NPS ಹಂಗಾಮ | ಏನಿದು ಎನ್‌ಪಿಎಸ್?‌ ಇದು ಏಕೆ ಬೇಕು? ಯಾರು ಸೇರಬಹುದು? - Vistara News

ಪ್ರಮುಖ ಸುದ್ದಿ

NPS ಹಂಗಾಮ | ಏನಿದು ಎನ್‌ಪಿಎಸ್?‌ ಇದು ಏಕೆ ಬೇಕು? ಯಾರು ಸೇರಬಹುದು?

ಎನ್‌ಪಿಎಸ್‌ ಈಗ ಸುದ್ದಿಯಲ್ಲಿದೆ. ರಾಷ್ಟ್ರೀಯ ಪಿಂಚಣಿ ಯೋಜನೆಯಾಗಿರುವ ಎನ್‌ಪಿಎಸ್‌ನ ಸಮಗ್ರ ವಿವರದ ಜತೆಗೆ ಅದರ ಸುತ್ತಮುತ್ತ ನಡೆಯುತ್ತಿರುವ ಭಾರಿ ಹಂಗಾಮದ ಒಳನೋಟ ( NPS ಹಂಗಾಮ) ಇಲ್ಲಿದೆ.

VISTARANEWS.COM


on

NPS
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಎನ್‌ಪಿಎಸ್‌ ಎಂದರೇನು? ಇದರಲ್ಲಿ ವಿಧಗಳು ಇವೆಯೇ? ಇದು ಏಕೆ ಬೇಕು? ಇದಕ್ಕೆ ಯಾರು ಸೇರಬಹುದು? ಇದರಲ್ಲಿ ಎಷ್ಟು ಪಿಂಚಣಿ ಸಿಗುತ್ತದೆ? ಜತೆಗೆ ಬೇರೆ ಏನಾದರೂ ಸಿಗುತ್ತದೆಯೇ? ಕೆಲವು ರಾಜ್ಯಗಳಲ್ಲಿ ಇದು ಚುನಾವಣಾ ವಿಷಯವಾಗುವ ಮಟ್ಟಕ್ಕೆ ವಿವಾದ ಆಗಿರುವುದೇಕೆ? ಸರ್ಕಾರಿ ನೌಕರರು ಹಳೆಯ ಪಿಂಚಣಿ ಯೋಜನೆ ಬೇಕೆಂದು ಒತ್ತಾಯಿಸುತ್ತಿರುವುದೇಕೆ? ಎಂಬಿತ್ಯಾದಿ ನೂರಾರು ಪ್ರಶ್ನೆಗಳು ಇದೀಗ ಸಾರ್ವಜನಿಕರಲ್ಲಿ ಉಂಟಾಗಿದೆ. ಇದಕ್ಕೆ ಕಾರಣ ಎನ್‌ಪಿಎಸ್‌ ವಿರುದ್ಧ ರಾಜ್ಯ ಸರ್ಕಾರಿ ನೌಕರರು ನಡೆಸುತ್ತಿರುವ ಪ್ರತಿಭಟನೆಗಳು. ಹಾಗಾದರೆ ಏನಿದು? ಏಕೆ ಹೀಗಾಗಿದೆ? (NPS ಹಂಗಾಮ ) ನೋಡೋಣ ಬನ್ನಿ.

ಏನಿದು ಎನ್‌ಪಿಎಸ್?‌

ನ್ಯಾಶನಲ್‌ ಪೆನ್ಷನ್‌ ಸಿಸ್ಟಮ್‌ (National Pension System -NPS) ಎನ್ನುವುದು ಕೇಂದ್ರ ಹಣಕಾಸು ಇಲಾಖೆಯ ವ್ಯಾಪ್ತಿಯಲ್ಲಿರುವ ಪೆನ್ಷನ್‌ ಫಂಡ್‌ ರೆಗ್ಯುಲೇಟರಿ & ಡೆವಲಪ್‌ಮೆಂಟ್‌ ಅಥಾರಿಟಿ ನಿರ್ವಹಿಸುವ ಪಿಂಚಣಿ ನಿಧಿ (Pension fund) ಯೋಜನೆ. ಪಿಪಿಎಫ್‌ ಮತ್ತು ಇಪಿಎಫ್‌ ಮಾದರಿಯಲ್ಲಿ ಮೆಚ್ಯೂರಿಟಿಯಾಗುವ ಇಡೀ ಮೊತ್ತವು ತೆರಿಗೆ ಮುಕ್ತವಾಗಿರುತ್ತದೆ. ನಿವೃತ್ತಿಯ ಕಾಲದ ಆರ್ಥಿಕ ಭದ್ರತೆಗೆ ಸಹಕರಿಸುವುದು ಇದರ ಉದ್ದೇಶ.

ಎನ್‌ಪಿಎಸ್‌ ಮಾರುಕಟ್ಟೆ ಆಧರಿತವಾಗಿದ್ದು, ಕಾಂಟ್ರಿಬ್ಯೂಷನ್‌ ಪ್ರಾಡಕ್ಟ್‌ ಎಂದು ಪರಿಗಣಿಸುತ್ತಾರೆ. ಅಂದರೆ ಉದ್ಯೋಗಿ ಅಥವಾ ಹೂಡಿಕೆದಾರರು ತಮ್ಮ ಕೊಡುಗೆಯನ್ನು ನೀಡಬೇಕಾಗುತ್ತದೆ. ವೈಯಕ್ತಿಕ ಹೂಡಿಕೆದಾರರಿಗೆ ಯುನೀಕ್‌ ಪರ್ಮನೆಂಟ್‌ ರಿಟೈರ್‌ಮೆಂಟ್‌ ಅಕೌಂಟ್‌ ನಂಬರ್‌ (PRAN- ಪ್ರಾನ್)‌ ಅನ್ನು ನೀಡಲಾಗುತ್ತದೆ. ಸೆಂಟ್ರಲ್‌ ರೆಕಾರ್ಡ್‌ಕೀಪಿಂಗ್‌ ಏಜೆನ್ಸಿ (CRA) ವೈಯಕ್ತಿಕ ಚಂದಾದಾರರಿಗೆ (subscriber) ಪ್ರಾನ್‌ ಸಂಖ್ಯೆಯನ್ನು ನೀಡುತ್ತದೆ.

ಎನ್‌ಪಿಎಸ್‌ ಅಕೌಂಟ್‌ಗಳಲ್ಲಿ ಎರಡು ವಿಧ

ಎನ್‌ಪಿಎಸ್‌ನಲ್ಲಿ ಎರಡು ವಿಧದ ಅಕೌಂಟ್‌ಗಳು ಇರುತ್ತವೆ. ಅವುಗಳೆಂದರೆ ಟೈರ್-‌೧ (Tier -೧) ಮತ್ತು ಟೈರ್‌ 2. (Tier-೨). ಟೈರ್-‌1 ಅಕೌಂಟ್‌ನಲ್ಲಿ ವಿತ್‌ ಡ್ರಾವಲ್ಸ್‌ಗೆ ನಿರ್ಬಂಧ ಇದೆ. ಟೈರ್‌-2 ಅಕೌಂಟ್‌ ಐಚ್ಛಿಕವಾಗಿದೆ. ಇದರಲ್ಲಿ ಹೂಡಿಕೆ ಮತ್ತು ವಿತ್‌ ಡ್ರಾವಲ್ಸ್‌ಗೆ ಅನುಕೂಲವಿದೆ. ಆದರೆ ಟೈರ್-‌1 ಅಕೌಂಟ್‌ ಇದ್ದರೆ ಮಾತ್ರ ಟೈರ್-‌2 ಅಕೌಂಟ್‌ ಅನ್ನು ತೆರೆಯಬಹುದು. ಇಲ್ಲಿ ಮಾರುಕಟ್ಟೆ ಆಧರಿತ ಪ್ರತಿಫಲ ಸಿಗುತ್ತದೆ. ಯೋಜನೆಯಿಂದ ಎಕ್ಸಿಟ್‌ ಆಗುವ ಸಂದರ್ಭ ಕನಿಷ್ಠ 40% ಮೊತ್ತವನ್ನು ಪಿಂಚಣಿ ಪಡೆಯಲು ಬಳಕೆಯಾಗುತ್ತದೆ.

ಎನ್‌ಪಿಎಸ್‌ನಲ್ಲಿ ಮೂರು ಮಾದರಿ

ಎನ್‌ಪಿಎಸ್‌ನಲ್ಲಿ ಭಿನ್ನ ವಲಯಗಳಿಗೆ ಅನುಕೂಲವಾಗುವಂತೆ ಮೂರು ಮಾದರಿಗಳು ಇವೆ. ಅವುಗಳು ಇಂತಿವೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉದ್ಯೋಗಿಗಳಿಗೆ

ಕೇಂದ್ರ ಮತ್ತು ರಾಜ್ಯ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ( ಸಶಸ್ತ್ರ ಪಡೆ ಹೊರತುಪಡಿಸಿ) 2004ರ ಜನವರಿ 1ರಿಂದ ಸೇರಿಕೊಳ್ಳುವವರಿಗೆ ಎನ್‌ಪಿಎಸ್‌ ಅನ್ನು ಕಡ್ಡಾಯಗೊಳಿಸಲಾಗಿತ್ತು. ಆರಂಭದಲ್ಲಿ ಪಶ್ಚಿಮ ಬಂಗಾಳ ಹೊರತುಪಡಿಸಿ ಉಳಿದ ರಾಜ್ಯಗಳು ಎನ್‌ಪಿಎಸ್‌ ಅನ್ನು ಜಾರಿಗೊಳಿಸಿತ್ತು. ಇದರಲ್ಲಿ ಸರ್ಕಾರಿ ಉದ್ಯೋಗಿಗಳು ಪ್ರತಿ ತಿಂಗಳು ತಮ್ಮ ವೇತನದ 10% ಪಾಲನ್ನು ಎನ್‌ಪಿಎಸ್‌ ಖಾತೆಗೆ ಜಮೆ ಮಾಡಬೇಕು. ಸರ್ಕಾರ 2019 ಏಪ್ರಿಲ್‌ನಿಂದ 14% ಪಾಲು ನೀಡುತ್ತದೆ. ಇದು ಕೇಂದ್ರ-ರಾಜ್ಯ ಸರ್ಕಾರಿ ಉದ್ಯೋಗಿಗಳಿಗೆ ನೀಡುವ ಎನ್‌ಪಿಎಸ್‌ ಮಾದರಿ.

ಕಾರ್ಪೊರೇಟ್‌ ಮಾದರಿಯ ಎನ್‌ಪಿಎಸ್

ಕಾರ್ಪೊರೇಟ್‌ ಮಾದರಿಯಲ್ಲಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಎನ್‌ಪಿಎಸ್‌ ಸೌಲಭ್ಯ ನೀಡುತ್ತವೆ.

ಎಲ್ಲ ನಾಗರಿಕರಿಗೂ ಲಭ್ಯವಿರುವ ಎನ್‌ಪಿಎಸ್ ಮಾದರಿ

ದೇಶದಲ್ಲಿ 18-65 ವರ್ಷ ವಯೋಮಿತಿಯ ಎಲ್ಲ ನಾಗರಿಕರೂ ಎನ್‌ಪಿಎಸ್‌ ಸೌಲಭ್ಯವನ್ನು ಪಡೆಯಬಹುದು. ಸರ್ಕಾರಿ ನೌಕರರು ತಮ್ಮ ಎನ್‌ಪಿಎಸ್‌ ಹೊರತಾಗಿಯೂ ಈ ಸಾರ್ವತ್ರಿಕ ಮಾದರಿಯ ಎನ್‌ಪಿಎಸ್‌ನಲ್ಲೂ ಹೂಡಿಕೆ ಮಾಡಬಹುದು.

ಎನ್‌ಪಿಎಸ್‌ ಖಾತೆ ತೆರೆಯುವುದು ಹೇಗೆ?

ಎನ್‌ಪಿಎಸ್‌ ಖಾತೆಯನ್ನು ಆಫ್‌ಲೈನ್‌ ಹಾಗೂ ಆನ್‌ಲೈನ್‌ ವಿಧಾನದಲ್ಲಿ ತೆರೆಯಬಹುದು. eNPS ವೆಬ್‌ಸೈಟ್‌ಗೆ ಲಾಗಿನ್‌ ಆಗಿ ಪ್ಯಾನ್‌ ಮತ್ತು ಬ್ಯಾಂಕ್‌ ಖಾತೆ ವಿವರಗಳನ್ನು ಕೊಟ್ಟು ಎನ್‌ಪಿಎಸ್‌ ಖಾತೆಯನ್ನು ತೆರೆಯಬಹುದು. PFRDA ತನ್ನ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಿರುವ ನೋಂದಾಯಿತ Point of presence (POPs) ಅನ್ನು ಸಂಪರ್ಕಿಸಿ, ಸಂಬಂಧಿಸಿದ ದಾಖಲೆ ಕೊಟ್ಟು ಎನ್‌ಪಿಎಸ್‌ ಖಾತೆ ತೆರೆಯಬಹುದು. ಪಿಒಪಿ ಪಟ್ಟಿಯಲ್ಲಿ ಬ್ಯಾಂಕ್‌ಗಳು, ಹಣಕಾಸು ವಲಯದ ಸಂಸ್ಥೆಗಳು ಇದ್ದು, ಅವುಗಳನ್ನು ಸಂಪರ್ಕಿಸಿ ಎನ್‌ಪಿಎಸ್‌ ಖಾತೆಯನ್ನು ತೆರೆಯಬಹುದು.

ಎನ್‌ಪಿಎಸ್‌ನ ಆರ್ಕಿಟೆಕ್ಚರ್:‌ ಎನ್‌ಪಿಎಸ್‌ ಅನ್ನು ಪಿಎಫ್‌ಆರ್‌ಡಿಎ ಹಲವು ಇಂಟರ್‌ಮೀಡಿಯರೀಸ್‌ ಮೂಲಕ ಆಡಳಿತಾತ್ಮಕವಾಗಿ ನಿರ್ವಹಿಸುತ್ತಿದೆ. ಇವುಗಳಲ್ಲಿ ಪಿಂಚಣಿ ನಿಧಿಗಳು, ಸೆಂಟ್ರಲ್‌ ರೆಕಾರ್ಡ್‌ ಕೀಪಿಂಗ್‌ ಏಜೆನ್ಸಿ (CRA), ಕಸ್ಟೋಡಿಯನ್‌, ನ್ಯಾಶನಲ್‌ ಪೆನ್ಷನ್‌ ಸಿಸ್ಟಮ್‌ ಟ್ರಸ್ಟ್‌, ಟ್ರಸ್ಟೀ ಬ್ಯಾಂಕ್‌, ಪಾಯಿಂಟ್ಸ್‌ ಆಫ್‌ ಪ್ರೆಸೆನ್ಸ್‌ (PoP) ಮತ್ತು ಆನ್ಯುಯಿಟಿ ಸರ್ವೀಸ್‌ ಪ್ರೊವೈಡರ್ಸ್‌ (ASPs) ಇವೆ. ಸ್ಟಾಕ್‌ ಹೋಲ್ಡಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ (Stock Holding corporation of India) ಪ್ರಸ್ತುತ ಎನ್‌ ಪಿಎಸ್‌ನ ಕಸ್ಟೋಡಿಯನ್‌ ಆಗಿದೆ. ಎನ್‌ಪಿಎಸ್‌ ಚಂದಾದಾರರು ವೆಬ್‌ ಪೋರ್ಟಲ್‌, ಮೊಬೈಲ್‌ ಅಪ್ಲಿಕೇಶನ್‌ ಮೂಲಕ ಕೂಡ ಆನ್‌ಲೈನ್‌ ಮೂಲಕ ಸೇವೆ ಪಡೆಯಬಹುದು.

ಭಾಗಶಃ ಹಿಂತೆಗೆತ : ಟೈರ್-‌1 ಅಕೌಂಟ್‌ನಲ್ಲಿ ಚಂದಾದಾರರು ನಿರ್ದಿಷ್ಟ ಉದ್ದೇಶಗಳಿಗೆ ತಮ್ಮ ಕಾಂಟ್ರಿಬ್ಯೂಷನ್‌ನ 25% ಪಾಲನ್ನು ಎಕ್ಸಿಟ್‌ಗೆ ಮುನ್ನ ಹಿಂತೆಗೆದುಕೊಳ್ಳಬಹುದು. 10 ವರ್ಷಗಳ ಹೂಡಿಕೆಯ ಬಳಿಕ ಈ ಅಕೌಂಟ್‌ನಲ್ಲಿ ಭಾಗಶಃ ಹಿಂತೆಗೆತ ಸಾಧ್ಯ. ಹಾಗೆಯೇ ಎರಡು ವಿತ್‌ ಡ್ರಾವಲ್ಸ್‌ ನಡುವೆ ಕನಿಷ್ಠ ಐದು ವರ್ಷ ಅಂತರ ಇರಬೇಕು.

(ಮುಂದುವರಿಯಲಿದೆ)

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Prajwal Revanna Case: ಎಸ್‌ಐಟಿಯಿಂದ ಪ್ರಜ್ವಲ್‌ ರೇವಣ್ಣ ಕೋಣೆ ತಲಾಶ್‌, ಭವಾನಿ ತುಳಸಿ ಪೂಜೆ! ಅಲ್ಲೇ ಇದ್ದರೂ ಮುಖಾಮುಖಿಯಾಗದ ಅಮ್ಮ- ಮಗ

Prajwal Revanna Case: ಪ್ರಜ್ವಲ್‌ ಮನೆಯಲ್ಲಿ ತನ್ನನ್ನು ಲೈಂಗಿಕವಾಗಿ ಕಿರುಕುಳಕ್ಕೆ ಒಳಪಡಿಸಲಾಗಿದೆ ಎಂದು ಸಂತ್ರಸ್ತೆ ತೋರಿಸಿದ ಕೊಠಡಿ ಮಹಜರು ಮಾಡಲಾಗಿದೆ. ಈ ಸಂದರ್ಭದಲ್ಲಿ ಭವಾನಿ ಅವರು ತುಳಸಿ ಕಟ್ಟೆಗೆ ಪೂಜೆ ಮಾಡುತ್ತಿರುವುದು ಕಂಡುಬಂತು.

VISTARANEWS.COM


on

bhavani revanna prajwal revanna case
Koo

ಬೆಂಗಳೂರು: ಲೈಂಗಿಕ ದೌರ್ಜನ್ಯ (Physical Abuse) ಪ್ರಕರಣದಲ್ಲಿ ಎಸ್‌ಐಟಿಯಿಂದ (SIT) ತನಿಖೆಗೆ ಒಳಗಾಗಿರುವ ಪ್ರಜ್ವಲ್‌ ರೇವಣ್ಣ (Prajwal Revanna Case) ಅವರ ಮನೆಯನ್ನು ಇಂದು ಮತ್ತೊಮ್ಮೆ ಮಹಜರು ಮಾಡಲಾಗಿದೆ. ಇದೇ ಸಂದರ್ಭದಲ್ಲಿ ತಾಯಿ ಭವಾನಿ ರೇವಣ್ಣ (Bhavani Revanna) ಅದೇ ಮನೆಯಲ್ಲೇ ಇದ್ದರೂ ಮಗನಿಗೆ ಮುಖಾಮುಖಿ ಆಗಲಿಲ್ಲ ಎಂದು ತಿಳಿದುಬಂದಿದೆ.

ಪ್ರಜ್ವಲ್ ರೇವಣ್ಣನನ್ನು ಎಸ್ಐಟಿ ಅಧಿಕಾರಿಗಳು ಇಂದು ಮಹಜರ್‌ಗೆ ಕರೆದೊಯ್ದರು. ಇಂದು ಪ್ರಜ್ವಲ್‌ನನ್ನು ನ್ಯಾಯಾಲಯಕ್ಕೆ ಹಾಜರು ಮಾಡುವ ಮುನ್ನ ಬೆಂಗಳೂರಿನ ಬಸವನಗುಡಿಯ ನಿವಾಸದಲ್ಲಿ ಮಹಜರ್ ಪ್ರಕ್ರಿಯೆ ನಡೆಸಿದರು. ಸ್ಥಳದಲ್ಲಿ ಬಿಗಿ ಭದ್ರತೆ ಒದಗಿಸಲಾಗಿತ್ತು. ಈ ಸಂದರ್ಭದಲ್ಲಿ ಪ್ರಜ್ವಲ್‌ ತಾಯಿ ಭವಾನಿ ರೇವಣ್ಣ ಅಸೌಖ್ಯದ ಕಾರಣ ಹೇಳಿ ಮನೆಯಲ್ಲೇ ಇದ್ದರು. ಆದರೆ ಪ್ರಜ್ವಲ್‌ಗೆ ಮುಖಾಮುಖಿಯಾಗಲಿಲ್ಲ.

ಈ ಮುನ್ನವೇ ಸ್ಥಳ ಮಹಜರು ಮಾಡುವ ವೇಳೆ ಅಡ್ಡಿಪಡಿಸದಂತೆ ಭವಾನಿ ಅವರಿಗೆ ಸೂಚನೆ ನೀಡಲಾಗಿತ್ತು ಎನ್ನಲಾಗಿದೆ. ಭವಾನಿ ಅವರು ಕೂಡ ಸಂತ್ರಸ್ತ ಮಹಿಳೆಯ ಕಿಡ್ನಾಪ್‌ ಕೇಸ್‌ನಲ್ಲಿ ಎಸ್‌ಐಟಿ ತನಿಖೆಗೆ ಒಳಗಾಗುತ್ತಿದ್ದಾರೆ. ಕೋರ್ಟ್‌ ಭವಾನಿಗೆ ಮಧ್ಯಂತರ ಜಾಮೀನು ನೀಡಿದ್ದು, ಸಂಜೆಯ ಒಳಗೆ ತನಿಖೆ ಮುಗಿಸಿ ಕಳಿಸುವಂತೆ ಎಸ್‌ಐಟಿಗೆ ನಿರ್ದೇಶನ ನೀಡಿದೆ.

ಪ್ರಜ್ವಲ್‌ ಮನೆಯಲ್ಲಿ ತನ್ನನ್ನು ಲೈಂಗಿಕವಾಗಿ ಕಿರುಕುಳಕ್ಕೆ ಒಳಪಡಿಸಲಾಗಿದೆ ಎಂದು ಸಂತ್ರಸ್ತೆ ತೋರಿಸಿದ ಕೊಠಡಿ ಮಹಜರು ಮಾಡಲಾಗಿದೆ. ಈ ಸಂದರ್ಭದಲ್ಲಿ ಭವಾನಿ ಅವರು ತುಳಸಿ ಕಟ್ಟೆಗೆ ಪೂಜೆ ಮಾಡುತ್ತಿರುವುದು ಕಂಡುಬಂತು. ಕೈಯಲ್ಲಿ ಊರುಗೋಲು ಹಿಡಿದುಕೊಂಡು ಬಂದ ಭವಾನಿ ರೇವಣ್ಣ, ಮೊದಲ ಮಹಡಿಯಲ್ಲಿರುವ ತುಳಸಿ‌ಕಟ್ಟೆಗೆ ಪೂಜೆ ಸಲ್ಲಿಸಿದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ವಾಕಿಂಗ್ ಸ್ಟಿಕ್ ಹಿಡಿದುಕೊಂಡು ಓಡಾಡುತ್ತಿದ್ದಾರೆ ಎನ್ನಲಾಗಿದೆ.

ಅಶ್ಲೀಲ ವಿಡಿಯೋದಲ್ಲಿ ತಾನಿರುವುದನ್ನು ಪ್ರಜ್ವಲ್‌ ಒಪ್ಪಿಕೊಂಡಿಲ್ಲ. ಹೀಗಾಗಿ, ಅಶ್ಲೀಲ ವಿಡಿಯೋದಲ್ಲಿ ಕಾಣಿಸುವ ಜಾಗಕ್ಕೂ ಬಸವನಗುಡಿ ಮನೆಯ ಕೋಣೆಗೂ ತಾಳೆ ಆಗ್ತಿದೆಯಾ ಎಂದು ಪರಿಶೀಲನೆ ನಡೆಸಲಾಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಎಲ್ಲೂ ಪ್ರಜ್ವಲ್ ಮುಖ ಕಾಣಿಸುತ್ತಿಲ್ಲ. ಹಾಗಾಗಿ ಮನೆಯ ಕೆಲ ಜಾಗಗಳನ್ನು ಎವಿಡೆನ್ಸ್ ಆಗಿ ಅಧಿಕಾರಿಗಳು ಪರಿಗಣಿಸಲಿದ್ದಾರೆ. ಸಂತ್ರಸ್ತೆ ದೂರಿನಲ್ಲಿ ಉಲ್ಲೇಖ ಮಾಡಿರುವ ಜಾಗ ಹಾಗೂ ಅಶ್ಲೀಲ ವಿಡಿಯೋದಲ್ಲಿರುವ ಜಾಗಗಳು ಮ್ಯಾಚ್‌ ಆದರೆ ಪ್ರಜ್ವಲ್‌ ಲಾಕ್‌ ಆದಂತೆಯೇ.

ಇನ್ನೊಂದೆಡೆ ವಿಡಿಯೋ ಮಾಡಿಕೊಂಡ ಮದರ್ ಡಿವೈಸ್‌ಗಾಗಿ ಎಸ್‌ಐಟಿ ಹುಡುಕಾಟ ನಡೆಸಿದೆ. ಈ ಮೂಲ ಮೊಬೈಲ್‌ ಕಳೆದುಹೋಗಿದೆ. ಒಂದು ವರ್ಷದ ಹಿಂದೆಯೇ ಈ ಬಗ್ಗೆ ಹೊಳೆನರಸೀಪುರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿರುವುದಾಗಿ ಪ್ರಜ್ವಲ್‌ ಹೇಳಿದ್ದಾರೆ.

ಪರಾರಿಯಾಗಲು ಸಹಾಯ; ಪ್ರಜ್ವಲ್ ರೇವಣ್ಣ ಗರ್ಲ್ ಫ್ರೆಂಡ್‌ಗೆ ಎಸ್‌ಐಟಿ ನೊಟೀಸ್!

ಬೆಂಗಳೂರು: ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿದೇಶದಲ್ಲಿ ತಲೆ ಮರೆಸಿಕೊಳ್ಳಲು ಹಣ ಸಹಾಯ ಮಾಡಿದ ಆರೋಪದಡಿ ಪ್ರಜ್ವಲ್‌ ಗರ್ಲ್ ಫ್ರೆಂಡ್‌ಗೆ ಎಸ್‌ಐಟಿ ನೊಟೀಸ್ ನೀಡಿದೆ. ಸಹಾಯ ಮಾಡುವ ಜತೆಗೆ ಇಲ್ಲಿನ ವಿದ್ಯಾಮಾನಗಳನ್ನು ಗರ್ಲ್ ಫ್ರೆಂಡ್ ಅಪ್ ಡೇಟ್ ಮಾಡುತ್ತಿದ್ದಳು ಎನ್ನಲಾಗಿದೆ. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ಪ್ರಜ್ವಲ್‌ ಗರ್ಲ್ ಫ್ರೆಂಡ್‌ಗೆ ನೋಟಿಸ್‌ ಜಾರಿ ಮಾಡಲಾಗಿದೆ.

ಹಲವು ಬಾರಿ ನೋಟಿಸ್ ನೀಡಿದ್ದರೂ ಪ್ರಜ್ವಲ್‌ ರೇವಣ್ಣ ವಿಚಾರಣೆಗೆ ಬಂದಿರಲಿಲ್ಲ. ಆರ್ಥಿಕವಾಗಿ ಕಟ್ಟಿ ಹಾಕಲು ಅವರ ಬ್ಯಾಂಕ್ ಅಕೌಂಟ್‌ಗಳನ್ನು ಸೀಜ್‌ ಮಾಡಲು ಎಸ್ಐಟಿ ಮುಂದಾಗಿತ್ತು. ತನಿಖೆ ವೇಳೆ ಪ್ರಜ್ವಲ್‌ಗೆ ಹಣ ವರ್ಗಾವಣೆ ಮಾಡಿದ ಅಕೌಂಟ್‌ಗಳ ಮೇಲೆಯೂ ನಿಗಾ ಇಡಲಾಗಿತ್ತು. ಆದರೆ ಪ್ರಜ್ವಲ್‌ಗೆ ಗರ್ಲ್ ಫ್ರೆಂಡ್ ಹಣ ಸಹಾಯ ಮಾಡಿರುವುದು, ಆಶ್ರಯ ಕಲ್ಪಿಸಿರುವ ಬಗ್ಗೆ ಮಹತ್ವದ ಸಾಕ್ಷ್ಯ ಲಭ್ಯವಾಗಿದ್ದರಿಂದ ನೋಟಿಸ್‌ ನೀಡಲಾಗಿದೆ.

ಇದನ್ನೂ ಓದಿ: Prajwal Revanna Case: ಪೆನ್ ಡ್ರೈವ್ ಹಂಚಿಕೆ ಪ್ರಕರಣದ ಆರೋಪಿ ಕಾರ್ತಿಕ್ ಗೌಡ ಬಂಧನ

Continue Reading

ಪ್ರಮುಖ ಸುದ್ದಿ

Narendra Modi 3.0 : ಅಧಿಕಾರ ಸ್ವೀಕರಿಸಿದ ಮರುದಿನವೇ ಮೊದಲ ಫೈಲ್​ಗೆ ಸಹಿ ಹಾಕಿದ ಪ್ರಧಾನಿ ಮೋದಿ; ಯಾವ ಕಡತ ಅದು?

Narendra Modi 3.0: ನಮ್ಮದು ರೈತರ ಕಲ್ಯಾಣಕ್ಕೆ ಬದ್ಧವಾಗಿರುವ ಸರ್ಕಾರ. ಆದ್ದರಿಂದ, ಅಧಿಕಾರ ವಹಿಸಿಕೊಂಡ ನಂತರ ಸಹಿ ಮಾಡಿದ ಮೊದಲ ಕಡತವು ರೈತರ ಕಲ್ಯಾಣಕ್ಕೆ ಸಂಬಂಧಿಸಿದ್ದು ಮುಂಬರುವ ದಿನಗಳಲ್ಲಿ ರೈತರು ಮತ್ತು ಕೃಷಿ ವಲಯಕ್ಕಾಗಿ ನಾವು ಇನ್ನೂ ಹೆಚ್ಚು ಕೆಲಸ ಮಾಡಲು ಬಯಸುತ್ತೇವೆ ” ಎಂದು ಕಡತಕ್ಕೆ ಸಹಿ ಹಾಕಿದ ನಂತರ ಪಿಎಂ ಮೋದಿ ಹೇಳಿದ್ದಾರೆ.

VISTARANEWS.COM


on

Narendra Modi 3.0
Koo

ಬೆಂಗಳೂರು: ಭಾನುವಾರ ಸಂಜೆ ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ (Narendra Modi 3.0) ಅವರು ಸೋಮವಾರ ‘ಪಿಎಂ ಕಿಸಾನ್ ನಿಧಿ’ ಬಿಡುಗಡೆಯ ಕಡತಕ್ಕೆ ಸಹಿ ಹಾಕಿದರು. ಇದು ಅವರು ಮೂರನೇ ಅವಧಿಯಲ್ಲಿ ಸಹಿ ಹಾಕಿದ ಮೊದಲ ಫೈಲ್​. ಪಿಎಂ ಕಿಸಾನ್ ನಿಧಿಯ 17 ನೇ ಕಂತಿನ ಬಿಡುಗಡೆಗೆ ಅಧಿಕಾರ ನೀಡುವ ಕಡತಕ್ಕೆ ಅವರು ಸಹಿ ಹಾಕಿದರು. ಇದು 9.3 ಕೋಟಿ ರೈತರಿಗೆ ಪ್ರಯೋಜನ ನೀಡುವ ಸುಮಾರು 20,000 ಕೋಟಿ ರೂ. ಬಿಡುಗಡೆಯಾಗಲಿದೆ.

ನಮ್ಮದು ರೈತರ ಕಲ್ಯಾಣಕ್ಕೆ ಬದ್ಧವಾಗಿರುವ ಸರ್ಕಾರ. ಆದ್ದರಿಂದ, ಅಧಿಕಾರ ವಹಿಸಿಕೊಂಡ ನಂತರ ಸಹಿ ಮಾಡಿದ ಮೊದಲ ಕಡತವು ರೈತರ ಕಲ್ಯಾಣಕ್ಕೆ ಸಂಬಂಧಿಸಿದ್ದು ಮುಂಬರುವ ದಿನಗಳಲ್ಲಿ ರೈತರು ಮತ್ತು ಕೃಷಿ ವಲಯಕ್ಕಾಗಿ ನಾವು ಇನ್ನೂ ಹೆಚ್ಚು ಕೆಲಸ ಮಾಡಲು ಬಯಸುತ್ತೇವೆ ” ಎಂದು ಕಡತಕ್ಕೆ ಸಹಿ ಹಾಕಿದ ನಂತರ ಪಿಎಂ ಮೋದಿ ಹೇಳಿದ್ದಾರೆ.

ಈ ನಿರ್ಧಾರವು ಆಡಳಿತಾರೂಢ ಎನ್​ಡಿಎ ಚುನಾವಣಾ ಗೆಲುವಿನ ನಂತರ ರೈತರ ಕಲ್ಯಾಣಕ್ಕೆ ಸರ್ಕಾರದ ಬದ್ಧತೆಯನ್ನು ಸಾರಿದೆ. ವಿಶೇಷವಾಗಿ ಗ್ರಾಮೀಣ ಭಾರತದಲ್ಲಿ ಕೆಲವು ಹಿನ್ನಡೆಗಳನ್ನು ಎದುರಿಸಿದ್ದ ಕಾರಣ ಈ ಕ್ರಮ ನಿರೀಕ್ಷಿತವಾಗಿದೆ.

3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ

72 ಸದಸ್ಯರ ಕೇಂದ್ರ ಸಚಿವ ಸಂಪುಟದ ಮುಖ್ಯಸ್ಥರಾಗಿ ಮೋದಿ ಭಾನುವಾರ ದಾಖಲೆಯ ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಭಾನುವಾರ, ನಡೆದ ಕಾರ್ಯಕ್ರಮದಲ್ಲಿ ಸಚಿವ ಸಂಪುಟದಲ್ಲಿ ಉನ್ನತ ಸಹೋದ್ಯೋಗಿಗಳಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಎಸ್ ಜೈಶಂಕರ್ ಮತ್ತು ಪಿಯೂಷ್ ಗೋಯಲ್ ಕೂಡ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಇದನ್ನೂ ಓದಿ:8th Pay Commission: ಭಾರಿ ವೇತನ ಹೆಚ್ಚಳ ನಿರೀಕ್ಷೆಯಲ್ಲಿ ಕೇಂದ್ರ ಸರ್ಕಾರಿ ನೌಕರರು

ಪ್ರಮುಖ ಮಿತ್ರ ಪಕ್ಷಗಳಾದ ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಜನತಾದಳ (ಯುನೈಟೆಡ್) ತಲಾ ಒಂದು ಕ್ಯಾಬಿನೆಟ್ ಸ್ಥಾನ ಪಡೆದುಕೊಂಡಿವೆ.

ಟಿಡಿಪಿ ಮತ್ತು ಜೆಡಿಯು ಹೊರತುಪಡಿಸಿ, ಟಿಡಿಪಿ, , ಜೆಡಿಎಸ್​, ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) ಮತ್ತು ಲೋಕ ಜನಶಕ್ತಿ ಪಕ್ಷ ಕ್ಯಾಬಿನೆಟ್ ಸ್ಥಾನಗಳನ್ನು ಪಡೆದ ಇತರ ಮಿತ್ರಪಕ್ಷಗಳಾಗಿವೆ.

ಲೋಕ ಜನಶಕ್ತಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಎಲ್ಲಾ ಐದು ಸ್ಥಾನಗಳನ್ನು ಗೆಲ್ಲುವ ಮೂಲಕ ಉತ್ತಮ ಪ್ರದರ್ಶನ ನೀಡಿದರು. ಚಿರಾಗ್ ಪಾಸ್ವಾನ್ ಮಾಜಿ ಕ್ಯಾಬಿನೆಟ್ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಪುತ್ರ ಮತ್ತು ಎಲ್ಜೆಪಿ ಸಂಸ್ಥಾಪಕ.

Continue Reading

ವೈರಲ್ ನ್ಯೂಸ್

Viral Video: ಮೆಕ್ಕಾದಲ್ಲಿ ಬುರ್ಖಾಧಾರಿ ಮಹಿಳೆಯ ಡ್ಯಾನ್ಸ್! ಮುಸ್ಲಿಂ ಸಮುದಾಯದ ಆಕ್ರೋಶ

Viral Video ಮುಸ್ಲಿಂರ ಪವಿತ್ರ ಸ್ಥಳವಾದ ಮೆಕ್ಕಾದಲ್ಲಿರುವ ಕಾಬಾದ ಮುಂದೆ ಬುರ್ಖಾ ಧರಿಸಿದ ಮಹಿಳೆಯೊಬ್ಬಳು ನೃತ್ಯ ಮಾಡಿದ ಘಟನೆ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಈ ಘಟನೆಗೆ ಮುಸ್ಲಿಂ ಸಮುದಾಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Viral Video
Koo

ದೆಹಲಿ: ಎಲ್ಲಾ ಧರ್ಮದವರಿಗೂ ಅವರವರ ಧರ್ಮವನ್ನು ಆಚರಿಸುವ ಸ್ಥಳ ತುಂಬಾ ಪವಿತ್ರವಾಗಿರುತ್ತದೆ. ಮುಸ್ಲಿಂ ಧರ್ಮದವರಿಗೆ ಮೆಕ್ಕಾ (Mecca) ಒಂದು ಪವಿತ್ರ ಸ್ಥಳವಾಗಿದೆ. ಪ್ರತಿವರ್ಷ ಸಾವಿರಾರು ಮಂದಿ ಮುಸ್ಲಿಂರು ಎಷ್ಟೇ ಕಠಿಣ ಪರಿಸ್ಥಿತಿಯಲ್ಲೂ ಈ ಸ್ಥಳಕ್ಕೆ ಯಾತ್ರೆಗೆ ಹೋಗುತ್ತಾರೆ. ಮೆಕ್ಕಾವೆಂದರೆ ಮುಸ್ಲಿಂರಿಗೆ ತುಂಬಾನೇ ಗೌರವ. ಇಂತಹ ಪವಿತ್ರ ಸ್ಥಳದಲ್ಲಿ ಬುರ್ಖಾ ಧರಿಸಿದ ಮಹಿಳೆಯೊಬ್ಬಳು ಮೈಮರೆತು ನೃತ್ಯ (Dance) ಮಾಡಿದ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Viral Video) ಆಗಿದ್ದು, ಈ ಘಟನೆಗೆ ಮುಸ್ಲಿಂ ಸಮುದಾಯದವರು ಸಿಕ್ಕಾಪಟ್ಟೆ ಗರಂ ಆಗಿದ್ದಾರೆ..

ಮೆಕ್ಕಾದಲ್ಲಿರುವ ಕಾಬಾದ ಮುಂದೆ ಬುರ್ಖಾ ಧರಿಸಿದ ಮುಸ್ಲಿಂ ಮಹಿಳೆಯೊಬ್ಬಳು ನೃತ್ಯ ಮಾಡಿದ್ದಾಳೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ಮುಸ್ಲಿಂ ಸಮೂಹದವರು ಆಕ್ರೋಶ  ವ್ಯಕ್ತಪಡಿಸಿದ್ದಾರೆ.

ಮಹಿಳೆಯ ನೃತ್ಯಕ್ಕೆ ಸಿಟ್ಟಾದ ಮುಸ್ಲಿಂ ಸಮುದಾಯ!

ಹಜ್ 2024ರ ಸೀಸನ್ ಪ್ರಾರಂಭವಾಗಿದೆ. ಈ ಸಮಯದಲ್ಲಿ ಪ್ರಪಂಚದಾದ್ಯಂತ ಮುಸ್ಲಿಂರು ಸೌದಿ ಅರೇಬಿಯಾದ ಮೆಕ್ಕಾ ಮತ್ತು ಮದೀನಾಕ್ಕೆ ಕಡ್ಡಾಯವಾಗಿ ಭೇಟಿ ನೀಡಬೇಕೆಂದು ಪ್ರವಾದಿ ಮುಹಮ್ಮದ್ ಅವರು ತಿಳಿಸಿದ್ದರು. ಹಾಗಾಗಿ ಮುಸ್ಲಿಂರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ವೇಳೆ ಬುರ್ಖಾ ಧರಿಸಿದ ಮುಸ್ಲಿಂ ಮಹಿಳೆಯೊಬ್ಬಳು ಎಲ್ಲಾ ಯಾತ್ರಿಕರ ಮುಂದೆ ನೃತ್ಯ ಮಾಡಿದ್ದಾಳೆ. ಈ ಸ್ಥಳದಲ್ಲಿ ಭಕ್ತಿ ಭಾವದಲ್ಲಿರಬೇಕಾದ ಮಹಿಳೆ  ಈ ರೀತಿ ಮೈಮರೆತು ಡ್ಯಾನ್ಸ್ ಮಾಡಿದ್ದಕ್ಕೆ ಮುಸ್ಲಿಮರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಮಹಿಳೆಯ ಈ ಕೃತ್ಯಕ್ಕೆ ತಕ್ಕ ಶಿಕ್ಷೆಯಾಗಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ವಿಡಿಯೋದಲ್ಲಿರುವ ಮಹಿಳೆ ಬುರ್ಖಾ ಧರಿಸಿದ ಕಾರಣ ಆಕೆ ಯಾರು ಎಂಬುದು ತಿಳಿದುಬಂದಿಲ್ಲ.

ಯೊರುಬಾ ಬುಡಕಟ್ಟಿನ ಮಹಿಳೆ!

ಈ ವಿಡಿಯೊ ಬಗ್ಗೆ ಸೋಷಿಯಲ್ ಮೀಡಿಯಾದ ಬಳಕೆದಾರರು ಕಾಮೆಂಟ್ ಮಾಡಿದ್ದು, ಅದರಲ್ಲಿ ಒಬ್ಬರು ಮಹಿಳೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮಹಿಳೆ ನೈರುತ್ಯ ನೈಜೀರಿಯಾದ ಯೊರುಬಾ ಬುಡಕಟ್ಟಿನವರು, ನೃತ್ಯವು ಅವರ ಸಂಸ್ಕೃತಿಯಲ್ಲಿ ಬಹಳ ಮುಖ್ಯವಾದುದು. ಹಾಗಾಗಿ ಆಕೆ ಹಾಗೇ ಮಾಡಿರಬಹುದು ಎಂದು ತಿಳಿಸಿದ್ದಾರೆ. ಹಾಗೇ ಮತ್ತೊಬ್ಬ ಬಳಕೆದಾರರು, ಹಜ್ 2024ರ ಸೀಸನ್ ಸಮೀಪಿಸುತ್ತಿರುವಾಗ ಕೆಲವು ದೃಶ್ಯಗಳು ಈ ತಿಂಗಳ ಪವಿತ್ರತೆಯನ್ನು ಉಲ್ಲಂಘಿಸಲು ಪ್ರಾರಂಭಿಸಿದ್ದಾವೆ ಮತ್ತು ಇದು ಲಕ್ಷಾಂತರ ಮುಸ್ಲಿಂರ ಭಾವನೆಗಳಿಗೆ ನೋವುಂಟುಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

2024ರ ಹಜ್ ಗೆ ಮುಂಚಿತವಾಗಿ ಸುಮಾರು 13 ಮಿಲಿಯನ್ ಮುಸ್ಲಿಂರು ಸೌದಿ ಅರೇಬಿಯಾಕ್ಕೆ ಆಗಮಿಸಿದ್ದಾರೆ ಎಂದು ವರದಿಯಾಗಿದೆ. ಅಲ್ಲದೇ ಇನ್ನೂ ಅನೇಕ ಮಂದಿ ಮುಸ್ಲಿಂ ಯಾತ್ರಿಕರು ಪವಿತ್ರ ಆಚರಣೆಗಾಗಿ ಇಲ್ಲಿಗೆ ಆಗಮಿಸುವ ನಿರೀಕ್ಷೆಗಳಿವೆ ಎನ್ನಲಾಗಿದೆ. ಹಾಗಾಗಿ ಅಧಿಕಾರಿಗಳು ನಿಷೇಧಿಸಿರುವ ಯಾವುದೇ ಚಟುವಟಿಕೆಗಳನ್ನು ನಡೆಸದಂತೆ ಯಾತ್ರಿಕರಿಗೆ ಸೌದಿ ಸರ್ಕಾರ ಒತ್ತಾಯಿಸಿದೆ. ನಿಯಮ ಉಲ್ಲಂಘಿಸಿದವರಿಗೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದೆ.

ಇದನ್ನೂ ಓದಿ:Viral Video: ಹೋಟೆಲ್‌ನೊಳಗೆ ಪಿಜ್ಜಾ ತಿನ್ನುತ್ತಿರುವಾಗಲೇ ಮಹಿಳೆಯ ಸರ ಅಪಹರಣ!

ಈ ಬಗ್ಗೆ ಹಜ್ ಸಚಿವರು ಮಾತನಾಡಿ, “ಹಜ್ ಕೇವಲ ಪೂಜೆಗಾಗಿಯೇ ಹೊರತು ರಾಜಕೀಯ ಫೋಷಣೆಗಳಿಗಾಗಿ ಅಲ್ಲ. ಪ್ಯಾಲೆಸ್ಟೀನಿಯಾದವರಿಗೆ, ವಿಶೇಷವಾಗಿ ಗಾಜಾದಲ್ಲಿರುವ ನಮ್ಮ ಸಹೋದರರಿಗೆ ದುವಾ ಮಾಡುವುದನ್ನು ನಿಷೇಧಿಸಲಾಗಿಲ್ಲ. ಇದು ಸಂಪೂರ್ಣವಾಗಿ ಸುಳ್ಳು. ಯಾವುದೇ ದೇಶದ ರಾಜಕೀಯ ಫೋಷಣೆಗಳನ್ನು ಕೂಗುವುದನ್ನು ನಿಷೇಧಿಸಲಾಗಿದೆ” ಎಂದು ತಿಳಿಸಿದ್ದಾರೆ.

Continue Reading

ಕ್ರೀಡೆ

IND vs PAK : ಸೂಪರ್ ಫ್ಯಾನ್​​; ಟೀಮ್​ ಇಂಡಿಯಾ ಜೆರ್ಸಿ ಧರಿಸಿ ಭಾರತವನ್ನು ಬೆಂಬಲಿಸಿದ ಮೈಕ್ರೋಸಾಫ್ಟ್​​ ಸಿಇಒ ಸತ್ಯ ನಾದೆಳ್ಳಾ

IND vs PAK :

VISTARANEWS.COM


on

IND vs PAK
Koo

ಬೆಂಗಳೂರು: ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಳ್ಳಾ ಅವರು ಕ್ರಿಕೆಟ್ ಅಭಿಮಾನಿ. ಕ್ರಿಕೆಟ್​ ಪಂದ್ಯಗಳನ್ನು ತಪ್ಪದೇ ವೀಕ್ಷಿಸುತ್ತಾರೆ. ಅದರಲ್ಲೂ ಭಾರತದ ಪಂದ್ಯವಿದ್ದರೆ ಅವರಿಗೆ ಹಬ್ಬ. ನ್ಯೂಯಾರ್ಕ್​​ನ ನಸ್ಸೌ ಕೌಂಟಿ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ನಡೆದ ಭಾರತ ಮತ್ತು ಪಾಕಿಸ್ತಾನ ಪುರುಷರ ಟಿ 20 ವಿಶ್ವಕಪ್ 2024 ರ ಪಂದ್ಯಕ್ಕೆ ಹಾಜರಾದ ದೊಡ್ಡ ಹೆಸರುಗಳಲ್ಲಿ ಅವರು ಇದ್ದರೂ. ಮೈಕ್ರೋಸಾಫ್ಟ್ ಸಿಇಒ ಭಾರತೀಯ ಕ್ರಿಕೆಟ್ ತಂಡದ ಜೆರ್ಸಿ ಧರಿಸಿ ಉದ್ಯಮಿ ಗೌರವ್ ಜೈನ್ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಕಂಡುಬಂದಿದೆ . ಈ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

“ಸೂಪರ್ ಅಭಿಮಾನಿ @satyanadella #PakvsInd #t20USA ತಂಡದೊಂದಿಗೆ ಟೀಮ್ ಇಂಡಿಯಾವನ್ನು ಹುರಿದುಂಬಿಸಲು ಉತ್ಸುಕನಾಗಿದ್ದೇನೆ” ಎಂದು ಜೈನ್ ಪೋಸ್ಟ್​​ನ ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಈ ಚಿತ್ರವನ್ನು ಹೊಸದಾಗಿ ನಿರ್ಮಿಸಲಾದ ಕ್ರೀಡಾಂಗಣದ ಸ್ಟ್ಯಾಂಡ್​ಗಳ ಮೇಲಿನಿಂದ ತೆಗೆದುಕೊಳ್ಳಲಾಗಿದೆ.

ಭಾನುವಾರ ರಾತ್ರಿ ಪೋಸ್ಟ್​​ ಹಂಚಿಕೊಂಡಾಗಿನಿಂದ, (ಹಿಂದೆ ಟ್ವಿಟರ್) ನಲ್ಲಿ 2.7 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. “ಸಿಲಿಕಾನ್ ವ್ಯಾಲಿಯ ಅರ್ಧದಷ್ಟು ಭಾಗವು ಒಟ್ಟುಗೂಡಿದೆ” ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ.

ಮಹಾಕಾವ್ಯ !!” ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು “ಇದು ಅಮೆರಿಕದಲ್ಲಿರುವ ಭಾರತೀಯರಿಗೆ ಸೂಪರ್​ಬೌಲ್​ ಎಂದು ಹೇಳಿದ್ದಾರೆ. “ಅವರು ಜೆರ್ಸಿಯನ್ನು ನಿರೀಕ್ಷಿಸಿರಲಿಲ್ಲ” ಎಂದು ಎಕ್ಸ್ ಬಳಕೆದಾರರೊಬ್ಬರು ಹೇಳಿದರು.

ಟೂರ್ನಿಯ ಕೇಂದ್ರ ಬಿಂದು ಈ ಪಂದ್ಯ

ಕ್ರೀಡಾ ಜಗತ್ತಿನಲ್ಲಿ ಅತ್ಯಂತ ತೀವ್ರವಾದ ಭಾರತ-ಪಾಕಿಸ್ತಾನ ಕ್ರಿಕೆಟ್ ಪೈಪೋಟಿಯು ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಎಂದಿಗೂ ವಿಫಲವಾಗುವುದಿಲ್ಲ. ಈ ಪಂದ್ಯವು ಇದಕ್ಕೆ ಹೊರತಾಗಿರಲಿಲ್ಲ, ಪ್ರಪಂಚದಾದ್ಯಂತದ ವೀಕ್ಷಕರನ್ನು ಸೆಳೆಯಿತು ಮತ್ತು ಕ್ರಿಕೆಟ್​​ನ ಉತ್ಸಾಹವನ್ನು ಪ್ರದರ್ಶಿಸಿತು. ಟಿ20 ವಿಶ್ವಕಪ್ ಟೂರ್ನಿಯಲ್ಲಿ 120 ರನ್​ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ಸೋತಿದೆ. ಆರಂಭದಲ್ಲಿ ಪಾಕಿಸ್ತಾನ ಉತ್ತಮವಾಗಿ ಆಡಿತು. ಕ್ರಮೇಣ ವಿಕೆಟ್​ಗಳನ್ನು ಕಳೆದುಕೊಂಡು ಆರು ರನ್​ಗಳಿಂದ ಸೋತಿತ. ಭಾರತದ ಪರ ಜಸ್ಪ್ರೀತ್ ಬುಮ್ರಾ 3 ವಿಕೆಟ್ ಕಿತ್ತರೆ, ಹಾರ್ದಿಕ್ ಪಾಂಡ್ಯ 2 ವಿಕೆಟ್ ಪಡೆದರು.

ಇದನ್ನೂ ಓದಿ :IND vs PAK : ಪಾಕಿಸ್ತಾನವನ್ನು ಭಾರತ ಸೋಲಿಸಿದ ನಂತರ ತಮಾಷೆಯ ಪೋಸ್ಟ್​​ ಮಾಡಿದ ಡೆಲ್ಲಿ ಪೊಲೀಸರು

ಭಾರತ-ಅಮೆರಿಕನ್ ಸಿಇಒ ಕ್ರಿಕೆಟ್ ಮೇಲಿನ ತಮ್ಮ ಪ್ರೀತಿಯ ಬಗ್ಗೆ ಆಗಾಗ ಹೇಳುತ್ತಿರುತ್ತಾರೆ. ಕ್ರೀಡೆಯು ಅವರಿಗೆ ಟೀಮ್​ ವರ್ಕ್​ ಮತ್ತು ನಾಯಕತ್ವ ಕಲಿಸಿದೆ. ಅದು ಕಾರ್ಪೊರೇಟ್ ಪ್ರಪಂಚ ಎದುರಿಸುವ ಅಚ್ಚರಿಗಳಿಂದ ಮೇಲಕ್ಕೇರಲು ಸಹಾಯ ಮಾಡಿತು ಎಂದು ಹೇಳಿದ್ದಾರೆ. “ಕ್ರಿಕೆಟ್ ನನಗೆ ತಂಡಗಳಲ್ಲಿ ಕೆಲಸ ಮಾಡುವ ಕುರಿತು ಮತ್ತು ವೃತ್ತಿಜೀವನದುದ್ದಕ್ಕೂ ನಾಯಕತ್ವದ ಬಗ್ಗೆ ನನಗೆ ಹೆಚ್ಚು ಕಲಿಸಿದೆ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಮೈಕ್ರೋಸಾಫ್ಟ್ ಸಿಇಒ ಆಗಿ ನೇಮಕವಾದಾಗ ಹೇಳಿದ್ದರು.

Continue Reading
Advertisement
bhavani revanna prajwal revanna case
ಪ್ರಮುಖ ಸುದ್ದಿ1 min ago

Prajwal Revanna Case: ಎಸ್‌ಐಟಿಯಿಂದ ಪ್ರಜ್ವಲ್‌ ರೇವಣ್ಣ ಕೋಣೆ ತಲಾಶ್‌, ಭವಾನಿ ತುಳಸಿ ಪೂಜೆ! ಅಲ್ಲೇ ಇದ್ದರೂ ಮುಖಾಮುಖಿಯಾಗದ ಅಮ್ಮ- ಮಗ

Niveditha Gowda Chandan Shetty Joint Pressmeet For The First Time
ಕಿರುತೆರೆ18 mins ago

Niveditha Gowda : ಡಿವೋರ್ಸ್‌ ಬಳಿಕ ಒಟ್ಟಾಗಿ ಸುದ್ದಿಗೋಷ್ಠಿ ಕರೆದ ಚಂದನ್-ನಿವೇದಿತಾ!

Narendra Modi 3.0
ಪ್ರಮುಖ ಸುದ್ದಿ26 mins ago

Narendra Modi 3.0 : ಅಧಿಕಾರ ಸ್ವೀಕರಿಸಿದ ಮರುದಿನವೇ ಮೊದಲ ಫೈಲ್​ಗೆ ಸಹಿ ಹಾಕಿದ ಪ್ರಧಾನಿ ಮೋದಿ; ಯಾವ ಕಡತ ಅದು?

8th Pay Commission
ರಾಜಕೀಯ31 mins ago

8th Pay Commission: ಭಾರಿ ವೇತನ ಹೆಚ್ಚಳ ನಿರೀಕ್ಷೆಯಲ್ಲಿ ಕೇಂದ್ರ ಸರ್ಕಾರಿ ನೌಕರರು

Physical Abuse
ಕ್ರೈಂ32 mins ago

Physical Abuse : ನಗ್ನ ಫೋಟೋ ತೋರಿಸಿ ಬ್ಲ್ಯಾಕ್‌ಮೇಲ್‌; ಮರ್ಯಾದೆಗೆ ಅಂಜಿದ ತಂದೆ ಬಳಿಕ ಮಗಳು ಮೃತ್ಯು, ಮತ್ತಿಬ್ಬರ ಸ್ಥಿತಿ ಗಂಭೀರ

Sonakshi Sinha to marry boyfriend Zaheer Iqbal on June 23
ಬಾಲಿವುಡ್43 mins ago

Sonakshi Sinha: ಜಹೀರ್ ಇಕ್ಬಾಲ್ ಜತೆ ಜೂನ್ 23ರಂದು ಸೋನಾಕ್ಷಿ ಸಿನ್ಹಾ ಅದ್ಧೂರಿ ಮದುವೆ?

Reasi Terror Attack
ದೇಶ47 mins ago

Reasi Terror Attack : ಜಮ್ಮು – ಕಾಶ್ಮೀರ ಬಸ್ ದಾಳಿಯ ಹೊಣೆ ಹೊತ್ತುಕೊಂಡ ಪಾಕ್ ಲಷ್ಕರ್ ಬೆಂಬಲಿತ ಉಗ್ರ ಸಂಘಟನೆ

Viral Video
ವೈರಲ್ ನ್ಯೂಸ್1 hour ago

Viral Video: ಮೆಕ್ಕಾದಲ್ಲಿ ಬುರ್ಖಾಧಾರಿ ಮಹಿಳೆಯ ಡ್ಯಾನ್ಸ್! ಮುಸ್ಲಿಂ ಸಮುದಾಯದ ಆಕ್ರೋಶ

gold rate today bipasha
ಚಿನ್ನದ ದರ1 hour ago

Gold Rate Today: ರಾಜಧಾನಿಯಲ್ಲಿ ಏರಿಳಿಯದ ಬಂಗಾರದ ಬೆಲೆ; ಇಂದಿನ ದರಗಳು ಹೀಗಿವೆ

IND vs PAK
ಕ್ರೀಡೆ2 hours ago

IND vs PAK : ಸೂಪರ್ ಫ್ಯಾನ್​​; ಟೀಮ್​ ಇಂಡಿಯಾ ಜೆರ್ಸಿ ಧರಿಸಿ ಭಾರತವನ್ನು ಬೆಂಬಲಿಸಿದ ಮೈಕ್ರೋಸಾಫ್ಟ್​​ ಸಿಇಒ ಸತ್ಯ ನಾದೆಳ್ಳಾ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ3 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ3 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ6 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ7 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ7 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ2 weeks ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌