Deepavali 2022 | ದೀಪಾವಳಿಯಲ್ಲಿ ದೀಪಗಳನ್ನೇಕೆ ಹಚ್ಚಬೇಕು? ಯಾವ ಎಣ್ಣೆ ದೀಪ ಶ್ರೇಷ್ಠ? - Vistara News

ದೀಪಾವಳಿ

Deepavali 2022 | ದೀಪಾವಳಿಯಲ್ಲಿ ದೀಪಗಳನ್ನೇಕೆ ಹಚ್ಚಬೇಕು? ಯಾವ ಎಣ್ಣೆ ದೀಪ ಶ್ರೇಷ್ಠ?

ದೀಪವನ್ನೇ ಪ್ರಧಾನವಾಗಿ ಹೊಂದಿರುವ ನಾನಾ ಧಾರ್ಮಿಕ ಆಚರಣೆಗಳನ್ನು ಸೇರಿಸಿ ದೀಪಾವಳಿ ಹಬ್ಬ (Deepavali 2022) ಎಂದು ಆಚರಿಸಲಾಗುತ್ತದೆ. ದೀಪಗಳಿಗಿರುವ ಮಹತ್ವವನ್ನು ತಿಳಿಸುವ ವಿಶೇಷ ಲೇಖನ ಇಲ್ಲಿದೆ.

VISTARANEWS.COM


on

Deepavali 2022
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Deepavali 2022

ವಿದ್ವಾನ್‌ ತೇಜಶಂಕರ ಸೋಮಯಾಜೀ ಕೆ.ಎಲ್.
ನಮ್ಮ ಭಾರತೀಯ ಸನಾತನ ಸಂಸ್ಕೃತಿಯು ಪ್ರಕೃತಿಯೊಡನೆ ನೇರವಾಗಿ ಹೊಂದಿಕೊಂಡು ಸಕಲಚರಾಚರಗಳಲ್ಲೂ ದೇವತಾಬುದ್ಧಿಯನ್ನು ಇಟ್ಟಂತಹ ವಿಶ್ವದ ಏಕೈಕ ಸಂಸ್ಕೃತಿ. ಅಂತಹ ನಮ್ಮ ಸಂಸ್ಕೃತಿಯಲ್ಲಿ ದೀಪವು (Deepavali 2022) ಸರ್ವೋಚ್ಛಸ್ಥಾನವನ್ನು ಹೊಂದಿದೆ. ಕತ್ತಲೆಯಲ್ಲಿರುವ ವಸ್ತುಗಳನ್ನು ನೋಡಲು ದೀಪವು ಸಹಾಯವನ್ನು ಮಾಡಿದರೆ, ದೀಪವನ್ನು ನೋಡಲು ಬೇರೆ ಯಾವುದರ ಸಹಾಯವೂ ಬೇಡ. ಇದನ್ನೇ ನಮ್ಮ ಪೂರ್ವಜರು ಉಪಮಾನವಾಗಿ ಬಳಸಿಕೊಂಡು ತಾನು ಸ್ವಾಭಿಮಾನದಿಂದ ಬದುಕುತ್ತಾ ಮತ್ತೊಬ್ಬರಿಗೆ ಉಪಕಾರಿಯಾಗಬೇಕು ಎಂಬ ಪಾಠವನ್ನು ಹೇಳಿದ್ದಾರೆ.

ದೀಪವನ್ನೇ ಪ್ರಧಾನವಾಗಿ ಹೊಂದಿರುವ ನಾನಾ ಧಾರ್ಮಿಕ ಆಚರಣೆಗಳನ್ನು ಸೇರಿಸಿ ದೀಪಾವಳಿ (Deepavali 2022 ) ಎಂಬ ಹಬ್ಬವಾಗಿ ಆಚರಿಸಲಾಗುತ್ತದೆ. ನಂತರದ ಬಿದಿಗೆಯು ಯಮದ್ವಿತೀಯಾ ಎಂದು‌ ಪ್ರಸಿದ್ಧವಾಗಿ ದೀಪಾವಳಿ ಹಬ್ಬದ ಭಾಗವೇ ಆಗಿದೆ.

ಕಾರ್ತಿಕ ಶುದ್ಧ ಪ್ರತಿಪತ್ ದಿನದಂದು ಗೋಪೂಜೆ, ಗೋಪಾಲಕ ಪೂಜೆ, ಗೋವರ್ಧನ ಪೂಜೆ, ಬಲೀಂದ್ರ ಪೂಜೆ ನಡೆಯುತ್ತದೆ. ಗೋವರ್ಧನದ ಹತ್ತಿರದಲ್ಲಿ ಇರುವವರು ಗೋವರ್ಧನಪರ್ವತಕ್ಕೇ ಪೂಜಿಸಬೇಕು ಎಂದು ಹೇಳಲಾಗಿದೆ. ಗೋಪಾಲಕನಾದ ಕೃಷ್ಣನ ಪೂಜೆಯೂ ಅಲ್ಲಲ್ಲಿ ರೂಢಿಯಲ್ಲಿದೆ. ದನ ಮತ್ತು ಕರುಗಳಿಗೆ ಸ್ನಾನವನ್ನು ಮಾಡಿಸಿ. ಅಲಂಕಾರವನ್ನು ಮಾಡಿ ಸವತ್ಸಗೋಸಾವಿತ್ರೀ ಎನ್ನುವ ಸಂಬೋಧನೆಯಿಂದ ಗೋವನ್ನು ಪೂಜಿಸಬೇಕು. ವಿಶೇಷವಾದ ಆಹಾರವನ್ನು ಕೊಟ್ಟು ಉಪಚರಿಸಬೇಕು. ಮಳೆಗಾಲದ ಸಮಯದಲ್ಲಿ ಸಂಪೂರ್ಣವಾಗಿ‌‌ ಕೃಷಿಚಟುವಟಿಕೆಗಳಿಗೆ ಸಹಕರಿಸಿದ ಶ್ರಮಿಸಿದ ಆ ಒಡನಾಡಿಗಳಿಗೆ‌ ಕೃತಜ್ಞತೆ ಸಲ್ಲಿಸುವಂತೆ ಭಾಸವಾಗುತ್ತದೆ ಈ ಆಚರಣೆ. ಬೆಳ್ಳಕ್ಕಿ (ಬಿಳಿಯ ಅಕ್ಕಿ) ಯ ಬಲಿ ಮೂರ್ತಿಯನ್ನು‌ ಮಾಡಿ ಬಲೀಂದ್ರ ಎನ್ನುವ ಸಂಬೋಧನೆಯಿಂದ ಪೂಜಿಸುವುದು ಶಾಸ್ತ್ರವಿಹಿತವಾಗಿದೆ.

Deepavali 2022

ದೀಪಾವಳಿಯ ಎಲ್ಲ ಹಬ್ಬಗಳಂದು ಸಾಲಾಗಿ ದೀಪಗಳನ್ನಿಟ್ಟು ಮನೆಯು ಬೆಳಗುವಂತೆ ಮಾಡುವುದು, ದೀಪದಿಂದಲೇ ಮನೆಯನ್ನು ಅಲಂಕರಿಸುವುದು, ಉಲ್ಕಾಹಸ್ತರಾಗುವುದು ಶ್ರೇಯಸ್ಸನ್ನು ಉಂಟುಮಾಡುತ್ತದೆ. ಉಲ್ಕಾಹಸ್ತ ಎಂದರೆ ಕೊಳ್ಳಿಯನ್ನು ಹಿಡಿದುಕೊಂಡ ಕೈ ಎಂದರ್ಥ. ಹೀಗೆ ಕೊಳ್ಳಿಗಳನ್ನು ಮನೆ, ಕೊಟ್ಟಿಗೆ, ಹಿತ್ತಲು, ಗದ್ದೆ, ತೋಟ ಈ ಎಲ್ಲಾ ಕಡೆಗಳಲ್ಲಿ ಇಡುವುದರಿಂದ ಮಹಾಲಯದಲ್ಲಿ ಯಮಾದಿ ಲೋಕಗಳಿಂದ ಭೂಮಿಗೆ ಬಂದ ಪಿತೃಗಳಿಗೆ ಪರಮಗತಿಯನ್ನು ಪಡೆಯುವ ದಾರಿಯನ್ನು, ಸ್ವರ್ಗದ ದಾರಿಯನ್ನು ತೋರಿಸಿದಂತಾಗುತ್ತದೆ ಎನ್ನುವುದು ಧರ್ಮಗ್ರಂಥಗಳಲ್ಲಿ ಹೇಳಲ್ಪಟ್ಟಿದೆ.

ಹೀಗೆ ದೀಪವನ್ನು‌ ಬೆಳಗಿಸುತ್ತಾ ಅನಂತ ಸುಖ-ಸಂಪತ್ತುಗಳನ್ನು ನಾವು ಪಡೆಯುತ್ತಾ, ಪೂರ್ವಜರಿಗೆ ಮೋಕ್ಷವು ಲಭಿಸುವಂತೆಯೂ ಮಾಡಬಹುದು. ಈ ಪ್ರಸ್ತುತತೆಯ ಕಾರಣದಿಂದ ದೀಪಗಳ ಬಗ್ಗೆ ಸ್ವಲ್ಪ ವಿಶಿಷ್ಟವಾದ ಮಾಹಿತಿಯನ್ನು ಗಮನಿಸುವುದಾದರೆ, ಬೆಳಕಿನ ಮೂಲವೇ ಆಗಿರುವ ದೀಪವನ್ನು ಪ್ರದೀಪ, ಜ್ಯೋತಿ ಎಂಬ ಪ್ರಸಿದ್ಧ ಹೆಸರುಗಳ ಜೊತೆಗೆ ಜಿಡ್ಡನ್ನು ಹೀರಿಕೊಂಡು ಉರಿಯುವದರಿಂದ ಸ್ನೇಹಾಶಃ ಎನ್ನುವುದಾಗಿಯೂ, ಕಾಡಿಗೆಯನ್ನು ಬಾವುಟದಂತೆ ಹೊಂದಿರುವುದರಿಂದ “ಕಜ್ಜಲಧ್ವಜಃ “ಎಂತಲೂ, ಜುಟ್ಟಿನ ರೀತಿಯಲ್ಲಿ ಆಕಾರ ಇರುವುದರಿಂದ “ಶಿಖಾತರುಃ” ಎಂತಲೂ, ಮನೆಯ ಭೂಷಣವಾದ್ದರಿಂದ “ಗೃಹಮಣಿಃʼʼ ಎನ್ನುವುದಾಗಿ ಮತ್ತು ಕಣ್ಣಿಗೆ ಆನಂದ ಉಂಟುಮಾಡುವುದರಿಂದ “ನಯನೋತ್ಸವಃʼʼ ಎನ್ನುವುದಾಗಿಯೂ ಕರೆಯುತ್ತಾರೆ.

ಯಾವ ಎಣ್ಣೆಯಿಂದ ದೀಪ ಹಚ್ಚಬೇಕು?
ಹೀಗೆ ನಮ್ಮ ಆಚರಣೆಗಳಲ್ಲಿ ಉತ್ಕೃಷ್ಟಸ್ಥಾನವನ್ನು ಪಡೆದಿರುವ ದೀಪದ ವಿಷಯದಲ್ಲಿ ಹಲವಾರು ಗೊಂದಲಗಳೂ ಬರಬಹುದು. ದೀಪವನ್ನು ಯಾವ ಎಣ್ಣೆಯಿಂದ ಉರಿಸಬೇಕು, ಎಷ್ಟು ಬತ್ತಿಗಳನ್ನು ಉಪಯೋಗಿಸಬೇಕು, ಶ್ರೇಷ್ಠದೀಪವು ಯಾವುದು? ಮುಂತಾದ ಪ್ರಶ್ನೆಗಳು ಮನದಲ್ಲಿ‌ ಮೂಡುವುದು‌ ಸಹಜ. ಮಿತಿಯಲ್ಲಿರುವ ಸಂಶಯ‌ ಮತ್ತು ಕುತೂಹಲ, ಆಸಕ್ತಿಗಳೇ ವಿಷಯಗ್ರಹಿಕೆಯ ಮೊದಲ ಮೆಟ್ಟಿಲಲ್ಲವೇ?

ದೀಪಕ್ಕಾಗಿ ಯಾವ ಎಣ್ಣೆಯನ್ನು ಬಳಸಬೇಕು ಎಂಬ ಸಂಶಯಕ್ಕೆ ಉತ್ತರವಾಗಿ “ಘೃತಂ ತೈಲಂ ಚ ದೀಪಾರ್ಥೇ ಸ್ನೇಹಾನ್ಯನ್ಯಾನಿ ವರ್ಜಯೇತ್” ಎನ್ನುವ ವಾಕ್ಯವಿದೆ. ದೀಪಕ್ಕೋಸ್ಕರ ತುಪ್ಪ ಮತ್ತು ಎಳ್ಳೆಣ್ಣೆಯನ್ನು ಮಾತ್ರ ಬಳಸಬೇಕು ಬೇರೆಯ ಎಣ್ಣೆಯನ್ನು ಬಳಸಬಾರದು ಎಂದು ಇದರ ಅರ್ಥ. ಇದು ಪ್ರಧಾನವಾದ ಪಕ್ಷ. ಇದರ ಹೊರತಾಗಿ ಸಾಸಿವೆಎಣ್ಣೆ, ಕೊಬ್ಬರಿಎಣ್ಣೆ, ಹೊಂಗೆಎಣ್ಣೆ, ಗಂಧದ ಎಣ್ಣೆ ಇವುಗಳನ್ನೂ ದೀಪಕ್ಕಾಗಿ ಬಳಸುವುದು ಪದ್ಧತಿಯಲ್ಲಿದೆ. ಆದರೆ ಅದು ಸಾತ್ವಿಕ ಎನಿಸುವುದಿಲ್ಲ.

“ಘೃತಪ್ರದೀಪಃ ಪ್ರಥಮಸ್ತಿಲತೈಲೋದ್ಭವಸ್ತತಃʼʼ ಎನ್ನುವ ಮಾತೂ ತುಪ್ಪ ಮತ್ತು ಎಳ್ಳೆಣ್ಣೆಯ ಶ್ರೇಷ್ಠತೆಯನ್ನು ತಿಳಿಸುತ್ತದೆ. ದೇವರ ಬಲಭಾಗದಲ್ಲಿ ತುಪ್ಪದ ದೀಪವನ್ನು, ಎಡಭಾಗದಲ್ಲಿ ಎಣ್ಣೆಯ ದೀಪವನ್ನು ಸ್ಥಾಪಿಸಬೇಕು. ಪ್ರತಿನಿತ್ಯವೂ ಹೀಗೆ ದೀಪವನ್ನು ಹಚ್ಚುವವರು ಅಶ್ವಮೇಧಯಾಗದ ಫಲವನ್ನು ಹೊಂದುತ್ತಾರೆ.

ಘೃತೇನ ದೀಪಕಂ ಯಸ್ತು ತಿಲತೈಲೇನ ವಾ ಪುನಃ|
ಜ್ವಾಲಯೇನ್ಮುನಿಶಾರ್ದೂಲ ಅಶ್ವಮೇಧೇನ ತಸ್ಯ ಕಿಮ್||

ಎನ್ನುವ ಶ್ಲೋಕವು ಇದಕ್ಕೆ ಆಧಾರವಾಗಿದೆ.

ಗೋ ಘೃತೇನ ಸಮಾಯುಕ್ತಃ ಸಾತ್ವಿಕೋ ದೀಪ ಉಚ್ಯತೇ|
ರಾಜಸಸ್ತಿಲತೈಲೇನ ನಾಲಿಕೇರೇಣ ತಾಮಸಃ ||

ಎನ್ನುವ ಶ್ಲೋಕದಿಂದ ಹಸುವಿನ ತುಪ್ಪದಿಂದ ಹಚ್ಚಿದ ದೀಪ ಸಾತ್ವಿಕವೆಂದೂ, ಎಳ್ಳೆಣ್ಣೆಯ ದೀಪವು ರಾಜಸವೆಂದೂ, ಕೊಬ್ಬರಿಎಣ್ಣೆಯ ದೀಪವು ತಾಮಸವೆಂದೂ ತಿಳಿಯುತ್ತದೆ. ತುಪ್ಪ, ಎಳ್ಳೆಣ್ಣೆ ಇತ್ಯಾದಿಗಳು ದೀಪಕ್ಕೆ ಶ್ರೇಷ್ಠವಾದರೂ ಕೂಡ ಎಣ್ಣೆಗಳನ್ನು ಪರಸ್ಪರ ಮಿಶ್ರ ಮಾಡದೆ ಉಪಯೋಗಿಸಬೇಕು. ಮಿಶ್ರವಾಗಿರುವಂಥ ಎಣ್ಣೆಯಿಂದ ಹಚ್ಚಿದ ದೀಪವು ನರಕಪ್ರಾಪ್ತಿಯನ್ನು ತರುತ್ತದೆ.

Deepavali 2022

ದೀಪವೂ ಒಂದು ಉಪಚಾರ
ದೀಪಗಳಲ್ಲಿ ನಾನಾ ಬಗೆಗಳಿವೆ. ನಂದಾದೀಪ, ಆರತಿದೀಪ, ತೂಗುದೀಪ, ಕಾಲುದೀಪ, ಮುಂತಾದವು. ದೇವರ ಮುಂದೆ ಶಾಶ್ವತವಾಗಿ ಬೆಳಗುವ ದೀಪವೇ ನಂದಾದೀಪ. ಪೂಜೆಗಾಗಿ ಉಪಯೋಗಿಸುವ ದೀಪವು ಅರ್ಚನಾ ದೀಪವೆಂದು ಕರೆಯಲ್ಪಡುತ್ತದೆ. ಇದು ಸದಾಕಾಲ ಇರುವಂತಾಗಿ ನಂದಾದೀಪವಾದಾಗ ಅತ್ಯುತ್ಕೃಷ್ಟವಾದ ಫಲವನ್ನು ಕೊಡುತ್ತದೆ. ಷೋಡಶೋಪಚಾರ ಪೂಜೆಯಲ್ಲಿ ದೀಪವೂ ಒಂದು ಉಪಚಾರ.

ಸುಗಂಧಧೂಪವನ್ನು ಸಮರ್ಪಿಸಿ ನಂತರ ದೀಪವನ್ನು ಅರ್ಪಿಸಲಾಗುತ್ತದೆ. ಇದಾದ ನಂತರ ನೈವೇದ್ಯ, ತದನಂತರದಲ್ಲೇ ಮಂಗಳಾರತಿ ಅಥವಾ ನೀರಾಜನ. ಪೂಜೆಯ ಮಧ್ಯೆ ಈ ಎರಡು ಅಂಶಗಳಲ್ಲಿ ದೀಪಕ್ಕೆ ವಿಶೇಷ ಸ್ಥಾನವಿದೆ. “ಧೂಪಾದ್ಧರತಿ ಪಾಪಾನಿ ಕಾಂತಿರ್ದೀಪಪ್ರದಾನತಃ” ಎನ್ನುವ ವಾಕ್ಯದಿಂದ ದೇವರಿಗೆ ಸಮರ್ಪಿಸುವ ದೀಪದ ಉಪಚಾರವು ಭಕ್ತನಿಗೆ ಕಾಂತಿಯನ್ನು ನೀಡುತ್ತದೆ ಎಂದು ತಿಳಿಯುತ್ತದೆ. ಈ ಸಮಯದಲ್ಲಿ ಕೇವಲ ಒಂದು ಬತ್ತಿಯಿಂದ ದೀಪವನ್ನು ಬೆಳಗಬಾರದು. ನಂದಾದೀಪದಲ್ಲಿ ಎರಡು ಬತ್ತಿ, ಧೂಪದೀಪದ ಸಮಯದಲ್ಲಿನ ದೀಪಕ್ಕೆ ಮೂರು ಬತ್ತಿ, ಆರತಿಗೆ ಐದು ಬತ್ತಿಗಳು ಉತ್ತಮ. ಇದರ ಜೊತೆಗೆ ದೀಪವನ್ನು ಎಂದೂ ನೆಲದ ಮೇಲೆ ಇರಿಸಬಾರದು ಎನ್ನುವುದನ್ನು ಮರೆಯುವಂತಿಲ್ಲ.

ಭೂಮಿಯು ಎಲ್ಲಾ ಭಾರವನ್ನು ಸಹಿಸಿದರೂ ಕಾರಣವಿಲ್ಲದೇ ಸುಮ್ಮನೆ ಪಾದದಿಂದ ಕುಟ್ಟುವುದನ್ನು, ಮತ್ತು‌ ನೆಲದ ಮೇಲಿಟ್ಟ ದೀಪದ ತಾಪವನ್ನು ಸಹಿಸಲಾರಳು ಎಂದು ಶಾಸ್ತ್ರಕಾರರು ಹೇಳಿದ್ದಾರೆ. ಆದ್ದರಿಂದ ದೀಪವನ್ನು ದೀಪ ದಕಂಬಗಳ‌ ಮೇಲೆ ಇಡಲಾಗುತ್ತದೆ. ಕೊನೆಯಪಕ್ಷ ಸಣ್ಣತಟ್ಟೆದನ್ನಾದರೂ ದೀಪಕ್ಕೆ ಆಧಾರವಾಗಿ ಇಡಬಹುದು. ದೀಪ ದಾನವು ಸದಾಕಾಲ ಶ್ರೇಷ್ಠವಾದರೂ, ಕಾರ್ತಿಕ ಮಾಸದಲ್ಲಿ ಮಾಡುವ ದೀಪದಾನವು ಅತ್ಯಂತ ಮಹತ್ತರವಾದುದು. ಪಿತೃಪ್ರೀತಿಯೂ ದೇವಪ್ರೀತಿಯೂ ಉಂಟಾಹುತ್ತದೆ. ಜೊತೆಗೆ ದೀಪದಾನ ಮಾಡಿದವರ ಪಿತೃಗಳಿಗೆ ಸಂತೃಪ್ತಿಯ ಜೊತೆಗೆ ಸ್ವರ್ಗಪ್ರಾಪ್ತಿಯೂ ಕಾರ್ತಿಕದೀಪದಾನದಿಂದ ಉಂಟಾಗುತ್ತದೆ.

ಹೀಗೆ ನಾನಾ ರೀತಿಯ ವಿಚಾರಗಳಿಂದ ಶ್ರೇಷ್ಠವಾದ ದೀಪವು ಅಜ್ಞಾನವೆಂಬ ಅಂಧಕಾರವನ್ನು‌ ನಾಶಪಡಿಸುತ್ತಾ‌ ಜ್ಞಾನವೆಂಬ ಬೆಳಕನ್ನು ಸೂಸುವ ಮೂಲಕ ಪ್ರತಿಯೊಬ್ಬರ ಮನದಲ್ಲೂ ಪ್ರತಿನಿತ್ಯವೂ ಸತ್ಕರ್ಮಗಳೆಂಬ ಸದ್ವಿಚಾರಗಳೆಂಬ ಸಾಲು ಸಾಲು ದೀಪಗಳು ಬೆಳಗಲು ಕಾರಣವಾಗಲಿ. ಒಂದು‌ ದೀಪದಿಂದ ಹೇಗೆ ಬೇರೆಲ್ಲಾ ದೀಪಗಳನ್ನು ಬೆಳಗಿಸಲು ಸಾಧ್ಯವೋ ಅದೇರೀತಿಯಾಗಿ ನಮ್ಮ ಬುದ್ಧಿಯು ಆಧ್ಯಾತ್ಮಿಕಮಾರ್ಗದಲ್ಲಷ್ಟೇ ಅಲ್ಲದೆ ಸಾಮಾಜಿಕವಾಗಿಯೂ ಸತ್ಪ್ರೇರಣೆಗಳನ್ನು‌ ನೀಡಿ ಕೇವಲ ಒಬ್ಬರ ಬಾಳನಲ್ಲದೇ, ಸರ್ವರ‌ ಬಾಳನ್ನೂ ಬೆಳಗಲಿ ಬೆಳಗಿಸಲಿ. ಸ್ವಾಭಿಮಾನಿಯಾದರೂ ಸ್ವಾರ್ಥಿಯಾಗದೇ, ಪರೋಪಕಾರದ ಬದುಕನ್ನು ನಡೆಸುವಂತಾಗಲಿ ಎಂಬ ಲೇಖಕನ ಪ್ರಾರ್ಥನೆಯೊಂದಿಗೆ ಈ ಅಕ್ಷರಸಾಲುಗಳು ವಿರಮಿಸುತ್ತವೆ.

ಲೇಖಕರು ತತ್ತ್ವಶಾಸ್ತ್ರ ವಿಭಾಗದ ಮುಖ್ಯಸ್ಥರು,
ಅಂಬಿಕಾ ಮಹಾವಿದ್ಯಾಲಯ, ಬಪ್ಪಳಿಗೆ, ಪುತ್ತೂರು.

ಇದನ್ನೂ ಓದಿ | Deepavali 2022 | ಆಧ್ಯಾತ್ಮಿಕವಾಗಿಯೂ ಮಹತ್ವ ಪಡೆದ ಪರ್ವ ಈ ದೀಪಾವಳಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೀಪಾವಳಿ

After Deepavali Skin Care: ದೀಪಾವಳಿ ನಂತರ ತ್ವಚೆಯ ಆರೈಕೆಗೆ 5 ಸಿಂಪಲ್‌ ಸಲಹೆ

ದೀಪಾವಳಿ ಹಬ್ಬದ ನಂತರ ನಿಮ್ಮ ತ್ವಚೆಯ ಆರೈಕೆ (After Deepavali Skin Care) ಮಾಡುವುದು ಅತ್ಯಗತ್ಯ. ಇದಕ್ಕಾಗಿ ನೀವು ಏನೆಲ್ಲಾ ಮಾಡಬಹುದು? ಎಂಬುದನ್ನು ಬ್ಯೂಟಿ ಎಕ್ಸ್‌ಪಟ್ರ್ಸ್ ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

After Deepavali Skin Care
ಚಿತ್ರಕೃಪೆ: ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ದೀಪಾವಳಿ ಹಬ್ಬದ ನಂತರ ನಿಮ್ಮ ತ್ವಚೆಯ ಆರೈಕೆ (After Deepavali Skin Care) ಅತ್ಯವಶ್ಯ. ಅದ್ಯಾಕೆ? ಎಂದು ಯೋಚಿಸುತ್ತಿದ್ದೀರಾ! ಹಬ್ಬದ ಸಂಭ್ರಮಕ್ಕಾಗಿ ಪ್ರತಿದಿನ ಹಚ್ಚಿದ ಗ್ರ್ಯಾಂಡ್‌ ಓವರ್‌ ಮೇಕಪ್‌, ಒಂದರ ಮೇಲೊಂದು ಸವಿದ ಸಿಹಿ ತಿಂಡಿ ಹಾಗೂ ಜಂಕ್‌ ಪದಾರ್ಥ ಸೇವನೆ ಎಲ್ಲವೂ ತ್ವಚೆಯನ್ನು ಡಲ್‌ ಆಗಿಸಬಹುದು. ಕೆಲವರಿಗೆ ಇದರಿಂದ ಮೊಡವೆ ಹಾಗೂ ಜಿಡ್ಡಿನಿಂದ ಚರ್ಮದ ಸಮಸ್ಯೆ ಎದುರಾಗಬಹುದು. ಇವೆಲ್ಲವನ್ನು ನಿಭಾಯಿಸಲು ಫೆಸ್ಟಿವ್‌ ಸೀಸನ್‌ ಮುಗಿದ ನಂತರ ಮುಖದ ಆರೈಕೆಯತ್ತ ಗಮನ ನೀಡುವುದು ಉತ್ತಮ. ಇದರಿಂದ ನಾನಾ ಸ್ಕಿನ್‌ ಸಮಸ್ಯೆಗಳಿಂದ ದೂರಾಗಿ, ಎಂದಿನಂತೆ ನವೋಲ್ಲಾಸದಿಂದ ಕಾಣುವ ತ್ವಚೆಯನ್ನು ತಮ್ಮದಾಗಿಸಿಕೊಳ್ಳಬಹುದು ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್ ಮಂಗಲಾ. ಇದಕ್ಕೆ ಪೂರಕ ಎಂಬಂತೆ ಅವರು 5 ಸಿಂಪಲ್‌ ಸಲಹೆ ನೀಡಿದ್ದು, ಪಾಲಿಸಿ ನೋಡಿ ಎಂದಿದ್ದಾರೆ.

Give the makeup a break first

ಮೊದಲು ಮೇಕಪ್‌ಗೆ ಬ್ರೇಕ್‌ ನೀಡಿ

ಪ್ರತಿದಿನ ಮೇಕಪ್‌ ಹಚ್ಚಿದ ಮುಖಕ್ಕೆ ಕೊಂಚ ಬ್ರೇಕ್ ಹಾಕಿ. ಮಾಯಿಶ್ಚರೈಸ್‌ ಮಾಡಿ. ಮುಖದ ತ್ವಚೆಗೆ ಉಸಿರಾಡಲು ಅವಕಾಶ ನೀಡಿ. ಬೇಕಿದ್ದಲ್ಲಿ ರಿಜುನುವೇಟ್‌ ಆಗಲು ಸಹಾಯ ಮಾಡುವ ಹೈಡ್ರೋ ಫೇಶಿಯಲ್‌ ಮಾಡಿಸಿ.

ಕ್ಲೆನ್ಸಿಂಗ್‌- ಟೋನಿಂಗ್‌-ಮಾಯಿಶ್ಚರೈಸಿಂಗ್

ಪ್ರತಿದಿನ ಕ್ಲೆನ್ಸಿಂಗ್‌-ಟೋನಿಂಗ್‌ ಹಾಗೂ ಮಾಯಿಶ್ಚರೈಸಿಂಗ್‌ ಮಾಡಿ. ಇದು ತ್ವಚೆಯನ್ನು ರಿಲ್ಯಾಕ್ಸ್‌ ಮಾಡುವುದರೊಂದಿಗೆ ಸ್ಕಿನ್‌ ಆರೋಗ್ಯ ಸುಧಾರಿಸುತ್ತದೆ.

Get a good night's sleep

ಕಣ್ತುಂಬ ನಿದ್ರೆ ಮಾಡಿ

ಹಬ್ಬದ ಗಡಿಬಿಡಿಯಲ್ಲಿ ಸಾಕಷ್ಟು ಜನ ನಿದ್ರೆ ಕಡಿಮೆ ಮಾಡುತ್ತಾರೆ. ಇದು ಮುಖದ ಮೇಲೆ ಎದ್ದು ಕಾಣದಂತೆ ಮಾಡಲು ಮೇಕಪ್‌ ಹಚ್ಚುತ್ತಾರೆ. ಆದರೆ. ಇದು ತಾತ್ಕಲಿಕ ಪರಿಹಾರ. ನ್ಯಾಚುರಲ್‌ ಆಗಿ ತ್ವಚೆ ಚೆನ್ನಾಗಿ ಕಾಣಲು ಕನಿಷ್ಠ 7-8 ಗಂಟೆಯಾದರೂ ಕಣ್ತುಂಬ ನಿದ್ರೆ ಮಾಡುವುದು ಅಗತ್ಯ. ಮಲಗಿದಾಗ ತ್ವಚೆಯ ರಿಜುನುವೆಟ್‌ಗೆ ಅಗತ್ಯವಿರುವ ಕೊಲಾಜೆನ್‌ ಉತ್ಪತ್ತಿಯಾಗುತ್ತದೆ.

ಶೀಟ್‌ ಮಾಸ್ಕ್‌ ಉಪಯೋಗಿಸಿ

ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿರುವ ತ್ವಚೆಯ ಫ್ರೆಂಡ್ಲಿ ಹಾಗೂ ಅಗತ್ಯ ಪೌಷ್ಟಿಕಾಂಶಗಳನ್ನು ಪೂರೈಸುವ, ನಿಮ್ಮ ಸ್ಕಿನ್‌ ಟೋನ್‌ಗೆ ಮ್ಯಾಚ್‌ ಆಗುವ ಶೀಟ್‌ ಮಾಸ್ಕ್‌ ಆಯ್ಕೆ ಮಾಡಿ ಬಳಸಿ. ಇದು ಮುಖವನ್ನು ಕಾಂತಿಯುಕ್ತಗೊಳಿಸುತ್ತದೆ.

Use a scrub

ಸ್ಕ್ರಬ್‌ ಬಳಸಿ

ಸ್ಕ್ರಬ್‌ ಬಳಕೆಯಿಂದ ಚರ್ಮದ ಮೇಲಿನ ಡೆಡ್‌ ಸ್ಕಿನ್‌ ಹೋಗುತ್ತದೆ. ಜೊತೆಗೆ ರಕ್ತ ಸಂಚಾರ ಸುಗಮವಾಗುತ್ತದೆ. ಹೋಮ್‌ ಮೇಡ್‌ ಸ್ಕ್ರಬ್‌ ಉತ್ತಮ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Deepavali Mens Fashion: ದೀಪಾವಳಿ ಹಬ್ಬದ ಮೆನ್ಸ್ ಟ್ರೆಡಿಷನಲ್‌ ಸ್ಟೈಲಿಂಗ್‌ಗೆ ಸಾಥ್‌ ನೀಡುವ ಎಥ್ನಿಕ್‌ವೇರ್ಸ್

Continue Reading

ದೀಪಾವಳಿ

ದೀಪಾವಳಿ ಆಚರಣೆ ವೇಳೆ ಹಿಂದುಗಳ ಮೇಲೆ ಖಲಿಸ್ತಾನಿಗಳ ದಾಳಿ; ಕಲ್ಲು ತೂರಿದ ಉಗ್ರರು!

ಕೆನಡಾದಲ್ಲಿ ಖಲಿಸ್ತಾನಿ ಉಗ್ರರು, ಪ್ರತ್ಯೇಕವಾದಿಗಳು ಇದಕ್ಕೂ ಮೊದಲು ಕೂಡ ಹಿಂದುಗಳ ಮೇಲೆ ದಾಳಿ ನಡೆಸಿದ್ದಾರೆ. ಹಿಂದು ದೇವಾಲಯಗಳ ಮೇಲೆ ದಾಳಿ ನಡೆಸಲಾಗಿದೆ. ಈಗ ದೀಪಾವಳಿ ಆಚರಣೆ ವೇಳೆಯೂ ಖಲಿಸ್ತಾನಿ ಉಗ್ರರು ದಾಳಿ ನಡೆಸಿದ್ದಾರೆ.

VISTARANEWS.COM


on

Khalistani Attack
Koo

ಒಟ್ಟಾವ: ಕೆನಡಾದಲ್ಲಿ ಹಿಂದುಗಳ ಮೇಲೆ ಖಲಿಸ್ತಾನಿ ಉಗ್ರರು (Khalistani Terrorists), ಮೂಲಭೂತವಾದಿಗಳ ದಾಳಿ ಮುಂದುವರಿದಿದೆ. ಟೊರೊಂಟೊ ಹೊರವಲಯದ ಮಿಸ್ಸಿಸ್ಸೌಗ ಪಟ್ಟಣದಲ್ಲಿ ಹಿಂದುಗಳು ದೀಪಾವಳಿ (Deepavali 2023) ಆಚರಣೆ ಮಾಡುವ ವೇಳೆ ಖಲಿಸ್ತಾನಿ ಮೂಲಭೂತವಾದಿಗಳು ದಾಳಿ ನಡೆಸಿದ್ದಾರೆ. ಹಿಂದುಗಳ ಮೇಲೆ ಕಲ್ಲು ತೂರಾಟ ಮಾಡುವ, ಖಲಿಸ್ತಾನಿ ಧ್ವಜ ಹಾರಿಸಿ ಉದ್ಧಟತನ ಮಾಡಿರುವ ವಿಡಿಯೊ (Viral Video) ಈಗ ಲಭ್ಯವಾಗಿದೆ.

ಕೆನಡಾದ ಟೊರೊಂಟೊ ಸೇರಿ ಹಲವೆಡೆ ಹಿಂದುಗಳು ಸಡಗರ-ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ. ಆದರೆ, ಮಿಸ್ಸಿಸ್ಸೌಗ, ಬ್ರ್ಯಾಂಪ್ಟನ್‌ ಸೇರಿ ಕೆಲವೆಡೆ ಹಿಂದುಗಳು ಪಟಾಕಿ ಸಿಡಿಸಿ ದೀಪಾವಳಿ ಆಚರಣೆ ಮಾಡುವಾಗ ಖಲಿಸ್ತಾನಿ ಮೂಲಭೂತವಾದಿಗಳು ದಾಳಿ ನಡೆಸಿದ್ದಾರೆ. ಹಿಂದುಗಳ ಆಚರಣೆಗೆ ಅಡ್ಡಿಪಡಿಸುವ ಜತೆಗೆ ಕಲ್ಲು ತೂರಾಟ ಮಾಡಿದ್ದಾರೆ. ಖಲಿಸ್ತಾನಿ ಧ್ವಜ ಹಾರಿಸಿದ ಅವರು ಭಾರತ ವಿರೋಧಿ ಘೋಷಣೆಗಳನ್ನೂ ಕೂಗಿದ್ದಾರೆ ಎಂದು ತಿಳಿದುಬಂದಿದೆ.

ಭಾರತ ಹಾಗೂ ಕೆನಡಾ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗಿದೆ. ಕೆನಡಾದಲ್ಲಿರುವ ಭಾರತ ವಿರೋಧಿ ಚಟುವಟಿಕೆಗಳನ್ನು ನಿಗ್ರಹಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಆಗ್ರಹಿಸಿದ ಬಳಿಕ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಹಲವು ಉದ್ಧಟತನದ ಹೇಳಿಕೆ ನೀಡುತ್ತಿದ್ದಾರೆ. ಹಾಗೆಯೇ, ಕೆನಡಾದಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಹಿಂದೆ ಭಾರತದ ಕೈವಾಡ ಇದೆ ಎಂದೆಲ್ಲ ಆರೋಪಿಸಿದ್ದಾರೆ. ಇದಕ್ಕೆಲ್ಲ ಸೊಪ್ಪು ಹಾಕದ ಭಾರತ ಸರ್ಕಾರವು ಸಾಕ್ಷ್ಯ ಕೊಡಿ ಎಂದು ತಿರುಗೇಟು ನೀಡಿದೆ. ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವ ಬೆನ್ನಲ್ಲೇ ಕೆನಡಾದಲ್ಲಿ ಹಿಂದುಗಳ ಮೇಲೆ ದಾಳಿ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ಸ್ಫೋಟಕ್ಕೆ ಸಂಚು; ಭಾರತ ಆಗ್ರಹಿಸಿದ ಬಳಿಕ ತನಿಖೆಗೆ ಕೆನಡಾ ಆದೇಶ

ಏರ್‌ ಇಂಡಿಯಾ ವಿಮಾನ ಸ್ಫೋಟಿಸುವುದಾಗಿ ಪನ್ನುನ್‌ ಎಚ್ಚರಿಕೆ

ನವೆಂಬರ್‌ 19ರಂದು ಏರ್‌ ಇಂಡಿಯಾ ವಿಮಾನ ಸ್ಫೋಟಿಸುವುದಾಗಿ ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನುನ್‌ ಎಚ್ಚರಿಕೆ ನೀಡಿದ್ದಾನೆ. ನವೆಂಬರ್‌ 4ರಂದು ಗುರುಪತ್ವಂತ್‌ ಸಿಂಗ್‌ ಪನ್ನುನ್‌ ವಿಡಿಯೊ ಪೋಸ್ಟ್‌ ಮಾಡಿದ್ದ. “ನವೆಂಬರ್‌ 19ರಂದು ಸಿಖ್ಖರು ಏರ್‌ ಇಂಡಿಯಾ ವಿಮಾನಗಳಲ್ಲಿ ಪ್ರಯಾಣಿಸಬಾರದು.‌ ಅಂದು ಏರ್‌ ಇಂಡಿಯಾ ವಿಮಾನಗಳನ್ನು ಸ್ಫೋಟಿಸಲಾಗುವುದು” ಎಂದು ಹೇಳಿದ್ದ. ನವೆಂಬರ್‌ 19 ಇಂದಿರಾ ಗಾಂಧಿ ಜನ್ಮದಿನವಾದ ಕಾರಣ ಅಂದೇ ಏರ್‌ ಇಂಡಿಯಾ ವಿಮಾನಗಳನ್ನು ಸ್ಫೋಟಿಸಲಾಗುವುದು ಎಂದಿದ್ದಾನೆ. ಅಮೃತಸರದ ಸ್ವರ್ಣಮಂದಿರ ಹೊಕ್ಕಿದ್ದ ಉಗ್ರರ ವಿರುದ್ಧ ಇಂದಿರಾ ಗಾಂಧಿ ಅವರು ಆಪರೇಷನ್‌ ಬ್ಲ್ಯೂ ಸ್ಟಾರ್‌ಗೆ ಆದೇಶ ಮಾಡಿದ ಬಳಿಕ ಅವರು 1984ರಲ್ಲಿ ಹತ್ಯೆಗೀಡಾದರು. ಈಗ ಅವರ ಜನ್ಮದಿನದಂದೇ ಏರ್‌ ಇಂಡಿಯಾ ವಿಮಾನ ಸ್ಫೋಟಿಸಲು ಸಂಚು ರೂಪಿಸಲಾಗಿದೆ. ಭಾರತದ ಆಗ್ರಹದ ಬಳಿಕ ಈ ಕುರಿತು ತನಿಖೆ ನಡೆಸಲಾಗುವುದು ಎಂದು ಕೆನಡಾ ತಿಳಿಸಿದೆ.

Continue Reading

ದೀಪಾವಳಿ

ಬ್ರಿಟನ್ ಪಿಎಂ ಕಚೇರಿಯಲ್ಲಿ ದೀಪಾವಳಿ! ಗಮನ ಸೆಳೆದ ಅಕ್ಷತಾ ಮೂರ್ತಿ ಉಡುಗೆ

Diwali 2023: ಬ್ರಿಟನ್ ಪಿಎಂ ಸರ್ಕಾರಿ ಅಧಿಕೃತ ನಿವಾಸದಲ್ಲಿ ಈ ಬಾರಿ ದೀಪಾವಳಿ ಸಂಭ್ರಮ ಮನೆ ಮಾಡಿತ್ತು. ಕರ್ನಾಟಕದ ಅಳಿಯನಾಗಿರುವ ಬ್ರಿಟನ್ ಪಿಎಂ ರಿಷಿ ಸುನಕ್ ಹಾಗೂ ಅವರ ಪತ್ನಿ ಅಕ್ಷತಾ ಮೂರ್ತಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದರು.

VISTARANEWS.COM


on

Diwali in British PM's office! Akshata Murthy fashionable dress caught attention
Koo

ಲಂಡನ್: ಬ್ರಿಟನ್ ಪ್ರಧಾನಿ ಅಧಿಕೃತ ಕಚೇರಿ ನಿವಾಸದಲ್ಲಿ (10 Downing Street) ಈ ಬಾರಿ ದೀಪಾವಳಿಯ ( Diwali 2023) ಕಲರವ ಮೇಳೈಸಿತ್ತು. ಪ್ರಧಾನಿ ರಿಷಿ ಸುನಕ್ (UK PM Rishi Sunak) ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ (Akshata Murty) ಹಾಗೂ ಮಕ್ಕಳು ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಅಕ್ಷತಾ ಅವರು ಯಾವಾಗಲೂ ಫ್ಯಾಶನೇಬಲ್ ಆಗಿರುತ್ತಾರೆ. ಈಗ ದೀಪಾವಳಿಯಂದು ಅವರ ಸಾಂಪ್ರದಾಯಿಕ ಉಡುಗೆ ಗಮನ ಸೆಳೆದಿದೆ. ಅಕ್ಷತಾ ಅವರು ಎಲೆಕ್ಟ್ರಿಕ್ ನೀಲಿ ಮೈಸೂರು ರೇಷ್ಮೆ ಸೀರೆಯಲ್ಲಿ ಸೊಗಸಾಗಿ ಕಾಣುತ್ತಿದ್ದರು. ಅವರು ಸೀರೆಯನ್ನು ಸೊಗಸಾಗಿ ಧರಿಸಿದ್ದರು. ಸೀರೆಯೊಂದಿಗೆ ಸಣ್ಣ ತೋಳಿನ ಕುಪ್ಪಸವನ್ನು ಧರಿಸಿದ್ದರು. ಸರಳವಾದ ಸೀರೆಯು ತೆಳುವಾದ ಚಿನ್ನದ ಅಂಚುಗಳನ್ನು ಪ್ರದರ್ಶಿಸಿತು ಮತ್ತು ಕುಪ್ಪಸವು ಹೂವಿನ ಮೋಟಿಫ್‌ಗಳನ್ನು ಒಳಗೊಂಡಿತ್ತು. ಅಕ್ಷತಾ ಒಂದು ಜೊತೆ ನೇತಾಡುವ ಕಿವಿಯೋಲೆಗಳು, ಗಂಡಬೇರುಂಡ ನೆಕ್ಲೇಸ್ ಮತ್ತು ಬಳೆಗಳನ್ನು ಧರಿಸಿದ್ದರು.

ಯುಕೆ ಪ್ರಧಾನಿ ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ ಯಾವಾಗಲೂ ಪ್ರೇಕ್ಷಕರ ಮೇಲೆ ಫ್ಯಾಶನ್ ಪ್ರಭಾವ ಬೀರಿದ್ದಾರೆ. ನವದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆ ಅಥವಾ ಅಂತರಾಷ್ಟ್ರೀಯ ಶೃಂಗಸಭೆಗಳಿಗೆ ಆಕೆಯ ವಿಶಿಷ್ಟ ತೊಡುಗೆ, ಆಕೆಯ ಶೈಲಿ ಮತ್ತು ಸೊಬಗುಗೆ ಮಿತಿಯಿರಲಿಲ್ಲ.

ದಿಲ್ಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಅಕ್ಷತಾ ಮೂರ್ತಿ ಅವರ ವಾರ್ಡ್ರೋಬ್ ಆಯ್ಕೆಗಳು ಉನ್ನತ ದರ್ಜೆಯದ್ದಾಗಿದ್ದವು ಎಂಬುದು ಮನವರಿಕೆಯಾಗಿತ್ತು. ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ನಡೆದ ರಾಗಿ ಪ್ರದರ್ಶನಕ್ಕಾಗಿ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಆಯೋಜಿಸಿದ್ದ ಜಿ20 ಸಂಗಾತಿಗಳ ಕಾರ್ಯಕ್ರಮಕ್ಕೆ ಮುದ್ರಿತ ನೀಲಕ ಮಿಡಿ ಉಡುಗೆಯನ್ನು ಆರಿಸಿಕೊಂಡಿದ್ದರು. ಉಡುಪಿನಲ್ಲಿ ಹೂವಿನ ಮುದ್ರಿತ ನಾಟಕೀಯ ಪಫ್ಡ್ ಸ್ಲೀವ್‌ಗಳು ಎ-ಲೈನ್ ಸಿಲೂಯೆಟ್ ಮತ್ತು ಭುಗಿಲೆದ್ದ ಕೆಳಭಾಗವನ್ನು ಒಳಗೊಂಡಿತ್ತು. ಇದು ಆಕರ್ಷಕವಾಗಿತ್ತು.

ಈಗ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಕ್ಷತಾ ಮೂರ್ತಿ ಅವರು ತೊಡುಗೆ ಶೈಲಿಯ ಮತ್ತೊಮ್ಮೆ ಜಗತ್ತಿನ ಮುಂದೆ ಅನಾವರಣಗೊಂಡಿದೆ. ಅಕ್ಷತಾ ಮೂರ್ತಿ ಅವರು ತಮ್ಮ ಫ್ಯಾಶನೇಬಲ್ ಸ್ಟೇಟ್‌ಮೆಂಟ್ ಮಾಡಿದ್ದಾರೆ. ಬ್ರಿಟನ್ ಪ್ರಧಾನಿಯ ಮನೆಯಲ್ಲಿ ನಡೆದ ದೀಪಾವಳಿ ಹಬ್ಬದ ಆಚರಣೆಯು ವಾವ್ ಎನ್ನುವಂತಿತ್ತು. ಇದಕ್ಕೆ ಅಕ್ಷತಾ ಮೂರ್ತಿ ಅವರು ಉಡುಗೆ-ತೊಡುಗೆ ಕಳಶವಿಟ್ಟಂತೆ ಇತ್ತು ಎಂದು ಫ್ಯಾಶನ್ ಜಗತ್ತಿನ ತಜ್ಞರು ಮಾತನಾಡಿಕೊಳ್ಳುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: 75 ವರ್ಷದಲ್ಲೇ ಮೊದಲ ಬಾರಿಗೆ ಕಾಶ್ಮೀರದ ಶಾರದಾ ದೇವಿ ದೇಗುಲದಲ್ಲಿ ದೀಪಾವಳಿ ಆಚರಣೆ!

Continue Reading

ಕ್ರಿಕೆಟ್

KL Rahul: ಕನ್ನಡದಲ್ಲೇ ದೀಪಾವಳಿಯ ಶುಭ ಕೋರಿದ ಕೆ.ಎಲ್​ ರಾಹುಲ್​

ಟೀಮ್ ಇಂಡಿಯಾದ ಸ್ಟಾರ್​ ಆಟಗಾರ, ಕನ್ನಡಿಗ ಕೆ.ಎಲ್​ ರಾಹುಲ್(KL Rahul)​ ಅವರು ನಾಡಿದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ(diwali wishes) ಕೋರಿದ್ದಾರೆ.

VISTARANEWS.COM


on

kl rahul century celebration
Koo

ಬೆಂಗಳೂರು: ದೇಶಾದ್ಯಂತ ದೀಪಾವಳಿ(diwali 2023) ಹಬ್ಬದ ಸಂಭ್ರಮ ಜೋರಾಗಿದೆ. ಎಲ್ಲೆಲ್ಲೂ ಪಟಾಕಿ ಸದ್ದು ಕೇಳಿಸುತ್ತಿದೆ. ಕುಟುಂಬಸ್ಥರು, ಸಂಬಂಧಿಕರು, ಗೆಳೆಯರ ಜತೆ ಹಬ್ಬದ ಆಚರಣೆ ಭರ್ಜರಿಯಾಗಿದೆ. ಇದರ ಬೆನ್ನಲೇ ಟೀಮ್ ಇಂಡಿಯಾದ ಸ್ಟಾರ್​ ಆಟಗಾರ, ಕನ್ನಡಿಗ ಕೆ.ಎಲ್​ ರಾಹುಲ್(KL Rahul)​ ಅವರು ನಾಡಿದ ಜನತೆಗೆ ದೀಪಾವಳಿ ಶುಭಾಶಯ(diwali wishes) ಕೋರಿದ್ದಾರೆ​. ಅದು ಕೂಡ ಕನ್ನಡದಲ್ಲೇ ಶುಭ ಕೋರಿ ಎಲ್ಲ ಕನ್ನಡಿಗರ ಹೃದಯ ಗೆದ್ದಿದ್ದಾರೆ.

ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ರಾಹುಲ್ ಅವರು ಶತಕ ಬಾರಿಸಿ ಸಂಭ್ರಮಿಸಿದ್ದರು. ತಮ್ಮ ಶತಕದ ಮತ್ತು ಪಂದ್ಯದ ಫೋಟೊಗಳನ್ನು ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಾಕಿ ‘ದೀಪಾವಳಿಯ ಶುಭಾಶಯಗಳು’ ಎಂದು ಬರೆದು ತಿವರ್ಣ ಧ್ವಜ ಮತ್ತು ಹಣತೆಯ ಎಮೋಜಿಯನ್ನು ಹಾಕಿದ್ದಾರೆ.

ದಾಖಲೆ ಬರೆದ ರಾಹುಲ್​

ನೆದರ್ಲೆಂಡ್ಸ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಕೆ.ಎಲ್ ರಾಹುಲ್ 62 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ವಿಶ್ವಕಪ್​ನಲ್ಲಿ ಅತಿ ವೇಗದ ಶತಕ ಬಾರಿಸಿದ ಭಾರತೀಯ ಬ್ಯಾಟರ್​​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ವೇಳೆ ಅವರು 2023 ರ (ಹಾಲಿ ಆವೃತ್ತಿಯ) ವಿಶ್ವಕಪ್​ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ 63 ಎಸೆತಗಳಲ್ಲಿ ಶತಕ ಬಾರಿಸಿದ ರೋಹಿತ್ ಶರ್ಮಾ ಅವರ ದಾಖಲೆ ಅವರು ಮುರಿದರು.

ರಾಹುಲ್ 64 ಎಸೆತಗಳಲ್ಲಿ 102 ರನ್ ಗಳಿಸುವ ಹಾದಿಯಲ್ಲಿ 11 ಬೌಂಡರಿ ಮತ್ತು ನಾಲ್ಕು ಸಿಕ್ಸರ್​ಗಳನ್ನು ಬಾರಿಸಿದರು, ಇದು ವಿಶ್ವಕಪ್ ಪಂದ್ಯದಲ್ಲಿ ಭಾರತವನ್ನು ಎರಡನೇ ಅತಿ ಹೆಚ್ಚು ಮೊತ್ತಕ್ಕೆ (410/4) ಮುನ್ನಡೆಸಿತು. ಇದು ರಾಹುಲ್ ಅವರ ಆರನೇ ಏಕದಿನ ಶತಕವಾಗಿದೆ. ಭಾರತದ 5ನೇ ಕ್ರಮಾಂಕದ ಬ್ಯಾಟರ್​ ಶ್ರೇಯಸ್ ಅಯ್ಯರ್ ಜೊತೆಗೂಡಿ 208 ರನ್​ಗಳ ಜೊತೆಯಾಟವಾಡಿದ್ದು, ಇದು ಏಕದಿನ ವಿಶ್ವಕಪ್​​ನಲ್ಲಿ ನಾಲ್ಕನೇ ವಿಕೆಟ್​ಗೆ ಅತಿ ಹೆಚ್ಚು ರನ್​ಗಳ ಜೊತೆಯಾಟದ ದಾಖಲೆಯಾಗಿದೆ.

ಇದನ್ನೂ ಓದಿ MS Dhoni: ಧೋನಿ ಕುಟುಂಬದೊಂದಿಗೆ ದೀಪಾವಳಿ ಆಚರಿಸಿದ ರಿಷಭ್​ ಪಂತ್​

ತವರಿನ ಅಂಗಳದಲ್ಲಿ ರಾಹುಲ್ ಅವರು ಪ್ರಚಂಡ ಬ್ಯಾಟಿಂಗ್​ ತೋರ್ಪಡಿಸುವ ಮೂಲಕ ನೆರೆದಿದ್ದ ತವರಿನ ಅಭಿಮಾನಿಗಳಿಗೆ ಭರಪೂರ ರಂಚನೆ ನೀಡಿದರು. ಬ್ಯಾಟಿಂಗ್​ ಮಾತ್ರವಲ್ಲದೆ ಕೀಪಿಂಗ್​ನಲ್ಲಿಯೂ ಮಿಂಚಿದ ಅವರು 2 ಅದ್ಭುತ ಕ್ಯಾಚ್​ಗಳನ್ನು ಕೂಡ ಹಿಡಿದು ಮಿಂಚಿದರು.

ಜತೆಯಾಟದಲ್ಲಿಯೂ ದಾಖಲೆ ಬರೆದ ರಾಹುಲ್​

ಈ ಪಂದ್ಯದಲ್ಲಿ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಭಾರತ ತಂಡದ ಪರವಾಗಿ ನಾಲ್ಕನೇ ಅತ್ಯಧಿಕ ರನ್​ಗಳ ಜತೆಯಾಟ ನಡೆಸಿ ದಾಖಲೆಯ ಬರೆದರು. ಉಭಯ ಆಟಗಾರರು ನಾಲ್ಕನೇ ವಿಕೆಟ್​ಗೆ 208 ರನ್​ಗಳ ಜತೆಯಾಟ ನೀಡಿದರು. ಈ ಮೂಕಲ ವಿಶ್ವಕಪ್​ನಲ್ಲಿ ನಾಲ್ಕನೇ ವಿಕೆಟ್ ಅಥವಾ ಅದಕ್ಕಿಂತ ಕಡಿಮೆ ವಿಕೆಟ್​ಗೆ ಭಾರತದ ಅತ್ಯಧಿಕ ಜತೆಯಾಟ ನಡೆಸಿದ ದಾಖಲೆ ನಿರ್ಮಿಸಿದರು.

Continue Reading
Advertisement
Ishan Kishan
ಕ್ರೀಡೆ7 mins ago

Ishan Kishan: ಐಪಿಎಲ್​ ನೀತಿ ಸಂಹಿತೆ ಉಲ್ಲಂಘನೆ; ಇಶಾನ್​ ಕಿಶನ್​ಗೆ ಬಿತ್ತು ದಂಡದ ಬರೆ

5 PM for 5 years if Congress comes to power says PM Narendra Modi
Lok Sabha Election 20248 mins ago

PM Narendra Modi: ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ 5 ವರ್ಷಕ್ಕೆ 5 ಪಿಎಂ; ಕರ್ನಾಟಕದಲ್ಲಿ ಶಿಕ್ಷಣ ನೀತಿಯಲ್ಲೂ ರಾಜಕೀಯ: ಮೋದಿ ಕಿಡಿ

Summer Fashion
ಫ್ಯಾಷನ್22 mins ago

Summer Fashion: ಬೇಸಿಗೆಯಲ್ಲಿ ಕ್ರಾಪ್‌ ಟೀ ಶರ್ಟ್‌ ಸ್ಟೈಲಿಂಗ್‌ಗೆ 3 ಐಡಿಯಾ

Drugs Smuggling
ದೇಶ27 mins ago

Drugs Smuggling: ಗುಜರಾತ್‌ನಲ್ಲಿ ಪಾಕ್‌ನ 14 ಜನರ ಬಂಧನ, 600 ಕೋಟಿ ರೂ. ಮೌಲ್ಯದ ಡ್ರಗ್ಸ್‌ ಜಪ್ತಿ!

Shiva Rajkumar Graces Muhurtha Of Father Kannada Movie
ಸ್ಯಾಂಡಲ್ ವುಡ್28 mins ago

Shiva Rajkumar: ಸೆಟ್ಟೇರಿತು ಶಿವರಾಜ್‌ಕುಮಾರ್‌ – ಆರ್ ಚಂದ್ರು ಕಾಂಬಿನೇಷನ್‌ನ ಹೊಸ ಸಿನಿಮಾ!

Hassan Pen Drive Case
ಕರ್ನಾಟಕ35 mins ago

Hassan Pen Drive Case: ಹಾಸನ ಅಶ್ಲೀಲ ವಿಡಿಯೊ ಪ್ರಕರಣ; ಬಿ.ಕೆ.ಸಿಂಗ್‌ ನೇತೃತ್ವದಲ್ಲಿ ಎಸ್‌ಐಟಿ ರಚನೆ

Congress fears defeat over EVMs Congress will not win a single seat in Karnataka says PM Narendra Modi
Lok Sabha Election 202440 mins ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

ದೇಶ55 mins ago

Trinmool Congress: ಟಿಎಂಸಿ ಕಾರ್ಯಕರ್ತನ ಭೀಕರ ಹತ್ಯೆ; ಬಿಜೆಪಿ ನಾಯಕಿ ಮೇಲೆ ಡೆಡ್ಲಿ ಅಟ್ಯಾಕ್‌!

Crime News
ವೈರಲ್ ನ್ಯೂಸ್1 hour ago

ನೆಚ್ಚಿನ ಶ್ವಾನ ಮರಿ ನಾಪತ್ತೆಯಾದ ಕೊರಗಿನಿಂದ ಆತ್ಮಹತ್ಯೆಗೆ ಶರಣಾದ 12 ವರ್ಷದ ಬಾಲಕಿ

Pakistan Cricket
ಕ್ರಿಕೆಟ್1 hour ago

Pakistan Cricket: ಭಾರತಕ್ಕೆ ವಿಶ್ವಕಪ್​ ಗೆಲ್ಲಿಸಿಕೊಟ್ಟ ಗ್ಯಾರಿ ಕರ್ಸ್ಟನ್ ಪಾಕ್​ ತಂಡಕ್ಕೆ ನೂತನ ಕೋಚ್​

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Congress fears defeat over EVMs Congress will not win a single seat in Karnataka says PM Narendra Modi
Lok Sabha Election 202440 mins ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20243 hours ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20245 hours ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20245 hours ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
ಪ್ರಮುಖ ಸುದ್ದಿ8 hours ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ12 hours ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 20241 day ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ1 day ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ2 days ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ2 days ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

ಟ್ರೆಂಡಿಂಗ್‌