Chandra Grahan 2022 | ಇಂದು ಚಂದ್ರ ಗ್ರಹಣ; ಯಾವ ರಾಶಿಯ ಮೇಲೆ ಏನು ಪರಿಣಾಮ? - Vistara News

ಚಂದ್ರ ಗ್ರಹಣ

Chandra Grahan 2022 | ಇಂದು ಚಂದ್ರ ಗ್ರಹಣ; ಯಾವ ರಾಶಿಯ ಮೇಲೆ ಏನು ಪರಿಣಾಮ?

ಮಂಗಳವಾರ ಸಂಭವಿಸಲಿರುವ ರಾಹುಗ್ರಸ್ತ ಪೂರ್ಣಗ್ರಾಸಗ್ರಸ್ತೋದಯ ಚಂದ್ರ ಗ್ರಹಣವು (Chandra Grahan 2022) ಯಾವ ರಾಶಿಗೆ ಶುಭ ಫಲ ನೀಡಲಿದೆ, ಯಾವೆಲ್ಲಾ ರಾಶಿಯವರಿಗೆ ಅಶುಭ ಫಲವನ್ನುಂಟುಮಾಡಲಿದೆ ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

Chandra Grahan 2022
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನವೆಂಬರ್‌ 8 ರಂದು ಎಂದರೆ ಕಾರ್ತಿಕ ಮಾಸ ಶುಕ್ಲ ಪಕ್ಷದ ಹುಣ್ಣಿಮೆಯಂದು ಮಂಗಳವಾರ ಭರಣಿ ನಕ್ಷತ್ರದ ಮೇಷ ರಾಶಿಯಲ್ಲಿ ಚಂದ್ರನಿಗೆ ರಾಹುಗ್ರಸ್ತ ಪೂರ್ಣಗ್ರಾಸಗ್ರಸ್ತೋದಯ ಗ್ರಹಣವು (Chandra Grahan 2022) ಸಂಭವಿಸಲಿದೆ.

ಈ ಖಗೋಳ ವಿಸ್ಮಯವು ಜ್ಯೋತಿಷದ ಪ್ರಕಾರ ಬಹಳ ಮಹತ್ವ ಪಡೆದಿದೆ. ಆದರೆ ಇತ್ತೀಚೆಗೆ ಸಂಭವಿಸಿದ ಸೂರ್ಯ ಗ್ರಹಣದಷ್ಟು ಈ ಚಂದ್ರ ಗ್ರಹಣವು ದ್ವಾದಶ ರಾಶಿಗಳ ಮೇಲೇನು ಪರಿಣಾಮ ಬೀರುವುದಿಲ್ಲ ಎಂದು ಜ್ಯೋತಿಷ ಶಾಸ್ತ್ರ ಹೇಳಿದೆ.

ಭರಣಿ ನಕ್ಷತ್ರ ಮೇಷರಾಶಿಯಲ್ಲಿ ಚಂದ್ರನಿಗೆ ರಾಹುಗ್ರಸ್ತ ಪೂರ್ಣಗ್ರಾಸ ಗ್ರಸ್ತೋದಯಗ್ರಹಣವಾಗುತ್ತಿರುವುದರಿಂದ ಆ ನಕ್ಷತ್ರ, ರಾಶಿಯವರಿಗೆ ವಿಶೇಷ ದೋಷವಿರಲಿದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಈ ಚಂದ್ರಗ್ರಹಣದಿಂದ ಮೇಷ, ವೃಷಭ, ಕನ್ಯಾ ಮತ್ತು ಕುಂಭ ರಾಶಿಯವರಿಗೆ ಅನಿಷ್ಟಫಲವಿದೆ. ಸಿಂಹ, ತುಲಾ, ಧನು, ಮೀನ ರಾಶಿಯವರಿಗೆ ಮಿಶ್ರ ಫಲವಿರಲಿದೆ. ಮಿಥುನ, ಕರ್ಕ, ವೃಶ್ಚಿಕ ಮತ್ತು ಮಕರ ರಾಶಿಯವರಿಗೆ ಶುಭ ಫಲವಿದೆ.

ಗ್ರಹಣದ ದೋಷವಿರುವ ನಕ್ಷತ್ರ ಅಥವಾ ರಾಶಿಯವರು ಈ ಕೆಳಗಿನ ಶ್ಲೋಕವನ್ನು ಪಠಿಸಬಹುದು;

ಯೋ ಸೌ ವಜ್ರಧರೋ ದೇವಃ ಆದಿತ್ಯಾನಾಂ ಪ್ರಭುರ್ಮತಃ |
ಸೂರ್ಯ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 1 ||

ಯೋ ಸೌ ದಂಡಧರೋ ದೇವಃ ಯಮೋ ಮಹಿಷವಾಹನಃ |
ಸೂರ್ಯ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 2 ||

ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷವಾಹನಃ |
ಸೂರ್ಯ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 3 ||  ‌

ಗ್ರಹಣದ ಸ್ಪರ್ಶ-ಮೋಕ್ಷ ಎಷ್ಟು ಹೊತ್ತಿಗೆ?
ಗ್ರಹಣ ಸ್ಪರ್ಶ : ಮಧ್ಯಾಹ್ನ 02-39
ಗ್ರಹಣ ಮಧ್ಯಕಾಲ : ಸಂಜೆ 04-29
ಸೂರ್ಯಾಸ್ತ ಸಂಜೆ : 05-58
ಚಂದ್ರೋದಯ : ಸಂಜೆ 6.00
ಸಂಮ್ಮಿಲನ : ಮಧ್ಯಾಹ್ನ 06-20, ಉನ್ಮಿಲನ : ಸಂಜೆ 05-12
ಗ್ರಹಣ ಆದ್ಯಂತ ಪುಣ್ಯ ಕಾಲ: 19 ನಿಮಿಷಗಳು ಮಾತ್ರ ( ಸಂಜೆ 6-00 ಗಂಟೆಯಿಂದ 6-19 ನಿಮಿಷಗಳವರೆಗೆ ಪರ್ವಪುಣ್ಯಕಾಲ)
ದೃಶ್ಯ ಪುಣ್ಯಕಾಲ 0-22 ನಿಮಿಷ, ಗ್ರಹಣ ಮೋಕ್ಷ: 6-20
ಗಮನಿಸಿ: ಆಯಾಯಾ ಊರಿನ ಸೂರ್ಯಾಸ್ತದ ಪ್ರಕಾರ ಗ್ರಹಣದ ಮತ್ತು ಅನುಷ್ಠಾನದ ಸಮಯ ಸ್ವಲ್ಪ ಬದಲಾಗಲಿದೆ.
ಬೆಂಗಳೂರಿನಲ್ಲಿ ಭಾಗಶಃ ಚಂದ್ರ ಗ್ರಹಣವು ಸಂಜೆ 05-53 ಕ್ಕೆ ಆರಂಭವಾಗಿ 6-18ಕ್ಕೆ ಕೊನೆಗೊಳ್ಳಲಿದೆ ಎಂದು ಖಗೋಳ ಶಾಸ್ತ್ರಜ್ಞರು ತಿಳಿಸಿದ್ದಾರೆ.

ಇದನ್ನೂ ಓದಿ | Chandra Grahan 2022 | ಚಂದ್ರ ಗ್ರಹಣ ಎಷ್ಟು ಹೊತ್ತಿಗೆ ಸಂಭವಿಸಲಿದೆ? ಆಹಾರ ಸೇವನೆ ಯಾವಾಗ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಉಡುಪಿ

Chandra Grahan 2022 | ದೇಗುಲಗಳಿಗೆ ಹಿಡಿದ ಚಂದ್ರ ಗ್ರಹಣ; ದೇವರಿಗೆ ದರ್ಬಾಬಂಧನ

ವರ್ಷದ ಕೊನೆಯ ಚಂದ್ರ ಗ್ರಹಣ (Chandra Grahan 2022) ಸಂಭವಿಸುತ್ತಿದ್ದು, ದೇಗುಲಗಳಲ್ಲಿ ದೇವರಿಗೆ ಮಹಾಮಂಗಳಾರತಿ ಮುಗಿಸಿ, ಬಾಗಿಲು ಬಂದ್‌ ಮಾಡುತ್ತಿದ್ದಾರೆ. ಗ್ರಹಣ ಹಿನ್ನೆಲೆಯಲ್ಲಿ ಹಲವು ದೇವಸ್ಥಾನಗಳಲ್ಲಿ ದೇವರ ವಿಗ್ರಹಕ್ಕೆ ದರ್ಬಾಬಂಧನ ವಿಧಿಸಲಾಗಿದೆ.

VISTARANEWS.COM


on

By

Chandra Grahan 2022
Koo

ಬೆಂಗಳೂರು: ಮಂಗಳವಾರ ಹುಣ್ಣಿಮೆಯ ಜತೆಗೆ ರಾಹುಗ್ರಸ್ತ ಚಂದ್ರ ಗ್ರಹಣ (Chandra Grahan 2022) ಸಂಭವಿಸುತ್ತಿದೆ. ಮಧ್ಯಾಹ್ನ 2.39ಕ್ಕೆ ಚಂದ್ರಗ್ರಹಣ ಆರಂಭವಾಗಿ ಸಂಜೆ 6.19ಕ್ಕೆ ಗ್ರಹಣ ಮೋಕ್ಷವಾಗಲಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ದೇವಸ್ಥಾನದ ಬಾಗಿಲು ಬಂದ್‌ ಮಾಡಲಾಗಿದೆ. ಗ್ರಹಣ ಮೋಕ್ಷ ಸಮಯದ ಬಳಿಕ ದೇವಸ್ಥಾನಗಳಲ್ಲಿ ಶುಚಿತ್ವ ಕಾರ್ಯ ಚಾಲನೆಗೊಳ್ಳಲಿದ್ದು, ನಂತರ ವಿಶೇಷ ಪೂಜೆ-ಪುನಸ್ಕಾರಗಳು ನಡೆಯಲಿವೆ.

ಯಾವ್ಯಾವ ದೇಗುಲ ಬಂದ್‌
ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಶ್ರೀ ದಕ್ಷಿಣ ಮುಖ ನಂದಿ ತೀರ್ಥ ಕಲ್ಯಾಣ ಕ್ಷೇತ್ರದಲ್ಲಿ ನಿತ್ಯದ ಪೂಜೆಗಳನ್ನು ನಡೆಸಿ ದೇವಸ್ಥಾನಕ್ಕೆ ಬೀಗ ಹಾಕಲಾಯಿತು. ಸಂಜೆ ಗ್ರಹಣ ಕಳೆದ ಬಳಿಕ 6.30ಕ್ಕೆ ದೇವಸ್ಥಾನಗಳ ಶುಚಿತ್ವ ಕಾರ್ಯ ಆರಂಭಿಸಿ, ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಜತೆಗೆ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲೂ ದರ್ಬೆ ಹಾಕಿ ಬಾಗಿಲು ಬಂದ್ ಮಾಡಲಾಗಿದೆ. ಇತ್ತ ಕಾಡು ಮಲ್ಲೇಶ್ವರ ದೇವಾಲಯದಲ್ಲಿ ದರ್ಬಾಬಂಧನಕ್ಕೂ ಮೊದಲು ಶಿವನಿಗೆ ಅಭಿಷೇಕ, ಮಹಾಮಂಗಳಾರತಿ ಮುಗಿಸಿ ಬಾಗಿಲು ಮುಚ್ಚಿದ್ದಾರೆ. ಗ್ರಹಣ ಮುಗಿದ ನಂತರ ಸಂಜೆ 7 ಗಂಟೆಯಿಂದ ಭಕ್ತರಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತಿದೆ.

Chandra Grahan 2022

ಭೋಗನಂದೀಶ್ವರನಿಗೂ ತಟ್ಟಿದ ರಾಹುಗ್ರಸ್ಥ ಚಂದ್ರಗ್ರಹಣ
ಚಿಕ್ಕಬಳ್ಳಾಪುರದ ಭೋಗನಂದೀಶ್ವರನಿಗೂ ರಾಹುಗ್ರಸ್ಥ ಚಂದ್ರಗ್ರಹಣ ತಟ್ಟಿದ್ದು, ಮಧ್ಯಾಹ್ನ ಒಂದು ಗಂಟೆವರೆಗೆ ಮಾತ್ರ ದರ್ಶನ ವ್ಯವಸ್ಥೆಯನ್ನು ಮಾಡಲಾಗಿತ್ತು. ಗ್ರಹಣ ಸ್ಪರ್ಶಕಾಲ ಬಳಿಕ ದೇಗುಲದ ಬಾಗಿಲನ್ನು ಸಂಪೂರ್ಣವಾಗಿ ಬಂದ್‌ ಮಾಡಲಾಗುವುದು. ಬೆಳಗ್ಗೆಯಿಂದ ಅಭಿಷೇಕ ಸೇರಿದಂತೆ ಮಹಾಮಂಗಳಾರತಿಯೊಂದಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಲಾಗಿತ್ತು.

ಅರಮನೆ ನಗರೀಯಲ್ಲಿ ಎರಡು ಪ್ರಮುಖ ದೇವಸ್ಥಾನಗಳಲ್ಲಿ‌ ಭಿನ್ನ ಆಚರಣೆ
ವರ್ಷದ ಕೊನೆಯ ಚಂದ್ರ ಗ್ರಹಣ ಹಿನ್ನೆಲೆ ಮೈಸೂರು ಜಿಲ್ಲೆಯ ಎರಡು ಪ್ರಮುಖ ದೇವಸ್ಥಾನಗಳಲ್ಲಿ‌ ಭಿನ್ನವಾಗಿ ಆಚರಿಸಲಾಗುತ್ತಿದೆ. ಗ್ರಹಣ ಸಂದರ್ಭದಲ್ಲಿ ಚಾಮುಂಡೇಶ್ವರಿ ದೇವಸ್ಥಾನ‌ ಬಾಗಿಲು ಮುಚ್ಚಿದ್ದರೆ, ಗ್ರಹಣಕ್ಕೆ‌ ಬಾಗಿಲು ಮುಚ್ಚದೆ ಎಂದಿನಂತೆ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

Chandra Grahan 2022

ಅನ್ನಪೂರ್ಣೇಶ್ವರಿಗೆ ನಿರಂತರ ಅಭಿಷೇಕ
ಚಿಕ್ಕಮಗಳೂರಿನ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಬೆಳಗ್ಗೆ 11 ರಿಂದ 12 ಗಂಟೆವರೆಗೆ ಮಾತ್ರ ಪ್ರಸಾದ ಇರಲಿದೆ. ಮತ್ತೆ ಪ್ರಸಾದ ಇರುವುದಿಲ್ಲ. ಮಧ್ಯಾಹ್ನ 1.30ಕ್ಕೆ ಮಹಾಮಂಗಳಾರತಿ ನಡೆಯಲಿದ್ದು, ಸಂಜೆ 4 ಗಂಟೆವರೆಗೆ ಅರ್ಚನೆ ಇರಲಿದೆ. ಗ್ರಹಣ ಮೋಕ್ಷವಾದಾಗ ಶುದ್ಧಿ ಕಾರ್ಯ ನಡೆದು ಬಳಿಕ ಪೂಜೆ-ಪ್ರಸಾದದ ವ್ಯವಸ್ಥೆ ಇರುತ್ತದೆ. ಗ್ರಹಣ ಆರಂಭದಿಂದ ಅಂತ್ಯದವರೆಗೂ ಅನ್ನಪೂರ್ಣೇಶ್ವರಿಗೆ ನಿರಂತರ ಅಭಿಷೇಕ ಇರಲಿದೆ. ಇತ್ತ ಗ್ರಹಣದ ಹಿನ್ನೆಲೆ ಶೃಂಗೇರಿ ಶಾರದಾಂಬೆ ದೇವಾಲಯದಲ್ಲಿ ಪೂಜೆ ಎಂದಿನಂತೆ ಇರುತ್ತದೆ. ಮಧ್ಯಾಹ್ನದ ಊಟ ಇರುವುದಿಲ್ಲ. ಗ್ರಹಣದ ವೇಳೆಯೂ ದರ್ಶನಕ್ಕೆ ಅವಕಾಶ ಇರಲಿದ್ದು, ಪೂಜೆ-ಪ್ರಸಾದ ಸೇರಿದಂತೆ ಯಾವುದೇ ವ್ಯವಸ್ಥೆ ಇರುವುದಿಲ್ಲ. ಕೇವಲ ದರ್ಶನಕ್ಕೆ ಮಾತ್ರ ಅವಕಾಶ ಇರಲಿದೆ. ಗ್ರಹಣದ ಬಳಿಕ ಪೂಜೆ-ಪ್ರಸಾದ ಎಂದಿನಂತೆ ಇರಲಿದೆ ಎಂದು ಶ್ರೀಮಠ ತಿಳಿಸಿದೆ.

ಇದನ್ನೂ ಓದಿ | Bangalore Pot hole| ಎಲ್ಲರದ್ದೂ ಒಂದೇ ಬೇಡಿಕೆ, ಮೋದೀಜಿ ನಮ್ಮ ಏರಿಯಾಗೆ ಒಮ್ಮೆ ಬಂದು ಹೋಗಿ ಪ್ಲೀಸ್‌!

ಗ್ರಹಣಕ್ಕೂ ಮುನ್ನವೇ ಬಂದ್‌ ಆದ ಬೇಲೂರು ಚನ್ನಕೇಶವ ದೇಗುಲ
ಹಾಸನದಲ್ಲಿ ಸಂಜೆ 5:54 ರಿಂದ 6:20 ನಿಮಿಷದವರೆಗೆ ಚಂದ್ರ ಗ್ರಹಣ ಇರಲಿದೆ. ವಿಶ್ವವಿಖ್ಯಾತ ಬೇಲೂರು ಚನ್ನಕೇಶವ ದೇಗುಲ ಚಂದ್ರ ಗ್ರಹಣ ಹಿನ್ನೆಲೆ ಬೆಳಗ್ಗೆ 10 ಗಂಟೆಗೆ ಬಂದ್ ಆಗಿದೆ. ಬೆಳಗ್ಗೆ 10 ಗಂಟೆಗೆ ಬಾಗಿಲು ಮುಚ್ಚಿದರೆ ಬುಧವಾರ ಬೆಳಗ್ಗೆ 10 ಗಂಟೆಗೆ ದೇಗುಲ ತೆರೆಯಲಿದೆ.

ಮೋಕ್ಷ ಕಾಲದವರೆಗೆ ಬಂದ್‌
ವಿಜಯಪುರದ ಸಿದ್ದೇಶ್ವರ ದೇಗುಲ, ಸುಂದರೇಶ್ವರ ದೇಗುಲ, ರಾಮ ಮಂದಿರ, ಶನಿಮಂದಿರ, ಐತಿಹಾಸಿಕ ಮಲ್ಲಿಕಾರ್ಜುನ ದೇಗುಲಗಳು ಬಂದ್ ಆಗಿವೆ. ಗ್ರಹಣ ಸ್ಪರ್ಶ ಕಾಲದಿಂದ ಗ್ರಹಣ ಮೋಕ್ಷ ಕಾಲದವರೆಗೂ ಬಂದ್ ಆಗಲಿದೆ.

ಮಂಗಳವಾರ ಹುಣ್ಣಿಮೆಗೆ ಹುಲಿಗೆಮ್ಮದೇವಿಗೆ ಬಂದು ಭಕ್ತಸಾಗರ
ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದ ಪ್ರಸಿದ್ಧ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನಕ್ಕೆ ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಮಧ್ಯಾಹ್ನ ನಂತರ ದೇವಸ್ಥಾನ ಬಂದ್ ಆಗುವ ಹಿನ್ನೆಲೆ ಜನರು ಸಾಲುಗಟ್ಟಿ ನಿಂತಿದ್ದಾರೆ. ಹುಣ್ಣಿಮೆ ಹಾಗೂ ಮಂಗಳವಾರದಂದು ಹುಲಗಿಗೆ ಬರುವ ಅಧಿಕ ಸಂಖ್ಯೆಯ ಭಕ್ತರು ಬರಲಿದ್ದಾರೆ. ಗ್ರಹಣ ಹಿನ್ನೆಲೆ ಮಧ್ಯಾಹ್ನ 1 ಗಂಟೆಯಿಂದ ಸಂಜೆ 8 ಗಂಟೆಯವರೆಗೂ ದೇವಸ್ಥಾನದ ಬಾಗಿಲು ಮುಚ್ಚಲಿದೆ.

ಇತ್ತ ಯಾದಗಿರಿಯ ಮೈಲಾಪುರ ಗ್ರಾಮದ ಮೈಲಾರಲಿಂಗೇಶ್ವರ, ಸುರಪುರ ನಗರದ ವೇಣುಗೋಪಾಲಸ್ವಾಮಿ, ನಗರದ ಲಕ್ಷ್ಮಿನಗರದ ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಬಾಲಾಜಿ ದೇವಸ್ಥಾನ ಸೇರಿದಂತೆ ಬಹುತೇಕ ದೇವಸ್ಥಾನಗಳು ಬಂದ್‌ ಆಗಿವೆ.

Chandra Grahan 2022

ಶ್ರೀ ಕೃಷ್ಣಮಠದಲ್ಲಿ ದೇವರ ದರ್ಶನಕ್ಕೆ ಅವಕಾಶ
ಗ್ರಹಣ ಕಾಲದಲ್ಲಿ ಉಡುಪಿಯ ಶ್ರೀ ಕೃಷ್ಣಮಠದಲ್ಲಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಗ್ರಹಣ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆಯಲ್ಲೂ ಇಳಿಮುಖವಾಗಿದೆ. ಬೆಳಗ್ಗಿನಿಂದಲೇ ಅಷ್ಟಮಠಗಳ ಯತಿಗಳು ಜಪತಪದಲ್ಲಿ ನಿರತರಾಗಿದ್ದಾರೆ. ಭಕ್ತರಿಗೂ ಕೃಷ್ಣನ ಸನ್ನಿಧಿಯಲ್ಲಿ ಜಪತಪಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಕ್ತರಿಗೆ ಅನ್ನ ಪ್ರಸಾದ ಇರುವುದಿಲ್ಲ ಎಂದೂ ಹೇಳಲಾಗಿದೆ.

ಇವೆಲ್ಲದರ ಜತೆಗೆ ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದ ಗರ್ಭಗುಡಿ, ಧಾರವಾಡದ ಐತಿಹಾಸಿಕ ಸೋಮೇಶ್ವರ ದೇವಸ್ಥಾನ ಸೇರಿ ಕೋಲಾರದ ಕೋಲಾರಮ್ಮ, ಚಿಕ್ಕತಿರುಪತಿ ವೆಂಕಟರಮಣಸ್ವಾಮಿ ದೇವಾಲಯ, ಕುರುಡುಮಲೆ‌ ವಿನಾಯಕ, ಬಂಗಾರತಿರುಪತಿ ಸೇರಿದಂತೆ ಎಲ್ಲ ದೇವಾಲಯಗಳು ಬಂದ್ ಆಗಲಿದೆ. ರಾಮನಗರದ ಕೆಂಗಲ್ ಆಂಜನೇಯಸ್ವಾಮಿ ದೇವಾಲಯ, ಕನಕಪುರ ಕಬ್ಬಾಳಮ್ಮ ದೇವಾಲಯ, ಮಳೂರಿನ ಅಪ್ರಮೇಯ ಶ್ರೀಕೃಷ್ಣ ದೇವಾಲಯ, ಮಾಗಡಿಯ ರಂಗನಾಥ ದೇವಾಲಯ ಬಾಗಿಲು ಮುಚ್ಚಲಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಬನಶಂಕರಿ ದೇವಿ ದೇವಸ್ಥಾನದಲ್ಲೂ ದರ್ಶನ ಭಾಗ್ಯ ಇರುವುದಿಲ್ಲ.

ಇದನ್ನೂ ಓದಿ | Pothole | ಯಮಸ್ವರೂಪಿ ರಸ್ತೆ ಗುಂಡಿಯಿಂದಾಗಿ ಕೋಮಾಗೆ ಹೋದ ಬೈಕ್‌ ಸವಾರ

Continue Reading

ಕರ್ನಾಟಕ

Chandra Grahan 2022 | ಬರಿಗಣ್ಣಿನಿಂದಲೂ ನೋಡಬಹುದು ಚಂದ್ರ ಗ್ರಹಣ; ಕಣ್ಣಿಗಿಲ್ಲ ಯಾವುದೇ ಹಾನಿ

ನವೆಂಬರ್‌ 8ರಂದು ಚಂದ್ರ ಗ್ರಹಣ (Chandra Grahan 2022) ಸಂಭವಿಸುತ್ತಿದ್ದು, ನೆಹರೂ ತಾರಾಲಯದಲ್ಲಿ ಗ್ರಹಣ ವೀಕ್ಷಣೆಗೆ ಸಾರ್ವಜನಿಕರಿಗೆ ಯಾವುದೇ ವೀಕ್ಷಣೆ ವ್ಯವಸ್ಥೆ ಇರುವುದಿಲ್ಲ. ಗ್ರಹಣವನ್ನು ಜನರು ಬರಿಗಣ್ಣಿನಿಂದ ನೋಡಬಹುದಾಗಿದೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

VISTARANEWS.COM


on

By

ಜವಹಾರ್‌ಲಾಲ್‌ ನೆಹರೂ ತಾರಾಲಯ
Koo

ಬೆಂಗಳೂರು: ಸೂರ್ಯ ಗ್ರಹಣದ ಬಳಿಕ ಚಂದ್ರನಿಗೆ ರಾಹುಗ್ರಸ್ತ ಪೂರ್ಣಗ್ರಾಸಗ್ರಸ್ತೋದಯ ಗ್ರಹಣವು (Chandra Grahan 2022) ಮಂಗಳವಾರ ಸಂಭವಿಸಲಿದೆ. ನಮ್ಮ ರಾಜ್ಯ ಸೇರಿದಂತೆ ದೇಶಾದ್ಯಂತ ಭಾಗಶಃ ಚಂದ್ರ ಗ್ರಹಣ ಗೋಚರಿಸಲಿದೆ. ಕೋಲ್ಕತ್ತಾ, ಪಟನಾ, ಗುವಾಹಟಿ ಮತ್ತಿತರ ನಗರಗಳಲ್ಲಿ ಪೂರ್ಣ ಚಂದ್ರಗ್ರಹಣ ನೋಡಬಹುದು. ಇದು ಈ ವರ್ಷದ ಕೊನೆಯ ಚಂದ್ರ ಗ್ರಹಣವಾಗಿದೆ.

ಗ್ರಹಣದ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ನೆಹರು ತಾರಾಲಯದಲ್ಲಿ ಈ ಬಾರಿ ಯಾವುದೇ ವ್ಯವಸ್ಥೆಯನ್ನು ಮಾಡಿಲ್ಲ. ಕೇವಲ ಯ್ಯೂಟೂಬ್‌ ಸ್ಟ್ರೀಮಿಂಗ್‌ಗಷ್ಟೇ ಸೀಮಿತವಾಗಿದೆ. ಸೂರ್ಯ ಗ್ರಹಣವಾದ 15 ದಿನಕ್ಕೆ ಚಂದ್ರ ಗ್ರಹಣ ಆಗುವುದು ಸಹಜ. ಸುಮಾರು 20 ನಿಮಿಷ ಚಂದ್ರ ಗ್ರಹಣ ಗೋಚರವಾಗಲಿದೆ ಎಂದು ನೆಹರೂ ತಾರಾಲಯ ವಿಜ್ಞಾನಿ ಆನಂದ್ ಮಾಹಿತಿ ನೀಡಿದ್ದಾರೆ.

ಚಂದ್ರೋದಯಕ್ಕೂ ಮೊದಲೇ ಗ್ರಹಣ ಸಂಭವಿಸುತ್ತಿದ್ದು, ಜನರು ಬರಿಗಣ್ಣಿನಿಂದ ಚಂದ್ರ ಗ್ರಹಣ ವೀಕ್ಷಣೆ ಮಾಡಬಹುದು. ಚಂದ್ರ ಗ್ರಹಣ ವೀಕ್ಷಣೆಯಿಂದ ಯಾವುದೇ ಹಾನಿಯಿಲ್ಲ. ಹುಣ್ಣಿಮೆ ಚಂದ್ರನಿಗೆ ಸ್ವಲ್ಪ ನೆರಳು ಬಿದ್ದಂತೆ ಗೋಚರವಾಗಲಿದೆ. ತಾರಾಲಯದ ಯೂಟ್ಯೂಬ್ ಮೂಲಕ ಲೈವ್ ವೀಕ್ಷಿಸಬಹುದು. ಲೈವ್ ವೀಕ್ಷಣೆ ಸಂದರ್ಭದಲ್ಲೇ ಪ್ರಶ್ನೆಗಳು ಸಹ ಕೇಳಬಹುದೆಂದು ತಿಳಿಸಿದ್ದಾರೆ.

ಇದನ್ನೂ ಓದಿ | Chandra Grahan 2022 | ಚಂದ್ರ ಗ್ರಹಣ ಕಾಲದಲ್ಲಿ ದೇವರಿಗಿಲ್ಲ ಪೂಜೆ-ಪುನಸ್ಕಾರ; ಭಕ್ತರಿಗಿಲ್ಲ ದರ್ಶನ ಭಾಗ್ಯ

Continue Reading

ಉತ್ತರ ಕನ್ನಡ

Chandra Grahan 2022 | ಚಂದ್ರ ಗ್ರಹಣ ಕಾಲದಲ್ಲಿ ದೇವರಿಗಿಲ್ಲ ಪೂಜೆ-ಪುನಸ್ಕಾರ; ಭಕ್ತರಿಗಿಲ್ಲ ದರ್ಶನ ಭಾಗ್ಯ

ಮಂಗಳವಾರ ಹುಣ್ಣಿಮೆಯ ಜತೆಗೆ ರಾಹುಗ್ರಸ್ತ ಚಂದ್ರ ಗ್ರಹಣ (Chandra Grahan 2022) ಹಿನ್ನೆಲೆ ಬಹುತೇಕ ದೇವಸ್ಥಾನದ ಬಾಗಿಲು ಮುಚ್ಚಲಿವೆ. ಗ್ರಹಣ ಮೋಕ್ಷ ಸಮಯದ ಬಳಿಕ ದೇವಸ್ಥಾನಗಳಲ್ಲಿ ಏನೆಲ್ಲ ವಿಶೇಷ ಪೂಜೆಗಳಿವೆ? ಯಾವೆಲ್ಲ ಹೋಮಹವನ ನಡೆಯಲಿದೆ ಎಂಬುದರ ಮಾಹಿತಿ ಇಲ್ಲಿದೆ.

VISTARANEWS.COM


on

By

Chandra Grahan 2022
Koo

ಬೆಂಗಳೂರು: ವರ್ಷದ ಎರಡನೇ ಹಾಗೂ ಕೊನೆಯ ಚಂದ್ರ ಗ್ರಹಣ ಸೋಮವಾರ ಸಂಭವಿಸಲಿದೆ. ಸೂರ್ಯ ಗ್ರಹಣ ನಡೆದು 15 ದಿನಗಳ ಅಂತರದಲ್ಲಿ ಈಗ ಚಂದ್ರ ಗ್ರಹಣ ನಡೆಯುತ್ತಿರುವುದು ವಿಶೇಷ. ನವೆಂಬರ್‌ 8 ರಂದು ಅಂದರೆ ಕಾರ್ತಿಕ ಮಾಸ ಶುಕ್ಲ ಪಕ್ಷದ ಹುಣ್ಣಿಮೆಯಂದು ಭರಣಿ ನಕ್ಷತ್ರದ ಮೇಷ ರಾಶಿಯಲ್ಲಿ ಚಂದ್ರನಿಗೆ ರಾಹುಗ್ರಸ್ತ ಪೂರ್ಣಗ್ರಾಸ ಗ್ರಸ್ತೋದಯ ಗ್ರಹಣವು (Chandra Grahan 2022) ಸಂಭವಿಸಲಿದೆ.

ಚಂದ್ರ ಗ್ರಹಣದ ಸಮಯದಲ್ಲಿ ಕೆಲ ದೇಗುಲಗಳು ಬಾಗಿಲು ಮುಚ್ಚಿದ್ದರೆ ಮತ್ತೆ ಕೆಲವು ದೇಗುಲದಲ್ಲಿ ವಿಶೇಷ ಹೋಮ-ಹವನವನ್ನು ನಡೆಸಲಾಗುತ್ತಿದೆ. ಹಾಗಾದರೆ ಯಾವ್ಯಾವ ದೇಗುಲದಲ್ಲಿ ಯಾವ ಸಮಯದಲ್ಲಿ ಪೂಜೆ-ಪುನಸ್ಕಾರ ಇರಲಿದೆ, ಯಾವ ದೇವಸ್ಥಾನಗಳಲ್ಲಿ ಇರುವುದಿಲ್ಲ ಎಂಬುದರ ಮಾಹಿತಿ ಇಲ್ಲಿದೆ.

ದೇವರಾಯನದುರ್ಗ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ ಬಾಗಿಲು ಬಂದ್
ಮಂಗಳವಾರ ರಾಹುಗ್ರಸ್ಥ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ದೇವರಾಯನ ದುರ್ಗದಲ್ಲಿರುವ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ ಬಾಗಿಲು ಬಂದ್‌ ಆಗಲಿದೆ. ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಬಾಗಿಲು ಮುಚ್ಚಿದ್ದರೆ ಬುಧವಾರ ಮುಂಜಾನೆವರೆಗೂ ದೇವಾಲಯದ ಬಾಗಿಲು ಬಂದ್ ಆಗಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿಯಿಂದ ಪ್ರಕಟಣೆ ಹೊರಡಿಸಿದೆ.

Chandra Grahan 2022

ಮೈಲಾರ ಲಿಂಗೇಶ್ವರ ದೇಗುಲಕ್ಕೆ ಇಲ್ಲ ಭಕ್ತರ ಪ್ರವೇಶ
ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಸುಕ್ಷೇತ್ರ ಮೈಲಾರ ಲಿಂಗೇಶ್ವರ ದೇವಾಲಯದಲ್ಲಿ ಮಧ್ಯಾಹ್ನದ ನಂತರ ಭಕ್ತರಿಗೆ ಪ್ರವೇಶ ಇರುವುದಿಲ್ಲ. ಮಂಗಳವಾರ ಬೆಳಗ್ಗೆ 6-30 ರಿಂದ 2 ಗಂಟೆಯವರೆಗೆ ಮಾತ್ರ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ಮಧ್ಯಾಹ್ನ 2 ಗಂಟೆಯಿಂದ ಸಂಜೆಯವರೆಗೆ ದರ್ಶನ ನಿಷೇಧ ಮಾಡಲಾಗಿದೆ. ಸಂಜೆ 6-30 ರಿಂದ ಮತ್ತೆ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ | Chandra Grahan 2022 | ಚಂದ್ರ ಗ್ರಹಣ ಎಷ್ಟು ಹೊತ್ತಿಗೆ ಸಂಭವಿಸಲಿದೆ? ಆಹಾರ ಸೇವನೆ ಯಾವಾಗ?

ಸ್ಪರ್ಶಕಾಲ ಹಾಗೂ ಮೋಕ್ಷ ಕಾಲದಲ್ಲಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ
ಮೈಸೂರಿನಲ್ಲಿ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭಕ್ತರಿಗೆ ನಿರ್ಬಂಧಿಸಲಾಗಿದೆ. ಮಂಗಳವಾರ ಮಧ್ಯಾಹ್ನ 1 ಗಂಟೆವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಇರಲಿದ್ದು, ಸ್ಪರ್ಶಕಾಲ ಹಾಗೂ ಮೋಕ್ಷ ಕಾಲದಲ್ಲಿ ವಿಶೇಷ ಪೂಜೆ ಸಲ್ಲಿಕೆ ಆಗಲಿದೆ. ಇನ್ನು ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ ಎಂದಿನಂತೆ ಪೂಜೆ ಮುಂದುವರಿಯಲಿದೆ.

ಕೋಲಾರಮ್ಮ, ಚಿಕ್ಕತಿರುಪತಿ ದೇಗುಲವೂ ಬಂದ್‌
ರಾಹುಗ್ರಸ್ತ ಚಂದ್ರಗ್ರಹಣ ಹಿನ್ನೆಲೆಯಲ್ಲಿ ಕೋಲಾರದ ಬಹುತೇಕ ದೇವಾಲಯಗಳಲ್ಲಿ ಭಕ್ತರಿಗೆ ನಿರ್ಬಂಧ ಹೇರಲಾಗಿದೆ. ಮಂಗಳವಾರ ಮಧ್ಯಾಹ್ನ 12.30 ರಿಂದ ಸಂಜೆ 7.30ರ ವರೆಗೆ ದೇವಾಲಯಗಳು ಬಂದ್ ಆಗಲಿದೆ. ಕೋಲಾರಮ್ಮ, ಚಿಕ್ಕತಿರುಪತಿ ವೆಂಕಟರಮಣಸ್ವಾಮಿ ದೇವಾಲಯ, ಕುರುಡುಮಲೆ‌ ವಿನಾಯಕ, ಬಂಗಾರತಿರುಪತಿ ಸೇರಿದಂತೆ ಎಲ್ಲಾ ದೇವಾಲಯಗಳ ಬಾಗಲು ಮುಚ್ಚಲಿವೆ. ಸಂಜೆ 7.30ರ ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಮುಜರಾಯಿ ತಹಸೀಲ್ದಾರ್ ನಾಗವೇಣಿ ಮಾಹಿತಿ ನೀಡಿದ್ದಾರೆ.

ಹುಲಿಗೆಮ್ಮದೇವಿ ದೇವಸ್ಥಾನ, ಅಂಜನಾದ್ರಿ ಆಂಜನೇಯ ದರ್ಶನವಿಲ್ಲ
ಕೊಪ್ಪಳ ಜಿಲ್ಲೆಯ ಪ್ರಮುಖ ದೇವಾಲಯಗಳು ಮಧ್ಯಾಹ್ನದಿಂದ ಬಂದ್ ಆಗಲಿವೆ. ತಾಲೂಕಿನ ಹುಲಿಗಿಯ ಶ್ರೀಹುಲಿಗೆಮ್ಮದೇವಿ ದೇವಸ್ಥಾನ, ಅಂಜನಾದ್ರಿಯ ಆಂಜನೇಯ ದೇವಸ್ಥಾನ ಮಧ್ಯಾಹ್ನದ ಬಳಿಕ ಬಂದ್ ಆಗಲಿದೆ. ಮಂಗಳವಾರ ಮಧ್ಯಾಹ್ನ 1 ಗಂಟೆಯಿಂದ ಸಂಜೆ 8 ಗಂಟೆಯವರೆಗೂ ಹುಲಿಗೆಮ್ಮದೇವಿ ದೇವಸ್ಥಾನ ಬಂದ್ ಆದರೆ, ಅಂಜನಾದ್ರಿಯಲ್ಲಿ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆಗೆವರೆಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಾಮಾನ್ಯವಾಗಿ ಹುಣ್ಣಿಮೆ ಹಾಗೂ ಮಂಗಳವಾರದಂದು ಹುಲಗಿಯ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಗ್ರಹಣದಿಂದಾಗಿ ಮಧ್ಯಾಹ್ನದವರೆಗೆ ಮಾತ್ರ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಗೋಕರ್ಣ ಮಹಾಬಲೇಶ್ವರ ದರ್ಶನದ ಸಮಯ ಬದಲಾವಣೆ
ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ ದರ್ಶನದ ಸಮಯವನ್ನು ಬದಲಾವಣೆ ಮಾಡಲಾಗಿದೆ. ನವೆಂಬರ್ 8ರ ಮುಂಜಾನೆ 6ರಿಂದ ಬೆಳಿಗ್ಗೆ 9 ಗಂಟೆಯವರೆಗೆ ಆತ್ಮಲಿಂಗ ಸ್ಪರ್ಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಧ್ಯಾಹ್ನ 2.30ರಿಂದ ಸಂಜೆ 6.30ರ ವರೆಗೆ ಆತ್ಮಲಿಂಗ ಸ್ಪರ್ಶಕ್ಕೆ ಅವಕಾಶ ಇರುವುದಿಲ್ಲ. ಜತೆಗೆ ದೇವಸ್ಥಾನದಲ್ಲಿ ಮಧ್ಯಾಹ್ನ ಹಾಗೂ ಸಂಜೆ ಪ್ರಸಾದ ಭೋಜನ ವ್ಯವಸ್ಥೆ ಇರುವುದಿಲ್ಲ.

Chandra Grahan 2022

ದಿನಪೂರ್ತಿ ಇರಲಿದೆ ದೇವಿಯ ದರ್ಶನ
ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿರುವ ಪ್ರಸಿದ್ಧ ಯಲ್ಲಮ್ಮ ದೇವಸ್ಥಾನ ಎಂದಿನಂತೆ ತೆರದಿರಲಿದೆ. ಚಂದ್ರಗ್ರಹಣ ಸಂದರ್ಭದಲ್ಲಿ ಮಾತ್ರ ತೀರ್ಥ ಪ್ರಸಾದ ವಿನಿಯೋ‌‌ಗ ಇರುವುದಿಲ್ಲ ಎಂದು ಯಲ್ಲಮ್ಮ ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

ತಲಕಾವೇರಿಗೆ ಪ್ರವೇಶವಿಲ್ಲ
ಮಂಗಳವಾರ ಮಧ್ಯಾಹ್ನ 2.39 ನಿಮಿಷಕ್ಕೆ ಗ್ರಸ್ತೋದಯ ಖಗ್ರಾಸ ಚಂದ್ರಗ್ರಹಣ ಪ್ರಾರಂಭಗೊಂಡು ಸಾಯಂಕಾಲ 6.19 ನಿಮಿಷಕ್ಕೆ ಗ್ರಹಣ ಅಂತ್ಯವಾಗುತ್ತದೆ. ಈ ಅವಧಿಯಲ್ಲಿ ಮಡಿಕೇರಿ ನಗರದ ಓಂಕಾರೇಶ್ವರ, ಭಾಗಮಂಡಲದ ಭಗಂಡೇಶ್ವರ ಹಾಗೂ ತಲಕಾವೇರಿಯ ಕ್ಷೇತ್ರದ ದೇವಾಲಯಗಳು ಮುಚ್ಚಿರುತ್ತವೆ. ಹಾಗೆ ಗ್ರಹಣದ ಪ್ರಯುಕ್ತ ವಿಶೇಷ ಪೂಜೆಗಳು ಇರುವುದಿಲ್ಲ.

ಗ್ರಹಣ ಸಮಯದಲ್ಲೂ ಈಶ್ವರನ ದರ್ಶನಕ್ಕೆ ಭಕ್ತರಿಗೆ ಅವಕಾಶ
ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರ ಈಶ್ವರ ದೇವಸ್ಥಾನ ಪೂಜಾ ವಿಧಾನದಲ್ಲಿ ಬದಲಾವಣೆ ಇರಲಿದೆ. ಬೆಳಗ್ಗೆ 9 ಗಂಟೆಯೊಳಗೆ ಮಧ್ಯಾಹ್ನದ ಪೂಜೆ ಕಾರ್ಯ ಸಹ ಮುಗಿಸಲಾಗುತ್ತದೆ. ಪೂಜಾ ಕಾರ್ಯ ಮುಗಿದ ನಂತರ ಎಂದಿನಂತೆ ಭಕ್ತರಿಗೆ ದರ್ಶನದ ಅವಕಾಶ ಕಲ್ಪಿಸಲಾಗಿದೆ. ಗ್ರಹಣ ಸಮಯದಲ್ಲಿ ಈಶ್ವರನಿಗೆ ಮೃತ್ಯುಂಜಯ, ರುದ್ರ ಹೋಮ ಸೇರಿ ಗ್ರಹಣ ಪರಿಹಾರ ಪೂಜೆ, ಕುಂಭಾಭಿಷೇಕ ನಡೆಯಲಿದೆ. ಸೂರ್ಯಾಸ್ತದ ನಂತರ ಬಲಿ ಉತ್ಸವ ನೆರವೇರಲಿದೆ.

ಯಡೂರು ಕಾಡಸಿದ್ದೇಶ್ವರ ಹಾಗೂ ಚಿಂಚಲಿ ಮಾಯಕ್ಕ ದೇವಸ್ಥಾನ ಓಪನ್‌
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದ ವೀರಭದ್ರೇಶ್ವರ ದೇವಸ್ಥಾನ, ಯಡೂರು ಕಾಡಸಿದ್ದೇಶ್ವರ ಹಾಗೂ ಚಿಂಚಲಿ ಮಾಯಕ್ಕ ದೇವಸ್ಥಾನದಲ್ಲಿ ಎಂದಿನಂತೆ ಭಕ್ತರಿಗೆ ದೇವರ ದರ್ಶನ ಸಿಗಲಿದೆ.

ರಾಜಧಾನಿ ಬೆಂಗಳೂರಿನಲ್ಲೂ ದೇಗುಲಗಳಿಗೆ ಗ್ರಹಣ
ಬೆಂಗಳೂರಿನ ಪ್ರಸಿದ್ಧ ದೇವಸ್ಥಾನವಾದ ಬನಶಂಕರಿ ದೇಗುಲದಲ್ಲಿ ಬೆಳಗ್ಗೆ 5 ಗಂಟೆಯಿಂದ 10 ಗಂಟೆವರೆಗೂ ಪೂಜಾ ಕೈಂಕರ್ಯ ಮುಗಿಸಲಾಗುತ್ತದೆ. 10 ಗಂಟೆಯ ನಂತರ ದೇಗುಲದ ಬಾಗಿಲು ಮುಚ್ಚಲಾಗುತ್ತದೆ. ಮಧ್ಯಾಹ್ನ 2.39 ರಿಂದ 6.19 ರವರೆಗೆ ಗ್ರಹಣದ ನಿಮಿತ್ತ ಸಾರ್ವಜನಿಕರಿಗೆ ಪ್ರವೇಶ ನಿಷೇಧ ಮಾಡಲಾಗಿದೆ. ಗ್ರಹಣ ಮೋಕ್ಷ ನಂತರ ದೇಗುಲ ಶುಚಿಗೊಳಿಸಿ 7.30ರ ನಂತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.

ಬಂಡಿ ಮಹಾಕಾಳಿ ದೇವಾಲಯದಲ್ಲಿ ಗ್ರಹಣ ಹಿನ್ನೆಲೆ ವಿಶೇಷ ಪೂಜೆ
ಬೆಂಗಳೂರಿನ ಶ್ರೀ ಕ್ಷೇತ್ರ ಬಂಡಿ ಮಹಾಕಾಳಿ ದೇವಾಲಯದಲ್ಲಿ ಗ್ರಹಣ ಹಿನ್ನೆಲೆ ವಿಶೇಷ ಪೂಜೆ ಇರಲಿದೆ. ಪ್ರತಿ ಹುಣ್ಣಿಮೆಯಂದು ಸತ್ಯ ನಾರಾಯಣ ಪೂಜೆ ಇರಲಿದ್ದು, ಮಧ್ಯಾಹ್ನ 2.35 ರಿಂದ ಗಣ, ನವಗ್ರಹ ಹೋಮ, ನವಗ್ರಹ, ಮೃತುಂಜಯ ಶಾಂತಿ ಪೂಜಾ ಕೈಂಕರ್ಯ ಇರಲಿದೆ. ಈ ಎಲ್ಲ ಹೋಮಗಳು ಸಂಜೆ 6 ಗಂಟೆವರೆಗೂ ನಡೆಯುತ್ತದೆ. ನಂತರ ಪೂರ್ಣಾಹುತಿ ಮಾಡಿ, ದೇವಿಗೆ ಅಭಿಷೇಕ ಮಾಡಿ ಭಕ್ತಾದಿಗಳಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

ಇದನ್ನೂ ಓದಿ | Chandra Grahan 2022 | ನಾಳೆ ಚಂದ್ರ ಗ್ರಹಣ; ಯಾವ ರಾಶಿಯ ಮೇಲೆ ಏನು ಪರಿಣಾಮ?

Continue Reading

ಚಂದ್ರ ಗ್ರಹಣ

Chandra Grahan 2022 | ಚಂದ್ರ ಗ್ರಹಣ ಎಷ್ಟು ಹೊತ್ತಿಗೆ ಸಂಭವಿಸಲಿದೆ? ಆಹಾರ ಸೇವನೆ ಯಾವಾಗ?

ನವೆಂಬರ್‌ 8ರ ಮಂಗಳವಾರದಂದು ಚಂದ್ರ ಗ್ರಹಣ (Chandra Grahan 2022 ) ಸಂಭವಿಸಲಿದೆ. ಇದನ್ನು ರಾಹುಗ್ರಸ್ತ ಪೂರ್ಣಗ್ರಾಸಗ್ರಸ್ತೋದಯ ಗ್ರಹಣ ಎಂದು ಕರೆಯಲಾಗಿದೆ. ಏನಿದರ ವಿಶೇಷ, ಸ್ಪರ್ಶ-ಮೋಕ್ಷ ಎಷ್ಟು ಹೊತ್ತಿಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

VISTARANEWS.COM


on

Chandra Grahan 2022
Koo

ಸೂರ್ಯ ಗ್ರಹಣ ಮುಗಿಯುತ್ತಿದಂತೆಯೇ ಈಗ ಚಂದ್ರ ಗ್ರಹಣಕ್ಕೆ ದಿನ ಗಣನೆ ಆರಂಭವಾಗಿದೆ. ನವೆಂಬರ್‌ 8 ರಂದು ಅಂದರೆ ಕಾರ್ತಿಕ ಮಾಸ ಶುಕ್ಲ ಪಕ್ಷದ ಹುಣ್ಣಿಮೆಯಂದು ಭರಣಿ ನಕ್ಷತ್ರದ ಮೇಷ ರಾಶಿಯಲ್ಲಿ ಚಂದ್ರನಿಗೆ ರಾಹುಗ್ರಸ್ತ ಪೂರ್ಣಗ್ರಾಸಗ್ರಸ್ತೋದಯ ಗ್ರಹಣವು (Chandra Grahan 2022) ಸಂಭವಿಸಲಿದೆ.

ಈ ಖಗೋಳ ವಿಸ್ಮಯವು ಜ್ಯೋತಿಷದ ಪ್ರಕಾರ ಹಾಗೂ ಧಾರ್ಮಿಕವಾಗಿ ಬಹಳ ಮಹತ್ವ ಪಡೆದಿದೆ. ಇದು ಮೂರು ವರ್ಷಗಳಿಗೆ ಒಮ್ಮೆ ನಡೆಯುವ ಸಂಪೂರ್ಣ ಚಂದ್ರ ಗ್ರಹಣವಾಗಿದೆ. ಮುಂದಿನ ಚಂದ್ರ ಗ್ರಹಣವು 2025ರ ಮಾರ್ಚ್‌ನಲ್ಲಿ ಸಂಭವಿಸಲಿದೆ.

ಈ ಚಂದ್ರ ಗ್ರಹಣವು ಹಗಲಿನಲ್ಲಿ ಸಂಭವಿಸುತ್ತಿದ್ದು, ನಮ್ಮ ದೇಶದ ಪೂರ್ವ ಭಾಗಗಳಲ್ಲಿ ಮಾತ್ರ ಸಂಪೂರ್ಣ ಚಂದ್ರ ಗ್ರಹಣವು ಗೋಚರಿಸಲಿದೆ. ನಮ್ಮ ರಾಜ್ಯ ಸೇರಿದಂತೆ ದೇಶಾದ್ಯಂತ ಭಾಗಶಃ ಚಂದ್ರ ಗ್ರಹಣ ಗೋಚರಿಸಲಿದೆ. ಕೋಲ್ಕತ್ತಾ, ಪಟನಾ, ಗುವಾಹಟಿ ಮತ್ತಿತರ ನಗರಗಳಲ್ಲಿ ಪೂರ್ಣ ಚಂದ್ರಗ್ರಹಣ ನೋಡಬಹುದು. ಇದು ಈ ವರ್ಷದ ಕೊನೆಯ ಚಂದ್ರ ಗ್ರಹಣವಾಗಿದೆ.

ಗ್ರಹಣದ ಸ್ಪರ್ಶ-ಮೋಕ್ಷ ಎಷ್ಟು ಹೊತ್ತಿಗೆ?
ಗ್ರಹಣ ಸ್ಪರ್ಶ : ಮಧ್ಯಾಹ್ನ 02-39
ಗ್ರಹಣ ಮಧ್ಯಕಾಲ : ಸಂಜೆ 04-29
ಸೂರ್ಯಾಸ್ತ ಸಂಜೆ : 05-58
ಚಂದ್ರೋದಯ : ಸಂಜೆ 6.00
ಸಂಮ್ಮಿಲನ : ಮಧ್ಯಾಹ್ನ 06-20, ಉನ್ಮಿಲನ : ಸಂಜೆ 05-12
ಗ್ರಹಣ ಆದ್ಯಂತ ಪುಣ್ಯ ಕಾಲ: 19 ನಿಮಿಷಗಳು ಮಾತ್ರ ( ಸಂಜೆ 6-00 ಗಂಟೆಯಿಂದ 6-19 ನಿಮಿಷಗಳವರೆಗೆ ಪರ್ವಪುಣ್ಯಕಾಲ)
ದೃಶ್ಯ ಪುಣ್ಯಕಾಲ 0-22 ನಿಮಿಷ, ಗ್ರಹಣ ಮೋಕ್ಷ: 6-20
ಗಮನಿಸಿ: ಆಯಾಯಾ ಊರಿನ ಸೂರ್ಯಾಸ್ತದ ಪ್ರಕಾರ ಗ್ರಹಣದ ಮತ್ತು ಅನುಷ್ಠಾನದ ಸಮಯ ಸ್ವಲ್ಪ ಬದಲಾಗಲಿದೆ.
ಬೆಂಗಳೂರಿನಲ್ಲಿ ಭಾಗಶಃ ಚಂದ್ರ ಗ್ರಹಣವು ಸಂಜೆ 05-53 ಕ್ಕೆ ಆರಂಭವಾಗಿ 6-18ಕ್ಕೆ ಕೊನೆಗೊಳ್ಳಲಿದೆ ಎಂದು ಖಗೋಳ ಶಾಸ್ತ್ರಜ್ಞರು ತಿಳಿಸಿದ್ದಾರೆ.

ಯಾವಾಗ ಆಹಾರ ಸೇವಿಸಬಹುದು?
ಈ ಚಂದ್ರ ಗ್ರಹಣವು ಹಗಲು ಮೂರನೇಯ ಯಾಮದಲ್ಲಿ ಸಂಭವಿಸುತ್ತಿರುವುದರಿಂದ ಗ್ರಹಣ ಸ್ಪರ್ಶಕ್ಕಿಂತ ಮೂರು ಯಾಮ ಅಂದರೆ ಸೂರ್ಯೋದಯದಿಂದಲೇ ಗ್ರಹಣ ನಿಷಿದ್ಧಗಳು ಜಾರಿಯಾಗಲಿವೆ. ಈ ದಿನ ಪೂರ್ತಿ ಭೋಜನಕ್ಕೆ, ಫಲಾಹಾರ ಸೇವನೆಗೆ ಅವಕಾಶವಿರುವುದಿಲ್ಲ. ಸಂಜೆ ಗ್ರಹಣ ಬಿಟ್ಟ ಮೇಲೆ ಸ್ನಾನವನ್ನು ಮಾಡಿ, ಆಹಾರ ಸೇವಿಸಬಹುದು.

ಮಕ್ಕಳು, ವೃದ್ಧರು, ಗರ್ಭಿಣಿಯರು, ಅಶಕ್ತರು, ಅನಾರೋಗ್ಯ ಪೀಡಿತರು ಮಾತ್ರ ಬೆಳಗ್ಗೆ 11.39 ಗಂಟೆಯ ಒಳಗೆ ಆಹಾರವನ್ನು ಸೇವಿಸಬಹುದು. ನಂತರ ಗ್ರಹಣ ಬಿಟ್ಟ ಮೇಲೆ ಸ್ನಾನವನ್ನು ಮಾಡಿ, ಆಹಾರ ಸೇವನೆ ಮಾಡಬಹುದು ಎಂದು ಪಂಚಾಂಗದಲ್ಲಿ ಹೇಳಲಾಗಿದೆ.

ಗ್ರಹಣ ಕಾಲದಲ್ಲಿ ಏನು ಮಾಡಬಹುದು?
ಗ್ರಹಣದ ಸ್ಪರ್ಶಕಾಲದಿಂದ ಹಿಡಿದು ಮೋಕ್ಷ ಕಾಲದವರೆಗೆ ಯಾವ ವಸ್ತುವಿನ ಸಂಪರ್ಕವನ್ನು ಮಾಡದೇ, ಉಟ್ಟ ಬಟ್ಟೆಯೊಂದಿಗೆ ಸ್ನಾನವನ್ನು ಮಾಡಬೇಕು. ಯಾವುದೇ ರೀತಿಯ ಪಾನಿಯ-ಆಹಾರವನ್ನು ಸೇವಿಸಬಾರದು. ಶೌಚಾಲಯ ಬಳಸಬಾರದು. ಸ್ನಾನ ಮಾಡಿ ಗಾಯತ್ರೀ ಜಪ, ಇಷ್ಟ ನಾಮ ದೇವರ ಜಪ, ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ, ದೇವರ ಪೂಜೆ, ತರ್ಪಣ, ಇತ್ಯಾದಿ ಚಟುವಟಿಕೆಗಳನ್ನು ಮಾಡಬಹುದು. ಗ್ರಹಣದ ಕೊನೆಯ ಭಾಗದಲ್ಲಿ ದೇವಸ್ಥಾನಗಳಿಗೆ ಹೋಗಿ ನಮಸ್ಕಾರ, ದಾನ-ಧರ್ಮಾಗಳನ್ನು ಮಾಡಬಹುದು.

ಇದನ್ನೂ ಓದಿ| ಭಾವಾಶ್ರಿತ ಗ್ರಹಫಲ | ಚಂದ್ರನು ನೀಡುವ ಫಲಗಳೇನು?

Continue Reading
Advertisement
Karnataka weather
ಕರ್ನಾಟಕ11 mins ago

Karnataka Weather: ಮನೆಯಿಂದ ಹೊರ ಹೋಗುವ ಮುನ್ನ ಎಚ್ಚರ; ಮೇ 3ರವರೆಗೆ ಹೆಚ್ಚಿರಲಿದೆ ಶಾಖದ ಅಲೆಗಳ ತೀವ್ರತೆ!

Vistara Editorial
ಸಂಪಾದಕೀಯ39 mins ago

ವಿಸ್ತಾರ ಸಂಪಾದಕೀಯ: ಸ್ತ್ರೀಯರ ಘನತೆಗೆ ಹಾನಿ ಎಸಗಿದವರಿಗೆ ಕಠಿಣ ಶಿಕ್ಷೆಯಾಗಲಿ

Labour Day 2024
ದೇಶ40 mins ago

Labour Day 2024: ಕಾರ್ಮಿಕರು ಕೇಂದ್ರ ಸರ್ಕಾರದ ಇ-ಶ್ರಮ ಯೋಜನೆಯ ಪ್ರಯೋಜನ ಪಡೆಯುವುದು ಹೇಗೆ?

Paneer test
ಆರೋಗ್ಯ41 mins ago

Paneer Test: ನಾವು ತಿನ್ನುವ ಪನೀರ್‌ ಶುದ್ಧವಾದದ್ದೋ, ಕಲಬೆರಕೆಯದ್ದೋ ಪರೀಕ್ಷೆ ಮಾಡೋದು ಹೇಗೆ?

dina bhavishya read your daily horoscope predictions for April 30 2024
ಭವಿಷ್ಯ2 hours ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

Pakistan Inflation
ವಿದೇಶ6 hours ago

Pakistan Inflation: ಪಾಕಿಸ್ತಾನ ಮತ್ತಷ್ಟು ದಿವಾಳಿ; ಲೀಟರ್‌ ಪೆಟ್ರೋಲ್‌ಗೆ 290 ರೂ., ಕೆ.ಜಿ ಹಿಟ್ಟಿಗೆ 800 ರೂ.

Honnavar News
ಉತ್ತರ ಕನ್ನಡ7 hours ago

Honnavar News: ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ಸಂಸ್ಕಾರವೂ ಬೇಕು: ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ

Sadhguru Jaggi Vasudev
ಬೆಂಗಳೂರು7 hours ago

Sadhguru Jaggi Vasudev: ಮೆದುಳಿನ ಶಸ್ತ್ರಚಿಕಿತ್ಸೆಯ ತಿಂಗಳ ಬಳಿಕ ಕಾಂಬೋಡಿಯಾಗೆ ಸದ್ಗುರು ಪ್ರವಾಸ

Justin Trudeau
ದೇಶ7 hours ago

Justin Trudeau: ಕೆನಡಾ ಪ್ರಧಾನಿ ಕಾರ್ಯಕ್ರಮದಲ್ಲಿ ಖಲಿಸ್ತಾನ ಪರ ಘೋಷಣೆ; ಭಾರತ ಸಮನ್ಸ್!

M P Rudramba
ಕರ್ನಾಟಕ8 hours ago

M P Rudramba: ಮಾಜಿ ಡಿಸಿಎಂ ದಿವಂಗತ ಎಂ.ಪಿ. ಪ್ರಕಾಶ್ ಧರ್ಮ ಪತ್ನಿ ರುದ್ರಾಂಬಾ ನಿಧನ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ2 hours ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 202418 hours ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 202419 hours ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20242 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20242 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20242 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20242 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest2 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌