ ಸವಾರಿಯೊಂದಿಗೆ ಮುಕ್ತಾಯವಾಯಿತು. ದಸರಾ ಸಂಭ್ರಮದ ಸ್ಮರಣೀಯ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ

VISTARANEWS.COM


on

Dasara sambhrama
Koo

ಮೈಸೂರು: ಅ.15ರಂದು ಆರಂಭವಾದ ವಿಶ್ವ ವಿಖ್ಯಾತ ಮೈಸೂರು ದಸರಾ (Mysore Dasara) ಮಹೋತ್ಸವ, ವಿಜಯದಶಮಿ ದಿನವಾದ ಮಂಗಳವಾರ ಜಂಬೂ ಸವಾರಿಯೊಂದಿಗೆ ಮುಕ್ತಾಯವಾಯಿತು. ಕೊನೆಯ ದಿನ ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು, ಸ್ತಬ್ಧಚಿತ್ರಗಳ ಮೆರವಣಿಗೆ, ಜಂಬೂ ಸವಾರಿ, ಪಂಜಿನ ಕವಾಯತು ಅದ್ಧೂರಿಯಾಗಿ ನೆರವೇರಿದ್ದು, ಜಂಬೂ ಸವಾರಿ ವೀಕ್ಷಿಸಲು ಲಕ್ಷಾಂತರ ಜನರು ಆಗಮಿಸಿದ್ದರು. ದಸರಾ ಸಂಭ್ರಮದ ಸ್ಮರಣೀಯ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ.

ಇದನ್ನೂ ಓದಿ | Mysore Dasara : ಕಣ್ಮನ ಸೆಳೆದ ಪಂಜಿನ ಕವಾಯತು; ಮೈಸೂರು ದಸರಾ ಅದ್ಧೂರಿಯಾಗಿ ಮುಗಿಯಿತು!

Continue Reading

ಕರ್ನಾಟಕ

Mysore Dasara : ಕಣ್ಮನ ಸೆಳೆದ ಪಂಜಿನ ಕವಾಯತು; ಮೈಸೂರು ದಸರಾ ಅದ್ಧೂರಿಯಾಗಿ ಮುಗಿಯಿತು!

Mysore Dasara : ಯೋಧರು ಮತ್ತು ಪೊಲೀಸರ ಬೈಕ್‌ ಸಾಹಸಗಳ ಪ್ರದರ್ಶನಗಳು ಸೇರಿದ್ದವರ ಮೈನವಿರೇಳುವಂತೆ ಮಾಡಿತು. ಕೆಲ ಕಾಲ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು, ಗಮನ ಸೆಳೆದವು. ಅಂತಿಮವಾಗಿ ಸುಮಾರು 25 ನಿಮಿಷಗಳ ಕಾಲ ಪಂಜಿನ ಕವಾಯತು ನಡೆಯಿತು. ಈ ಕವಾಯತು ಪ್ರದರ್ಶನದ ಅಷ್ಟೂ ಸಮಯವು ನೋಡುಗರು ಉಸಿರು ಬಿಗಿಹಿಡಿದು ವೀಕ್ಷಣೆ ಮಾಡಿದ್ದು ಕಂಡು ಬಂತು.

VISTARANEWS.COM


on

Torch Light Parade 2023
Koo

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ (Mysore Dasara) ಅದ್ಧೂರಿಯಾಗಿ ಮುಕ್ತಾಯಗೊಂಡಿದೆ. ಇಡೀ ದಸರಾದ ಆಕರ್ಷಣೆಯಲ್ಲಿ ಜಂಬೂ ಸವಾರಿ (Jumboo Savari) ನಂತರ ಪ್ರಮುಖವಾಗಿ ಎದ್ದು ಕಾಣುವ ಪಂಜಿನ ಕವಾಯತಿಗೆ (Torch Light Parade 2023) ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ (Governor Thaawar Chand Gehlot) ಚಾಲನೆ ನೀಡಿದರು. ಪೊಲೀಸ್‌ ಪಡೆಯಿಂದ ಗೌರವ ವಂದನೆ ಸ್ವೀಕರಿಸುವ ಮೂಲಕ ಅವರು ವರ್ಣರಂಜಿತ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು.

ಮೊದಲು ರಾಷ್ಟ್ರಗೀತೆಯನ್ನು (National Anthem) ನುಡಿಸುವ ಮೂಲಕ ಕವಾಯತು ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ದೊರೆಯಿತು. ರಾಷ್ಟ್ರಗೀತೆ ಮುಕ್ತಾಯವಾಗುತ್ತಿದ್ದಂತೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರ ಬಳಿ ಬಂದ ಕಿಂಗ್‌ ಪವರ್‌ ಅಶ್ವರೂಢ ಖಡ್ಗಧಾರಿ ಪ್ರಧಾನ ದಳಪತಿ ಕವಾಯತು ವರದಿಯನ್ನು ಅತಿಥಿಗಳಿಗೆ ಸಮರ್ಪಿಸಿದರು. ತರುವಾಯ ನಿಶ್ಚಳ ದಳಗಳ ಪರಿವೀಕ್ಷಣೆಗಾಗಿ ರಾಜ್ಯಪಾಲರನ್ನು ಆಹ್ವಾನಿಸಿದರು.

ಆಹ್ವಾನವನ್ನು ಒಪ್ಪಿ ಅಲಂಕೃತ ತೆರೆದ ವಾಹನವನ್ನು ಹತ್ತಿದ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ವಿವಿಧ ಸೇವಾದಳಗಳ ನಿಶ್ಚಳದಳಗಳ ಪರಿವೀಕ್ಷಣೆಯನ್ನು ನಡೆಸಿದರು. ಮೈಸೂರು ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಿ. ಅವರು ರಾಜ್ಯಪಾಲರಿಗೆ ವ್ಯಕ್ತಿಪರಿವೀಕ್ಷಕರಾಗಿದ್ದರು.

ಇದಾದ ಬಳಿಕ 21 ಕುಶಾಲತೋಪುಗಳನ್ನು ಮೂರು ಹಂತಗಳಲ್ಲಿ ಸಿಡಿಸಲಾಯಿತು. ನಿಶ್ಚಳದ ದಳ ಅಶ್ವಪಡೆಗಳ ಒಂದೊಂದಾಗಿ ಮೂರು ಕುದುರೆಗಳು ಒಂದು ಸುತ್ತು ಸುತ್ತಿ ಬಂದ ಬಳಿಕ ಗಾಳಿಯಲ್ಲಿ ಗುಂಡುಹಾರಿಸುವ ಮೂಲಕ ಗೌರವ ನಮನ ಸಲ್ಲಿಸಲಾಯಿತು. ಈ ವೇಳೆ ಮತ್ತೊಮ್ಮೆ ರಾಷ್ಟ್ರಗೀತೆಯನ್ನು ಮೊಳಗಿಸಲಾಯಿತು.

18 ತುಕಡಿಗಳಿಂದ ಪ್ರದರ್ಶನ

ಒಟ್ಟು 18 ತುಕಡಿಗಳು ಪ್ರದರ್ಶನ ತೋರಿದವು. ಈ ತುಕಡಿಗಳು ಹಲವು ಹಿರಿಯ ಅಧಿಕಾರಿಗಳ ಮಾರ್ಗದರ್ಶನದ ಮೂಲಕ ಕೆಲವು ದಿನಗಳಿಂದ ತಾಲೀಮು ನಡೆಸಿವೆ. ಲಯಬದ್ಧ ಸಂಗೀತಕ್ಕೆ ಶಿಸ್ತುಬದ್ಧ ಹೆಜ್ಜೆಯನ್ನು ಹಾಕುತ್ತಾ ಸಾಗುತ್ತಿರುವುದನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬದಂತೆ ಇತ್ತು. ಎದೆ ಸೆಟೆದು ಕೈಬೀಸಿ ಕಾಲನ್ನು ಜೋರಾಗಿ ನೆಲಕ್ಕೆ ಗುದ್ದಿ ಧೂಳೆಬ್ಬಿಸುತ್ತಾ ಆರಕ್ಷಕ ದಳದವರು ವೀರ ನಡಿಗೆ ಸಾಗುತ್ತಿದ್ದರೆ ಸೇರಿದ್ದ ಜನಸ್ತೋಮ ಚಪ್ಪಾಳೆಯ ಸುರಿಮಳೆಯನ್ನೇ ಸುರಿಸಿತು.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ, ಗೃಹ ಸಚಿವ ಡಾ. ಜಿ. ಪರಮೇಶ್ವರ್‌, ಸಚಿವರಾದ ವೆಂಕಟೇಶ್‌, ಶಿವರಾಜ್‌ ತಂಗಡಗಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಕಣ್ತುಂಬಿದ ಲೈಟಿಂಗ್‌

ಧ್ವನಿ ಬೆಳಕಿನ ಸಂಭ್ರಮ ಇದೇ ವೇಳೆ ಅನಾವರಣಗೊಳಿಸಲಾಯಿತು. ಧ್ವನಿ ಮೊದಲೋ ಬೆಳಕೋ ಎಂಬ ಪ್ರಶ್ನೆಗೆ ಉತ್ತರ ಸಿಗದಿದ್ದರೂ ಡಿಎನ್‌ಎ ಸಹಯೋಗದಲ್ಲಿ ಧ್ವನಿ – ಬೆಳಕಿನ ಪ್ರದರ್ಶನವು ನೋಡುಗರನ್ನು ರೋಮಾಂಚನಗೊಳಿಸಿತು.

ಮನ ಮುಟ್ಟಿದ ನೃತ್ಯ ರೂಪಕ

ಡಿಎನ್‌ಎ ಸಮೂಹದ ಮೂಲಕ ನೃತ್ಯ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಇದಕ್ಕೆ ಭಜರಂಗಿ ಮೋಹನ್‌ ಅವರು ನೃತ್ಯ ಸಂಯೋಜನೆಯನ್ನು ಮಾಡಿದ್ದಾರೆ. ಈ ವೇಳೆ ಐಗಿರಿ ನಂದಿನಿ ಹಾಡಿಗೆ ನೃತ್ಯ ಮಾಡಲಾಯಿತು. ಜತೆಗೆ ಶಂಕರ್‌ ನಾಗ್‌ ಅಭಿನಯದ ಗೀತಾ ಸಿನಿಮಾದ “ಸಂತೋಷಕ್ಕೆ ಹಾಡು ಸಂತೋಷಕ್ಕೆ”, ರವಿಚಂದ್ರನ್‌ ಅಭಿನಯದ ಮಲ್ಲ ಸಿನಿಮಾದ “ಕರುನಾಡೇ ಕೈ ಚಾಚಿದೆ ನೋಡೇ..” ಹಾಡುಗಳಿಗೆ ಹೆಜ್ಜೆ ಹಾಕಲಾಯಿತು. ಬಳಿಕ ಕಿಚ್ಚ ಸುದೀಪ್‌ ಅಭಿನಯದ ಪೈಲ್ವಾನ್‌ ಸಿನಿಮಾದ “ಪೈಲ್ವಾನ್‌” ಹಾಡಿನಗೆ ಮಲ್ಲಕಂಭ ಸಾಹಸ ಪ್ರದರ್ಶನವನ್ನು ಮಾಡುವ ಮೂಲಕ ಡ್ಯಾನ್ಸ್‌ ಮಾಡಲಾಯಿತು. ಇದಲ್ಲದೆ, ಶಿವರಾಜ್‌ಕುಮಾರ್‌ ಅಭಿನಯದ ಶ್ರೀ ಆಂಜನೇಯಂ, ಪ್ರಸನ್ನಾಂಜನೇಯಂ ಹಾಗೂ ಪುನೀತ್‌ ರಾಜಕುಮಾರ್‌ ಅಭಿನಯದ ಯುವರತ್ನ ಸಿನಿಮಾದ “ಡಾನ್ಸ್‌ ವಿಥ್‌ ಅಪ್ಪು” ಹಾಡಿಗೂ ಹೆಜ್ಜೆ ಹಾಕಲಾಯಿತು. ಕೊನೆಯಲ್ಲಿ ಡಾ. ರಾಜಕುಮಾರ್‌ ಅಭಿನಯದ “ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು” ಹಾಡು ನೋಡುಗರ ಮನ ಗೆಲ್ಲುವಲ್ಲಿ ಯಶ ಕಂಡಿತು.

ಗಮನ ಸೆಳೆದ ಸಾಹಸ ಪ್ರದರ್ಶನ

ಕೊನೆಯಲ್ಲಿ ಯೋಧರು ಮತ್ತು ಪೊಲೀಸರ ಬೈಕ್‌ ಸಾಹಸಗಳ ಪ್ರದರ್ಶನಗಳು ಸೇರಿದ್ದವರ ಮೈನವಿರೇಳುವಂತೆ ಮಾಡಿತು. ಕೆಲ ಕಾಲ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು, ಗಮನ ಸೆಳೆದವು. ಅಂತಿಮವಾಗಿ ಸುಮಾರು 25 ನಿಮಿಷಗಳ ಕಾಲ ಪಂಜಿನ ಕವಾಯತು ನಡೆಯಿತು. ಈ ಕವಾಯತು ಪ್ರದರ್ಶನದ ಅಷ್ಟೂ ಸಮಯವು ನೋಡುಗರು ಉಸಿರು ಬಿಗಿಹಿಡಿದು ವೀಕ್ಷಣೆ ಮಾಡಿದ್ದು ಕಂಡು ಬಂತು. ಒಂದೊಂದು ರೀತಿಯ ವಿಶಿಷ್ಟ ಸಾಹಸ ಪ್ರದರ್ಶನಗಳಿಗೂ ಜೋರಾದ ಚಪ್ಪಾಳೆ, ಶಿಳ್ಳೆಗಳು ಕೇಳಿಬಂದವು.

ನೂರಾರು ಜನ ಪೊಲೀಸರಿಂದ ಸಾಹಸ ಪ್ರದರ್ಶನ ನಡೆಯಿತು. ಇದೇ ವೇಳೆ ವೆಲ್‌ ಕಮ್‌ ಟು ಮೈಸೂರು ದಸರಾ, ಫೇರ್‌ ವೆಲ್‌ ಟು ದಸರಾ, ಸಿ ಯು ದಸರಾ ಇನ್ 2024 ಎಂಬಿತ್ಯಾದಿ ಸಂದೇಶಗಳು ಕಂಡು ಬಂದವು.

ಇದನ್ನೂ ಓದಿ: Mysore Dasara : ವೈಭವದ ಜಂಬೂ ಸವಾರಿಗೆ ಸಿಎಂ ಚಾಲನೆ; ರಾಜ ಬೀದಿಯಲ್ಲಿ ಚಾಮುಂಡಿ ವಿಲಾಸ

ಜೋಶ್‌ ಹೆಚ್ಚಿಸಿದ ಪೊಲೀಸ್‌ ಬ್ಯಾಂಡ್‌

ಈ ಮಧ್ಯೆ ಪೊಲೀಸ್‌ ಬ್ಯಾಂಡ್‌ನವರು ಪೊಲೀಸ್‌ ಹಾಗೂ ಸೈನಿಕ ಗೀತೆಗಳನ್ನು ಪ್ರಸ್ತುತಿಪಡಿಸಿದರು. “ಸಾರೇ ಜಹಾಸೇ ಅಚ್ಚಾ” ಸೇರಿದಂತೆ ಇನ್ನೂ ಹಲವು ಗೀತೆಯನ್ನು ಪೊಲೀಸ್‌ ಬ್ಯಾಂಡ್‌ನವರು ನುಡಿಸಿ ಗಮನ ಸೆಳೆದರು. ಸೇರಿದ್ದವರಿಗೆಲ್ಲರಿಗೂ ಒಮ್ಮೆ ದೇಶಭಕ್ತಿ ಗೀತೆಯ ಬೀಟ್‌ಗಳು ಜೋಶ್‌ ಅನ್ನು ಹೆಚ್ಚಿಸುತ್ತಿದ್ದವು.

Continue Reading

ಕರ್ನಾಟಕ

Anekal Dasara : ಆನೇಕಲ್‌ನಲ್ಲಿ ಜಂಬೂ ಸವಾರಿಗೆ ಮೆರುಗು ನೀಡಿದ ಕೇರಳದ ಸಾಧು ಆನೆ

Anekal Dasara : ಬೆಂಗಳೂರು ಹೊರವಲಯದ ಆನೇಕಲ್ ಹಾಗೂ ಬನ್ನೇರುಘಟ್ಟದಲ್ಲಿ ವಿಜೃಂಭಣೆಯಿಂದ ಜಂಬೂ ಸವಾರಿ ಜರುಗಿತು. ಮಿನಿ ಮೈಸೂರು ಖ್ಯಾತಿಯ ಆನೇಕಲ್‌ನಲ್ಲಿ ಚೌಡೇಶ್ವರಿ ಜಂಬೂಸವಾರಿಗೆ ಕೇರಳದ ಸಾಧು ಆನೆ ಮೆರಗು ನೀಡಿತು.

VISTARANEWS.COM


on

By

Anekal Dasara 2023
Koo

ಆನೇಕಲ್‌: ನಾಡಹಬ್ಬ ಮೈಸೂರು ದಸರಾ ಮಾದರಿಯಲ್ಲೇ ಆನೇಕಲ್‌ನಲ್ಲೂ (Anekal Dasara) ವಿಜಯದಶಮಿ ದಸರಾ ಉತ್ಸವ ಮತ್ತು ಜಂಬೂ ಸವಾರಿ (Jambu savari) ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು. ಕೇರಳ ಮೂಲದ ಸಾಧು ಆನೆ ಚೌಡೇಶ್ವರಿ ದೇವಿ ಉತ್ಸವ ಮೂರ್ತಿ ಅಂಬಾರಿ ಹೊತ್ತು ಜಂಬೂಸವಾರಿ ಮೂಲಕ ಆನೇಕಲ್ ದಸರಾ ಉತ್ಸವಕ್ಕೆ ಮೆರಗು ನೀಡಿತು. ರಾಜಗಾಂಭೀರ್ಯದಲ್ಲಿ ಗಜರಾಜ ಹೆಜ್ಜೆ ಹಾಕಿದ್ದು ಭಕ್ತ ಸಾಗರ ಅದ್ಧೂರಿ ದಸರಾ ಜಂಬು ಸವಾರಿಯನ್ನು ಕಂಡು ಪುನೀತರಾಗಿದ್ದಾರೆ.

Anekal And bannerughatta  Dasara 2023

ಮೈಸೂರಿನಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿ ಜಂಬೂಸವಾರಿ ನಡೆಸಿದಂತೆ ಆನೇಕಲ್‌ನಲ್ಲೂ ನಾಡಹಬ್ಬ ದಸರಾ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಿದ್ದಾರೆ. ನಗರದ ಆದಿ ದೇವತೆ ಚೌಡೇಶ್ವರಿ ದೇವಿ ಅಂಬಾರಿಯನ್ನು ಹೊತ್ತ ಕೇರಳದ ಸಾಧು ಆನೆ ಸವಾರಿ ಪಟ್ಟಣದ ತಾಲೂಕು ಕಚೇರಿಯಿಂದ ತಿಲಕ್ ವೃತ್ತದ ಚೌಡೇಶ್ವರಿ ದೇವಾಲಯದ ಬಳಿ ಬರುತ್ತಿದ್ದಂತೆ ಜನಸಾಗರ ತುಂಬಿತ್ತು.

Anekal And bannerughatta  Dasara 2023

ದಿವ್ಯ ಜ್ಞಾನನಂದ ಸ್ವಾಮಿ ಹಾಗೂ ಶಾಸಕ ಬಿ.ಶಿವಣ್ಣ ಸೇರಿದಂತೆ ಗಣ್ಯರು ಜಂಬೂಸವಾರಿ ಹೊರಟಿದ್ದ ದೇವಿಗೆ ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ಆನೇಕಲ್ ‌ನಗರದ ಪ್ರಮುಖ ಬೀದಿಗಳಲ್ಲಿ ಜಂಬೂಸವಾರಿ ಗಜಗಾಂಭೀರ್ಯವಾಗಿ ಸಾಗಿತು. ಚೌಡೇಶ್ವರಿ ದೇವಿ ಅಂಬಾರಿ ಹೊತ್ತು ಸಾಗಿದ ಸಾಧು ಆನೆಯನ್ನು ಕಂಡು ಭಕ್ತರು ರೋಮಾಂಚನಗೊಂಡರು.

ಇದನ್ನೂ ಓದಿ: Karnataka Weather : ಮಳೆಯಾಟ ಬಂದ್‌; ಇನ್ನೆರಡು ದಿನ ಕರ್ನಾಟಕ ಸಿಕ್ಕಾಪಟ್ಟೆ Hot

Anekal And bannerughatta  Dasara 2023

ತಮಿಳುನಾಡು, ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಿಂದ ಅಪಾರ ಸಂಖ್ಯೆಯ ಭಕ್ತರು ತಿಲಕ್ ವೃತ್ತದ ಬಳಿ ಚೌಡೇಶ್ವರಿ ದೇವಿ ಅಂಬಾರಿ ದೃಶ್ಯವನ್ನು ಕಣ್ತುಂಬಿಕೊಂಡರು. ಎಂದಿನಂತೆ ತೋಗಟವೀರ ಜನಾಂಗದ ಸದಸ್ಯರು ವಿಜಯದಶಮಿ ಉತ್ಸವ ವಿಜೃಂಭಣೆಯಿಂದ ನೆರವೇರಿಸಿದ್ದರು. ತಾಯಿ ಚೌಡೇಶ್ವರಿ ಸರ್ವರಿಗೂ ಒಳಿತು ಮಾಡಲಿ ಎಂದು ಶಾಸಕ ಬಿ ಶಿವಣ್ಣ ಪ್ರಾರ್ಥಿಸಿದರು.

Anekal And bannerughatta  Dasara 2023

ವಿಶ್ವ ವಿಖ್ಯಾತ ಮೈಸೂರು ದಸರಾ ಮಾದರಿಯಲ್ಲಿಯೇ ಆನೇಕಲ್ ದಸರಾ ನಡೆಯುತ್ತಿದ್ದು, ಮಿನಿ ದಸರಾ ಎಂದೇ ಪ್ರಖ್ಯಾತಿಗಳಿಸುತ್ತಿದೆ. ಕಲಾತಂಡಗಳ ಜತೆಗೆ ಅಂಬಾರಿ ಸಾಗುವ ದೃಶ್ಯ ನೋಡುವುದೇ ಒಂದು ಹಬ್ಬವಾಗಿತ್ತು. ಕಲಾತಂಡಗಳು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ನೆರೆದಿದ್ದ ಜನರನ್ನು ರಂಜಿಸಿದ್ದರು.

Anekal And bannerughatta  Dasara 2023

ಚಂಪಕಧಾಮಸ್ವಾಮಿ ಜಂಬೂ ಸವಾರಿ

ಬನ್ನೇರುಘಟ್ಟದಲ್ಲೂ ಶ್ರೀ ಚಂಪಕಧಾಮಸ್ವಾಮಿ ಜಂಬೂ ಸವಾರಿ ನಡೆದಿದೆ. ದೇವರ ಉತ್ಸವ ಮೂರ್ತಿ ಹೊತ್ತಿದ ಅಂಬಾರಿಗೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಿ ಜಂಬೂ ಸವಾರಿಗೆ ಚಾಲನೆ ನೀಡಿದರು. ಉತ್ಸವ ಮೂರ್ತಿಯನ್ನು ಹೊತ್ತ ಗಜರಾಜ ಬನ್ನೇರುಘಟ್ಟದ ರಾಜಬೀದಿಗಳಲ್ಲಿ ರಾಜಗಾಂಭೀರ್ಯದಿಂದ ಜಾನಪದ ಕಲಾತಂಡಗಳ ಜತೆ ಹೆಜ್ಜೆ ಹಾಕಿತು. ಬೆಂಗಳೂರು, ತಮಿಳುನಾಡು ಸೇರಿದಂತೆ ನಾನಾ ಕಡೆಗಳಿಂದ ಆಗಮಿಸಿರುವ ಭಕ್ತ ಸಾಗರ ಕಣ್ತುಂಬಿಕೊಂಡರು.

Anekal And bannerughatta  Dasara 2023

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading
Advertisement
Rain News
ಕರ್ನಾಟಕ20 mins ago

Rain News: ಪ್ರತ್ಯೇಕ ಮಳೆ ಅವಘಡ; ಸಿಡಿಲು ಬಡಿದು ನವ ವಿವಾಹಿತ ಸಾವು, ಕಾರ್ಮಿಕನ ಸ್ಥಿತಿ ಗಂಭೀರ

ಪ್ರಮುಖ ಸುದ್ದಿ31 mins ago

IPL 2024 : ಮುಂಬೈ ವಿರುದ್ಧ ಕೆಕೆಆರ್​ಗೆ 24 ರನ್​ ಗೆಲುವು; ಪಾಂಡ್ಯಾ ಬಳಗಕ್ಕೆ ಮತ್ತೊಂದು ಆಘಾತ

Nijjar Killing
ವಿದೇಶ33 mins ago

Nijjar Killing: ಖಲಿಸ್ತಾನಿ ಉಗ್ರ ನಿಜ್ಜರ್‌ ಹತ್ಯೆಯ ಆರೋಪಿಗಳನ್ನು ಬಂಧಿಸಿದ ಕೆನಡಾ ಪೊಲೀಸರು; ಯಾರಿವರು?

Rohith Vemula
ದೇಶ46 mins ago

Rohith Vemula: ರೋಹಿತ್‌ ವೇಮುಲ ದಲಿತನಲ್ಲ ಎಂದ ಪೊಲೀಸರು; ಮರು ತನಿಖೆಗೆ ‘ಕೈ’ ಸರ್ಕಾರ ಆದೇಶ!

Rinku Singh
ಪ್ರಮುಖ ಸುದ್ದಿ55 mins ago

Rinku Singh : ಕೊಹ್ಲಿಯ ಬ್ಯಾಟ್​ನಲ್ಲಿ ರಿಂಕು ಚೆನ್ನಾಗಿ ಆಡುತ್ತಿಲ್ಲ; ನೆಟ್ಟಿಗರಿಂದ ಟ್ರೋಲ್​!

honour killing
ವಿಜಯಪುರ1 hour ago

Honor Killing: ಮರ್ಯಾದೆಗಾಗಿ ಗರ್ಭಿಣಿಯನ್ನು ಸುಟ್ಟು ಕೊಂದ ಇಬ್ಬರಿಗೆ ಗಲ್ಲು ಶಿಕ್ಷೆ, 6 ಮಂದಿಗೆ ಜೀವಾವಧಿ‌ ಶಿಕ್ಷೆ

Pakistan
ವಿದೇಶ1 hour ago

ಚೀನಾ ದಯೆಯಿಂದ ಮೊದಲ ಚಂದ್ರಯಾನ ಕೈಗೊಂಡ ಪಾಕಿಸ್ತಾನ; ಆದರೂ ಭಾರತಕ್ಕಿಂತ 16 ವರ್ಷ ಹಿಂದೆ!

T20 World Cup
ಪ್ರಮುಖ ಸುದ್ದಿ1 hour ago

T20 World Cup : ಉನ್ಮುಕ್ತ್​ ಚಾಂದ್​ಗೆ ತೆರೆಯದ ಭಾಗ್ಯದ ಬಾಗಿಲು; ಯುಎಸ್​ ತಂಡದಲ್ಲಿ ಇಲ್ಲ ಚಾನ್ಸ್​!

Health Tips Kannada
ಆರೋಗ್ಯ2 hours ago

Health Tips Kannada : ಉತ್ತಮ ಆರೋಗ್ಯಕ್ಕಾಗಿ ಎಷ್ಟು ಗಂಟೆ ಕುಳಿತುಕೊಳ್ಳಬೇಕು, ನಿಂತುಕೊಳ್ಳಬೇಕು, ಮಲಗಬೇಕು?

Meeting with representatives of various political parties about MLC election in Hosapete
ವಿಜಯನಗರ2 hours ago

Vijayanagara News: ವಿಧಾನ ಪರಿಷತ್ ಪದವೀಧರ ಕ್ಷೇತ್ರದ ಚುನಾವಣೆ; ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Bengaluru Rains
ಮಳೆ8 hours ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ19 hours ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ1 day ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ2 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ4 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20244 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20245 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ5 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20245 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20245 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

ಟ್ರೆಂಡಿಂಗ್‌