Viral Video | ಅಬ್ಬಾ, ಅಜ್ಜ ಪಾರಾದರಲ್ಲ; ಆದರೂ ಬಸ್​ನಡಿ ಬಿದ್ದ ವೃದ್ಧ ಬದುಕಿ ಬಂದಿದ್ದು ಹೇಗೆ?! - Vistara News

ವೈರಲ್ ನ್ಯೂಸ್

Viral Video | ಅಬ್ಬಾ, ಅಜ್ಜ ಪಾರಾದರಲ್ಲ; ಆದರೂ ಬಸ್​ನಡಿ ಬಿದ್ದ ವೃದ್ಧ ಬದುಕಿ ಬಂದಿದ್ದು ಹೇಗೆ?!

ಮುಂಬಯಿಯ ಪೋವಾಯಿಯ ರಸ್ತೆಯೊಂದರಲ್ಲಿ ಹಲವು ವಾಹನಗಳು ಸಂಚರಿಸುತ್ತಿದ್ದವು. ಅಜ್ಜನೊಬ್ಬ ರಸ್ತೆ ದಾಟುತ್ತಿದ್ದರು. ಅಷ್ಟರಲ್ಲಿ ಬಂದ ಬಸ್​ ಅವರಿಗೆ ಡಿಕ್ಕಿಹೊಡೆದಿದೆ.

VISTARANEWS.COM


on

Old Man makes narrow escape In Mumbai
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಜೀವನದಲ್ಲಿ ಕೆಲವರು ಸಾವಿನಂಚಿಗೆ ಹೋಗಿ ವಾಪಸ್​ ಬರುತ್ತಾರೆ. ಇನ್ನೇನು ಅವರ ಜೀವ ಹೊರಟೇಹೋಯಿತು ಎಂಬ ದಿಗಿಲು ಆವರಿಸಿದಾಗಲೇ ಪವಾಡ ಸದೃಶವಾಗಿ ಬದುಕಿಬರುತ್ತಾರೆ. ಅದಕ್ಕೊಂದು ಉದಾಹರಣೆ ಈ ಅಜ್ಜ. ರಸ್ತೆ ದಾಟುತ್ತಿದ್ದ ಅಜ್ಜಂಗೆ ಬಸ್​ವೊಂದು ಬಡಿದಿದೆ. ಕೆಳಗೆ ಬಿದ್ದ ಅವರು ಬಸ್​​ನಡಿ ಆಗಿದ್ದಾರೆ. ಹಿರಿಯ ವಯಸ್ಸಿನ ಆ ವ್ಯಕ್ತಿ ಬಸ್​​ನಡಿ ಜಜ್ಜಿಹೋಗಿದ್ದಾರೆ. ಅವರು ಬದುಕಿರುವುದು ಅನುಮಾನ ಎಂದೇ ಅಲ್ಲಿದ್ದವರೆಲ್ಲ ಭಾವಿಸಿದ್ದರು. ಆದರೆ ಬಳಿಕ ನಡೆದಿದ್ದೇ ಬೇರೆ!

ಮುಂಬಯಿಯ ಪೋವಾಯಿಯ ರಸ್ತೆಯೊಂದರಲ್ಲಿ ಹಲವು ವಾಹನಗಳು ಸಂಚರಿಸುತ್ತಿದ್ದವು. ಅಜ್ಜನೊಬ್ಬ ರಸ್ತೆ ದಾಟುತ್ತಿದ್ದರು. ಅಷ್ಟರಲ್ಲಿ ಬಂದ​ ಬಸ್​ ಅವರಿಗೆ ಡಿಕ್ಕಿಹೊಡೆದಿದೆ. ಅವರು ಕೆಳಗೆ ಬಿದ್ದಿದ್ದಾರೆ. ಹೀಗೆ ಬಿದ್ದ ಅವರ ಮೇಲೆಯೇ ಬಸ್​ ಹರಿದಿದೆ. ಮಾರುದೂರ ಹೋಗಿ ಬಸ್​ ನಿಂತಿದೆ. ಅದರ ಚಾಲಕ ಬಾಗಿಲು ತೆಗೆದು, ಹಿಂದಿರುಗಿ ನೋಡಿದ್ದಾನೆ. ಆಗ ವೃದ್ಧ ಕುಂಟುತ್ತ ಅಲ್ಲಿ ನಡೆದುಕೊಂಡು ಬರುವುದನ್ನು ಸಿಸಿಟಿವಿ ಫೂಟೇಜ್​​​ನ ವಿಡಿಯೊದಲ್ಲಿ ಕಾಣಬಹುದು.

ಅಬ್ಬಾ, ಅಜ್ಜ ಪಾರಾದರಲ್ಲ ಎಂಬ ಖುಷಿಯೊಂದಿಗೆ, ಅದು ಹೇಗೆ ಬಸ್​ನಡಿ ಬಿದ್ದರೂ ಅವರು ಎದ್ದು ನಡೆದುಕೊಂಡು ಬಂದರು ಎಂಬ ಪ್ರಶ್ನೆಯೂ ಮೂಡುತ್ತದೆ. ಆಗಿದ್ದಷ್ಟೇ, ಬಸ್​ಗೆ ಡಿಕ್ಕಿ ಹೊಡೆದ ವೃದ್ಧ ಅದರ ಟೈರ್​ಗೆ ಸಿಲುಕಲಿಲ್ಲ. ಎರಡೂ ಬದಿಯ ಟೈರ್​ನ ನಡುವಿನ ಭಾಗದಲ್ಲಿ ಬಿದ್ದಿದ್ದಾರೆ. ಬಸ್​​ನ ಯಾವ ಭಾಗಗಳೂ ಅಜ್ಜನ ಮೈಮೇಲೆ ಹತ್ತಿಲ್ಲ. ಹೀಗಾಗಿ ಸೇಫ್​ ಆಗಿ ಎದ್ದು ಬಂದಿದ್ದಾರೆ. ಆದರೆ ವಿಡಿಯೊ ನೋಡಿದವರು ಆತಂಕ ವ್ಯಕ್ತಪಡಿಸಿದ್ದಾರೆ. ಅಜ್ಜನ ಜೀವ ಉಳಿದಿಲ್ಲ ಎಂದೇ ಭಾವಿಸಿದೆವು ಎಂದೇ ಅನೇಕರು ಹೇಳಿದ್ದಾರೆ.

ಇದನ್ನೂ ಓದಿ: Viral Video |ಕೋಳಿ ಪುಕ್ಕದ ಕೆಳಗೆ ಜಾರಿ ಬೆಚ್ಚಗೆ ಕುಳಿತ ನಾಯಿಮರಿ; ಸಂಗಾತಿ ಬಳಿ ಬಂದು ಏನನ್ನೋ ಕೇಳಿದ ಹುಂಜ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಳಗಾವಿ

Theft Case : ಬೆಳಗಾವಿಯಲ್ಲಿ ಇರಾನಿ ಗ್ಯಾಂಗ್ ಆ್ಯಕ್ಟಿವ್! ಒಂಟಿ ಮಹಿಳೆಯರೇ ಟಾರ್ಗೆಟ್‌

Theft Case : ಬೆಳಗಾವಿಯಲ್ಲಿ ಒಂಟಿ ಮಹಿಳೆಯರನ್ನೇ ಟಾರ್ಗೆಟ್‌ ಮಾಡುವ ಇರಾನಿ ಗ್ಯಾಂಗ್‌ ಆ್ಯಕ್ಟಿವ್ ಆಗಿದೆ. ಚಿತ್ರದುರ್ಗದಲ್ಲಿ ಎಟಿಎಂ ಕಳ್ಳತನಕ್ಕೆ ಕಳ್ಳನೊಬ್ಬ ವಿಫಲ ಯತ್ನ ನಡೆಸಿದ್ದರೆ, ವೃದ್ಧೆಯ ಚಿನ್ನದ ಸರ ಕದ್ದ ಮುಸುಕುಧಾರಿಗಳು ಎಸ್ಕೇಪ್‌ ಆಗಿದ್ದಾರೆ. ಚಿಕ್ಕಮಗಳೂರಲ್ಲಿ ಕಳ್ಳರು ಕೈ ಚಳಕ ತೋರಿದ್ದರೆ, ದೇವನಹಳ್ಳಿಯಲ್ಲಿ ಬೈಕ್‌ ಕಳ್ಳನೊಬ್ಬ ಅರೆಸ್ಟ್‌ ಆಗಿದ್ದಾನೆ.

VISTARANEWS.COM


on

By

Irani gang active in Belagavi Single women are the target
Koo

ಬೆಳಗಾವಿ: ಇರಾನಿ ಗ್ಯಾಂಗ್ ಬೆಳಗಾವಿ ಜನರ ನೆಮ್ಮದಿಯ ನಿದ್ದೆಗೆ ಭಂಗ ತಂದಿದೆ. ಇರಾನಿ ಗ್ಯಾಂಗ್ (Irani gang) ಮಹಿಳೆಯರು ಧೈರ್ಯದಿಂದ ಬೀದಿಯಲ್ಲಿ ಓಡಾಡದ ಪರಿಸ್ಥಿತಿಗೆ ತಂದಿದೆ. ಬೀದಿಯಲ್ಲಿ ಸಂಚರಿಸುವ ಒಂಟಿ ಮಹಿಳೆಯರು ಹಾಗೂ ಖಾಲಿ ಮನೆಗಳೆ ಈ ಗ್ಯಾಂಗ್ (Theft Case) ಟಾರ್ಗೆಟ್ ಆಗಿದೆ.

ರಾತ್ರಿ ಹೊತ್ತು ಮನೆಗಳ ಮುಂಭಾಗ ಬೀಗ ಹಾಕಿದ್ದರೆ, ಹಗಲು ಹೊತ್ತು ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಾರೆ. ಮಹಾಂತೇಶ ನಗರ, ಅಮನ್ ನಗರದಲ್ಲಿ ಸೇರಿದಂತೆ ವಿವಿಧೆಡೆ ಮನೆಗಳ್ಳತನ ಮಾಡಿದ್ದಾರೆ. 2.5 ಲಕ್ಷ ರೂ. ಚಿನ್ನಾಭರಣ, 50 ಸಾವಿರ ಮೌಲ್ಯದ ಬೆಳ್ಳಿ ಹಾಗೂ 2.20 ಲಕ್ಷ ‌ನಗದು ಸೇರಿ 7 ಲಕ್ಷ ಮೌಲ್ಯದ ವಸ್ತು ಎಗರಿಸಿ ಖದೀಮರು ಕಾಲ್ಕಿತ್ತಿದ್ದಾರೆ. ಜತೆಗೆ ರಸ್ತೆ ಪಕ್ಕದಲ್ಲಿ ನಿಂತಿದ್ದ ಬೈಕ್‌ ಕದ್ದು ಹೋಗುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಚಿತ್ರದುರ್ಗದಲ್ಲಿ ಎಟಿಎಂ ಕಳ್ಳತನಕ್ಕೆ ಕಳ್ಳನ ಯತ್ನ

ಚಿತ್ರದುರ್ಗ ನಗರದಲ್ಲಿ ಎಟಿಎಂ (ATM) ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ. ನಗರದ ಸರಸ್ವತಿ ಪುರಂ ಶಾಲೆಯ ಕೆನರಾ ಬ್ಯಾಂಕ್ ಎಟಿಎಂನಲ್ಲಿ ಕೃತ್ಯ ನಡೆದಿದ್ದು, ಚಾಲಾಕಿ ಕಳ್ಳನ ಚಲನವಲನ ಸಿಸಿ ಕ್ಯಾಮೆರಾದಲ್ಲಿ (CCTV) ಸೆರೆಯಾಗಿದೆ. ಮಂಕಿ ಕ್ಯಾಪ್, ಕೈಗೆ ಗ್ಲೌಸ್ ಧರಿಸಿ ಬಂದಿದ್ದ ಖತರ್ನಾಕ್ ಕಳ್ಳ ಬಳಿಕ ಸಿಸಿಕ್ಯಾಮೆರಾ ಗಳಿಗೆ ಕಪ್ಪು ಮಸಿ ಸ್ಪ್ರೇ ಮಾಡಿದ್ದಾನೆ. ಕಬ್ಬಿಣದ ರಾಡ್‌ನಿಂದ ಎಟಿಎಂಗೆ ಹೊಡೆದು ಹಣ ಎಗರಿಸಲು ಯತ್ನಿಸಿದ್ದಾನೆ. ಮಿಷನ್ ಸೇಪ್ ಲಾಕ್ ಡೋರ್ ಡ್ಯಾಮೇಜ್ ಮಾಡಿ ಎಸ್ಕೇಪ್ ಆಗಿದ್ದಾನೆ. ಸದ್ಯ ಬ್ಯಾಂಕ್ ಮ್ಯಾನೇಜರ್ ಮೋಹನ್ ರಾವ್ ಅವರಿಂದ ದೂರು ದಾಖಲಾಗಿದೆ. ಸ್ಥಳಕ್ಕೆ ಚಿತ್ರದುರ್ಗ ಬಡಾವಣೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವೃದ್ಧೆಯ ಚಿನ್ನದ ಸರ ಕದ್ದ ಮುಸುಕುಧಾರಿಗಳು

ಅಂಗಡಿಗೆ ತೆರಳುತ್ತಿದ್ದ ವೃದ್ದೆ ಕೊರಳಲ್ಲಿದ್ದ ಚಿನ್ನದ ಸರ ಕದ್ದು ಕಳ್ಳರು ಎಸ್ಕೇಪ್ ಆಗಿದ್ದಾರೆ. ಚಿತ್ರದುರ್ಗದ ಎಸ್‌ಪಿ ಕಚೇರಿ ಸಮೀಪದಲ್ಲೇ ಘಟನೆ ನಡೆದಿದೆ. ಇಬ್ಬರು ಮುಸುಕು ಧಾರಿ ಬೈಕ್ ಸವಾರರಿಂದ ಕೃತ್ಯ ನಡೆದಿದೆ. ಮುನ್ಸಿಪಲ್ ಕಾನೋನಿ ನಿವಾಸಿ ಅನ್ನಪೂರ್ಣಮ್ಮ ಎಂಬುವವರು 45 ಗ್ರಾಂ ತೂಕದ ಚಿನ್ನಾಭರಣ ಕಳೆದುಕೊಂಡವರು. ಸ್ಥಳಕ್ಕೆ ಚಿತ್ರದುರ್ಗ ಬಡಾವಣೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Rain News : ವಿಜಯವಾಡದಲ್ಲಿ ಭಾರಿ ಮಳೆಗೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಣೆ; ಕಲಬುರಗಿಯಲ್ಲೂ ಅಬ್ಬರ

ಚಿಕ್ಕಮಗಳೂರಲ್ಲಿ ಕಳ್ಳರ ಕೈ ಚಳಕ

ಮನೆಯಲ್ಲಿ ಯಾರೂ ಇಲ್ಲದ ವೇಳೆ ಸಿನಿಮೀಯ ಶೈಲಿಯಲ್ಲಿ ಏಕಕಾಲದಲ್ಲಿ ನಾಲ್ಕು ಮನೆಗಳಿಗೆ ಖದೀಮರು ಕನ್ನ ಹಾಕಿದ್ದಾರೆ.‌ ನಾಲ್ಕು ಮನೆಯವರು ತುರ್ತು ಕೆಲಸದ ನಿಮಿತ್ತ ವಿವಿಧೆಡೆ ತೆರಳಿದ್ದರು. ಇದನ್ನು ಗಮನಿಸಿದ ಕಳ್ಳರು ಬಾಗಿಲನ್ನು ಮುರಿದು ಒಳನುಗ್ಗಿದ್ದಾರೆ. ಮನೆಯಲ್ಲಿದ್ದ ಹಣ, ಚಿನ್ನ ಹಾಗೂ ಬೆಲೆ ಬಾಳುವ ವಸ್ತುಗಳನ್ನು ಕದ್ದಿದ್ದಾರೆ. ದೇವನೂರು ಗ್ರಾಮದಲ್ಲಿ ಸರಣಿ ಕಳ್ಳತನಕ್ಕೆ ಜನರು ಬೆಚ್ಚಿಬಿದ್ದಿದ್ದಾರೆ. ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

ದೇವನಹಳ್ಳಿಯಲ್ಲಿ ಬೈಕ್‌ ಕಳ್ಳ ಅರೆಸ್ಟ್‌

ದ್ವಿಚಕ್ರ ವಾಹನಗಳನ್ನೇ ಕಳವು ಮಾಡುತ್ತಿದ್ದ ಖತರ್ನಾಕ್ ಬೈಕ್ ಕಳ್ಳನ ಬಂಧನವಾಗಿದೆ. ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಪೊಲೀಸರಿಂದ ಚಿಕ್ಕಬಳ್ಳಾಪುರದ ನೆಲಮಾಕನಹಳ್ಳಿ ಗ್ರಾಮದ ಸಾಗರ್ ( 25) ಬಂಧಿತ ಆರೋಪಿ ಆಗಿದ್ದಾನೆ.

ಈತ ಕೊಯಿರಾ ಗ್ರಾಮದ ಮನೋಜ್ ಎಂಬಾತನ‌ ಮನೆ ಮುಂದೆ ನಿಲ್ಲಿಸಿದ್ದ ಆರ್ ಎಕ್ಸ್ ಬೈಕ್ ಕದ್ದು‌ ಎಸ್ಕೇಪ್‌ ಆಗಿದ್ದ. ಈ ಬಗ್ಗೆ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಕಾರ್ಯಾಚರಣೆ ನಡೆಸಿ ಮನೆಯ ಮುಂದೆ ಬೈಕ್‌ಗಳ ಕದಿಯುತ್ತಿದ್ದ ಸಾಗರ್‌ನನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತನಿಂದ 4 ಆರ್ ಎಕ್ಸ್ ಬೈಕ್, 2 ಆಕ್ಟಿವ್ ಹೊಂಡಾ ಸೇರಿದಂತೆ 6 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕೊಡಗು

Assault Case : ನಡುರಸ್ತೆಯಲ್ಲೇ ಜಾಡಿಸಿ ಒದ್ದು, ಥೂ ಎಂದು ಉಗಿದಾಡಿಕೊಂಡ ಖಾಸಗಿ ಬಸ್‌ಗಳ ಸಿಬ್ಬಂದಿ

Assault Case : ಕೊಡಗಿನ ನಡುರಸ್ತೆಯಲ್ಲೇ ಖಾಸಗಿ ಬಸ್‌ಗಳ ಸಿಬ್ಬಂದಿ ಕಿತ್ತಾಡಿಕೊಂಡಿದ್ದಾರೆ. ಒಬ್ಬರಿಗೊಬ್ಬರು ಜಾಡಿಸಿ ಒದ್ದು, ಥೂ ಎಂದು ಉಗಿದಾಡಿಕೊಂಡಿದ್ದಾರೆ.

VISTARANEWS.COM


on

By

Assault Case
Koo

ಕೊಡಗು: ನಡುರಸ್ತೆಯಲ್ಲೇ ಜಗಳಕ್ಕಿಳಿದ ಖಾಸಗಿ ಬಸ್ಸುಗಳ ಸಿಬ್ಬಂದಿ ಒಬ್ಬರಿಗೊಬ್ಬರು (Assault Case) ಹೊಡೆದಾಡಿಕೊಂಡಿದ್ದಾರೆ. ಕೊಡಗಿನ ಗೋಣಿಕೊಪ್ಪದಲ್ಲಿ ಘಟನೆ ನಡೆದಿದೆ. ಒಂದು ಬಸ್ಸಿಗೆ ಮತ್ತೊಂದು ಬಸ್ಸನ್ನು ಅಡ್ಡ ನಿಲ್ಲಿಸಿದ ಎಂದು ಶುರುವಾದ ಗಲಾಟೆ ಸಾರ್ವಜನಿಕರ ಎದುರಿನಲ್ಲೇ ಹೊಡೆದಾಡಿಕೊಂಡಿದ್ದಾರೆ.

ಒಬ್ಬ ಸಿಬ್ಬಂದಿ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಲೇ ಜಾಡಿಸಿ ಒದ್ದಿದ್ದಾನೆ. ಖಾಸಗಿ ಬಸ್‌ಗಳ ಸಿಬ್ಬಂದಿ ಹೊಡೆದಾಟಕ್ಕೆ ಸಾರ್ವಜನಿಕರು ಬೆಪ್ಪಾದರು. ಅಲ್ಲಿದ್ದ ಸಾರ್ವಜನಿಕರ ಮೊಬೈಲ್‌ನಲ್ಲಿ ಗಲಾಟೆ ವಿಡಿಯೊ ಸೆರೆಯಾಗಿದೆ. ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪದಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Road Accident : ದುಬೈ ಪ್ರವಾಸಕ್ಕೆ ಹೋದ ಗೋಕಾಕ್‌ ಮೂಲದ ನಾಲ್ವರು ಸಜೀವ ದಹನ

ಜಮೀನಿಗಾಗಿ ಮಚ್ಚಿನಿಂದ ಹಲ್ಲೆ

ತುಮಕೂರು : ಜಮೀನು ವಿವಾದ ಹಿನ್ನೆಲೆಯಲ್ಲಿ ಮಚ್ಚಿನಿಂದ ಹಲ್ಲೆಗೆ ಯತ್ನಿಸಲಾಗಿದೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕು ಶಿವಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಜಮೀನು ತಮಗೆ ಸೇರಬೇಕೆಂದು ಗ್ರಾಮದ ನಾಗರಾಜ್ ಮೇಲೆ ಹರೀಶ್ ಎಂಬಾತ ಮಚ್ಚು ಹಿಡಿದು ಹಲ್ಲೆ ನಡೆಸಿದ್ದಾನೆ.

ಗ್ರಾಮದ 33/5 ಎ 8.5 ಗುಂಟೆ ಜಮೀನು ತಮಗೆ ಸೇರಬೇಕೆಂದು ಹರೀಶ್‌ ಹಲ್ಲೆಗೆ ಮುಂದಾಗಿದ್ದಾರೆ. ಅಂದಹಾಗೇ ನಾಗರಾಜ್‌ ಅವರ ತಾಯಿ ಶಾರದಮ್ಮ ಹೆಸರಿನಲ್ಲಿರುವ ಜಮೀನು ಇದ್ದು, ನಾಗರಾಜ್‌ಗೆ ಇದು ಪಿತ್ರಾರ್ಜಿತ ಆಸ್ತಿಯಾಗಿದೆ . ಶಾರದಮ್ಮ ಹೆಸರಿನಲ್ಲಿರುವ ಜಮೀನಿನಲ್ಲಿ ತೆಂಗಿನಕಾಯಿ ಕೀಳಿಸಲು ಹೋದಾಗ ಪಕ್ಕದ ಜಮೀನಿನ ‌ಮಾಲೀಕ ಹರೀಶ್‌ ನಾಗರಾಜ್‌ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ನೊಣವಿನಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಷ ಸೇವಿಸಿದ ಬಿಲ್‌ ಕಲೆಕ್ಟರ್‌

ಯಾದಗಿರಿ: ವಿಷ ಸೇವಿಸಿ ಬಿಲ್ ಕಲೆಕ್ಟರ್ ಆತ್ಮಹತ್ಯೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವಾಪುರ ಪಂಚಾಯತಿ ಪಿಡಿಓ, ಅಧ್ಯಕ್ಷೆ ವಿರುದ್ಧ ಕೇಸ್ ದಾಖಲಾಗಿದೆ. ಪಿಡಿಓ ದೇವೇಂದ್ರಪ್ಪ ಹಾಗೂ ಅಧ್ಯಕ್ಷೆ ರೇಣುಕಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ. ಗ್ರಾಮದ ಹಲವು ಅಭಿವೃದ್ಧಿ ಕಾಮಗಾರಿ ಬಿಲ್ ಮಾಡದೇ ಸತಾಯಿಸುತ್ತಿದ್ದರು. ಇದರಿಂದ ಮನನೊಂದು ಬಿಲ್ ಕಲೆಕ್ಟರ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕಾಮಗಾರಿ ‌ಮಾಡಿದ 3,75,000 ರೂ. ಬಿಲ್ ಮಾಡದೇ ಸತಾಯಿಸಿದ್ದರು. ಬಿಲ್ ಕಲೆಕ್ಟರ್ ಯಲ್ಲಪ್ಪ ಅವರ ಪುತ್ರ ವೆಂಕಟೇಶ್ ಅರಳಗುಂಡಗಿ ದೂರಿನನ್ವಯ ಸುರಪುರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ವೈರಲ್ ನ್ಯೂಸ್

Viral News: ಸಿಕ್ಕ ಸಿಕ್ಕ ಕಾರಿನ ಮೇಲೆ ಜಿಗಿತಾಳೆ ಈ ನಾಗಿಣಿ !!; ವಿಡಿಯೊ ಇಲ್ಲಿದೆ ನೋಡಿ

ಬಿಷಪ್ ಕಾಟನ್ ಜಂಕ್ಷನ್ ಬಳಿ ಅನೇಕ ಕಾರು ಚಾಲಕರು ಯುವತಿಯ ವರ್ತನೆಗೆ ಬೆಚ್ಚಿ ಬಿದ್ದಿದ್ದಾರೆ. ತನ್ನಷ್ಟಕ್ಕೆ ತಾನೇ ಮಾತನಾಡಿಕೊಂಡು ಸಾಗುವ ಯುವತಿಯ ವಿಡಿಯೋ ಕಾರಿನ ಡ್ಯಾಷ್ ಕ್ಯಾಮ್ ನಲ್ಲಿ ಸೆರೆಯಾಗಿದೆ. ಟಿವಿ ಸಿರಿಯಲ್ ಗಳಲ್ಲಿ ಇರುವ ನಾಗಿಣಿಯಂತೆ ಈಕೆ ಕಾರಿನ ಮುಂದೆ ಬಂದು ಕಾರಿನ ಬಾನೆಟ್ ಮೇಲೆ ಕುಳಿತು ತನ್ನಷ್ಟಕ್ಕೆ ತಾನು ಮಾತನಾಡುವುದು ವಿಡಿಯೋದಲ್ಲಿ (Viral News) ಸೆರೆಯಾಗಿದೆ.

VISTARANEWS.COM


on

By

Viral News
Koo

ಬೆಂಗಳೂರು: ನಗರದಲ್ಲೊಬ್ಬಳು ಮಾನಸಿಕ ಅಸ್ವಸ್ಥ (Mentally ill) ಹುಡುಗಿ ಪ್ರತ್ಯಕ್ಷವಾಗಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿದ್ದಾಳೆ. ಇದರ ವಿಡಿಯೋ (Video) ಈಗ ಭಾರೀ ವೈರಲ್ (Viral News) ಆಗುತ್ತಿದೆ. ಕಾರಿನ ಮುಂದೆ ಬಿದ್ದು ಭಯಗೊಳ್ಳುವಂತೆ ಮಾಡುವ ಈ ಹುಡುಗಿ ಕಾರಿನ ಬಾನೆಟ್ ಮೇಲೆ ನಿಂತು ಸುಮ್ಮನೆ ಬಡಬಡಿಸುತ್ತಾಳೆ.

ಬಿಷಪ್ ಕಾಟನ್ ಜಂಕ್ಷನ್ ಬಳಿ ಈ ಘಟನೆ ನಡೆದಿದ್ದು, ಅನೇಕರು ಯುವತಿಯ ವರ್ತನೆಗೆ ಬೆಚ್ಚಿ ಬಿದ್ದಿದ್ದಾರೆ. ತನ್ನಷ್ಟಕ್ಕೆ ತಾನೇ ಮಾತನಾಡಿಕೊಂಡು ಸಾಗುವ ಯುವತಿಯ ವಿಡಿಯೋ ಕಾರಿನ ಡ್ಯಾಷ್ ಕ್ಯಾಮ್ ನಲ್ಲಿ ಸೆರೆಯಾಗಿದೆ. ಟಿವಿ ಸಿರಿಯಲ್ ಗಳಲ್ಲಿ ಇರುವ ನಾಗಿಣಿಯಂತೆ ಈಕೆ ಕಾರಿನ ಮುಂದೆ ಬಂದು ಕಾರಿನ ಬಾನೆಟ್ ಮೇಲೆ ಕುಳಿತು ತನ್ನಷ್ಟಕ್ಕೆ ತಾನು ಮಾತನಾಡುವುದು ಇದರ ವಿಡಿಯೋದಲ್ಲಿ ಕಾಣಬಹುದು.

ಇದನ್ನೂ ಓದಿ: Viral News: ರಜೆ ಅಂದ್ರೆ ಮಕ್ಕಳಿಗೆ ಖುಷಿ ನಿಜ.. ಆದ್ರೆ ಅದಕ್ಕಾಗಿ ಕೊಲೆನೇ ಮಾಡೋದಾ? ಈ ವಿಲಕ್ಷಣ ಸುದ್ದಿ ಕೇಳಿ ಎಲ್ಲರಿಗೂ ಶಾಕ್‌!

ಕೋರ್ಟ್ ಗೆ ಹಾಜರಾಗದ ವಕೀಲ ಬಂಧನ

ವಾರೆಂಟ್ ಜಾರಿಯಾದರೂ ಕೋರ್ಟ್ ಗೆ ಹಾಜರಾಗದ ಹಿನ್ನಲೆಯಲ್ಲಿ ವಕೀಲ ಕೆ.ಎನ್. ಜಗದೀಶ್ ಕುಮಾರ್ ನನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಗೋವಾದಲ್ಲಿ ಜಗದೀಶ್ ನನ್ನು ಬಂಧಿಸಿ ಪೊಲೀಸರು ಬೆಂಗಳೂರಿಗೆ ಕರೆತರುತ್ತಿದ್ದಾರೆ.

ಜಗದೀಶ್ ವಿರುದ್ಧ 2022 ರಲ್ಲಿ ಜಾತಿ ನಿಂದನೆ ಕೇಸ್ ದಾಖಲಾಗಿತ್ತು. ನ್ಯಾಯಾಲಯದಲ್ಲಿ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು. ಕೋರ್ಟ್ ಗೆ ಹಾಜರಾಗದೇ ವಕೀಲ ಜಗದೀಶ್ ಕುಮಾರ್ ತಲೆಮರೆಸಿಕೊಂಡಿದ್ದ.

ಹಿಟ್ ಆಂಡ್ ರನ್ ಗೆ ಪಾದಚಾರಿ ಬಲಿ

ಬೆಳ್ಳಂಬೆಳಗ್ಗೆ ಹಿಟ್ ಆ್ಯಂಡ್ ರನ್ ಗೆ ಪಾದಚಾರಿಯೊಬ್ಬ ಬಲಿಯಾದ ಘಟನೆ ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ಲ ಗ್ರಾಮದಲ್ಲಿ ನಡೆದಿದೆ. ನರೇಗಲ್ ಪಟ್ಟಣದ ನಿವಾಸಿ ಮಲ್ಲಯ್ಯ ಬಕ್ಕಯ್ಯನಮಠ (65) ಮೃತರು.

Viral News
Viral News


ಶುಕ್ರವಾರ ಬೆಳಗಿನ ಜಾವ 5.30 ರ ಸುಮಾರಿಗೆ ಮನೆಯಿಂದ ಚಹಾ ಕುಡಿಯಲೆಂದು ಹೊರಗೆ ಹೋಗಿದ್ದ ವೃದ್ದ ಮಲ್ಲಯ್ಯ ನರೇಗಲ್ ಪಟ್ಟಣ ಪಂಚಾಯತಿ ಬಳಿ ರಸ್ತೆಯಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.

ಪೂಜಾರಿಕೆ ವೃತ್ತಿ‌ ಮಾಡುತ್ತಿದ್ದ ಮಲ್ಲಯ್ಯನ ಮೇಲೆ ಏಕಾಏಕಿ ಹರಿದ ಅಪರಿಚಿತ ವಾಹನದಿಂದಾಗಿ ದೇಹ ಛಿದ್ರ ಛಿದ್ರವಾಗಿದೆ. ಸ್ಥಳಕ್ಕೆ ನರೇಗಲ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ನರೇಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ವಾಹನ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Continue Reading

ವೈರಲ್ ನ್ಯೂಸ್

Viral News: ತಂಗಿ ಮನೆಯಲ್ಲೇ ಚಿನ್ನ ಕದ್ದು ಸಿಕ್ಕಿಬಿದ್ದ ಅಕ್ಕ

ಗಂಡನಿಗೆ ಹುಷಾರಿಲ್ಲ ಎಂದು ಗಂಡನೊಂದಿಗೆ ಅಕ್ಕನ ಮನೆಗೆ ತಂಗಿ ಹೋಗಿದ್ದಾಗ ಅಕ್ಕ ತಂಗಿ ಮನೆಗೆ ಹೋಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಕದ್ದಿದ್ದಾಳೆ. ತನಿಖೆ ವೇಳೆ ಇದು ಬಹಿರಂಗವಾಗಿದೆ. ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ (Viral News) ಆಗಿದೆ.

VISTARANEWS.COM


on

By

Viral News
Koo

ಬೆಂಗಳೂರು: ತಂಗಿ ಮನೆಯಲ್ಲೇ ಕಳ್ಳತನ (theft) ಮಾಡದ ಅಕ್ಕ ಪೊಲೀಸರ ಬಲೆಗೆ ಬಿದ್ದ ಘಟನೆ ಬೆಂಗಳೂರಿನ (bengaluru) ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (Viral News) ಆಗಿದೆ. ಎಲೆಕ್ಟ್ರಾನಿಕ್ ಸಿಟಿ ಭಾಗದ ಶಶಿಕಲಾ (30) ಬಂಧಿತ ಆರೋಪಿ.

ಗಂಡನಿಗೆ ಹುಷಾರಿಲ್ಲ ಎಂದು ಗಂಡನೊಂದಿಗೆ ಅಕ್ಕನ ಮನೆಗೆ ತಂಗಿ ಹೋಗಿದ್ದಾಗ ಈ ಘಟನೆ ನಡೆದಿದೆ.
ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಿದ್ದ ಅಕ್ಕನ ಮನೆಗೆ ಹೋಗಿದ್ದ ತಂಗಿ ಮತ್ತು ಆಕೆಯ ಪತಿ ಔಷಧ ತರಲು ಅಕ್ಕನಿಗೆ ಸ್ಕೂಟರ್ ಕೀ ಕೊಟ್ಟಿದ್ದರು. ಸ್ಕೂಟರ್ ಕೀ ಯೊಂದಿಗೆ ತಂಗಿಯ ಮನೆ ಕೀ ಕೂಡ ಇತ್ತು. ಇದನ್ನು ಗಮನಿಸಿದ ಅಕ್ಕ ನೇರವಾಗಿ ತಂಗಿಯ ಮನೆಗೆ ಹೋಗಿದ್ದಾಳೆ.

ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದ್ದ ತಂಗಿಯ ಮನೆಯ 100 ಮೀಟರ್ ದೂರದಲ್ಲಿ ಸ್ಕೂಟರ್ ನಿಲ್ಲಿಸಿ ನಡೆದುಕೊಂಡು ತಂಗಿ ಮನೆಗೆ ಹೋದ ಅಕ್ಕನಿಗೆ ಬೀರು ಕೀ ಸಿಗದ ಕಾರಣ ಬೀರು ಒಡೆದು ಚಿನ್ನ ಮತ್ತು ಬೆಳ್ಳಿಯನ್ನು ಕಳ್ಳತನ ಮಾಡಿದ್ದಾಳೆ.

ಮನೆಗೆ ಬಂದ ತಂಗಿಗೆ ಮನೆಯಲ್ಲಿ ಕಳ್ಳತನವಾಗಿರುವ ವಿಚಾರ ತಿಳಿದು ಆಡುಗೋಡಿ ಠಾಣೆಗೆ ದೂರು ನೀಡಿದ್ದರು. ಮನೆ ಕೀ ಒಡೆಯದೆ ಬೀರು ಬೀಗ ಮಾತ್ರ ಒಡೆದಿರುವುದು ಪೊಲೀಸರ ಸಂಶಯಕ್ಕೆ ಕಾರಣವಾಗಿತ್ತು.

ಈ ವೇಳೆ ಸಿಸಿಟಿವಿ ಮೂಲಕ ಟ್ರ್ಯಾಕ್ ಮಾಡಿ ಅಕ್ಕನ ವಿಚಾರಸಿದಾಗ ಸತ್ಯ ಬಹಿರಂಗವಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಕಳವಾದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಯಿಂದ ಒಟ್ಟು 5,50,000 ಮೌಲ್ಯದ 70 ಗ್ರಾಂ ಚಿನ್ನ ಮತ್ತು 350 ಗ್ರಾಂ ಬೆಳ್ಳಿ ವಶಕ್ಕೆ ಪಡೆಯಲಾಗಿದೆ.

Viral News
Viral News


ದೆಹಲಿ ಗ್ಯಾಂಗ್ ಬಂಧನ

ದೆಹಲಿಯಿಂದ ಬಂದು ಬೆಂಗಳೂರಿನ ಮನೆ ಒಡೆದಿದ್ದ ಗ್ಯಾಂಗ್ ಅನ್ನು ಸಂಜಯ್ ನಗರ ಪೊಲೀಸರು ಬಂಧಿಸಿದ್ದಾರೆ. ಅಕ್ಬರ್, ಸೋನು ಯಾದವ್ ಬಂಧಿತ ಆರೋಪಿಗಳು.

ಸಂಜಯ್ ನಗರದ ರೇಣುಕಾ ಎಂಬುವರ ಮನೆಯಲ್ಲಿ 50 ಲಕ್ಷ ಮೌಲ್ಯದ 700 ಗ್ರಾಂ ಚಿನ್ನವನ್ನು ಆರೋಪಿಗಳು ಕದ್ದಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಸಂಜಯ್ ನಗರ ಪೊಲೀಸರು ದೆಹಲಿಗೆ ತೆರಳಿ ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಹಿಂದೆ ಹಲವು ರಾಜ್ಯಗಳಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳು ಇದೇ ಮಾದರಿಯಲ್ಲಿ ಬೆಂಗಳೂರಿನಲ್ಲೂ ಕೃತ್ಯ ಎಸಗಿ ಪರಾರಿಯಾಗಿದ್ದಾರೆ. ಕದ್ದ ಮಾಲುಗಳನ್ನು ಪತ್ನಿ ಮುಬೀನಾಗೆ ನೀಡುತಿದ್ದ ಅಕ್ಬರ್. ಕದ್ದ ಚಿನ್ನವನ್ನು ಮಾರಾಟ ಮಾಡಲು ಹೋದಾಗ ಸಿಕ್ಕಿಬಿದ್ದಿದ್ದಾರೆ.

ಬಂಧಿತರಿಂದ 405 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದ್ದು, ಸಂಜಯ್ ನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: Missing Case : ಕಾಣೆಯಾಗಿದ್ದ ನವ ವಿವಾಹಿತೆ ಬಾವಿಯಲ್ಲಿ ಜೀವಂತವಾಗಿ ಪತ್ತೆ! ಎಳೆದುಕೊಂಡು ಹೋಗಿ ಹಳೆ ಬಾವಿಗೆ ತಳ್ಳಿದವರ‍್ಯಾರು?

ಮನೆಗಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ

ವೈಟ್ ಫೀಲ್ಡ್ ಪೊಲೀಸರು ಮನೆಗಳ್ಳತನ‌ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಅಲ್ ಮೋಹಿನ್ ಮುಲ್ಲಾ‌ (23), ಮೊಹಮ್ಮದ್ ಶಾರಿಫ್‌(24) ಬಂಧಿತ ಆರೋಪಿಗಳು.

ಕದ್ದ ಬೈಕ್ ನಲ್ಲಿ ಏರಿಯಾಗಳ ರೌಂಡ್ ಹಾಕುತಿದ್ದ ಆರೋಪಿಗಳು. ಬೆಳಗ್ಗೆ ಖಾಲಿ ಇರುವ ಮನೆಗಳನ್ನು ನೋಡಿ ಕಳ್ಳತನ ಮಾಡುತ್ತಿದ್ದರು.

ರಾತ್ರಿ ವೇಳೆ ಚಿಂದಿ ಆಯುವ ನೆಪದಲ್ಲಿ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದರು. ಮನೆಯೊಂದರಿಂದ 100 ಗ್ರಾಂ ಚಿನ್ನ, ನಾಲ್ಕು ವಾಚ್ ಗಳನ್ನು ಕಳವು ಮಾಡಿದ್ದ ಆರೋಪಿಗಳಿಂದ 76 ಗ್ರಾಂ ಚಿನ್ನ, ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ.

Continue Reading
Advertisement
Real Star Upendra Acting with Superstar Rajinikanth Coolie Movie
ಸ್ಯಾಂಡಲ್ ವುಡ್5 hours ago

Actor Upendra : ಕೂಲಿ ಚಿತ್ರದಲ್ಲಿ ಸೂಪರ್‌ ಸ್ಟಾರ್‌ ತಲೈವಾ ಜತೆಗೆ ರಿಯಲ್ ಸ್ಟಾರ್; ಕಲೀಷ ಪಾತ್ರದಲ್ಲಿ ಮಿಂಚಲಿರುವ ಉಪೇಂದ್ರ

Pot holes
ಬೆಂಗಳೂರು6 hours ago

Pot Holes: ರಸ್ತೆಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಕಮಿಷನರ್‌ಗೆ ಡಿಕೆಶಿ ಖಡಕ್‌ ಸೂಚನೆ; 15 ದಿನಗಳ ಗಡುವು

I will become CM if Siddaramaiah gives permission RV Deshpande
ಮೈಸೂರು8 hours ago

RV Deshpande : ಸಿದ್ದರಾಮಯ್ಯ ಅನುಮತಿ ಕೊಟ್ಟರೆ ನಾನೇ ಸಿಎಂ ಆಗುವೆ- ಆರ್‌ವಿ ದೇಶಪಾಂಡೆ ಅಚ್ಚರಿ ಹೇಳಿಕೆ

Irani gang active in Belagavi Single women are the target
ಬೆಳಗಾವಿ8 hours ago

Theft Case : ಬೆಳಗಾವಿಯಲ್ಲಿ ಇರಾನಿ ಗ್ಯಾಂಗ್ ಆ್ಯಕ್ಟಿವ್! ಒಂಟಿ ಮಹಿಳೆಯರೇ ಟಾರ್ಗೆಟ್‌

Yettinahole project lift work to be inaugurated on September 6 Gowri festival
ಬೆಂಗಳೂರು10 hours ago

Yettinahole Project: ಗೌರಿ ಹಬ್ಬದಂದು ಎತ್ತಿನಹೊಳೆ ಯೋಜನೆ ಏತ ಕಾಮಗಾರಿ ಉದ್ಘಾಟನೆ; ಪಕ್ಷಬೇಧ ಮರೆತು ಎಲ್ಲರಿಗೂ ಆಹ್ವಾನ- ಡಿಸಿಎಂ

Rain News
ಮಳೆ10 hours ago

Rain News : ವಿಜಯವಾಡದಲ್ಲಿ ಭಾರಿ ಮಳೆಗೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಣೆ; ಕಲಬುರಗಿಯಲ್ಲೂ ಅಬ್ಬರ

Bike rider in deadly accident Elderly woman dies of electric shock
ಬೆಂಗಳೂರು10 hours ago

Road Accident : ಡೆಡ್ಲಿ ಆ್ಯಕ್ಸಿಡೆಂಟ್‌ಗೆ ಬೈಕ್‌ ಸವಾರ ಸ್ಪಾಟ್‌ ಡೆತ್‌; ಕರೆಂಟ್‌ ಶಾಕ್‌ನಿಂದ ಒದ್ದಾಡಿ ಪ್ರಾಣಬಿಟ್ಟ ವೃದ್ಧೆ

Girl commits suicide after being fed up with rumours of love
ಮಂಡ್ಯ11 hours ago

Mandya News : ನಾಲ್ವರು ಬಾಲಕರ ಪ್ರೀತಿ-ಪ್ರೇಮದ ಅಪಪ್ರಚಾರ; ಗಾಳಿ ಸುದ್ದಿಗೆ ಬಾಲಕಿ ಆತ್ಮಹತ್ಯೆ

Do you know when Darshan got royalty in Central Jail
ಸಿನಿಮಾ12 hours ago

Actor Darshan : ಸೆಂಟ್ರಲ್‌ ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ಸಿಕ್ಕಿದ್ದು ಯಾವಾಗಿನಿಂದ ಗೊತ್ತಾ? ಬಿಸ್ಕತ್‌ ಹಾಕಿಲ್ವಾ ಸುಮ್ಮಿನಿರು ಅಂದ್ರಾ ಕರಿಯಾ!

Actor Darshan shifted back to Bengaluru from Ballari
ಬಳ್ಳಾರಿ12 hours ago

Actor Darshan : ಬಳ್ಳಾರಿಯಿಂದ ನಟ ದರ್ಶನ್‌ ಮತ್ತೆ ಬೆಂಗಳೂರಿಗೆ ಶಿಫ್ಟ್‌! ಪತ್ನಿ ಬಂದು ಹೋದ್ಮೆಲೆ ಫುಲ್ ಆಕ್ಟೀವ್

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ11 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್1 day ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್4 days ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ1 week ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ3 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ3 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ3 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು4 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ4 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ4 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ4 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌