ಕನ್ನಡ ಸಾಂಸ್ಕೃತಿಕ ಜಗತ್ತಿಗೆ ಕೈಗಾರಿಕಾ ವಲಯದ ಕೊಡುಗೆ ಅಪಾರ: ಚಿಂತಕ ರಾ.ನಂ. ಚಂದ್ರಶೇಖರ - Vistara News

ಕಲೆ/ಸಾಹಿತ್ಯ

ಕನ್ನಡ ಸಾಂಸ್ಕೃತಿಕ ಜಗತ್ತಿಗೆ ಕೈಗಾರಿಕಾ ವಲಯದ ಕೊಡುಗೆ ಅಪಾರ: ಚಿಂತಕ ರಾ.ನಂ. ಚಂದ್ರಶೇಖರ

ಬೆಂಗಳೂರಿನ ಎಚ್ಎಎಲ್‌ನ ತೇಜಸ್ ಕನ್ನಡ ಸಂಘದ ‘ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆ ಮತ್ತು ಕವಿಗೋಷ್ಠಿಯಲ್ಲಿ ಕನ್ನಡ ಚಿಂತಕ ರಾ. ನಂ. ಚಂದ್ರಶೇಖರ ಮಾತನಾಡಿದರು.

VISTARANEWS.COM


on

ಕನ್ನಡ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಾಡಿನ ಆರ್ಥಿಕ ಪ್ರಗತಿಗೆ ದೊಡ್ಡ ಕೊಡುಗೆ ನೀಡುತ್ತಿರುವ ಕೈಗಾರಿಕಾ ವಲಯವು, ಕನ್ನಡ ಸಾಂಸ್ಕೃತಿಕ ಜಗತ್ತಿಗೆ ನೀಡಿರುವ ಕೊಡುಗೆ ಅಪಾರ. ಹಾಗೆಯೇ ಕನ್ನಡ ಜಾಗೃತಿಗೆ ಕಾರ್ಮಿಕರ ಕೊಡುಗೆ ಸ್ಮರಣೀಯವಾದುದು ಎಂದು ಕನ್ನಡ ಚಿಂತಕ ರಾ.ನಂ. ಚಂದ್ರಶೇಖರ ತಿಳಿಸಿದರು.

ಎಚ್ಎಎಲ್‌ನ ತೇಜಸ್ ಕನ್ನಡ ಸಂಘದ ‘ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆ ಮತ್ತು ಕವಿಗೋಷ್ಠಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಚ್ಎಎಲ್‌ನಲ್ಲಿ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರು ಆಡಳಿತ ಪ್ರಶಿಕ್ಷು ಆಗಿದ್ದರು. ಇಲ್ಲಿ ರಾಷ್ಟ್ರ, ರಾಜ್ಯ ಪ್ರಶಸ್ತಿ ವಿಜೇತ ಸಾಹಿತಿಗಳು, ಕಲಾವಿದರು ಕೆಲಸ ಮಾಡುತ್ತಿದ್ದರು. ಕವಿ ಗೋಷ್ಠಿಯನ್ನು ಕೇಳಿದಾಗ ಪ್ರತಿಭೆಗೆ ಕೊರತೆಯಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದರು.

ಇದನ್ನೂ ಓದಿ | ಚರ್ಮಗಂಟು ರೋಗ ನಿರ್ವಹಣೆಗೆ ₹13 ಕೋಟಿ ಬಿಡುಗಡೆಗೆ ಮುಖ್ಯಮಂತ್ರಿ ಸೂಚನೆ

ಕೈಗಾರಿಕೆಯಲ್ಲಿ ತೊಡಗಿರುವ ಬರಹಗಾರರು, ಸಾಹಿತ್ಯಾಸಕ್ತರು ಸೇರಿ ಕವನ, ಕಥೆ, ಪ್ರಬಂಧಗಳ ಸಂಕಲನಗಳನ್ನು ಪ್ರಕಟಿಸಿ, ಕನ್ನಡ ಸಂಘದ ಮೂಲಕ ಬಿಡುಗಡೆ ಮಾಡುವಂತೆ ಸೂಚಿಸಿದ ಅವರು, ಆಡಳಿತ ವರ್ಗ ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.

ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಸರ್ಕಾರಿ ಕಲಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ, ರಂಗ ವಿಮರ್ಶಕ ಡಾ. ರುದ್ರೇಶ್ ಅದರಂಗಿ, ಕವನ ರಚಿಸುವವರಿಗೆ ಕನ್ನಡ ಕಾವ್ಯ ಪರಂಪರೆಯ ಅರಿವಿರಬೇಕು, ಸಮಾಜದ ಪ್ರಚಲಿತ ಆಗುಹೋಗುಗಳ ಅರಿವು, ಅಧ್ಯಯನಶೀಲತೆ ಇದ್ದರೆ ಉತ್ತಮ ಕವಿತೆಗಳು ಪ್ರಕಟವಾಗುತ್ತವೆ ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಎಂ. ಚಂದ್ರಶೇಖರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ತೇಜಸ್ ವಿಭಾಗದ ಮಾನವ ಸಂಪನ್ಮೂಲ ಇಲಾಖೆಯ ಅಪರ ಮಹಾ ವ್ಯವಸ್ಥಾಪಕ ಮಲ್ಲಿಕಾರ್ಜುನ್ ಅಧ್ಯಕ್ಷತೆ ವಹಿಸಿದ್ದರು. ಜಿ.ಸತ್ಯವತಿ, ಕಾರ್ಖಾನೆಯ ಕಾರ್ಮಿಕ ಸಂಘದ ಎಂ.ಆರ್. ತಾರಾನಾಥ್, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಧಿಕಾರಿ ಮತ್ತು ಕಾರ್ಮಿಕ ಸಂಘದ ಭೀಮಾನಾಯಕ್ ಪಾಲ್ಗೊಂಡಿದ್ದರು.

ಇದನ್ನೂ ಓದಿ | Vande Bharat Express | ಕರ್ನಾಟಕಕ್ಕೆ ಬರಲಿದೆ 130 ಕಿ.ಮೀ. ವೇಗದಲ್ಲಿ ಚಲಿಸುವ ರೈಲು: ದಿನಾಂಕ, ಮಾರ್ಗ ಘೋಷಣೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಬೆಂಗಳೂರು

Art Exhibition : ಜುಲೈ 10ರವರೆಗೆ ಬೆಂಗಳೂರಿನಲ್ಲಿ ಯೂಸುಫ್, ಶಿಬು ಅರಕ್ಕಲ್ ಚಿತ್ರಗಳ ಪ್ರದರ್ಶನ

ಯೂಸುಫ್ ಅರಕ್ಕಲ್ ಮತ್ತು ಅವರ ಮಗ ಶಿಬು Art Exhibition: ಅವರು ಗಂಗಾ ಸರಣಿಯಲ್ಲಿ ಹಲವಾರು ಅಪರೂಪದ ಚಿತ್ರಕಲೆಗಳು ಹಾಗೂ ಛಾಯಾಚಿತ್ರಗಳ ಸಂಗ್ರಹವನ್ನು ಹೊಂದಿದ್ದಾರೆ. ಭಾರತದ ಜನಸಮುದಾಯದ ಆಧ್ಯಾತ್ಮಿಕ ಮೂಲವಾಗಿರುವ ಗಂಗಾನದಿಯ ಉದ್ದಕ್ಕೂ ಸಂಚರಿಸಿರುವ ಅವರು ಅಲ್ಲಿನ ತಾತ್ವಿಕ ಅನ್ವೇಷಣೆಗಳು ಮತ್ತು ವೈಯಕ್ತಿಕ ಸತ್ಯಗಳನ್ನು ತಮ್ಮ ಫೋಟೊಗ್ರಫಿಗಳು ಹಾಗೂ ಚಿತ್ರಕಲೆಗಳ ಮೂಲಕ ಸಂಗ್ರಹಿಸಿದ್ದಾರೆ.

VISTARANEWS.COM


on

Art exhibition
Koo

ಬೆಂಗಳೂರು: ಖ್ಯಾತ ಚಿತ್ರಕಲಾವಿದ ಯೂಸುಫ್​ ಆರಕ್ಕಲ್​ ಚಿತ್ರ ಕಲಾಕೃತಿಗಳು ಹಾಗೂ ಅವರ ಪುತ್ರ ಶಿಬು ಆರಕ್ಕಲ್ ಅವರ ವಿಶೇಷ ಛಾಯಾಚಿತ್ರಗಳ ಸರಣಿಯ ಪ್ರದರ್ಶನವನ್ನು (Art Exhibition) ಸಂದೀಪ್ -ಗೀತಾಂಜಲಿ ಮೈನಿ ಫೌಂಡಶನ್ ಆಯೋಜಿಸಿದೆ. ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯ 7ನೇ ಅಡ್ಡರಸ್ತೆಯಲ್ಲಿರುವ ಫೌಂಡೇಶನ್ ಆವರಣದ ಮೆಜ್ಜಾನೈನ್ ಲೆವೆಲ್​ನ 38 ಮೈನಿ ಸದನ್ ನಲ್ಲಿ ಕಲಾಕೃತಿಗಳು ಹಾಗೂ ಛಾಯಾಚಿತ್ರಗಳು ಪ್ರದರ್ಶನಗೊಳ್ಳಲಿವೆ. ಜೂನ್​ 5ರಂದು ಆರಂಭಗೊಂಡಿರುವ ಈ ಪ್ರದರ್ಶನ ಜುಲೈ 10, 2024ರವರೆಗೆ ನಡೆಯಲಿದೆ.

ಯೂಸುಫ್ ಅರಕ್ಕಲ್ ಮತ್ತು ಅವರ ಮಗ ಶಿಬು ಅವರು ಗಂಗಾ ಸರಣಿಯಲ್ಲಿ ಹಲವಾರು ಅಪರೂಪದ ಚಿತ್ರಕಲೆಗಳು ಹಾಗೂ ಛಾಯಾಚಿತ್ರಗಳ ಸಂಗ್ರಹವನ್ನು ಹೊಂದಿದ್ದಾರೆ. ಭಾರತದ ಜನಸಮುದಾಯದ ಆಧ್ಯಾತ್ಮಿಕ ಮೂಲವಾಗಿರುವ ಗಂಗಾನದಿಯ ಉದ್ದಕ್ಕೂ ಸಂಚರಿಸಿರುವ ಅವರು ಅಲ್ಲಿನ ತಾತ್ವಿಕ ಅನ್ವೇಷಣೆಗಳು ಮತ್ತು ವೈಯಕ್ತಿಕ ಸತ್ಯಗಳನ್ನು ತಮ್ಮ ಫೋಟೊಗ್ರಫಿಗಳು ಹಾಗೂ ಚಿತ್ರಕಲೆಗಳ ಮೂಲಕ ಸಂಗ್ರಹಿಸಿದ್ದಾರೆ. ತಾವು ಸ್ವತಃ ಗಂಗಾ ನದಿಯ ಕುರಿತು ಅಕರ್ಷಿತರಾಗುವ ಜತೆಗೆ ನದಿಗಾಗಿಯೇ ಜೀವನ ಸಮರ್ಪಿಸಿದವರ ಬದುಕನ್ನೂ ಚಿತ್ರಿಸಿದ್ದಾರೆ. ಪ್ರಮುಖವಾಗಿ ನದಿಯಲ್ಲಿ ದೋಣಿ ಹಾಯಿಸುವ ಮಲ್ಲಾ ಎಂಬ ಅಂಬಿಗರ ಜೀವಕ್ಕೆ ಕಲಾತ್ಮಕ ಸ್ಪರ್ಶ ನೀಡಿದ್ದಾರೆ.ಈ ಚಿತ್ರಗಳು ಹಾಗೂ ಕಲಾಕೃತಿಗಳು ಗಂಗಾ ಸರಣಿಯಲ್ಲಿ ಪ್ರದರ್ಶನಗೊಳ್ಳುತ್ತಿವೆ.

ಮಲ್ಲಾ ಎಂದು ಕರೆಯಲ್ಪಡುವ ಗಂಗಾನದಿಯ ಅಂಬಿಗರು, ಈ ಕಲಾ ಪ್ರದರ್ಶನದ ನಿರೂಪಣೆಯ ಅವಿಭಾಜ್ಯ ಭಾಗವಾಗಿದ್ದಾರೆ, ಇದನ್ನು ಶಿಬು ಅರಕ್ಕಲ್ ತನ್ನ ಕ್ಯಾಮೆರಾ ಲೆನ್ಸ್​ ಮೂಲಕ ಅದ್ಭುತವಾಗಿ ಸೆರೆಹಿಡಿದಿದ್ದಾರೆ. ನೂರಾರು ವರ್ಷಗಳಿಂದ ಈ ಸಮುದಾಯವು ತಮ್ಮ ಕಾಯಕವನ್ನು ಪರಂಪರಾಗತವಾಗಿ ವರ್ಗಾಯಿಸಿಕೊಂಡು ಬಂದಿದ್ದಾರೆ. ತಂದೆಯಿದ ಮಗನಿಗೆ ಈ ಕಾಯಕವು ಸಾಗಿದೆ. ಪವಿತ್ರ ನದಿಯುದ್ದಕ್ಕೂ ಜನರನ್ನು ಒಂದು ದಡದಿಂದ ಮತ್ತೊಂಡು ದಡಕ್ಕೆ ಸಾಗಿಸಲು ತಮ್ಮ ಜೀವನ ಮುಡಿಪಾಗಿಟ್ಟಿದ್ದಾರೆ. ಈ ಜನರು ತಮ್ಮ ದೋಣಿಗಳಿಗೆ ಬಹುತೇಕ ಸಖ್ಯ ಹೊಂದಿರುತ್ತಾರೆ ಮತ್ತು ಮರದ ದೋಣಿಗಳ ನಡುವೆಯೇ ತಮ್ಮ ಜೀವನವನ್ನು ಕಳೆಯುತ್ತಾರೆ, ತಮ್ಮೆಲ್ಲ ಲೌಕಿಕ ಅಗತ್ಯಗಳನ್ನು ದೋಣಿಯಲ್ಲಿಯೇ ನಿರ್ವಹಿಸುತ್ತಾರೆ. ಈ ನಿಗೂಢ ನದಿಯ ನಿಜವಾದ ಉಸ್ತುವಾರಿ ತಾವು ಎಂದು ಹೆಮ್ಮೆಪಡುತ್ತಾರೆ. ಮಲ್ಲಾ ಪುರುಷರು ತಮ್ಮ ಕುಟುಂಬಗಳಿಂದ ಪ್ರತ್ಯೇಕಗೊಂಡಿರುತ್ತಾರೆ ಮತ್ತು ತಾವು ಸೇವೆ ಸಲ್ಲಿಸುವ ನದಿಯೊಂದಿಗೆ ಬಲವಾದ ಬಾಂಧವ್ಯ ಹೊಂದಿರುತ್ತಾರೆ. ಎಷ್ಟೆಂದರೇ ಅವರ ಹುಟ್ಟು ದೋಣಿಯಲ್ಲಿ ಮತ್ತು ಅಲ್ಲೇ ಅವರು ಕೊನೆಯುಸಿರೆಳೆಯುತ್ತಾರೆ.

ಇದನ್ನೂ ಓದಿ : Kannada New Movie: ಹೊಸ ಸಿನಿಮಾಗೆ ಕಥೆ ಬರೆಯಿರಿ: 1 ಲಕ್ಷ ರೂ. ಬಹುಮಾನ ಗೆಲ್ಲಿರಿ!

‘ಮಲ್ಲಾ’ ಶೀರ್ಷಿಕೆಯ ಛಾಯಾಚಿತ್ರ ಕಲಾಕೃತಿಗಳ ಸರಣಿಯು ಈ ದೋಣಿಯವರು ಗಂಗಾ ನದಿಯೊಂದಿ ಗೆ ಹೊಂದಿರುವ ನಂಟಿನಿಂದ ಸ್ಫೂರ್ತಿ ಪಡೆದಿದೆ. ಈ ಸರಣಿಯು ಅವರ ಜೀವನದ ಕಟು ವಾಸ್ತವ ಮತ್ತು ಅವರ ಜೀವನದ ತಿಳುವಳಿಕೆಗೆ ಕನ್ನಡಿಯಾಗಿದೆ. ಇದು ಎಂದಿಗೂ ಸಂಪೂರ್ಣವಾಗಿ ಗ್ರಹಿಸಲು ಸಾಧ್ಯವಾಗದ ಸಂಗತಿಗಳನ್ನು ವ್ಯಾಖ್ಯಾನಿಸಲು ಪ್ರಯತ್ನಿಸುವುದಿಲ್ಲ. ಆದರೆ ಅವರ ಸ್ವಯಂ ಅನುಭವಗಳ ರಚನೆಯಾಗಿದೆ. ಈ ಸರಣಿಯ ಮೂಲಕ ಋಷಿಮುನಿಗಳು ಮತ್ತು ಪ್ರಾಚೀನ ನಂಬಿಕೆಯನ್ನೇ ಹೋಲುವ ಭೂಮಿ ಮತ್ತು ನೀರಿನೊಂದಿಗೆ ಈ ಸಮುದಾಯ ಹೊಂದಿರುವ ಆಳ ಸಂಬಂಧವನ್ನು ಸೆರೆಹಿಡಿಯಲಾಗಿದೆ.

ತಮ್ಮ ಪುತ್ರನ ಛಾಯಾಚಿತ್ರಗಳ ಜೊತೆಗೆ ಯೂಸುಫ್ ಅರಕ್ಕಲ್ ಅವರ ಅಪರೂಪದ ಕ್ಯಾನ್ವಾಸ್ ರಚನೆಗಳೂ ಪ್ರದರ್ಶನಗೊಳ್ಳಲಿವೆ. ಇದು ಅವರಿಬ್ಬರ ಕಲಾತ್ಮಕ ಪರಂಪರೆಯ ಸಂಯೋಗವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ.
ಮಾನವನ ಸ್ಥಿತಿಯನ್ನು ಪರಿಶೀಲಿಸುವ ಉತ್ಸಾಹದ ಮತ್ತು ವಿನ್ಯಾಸದ ವರ್ಣಚಿತ್ರಗಳಿಗೆ ಹೆಸರುವಾಸಿಯಾದ ಯೂಸುಫ್ ಅರಕ್ಕಲ್, ತಮ್ಮ ಮಗನ ಮನಸ್ಸಿನಲ್ಲಿ ಸೃಜನಶೀಲತೆಯನ್ನು ಬಿತ್ತುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು . ಛಾಯಾಗ್ರಹಣ ವಾಸ್ತವ ಮತ್ತು ಅಮೂರ್ತ ಕಲ್ಪನೆಯ ಶಿಬು ಅರಕ್ಕಲ್ ಅವರ ತೊಡಗಿಸಿಕೊಳ್ಳುವಿಕೆಯು ಅವರ ತಂದೆಯ ಅಭಿವ್ಯಕ್ತಿ ಕೃತಿಗೆ ಸಂಪೂರ್ಣ ವಿರುದ್ಧವಾಗಿದೆ, ಆದರೂ ಅವರ ಕಾವ್ಯಾತ್ಮಕ ಚಿತ್ರಣದಲ್ಲಿ ಹೋಲಿಕೆ ಇದೆ. .
ಯೂಸುಫ್ ಅರಕ್ಕಲ್ ಅವರ ಪ್ರಭಾವ ಮತ್ತು ಶಿಬು ಅರಕ್ಕಲ್ ಅವರ ಸ್ವಂತ ಕಲಾತ್ಮಕ ವಿಕಸನವನ್ನು ಪ್ರತಿಬಿಂಬಿಸುವುದಕ್ಕಾಗಿ ‘ಗಂಗಾ’ದಂತಹ ಪ್ರದರ್ಶನ ಆಯೋಜಿಸಲಾಗಿದೆ.

ಕಲಾವಿದರ ಕುರಿತು
ಯೂಸುಫ್ ಅರಕ್ಕಲ್ (1945-2016) ಒಬ್ಬ ಭಾರತೀಯ ಪ್ರಖ್ಯಾತ ಕಲಾವಿದ, ಅಭಿವ್ಯಕ್ತಿವಾದದ ಚಳವಳಿಗೆ ನೀಡಿದ ಅಮೋಘ ಕೊಡುಗೆಗಳಿಗಾಗಿಯೇ ಸ್ಮರಣೀಯರು. ಅವರ ಪ್ರೇರಣಾದಾಯ ಮತ್ತು ಶಕ್ತಿಯುತ ಕಲಾಕೃತಿಗಳು ಮಾನವ ಭಾವನೆಗಳ ಆಳವನ್ನು ಬಿಂಬಿಸುತ್ತದೆ. ಮಾನವ ಸ್ಥಿತಿಯ ಸಂಕೀರ್ಣತೆಗಳನ್ನು ತೀವ್ರತೆಯೊಂದಿಗೆ ಚಿತ್ರಿಸಿದ ಕಲಾವಿದರಾಗಿದ್ದಾರೆ.

ಶಿಬು ಅರಕ್ಕಲ್ ಪ್ರಪಂಚದಾದ್ಯಂತದ ಶ್ರೇಷ್ಠ ವಾಸ್ತುಶಿಲ್ಪದೊಂದಿಗೆ ವ್ಯವಹರಿಸುವಾಗ ಶಕ್ತಿಯಿಂದ ಬಲಕ್ಕೆ ಹೋಗಿದ್ದಾರೆ ಮತ್ತು ನಮ್ಮ ದೈನಂದಿನ ಜೀವನದಲ್ಲಿ ಗಮನಕ್ಕೆ ಬಾರದ ಸಣ್ಣ ವಿಷಯಗಳಿಗೆ ಹೋಗಿದ್ದಾರೆ ಮತ್ತು ಈ ಪ್ರಕ್ರಿಯೆಯಲ್ಲಿ ಉದ್ದೇಶಪೂರ್ವಕವಾಗಿ ಬಹಳ ವಿಭಿನ್ನ ಮತ್ತು ಮೂಲ ಶೈಲಿಯನ್ನು ರಚಿಸಿದ್ದಾರೆ. ದಾರಿಯುದ್ದಕ್ಕೂ ತಮ್ಮ ಕಲೆಗೆ ನಿಷ್ಠರಾಗಿದ್ದ ಅವರು ಹಲವಾರು ನಿಷ್ಠಾವಂತ ಸಂಗ್ರಾಹಕರನ್ನು ಗಳಿಸಿದ್ದಲ್ಲದೆ, ಭಾರತ ಮತ್ತು ವಿದೇಶಗಳಲ್ಲಿ ಮನ್ನಣೆಯನ್ನೂ ಗಳಿಸಿದ್ದಾರೆ. ರೊಮೇನಿಯಾದ ಅರಾದ್ ಬಿನಾಲೆ 2005 ಮತ್ತು ಇಟಲಿಯ ‘ವೆಂಟಿಪೆರ್ಟ್ರೆಂಟಾ ’04’ನಲ್ಲಿ 2007 ರಲ್ಲಿ ಲಂಡನ್ನ ರಾಯಲ್ ಕಾಲೇಜ್ ಆಫ್ ಆರ್ಟ್ ಮತ್ತು 2004 ರಲ್ಲಿ ಲಕ್ನೋದ ನ್ಯಾಷನಲ್ ಎಕ್ಸಿಬಿಷನ್ ಆಫ್ ಆರ್ಟ್ನಲ್ಲಿ ಪ್ರದರ್ಶನ ನೀಡಿದ್ದಾರೆ.

Continue Reading

ಬೆಂಗಳೂರು

Book Release: ಬೆಂಗಳೂರಿನಲ್ಲಿ ಜೂ. 5ರಂದು ಗ್ರಂಥ ಲೋಕಾರ್ಪಣೆ, ಪ್ರಶಸ್ತಿ ಪ್ರದಾನ

Book Release: ಕಲಬುರಗಿಯ ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಬೆಂಗಳೂರಿನ ಉದಯ ಪ್ರಕಾಶನದ ಸಹಯೋಗದಲ್ಲಿ ಬೆಂಗಳೂರು ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜೇಂದ್ರ ಪರಿಷನ್ಮಂದಿರದಲ್ಲಿ ಇದೇ ಜೂ. 6 ರಂದು ಬುಧವಾರ ಸಂಜೆ 5.30ಕ್ಕೆ ಜ್ಞಾನಸಿಂಧು ಚಿದಾನಂದಾವಧೂತರ ವೇದಾಂತ ಕಾವ್ಯ (ಸಂ. ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ) ಗ್ರಂಥ ಲೋಕಾರ್ಪಣೆ ಮತ್ತು ಪ್ರೊ. ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಏರ್ಪಡಿಸಲಾಗಿದೆ.

VISTARANEWS.COM


on

Grantha Lokarpane and award ceremony on June 5 in Bengaluru
Koo

ಬೆಂಗಳೂರು: ಕಲಬುರಗಿಯ ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಬೆಂಗಳೂರಿನ ಉದಯ ಪ್ರಕಾಶನದ ಸಹಯೋಗದಲ್ಲಿ ಬೆಂಗಳೂರು ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜೇಂದ್ರ ಪರಿಷನ್ಮಂದಿರದಲ್ಲಿ ಇದೇ ಜೂ. 5ರಂದು ಬುಧವಾರ ಸಂಜೆ 5.30ಕ್ಕೆ ಜ್ಞಾನಸಿಂಧು ಚಿದಾನಂದಾವಧೂತರ ವೇದಾಂತ ಕಾವ್ಯ (ಸಂ.: ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ) ಗ್ರಂಥ ಲೋಕಾರ್ಪಣೆ (Book Release) ಮತ್ತು ಪ್ರೊ. ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಧಾರವಾಡದ ಚೈತನ್ಯಾಶ್ರಮದ ಶ್ರೀ ದತ್ತಾವಧೂತ ಗುರುಗಳು ಕಾರ್ಯಕ್ರಮದಲ್ಲಿ ಸಾನ್ನಿಧ್ಯ ಮತ್ತು ಗ್ರಂಥ ಲೋಕಾರ್ಪಣೆ ಮಾಡುವರು. ಬೆಂಗಳೂರಿನ ಕರ್ನಾಟಕ ಗಾಂಧಿಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ. ವೂಡೇ ಪಿ. ಕೃಷ್ಣ ಪ್ರಶಸ್ತಿ ಪ್ರದಾನ ಮಾಡುವರು. ಹುಬ್ಬಳ್ಳಿ ಸಿದ್ಧಾರೂಢ ಆಶ್ರಮದ ಟ್ರಸ್ಟಿ ಶಾಮಾನಂದ ಪೂಜೇರಿ ಗ್ರಂಥ ಪರಿಚಯ ಮಾಡುವರು.

ಇದನ್ನೂ ಓದಿ: Samsung: ಸ್ಯಾಮ್‌ಸಂಗ್‌ನ ʼಬಿಗ್‌ ಟಿವಿ ಡೇಸ್‌ʼ ಸೇಲ್‌; ದೊಡ್ಡ ಟಿವಿಗಳ ಮೇಲೆ ಅತ್ಯಾಕರ್ಷಕ ಆಫರ್‌!

ಬೆಂಗಳೂರಿನ ಕೃಷ್ಣರಾಜಪುರದಲ್ಲಿರುವ ಸಿಲಿಕಾನ್‌ ಸಿಟಿ ಕಾಲೇಜಿನ ಸಹಪ್ರಾಧ್ಯಾಪಕ ಡಾ. ಎಚ್‌.ಎಸ್‌. ಗೋವರ್ಧನ ಅವರು ಪ್ರೊ. ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ ಸ್ವೀಕರಿಸುವರು. ಬೆಂಗಳೂರಿನ ವರ್ತೂರಿನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಸಿ.ಚಂದ್ರಪ್ಪ, ಪ್ರೊ. ಮಲ್ಲೇಪುರಂ ಪುಸ್ತಕ ಬಹುಮಾನ (ದಿ. ಬಸಲಿಂಗಪ್ಪ ಮಲ್ಕಪ್ಪ ಕಟ್ಟಿ ಸ್ಮರಣಾರ್ಥ) ಸ್ವೀಕರಿಸುವರು.

ಇದನ್ನೂ ಓದಿ: Hornbill Bird: ಗಂಗಾವತಿಯಲ್ಲಿ ‘ಹಾರ್ನ್‌ಬಿಲ್’ ಪಕ್ಷಿ ಪ್ರತ್ಯಕ್ಷ

ಮುಖ್ಯ ಅತಿಥಿಯಾಗಿ ಬೆಂಗಳೂರಿನ ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷ ಪ್ರಕಾಶ್‌ ಕಂಬತ್ತಳ್ಳಿ ಪಾಲ್ಗೊಳ್ಳುವರು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಗ್ರಂಥ ಸಂಪಾದಕರ ನುಡಿಗಳನ್ನಾಡಲಿದ್ದಾರೆ.

Continue Reading

ಅಂಕಣ

ನನ್ನ ದೇಶ ನನ್ನ ದನಿ ಅಂಕಣ: ಬ್ರಿಟಿಷರು ಬರುವ ಮೊದಲು ರಸ್ತೆಗಳೇ ಇರಲಿಲ್ಲವಾದರೆ, ಕೃಷ್ಣದೇವರಾಯನ ಭಾರಿ ಸೈನ್ಯ ಆಕಾಶದಲ್ಲಿ ಹಾರಾಡುತ್ತಿತ್ತೇ?

ನನ್ನ ದೇಶ ನನ್ನ ದನಿ ಅಂಕಣ: ಶತಮಾನದ ಹಿಂದೆಯೇ, ಬ್ರಿಟಿಷರು ಆಳುತ್ತಿದ್ದಾಗಲೇ, ಬ್ರಿಟಿಷರ ಬಗೆಗೆ ಬಾಮನದಾಸರಂತಹವರು ಬರೆದಿಟ್ಟುಹೋಗಿದ್ದರೂ ನಮ್ಮ ಕನ್ನಡದ ನವ್ಯರಿಗೆ ರೋಮಿಲ್ಲಾ ಥಾಪರ್, ಇರ್ಫಾನ್ ಹಬೀಬ್, ಡಿ.ಎನ್.ಝಾ ರಂತಹ ಸುಳ್ಳು-ಇತಿಹಾಸಕಾರರ ಪುಸ್ತಕಗಳು ಮಾತ್ರವೇ ಪಥ್ಯವಾದವು. ಈಗಲೂ ವಿವಿಧ ಕ್ಷೇತ್ರಗಳಲ್ಲಿರುವ ಅವರ ಶಿಷ್ಯಕೋಟಿ ಇನ್ನೂ ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ ಬರೆಯುತ್ತಾರೆ, ಮಾತನಾಡುತ್ತಾರೆ, ವಾದಿಸುತ್ತಾರೆ.

VISTARANEWS.COM


on

ನನ್ನ ದೇಶ ನನ್ನ ದನಿ baman das basu
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

ajjampura manjunath ನನ್ನ ದೇಶ ನನ್ನ ದನಿ

ನನ್ನ ದೇಶ ನನ್ನ ದನಿ ಅಂಕಣ: “ವಸಾಹತುಶಾಹಿ (colonialism) ನಿರ್ಗಮನದ ಅನಂತರವೂ ಒಬ್ಬ ಅದರ ಪರವಾಗಿಯೇ ಮಾತನಾಡುತ್ತಾನೆ, ಎಂದರೆ ವಸಾಹತುಶಾಹಿಯು ತುಂಬ ಪರಿಣಾಮಕಾರಿಯಾಗಿಯೇ ಬೇರೂರಿದೆ ಎಂದರ್ಥ”.

ಅನೇಕ ವರ್ಷಗಳಿಂದ ಈ ಚಿಂತನೆ, ಈ ಮಾತು, ಈ ಸಂಗತಿ ನನ್ನನ್ನು ಕಾಡುತ್ತಲೇ ಇದೆ. ನಿಜ. ನಮ್ಮ ಮೇಲಾದ ಆಕ್ರಮಣಗಳು ಬಹು-ಮುಖೀ. ನಾವು ಶತಾಯಗತಾಯ ಯುದ್ಧಗಳನ್ನು (wars) ಸೋಲಬಾರದು. ಸೋತರೆ ಪ್ರಣಶ್ಯತಿ. ಅಬ್ರಹಾಮಿಕ್ (abrahamic) ಮತಗಳ ವಿನಾಶಕಾರೀ ಆಕ್ರಮಣಗಳನ್ನು, ಧ್ವಂಸ-ವಿಧ್ವಂಸಗಳನ್ನು ಅಧ್ಯಯನ ಮಾಡಿದಾಗ ಮತ್ತು ಇವುಗಳಿಗಿಂತಲೂ ನಮ್ಮಂತಹ ಗುಲಾಮದೇಶಗಳ ಜನರ ಮಾನಸಿಕತೆ – ಅಭಿಪ್ರಾಯಗಳ ಮೇಲಾದ ಭಯಾನಕ ದುಷ್ಪರಿಣಾಮಗಳನ್ನು ನೋಡುವಾಗ, ಹೌದು, ನಾವು ಶತ್ರುಗಳನ್ನು (enemies) ಯಾವ ಕಾರಣಕ್ಕೂ ಔದಾರ್ಯದಿಂದ ಕಾಣಬಾರದಿತ್ತು. ಅವರ “ಭಾಷೆಯಲ್ಲಿಯೇ” ನಾವೂ ಉತ್ತರ ನೀಡಬೇಕಿತ್ತು, ಎನಿಸುತ್ತದೆ. ಶ್ರೀಕೃಷ್ಣನಂತೆ, (SriKrishna) ಆಚಾರ್ಯ ಚಾಣಕ್ಯರಂತೆ (Chanakya) ಸಂಪೂರ್ಣ ಶತ್ರುನಾಶವೇ ನಮ್ಮ ಕಾರ್ಯತಂತ್ರವೂ ಆಗಬೇಕಿತ್ತು, ಅನಿಸುತ್ತದೆ. ಬ್ರಿಟಿಷರು (British) ಮತ್ತು ಅವರ “ಪ್ರೀತಿಪಾತ್ರರು” ಬರೆಸಿರುವ – ಬರೆದಿಟ್ಟಿರುವ ಇತಿಹಾಸ ಪುಸ್ತಕಗಳನ್ನು ನೋಡಿದರೆ, ಇಡೀ ದಕ್ಷಿಣ ಭಾರತವನ್ನು ಈಗಲೂ ನಾಶ ಮಾಡುತ್ತಲೇ ಇರುವ ಅವೈಜ್ಞಾನಿಕವಾದ ಆರ್ಯ – ದ್ರಾವಿಡ (Arya Dravida) ಪೊಳ್ಳು ಸಿದ್ಧಾಂತದ ಪರಿಣಾಮವನ್ನು ನೋಡಿದರೆ ಗಾಬರಿಯಾಗುತ್ತದೆ. ನೋಡಿ, ನಮ್ಮ ದೇಶದ ಶಿಕ್ಷಣ, ಕೃಷಿ, ಉದ್ಯಮಗಳನ್ನು ನಾಶ ಮಾಡಿದ ಬ್ರಿಟಿಷರು, ಬಹಳಷ್ಟು ಭಾರತೀಯರ ದೃಷ್ಟಿಯಲ್ಲಿ ಇಂದಿಗೂ ಆರಾಧ್ಯದೈವಗಳಾಗಿದ್ದಾರೆ, ಉದ್ಧಾರಕರಾಗಿದ್ದಾರೆ! ವಸಾಹತುಶಾಹಿಯ ಅಧ್ಯಾಯ ಮುಗಿದಿದೆ, ನಾವೊಂದು ಸ್ವತಂತ್ರ ರಾಷ್ಟ್ರ, ಎಂದು ನಾವು ಎಷ್ಟೆಷ್ಟು ಬಾರಿ ಹೇಳಿಕೊಂಡರೂ, ವಸಾಹತುಶಾಹಿಯ ಮಾನಸಿಕತೆ – ಅವರ ಬಗೆಗಿನ ಆರಾಧನೆಗಳು ನಮ್ಮೊಳಗೆ ಇದ್ದರೆ, ನಾವಿನ್ನೂ ಗುಲಾಮರಾಗಿಯೇ ಮುಂದುವರಿದಿದ್ದೇವೆ, ಎನಿಸುವುದಿಲ್ಲವೇ?

ಇತಿಹಾಸಕಾರ ಬಾಮನ (ವಾಮನ) ದಾಸ ಬಸು (Baman Das Basu) ಅವರ “ಹಿಸ್ಟರಿ ಆಫ್ ಎಜುಕೇಷನ್ ಇನ್ ಇಂಡಿಯಾ ಅಂಡರ್ ದಿ ರೂಲ್ ಆಫ್ ಈಸ್ಟ್ ಇಂಡಿಯಾ ಕಂಪನಿ” (ಪ್ರಕಟಣೆ 1922) ಕೃತಿಯ ಕೆಲವು ಸಾಲುಗಳನ್ನು ಗಮನಿಸುವಾಗ, ಸಹಜವಾಗಿಯೇ ಕನ್ನಡದ ನಮ್ಮ ನವ್ಯ ಸಾಹಿತಿಗಳ ಮಾತು – ಭಾಷಣಗಳೇ ನೆನಪಾಗುತ್ತವೆ. ನಾಲ್ಕೈದು ದಶಕಗಳ ಹಿಂದೆ ನಮ್ಮಂತಹವರ ಮೇಲೆ ತುಂಬಾ ಪ್ರಭಾವ ಬೀರಿದವರು ಈ ನವ್ಯರು. Of Course, ಅವರೆಲ್ಲಾ ತುಂಬ ಚೆನ್ನಾಗಿ ಮಾತನಾಡುತ್ತಿದ್ದರು, ಆಕರ್ಷಕವಾದ ಹೊಸದೊಂದು ಭಾಷೆಯಲ್ಲಿ ಬರೆಯುತ್ತಿದ್ದರು. ಭಾರತೀಯ ಸಾಹಿತ್ಯದ ಮೇಲೆ, ಶಿಕ್ಷಣ – ಜನಜೀವನ – ಸಾಮಾಜಿಕ ವ್ಯವಸ್ಥೆಗಳ ಮೇಲೆ, ವಸಾಹತುಶಾಹಿಯ ಪ್ರಭಾವದ ಬಗೆಗೆ ಈ ನವ್ಯರ ಮಾತುಗಳನ್ನು ಕೇಳಿ ನಾನು ಬೆರಗಾದುದುಂಟು. ತಮ್ಮ ಮಾತಿನ ಪ್ರತಿ ಎರಡು ವಾಕ್ಯಗಳಿಗೊಮ್ಮೆ ಭಾರತದ, ಮುಖ್ಯವಾಗಿ ಹಿಂದೂಗಳ ಮೂಢನಂಬಿಕೆಗಳ ಬಗೆಗೆ, ಅಸ್ಪೃಶ್ಯತೆ – ಜಾತಿವ್ಯವಸ್ಥೆ – ಮುಂತಾದವುಗಳ ಬಗೆಗೆ ತಪ್ಪದೇ ಪ್ರಹಾರ ಮಾಡುತ್ತಿದ್ದರು. ವಸಾಹತುಶಾಹಿ ಬಂದುದೇ ನಮ್ಮ ವಿಮೋಚನೆಗೆ ಎಂದು ಪರೋಕ್ಷವಾಗಿ ಹೇಳುತ್ತಿದ್ದರು. ಈ ದೇಶದಲ್ಲಿ ಹೆಣ್ಣುಮಕ್ಕಳಿಗೆ, ಶೂದ್ರರಿಗೆ, ಅಸ್ಪೃಶ್ಯರಿಗೆ ಕಳೆದ ಐದು ಸಾವಿರ ವರ್ಷಗಳಿಂದ ವಿದ್ಯಾಭ್ಯಾಸಕ್ಕೆ ಅವಕಾಶವಿರಲಿಲ್ಲ, ಎಂದು ರೋದಿಸುತ್ತಿದ್ದರು. ಬ್ರಿಟಿಷರ ಪ್ರೀತಿಪಾತ್ರರೇ ಬರೆಸಿದ ಇತಿಹಾಸದ ಪಠ್ಯಪುಸ್ತಕಗಳಲ್ಲಿ ಯೂರೋಪಿಯನ್ನರು ಇಲ್ಲಿಗೆ ಬಂದುದೇ ವ್ಯಾಪಾರದ ಹೆಸರಿನಲ್ಲಿ ಲೂಟಿ ಮಾಡಲು – ವಸಾಹತುಗಳನ್ನು ಸ್ಥಾಪಿಸಲು ಎಂದೆಲ್ಲಾ ಓದಿದವರಿಗೆ, ಈ ನವ್ಯರ ಮಾತುಗಳು ಗೊಂದಲವನ್ನುಂಟುಮಾಡುತ್ತಿದ್ದವು, ನಮಗೆಲ್ಲಾ ಅಯೋಮಯವಾಗುತ್ತಿತ್ತು. “ಈ ನವ್ಯ ಸಾಹಿತಿಗಳೆಲ್ಲಾ ವಸಾಹತುಶಾಹಿಯ ಪರವಾಗಿಯೇ ಮಾತನಾಡುತ್ತಿದ್ದಾರಲ್ಲಾ” ಎನಿಸಿ ವಿಷಾದವೂ ಉಂಟಾಗುತ್ತಿತ್ತು. ಭಾರತದಲ್ಲಿ ಆಸ್ಪತ್ರೆಗಳನ್ನು, ಶಾಲೆಗಳನ್ನು ಪ್ರಾರಂಭ ಮಾಡಿದವರೇ ಬ್ರಿಟಿಷರು. ಅವರಿಂದಾಗಿಯೇ ರೈಲು ವ್ಯವಸ್ಥೆ ಬಂದಿತು. ಆಧುನಿಕತೆ – ವಿಜ್ಞಾನ ಅವರಿಂದಲೇ ಬಂದಿತು…..ಇತ್ಯಾದಿ ಇತ್ಯಾದಿ……

ಭಾರತದಲ್ಲಿ ರಸ್ತೆಗಳನ್ನು ಮಾಡಿಸಿದವರೂ ಬ್ರಿಟಿಷರೇ, ಎಂದು ಈಗಲೂ ಕೆಲವರು ಉಗ್ಘಡಿಸುವುದುಂಟು. “ಹಾಗಿದ್ದಲ್ಲಿ, ಸ್ವಾಮೀ, ಬ್ರಿಟಿಷರಿಗಿಂತ ಮೊದಲು ಇದ್ದ ಕೃಷ್ಣದೇವರಾಯನ ಐದು ಲಕ್ಷ ಸೈನಿಕರು, 1200 ಆನೆಗಳು, 60,000 ಕುದುರೆಗಳು ಏನು ಆಕಾಶದಲ್ಲಿ ಓಡಾಡುತ್ತಿದ್ದವೇ” ಎಂದು ಕೇಳಿದರೆ ಉತ್ತರಿಸುವುದಿಲ್ಲ.

ಈಗ ಹದಿನಾಲ್ಕು ವರ್ಷಗಳ ಹಿಂದೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರೊಬ್ಬರು, ತಮ್ಮ ಮಾತುಗಳ ಆರಂಭದಲ್ಲಿಯೇ “ಬ್ರಿಟಿಷರು ನಮ್ಮ ದೇಶಕ್ಕೆ ಬರದೇಹೋಗಿದ್ದರೆ, ನಾವೆಲ್ಲಾ ಇನ್ನೂ ಅಂಧಕಾರದಲ್ಲಿ ಇರುತ್ತಿದ್ದೆವು” ಎಂದು ಹೇಳಿ ಆಘಾತವನ್ನೇ ಉಂಟುಮಾಡಿದ್ದರು.

ಬಾಮನದಾಸರು ದಾಖಲಿಸಿರುವ ಕೆಲವು ಅಂಶಗಳು ಗಮನಿಸುವಂತಹವು. ಇದು ನೂರು ವರ್ಷಗಳ ಹಿಂದಿನ ಗ್ರಂಥ ಮತ್ತು ಬ್ರಿಟಿಷರು ಆಳುತ್ತಿದ್ದಾಗಲೇ ಪ್ರಕಟವಾದ ಗ್ರಂಥ ಎನ್ನುವುದನ್ನು ನಾವು ಮರೆಯುವಂತಿಲ್ಲ.

ಭಾರತಕ್ಕೆ ಸಮುದ್ರ ಮಾರ್ಗದಲ್ಲಿ ಬರಲು ಧಾವಿಸಲು, ಯೂರೋಪಿಯನ್ನರ ಮಧ್ಯೆ 15ನೆಯ ಶತಮಾನದಿಂದಲೇ ಸ್ಪರ್ಧೆ – ಯುದ್ಧ ನಡೆಯುತ್ತಿತ್ತು. ಪೋರ್ತುಗೀಸರನ್ನು, ಡಚ್ಚರನ್ನು, ಫ್ರೆಂಚರನ್ನು ಬಗ್ಗುಬಡಿದು ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯು ಭಾರತದಲ್ಲಿ ತನ್ನ ಪಾರಮ್ಯವನ್ನು ಸಾಧಿಸಿತು. ಭಾರತೀಯರ ಶಿಕ್ಷಣಕ್ಕೆ ಸಂಬಂಧಿಸಿದಂತೆ, ಬ್ರಿಟಿಷರೇನೂ ತಲೆ ಕೆಡಿಸಿಕೊಂಡಿರಲಿಲ್ಲ. ಇಲ್ಲಿನ ರಾಜರ – ಸುಲ್ತಾನರ ನಡುವೆ ರಾಜಕೀಯ ಮಾಡುತ್ತಾ ತಮ್ಮ ಲೂಟಿಯಲ್ಲಿ, ವ್ಯಾಪಾರದಲ್ಲಿ ಗರಿಷ್ಠ ಲಾಭ ಗಳಿಸುವಲ್ಲಿ ನಿರತರಾಗಿದ್ದರು. ಕೆಲಕಾಲಾನಂತರ ಭಾರತದ ಸ್ಥಳೀಯರಿಗೆ ಇಂಗ್ಲಿಷ್ ಶಿಕ್ಷಣ ನೀಡದಿದ್ದರೆ ತಾವು ಬಹಳ ಕಾಲ ವಸಾಹತುವನ್ನು ನಿಭಾಯಿಸಲು ಸಾಧ್ಯವಿಲ್ಲ, ಎಂಬುದು ಅವರಿಗೆ ಅರಿವಾಯಿತು. 18ನೆಯ ಶತಮಾನದ ಕೊನೆಯ ಹೊತ್ತಿಗೆ ಹಿಂದುಗಳಿಗೆ ಮತ್ತು ಮುಸ್ಲಿಮರಿಗೆ, ಕಾಶಿ ಮತ್ತು ಕೊಲ್ಕತ್ತಾಗಳಲ್ಲಿ ಸಂಸ್ಕೃತದ ಮತ್ತು ಇಸ್ಲಾಮೀ ಶಿಕ್ಷಣದ ಕಾಲೇಜುಗಳನ್ನು ಸ್ಥಾಪಿಸಿದರು. ತಮ್ಮ ಆಡಳಿತಾತ್ಮಕ ಉದ್ದೇಶಕ್ಕಾಗಿ ಈ ಕಾಲೇಜುಗಳನ್ನು ಸ್ಥಾಪಿಸಿದರೇ ವಿನಃ, ಸ್ಥಳೀಯರಿಗೆ ವಿದ್ಯೆ ಕಲಿಸುವ ಸದುದ್ದೇಶವಿರಲಿಲ್ಲ.

ಭಾರತದ ನೂರೆಂಟು ಭಾಷೆಗಳನ್ನು ತಾವು ಕಲಿತು ಆಡಳಿತ ಮಾಡುವುದರ ಬದಲಿಗೆ, ಇಲ್ಲಿನವರಿಗೇ ಇಂಗ್ಲಿಷ್ ಕಲಿಸಿಬಿಡುವುದು ಅವರಿಗೆ ಲಾಭದಾಯಕವಾಗಿತ್ತು.

ಇದೇ ಬ್ರಿಟಿಷರೇ, ತಮ್ಮ ಆಳ್ವಿಕೆಯಲ್ಲಿ, ಅಮೆರಿಕೆಯಲ್ಲಿ “ಶಿಕ್ಷಣದ ಉದ್ದೇಶಕ್ಕಾಗಿ ಕಪ್ಪು ಗುಲಾಮರನ್ನು ಒಂದೆಡೆ ಸೇರಿಸುವುದು ಕಾನೂನಿಗೆ ವಿರುದ್ಧವಾಗುತ್ತದೆ. ಉಲ್ಲಂಘಿಸಿದವರಿಗೆ ಉಗ್ರ ಶಿಕ್ಷೆ ನೀಡಲಾಗುತ್ತದೆ” ಎಂದು ಕಾನೂನು ಮಾಡಿದ್ದರು. ಇದು ಬ್ರಿಟಿಷ್ ಧೂರ್ತರ ನಿಜಸ್ವರೂಪ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಚೀನಾ ದೇಶದ ಪ್ರಾಚೀನ ದೊರೆಗಳು ನಮಗೆ ಪ್ರೇರಣೆ ನೀಡಲಿ

ನಮ್ಮ ದೇಶಕ್ಕೆ ಸಂಬಂಧಿಸಿದಂತೆ, ಮೆಕಾಲೆಯ ಶಿಫಾರಸ್ಸುಗಳೇನಿದ್ದವು, ಅವನ ಉದ್ದೇಶವೇನಿತ್ತು, ಇತ್ಯಾದಿ ನಮಗೆಲ್ಲ ಗೊತ್ತೇ ಇದೆ. ಬಾಮನದಾಸರು ತಮ್ಮ ಕೃತಿಯಲ್ಲಿ, ಮೆಕಾಲೆಯ ಬಂಧು ಚಾರ್ಲ್ಸ್ ಟ್ರೆವೆಲ್ಯಾನ್ ಎಂಬವನು, ಬ್ರಿಟಿಷ್ ಸಂಸತ್ತಿನ ಸಮಿತಿಯ ಮುಂದೆ ನೀಡಿದ ಹೇಳಿಕೆಯನ್ನೂ ಉಲ್ಲೇಖಿಸುತ್ತಾರೆ. “ಭಾರತದಲ್ಲಿರುವ ಹಿಂದೂಗಳು ಮತ್ತು ಮುಸ್ಲಿಮರು, ಬ್ರಿಟಿಷರನ್ನು ತಮ್ಮ ದೇಶವನ್ನು ವಶಪಡಿಸಿಕೊಂಡ ವಿದೇಶೀ ಶತ್ರುಗಳು ಎಂದೇ ಭಾವಿಸುತ್ತಾರೆ. ಐರೋಪ್ಯ ಶಿಕ್ಷಣವನ್ನು ನೀಡಿದ ಮೇಲೆ, ಅವರು ತಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡುವುದನ್ನೇ ಬಿಟ್ಟುಬಿಡುತ್ತಾರೆ. ಬ್ರಿಟಿಷರನ್ನು ತಮ್ಮ ಶತ್ರುಗಳು ಮತ್ತು ತಮ್ಮ ದೇಶವನ್ನು ಆಕ್ರಮಿಸಿಕೊಂಡವರು ಎಂದು ಭಾವಿಸುವುದನ್ನು ಮರೆತು, ತಮ್ಮ ಸ್ನೇಹಿತರಂತೆ – ಪೋಷಕರಂತೆ ಕಾಣುತ್ತಾರೆ ” ಎಂದಿದ್ದ ಈ ಚಾರ್ಲ್ಸ್ ಟ್ರೆವೆಲ್ಯಾನ್.

ಶತಮಾನದ ಹಿಂದೆಯೇ, ಬ್ರಿಟಿಷರು ಆಳುತ್ತಿದ್ದಾಗಲೇ, ಬ್ರಿಟಿಷರ ಬಗೆಗೆ ಬಾಮನದಾಸರಂತಹವರು ಬರೆದಿಟ್ಟುಹೋಗಿದ್ದರೂ ನಮ್ಮ ಕನ್ನಡದ ನವ್ಯರಿಗೆ ರೋಮಿಲ್ಲಾ ಥಾಪರ್, ಇರ್ಫಾನ್ ಹಬೀಬ್, ಡಿ.ಎನ್.ಝಾ ರಂತಹ ಸುಳ್ಳು-ಇತಿಹಾಸಕಾರರ ಪುಸ್ತಕಗಳು ಮಾತ್ರವೇ ಪಥ್ಯವಾದವು. ಬಹಳ ಜನ ಕೊನೆಯವರೆಗೆ ಭಾರತ-ವಿರೋಧಿಗಳಾಗಿಯೇ ಇದ್ದುಬಿಟ್ಟರು. ಧರ್ಮಪಾಲ್, ಅರುಣ್ ಶೌರಿ, ಸೀತಾರಾಮ ಗೋಯಲ್, ರಾಮಸ್ವರೂಪ್ ಮೊದಲಾದವರ ಸಂಶೋಧನೆ – ವಿಶ್ಲೇಷಣೆಗಳನ್ನು ಓದುವ, ಪರಾಮರ್ಶಿಸುವ ಗೊಡವೆಗೆ ಒಬ್ಬರೂ ಹೋಗಲಿಲ್ಲ. ದುರಂತವೆಂದರೆ, ಈಗಲೂ ವಿವಿಧ ಕ್ಷೇತ್ರಗಳಲ್ಲಿರುವ ಅವರ ಶಿಷ್ಯಕೋಟಿ ಇನ್ನೂ ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ ಬರೆಯುತ್ತಾರೆ, ಮಾತನಾಡುತ್ತಾರೆ, ವಾದಿಸುತ್ತಾರೆ.

ಹೌದು, “ವಸಾಹತುಶಾಹಿಯ ನಿರ್ಗಮನದ ಅನಂತರವೂ ಒಬ್ಬ ಅದರ ಪರವಾಗಿಯೇ ಮಾತನಾಡುತ್ತಾನೆ, ಎಂದರೆ ವಸಾಹತುಶಾಹಿಯು ತುಂಬ ಪರಿಣಾಮಕಾರಿಯಾಗಿಯೇ ಬೇರೂರಿದೆ ಎಂದರ್ಥ”.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಅಂಬೇಡ್ಕರ್, ಮುಸ್ಲಿಂ ಲೀಗ್ ಒತ್ತಾಯಿಸಿದರೂ ಜನಸಂಖ್ಯಾ ವಿನಿಮಯ ಆಗಲಿಲ್ಲ!

Continue Reading

ಮೈಸೂರು

Mysore News: ಮೈಸೂರಿನಲ್ಲಿ ಗಾಯಕ ಎಚ್ ಎಸ್ ನಾಗರಾಜ್ ಗೆ ಶ್ರೀ ವಾಸುದೇವಾಚಾರ್ಯ ಸಂಸ್ಮರಣಾ ಪ್ರಶಸ್ತಿ ಪ್ರದಾನ

Mysore News: ಕರ್ನಾಟಕ ಶಾಸ್ತ್ರೀಯ ಸಂಗೀತ ಒಕ್ಕೂಟ ಟ್ರಸ್ಟ್ ವತಿಯಿಂದ ಮೈಸೂರಿನ ಶ್ರೀವಾಸುದೇವಾಚಾರ್ಯ ಭವನದಲ್ಲಿ ಮೈಸೂರು ವಾಸುದೇವಾಚಾರ್ಯ ಸಂಸ್ಮರಣಾ ಸಂಗೀತ ಉತ್ಸವದ ವಿದ್ವತ್ ಸಭೆ ಜರುಗಿತು. ಈ ವೇಳೆ ವಿದ್ವಾನ್ ಶೃಂಗೇರಿ ನಾಗರಾಜ್ ರಿಗೆ ‘ಶ್ರೀವಾಸುದೇವಾಚಾರ್ಯ ಸಂಸ್ಮರಣಾ ಪ್ರಶಸ್ತಿ’, ವಿದ್ವಾನ್ ಎಚ್.ಕೆ.ನರಸಿಂಹಮೂರ್ತಿ ರಿಗೆ ‘ಶ್ರೇಷ್ಠ ಜೀವಮಾನ ಸಾಧನೆ ಪ್ರಶಸ್ತಿ’, ವಿದುಷಿ ಪುಷ್ಪಾ ಶ್ರೀನಿವಾಸ್ ರಿಗೆ ‘ಕರ್ನಾಟಕ ಸಂಗೀತಾಚಾರ್ಯ ಪ್ರಶಸ್ತಿ’ ಯನ್ನು ನೀಡಿ, ಗೌರವಿಸಲಾಯಿತು.

VISTARANEWS.COM


on

Mysore Vasudevacharya Memorial Music utsav Vidwat Sabha and award ceremony
Koo

ಮೈಸೂರು: ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಮಹಾಮಹಿಮರಾದ ಮೈಸೂರು ವಾಸುದೇವಾಚಾರ್ಯರ ಕೊಡುಗೆ ಅನನ್ಯವಾಗಿದೆ ಎಂದು ಶಿವಮೊಗ್ಗದ ಖ್ಯಾತ ಗಾಯಕ ವಿದ್ವಾನ್ ಶೃಂಗೇರಿ ಎಚ್.ಎಸ್. ನಾಗರಾಜ್ (Mysore News) ಹೇಳಿದರು.

ಕರ್ನಾಟಕ ಶಾಸ್ತ್ರೀಯ ಸಂಗೀತ ಒಕ್ಕೂಟ ಟ್ರಸ್ಟ್ ವತಿಯಿಂದ ಮೈಸೂರಿನ ಶ್ರೀವಾಸುದೇವಾಚಾರ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಮೈಸೂರು ವಾಸುದೇವಾಚಾರ್ಯ ಸಂಸ್ಮರಣಾ ಸಂಗೀತ ಉತ್ಸವದ ವಿದ್ವತ್ ಸಭೆಯಲ್ಲಿ ಅವರು ಪ್ರತಿಷ್ಠಿತ ‘ಶ್ರೀವಾಸುದೇವಾಚಾರ್ಯ ಸಂಸ್ಮರಣಾ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದರು.

ಇದನ್ನೂ ಓದಿ: Traffic Violation : ಪೆಟ್ರೋಲ್ ಖಾಲಿಯಾಗಿ ರಸ್ತೆಯಲ್ಲಿ ವಾಹನ ನಿಂತುಬಿಟ್ಟರೆ ಚಾಲಕನ ಮೇಲೆ ಕೇಸ್!

ಮೈಸೂರು ವಾಸುದೇವಾಚಾರ್ಯ ಮನೆ ಮೈಸೂರಿನಲ್ಲಿ ಸಂಗೀತಕ್ಕೆ ಮಹೋನ್ನತ ವೇದಿಕೆಯಾಗಿ ರೂಪುಗೊಂಡಿದೆ. ಅಲ್ಲಿ ಹಾಡಿದವರ ಧನ್ಯತೆಯೇ ವಿಶೇಷವಾಗಿದ್ದು ಎಂದು ಅವರು ಸ್ಮರಿಸಿದರು.

ಪ್ರಶಸ್ತಿ ಪ್ರದಾನ

ವಿದ್ವಾನ್ ಶೃಂಗೇರಿ ನಾಗರಾಜ್ ಅವರಿಗೆ ‘ಶ್ರೀವಾಸುದೇವಾಚಾರ್ಯ ಸಂಸ್ಮರಣಾ ಪ್ರಶಸ್ತಿ’, ವಿದ್ವಾನ್ ಎಚ್.ಕೆ. ನರಸಿಂಹಮೂರ್ತಿ ಅವರಿಗೆ ‘ಶ್ರೇಷ್ಠ ಜೀವಮಾನ ಸಾಧನೆ ಪ್ರಶಸ್ತಿ’, ವಿದುಷಿ ಪುಷ್ಪಾ ಶ್ರೀನಿವಾಸ್ ಅವರಿಗೆ ‘ಕರ್ನಾಟಕ ಸಂಗೀತಾಚಾರ್ಯ ಪ್ರಶಸ್ತಿ’ ಯನ್ನು ನೀಡಿ, ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಡಾ. ರಮಾ ಬೆಣ್ಣೂರು ಮಾತನಾಡಿ, ವಯೋಲಿನ್ ವಿದ್ವಾಂಸ ಎಚ್.ಕೆ. ನರಸಿಂಹ ಮೂರ್ತಿ ಅವರು ಕಲಾ ಲೋಕಕ್ಕೆ ಅಹರ್ನಿಷಿ ಸೇವೆ ಸಲ್ಲಿಸಿದ್ದಾರೆ. ಮೈಸೂರಿನಲ್ಲಿ ಯುವಕರು ವಯಲಿನ್ ಹಿಡಿದು ಸಾಗುತ್ತಿದ್ದರೆ ಅವರು ಎಚ್.ಕೆ. ಎನ್. ಸ್ಟೂಡೆಂಟ್ ಎಂದು ಧೈರ್ಯವಾಗಿ ಹೇಳಬಹುದು. ಜೀವಮಾನದಲ್ಲಿ ಅವರು ಬಹುತೇಕ ಸಮಯವನ್ನು ಈ ವಾದ್ಯದ ನುಡಿಸಾಣಿಕೆ ಮತ್ತು ಪಾಠಕ್ಕಾಗಿ ಮೀಸಲಿಟ್ಟಿದ್ದಾರೆ. ಅವರಿಗೆ ಜೀವಮಾನದ ಪ್ರಶಸ್ತಿ ನೀಡಿ ಗೌರವಿಸಿರುವುದು ಮಹತ್ತರ ಕಾರ್ಯ ಎಂದು ಶ್ಲಾಘಿಸಿದರು.

ಇದನ್ನೂ ಓದಿ: Success Story: ಎರಡೇ ತಿಂಗಳಲ್ಲಿ ಆನ್ ಲೈನ್ ಮೂಲಕ 1,800 ಕೆ.ಜಿ. ಮಾವು ಮಾರಿದ ರಾಯಚೂರಿನ ರೈತ!

ಖ್ಯಾತ ಸಂಗೀತ ವಿದ್ವಾಂಸ ಮತ್ತು ಟ್ರಸ್ಟಿ ಡಾ. ರಾ. ನಂದಕುಮಾರ್ ಮಾತನಾಡಿ, ಕನ್ನಡ ನಾಡಿನ ಖ್ಯಾತ, ವಿಖ್ಯಾತ ಸಂಗೀತ ವಿದ್ವಾಂಸರನ್ನು ಒಳಗೊಂಡ ಕರ್ನಾಟಕ ಶಾಸ್ತ್ರೀಯ ಸಂಗೀತ ಒಕ್ಕೂಟ ಟ್ರಸ್ಟ್ (ಕೆಸಿಎಂಸಿ) ಕಳೆದ ಮೂರು ವರ್ಷಗಳಿಂದ ಕಲಾಕ್ಷೇತ್ರದ ಅಭ್ಯುದಯಕ್ಕೆ ಸೇವೆ ಸಲ್ಲಿಸುತ್ತಿದೆ. ಮುಂದೆ ನೂರಾರು ಕಾರ್ಯಾಗಾರ, ಪ್ರಾತ್ಯಕ್ಷಿಕೆ ಹಮ್ಮಿಕೊಂಡು ಯುವ ಸಂಗೀತಗಾರರ ಏಳಿಗೆಗೆ ಶ್ರಮಿಸಲು ಸಂಕಲ್ಪ ಮಾಡಿದೆ. ಸಂಗೀತ ಲೋಕದ ದಿಗ್ಗಜರನ್ನು ಗುರುತಿಸಿ, ಗೌರವಿಸುವ ಸೇವೆಯನ್ನೂ ಟ್ರಸ್ಟ್ ಮಾಡುತ್ತಿದೆ. ಒಟ್ಟಾರೆ ಕರ್ನಾಟಕ ಶಾಸ್ತ್ರೀಯ ಸಂಗೀತದ ಮಹತ್ವ ಕಾಪಾಡಲು ನಮ್ಮ ಕೆಸಿಎಂಸಿ ಟ್ರಸ್ಟ್ ದಿಟ್ಟ ಹೆಜ್ಜೆ ಇಟ್ಟಿದೆ ಎಂದರು.

ಹಿರಿಯ ವೀಣಾ ವಿದ್ವಾಂಸ ವಿದ್ವಾನ್ ಡಾ. ರಾ. ವಿಶ್ವೇಶ್ವರನ್ ಮಾತನಾಡಿ, ಸಂಗೀತ ಕ್ಷೇತ್ರದಲ್ಲಿ ಸಿದ್ಧಿ ಪಡೆದ ಅನೇಕರು ಪ್ರಸಿದ್ಧಿಗೆ ಬರಲೇ ಇಲ್ಲ. ಅವರ ಸಾಲಿನಲ್ಲಿ ಮೈಸೂರು ವಾಸುದೇವಾಚಾರ್ಯರೂ ಒಬ್ಬರು. ಮೈಸೂರಿನಲ್ಲಿ ಅವರಿಗೆ ರಾಜಾಶ್ರಯ ಮಾತ್ರ ಇತ್ತು. ಆದರೆ ರಾಷ್ಟ್ರಮಟ್ಟದ ಪ್ರಶಸ್ತಿ, ಪುರಸ್ಕಾರಗಳು ಇನ್ನಷ್ಟು ಮಾನ್ಯವಾಗಬೇಕಿತ್ತು. ಇಂದಿನ ಪೀಳಿಗೆ ಇಂಥ ಮಹಾನ್ ಕಲಾವಿದರ ರಚನೆಗಳನ್ನು ಶ್ರದ್ಧೆಯಿಂದ ಕಲಿತು ಹಾಡಬೇಕು. ಕೆಸಿಎಂಸಿ ಟ್ರಸ್ಟ್ ಈ ನಿಟ್ಟಿನಲ್ಲಿ ಸಾವಿರಾರು ಕೆಲಸಗಳನ್ನು ಮಾಡಲಿ ಎಂದು ಹಾರೈಸುವೆ ಎಂದು ತಿಳಿಸಿದರು.

ರೇವತಿ ಕಾಮತ್ ಚಾರಿಟಬಲ್ ಟ್ರಸ್ಟ್ ಉದ್ಘಾಟನೆ

ಇದೇ ವೇಳೆ ಖ್ಯಾತ ವೀಣಾ ವಿದುಷಿ ರೇವತಿ ಕಾಮತ್ ಅವರ ‘ರೇವತಿ ಕಾಮತ್ ಚಾರಿಟಬಲ್ ಟ್ರಸ್ಟ್’ ಅನ್ನು ವಿದ್ವಾನ್ ಆರ್. ವಿಶ್ವೇಶ್ವರನ್ ಅವರು ಉದ್ಘಾಟಿಸಿದರು. ಪರಿಸರ ಸಂರಕ್ಷಣೆ, ಗ್ರಾಮೀಣ ಮಕ್ಕಳ ಶಿಕ್ಷಣ ಅಭಿವೃದ್ಧಿ, ಕರ್ನಾಟಕ ಶಾಸ್ತ್ರೀಯ ಸಂಗೀತ ಪೋಷಣೆ ಮತ್ತು ಸಂವರ್ಧನೆಗೆ ಟ್ರಸ್ಟ್ ಸಂಕಲ್ಪ ಮಾಡಿದೆ ಎಂದು ರೇವತಿ ಕಾಮತ್ ತಿಳಿಸಿದರು.

ಈ ಸಂದರ್ಭದಲ್ಲಿ ಕಲಾಕ್ಷೇತ್ರದ ಹಿರಿಯ ಚೇತನ ವಿದ್ವಾನ್ ಡಾ.ರಾ. ವಿಶ್ವೇಶ್ವರನ್, ಲೇಖಕ ಮತ್ತು ಪತ್ರಕರ್ತ ಎ.ಆರ್. ರಘುರಾಮ, ಡಾ.ರಮಾ ಬೆಣ್ಣೂರು, ಭ್ರಮರಾ ಟ್ರಸ್ಟ್‌ನ ಸಂಸ್ಥಾಪಕಿ ಮಾಧುರಿ ತಾತಾಚಾರಿ, ವಿದ್ವಾನ್ ಡಾ.ರಾ.ಸ.ನಂದಕುಮಾರ್ ಮತ್ತು ವೀಣಾ ವಿದ್ವಾಂಸ ಪ್ರಶಾಂತ ಅಯ್ಯಂಗಾರ್, ವಿದ್ವಾನ್ ಆನೂರು ಅನಂತ ಕೃಷ್ಣ ಶರ್ಮ (ಶಿವು) ಮತ್ತು ಪುಸ್ತಕಂ ರಮಾ ಉಪಸ್ಥಿತರಿದ್ದರು.

ಇದನ್ನೂ ಓದಿ: Gold Rate Today: ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆ; ಬಂಗಾರದ ಮಾರುಕಟ್ಟೆಯಲ್ಲಿ ಇಂದಿನ ಧಾರಣೆ ಹೀಗಿದೆ

ಇದಕ್ಕೂ ಮುನ್ನ ವಾಸುದೇವಾಚಾರ್ಯರ ಕೃತಿಗಳ ಗೋಷ್ಠಿ ಗಾಯನ, ವಿದುಷಿ ಮೈಸೂರು ರಾಜಲಕ್ಷ್ಮೀ ಅವರ ವೀಣಾವಾದನ ನೂರಾರು ಪ್ರೇಕ್ಷಕರನ್ನು ರಂಜಿಸಿತು.

Continue Reading
Advertisement
Karnataka weather Forecast
ಮಳೆ4 mins ago

Karnataka Weather : ಉತ್ತರ ಒಳನಾಡು, ಕರಾವಳಿಯಲ್ಲಿ ವ್ಯಾಪಕ ಮಳೆ; ಶಾಲೆಗೆ ನುಗ್ಗಿದ ನೀರು, ಮಕ್ಕಳಿಗೆ ರಜೆ

ಬೆಂಗಳೂರು11 mins ago

Wheelchair Cricket Tournament: ವಿಶೇಷಚೇತನರ ಗಾಲಿಕುರ್ಚಿಯ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿದ ರವಿಶಂಕರ್ ಗುರೂಜಿ

Ambani Family Fashion
ಫ್ಯಾಷನ್24 mins ago

Ambani Family Fashion: ಅಂಬಾನಿ ಕುಟುಂಬದ ಮಹಿಳೆಯರ ಜ್ಯುವೆಲರಿ ಡಿಸೈನ್ಸ್ ಕಾಪಿ ಮಾಡಿ ಟ್ರೆಂಡಿಯಾದ ಜ್ಯುವೆಲರಿಗಳಿವು!

Narendra Modi
ದೇಶ27 mins ago

Narendra Modi: ನಾಳೆ 3ನೇ ಬಾರಿ ಮೋದಿಗೆ ಪ್ರಧಾನಿ ಗಾದಿ; ಇಲ್ಲಿದೆ ಅವರ ರಾಜಕೀಯದ ಹಾದಿ!

Norway Chess
ಕ್ರೀಡೆ35 mins ago

Norway Chess: 3ನೇ ಸ್ಥಾನಕ್ಕೆ ತೃಪ್ತಿಪಟ್ಟ ಪ್ರಜ್ಞಾನಂದ; ಸಹೋದರಿ ವೈಶಾಲಿಗೆ 4ನೇ ಸ್ಥಾನ

IND vs PAK
ಕ್ರೀಡೆ1 hour ago

IND vs PAK: ಭಾರತ-ಪಾಕ್​ ಪಂದ್ಯಕ್ಕೆ 4 ಹಂತದ ಭದ್ರತಾ ವ್ಯವಸ್ಥೆ; ಮೈದಾನಕ್ಕೆ ನುಗ್ಗಿದರೆ ಜೈಲೂಟ ಖಚಿತ!

Money Guide
ಮನಿ-ಗೈಡ್1 hour ago

Money Guide: ಈಗಿನ ಆರೋಗ್ಯ ವಿಮಾ ಪಾಲಿಸಿ ಬಗ್ಗೆ ಸಮಾಧಾನ ಇಲ್ಲವೆ? ಹೆಲ್ತ್ ಇನ್ಶೂರೆನ್ಸ್ ಪೋರ್ಟೆಬಿಲಿಟಿ ಬಳಸಿ

Niveditha Gowda chandan shetty age differance
ಸ್ಯಾಂಡಲ್ ವುಡ್1 hour ago

Niveditha Gowda: ಚಂದನ್‌ ಶೆಟ್ಟಿ-ನಿವೇದಿತಾ ನಡುವಿನ ವಯಸ್ಸಿನ ಅಂತರವೆಷ್ಟು?

Viral Video
ವೈರಲ್ ನ್ಯೂಸ್1 hour ago

Viral Video: ಹೊಟೇಲ್‌ ಮಾಲೀಕನನ್ನು ಮುಖಾಮೂತಿ ನೋಡದೆ ಚಚ್ಚಿದ ಶಾಸಕ; ವಿಡಿಯೋ ಫುಲ್‌ ವೈರಲ್‌

Congress Guarantee
ಕರ್ನಾಟಕ1 hour ago

Congress Guarantee: ʼಸ್ಯಾಡಿಸ್ಟ್‌ʼ ಜನರಿಗೆ ಕಾಂಗ್ರೆಸ್ ಗ್ಯಾರಂಟಿ ಇಷ್ಟವಾಗಿಲ್ಲ, ನಿಲ್ಲಿಸೋದೇ ಒಳಿತು ಎಂದ ಲಕ್ಷ್ಮಣ್‌!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ23 hours ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ1 day ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ4 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ5 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ5 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ6 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌