Endometriosis | ಎಂಡೋಮೆಟ್ರಿಯೋಸಿಸ್‌ ಕಾರಣಗಳು ಹಾಗೂ ಪರಿಹಾರಗಳು Vistara News

ಆರೋಗ್ಯ

Endometriosis | ಎಂಡೋಮೆಟ್ರಿಯೋಸಿಸ್‌ ಕಾರಣಗಳು ಹಾಗೂ ಪರಿಹಾರಗಳು

VISTARANEWS.COM


on

Endometriosis
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Masala Tea: ಚಳಿಗಾಲವೆಂದು ಅತಿಯಾಗಿ ಮಸಾಲೆ ಚಹಾ ಕುಡಿಯುತ್ತೀರಾ? ಹಾಗಾದರೆ ಎಚ್ಚರ!

ಯಾವುದೇ ಕಾಲವಿರಲಿ, ಚಹಾವನ್ನು (Masala Tea) ಹಿತಮಿತವಾಗಿ ಕುಡಿದರೆ, ಇಂಥ ಸಮಸ್ಯೆಗಳು ಬರದಂತೆ ನೋಡಿಕೊಳ್ಳಬಹುದು. ಈ ಕುರಿತ ಆರೋಗ್ಯ ಸಲಹೆ ಇಲ್ಲಿದೆ.

VISTARANEWS.COM


on

Masala Tea
Koo

ಬಹಳಷ್ಟು ಮಂದಿಗೆ ಎದ್ದ ಕೂಡಲೇ, ಕೈಯಲ್ಲೊಂದು ಕಪ್‌ ಚಹಾ ಹಿಡಿಯದಿದ್ದರೆ, ಬೆಳಗು ಬೆಳಗೆನಿಸುವುದೇ ಇಲ್ಲ. ಬಿಸಿ ಬಿಸಿಯಾದ ಚಹಾ ಹೀರುತ್ತಾ ಒಂದ್ಹತ್ತು ನಿಮಿಷವಾದರೂ ಕೂತರೆ ಏನೋ ಒಂದು ನೆಮ್ಮದಿ. ಅದು ಚಳಿಗಾಲವೇ ಇರಲಿ, ಮಳೆಗಾಲವೇ ಇರಲಿ, ಸುಡು ಸುಡು ಬೇಸಿಗೆಯೇ ಇರಲಿ, ಈ ಪರಿಪಾಠ ಬಹಳಷ್ಟು ಮಂದಿಗೆ ಅಭ್ಯಾಸವಾಗಿಬಿಟ್ಟಿದೆ. ಆರೋಗ್ಯದ ದೃಷ್ಠಿಯಿಂದ ಬೆಳಗ್ಗೆ ಚಹಾ ಕುಡಿಯುವುದನ್ನು ಬಿಡಿ ಎಂಬ ಸಲಹೆಗಳನ್ನು ಕೇಳಿದರೂ ಅನುಸರಿಸುವುದು ಹಲವರಿಗೆ ಸಾಧ್ಯವಾಗುವುದೇ ಇಲ್ಲ. ಒಂದೆರಡು ದಿನ ಬಿಟ್ಟು ಮತ್ತೆ, ಯಥಾಪ್ರಕಾರ ಮನಸ್ಸು ಚಹಾ (Masala Tea) ಬಯಸುತ್ತದೆ. ಚಹಾದಲ್ಲೂ, ಒಬ್ಬೊಬ್ಬರು ಒಂದೊಂದು ಬಗೆಯ ಚಹಾ ಇಷ್ಟಪಡುವುದೂ ಇದೆ. ಒಬ್ಬೊಬ್ಬರದು ಒಂದೊಂದು ಆದ್ಯತೆ. ಕೆಲವರಿಗೆ ಸಾದಾ ಚಹಾ, ಬ್ಲ್ಯಾಕ್‌ ಚಹಾ, ಗ್ರೀನ್‌ ಚಹಾ ಹೀಗೆ ಬಗೆಬಗೆಯ ಚಹಾಗಳಲ್ಲಿ ಒಂದು ಅಭ್ಯಾಸವಾದರೆ, ಇನ್ನೂ ಕೆಲವರಿಗೆ ಬೆಳಗ್ಗೆ ಶುಂಠಿ ಸೇರಿದಂತೆ ತುಳಸಿ, ಚೆಕ್ಕೆ, ಏಲಕ್ಕಿ, ಕರಿಮೆಣಸು ಹೀಗೆ ಹಲವು ಬಗೆಯ ಮಸಾಲೆಗಳನ್ನು ಹಾಕಿದ ಮಸಾಲೆ ಚಹಾ ಕುಡಿಯುವ ಅಭ್ಯಾಸ. ಮುಖ್ಯವಾಗಿ ಚಳಿಗಾಲ ಬಂದೊಡನೆ ಈ ಮಸಾಲೆ ಚಹಾದ ಬಯಕೆ ಹೆಚ್ಚು. ಚಳಿಗಾಲಕ್ಕೆ ಈ ಎಲ್ಲ ಮಸಾಲೆಗಳು ಒಳ್ಳೆಯದು ಎಂದು ನಾವೂ ಆಗಾಗಬೆಚ್ಚಗೆ ಈ ಮಸಾಲೆ ಚಹಾವನ್ನು (Masala Tea) ಹೊಟ್ಟೆಗಿಳಿಸುತ್ತಲೇ ಇರುತ್ತೇವೆ. ಆದರೆ, ಸಾಧಕ ಬಾಧಕಗಳ ಬಗ್ಗೆ ಕೊಂಚವಾದರೂ ಯೋಚಿಸುತ್ತೇವಾ?

Masala tea/chai

ಹೌದು. ಯಾವುದೂ ಅತಿಯಾಗಬಾರದು ಎಂದು ನಮ್ಮ ಹಿರಿಯರೇ ಹೇಳಿ ಹೋಗಿದ್ದಾರೆ. ಹಾಗೆಯೇ ಚಹಾದ ಮಸಾಲೆಯೂ ಅತಿಯಾಗಬಾರದು. ಈ ಮಸಾಲೆಗಳೆಲ್ಲ ಚಳಿಗಾಲಕ್ಕೆ ಒಳ್ಳೆಯದೇ ಆಗಿರುವುದರಿಂದ ಚಿಂತೆಯೇ ಇಲ್ಲ ಎಂದು ಅಂದುಕೊಂಡರೆ ತಪ್ಪಾದೀತು. ಯಾಕೆಂದರೆ, ಚಿಂತೆ ಮಾಡುವ ಪ್ರಸಂಗವೂ ಬಂದೀತು. ಯಾಕೆಂದರೆ, ಮಸಾಲೆ ಅಧಿಕವಾದರೆ, ತೊಂದರೆಯೂ ತಪ್ಪಿದ್ದಲ್ಲ. ಹಾಗಾದರೆ ಬನ್ನಿ, ಮಸಾಲೆಗಳ ಅತಿಯಾದ ಸೇವನೆಯಿಂದ ಯಾವೆಲ್ಲ ಸಮಸ್ಯೆಗಳು ನಿಮ್ಮನ್ನು ಕಾಡಬಹುದು ಎಂಬುದನ್ನು ನೋಡೋಣ.

Indian Masala Tea

ಮಿತವಾಗಿ ಸೇವಿಸಿ

ಮಸಾಲೆಗಳ ಸೇವನೆ ಚಹಾದ ಮೂಲಕ ಅಥವಾ ಇನ್ನಾವುದೇ ಆಹಾರ ಪದಾರ್ಥಗಳ ಮೂಲಕ ಅತಿಯಾದರೆ, ಕೆಲವೊಮ್ಮೆ ಜೀರ್ಣಕ್ರಿಯೆಯಲ್ಲೂ ತೊಂದರೆಗಳಾಗಬಹುದು. ಹೊಟ್ಟೆನೋವು, ಮಲಬದ್ಧತೆ, ಅಜೀರ್ಣದಂತಹ ತೊಂದರೆಗಳೂ ಕಾಡಬಹುದು. ಹಾಗಾಗಿ ಮಸಾಲೆಗಳಿಂದ ಲಾಭ ಪಡೆಯಬೇಕೆಂದರೆ, ಮಿತವಾಗಿ ಸೇವಿಸಬೇಕು.

ಸಮಸ್ಯೆಗೂ ಕಾರಣವಾಗಬಹುದು

ಮಸಾಲೆ ಚಹಾದಲ್ಲಿ ಸಾಕಷ್ಟು ಕೆಫೀನ್‌ ಇರುವುದರಿಂದ ಇದು ಅಧಿಕವಾದರೆ, ಒತ್ತಡ ಹಾಗೂ ದುಗುಡ, ಉದ್ವೇಗದಂತಹ ಸಮಸ್ಯೆಗಳೂ ಬರಬಹುದು. ಹಾಗಾಗಿ ಮಸಾಲೆ ಚಹಾವಿರಲಿ, ಇನ್ನಾವುದೇ ಚಹಾವಿರಲಿ, ಅತಿಯಾಗಿ ಕುಡಿಯಬಾರದು.

Young woman scratching her itchy arm.

ಅಲರ್ಜಿ ತರಬಹುದು

ಕೆಲವು ಮಂದಿಗೆ ಕೆಲವು ಮಸಾಲೆಗಳು ಅಲರ್ಜಿಯನ್ನೂ ತರಬಹುದು. ಹಾಗಾಗ ಅಲರ್ಜಿ ಸಮಸ್ಯೆಯ ಮಂದಿ, ಇಂತಹ ಮಸಾಲೆಗಳ ಸೇವನೆಯಿಂದ ದೂರವಿರುವುದು ಒಳ್ಳೆಯದು.

ರಕ್ತದೊತ್ತಡ ಏರುಪೇರಾಗಬಹುದು

ಮಸಾಲೆಗಳ ಅತಿಯಾದ ಸೇವನೆಯಿಂದ ರಕ್ತದೊತ್ತಡದಲ್ಲೂ ಏರುಪೇರಾಗಬಹುದು. ಹಾಗಾಗಿ ಅಧಿಕ ರಕ್ತದೊತ್ತಡ ಇರುವ ಮಂದಿ ಹೆಚ್ಚು ಮಸಾಲೆಗಳ ಸೇವನೆಯಿಂದ ದೂರ ಉಳಿಯುವುದು ಒಳ್ಳೆಯದು.

Unhealthy Fastfood Stomach Heartburn

ಎದೆ ಉರಿ ಹೆಚ್ಚಬಹುದು

ಇನ್ನೂ ಕೆಲವರಿಗೆ ಮಸಾಲೆ ಚಹಾ ಹೆಚ್ಚು ಕುಡಿಯುವುದರಿಂದ ಎದೆಯುರಿಯೂ ಬರಬಹುದು.

ತುರಿಕೆಗೆ ಕಾರಣವಾಗಬಹುದು

ಕೆಲವು ಮಂದಿಗೆ ಮಸಾಲೆ ಚಹಾದಿಂದ ಅಂದರೆ ಅದರಲ್ಲಿ ಹಾಕಿರುವ ಕರಿ ಮೆಣಸಿನಿಂದಾಗಿ ತುರಿಕೆಯಂತಹ ಅಲರ್ಜಿಗಳೂ ಉಂಟು ಮಾಡುತ್ತವೆ. ಮುಖ್ಯವಾಗಿ ಗರ್ಭಿಣಿಯರಿಗೆ ಇಂಥ ಅಲರ್ಜಿಗಳಾಗುವ ಸಂಭವ ಹೆಚ್ಚು. ಹಾಗಾಗಿ ಗರ್ಭಿಣಿಯರು ಅತಿಯಾದ ಮಸಾಲೆಗಳಿಂದ ದೂರವಿರುವುದು ಒಳ್ಳೆಯದು.

ಹಾಗಾಗಿ, ಯಾವುದೇ ಕಾಲವಿರಲಿ, ಚಹಾವನ್ನು ಹಿತಮಿತವಾಗಿ ಕುಡಿದರೆ, ಇಂಥ ಸಮಸ್ಯೆಗಳು ಬರದಂತೆ ನೋಡಿಕೊಳ್ಳಬಹುದು. ಇಲ್ಲವಾದರೆ, ತೊಂದರೆ ಖಂಡಿತ.

ಇದನ್ನೂ ಓದಿ: Keep Your Heart Healthy: ಹೀಗೆ ಮಾಡಿ ಹೃದಯವನ್ನು ಭದ್ರವಾಗಿಟ್ಟುಕೊಳ್ಳಿ!

Continue Reading

ಆರೋಗ್ಯ

Hair Care Tips: ಕೂದಲು ಉದುರೋದಕ್ಕೆ ಕಾರಣ ಏನು ಅನ್ನೋದನ್ನ ಮೊದಲು ತಿಳಿದುಕೊಳ್ಳಿ!

ವಯಸ್ಸಾದಂತೆ ಹಣೆ ಅಗಲವಾಗುತ್ತಾ ಹೋಗುವುದು ಸಾಮಾನ್ಯ ಸಂಗತಿ. ಇದು ವಂಶವಾಹಿಗಳಿಂದಲೂ ಬರುವುದಕ್ಕೆ ಸಾಧ್ಯ. ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚಾಗಿ ಬೊಕ್ಕತಲೆಯ ಸಮಸ್ಯೆ ಕಾಣುತ್ತದೆ. ಆದರೆ ಕಿರಿಯ ವಯಸ್ಸಿನಲ್ಲೇ ಹಣೆ ಅಗಲವಾಗಿ, ಕೂದಲ ಗಾತ್ರ ಕಿರಿದಾಗುವುದು (Hair Care Tips) ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದೆ.

VISTARANEWS.COM


on

Hair Care Tips
Koo

ಕೂದಲು ಉದುರುವುದು ಈಗ ಸಮಸ್ಯೆಯ ಬದಲಿಗೆ ಎಲ್ಲರ ಪಾಲಿನ ನಿತ್ಯಸತ್ಯವಾಗಿ ಪರಿಣಮಿಸಿದೆ. ಆದರೆ ಯಾವಾಗ ಹಣೆ ದೊಡ್ಡದಾಗುತ್ತಾ ಕೂದಲಿನ ಹಣೆಬರಹ ಸಣ್ಣದಾಗಲು ಪ್ರಾರಂಭಿಸುತ್ತದೊ ಆಗ ಆತಂಕವೂ ಶುರುವಾಗುತ್ತದೆ. ʻಛೇ! ಕೂದಲು ಉದುರುತ್ತಿದೆʼ ಎಂದು ಎದುರಿಗೆ ದೇಶಾವರಿ ಸಂತಾಪ ಸೂಚಿಸುವ ಜನ, ಬೆನ್ನ ಹಿಂದೆ ಬೊಕ್ಕ ತಲೆಯವರಿಗೆ ನಾನಾ ಹೆಸರಿಡುತ್ತಾರೆ ಎಂಬುದು ರಹಸ್ಯವೇನಲ್ಲ. ಹೇಳುವವರು ಏನೇ ಹೇಳಲಿ, ಆದರೆ ಕೂದಲು ಉದುರಿ ತಲೆ ಬೋಳಾಗುವುದು (Hair Care Tips ) ಸಂತೋಷದ ವಿಷಯವಂತೂ ಖಂಡಿತಾ ಅಲ್ಲ.

Middle Aged Woman Thinking Hard

ವಯಸ್ಸಾದಂತೆ ಹಣೆ ಅಗಲವಾಗುತ್ತಾ ಹೋಗುವುದು ಸಾಮಾನ್ಯ ಸಂಗತಿ. ಇದು ವಂಶವಾಹಿಗಳಿಂದಲೂ ಬರುವುದಕ್ಕೆ ಸಾಧ್ಯ. ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚಾಗಿ ಬೊಕ್ಕತಲೆಯ ಸಮಸ್ಯೆ ಕಾಣುತ್ತದೆ. ಆದರೆ ಕಿರಿಯ ವಯಸ್ಸಿನಲ್ಲೇ ಹಣೆ ಅಗಲವಾಗಿ, ಕೂದಲ ಗಾತ್ರ ಕಿರಿದಾಗುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದೆ. ಒಮ್ಮೆ ಕೂದಲ ಅಂಚುಗಳು ಹಿಂದೆ ಸರಿದು, ಹಣೆ ಅಗಲವಾಗುತ್ತಾ ಹೋದರೆ ಅದನ್ನು ನಿಲ್ಲಿಸುವುದು ಕಷ್ಟ. ಹೆಚ್ಚಿನ ಸಾರಿ ಇದಕ್ಕೆ ಪರಿಹಾರ ಹುಡುಕುವ ಭರದಲ್ಲಿ (haircare tips) ಇನ್ನಷ್ಟು ಹಾನಿಯನ್ನೇ ಮಾಡಿಕೊಳ್ಳುವ ಸಂದರ್ಭಗಳು ಹೆಚ್ಚು. ಆದರೆ ಹೀಗೇಕಾಗುತ್ತಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳುವುದಿಲ್ಲ

ಹಾನಿ ಹೆಚ್ಚುವುದು ಹೀಗೆ!

ಕೂದಲು ಉದುರುತ್ತಿರುವ ಕಾರಣವನ್ನು ಅರ್ಥ ಮಾಡಿಕೊಳ್ಳದೇ ನಮ್ಮಿಷ್ಟದಂತೆ ಮನೆಮದ್ದು ಮಾಡಿಕೊಳ್ಳುವುದರಿಂದ ಸಮಸ್ಯೆ ಬಿಗಡಾಯಿಸಬಹುದು. ಕೂದಲು ಉದುರುವುದಕ್ಕೆ ಕಾರಣಗಳು ನಾನಾ ರೀತಿಯಲ್ಲಿ ಇರುತ್ತವೆ. ಅತಿಯಾದ ಒತ್ತಡ, ನಿದ್ದೆಗೆಡುವುದು ಕಾರಣವಾಗಿದ್ದರೆ ಅದಕ್ಕೆ ಪರಿಹಾರ ಕಂಡುಕೊಳ್ಳಿ. ಸಮತೋಲನವಿಲ್ಲದ ಆಹಾರ ಪದ್ಧತಿ ನಿಮ್ಮದಾಗಿದ್ದರೆ, ಪೌಷ್ಟಿಕಾಂಶ ಕೂದಲಿಗೆ ಮಾತ್ರವಲ್ಲ, ಇಡೀ ದೇಹಕ್ಕೇ ಬೇಕಾಗುತ್ತದೆ. ಹಾರ್ಮೋನುಗಳ ತೊಂದರೆಯಿಂದಲೂ ಈ ಸಮಸ್ಯೆ ಕಾಣಬಹುದು. ಸೂಕ್ಷ್ಮ ಪೋಷಕಾಂಶಗಳ ಕೊರತೆ ಇದ್ದರೆ ಅದರ ಅಡ್ಡ ಪರಿಣಾಮ ಕೂದಲಿನ ಮೇಲಾಗುವ ಸಾಧ್ಯತೆಯಿದೆ. ಇಂಥ ಸಮಸ್ಯೆಗಳ ಪರಿಹಾರಕ್ಕೆ ವೈದ್ಯರನ್ನೇ ಸಂಪರ್ಕಿಸಬೇಕಾಗುತ್ತದೆ. ಇನ್ನು ವಂಶವಾಹಿಗಳು ಕಾರಣವಾಗಿದ್ದಲ್ಲಿ ಏನು ಮಾಡಿದರೂ ಪರಿಣಾಮ ಕಾಣುವುದು ಅನುಮಾನ.

Woman Hands Dyeing Hair. Middle Age Woman Colouring Dark Hair with Gray Roots at Home

ರಾಸಾಯನಿಕಗಳು

ಕೂದಲನ್ನು ಸೊಂಪಾಗಿಸುವ, ಉದುರುವುದನ್ನು ನಿಲ್ಲಿಸುವಂಥ ಜಾಹೀರಾತುಗಳನ್ನು ನೋಡಿ ಮರುಳಾದವರ ಸಂಖ್ಯೆ ಲೆಕ್ಕವಿಲ್ಲ. ಈ ಜಾಹೀರಾತುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿದವರಾರು? ಕಠೋರವಾದ ಶಾಂಪೂಗಳು, ಅತಿಯಾದ ಕಂಡೀಶನರ್‌ ಬಳಕೆ, ಹೊಟ್ಟು ನಿವಾರಣೆಗೆ ಯದ್ವಾತದ್ವಾ ಚಿಕಿತ್ಸೆಗಳು, ಪ್ರತಿದಿನ ತಲೆಸ್ನಾನ ಮಾಡುವುದು, ಸಿಕ್ಕಾಪಟ್ಟೆ ಬಿಸಿನೀರು ಸ್ನಾನ ಮಾಡುವುದು ಇಂಥವೆಲ್ಲಾ ಕೂದಲಿಗೆ ನಿಶ್ಚಿತವಾಗಿ ಹಾನಿಯನ್ನು ಉಂಟುಮಾಡುತ್ತವೆ.

ಕೂದಲನ್ನು ಬಿಸಿ ಮಾಡಿ, ನೇರವೊ ಸುರುಳಿಯೊ ಮಾಡುವಂಥ ಉಪಕರಣಗಳನ್ನು ಅತಿಯಾಗಿ ಬಳಸುವುದು ಹಾನಿ ಮಾಡಬಹುದು. ಕೂದಲ ವಿನ್ಯಾಸಗಳಿಗಾಗಿ ಉಪಯೋಗಿಸುವ ಯಾವುದೇ ರಾಸಾಯನಿಕಗಳು ಮತ್ತು ಉಪಕರಣಗಳು ಒಂದಿಲ್ಲೊಂದು ಪರಿಣಾಮವನ್ನು ತಲೆಯ ಚರ್ಮ ಮತ್ತು ನೆತ್ತಿಯ ಮೇಲೆ ಉಂಟುಮಾಡುತ್ತವೆ. ಕೂದಲನ್ನು ಅತಿಯಾಗಿ ಬಾಚುವುದು ಮತ್ತು ತೀರಾ ಬಾಚದಿರುವುದು- ಈ ಎರಡೂ ಸಮಸ್ಯೆಗಳನ್ನು ತರಬಲ್ಲವು. ಕೂದಲನ್ನು ಸದಾಕಾಲ ಬಿಗಿಯಾಗಿ ಕಟ್ಟುವುದು, ಹಿಮ್ಮುಖವಾಗಿ ಎಳೆದು ಬಾಚುವುದರಿಂದಲೂ ಹಣೆ ಕ್ರಮೇಣ ಅಗಲವಾಗತೊಡಗುತ್ತದೆ. ನೆತ್ತಿಯ ಮೇಲೆ ಬಿಗಿಯಾಗಿ ಹೇರ್‌ಬ್ಯಾಂಡ್‌ ಧರಿಸುವುದು, ಸದಾ ಕ್ಯಾಪ್‌ ಹಾಕಿಕೊಳ್ಳುವುದು ಸಹ ಸಮಸ್ಯೆಗೆ ಕಾರಣವಾಗಬಲ್ಲವು.

Woman in Purple Eating

ಕಾಳಜಿ ಹೀಗಿರಲಿ

ಮೊದಲಿಗೆ ಸೇವಿಸುವ ಆಹಾರದ ಬಗ್ಗೆ ನಿಗಾ ವಹಿಸಿ. ಕಬ್ಬಿಣ, ಜಿಂಕ್‌, ಬಯೋಟಿನ್‌, ವಿಟಮಿನ್‌ ಎ, ಇ ಮತ್ತು ಡಿ ಆಹಾರಗಳು ಹಾಗೂ ಸಾಕಷ್ಟು ಪ್ರೊಟೀನ್‌ ನಿಮ್ಮ ಆಹಾರದಲ್ಲಿರಲಿ. ಇದಕ್ಕಾಗಿ ಹಣ್ಣು, ತರಕಾರಿ, ಮೀನು, ಮೊಟ್ಟೆ, ಬೀಜಗಳು, ಸೊಪ್ಪು ಮತ್ತು ಮೊಳಕೆ ಕಾಳುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಿ. ಚೆನ್ನಾಗಿ ನೀರು ಕುಡಿಯಿರಿ.

ದಿನಕ್ಕೆ ಎಂಟು ತಾಸುಗಳ ನಿದ್ದೆ ಅಗತ್ಯವಾಗಿ ಬೇಕು. ಇದರಿಂದ ದೇಹದ ರಿಪೇರಿ ಮಾತ್ರವಲ್ಲ, ಮನಸ್ಸಿನ ಒತ್ತಡ ನಿವಾರಣೆಗೂ ಅನುಕೂಲವಾಗುತ್ತದೆ. ವ್ಯಾಯಾಮ, ಆಸಕ್ತಿಯ ಹವ್ಯಾಸಗಳು, ಧ್ಯಾನ, ಪ್ರಾಣಾಯಾಮಗಳು ಕೂದಲು ಸೇರಿದಂತೆ ದೇಹದ ಎಲ್ಲಾ ಅಂಗಗಳ ಮೇಲೂ ಧನಾತ್ಮಕ ಪರಿಣಾಮ ಬೀರುತ್ತವೆ.

ಮೃದುವಾದ ಶಾಂಪೂಗಳನ್ನು ಬಳಸಿ. ಉಗುರು ಬಿಸಿ ನೀರೇ ಸಾಕಾಗುತ್ತದೆ ತಲೆಸ್ನಾನಕ್ಕೆ. ಕೂದಲ ಬುಡವನ್ನು ಶಕ್ತಿ ಹಾಕಿ ಉಜ್ಜುವಂಥದ್ದು ಏನೂ ಇರುವುದಿಲ್ಲ. ವಾರಕ್ಕೆರಡು ಬಾರಿ ನಿಯಮಿತವಾಗಿ ತಲೆಸ್ನಾನ ಮಾಡಿದರೆ, ಕೂದಲ ಕೊಳೆ ತೆಗೆಯುವುದಕ್ಕೆ ಸಾಕಾಗುತ್ತದೆ. ತಲೆಸ್ನಾನಕ್ಕೆ ಬಳಸುವ ನೀರು ತುಂಬಾ ಗಡುಸಾಗಿದ್ದರೂ ಸಮಸ್ಯೆಗೆ ನಾಂದಿಯಾಗಬಹುದು.

ಇವು ಬೇಡ

ಕೂದಲು ಉದುರುವುದಕ್ಕೆ ಪ್ರಾರಂಭವಾದ ಮೇಲೆ, ಅತಿಯಾದ ರಾಸಾಯನಿಕಗಳ ಬಳಕೆಯು ಸಮಸ್ಯೆಯ ತೀಕ್ಷ್ಣತೆಯನ್ನು ಹೆಚ್ಚಿಸುತ್ತದೆ. ಜೆಲ್‌, ವ್ಯಾಕ್ಸ್‌ ಅಥವಾ ಸ್ಪ್ರೇಗಳು ಈ ಸಾಲಿಗೆ ಸೇರುತ್ತವೆ. ಬದಲಿಗೆ, ಆಗಾಗ ಶುದ್ಧ ತೆಂಗಿನ ಎಣ್ಣೆಯಿಂದ ಕೂದಲ ಬುಡವನ್ನು ಲಘುವಾಗಿ ಮಸಾಜ್‌ ಮಾಡಿ. ಇದರಿಂದ ತಲೆಗೆ ರಕ್ತ ಸಂಚಾರ ಹೆಚ್ಚಿ, ಹೊಸ ಕೂದಲುಗಳ ಬೆಳವಣಿಗೆಗೆ ಸಹಾಯವಾಗುತ್ತದೆ.

ಕೂದಲುಗಳನ್ನು ಎಳೆದು ಬಿಗಿಯಾಗಿ ಹಿಮ್ಮುಖವಾಗಿ ಬಾಚಬೇಡಿ. ಅತಿ ಒರಟಾಗಿ ಬಾಚುವುದು ಸಹ ಸಲ್ಲದು. ಕೂದಲಿನ ಮೇಲೆ ಯಾವುದೇ ರೀತಿಯ ಬಲಪ್ರಯೋಗದಿಂದಲೂ ಬುಡ ಸಡಿಲವಾಗಿ, ಕೂದಲು ಬಲಹೀನವಾಗುತ್ತದೆ. ಆಮೇಲೆ ಉದುರುವುದೇ, ಇನ್ನೇನು!

ಡ್ರೈಯರ್‌ಗಳು, ಸುರುಳಿ ಅಥವಾ ನೇರ ಮಾಡುವಂಥ ಹೀಟಿಂಗ್‌ ಉಪಕರಣಗಳು ಬೇಡ. ತೀರಾ ಅಗತ್ಯ ಸಂದರ್ಭಗಳನ್ನು ಬಿಟ್ಟರೆ, ಉಳಿದಂತೆ ಪರ್ಮಿಂಗ್‌, ಬಣ್ಣ ಹಾಕುವಂಥ ಪ್ರಯೋಗಗಳು ಕೂದಲಿನ ಮೇಲೆ ಬೇಡ. ಒದ್ದೆ ಕೂದಲನ್ನು ಬಾಚುವ ಸಾಹಸ ಬೇಡ. ಇದರಿಂದ ಉದುರುವುದು ಇನ್ನಷ್ಟು ಹೆಚ್ಚುತ್ತದೆ.

ಇದನ್ನೂ ಓದಿ: Health Tips: ಅತಿಯಾಗಿ ಕೈತೊಳೆಯುತ್ತೀರಾ? ಹಾಗಾದರೆ ಎಚ್ಚರ, ಎಕ್ಸಿಮಾ ಕೂಡಾ ಬರಬಹುದು!

Continue Reading

ಆರೋಗ್ಯ

Hormonal Imbalance: ಹಾರ್ಮೋನು ಏರುಪೇರಿನ ಸಮಸ್ಯೆಗೆ ಯಾವ ಆಹಾರಗಳು ಸೂಕ್ತ?

ಸಮಸ್ಯೆಯ ಮೂಲವನ್ನು ಪತ್ತೆ ಹಚ್ಚಿದರೆ, ಸಮಸ್ಯೆಯ ನಿವಾರಣೆ ಸುಲಭ. ಬನ್ನಿ, ಹಾರ್ಮೋನಿನ ಏರುಪೇರಿನ (Hormonal Imbalance) ಸಮಸ್ಯೆಗೆ ಯಾವೆಲ್ಲ ಆಹಾರವನ್ನು ಸೇವಿಸುವುದರಿಂದ ಸಮಸ್ಯೆಯಿಂದ ಮುಕ್ತಿ ಪಡೆಯುವತ್ತ ಹೆಜ್ಜೆಯಿಡಬಹುದು ಎಂಬುದನ್ನು ನೋಡೋಣ.

VISTARANEWS.COM


on

Hormonal Imbalance
Koo

ಹಾರ್ಮೋನಿನ ಏರುಪೇರು (Hormonal Imbalance) ಎಂಬುದು ನೋಡಲು ಸಾಮಾನ್ಯ ಸಮಸ್ಯೆಯಾಗಿ ಕಂಡರೂ ಆರೋಗ್ಯವನ್ನು ಬಹಳವಾಗಿ ಬಾಧಿಸುವಂಥದ್ದು. ತೂಕದಲ್ಲಿ ಏರಿಕೆ, ಭುಜದ ಬಳಿ ಕೊಬ್ಬು ಶೇಖರವಾಗುವುದು, ಇದ್ದಕ್ಕಿದ್ದ ಹಾಗೆ ತೂಕ ಇಳಿಯುವುದು, ತಲೆ ಸುತ್ತುವಿಕೆ, ಮಾಂಸಖಂಡಗಳಲ್ಲಿ ನಿತ್ರಾಣ, ಸೆಳೆತ, ನೋವು ಇತ್ಯಾದಿ, ಗಂಟುಗಳಲ್ಲಿ ನೋವು, ಉರಿಯೂತ ಇತ್ಯಾದಿ ಇತ್ಯಾದಿ ಸಮಸ್ಯೆಗಳು ಬಾಧಿಸುತ್ತವೆ. ಈ ಎಲ್ಲ ಸಮಸ್ಯೆಗಳೂ, ಮಾರಣಾಂತಿಕವಲ್ಲದಿದ್ದರೂ, ಇವು ಸಾಕಷ್ಟು ತೊಂದರೆಯನ್ನು ತಂದೊಡ್ಡುವಂಥವು. ಈ ಎಲ್ಲ ಸಮಸ್ಯೆಗಳಿಗೂ ಹಾರ್ಮೋನಿನ ಏರುಪೇರಿಗೂ ಮೇಲ್ನೋಟಕ್ಕೆ ಸಂಬಂಧ ಕಾಣಿಸದಿದ್ದರೂ ಮೂಲ ಕಾರಣ ಹಾರ್ಮೋನಿನ ಅಸಮತೋಲನವೇ ಕಾರಣವಾಗಿರಬಹುದು. ಸಮಸ್ಯೆಯ ಮೂಲವನ್ನು ಪತ್ತೆ ಹಚ್ಚಿದರೆ, ಸಮಸ್ಯೆಯ ನಿವಾರಣೆ ಸುಲಭ. ಬನ್ನಿ, ಹಾರ್ಮೋನಿನ ಏರುಪೇರಿನ ಸಮಸ್ಯೆಗೆ ಯಾವೆಲ್ಲ ಆಹಾರವನ್ನು ಸೇವಿಸುವುದರಿಂದ ಸಮಸ್ಯೆಯಿಂದ ಮುಕ್ತಿ ಪಡೆಯುವತ್ತ ಹೆಜ್ಜೆಯಿಡಬಹುದು ಎಂಬುದನ್ನು ನೋಡೋಣ.

Mackerel fish on ice

ಕೆಲವು ಬಗೆಯ ಮೀನುಗಳು

ಸಾಲ್ಮನ್‌, ಮೆಕೆರಲ್‌, ಸಾರ್ಡಿನ್‌ ಮೊದಲಾದ ಮೀನುಗಳಲ್ಲಿ ಒಮೆಗಾ 3 ಫ್ಯಾಟಿ ಆಸಿಡ್‌ಗಳು ಹೇರಳವಾಗಿದ್ದು, ಇವುಗಳು ಒಳ್ಳೆಯ ಕೊಬ್ಬನ್ನು ಹೊಂದಿವೆ. ಇದರಿಂದ ಹಾರ್ಮೋನ್‌ ಉತ್ಪಾದನೆ ಹಾಗೂ ಸಮತೋಲನಕ್ಕೆ ಸಹಾಯವಾಗುತ್ತದೆ. ಒಮೆಗಾ ೩ ಫ್ಯಾಟಿ ಆಸಿಡ್‌ ಹೇರಳವಾಗಿರುವ ಆಹಾರಗಳು ದೇಹದಲ್ಲಿ ಹಾರ್ಮೋನಿನ ಸಮತೋಲನೆ ಮಾಡುವ ಜೊತೆಗೆ ಉರಿಯೂತವನ್ನು ತಡೆಯುತ್ತದೆ.

Malabar spinach and spinach

ಬಸಳೆ, ಪಾಲಕ್ ಇತ್ಯಾದಿ

ವಿಟಮಿನ್‌ಗಳು, ಖನಿಜಾಂಶಗಳು ಹಾಗೂ ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿರುವ ಬಸಳೆ, ಪಾಲಕ್‌ ಮತ್ತಿತರ ಸೊಪ್ಪು ತರಕಾರಿಗಳು ಹಾರ್ಮೋನು ಸಮತೋಲನಕ್ಕೆ ಸಹಕಾರಿ. ಅಷ್ಟೇ ಅಲ್ಲ, ಇವು ದೇಹದ ಕಶ್ಮಲಗಳನ್ನು ಹೊರ ಹಾಕುವಲ್ಲಿ ಸಹಾಯ ಮಾಡಿ ಡಿಟಾಕ್ಸ್‌ ಮಾಡುತ್ತವೆ.

Avocado slices

ಬೆಣ್ಣೆಹಣ್ಣು

ಅವಕಾಡೋ ಅಥವಾ ಬೆಣ್ಣೆಹಣ್ಣಿನಲ್ಲಿ ಆರೋಗ್ಯಕರ ಕೊಬ್ಬು ಎಂದೇ ಹೆಸರಾದ ಮೋನೋ ಸ್ಯಾಚುರೇಟೆಡ್‌ ಕೊಬ್ಬು ಹೇರಳವಾಗಿದ್ದು, ಇದು ಹಾರ್ಮೋನಿನ ಸಮತೋಲನೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ವಿಟಮಿನ್‌ ಬಿ, ಇ ಹಾಗೂ ಪೊಟಾಶಿಯಂ ಕೂಡಾ ಇದರಲ್ಲಿ ಶ್ರೀಮಂತವಾಗಿವೆ.

Seeds Assortment

ಕೆಲವು ಬಗೆಯ ಬೀಜಗಳು

ಅಗಸೆ ಬೀಜ (ಫ್ಲ್ಯಾಕ್‌ ಸೀಡ್‌), ಚಿಯಾ ಬೀಜಗಳು ಹಾಗೂ ಕುಂಬಳಕಾಯಿ ಬೀಜಗಳಲ್ಲಿ ನಾರಿನಂಶ ಹಾಗೂ ಫ್ಯಾಟಿ ಆಸಿಡ್‌ಗಳು ಹೇರಳವಾಗಿವೆ. ಸ್ತ್ರೀಯರ ಹಾರ್ಮೋನು ಇಸ್ಟ್ರೋಜನ್‌ನ ಮಟ್ಟವನ್ನು ಸಮತೋಲಗೊಳಿಸುವಲ್ಲಿ ಇವು ಸಹಾಯ ಮಾಡುತ್ತವೆ. ಉರಿಯೂತವನ್ನೂ ಕಡಿಮೆ ಮಾಡುತ್ತವೆ.

ಮೊಸರು, ಮಜ್ಜಿಗೆ

ಮೊಸರು, ಮಜ್ಜಿಗೆ ಹಾಗೂ ಇತರ ಪ್ರೊಬಯಾಟಿಕ್‌ ಆಹಾರಗಳು ಕೂಡಾ ರೋಗ ನಿರೋಧಕತೆಯನ್ನು ಹೆಚ್ಚಿಸುವುದರ ಜೊತೆಗೆ ಹಾರ್ಮೋನಿನ ಸಮತೋಲನೆಯಲ್ಲೂ ಮುಖ್ಯ ಪಾತ್ರ ವಹಿಸುತ್ತದೆ.

ಮೊಳಕೆ ಕಾಳುಗಳು

ಮಹಿಳೆಯರ ಹಾರ್ಮೋನು ಇಸ್ಟ್ರೋಜನ್‌ನ ಏರುಪೇರಾಗದಂತೆ ತಡೆಗಟ್ಟಲು, ಸಮತೋಲನ ಕಾಪಾಡಲು ಬ್ರೊಕೋಲಿ, ಕ್ಯಾಬೇಜ್‌, ಹೂಕೋಸು ಹಾಗೂ ಮೊಳಕೆ ಕಾಳುಗಳು ಬಹಳಷ್ಟು ಸಹಾಯ ಮಾಡುತ್ತವೆ. ಹಾಗಾಗಿ ಮಹಿಳೆಯರಿಗೆ ಈ ತರಕಾರಿಗಳು ಅತ್ಯಂತ ಒಳ್ಳೆಯದು. ಅದರಲ್ಲೂ ನಲುವತ್ತು ದಾಟಿದ ಮಹಿಳೆಯರು ಹಾರ್ಮೋನಿನ ಏರುಪೇರು ಮತ್ತಿತರ ಸಮಸ್ಯೆಗಳಿಂದ ಪಾರಾಗಲು ಹಾಗೂ ಆದಷ್ಟೂ ತಮ್ಮ ಆರೋಗ್ಯವನ್ನು ಕಾಪಾಡಲು ಇಂತಹ ತರಕಾರಿಗಳ ಸೇವನೆ ಮಾಡಬೇಕು.

ಈ ಹಣ್ಣುಗಳು ಸೂಕ್ತ

ಆಂಟಿ ಆಕ್ಸಿಡೆಂಟ್‌ ಹಾಗೂ ವಿಟಮಿನ್‌ಗಳಿಂದ ಸಂಪದ್ಭರಿತವಾದ ಬೆರ್ರಿ ಜಾತಿಗೆ ಸೇರಿದ ಹಣ್ಣುಗಳಾದ ಸ್ಟ್ರಾಬೆರಿ, ರಸ್‌ಬೆರ್ರಿ, ಬ್ಲೂಬೆರ್ರಿ, ಬ್ಲ್ಯಾಕ್‌ಬೆರ್ರಿ ಮೊದಲಾದುವುಗಳು ಒಟ್ಟು ಆರೋಗ್ಯದ ದೃಷ್ಟಿಯಿಂದ ದೇಹಕ್ಕೆ ಒಳ್ಳೆಯದು. ಅಷ್ಟೇ ಅಲ್ಲ, ಇವುಗಳು ಹಾರ್ಮೋನುಗಳ ಸಮತೋಲನದಲ್ಲಿ ತಮ್ಮ ನ್ಯಾಯವನ್ನೂ ಒದಗಿಸುತ್ತವೆ.

ಇದನ್ನೂ ಓದಿ: Health Tips: ಅತಿಯಾಗಿ ಕೈತೊಳೆಯುತ್ತೀರಾ? ಹಾಗಾದರೆ ಎಚ್ಚರ, ಎಕ್ಸಿಮಾ ಕೂಡಾ ಬರಬಹುದು!

Continue Reading

ಆರೋಗ್ಯ

Heart Attack: ಬಸ್ಸು ಓಡಿಸುತ್ತಿದ್ದಾಗಲೇ ಹಾರ್ಟ್‌ ಅಟ್ಯಾಕ್‌; ಕೆಎಸ್‌ಆರ್‌ಟಿಸಿ ಚಾಲಕ ಸಾವು

Heart Attack : ಬಸ್ಸು ಓಡಿಸುತ್ತಿದ್ದಾಗಲೇ ಹೃದಯಾಘಾತವಾಗಿ ಕೆಎಸ್‌ಆರ್‌ಟಿಸಿ ಚಾಲಕರೊಬ್ಬರು (KSRTC Driver) ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

VISTARANEWS.COM


on

By

ksrtc Driver die in heart attack
Koo

ಚಿಕ್ಕಮಗಳೂರು: ಹೃದಯಾಘಾತದಿಂದ (Heart Attack) ಕರ್ತವ್ಯನಿರತ ಕೆಎಸ್ಆರ್‌ಟಿಸಿ ಬಸ್ ಚಾಲಕ (Ksrtc Bus Driver) ಮೃತಪಟ್ಟಿರುವ ಘಟನೆ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಹೆಸಗೊಡ್ ಗ್ರಾಮದ ಬಳಿ ಘಟನೆ ನಡೆದಿದೆ. ಚಾಲಕ ರವಿ ಲಮಾಣಿ (46) ಮೃತ ದುರ್ದೈವಿ.

ಹೃದಯವು ಯಾವ ಕ್ಷಣದಲ್ಲಿ ಆಘಾತಕ್ಕೆ (Heart Attack) ಒಳಗಾಗುತ್ತದೆ ಎಂದು ಅಂದಾಜಿಸಲೂ ಸಾಧ್ಯವಿಲ್ಲ. ನಿಂತ ನಿಲುವಿನಲ್ಲೇ ಬದುಕನ್ನು ಸ್ತಬ್ಧಗೊಳಿಸುವ ನಿರ್ನಾಮ ಶಕ್ತಿಯನ್ನು ಅದು ಹೊಂದಿದೆ. ಕುಳಿತಲ್ಲೇ ಕುಸಿಯುವುದು, ನಿಂತಲ್ಲೇ ಉರುಳಿ ಬೀಳುವುದು, ಮಲಗಿದಲ್ಲೇ ಮರಣಿಸುವುದು, ನೃತ್ಯ ಮಾಡುತ್ತಲೇ ಹೃದಯ ಸ್ತಬ್ಧವಾಗುವುದು. ಹೀಗೆ ಸಾವಿನ ಹತ್ತಾರು ಭಯಾನಕ ಸನ್ನಿವೇಶಗಳನ್ನು ನಾವು ನೋಡಿದ್ದೇವೆ. ಇದೀಗ ಕರ್ತವ್ಯದಲ್ಲಿರುವಾಗಲೇ ಕೆಎಸ್‌ಆರ್‌ಟಿಸಿ ಚಾಲಕರೊಬ್ಬರು ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ.

ಮೂಡಿಗೆರೆ, ಗುತ್ತಿಹಳ್ಳಿ, ಹೆಸ್ಗೋಡ್ ಗ್ರಾಮಕ್ಕೆ ಹೋಗುವ ದಾರಿ ಮಧ್ಯೆ ಈ ಘಟನೆ ನಡೆದಿದೆ. ಬಸ್ ಚಾಲನೆ ಮಾಡುವಾಗ ಚಾಲಕ ರವಿಗೆ ತೀವ್ರ ಎದೆ ನೋವು ಕಾಣಿಸಿಕೊಂಡಿದೆ. ಒಂದು ಕೈಯಲ್ಲಿ ಸ್ಟೇರಿಂಗ್‌ ಹಿಡಿದು ಮತ್ತೊಂದು ಕೈಯಲ್ಲಿ ಎದೆಗೆ ಸವರಿಕೊಂಡು ಕೂಗಳತೆ ದೂರದವರೆಗೆ ಬಸ್‌ ಚಲಾಯಿಸಿದ್ದಾರೆ. ಆದರೆ ನೋವು ಸಹಿಸಲು ಆಗದೇ ಕೂಡಲೇ ರಸ್ತೆ ಮಧ್ಯೆಯೇ ಬ್ರೇಕ್‌ ಹಾಕಿ ಬಸ್ ನಿಲ್ಲಿಸಿದ್ದಾರೆ.

ನೋವಿನಿಂದ ನರಳಾಡುತ್ತಿದ್ದ ರವಿಯನ್ನು ಕೂಡಲೇ ಬಸ್‌ ನಿರ್ವಾಹಕ ಪ್ರಯಾಣಿಕರ ಸಹಾಯದೊಂದಿಗೆ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ ದಾರಿ ಮಧ್ಯೆಯೇ ರವಿ ಮೃತಪಟ್ಟಿದ್ದಾರೆ. ಚಾಲಕ ರವಿ ಕೊಪ್ಪಳದ ಕೂಕ್ನೂರ್ ಗ್ರಾಮದವರಾಗಿದ್ದು, ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Cholesterol: ಕೊಲೆಸ್ಟೆರಾಲ್‌ ನಿಜಕ್ಕೂ ಕೆಟ್ಟದ್ದೇ? ಇದಕ್ಕೂ ಹೃದಯಾಘಾತಕ್ಕೂ ನೇರಾನೇರ ಸಂಬಂಧ ಇದೆಯೇ?

ಹೃದಯಾಘಾತಕ್ಕೆ 6 ತಿಂಗಳಲ್ಲಿ 1,052 ಜನ ಬಲಿ; 80% ಮಂದಿ 11-25 ವರ್ಷದವರೇ!

ಗಾಂಧಿನಗರ: ದೇಶದಲ್ಲಿ ಕೊರೊನಾ ಬಿಕ್ಕಟ್ಟಿನ ನಂತರದಲ್ಲಿ ಹೃದಯಾಘಾತ ಪ್ರಕರಣಗಳ (Heart Attack) ಸಂಖ್ಯೆ ಗಣನೀಯವಾಗಿ ಜಾಸ್ತಿಯಾಗಿದೆ. ಅದರಲ್ಲೂ, ಯುವಕರೇ ಹೆಚ್ಚು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಕೊರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾದವರು, ಐಸಿಯುನಲ್ಲಿ ಚಿಕಿತ್ಸೆ ಪಡೆದವರಿಗೇ ಹೆಚ್ಚಿನ ಪ್ರಮಾಣದಲ್ಲಿ ಹೃದಯಾಘಾತ ಆಗುತ್ತಿದೆ ಎಂದು ವರದಿಗಳು ತಿಳಿಸಿವೆ. ಇನ್ನು, ಹೃದಯಾಘಾತ ಹೆಚ್ಚಾಗಲು ಕೊರೊನಾ ನಿರೋಧಕ ಲಸಿಕೆಯೇ ಕಾರಣ ಎನ್ನಲಾಗುತ್ತಿದೆ. ಇದರ ಬೆನ್ನಲ್ಲೇ, ಕಳೆದ ಆರು ತಿಂಗಳಲ್ಲಿ ಗುಜರಾತ್‌ನಲ್ಲಿ ಹೃದಯಾಘಾತದಿಂದ 1,052 ಜನ ಮೃತಪಟ್ಟಿದ್ದಾರೆ ಎಂದು ಸರ್ಕಾರವೇ ತಿಳಿಸಿದೆ. ಇದರಿಂದಾಗಿ ರಾಜ್ಯಾದ್ಯಂತ ಆತಂಕ ಮನೆಮಾಡಿದೆ.

“ಕಳೆದ ಆರು ತಿಂಗಳಲ್ಲಿ ಹೃದಯಾಘಾತದಿಂದ 1,052 ಜನ ಮೃತಪಟ್ಟಿದ್ದಾರೆ. ಇವರಲ್ಲಿ ಶೇ.80ರಷ್ಟು ಮಂದಿ 11-25 ವರ್ಷದವರೇ ಆಗಿದ್ದಾರೆ. ಇದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ಹಾಗಾಗಿ, ಎರಡು ಲಕ್ಷ ಶಾಲಾ ಶಿಕ್ಷಕರು ಹಾಗೂ ಕಾಲೇಜುಗಳ ಪ್ರೊಫೆಸರ್‌ಗಳಿಗೆ ಹೃದಯಾಘಾತ ಉಂಟಾದಾಗ ತಕ್ಷಣೆ ಮಾಡುವ ಕಾರ್ಡಿಯೋಪಲ್ಮನರಿ ರಿಸಸಿಟೇಷನ್‌ (CPR) ಪ್ರಕ್ರಿಯೆಯ ಕುರಿತು ತರಬೇತಿ ನೀಡಲಾಗಿದೆ” ಎಂದು ರಾಜ್ಯ ಶಿಕ್ಷಣ ಸಚಿವ ಕುಬೇರ್‌ ದಿಂಡೋರ್‌ ಮಾಹಿತಿ ನೀಡಿದ್ದಾರೆ.

Heart Attack

“ಯುವಕರು, ಅದರಲ್ಲೂ ಶಾಲೆ, ಕಾಲೇಜುಗಳ ಯುವಕರಿಗೆ ಹೃದಯಾಘಾತ ಉಂಟಾಗಿದೆ. ಕ್ರಿಕೆಟ್‌ ಆಡುವಾಗ, ಗರ್ಬಾ ಸಾಂಪ್ರದಾಯಿಕ ನೃತ್ಯ ಮಾಡುವಾಗ ಹೆಚ್ಚಿನ ಜನರಿಗೆ ಹೃದಯಾಘಾತ ಉಂಟಾಗಿದೆ. ಆರು ತಿಂಗಳಲ್ಲಿ ನಿತ್ಯ ಸರಾಸರಿ 173 ಜನ ಹೃದಯಾಘಾತ ಉಂಟಾಗಿ ಆಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಜನರಿಗೆ ಅನುಕೂಲವಾಗುವ, ಹೃದಯಾಘಾತ ಪ್ರಕರಣಗಳನ್ನು ತಡೆಯಲು ಹತ್ತಾರು ಕ್ರಮ ತೆಗೆದುಕೊಳ್ಳಲಾಗುತ್ತಿದೆ” ಎಂದು ತಿಳಿಸಿದ್ದಾರೆ.

ಕಠಿಣ ಕೆಲಸ ಮಾಡದಂತೆ ಕೇಂದ್ರ ಸೂಚನೆ

“ಕೊರೊನಾ ಸೋಂಕು ತಗುಲಿ, ಐಸಿಯುನಲ್ಲಿ ಚಿಕಿತ್ಸೆ ಪಡೆಯುವುದು ಸೇರಿ ಆರೋಗ್ಯ ಸ್ಥಿತಿ ಗಂಭೀರವಾಗಿ, ಬದುಕಿ ಬಂದವರು ಯಾವುದೇ ಕಾರಣಕ್ಕೂ ಹೆಚ್ಚು ಕೆಲಸ ಮಾಡಬಾರದು. ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ICMR) ಅಧ್ಯಯನ ವರದಿ ಪ್ರಕಾರ, ಹೃದಯಾಘಾತದ ಭೀತಿ ಇರುವ ಕಾರಣ ಒಂದಷ್ಟು ಸಮಯದವರೆಗೆ ಕೊರೊನಾ ಸೋಂಕಿತರು ಹೆಚ್ಚು ಸಮಯದವರೆಗೆ ಅಥವಾ ಹೆಚ್ಚು ಭಾರ ಹೊರುವ ಕೆಲಸ ಮಾಡಬಾರದು. ಒಂದು ವರ್ಷ ಅಥವಾ ಎರಡು ವರ್ಷಗಳವರೆಗೆ ಇಂತಹ ವ್ಯಕ್ತಿಗಳು ಅತಿಯಾದ ವ್ಯಾಯಾಮ, ಜಿಮ್‌ನಲ್ಲಿ ವರ್ಕೌಟ್‌ ಕೂಡ ಮಾಡಬಾರದು” ಎಂದು ಅಧ್ಯಯನ ವರದಿ ಉಲ್ಲೇಖಿಸಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಂಡಾವೀಯ ತಿಳಿಸಿದ್ದಾರೆ.

ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Continue Reading
Advertisement
Kenda teaser kannada
South Cinema19 mins ago

Kannada New Movie: ಟೀಸರ್ ಮೂಲಕ ಕೌತುಕದ ಕಿಡಿ ಹೊತ್ತಿಸಿದ `ಕೆಂಡ’!

CP Yogeshwar brother in law Mahadevaiah
ಕರ್ನಾಟಕ31 mins ago

Murder Case: ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ ಭಾವ ಮಹದೇವಯ್ಯ ಕೊಲೆ!

Foeticide case and pair of pink bunny figurines
ಕರ್ನಾಟಕ52 mins ago

Belagavi Winter Session: ಭ್ರೂಣ ಹತ್ಯೆ ಕೇಸ್‌; ಕೋರ್ಟ್‌ನಲ್ಲಿ ಕೇಸ್‌ ದಾಖಲಿಸಲು ಸದನದಲ್ಲಿ ಒತ್ತಾಯ

Narendra Modi With Women
EXPLAINER53 mins ago

ಚುನಾವಣೆಯಲ್ಲಿ ಹೆಣ್ಣುಮಕ್ಕಳ ಮತಗಳನ್ನು ಸೆಳೆದ ಬಿಜೆಪಿ; ‘ಕ್ವೀನ್ಸ್’‌ ಕಿಂಗ್‌ಮೇಕರ್ಸ್‌ ಆಗಿದ್ದು ಹೇಗೆ?

Foeticide arrest
ಕರ್ನಾಟಕ1 hour ago

Foeticide Case : ಮೈಸೂರಿನ ಮತ್ತೊಂದು ಆಸ್ಪತ್ರೆಯಲ್ಲೂ ಭ್ರೂಣ ಹತ್ಯೆ; ಹೆಡ್‌ ನರ್ಸ್‌ ಉಷಾರಾಣಿ ಬಂಧನ

Tukali imitate sangeetha sringeri
ಬಿಗ್ ಬಾಸ್1 hour ago

BBK SEASON 10: ನಾಯಿಯಾದ ಸಂಗೀತಾ; ಅನುಕರಣೆ ಮಾಡೋದ್ರಲ್ಲಿ ತುಕಾಲಿ ಎತ್ತಿದ ಕೈ!

Revenue Minister Krishna Byre Gowda making coffee
ಕರ್ನಾಟಕ2 hours ago

Belagavi Winter Session: ಕಾವೇರಿದ ಚರ್ಚೆ ನಡುವೆ ಬಿಸಿ ಬಿಸಿ ಕಾಫಿ ಮಾಡಿಕೊಂಡು ಕುಡಿದ ಕೃಷ್ಣ ಬೈರೇಗೌಡ

Car catches fire after hitting bus
ಕರ್ನಾಟಕ2 hours ago

Video Viral : ಬಸ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು, ಪ್ರಾಣ ಉಳಿಸಿದ ಡ್ರೈವರ್‌; ವಿಡಿಯೊ ಇದೆ!

Michaung Cyclone
ಕರ್ನಾಟಕ2 hours ago

ಮೈಚಾಂಗ್‌ ಚಂಡಮಾರುತ; ಭಾರಿ ಮಳೆಗೆ ತಮಿಳುನಾಡಿನಲ್ಲಿ ಇಬ್ಬರ ಸಾವು, ಬೆಂಗಳೂರಿಗೂ ಎಫೆಕ್ಟ್?

Rishab rashmika
South Cinema2 hours ago

Rishab Shetty: ಪರೋಕ್ಷವಾಗಿ ರಶ್ಮಿಕಾ, ಪ್ರಶಾಂತ್‌ ನೀಲ್‌ಗೆ ತಿರುಗೇಟು ಕೊಟ್ರಾ ರಿಷಬ್‌! ಸ್ಪಷ್ಟನೆ ಏನು?

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

ead your daily horoscope predictions for december 4th 2023
ಪ್ರಮುಖ ಸುದ್ದಿ11 hours ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ1 day ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ1 day ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ2 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ3 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ3 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ4 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ4 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

ಟ್ರೆಂಡಿಂಗ್‌