ಹೊಸ ಪುಸ್ತಕ: ಇದು ಮತ್ತೊಂದು ಕರ್ಣಕುಂಡಲಗಳ ಕಥೆ - Vistara News

ಕಲೆ/ಸಾಹಿತ್ಯ

ಹೊಸ ಪುಸ್ತಕ: ಇದು ಮತ್ತೊಂದು ಕರ್ಣಕುಂಡಲಗಳ ಕಥೆ

ಉತ್ತಂಕನ ಕೈಯಿಂದ ಬಿದ್ದ ಕರ್ಣಕುಂಡಲಗಳನ್ನು ಸರ್ಪ ತಕ್ಷಕ ಕೂಡಲೇ ಕಚ್ಚಿಕೊಂಡು ಪಾತಾಳಕ್ಕೆ ಒಯ್ದನು. ಅದು ಉತ್ತಂಕನಿಗೆ ಮರಳಿ ಸಿಕ್ಕಿತೇ? ಎಸ್.ಹೇಮಲತಾ ಅವರ ʻಪ್ರಾಚೀನ ಭಾರತದ ಮಹರ್ಷಿಗಳುʼ ಕೃತಿಯ ಈ ಕಥಾಭಾಗ ಓದಿ.

VISTARANEWS.COM


on

book extract
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಡಾ.ಎಸ್.ಹೇಮಲತಾ ಅವರು ರಚಿಸಿರುವ ʼಪ್ರಾಚೀನ ಭಾರತದ ಮಹರ್ಷಿಗಳುʼ ಕೃತಿ ನಮ್ಮ ನೆಲದಲ್ಲಿ ಆಗಿಹೋದ ಉದ್ದಾಮ ಸಾಧಕರ, ಋಷಿಗಳ, ಮಂತ್ರದ್ರಷ್ಟಾರರ ಕಥೆಗಳನ್ನು ಹೇಳುತ್ತದೆ. ಇದರಿಂದ ಆಯ್ದ ʼಉತ್ತಂಕʼ ಎಂಬ ಮಹರ್ಷಿಯ ಕಥೆ ಇಲ್ಲಿದೆ. ಇದನ್ನು ರಾಷ್ಟ್ರೋತ್ಥಾನ ಪ್ರಕಾಶನ ಪ್ರಕಟಿಸಿದೆ.

  • ಡಾ. ಎಸ್.‌ ಹೇಮಲತಾ

ಉತ್ತಂಕನು ಕುಲಪತಿಗಳಾದ ಗೌತಮರ ಬಳಿಯಲ್ಲಿ ಅಧ್ಯಯನ ಮಾಡುತ್ತಿದ್ದನು. ಅವನು ಮಹಾತಪಸ್ವಿಯೂ ತೇಜಸ್ವಿಯೂ ಆಗಿದ್ದನು. ಅವನ ಗುರುಭಕ್ತಿಯೂ ಅಪ್ರತಿಮವಾಗಿದ್ದಿತು. ಅವನು ಗುರುವನ್ನಲ್ಲದೆ ಬೇರೆ ಯಾವ ದೇವರನ್ನೂ ಆರಾಧಿಸುತ್ತಿರಲಿಲ್ಲ. ಉಳಿದ ಶಿಷ್ಯರೆಲ್ಲರೂ ಅವನ ಗುರುಭಕ್ತಿಯನ್ನು ಕಂಡು ಆಶ್ಚರ್ಯಪಡುತ್ತಿದ್ದರು. ಗುರುಗಳಾದ ಗೌತಮರೂ ಉತ್ತಂಕನಲ್ಲಿ ವಿಶೇಷವಾದ ಅಭಿಮಾನವನ್ನು ಇಟ್ಟಿದ್ದು, ಉತ್ತಂಕನ ಇಂದ್ರಿಯಸಂಯಮ, ಅಂತಃಶುದ್ಧಿ, ಶ್ರದ್ಧೆಗಳನ್ನು ಕಂಡು ಅವರು ಬಹಳ ಪ್ರೀತರಾಗಿದ್ದರು. ವಿದ್ಯಾಭ್ಯಾಸ ಮುಗಿಸಿ ಅನೇಕ ಶಿಷ್ಯರು ತಮ್ಮ ತಮ್ಮ ಮನೆಗಳಿಗೆ ಹೊರಟುಹೋದರೂ ಗೌತಮರು ಉತ್ತಂಕನಿಗೆ ಮಾತ್ರ ಮನೆಗೆ ತೆರಳಲು ಅನುಮತಿಯನ್ನು ಕೊಡಲಿಲ್ಲ. ಉತ್ತಂಕನನ್ನು ಬಿಟ್ಟುಕೊಡಲು ಅವರಿಗೆ ಇಷ್ಟವಿರಲಿಲ್ಲ.

ಹೀಗೆಯೇ ಅನೇಕ ವರ್ಷಗಳು ಕಳೆದುಹೋದವು. ಉತ್ತಂಕನನ್ನು ಮುಪ್ಪು ಆವರಿಸತೊಡಗಿತು. ಆದರೆ ಗುರುಸೇವೆಯಲ್ಲಿಯೇ ಮಗ್ನನಾಗಿದ್ದ ಅವನಿಗೆ ತನಗೆ ವಯಸ್ಸಾದ ಬಗ್ಗೆಯೂ ಯೋಚನೆಯಿರಲಿಲ್ಲ. ಒಮ್ಮೆ ಅವನು ಕಟ್ಟಿಗೆಯನ್ನು ತರಲು ಕಾಡಿಗೆ ಹೋಗಿದ್ದನು. ಅಲ್ಲಿ ಅವನು ಸಂಗ್ರಹಿಸಿದ ಕಟ್ಟಿಗೆಯ ಹೊರೆಯು ಬಹಳ ಭಾರವಾಯಿತು. ಆದರೂ ಅದನ್ನು ಹೊತ್ತುಕೊಂಡು ಆಶ್ರಮದ ಕಡೆಗೆ ಹೊರಟನು. ಆದರೆ ವಯಸ್ಸಿನ ಕಾರಣದಿಂದ ಅವನಿಗೆ ಅಷ್ಟು ಭಾರವನ್ನು ಹೊತ್ತು ನಡೆಯಲು ಆಗಲೇ ಇಲ್ಲ. ಸೌದೆಯ ಹೊರೆಯನ್ನು ಮೈಮೇಲೆ ಕೆಡವಿಕೊಂಡು ಅವನು ನೆಲದ ಮೇಲೆ ಬಿದ್ದು ಬಿಟ್ಟನು. ಅವನ ಜಟೆಯ ಕೂದಲೂ ಸೌದೆ ಹೊರೆಯ ಮಧ್ಯೆ ಸಿಲುಕಿಕೊಂಡಿತ್ತು. ಅವನು ನೋವಿನಿಂದ ಜೋರಾಗಿ ಅಳತೊಡಗಿದನು.

ಆ ಸಮಯದಲ್ಲಿ ಅಲ್ಲಿಗೆ ಗುರುಗಳು ಪುತ್ರೀಸಮೇತರಾಗಿ ಬಂದರು. ಗುರುಗಳು ಉತ್ತಂಕನ ಕಣ್ಣೀರನ್ನು ಕೈಗಳಲ್ಲಿ ಹಿಡಿಯುವಂತೆ ಮಗಳಿಗೆ ಹೇಳಿದರು. ಗೌತಮರ ಪುತ್ರಿಯು ಅದರಂತೆ ಉತ್ತಂಕನ ಕಣ್ಣೀರಿಗೆ ಬೊಗಸೆಯನ್ನು ಒಡ್ಡಿದಳು. ಕೂಡಲೇ ಅವಳ ಕೈಗಳು ಸುಟ್ಟು ಕಣ್ಣೀರು ಕೆಳಗೆ ಬಿದ್ದಿತು. ಕೆಳಗೆ ಬಿದ್ದ ಅಶ್ರುಬಿಂದುಗಳನ್ನು ಧರಿಸಲು ಭೂದೇವಿಗೂ ಸಾಧ್ಯವಾಗಲಿಲ್ಲ. ಆಗ ಗೌತಮರು ಉತ್ತಂಕನನ್ನು ಅವನ ಶೋಕದ ಕಾರಣವನ್ನು ಕೇಳಿದರು.

ಆಗ ಉತ್ತಂಕನು “ಗುರುದೇವನೇ! ನಾನು ನಿಮ್ಮ ಸೇವೆಯಲ್ಲಿಯೇ ನನ್ನ ಜೀವನವನ್ನು ಕಳೆದೆ, ನನ್ನ ಮನಸ್ಸಿನಲ್ಲಿ ಬೇರೆ ಭಾವನೆಗಳೇ ಇಲ್ಲದುದರಿಂದ ನೂರು ವರ್ಷಗಳನ್ನು ಇಲ್ಲಿ ಕಳೆದುದಾಗಲೀ ನನ್ನನ್ನು ಮುಪ್ಪು ಆವರಿಸಿದುದಾಗಲೀ ನನಗೆ ತಿಳಿಯಲೇ
ಇಲ್ಲ. ನನ್ನ ನಂತರ ಬಂದ ಸಾವಿರಾರು ಶಿಷ್ಯರು ತಮ್ಮ ಅನುಜ್ಞೆಯನ್ನು ಪಡೆದು ಊರಿಗೆ ಹಿಂತಿರುಗಿದರೂ ತಾವು ನನಗೆ ಅಪ್ಪಣೆಯನ್ನೇ ಕೊಡಲಿಲ್ಲ” ಎಂದನು. ಗೌತಮರು, “ಮಗು! ಅನವರತ ನೀನು ಮಾಡುತ್ತಿರುವ ಸೇವೆಯಿಂದ ನನಗೆ ಅತ್ಯಂತ ಪ್ರೀತಿಯುಕ್ತನಾಗಿದ್ದ ನಿನ್ನನ್ನು ಅಗಲಲು ಮನಸ್ಸು ಬರಲೇ ಇಲ್ಲ. ಈಗ ನಿನಗೆ ನಿನ್ನ ಊರಿಗೆ ಹೋಗುವ ಶ್ರದ್ಧೆಯಿದ್ದರೆ ನೀನು ಹೋಗಬಹುದು” ಎಂದು ಹೇಳಿದರು.

ಇದನ್ನೂ ಓದಿ: ಹೊಸ ಪುಸ್ತಕ : ಯಕ್…!‌

ಆಗ ಉತ್ತಂಕನು ತಾನು ಗುರುದಕ್ಷಿಣೆಯನ್ನು ಕೊಟ್ಟು ಅಲ್ಲಿಂದ ಹೋಗಲು ಬಯಸುವುದಾಗಿ ಹೇಳಿದನು. ಗೌತಮರು ‘ಶುಶೂಷೆಯಿಂದ ಗುರುಗಳನ್ನು ತೃಪ್ತಿಗೊಳಿಸುವುದೇ ಪರಮೋತ್ಕೃಷ್ಟ ಗುರುದಕ್ಷಿಣೆಯೆಂದೂ ಅದು ತನಗೆ ಸಂದಿದೆಯೆಂದೂ’ ಹೇಳಿ
ಉತ್ತಂಕನಿಗೆ ಮತ್ತೆ ಹದಿನಾರರ ಯೌವನವನ್ನು ಕರುಣಿಸಿ ತಮ್ಮ ಮಗಳನ್ನೇ ವಿವಾಹ ಮಾಡಿಕೊಟ್ಟರು.

ಕುಲಪತಿಗಳಾದ ಗೌತಮರ ಅನುಗ್ರಹದಿಂದ ಯೌವನವನ್ನೂ ಯಶೋವತಿಯಾದ ಪತ್ನಿಯನ್ನೂ ಪಡೆದು ಉತ್ತಂಕನು ಸಂತುಷ್ಟನಾದನು. ಗೌತಮರು ಗುರುದಕ್ಷಿಣೆಯು ಸಂದಿದೆಯೆಂದು ಹೇಳಿದರೂ ಉತ್ತಂಕನಿಗೆ ಸಮಾಧಾನವಾಗಲಿಲ್ಲ. ಅವನು ಗುರುಪತ್ನಿಯ ಬಳಿಗೆ ಹೋಗಿ “ತಾಯಿ! ಗುರುದಕ್ಷಿಣಾರೂಪವಾಗಿ ನಿಮಗೆ ಏನನ್ನು ತಂದುಕೊಡಲಿ?ʼʼ ಎಂದು ಕೇಳಿದನು. ಗುರುಪತ್ನಿಯೂ ಗೌತಮರಂತೆಯೇ ‘ಗುರುಸೇವೆಯಿಂದಲೇ ದಕ್ಷಿಣೆಯು ಸಂದಾಯವಾಗಿದೆಯೆಂದು ಹೇಳಿದರೂ ಉತ್ತಂಕನು ಒಪ್ಪಲಿಲ್ಲ. ನಿಮಗೆ ಪ್ರಿಯವಾದುದೇನನ್ನಾದರೂ ತಂದುಕೊಡುವೆನೆಂದು ಮತ್ತೆ ಮತ್ತೆ ಕೇಳುತ್ತಲೇ ಇದ್ದನು.

ಕೊನೆಗೆ ಗೌತಮ ಪತ್ನಿಯಾದ ಅಹಲ್ಯೆಯು, ಸೌದಾಸ ರಾಜನ ಪತ್ನಿಯು ಎರಡು ದಿವ್ಯವಾದ ಕರ್ಣಕುಂಡಲಗಳನ್ನು ಹೊಂದಿದ್ದಾಳೆಂದೂ ಅವುಗಳನ್ನು ತನಗಾಗಿ ತರಬೇಕೆಂದೂ ಕೇಳಿದಳು. ಉತ್ತಂಕನು ಸಂತೋಷದಿಂದ ಅವುಗಳನ್ನು ತರಲು ಹೊರಟನು.

ಸೌದಾಸನೆಂಬ ಆ ರಾಜನು ಶಾಪದ ಕಾರಣದಿಂದ ರಾಕ್ಷಸತ್ವವನ್ನು ಹೊಂದಿದ್ದನು. ಆದರೂ ಉತ್ತಂಕನು ಧೈರ್ಯವಾಗಿ ಆತನ ಬಳಿಗೆ ಹೊರಟನು. ಗೌತಮರಿಗೆ ಈ ವಿಷಯ ತಿಳಿದಾಗ ಅವರು ಶಿಷ್ಯನ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದರು. ಆದರೆ ಉತ್ತಂಕನಿಗೆ ತನ್ನ ಗುರುಭಕ್ತಿಯು ತನ್ನನ್ನು ಕಾಯುವುದೆಂಬ ವಿಶ್ವಾಸವಿದ್ದಿತು. ಅವನು ಕಾಡಿನಲ್ಲಿ ಮಹಾಭಯಂಕರಾಕೃತಿಯ ಸೌದಾಸ ರಾಜನನ್ನು ಸಂಧಿಸಿದನು. ಸೌದಾಸನು ತಾನು ಆಹಾರಕ್ಕಾಗಿ ಹುಡುಕುತ್ತಿದ್ದ ಸಂದರ್ಭದಲ್ಲಿ ಸಿಕ್ಕಿದ ಉತ್ತಂಕನನ್ನು ಭಕ್ಷಿಸಲು ಮುಂದಾದನು. ಉತ್ತಂಕನು ಸ್ವಲ್ಪವೂ ಗಾಬರಿಗೊಳ್ಳದೆ ತಾನು ಗುರುದಕ್ಷಿಣಾರ್ಥವಾಗಿ ಬಂದಿರುವುದಾಗಿ ತಿಳಿಸಿದನು. ಗುರುದಕ್ಷಿಣೆಯನ್ನು ಗುರುಪತ್ನಿಗೆ ಒಪ್ಪಿಸಿ, ಪುನಃ ಹಿಂದಿರುಗಿ ಬಂದು ರಾಕ್ಷಸನಿಗೆ ಆಹಾರವಾಗುವುದಾಗಿ ಹೇಳಿದನು. ಸೌದಾಸನು ಅದಕ್ಕೆ ಒಪ್ಪಿ ಉತ್ತಂಕನಿಗೆ ಏನು ಬೇಕೆಂದು ಕೇಳಿದಾಗ ಉತ್ತಂಕನು ಗುರುಪತ್ನಿಗಾಗಿ ಮಹಾರಾಣಿಯ ಕರ್ಣಕುಂಡಲಗಳನ್ನು ಯಾಚಿಸಿದನು.

ರಾಜನು ಉತ್ತಂಕನಿಗೆ ರಾಣಿಯ ಬಳಿಗೆ ಹೋಗಿ ತಾನು ಹೇಳಿರುವುದಾಗಿ ತಿಳಿಸಬೇಕೆಂದೂ, ಅದರಂತೆ ಕರ್ಣಕುಂಡಲಗಳನ್ನು ನಿಶ್ಚಿತವಾಗಿ ಕೊಡುತ್ತಾಳೆಂದೂ ಹೇಳಿದನು. ರಾಜನ ಮಾತಿನಂತೆ ಉತ್ತಂಕನು ಮಹಾರಾಣಿಯಾದ ಮದಯಂತಿಯನ್ನು ಹುಡುಕಿಕೊಂಡು ಹೊರಟನು. ಅರಣ್ಯದ ಚಿಲುಮೆಯೊಂದರ ಬಳಿಯಿದ್ದ ಅವಳನ್ನು ಕಂಡು ಸೌದಾಸನ ಸಂದೇಶವನ್ನು ತಿಳಿಸಿದನು. ಮಹಾರಾಣಿಯು ದಿವ್ಯವಾದ ಆ ಎರಡು ಕರ್ಣಕುಂಡಲಗಳ ಮಹಿಮೆಯನ್ನು ಉತ್ತಂಕನಿಗೆ ಹೇಳಿದಳು. ದಿವ್ಯವಾದ ಆ ಮಣಿಕುಂಡಲಗಳನ್ನು ಹೊಂದಲು ದೇವತೆಗಳು, ಯಕ್ಷರು, ನಾಗರು, ಎಲ್ಲರೂ ಕಾಯುತ್ತಿದ್ದರು. ಅವರೆಲ್ಲ ಮದಯಂತಿಯಲ್ಲಿ ದೋಷವನ್ನು ಅರಸಲು ಹೊಂಚುಹಾಕುತ್ತಿದ್ದರು.

ಇದನ್ನೂ ಓದಿ: Book Excerpt: ಮೈ ನಡುಗಿಸಿದ ಯೂರಿಯಾ ಪ್ರಕರಣ

ಕುಂಡಲಗಳನ್ನು ನೆಲದ ಮೇಲಿರಿಸಿದರೆ ಸರ್ಪಗಳು ಕೊಂಡೊಯ್ಯುತ್ತವೆಯೆಂದೂ, ಅಶುಚಿಯಾಗಿ ಧಾರಣೆ ಮಾಡಿದರೆ ಅಥವಾ ಅದನ್ನು ಧರಿಸಿ ನಿದ್ದೆ ಮಾಡಿದರೆ ಯಕ್ಷರು ಮತ್ತು ದೇವತೆಗಳು ಅಪಹರಿಸುವರೆಂದೂ ಅವಳು ಹೇಳಿದಳು. ಅದನ್ನು ಧರಿಸಿದವರಿಗೆ ಹಸಿವು ಬಾಯಾರಿಕೆಗಳಿಂದಾಗಲೀ ಅಗ್ನಿ, ವಿಷ ಅಥವಾ ಕಾಡುಪ್ರಾಣಿಗಳಿಂದಾಗಲೀ ಭಯವಿರುವುದಿಲ್ಲ. ಆ ಕುಂಡಲಗಳು ಕುಬ್ಬ ವ್ಯಕ್ತಿ ಧರಿಸಿದರೆ ಚಿಕ್ಕದಾಗುತ್ತವೆ ಮತ್ತು ಸ್ಥೂಲಕಾಯನು ಧರಿಸಿದರೆ ಅವನ ಮೈಗೆ ಹೊಂದಿಕೊಳ್ಳುವ ಗಾತ್ರವನ್ನು ಪಡೆಯುತ್ತವೆ. ಹೀಗೆ ಹೇಳಿದ ಮದಯಂತಿಯು ತಾನು ಅವುಗಳನ್ನು ಕೊಡಲು ಸಿದ್ಧಳಿರುವುದಾಗಿಯೂ ಆದರೆ ತನ್ನ ಪತಿಯಿಂದ ಗುರುತೊಂದನ್ನು ತರುವಂತೆಯೂ ಉತ್ತಂಕನಿಗೆ ಹೇಳಿದಳು.

ಉತ್ತಂಕನು ಪುನಃ ಸೌದಾಸನ ಬಳಿಗೆ ಬಂದು ಅಭಿಜ್ಞಾನವನ್ನು ಪ್ರಾರ್ಥಿಸಿದನು. ಸೌದಾಸನು, “ಪ್ರಿಯೇ! ನಾನೀಗ ಇರುವ ದುಃಸ್ಥಿತಿಯು ಕಲ್ಯಾಣಕರವಾದುದೇನೂ ಅಲ್ಲ. ಈಗಂತೂ ಬೇರೆ ಯಾವ ಮಾರ್ಗವೂ ಇಲ್ಲವಾಗಿದೆ. ನನ್ನ ಅಭಿಪ್ರಾಯವನ್ನು ತಿಳಿದುಕೊಂಡು, ಈ ಬ್ರಾಹ್ಮಣನಿಗೆ ಮಣಿಕುಂಡಲಗಳನ್ನು ಕೊಡು” ಎಂದು ಹೇಳಿಕಳುಹಿಸಿದನು. ಉತ್ತಂಕನು ಅದೇ ಮಾತುಗಳನ್ನು ರಾಣಿಯ ಬಳಿ ಹೋಗಿ ಪುನರುಚ್ಚರಿಸಿದನು. ಆಗ ರಾಣಿಯು ಮಣಿಕುಂಡಲಗಳನ್ನು ಉತ್ತಂಕನಿಗೆ ಕೊಟ್ಟುಬಿಟ್ಟಳು.

ಅವುಗಳನ್ನು ಪಡೆದುಕೊಂಡು ಉತ್ತಂಕನು ಹೋಗುತ್ತಿದ್ದಾಗ ದಾರಿಯಲ್ಲಿ ಅವನಿಗೆ ಹಸಿವಾಯಿತು. ಹತ್ತಿರದಲ್ಲೇ ಇದ್ದ ಫಲಭರಿತ ವೃಕ್ಷವೊಂದನ್ನು ನೋಡಿ ಅದರ ಹಣ್ಣುಗಳಿಗಾಗಿ ಮರವನ್ನು ಹತ್ತಿದನು. ತನ್ನ ಕೃಷ್ಣಾಜಿನದಲ್ಲಿ ಕುಂಡಲಗಳನ್ನು ಭದ್ರವಾಗಿ ಕಟ್ಟಿ ಅದನ್ನು ಕೊಂಬೆಯೊಂದಕ್ಕೆ ಬಿಗಿದು ಹಣ್ಣುಗಳನ್ನು ಉದುರಿಸುತ್ತಿದ್ದನು. ಆಗ ಕೃಷ್ಣಾಜಿನವು ಕೊಂಬೆಯಿಂದ ಕಳಚಿಕೊಂಡು ನೆಲಕ್ಕೆ ಬಿದ್ದಿತು. ಇದನ್ನೇ ಕಾಯುತ್ತಿದ್ದ ತಕ್ಷಕನೆಂಬ ಸರ್ಪವು ಅದನ್ನು ಕಚ್ಚಿಕೊಂಡು ಬಿಲವೊಂದಕ್ಕೆ ನುಸುಳಿಬಿಟ್ಟಿತು. ಮರದ ಮೇಲಿದ್ದ ಉತ್ತಂಕನು ಅದನ್ನು ನೋಡಿ ಚಂಗನೆ ನೆಲಕ್ಕೆ ಜಿಗಿದನು. ಆದರೆ ಸರ್ಪವು ಬಿಲದೊಳಗೆ ಹೊರಟುಹೋಗಿತ್ತು.

ಉತ್ತಂಕನು ಅಲ್ಲಿಯೆ ಬಿದ್ದಿದ್ದ ಒಂದು ಕಡ್ಡಿಯನ್ನು ತೆಗೆದುಕೊಂಡು ಹುತ್ತವನ್ನು ಅಗೆಯತೊಡಗಿದನು. ಕೋಪದಿಂದ ಆ ತಪಸ್ವಿಯು ಮೂವತ್ತೈದು ದಿನಗಳ ಕಾಲ ನಿರಂತರವಾಗಿ ಅಗೆಯುತ್ತಲೇ ಇದ್ದಾಗ, ಭೂದೇವಿಯು ನಡುಗತೊಡಗಿದಳು. ಆಗ ಇಂದ್ರನು ಉತ್ತಂಕನ ಬಳಿಗೆ ಬಂದು, “ಉತ್ತಂಕ, ನೀನು ಈ ಕಡ್ಡಿಯಿಂದ ಸಾವಿರಾರು ಮೈಲಿ ಅಗೆದು, ನಾಗಲೋಕಕ್ಕೆ ಮಾರ್ಗವನ್ನು ನಿರ್ಮಿಸಲು ಆಗುವುದಿಲ್ಲ. ಈ ಪ್ರಯತ್ನವನ್ನು ಬಿಡುವುದೇ ಕ್ಷೇಮ” ಎಂದು ಹೇಳಿದನು. ಆಗ ಉತ್ತಂಕನು ‘ʼತಾನು ಈ ಕಾರ್ಯವನ್ನು ಸಾಧಿಸದಿದ್ದರೆ ಗುರುದ್ರೋಹಿಯಾಗುತ್ತೇನೆಂದೂ, ಹಾಗೆ ಬದುಕುವುದಕ್ಕಿಂತ ಮರಣವೇ ಲೇಸೆಂದೂ’ʼ ಹೇಳಿ, ತನ್ನ ಪ್ರಯತ್ನವನ್ನು ಮುಂದುವರಿಸಿದನು.

ಅವನ ಗುರುಭಕ್ತಿಗೆ ಮಾರುಹೋದ ಇಂದ್ರನು, ಉತ್ತಂಕನು ಅಗೆಯುತ್ತಿದ್ದ ಕಡ್ಡಿಗೆ ತನ್ನ ವಜ್ರಾಯುಧದ ಶಕ್ತಿಯನ್ನು ಕರುಣಿಸಿದನು. ಕೂಡಲೇ ನಾಗಲೋಕಕ್ಕೆ ದಾರಿಯು ಕಾಣಿಸಿತು. ಉತ್ತಂಕನು ಆ ಮಾರ್ಗವಾಗಿ ನಾಗಲೋಕವನ್ನು ಪ್ರವೇಶಿದನು. ಅದು ಬಹಳ ವಿಸ್ತಾರವಾಗಿದ್ದು ಮಣಿಕನಕಗಳಿಂದ ತುಂಬಿ ಸಮೃದ್ಧವಾಗಿತ್ತು. ಅಷ್ಟು ವಿಸ್ತಾರವಾದ ಪ್ರದೇಶದಲ್ಲಿ ತನ್ನ ಕುಂಡಲಗಳನ್ನು ಎಲ್ಲಿ ಹುಡುಕಬೇಕೆಂಬುದೇ ತಿಳಿಯದೆ ಅವನು ನಿರುತ್ಸಾಹಿಯಾದನು. ಆ ಸಮಯಕ್ಕೆ ಸರಿಯಾಗಿ ಒಂದು ತೇಜೋಮಯವಾದ
ಕುದುರೆಯು ಅವನ ಬಳಿಗೆ ಬಂದಿತು. ಅದು ತನ್ನನ್ನು ಅಗ್ನಿಯೆಂದು ಪರಿಚಯ ಮಾಡಿಕೊಡುತ್ತ, ಹೋಮಾದಿಗಳಿಂದ ವಿಧಿಪೂರ್ವಕವಾಗಿ ಸಂಪೂಜಿಸುತ್ತಿದ್ದುದರಿಂದ ಅವನಿಗೆ ಸಹಾಯ ಮಾಡಲು ಬಂದಿರುವುದಾಗಿಯೂ ಹೇಳಿತು. ಕುದುರೆಯು ಹೇಳಿದಂತೆ ಉತ್ತಂಕನು ಅದರ ಅಧೋದ್ವಾರದಿಂದ ಗಾಳಿಯನ್ನು ಊದಿದನು.

ಕೂಡಲೇ ನಾಗಲೋಕವೇ ಸುಟ್ಟು ಹೋಗುವಂತೆ ಬೆಂಕಿಯು ಧಗಧಗನೆ ಉರಿಯತೊಡಗಿತು. ಹೊಗೆಯು ಎಲ್ಲೆಡೆಗೆ ವ್ಯಾಪಿಸಿ ವಾಸುಕೀ ಸಹಿತ ನಾಗಪ್ರಮುಖರ ಅರಮನೆಗಳೇ ಕಾಣದಂತಾಯಿತು. ಆ ಅಗ್ನಿಜ್ವಾಲೆಯಿಂದ ಪರಿತಪಿಸಿದ ನಾಗಗಳೆಲ್ಲವೂ ಒಟ್ಟಾಗಿ ಸೇರಿ ಉತ್ತಂಕನ ಬಳಿಗೆ ಬಂದವು. ಎಲ್ಲ ಸರ್ಪಗಳೂ ಅವನಿಗೆ ತಲೆಬಾಗಿ ನಮಸ್ಕರಿಸಿ, ಯಥೋಚಿತವಾಗಿ ಸತ್ಕರಿಸಿದವು. ಅವನನ್ನು ಪ್ರಸನ್ನಗೊಳಿಸಿ, ತಕ್ಷಕನು ತಂದಿದ್ದ ಮಣಿಕುಂಡಲಗಳನ್ನು ಅವನಿಗೆ ಒಪ್ಪಿಸಿದವು. ಉತ್ತಂಕನು ಅಗ್ನಿಯನ್ನು ಪ್ರಾರ್ಥಿಸಿ ನಾಗಲೋಕವನ್ನು ಭಸ್ಮ ಮಾಡದಂತೆ ರಕ್ಷಿಸಿದನು. ಅನಂತರ ಆಶ್ರಮಕ್ಕೆ ಹಿಂದಿರುಗಿ ಬಂದು, ಗುರುಪತ್ನಿಗೆ ಕುಂಡಲಗಳನ್ನು ಅರ್ಪಿಸಿದನು.

ಇದನ್ನೂ ಓದಿ: Book Excerpt: ಬಿದ್ದ ಮೊದಲ ಮಳೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ದಶಮುಖ ಅಂಕಣ: ಮಳೆಯ ನಡುವೆ ಮರಳಿ ಶಾಲೆಗೆ!

ದಶಮುಖ ಅಂಕಣ: ಶಾಲೆಯ ಜೀವನ ಮುಗಿದು ಹಲವು ಕಾಲ ಸಂದಿದ್ದರೂ, ಅದರ ನೆನಪುಗಳು ಮಾತ್ರ ಹುಲ್ಲಿನಂತೆ… ಒಂದು ಸಣ್ಣ ಮಳೆಗೇ ಹಸಿರಾಗಿ ಬಿಡುತ್ತವೆ. ನಮ್ಮನೆಯ ಮಕ್ಕಳೋ, ಪಕ್ಕದ ಮನೆಯ ಪಾಪುವೋ ಶಾಲೆಯ ಬಸ್ಸಿಗೆ ಓಡುತ್ತಿದ್ದರೆ ಅವರೊಂದಿಗೆ ನಾವೂ ದಾಪುಗಾಲಿಡುತ್ತೇವೆ.

VISTARANEWS.COM


on

ದಶಮುಖ back to school
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

dashamukha column logo

ದಶಮುಖ ಅಂಕಣ: ಶಾಲೆಗಳು (School) ಪ್ರಾರಂಭವಾಗಿ ಕೆಲದಿನಗಳಾಗಿವೆ. ಬಣ್ಣದ ಚಿಟ್ಟೆಗಳಂತೆ ಹಾರಾಡುತ್ತಾ ಶಾಲೆಯ ದಾರಿ ಹಿಡಿದಿರುವ (Back to School) ಮಕ್ಕಳನ್ನು (Children) ಕಾಣುತ್ತಿದ್ದಂತೆ ಮನಸ್ಸು ತುಂಬಿ ಬರುತ್ತದೆ. ಬೇಸಿಗೆ (Summer holidays) ರಜೆಯಲ್ಲಿ ಅವರೇನೇ ಮಾಡಿದರೂ, ಮಾಡದಿದ್ದರೂ… ರಜೆ ಕಳೆದಿದ್ದಂತೂ ಹೌದು. ಈಗ ಮರಳಿ ಶಾಲೆಗೆ. ಬಹುಪಾಲು ಮಕ್ಕಳು ಶಾಲೆಗೆ ಮರಳಿ ಹೋಗುತ್ತಿದ್ದರೆ, ಒಂದಿಷ್ಟು ಪುಟಾಣಿಗಳು ಮೊದಲ ಬಾರಿಗೆ ಶಾಲೆಗೆ ಹೋಗುವವರು. ಶಾಲೆಯ ಹಾದಿ ಹಿಡಿದಿರುವ ತಂತಮ್ಮ ಮಕ್ಕಳ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಷಕರು ತುಂಬಿಸಿಟ್ಟಿದ್ದಾರೆ. ಸಮವಸ್ತ್ರ (Uniform) ಹಾಕಿ ಹೊರಟವರು, ಅದಿನ್ನೂ ದೊರೆಯದೆ ಬಣ್ಣದ ಬಟ್ಟೆಗಳಲ್ಲೇ ಹೊರಟವರು, ಅಕ್ಕ-ಅಣ್ಣನ ಕೈ ಹಿಡಿದು ನಿಂತವರು, ಹೋಗಲು ಮನಸ್ಸಿಲ್ಲದ ಪೆಚ್ಚ ಮೋರೆಯವರು, ಫೋಟೊ ಇಷ್ಟವಿಲ್ಲದ ಗಂಭೀರ ಭಾವದವರು, ರಜೆಯ ಬೋರು ಕಳೆದ ಬಿಡುಗಡೆಯ ಭಾವದವರು, ಮೊದಲ ಬಾರಿಗೆ ಹೊರಟ ಅಳು ಮೋರೆಯವರು… ಅಂತೂ ಸಂಭ್ರಮ, ನಗು, ದುಗುಡ, ಆತಂಕ, ಅಳು ಮುಂತಾದ ಹಲವಾರು ಭಾವಗಳನ್ನು ಹೊತ್ತ ಪುಟ್ಟ ಬೊಂಬೆಗಳಂತೆ ಅವರೆಲ್ಲ ಕಂಡುಬರುತ್ತಾರೆ.

ಇದೇನು ಹೊಸದಲ್ಲ, ಪ್ರತಿವರ್ಷವೂ ಕಾಣುವಂಥದ್ದು. ಇವೆಲ್ಲ ಎಷ್ಟು ಹಳೆಯದ್ದೆಂದರೆ, ಬಾಲ್ಯದಲ್ಲಿ ನಾವೂ ಇದನ್ನೇ ಮಾಡಿದ್ದೆವಲ್ಲ ಎನಿಸಬಹುದು. ಶಾಲೆಗೆ ಹೋಗುವಾಗ ನಮಗೆಲ್ಲ ಈಗಿನಂತೆ ಪ್ರೀಸ್ಕೂಲ್‌ಗಳೆಲ್ಲ ಇರಲಿಲ್ಲ. ನೇರವಾಗಿ ಕಿಂಡರ್‌ಗಾರ್ಟ್‌ನ್‌ಗೆ ಹೋಗುವುದಾಗಿತ್ತು. ಅದಕ್ಕೆ ಬರುವವರೂ ಕಡಿಮೆಯೇ. ಒಂದನೇ ತರಗತಿಗೆ ಹೋದರೆ ಸಾಲದೇ ಎಂಬ ಮನಸ್ಥಿತಿ ಹಲವರಿಗಿತ್ತು ಆಗ. ಮನೆಯೊಂದನ್ನು ಶಾಲೆಯಾಗಿ ಮಾಡಿ, ನಮ್ಮ ಬಾಲವಾಡಿಯನ್ನು ನಡೆಸಲಾಗುತ್ತಿತ್ತು. ಬಾಲವಾಡಿಗೆ ಹೋದ ಮೊದಲ ದಿನ ನಾವೊಂದಿಷ್ಟು ಜನ ನಗುನಗುತ್ತಲೇ ಇದ್ದೆವು. ಆದರೆ ಇನ್ನೊಂದಿಷ್ಟು ಮಕ್ಕಳು ಚೀರಾಡಿ, ಭೋರಾಡಿ, ಉರುಳಾಡಿ, ಘಟ್ಟಿಸಿಕೊಂಡು ಅತ್ತಿದ್ದರು. ಸಮಾಧಾನ ಮಾಡುವ ಸಲುವಾಗಿ ಅವರಿಗೆಲ್ಲ ಒಂದೊಂದು ನಿಂಬೆಹುಳಿ ಪೆಪ್ಪರಮಿಂಟ್‌ ಸಿಕ್ಕಿದ್ದವು. ಮಾರನೇ ದಿನ ಅತ್ತವರ ಸಂಖ್ಯೆ ಹೆಚ್ಚಾಗಿತ್ತು, ನನ್ನನ್ನೂ ಸೇರಿ!

ನಮ್ಮ ಬಾಲವಾಡಿಯಲ್ಲಿ ಸಹಾಯಕ್ಕಿದ್ದವರನ್ನೂ ಸೇರಿಸಿದರೆ ಒಟ್ಟೂ ನಾಲ್ವರು ಸಿಬ್ಬಂದಿ ಇದ್ದರು. ಪಂಕಜಾ ಮಿಸ್‌, ಫಿರ್ದೂಸ್‌ ಮಿಸ್‌, ಸುಶೀಲಮ್ಮ ಆಂಟಿ ಮತ್ತು ಆಯಮ್ಮ ಆಂಟಿ- ಇವರಿಷ್ಟು ಮಂದಿ ಸೇರಿ, ಸುಮಾರು ೩೦ ಮಕ್ಕಳನ್ನು ಸುಧಾರಿಸುತ್ತಿದ್ದರು. ಕುಳಿತುಕೊಳ್ಳುವುದಕ್ಕೆಂದು ಬೆಂಚು- ಕುರ್ಚಿಗಳಲ್ಲ, ಮಕ್ಕಳಿಗೆಲ್ಲ ಪುಟ್ಟ ಕಾಲುಮಣೆಗಳು ಇರುತ್ತಿದ್ದವು. ಆ ಕಾಲುಮಣೆಗಳ ಅಡಿಗಿನ ಖಾಲಿ ಜಾಗವಂತೂ, ನಮ್ಮ ಬೆಣ್ಣೆ ಬಳಪಗಳು ಮತ್ತು ಸೀಮೆಸುಣ್ಣಗಳನ್ನು ಆಗಾಗ ತಿಂದು ಹಾಕುತ್ತಿತ್ತು. ಕೆಲವೊಮ್ಮೆ ಪಾಟಿಗಳೂ ಅದರಡಿಗೆ ಮರೆಯಾಗಿ, ಅದನ್ನು ಹುಡುಕುವುದಕ್ಕೆಂದು ಕಾಲುಮಣೆಗಳನ್ನು ಸರಿಸಿದಾಗ ಎಂದೋ ಕಣ್ಮರೆಯಾಗಿದ್ದ ಯಾರಾರದ್ದೋ ಬಣ್ಣಬಣ್ಣದ ಸೀಮೆ ಸುಣ್ಣಗಳೆಲ್ಲ- ಇಡಿಯಾಗಿ, ಪುಡಿಯಾಗಿ ದೊರೆಯುತ್ತಿದ್ದವು.

ನಮಗೆಲ್ಲ ಬಾಲವಾಡಿಯಲ್ಲಿ ಪುಸ್ತಕ-ಪೆನ್ಸಿಲ್ಲು ಇರಲಿಲ್ಲ. ಪೆನ್ಸಿಲ್ಲು, ರಬ್ಬರು, ಮೆಂಡರ್‌ಗಳನ್ನೆಲ್ಲ ನಾವು ಕಂಡಿದ್ದು ಪ್ರಾಥಮಿಕ ಶಾಲೆ ಆರಂಭವಾದ ಮೇಲೆಯೆ. ಅಲ್ಲಿಯವರೆಗೆ ಸ್ಲೇಟು-ಬಳಪದಲ್ಲೇ ಗೀಚುತ್ತಿದ್ದೆವು. ʻನನ್ನ ಪಾಟಿ ಕರಿಯದು, ಸುತ್ತುಕಟ್ಟು ಬಿಳಿಯದುʼ ಎಂಬ ಶಿಶುಗೀತೆ ಹೇಳಿದವರಿಗೆ, ಅದನ್ನು ಬಳಸಿಯೂ ಗೊತ್ತಿದ್ದೀತು. ಹಾಗಂತ ಪ್ಲಾಸ್ಟಿಕ್‌ ಮಣಿಗಳ ಪಾಟಿ ಇರುತ್ತಿತ್ತು ಕೆಲವರ ಬಳಿ. ಯಾರದ್ದೋ ಸ್ಲೇಟಿನಲ್ಲಿ ಬರೆದಿದ್ದನ್ನು ಇನ್ಯಾರೊ ಅಳಿಸುವುದು, ಯಾರದ್ದೋ ಬಟ್ಟೆ ತಾಗಿ, ಬರೆದಿದ್ದೆಲ್ಲ ತನ್ನಷ್ಟಕ್ಕೆ ಒರೆಸಿ ಹೋಗುವುದು, ಅದಕ್ಕಾಗಿ ʻಹೋʼ ಎಂದು ಅತ್ತು ರಂಪ ಮಾಡುವುದು, ಹಾಗೆ ಅಳಿಸಿಹೋಗಬಾರದೆಂದು ಸೀಮೆ ಸುಣ್ಣವನ್ನು ನೀರಲ್ಲಿ ಅದ್ದಿಕೊಂಡು ಬರೆಯುವುದು, ಹಾಗೆ ಬರೆದಿದ್ದನ್ನು ಅಳಿಸಲೇ ಆಗದೆ ʻಥೂʼ ಎಂದು ಎಂಜಲು ಉಗಿದು ಅಳಿಸುವುದು… ಇಂಥವೆಲ್ಲ ಬಾಲವಾಡಿಯ ದಿನಗಳ ಮಾಮೂಲಿ ಪ್ರಕ್ರಿಯೆ.

ಅಂದಿನ ಬಾಲವಾಡಿಯ ಜಗಳಗಳೂ ಇಂದಿನ ಹಾಗೆಯೇ, ಯಾವ ಕಾರಣಕ್ಕೆ ಬೇಕಿದ್ದರೂ ಹುಟ್ಟುತ್ತಿದ್ದವು. ತೊಟ್ಟ ಅಂಗಿಯ ಚುಂಗನ್ನು ಪಕ್ಕದವರು ಜಗ್ಗಿದರು ಎನ್ನುವುದರಿಂದ ಹಿಡಿದು, ಬಳಪ ಮುರಿದರು, ಮೊಣಕೈಯಲ್ಲಿ ತಿವಿದರು, ಜುಟ್ಟೆಳೆದರು, ಸ್ಲೇಟು ಮುಟ್ಟಿದರು ಎನ್ನುವವರೆಗೆ ಯಾವುದೇ ಕಾರಣಕ್ಕೂ ಹೊಡೆದಾಟ ಶುರುವಾಗುತ್ತಿತ್ತು. ಮನೆಯಲ್ಲಿ ಅತಿ ಮುದ್ದಿನಿಂದ ಬೆಳೆದವರು, ಬಾಲವಾಡಿಯಲ್ಲೂ ಹಠ ಮಾಡಿ, ಪೆಟ್ಟು ತಿಂದು, ಅತ್ತು ವಾಂತಿ ಮಾಡಿದ ಉದಾಹರಣೆಗಳಿದ್ದವು. ಮಕ್ಕಳ ಉಳಿದೆಲ್ಲ ಚಾಕರಿಯ ಜೊತೆಗೆ ಬಾಲವಾಡಿಯ ಆಯಮ್ಮ ಆಂಟಿಗೆ ಇಂಥ ಸ್ವಚ್ಛತೆಗೆ ಕೆಲಸಗಳೂ ಗಂಟು ಬೀಳುತ್ತಿದ್ದವು.

ಒಮ್ಮೆ ಬಾಲವಾಡಿ ಮುಗಿದ ಮೇಲೆ ಮುಂದಿನ ತರಗತಿಗಳಲ್ಲಿ, ಶಾಲೆಯ ಮೊದಲ ದಿನ ಅಷ್ಟೊಂದು ಕಷ್ಟ ಎನಿಸಿರಲಿಲ್ಲ. ಆದರೂ ಕೆಲವು ಮಕ್ಕಳಿಗೆ ಎರಡೇಟು ಬಿಗಿದು ಪಾಲಕರು ಬಿಟ್ಟು ಹೋಗುವ ದೃಶ್ಯಗಳು ಅಲ್ಲಲ್ಲಿ ಕಾಣುತ್ತಲೇ ಇರುತ್ತಿದ್ದವು. ಶಾಲೆಯ ಮುಖ ಕಾಣುತ್ತಿದ್ದಂತೆ, ʻಹೋಗಲೊಲ್ಲೆʼ ಎಂದು ರಸ್ತೆಯಲ್ಲೇ ಬಿದ್ದು ಉರುಳಾಡುವ ಮಕ್ಕಳ ಚಿತ್ರಗಳು ಈಗಲೂ ನೆನಪಿಗೆ ಬರುತ್ತವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಶಾಲೆಯ ಮೊದಲ ದಿನವೆಂದರೆ ಹಬ್ಬದ ವಾತಾವರಣವನ್ನೇ ನಿರ್ಮಿಸಲಾಗುತ್ತಿದೆ. ಶಾಲೆಯ ಆವರಣವನ್ನು ತಳಿರು-ತೋರಣ, ಬಾಳೆ ಕಂಬಗಳಿಂದ ಅಲಂಕರಿಸಿ, ಮಕ್ಕಳಿಗೆಲ್ಲ ಆರತಿ ಎತ್ತಿ ಬರಮಾಡಿಕೊಂಡು, ಮಿಠಾಯಿ ಹಂಚುವುದೋ ಅಥವಾ ಸಿಹಿಯೂಟ ಉಣಿಸುವುದನ್ನು ಕಾಣಬಹುದು. ಕೆಲವು ಶಾಲೆಗಳಲ್ಲಿ ಮಕ್ಕಳನ್ನು ಎತ್ತಿನ ಗಾಡಿಯ ಮೇಲೆ, ಟ್ರಾಕ್ಟರ್‌ಗಳ ಮೇಲೆ ಮೆರವಣಿಗೆಯ ಮೂಲಕ ಶಾಲೆಗೆ ಕರೆದೊಯ್ದ ಸುದ್ದಿಗಳಿವೆ. ಹಿಂದೆ ಶಾಲೆಗಳನ್ನು ಕರೆಯುತ್ತಿದ್ದುದೇ ʻಶಾಲೆಮನೆʼಗಳೆಂದು. ಹಿಂದಲ್ಲ, ಇಂದಿಗೂ ಮಕ್ಕಳು ಮನೆಗೆ ಹೋದಷ್ಟೇ ನಿರುಮ್ಮಳವಾಗಿ ಶಾಲೆಗೆ ಹೋಗಬೇಕೆಂಬ ಕಳಕಳಿ ನಿಜಕ್ಕೂ ಶ್ಲಾಘನೆಗೆ ಅರ್ಹ.

Maharashtra proposed to change School timings to ensure children get enough sleep

ನಮ್ಮಲ್ಲಿ ಮಾತ್ರವಲ್ಲ, ಹಲವಾರು ದೇಶಗಳಲ್ಲಿ ʻಬ್ಯಾಕ್‌ ಟು ಸ್ಕೂಲ್‌ʼ ಎಂಬುದು ಸಂಭ್ರಮದ ಸಮಯ. ಇದಕ್ಕಾಗಿ ಬಹುತೇಕ ಅಂಗಡಿ-ಮಳಿಗೆಗಳಲ್ಲಿ ʻಬ್ಯಾಕ್‌ ಟು ಸ್ಕೂಲ್‌ʼ ರಿಯಾಯ್ತಿಗಳು ರಾರಾಜಿಸುತ್ತವೆ. ಪೆನ್ನು, ಪೆನ್ಸಿಲ್ಲು, ಇರೇಸರ್‌ಗಳಿಂದ ಹಿಡಿದು ಬಣ್ಣದ ಪೆನ್ಸಿಲ್ಲುಗಳು, ಕ್ರೇಯಾನ್‌, ಚಿತ್ರಕಲೆಯ ತರಹೇವಾರಿ ಉಪಕರಣಗಳು, ನೋಟ್ ಪುಸ್ತಕಗಳು, ಶಾಲೆಯ ಬ್ಯಾಗು, ಊಟದ ಡಬ್ಬಿ, ನೀರಿನ ಬಾಟಲಿಗಳು, ಶೂಗಳು, ವಸ್ತ್ರಗಳು, ಕ್ಯಾಲ್ಕುಲೇಟರ್‌, ಲ್ಯಾಪ್‌ಟಾಪ್‌… ಹೀಗೆ, ಶಾಲೆಯ ಮಕ್ಕಳು ಮತ್ತು ಶಿಕ್ಷಕರಿಗೆ ಬೇಕಾಗುವ ಲೆಕ್ಕವಿಲ್ಲದಷ್ಟು ಸಾಮಗ್ರಿಗಳು ʻಸೇಲ್‌ʼ ಎಂಬ ಹಣೆಪಟ್ಟಿ ಹೊತ್ತು ಕುಳಿತಿರುತ್ತವೆ. ಇದೇ ಸಮಯದಲ್ಲಿ, ಉಪಯೋಗಿಸಲು ಯೋಗ್ಯ ಸ್ಥಿತಿಯಲ್ಲೇ ಇರುವ ಶಾಲೆಯ ಸಾಮಗ್ರಿಗಳ ‌ʻಗರಾಜ್‌ ಸೇಲ್ʼ ಸಹ ಕಂಡುಬರುತ್ತದೆ. ಆ ವಸ್ತುಗಳ ಮಾಲೀಕರಿಗೆ ಮನೆಯಲ್ಲಿ ಜಾಗ ಖಾಲಿಯಾಯಿತು, ಜೊತೆಗೆ ನಾಲ್ಕು ಕಾಸೂ ಕೈಗೆ ಬಂತು; ಹೊಸದನ್ನು ಖರೀದಿಸಲು ಅನುಕೂಲ ಇಲ್ಲದವರಿಗೆ ಕಡಿಮೆ ಖರ್ಚಿನಲ್ಲಿ ಅಗತ್ಯ ವಸ್ತುಗಳೂ ದೊರೆತವು- ಉಪಾಯ ಒಳ್ಳೆಯದಲ್ಲವೇ? ನಮ್ಮಲ್ಲಿ… ಇವನ್ನೆಲ್ಲ ಯೋಚಿಸುವುದೂ ಕಷ್ಟ.

ಇದನ್ನೂ ಓದಿ: ದಶಮುಖ ಅಂಕಣ: “ಮಧುಮಾಸವೆ ಅಡಿ ಇಡುತಿದೆ ಹೊಸವರ್ಷದ ಬೆಳಗೆ”

ಇನ್ನೂ ಒಂದು ಕುತೂಹಲ ಬಹುದಿನಗಳವರೆಗೆ ಬಾಲ್ಯದಲ್ಲಿ ಕಾಡಿದ್ದಿತ್ತು. ಜೂನ್‌ 1ರಂದು ಅಷ್ಟೆಲ್ಲಾ ಜನರ ಬರ್ತ್‌ಡೇ ಇರುವುದಕ್ಕೆ ಹೇಗೆ ಸಾಧ್ಯ ಎಂಬುದು! ಪ್ರತಿ ಕ್ಲಾಸಿನಲ್ಲಿ ಇರುತ್ತಿದ್ದ 60-70 ಮಕ್ಕಳಲ್ಲಿ, ನಾಲ್ಕಾರು ಜನರಾದರೂ ಜೂನ್‌ 1ಕ್ಕೆ ಹುಟ್ಟಿದವರು ಇರುತ್ತಿದ್ದರು. ನಮ್ಮ ಕೆಲವು ಟೀಚರ್‌ಗಳು ತಾವೂ ಜೂನ್‌ 1ಕ್ಕೇ ಹುಟ್ಟಿದವರೆಂದು ಹೇಳಿ ನಕ್ಕಾಗ, ಅದೊಂದೇ ದಿನ ಯಾಕಾಗಿ ಅಷ್ಟೊಂದು ಜನ ಹುಟ್ಟುತ್ತಾರೆ ಎಂಬ ಕುತೂಹಲ ಮೂಡಿತ್ತು. ಹುಟ್ಟಿದ ದಿನಾಂಕ ಸ್ಪಷ್ಟವಾಗಿ ಗೊತ್ತಿಲ್ಲದವರೆಲ್ಲ, ಶಾಲೆಗೆ ಹೆಸರು ಕೊಡುವಾಗ ಅನಿವಾರ್ಯವಾಗಿ ಜೂನ್‌ 1ಕ್ಕೇ ಹುಟ್ಟುತ್ತಿದ್ದರು ಎಂಬುದು ತಿಳಿದಾಗ, ಟೀಚರ್‌ಗಳ ನಗೆಯೊಂದಿಗೆ ನಮ್ಮದೂ ಸೇರಿತ್ತು.

ಮಿತ್ರರ ಹುಟ್ಟಿದ ದಿನಗಳಂದು, ನಮ್ಮ ರಫ್‌ ಪುಸ್ತಕದ ಹಾಳೆಗಳನ್ನು ಹಿಂದಿನಿಂದ ಹರಿದು ಅವರಿಗಾಗಿ ತಯಾರಿಸುತ್ತಿದ್ದ ಗ್ರೀಟಿಂಗ್‌ ಕಾರ್ಡ್‌ಗಳು, ಪುಸ್ತಕದ ನಡುವೆ ಮರಿ ಹಾಕಲೆಂದು ಇರಿಸಿಕೊಳ್ಳುತ್ತಿದ್ದ ಹಕ್ಕಿಪುಕ್ಕಗಳು, ಸಾಮಾನ್ಯ ಇಂಕ್‌ ಪೆನ್ನುಗಳ ನಡುವೆ ರಾರಾಜಿಸುತ್ತಿದ್ದ ಹೀರೊ ಪೆನ್ನುಗಳು, ಆರೆಂಟು ಹನಿ ಇಂಕಿನ ಕಡ ಹಿಂತಿರುಗಿಸದ್ದಕ್ಕೆ ಹುಟ್ಟುತ್ತಿದ್ದ ಮುನಿಸು, ಫೌಂಟೆನ್‌ ಪೆನ್ನುಗಳಿಂದ ಚಿಮ್ಮುವ ಇಂಕಿಗೆ ಮುಂದಿನ ಬೆಂಚಿನವರ ವಸ್ತ್ರ ಕಲೆಯಾಗಿ ಏಳುತ್ತಿದ್ದ ಜಗಳ, ಮಧ್ಯಾಹ್ನ ಊಟದ ಡಬ್ಬಿಯ ಹಂಚಿಕೆಯಲ್ಲಿ ಆಗುತ್ತಿದ್ದ ರಾಜಿ ಪಂಚಾಯ್ತಿ, ಪ್ರತಿದಿನವೂ ಇರುತ್ತಿದ್ದ ಆಟದ ಪಿರಿಯೆಡ್‌, ಬೆತ್ತ ಹಿಡಿದೇ ಹುಟ್ಟಿದವರಂತೆ ಕಾಣುತ್ತಿದ್ದ ಪಿ.ಟಿ. ಮೇಷ್ಟ್ರು … ಹೆಕ್ಕುತ್ತಾ ಹೋದರೆ ಶಾಲೆಯ ಜೀವನದ ನೆನಪುಗಳು ಅಡಿಗಡಿಗೆ ಸಿಗುತ್ತವೆ.

ಶಾಲೆಯ ಜೀವನ ಮುಗಿದು ಹಲವು ಕಾಲ ಸಂದಿದ್ದರೂ, ಅದರ ನೆನಪುಗಳು ಮಾತ್ರ ಹುಲ್ಲಿನಂತೆ… ಒಂದು ಸಣ್ಣ ಮಳೆಗೇ ಹಸಿರಾಗಿ ಬಿಡುತ್ತವೆ. ನಮ್ಮನೆಯ ಮಕ್ಕಳೋ, ಪಕ್ಕದ ಮನೆಯ ಪಾಪುವೋ ಶಾಲೆಯ ಬಸ್ಸಿಗೆ ಓಡುತ್ತಿದ್ದರೆ ಅವರೊಂದಿಗೆ ನಾವೂ ದಾಪುಗಾಲಿಡುತ್ತೇವೆ… ಎಂದೋ ದಾಟಿ ಬಂದ ನಮ್ಮದೇ ಶಾಲೆಯ ಅಂಗಳಕ್ಕೆ. ಈಗ ನಿಮ್ಮ ಶಾಲೆಯ ದಿನಗಳು ನಿಮಗೂ ನೆನಪಾಗದಿದ್ದರೆ ಕೇಳಿ!

ಇದನ್ನೂ ಓದಿ: ದಶಮುಖ ಅಂಕಣ: ಮರುಳಿಗೆ ಅರಳುವ ಅರ್ಥಗಳನ್ನು ಹುಡುಕುತ್ತಾ…

Continue Reading

ಬೆಂಗಳೂರು

Bengaluru News: ಜೈನ್‌ ಶಾಂತಮಣಿ ಕಲಾ ಕೇಂದ್ರದ ಕಲ್ಲಿನ ಕೆತ್ತನೆ ಮತ್ತು ಚಿತ್ರಕಲಾ ಶಿಬಿರ “ಪಾರ್ಶ್ವ ಪಡಾಪ್” ಗೆ ಸಂಭ್ರಮದ ತೆರೆ

Bengaluru News: ಭಾರತೀಯ ಶಿಲ್ಪಿಗಳು ಮತ್ತು ವರ್ಣಚಿತ್ರಕಾರರ ಒಂದು ವಾರದ ಸಮಾವೇಶ “ಪಾರ್ಶ್ವ ಪಡಾಪ್” ಶನಿವಾರ ಸಂಭ್ರಮದಿಂದ ತೆರೆ ಕಂಡಿತು. ದೇಶದ ನಾನಾ ರಾಜ್ಯಗಳಿಂದ ಆಗಮಿಸಿದ್ದ ಉತ್ಸಾಹಿ ಶಿಲ್ಪಿಗಳು ಮತ್ತು ವರ್ಣಚಿತ್ರಕಾರರ ಅದ್ಭುತ ಶಿಲ್ಪಕಲೆ ಹಾಗೂ ಚಿತ್ರಕಲೆಗಳು ನೋಡುಗರ ಗಮನ ಸೆಳೆದವು.

VISTARANEWS.COM


on

Jain Shantamani Kala Kendra Stone Carving and Painting Camp in Bengaluru
Koo

ಬೆಂಗಳೂರು: ಭಾರತದಾದ್ಯಂತ ಶಿಲ್ಪಿಗಳು ಮತ್ತು ವರ್ಣಚಿತ್ರಕಾರರ ಒಂದು ವಾರದ ಸಮಾವೇಶ “ಪಾರ್ಶ್ವ ಪಡಾಪ್” ಶನಿವಾರ ಸಂಭ್ರಮದಿಂದ ತೆರೆ ಕಂಡಿತು. ದೇಶದ ನಾನಾ ರಾಜ್ಯಗಳಿಂದ ಆಗಮಿಸಿದ್ದ ಉತ್ಸಾಹಿ ಶಿಲ್ಪಿಗಳು ಮತ್ತು ವರ್ಣಚಿತ್ರಕಾರರ ಅದ್ಭುತ ಶಿಲ್ಪಕಲೆ ಹಾಗೂ ಚಿತ್ರಕಲೆಗಳು ನೋಡುಗರ ಗಮನ (Bengaluru News) ಸೆಳೆದವು.

ಜೈನ್ ವಿವಿಯ (ಡೀಮ್ಡ್-ಟು-ಯುನಿವರ್ಸಿಟಿ) ಶಾಂತಮಣಿ ಕಲಾ ಕೇಂದ್ರ ಮತ್ತು ಜೈನ್ ಇಂಟರ್‌ನ್ಯಾಷನಲ್ ರೆಸಿಡೆನ್ಷಿಯಲ್ ಸ್ಕೂಲ್ (ಜೆಐಆರ್‌ಎಸ್) ಸಹಯೋಗದಲ್ಲಿ ಆಯೋಜಿಸಿದ್ದ ಕಲಾ ಪ್ರತಿಭಾನ್ವೇಷಣೆ ಶಿಬಿರದಲ್ಲಿ ವಿವಿಧ ಕಲಾ ಪ್ರಕಾರಗಳ ಚಟುವಟಿಕೆಗಳು ಆಯೋಜನೆಗೊಂಡಿದ್ದವು. ಇವುಗಳಲ್ಲಿ ಬೆಂಗಳೂರಿನ ಜೈನ್ ಗ್ಲೋಬಲ್ ಕ್ಯಾಂಪಸ್‌ನಲ್ಲಿ ನಡೆದ ಶಿಲ್ಪಕಲಾ ಸ್ಪರ್ಧೆ ಮತ್ತು ರಾಷ್ಟ್ರೀಯ ಚಿತ್ರಕಲಾ ಶಿಬಿರವೂ ಒಳಗೊಂಡಿದ್ದವು.

ಕಲ್ಲಿನ ಕೆತ್ತನೆ, ಶಿಲ್ಪಕಲೆ ಮತ್ತು ಭಾವನಾತ್ಮಕ ಚಿತ್ರಕಲೆಯ ಮೇಲೆ ಕೇಂದ್ರೀಕರಿಸಿದ ಈ ಕಾರ್ಯಕ್ರಮವು ವಿಶಿಷ್ಟ ವೇದಿಕೆಯೊಂದರ ಮೂಲಕ ಭಾರತೀಯ ಕಲಾವಿದರಲ್ಲಿ ಕಲಾತ್ಮಕ ಬುದ್ದಿಮತ್ತೆ ಮತ್ತು ಸೃಜನಶೀಲತೆಯನ್ನು ಬೆಳೆಸುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ: VSK Media Awards 2024: ಬೆಂಗಳೂರಿನಲ್ಲಿ ಜೂ.30 ರಂದು “ವಿಎಸ್‌ಕೆ ಮಾಧ್ಯಮ ಪ್ರಶಸ್ತಿ” ಪ್ರದಾನ

ಈ ಶಿಬಿರವು ದೇಶದ ನಾನಾ ರಾಜ್ಯಗಳಿಂದ ಬಂದ ಉತ್ಸಾಹಿ ಶಿಲ್ಪಿಗಳು, ವರ್ಣಚಿತ್ರಕಾರರ ಸಮಗ್ರ, ಸಾಂಸ್ಕೃತಿಕ ಮತ್ತು ಶ್ರೀಮಂತ ಕಲಾತ್ಮಕತೆಯನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಿತು. ಕಲಾವಿದರು, ಕಲಾ ಉತ್ಸಾಹಿಗಳು, ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು ಮತ್ತು ವಿವಿಧ ವಯೋಮಾನದ ಉತ್ಸಾಹಿಗಳು, ವಿಶೇಷಚೇತನ ಕಲಾವಿದರೊಬ್ಬರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ಶಿಬಿರದಲ್ಲಿ ಕಲಾವಿದರು ಪ್ರಕೃತಿ ಮತ್ತು ಮಾನವೀಯತೆಯ ಅಂಶಗಳನ್ನು ಮುಕ್ತವಾಗಿ ಬೆಸೆದರು. ಇಂದಿನ ಜಗತ್ತಿಗೆ ಅಗತ್ಯವಿರುವ ಸಂದೇಶಗಳನ್ನು ಸಾರಿದರು. ಎಲ್ಲರೂ ಒಟ್ಟಾಗಿ ಭಾಗವಹಿಸಿದ ಈ ಪ್ರದರ್ಶನದಲ್ಲಿ ಕಲಾತ್ಮಕತೆಯ ವೈವಿಧ್ಯತೆ ಮತ್ತು ಆಳವನ್ನು ಅನುಭವಿಸಿದರು.

ಸಮಾವೇಶದಲ್ಲಿ ಪಾಲ್ಗೊಂಡಿದ್ದ ಶಿಲ್ಪಿಗಳು, ವರ್ಣಚಿತ್ರಕಾರರನ್ನು ಗೌರವಿಸಿ, ಪ್ರಮಾಣಪತ್ರಗಳು ಮತ್ತು ಟ್ರೋಫಿಗಳನ್ನು ವಿತರಿಸಲಾಯಿತು ಅಲ್ಲದೇ ಜೈನ್ ಗ್ರೂಪ್ ವತಿಯಿಂದ ನಗದು ಬಹುಮಾನಗಳನ್ನು ಸಹ ವಿತರಣೆ ಮಾಡಲಾಯಿತು.

ಇದನ್ನೂ ಓದಿ: Kannada New Movie: “ಯೂಟ್ಯೂಬ್ ಟ್ರೆಂಡಿಂಗ್” ಪಟ್ಟಿಯ 3ನೇ ಸ್ಥಾನದಲ್ಲಿ “ಕೃಷ್ಣಂ ಪ್ರಣಯ ಸಖಿ” ಚಿತ್ರದ “ಚಿನ್ನಮ್ಮ” ಹಾಡು!

ಲೋಹದ ಲೇಬಲ್‌ಗಳೊಂದಿಗೆ ಕಲಾವಿದರ ಹೆಸರನ್ನು ಹೊಂದಿರುವ ಕಲ್ಲಿನ ಕೆತ್ತನೆಯ ಶಿಲ್ಪಗಳು ನೋಡುಗರನ್ನು ಆಕರ್ಷಿಸಿದವು. ಅದ್ಭುತ ಶಿಲ್ಪಕಲೆ ಹಾಗೂ ಚಿತ್ರಕಲೆಗಳು ವೀಕ್ಷಕರನ್ನು ಗಮನ ಸೆಳೆದವು.

Continue Reading

ಕರ್ನಾಟಕ

VSK Media Awards 2024: ಬೆಂಗಳೂರಿನಲ್ಲಿ ಜೂ.30 ರಂದು “ವಿಎಸ್‌ಕೆ ಮಾಧ್ಯಮ ಪ್ರಶಸ್ತಿ” ಪ್ರದಾನ

VSK Media Awards 2024: ವಿಶ್ವ ಸಂವಾದ ಕೇಂದ್ರ, ಕರ್ನಾಟಕ ವತಿಯಿಂದ ಬೆಂಗಳೂರು ನಗರದ ಬಸವನಗುಡಿಯ ಬಿ.ಎಂ.ಎಸ್‌. ಎಂಜಿನಿಯರಿಂಗ್‌ ಕಾಲೇಜು ಸಭಾಂಗಣದಲ್ಲಿ ಇದೇ ಜೂ.30 ರಂದು ಭಾನುವಾರ ಬೆಳಿಗ್ಗೆ 10.30 ಗಂಟೆಗೆ ವಿಎಸ್‌ಕೆ ಮೀಡಿಯಾ ಅವಾರ್ಡ್ಸ್‌ (VSK Media Awards) ಮಾಧ್ಯಮ ಪ್ರಶಸ್ತಿ 2024 ಪ್ರದಾನ ಸಮಾರಂಭ ಏರ್ಪಡಿಸಲಾಗಿದೆ.

VISTARANEWS.COM


on

VSK Media Awards 2024 Programme in Bengaluru on June 30
Koo

ಬೆಂಗಳೂರು: ವಿಶ್ವ ಸಂವಾದ ಕೇಂದ್ರ, ಕರ್ನಾಟಕ ವತಿಯಿಂದ ಬೆಂಗಳೂರು ನಗರದ ಬಸವನಗುಡಿಯ ಬಿ.ಎಂ.ಎಸ್‌. ಎಂಜಿನಿಯರಿಂಗ್‌ ಕಾಲೇಜು ಸಭಾಂಗಣದಲ್ಲಿ ಇದೇ ಜೂ.30 ರಂದು ಭಾನುವಾರ ಬೆಳಿಗ್ಗೆ 10.30 ಗಂಟೆಗೆ ವಿಎಸ್‌ಕೆ ಮೀಡಿಯಾ ಅವಾರ್ಡ್ಸ್‌ (VSK Media Awards 2024) ಮಾಧ್ಯಮ ಪ್ರಶಸ್ತಿ 2024 ಪ್ರದಾನ ಸಮಾರಂಭ ಏರ್ಪಡಿಸಲಾಗಿದೆ.

ಇದನ್ನೂ ಓದಿ: Air Wing NCC: ಏರ್ ವಿಂಗ್ ಎನ್‌ಸಿಸಿ ಸೇರಲು ಅರ್ಜಿ ಆಹ್ವಾನ; ಜುಲೈ 9 ಕೊನೆಯ ದಿನ

ಕಾರ್ಯಕ್ರಮದಲ್ಲಿ ಆರ್ಗನೈಸರ್‌ ಪತ್ರಿಕೆಯ ಸಂಪಾದಕ ಪ್ರಫುಲ್ಲ ಕೇತ್ಕರ್‌, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರಿಯ ಸಂಘಚಾಲಕ ಡಾ. ಪಿ. ವಾಮನ್‌ ಶೆಣೈ ಉಪಸ್ಥಿತರಿರುವರು.

ಪ್ರಶಸ್ತಿ ಪುರಸ್ಕೃತರು

ತಿ.ತಾ. ಶರ್ಮ ಪತ್ರಿಕೋದ್ಯಮ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕ ಸುದರ್ಶನ್‌ ಚನ್ನಂಗಿಹಳ್ಳಿ, ಚಂದ್ರಶೇಖರ ಭಂಡಾರಿ ಪತ್ರಿಕೋದ್ಯಮ ಪ್ರಶಸ್ತಿಗೆ ಸುವರ್ಣ ನ್ಯೂಸ್ ಸಂಪಾದಕ ಅಜಿತ್‌ ಹನುಮಕ್ಕನವರ್‌, ಬೆ.ಸು.ನಾ. ಮಲ್ಯ ಪತ್ರಿಕೋದ್ಯಮ ಪ್ರಶಸ್ತಿಗೆ ಶೋಭಾ ಎಚ್‌.ಜಿ., ಹೊ.ವೆ. ಶೇಷಾದ್ರಿ ಅಂಕಣಕಾರ ಪ್ರಶಸ್ತಿಗೆ ಪ್ರೊ. ಪ್ರೇಮಶೇಖರ, ವಿ.ಎಸ್.ಕೆ. ಡಿಜಿಟಲ್‌ ಮಾಧ್ಯಮ ಪ್ರಶಸ್ತಿಗೆ ಡಾ. ಪೂರ್ವಿ ಜಯರಾಮ್‌ ಭಾಜನರಾಗಿದ್ದಾರೆ.

ಇದನ್ನೂ ಓದಿ: Gold Rate Today: ತುಸು ಏರಿಕೆ ಕಂಡ ಚಿನ್ನದ ಬೆಲೆ; ಇಷ್ಟಿದೆ ಇಂದಿನ ದರ

Continue Reading

ಕರ್ನಾಟಕ

Book Release: ಬೆಂಗಳೂರಿನಲ್ಲಿ ಜೂ.29ರಂದು ‘ಭಾವರಾಮಾಯಣ ರಾಮಾವತರಣʼ ಪುಸ್ತಕ ಲೋಕಾರ್ಪಣೆ

Bengaluru News: ಶ್ರೀ ಸಂಸ್ಥಾನ ಶ್ರೀ ರಾಮಚಂದ್ರಾಪುರ ಮಠ ವಿರಚಿತ “ಭಾವರಾಮಾಯಣ ರಾಮಾವತರಣ” ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವನ್ನು ನಗರದ ಹೊಸಕೆರೆಹಳ್ಳಿಯ ಪಿ.ಇ.ಎಸ್‌. ವಿಶ್ವವಿದ್ಯಾಲಯದ ಜಿ.ಜೆ.ಬಿ.ಸಿ. ಸಭಾಂಗಣದಲ್ಲಿ ಇದೇ ಜೂ. 29ರಂದು ಶನಿವಾರ ಸಂಜೆ 5 ಗಂಟೆಗೆ ಏರ್ಪಡಿಸಲಾಗಿದೆ.

VISTARANEWS.COM


on

Bhaavaramayana Ramavatarana book release programme on June 29 in Bengaluru
Koo

ಬೆಂಗಳೂರು: ಶ್ರೀ ಸಂಸ್ಥಾನ ಶ್ರೀ ರಾಮಚಂದ್ರಾಪುರ ಮಠ ವಿರಚಿತ ʼಭಾವರಾಮಾಯಣ ರಾಮಾವತರಣʼ ಪುಸ್ತಕ ಲೋಕಾರ್ಪಣೆ (Book Release) ಕಾರ್ಯಕ್ರಮವನ್ನು ನಗರದ ಹೊಸಕೆರೆಹಳ್ಳಿಯ ಪಿ.ಇ.ಎಸ್‌. ವಿಶ್ವವಿದ್ಯಾಲಯದ ಜಿ.ಜೆ.ಬಿ.ಸಿ. ಸಭಾಂಗಣದಲ್ಲಿ ಇದೇ ಜೂ. 29ರಂದು ಶನಿವಾರ ಸಂಜೆ 5 ಗಂಟೆಗೆ ಏರ್ಪಡಿಸಲಾಗಿದೆ.

ಇದನ್ನೂ ಓದಿ: Gold Rate Today: ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌; ಚಿನ್ನದ ದರ ಇಳಿಕೆ

ಕಾರ್ಯಕ್ರಮದಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾರು ಹಾಗೂ ಶ್ರೀಸಂಸ್ಥಾನ ಗೋಕರ್ಣ ಶ್ರೀ ರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಸಾನ್ನಿಧ್ಯ ವಹಿಸುವರು. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಮತ್ತು ಪಿ.ಇ.ಎಸ್‌. ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಎಂ.ಆರ್‌. ದೊರೆಸ್ವಾಮಿ ಉಪಸ್ಥಿತರಿರುವರು.

ಇದನ್ನೂ ಓದಿ: Para Badminton Ranking: ಮೊದಲ ಬಾರಿಗೆ ವಿಶ್ವ ನಂ.1 ಸ್ಥಾನಕ್ಕೇರಿದ ಕನ್ನಡಿಗ ಸುಹಾಸ್‌ ಯತಿರಾಜ್

ಸಂಜೆ 5 ಗಂಟೆಗೆ ಕಲಾಸ್ನೇಹಿ ಹಾಗೂ ನರ್ತನಯೋಗ ಸಂಸ್ಥೆಯ ನಿರ್ದೇಶಕಿ ಸ್ನೇಹಾ ನಾರಾಯಣ ಮತ್ತು ಯೋಗೇಶ್‌ ಕುಮಾರ್‌ ಅವರಿಂದ ಭರತನಾಟ್ಯ, ಸಂಜೆ 5.30 ಕ್ಕೆ ನೂರಕ್ಕೂ ಹೆಚ್ಚು ಗಣ್ಯರಿಂದ ಪುಸ್ತಕ ಲೋಕಾರ್ಪಣೆ, ಶ್ರೀಸಂಸ್ಥಾನದವರೊಂದಿಗೆ ಸಂವಾದ, ಎನ್. ರವಿಶಂಕರ್‌ ಸಂವಾದಕರಾಗಿ ಪಾಲ್ಗೊಳ್ಳುವರು. ಮಂತ್ರಾಲಯ ಶ್ರೀಗಳಿಂದ ಆಶೀರ್ವಚನ ಕಾರ್ಯಕ್ರಮ ಜರುಗಲಿದೆ.

Continue Reading
Advertisement
T20 World Cup 2024 Netizen Thanking Darshan For India World Cup Win
ಸ್ಯಾಂಡಲ್ ವುಡ್12 mins ago

T20 World Cup 2024: ದರ್ಶನ್‌ ಜೈಲಿಗೆ ಹೋದಾಗೆಲ್ಲ ವಿಶ್ವಕಪ್‌ ಗೆದ್ದ ಭಾರತ; ಹೀಗ್ಯಾಕೆ ಅಂದ್ರು ನೆಟ್ಟಿಗರು?

Rohit Sharma
ಕ್ರೀಡೆ13 mins ago

Rohit Sharma: ಗೆಲುವಿನ ಸವಿ ನೆನಪಿಗಾಗಿ ಪಿಚ್​ನ ಮಣ್ಣು ತಿಂದ ರೋಹಿತ್​; ವಿಡಿಯೊ ವೈರಲ್​

swim benefits
ಆರೋಗ್ಯ50 mins ago

Swim Benefits: ನಿತ್ಯವೂ ಈಜಿದರೆ ಸಾಕು; ಇದಕ್ಕಿಂತ ದೊಡ್ಡ ಬೇರೆ ವ್ಯಾಯಾಮ ಇನ್ನೊಂದು ಬೇಡ!

T20 World Cup 2024
ಕ್ರಿಕೆಟ್51 mins ago

T20 World Cup 2024: ಟಿ20 ವಿಶ್ವಕಪ್​ ಮುಡಿಗೇರಿಸಿಕೊಂಡ ಭಾರತ; ರಾಜ್ಯದ ವಿವಿಧೆಡೆ ಸಂಭ್ರಮಾಚರಣೆ ಹೀಗಿತ್ತು

tamanna bhatia gold
ಸಿನಿಮಾ1 hour ago

Actress Tamanna Bhatia: ಬೆಂಗಳೂರಿನ ಶಾಲೆಯಲ್ಲಿ ನಟಿ ತಮನ್ನಾ ಭಾಟಿಯಾ ಬಗ್ಗೆ ಪಾಠ; ಪೋಷಕರ ಆಕ್ಷೇಪ

Viral Video
Latest1 hour ago

Viral Video: ಮನೆಯ ಹೊರಗೆ ತಾಯಿಯ ಜೊತೆ ಆಡುತ್ತಿದ್ದ ಮಗುವಿನ ಮೇಲೆ ಕಾರು ಹತ್ತಿಸಿದ ಚಾಲಕ!

Parenting Tips
ಶಿಕ್ಷಣ1 hour ago

Parenting Tips: ಕಾಲೇಜಿಗೆ ಹೊರಡಲು ಸಿದ್ಧವಾಗಿರುವ ಮಕ್ಕಳಿಗೆ ಪೋಷಕರು ತಿಳಿಸಲೇಬೇಕಾದ ಸಂಗತಿಗಳಿವು!

ದಶಮುಖ back to school
ಅಂಕಣ2 hours ago

ದಶಮುಖ ಅಂಕಣ: ಮಳೆಯ ನಡುವೆ ಮರಳಿ ಶಾಲೆಗೆ!

T20 World Cup 2024
ಪ್ರಮುಖ ಸುದ್ದಿ2 hours ago

T20 World Cup 2024 : ಗೆಲುವಿನ ಸಂಭ್ರಮದಲ್ಲಿ ಪಾಂಡ್ಯ ಕೆನ್ನೆಗೆ ಮುತ್ತಿಟ್ಟ ನಾಯಕ ರೋಹಿತ್; ಇಲ್ಲಿದೆ ವಿಡಿಯೊ

Railway Rules
Latest2 hours ago

Railway Rules: ರೈಲು ಪ್ರಯಾಣಿಕರು ತಿಳಿದುಕೊಳ್ಳಲೇಬೇಕಾದ ನಿಯಮಗಳು

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ16 hours ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ22 hours ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ2 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ3 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು3 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ3 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ6 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

ಟ್ರೆಂಡಿಂಗ್‌