Oscitation | ಆಕಳಿಕೆ ಅತಿಯಾದರೆ ತೊಂದರೆಯೆ? - Vistara News

ಆರೋಗ್ಯ

Oscitation | ಆಕಳಿಕೆ ಅತಿಯಾದರೆ ತೊಂದರೆಯೆ?

ಆಕಳಿಕೆ (oscitation) ಬರುವುದಕ್ಕೆ ಇಂಥದ್ದೇ ಎಂಬ ನಿಖರ ಕಾರಣ ಹೇಳಲಾಗದು. ಆಕಳಿಕೆ ಹೆಚ್ಚಾದರೆ ಏನು ಮಾಡಬೇಕು? ಇಲ್ಲಿದೆ ಮಾಹಿತಿ

VISTARANEWS.COM


on

Oscitation
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಯಾವುದೋ ಕೆಲಸ ಮಾಡುತ್ತಿದ್ದೀರಿ ಅಥವಾ ಪುಸ್ತಕ ಓದುತ್ತಿದ್ದೀರಿ ಇಲ್ಲವೇ ಟಿವಿ ನೋಡುತ್ತಿದ್ದೀರಿ- ಅಂತೂ ಏನೋ ಮಾಡುತ್ತಿದ್ದೀರಿ. ನಿಮ್ಮಷ್ಟಕ್ಕೆ ನೀವು ವ್ಯಸ್ತರಾಗಿದ್ದರೂ ಒಂದೇ ಸಮನೆ (oscitation) ಆಕಳಿಸುತ್ತಿದ್ದೀರೇ? ಬ್ರಹ್ಮಾಂಡವೆಲ್ಲಾ ಕಾಣುವಂತೆ ಬಾಯಿ ಕಳೆದು, ಲೋಕದ ಗಾಳಿಯನ್ನೆಲ್ಲಾ ನೀವೇ ಒಳಗೆಳೆದುಕೊಂಡಂತೆ ಉಸಿರಾಡಿ, ಕಣ್ಣಾಲಿಗಳೆಲ್ಲಾ ತುಂಬಿಸಿಕೊಳ್ಳುತ್ತಿದ್ದೀರಿ. ಇಷ್ಟಾದರೂ ಆಕಳಿಕೆ ನಿಲ್ಲುತ್ತಲೇ ಇಲ್ಲ; ಮಾತ್ರವಲ್ಲ, ಸಾಂಕ್ರಾಮಿಕ ಜಾಡ್ಯದಂತೆ ನಿಮ್ಮ ಸುತ್ತಮುತ್ತಲಿನವರಿಗೂ ಇದನ್ನು ಅಂಟಿಸಿ, ಅವರಿಂದ ಬೈಗುಳದ ಪ್ರಸಾದ ಪಡೆಯುತ್ತಿದ್ದೀರಿ. ಪ್ರತಿಯೊಬ್ಬರ ಅನುಭವದಲ್ಲಿ ಇಂಥವು ಹಲವಾರು ಬಾರಿ ಆಗಿರಲೇಬೇಕು. ಹೀಗೇಕಾಗುತ್ತದೆ?

Oscitation

ಆಕಳಿಕೆ ಬರುವುದಕ್ಕೆ ʻಇಂಥದ್ದೇʼ ಎಂಬ ನಿಖರ ಕಾರಣ ಹೇಳಲಾಗದು. ಯಾವುದಾದರೂ ರೀತಿಯ (ಅಂದರೆ ದೈಹಿಕ, ಮಾನಸಿಕ, ಭಾವನಾತ್ಮಕ) ಆಯಾಸಕ್ಕೆ ನಮ್ಮ ದೇಹ ತೋರಿಸುವ ನೈಸರ್ಗಿಕ ಪ್ರತಿಕ್ರಿಯೆಯಿದು ಎನ್ನುತ್ತಾರೆ ತಜ್ಞರು. ನಿದ್ದೆ ಬರುತ್ತಿದ್ದರೆ, ಸುಸ್ತು-ಆಯಾಸವಾಗಿದ್ದರೆ, ಆತಂಕದಲ್ಲಿದ್ದರೆ, ಕುಳಿತಿರುವ ಮೀಟಿಂಗು ವರ್ಷಾನುಗಟ್ಟಳೆಯಿಂದ ನಡೆಯುತ್ತಿದೆ ಎನ್ನುವಷ್ಟು ಬೋರಾಗಿದ್ದರೆ, ಅಖಂಡ ಒಂದು ತಾಸಿನ ಕ್ಲಾಸು ಮುಗಿದರೆ ಸಾಕು ಎಂಬ ಒತ್ತಡದಲ್ಲಿದ್ದರೆ- ಇಂಥ ಹಲವಾರು ಸನ್ನಿವೇಶಗಳಲ್ಲಿ ಸರಣಿ ಆಕಳಿಕೆ ಆರಂಭವಾಗುತ್ತದೆ. ಕಡೆಗೆ, ಪಟಾಕಿ ಸರಕ್ಕೆ ಬೆಂಕಿ ಹಚ್ಚಿದಂತೆ ಅಕ್ಕಪಕ್ಕದವರಿಗೂ ಅಂಟುತ್ತದೆ.

ಕೆಲವೊಮ್ಮೆ ಚುಟುಕಾಗಿ ಬರುವ ಆಕಳಿಕೆಗಳು ಕೆಲವೊಮ್ಮೆ ದೀರ್ಘವಾಗಿ ಬಂದು, ಸಾರ್ವಜನಿಕ ಸ್ಥಳಗಳಲ್ಲಿ ಇದ್ದರೆ ಮುಜುಗರ ತರಿಸುತ್ತವೆ. ಆಕಳಿಕೆಗಳ ಜೊತೆಗೆ ನುಗ್ಗಿ ಬರುವ ದೀರ್ಘ ಸಶಬ್ದ ನಿಟ್ಟುಸಿರುಗಳಂತೂ ನಿಶ್ಶಬ್ದ ಸಭೆಗಳಲ್ಲಿ ನಮ್ಮನ್ನು ನೇರ ಅಪರಾಧಿ ಸ್ಥಾನದಲ್ಲೇ ನಿಲ್ಲಿಸಿಬಿಡುತ್ತವೆ. ಆಚೀಚಿನವರು ಬೀರುವ ಬಿರು ನೋಟಕ್ಕೆ ಬೆದರಿ, ಬಾಯಿಗೆ ಕೈ ಅಡ್ಡ ಇಟ್ಟು, ಬಾಯೊಳಗೆ ಕರವಸ್ತ್ರ, ದುಪಟ್ಟಾ ತುರುಕಿದರೂ ಆಕಳಿಕೆ ಮಾತ್ರ ನಿಲ್ಲುವುದಿಲ್ಲ. ಹಾಗೆಂದು ಆ ಸ್ಥಳದಿಂದ ಎದ್ದುಬಂದು, ಕೆಲವು ನಿಮಿಷಗಳ ಕಾಲ ನಡೆದಾಡುತ್ತಿದ್ದರೆ, ಆಕಳಿಕೆ ತಾನಾಗಿ ಕಡಿಮೆಯಾಗುತ್ತದೆ.

Oscitation

ಆಕಳಿಕೆ ಅತೀ ಹೆಚ್ಚಾದರೆ?
ಒಮ್ಮೆಮ್ಮೊ ಹೀಗಾದರೆ, ಅದು ಸಾಮಾನ್ಯ. ಆದರೆ ಅತಿಯಾಗಿ ದಿನವಿಡೀ ಆಕಳಿಕೆ ಬರುತ್ತಿದ್ದರೆ ಬೇರೆ ಕಾರಣಗಳೂ ಇರಬಹುದು ಅದಕ್ಕೆ. ದಿನಗಟ್ಟಲೆ ನಿದ್ದೆಗೆಟ್ಟಿದ್ದರೆ, ನಿದ್ರಾಹೀನತೆಯ ಸಮಸ್ಯೆಯಿದ್ದರೆ, ಯಾವುದಾದರೂ ಔಷಧಿಯ ಅಡ್ಡ ಪರಿಣಾಮವಿದ್ದರೆ, ಕುಡಿಯುವ ನೀರು ದೇಹಕ್ಕೆ ಕಡಿಮೆಯಾದರೆ, ಮೈ-ಕೈ ನೋವಿದ್ದರೆ ಅಥವಾ ಶ್ವಾಸಕೋಶಕ್ಕೇನಾದರೂ ತೊಂದರೆ ಆದರೆ, ಹೀಗೆ ಅತಿಯಾದ ಆಕಳಿಕೆ ಕಾಣಿಸಿಕೊಳ್ಳಬಹುದು.

Oscitation

ಯಾವುದಾದರೂ ಔಷಧಗಳು ಹೀಗೆ ಮಂಪರು ಬರಿಸಿ, ಆಕಳಿಕೆ ತರಿಸುತ್ತಿದ್ದರೆ ಈ ಬಗ್ಗೆ ವೈದ್ಯರಲ್ಲಿ ಸಮಾಲೋಚನೆ ಅಗತ್ಯ. ಆ ಔಷಧಿಗಳ ಪ್ರಮಾಣ ಕಡಿತ ಮಾಡುವ ಬಗ್ಗೆಯೂ ವೈದ್ಯರು ಸೂಚಿಸಬಹುದು. ಕೆಲವೊಮ್ಮೆ ಯಕೃತ್ತಿನ ತೊಂದರೆ ಮತ್ತು ನರಗಳ ಸಮಸ್ಯೆಯಿಂದಲೂ ವಿಪರೀತ ಎನ್ನುವಷ್ಟು ಆಕಳಿಕೆ ಬರಬಹುದು. ಹಾಗಾಗಿ, ಸಾಮಾನ್ಯ ಮಟ್ಟಕ್ಕಿಂತ ಅತಿ ಹೆಚ್ಚು ಎನ್ನುವಷ್ಟು ಆಕಳಿಕೆ ಬರುತ್ತಿದ್ದರೆ, ನಮಗೇನೋ ಹೇಳುವುದಕ್ಕೆ ನಮ್ಮ ದೇಹ ಪ್ರಯತ್ನಿಸುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಏನು ಹೇಳುತ್ತಿದೆ ಎಂಬುದನ್ನು ತಿಳಿಯಲು ವೈದ್ಯರ ನೆರವು ಬೇಕಾಗಬಹುದು.

ಇದನ್ನೂ ಓದಿ| Winter Health Care | ಚಳಿಗಾಲದಲ್ಲಿ ಅಜೀರ್ಣ? ಇವು ನೆರವಾಗಬಹುದು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Weight Lose: ಏನೇ ಸರ್ಕಸ್‌ ಮಾಡಿದರೂ ತೂಕ ಇಳಿಯದೇ? ಹಾಗಿದ್ದರೆ ಕಾರಣ ಇದಾಗಿರಬಹುದು!

Weight Lose: ಅನೇಕರು ತಮ್ಮ ತೂಕ ಇಳಿಕೆಯ ಬದಲಾಗಿ ಬಳ್ಳಿಯಂತಾದ ದೇಹವನ್ನು ಬಳುಕಿಸುತ್ತಾ ರೀಲ್ಸ್‌ ಮಾಡಿ ತಮ್ಮ ರಹಸ್ಯಗಳನ್ನು ಹೇಳುತ್ತಿದ್ದರೆ, ಏನೇ ಮಾಡಿದರೂ ತೂಕ ಇಳಿಯದ ಹಠಮಾರಿ ದೇಹ ಕೆಲವರದ್ದು. ನಾನ್ಯಾಕೆ ಏನು ಮಾಡಿದರೂ ತೂಕ ಇಳಿಸಲು ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆ ನಿಮ್ಮಲ್ಲೂ ಕೆಲವರನ್ನು ಕಾಡಿರಬಹುದು. ಈ ಕುರಿತು ಇಲ್ಲಿದೆ ಉತ್ತರ.

VISTARANEWS.COM


on

Weight lose
Koo

ಬಹುತೇಕರ ಜೀವನದಲ್ಲಿರುವ ಮಿಲಿಯನ್‌ ಡಾಲರ್‌ ಪ್ರಶ್ನೆ ಎಂದರೆ ತೂಕ ಇಳಿಸುವುದು ಹೇಗೆ ಎಂಬುದು. ಯಾಕೆಂದರೆ, ಅನೇಕರು, ತಮ್ಮ ತೂಕ ಇಳಿಕೆಯ, ಬದಲಾಗಿ ಬಳುಕುವ ಬಳ್ಳಿಯಂತಾದ ದೇಹವನ್ನು ಬಳುಕಿಸುತ್ತಾ ರೀಲ್ಸ್‌ ಮಾಡಿ ತಮ್ಮ ರಹಸ್ಯಗಳನ್ನು ಹೇಳುತ್ತಿದ್ದರೆ, ಏನೇ ಮಾಡಿದರೂ ತೂಕ ಇಳಿಯದ ಹಠಮಾರಿ ದೇಹ ಕೆಲವರದ್ದು. ನಾನ್ಯಾಕೆ ಏನು ಮಾಡಿದರೂ ತೂಕ ಇಳಿಸಲು ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆ ನಿಮ್ಮಲ್ಲೂ ಕೆಲವರನ್ನು ಕಾಡಿರಬಹುದು. ಯಾಕೆಂದರೆ, ತೂಕ ಇಳಿಸುವುದು ಸುಲಭದ ಕೆಲಸವಲ್ಲ. ಅದಕ್ಕೊಂದು ಶ್ರದ್ಧೆ, ಶಿಸ್ತು ಬೇಕು. ಇವಿಷ್ಟಿದ್ದರೂ, ಅನೇಕರಿಗೆ ತೂಕ ಇಳಿಯದು. ದೇಹದ ಒಂದಿಂಚೂ ಕದಲದು. ಹೀಗಿರುವಾಗ ಯಾಕಿದು ಎಂಬ ಪ್ರಶ್ನೆ ಅವರನ್ನು ಕಾಡುವುದು ಸಹಜವೇ. ಬನ್ನಿ, ಏನೇ ಸರ್ಕಸ್ಸು ಮಾಡಿದರೂ ತೂಕ ಇಳಿಯದೆ ಇರುವ ಮಂದಿ ನೀವಾಗಿದ್ದರೆ, ನಿಮ್ಮ ತೂಕ ಇಳಿಕೆ ಆಗದೆ ಎರುವುದಕ್ಕೆ ಇದೂ ಒಂದು ಕಾರಣವಿರಬಹುದು (Weight Lose) ಎಂಬುದನ್ನು ನೆನಪಿಡಿ.

Sad Curvy Woman Pinching Her Belly on the Bed

ಪೋಷಕಾಂಶಗಳ ಕೊರತೆ

ಪೋಷಕಾಂಶಗಳ ಕೊರತೆಯಾಗಿರಬಹುದು. ಹೌದು. ಪೋಷಕಾಂಶಗಳ ವಿಚಾರದಲ್ಲಿ ನಿಮ್ಮ ದೇಹ ಯಾವುದೇ ಕೊರತೆಯನ್ನು ಅನುಭವಿಸುತ್ತಿದ್ದರೂ ಕೂಡಾ ಅದು ನಿಮ್ಮ ತೂಕ ಇಳಿಕೆಯ ವಿಚಾರದಲ್ಲಿ ಪರಿಣಾಮ ಬೀರುತ್ತದೆ. ವಿಟಮಿನ್‌, ಖನಿಜಾಂಶಗಳು ಅಥವಾ ಯಾವುದೇ ಬಗೆಯ ಪೋಷಕಾಂಶದಲ್ಲಿ ಕೊರತೆ ಇದ್ದರೂ ದೇಹ ಅದನ್ನು ಆ ಜಾಗಕ್ಕೆ ಪಡೆಯಲು ರಕ್ಷಣಾತ್ಮಕವಾಗಿ ಕೆಲಸ ಮಾಡಲು ಆರಂಭಿಸುತ್ತದೆ. ಹಾಗಾಗಿ ಮೊದಲು, ಯಾವುದರ ಕೊರತೆಯಿದೆಯೋ ಅದರ ಮೇಲೆ ಗಮನ ಹರಿಸಿ. ನಂತರ ತೂಕ ಇಳಿಸುವ ಕ್ರಮಗಳನ್ನು ಶಿಸ್ತಾಗಿ ಪಾಲಿಸಿ.

ಡಯಟ್‌ ಮುಖ್ಯ

ಯಾವಾಗಲೂ, ವ್ಯಾಯಾಮಕ್ಕಿಂತಲೂ ತೂಕ ಇಳಿಕೆಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುವುದು ಡಯಟ್‌. ನೀವೇನು ತಿನ್ನುತ್ತೀರಿ ಎಂಬುದು ಅತ್ಯಂತ ಹೆಚ್ಚು ಮುಖ್ಯವಾಗುತ್ತದೆ. ತೂಕ ಇಳಿಸಲು ನಿಮ್ಮ ಡಯಟ್‌ ಶೇ.80ರಷ್ಟು ಪಾತ್ರ ವಹಿಸಿದರೆ, ವ್ಯಾಯಾಮದ ಪಾತ್ರ ಶೇ.20 ಮಾತ್ರ. ಹಾಗಾಗಿ, ನಿಮ್ಮ ದೇಹ ಯಾವ ಬಗೆಯದ್ದು ಎಂಬುದರ ಮೇಲೆ ನಿಮ್ಮ ಎಲ್ಲವೂ ಅವಲಂಬಿತವಾಗಿರಲಿ. ಆಯುರ್ವೇದದ ಪ್ರಕಾರ, ವಾತ, ಪಿತ್ತ ಹಾಗೂ ಕಫ ಪ್ರಕೃತಿಯೆಂಬ ತ್ರಿದೋಷದ ಆಧಾರದಲ್ಲಿ ನಿಮ್ಮ ದೇಹ ಯಾವ ಪ್ರಕೃತಿಯದ್ದು ಎಂಬುದು ನಿಮಗೆ ಗೊತ್ತಿರಲಿ. ಅದಕ್ಕೆ ಸೂಕ್ತವಾದ ಆಹಾರಕ್ರಮವಿರಲಿ. ಅಷ್ಟೇ ಅಲ್ಲ, ಸಿಹಿ, ಕುರುಕಲು ತಿನಿಸು, ಹೆಚ್ಚು ಉಪ್ಪಿನ ಪ್ಯಾಕೇಜ್ಡ್‌ ಆಹಾರಗಳಿಂದ ದೂರವಿರಿ.

ಇದನ್ನೂ ಓದಿ: Ways to Prevent Gray Hair: 30 ದಾಟುವ ಮೊದಲೇ ಕೂದಲು ಬೆಳ್ಳಗಾಗುತ್ತಿದೆಯೇ? ಇದಕ್ಕಿದೆ ಸರಳ ಪರಿಹಾರ

ಜೀರ್ಣವ್ಯವಸ್ಥೆಯ ಮೇಲೆ ಗಮನ ಕೊಡಿ

ಜೀರ್ಣವ್ಯವಸ್ಥೆಯ ಮೇಲೆ ಗಮನ ಕೊಡಿ. ನೀವೆಷ್ಟೇ ಪ್ರಯತ್ನಪಟ್ಟರೂ ತೂಕ ಇಳಿಯುತ್ತಿಲ್ಲ ಎಂದರೆ, ಇದೂ ಒಂದು ಕಾರಣವಾಗಬಹುದು. ನಮ್ಮ ದೇಹವು ಬೆವರು, ಮೂತ್ರ ಹಾಗೂ ಮಲದ ಮೂಲಕ ದೇಹದಲ್ಲಿ ಬೇಡವಾದ ಕಶ್ಮಲಗಳನ್ನು ಹೊರಕ್ಕೆ ಕಳುಹಿಸುತ್ತದೆ. ನಿತ್ಯವೂ ಇವೆಲ್ಲ ಸರಿಯಾಗಿ ಆಗುತ್ತಿದ್ದರೆ ಆರೋಗ್ಯ ಸರಿಯಾಗಿರುತ್ತದೆ. ಆದರೆ ದೇಹದಲ್ಲಿ ಜೀರ್ಣಾಂಗ ವ್ಯವಸ್ಥೆ ಅಥವಾ, ಕರುಳು ಬ್ಲಾಕ್‌ ಆಗಿದ್ದರೆ, ಈ ಕಶ್ಮಲಗಳೆಲ್ಲ ದೇಹದೊಳಗೇ ಅಲ್ಲಲ್ಲಿ ಉಳಿದುಬಿಟ್ಟು ದೇಹದ ಇಡಿಯ ವ್ಯವಸ್ಥೆಯ ಮೇಲೆಯೇ ಪರಿಣಾಮ ಬೀರುತ್ತದೆ. ಇದರಿಂದ ತೂಕ ಇಳಿಕೆಯ ಮೇಲೂ ಅಡ್ಡ ಪರಿಣಾಮ ಬೀರುತ್ತದೆ. ನೀವು ಅಂದುಕೊಂಡ ಹಾಗೆ ತೂಕ ಇಳಿಸಲು ಸಾಧ್ಯವಾಗುವುದಿಲ್ಲ.

Continue Reading

ಆರೋಗ್ಯ

World Hepatitis Day: ಏನಿದು ಹೆಪಟೈಟಿಸ್‌? ಇದು ಏಕೆ ಅಪಾಯಕಾರಿ?

World Hepatitis Day: ಪ್ರತಿ ವರ್ಷ ಜುಲೈ 28ರಂದು ವಿಶ್ವ ಹೆಪಟೈಟಿಸ್‌ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿಯ ಘೋಷವಾಕ್ಯ “ಕ್ರಿಯಾಶೀಲರಾಗುವ ಹೊತ್ತಿದು”. ಈ ರೋಗದ ಕುರಿತು ಜಾಗೃತಿ ಹೆಚ್ಚಿಸಿ, ಈ ಕುರಿತಾದ ತಪಾಸಣೆ ಮತ್ತು ತಡೆಯನ್ನು ವ್ಯಾಪಕಗೊಳಿಸುವುದು ಇದರ ಉದ್ದೇಶ. ಈ ಕುರಿತ ಲೇಖನ ಇಲ್ಲಿದೆ.

VISTARANEWS.COM


on

World Hepatitis Day
Koo

ವೈರಲ್‌ ಹೆಪಟೈಟಿಸ್‌ ರೋಗವನ್ನು (World Hepatitis Day) ಇಂದಿಗೂ ʻಸೈಲೆಂಟ್‌ ಕಿಲ್ಲರ್‌ʼ ಎಂದೇ ಕರೆಯಲಾಗುತ್ತದೆ. ಈ ರೋಗದ ಕುರಿತು ಜಾಗೃತಿ ಹೆಚ್ಚಿಸಿ, ಈ ಕುರಿತಾದ ತಪಾಸಣೆ ಮತ್ತು ತಡೆಯನ್ನು ವ್ಯಾಪಕಗೊಳಿಸುವ ಉದ್ದೇಶದಿಂದ, ಜುಲೈ ತಿಂಗಳ 28ನೇ ದಿನವನ್ನು ವಿಶ್ವ ಹೆಪಟೈಟಿಸ್‌ ದಿನವನ್ನಾಗಿ ಆಚರಿಸಲಾಗುತ್ತದೆ. ಇಂದೇ ಈ ದಿನವನ್ನು ಗುರುತಿಸುವುದಕ್ಕೂ ಕಾರಣವಿದೆ. ನೊಬೆಲ್‌ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಡಾ. ಬರೂಕ್‌ ಬ್ಯೂಮ್‌ಬರ್ಗ್‌ ಅವರ ಜನ್ಮದಿನ. ಹೆಪಟೈಟಿಸ್‌ ಬಿ ವೈರಸ್‌ ಪತ್ತೆ ಮಾಡಿ, ಈ ವೈರಸ್‌ಗೆ ಲಸಿಕೆಯನ್ನು ತಯಾರಿಸಿದವರಾತ.

World Hepatitis Day

ಏನಿದು ಹೆಪಟೈಟಿಸ್‌?

ಹೀಗೆಂದರೆ ಯಕೃತ್ತಿನ ಉರಿಯೂತ. ಇದರಿಂದಾಗಿ ತನ್ನ ಕೆಲಸವನ್ನು ಸರಿಯಾಗಿ ಮಾಡುವುದಕ್ಕೆ ಯಕೃತ್ತಿಗೆ ಸಾಧ್ಯವಾಗುವುದಿಲ್ಲ. ಸರಿಯಾದ ಸಮಯದಲ್ಲಿ ಇದನ್ನು ಪತ್ತೆ ಹಚ್ಚಿ ಚಿಕಿತ್ಸೆ ಪಡೆಯದಿದ್ದರೆ ಜೀವಕ್ಕೂ ಆಪತ್ತು ಬರುತ್ತದೆ. ಮಾತ್ರವಲ್ಲ, ಯಕೃತ್ತಿನ ವೈಫಲ್ಯ ಅಥವಾ ಯಕೃತ್‌ ಕ್ಯಾನ್ಸರ್‌ಗೂ ಕಾರಣವಾಗಬಹುದು. ಯಕೃತ್ತಿನ ಸ್ಥಿತಿ ಹೀಗಾಗುವುದಕ್ಕೆ ಹಲವಾರು ಕಾರಣಗಳಿವೆ. ವೈರಸ್‌ ಸೋಂಕು, ಮದ್ಯಪಾನ, ಕೆಲವು ಔಷಧಿಗಳು, ವಿಷಕಾರಿ ರಾಸಾಯನಿಕಗಳು, ಆಟೋಇಮ್ಯೂನ್‌ ರೋಗ, ಕಲುಷಿತ ಆಹಾರದಂಥ ಯಾವುದೇ ಕಾರಣಗಳಿಂದ ಹೆಪಟೈಟಿಸ್‌ ಉಂಟಾಗಬಹುದು. ಆದರೆ ವೈರಸ್‌ಗಳಿಂದ ಹೆಪಟೈಟಿಸ್‌ಗಳು ಬರುವ ಸಾಧ್ಯತೆ ದಟ್ಟವಾಗಿದೆ.

ಲಕ್ಷಣಗಳೇನು?

ಆಯಾಸ, ಸುಸ್ತು, ಚರ್ಮ ಮತ್ತು ಕಣ್ಣು ಹಳದಿಯಾಗುವುದು (ಕಾಮಾಲೆ), ಕಿಬ್ಬೊಟ್ಟೆಯಲ್ಲಿ ನೋವು, ಹೊಟ್ಟೆ ತೊಳೆಸುವುದು ಮತ್ತು ವಾಂತಿ, ಹಸಿವಿಲ್ಲದಿರುವುದು, ತೂಕ ಇಳಿಯುವುದು, ಗಾಢ ಬಣ್ಣದ ಮೂತ್ರ, ಕೀಲುಗಳಲ್ಲಿ ನೋವು ಮತ್ತು ಜ್ವರ ಸಾಮಾನ್ಯವಾಗಿ ಕಂಡುಬರುತ್ತವೆ. ವೈದ್ಯರ ತಪಾಸಣೆಗಳು ಮತ್ತು ರಕ್ತಮಾದರಿಯ ಪರೀಕ್ಷೆಯಿಂದ ಈ ಸಮಸ್ಯೆಯನ್ನು ಪತ್ತೆ ಹಚ್ಚಬಹುದು. ಆದರೆ ಸಮಸ್ಯೆ ತೀವ್ರವಾಗಿದ್ದಲ್ಲಿ, ಯಕೃತ್ತಿನ ಬಯಾಪ್ಸಿಯನ್ನು ಮಾಡಬೇಕಾಗಬಹುದು. ವೈರಲ್‌ ಹೆಪಟೈಟಿಸ್‌ನಲ್ಲೂ ಹಲವಾರು ರೀತಿಯಿದೆ. ಹೆಪಟೈಟಿಸ್‌ ಎ, ಬಿ, ಸಿ, ಡಿ, ಇ ಎಂದು ಅವುಗಳನ್ನು ಗುರುತಿಸಲಾಗಿದ್ದು, ಒಂದೊಂದೂ ಭಿನ್ನ ರೀತಿಯಲ್ಲಿ ಒಬ್ಬರಿಂದೊಬ್ಬರಿಗೆ ಹರಡುತ್ತದೆ. ಆದರೆ ಲಕ್ಷಣಗಳಲ್ಲಿ ಬಹಳಷ್ಟು ಸಾಮ್ಯತೆಯಿದೆ. ಹೆಪಟೈಟಿಸ್‌ ಬಿ ಮತ್ತು ಸಿ ನಲ್ಲಿ ಪ್ರಾರಂಭಿಕ ಹಂತಗಳಲ್ಲಿ ಹೆಚ್ಚಿನ ಲಕ್ಷಣಗಳೇನೂ ಗೋಚರಿಸುವುದಿಲ್ಲ. ಆದರೆ ಮುಂದುವರಿದ ಹಂತಗಳಲ್ಲಿ ಚಿಕಿತ್ಸೆ ಸಫಲವಾಗದಿದ್ದರೆ, ಪ್ರಾಣಾಪಾಯಕ್ಕೆ ದಾರಿಯಾಗುತ್ತದೆ.

What is hepatitis

ಮುನ್ನೆಚ್ಚರಿಕೆ

ಮಳೆಗಾಲದ ದಿನಗಳಲ್ಲಿ ಹೊರಗಿನ ಮಲಿನ ಆಹಾರಗಳು ಇಂಥ ರೋಗಗಳಿಗೆ ರಹದಾರಿ ನೀಡುತ್ತವೆ. ಅದರಲ್ಲೂ ಮುಖ್ಯವಾಗಿ, ನೀರು ಮತ್ತು ಆಹಾರದ ಶುದ್ಧತೆಯ ಬಗ್ಗೆ ಎಚ್ಚರ ವಹಿಸುವುದು ಅಗತ್ಯ. ಅಸುರಕ್ಷಿತ ಲೈಂಗಿಕ ಸಂಪರ್ಕ ಎಂದರೆ ಅಪಾಯಕ್ಕೆ ಆಹ್ವಾನವಿತ್ತಂತೆ. ಕ್ಷೌರದಂಗಡಿಗಳಲ್ಲಿ ಖಾಸಗಿ ವಸ್ತುಗಳನ್ನು ಬಳಸಿಕೊಳ್ಳಿ, ಅಂಗಡಿಯ ಸಾರ್ವಜನಿಕ ವಸ್ತುಗಳು ಬೇಡ. ಸೂಜಿ, ಸಿರಿಂಜ್‌ ಮುಂತಾದ ವೈದ್ಯಕೀಯ ವಸ್ತುಗಳನ್ನು ಸಂಪೂರ್ಣ ಸ್ಟೆರಿಲೈಜ್‌ ಮಾಡಿ ಅಥವಾ ಹೊಸದನ್ನೇ ಬಳಸಿ. ರಕ್ತದಾನ ಪಡೆಯಬೇಕಾದರೆ ನೋಂದಾಯಿತ ರಕ್ತನಿಧಿಗಳನ್ನೇ ಸಂಪರ್ಕಿಸಿ. ಯಾವುದೇ ವೈದ್ಯಕೀಯ ಪ್ರಕ್ರಿಯೆಗಳಿಗೆ ಒಳಗಾಗಬೇಕಾದರೆ ನೋಂದಾಯಿತ ವೈದ್ಯರು ಮತ್ತು ಆಸ್ಪತ್ರೆಗಳಿಗೇ ಭೇಟಿ ನೀಡಿ. ಆಲ್ಕೋಹಾಲ್‌ ಸೇವನೆಯ ಮೇಲೆ ನಿಯಂತ್ರಣ ಅತೀ ಅಗತ್ಯ. ಇಲ್ಲದಿದ್ದರೆ ಯಕೃತ್ತಿನ ಆರೋಗ್ಯಕ್ಕೆ ಕೊಡಲಿಯೇಟು ನಿಶ್ಚಿತ. ಯಾವ ಹೆಪಟೈಟಿಸ್‌ಗಳು ಹೇಗೆ ಹರಡುತ್ತವೆ ಎಂಬುದನ್ನು ನೋಡೋಣ.

ಹೆಪಟೈಟಿಸ್‌ ಎ

ಇದು ಸಾಮಾನ್ಯವಾಗಿ ಬರುವುದು ಕಲುಷಿತ ನೀರು ಮತ್ತು ಆಹಾರದಿಂದ. ಜಾಂಡೀಸ್‌ ಹೆಸರಿನಲ್ಲಿ ಈ ಕಾಯಿಲೆ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತದೆ. ಸೂಕ್ತ ಚಿಕಿತ್ಸೆ, ಆಹಾರ ಮತ್ತು ವಿಶ್ರಾಂತಿಯಿಂದ ಇದನ್ನು ಸಂಪೂರ್ಣ ಗುಣಪಡಿಸಿಕೊಳ್ಳಬಹುದು. ಇದಕ್ಕೆ ಲಸಿಕೆಯಿದೆ.

hepatitis c

ಹೆಪಟೈಟಿಸ್‌ ಬಿ

ಇದು ಸಾಮಾನ್ಯವಾಗಿ ರಕ್ತ, ಎಂಜಲು, ವೀರ್ಯಗಳಂಥ ದೇಹದ ದ್ರವಗಳಿಂದ ಹರಡುವಂಥದ್ದು. ತೀವ್ರ ಉರಿಯೂತ ಉಂಟುಮಾಡುವ ಈ ರೋಗದ ವಿರುದ್ಧ ನವಜಾತ ಶಿಶುಗಳಿಗೆ ಲಸಿಕೆ ನೀಡಲಾಗುತ್ತದೆ.

ಹೆಪಟೈಟಿಸ್‌ ಸಿ

ವೈದ್ಯಕೀಯ ಬಳಕೆಯ ವಸ್ತುಗಳನ್ನು (ಸೂಜಿ, ಸಿರಿಂಜ್‌ ಇತ್ಯಾದಿ) ಸರಿಯಾಗಿ ಶುಚಿ ಮಾಡದಿದ್ದಾಗ, ಅಸುರಕ್ಷಿತ ಲೈಂಗಿಕ ಸಂಪರ್ಕ, ರಕ್ತಪೂರಣದ ಸಂದರ್ಭದಲ್ಲಿ, ತಾಯಿಯಿಂದ ನವಜಾತ ಶಿಶುವಿಗೆ ಈ ವೈರಸ್‌ ವರ್ಗಾವಣೆಯಾಗುತ್ತದೆ.

hepatitis d

ಹೆಪಟೈಟಿಸ್‌ ಡಿ

ಈಗಾಗಲೇ ಹೆಪಟೈಟಿಸ್‌ ಬಿ ಸೋಂಕಿನಿಂದ ಬಳಲುತ್ತಿರುವವರಿಗೆ ಹೆಪಟೈಟಿಸ್‌ ಡಿ ಬಾಧೆ ಬರಬಹುದು. ಇದೂ ಸಹ ದೇಹದ ದ್ರವಗಳಿಂದಲೇ ಹರಡುವಂಥದ್ದು. ಇದಕ್ಕೆಂದೇ ಪ್ರತ್ಯೇಕ ಲಸಿಕೆ ಅಥವಾ ಚಿಕಿತ್ಸಾ ವಿಧಾನವಿಲ್ಲ. ಆದರೆ ದೀರ್ಘ ಕಾಲದವರೆಗೆ ಲಕ್ಷಣಾಧಾರಿತ ಚಿಕಿತ್ಸೆಯನ್ನು ವೈದ್ಯರು ನೀಡಬಹುದು.

ಇದನ್ನೂ ಓದಿ: Home Remedies for Dengue: ಡೆಂಗ್ಯು ಜ್ವರ ಬಂದರೂ ಪ್ಲೇಟ್‌ಲೆಟ್‌ ಸಂಖ್ಯೆ ಕುಸಿಯದಿರಲು ಯಾವ ಆಹಾರ ಸೇವಿಸಬೇಕು?

ಹೆಪಟೈಟಿಸ್‌ ಇ

ಇದಕ್ಕೂ ಪ್ರತ್ಯೇಕ ಲಸಿಕೆಯಿಲ್ಲ. ಕಲುಷಿತ ಆಹಾರ ಮತ್ತು ನೀರಿನಿಂದಲೇ ಈ ವೈರಸ್‌ ಹರಡುತ್ತದೆ. ಇದಕ್ಕೆ ಆಂಟಿವೈರಲ್‌ ಔಷಧಗಳಿಂದ ವೈದ್ಯರು ಚಿಕಿತ್ಸೆ ನೀಡುತ್ತಾರೆ.

Continue Reading

ಆರೋಗ್ಯ

Ways to Prevent Gray Hair: 30 ದಾಟುವ ಮೊದಲೇ ಕೂದಲು ಬೆಳ್ಳಗಾಗುತ್ತಿದೆಯೇ? ಇದಕ್ಕಿದೆ ಸರಳ ಪರಿಹಾರ

Ways to Prevent Gray Hair: ಮೂವತ್ತು ವರ್ಷವಾಗುವ ಮೊದಲೇ ಅಲ್ಲಲ್ಲಿ ಇಣುಕುವ ಬಿಳಿಕೂದಲು, ಮೂವತ್ತು ದಾಟುತ್ತಿದ್ದಂತೆಯೇ ದುಪ್ಪಟ್ಟಾಗುತ್ತದೆ. ನಾಲ್ಕೈದು ವರ್ಷಗಳೊಳಗಾಗಿ, ತಲೆಯ ಅರ್ಧಕ್ಕಿಂತ ಹೆಚ್ಚು ಕೂದಲು ಬೆಳ್ಳಗಾಗಿರುತ್ತದೆ. ಸಾಲ್ಟ್‌ ಅಂಡ್‌ ಪೆಪ್ಪರ್‌ ಲುಕ್‌ ಎಂದು ಹೇಳಿಕೊಂಡು ಟ್ರೆಂಡ್‌ ಜೊತೆ ಫ್ಯಾಷನ್‌ ಹೆಸರಿನಲ್ಲಿ ಸುತ್ತಾಡಿದರೂ, ಆತ್ಮವಿಶ್ವಾಸಕ್ಕೆ ಅಲ್ಲಿ ಸಣ್ಣ ಪೆಟ್ಟು ಬಿದ್ದಿರುತ್ತದೆ. ಇದ್ಕಕೇನು ಪರಿಹಾರ? ಈ ಲೇಖನ ಓದಿ.

VISTARANEWS.COM


on

The woman shows gray hair on her head. Hair with fragments of gray hair, hair roots requiring dyeing
Koo

ಸದ್ಯದ ಯುವಜನರನ್ನು ಕಾಡುವ ಬಹುದೊಡ್ಡ ಸಮಸ್ಯೆ ಎಂದರೆ, ಸಣ್ಣ ವಯಸ್ಸಿನಲ್ಲಿಯೇ ಕೂದಲು ಹಣ್ಣಾಗುವುದು. ಮೂವತ್ತು ವರ್ಷವಾಗುವ ಮೊದಲೇ ಅಲ್ಲಲ್ಲಿ ಇಣುಕುವ ಬಿಳಿಕೂದಲು, ಮೂವತ್ತು ದಾಟುತ್ತಿದ್ದಂತೆಯೇ ದುಪ್ಪಟ್ಟಾಗುತ್ತದೆ. ನಾಲ್ಕೈದು ವರ್ಷಗಳೊಳಗಾಗಿ, ತಲೆಯ ಅರ್ಧಕ್ಕಿಂತ ಹೆಚ್ಚು ಕೂದಲು ಬೆಳ್ಳಗಾಗಿರುತ್ತದೆ. ಸಾಲ್ಟ್‌ ಅಂಡ್‌ ಪೆಪ್ಪರ್‌ ಲುಕ್‌ ಎಂದು ಹೇಳಿಕೊಂಡು ಟ್ರೆಂಡ್‌ ಜೊತೆ ಫ್ಯಾಷನ್‌ ಹೆಸರಿನಲ್ಲಿ ಸುತ್ತಾಡಿದರೂ, ಆತ್ಮವಿಶ್ವಾಸಕ್ಕೆ ಅಲ್ಲಿ ಸಣ್ಣ ಪೆಟ್ಟು ಬಿದ್ದಿರುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಬಗೆಬಗೆಯ ಬಣ್ಣಗಳ ಸಹಾಯದಿಂದ ಕಾಲಕ್ಕೆ ತಕ್ಕಂತೆ ಕೂದಲ ಶೃಂಗಾರ ಮಾಡಿಸಿಕೊಂಡರೂ, ಕೃತಕ ರಸಾಯನಿಕಗಳನ್ನು ಪದೇ ಪದೇ ಕೂದಲಿಗೆ ಸೋಕಿಸಿಕೊಳ್ಲೂವ ಕಾರಣದಿಂದಲೋ, ಆಗಾಗ ಪಾರ್ಲರಿಗೆ ಎಡತಾಕಿ ಕೂದಲ ಮೇಲೆ ವಿಪರೀತ ರಾಸಾಯನಿಕಗಳ ಬಳಕೆಯಿಂದಲೋ, ಕೂದಲು (Ways to Prevent Gray Hair) ಇನ್ನಷ್ಟು ಹದಗೆಡುತ್ತದೆ. ಸಮಸ್ಯೆ ವಿಕೋಪಕ್ಕೆ ಹೋಗುತ್ತದೆ.

Ways to Prevent Gray Hair

ಎಲ್ಲ ಸಮಸ್ಯೆಗಳಿಗೂ ಉತ್ತರವಿದೆ

ಪ್ರಕೃತಿಯಲ್ಲಿ ನಮ್ಮ ಎಲ್ಲ ಸಮಸ್ಯೆಗಳಿಗೂ ಉತ್ತರವಿದೆ. ಆದರೆ, ಅವನ್ನು ನಿಯಮಿತವಾಗಿ ಬಳಸುವ ತಾಳ್ಮೆ ನಮಗೆ ಇರಬೇಕು ಅಷ್ಟೇ. ಜೊತೆಗೆ ಪ್ರಕೃತಿಗೆ ವಿರುದ್ಧವಾಗಿ ಹೋಗದೆ, ಪ್ರಕೃತಿದತ್ತ ವಿಧಾನಗಳನ್ನು ಅಪ್ಪಿಕೊಂಡರೆ ಸಮಸ್ಯೆಗಳು, ಅಡ್ಡ ಪರಿಣಾಮಗಳು ಇರದು. ಬನ್ನಿ, ಯಾವೆಲ್ಲ ಆಹಾರಗಳ ಸೇವನೆಯಿಂದ, ಸಣ್ಣ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುವುದರಿಂದ ಪಾರಾಗಬಹುದು ಎಂಬುದನ್ನು ನೋಡೋಣ.

The vitamin C content in it strengthens the immune system Gooseberry Benefits

ನೆಲ್ಲಿಕಾಯಿ

ನೆಲ್ಲಿಕಾಯಿಯ ಆರೋಗ್ಯದ ಲಾಭಗಳು ನಮಗೆಲ್ಲರಿಗೂ ಗೊತ್ತು. ಹೆಚ್ಚು ಸಿ ವಿಟಮಿನ್‌ ಇರುವ ಆಹಾರಗಳ ಪೈಕಿ ನೆಲ್ಲಿಕಾಯಿಗೆ ಅಗ್ರಸ್ಥಾನ. ನೆಲ್ಲಿಕಾಯಿಯ ಸೇವನೆಯಿಂದ ನಮ್ಮ ಕೂದಲ ಆರೋಗ್ಯಕ್ಕೂ ಲಾಭಗಳಿವೆ. ಕೂದಲ ನೈಸರ್ಗಿಕ ಪಿಗ್‌ಮೆಂಟ್‌ಗಳನ್ನು ಹಾಗೆಯೇ ಇರಿಸಲು ಸಹಾಯ ಮಾಡುವ ಆಹಾರವಿದು. ಬೆಳಗ್ಗೆ ನಿತ್ಯವೂ 15 ಎಂಎಲ್‌ನಷ್ಟು ನೆಲ್ಲಿಕಾಯಿ ಜ್ಯೂಸ್‌ ಕುಡಿಯುವುದರಿಂದ ಕೂದಲ ಆರೋಗ್ಯದಲ್ಲಿ ಗಣನೀಯ ಲಾಭ ಕಾಣಬಹುದು.

ಕಾಲೊಂಜಿ ಬೀಜಗಳು

ಕಪ್ಪನೆಯ ಕಾಲೊಂಜಿ ಬೀಜಗಳಿಂದ ಕೂದಲ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ. ಇದು ಕೂದಲ ಬುಡದಲ್ಲಿ ರಕ್ತ ಪರಿಚಲನೆಯನ್ನು ಉದ್ದೀಪಿಸುತ್ತದೆ. ಅಷ್ಟೇ ಅಲ್ಲ, ಕೂದಲು ಬೆಳ್ಳಗಾಗುವುದನ್ನೂ ಮುಂದೂಡುತ್ತದೆ. ವಾರಕ್ಕೆರಡು ಬಾರಿ ಕಾಲೊಂಜಿ ಬೀಜಗಳ ಮಾಸ್ಕ್‌ ಮಾಡಿ ಕೂದಲಿಗೆ ಹಚ್ಚುವ ಮೂಲಕ ಉತ್ತಮ ಲಾಭ ಪಡೆಯಬಹುದು.

Neem Leaves Medicinal Leaves

ಕರಿಬೇವು

ಕರಿಬೇವು ಕೂದಲಲ್ಲಿ ಮೆಲನಿನ್‌ ಉತ್ಪಾದನೆಯನ್ನು ಪ್ರಚೋದಿಸುವ ಕಾರಣ ಕೂದಲು ಕಪ್ಪಾಗಿಡುವಲ್ಲಿ ಸಹಾಯ ಮಾಡುತ್ತದೆ. ಬಾಲನೆರೆಯಂತಹ ಸಮಸ್ಯೆಯಿದ್ದರೆ ಖಂಡಿತವಾಗಿಯೂ ಕರಿಬೇವು ರಾಮಬಾಣ. ಇದು ಬಹುಬೇಗನೆ ಕೂದಲು ಬೆಳ್ಳಗಾಗುವುದನ್ನೂ ತಡೆಯುತ್ತದೆ. ಇದರ ಸೇವನೆ, ಕರಿಬೇವಿನ ಎಣ್ಣೆಯಿಂದಲೂ ಲಾಭ ಪಡೆಯಬಹುದು. ನಿತ್ಯವೂ ಮೂರ್ನಾಲ್ಕು ಕರಿಬೇವನ್ನು ಹಾಗೆಯೇ ಸೇಔಇಸುವ ಮೂಲಕವೂ ಲಾಭ ಪಡೆಯಬಹುದು.

ಗೋಧಿಹುಲ್ಲು

ಕೂದಲಿಗೆ ಗೋಧಿ ಹುಲ್ಲೂ ಅತ್ಯಂತ ಒಳ್ಳೆಯದು. ಇದು ಕೂದಲ ಬುಡಕ್ಕೆ ಪೋಷಣೆ ನೀಡುತ್ತದೆ. ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕುತ್ತದೆ. ಬೆಳಗ್ಗೆದ್ದ ಕೂಡಲೇ ಗೋಧಿಹುಲ್ಲಿನ ಜ್ಯೂಸ್‌ ಕುಡಿಯುವ ಮೂಲಕ ಇದರ ಲಾಭ ಪಡೆಯಬಹುದು.

Black Sesame Seeds Black Foods

ಕರಿಎಳ್ಳು

ಕೂದಲ ಆರೋಗ್ಯಕ್ಕೆ ಕರಿಎಳ್ಳು ಉತ್ತಮ ಆಹಾರ. ಎಳ್ಳಿನ ಸೇವನೆಯಿಂದ ಕೂದಲು ಬೆಳ್ಳಾಗುಗುವುದು ನಿಧಾನವಾಗುತ್ತದೆ. ನಿತ್ಯವೂ ಒಂದು ಚಮಚ ಕರಿಎಳ್ಳು ಸೇವನೆ ಮಾಡುವುದರಿಂದ ಹಾಗೂ ಆಗಾಗ ಎಳ್ಳೆಣ್ಣೆಯನ್ನು ಕೂದಲಿಗೆ ಹಚ್ಚಿ ಮಸಾಜ್‌ ಮಾಡುವ ಮೂಲಕ ಇದರ ಲಾಭ ಪಡೆಯಬಹುದು.

Continue Reading

ಆರೋಗ್ಯ

Vaccine for HIV: ವರ್ಷಕ್ಕೆರಡು ಬಾರಿ ಈ ಇಂಜೆಕ್ಷನ್‌ ತೆಗೆದುಕೊಂಡರೆ ಎಚ್‌ಐವಿ ಭಯವೇ ಬೇಡ!

Vaccin for Hiv: ಪ್ರಯೋಗದಲ್ಲಿರುವ ಚುಚ್ಚುಮದ್ದೊಂದು ಎಚ್‌ಐವಿ ಸೋಂಕು ಅಂಟದಂತೆ ತಡೆಯುವಲ್ಲಿ ಶೇ. ನೂರರಷ್ಟು ಸಾಮರ್ಥ್ಯವನ್ನು ತೋರಿಸಿದ್ದು, ಈ ಮಾರಕ ರೋಗವನ್ನು ತಡೆಯುವಲ್ಲಿ ಹೊಸ ಆಶಾಕಿರಣವೊಂದು ಮೂಡಿದೆ. ಎಲ್ಲಿ, ಯಾರ ಮೇಲೆ ನಡೆದ ಪ್ರಯೋಗಗಳಿವು? ಏನೀ ಅಧ್ಯಯನದ ವಿವರಗಳು? ಇಲ್ಲಿದೆ ಮಾಹಿತಿ.

VISTARANEWS.COM


on

Vaccin for Hiv
Koo

ಎಚ್‌ಐವಿ ಸೋಂಕು ಬಾರದಂತೆ (Vaccine for HIV) ತಡೆಯುವಲ್ಲಿ ಹೊಸ ಆಶಾಕಿರಣವೊಂದು ಕಂಡು ಬಂದಿದ್ದು, ವರ್ಷಕ್ಕೆ ಎರಡು ಡೋಸ್‌ನಂತೆ ನೀಡಲಾಗುತ್ತಿರುವ ಚುಚ್ಚುಮದ್ದೊಂದು ಕಿಶೋರಿಯರು ಮತ್ತು ಯುವತಿಯರಲ್ಲಿ ಸೋಂಕುಗಳನ್ನು ಪೂರ್ಣ ಪ್ರಮಾಣದಲ್ಲಿ ತಡೆಗಟ್ಟುವ ಭರವಸೆಯನ್ನು ಮೂಡಿಸಿದೆ. ಈಗಾಗಲೇ ಮೂರನೇ ಹಂತದ ಪ್ರಯೋಗದಲ್ಲಿರುವ ಲೇನಕಾಪವಿರ್‌ (lenacapavir) ಎನ್ನುವ ಚುಚ್ಚುಮದ್ದಿನ ಬಗೆಗೆ ಆಫ್ರಿಕಾದಲ್ಲಿ ನಡೆಸಲಾದ ಪ್ರಯೋಗದ ದತ್ತಾಂಶಗಳು ಈ ಹೊಸ ಭರವಸೆಯನ್ನು ಮೂಡಿಸಿವೆ. ಈ ಚುಚ್ಚುಮದ್ದನ್ನು ಎಚ್‌ಐವಿ ಸೋಂಕು ಇಲ್ಲದಿರುವ ಸುಮಾರು 5000 ಯುವತಿಯರು ಮತ್ತು ಹದಿಹರೆಯದ ಹುಡುಗಿಯರಿಗೆ ನೀಡಲಾಗಿತ್ತು. ಈ ಅಧ್ಯಯನ ನಡೆಯುತ್ತಿರುವಾಗ ಇವರಾರಿಗೂ ಎಚ್‌ಐವಿ ಸೋಂಕು ಹೊಸದಾಗಿ ಅಂಟಿಲ್ಲ ಎನ್ನುವುದು, ಈ ಸೋಂಕನ್ನು ಶೇ. ನೂರರಷ್ಟು ತಡೆಯಲು ಸಾಧ್ಯವಾಗುವ ಆಸೆಯನ್ನು ಹುಟ್ಟಿಸಿದೆ. ಎಚ್‌ಐವಿ ಸೋಂಕುಗಳನ್ನು ತಡೆಗಟ್ಟಲು ಟ್ರುವಾಡದಂಥ ಮಾತ್ರೆಗಳು ಈಗಾಗಲೇ ಬಳಕೆಯಲ್ಲಿವೆ. ಈ ಭೀತಿಯನ್ನು ಕಡಿಮೆ ಮಾಡುವ ಇಂಜೆಕ್ಷನ್‌ಗಳು ಸಹ ಈಗಾಗಲೇ ಚಾಲ್ತಿಯಲ್ಲಿವೆ.

HIV vaccine

ಏನಿದರ ಪ್ರಾಮುಖ್ಯತೆ?

ಈ ಸೂಜಿಮದ್ದಿನ ಪ್ರಾಮುಖ್ಯತೆಯನ್ನು ಅರಿಯುವುದಕ್ಕೆ ಪ್ರಯೋಗದ ವಿವರಗಳನ್ನು ಚುಟುಕಾಗಿಯಾದರೂ ತಿಳಿದುಕೊಳ್ಳಬೇಕು. ದಕ್ಷಿಣ ಆಫ್ರಿಕಾ ಮತ್ತು ಉಗಾಂಡ ದೇಶಗಳ ಯುವತಿಯರು ಮತ್ತು ಕಿಶೋರಿಯರನ್ನು ಒಳಗೊಂಡು ಈ ಪ್ರಯೋಗ ನಡೆಸಲಾಗಿದೆ. ಈ ಪ್ರದೇಶಗಳಲ್ಲಿ ಎಚ್‌ಐವಿ ಸೋಂಕು ತೀರಾ ವ್ಯಾಪಕವಾಗಿದ್ದು, ಅರಿವು ಮತ್ತು ಮುನ್ನೆಚ್ಚರಿಕೆಯ ಕೊರತೆಯೇ ಇದಕ್ಕೆ ಪ್ರಮುಖ ಕಾರಣವೆಂದು ಹೇಳಬಹುದು. 26 ವಾರಗಳ ಅವಧಿಯಲ್ಲಿ ಒಂದು ಬಾರಿಯಂತೆ ಲೇನಕಾಪವಿರ್‌ ಇಂಜೆಕ್ಷನ್‌ ನೀಡಿದ ಒಂದು ಗುಂಪು, ಖಾಲಿ ಇಂಜೆಕ್ಷನ್‌ ನೀಡಿದ ಇನ್ನೊಂದು ಗುಂಪು, ನಿತ್ಯವೂ ಎಚ್‌ಐವಿ ನಿರೋಧಕ ಮಾತ್ರೆ ತೆಗೆದುಕೊಳ್ಳುವ ಮತ್ತೊಂದು ಗುಂಪುಗಳು ಅಧ್ಯಯನಕ್ಕೆ ಒಳಪಟ್ಟಿದ್ದವು.

ಪ್ರಯೋಗ ಯಶಸ್ವಿ

26 ವಾರಗಳ ನಂತರ ಈ ಗುಂಪುಗಳನ್ನು ಪರಿಶೀಲಿಸಿದಾಗ 55 ಮಂದಿಗೆ ಸೋಂಕು ಉಂಟಾಗಿತ್ತು. ಅದರಲ್ಲಿ ಲೇನಕಾಪವಿರ್‌ ತೆಗೆದುಕೊಂಡಿದ್ದ ಗುಂಪಿನಲ್ಲಿ ಮಾತ್ರ ಯಾರೊಬ್ಬರಿಗೂ ಸೋಂಕು ತಾಗಿರಲಿಲ್ಲ. ಉಳಿದ ಗುಂಪುಗಳಲ್ಲಿ- ಒಂದರಲ್ಲಿ 39 ಮಂದಿಗೆ, ಇನ್ನೊಂದರಲ್ಲಿ 16 ಮಂದಿಗೆ ಸೋಂಕು ಅಂಟಿತ್ತು. ಹಾಗಾಗಿ ಎಚ್‌ಐವಿ ಹೊಸದಾಗಿ ಅಂಟದಂತೆ ತಡೆಯುವಲ್ಲಿ ಈ ಔಷಧಿ ಶೇ. ನೂರರಷ್ಟು ಪರಿಣಾಮ ಬೀರಬಹುದು ಎಂಬ ಭರವಸೆ ಇಡೀ ಜಗತ್ತಿನ ಸಂಶೋಧಕರ ಪಾಲಿಗೆ ಮಹತ್ವದ್ದೆನಿಸಿದೆ.
ಯುವತಿಯರಲ್ಲಿ ಮಾತ್ರವೇ ಈ ಔಷಧಿ ಕೆಲಸ ಮಾಡುತ್ತದೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ. ಇದನ್ನು ಪುರುಷರಿಗೆ ನೀಡಿ ನಡೆಸಲಾಗುತ್ತಿರುವ ಅಧ್ಯಯನ ಇನ್ನೂ ಚಾಲ್ತಿಯಲ್ಲಿದೆ. ಅಲ್ಲಿಂದ ಹೊರಹೊಮ್ಮುವ ದತ್ತಾಂಶಗಳ ಬಗೆಗೂ ಸಂಶೋಧಕರು ಕುತೂಹಲ ಹೊಂದಿದ್ದಾರೆ. ಮುಂದಿನ ಹಂತದ ಪ್ರಯೋಗಗಳಲ್ಲಿ ಪುರುಷರು, ಲಿಂಗ ಬದಲಾಯಿಸಿಕೊಂಡಿರುವ ಮತ್ತು ಲಿಂಗತ್ವ ಅಲ್ಪಸಂಖ್ಯಾತರನ್ನೂ ಒಳಗೊಳ್ಳಲಾಗಿದೆ. ಅರ್ಜೆಂಟೀನಾ, ಬ್ರೆಜಿಲ್, ಮೆಕ್ಸಿಕೊ, ಪೆರು, ಥಾಯ್ಲೆಂಡ್, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ನಡೆಯುತ್ತಿದೆ.

ಚುಚ್ಚು ಮದ್ದಿನಿಂದ ರಕ್ಷಣೆ

ಈಗಾಗಲೇ ಪರಿಣಾಮಕಾರಿ ಎನಿಸಿಕೊಂಡಿರುವ Pre-exposure prophylaxis (or PrEP) ಮಾತ್ರೆಗಳ ಜೊತೆಗೆ, ಈ ಚುಚ್ಚುಮದ್ದು ಸಹ ಹೆಚ್ಚಿನ ರಕ್ಷಣೆಯನ್ನು ನೀಡಲಿದೆ. PrEP ಮಾತ್ರೆಗಳನ್ನು ಪ್ರತಿದಿನ ಅಥವಾ ವೈದ್ಯರು ಸೂಚಿಸಿದ ರೀತಿಯಲ್ಲೇ ತೆಗೆದುಕೊಳ್ಳುವುದು ಅಗತ್ಯ. ಆದರೆ ಈ ಹೊಸ ಭರವಸೆಯನ್ನು ಆರು ತಿಂಗಳಿಗೊಮ್ಮೆ ಮಾತ್ರವೇ ತೆಗೆದುಕೊಂಡರೆ ಸಾಕು ಎನ್ನುವುದು, ಬಳಕೆಯನ್ನು ಇನ್ನಷ್ಟು ಸರಳಗೊಳಿಸುವ ಮತ್ತು ಪರಿಣಾಮಕಾರಿ ಫಲಿತಾಂಶವನ್ನು ಪಡೆಯುವ ನಿಟ್ಟಿನಲ್ಲಿ ಮಹತ್ವದ್ದು ಎನಿಸಿದೆ.

ಇದನ್ನೂ ಓದಿ: Health Tips Kannada: ಚಹಾ, ಕಾಫಿಯನ್ನು ಯಾವ ಸಮಯದಲ್ಲಿ ಕುಡಿಯಬಾರದು ಗೊತ್ತೇ?

ಈಗ ಪ್ರಯೋಗದಲ್ಲಿರುವ ಲೇನಕಾಪವಿರ್‌ ಚುಚ್ಚುಮದ್ದು ವಿಶ್ವದಲ್ಲಿ ಎಲ್ಲಿಯೂ ಎಚ್‌ಐವಿ ತಡೆಯುವ ಔಷಧಿಯೆಂದು ಮಾನ್ಯತೆ ಪಡೆದಿಲ್ಲ. ಆದರೆ ಇನ್ನೂ ಕೆಲವು ಔಷಧಿಗಳ ಜೊತೆಯಲ್ಲಿ ಇದನ್ನೂ ನೀಡುವುದಕ್ಕೆ ಅಮೆರಿಕದಲ್ಲಿ ಪರವಾನಗಿ ಇದೆ. ಇದಕ್ಕೆ ವರ್ಷಕ್ಕೆ ಸುಮಾರು 40,000 ಡಾಲರ್‌ ವೆಚ್ಚ ಈಗಾಗಲೇ ತಗುಲುತ್ತಿದೆ. ಒಂದೊಮ್ಮೆ ಎಚ್‌ಐವಿ ಸೋಂಕು ಬಾರದಂತೆ ತಡೆಯುವಲ್ಲಿ ಇದು ಸಂಪೂರ್ಣ ಯಶಸ್ವಿ ಎಂದಾದರೆ, ಈ ವೆಚ್ಚವನ್ನು ತಗ್ಗಿಸದಿದ್ದರೆ ಬಳಕೆದಾರರಿಗೆ ಪ್ರಯೋಜನ ಆಗದಿರಬಹುದು ಎನ್ನುತ್ತಾರೆ ಅಧ್ಯಯನಕಾರರು.

Continue Reading
Advertisement
sunil bose savitha viral news
ವೈರಲ್ ನ್ಯೂಸ್8 mins ago

Viral News: ಮದುವೆಯೇ ಆಗಿಲ್ಲ ಎಂದ ಚಾಮರಾಜನಗರ ಸಂಸದ ನಿರ್ದೇಶಕಿ ಹಣೆಗೆ ಕುಂಕುಮ ಇಟ್ಟರು!

Geyser Blast
ತಂತ್ರಜ್ಞಾನ11 mins ago

Geyser Blast: ಬಾಂಬ್‌‌ನಂತೆ ಬ್ಲಾಸ್ಟ್ ಆಗಬಹುದು ಗೀಸರ್! ಮಳೆಗಾಲದಲ್ಲಿ ಈ ಮುನ್ನೆಚ್ಚರಿಕೆ ಇರಲಿ

Mysuru News
ಕ್ರೈಂ31 mins ago

Mysuru News : ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಆಟೋ ಡ್ರೈವರ್ ಶವವಾಗಿ ಪತ್ತೆ

Actor Darshan case Police Serve Notice To Siddarudha Who Claimed To Met Darshan
ಸ್ಯಾಂಡಲ್ ವುಡ್35 mins ago

Actor Darshan: ದರ್ಶನ್​ ಭೇಟಿ ಮಾಡಿ, ಯೋಗ, ಧ್ಯಾನ ಹೇಳಿಕೊಟ್ಟೆ ಎಂದ ಸಿದ್ಧಾರೂಢನಿಗೆ ಸಂಕಷ್ಟ! ನೋಟಿಸ್‌ ಕೊಟ್ಟ ಪೊಲೀಸರು!

hd kumaraswamy nanjanagudu
ಪ್ರಮುಖ ಸುದ್ದಿ38 mins ago

HD Kumaraswamy: ಎಚ್‌ಡಿ ಕುಮಾರಸ್ವಾಮಿ ಬಂದರೂ ತೆಗೆಯದ ಪ್ರವಾಸಿ ಮಂದಿರ ಬೀಗ, ಕೇಂದ್ರ ಸಚಿವರಿಗೆ ಅವಮಾನ

RRB Recruitment 2024
ಉದ್ಯೋಗ40 mins ago

RRB Recruitment 2024: ರೈಲ್ವೇ ಇಲಾಖೆಯಲ್ಲಿದೆ ಬರೋಬ್ಬರಿ 7,951 ಹುದ್ದೆ; ಆನ್‌ಲೈನ್‌ ಮೂಲಕ ಅಪ್ಲೈ ಮಾಡಿ

Paris 2024 Olympics
ಕ್ರೀಡೆ41 mins ago

Paris 2024 Olympics: ಭಾರತೀಯ ಕ್ರೀಡಾಪಟುಗಳಿಗೆ ವಸ್ತ್ರ ವಿನ್ಯಾಸ ಮಾಡಿದ್ದ ತರುಣ್‌ ವಿರುದ್ಧ ಟೀಕೆಗಳ ಸುರಿಮಳೆ

road Accident
ರಾಯಚೂರು56 mins ago

Road Accident : ಕುಡಿದು ಕಾರು ಓಡಿಸಿ ಪ್ರಾಣ ಕಳೆದುಕೊಂಡ ಇಬ್ಬರು ಯುವಕರು ; ಕಾರ್ಕಳದಲ್ಲಿ ಸಿಲಿಂಡರ್ ಸ್ಫೋಟ

Delhi Floods
ದೇಶ1 hour ago

Delhi Floods: ದೆಹಲಿಯಲ್ಲಿ ಕೋಚಿಂಗ್‌ ಸೆಂಟರ್‌ಗೆ ನುಗ್ಗಿದ ನೀರು; ಮೃತರ ಸಂಖ್ಯೆ 3ಕ್ಕೆ ಏರಿಕೆ: ವಿದ್ಯಾರ್ಥಿಗಳಿಂದ ಪ್ರತಿಭಟನೆ

dog meat abdul razak
ಕ್ರೈಂ1 hour ago

Dog Meat: ಅಬ್ದುಲ್‌ ರಜಾಕ್‌ ತರಿಸುವ ಮಾಂಸದ ಮೇಲೆ ಹೆಚ್ಚುತ್ತಿದೆ ಅನುಮಾನ! ಹಲವು ಹೋಟೆಲ್‌ ಮಾಲಿಕರಿಗೆ ನೋಟೀಸ್‌

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ17 hours ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ22 hours ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ23 hours ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ2 days ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ2 days ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ2 days ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ2 days ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ3 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್3 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ3 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

ಟ್ರೆಂಡಿಂಗ್‌