Tulsi Puja 2022 | ಉತ್ಥಾನ ದ್ವಾದಶಿಯಂದು ತುಳಸಿಯೊಂದಿಗೆ ನೆಲ್ಲಿಗಿಡಕ್ಕೇಕೆ ಪೂಜೆ? - Vistara News

ದೀಪಾವಳಿ

Tulsi Puja 2022 | ಉತ್ಥಾನ ದ್ವಾದಶಿಯಂದು ತುಳಸಿಯೊಂದಿಗೆ ನೆಲ್ಲಿಗಿಡಕ್ಕೇಕೆ ಪೂಜೆ?

ಕಾರ್ತಿಕ ಮಾಸ ಶುಕ್ಲ ಪಕ್ಷ ದ್ವಾದಶಿಯಂದು ಅಂದರೆ ಉತ್ಥಾನ ದ್ವಾದಶಿಯಂದು ತುಳಸಿ ಹಬ್ಬ (Tulsi Puja 2022). ಈ ಹಬ್ಬದ ಮಹತ್ವವೇನು? ತುಳಸಿ ವಿವಾಹ ಏಕೆ? ಎಂದು ವಿವರಿಸುವ ಲೇಖನ ಇಲ್ಲಿದೆ.

VISTARANEWS.COM


on

Tulsi Puja 2022
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Navaratri 2022

ವಿದ್ವಾನ್ ಬಿ. ಜಿ. ಅನಂತ
ಶರದೃತು ಎಂದರೆ ಅದು ಹಬ್ಬಗಳ ಕಾಲ. ಯೋಗಾಭ್ಯಾಸವನ್ನು ಪ್ರಾರಂಭ ಮಾಡುವವರು ಶರತ್ಕಾಲದಲ್ಲಿ ಅದನ್ನು ಪ್ರಾರಂಭಿಸಬೇಕು ಎನ್ನುತ್ತದೆ ಯೋಗಶಾಸ್ತ್ರ. ಪ್ರಸ್ತುತ ಕಾರ್ತಿಕ ಮಾಸವು ಶರದೃತುವಿನಲ್ಲಿ ಬರುವ ಒಂದು ಮಾಸ ವಿಶೇಷ. ಈ ಮಾಸವನ್ನು  ಪ್ರಧಾನವಾಗಿ ಯೋಗದ ಸಾಧನೆಗೆ  ಹೇಳಲಾಗಿದೆ. “ಕಾರ್ತಿಕೇ ಜ್ಞಾನ ಸಿದ್ಧಿಃ ಸ್ಯಾತ್ʼʼ-ಎಂದರೆ ಕಾರ್ತಿಕ ಮಾಸದಲ್ಲಿ ಜ್ಞಾನ ಸಿದ್ಧಿಯು ಉಂಟಾಗುತ್ತದೆ ಎಂದು. ಅಂತೆಯೇ “ಕಾರ್ತಿಕೇ ತು ಕೃತಾ ದೀಕ್ಷಾ ನೃಣಾಂ ಜನ್ಮವಿಮೋಚಿನೀʼʼ ಎಂಬಂತೆ ಕಾರ್ತಿಕ ಮಾಸವು ಮಂತ್ರ ದೀಕ್ಷೆಯ ಸ್ವೀಕಾರಕ್ಕೂ ಪ್ರಶಸ್ತವಾದದ್ದು.

ಇನ್ನು ಚಂದ್ರನು ಕೃತಿಕಾ ನಕ್ಷತ್ರದಲ್ಲಿ ತನ್ನ ಪೂರ್ಣತೆಯನ್ನು ಎಂದರೆ ಹುಣ್ಣಿಮೆಯನ್ನು ಕಾಣುವ ಮಾಸ ಕಾರ್ತಿಕ ಮಾಸ. ಕೃತಿಕಾ ನಕ್ಷತ್ರದ ಅಧಿದೇವತೆ ಸುಬ್ರಹ್ಮಣ್ಯ. ಹಾಗಾಗಿ ಇದು ಸುಬ್ರಹ್ಮಣ್ಯನಿಗೂ ಮತ್ತು ಶಿವನಿಗೂ ಪ್ರಿಯವಾದ ಎಂದರೆ ಅವರುಗಳ ಆರಾಧನೆಗೂ ಕೂಡ ಪ್ರಶಸ್ತವಾದ ಕಾಲ ಎಂದರ್ಥ. “ಜ್ಞಾನಂ ಮಹೇಶ್ವರಾದಿಚ್ಛೇತ್ʼʼ -ಎಂದರೆ ಆತ್ಮ ಜ್ಞಾನವನ್ನು ಬಯಸುವವರು ಮಹೇಶ್ವರನಿಂದ ಅದನ್ನು ಪಡೆಯಬೇಕು ಎಂಬ ಮಾತಿದೆ. ಹಾಗಾಗಿಯೇ ಈ ಮಾಸದಲ್ಲಿ ಬರುವ ಸೋಮವಾರಗಳು ಶಿವನಿಗೆ ಅತ್ಯಂತ ಪ್ರಿಯವಾದವುಗಳಾಗಿವೆ.

ಕಾರ್ತಿಕ ಮಾಸದ ಇತರ ಪರ್ವ ದಿವಸಗಳು
ಕಾರ್ತಿಕ ಶುಕ್ಲ ನವಮಿಯು ವಿಷ್ಣುತ್ರಿರಾತ್ರ ವ್ರತಕ್ಕೆ ನಿಯತವಾದ ಕಾಲವಾಗಿದೆ. ಕಾರ್ತಿಕ ಶುಕ್ಲ ಚತುರ್ದಶಿಯು ವೈಕುಂಠ ಚತುರ್ದಶಿ ಎಂದು ವೈಕುಂಠ ನಾರಾಯಣನ ಆರಾಧನೆಗೂ ಅಂತೆಯೇ ವಿಶ್ವೇಶ್ವರನ ಪ್ರತಿಷ್ಠಾ ದಿನವೆಂದು ಶಿವನ ಆರಾಧನೆಗೂ ಪ್ರಶಸ್ತವಾಗಿದೆ. 

ಕಾರ್ತಿಕ ಪೂರ್ಣಿಮೆಯು ಮತ್ಸ್ಯಾವತಾರದ ದಿನವೆಂದು ನಾರಾಯಣನ ಪೂಜೆಗೂ ತ್ರಿಪುರೋತ್ಸವ ದಿನವೆಂದು ಶಿವನ ಆರಾಧನೆಗೂ ಶ್ರೇಷ್ಠವಾಗಿದೆ. ಹೀಗೆ ಕಾರ್ತಿಕ ಮಾಸವು ಶಿವನ ಆರಾಧನೆಗೂ, ವಿಷ್ಣುವಿನ ಆರಾಧನೆಗೂ ಪ್ರಶಸ್ತವಾದ ಕಾಲವಾಗಿದೆ. ಒಟ್ಟಾರೆ ಜ್ಞಾನ ಭಕ್ತಿ ವೈರಾಗ್ಯ ಇವುಗಳ ಸಾಧನೆಗೆ ಪ್ರಶಸ್ತ ವಾಗಿರುವ ಕಾಲ ಎಂದಂತಾಯಿತು. ಇದರಲ್ಲಿ ಅತ್ಯಂತ ಪ್ರಸಿದ್ಧವಾಗಿರುವುದು ಉತ್ಥಾನ ದ್ವಾದಶೀ (Tulsi Puja 2022) ಎಂಬ ಮಹಾಪರ್ವ.

ಏನಿದು ಉತ್ಥಾನ ದ್ವಾದಶೀ?
ಹೆಸರೇ ಹೇಳುವಂತೆ ಇದು ದ್ವಾದಶೀ ತಿಥಿಯಂದು ಬರುತ್ತದೆ. ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ರೇವತೀ ನಕ್ಷತ್ರದ ಯೋಗವಿಲ್ಲದೇ ಇರುವ ದಿವಸದಲ್ಲಿ ಉತ್ಥಾನ ದ್ವಾದಶಿಯನ್ನು ಆಚರಿಸಬೇಕು. ಒಂದೊಮ್ಮೆ ರೇವತಿ ನಕ್ಷತ್ರದ ಯೋಗವು ಇಲ್ಲದೇ ಇರುವ ದ್ವಾದಶಿಯು ದೊರಕದಿದ್ದರೆ, ರೇವತಿಯ ನಾಲ್ಕನೆಯ ಭಾಗವನ್ನಾದರೂ ಬಿಟ್ಟು ಆಚರಿಸಬೇಕು.

ಯಾರು ಇದರ ಆರಾಧ್ಯ ದೈವ?
ಪ್ರಧಾನವಾಗಿ ಧಾತ್ರಿ ಎಂದರೆ ನೆಲ್ಲಿಯ ಗಿಡ, ತುಳಸಿ ಮತ್ತು ಮಹಾವಿಷ್ಣು ಈ ಮೂವರೂ ಉತ್ಥಾನ ದ್ವಾದಶೀ ದಿವಸದಂದು ಪೂಜಿಸಲ್ಪಡುವ ದೇವರುಗಳು.  ಅದರಲ್ಲಿಯೂ ಮಹಾವಿಷ್ಣುವು ಇಂದಿನ ದಿವಸದ ಪ್ರಧಾನ ಆರಾಧ್ಯದೈವ.

Tulsi Puja 2022

ಹಬ್ಬದ ಹಿನ್ನೆಲೆ ಏನು?
ಈ ಹಬ್ಬಕ್ಕೆ ಸಂಕ್ಷೇಪವಾಗಿ ಈ ರೀತಿಯಾಗಿ ಹಿನ್ನೆಲೆಯನ್ನು ಸ್ಮರಿಸಿಕೊಳ್ಳಬಹುದು- ಉತ್ಥಾನ ದ್ವಾದಶಿಗೆ ನಾಲ್ಕು ತಿಂಗಳ ಮುಂಚೆ ವ್ಯಾಸ ಪೂರ್ಣಿಮೆ ಎಂಬ ಪರ್ವವು ಆಚರಿಸಲ್ಪಡುತ್ತದೆ. ಅದು ವರ್ಷಾಕಾಲದ ಆರಂಭ. ಅಂದು ಮೊದಲುಗೊಂಡು ಎಲ್ಲರೂ ಚಾತುರ್ಮಾಸ್ಯ ವ್ರತವನ್ನು ಪ್ರಾರಂಭ ಮಾಡಿರುತ್ತಾರೆ. ಅಂದು ಶುರುವಾದ ಚಾತುರ್ಮಾಸ್ಯ ವ್ರತವನ್ನು ಉತ್ಥಾನ ದ್ವಾದಶಿಯ ದಿವಸ ಮಂಗಳ ಮಾಡಬೇಕು, ಎಂದರೆ ಕೊನೆಗಾಣಿಸಬೇಕು.

ಚಾತುರ್ಮಾಸ್ಯದ ಸಮಯದಲ್ಲಿ ಮಹಾವಿಷ್ಣುವು ತಾನು ಯೋಗ ನಿದ್ರೆಯಲ್ಲಿ ಪವಡಿಸಿರುತ್ತಾನೆ ಎನ್ನುತ್ತವೆ ಶಾಸ್ತ್ರಗಳು.  ಈ ಉತ್ಥಾನ ದ್ವಾದಶಿಯ ದಿವಸ ಮಹಾವಿಷ್ಣುವು ತನ್ನ ಅಜಾಡ್ಯ ನಿದ್ರೆಯನ್ನು ತೊರೆದು ಜಾಗರೂಕನಾಗಿ ಲೋಕವನ್ನೆಲ್ಲ ಅನುಗ್ರಹಿಸುವ ಕಾಲ. ಎಂದರೆ ಭಕ್ತರು ತಮ್ಮ ಸ್ವಾಮಿಯಾದ ಮಹಾವಿಷ್ಣುವಿಗೆ ಸುಪ್ರಭಾತವನ್ನು ಹಾಡಿ ಎದ್ದೇಳಿಸುವ ಕಾಲ. “ಎಲೈ ಜಗದೊಡೆಯನೇ ಗೋವಿಂದನೇ ದೇವೇಶನೇ ಎದ್ದೇಳು ಮೋಡಗಳು ಹೊರಟುಹೋದವು, ಆಕಾಶವು ನಿರ್ಮಲವಾಯಿತು. ನಾನು ಸಮರ್ಪಿಸುವ ಈ ಶರತ್ಕಾಲದ ಪುಷ್ಪಗಳನ್ನು ಸ್ವೀಕರಿಸು, ನಾನು ಮಾಡಿದ ಚಾತುರ್ಮಾಸ್ಯ ವ್ರತವು ನಿನ್ನ ಪ್ರೀತಿಗೆ ವಿಷಯವಾಗಲಿ ಇದರಲ್ಲಿ ಉಂಟಾಗಿರುವ ಕುಂದುಕೊರತೆಗಳು ನಿನ್ನ ಅನುಗ್ರಹದಿಂದ ಪೂರ್ಣವಾಗಲಿದೆʼʼ ಎಂದು ಭಗವಂತನ ಎದುರಿಗೆ ಚಾತುರ್ಮಾಸ್ಯ ವ್ರತಕ್ಕೆ ಸಮಾಪ್ತಿ ಮಂಗಳವನ್ನು ಮಾಡಬೇಕು.

ಹಾಗೆ ಎಚ್ಚರಗೊಂಡ ಭಗವಂತನನ್ನು ರಥದಲ್ಲಿ ಕೂರಿಸಿ ಬಿಜಯ ಮಾಡಿಸಿ (ಉತ್ಸವ) ವಾದ್ಯ ಸಮೇತವಾಗಿ ಮೆರವಣಿಗೆಯನ್ನು ಮಾಡಿಸಬೇಕು. ಉತ್ಸವದ ಸಂದರ್ಭದಲ್ಲಿ ತಮ್ಮ ತಮ್ಮ ಮನೆಯ ಬಾಗಿಲಿಗೆ ಬರುವ ಭಗವಂತನನ್ನು ಎಲ್ಲರೂ ಪರಮ ಪ್ರೀತಿಯಿಂದ ಸ್ವಾಗತಿಸಿ ನಮಸ್ಕರಿಸಬೇಕು. ಹೂವು ಹಣ್ಣು ತೆಂಗಿನಕಾಯಿ ತಾಂಬೂಲ ಇತ್ಯಾದಿಗಳನ್ನು ಭಗವಂತನಿಗೆ ಸಮರ್ಪಿಸಬೇಕು.  ಹೊಸದಾದ ನೆಲ್ಲಿಯ ಕಾಯಿಯನ್ನು ಕೊರೆದು ಅದರಲ್ಲಿ ಹಸುವಿನ ತುಪ್ಪವನ್ನು ಹಾಕಿ ದೀಪವನ್ನು ಹಚ್ಚಿ ಆ ದೀಪದಿಂದ ಭಗವಂತನಿಗೆ ಆರತಿಯನ್ನು ಎತ್ತುವ ಸಂಪ್ರದಾಯವಿದೆ.

ತುಳಸಿ ವಿವಾಹ
ಮಹಾವಿಷ್ಣುವನ್ನು ಎಚ್ಚರಗೊಳಿಸುವ ಪ್ರಬೋಧೋತ್ಸವದೊಂದಿಗೆ ತುಳಸೀ ವಿವಾಹವನ್ನು (Tulsi Puja 2022) ಮಾಡುವ ಪದ್ಧತಿಯಿದೆ.  ಶ್ರೀ ಭಗವಂತನಿಗೂ ಮತ್ತು ತುಳಸೀದೇವಿಗೂ ವಿವಾಹವನ್ನು ಮಾಡಿ, ಮಹಾವಿಷ್ಣುವಿಗೆ ತುಳಸಿಯನ್ನು ದಾನವಾಗಿ ಕೊಡಬೇಕು. ಇದರಿಂದ ನನಗೆ ಮೋಕ್ಷವು ಸಿಗಲಿ ಎಂದು ಪ್ರಾರ್ಥಿಸಬೇಕು. ಅಂತೆಯೇ ಹೊಸ ನೆಲ್ಲಿಕಾಯಿಯಿಂದ ಕೂಡಿದ ನೆಲ್ಲಿ ಕೊಂಬೆಯೊಡನೆ ತುಳಸೀ ಗಿಡವನ್ನು ಸೇರಿಸಿ ಮಧ್ಯದಲ್ಲಿ ಶ್ರೀ ಕೃಷ್ಣನ ವಿಗ್ರಹವನ್ನು ಇಟ್ಟು ಪೂಜಿಸುವ ಪದ್ಧತಿಯೂ ಇದೆ. ಇಲ್ಲಿಯೂ ಕೂಡ ಪೂಜೆಯಲ್ಲಿ ದೀಪವನ್ನು ಹತ್ತಿಸುವಾಗ ನೆಲ್ಲಿಕಾಯನ್ನು ಬಟ್ಟಲಾಗಿ ಮಾಡಿಕೊಂಡು ಅದರಲ್ಲಿ ಶುದ್ಧವಾದ ಹಸುವಿನ ತುಪ್ಪದ ದೀಪವನ್ನು ಹಚ್ಚುವುದು ಬಹಳ ಶ್ರೇಷ್ಠ. ಹಸುವಿನ ತುಪ್ಪವು ದೊರಕದಿದ್ದರೆ ಎಳ್ಳೆಣ್ಣೆಯಿಂದ ದೀಪವನ್ನು ಹಚ್ಚುವ ವಾಡಿಕೆಯೂ ಇದೆ.

ಇಲ್ಲಿ ಕೆಲವು ಪ್ರಶ್ನೆಗಳು ಬರಬಹುದು. ಭಗವಂತನು ಸದಾ ಸರ್ವದಾ ಎಚ್ಚರವಾಗಿರುವವನು. ಅವನಿಗೆ ನಿದ್ರೆಯುಂಟೆ? ಅದೂ 4 ತಿಂಗಳುಗಳ ಕಾಲ?  ಹಾಗೊಮ್ಮೆ ಅವನು ನಾಲ್ಕು ತಿಂಗಳು ಮಲಗಿಬಿಟ್ಟರೆ ಈ ಲೋಕದ ಕಥೆಯೇನು? ಎನಿಸಬಹುದು.  ಆದರೆ ಭಗವಂತನ ನಿದ್ರೆಯನ್ನು ಸಾಮಾನ್ಯರಾದ ಜೀವಿಗಳ ನಿದ್ರೆಗೆ ಹೋಲಿಸುವುದು ಸರಿಯಲ್ಲ. ಅದು ವಿಶೇಷವಾದಂತಹ ನಿದ್ರೆ. ಜಗತ್ತಿನ ರಕ್ಷಣೆಯ ವಿಷಯದಲ್ಲಿ ಎಚ್ಚರವಾಗಿಯೇ ಇದ್ದು ಭಗವಂತನು ತನ್ನ ಭಕ್ತರ ಸಂಪ್ರೀತಿಗಾಗಿ ನಿದ್ರೆಯ ಮುದ್ರೆಯನ್ನು ತೋರಿಸುತ್ತಾನೆ. ಆದ್ದರಿಂದ ಆಸ್ತಿಕ ಭಕ್ತರು ಹಾಗೆ ಮಲಗಿರುವ ಭಗವಂತನನ್ನು “ನಿದ್ರಾ ಮುದ್ರಾಭಿರಾಮಂʼʼ ಎಂದು ಸ್ತುತಿಸುವುದು ಉಂಟು. ಆ ನಿದ್ರೆಯು ಯೋಗ ನಿದ್ರೆ. ಆ ನಿದ್ರೆಯಲ್ಲಿ ನಮಗೆ ಇರುವಂತೆ ಮರೆವಿಲ್ಲ ಮೋಹವಿಲ್ಲ ಜಾಡ್ಯವಿಲ್ಲ ಮತ್ತು ಅಜ್ಞಾನದ ಲವಲೇಶವೂ ಇಲ್ಲ. ಹೆಚ್ಚೇನು, ಯಾವ ವಿಕಾರವೂ ಇಲ್ಲಿಲ್ಲ.  ಸಾಮಾನ್ಯ ಜೀವಿಗಳ ನಿದ್ರೆಯಲ್ಲಿ ಆಗುವಂತೆ ದೇಹದ ಕಾಂತಿಯು ಕುಂದುವುದಿಲ್ಲ. ಅದಕ್ಕೆ ಬದಲಾಗಿ ಅನುಪಮವಾದ ಸೌಂದರ್ಯ ಲಾವಣ್ಯಗಳಿಂದ ಅವನ ದಿವ್ಯಮಂಗಳ ವಿಗ್ರಹವು ಕಂಗೊಳಿಸುತ್ತದೆ.

ಇನ್ನು ಉತ್ಥಾನ ದ್ವಾದಶಿಯಂದು ನೆಲ್ಲಿಕಾಯಿಗಳ ಹಾರವನ್ನು ದೇವರಿಗೆ ಸಮರ್ಪಿಸುತ್ತಾರೆ, ನೆಲ್ಲಿಯ ಗಿಡವನ್ನು ನೆಟ್ಟು ಪೂಜೆ ಮಾಡುತ್ತಾರೆ, ನೆಲ್ಲಿಯ ಕಾಯಿಯಲ್ಲಿ ಹಸುವಿನ ತುಪ್ಪವನ್ನು ಸುರಿದು ಅದರಿಂದ ದೀಪವನ್ನು ಹತ್ತಿಸುತ್ತಾರೆ, ನೆಲ್ಲಿಕಾಯಿಯಿಂದ ಸ್ನಾನ ಮಾಡುತ್ತಾರೆ, ಅದನ್ನು ತಯಾರಿಸಿ ದೇವರಿಗೆ ನೈವೇದ್ಯ ಮಾಡಿ ಪ್ರಸಾದವಾಗಿ ಭೋಜನದಲ್ಲಿ ಮೊಟ್ಟಮೊದಲಿಗೆ ಸ್ವೀಕರಿಸುತ್ತಾರೆ. ಇಷ್ಟೆಲ್ಲಾ ರೀತಿಯಲ್ಲಿ ನೆಲ್ಲಿ ಯನ್ನು ಭಾವಿಸಲು ಕಾರಣವೇನು? ಈ ಪರ್ವದಲ್ಲಿ ನೆಲ್ಲಿಗೆ ಯಾಕೆ ಅಷ್ಟು ಪ್ರಾಮುಖ್ಯ? ಎಂಬ ಪ್ರಶ್ನೆ ಮೂಡಬಹುದು.

Tulsi Puja 2022

ಅದಕ್ಕೆ ಶಾಸ್ತ್ರಗಳು ಮತ್ತು ಹಿರಿಯರು ಈ ಕೆಳಕಂಡಂತೆ ಸಮಾಧಾನವನ್ನು ಕೊಟ್ಟಿರುತ್ತಾರೆ- ನೆಲ್ಲಿಯಲ್ಲಿ ಭಾವಿಸಲು ಯೋಗ್ಯವಾದ ಅನೇಕ ಗುಣಗಳು ಹೇರಳವಾಗಿರುವುದರಿಂದಲೇ ಅದನ್ನು ಹಾಗೆ ಭಾವಿಸಲಾಗಿದೆ. ಆಧಿಭೌತಿಕ ಆಧಿದೈವಿಕ ಮತ್ತು ಆಧ್ಯಾತ್ಮಿಕ ಈ ಮೂರು ದೃಷ್ಟಿಗಳಿಂದಲೂ ಅತ್ಯಂತ ಶ್ರೇಷ್ಠವಾದ ದ್ರವ್ಯವಾಗಿದೆ ನೆಲ್ಲಿ. ಇದಕ್ಕೆ ಶ್ರೀಫಲ,ಧಾತ್ರಿ ಆಮಲಕೀ, ಅಮೃತಾ, ಶಿವಾ, ಶಾಂತಾ,ವೃಷ್ಯಾ ರೋಚನೀ ಎಂಬ ಬೇರೆ ಬೇರೆ ಹೆಸರುಗಳಿವೆ.

ಈ ಹೆಸರುಗಳೇ ಅದರ ಮಹಿಮೆಯನ್ನು ಸಾರುತ್ತಿವೆ ಕೂಡ. ನೆಲ್ಲಿಯು ಶ್ರೀ ದೇವೀ ಸ್ವರೂಪವಾದ ಮತ್ತು ಶ್ರೀಯನ್ನು ಅನುಗ್ರಹಿಸುವ ಹಣ್ಣು, ಬ್ರಹ್ಮಶಕ್ತಿ ಸ್ವರೂಪಿಣೀ, ಧಾರಣೆ ಪೋಷಣೆ ಮಾಡುವ ತಾಯಿ, ಶುದ್ಧ ತೀರ್ಥದಿಂದ ಉಂಟಾದುದು ಮತ್ತು ಶುದ್ಧವಾದ ಹುಳಿಯನ್ನು ಹೊಂದಿರುವುದು ಅಮೃತತ್ವವನ್ನು ಉಂಟುಮಾಡುವುದು, ಮಂಗಳಕರ, ಶಾಂತ, ವೀರ್ಯವೃದ್ಧಿಯನ್ನು ಉಂಟು ಮಾಡುವುದು ಮತ್ತು ರುಚಿಕರವಾದುದು ಎಂದು ಕ್ರಮವಾಗಿ ಮೇಲಿನ ಹೆಸರುಗಳಿಗೆ ಅರ್ಥವಿದೆ.

ಧಾತ್ರಿಯು (ಎಂದರೆ ನೆಲ್ಲಿಕಾಯಿಯು) ನಿಜವಾಗಿಯೂ ಮನುಷ್ಯರಿಗೆ ತಾಯಿಯೇ ಆಗಿದೆ. ಧಾತ್ರಿ ಎಂಬ ಶಬ್ದಕ್ಕೆ ಪಾಲನೆ-ಪೋಷಣೆ ಮಾಡುವವಳು ಎಂದು ಸಂಸ್ಕೃತದಲ್ಲಿ ಅರ್ಥವಿದೆ. ನೆಲ್ಲಿಯು ಮನುಷ್ಯರಲ್ಲಿ ತಾಯಿಯಂತೆ ವಾತ್ಸಲ್ಯವನ್ನು ತೋರಿಸುತ್ತದೆ. ಅದರ ನೀರನ್ನು ಕುಡಿದರೆ ಆಯಸ್ಸು ವೃದ್ಧಿ ಹೊಂದುತ್ತದೆ. ಅದರಿಂದ ಸ್ನಾನ ಮಾಡಿದರೆ ಧರ್ಮ ಸಂಗ್ರಹವಾಗುತ್ತದೆ. ಅದು ಅಲಕ್ಷ್ಮಿಯನ್ನು ಎಂದರೆ ದಾರಿದ್ರ್ಯವನ್ನು ನಾಶಪಡಿಸುತ್ತದೆ ಅಷ್ಟೇ ಅಲ್ಲ ಕೊನೆಯಲ್ಲಿ ಮೋಕ್ಷವನ್ನೂ ಕೊಡುತ್ತದೆ.  ಬಿಲ್ವದಲ್ಲಿ ಮತ್ತು ತುಳಸಿಯಲ್ಲಿ ಯಾವ ಯಾವ ಗುಣಾತಿಶಯಗಳು ಉಂಟೋ ಅವೆಲ್ಲವೂ ನೆಲೆಯಲ್ಲಿಯೂ ಇವೆ.

ಅಂದಮಾತ್ರಕ್ಕೆ ನೆಲ್ಲಿಕಾಯಿಯನ್ನು ತಿನ್ನುವವರಿಗೆಲ್ಲಾ ಮೋಕ್ಷಸಿದ್ಧಿಯು ಆಗಿಬಿಡುತ್ತದೆ ಎಂದು ಇದರ ಅರ್ಥವಲ್ಲ.  ಆದರೆ ಕ್ರಮವರಿತು ಸೇವಿಸಿದರೆ ಪರಮಾತ್ಮ ಸಾಕ್ಷಾತ್ಕಾರಕ್ಕೆ ಅದರಿಂದ ಸಹಾಯವಾಗುತ್ತದೆ ಎಂಬ ಅಭಿಪ್ರಾಯವನ್ನು ಗ್ರಹಿಸಬೇಕು.

ಅಲ್ಲದೆ ಹಿಂದಿನ ದಿನ ಏಕಾದಶಿ ಉಪವಾಸವನ್ನು ಮಾಡಿದ್ದರಿಂದ ಪ್ರಕೃತಿಯಲ್ಲಿ ಉಂಟಾಗಿರುವ ಏರು ಪೇರುಗಳನ್ನು ದ್ವಾದಶಿಯಂದು ಮಾಡುವ ನೆಲ್ಲಿಕಾಯಿಯ ಸೇವನೆಯು ಸರಿಪಡಿಸುತ್ತದೆ ಎಂಬುದು ಅನುಭವ ಸಿದ್ಧವಾದ ವಿಷಯ. ಪೂಜೆಯನ್ನು ಮಾಡಿ ಪ್ರಸಾದ ಬುದ್ಧಿಯಿಂದ ಸೇವಿಸಿದರೆ ತಾನೇ ಅದರಿಂದ ವಿಶೇಷ ಲಾಭವೂ ಉಂಟಾಗುತ್ತದೆ. ಆದ್ದರಿಂದಲೇ ದ್ವಾದಶಿಗೆ ಸ್ವಲ್ಪ ಮೊದಲು ನೆಲ್ಲಿಕಾಯಿಯು ಬಿಟ್ಟಿದ್ದರೂ ಅದನ್ನು ತಿನ್ನಬಾರದು.  ಬದಲಾಗಿ, ಅದನ್ನು ಭಗವಂತನಿಗೆ ಸಮರ್ಪಿಸಿದ ನಂತರವೇ ಸೇವಿಸಬೇಕು ಎಂಬ ಸಂಪ್ರದಾಯವಿದೆ.

ಈ ಮೇಲ್ಕಂಡ ವರ್ಣನೆ ಮತ್ತು ವಿವರಣೆ ಗಳನ್ನು ಗಮನಿಸಿದರೆ ನೆಲ್ಲಿಯ ಸೇವನೆಯು ಆಧಿಭೌತಿಕ, ಆಧಿದೈವಿಕ ಮತ್ತು ಆಧ್ಯಾತ್ಮಿಕ ಎಂಬ ಮೂರೂ ಕ್ಷೇತ್ರಗಳಲ್ಲಿಯೂ ಲಾಭದಾಯಕವಾಗಿದೆ ಮತ್ತು ಪುರುಷಾರ್ಥಕರವಾಗಿದೆ ಎಂಬುದು ಮನವರಿಕೆಯಾಗುತ್ತದೆ.

ನೆಲ್ಲಿಕಾಯಿಯಷ್ಟೇ ಅಲ್ಲದೆ ನೆಲ್ಲಿಯ ಮರವು ಕೂಡ ಪೂಜಾ ಯೋಗ್ಯವಾದುದಾಗಿದೆ. ನೆಲ್ಲಿಯ ಮರದ ನೆರಳಿನಲ್ಲಿ ನಿಲ್ಲುವುದರಿಂದ ಪಾಪಗಳು ಪರಿಹಾರವಾಗುತ್ತವೆ, ಇದರ ಗಾಳಿಯೂ ಕೂಡ ರೋಗಪರಿಹಾರಕ ಎನ್ನುತ್ತದೆ ಆಯುರ್ವೇದ.

ಹೀಗೆ ಅತ್ಯಂತ ಮಂಗಳಕರವಾದ ಮಹಾವಿಷ್ಣುವಿನ ಪೂಜೆ, ತುಳಸಿ ಮತ್ತು ನೆಲ್ಲಿಯ ಪೂಜೆ ಈ ಮೂರೂ ಉತ್ಥಾನ ದ್ವಾದಶಿಯ ಪ್ರಧಾನವಾದ ಅಂಶಗಳು. ಈ ಹಬ್ಬವೂ ಇನ್ನಿತರ ಭಾರತೀಯ ಹಬ್ಬಗಳಂತೆಯೇ ಇಹಕ್ಕೂ- ಪರಕ್ಕೂ ಸಾಧನವಾಗಿದ್ದು ಆಸ್ತಿಕರ ಶ್ರದ್ಧೆಗೆ ವಿಷಯವಾಗಿದೆ.

ಲೇಖಕರು: ಆಧ್ಯಾತ್ಮ ಚಿಂತಕರು ಮತ್ತು ಪ್ರವಚನಕಾರರು,
 ಅಷ್ಟಾಂಗಯೋಗ ವಿಜ್ಞಾನಮಂದಿರಂ

ಇದನ್ನೂ ಓದಿ| Chandra Grahan 2022 | ಚಂದ್ರ ಗ್ರಹಣ ಎಷ್ಟು ಹೊತ್ತಿಗೆ ಸಂಭವಿಸಲಿದೆ? ಆಹಾರ ಸೇವನೆ ಯಾವಾಗ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೀಪಾವಳಿ

After Deepavali Skin Care: ದೀಪಾವಳಿ ನಂತರ ತ್ವಚೆಯ ಆರೈಕೆಗೆ 5 ಸಿಂಪಲ್‌ ಸಲಹೆ

ದೀಪಾವಳಿ ಹಬ್ಬದ ನಂತರ ನಿಮ್ಮ ತ್ವಚೆಯ ಆರೈಕೆ (After Deepavali Skin Care) ಮಾಡುವುದು ಅತ್ಯಗತ್ಯ. ಇದಕ್ಕಾಗಿ ನೀವು ಏನೆಲ್ಲಾ ಮಾಡಬಹುದು? ಎಂಬುದನ್ನು ಬ್ಯೂಟಿ ಎಕ್ಸ್‌ಪಟ್ರ್ಸ್ ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

After Deepavali Skin Care
ಚಿತ್ರಕೃಪೆ: ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ದೀಪಾವಳಿ ಹಬ್ಬದ ನಂತರ ನಿಮ್ಮ ತ್ವಚೆಯ ಆರೈಕೆ (After Deepavali Skin Care) ಅತ್ಯವಶ್ಯ. ಅದ್ಯಾಕೆ? ಎಂದು ಯೋಚಿಸುತ್ತಿದ್ದೀರಾ! ಹಬ್ಬದ ಸಂಭ್ರಮಕ್ಕಾಗಿ ಪ್ರತಿದಿನ ಹಚ್ಚಿದ ಗ್ರ್ಯಾಂಡ್‌ ಓವರ್‌ ಮೇಕಪ್‌, ಒಂದರ ಮೇಲೊಂದು ಸವಿದ ಸಿಹಿ ತಿಂಡಿ ಹಾಗೂ ಜಂಕ್‌ ಪದಾರ್ಥ ಸೇವನೆ ಎಲ್ಲವೂ ತ್ವಚೆಯನ್ನು ಡಲ್‌ ಆಗಿಸಬಹುದು. ಕೆಲವರಿಗೆ ಇದರಿಂದ ಮೊಡವೆ ಹಾಗೂ ಜಿಡ್ಡಿನಿಂದ ಚರ್ಮದ ಸಮಸ್ಯೆ ಎದುರಾಗಬಹುದು. ಇವೆಲ್ಲವನ್ನು ನಿಭಾಯಿಸಲು ಫೆಸ್ಟಿವ್‌ ಸೀಸನ್‌ ಮುಗಿದ ನಂತರ ಮುಖದ ಆರೈಕೆಯತ್ತ ಗಮನ ನೀಡುವುದು ಉತ್ತಮ. ಇದರಿಂದ ನಾನಾ ಸ್ಕಿನ್‌ ಸಮಸ್ಯೆಗಳಿಂದ ದೂರಾಗಿ, ಎಂದಿನಂತೆ ನವೋಲ್ಲಾಸದಿಂದ ಕಾಣುವ ತ್ವಚೆಯನ್ನು ತಮ್ಮದಾಗಿಸಿಕೊಳ್ಳಬಹುದು ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್ ಮಂಗಲಾ. ಇದಕ್ಕೆ ಪೂರಕ ಎಂಬಂತೆ ಅವರು 5 ಸಿಂಪಲ್‌ ಸಲಹೆ ನೀಡಿದ್ದು, ಪಾಲಿಸಿ ನೋಡಿ ಎಂದಿದ್ದಾರೆ.

Give the makeup a break first

ಮೊದಲು ಮೇಕಪ್‌ಗೆ ಬ್ರೇಕ್‌ ನೀಡಿ

ಪ್ರತಿದಿನ ಮೇಕಪ್‌ ಹಚ್ಚಿದ ಮುಖಕ್ಕೆ ಕೊಂಚ ಬ್ರೇಕ್ ಹಾಕಿ. ಮಾಯಿಶ್ಚರೈಸ್‌ ಮಾಡಿ. ಮುಖದ ತ್ವಚೆಗೆ ಉಸಿರಾಡಲು ಅವಕಾಶ ನೀಡಿ. ಬೇಕಿದ್ದಲ್ಲಿ ರಿಜುನುವೇಟ್‌ ಆಗಲು ಸಹಾಯ ಮಾಡುವ ಹೈಡ್ರೋ ಫೇಶಿಯಲ್‌ ಮಾಡಿಸಿ.

ಕ್ಲೆನ್ಸಿಂಗ್‌- ಟೋನಿಂಗ್‌-ಮಾಯಿಶ್ಚರೈಸಿಂಗ್

ಪ್ರತಿದಿನ ಕ್ಲೆನ್ಸಿಂಗ್‌-ಟೋನಿಂಗ್‌ ಹಾಗೂ ಮಾಯಿಶ್ಚರೈಸಿಂಗ್‌ ಮಾಡಿ. ಇದು ತ್ವಚೆಯನ್ನು ರಿಲ್ಯಾಕ್ಸ್‌ ಮಾಡುವುದರೊಂದಿಗೆ ಸ್ಕಿನ್‌ ಆರೋಗ್ಯ ಸುಧಾರಿಸುತ್ತದೆ.

Get a good night's sleep

ಕಣ್ತುಂಬ ನಿದ್ರೆ ಮಾಡಿ

ಹಬ್ಬದ ಗಡಿಬಿಡಿಯಲ್ಲಿ ಸಾಕಷ್ಟು ಜನ ನಿದ್ರೆ ಕಡಿಮೆ ಮಾಡುತ್ತಾರೆ. ಇದು ಮುಖದ ಮೇಲೆ ಎದ್ದು ಕಾಣದಂತೆ ಮಾಡಲು ಮೇಕಪ್‌ ಹಚ್ಚುತ್ತಾರೆ. ಆದರೆ. ಇದು ತಾತ್ಕಲಿಕ ಪರಿಹಾರ. ನ್ಯಾಚುರಲ್‌ ಆಗಿ ತ್ವಚೆ ಚೆನ್ನಾಗಿ ಕಾಣಲು ಕನಿಷ್ಠ 7-8 ಗಂಟೆಯಾದರೂ ಕಣ್ತುಂಬ ನಿದ್ರೆ ಮಾಡುವುದು ಅಗತ್ಯ. ಮಲಗಿದಾಗ ತ್ವಚೆಯ ರಿಜುನುವೆಟ್‌ಗೆ ಅಗತ್ಯವಿರುವ ಕೊಲಾಜೆನ್‌ ಉತ್ಪತ್ತಿಯಾಗುತ್ತದೆ.

ಶೀಟ್‌ ಮಾಸ್ಕ್‌ ಉಪಯೋಗಿಸಿ

ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿರುವ ತ್ವಚೆಯ ಫ್ರೆಂಡ್ಲಿ ಹಾಗೂ ಅಗತ್ಯ ಪೌಷ್ಟಿಕಾಂಶಗಳನ್ನು ಪೂರೈಸುವ, ನಿಮ್ಮ ಸ್ಕಿನ್‌ ಟೋನ್‌ಗೆ ಮ್ಯಾಚ್‌ ಆಗುವ ಶೀಟ್‌ ಮಾಸ್ಕ್‌ ಆಯ್ಕೆ ಮಾಡಿ ಬಳಸಿ. ಇದು ಮುಖವನ್ನು ಕಾಂತಿಯುಕ್ತಗೊಳಿಸುತ್ತದೆ.

Use a scrub

ಸ್ಕ್ರಬ್‌ ಬಳಸಿ

ಸ್ಕ್ರಬ್‌ ಬಳಕೆಯಿಂದ ಚರ್ಮದ ಮೇಲಿನ ಡೆಡ್‌ ಸ್ಕಿನ್‌ ಹೋಗುತ್ತದೆ. ಜೊತೆಗೆ ರಕ್ತ ಸಂಚಾರ ಸುಗಮವಾಗುತ್ತದೆ. ಹೋಮ್‌ ಮೇಡ್‌ ಸ್ಕ್ರಬ್‌ ಉತ್ತಮ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Deepavali Mens Fashion: ದೀಪಾವಳಿ ಹಬ್ಬದ ಮೆನ್ಸ್ ಟ್ರೆಡಿಷನಲ್‌ ಸ್ಟೈಲಿಂಗ್‌ಗೆ ಸಾಥ್‌ ನೀಡುವ ಎಥ್ನಿಕ್‌ವೇರ್ಸ್

Continue Reading

ದೀಪಾವಳಿ

ದೀಪಾವಳಿ ಆಚರಣೆ ವೇಳೆ ಹಿಂದುಗಳ ಮೇಲೆ ಖಲಿಸ್ತಾನಿಗಳ ದಾಳಿ; ಕಲ್ಲು ತೂರಿದ ಉಗ್ರರು!

ಕೆನಡಾದಲ್ಲಿ ಖಲಿಸ್ತಾನಿ ಉಗ್ರರು, ಪ್ರತ್ಯೇಕವಾದಿಗಳು ಇದಕ್ಕೂ ಮೊದಲು ಕೂಡ ಹಿಂದುಗಳ ಮೇಲೆ ದಾಳಿ ನಡೆಸಿದ್ದಾರೆ. ಹಿಂದು ದೇವಾಲಯಗಳ ಮೇಲೆ ದಾಳಿ ನಡೆಸಲಾಗಿದೆ. ಈಗ ದೀಪಾವಳಿ ಆಚರಣೆ ವೇಳೆಯೂ ಖಲಿಸ್ತಾನಿ ಉಗ್ರರು ದಾಳಿ ನಡೆಸಿದ್ದಾರೆ.

VISTARANEWS.COM


on

Khalistani Attack
Koo

ಒಟ್ಟಾವ: ಕೆನಡಾದಲ್ಲಿ ಹಿಂದುಗಳ ಮೇಲೆ ಖಲಿಸ್ತಾನಿ ಉಗ್ರರು (Khalistani Terrorists), ಮೂಲಭೂತವಾದಿಗಳ ದಾಳಿ ಮುಂದುವರಿದಿದೆ. ಟೊರೊಂಟೊ ಹೊರವಲಯದ ಮಿಸ್ಸಿಸ್ಸೌಗ ಪಟ್ಟಣದಲ್ಲಿ ಹಿಂದುಗಳು ದೀಪಾವಳಿ (Deepavali 2023) ಆಚರಣೆ ಮಾಡುವ ವೇಳೆ ಖಲಿಸ್ತಾನಿ ಮೂಲಭೂತವಾದಿಗಳು ದಾಳಿ ನಡೆಸಿದ್ದಾರೆ. ಹಿಂದುಗಳ ಮೇಲೆ ಕಲ್ಲು ತೂರಾಟ ಮಾಡುವ, ಖಲಿಸ್ತಾನಿ ಧ್ವಜ ಹಾರಿಸಿ ಉದ್ಧಟತನ ಮಾಡಿರುವ ವಿಡಿಯೊ (Viral Video) ಈಗ ಲಭ್ಯವಾಗಿದೆ.

ಕೆನಡಾದ ಟೊರೊಂಟೊ ಸೇರಿ ಹಲವೆಡೆ ಹಿಂದುಗಳು ಸಡಗರ-ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ. ಆದರೆ, ಮಿಸ್ಸಿಸ್ಸೌಗ, ಬ್ರ್ಯಾಂಪ್ಟನ್‌ ಸೇರಿ ಕೆಲವೆಡೆ ಹಿಂದುಗಳು ಪಟಾಕಿ ಸಿಡಿಸಿ ದೀಪಾವಳಿ ಆಚರಣೆ ಮಾಡುವಾಗ ಖಲಿಸ್ತಾನಿ ಮೂಲಭೂತವಾದಿಗಳು ದಾಳಿ ನಡೆಸಿದ್ದಾರೆ. ಹಿಂದುಗಳ ಆಚರಣೆಗೆ ಅಡ್ಡಿಪಡಿಸುವ ಜತೆಗೆ ಕಲ್ಲು ತೂರಾಟ ಮಾಡಿದ್ದಾರೆ. ಖಲಿಸ್ತಾನಿ ಧ್ವಜ ಹಾರಿಸಿದ ಅವರು ಭಾರತ ವಿರೋಧಿ ಘೋಷಣೆಗಳನ್ನೂ ಕೂಗಿದ್ದಾರೆ ಎಂದು ತಿಳಿದುಬಂದಿದೆ.

ಭಾರತ ಹಾಗೂ ಕೆನಡಾ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗಿದೆ. ಕೆನಡಾದಲ್ಲಿರುವ ಭಾರತ ವಿರೋಧಿ ಚಟುವಟಿಕೆಗಳನ್ನು ನಿಗ್ರಹಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಆಗ್ರಹಿಸಿದ ಬಳಿಕ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಹಲವು ಉದ್ಧಟತನದ ಹೇಳಿಕೆ ನೀಡುತ್ತಿದ್ದಾರೆ. ಹಾಗೆಯೇ, ಕೆನಡಾದಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಹಿಂದೆ ಭಾರತದ ಕೈವಾಡ ಇದೆ ಎಂದೆಲ್ಲ ಆರೋಪಿಸಿದ್ದಾರೆ. ಇದಕ್ಕೆಲ್ಲ ಸೊಪ್ಪು ಹಾಕದ ಭಾರತ ಸರ್ಕಾರವು ಸಾಕ್ಷ್ಯ ಕೊಡಿ ಎಂದು ತಿರುಗೇಟು ನೀಡಿದೆ. ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವ ಬೆನ್ನಲ್ಲೇ ಕೆನಡಾದಲ್ಲಿ ಹಿಂದುಗಳ ಮೇಲೆ ದಾಳಿ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ಸ್ಫೋಟಕ್ಕೆ ಸಂಚು; ಭಾರತ ಆಗ್ರಹಿಸಿದ ಬಳಿಕ ತನಿಖೆಗೆ ಕೆನಡಾ ಆದೇಶ

ಏರ್‌ ಇಂಡಿಯಾ ವಿಮಾನ ಸ್ಫೋಟಿಸುವುದಾಗಿ ಪನ್ನುನ್‌ ಎಚ್ಚರಿಕೆ

ನವೆಂಬರ್‌ 19ರಂದು ಏರ್‌ ಇಂಡಿಯಾ ವಿಮಾನ ಸ್ಫೋಟಿಸುವುದಾಗಿ ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನುನ್‌ ಎಚ್ಚರಿಕೆ ನೀಡಿದ್ದಾನೆ. ನವೆಂಬರ್‌ 4ರಂದು ಗುರುಪತ್ವಂತ್‌ ಸಿಂಗ್‌ ಪನ್ನುನ್‌ ವಿಡಿಯೊ ಪೋಸ್ಟ್‌ ಮಾಡಿದ್ದ. “ನವೆಂಬರ್‌ 19ರಂದು ಸಿಖ್ಖರು ಏರ್‌ ಇಂಡಿಯಾ ವಿಮಾನಗಳಲ್ಲಿ ಪ್ರಯಾಣಿಸಬಾರದು.‌ ಅಂದು ಏರ್‌ ಇಂಡಿಯಾ ವಿಮಾನಗಳನ್ನು ಸ್ಫೋಟಿಸಲಾಗುವುದು” ಎಂದು ಹೇಳಿದ್ದ. ನವೆಂಬರ್‌ 19 ಇಂದಿರಾ ಗಾಂಧಿ ಜನ್ಮದಿನವಾದ ಕಾರಣ ಅಂದೇ ಏರ್‌ ಇಂಡಿಯಾ ವಿಮಾನಗಳನ್ನು ಸ್ಫೋಟಿಸಲಾಗುವುದು ಎಂದಿದ್ದಾನೆ. ಅಮೃತಸರದ ಸ್ವರ್ಣಮಂದಿರ ಹೊಕ್ಕಿದ್ದ ಉಗ್ರರ ವಿರುದ್ಧ ಇಂದಿರಾ ಗಾಂಧಿ ಅವರು ಆಪರೇಷನ್‌ ಬ್ಲ್ಯೂ ಸ್ಟಾರ್‌ಗೆ ಆದೇಶ ಮಾಡಿದ ಬಳಿಕ ಅವರು 1984ರಲ್ಲಿ ಹತ್ಯೆಗೀಡಾದರು. ಈಗ ಅವರ ಜನ್ಮದಿನದಂದೇ ಏರ್‌ ಇಂಡಿಯಾ ವಿಮಾನ ಸ್ಫೋಟಿಸಲು ಸಂಚು ರೂಪಿಸಲಾಗಿದೆ. ಭಾರತದ ಆಗ್ರಹದ ಬಳಿಕ ಈ ಕುರಿತು ತನಿಖೆ ನಡೆಸಲಾಗುವುದು ಎಂದು ಕೆನಡಾ ತಿಳಿಸಿದೆ.

Continue Reading

ದೀಪಾವಳಿ

ಬ್ರಿಟನ್ ಪಿಎಂ ಕಚೇರಿಯಲ್ಲಿ ದೀಪಾವಳಿ! ಗಮನ ಸೆಳೆದ ಅಕ್ಷತಾ ಮೂರ್ತಿ ಉಡುಗೆ

Diwali 2023: ಬ್ರಿಟನ್ ಪಿಎಂ ಸರ್ಕಾರಿ ಅಧಿಕೃತ ನಿವಾಸದಲ್ಲಿ ಈ ಬಾರಿ ದೀಪಾವಳಿ ಸಂಭ್ರಮ ಮನೆ ಮಾಡಿತ್ತು. ಕರ್ನಾಟಕದ ಅಳಿಯನಾಗಿರುವ ಬ್ರಿಟನ್ ಪಿಎಂ ರಿಷಿ ಸುನಕ್ ಹಾಗೂ ಅವರ ಪತ್ನಿ ಅಕ್ಷತಾ ಮೂರ್ತಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದರು.

VISTARANEWS.COM


on

Diwali in British PM's office! Akshata Murthy fashionable dress caught attention
Koo

ಲಂಡನ್: ಬ್ರಿಟನ್ ಪ್ರಧಾನಿ ಅಧಿಕೃತ ಕಚೇರಿ ನಿವಾಸದಲ್ಲಿ (10 Downing Street) ಈ ಬಾರಿ ದೀಪಾವಳಿಯ ( Diwali 2023) ಕಲರವ ಮೇಳೈಸಿತ್ತು. ಪ್ರಧಾನಿ ರಿಷಿ ಸುನಕ್ (UK PM Rishi Sunak) ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ (Akshata Murty) ಹಾಗೂ ಮಕ್ಕಳು ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಅಕ್ಷತಾ ಅವರು ಯಾವಾಗಲೂ ಫ್ಯಾಶನೇಬಲ್ ಆಗಿರುತ್ತಾರೆ. ಈಗ ದೀಪಾವಳಿಯಂದು ಅವರ ಸಾಂಪ್ರದಾಯಿಕ ಉಡುಗೆ ಗಮನ ಸೆಳೆದಿದೆ. ಅಕ್ಷತಾ ಅವರು ಎಲೆಕ್ಟ್ರಿಕ್ ನೀಲಿ ಮೈಸೂರು ರೇಷ್ಮೆ ಸೀರೆಯಲ್ಲಿ ಸೊಗಸಾಗಿ ಕಾಣುತ್ತಿದ್ದರು. ಅವರು ಸೀರೆಯನ್ನು ಸೊಗಸಾಗಿ ಧರಿಸಿದ್ದರು. ಸೀರೆಯೊಂದಿಗೆ ಸಣ್ಣ ತೋಳಿನ ಕುಪ್ಪಸವನ್ನು ಧರಿಸಿದ್ದರು. ಸರಳವಾದ ಸೀರೆಯು ತೆಳುವಾದ ಚಿನ್ನದ ಅಂಚುಗಳನ್ನು ಪ್ರದರ್ಶಿಸಿತು ಮತ್ತು ಕುಪ್ಪಸವು ಹೂವಿನ ಮೋಟಿಫ್‌ಗಳನ್ನು ಒಳಗೊಂಡಿತ್ತು. ಅಕ್ಷತಾ ಒಂದು ಜೊತೆ ನೇತಾಡುವ ಕಿವಿಯೋಲೆಗಳು, ಗಂಡಬೇರುಂಡ ನೆಕ್ಲೇಸ್ ಮತ್ತು ಬಳೆಗಳನ್ನು ಧರಿಸಿದ್ದರು.

ಯುಕೆ ಪ್ರಧಾನಿ ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ ಯಾವಾಗಲೂ ಪ್ರೇಕ್ಷಕರ ಮೇಲೆ ಫ್ಯಾಶನ್ ಪ್ರಭಾವ ಬೀರಿದ್ದಾರೆ. ನವದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆ ಅಥವಾ ಅಂತರಾಷ್ಟ್ರೀಯ ಶೃಂಗಸಭೆಗಳಿಗೆ ಆಕೆಯ ವಿಶಿಷ್ಟ ತೊಡುಗೆ, ಆಕೆಯ ಶೈಲಿ ಮತ್ತು ಸೊಬಗುಗೆ ಮಿತಿಯಿರಲಿಲ್ಲ.

ದಿಲ್ಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಅಕ್ಷತಾ ಮೂರ್ತಿ ಅವರ ವಾರ್ಡ್ರೋಬ್ ಆಯ್ಕೆಗಳು ಉನ್ನತ ದರ್ಜೆಯದ್ದಾಗಿದ್ದವು ಎಂಬುದು ಮನವರಿಕೆಯಾಗಿತ್ತು. ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ನಡೆದ ರಾಗಿ ಪ್ರದರ್ಶನಕ್ಕಾಗಿ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಆಯೋಜಿಸಿದ್ದ ಜಿ20 ಸಂಗಾತಿಗಳ ಕಾರ್ಯಕ್ರಮಕ್ಕೆ ಮುದ್ರಿತ ನೀಲಕ ಮಿಡಿ ಉಡುಗೆಯನ್ನು ಆರಿಸಿಕೊಂಡಿದ್ದರು. ಉಡುಪಿನಲ್ಲಿ ಹೂವಿನ ಮುದ್ರಿತ ನಾಟಕೀಯ ಪಫ್ಡ್ ಸ್ಲೀವ್‌ಗಳು ಎ-ಲೈನ್ ಸಿಲೂಯೆಟ್ ಮತ್ತು ಭುಗಿಲೆದ್ದ ಕೆಳಭಾಗವನ್ನು ಒಳಗೊಂಡಿತ್ತು. ಇದು ಆಕರ್ಷಕವಾಗಿತ್ತು.

ಈಗ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಕ್ಷತಾ ಮೂರ್ತಿ ಅವರು ತೊಡುಗೆ ಶೈಲಿಯ ಮತ್ತೊಮ್ಮೆ ಜಗತ್ತಿನ ಮುಂದೆ ಅನಾವರಣಗೊಂಡಿದೆ. ಅಕ್ಷತಾ ಮೂರ್ತಿ ಅವರು ತಮ್ಮ ಫ್ಯಾಶನೇಬಲ್ ಸ್ಟೇಟ್‌ಮೆಂಟ್ ಮಾಡಿದ್ದಾರೆ. ಬ್ರಿಟನ್ ಪ್ರಧಾನಿಯ ಮನೆಯಲ್ಲಿ ನಡೆದ ದೀಪಾವಳಿ ಹಬ್ಬದ ಆಚರಣೆಯು ವಾವ್ ಎನ್ನುವಂತಿತ್ತು. ಇದಕ್ಕೆ ಅಕ್ಷತಾ ಮೂರ್ತಿ ಅವರು ಉಡುಗೆ-ತೊಡುಗೆ ಕಳಶವಿಟ್ಟಂತೆ ಇತ್ತು ಎಂದು ಫ್ಯಾಶನ್ ಜಗತ್ತಿನ ತಜ್ಞರು ಮಾತನಾಡಿಕೊಳ್ಳುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: 75 ವರ್ಷದಲ್ಲೇ ಮೊದಲ ಬಾರಿಗೆ ಕಾಶ್ಮೀರದ ಶಾರದಾ ದೇವಿ ದೇಗುಲದಲ್ಲಿ ದೀಪಾವಳಿ ಆಚರಣೆ!

Continue Reading

ಕ್ರಿಕೆಟ್

KL Rahul: ಕನ್ನಡದಲ್ಲೇ ದೀಪಾವಳಿಯ ಶುಭ ಕೋರಿದ ಕೆ.ಎಲ್​ ರಾಹುಲ್​

ಟೀಮ್ ಇಂಡಿಯಾದ ಸ್ಟಾರ್​ ಆಟಗಾರ, ಕನ್ನಡಿಗ ಕೆ.ಎಲ್​ ರಾಹುಲ್(KL Rahul)​ ಅವರು ನಾಡಿದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ(diwali wishes) ಕೋರಿದ್ದಾರೆ.

VISTARANEWS.COM


on

kl rahul century celebration
Koo

ಬೆಂಗಳೂರು: ದೇಶಾದ್ಯಂತ ದೀಪಾವಳಿ(diwali 2023) ಹಬ್ಬದ ಸಂಭ್ರಮ ಜೋರಾಗಿದೆ. ಎಲ್ಲೆಲ್ಲೂ ಪಟಾಕಿ ಸದ್ದು ಕೇಳಿಸುತ್ತಿದೆ. ಕುಟುಂಬಸ್ಥರು, ಸಂಬಂಧಿಕರು, ಗೆಳೆಯರ ಜತೆ ಹಬ್ಬದ ಆಚರಣೆ ಭರ್ಜರಿಯಾಗಿದೆ. ಇದರ ಬೆನ್ನಲೇ ಟೀಮ್ ಇಂಡಿಯಾದ ಸ್ಟಾರ್​ ಆಟಗಾರ, ಕನ್ನಡಿಗ ಕೆ.ಎಲ್​ ರಾಹುಲ್(KL Rahul)​ ಅವರು ನಾಡಿದ ಜನತೆಗೆ ದೀಪಾವಳಿ ಶುಭಾಶಯ(diwali wishes) ಕೋರಿದ್ದಾರೆ​. ಅದು ಕೂಡ ಕನ್ನಡದಲ್ಲೇ ಶುಭ ಕೋರಿ ಎಲ್ಲ ಕನ್ನಡಿಗರ ಹೃದಯ ಗೆದ್ದಿದ್ದಾರೆ.

ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ರಾಹುಲ್ ಅವರು ಶತಕ ಬಾರಿಸಿ ಸಂಭ್ರಮಿಸಿದ್ದರು. ತಮ್ಮ ಶತಕದ ಮತ್ತು ಪಂದ್ಯದ ಫೋಟೊಗಳನ್ನು ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಾಕಿ ‘ದೀಪಾವಳಿಯ ಶುಭಾಶಯಗಳು’ ಎಂದು ಬರೆದು ತಿವರ್ಣ ಧ್ವಜ ಮತ್ತು ಹಣತೆಯ ಎಮೋಜಿಯನ್ನು ಹಾಕಿದ್ದಾರೆ.

ದಾಖಲೆ ಬರೆದ ರಾಹುಲ್​

ನೆದರ್ಲೆಂಡ್ಸ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಕೆ.ಎಲ್ ರಾಹುಲ್ 62 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ವಿಶ್ವಕಪ್​ನಲ್ಲಿ ಅತಿ ವೇಗದ ಶತಕ ಬಾರಿಸಿದ ಭಾರತೀಯ ಬ್ಯಾಟರ್​​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ವೇಳೆ ಅವರು 2023 ರ (ಹಾಲಿ ಆವೃತ್ತಿಯ) ವಿಶ್ವಕಪ್​ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ 63 ಎಸೆತಗಳಲ್ಲಿ ಶತಕ ಬಾರಿಸಿದ ರೋಹಿತ್ ಶರ್ಮಾ ಅವರ ದಾಖಲೆ ಅವರು ಮುರಿದರು.

ರಾಹುಲ್ 64 ಎಸೆತಗಳಲ್ಲಿ 102 ರನ್ ಗಳಿಸುವ ಹಾದಿಯಲ್ಲಿ 11 ಬೌಂಡರಿ ಮತ್ತು ನಾಲ್ಕು ಸಿಕ್ಸರ್​ಗಳನ್ನು ಬಾರಿಸಿದರು, ಇದು ವಿಶ್ವಕಪ್ ಪಂದ್ಯದಲ್ಲಿ ಭಾರತವನ್ನು ಎರಡನೇ ಅತಿ ಹೆಚ್ಚು ಮೊತ್ತಕ್ಕೆ (410/4) ಮುನ್ನಡೆಸಿತು. ಇದು ರಾಹುಲ್ ಅವರ ಆರನೇ ಏಕದಿನ ಶತಕವಾಗಿದೆ. ಭಾರತದ 5ನೇ ಕ್ರಮಾಂಕದ ಬ್ಯಾಟರ್​ ಶ್ರೇಯಸ್ ಅಯ್ಯರ್ ಜೊತೆಗೂಡಿ 208 ರನ್​ಗಳ ಜೊತೆಯಾಟವಾಡಿದ್ದು, ಇದು ಏಕದಿನ ವಿಶ್ವಕಪ್​​ನಲ್ಲಿ ನಾಲ್ಕನೇ ವಿಕೆಟ್​ಗೆ ಅತಿ ಹೆಚ್ಚು ರನ್​ಗಳ ಜೊತೆಯಾಟದ ದಾಖಲೆಯಾಗಿದೆ.

ಇದನ್ನೂ ಓದಿ MS Dhoni: ಧೋನಿ ಕುಟುಂಬದೊಂದಿಗೆ ದೀಪಾವಳಿ ಆಚರಿಸಿದ ರಿಷಭ್​ ಪಂತ್​

ತವರಿನ ಅಂಗಳದಲ್ಲಿ ರಾಹುಲ್ ಅವರು ಪ್ರಚಂಡ ಬ್ಯಾಟಿಂಗ್​ ತೋರ್ಪಡಿಸುವ ಮೂಲಕ ನೆರೆದಿದ್ದ ತವರಿನ ಅಭಿಮಾನಿಗಳಿಗೆ ಭರಪೂರ ರಂಚನೆ ನೀಡಿದರು. ಬ್ಯಾಟಿಂಗ್​ ಮಾತ್ರವಲ್ಲದೆ ಕೀಪಿಂಗ್​ನಲ್ಲಿಯೂ ಮಿಂಚಿದ ಅವರು 2 ಅದ್ಭುತ ಕ್ಯಾಚ್​ಗಳನ್ನು ಕೂಡ ಹಿಡಿದು ಮಿಂಚಿದರು.

ಜತೆಯಾಟದಲ್ಲಿಯೂ ದಾಖಲೆ ಬರೆದ ರಾಹುಲ್​

ಈ ಪಂದ್ಯದಲ್ಲಿ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಭಾರತ ತಂಡದ ಪರವಾಗಿ ನಾಲ್ಕನೇ ಅತ್ಯಧಿಕ ರನ್​ಗಳ ಜತೆಯಾಟ ನಡೆಸಿ ದಾಖಲೆಯ ಬರೆದರು. ಉಭಯ ಆಟಗಾರರು ನಾಲ್ಕನೇ ವಿಕೆಟ್​ಗೆ 208 ರನ್​ಗಳ ಜತೆಯಾಟ ನೀಡಿದರು. ಈ ಮೂಕಲ ವಿಶ್ವಕಪ್​ನಲ್ಲಿ ನಾಲ್ಕನೇ ವಿಕೆಟ್ ಅಥವಾ ಅದಕ್ಕಿಂತ ಕಡಿಮೆ ವಿಕೆಟ್​ಗೆ ಭಾರತದ ಅತ್ಯಧಿಕ ಜತೆಯಾಟ ನಡೆಸಿದ ದಾಖಲೆ ನಿರ್ಮಿಸಿದರು.

Continue Reading
Advertisement
Pune
ದೇಶ38 mins ago

ಹಾಸ್ಟೆಲ್‌ ಬಾತ್‌ರೂಮ್‌ನಲ್ಲಿ ತೆಗೆದ ನೂರಾರು ಯುವತಿಯರ ಬೆತ್ತಲೆ ವಿಡಿಯೊಗಳನ್ನು ಬಾಯ್‌ಫ್ರೆಂಡ್‌ಗೆ ಕಳುಹಿಸಿದ ಯುವತಿ!

ಉತ್ತರ ಕನ್ನಡ58 mins ago

Bheemanna Naik: ಶಿರಸಿ ಶಾಸಕ ಭೀಮಣ್ಣ ನಾಯ್ಕ್‌ ಮೇಲೆ ಜೇನು ದಾಳಿ; ಆಸ್ಪತ್ರೆಗೆ ದಾಖಲು

Kulgam
ದೇಶ1 hour ago

Kulgam: ಕಾಶ್ಮೀರದಲ್ಲಿ ಸೇನೆ ಭರ್ಜರಿ ಬೇಟೆ; ಮತ್ತೊಬ್ಬ ಉಗ್ರನ ಎನ್‌ಕೌಂಟರ್‌, 2 ದಿನದಲ್ಲಿ 3ನೇ ಬಲಿ

ವಿಸ್ತಾರ ಗ್ರಾಮದನಿ Vistara Gramadaani
ಕರ್ನಾಟಕ1 hour ago

ವಿಸ್ತಾರ ಗ್ರಾಮ ದನಿ: ಗ್ರಾಮೀಣ ಪ್ರದೇಶದಲ್ಲೇ ಹೆಚ್ಚು ಮತದಾನ, SSLC ಫಲಿತಾಂಶದಂತೆ!

LSG vs SRH
ಕ್ರೀಡೆ2 hours ago

LSG vs SRH: ಹೆಡ್, ಅಭಿಷೇಕ್ ಬ್ಯಾಟಿಂಗ್​ ಸುಂಟರಗಾಳಿಗೆ ತತ್ತರಿಸಿದ ಲಕ್ನೋ; 10 ವಿಕೆಟ್​ ಹೀನಾಯ ಸೋಲು

Hindu Girl
ದೇಶ2 hours ago

Hindu Girl: ಹಿಂದು ಬಾಲಕಿಯ ಅತ್ಯಾಚಾರಗೈದು, ಇಸ್ಲಾಂ ಪಾಲಿಸುವಂತೆ ಒತ್ತಾಯ; ಇಬ್ರಾಹಿಂ ವಿರುದ್ಧ ಕೇಸ್

Monty Panesar
ಕ್ರಿಕೆಟ್2 hours ago

Monty Panesar: ರಾಜಕೀಯಕ್ಕೆ ಎಂಟ್ರಿ ಕೊಟ್ಟು ಒಂದೇ ವಾರದಲ್ಲಿ ಗುಡ್​ ಬೈ ಹೇಳಿದ ಇಂಗ್ಲೆಂಡ್​ ಸ್ಪಿನ್ನರ್

Murder Case
ಕರ್ನಾಟಕ2 hours ago

Murder Case: ಶಿವಮೊಗ್ಗದಲ್ಲಿ ಗ್ಯಾಂಗ್ ವಾರ್; ಹಾಡಹಗಲೇ ಇಬ್ಬರು ರೌಡಿಶೀಟರ್‌ಗಳ ಭೀಕರ ಹತ್ಯೆ

Virat Kohli
ಕ್ರೀಡೆ3 hours ago

Virat Kohli: ಪಂಜಾಬಿ ಮಾತನಾಡಿದ ವಿರಾಟ್​ ಕೊಹ್ಲಿ; ವಿಡಿಯೊ ವೈರಲ್​

Poonch Terrorists
ದೇಶ3 hours ago

Poonch Terrorists: ಪೂಂಚ್‌ನಲ್ಲಿ ಸೇನೆ ಮೇಲೆ ದಾಳಿ ಮಾಡಿದ 3 ಉಗ್ರರ ಫೋಟೊ ರಿಲೀಸ್; ಹತ್ಯೆಗೆ ಪ್ಲಾನ್!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ19 hours ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ1 day ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ1 day ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ1 day ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ2 days ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ2 days ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ2 days ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ3 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ3 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

ಟ್ರೆಂಡಿಂಗ್‌